ವಿಕಿಪೀಡಿಯ:ಅರಳಿ ಕಟ್ಟೆ/ಇತರೆ-archive4

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಕಿಪೀಡಿಯಕ್ಕೆ ೯[ಬದಲಾಯಿಸಿ]

೨೦೧೨ನೇ ಜೂನ್ ೧೨ ರಂದು ಕನ್ನಡ ವಿಕಿಪೀಡಿಯಕ್ಕೆ ೯ ವರ್ಷ ತುಂಬಿತು.

ಅನೇಕ ದಿನಗಳ ನಂತರ ಇಂದು ವಿಕಿಪೀಡಿಯಾಕ್ಕೆ ಬಂದು, ಅಮರೇಶ ನುಗಡೋಣಿಯವರ ಬಗೆಗಿನ ಮಾಹಿತಿಯಲ್ಲಿ ಕೆಲವು ಬದಲಾವಣೆ ಮಾಡಿದೆ. ಆದರೆ, ಈ ಮೊದಲಿನಂತೆ, ಬದಲಾವಣೆಗಳು ದಾಖಲಾಗಲಿಲ್ಲ. ಏಕೆ? -ಸುನಾಥ ೦೮ ನವ್ಹಂಬರ ೦೯


ಮಾನ್ಯ ವಿಕಿಪೀಡಿಯ ಸಂಪಾದಕರೆ,

ಇಲ್ಲಿನ ಅನೇಕ ನಮೂದುಗಳಲ್ಲಿ ಅಂತರಾಷ್ಟ್ರೀಯ ಎಂಬ ಅಶುದ್ಧ ಪ್ರಯೋಗಗಳನ್ನು ಗಮನಿಸಿದ್ದೇನೆ. ಈಗ ಎಲ್ಲ ವ್ಯಾಕರಣತಜ್ಞರು ಒಪ್ಪಿರುವಂತೆ ಈ ಪದ `ಅಂತಾರಾಷ್ಟ್ರೀಯ' ಎಂದಾಗಬೇಕು. ಎಲ್ಲ ಪತ್ರಿಕೆಗಳೂ ಇದನ್ನೇ ಅನುಸರಿಸುತ್ತಿವೆ. ಇದು ಬೇಡ ಎನ್ನುವುದಾದರೆ ಎಂದಿನಂತೆ `ಅಂತರರಾಷ್ಟ್ರೀಯ ' ಎಂದು ಬರೆದರೂ ಅದು ಸಹನೀಯ. ದಯವಿಟ್ಟು ಶುದ್ಧ /ಅಶುದ್ಧ ಪದಗಳ ಪಟ್ಟಿಯನ್ನಾದರೂ ಪ್ರಕಟಿಸಿ. ಅದು ಹೊಸಬರಿಗೆ ಒಂದು ಮಾರ್ಗದರ್ಶಿಯಾಗಬಹುದು. ಹೆಚ್ಚು ಕಡಿಮೆ ದಿನವೂ ಕನ್ನಡ ವಿಕಿಪೀಡಿಯದಲ್ಲಿ ಅಶುದ್ಧ ಪದಗಳು ಒಂದಾದರೂ ಕಣ್ಣಿಗೆ ಬೀಳುತ್ತಿವೆ. ಇದನ್ನು ನಿವಾರಿಸಬಹುದು.

ಟಿ. ಆರ್. ಅನಂತರಾಮು

ಕರ್ನಾಟಕ ಅಥವ ದಕ್ಷಿಣ ಭಾರತದ Blank Locater Map[ಬದಲಾಯಿಸಿ]

ಅರುಣ ಪ್ರಕಾಶರವರು ಈ ರೀತಿ ಭೂಪಟ ತಯಾರಿಸುವ ಉತ್ತಮ ಸಲಹೆಯನ್ನು ಈ ಪುಟದಲ್ಲಿ ಮಾಡಿದ್ದಾರೆ. ಇದು ಅನೇಕ ಕಡೆ ಉಪಯುಕ್ತವಾಗಬಹುದದ್ದಾಗಿರುವುದರಿಂದ ಈ ಪುಟದಲ್ಲಿ relavent ಭಾಗಗಳನ್ನು ವರ್ಗೀಕರಿಸಿರುವೆ. ಎಲ್ಲರೂ ತಮ್ಮ ಅಭಿಪ್ರಾಯಗಳನ್ನು ನೀಡಬೇಕೆಂದು ವಿನಂತಿ.

ದೇವಸ್ಥಾನದ ಚಿತ್ರಗಳನ್ನು ಜೋಡಿಸುವುದರ ಬಗ್ಗೆ ಚರ್ಚೆ ಮಾಡಬೇಕಾಗಿದೆ. ಜೊತೆಗೆ ಒಂದು ಕರ್ನಾಟಕದ ಭೂಗೋಳದ ಚಿತ್ರ ಮಾಡಿ ಅದರಲ್ಲಿ ಬೇಲೂರಿನ ನಕ್ಷೆಯನ್ನು ಮಾಡಿದರೆ ಉಪಯುಕ್ತವೆಂದು ನನ್ನ ಅಭಿಪ್ರಾಯ. ಇದನ್ನೇ ಟೆಂಪ್ಲೇಟಾಗಿಟ್ಟುಕೊಂಡು ಬೇರೆ ಜಾಗಗಳಿಗೂ ನಕ್ಷೆಯಾಗಿ ಉಪಯೋಗಿಸಬಹುದು.
--ಅರುಣ ಪ್ರಕಾಶ

ಆಂಗ್ಲ ವಿಕಿಯಲ್ಲಿರುವ Blank locater image ರೀತಿಯೇ? ಅದನ್ನೇ ಯಾಕೆ ಉಪಯೋಗಿಸಬಾರದು? ಅದಕ್ಕೆ ಸಂಬಂಧಪಟ್ಟ ಟೆಂಪ್ಲೇಟು ಇಲ್ಲಿ ಇದೆ. ಶುಶ್ರುತ

ಹೌದು, ನೀವು ಹೇಳಿರುವ ಹಾಗೆಯೇ. ಆದರೆ ಭಾರತದ ಭೂಪಟದ ಬದಲು ಕರ್ನಾಟಕ/ದಕ್ಷಿಣ ಭಾರತ ಇದ್ದರೆ ಇನ್ನೂ ವಾಸಿ ಎಂದೆನಿಸುತ್ತದೆ. ಕಾರಣ ಆಗ ಹತ್ತಿರದ ಊರುಗಳನ್ನೂ ತೋರ ಬಹುದು. --ಅರುಣ ಪ್ರಕಾಶ

ಇದೊಂದು ಉತ್ತಮ ಸಲಹೆ. ಆದರೆ ನನಗೆ ಇದನ್ನು ಹೇಗೆ ಮಾಡುವುದು ಎಂದು ತಿಳಿಯುತ್ತಿಲ್ಲ. ನಿಮಗೆ ತಿಳಿದಿದ್ದರೆ ನೀವು ಶುರು ಮಾಡಿ. ಬೇರೆಯವರು ಯಾವ ರೀತಿ ನಿಮಗೆ ಸಹಾಯ ಒದಗಿಸಬಹುದೆಂದು ತಿಳಿಸಿದರೆ ನಾನು ಕೈಲಾದಷ್ಟು ಸಹಾಯ ಮಾಡುವೆ. ಬೇರೆಯವರ ಗಮನಕ್ಕೆ ತರಲು ನಾನಿದನ್ನು ಅರಳಿಕಟ್ಟೆಯ ಇತರೆ ಚರ್ಚೆ ಪುಟದಲ್ಲಿ mention ಮಾಡಿರುವೆ. ಮುಂದಿನ ಮಾತುಕತೆಯನ್ನು ಅಲ್ಲಿ ಮುಂದುವರೆಸೋಣ.ಶುಶ್ರುತ

ಶುಶ್ರುತ \ಮಾತು \ಕತೆ ೧೭:೩೯, ೧೫ January ೨೦೦೭ (UTC)

ಆಂಗ್ಲ ಭಾಷಾ ಪುಟದಲ್ಲಿ ಭಾರತದ ಭೂಪಟದ ಮೇಲೆ ಆಗಲೇ ಗುರುತಿಸಲಾಗಿರುವುದರಿಂದ ಇಲ್ಲಿ ಆಯಾ ರಾಜ್ಯಗಳ ಮೇಲೆ ಗುರುತಿಸುವುದು ಉತ್ತಮ. ಭಾರತೇತರ ಪ್ರದೇಶಗಳಿಗೆ country locator map ಉಪಯೋಗಿಸುವ. ಉದಾ: ಬೇಲೂರಿಗೆ ಕರ್ನಾಟಕದ ನಕ್ಷೆ, ಮದ್ರಾಸಿಗೆ ತಮಿಳುನಾಡಿನ ನಕ್ಷೆ. ಹಾಗೆಯೇ ರಿಯೊ ಡಿ ಜನೈರೊಗೆ ಬ್ರಜಿಲ್ ನಕ್ಷೆ.
--ಅರುಣ ಪ್ರಕಾಶ ೧೮:೪೦, ೧೫ January ೨೦೦೭ (UTC)

Question about Kannada Wikipedia program[ಬದಲಾಯಿಸಿ]

Hello All:

I came across a page which mentioned that a Kannada Wikipedia related program had taken place in Bangalore on April 2, 2006 in the presence of Dr. U.R. Ananthamurthy, Prof. G. Venkatasubbaiah, etc.
I am wondering if there are any minutes of this program, or any transcript or such. I am particularly interested in Mr. Nagesh Hegde's talk about "Writing Science and Technology articles in Kannada".


If anyone has this information, please let me know how to access it.
Thanks
Dronemvp ೦೫:೪೬, ೧೯ January ೨೦೦೭ (UTC)

You can collect the video from me if you live in Bangalore. Mail me from the User:HPNadig page. -- ಹರಿ ಪ್ರಸಾದ್ ನಾಡಿಗ್ \ಚರ್ಚೆ \ಕಾಣಿಕೆಗಳು ೧೨:೪೬, ೨೩ April ೨೦೦೭ (UTC)
ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿಗಳು

ಇವರು ಒಬ್ಬಮಹಾಸಾಧಕರು. ಯೋಗಿಗಳು. ಅತ್ಯತ್ತುಮ ಸಂಘಟಕರು. ಮಲ್ಲಾಡಿಹಳ್ಳಿಯಂತಹ ಬೆಂಗಾಡಿಗೆ ಬಂದು, ಅಲ್ಲಿನ ಜನರ ಮೌಢ್ಯವನ್ನು ಹೋಗಲಾಡಿಸಿ, ಅಲ್ಲಿನ ಸರ್ವತೋಮುಖವಾದ ಬೆಳವಣಿಗೆ ಕಾರಣರಾದ ವಿಭೂತಿ ಪುರುಷರು. ಅವರೇ ತಮ್ಮ ಲೇಖನಗಳಲ್ಲಿ ಹೇಳಿರುವಂತೆ, ಯಾವ ಸ್ವಾಮಿಗಳ, ಮಠಾಧಿಪತಿಗಳ ಪರಂಪರೆಗೂ ಅವರು ಸೇರಿಲ್ಲ. ಶಿಶ್ಯರೂ ಅಲ್ಲ. ತಮ್ಮನ್ನು ತಾವು 'ತಿರುಕ'ನೆಂದೇ ಸಂಬೋದಿಸಿಕೊಳ್ಳುತ್ತಿದ್ದರು. ಅವರ ಗುರುಗಳಾದ ಶಿವಾನಂದರು ತಿಳಿಸಿದಂತೆ, ಕರ್ಣಾಟದ ಹಳ್ಳಿ ಹಳ್ಳಿಗೂ ಹೋಗಿ, ಯೋಗಾಭ್ಯಾಸದ ಶಿಬಿರಗಳನ್ನು ತೆರೆದು, ಅಲ್ಲಿನ ಜನರಿಗೆ, ಯೋಗ ವನ್ನು ಹೇಳಿಕೊಡುವುದರ ಜೊತೆಗೆ, ಹಳ್ಳಿಯ ನೈರ್ಮಲ್ಯೀಕರಣ, ಆರೋಗ್ಯ, ಮತ್ತು ಸ್ವಸಹಾಯಗಳನ್ನು ತಿಳಿಸಿ ತಮ್ಮ ಕಾಲಿನಮೇಲೆ ತಾವು ನಿಲ್ಲುವ ಶಕ್ತಿಯನ್ನು ತೋರಿಸಿಕೊಡುತ್ತಾರೆ. ೧೯೪೩ ರಲ್ಲಿ ಗ್ರಾಮದ ಜನರ ಒತ್ತಾಯ, ಹಾಗೂ ಆ ಪ್ರದೇಶದ ಯತಿವರ್ಯರಾದ, ಶ್ರೀ ಶಂಕರಲಿಂಗ ಭಗವಾನರ ಒತ್ತಾಯಕ್ಕೆ ಮಣಿದು, ಮಲ್ಲಾಡಿಹಳ್ಳಿಗೆ ಪದಾರ್ಪಣ ಮಾಡುತ್ತಾರೆ. ಮುಂದಿನ ಬೆಳವಣಿಗೆಗಳು ವೃದ್ಧಿಯಾದದ್ದು ಇತಿಹಾಸ.

ಶುಶ್ರುತ \ಮಾತು \ಕತೆ ೦೪:೦೪, ೨೦ January ೨೦೦೭ (UTC)

ಬಹುಶಃ ವೆಂಕಟೇಶರು ಬರೆದದ್ದು. ಈ ಬಗ್ಗೆ ನನಗೆ ಒಂದು ಮೇಯ್ಲ್ ಹಾಕಿ ವಿಕಿಪೀಡಿಯದಲ್ಲಿ ನನ್ನ ಲೇಖನ ಪಬ್ಲಶ್ ಮಾಡಿರುವೆ (!) ಎಂದು ಬರೆದಿದ್ದರು. ಸಮಯಾಭಾವದಿಂದ ಏನೊಂದೂ ಅವರಿಗೆ ಉತ್ತರವಾಗಿ ಬರೆಯಲಾಗಲಿ ಅಥವ ಇತ್ತ ಬಂದು ನೋಡಲಾಗಲಿ ಸಾಧ್ಯವಾಗಲಿಲ್ಲ. ನಿಮಗೆ ಸಾಧ್ಯವಾದರೆ ಲೇಖನವನ್ನು ವಿಕಿಪೀಡಿಯಕ್ಕೆ ತಕ್ಕಂತೆ ಪರಿಷ್ಕರಿಸಿ ಹೊಸ ಪುಟವೊಂದರಲ್ಲಿ ಸೇರಿಸಿಬಿಡಿ. -- ಹರಿ ಪ್ರಸಾದ್ ನಾಡಿಗ್ \ಚರ್ಚೆ \ಕಾಣಿಕೆಗಳು ೧೨:೪೮, ೨೩ April ೨೦೦೭ (UTC)

ಹವ್ಯಕ[ಬದಲಾಯಿಸಿ]

ಹವ್ಯಕ dialectನ ಬಗ್ಗೆ ಬರೆಯ ಬೇಕೆಂದು ನನ್ನ ಉದ್ದೇಶ. ನಿಮ್ಮ ಸಲಹೆಗಳು? -CosmicLord ೨೨:೪೯, ೨೦ ಆಗಸ್ಟ್ ೨೦೦೭ (UTC)

ಅನುವಾದವನ್ನು ಪ್ರಾರಂಭಿಸಿದ್ದೇನೆ - ಹವ್ಯಕ - CosmicLord ೧೪:೫೪, ೨೧ ಆಗಸ್ಟ್ ೨೦೦೭ (UTC)

(I am sorry - I had put this topic in the wrong section of ಅರಳಿ ಕಟ್ಟೆ. - CosmicLord ೧೪:೫೮, ೨೧ ಆಗಸ್ಟ್ ೨೦೦೭ (UTC))

ಯಾವುದರ ಬಗ್ಗೆ ಸಲಹೆ ಬೇಕು? ಶುಶ್ರುತ \ಮಾತು \ಕತೆ ೧೭:೨೭, ೨೧ ಆಗಸ್ಟ್ ೨೦೦೭ (UTC)
ಧನ್ಯವಾದ, ಶುಶ್ರುತ. ಸಲಹೆಯ ಅವಶ್ಯಕತೆ ಇವಾಗ ಇಲ್ಲ. I had problems with putting templates at ಹವ್ಯಕ page. :) ಯಾರೊ ಈಗಾಗಲೆ ಆ ಕಾರ್ಯ ಮಾಡಿರುವಾಹಾಗಿದೆ. - CosmicLord ೨೨:೦೮, ೨೧ ಆಗಸ್ಟ್ ೨೦೦೭ (UTC)

(sunkadavar ೧೩:೩೧, ೧೩ ಫೆಬ್ರುವರಿ ೨೦೦೮ (UTC))(ಹವ್ಯಕ) ಲೇಖನವನ್ನು ನಾನು ಬರೆದಿದ್ದೇನೆ.ನಾನು ಹವ್ಯಕನಲ್ಲ. ಸಿಕ್ಕಮಾಹಿತಿಗಳಿಂದ ಗೊತ್ತಿದ್ದಷ್ಟು ಬರೆದಿದ್ದೇನೆ.

ಶಿರೋಲೇಖ[ಬದಲಾಯಿಸಿ]

How to enter kannada text? give link to help page. preferably in my talk page. Thanks. Yeno ondhu ೦೭:೧೩, ೪ October ೨೦೦೭ (UTC)

Arali katte is nice. How bout "mannina mane" for sandbox? Yeno ondhu
"Maralina goodu" would be nice.. Yeno ondhu ೧೦:೨೭, ೧೦ October ೨೦೦೭ (UTC)

initials ಗಳ ಬಗ್ಗೆ[ಬದಲಾಯಿಸಿ]

ತಮಗೆಲ್ಲರಿಗೂ ತಿಳಿದಿರುವಂತೆ ವ್ಯಕ್ತಿಯ ಹೆಸರಿಗೆ initials ಗಳು ಇರುತ್ತವೆ. ಕೆಲವರಿಗೆ initials ಗಳು ಇಲ್ಲವಾದರೆ, ಮತ್ತೆ ಕೆಲವರಿಗೆ ೧ ಅಥವಾ ೨ ಮತ್ತು ಕೆಲವು ಸಂದರ್ಭಗಳಲ್ಲಿ ೩ initials ಗಳು ಇರುತ್ತವೆ. initials ಗಳನ್ನು standard ಗಳ ಪ್ರಕಾರ ಹೀಗೆ ಬರೆಯಲಾಗುತ್ತದೆ: C.K. Takwani. illi "C" mattu "." mattu "K" mattu "." madhye yaavude "space" barakooDadu. "K" naMtara baruva "." naMtara ondu "space" iralEbEku. naMtara hesaru praaraMbhavaaguttade. ಇತ್ತೀಚಿಗೆ ಕೆಲವರು initials ಗಳನ್ನು ಹೆಸರಿನ ನಂತರ ಸೇರಿಸುತ್ತಾರೆ. ಮತ್ತು ಇನಿಶಿಯಲ್ಸ್ ಗಳ ನಡುವೆ "." ಅನ್ನು ಇಡುತ್ತಿಲ್ಲ.

ಈ initials ಮಧ್ಯೆ ಇಡುವ "dot" ಮತ್ತು "spacce" ನ ದ್ವಂದದಿಂದ ಎಷ್ಟೊ ವ್ಯಕಿಗಳ ಪುಟಗಳನ್ನು ಹುಡುಕುವುದ ಕಷ್ಟವಾಗಿದೆ. ಆದ್ಧರಿಂದ "dot" mattu "space" ಇರುವ ಪದಗಳ ಪುಟಗಳಿಗೆ automated redirect ವ್ಯವಸ್ಥೆ ಮಾಡಬಹುದೆ? ಎಂಬುದು ನನ್ನ ಪ್ರಶ್ನೆ. ಒಮ್ಮೆ ಯು.ಆರ್. ಅನಂತಮೂರ್ತಿ ಅವರ ಪುಟವನ್ನು ಹುಡುಕಲು ಹೋಗಿ ಕಷ್ಟವಾಗಿತ್ತು. google search ನಲ್ಲಿ ಇರುವ ವ್ಯವಸ್ಥೆ ಎಂದರೆ: "dong" ಎಂದು type ಮಾಡಿದರೆ "did you mean DOG" ಎಂದು ಕೇಳುತ್ತದೆ. ಈ ರೀತಿ ವ್ಯವಸ್ಥೆ ವಿಕಿಪೀಡಿಯ ದಲ್ಲಿ ಮಾಡಬಹುದೆ?

Gagan ೦೯:೪೦, ೧೧ November ೨೦೦೭ (UTC)

ಹೆಸರುಗಳಲ್ಲಿನ ತೊಂದರೆಗಳು ನಮ್ಮ ವಿಕಿಯಲ್ಲಿ ಬಹಳಷ್ಟು ಇವೆ. ಇವಕ್ಕೆ automatic ಆಗಿ ರೀಡೈರೆಕ್ಟ್ ಸೃಷ್ಟಿಸುವಂತಹ ಕೋಡ್ ಬರೆಯುವವರು ಇಲ್ಲಿ ಯಾರೂ ಇಲ್ಲ. ಆದ್ದರಿಂದ ಎಲ್ಲರೂ ಯಾವುದಾದರೂ ವ್ಯಕ್ತಿಯ ಬಗ್ಗೆ ಹೊಸ ಲೇಖನ ಸೃಷ್ಟಿಸಿದಾಗ ಅದರೊಂದಿಗೆ initialಗಳ ವ್ಯತ್ಯಾಸಗಳಿಗೆಲ್ಲಾ ತಾವಾಗೆ ರೀಡೈರೆಕ್ಟ್ ಕಲ್ಪಿಸಬೇಕಾಗುತ್ತದೆ. ಎಷ್ಟು ವಿವಿಧ initial structure ಗಳಿಂದ ಇದನ್ನು ಕಲ್ಪಿಸಲಾಗುತ್ತದೊ ಅಷ್ಟಕ್ಕೂ ಮಾಡಿದರೆ ಉತ್ತಮ. ಗೂಗಲ್ ರೀತಿ ಸರ್ಚ್ ವ್ಯವಸ್ಥೆ ಯಾವ ವಿಕಿಯಲ್ಲೂ ಇಲ್ಲ. ಆದರೆ ಆಂಗ್ಲ ವಿಕಿಯಲ್ಲಿ ಹುಡುಕಿದ ಪದ ಸಿಕ್ಕದಿದ್ದಲ್ಲಿ ಅದನ್ನು ನೇರವಾಗಿ ಗೂಗಲ್ ನಲ್ಲಿ ಹುಡುಕುವಂತೆ ಒಂದು ಲಿಂಕ್ ಬರುತ್ತದೆ. ಅದನ್ನು ನಮ್ಮ ವಿಕಿಯಲ್ಲಿ ಅಳವಡಿಸಲು ಪ್ರಯತ್ನಿಸುವೆ. ಒಳ್ಳೆಯ ಸಲಹೆ, ಧನ್ಯವಾದಗಳು. ಶುಶ್ರುತ \ಮಾತು \ಕತೆ ೧೭:೧೫, ೧೧ November ೨೦೦೭ (UTC)

ಕನ್ನಡ ಪದಗಳ ಕೊರತೆ[ಬದಲಾಯಿಸಿ]

ಬಹಳಷ್ಟು ಆಂಗ್ಲ ಪದಗಳಿಗೆ, ವಿಶೇಷವಾಗಿ ತಾಂತ್ರಿಕ ಪದಗಳಿಗೆ ಸಮನಾಂತರ ಕನ್ನಡ ಪದಗಳು ಸಿಗುವುದಿಲ್ಲ.(ಉದಾ: oscillator, modulation). ಇದರಿಂದಾಗಿ ತಾಂತ್ರಿಕ ಲೇಖನಗಳನ್ನು ಬರೆಯುವಾಗ ಅಡಚಣೆಗಳನ್ನು ಅನುಭವಿಸುತ್ತಿದ್ದೇನೆ. ಇದಕ್ಕಾಗಿ ಯಾರಾದರೂ ತಜ್ಙ್ಕರು ಇರುವರೇ? ಅಥವಾ ನಾವಾಗಿ ಸೃಜಿಸಬಹುದೇ? ಹಾಗೆ ಸೃಜಿಸುವಾಗ ಏನಾದರೂ ನಿಯಮಗಳಿವೆಯೇ? ಬಲ್ಲವರು ದಯವಿಟ್ಟು ತಿಳಿಸುವಿರಾ? Vedaprakasha ೦೬:೧೧, ೨೫ ಮಾರ್ಚ್ ೨೦೦೮ (UTC)

ವಿಕಿಪೀಡಿಯದಲ್ಲಿ ಎಲ್ಲವೂ ಒಂದೇ ಬಾರಿ ಕೊನೆಯ ರೂಪ ತಾಳಬೇಕೆಂದಿಲ್ಲ. ಆದ್ದರಿಂದ ಕನ್ನಡ ಸಮಾನ ಪದಗಳು ದೊರೆಯದಿದ್ದರೆ ಆಂಗ್ಲದಲ್ಲಿಯೇ ಆ ಪದವನ್ನು ಬಿಡಬಹುದು ಅಥವ ತಾವಾಗೇ ಸೃಜಿಸಬಹುದು. ತಾವಾಗೇ ಸೃಜಿಸಿದ್ದಲ್ಲಿ ಅದರ ಪಕ್ಕದಲ್ಲಿ bracketನಲ್ಲಿ ಅದರ ಆಂಗ್ಲ ಸಮಾನ ಪದವನ್ನು ಬರೆಯುವುದು ಉತ್ತಮ. ಮುಂದೆ ಆ ಲೇಖನವನ್ನು ಓದುವ ಸಂಪಾದಕರಿಗ್ಯಾರಿಗಾದರೂ ಆ ಪದ ತಿಳಿದಿದ್ದರೆ ಅವರು ಅದನ್ನು ಸೇರಿಸಬಹುದು. ವಿಕಿಯಲ್ಲಿ ಈ ವಿಷಯಗಳಲ್ಲಿ flexibility ಹೆಚ್ಚು. ಶುಶ್ರುತ \ಮಾತು \ಕತೆ ೧೫:೪೫, ೨೫ ಮಾರ್ಚ್ ೨೦೦೮ (UTC)
ನಾನು ಗುರು ಗ್ರಹದ ವಾಯುಮಂಡಲವೆಂಬ ಲೇಖನವನ್ನು ಇಂಗ್ಲಿಷ್ ವಿಕಿಯAtmosphere of Jupiter ನಿಂದ ಭಾಷಾಂತರ ಮಾಡುತ್ತಿದ್ದೇನೆ. ಕೆಲವೊಂದು ಪದಗಳ ಭಾಷಾಂತರ ಕ್ಕೆ ದಯವಿಟ್ಟು ಸಹಾಯಮಾಡಿ.

ಪದಗಳು ಹೀಗಿವೆ. active phenomena, vortices, anticyclones, shallow(ಆಳವಿಲ್ಲದ?), convection, Vertical structure, critical points,Dynamics,two dimensional turbulence,Dispersion relation(ಹರಡುವಿಕೆಯ ??). ದಯವಿಟ್ಟು ಮೂಲ ಲೇಖನವನ್ನೊಮ್ಮೆ ಒದಿ ನನಗೆ ಭಾಷಾಂತರಿಸಲು ಸಹಕರಿಸಿ ಲೋಕೇಶ\ಚರ್ಚೆ ೧೦:೦೦, ೩೧ ಆಗಸ್ಟ್ ೨೦೦೯ (UTC)

ಆಂಗ್ಲದಿಂದ ಕನ್ನಡಕ್ಕೆ ಭಾಷಾಂತರ ಮಾಡಲು [೧] ಮತ್ತು [೨] ನಿಘಂಟುಗಳನ್ನು ಬಳಸಬಹುದು. --ವಿನಯ್\ಚರ್ಚೆ ೧೮:೩೪, ೩೧ ಆಗಸ್ಟ್ ೨೦೦೯ (UTC)

ಥಾಂಕ್ಸ್ ವಿನಯ್, ಅದರೆ ಬಹಳಷ್ಟು ವಿಙ್ಞಾನದ ಪದಗಳಿಗೆ ಈ ನಿಘಂಟುಗಳಲ್ಲಿ ಅನುವಾದವಿಲ್ಲ. ಉ.ದಾ ಎಂಟ್ರೋಪಿ, thermal contact, thermal equilibrium, thermodynamic system, reversible process, state function ಇವೆಲ್ಲಾ ಪದಗಳು ಆಂಗ್ಲ ವಿಕಿಯ Entropy (classical thermodynamics) ಲೇಖನದಲ್ಲಿವೆ. ದಯವಿಟ್ಟು ಎಲ್ಲಿಯಾದರೂ ಸಹಾಯ ಸಿಗಬಹುದೇ ತಿಳಿಸಿ ಲೋಕೇಶ\ಚರ್ಚೆ ೧೦:೩೬, ೭ ಅಕ್ಟೋಬರ್ ೨೦೦೯ (UTC)

ಲೋಕೇಶ್ ಅವರೆ, ದಯವಿಟ್ಟು ಸೀರಿಯಸ್ ಆದ ಕೆಲಸಕ್ಕೆ [೩] ಮತ್ತು [೪] ನಿಘಂಟುಗಳನ್ನು ಬಳಸಬೇಡಿ. ನಿಘಂಟನ್ನು ಸೃಷ್ಟಿಸುವುದು ಬಹಳ ಪಾಂಡಿತ್ಯವಿರಬೇಕಾದ ಕೆಲಸ.

ಮೈಸೂರು ವಿವಿಯ ಇಂಗ್ಲಿಷ್-ಕನ್ನಡ ನಿಘಂಟನ್ನು ಅಧಿಕೃತವಾಗಿ ಬಳಸಬಹುದಾಗಿದೆ.(ಈ ನಿಘಂಟಿನ ಸಂಪಾದಕ ಸದಸ್ಯರುಗಳಲ್ಲಿ ಡಿ. ವಿ. ಜಿ, ಬಿ. ಎಂ. ಶ್ರೀ. ಟಿ. ಎಸ್. ವೆಂಕಣ್ಣಯ್ಯ, ಏ. ಆರ್. ಕೃಷ್ಣಶಾಸ್ತ್ರಿ, ಎಂ. ವಿ. ಸೀತಾರಾಮಯ್ಯ ಇಂತಹವರು ಇದ್ದಾರೆ. ಇವರಲ್ಲಿ ಅನೇಕರು ಕುವೆಂಪುರಂತಹವರಿಗೆ ಗುರುಗಳಾಗಿದ್ದವರು.) ಈ ನಿಘಂಟಿನ ಪ್ರಕಾರ ಎಂಟ್ರೋಪಿ : ಒಂದು ವ್ಯೂಹದಲ್ಲಿ ಉಷ್ಣ ಶಕ್ತಿಯನ್ನು ಯಾಂತ್ರಿಕ ಶಕ್ತಿಯನ್ನಾಗಿ ಮಾರ್ಪಡಿಸುವಲ್ಲಿ, ಕಾರ್ಯಕ್ಕೆ ಒದಗದ ಶಕ್ತಿಯ ಪರಿಮಾಣ : ಜಡೋಷ್ಣ : (ರೂಪ.) ನಿಷ್ಕ್ರಿಯಾ ಸ್ಥಿತಿ; ಜಡ ಸ್ಥಿತಿ.

ಪ್ರಭು

ಜ್ಯೋತಿಷ್ಯ ವು ಸಾಮಾಜಿಕವಾಗಿ ಉತ್ತಮವೆ?[ಬದಲಾಯಿಸಿ]


ಈ ಪ್ರಶ್ನೆಯನ್ನು ಜ್ಯೋತಿಷ್ಯ ವಿಷಯದ ಚರ್ಚಾ ಪುಟದಲ್ಲಿ ಕೇಳಲಾಗಿತ್ತು . ನಾನು ಅದಕ್ಕೆ ವಿಜ್ಞಾನದ ದೃಷ್ಟಿ ಯಿಂದ ಉತ್ತರಿಸಿದ್ದೆ .ಅದನ್ನು ತೆಗೆದುಹಾಕಲಾಗಿದೆ ಕಾರಣ ತಿಳಿಸಿ.

  • ನನ್ನ ಉತ್ತರ ಹೀಗಿತ್ತು :
  • ಜ್ಯೋತಿಷ್ಯ ಶಾಸ್ತ್ರವೇ , ಬೇರೆ ಫಲ ಜ್ಯೋತಿಷ್ಯವೇ ಬೇರೆ , ಒಂದನ್ನೊಂದು ತಪ್ಪಾಗಿ ಭಾವಿಸಲಗುತ್ತಿದೆ.

ಜ್ಯೋತಿಷ್ಯ ಶಾಸ್ತ್ರವು ಗ್ತ್ರಹಗಳ ಚಲನೆ ಮತ್ತು ತಿಥಿ, ವಾರ, ನಕ್ಷತ್ರ, ಯೋಗ, ಕರಣ ಇವುಗಳ ಲೆಕ್ಕಕ್ಕೆ ಸಂಬಂಧ ಪಟ್ಟಿದೆ . ಫಲ ಜ್ಯೋತಿಷ್ಯವು ಅವುಗಳ ಸ್ಥಾನ ಕಾಲಗತಿಯ ಆಧಾರದ ಮೇಲೆ ಭವಿಷ್ಯವನ್ನು ಹೇಳುವ ಶಾಸ್ತ್ರ. ಈ ಶಾಸ್ತ್ರದಲ್ಲಿ ಒಂಭತ್ತು ಗ್ರಹ ಳನ್ನು ಹೇಳಿದ್ದು ಅವು ಹಳೆಯ ಕಲ್ಪನೆ. ಸೂರ್ಯ ಒಂದು ನಕ್ಷತ್ರ ಪಾಪ ಗ್ರಹ ವೆಂದು ಶಾಸ್ತ್ರ ಹೇಳುತ್ತದೆ. ಆದರೆ ಅದು ಇಡೀ ಜೀವ ಸಂಕುಲಕ್ಕೆ ಆಧಾರ. ಅದು ಬೆಂಕಿಯಂತೆ ಉಗ್ರವಾಗಿರುವುದರಿಂದ ಹಾಗೆ ಶಾಸ್ತ್ರ ಬರೆದಿರಬಹುದು. ರಾಹು, ಮತ್ತು ಕೇತುಗಳು ಗ್ರಹಗಳೇ ಅಲ್ಲ. ಕಾಣುವುದೂ ಇಲ್ಲ. ಅವುಗಳನ್ನು ಛಾಯಾ (ನೆರಳಿನ ) ಗ್ರಹಗಳೆಂದು ಹೇಳಿದೆ. ಮೊದಲು ಫಲ -ಜ್ಯೋತಿಷ್ಯ ಶಾಸ್ತ್ರ ವನ್ನು ಬರೆದ ವರಾಹ ಮಿಹಿರನು ರಾಹು ಕೇತು ಗಳನ್ನು ಗ್ರಹಗಳ ಸಾಲಿಗೆ ಸೇರಿಸಿಲ್ಲ. ನಂತರ ಯಾರೋ ಅದನ್ನು ಸೇರಿಸಿ ಅದಕ್ಕೆ ಫಲಗಳನ್ನು ಬರೆದರು. ಯಾವ ಯಾವ ಗ್ರಹಕ್ಕೆ ಯಾವ ಯಾವ ಫಲ ಎಂಬುದಕ್ಕೆ ಯಾವ ಸಕಾರಣ ವೂ ಇಲ್ಲ . ಆದರೆ ಕುಂಡಲಿಯಲ್ಲಿ (೧೨ ರಾಶಿ ಚಕ್ರದಲ್ಲಿ ) ಗ್ರಹಗಳಿದ್ದಾಗ ಅವುಗಳ ಫಲ ಬಲಾಬಲ , ಸಂಬಂಧಿತ ಫಲ ಇವುಗಳ ಲೆಕ್ಕಾಚಾರ ಅತ್ಯಂತ ಜಾಣ್ಮೆ ಯಿಂದ ಜೋಡಿಸಲಾಗಿದೆ. ಅದರಂತೆ ನಿಖರವಾಗಿ ಯಾವುದನ್ನೂ ಹೇಳಲು ಅಸಾಧ್ಯ . ಕೆಲವರಿಗೆ ಜನ್ಮತಃ ಭವಿಷ್ಯವನ್ನು ಇಣುಕಿ ನೋಡುವ ಶಕ್ತಿ ಇರುತ್ತದೆ. ಉದಾಹರಣೆಗೆ ಯಶಸ್ವಿ ಉದ್ಯಮಿ . ಅಂಥವರು ಜ್ಯೋತಿಷ್ಯ ಶಾಸ್ತ್ರ ಕಲಿತು ಹೇಳಿದರೆ ಬಹಳಷ್ಟು ನಿಜ ಆಗಿರುವುದುಂಟು. ಆ ಶಾಸ್ತ್ರಕಾರನೇ "ಈಶಾಸ್ತ್ರ ದಲ್ಲಿ ಕೇವಲ ಶೇಕಡಾ ೫೦ ರ ಷ್ಟು ನಿಜ ಆಗಬಹುದು; ನಿಜ ಭವಿಷ್ಯವು ಆ ಸೃಷ್ಟಿ ಕರ್ತಬ್ರಹ್ಮನಿಗೇ ಗೊತ್ತು" ಎಂದು ಬರೆದಿದ್ದಾನೆ. ಭಾಸ್ಕರಾಚಾರ್ಯರ ಕಾಲದ ವರೆಗೆ ಆದ ಗಣಿತದ ತಪ್ಪನ್ನು ಭಾಸ್ಕರಾಚಾರ್ಯರು ಸರಿಪಡಿಸಿದರು.ಆ ಕಾಲದಿಂದ ವರಾಹಮಿಹಿರನ ನಂತರ ಆದ ತಪ್ಪನ್ನು ಯಾರೂ ಸರಿ ಪಡಿಸಿಲ್ಲ. ಅದಕ್ಕಾಗಿ ಪಂಚಾಂಗದಲ್ಲಿ , ಸೂರ್ಯ ಸಿದ್ಧಾಂತ , ದೃಗ್ಗಣಿತ್, ಸಾಯನ, ನಿರಯನ, ಮುಂತಾಗಿ ಬಗೆಬಗೆಯ ಲೆಕ್ಕಾಚಾರದ ಪುಟಗಳನ್ನು ಸೇರಿಸಿದ್ದಾರೆ ಎಲ್ಲಾ ಅತಿ ಜಾಣ್ಮೆಯ ಊಹಾತ್ಮ್ಕಕ. ಅದರ ಆಳವನ್ನು ತಿಳಿಯುವುದು ಸುಲಭವಲ್ಲ. ಅದರ ಆಳವನ್ನು ತಿಳಿಯುವುದು ಸುಲಭವಲ್ಲ.. ಇದಕ್ಕಾಗಿ ಪ್ರತ್ಯೇಕ ಲೇಖನದ ಅವಶ್ಯಕತೆ ಇದೆ. ವಿಕಿ ಯಲ್ಲಿ ಅದಕ್ಕೆ ಅವಕಾಶ ವಿದೆಯೇ? ಇದ್ದರೆ ಬರೆಯುತ್ತೇನೆ. :Bschandrasgr ೧೭:೩೯, ೨೯ ಮಾರ್ಚ್ ೨೦೧೨ (UTC)ಬಿ.ಎಸ್. ಚಂದ್ರಶೇಖರ ಸಾಗರ

ವಿಕಿಯಲ್ಲಿ ನಿಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ನೇರವಾಗಿ ಬರೆಯಲು ಅವಕಾಶವಿಲ್ಲ. ಆದರೆ ನೀವು ಹೇಳಿರುವ ವರಾಹಮಿಹಿರ ಮತ್ತು ಭಾಸ್ಕರಾಚಾರ್ಯರ ಕೊಡುಗೆಗಳು ಮತ್ತು ಅವರ ಅನಿಸಿಕೆಗಳನ್ನು ಖಂಡಿತ ತಿಳಿಸಬಹುದು ~ ಹರೀಶ / ಚರ್ಚೆ / ಕಾಣಿಕೆಗಳು ೧೯:೪೧, ೨೯ ಮಾರ್ಚ್ ೨೦೧೨ (UTC)

ವಿಷಯ ಸಮಸ್ಯೆ :[ಬದಲಾಯಿಸಿ]

  • ವರಾಹಮಿಹಿರ ಮತ್ತು ನಂತರದ ಗಣಿತ ಮತ್ತು ಜ್ಯೋತಿಷ್ಯದ ಬೆಳುವಣಿಗೆ ಬಗ್ಗೆ ಬೇರೆಯವರು ವಿಜ್ಞಾನದ ದೃಷ್ಟಿಯಿಂದ ಬರೆದ ವಿವರ ಲೇಖನ ನಾನು ನೋಡಿಲ್ಲ . ಆದರೆ ಡಾ. ಶಿವರಾಮ ಕಾರಂತರು ತಮ್ಮ 'ಈ ಜಗತ್ತು' ಮತ್ತು ಪ್ರೊ. ಆರ್. ಎಲ್. ನರಸಿಂಹಯ್ಯ ನವರು ತಮ್ಮ ' ಜಗತ್ತುಗಳ ಹುಟ್ಟು ಸಾವು' ಗ್ರಂಥಗಳಲ್ಲಿ ಈ ಬಗ್ಗೆ ಸಂಕ್ಷಿಪ್ತ ವಾಗಿ ಪ್ರಸ್ತಾಪಿಸಿದ್ದಾರೆ . ಅದನ್ನೇ ವಿವರವಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಆದ ತಪ್ಪು ಕಲ್ಪನೆಗಳನ್ನು ವಿವರಿಸಿ ಬರೆಯಬೇಕಾಗುವುದು. ವಿಕಿ ಇಂಗ್ಲಿಷ್

ವಿಭಾಗದಲ್ಲೂ ಈ ವಿಷಯವನ್ನು ಕೇವಲ ೨೩ ಡಿಗ್ರಿ ಗಳಷ್ಟು ಲೆಕ್ಕ ತಪ್ಪಿದೆ ಎಂದು ಮಾತ್ರಾ ಹೇಳಿ ಅದರ ಪರಿಣಾಮ ಜ್ಯೋತಿಷ್ಯದಲ್ಲಿ ಭವಿಷ್ಯ ಹೇಳುವಾಗ ಏನು ಪ್ರಮಾದ, ಸಂಧಿಗ್ದತೆ ಆಗುವುದೆಂದು ವಿಮರ್ಶೆಗೆ ಹೋಗಿಲ್ಲ . ವಿಚಾರ ವಾದಿಗಳು ಈ ಶಾಸ್ತ್ರ ಲೆಕ್ಕ ತಪ್ಪಿದೆ ಮತ್ತು ಸಕಾರಣವಲ್ಲ ಎಂದಷ್ಟೇ ಹೇಳುತ್ತಾರೆ. ಉದಾಹರಣೆ ಮೂಲಕ ತೋರಿಸಿಲ್ಲ . ನಾನು 'ಫಲ ಜ್ಯೋತಿಷ್ಯದಲ್ಲಿ ಕೆಲವು ಸಂದಿಗ್ಧತೆ ' ವಿಚಾರವಾಗಿ ಒಂದು ಸಂಕ್ಷಿಪ್ತ ಲೇಖನ ಸಿದ್ಧಪಡಿಸಿದ್ದೇನೆ. ಜ್ಯೋತಿಷ್ಯ ವಿಭಾಗದಲ್ಲಿ ಸೇರಿಸಬಹುದೇ? ತಿಳಿಸಿ . ಆದರೆ ಅದರಲ್ಲಿ ಕುಂಡಲಿ ಗಳನ್ನು ಹಾಕಿ ಗ್ರಹಗಳನ್ನು ತೋರಿಸುವುದು ಕಷ್ಟ ವಾಗಬಹುದು. ಬಿ.ಎಸ್ ಚಂದ್ರಶೇಖರ. ೩೧/೩/೨೦೧೨ ಸ್ವಲ್ಪ ಬದ ಲಾ ಯಿಸಿ ಫಲಹೇಳುವ ಜ್ಯೋತಿ‍‍ಷ್ಯ್ಕಕ್ಕೂ ಖಗೋಲ ವಿಜ್ನಾನಕ್ಕೂ ಇರುವ ವ್ಯತ್ಯಾಸವನ್ನು ತೋರಿಸಲು ಪ್ರಯತ್ನಿಸುತ್ತೇನೆ. :Bschandrasgr ೧೭:೧೮, ೬ ಏಪ್ರಿಲ್ ೨೦೧೨ (UTC)

ಜ್ಯೋತಿಷ್ಯ[ಬದಲಾಯಿಸಿ]


  • ಜ್ಯೋತಿಷ್ಯ ನಂಬಬಹುದೇ? ಹಿಂದಿನ ಪ್ರಶ್ನೆ - ಜ್ಯೋತಿಷ್ಯ ಸಾಮಾಜಿಕವಾಗಿ ಒಳ್ಳೆಯದೇ?
  • ಜ್ಯೋತಿಷ್ಯ ಮತ್ತು ವಿಜ್ಞಾನ ವಿಷಯ ವನ್ನು ತುಂಬಿದ್ದೇನೆ.. ಪರಿಶೀಲಿಸಿ. ಸಲಹೆ ಗಳಿದ್ದರೆ ಕೊಡಿ. ಮೇಲಿನ ಪ್ರಶ್ನೆಗೆ ಉತ್ತರ ಸಿಗಬಹುದು
  • ಈಗ ಟಿ.ವಿ.ಯಲ್ಲಿ ಬರುತ್ತಿರುವ ಭವಿಷ್ಯ ಸಲಹೆಗಳು ಸಮೂಹ ಸನ್ನಿ ಗೆ ಸೇರಿದೆ. ಎಂದು ನನ್ನ ನಂಬುಗೆ. :
  • ಬಿ.ಎಸ್.ಚಂದ್ರಶೇಖರ ೨೩-೫-೨೦೧೨/ ೨೩.೫೪./೨೪-೫-೨೦೧೨/೨೨.೨೦

ಮಹಾಭಾರತ ವಿಷಯ[ಬದಲಾಯಿಸಿ]


ಕನ್ನಡ ಸಾಹಿತ್ಯದಲ್ಲಿ ಮಹಾಭಾರತ -ಈ ಲೇಖನದಲ್ಲಿ ಒಂದು ದೊಡ್ಡ ತಪ್ಪಾಗಿದೆ . ಕುಮಾರವ್ಯಾಸನು ಕೃಷ್ಣನ ಭಕ್ತ. ಅವನು ಕೃಷ್ಣಾವಸಾನದ ವರೆಗೆ ಎಂದರೆ ೧೦ ಪರ್ವದ ವರೆಗೆ ಮಾತ್ರಾ ಬರೆದಿದ್ದಾನೆ. ಎಂದಿದೆ. ಕುಮಾರವ್ಯಾಸನು ಕೃಷ್ಣನ ಭಕ್ತನಾಗಿದ್ದರೂ ದುರ್ಯೋಧನನ ಅವಸಾನದ ವರೆಗೆ ವಿಶದವಾಗಿ ಬರೆದು ನಂತರ ಸಂಕ್ಷಿಪ್ತವಾಗಿ ಉಳಿದುದನ್ನು ಹೇಳಿದ್ದಾನೆ. ಕೃಷ್ಣಾವಸಾನದ ವಿಷಯ ೧೭, ೧೮ ನೆಯ ಅಧ್ಯಾಯ ದಲ್ಲಿದೆ. ಇದನ್ನು ಸರಿಪಡಿಸಬೇಕು.. ಬಿ.ಎಸ್.ಚಂದ್ರಶೇಖರ ಸಾಗರ.

ನಾನು ತಿದ್ದಬಹುದೇ? Bschandrasgr ೦೭:೨೫, ೧೨ ಏಪ್ರಿಲ್ ೨೦೧೨ (UTC)
ಖಂಡಿತ..! ಯಾವುದೇ ಲೇಖನದಲ್ಲಿ ತಪ್ಪು ಕಂಡುಬಂದಲ್ಲಿ ಅಥವಾ ಯಾವುದೇರೀತಿಯಲ್ಲಿ ಲೇಖವನನ್ನು ಉತ್ತಮಪಡಿಸುವ ಅವಕಾಶವಿದ್ದಲ್ಲಿ ಯಾರುಬೇಕಾದರೂ ಕಾರ್ಯಕೈಗೆತ್ತಿಕೊಳ್ಳಬಹುದು!!! -- ತೇಜಸ್ / ಚರ್ಚೆ/ ೦೨:೦೫, ೧೪ ಏಪ್ರಿಲ್ ೨೦೧೨ (UTC)

ತಿದ್ದುಪಡಿ ಮಾಡಿದೆ. :Bschandrasgr ೧೨:೧೨, ೧೫ ಏಪ್ರಿಲ್ ೨೦೧೨ (UTC)

ಸಾಹಿತ್ಯ - ದ್ವಯ ತ್ರಯಾದಿ ಸಮುಚ್ಚಯ ಪದಗಳು[ಬದಲಾಯಿಸಿ]


ತೇಜಸ್ ರವರೇ, ನನ್ನಲ್ಲಿ ನನ್ನ ತಂದೆಯವರು ೧೯೪೦-೪೫ ರಲ್ಲಿ ಸಂಗ್ರಹಿಸಿದ ಸಮುಚ್ಚಯ ಪದಗಳ (ಕಲೆಲ್ಟಿವ್ ನೌನ್ಸ್) ಪಟ್ಟಿ ಇದೆ. ಅದಕ್ಕೆ ನಾನೂ ಕೆಲವನ್ನು ಸೇರಿಸಿದ್ದೇನೆ. ಅದನ್ನು ನನ್ನ ತಂದೆಯವರು ಯಾವ ಯಾವ ಗ್ರಂಥದಿಂದ ತೆಗೆದುಕೊಂಡಿದ್ದ್ದಾರೋ ಗೊತ್ತಿಲ್ಲ. ಯಾವುದೇಕಾಪಿ ರೈಟ್ ಗ್ರಂಥ ದಿಂದ ಇರಲಾರದು. ಆ ಬಗೆಯ ಗ್ರಂಥ ಪ್ರಿಂಟಾಗಿದೆಯೋ ತಿಳಿಯದು. ಆ ಪದಗಳು 'ದ್ವಯದಿಂದ - ೬೪ ಕಲೆಗಳ' ವರೆಗೆ ಬರುತ್ತೆ. ಜನರಿಗೆ ಉಪಯೋಗ ಆಗಬಹುದು. ಅದನ್ನು 'ವಿಕಿ' ಗೆ ಹಾಕಬಹುದೇ ತಿಳಿಸಿ :- ಉದಾಹರಣೆಗೆ -ದ್ವಯ ತ್ರಯ ಮಾತ್ರ ಕೊಟ್ಟಿದೆ :( ಅದನ್ನು 'ವಿಕಿ' ಗೆ ಹಾಕಬಹುದಾದರೆ ಯಾವ ವಿಭಾಗ-ವರ್ಗ?) ದ್ವಯ ತ್ರಯ ಸಮುಚ್ಚಯ ಪದಗಳು;

ದ್ವಯ[ಬದಲಾಯಿಸಿ]


  • ೧. ಅಯನ ದ್ವಯ ೧) ಉತ್ತರ, ೨) ದಕ್ಷಿಣ
  • ೨. ಪಕ್ಷ ದ್ವಯ ೧) ಶುಕ್ಲ ೨) ಕೃಷ್ಣ
  • ೩. ವಚನ ದ್ವಯ ೧) ಏಕ ೨) ಬಹು
  • ೪. ಸೂತಕ ದ್ವಯ ೧) ಜಾತ ೨) ಮರಣ (ಮೃತ)

ತ್ರಯ ಗಳು[ಬದಲಾಯಿಸಿ]


  • ೧. ಅದ್ಯಾತ್ಮ ಶಾಸ್ತ್ರ ತ್ರಯ ೧. ಸಾಂಖ್ಯ ೨.ಮೀಮಾಂಸ ೩. ವೇದಾಂತ (?)
  • ೨. ಸೂತ್ರ ತ್ರಯ ೧. ಸಾಂಖ್ಯ ೨. ಯೋಗ ೩. ಬ್ರಹ್ಮ
  • ೩. ಪರಿಚ್ಛೇದ ತ್ರಯ ೧. ಕಾಲ ೨. ದೇಶ ೩. ವಸ್ತು
  • ೪. ಆತ್ಮ ತ್ರಯ ೧. ಜೀವಾತ್ಮ ೨. ಅಂತರಾತ್ಮ ೩. ಪರಮಾತ್ಮ
  • ತುಂಬಿದೆ-

ಚತುಷ್ಠಯಂ[ಬದಲಾಯಿಸಿ]

  • ಇದನ್ನ್ನು ವಿಕಿಗೆ ಹಾಕಬಹುದೇ ವಿಚಾರಿಸಿ ತಿಳಿಸಿ :Bschandrasgr ೧೪:೪೦, ೧೮ ಏಪ್ರಿಲ್ ೨೦೧೨ (UTC) ಬಿ.ಎಸ್.ಚಂದ್ರಶೇಖರ ಸಾಗರ

ಭಗವದ್ಗೀತಾ ತಾತ್ಪರ್ಯ[ಬದಲಾಯಿಸಿ]


ನಾಲ್ಕನೆಯ ಅದ್ಯಾಯ ತುಂಬುತ್ತಿದ್ದೇನೆ - ಸಲಹೆಗಳಿದ್ದರೆ ಕೊಡಿ ; ಬಿ.ಎಸ್.ಚಂದ್ರಶೇಖರ ಸಾಗರ ಶಿವಮೊಗ್ಗ; Bschandrasgr ೧೩:೪೦, ೧೭ ಜೂನ್ ೨೦೧೨ (UTC)

ಬಿ.ಎಸ್.ಚಂದ್ರಶೇಖರ[ಬದಲಾಯಿಸಿ]

ಪುಟ ಉಳಿಸಿ

  • ಬಿ.ಎಸ್.ಚಂದ್ರಶೇಖರ./೨೪-೧೦-೨೦೧೨

ಮಾನ್ಯ ಹರೀಷ್ ರವರೇ : ನನ್ನ ಕಾಣಿಕೆಗಳ ಪಟ್ಟಿ ಇದ್ದರೆ ಅದನ್ನು ಪುನಃ ಪುನಃ ಎಡಿಟ್ (ಸಂಪಾದಿಸನೆ ) ಮಾಡಿ ವಿಷಯಗಳನ್ನು ಸೇರಿಸಲು ಅಥವಾ ತಿದ್ದಲು ಅನುಕೂಲ. ದಯವಿಟ್ಟು ನನ್ನ ಹೆಸರಿನ ಕಾಣಿಕೆಗಳ ಪುಟ ಉಳಿಸಿ. ಸದಾ ಅವನ್ನು ಕಾಲಕ್ಕೆ ತಕ್ಕಂತೆ ಉತ್ತಮ ಪಡಿಸಬೇಕು.ಅವು ಒಂದು ಪುಟದಲ್ಲಿ ಸಿಗದಿದ್ದರೆ ಹುಡುಕುವುದು ಕಷ್ಟ. Bschandrasgr ೧೩:೦೮, ೨೪ ಅಕ್ಟೋಬರ್ ೨೦೧೨ (UTC

ಚಂದ್ರಶೇಖರ ಅವರೇ, ಕಾಣಿಕೆಗಳ ಪಟ್ಟಿಯನ್ನು ಸದಸ್ಯರ ಪುಟದಲ್ಲಿ ಸೇರಿಸಬಹುದು. ಸದಸ್ಯರು ತಮ್ಮ ಹೆಸರಿನಲ್ಲಿ ಲೇಖನವನ್ನು ಹೊಂದುವ ಬಗ್ಗೆ ಹೆಚ್ಚಿನ ಮಾಹಿತಿಗೆ http://en.wikipedia.org/wiki/Wikipedia:FAQ/Article_subjects#Can_I_start_an_article_about_myself_or_my_company.3F ಮತ್ತು http://en.wikipedia.org/wiki/en:Wikipedia:Starting_an_article ನೋಡಿ. ಇನ್ನಾವುದೇ ವಿಷಯದಲ್ಲಿ ಸಹಾಯ ಬೇಕಿದ್ದಲ್ಲಿ ಅರಳಿ ಕಟ್ಟೆ ಅಥವಾ ನನ್ನ ಚರ್ಚಾ ಪುಟದಲ್ಲಿ ಕೇಳಿ -- ತೇಜಸ್ / ಚರ್ಚೆ/ ೧೦:೪೨, ೨೫ ಅಕ್ಟೋಬರ್ ೨೦೧೨ (UTC)
  • ಲೇಖನದಲ್ಲಿ ಹೆಸರನ್ನು ತೆಗೆಯಲಾಗುವುದು; ಆದರೆ ಸಂಪರ್ಕಕ್ಕಾಗಿ ಲೇಖನಗಳ ಪಟ್ಟಿಯ ತಲೆ ಬರೆಹ ಇಡಲಾಗಿದೆ. ಅವಕಾಶವಿದೆಯೇ?; Bschandrasgr ೧೬:೪೧, ೩೦ ಅಕ್ಟೋಬರ್ ೨೦೧೨ (UTC)

ಮಹಾತ್ಮ ಗಾಂಧಿ[ಬದಲಾಯಿಸಿ]


  • ಮಹಾತ್ಮ ಗಾಂಧಿ
  • ಸಂತ ಗಾಂಧೀಜೀ ತುಂಬುತ್ತಿದ್ದೇನೆ , ಪೂರ್ಣ ಆಗಿಲ್ಲ -ನೋಡಿ ಸಲಹೆ ಕೊಡಿ -(ನಿರ್ದೇಶಿತ : ಸದಸ್ಯ:Bschandrasgr/ಪರಿಚಯ )
  • -"ಮಹಾತ್ಮಾ ಗಾನ್ದೀಜಿ ಮಳ್ಳ." ಈವಾಕ್ಯವನ್ನು ಯಾರೋ ಮಹಾತ್ಮ ಗಾಂಧಿ ತಾಣ- ೧೯೪೩ ರ ಚಳುವಳಿಯ ಪ್ಯಾರಾದ ಕೊನೆಯಲ್ಲಿ ಸೇರಿಸಿದ್ದಾರೆ -ತೆಗೆಯಬೇಕು

ಮೇಲಿನ ಹೆಸರು - 'ಮಹಾತ್ಮಾ ಗಾಂಧೀ', ಎಂದು ಇರಬೇಕಿತ್ತು -ಪರಿಶೀಲಿಸಿ -Bschandrasgr ೧೭:೫೪, ೨೮ ಅಕ್ಟೋಬರ್ ೨೦೧೨ (UTC)

೧) ಸಂತ ಗಾಂಧೀಜೀ ಪುಟವನ್ನು ಮಹಾತ್ಮ ಗಾಂಧಿ ಪುಟದೊಂದಿಗೆ ವಿಲೀನಗೊಳಿಸುವುದು ಒಳ್ಳೆಯದೆಂದು ನನ್ನ ಅನಿಸಿಕೆ. ಆದರೆ ಲೇಖನ ಬಹಳ ದೊಡ್ಡದಿದ್ದರೆ ಇಗಿರುವಂತೆ ಬೇರೆ ಪುಟಹೊಂದಿ ಅದರ ಕೊಂಡಿಯನ್ನು ಮಹಾತ್ಮ ಗಾಂಧಿ ಪುಟದಲ್ಲಿ ನೀಡುದುವು ಒಳ್ಳೆಯದು. ೨)ಮಹಾತ್ಮ ಗಾಂಧಿ ಪುಟದಲ್ಲಿದ್ದ ಅಸಂಬದ್ಧ ಪಠ್ಯವನ್ನು ತೆಗೆದಿದ್ದೇನೆ. ಯಾವುದೇ ರೀತಿಯ ತಪ್ಪುಗಳು ಲೇಖನಗಳಲ್ಲಿ ಕಂಡು ಬಂದರೆ ನೀವೇ ಅದನ್ನು ಸರಿಪಡಿಸಬಹುದು. -- ತೇಜಸ್ / ಚರ್ಚೆ/ ೦೯:೫೦, ೨೯ ಅಕ್ಟೋಬರ್ ೨೦೧೨ (UTC)
 Done -- ತೇಜಸ್ / ಚರ್ಚೆ/ ೧೫:೩೭, ೨೯ ಅಕ್ಟೋಬರ್ ೨೦೧೨ (UTC)
ಲೇಖನ ಸಾಕಷ್ಟು ಉದ್ದವಿದೆ. ಮೇಲಾಗಿ ಮೂಲ ಲೇಖನಕ್ಕೆ ಹೊಂದಲಾರದು. . ಮೂಲ ಲೇಖನಕ್ಕೆ - ಸಂಪರ್ಕ ಕೊಟ್ಟರೆ ಸಾಕು - ಮಧ್ಯದಲ್ಲಿ ಕೊಟ್ಟಿದ್ದೇನೆ.Bschandrasgr ೧೦:೫೯, ೨೯ ಅಕ್ಟೋಬರ್ ೨೦೧೨ (UTC)
ಲೇಖನ ಮುಗಿದಿದೆ., "ಈ ಲೇಖನವನ್ನು ಮಹಾತ್ಮ ಗಾಂಧಿ‎ ಹೆಸರಿನ ಲೇಖನದೊಂದಿಗೆ ಸೇರಿಸಬೇಕೆಂದು ಪ್ರಸ್ತಾಪಿಸಲಾಗಿದೆ. ಈ ಪ್ರಸ್ತಾಪನೆಯನ್ನು ಇಲ್ಲಿ ಚರ್ಚಿಸಿ" ಈ ಟ್ಯಾಗನ್ನು ತೆಗೆಯಬಹುದು ಎಂದು ತೋರುತ್ತದೆ. Bschandrasgr ೧೨:೧೬, ೨೯ ಅಕ್ಟೋಬರ್ ೨೦೧೨ (UTC)
  • ಅಭಿಪ್ರಾಯ ತಿಳಿಸಿ - ಲೇಖಕರ ಹೆಸರು ತೆಗೆದಿದೆ -ನನ್ನ ಪಟ್ಟಿಗೆ ಹಿಂತಿರುಗಲು ಬೇಕಾಗಿತ್ತು. ಅದು ಸ್ವತಂತ್ರ ಲೇಖನ.

ವಿಕಿಪೀಡಿಯದಲ್ಲಿ ನಿಮ್ಮ ಲೇಖನಗಳು ಅಮೋಘವಾಗಿವೆ. ನಿಮ್ಮ ಕಾಣಿಕೆಗಳು ಹೀಗೇ ಮುಂದುವರೆಯಲೆಂದು ಆಶಿಸುತ್ತೇನೆ. ವಿಕಿಪೀಡಿಯದಲ್ಲಿ ಸಂಶೋಧನೆ/ವೈಯಕ್ತಿಕ ಅಭಿಪ್ರಾಯಗಳನ್ನು ನೇರವಾಗಿ ಬರೆಯಲು ಮತ್ತು ಲೇಖನದ ಕೆಳಗೆ ಸಂಪಾದಕರ ಹೆಸರನ್ನು ಬರೆಯಲು ಅವಕಾಶವಿಲ್ಲ. ದಯವಿಟ್ಟು No_original_research ಪುಟಗಳನ್ನು ನೋಡಿ. Wikipedia:Your_first_article ಪುಟವು ಲೇಖನದ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದೆ. ಸದಸ್ಯರ ಪುಟದಲ್ಲಿ ನಿಮ್ಮೆಲ್ಲಾ ಲೇಖನಗಳ ಪಟ್ಟಿಯನ್ನು ಹೊಂದುದುದಕ್ಕೆ ಯಾವುದೇ ತೊಂದರೆಯಿಲ್ಲ. -- ತೇಜಸ್ / ಚರ್ಚೆ/ ೦೧:೦೭, ೩೧ ಅಕ್ಟೋಬರ್ ೨೦೧೨ (UTC)

ಇತರೆ :[ಬದಲಾಯಿಸಿ]


  • ಪಂಚ ಕೋಶ :- ವಿವೇಕ ಚೂಡಾಮಣಿಯಲ್ಲಿ ಪಂಚ ಕೋಶಗಳು : ಇದರ ವಿವರ ತುಂಬಿದೆ. Bschandrasgr ೧೭:೨೪, ೨೬ ಜನವರಿ ೨೦೧೩ ಬಿ.ಎಸ್.ಚಂದ್ರಶೇಖರ ಸಾಗರ
  • ಹವ್ಯಕ : -
  • ಶ್ರೀ ಹರೀಶ್ ರವರೇ ಈ ಮೇಲಿನ ವಿಷಯದಲ್ಲಿ ಇಂಗ್ಲಿಷ್ ತಾಣದಲ್ಲಿ ಇರುವುದನ್ನು ಅನುವಾದಿಸಿದೆ . ಅದರಲ್ಲಿ ಇರುವ ಅನುಮಾನ ಹಾಗೇ ಉಳಿದಿದೆ. ನಾನು ಚಿಕ್ಕವನಿದ್ದಾಗ ವರದ ಹಳ್ಳಿಯ ರಾಮ ಮಂದಿರದ ಎದುರು ಒಂದು ಶಿಲಾಶಾಸನ ಇದ್ದ ನೆನಪು ; ವಿವರ ಗೊತ್ತಿಲ್ಲ ;( ಮೈಸೂರು ಮ್ಯೂಸಿಯಮ್ಮಿಗೆ ಸಾಗಿಸಿರ ಬಹುದೇ?)-ಈಗ ಇಲ್ಲ.. ಈ ಕೆಳಗಿನ ವಿವರ ನೋಡಿ - ಸರಿಪಡಿಸಿ. ಈಗ ಹೊಸದಾಗಿ ಹವ್ಯಕರ ಇತಿಹಾಸ ದರ್ಶನ' ೨೦೧೨ ರಲ್ಲಿ ಹವ್ಯಕ ಅಧ್ಯಯನ ಕೇಂದ್ರದಿಂದ ಪ್ರಕಟವಾಗಿದೆ . ಅದರಲ್ಲೂ ವರದ ಹಳ್ಳಿ ಶಾಸನದ ವಿಷಯ ಇಲ್ಲ. ಅಮೇರಿಕ - ನಾರಯಣ ಹೊಸಮನೆ ಯವರನ್ನು ವಿಚಾರಿಸಿ.(೧೮-೩-೨೦೧೩) --
  • ಹಿಂದಿನ ಚರ್ಚೆ : -
  • ವರದಹಳ್ಳಿಯ ಶಿಲಾಶಾಸನದ ಬಗ್ಗೆ ನಾನು ಅಲ್ಲಿ ವಿಚಾರಿಸಿದಾಗ ಆ ಬಗೆಯ ಶಿಲಾಶಾಸನ ಇರುವುದು ಅಲ್ಲಿ ಯಾರಿಗೂ ತಿಳಿದಿಲ್ಲ ವೆಂದು ತಿಳಿಯಿತು. ಅದು ಎಲ್ಲಿದೆ ಎಂದು ತಿಳಿದಿದ್ದರೆ ತಿಳಿಸಿ. :Bschandrasgr ೧೩:೦೨, ೨೩ ನವೆಂಬರ್ ೨೦೧೨ (UTC) ಬಿ.ಎಸ್.ಚಂದ್ರಶೇಖರ

ಇದರ ಬಗ್ಗೆ ನಾನೂ ವಿಚಾರಿಸಿದ್ದೆ. ಅದು ಯಾರಿಗೂ ತಿಳಿದಿಲ್ಲ. ಅದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದಿರುವುದರಿಂದ ಆ ಮಾಹಿತಿಯನ್ನು ತೆಗೆದು ಹಾಕುವುದು ಒಳ್ಳೆಯದು. ~ ಹರೀಶ / ಚರ್ಚೆ / ಕಾಣಿಕೆಗಳು ೨೨:೨೬, ೨೩ ನವೆಂಬರ್ ೨೦೧೨ (UTC)

  • ಇಂದಿನದು ೧೮-೩-೨೦೧೩ :-

ಶ್ರಿ ನಾರಾಯಣ ಹೊಸಮನೆ ಅಮೇರಿಕ ಇವರು ತಮ್ಮ ಲೇಖನದಲ್ಲಿ ಈ ವಿಷಯ ಬರೆದಿದ್ದು ಅದು ಕನ್ನಡಕ್ಕೆ ಅನುವಾದ ವಾಗಿದೆ. (೧೮- ೩- ೨೦೧೩ ) ಮತ್ತೂ :

  • ಅನುಮಾನಕ್ಕೆ ಈ ಕೆಳಗಿನ ವಿಳಾಸಕ್ಕೆ ಸಂಪರ್ಕಿಸಲು ತಿಳಿಸಿದ್ದಾರೆ. ಅಮೇರಿಕ ಕನ್ನಡ ಸಂಘ : ವಿಚಾರಿಸಿ ; ಹವ್ಯಕ ಇಂಗ್ಲಿಷ್ ತಾಣ - ರೆಫೆರೆನ್ಸ್ ೧ : ನೋಡಿ :-
  • ( hosmane@niu.edu <hosmane@niu.edu>)^ Havyaka Sagara - Roots of Havyaka Brahmins

ವೆಬ್-ಸೈಟು :

For further comments and/or discussions, please contact the authors of this article (originally published in July1995 in the book entitled Havyaka Association of the Americas) below by e-mail:

  • Subraya G. Hegde 1000 Pine Avenue, #252 Redlands, CA 92373 E-mail: subray@ucracl.ucr.edu
  • Nagendra R. Hegde 3405 Holdrege, #101 Lincoln, NE 68503-1471 E-mail: nhegde@crcvms.unl.edu
  • Contents copyrighted © 2002 by Narayan S. Hosmane and Northern Illinois University. All rights reserved. *Any questions or comments? Please contact Narayan Hosmane.
  • ರೂಟ್ಸ್ ಆಫ್ ದ ಹವ್ಯಕ ಬ್ರಾಹ್ಮಿನ್ಸ್ - ತಾಣದ ಎರಡನೇ ಪ್ಯಾರಾ ಕೊನೇ ವಾಕ್ಯ :
  • Raja Mayooravarma's act of bringing us into Banavasi has been inscribed on a stone stab (one of the so called "Shilashasanas") from the period of the Kadambas, which now lies near the village of Varadahalli in Sagar Taluk of Shimoga district.

ಬೆಳಗೆರೆ ಕೃಷ್ಣಶಾಸ್ತ್ರಿ[ಬದಲಾಯಿಸಿ]


  • 'ಬೆಳಗೆರೆ ಕೃಷ್ಣಶಾಸ್ತ್ರಿ ಗಳು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ಬೆಳೆಗೆರೆಯವರು. ಅಲ್ಲಿಯೇ ಅವೆರು ದಿನಾಂಕ ೨೨-೫-೧೯೧೬ ರಂದು ಜನಿಸಿದರು' ಎಂದು ತಿದ್ದುಪಡಿ ಆಗಬೇಕು. ಜನನ ೨೨-೫-೧೯೨೦ ಚಿತ್ರದುರ್ಗ ಎಂದು ತಪ್ಪಾಗಿದೆ.. Bschandrasgr ೦೮:೩೩, ೨೪ ಮಾರ್ಚ್ ೨೦೧೩ (UTC) (ಬಿಎಸ್ ಚಂದ್ರಶೇಖರ, ಸಾಗರ)
  • ಸರಿಪಡಿಸಿ

ನೋಡಿ[ಬದಲಾಯಿಸಿ]


ಅಕ್ಕಮಹಾದೇವಿಯವರೇ ರಚಿಸುವ ವಚನಗಳೂ , ಅವರ ವ್ಯಕ್ತಿತ್ವವನ್ನು ಕಟ್ಟಿ ಕೊಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ .ಈ ಎಲ್ಲವನ್ನೂ ಗಮನಿಸಿದಾಗ ಅಕ್ಕಮಹಾದೇವಿಯವರ ಜೀವನ ಅಸಾಮಾನ್ಯವಾದ , ವೈಶಿಷ್ಟ್ಯತೆಯಿಂದ, ವೈಚಾರಿಕವಾದ, ಅನುಭಾವಪೂರ್ಣವಾದ , ನುಡಿ,ನಡೆಗಳೊಂದಾದ ಪರಿಯಲ್ಲಿರುವುದು ಕಂಡು ಬರುತ್ತದೆ .

ಮಾನ್ಯ -‎Dr.K.Soubhagyavathi ಯವರೇ ನೀವು "ಅನುಭಾವಪೂರ್ಣ"ವಾದ ಪದವನ್ನು ಬದಲಿಸಿ ಜೀವನಾನುಭವ ಹಾಕಿರುವುದು ನನಗೆ ಸರಿ ಕಾಣುವುದಿಲ್ಲ  ; 'ಜೀವನಾನುಭವ ', ಪ್ರಾಪಂಚಿಕವಾದುದು, ಅಕ್ಕ ಅದನ್ನು ಮೀರಿದವಳೆಂದು ಅಲ್ಲಮರೇ ಹೇಳುತ್ತಿರುವಾಗ, ಅಲ್ಲದೆ ಅವಳ ಉತ್ತರದಲ್ಲಿ ತಾನು ಮಲ್ಲಿಕಾರ್ಜುನನಲ್ಲಿ ಒಂದಾಗಿರುವುದಅಗಿ ಹೇಳು ತ್ತಿರುವಾಗ - ಅವಳ ಜೀವನಾನುಭವದ ಬಗೆಗೆ ಒತ್ತುಕೊಡುವುದು ಎಷ್ಟು ಸರಿ? ಅದೇಅವಳ ಹಿಂದಿನ ಅನೇಕ ವಚನಗಳು ಜೀವನಾನುಭವದ ಬಗೆಗೆ ಸಾಕ್ಷಿಯಾಗಿವೆ ; ಆದರೆ ಇಲ್ಲಿ -ಎರಡೂ ಕಡೆ ಅನುಭಾವ (ಇಂದ್ರಿಯಾತೀತ ಆತ್ಮಾನುಭವ ) ಪದವೇ ಸರಿಕಾಣುವುದು. -ನನಗೆ ಮೊದಲಿದ್ದ ಪಾಠವೇ ಸರಿ ಎನಿಸುವುದು. ವಿಚಾರ ಮಾಡಿ/ವಿಚಾರಿಸಿ. ಲೇಖನ ನನ್ನದಲ್ಲ. ನನ್ನದು ಸಂಪಾದನೆ ಮಾತ್ರಾ. ```Bschandrasgr ೧೮:೧೪, ೩೦ ಡಿಸೆಂಬರ್ ೨೦೧೩ (UTC) -(ಸದಸ್ಯ:Bschandrasgr/ಪರಿಚಯ-ಬಿ.ಎಸ್ ಚಂದ್ರಶೇಖರ )

ಕೆ.ಸೌಭಾಗ್ಯವತಿ (talk) ೦೧:೪೫, ೩೧ ಡಿಸೆಂಬರ್ ೨೦೧೩ (UTC)ನಮಸ್ತೆ ಸರ್, ಶುಭೋದಯ. ಅಕ್ಕನವರ ಬಗ್ಗೆ ನೀವು ಉಲ್ಲೇಖಿಸಿರುವ ಮಾತುಗಳು ನನ್ನವಲ್ಲ. ನಾನು ಆ ಲೇಖನದ ಸಂಪಾದನೆ ಮಾಡಿದ್ದೇನೆಯೇ ಹೊರತು, ಬೇರೊಬ್ಬರ ಲೇಖನದಲ್ಲಿ ನನ್ನ ಅಭಿಪ್ರಾಯವನ್ನು ಹೇಳುವ ಧಾರ್ಷ್ಟತೆಯ ಗುಣ ನನಗಿಲ್ಲ. ನೀವು ನನ್ನ ಸಂಪಾದನೆ ನೋಡಿ ಅಪಾರ್ಥ ಮಾಡಿ ಕೊಂಡಿರುವಂತಿದೆ. ಅಕ್ಕನ ಬಗ್ಗೆ ವಿದ್ಯಾರ್ಥಿಗಳಿಗೆ ಬೋದಿಸುವ ವಿಷಯದಲ್ಲಿ ಏನಾದರೂ ಹೊಸ ಹೊಳಹು ಸಿಗಬಹುದೆಂದು ಲೇಖನವನ್ನು ಪರಿಶೀಲಿಸುವಾಗ, ಅಕ್ಷರದೋಷಗಳಿರುವುದನ್ನು ಗಮನಿಸಿ ಅದನ್ನಷ್ಟೇ ಪರಿಷ್ಕರಿಸಿದ್ದೇನೆ. ವಂದನೆಗಳು.

---

talk
ಅಕ್ಕಮಹಾದೇವಿ
ನಮಸ್ಕಾರ ;ಕ್ಷಮಿಸಿ ; ಮೊದಲಿನ ವಾಕ್ಯಗಳನ್ನು ಬದಲಿಸಿ , ಹೊಸ ವಾಕ್ಯಗಳನ್ನು ಯಾರು ಹಾಕಿದರೆಂದು ತಿಳಿಯುವುದಿಲ್ಲ. ಕೊನೆಯ ಸಂಪಾದನೆ ನಿಮದಿದ್ದುರಿಂದ ಹಾಗೆ ಭಾವಿಸಿದೆ. ಆದರೂ ನೀವೂ ವಚನಸಾಹಿತ್ಯದಲ್ಲಿ ಸಾಕಷ್ಟು ಅದ್ಯ ಯನ ಮಾಡಿದ್ದೀರಿ ಎಂದು ಭಾವಿಸಿದ್ದೇನೆ; ಇಲ್ಲಿ 'ಅನುಭಾವ' ಪದದ ಬದಲಿಗೆ 'ಜೀವನಾನುಭವ' ಸೇರಿಸಿ ಹೊಸ ವಾಕ್ಯಗಳನ್ನೇ ಹಾಕಲಾಗಿದೆ. ನನಗೆ ಇಷ್ಟ ವಾಗಲಿಲ್ಲ. ಕಾರಣ, ಅಪ್ರಸ್ತುವಾದರೂ, ಹೇಳಲು ಬಯಸುತ್ತೇನೆ ; - "ಆಕ್ಕ ಒಬ್ಬ ಅನುಭಾವಿ ಶರಣೆ, ಆಕೆ ಚಕ್ಕಂದಿನಿಂದಲೂ ಗುರುಗಳಿಂದ ಸಾಹಿತ್ಯ,, ತತ್ವ (ಶಿವಾದ್ವೈತ) ಕಲಿತು, ಚನ್ನಮಲ್ಲಿಕಾರ್ಜು ನ ಹೆಸರಿನಲ್ಲಿ ಆತ್ಮ ಸಾದನೆಯಲ್ಲಿ ತೊಡಗಿ ೧೫-೧೬ (?) ವಯಸ್ಸಿಗೆಲ್ಲಾ ಆತ್ಮಾನುಭವ ಪಡೆದವಳು ; ಆತ್ಮಾನುಭವಕ್ಕೆ ವಚನಗಳಲ್ಲಿ 'ಅನುಭಾವ' ಎನ್ನುತ್ತಾರೆ ಎಂದು ನನ್ನ ನಂಬುಗೆ. ಅವಳು ಬಯಸಿ ಮದುವೆಯಾಗಲಿಲ್ಲ. ಪುರುಷ ಸುಖ ಕಾಣಳು, ಬಸುರಿಯಾಗಿ ಮಗುವನ್ನು ಹೆತ್ತು ಅದನ್ನು ನೋಡಿ ಆನಂದ ಪಡಲಿಲ್ಲ ; ಮಗುವಿಗೆ ಮೊಲೆಯುಣಿಸಿ ಎತ್ತಿ ಮುದ್ದಾಡಿ ಅನಂದ ಪಡಲಿಲ್ಲ. ಅಕ್ಕಪಕ್ಕದವರ, ನೆಂಟರಿಷ್ಟರ ಸುಖ ಕಷ್ಟಗಳಿಗೆ ಸ್ಪಂದಿಸಿ ಅನುಭವಿಸಲಿಲ್ಲ . ಇದು ಜೀವನಾನುಭವವೆಂದು ನನ್ನ ಭಾವನೆ; ಕೇವಲ ನೋಡಿದ್ದು ಅನುಭವವ ಅಗುವುದಿಲ್ಲ. ಅವಳ ವಚನಗಳಲ್ಲಿ ಜೀವನಾನುಭವದ ವಿಷಯ ಬಂದರೆ ಅದು ಅಂತರಂಗದ ಹುಟ್ಟುಕವಿಯ ಕಾವ್ಯದ ಕಾಣ್ಕೆ . ಅವಳು ಹುಟ್ಟು ಕವಯತ್ರಿ. ಆದರೆ ಅನುಭಾವಿ ಶಿವಶರಣೆ. ಚಿಕ್ಕ ವಯಸ್ಸಿನಲ್ಲೇ ಆತ್ಮಾನುಭೂತಿ ಪಡೆದು (೧೭-೧೮ ಪ್ರಾಯ ?) ಕಲ್ಯಾಣಕ್ಕೆ ಹೋಗಿ ಅಲ್ಲಿ ಸ್ವಲ್ಪ ದಿನವಿದ್ದು ಶ್ರೀಶೈಲಕ್ಕೆ ಹೋಗಿ ಅಲ್ಪ ಕಾಲದಲ್ಲೇ ಸಮಾಧಿ ಸ್ಥಿತಿ ತಲುಪಿ ಶಿವೈಕ್ಯಳಾದಳೆಂದು (ಪ್ರಾಯ ೨೦-೨೧?) ನನ್ನ ಅನಿಸಿಕೆ ; ಕಲ್ಯಾಣಕ್ಕೆ ಬರುವಾಗಲೇ ಅವಳು ದೇಹ ಭಾವನೆಯಿಂದ / ಪ್ರಾಪಂಚಕ ಭಾವನೆಯಿಂದ ಆಚೆ ಶಿವ ತತ್ವದಲ್ಲಿ (ಪರ ಬ್ರಹ್ಮ) ಮುಳುಗಿದ್ದಳೆಂದು ನನ್ನ ಅನಿಸಿಕೆ. ಆಕಾಲದಲ್ಲಿ ಅವಳನ್ನು ಅರಿಯಬಲ್ಲವರು -ಅಲ್ಲಮ, ಚನ್ನಬಸವಣ್ಣ, ಮಾತ್ರಾ ಎಂಬುದು. ಅವಳ-ಅವರ ಮಾತಿನಿಂದ ತಿಳಿಯುವುದು. ಬಸವಣ್ಣ ಇನ್ನೂ ಪ್ರಾಪಂಚಿಕ ಕಾರ್ಯವಿದ್ದುದರಿಂದ (ಅರಿತೂ) ಪ್ರಾಪಂಚಿಕನಾಗಿಯೆ ಇದ್ದನೆಂದು ನನ್ನ ಅನಿಸಿಕೆ .
ಆ ಪಾಠ ಬದಲಿಸಿದವರು ದಯಮಾಡಿ ಇದನ್ನು ಓದಲಿ ಎಂದು ಇಲ್ಲಿ ದಾಖಲಿಸಿದ್ದೇನೆ.

Bschandrasgr ೧೩:೦೨, ೧ ಜನವರಿ ೨೦೧೪ (UTC)

Dear Sir,
Ple, Somebody Help me
Kannada Language button does not appear in MY Kannada wiki page ;

"Control M" also is not working ?? So I cannot type in kannada in wiki Page and make corrections Please add a button for selecting kannada language ! What shall I do??Bschandrasgr ೧೬:೦೧, ೨೧ ಜನವರಿ ೨೦೧೪ (UTC)

ಈಗ ಸರಿಯಾಗಿದೆ ;ಧನ್ಯವಾದಗಳು ;Bschandrasgr ೧೩:೪೫, ೨೩ ಜನವರಿ ೨೦೧೪ (UTC)

ಕೆಲವು ಬೇಡಿಕೆಗಳು[ಬದಲಾಯಿಸಿ]

  • ೧)ಕನ್ನಡ ಲಿಪಿಯ ಜೊತೆಗೆ , ಕನ್ನಡ ಅಂಕೆಗಳಿರುವ ಬದಲಿಗೆ ಆಯ್ಕೆ ಮಅಡಿಕೊಳ್ಳಲು ಇಂಗ್ಲಷ್ / ರೋಮನ್ ಅಂಕೆಗಳಿರುವ ತಂತ್ರಾಶ ಬೇಕು; (Nudi 05 e)--(Nudi 05 k) ಈ ಎರಡೂ ಇರಲಿ ; ಕನ್ನಡ ತಾಣಗಳಿಗೆ ಭೇಟಿ ಕೊಡುವ ನಮ್ಮ ಮತ್ತು ಇತರೆ ಕನ್ನಡ ಬಲ್ಲವರಿಗೆ / ಮಕ್ಕಳಿಗೆ ಈ ಕನ್ನಡ ಅಂಕೆಗಳು ತೊಡಕಾಗಿವೆ . ದಯವಿಟ್ಟ 'ತಂತ್ರಾಂಶ ನೀಡಲು ಬಲ್ಲ' ಸಂಪಾದಕರು ಗಮನಿಸಬೇಕು. ನಾವು ಕೇವಲ ಕನ್ನಡ ಅಂಕೆಗಳನ್ನು ಉಪಯೋಗಿಸುವುದರಿಂದ ಕನ್ನಡ ಓದುಗರನ್ನು ಕನ್ನಡ ವಿಕಿಯಿಂದ ದೂರವಿಟ್ಟಂತಾಗುವುದು ; ಈಗ ಶಾಲೆಗಳಲ್ಲಿ ಕನ್ನಡ ಅಂಕೆಗಳನ್ನು ಉಪಯೋಗಿಸುವುದಿಲ್ಲ/ಹೇಳಿಯೂ ಕೊಡಡುವುದಿಲ್ಲ ; ಅವರೇ ಬೇಕಾದರೆ ಕಲಿತುಕೊಳ್ಳಬೇಕಾಗುವುದು. ಇದರಿಂದ ಕನ್ನಡ ಮಕ್ಕಳು /ಕನ್ನಡಿಗರು ವಿಕಿ ತಾಣಗಳಿಂದ ದೂರವಿರುವಂತಾಗಿದೆ, ಇದು ಅನೇಕರ ಅಭಿಪ್ರಾಯವೂ ಆಗಿದೆ . ಸುಲಭವಾಗಿ ಇಂಗ್ಲಿಷ್ ತಾಣಗಳಿಗೆ ಹೋಗಿಬಿಡುತ್ತಾರೆ. ; ಇದು ಕನ್ನಡ ಜನರಿಗೆ ಉಪಯೋಗವಾಗಬೇಕು ಕನ್ನಡ ಅಂಕೆ ೧ =ಒಂದು ಸೊನ್ನೆಯಂತೆ ಕಾಣುತ್ತೆ .
  • ೨) ಇನ್ನೊಂದಿಷ್ಟು ಸಿಂಬಲ್ /ಸಂಕೇತಗಳಿರುವ ಅಂಕಣ ಬೇಕು (ಬೀಜ ಗಣಿತ ; ರೇಖಾಗಣಿತ, ಗಣಿತ ;ಜೀವ-ರಸಾಯನ- ಭೌತವಿಜ್ಞಾನ ಇತ್ಯಾದಿ) ; ಕನ್ನಡ ವಿಕಿಗಾಗಿ ಒಂದು ಡ್ರಾಯಿಂಗ + ಬಣ್ಣ ತಂತ್ರಾಂಶವಿದ್ದರೆ ಒಳ್ಳೆಯದು -ಅದನ್ನು ಅಭಿವೃದ್ಧಿಪಡಿಸಲು ಸಾದ್ಯವಿಲ್ಲವೇ ?
  • ೩) ಒಂದು 'ಟೂಲ್ ಕಿಟ್' ತಂತ್ರಾಂಶವಿದ್ದಿದ್ದರೆ ಅನುಕೂಲವಾಗುತ್ತಿತ್ತು . ಇದರಲ್ಲಿ (ವಿಕಿಯಲ್ಲಿ) ಕೆಲಸಮಾಡುವ ಅನೇಕ ಕಂಪ್ಯೂಟರ್ ವಿಜ್ಞಾನದ ಇಂಜನೀರ್,ಗಳಿದ್ದಾರೆ. ಅವರ ಒಂದು ಟೀಮ್ ಉಚಿತವಾಗಿ ಈ ಕೆಲಸ ಮಾಡಲು ಸಾಧ್ಯವೇ ?
  • ೪)ಟೂಲ್` ಬಾರ್` ನಲ್ಲಿಯೇ ಭಾಷೆಯನ್ನು ಆರಿಸಿಕೊಳ್ಳವ ಒಂದು ತಾಣ/ಸೈಟ್` ಇದ್ದರೆ ಒಳ್ಳೆಯದು.

.Bschandrasgr ೦೭:೩೪, ೨೧ ಮಾರ್ಚ್ ೨೦೧೪ (UTC) ; ಬಿ.ಎಸ್ ಚಂದ್ರಶೇಖರ

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ[ಬದಲಾಯಿಸಿ]

ವಿಕಿಪೀಡಿಯ:ಯೋಜನೆ/ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ ಪರಿವರ್ತನೆ ಯೋಜನೆ ಒಳ್ಳೆಯ ಯೋಜನೆ- ಆದರೂ, ಮೈಸೂರು ವಿಶ್ವವಿದ್ಯಾಲಯದ ಒಂದು ವೆಬ್ ಸೈಟ್ ಮಾಡಿ ಅದಕ್ಕೆ "ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ", ಹೆಸರನ್ನೇ ಇಟ್ಟಿದ್ದರೆ ಚೆನ್ನಾಗಿತ್ತು ; ಅದಕ್ಕೊಂದು ವಿಶೇಷ ಮಾನ್ಯತೆ ಇರುತ್ತಿತ್ತು.ಅದರಲ್ಲೇ ಎಡಿಟಿಂಗ್ ಗೆ ಅವಕಾಶ ಕಲ್ಪಿಸಬಹುದಿತ್ತು. ಅದು ಅನೇಕ ವಿದ್ವಾಂಸರ ಕೊಡಿಗೆ -ಬಹಳ ಪರಿಶ್ರಮದಿಂದ ಮಾಡಿದ್ದು. Bschandrasgr ೧೬:೩೩, ೫ ಮೇ ೨೦೧೪ (UTC) ಸದಸ್ಯ:Bschandrasgr/ಪರಿಚಯ :ಬಿ.ಎಸ್ ಚಂದ್ರಶೇಖರ

ವಿಕಿಪೀಡಿಯ ಒಂದು ವಿಶ್ವಕೋಶ. ಇತರೆ ವಿಶ್ವಕೋಶಗಳಿಂದ ಮಾಹಿತಿ ಅದಕ್ಕೆ ಹರಿದು ಬಂದರೆ ಎಲ್ಲ ಮಾಹಿತಿಗಳೂ ಒಂದೇ ಕಡೆ ಲಭ್ಯವಾಗುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಮಾಹಿತಿಯ ನವೀಕರಣ ಸತತವಾಗಿ ಆಗುತ್ತಿರುತ್ತದೆ. ಉದಾಹರಣೆಗೆ ವಿಕಿಪೀಡಿಯದಲ್ಲಿ ಒಬ್ಬ ಖ್ಯಾತನಾಮರ ಬಗ್ಗೆ ವಿವರ ಇದೆ ಎಂದಿಟ್ಟುಕೊಳ್ಳಿ. ಅವರಿಗೆ ಇನ್ನೊಂದು ಪ್ರಶಸ್ತಿ ಬಂದಾಗ ವಿಕಿಪೀಡಿಯ ಸಮುದಾಯ ಅದನ್ನು ವಿಕಿಪೀಡಿಯದಲ್ಲಿನ ಅವರ ಪುಟದಲ್ಲಿ ಸೇರಿಸುತ್ತಾರೆ. ಇದೆಲ್ಲ ಅತಿ ವೇಗವಾಗಿ ಆಗುತ್ತವೆ. ವಿಕಿಸೋರ್ಸ್‍ನಲ್ಲಿ ಈಗಾಗಲೆ ಮೈಸೂರು ವಿಶ್ವವಿದ್ಯಾಲಯ ವಿಶ್ವಕೋಶ ಎಂಬ ವಿಭಾಗ ತೆರೆಯಲಾಗಿದೆ. ಮೈಸೂರು ವಿ.ವಿ.ಯ ವಿಶ್ವಕೋಶದ ಎಲ್ಲ ಲೇಖನಗಳನ್ನು ಅಲ್ಲಿ ಒಂದೇ ಕಡೆ ಸೇರಿಸಲಾಗುತ್ತಿದೆ. ಈ ಯೋಜನೆಗೆ ಎಲ್ಲರೂ ಕೈಜೋಡಿಸಬಹುದು. ಹೆಚ್ಚಿನ ವಿಬವರಗಳನ್ನು ಸದ್ಯದಲ್ಲೇ ಯೋಜನೆ ಪುಟದಲ್ಲಿ ಸೇರಿಸುತ್ತೇನೆ. --Pavanaja (talk) ೦೪:೪೬, ೬ ಮೇ ೨೦೧೪ (UTC)

ವ್ಯಕ್ತಿಯ ಬಗ್ಗೆ ಟೀಕೆ[ಬದಲಾಯಿಸಿ]

“ಯಾರು ಗೆಲ್ಲುತ್ತಾರೋ ಸೋಲುತ್ತಾರೋ? ನೋಡಬೇಕು...” ಇದರ ಮುಂದಿನ ಭಾಗ

ಈ ಪ್ಯಾರಾ ಬಿಜೆಪಿ ಅಭಿಮಾನಿಗಳು ಅಥವಾ ಆ ಪಕ್ಷದವರು ಮಾಡುವ ಚುನಾವಣಾ ಪ್ರಚಾರದಂತಿದೆ; (ಚುನಾವಣಾ ಪ್ರಚಾರದ ಪಾಂಪ್ಲೆಟ್`ನಂತೆ). ಇದರಲ್ಲಿ ವಿಷಯ ತುಂಬಿದ ಸದಸ್ಯರು ರಾಹುಲ್ ಗಾಂಧಿಯ ಬಗ್ಗೆ ಅಸಮರ್ಥ ನಾಯಕನೆಂಬ ತಮ್ಮ ಸ್ವಂತ ಅಭಿಪ್ರಾಯ ಸೇರಿಸಿ ಅವರ ಬಗ್ಗೆ ಟೀಕೆ -ತಿರಸ್ಕಾರ ಭಾವನೆ ಉಂಟುಮಾಡುವ ಒಕ್ಕಣೆ ಸೇರಿಸಿದ್ದಾರೆ . ಒಂದು ವ್ಯಕ್ತಿ ಬಗೆಗೆ ಅದೂ ಉನ್ನತ ಸ್ಥಾನದಲ್ಲಿರುವ ರಾಜಕೀಯ ವ್ಯಕ್ತಿಯ ಬಗೆಗೆ ತಮ್ಮ ಸ್ವಂತ ಅಭಿಪ್ರಾಯ ಬರೆಯುವುದು, ಅದೂ ಒಂದು ವ್ಯಕ್ತಿಯನ್ನು ಹೀಗಳೆದು ಅಥವಾ ಟೀಕೆ ಮಾಡಿ ಬರೆಯುವುದು, ವಿಕಿಪೀಡಿಯಾ ನಿಯಮಕ್ಕೆ ಅನುಗುಣವಲ್ಲವೆಂದು ಭಾವಿಸುತ್ತೇನೆ. ಆ ಬಗೆಯ ರಾಜಕೀಯ ಟೀಕೆ- ಅಭಿಪ್ರಾಯಗಳನ್ನು ತಮ್ಮ ಸ್ವಂತ ಬ್ಲಾಗಿನಲ್ಲಿ ಬರೆಯಬಹುದು. ಸಂಪಾದಕ ಮಂಡಳಿಯವರು ಪರಿಶೀಲಿಸಲಿ ಎಂದು ಕೋರುತ್ತೇನೆ. - Bschandrasgr ೧೭:೦೧, ೨೭ ಸೆಪ್ಟೆಂಬರ್ ೨೦೧೪ (UTC)

  • ಸ್ಕೌಟ್ ಚಳುವಳಿ-ಸ್ಕೌಟ್ಸ್ ಮತ್ತು ಗೈಡ್ಸ್-ಟೆಂಡರ್ ಫುಟ್ ಮತ್ತು ಮೂರನೇ ಶ್ರೇಣಿಯ ಲಾಂಛನ (ಬ್ಯಾಡ್ಜ್) ಈ ಚಿತ್ರ ಮತ್ತು ಭಾರತದ ಸ್ಕೌಟ್ ಗೈಡ್ ಪ್ಲ್ಯಾಗ್/ಬಾವುಟ ಹಾಕಬೇಕು,-ಹಾಕಿ (ನನ್ನ, ಫೈಲ್ ಅಪ್ ಲೋಡ್ ಬ್ಲಾಕ್ ಆಗಿದೆ /blocked /ಅಥವಾ blocked by someone)ಸಹಾಯ ಮಾಡಿ.Bschandrasgr ೦೯:೧೨, ೨ ಅಕ್ಟೋಬರ್ ೨೦೧೪ (UTC)(ಸದಸ್ಯ:Bschandrasgr/ಪರಿಚಯ)
ಈಗಿನ ಹೊಸ ನಿಯಮ ಪ್ರಕಾರ ಎಲ್ಲ ಚಿತ್ರಗಳನ್ನು commons.wikimedia.org ಯಲ್ಲಿ ಮಾತ್ರ ಸೇರಿಸಬೇಕು. ಕನ್ನಡ ವಿಕಿಪೀಡಿಯದ ಒಳಗೆಯೇ ಚಿತ್ರ ಅಪ್ಲೋಡ್ ಮಾಡುವುದು ಸರಿಯಲ್ಲ.--Pavanaja (talk) ೦೯:೪೪, ೨ ಅಕ್ಟೋಬರ್ ೨೦೧೪ (UTC)
  • ಕೋರಿಕೆ

ಈಗಾಗಲೆ ಡಿಕಿಪೀಡಿಯಾ ತಾಣಗಳಲ್ಲಿ(ಕನ್ನಡ ಮತ್ತು ಇಂಗ್ಲಿಷ್`) ಅಪ್` ಲೋಡ್` ಆಗಿರವ ಫೋಟೋಗಳನ್ನು/ ಚಿತ್ರಗಳನ್ನು ಹುಡುಕುವ ಜಾಲತಾಣ ತಿಳಿಸಿ, ಹಿಂದೊಮ್ಮೆ ಅದು ಕ್ರಿಯೇಟಿವ್` ಕಾಮನ್ಸನಲ್ಲಿ ಪ್ರಚುರಪಡಿಸಲಾಗಿತ್ತು - ಈಗ ಕಾಣಲಿಲ್ಲ. ಒಂದು ತೊಂದರೆ ಅದರಲ್ಲಿ ವರ್ಗ ಹುಡುಕುವುದು , ಸಾವಿರಾರು ಫೋಟೋಗಳಲ್ಲಿ ನಮಗೆ ಬೇಕಾದುದನ್ನು ಹುಡುಕುವುದು ಬಹಳ ಪ್ರಯಾಸದ ಕೆಲಸ. ಅದಕ್ಕೆ ಪುಟದ ಮೇಲಿರುವ 'ಹುಡುಕು'ತಾಣದಲ್ಲಿ ಹೆಸರು ಕೊಟ್ಟು ಹುಡುಕಿ ತೆಗೆಯಲು ಬರುವಂತಿಲ್ಲವೇ? ಅಪ್`ಲೋಡ್ ಸೈಟಿನಲ್ಲಿ ಈ 'ಹುಡುಕುವ ಲಿಂಕ್/ಕೊಂಡಿ' ಇತ್ತು ,ಈಗ ಅದೂ ಕಾಣೆಯಾಗಿದೆ. ಆದರೆ ಇಂಗ್ಲಿಷ್`ತಾಣದ 'ಹುದುಕುವ ಕೊಂಡಿ' ಸಿಕ್ಕಿದರೆ ಉತ್ತಮ.ವೆಬ್` ಸೈಟಿನಲ್ಲಿ (ಗೂಗಲ್) ಸ್ಕೌಟಿಗೆ ಸಂಬಂಧಪಟ್ಟ (ಇತರೆ ಕೂಡಾ) ನೂರಾರು ಚಿತ್ರಗಳಿವೆ. ಅವು ಉಚತ-ಸಾರ್ವಜನಿಕರಿಗೆ ಕೊಟ್ಟವು ಎಂದು ಭಾವಿಸುತ್ತೇನೆ ಅದರಿಂದ ಆರಿಸಿಕೊಳ್ಳಲೂ ಬರುವುದಿಲ್ಲ. ಫೋಟೋ ಇಲ್ಲದ ಲೇಖನ ಆಸಕ್ತಿ ಹುಟ್ಟಿಸದು. ದಯವಿಟ್ಟು ಪರಿಹಾರ ಕಂಡುಹಿಡಿಯಿರಿ.' ಫೋಟೋಗಳನ್ನು/ ಚಿತ್ರಗಳನ್ನು ಹುಡುಕುವ ಜಾಲತಾಣ ತಿಳಿಸಿ. ನಿಮ್ಮವ,

  • Bschandrasgr ೧೩:೨೯, ೨ ಅಕ್ಟೋಬರ್ ೨೦೧೪ (UTC)

‎ಸದಸ್ಯ:Shreekant.mishrikoti‎

  • ಮಾನ್ಯರೇ,
  • ಅಗಸೆ ಗಿಡ ವು ೩-೬ ಮೀ ಬೆಳೆಯುವುದೆಂದು ಬರೆದಿದ್ದೀರಿ; ಆದರೆ ಅಗಸೆ ಎಣ್ಣೆ ಯ ಲೇಖನದಲ್ಲಿ ೩-೪ ಅಡಿ ಎಂದು ಇದೆ ; ವಿಕಿಪೀಡಿಯಾದಲ್ಲಿ ೪ ಅಡಿ ಎಂದು ಇದೆ ,ಯಾವುದು ಸರಿ??

[[೫]] Bschandrasgr ೧೩:೫೧, ೨೩ ಅಕ್ಟೋಬರ್ ೨೦೧೪ (UTC)(ಸದಸ್ಯ:Bschandrasgr/ಪರಿಚಯ

ಈ ವಿಭಾದಲ್ಲಿ ವಿಗ್ರಹ ಪದ ಮತ್ತು ಪ್ರತ್ಯಯಗಳನ್ನು ಸೇರಿಸಿ ಸಂಧಿಮಾಡುವಾಗ ಅನೇಕ ತಪ್ಪುಗಳಾಗಿವೆ - ದಯವಿಟ್ಟು ಉತ್ತಮ ವ್ಯಾಕರಣ ನೋಡಿ ಸರಿಪಡಿಸಿ. ಶ್ರೀ ತೀ.ನಂ.ಶ್ರೀ. ಯವರ ವ್ಯಾಕರಣ ನೋಡಿ. Bschandrasgr ೦೪:೪೭, ೧೩ ನವೆಂಬರ್ ೨೦೧೪ (UTC) (ಸದಸ್ಯ:Bschandrasgr/ಪರಿಚಯ

ಸರ್ದಾರ್ ವಲ್ಲಭಭಾಯ್ ಪಟೇಲ್[ಬದಲಾಯಿಸಿ]

ಈ ಲೇಖನವನ್ನು ಯಾರೋ ವಿಳಾಸ ಕೊಡದ ವ್ಯಕ್ತಿ -ದುರುದ್ದೇಶದ- ಅನಾಮಧೇಯ -ಫುರ್ವಾಗ್ರಹವಿದ್ದಂತೆ ತೋರುವ -(ದುರುಪಯೋಗದ ಅನುಕ್ರಮಣಿಕೆ)ಗೆ ಸೇರಿರುವವರು "ನಾಶ ಮಾಡಿ ಅಸಂಬದ್ಧವಾಕ್ಯಗಳುಳ್ಳ ಲೇಖನವನ್ನು ಸೇರಿಸುತ್ತಿದ್ದಾರೆ. ದಯವಿಟ್ಟು ಈ ಬಗೆಯ ದುರುಪಯೋಗ ತಡೆಯಿರಿ, ಉತ್ತಮ ಲೇಖನವನ್ನು ನಾಶಮಾಡುತ್ತಿದ್ದಾರೆ. ಹಿಂದಿನ ಉತ್ತಮ ಲೇಖನವನ್ನು ಪುನಹ ಹಾಕಿ.Bschandrasgr ೦೪
೪೪, ೧೪ ನವೆಂಬರ್ ೨೦೧೪ (UTC)
  • ಸದಸ್ಯ:VASANTH S.N.‎-- ಅವರು, ಸರಿಪಡಿಸಿದ್ದಾರೆ-ಧನ್ಯವಾದಗಳುBschandrasgr ೧೧:೩೪, ೧೪ ನವೆಂಬರ್ ೨೦೧೪ (UTC)

ಆಧಾರವಿಲ್ಲದ-ಮತ್ತು ತಪ್ಪು ಭಾಷೆಯ ಲೇಖನಗಳು[ಬದಲಾಯಿಸಿ]


ಅಡುಗೆ ರೆಸಿಪಿಗಳು[ಬದಲಾಯಿಸಿ]

ವಿಕಿಪಿಡಿಯದಲ್ಲಿ ಅಡುಗೆ ತಯಾರಿಕೆಯ ವಿಧಾನಗಳನ್ನು ಹಾಕಬಹುದೇ? ಟೊಮೆಟೊ_ಬಟಾಣಿ_ಭಾತ್‌ - ಇಂತಹ ಪುಟಗಳನ್ನು ನೋಡಿದಮೇಲೆ ಈ ಸಂದೇಹ ಬಂತು. ಇದಕ್ಕೆ ಅವಕಾಶವಿಲ್ಲವಾದರೆ ಈ ಸದಸ್ಯರು ಹಾಕುತ್ತಿರುವ ರೆಸಿಪಿ ಪುಟಗಳನ್ನು ಅಳಿಸಿಹಾಕಬೇಕಾಗುತ್ತದೆ. - Vikas Hegde (talk) ೦೮:೩೪, ೨೬ ಫೆಬ್ರುವರಿ ೨೦೧೫ (UTC)

ಕೇವಲ ಅಡುಗೆ ವಿಧಾನ (ರೆಸಿಪಿ) ಹಾಕುವುದು ಅಷ್ಟು ಸರಿಯಲ್ಲ ಎಂದು ನನ್ನ ಅಭಿಪ್ರಾಯ. ಆಹಾರದ ಬಗ್ಗೆ ವಿವರ ನೀಡಿ ತಯಾರಿಕೆಯ ವಿಧಾನವನ್ನೂ ಸೇರಿಸಿದರೆ ಅದು ವಿಶ್ವಕೋಶಕ್ಕೆ ಸರಿಯಾದ ಲೇಖನವಾಗಬಹುದು. ಉದಾಹರಣೆಗೆ ಇಂಗಲ್ಇಶ್ ವಿಕಿಪೀಡಿಯದಲ್ಲಿರುವ ಇಡ್ಲಿ ಬಗೆಗಿನ ಲೇಖನ.--Pavanaja (talk) ೧೬:೪೫, ೨ ಮಾರ್ಚ್ ೨೦೧೫ (UTC)
ಇದು ಕಂಪ್ಯೂಟರ್ ಅನುವಾದವಾಗಿರಬಹುದು -ತುಂಬಾ ತಪ್ಪುಗಳಿವೆ; ಸರಿಪಡಿಸಿ)->ಚರ್ಚೆBschandrasgr ೧೬
೦೧, ೨ ಮಾರ್ಚ್ ೨೦೧೫ (UTC)/ಸದಸ್ಯ:Bschandrasgrಚರ್ಚೆ

ವಿಕಿಪೀಡಿಯ ಲೇಖನಗಳನ್ನು ಸೇರಿಸುವ ನೀತಿ ನಿಯಮಗಳು[ಬದಲಾಯಿಸಿ]

ಕಲಾವಿದರ ಬಗ್ಗೆ ಲೇಖನಗಳನ್ನು ಸೇರಿಸುವಾಗ ಈ ಕೆಳಕಂಡ ನೀತಿ ನಿಯಮಗಳನ್ನು ಅನುಸರಿಸುವುದು ಒಳ್ಳೆಯದು[ಬದಲಾಯಿಸಿ]

೧. ಸಾರ್ವಜನಿಕವಾಗಿ ೧೦ ಕಾರ್ಯಕ್ರಮವನ್ನು ಕೊಟ್ಟಿರಬೇಕು. ೨. ಈ ವಿಚಾರಗಳು ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಸುದ್ದಿಯಾಗಿ ಬಂದಿರಬೇಕು. ೩. ಕಮ್ಮಿ ಎಂದರೆ ಒಂದು ರಾಜ್ಯಮಟ್ಟದ ಪ್ರಶಸ್ತಿಯನ್ನು ಪಡೆದಿರಬೇಕು. ವಿದ್ಯಾಧರ ಚಿಪ್ಳಿ (ಚರ್ಚೆ) ೧೧:೨೮, ೨೧ ಜೂನ್

ದುರುಪಯೋಗ/Vandalism[ಬದಲಾಯಿಸಿ]

  • ಸದಸ್ಯ:Noufal17- ಸಂತ ಆಲೋಯ್ಸಿಸ್ ಕಾಲೇಜಿನ ಈ ವಿದ್ಯಾರ್ಥಿಯು 'ಪುರಂದರದಾಸರು' ಪುಟವನ್ನು ಪೂರ್ಣ ಅಳಿಸಿ ಮಿತ್ರಾ ವೆಂಕಟ್ರಾಜ್ ಅವರ ವಿಷಯ ತುಂಬಿದ್ದಾನೆ. ಮತ್ತೊಬ್ಬ ಚಿರಾಗ್.ಸಾರ್ಥಿ.ಜೆ. ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಿ.ಎಸ್.ಸಿ. ಪದವಿ ವಿದ್ಯಾರ್ಥಿ, ಅವನ ತಮ್ಮ ಸದಸ್ಯ:Madhusarthij ಹೆಸರಿನಲ್ಲಿ ಹಿಂದುಮುಂದು ಯೋಚಿಸದೆ, ಅದಕ್ಕೆ ಮುಂದುವರಿಸಲು ಟೆಂಪ್ಲೇಟ್ ಹಾಕಿದ್ದಾನೆ.ಅವನು ಎಲ್ಲಾ ಲೇಖನಗಳಿಗೂ ತನಗೆ ಗೊತ್ತಿರುವ ಯಾವುದಾದರೂ ಒಂದು ಟೆಂಪ್ಲೇಟ್ ಹಾಕುತ್ತಾನೆ.(ಮುಖ್ಯವಾಗಿ 'ವಿಕೀಕರಣವಾಗಬೇಕು' ಎಂಬುದು) ಇದುವರಿಗೆ ಒಂದೂ ಲೇಖನ ಬರೆದು ಗೊತ್ತಿದೆಯೋ ಇಲ್ಲವೋ ತಿಳಿಯದು! ಯಾರೋ ಚೆನ್ನಾಗಿ ತರಬೇತಿ ಕೊಟ್ಟಿದ್ದಾರೆ!(ಸದಸ್ಯ:ಸುಬ್ರಯ್`ಅವರ ಮಿತ್ರ ಇರಬಹುದು!)
  • ಪುರಂದರದಾಸರುಪುಟ ಸರಿಪಡಿಸಿ //Bschandrasgr (ಚರ್ಚೆ) ೧೫:೫೮, ೬ ಫೆಬ್ರುವರಿ ೨೦೧೬ (UTC)
  • ಸರಿಪಡಿಸಿBschandrasgr (ಚರ್ಚೆ) ೦೭:೦೭, ೮ ಫೆಬ್ರುವರಿ ೨೦೧೬ (UTC)
ಸರಿಪಡಿಸಲಾಗಿದೆ. ಗಮನಿಸಿ ತಿಳಿಸಿದ್ದಕ್ಕೆ ಧನ್ಯವಾದಗಳು. ~ ಹರೀಶ / ಚರ್ಚೆ / ಕಾಣಿಕೆಗಳು ೦೭:೨೨, ೮ ಫೆಬ್ರುವರಿ ೨೦೧೬ (UTC)
  • ಧನ್ಯವಾದಗಳು!
  • ಕಬ್ಬಿಣ : 27.107.64.53 ಈ ವ್ಯಕ್ತಿ ಆ ಪುಟದ ಮೂಲಧಾತುವಿನ ವಿವರದ ಟೆಂಪ್ಲೇಟ್ ಅಳಿಸಿದ್ದಾನೆ!ಸರಿಪಡಿಸಿ. /Bschandrasgr (ಚರ್ಚೆ) ೦೭:೩೬, ೮ ಫೆಬ್ರುವರಿ ೨೦೧೬ (UTC)
ಕಬ್ಬಿಣ ಲೇಖನ ಸರಿಪಡಿಸಿದ್ದೇನೆ. ಅದನ್ನು ಕೆಡಿಸಿದ್ದು ಯಾರೋ ಅನಾಮಧೇಯರು.
ಅಂದ ಹಾಗೆ ಈ ಸರಿಪಡಿಸುವ ಕೆಲಸವನ್ನು ಯಾರು ಬೇಕಾದರೂ, ನೀವು ಕೂಡ, ಮಾಡಬಹುದು--Pavanaja (ಚರ್ಚೆ) ೦೮:೦೦, ೮ ಫೆಬ್ರುವರಿ ೨೦೧೬ (UTC)

ದ್ವೇಷಕ್ಕೆ ಇದಲ್ಲ ತಾಣ[ಬದಲಾಯಿಸಿ]

  • ಪಾಕಿಸ್ತಾನ‎; ಈ ಅನಾಮಧೇಯನ ದ್ವೇಷ-> ‎27.107.38.25 (ಚರ್ಚೆ)‎ (ಟ್ಯಾಗ್‌ಗಳು: ಮೊಬೈಲ್ ಸಂಪಾದನೆ, ಮೊಬೈಲ್ ವೆಬ್ ಸಂಪಾದನೆ)//Bschandrasgr (ಚರ್ಚೆ) ೧೫:೩೧, ೧೩ ಫೆಬ್ರುವರಿ ೨೦೧೬ (UTC)
ಸರಿಪಡಿಸಿದ್ದೇನೆ. ಇಂತಹ ವಿಧ್ವಂಸಕ ಕೃತ್ಯಗಳು ಕಂಡುಬಂದಾಗ ನೀವೇ ಅದನ್ನು ಸರಿಪಡಿಸಬಹುದು.--Pavanaja (ಚರ್ಚೆ) ೦೩:೧೪, ೧೪ ಫೆಬ್ರುವರಿ ೨೦೧೬ (UTC)
  • 14.139.151.178 ಈ ಅನಾಮಧೇಯ -ಯಕ್ಷಗಾನ- ಪುಟವನ್ನು ಅಳಿಸಿದಮತೆ ತೋರುವುದು. ಪರಿಶೀಲಿಸಿ ಸರಿಪಡಿಸಿ. (ಯಕ್ಷಗಾನದ ಮೇಲೆ ದ್ವೇಷವೇ? ಹಾಗೆಯೇ ವೀಣೆ ಶೇಷಣ್ಣ ಕೆಟ್ಟಿರಬಹುದೇ? ಸಂಗೇತಗಾರರ ಪಟ್ಟಿಯಿಂದ ಅಳಿಸಿದವ -117.200.128.182 -ಮೈಸೂರಿನವ! ಯಾಕೆ ದ್ವೇಷ??
  • ಮಾಸ್ತಿ ವೆಂಕಟೇಶ ಅಯ್ಯಂಗಾರ್‎; ೧೨:೩೪ . . (-೨,೨೨೭)‎ . ‎1.39.61.114 (ಚರ್ಚೆ)‎ (ಟ್ಯಾಗ್‌ಗಳು: ಮೊಬೈಲ್ ಸಂಪಾದನೆ, ಮೊಬೈಲ್ ವೆಬ್ ಸಂಪಾದನೆ)-ಇವರು ಈ ಪುಟವನ್ನು ಸಂಪೂರ್ಣ ಕಡಿಸಿದ್ದಾರೆ. ಪುಟ ತೆರೆಯಲೂ ಬರುವುದಿಲ್ಲ. ಅವರದ್ದು ಅಪಾಯಕಾರಿ ಸಂಪಾದನೆ. ಸರಿಪಡಿಸಿ.Bschandrasgr (ಚರ್ಚೆ) ೧೩:೪೧, ೯ ಮಾರ್ಚ್ ೨೦೧೬ (UTC)
ಸರಿಪಡಿಸಿದ್ದೇನೆ--Pavanaja (ಚರ್ಚೆ) ೧೭:೨೪, ೯ ಮಾರ್ಚ್ ೨೦೧೬ (UTC)

ಮೇಲಿನ ಪುಟದಲ್ಲಿ ಉತ್ತಮ ಮಾಹಿತಿಗಳನ್ನು ಮೂರು ಐ.ಪಿ ಅಡ್ರೆಸ್ಗಳಿಂದ ಅಳಿಸಲಾಗಿದೆ! ಇಲ್ಲಿ ಲೇಖನವನ್ನು ಉತ್ತಮಪಡಿಸುವ ಬದಲಿಗೆ ಇದ್ದ ಮಾಹಿತಿಯನ್ನು ಅಳಿಸಲಾಗಿದೆ. ಫೆಬ್ರವರಿ ೧೨ರ ತನಕದ ಆವೃತ್ತಿಗಳು ಸರಿಯಿದೆ. ಹಾಗಾಗಿ ಇದನ್ನು revert ಮಾಡಬಹುದೇ ಗಮನಿಸಿ. ಐ.ಪಿ ಗಳಿಂದ ಲೇಖನದ ಮಾಹಿತಿಯನ್ನು ಅಳಿಸುವುದನ್ನು ಹೇಗಾದರೂ ತಡೆಯಬೇಕಾಗಿದೆ ಪ್ರಶಸ್ತಿ (ಚರ್ಚೆ) ೦೫:೦೩, ೧೬ ಮಾರ್ಚ್ ೨೦೧೬ (UTC)

ಕೊನೆಯ ಸರಿಯಾದ ಆವೃತ್ತಿಯನ್ನು ಪುನರ್ಸ್ಥಾಪಿಸಿದ್ದೇನೆ. ಈ ಕೆಲಸವನ್ನು ಯಾರು ಬೇಕಾದರೂ ಮಾಡಬಹುದು.
ಲೇಖನವನ್ನು ಲಾಗಿನ್ ಆದವರು ಮಾತ್ರ ಬದಲಿಸಬಹುದು ಎಂಬುದಾಗಿ ಸಂರಕ್ಷಿಸಿದ್ದೇನೆ.--Pavanaja (ಚರ್ಚೆ) ೦೫:೩೩, ೧೬ ಮಾರ್ಚ್ ೨೦೧೬ (UTC)
  • ೦೯:೨೮, ೨೩ ಆಗಸ್ಟ್ ೨೦೧೫‎ Nanaiah.M.T(ವಿದ್ಯಾರ್ಥಿ) ಇವರು ಈ ಲೇಖನದ ಚುಟಕಕ್ಕೆ ಇಂಗ್ಲಿಷ್ ವಿಭಾಗದ (Atom) ಗೋಗಲ್ ಅನುವಾದ ಹಾಕಿದ್ದಾರೆ. ಆದರೆ ಅದನ್ನು ಸ್ವಲ್ಪವೂ ತಿದ್ದಿಲ್ಲ- ಅಸಂಭದ್ಧವಾಗಿದೆ. ಮೊದಲ ಸಂಪಾದನೆ ವಾಕ್ಯವನ್ನು ಅಳಿಸಿದ್ದಾರೆ. ಏನು ಮಾಡುವುದು?

ಅಣುವಿಗೆ-Molecule ಅನುವಾದ ಸರಿಯೇ? ಅಣು, ಪರಮಾಣುಗಳ ಪುಟಕ್ಕೆ ಪ್ರಾಥಮಿಕ ಮಾಹಿತಿ ತುಂಬೋಣವೆಂದು ಯೋಚಿಸಿದ್ದೆ. ಅವಕ್ಕೆ ವರ್ಗ, ಆಧಾರವನ್ನೂ ಹಾಕಿಲ್ಲ. ಅಳಿಸಿ ಹೊಸದು ತುಂಬಲು ಮುಜಗರ. Bschandrasgr (ಚರ್ಚೆ) ೦೭:೨೫, ೧೭ ಮಾರ್ಚ್ ೨೦೧೬ (UTC)

ವಿಕಿ ಕಲಿಯುವಾಗ ಕೆಲವರು ತಪ್ಪು ಮಾಡುವುದು ಸಹಜ. ಅವರನ್ನು ಧಾರಾಳವಾಗಿ ತಿದ್ದಬಹುದು. ಅಣುವಿಗೆ-Molecule ಅನುವಾದ ಸರಿ. ಪರಮಾಣು ಎಂದರೆ atom. --Pavanaja (ಚರ್ಚೆ) ೦೯:೪೨, ೧೭ ಮಾರ್ಚ್ ೨೦೧೬ (UTC)


ಕೃಷ್ಣದೇವರಾಯ ಮತ್ತು ಶ್ರೀಕೃಷ್ಣದೇವರಾಯ ಲೇಖನಗಳು[ಬದಲಾಯಿಸಿ]

ಕೃಷ್ಣದೇವರಾಯ ಮತ್ತು ಶ್ರೀಕೃಷ್ಣದೇವರಾಯ ಎಂಬ ಎರಡು ಲೇಖನಗಳಿವೆ . ಒಂದನ್ನು ತೆಗೆದು ಹಾಕಿ . Shreekant.mishrikoti (ಚರ್ಚೆ) ೧೦:೪೭, ೧೮ ಜುಲೈ ೨೦೧೬ (UTC)

ಒರಿಯಾ ಕನ್ನಡ ಲೇಖನವನ್ನು,ಸಂಭಂದವಿಲ್ಲದ ಲೇಖನಕ್ಕೆ ಲಿಂಕ್ ಕೊಡಲಾಗಿದೆ.ಪರಿಸಿಲಿಸಿ. Sangappadyamani (ಚರ್ಚೆ) ೧೭:೪೨, ೪ ಅಕ್ಟೋಬರ್ ೨೦೧೬ (UTC)

ಸರಿಪಡಿಸಲಾಗಿದೆ Sangappadyamani (ಚರ್ಚೆ) ೧೩:೫೨, ೬ ಅಕ್ಟೋಬರ್ ೨೦೧೬ (UTC)

ಆಂಗ್ಲ ವಿಕಿಪೀಡಿಯದ ಲಿಂಕ್[ಬದಲಾಯಿಸಿ]

ಕನ್ನಡ ವಿಕಿಪೀಡಿಯ ಮುಖ್ಯ ಪುಟದ ,ಈ ತಿಂಗಳ ಪ್ರಮುಖ ದಿನಗಳು,ಸುದ್ದಿಯಲ್ಲಿ,ವಿಶೇಷ ಲೇಖನ,ನಮ್ಮ ಹೊಸ ಲೇಖನಗಳಲ್ಲಿ ಬಳಸಲಾದ ಕೆಲವು ಲೇಖನಗಳು ಕನ್ನಡ ವಿಕಿಪೀಡಿಯದಲ್ಲಿ ಇರದಿದ್ದಲ್ಲಿ,ಆಂಗ್ಲ ವಿಕಿಪೀಡಿಯದ ಲಿಂಕ್ ಕೊಡಬಹುದೇ? ಉದಾ:ಸ್ಪುಟ್ನಿಕ್ ೧ = ಸ್ಪುಟ್ನಿಕ್ ೧ (ಚರ್ಚೆ) ೦೪:೦೪, ೧೨ ಅಕ್ಟೋಬರ್ ೨೦೧೬ (UTC)

ಗಮನಕ್ಕೆ[ಬದಲಾಯಿಸಿ]

ರಾಮ್ ಮೋಹನ್ ರಾಯ್ ಪುಟವನ್ನು ಮೊಬೈಲ್‌ನಿಂದ ಅಳಿಸಲಾಗಿದೆ ಎಂದು ತೋರುತ್ತದೆ. ಹಾಗೆಯೇ ಜನಾಂಗೀಯ ಗುಂಪುಗಳು ಪುಟದಲ್ಲಿ ಇಂಗ್ಲಿಶ್ ಕನ್ನಡ ಪದಗಳ ಮಿಶ್ರಣವಾಗಿ ವಿಚಿತ್ರವಾಗಿ ಕಾಣುತ್ತದೆ. ಏನಾದರೂ ತಿದ್ದಲು ಸಾಧ್ಯವೆ? ಪ್ರದೀಪ್ ಬೆಳಗಲ್ (ಚರ್ಚೆ) ೧೪:೧೪, ೧೭ ಅಕ್ಟೋಬರ್ ೨೦೧೬ (UTC)

ವಿಧ್ವಂಸಕತೆಯ ಹಿಂದಿನ ಆವೃತ್ತಿಗೆ ತೆಗೆದುಕೊಂಡು ಹೋಗಿದ್ದೇನೆ--ಪವನಜ (ಚರ್ಚೆ) ೧೫:೩೮, ೧೭ ಅಕ್ಟೋಬರ್ ೨೦೧೬ (UTC)

ಕನ್ನಡ ವಿಕಿಪೀಡಿಯದಲ್ಲಿ ಇದ್ದ ಲಿಖನಗಳನ್ನೆ ರಚಿಸಲಾಗುತ್ತಿದೆ[ಬದಲಾಯಿಸಿ]

ಕನ್ನಡ ವಿಕಿಪೀಡಿಯದಲ್ಲಿ ಇದ್ದ ಲಿಖನಗಳನ್ನೆ ರಚಿಸಲಾಗುತ್ತಿದೆ. ಉದಾ:

  1. ಕರ್ಣಾಟಕ ಸಂಗೀತ ಹೊಸ ಲೇಖನ == ಕರ್ನಾಟಕ ಸಂಗೀತ ಹಳೇ
  2. ಆರ್ಥರ್ ಹೋಲ್ಲಿ ಕಾಂಪ್ಟನ್==ಆರ್ಥಿಕ ಕಾಂಪ್ಟನ್ ಹೋಮಿ ಹೊಸ ಲೇಖನ.

ಹೊಸ ಲೇಖನಗಳನ್ನು ರಿವೀವ್ ಮಾಡುವದು ಒಳ್ಳೆಯದು. Sangappadyamani (ಚರ್ಚೆ) ೧೨:೦೦, ೨೨ ಅಕ್ಟೋಬರ್ ೨೦೧೬ (UTC)

  • ಈ ಪಟವನ್ನು ಯಾರೋ ಮೊಬೈಲ್ ಸಂಪಾದನೆ ಮಾಡಿ ಕೆಡಿಸಿದ್ದಾರೆ; ತಿಳಿದವರು/ನಿರ್ವಾಹಕರು ಸರಿಪಡಿಸಿ. Bschandrasgr (ಚರ್ಚೆ) ೦೯:೧೪, ೧೩ ನವೆಂಬರ್ ೨೦೧೬ (UTC)
ಸರಿಪಡಿಸಿದ್ದೇನೆ ಅಂದುಕೊಂಡಿದ್ದೇನೆ. ಇಂತಹ ಸಂದರ್ಭಗಳಲ್ಲಿ ನೀವೇ ಸರಿಪಡಿಸಬಹುದು--ಪವನಜ (ಚರ್ಚೆ) ೦೨:೨೪, ೧೪ ನವೆಂಬರ್ ೨೦೧೬ (UTC)
ನೆಮ್ಮದಿ-(ನಾನು ಅಷ್ಟು ತಜ್ಞನಲ್ಲ- ಸರಿಪಡಿಸಲು ಕಷ್ಟಪಡಬೇಕಾಗಬಹುದು)Bschandrasgr (ಚರ್ಚೆ) ೧೬:೧೩, ೧೪ ನವೆಂಬರ್ ೨೦೧೬ (UTC)

ವಿಜ್ಞಾನದ ಹೊಸ ಸಂಶೋದನೆಗಳು ಕನ್ನಡ ವಿಕಿಗೆ ಅನಗತ್ಯವೇ?[ಬದಲಾಯಿಸಿ]

  • Gopala Krishna A ಅವರಿಗೆ:
  • ಸೊಳ್ಳೆಯ ಬಗೆಗೆ ಹೊಸ ಸಂಶೋದನೆಯನ್ನು ನೀವು ಅಗತ್ಯವಿಲ್ಲ ಎಂದು ಅಳಿಸಿದ್ದೀರಿ. ಹಾಗಿದ್ದರೆ ನೀವು ಇನ್ನು ನನ್ನ ಅಪ್ಡೇಟುಗಳನ್ನೆಲ್ಲಾ ಹೀಗೇ ನೀವು ಅಳಿಸಬಹುದು. ಏಕೆಂದರೆ ನಿಮ್ಮ ನಿರ್ಣಯಕ್ಕೆ ಕಾರಣಗಳೇ ಇಲ್ಲ. ಏಕಪಕ್ಷೀಯ! ಆದ್ದರಿಂದ ಇನ್ನು ಮೇಲೆ ನಾನು ಅಪ್ ಡೇಟ್ ಮಾಡುವುದನ್ನು ನಿಲ್ಲಿಸುತ್ತೇನೆ, ನೀವೇ ಅಪಡೇಟ್ ಮಾಡಿ; ಇಲ್ಲವೇ ಪ್ರಸ್ತುತವಿಷಯ, ಮತ್ತು ಈಚಿನ ವಿಜ್ಞಾನ, ಕ್ರೀಡೆ, ರಾಜಕೀಯ ವಿಷಯಗಳ ಬೆಳವಣಿಗೆಗಳ ಅಪ್‍ಡೇಟಿಂಗ್ ಕೆಲಸ ನಿಲ್ಲಿಸುತ್ತೇನೆ. ಕನ್ನಡ ವಿಕಿ ವಿಷಯದ ಕೊರತೆಯಿಂದ ಬಡವಾದರೂ ನಿಮಗೆ ಚಿಂತೆ ಇಲ್ಲ ಎಂದಾಯಿತು, ಇದಕ್ಕೆ ಏನು ಹೇಳಬೇಕೆಂದು ತಿಳಿಯದು, ಏಕೆಂದರೆ ಹೊಸ ಸಂಶೋದನೆಯ ವಿಷಯ ಕನ್ನಡಕ್ಕೆ ಅನಗತ್ಯ ಎಂದಂತಾಯಿತು. ಇದೇ ಬಗೆಯ ಕಾರಣಕ್ಕೆ ತಮಿಳುನಾಡು ಸರ್ಕಾರ ಪುಟವನ್ನು ನಾನು ಅಪ್‍ಡೇಟ್‍ ಮಾಡುವುದನ್ನು ನಿಲ್ಲಿಸಿದೆ, ಅದು ಈಗಲೂ ಹಳೆಯ ಮುಖ್ಯಮಂತ್ರಿಯ ಹೆಸರನ್ನೇ ಹೊಂದಿದೆ, ಆದರೆ ಅದನ್ನು ತಿದ್ದಿದವರು ಅಪಡೇಟ್ ಬಗ್ಗೆ ಕಿಂಚತ್ತು ಯೋಚಿಸಿಲ್ಲ ಎನ್ನವುದು ವಿಷಾದದ ಸಂಗತಿ. ನಿಮ್ಮಿಂದ ಕನ್ನಡ ವಿಕಿ ಚೆನ್ನಾಗಿ ಬೆಳೆಯಲಿ. ವಿಜ್ಞಾನದ ಹೊಸ ಸಂಶೋದನೆಗಳು ಕನ್ನಡ ವಿಕಿಗೆ ಅನಗತ್ಯ ಎನ್ನುವ ವಿಚಾರ ಅಧ್ಭುತವಾದುದು! ನೀವು ಪರೋಕ್ಷವಾಗಿ ನನ್ನನ್ನು ಹೊರ ತಳ್ಳುತ್ತಿದ್ದೀರಿ,(ಇದನ್ನು ದಬ್ಬಾಳಿಕೆ ಎನ್ನಬಹುದೇ?) ಧನ್ಯವಾದಗಳು.Bschandrasgr (ಚರ್ಚೆ) ೧೧:೧೫, ೨ ಆಗಸ್ಟ್ ೨೦೧೭ (UTC)

೧೧-೮-೨೦೧೭[ಬದಲಾಯಿಸಿ]

@Bschandrasgr ಈ ರೀತಿಯಲ್ಲಿ ಪ್ರಜಾವಾಣಿಯಿಂದ ನಕಲು ಮಾಡಿ ಬರೆಯುವುದು ಸೂಕ್ತವೇ? ವಿಶ್ವಕೋಶಕ್ಕೆ ಮಾಹಿತಿ ಹಾಕುವಾಗ ಅದು ವಿಶ್ವಕೋಶದ ಮಾದರಿಯಲ್ಲಿ ಇರಲಿ. ಕನ್ನಡ ವಿಕಿಪೀಡಿಯ ಬೇರೆ ದಿನಪತ್ರಿಕೆಗಳಿಂದ ಪಡೆದ ಮಾಹಿತಿಯನ್ನು ತುಂಬಿಸುವ ಡಂಪಿಂಗ್ ಯಾರ್ಡ್ ಆಗದಿರಲಿ ಎಂಬುದು ನನ್ನ ಆಶಯ--ಗೋಪಾಲಕೃಷ್ಣ (ಚರ್ಚೆ) ೦೯:೧೯, ೧೧ ಆಗಸ್ಟ್ ೨೦೧೭ (UTC)

  • ಕೇವಲ ಮಾಹಿತಿಗಳಿದ್ದಲ್ಲಿ ಅದನ್ನೇ ಹಾಕುವುದರಲ್ಲಿ ತಪ್ಪೇನು?? ಈ ವಿಷಯವನ್ನು ಹಾಕಬೇಕೆಂದರೆ ಅದರ ಮಾಹಿತಿಯ ವಾಕ್ಯಗಳನ್ನು ಬದಲಿಸಲು ಸಾದ್ಯವೇ?
  • ಇನ್ನು ಮುಂದೆ ಯಾವುದೇ ವಿಜ್ಞಾನ , ತಾಂತ್ರಿಕ ವಿಷಯದ ಮಾಹಿತಿಗಳನ್ನು ಹಾಕುವುದನ್ನು ಕೈಬಿಡಬೇಕಷ್ಟೆ!! ಏಕೆಂದರೆ ಆ ವಾಕ್ಯಗಳನ್ನು ಬದಲಿಸಿ ಬರೆಯಲು ಅಥವಾ ಸಂಕ್ಷೇಪಿಸಲು ಬರುವುದಿಲ್ಲ. ಆ ಮಾಹಿತಿಗಳನ್ನು ಪತ್ರಿಕೆಯವರು ಸರ್ಕಾರಿ ಅಥವಾ ಇಲಾಖೆ ಯಾ ಕಂಪನಿಯಿಂದ ಪಡೆದಿರುವುದರಿಂದ ಅದಕ್ಕೆ ಕಾಪಿರೈಟ್ ಇರುವುದಿಲ್ಲ.
  • ನಿಮ್ಮದು ಪ್ರಬಲ ವಿರೋಧವಿದ್ದಲ್ಲಿ ಮುಖ್ಯವಾದ ಮಾಹಿತಿಗಳನ್ನು ತುಂಬುವುದನ್ನು ನಿಲ್ಲಿಸುತ್ತೇನೆ.
  • ಹಾಗೆಯೇ, ಈ ದಿನ 13ನೇ ಉಪರಾಷ್ಟ್ರಪತಿಯಾಗಿ ವೆಂಕಯ್ಯ ನಾಯ್ಡು ಪ್ರಮಾಣವಚನ ಸ್ವೀಕರಿಸಿದ ವಿಷಯ ಮತ್ತು ಅವರ ವ್ಯಕ್ತಿ ಚಿತ್ರಣವನ್ನು ನಾನು ಸ್ವಂತ ಯೋಚಿಸಿ ಬರೆಲು ಸಾದ್ಯವಿಲ್ಲ. ಮೇಲಾಗಿ ಆಧಾರವಿಲ್ಲದೆ ಬರೆಯುವಂತೆಯೂ ಇಲ್ಲ.
  • ಈಗ ಐಎನ್‌ಎಸ್ ಕಲ್ವರಿ ಲೇಖನಕ್ಕೆ ಮುಂದಿನ ವಿಶೇಷ ವಿವರಗಳು ಪತ್ರಿಕೆಯಲ್ಲಿ ಬಂದುದನ್ನೇ ಹಾಕಬೇಕಾಗುವುದು; ಏಕೆಂದರೆ ಅದು ತುಂಬಾ ಸಂಕ್ಷಿಪ್ತವಾಗಿದೆ. ಎರಡನಯದಾಗಿ ನೀವು ಹೆಸರು ಬದಲಾಯಿಸಿದುದು ಸರಯಲ್ಲ. ಹುಡುಕುವವರು ಜಲಾಂತರ್ಗಾಮಿ ಎಂದೇ ಹುದುಕುವರು. ಅದೂ ನಾನು ಸಂಪಾದನೆ ಮಾಡುತ್ತಿರುವಾಗ ಬದಲಾಯಿಸಿ ಘರ್ಷಣೆಗೆ ಕಾರಣವಾಯಿತು. ಮುಂದಿನ ಮುಖ್ಯ ವಿವರ ತುಂಬಬೇಕಿತ್ತು ನಿಲ್ಲಿಸಿದ್ದೇನೆ. ಮಾಹಿತಿ ವಿವರಗಳು ಅಪೂರ್ಣವಾಯಿತು, ಇದು ಕನ್ನಡ ವಿಕಿಯ ಹಣೇಬರಹ.
  • ಕಾಪಿರೈಟ್ ಇಲ್ಲದಿದ್ದರೆ ಅದನ್ನು ನಮಗೆ ಬೇಕಾದ ರೀತಿಯಲ್ಲಿ (ವಿಕಿಗೆ) ವಾಕ್ಯವನ್ನು ಬದಲಾಯಿಸಬಹುದು. ಪತ್ರಿಕೆಯು ಒಂದು ದಿನಕ್ಕಷ್ಟೇ ಸೀಮಿತ. ಉದಾಹರಣೆಗೆ ಪತ್ರಿಕೆಯಲ್ಲಿ ಐಎನ್ಎಸ್ ಕಲ್ಪರಿ ಇಂದು ಲೋಕಾರ್ಪಣೆಯಾಯಿತು ಎಂದಿದ್ದರೆ ನೀವು ಅದನ್ನೇ ಕಾಪಿ ಹೊಡೆದರೆ ನಾನು ಒಂದು ವರ್ಷದ ನಂತರ ಬಂದು ವಿಕಿಯಲ್ಲಿ ಐಎನ್ಎಸ್ ಕಲ್ಪರಿ ಎಂದು ಹುಡುಕುತ್ತೇನೆ. ಆಗ ಇಂದು ಲೋಕಾರ್ಪಣೆ ಆಯಿತು ಎಂದು ಇದ್ದರೆ ಅದು ನಾನು ಓದುವ ದಿನ ಲೋಕಾರ್ಪಣೆ ಆಯಿತು ಎಂದು ಅಂದುಕೊಳ್ಳುತ್ತೇನೆ.
  • ಶೀರ್ಷಿಕೆ ಬಹಲಾಯಿಸಿದ್ದು ಏಕೆಂದರೆ ಹುಡುಕುವವರಿಗೆ ಕಲ್ಪರಿ ಎಂದರೆ ಅದು ಜಲಾಂತರ್ಗಾಮಿ ಎಂದೇ ಹೇಗೆ ತಿಳಿದಿರುತ್ತದೆ? ಎಲ್ಲಿಯೋ ಜಲಾಂತರ್ಗಾಮಿಯ ಹೆಸರು ಐಎನ್ಎಸ್ ಕಲ್ಪರಿ(ಸೇನೆ ಇಟ್ಟ ಹೆಸರು) ಎಂದು ತಿಳಿದು ಇಲ್ಲಿ ಹುಡುಕುತ್ತಾರೆ. ಆಗ ಅವರಿಗೆ ಮಾಹಿತಿ ಸಿಗಲೂಬಹುದು ಅಥವಾ ಸಿಗದಿರಲೂಬಹುದು. ಅದಕ್ಕೋಸ್ಕರ ಬದಲಾಯಿಸುತ್ತಿದ್ದೇನೆ. ನಿಮಗೆ ಅದು ಜಲಾಂತರ್ಗಾಮಿ ಎಂದು ತಿಳಿದಿದ್ದರೆ ಇತರ ಎಲ್ಲರಿಗೂ ತಿಳಿದಿರಬೇಕೆಂದಿಲ್ಲ. --ಗೋಪಾಲಕೃಷ್ಣ (ಚರ್ಚೆ) ೧೧:೫೩, ೧೧ ಆಗಸ್ಟ್ ೨೦೧೭ (UTC)

ಕ್ರೀಡೆ[ಬದಲಾಯಿಸಿ]

ಈಗ ಲಂಡನ್ನಿನಲ್ಲಿ ವಿಶ್ವ ಅಥ್ಲೆಟಿಕ್ ಛಾಂಪಿಯನ್‌ಶಿಪ್ ಪಂದ್ಯಗಳು ನಡೆಯುತ್ತಿವೆ. ಅದು ಇಡೀ ಜಗತ್ತಿನಲ್ಲಿ ಒಂದು ಆಸಕ್ತಿಯ ವಿಷಯ. ಆದರೆ ಕನ್ನಡದಲ್ಲಿ ಅತ್ಲೆಟಿಕ್ಸ್ ಗೆಸಂಬಂದಪಟ್ಟ ಪುಟವೇ ಇಲ್ಲ. ಭಾರತ ವಿಶ್ವ ಅತ್ಲೆಟಿಕ್ಸ್ ನಲ್ಲಿ ಸ್ವಲ್ಪ ಹಿಂದೆ ಇದ್ದರೂ ರಾಷ್ಟ್ರಮಟ್ಟದಲ್ಲಿ ಉತ್ತಮ ಸಾಧಕರು ಇದ್ದಾರೆ, ಭಾರತದಿಂದ ಈ ವಿಶ್ವಅಥ್ಲೆಟಿಕ್ ಛಾಂಪಿಯನ್ ಶಿಪ್ ಗೆ ೨೫ ಪಟುಗಳು ಹೊಗಿದ್ದಾರೆ. ಅವರ ವಿವರ ಮತ್ತು ಲಂಡನ್ನಿನ ವಿಶ್ವ ಅಥ್ಲೆಟಿಕ್ ಛಾಂಪಿಯನ್ ಶಿಪ್ ೨೦೧೭ ರವಿವರ ಹಾಕಬೇಕೆಂದು ಬಯಸಿದ್ದೆ; ಆದರೆ ಬಹಳಷ್ಟು ವಿಷಯ ಪತ್ರಿಕೆಯಿಂದಲೇ ತೆಗೆದುಕೊಳ್ಳಬೇಕು - ಅದಕ್ಕೆ ನಿಮ್ಮಲ್ಲರ (ನಿರ್ವಾಹಕರ) ವಿರೋದವಿರುವುದರಿಂದ ಅತ್ಲೆಟಿಕ್ಚ್ಸ್ ವಿಷಯ ಪುಟ ತರೆಯುವುದನ್ನು ಕೈಬಿಡಬೇಕಾಗಿದೆ.: ವಂದನೆಗಳುBschandrasgr (ಚರ್ಚೆ) ೧೦:೩೮, ೧೧ ಆಗಸ್ಟ್ ೨೦೧೭ (UTC)

ಪತ್ರಿಕೆಯಿಂದ ತೆಗೆದುಕೊಳ್ಳಲು ವಿರೋಧ ಇಲ್ಲ @Bschandrasgrರೇ. ನಮ್ಮ ವಿರೋಧ ಇರುವುದು ಪತ್ರಿಕೆಯಿಂದ ಕಾಪಿ ಮಾಡಿ ಇಲ್ಲಿ ಹಾಕಬೇಡಿ ಎಂದು. ಪತ್ರಿಕೆಯಲ್ಲಿ ಬಂದ ಮಾಹಿತಿಯನ್ನೇ ಸೇರಿಸಿ. ಆದರೆ ಸೇರಿಸುವಾಗ ಒಂದು ವಿಶ್ವಕೋಶದ ಮಾಹಿತಿಯಂತೆ ಸೇರಿಸಿ ಎಂದು ಹೇಳುತ್ತಿರುವುದು. ಕಾಪಿ ಮಾಡಿ ಇಲ್ಲಿ ತಮದು ಹಾಕಬೇಡಿ. ಅಲ್ಲಿ ಓದಿ, ನಂತರ ಇಲ್ಲಿ ವಿಕಿಗೆ ಬೇಕಾದ ರೀತಿಯಲ್ಲಿ ವಾಕ್ಯಗಳನ್ನು ಬದಲಿಸಿ ಅಥವಾ ಅದನ್ನು ವಿಕಿಪೀಡಿಯಕ್ಕೆ ಬೇಕಾದ ಹಾಗೆ ಮಾರ್ಪಾಡುಗೊಳಿಸಿ ನಂತರ ಈ ಪತ್ರಿಕೆಯಲ್ಲಿ ಬಂದಿದೆ ಎಂದು ಆಧಾರ ಕೊಡಿ. ಉದಾಹರಣೆಗೆ ನಾವು ಒಂದು ಸಂಶೋಧನಾ ಪ್ರಬಂಧವನ್ನು ಕಾಪಿ ಮಾಡಿ ಇಲ್ಲಿ ಹಾಕುವುದಿಲ್ಲ. ಬದಲಾಗಿ ಅವರ ಸಂಶೋಧನೆಯನ್ನು ವಿಕಿಗೆ ಬೇಕಾದ ರೀತಿಯಲ್ಲಿ ಹಾಕುತ್ತೇವೆ. ನಂತರ ಅದಕ್ಕೆ ಆಧಾರವಾಗಿ ಸಂಶೋಧನಾ ಪ್ರಬಂಧವನ್ನು ತೋರಿಸುತ್ತೇವೆ. ಇದೇ ರೀತಿಯಲ್ಲಿ ಪತ್ರಿಕೆಗಳ ಮಾಹಿತಿಯನ್ನೂ ತೆಗೆದುಕೊಳ್ಳಬಹುದು. ಕೇವಲ ಪತ್ರಿಕೆಗಳು ಮಾತ್ರವೇ ಆ ಮಾಹಿತಿ ನೀಡುವುದಲ್ಲದೇ ಕೆಲವು ಆನ್ಲೈನ್ ಕ್ರೀಡಾ ಚಾನಲ್‌ಗಳಿರುತ್ತವೆ. ಅದರಿಂದಲೂ ಮಾಹಿತಿ ಕಲೆಹಾಕಬಹುದು. ಉದಾಹರಣೆಗೆ ವಿಶ್ವ ಅಥ್ಲೆಟಿಕ್ ಛಾಂಪಿಯನ್‌ಶಿಪ್‌ಗೆ ಅದರದ್ದೇ ಆದ ಸ್ವಂತ ವೆಬ್ಸೈಟ್ ಇದೆ. ಅಲ್ಲಿಂದಲೂ ಮಾಹಿತಿ ತೆಗೆದುಕೊಳ್ಳಬಹುದು.--ಗೋಪಾಲಕೃಷ್ಣ (ಚರ್ಚೆ) ೧೩:೧೧, ೧೧ ಆಗಸ್ಟ್ ೨೦೧೭ (UTC)

ಪೂರ್ವಾಗ್ರಹ ಧಾಳಿಯೇ?[ಬದಲಾಯಿಸಿ]

  • ನಾನು ಪುಟ ಐಎನ್‌ಎಸ್ ಕಲ್ವರಿ ಯನ್ನು ತುಂಬುವುದರ ಮಧ್ಯದಲ್ಲಿಯೇ ಅದನ್ನು ತಡೆದು ದೋಷ ಎಣಿಸಿದಿರಿ. ನಾನು ಪುಟದಲ್ಲಿ ನಾನು ಯಾವುದೂ ಪತ್ರಿಕೆಯಿಂದ ನಕಲು ಮಾಡಿರಲಿಲ್ಲ. ಆದರೂ ನೀವು, ನಾನು ನಕಲು ಮಾಡಿದ್ದೇನೆ ಎಂದು ಆಪಾದನೆ ಮಾಡಿದ್ದಲ್ಲದೆ ಅದರ ಹಸರು ಬದಲಿಸಿ ಆಕ್ರಮಣ ಮಾಡಿದಿರಿ. ಆದರೂ ನಾನು, ಅದಕ್ಕೆ ಪತ್ರಿಕೆಯಿಂದ ಮಾಹಿತಗಳನ್ನಷ್ಟೇ ತೆಗೆದುಕೊಂಡರೆ ತಪ್ಪೇನು ಎಂದು ಕೇಳಿದೆ. ಈಗಲೂ ನಾನು ಮಾಹಿತಿಗಳನ್ನು ಬದಲಿಸದೆ ತೆಗೆದುಕೊಂಡರೆ ತಪ್ಪಲ್ಲವೆಂದೇ ಭಾವಿಸುತ್ತೇನೆ. ಮತ್ತು ಮಾಹಿತಿಗಳನ್ನು ಪತ್ರಿಕೆಯಿಂದಲೇ ಹಾಕಬೇಕೆಂದು ಯೋಚಿಸಿದ್ದು ನಿಜ. ನೀವು ಆ ರೀತಿ ಪತ್ರಿಕೆಯಿಂದ ಮಾಹಿತಿಗಳನ್ನು ಬದಲಿಸಿ ಲೇಖನ ಬರೆದು ತೋರಿಸಿ ಎಂದರೆ- ಅದು ನಿಮ್ಮಿಂದ ಸಾದ್ಯವಿಲ್ಲ. ಆದರೆ ಈ ನಿಮ್ಮ ಧೋರಣೆ ನನಗೆ ವಿಕಿಯ ಬಗ್ಗೆ ಮತ್ತು ಅದರ ಕಾರ್ಯ ನಿರ್ವಹಣೆಯ ಬಗೆಗೆ ಅತೀವ ಬೇಸರ ಬರುವಂತಾಗಿದೆ. ನನ್ನ ಮೇಲೆ ಆಕ್ರಮಣ ಮಾಡಬೇಕೆಂದು ಮೊದಲೇ ನಿರ್ಧರಿಸಿದಂತೆ ಕಾಣುತ್ತದೆ. ಈ ಪುಟದ ಅವಕಾಶವನ್ನು ಉಪಯೋಗಿಸಿಕೊಂಡಿರಿ - ಆದರೆ ನಾನು ನಕಲು ಮಾಡುವ ಮೋದಲೇ ಆಕ್ರಮಣ ಮಾಡಿದಿರಿ; ಉಪದೇಶ ಸುಲಭ ಅದೇ ನೀವು ಕ್ರೀಡೆ, ಚುನಾವಣೆ, ಜೀವನ ವಿವರ ಈ ಪುಟಗಳನ್ನು ಪತ್ರಿಕೆಯಿಂದ ಒಂದು ವಾಕ್ಯವನ್ನೂ ನಕಲು ಮಾಡದೆ ಬರೆದು ತೋರಿಸಿದಲ್ಲಿ, ನಿಮ್ಮದು ಪ್ರಾಮಾಣಿಕ ಕಳಕಳಿ ಎಂದು ಒಪ್ಪಬಹುದು. ಇಲ್ಲದೆ ಇದ್ದರೆ ಪುಸ್ತಕದ ಬದನೇಕಾಯಿಯಲ್ಲಿ ಸಾರು ಮಾಡಲು ಬೇರೆಯವರಿಗೆ ಉಪದೇಶ ಮಾಡಿದಂತೆ ಆಗುವುದು. ಒಂದು ಉದಾ:ಪುರುಷೋತ್ತಮ ಬಿಳಿಮಲೆ‎ ಪುಟದಲ್ಲಿ ಒಂದಾದರೂ ಉಲ್ಲೇಖ ಪುಟದ ವಿವರ ನೀಡುವುದೇ? ಈ ಬಗೆಯ ನೆಪಮಾತ್ರಕ್ಕೆ ಉಲ್ಲೇಖದವು ನೂರಾರು ಪಟಗಳಿವೆ. ಅದರಲ್ಲಿ ನಿಮ್ಮ ಪುಟ- ಕರ್ಣಕುಹರ ವೂ ಸರಿಯಾದ ಉಲ್ಲೇಖವಿಲ್ಲದ ಒಂದು. ಹೀಗೆ ನೀವು ಬರೆದ ಲೇಖನಕ್ಕೇ ಸರಿಯಾದ ಉಲ್ಲೇಖ ವರ್ಗ, ಕೊಂಡಿಗಳಿಲ್ಲ; ದೊಡ್ಡ ಉಪದೇಶ ಮಾಡುವಿರಿ, ಸಂಕೋಚವೂ ಇಲ್ಲ.; ನೀವು ತಜ್ಞರಲ್ಲವೇ! ಕನ್ನಡದಲ್ಲಿ ಇಲ್ಲದ 'ಅತ್ಲೆಟಿಕ್ಸ್' ಬಗ್ಗೆ ಲೇಖನವನ್ನು ದಯವಿಟ್ಟು ನೀವೇ ಬರೆದು ತೋರಿಸಿ. ಅದಿಲ್ಲದಿದ್ದರೆ ನೀವು ಬರೀ ತಕರಾರಿನ ಶೂರರೆಂದು ಭಾವಿಸಬೇಕಾಗುವುದು.ದಯವಿಟ್ಟು ವಿಕಿಯನ್ನು ನಿಮ್ಮ ಸ್ವಂತ ಆಸ್ತಿಯಂತೆ ಪರಿಗಣಿಸಬಾರದಾಗಿ ವಿನಂತಿ. ಆಕ್ರಮಣಕ್ಕೆ ಧನ್ಯವಾದಗಳುBschandrasgr (ಚರ್ಚೆ) ೧೭:೦೫, ೧೨ ಆಗಸ್ಟ್ ೨೦೧೭ (UTC)
  • -ಗೋಪಾಲಕೃಷ್ಣ -:
  • ಇದು ನಿಮಗೆ ನೇರವಾಗಿ ಸಂಬಂಧಪಟ್ಟಿರುವುದರಿಂದ ಅಲ್ಲಿಯ ಚರ್ಚೆಪುಟಕ್ಕೆ ಸ್ಥಳಾಂತರಿಸಿದ್ದೇನೆ.Bschandrasgr (ಚರ್ಚೆ) ೧೭:೩೦, ೧೪ ಆಗಸ್ಟ್ ೨೦೧೭ (UTC)

ವಿಕಿಪೀಡಿಯ ಬಳಕೆದಾರರ ಕುರಿತು[ಬದಲಾಯಿಸಿ]

ವಿಕಿಪೀಡಿಯ:ಬಳಕೆದಾರರು ಈ ಹೆಸರಿನ ಶೀರ್ಷಿಕೆಯಲ್ಲಿ ಒಂದು ಲೇಖನ ತಯಾರಿಯಾಗಿದೆ. ಅದು ವಿಕಿಪೀಡಿಯ ಬಳಕೆದಾರರ ಪುಟದಲ್ಲಿ ಕೈಸ್ಟ್ ಕಾಲೇಜಿನ ವಿದ್ಯಾರ್ಥಿ ಹೊಂದಾಣಿಕೆಯಾಗದ ಮಾಹಿತಿಯನ್ನು ಹಾಕಿದ್ದಾರೆ. ಅದನ್ನು ವಿಕಿಪೀಡಿಯ ಸಮುದಾಯ ಗಮನಿಸಿ. ಈ ಪುಟದ ಅಗತ್ಯವಿದೆಯೆ??--Lokesha kunchadka (ಚರ್ಚೆ) ೧೨:೧೬, ೧ ಡಿಸೆಂಬರ್ ೨೦೧೭ (UTC)

@ ಲೋಕೇಶ ಕುಂಚಡ್ಕ ; ವಿಕಿಪೀಡಿಯ:ಬಳಕೆದಾರರು ಪುಟವನ್ನು ಆಂಗ್ಲ ಪುಟಕ್ಕೆ ಲಘು ಮರುನಿರ್ದೇಶಿಸಿದ್ದೇನೆ. ವಿಧ್ವಂಸಕತೆ ವರದಿ ಮಾಡಿದಕ್ಕೆ ಧನ್ಯವಾದಗಳು. ★ Anoop / ಅನೂಪ್ © ೧೩:೪೭, ೧ ಡಿಸೆಂಬರ್ ೨೦೧೭ (UTC)

ಕೆಮಿಕಲ್ ಇಂಜಿನಿಯರಿಂಗ್ ಬದಲಾಗಿ ರಾಸಾಯನಿಕ ಇಂಜಿನಿಯರಿಂಗ್[ಬದಲಾಯಿಸಿ]

ಇಂಗ್ಲಿಷ್ ವಿಕಿಪೀಡಿಯಾದ chemical engineering ಪುಟವು ಕನ್ನಡ ವಿಕಿಪೀಡಿಯದ "ಕೆಮಿಕಲ್ ಇಂಜಿನಿಯರಿಂಗ್ " ಪುಟಕ್ಕೆ ಲಿಂಕ್ ಆಗಿದ್ದು "ರಾಸಾಯನಿಕ ಎಂಜಿನಿಯರಿಂಗ್ " ಪುಟವು ಹೆಚ್ಚಿನ ಮಾಹಿತಿ ಹೊಂದಿರುವದರಿಂದ ಕೆಮಿಕಲ್ ಇಂಜಿನಿಯರಿಂಗ್ ಪುಟವನ್ನು ಅಳಿಸಿಹಾಕಿ ಇಂಗ್ಲಿಷ್ ವಿಕಿಪೀಡಿಯಾದ chemical engineering ಪುಟವನ್ನು ಕನ್ನಡ ವಿಕಿಪೀಡಿಯದ "ರಾಸಾಯನಿಕ ಇಂಜಿನಿಯರಿಂಗ್ " ಪುಟಕ್ಕೆ ಲಿಂಕ್ ಮಾಡಿರಿ. Shreekant.mishrikoti (ಚರ್ಚೆ) ೦೭:೩೫, ೨೮ ಜುಲೈ ೨೦೨೧ (UTC)