ಕರ್ನಾಟಕ ರತ್ನ
Jump to navigation
Jump to search
ಕರ್ನಾಟಕ ರತ್ನ | ||
ಪ್ರಶಸ್ತಿಯ ವಿವರ | ||
---|---|---|
ಮಾದರಿ | ನಾಗರಿಕ | |
ವರ್ಗ | ಸಾರ್ವಜನಿಕ | |
ಪ್ರಾರಂಭವಾದದ್ದು | ೧೯೯೧ | |
ಮೊದಲ ಪ್ರಶಸ್ತಿ | ೧೯೯೨ | |
ಕಡೆಯ ಪ್ರಶಸ್ತಿ | ೨೦೦೯ | |
ಒಟ್ಟು ಪ್ರಶಸ್ತಿಗಳು | ೮ | |
ಪ್ರಶಸ್ತಿ ನೀಡುವವರು | ಕರ್ನಾಟಕ ಸರ್ಕಾರ | |
ವಿವರ | ಕರ್ನಾಟಕದ ಅತ್ಯುನ್ನತ ನಾಗರಿಕ ಪ್ರಶಸ್ತಿ | |
ಮೊದಲ ಪ್ರಶಸ್ತಿ ಪುರಸ್ಕೃತರು | ಕುವೆಂಪು | |
ಕೊನೆಯ ಪ್ರಶಸ್ತಿ ಪುರಸ್ಕೃತರು | ಡಾ. ವೀರೇಂದ್ರ ಹೆಗ್ಗಡೆ | |
ಪ್ರಶಸ್ತಿಯ ಶ್ರೇಣಿ | ||
none ← ಕರ್ನಾಟಕ ರತ್ನ → ರಾಜ್ಯೋತ್ಸವ ಪ್ರಶಸ್ತಿ |
ಕರ್ನಾಟಕ ರತ್ನ ಕರ್ನಾಟಕ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ. ಈ ಪ್ರಶಸ್ತಿಯನ್ನು ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆಯನ್ನು ನೀಡಿದ ವ್ಯಕ್ತಿಗಳಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ೧೯೯೨ರಲ್ಲಿ ಪ್ರಾರಂಭಿಸಲಾಯಿತು.[೧] . ಒಟ್ಟಾರೆ ಇದುವರೆಗೆ ಎಂಟು ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಪ್ರಶಸ್ತಿ[ಬದಲಾಯಿಸಿ]
ಈ ಪ್ರಶಸ್ತಿಯು ೫೦ ಗ್ರಾಂ ತೂಕದ ಚಿನ್ನದ ಪದಕ, ಸನ್ಮಾನ ಪತ್ರ, ನೆನಪಿನ ಕಾಣಿಕೆ ಮತ್ತು ಒಂದು ಶಾಲನ್ನು ಒಳಗೊಂಡಿರುತ್ತದೆ.
ಪ್ರಶಸ್ತಿ ಪುರಸ್ಕೃತರು[ಬದಲಾಯಿಸಿ]
ಕ್ರ.ಸಂ | ಹೆಸರು | ಭಾವಚಿತ್ರ | ಜನನ / ಮರಣ | ಗೌರವಿಸಿದ್ದು | ಕ್ಷೇತ್ರ | ಉಲ್ಲೇಖ |
---|---|---|---|---|---|---|
೧. | ಕುವೆಂಪು | ![]() |
೧೯೦೪–೧೯೯೪ | ೧೯೯೨ | ಸಾಹಿತ್ಯ | |
೨. | ರಾಜಕುಮಾರ್ | ![]() |
೧೯೨೯–೨೦೦೬ | ೧೯೯೨ | ಚಲನಚಿತ್ರ | |
೩. | ಎಸ್. ನಿಜಲಿಂಗಪ್ಪ | ![]() |
೧೯೦೨–೨೦೦೦ | ೧೯೯೯ | ರಾಜಕೀಯ | [೨] |
೪. | ಸಿ. ಎನ್. ಆರ್. ರಾವ್ | ![]() |
ಜ.೧೯೩೪ | ೨೦೦೦ | ವಿಜ್ಞಾನ | [೩] |
೫. | ಭೀಮಸೇನ ಜೋಷಿ | ![]() |
೧೯೨೨–೨೦೧೧ | ೨೦೦೫ | ಸಂಗೀತ | [೪] |
೬. | ಶ್ರೀ ಶಿವಕುಮಾರ ಸ್ವಾಮಿಗಳು | ![]() |
೧೯೦೭–೨೦೧೯ | ೨೦೦೭ | ಸಾಮಾಜಿಕ ಸೇವೆ | [೫] |
೭. | ದೇ. ಜವರೇಗೌಡ | – | ೧೯೧೮–೨೦೧೬ | ೨೦೦೮ | ಸಾಹಿತ್ಯ | [೧] |
೮. | ಡಿ. ವೀರೇಂದ್ರ ಹೆಗ್ಗಡೆ | ಜ.೧೯೪೮ | ೨೦೦೯ | ಸಾಮಾಜಿಕ ಸೇವೆ | [೧] |
ಉಲ್ಲೇಖಗಳು[ಬದಲಾಯಿಸಿ]
- ↑ ೧.೦ ೧.೧ ೧.೨ ಕರ್ನಾಟಕ ಸರ್ಕಾರ ದಿಂದ ಜವರೆ ಗೌಡ ಅವರಿಗೆ ಕರ್ನಾಟಕ ರತ್ನ, ವೀರೇಂದ್ರ ಹೆಗ್ಗಡೆ
- ↑ A home of mementoes
- ↑ ಸಿ.ಎನ್.ಆರ್ ರಾವ್ ರವರಿಗೆ ಕರ್ನಾಟಕ ರತ್ನ
- ↑ Karnataka declares day’s mourning to condole Joshi's death
- ↑ Siddaganga seer receives Karnataka ratna