ಕರ್ನಾಟಕ ಸರ್ಕಾರ
![]() | |
ಹಳದಿ +ಕೆಂಪು ಪಟ್ಟಿ ರಾಜ್ಯ ಬಾವುಟ | |
ವಿಧಾನ ಮಂಡಲ | ವಿಧಾನಸೌಧ ಬೆಂಗಳೂರು |
---|---|
ಕಾರ್ಯಾಂಗ | |
ರಾಜ್ಯಪಾಲರು | ವಜುಭಾಯಿ ರೂಡಭಾಯಿ ವಾಲ |
ಮುಖ್ಯಮಂತ್ರಿ | ಕುಮಾರಸ್ವಾಮಿ |
ಉಪಮುಖ್ಯಮಂತ್ರಿ | ಡಾ. ಜಿ ಪರಮೇಶ್ವರ್ |
ಶಾಸಕಾಂಗ | |
ಕರ್ನಾಟಕ ವಿಧಾನ ಸಭೆ | |
ಸಭಾಪತಿ_(ಸ್ಪೀಕರ್) | ಕೆ ಆರ್ ರಮೇಶ್ ಕುಮಾರ್ |
ವಿಧಾನ ಸಭೆ ಸದಸ್ಯರು | ೨೨೫ |
ವಿಧಾನ ಪರಿಷದ್ | ಕರ್ನಾಟಕ ವಿಧಾನ ಪರಿಷತ್ |
ಅಧ್ಯಕ್ಷ | ಡಿ.ಎಚ್.ಶಂಕರಮೂರ್ತಿ |
ವಿಧಾನ ಪರಿಷದ್ ಸದಸ್ಯರು | ೭೫ |
ನ್ಯಾಯಾಂಗ | |
ಉಚ್ಚನ್ಯಾಯಲಯ | ಕರ್ನಾಟಕ ಉಚ್ಚನ್ಯಾಯಲಯ |
ಮುಖ್ಯ_ನ್ಯಾಯಾಧೀಶರು | ದಿನೇಶ್ ಮಹೇಶ್ವರಿ |
ಪರಿವಿಡಿ
ರಾಜ್ಯಾಡಳಿತ[ಬದಲಾಯಿಸಿ]
ಕರ್ನಾಟಕ ಸರ್ಕಾರವು ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ, ರಾಜ್ಯಪಾಲರು ಸಂವಿಧಾನಾತ್ಮಕ ನಾಯಕರಾಗಿರುವ ಒಂದು ಸಂಸ್ಥೆ. ಐದು ವರ್ಷದ ಅವಧಿಗೆ ನೇಮಿತರಾದ ರಾಜ್ಯಪಾಲರು ಮುಖ್ಯಮಂತ್ರಿ ಮತ್ತು ಅವರ ಮಂತ್ರಿಮಂಡಲವನ್ನು ನೇಮಿಸುತ್ತಾರೆ. ರಾಜ್ಯಪಾಲರು ರಾಜ್ಯದ ಸಾಂಪ್ರದಾಯಿಕ ನಾಯಕರಾಗಿರುತ್ತಾರಾದರೂ, ಸರ್ಕಾರದ ದೈನಂದಿನ ನಿರ್ವಹಣೆಯು ಗಮನಾರ್ಹವಾದ ಶಾಸನಾಧಿಕಾರಗಳನ್ನು ವಹಿಸಲಾದ ಮುಖ್ಯಮಂತ್ರಿ ಮತ್ತು ಅವರ ಮಂತ್ರಿಮಂಡಲದ ಉಸ್ತುವಾರಿಯಲ್ಲಿರುತ್ತದೆ.
ಇತಿಹಾಸ[ಬದಲಾಯಿಸಿ]
- ಕರ್ನಾಟಕದ ಏಕೀಕರಣ
- ಭಾರತವು ಸ್ವತಂತ್ರವಾದ ಮತ್ತು ದೇಶ ವಿಭಜನೆಯಾದ ಬಳಿಕ ಭಾಷಾವಾರು ಮತ್ತು ಇತರ ಮಾನದಂಡಗಳನ್ನು ಆಧರಿಸಿ ರಾಜ್ಯಗಳನ್ನು ರಚಿಸಲು ಪುನರ್ವಿಂಗಡಣೆಯ ಗಡಿಗಳನ್ನು ಗುರುತಿಸಲಾಯಿತು ಸ್ವಾತಂತ್ರ್ಯದ ನಂತರ, ಒಡೆಯರ್ ಅವರು ಜನರ ಚಳುವಳಿಯನ್ನು ಗಮನಿಸಿ ಅವರ ಅಪೇಕ್ಷೆ ಮನ್ನಿಸಿ ಭಾರತದ ಭಾಗವಾಗಲು ಸಮ್ಮತಿಸಿದರು. 1950 ರಲ್ಲಿ ಮೈಸೂರು ಭಾರತದ ರಾಜ್ಯವಾಯಿತು, ಮಹಾರಾಜರು 1975 ರ ವರೆಗೆ ಅದರ ರಾಜ ಪ್ರಮುಖ, ಅಥವಾ ರಾಜ್ಯಪಾಲರಾದರು. ಏಕೀಕರಣ ಚಳುವಳಿ 19ನೆಯ ಶತಮಾನದ ಎರಡನೇ ಭಾಗದಲ್ಲಿ ಆರಂಭವಾಗಿ, 1956 ರಲ್ಲಿ ರಾಜ್ಯ ಪುನಸ್ಸಂಘಟನೆ ಕಾಯಿದೆಯೊಂದಿಗೆ ಚಳುವಳಿ ಮುಕ್ತಾಯವಾಯಿತು. ಇದರಿಂದ ಕೂರ್ಗ್ / ಕೊಡಗು, ಮದ್ರಾಸ್`ಪ್ರಾಂತ್ಯ , ಹೈದರಾಬಾದ್, ಹಾಗೂ ಮುಂಬಯಿ ರಾಜ್ಯದ ಕನ್ನಡ ಭಾಷೆಯ ಜನರು ಹೆಚ್ಚು ಇರುವ ಭಾಗಗಳನ್ನು ಮೈಸೂರು ರಾಜ್ಯಕ್ಕೆ ಸೇರ್ಪಡಿಸಲಾಯಿತು. ಮುಖ್ಯಮಂತ್ರಿಯಾದ ಡಿ.ದೇವರಾಜ ಅರಸು ಅವರ ಕಾಲದಲ್ಲಿ ೧ ನವೆಂಬರ್, ೧೯೭೩ ರಂದು, ಮೈಸೂರು ರಾಜ್ಯದ ಹೆಸರನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಹೊಸ ಮೈಸೂರು ರಾಜ್ಯವು(ನಂತರ ವಿಶಾಲ ಮೈಸೂರು-ನಂತರ ಕರ್ನಾಟಕ) ೧ ನವೆಂಬರ್.೧೯೫೬ ರಲ್ಲಿ ರಚನೆಯಾಯಿತು ಅಂದಿನಿಂದ ೧ ನವೆಂಬರ್ ಕನ್ನಡ ರಾಜ್ಯೋತ್ಸವ / ಕರ್ನಾಟಕ ರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ.
- ಕನ್ನಡ ಭಾಷೆಯ ಕೆಲವು ಪ್ರದೇಶಗಳು ಸೇರ್ಪಡೆ ಆಗದ ಕಾರಣ ಕನ್ನಡಿಗರು ನಿರಾಶೆ ಹೊಂದಿದ್ದರೂ, ಸಂಸತ್ತಿನಲ್ಲಿ ಎಸ್ಆರ್ಸಿ (SRC)ರಾಜ್ಯ ಪುನರ್ವಿಂಗಡಣಾ ಸಮಿತಿಯ ಶಿಫಾರಸುಗಳನ್ನು ಅಂಗೀಕರಿಸಲು ಒಪ್ಪಿದರು. ರಾಜರ ಆಡಳಿತದಲ್ಲಿದ್ದ ಮೈಸೂರು ರಾಜ್ಯವು ಸಕಾರಾತ್ಮಕವಾಗಿ, ಪ್ರತಿಕ್ರಿಯಿಸಿತು .ಕರ್ನಾಟಕಕ್ಕೆ ಸೇರದೆ ಕೈಬಿಟ್ಟ ಹೆಚ್ಚು ಕನ್ನಡಿಗರಿರುವ ಪ್ರದೇಶಗಳ ಪೈಕಿ ಅತ್ಯಂತ ಗಮನಾರ್ಹವಾದ ಪ್ರದೇಶ ಕಾಸರಗೋಡು. ಇದು ಏಕೀಕರಣ ಚಳವಳಿಯನ್ನು ಪ್ರಾರಂಭಿಸಿದ ಕೇಂದ್ರಗಳಲ್ಲಿ ಒಂದಾಗಿದೆ. ಹೀಗಾಗಿ ಕನ್ನಡ ಮಾತನಾಡುವ ಜನಸಂಖ್ಯೆಯುಳ್ಳ ಪ್ರದೇಶಗಳಲ್ಲಿ ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಅವರು ತಳಮಳ ಗೊಂಡಿದ್ದಾರೆ; ಹೋರಾಟ ಮುಂದುವರಿದಿದೆ.
- ಕರ್ನಾಟಕ ರಾಜ್ಯವು ತನ್ನ ರಾಜಧಾನಿಯಾಗಿ ಬೆಂಗಳೂರು ನಗರವನ್ನು ಆಯ್ಕೆ ಮಾಡಿಕೊಂಡಿತು, ಮತ್ತು ಕನ್ನಡಕ್ಕೆ ಆಡಳಿತ ಭಾಷೆಯ ಸ್ಥಾನಮಾನವನ್ನು ನೀಡಿತು. ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಮೇಲ್ವಚಾರಣೆಯಲ್ಲಿ ವಿಧಾನಸೌಧದ ನಿರ್ಮಾಣವಾಗಿ, ಅದು ರಾಜ್ಯದ ಶಾಸನಸಭೆಯ (ಸಂಸತ್`ಭವನ) ಸದನವಾಯಿತು. ಹಿಂದಿನ ಸಚಿವಾಲಯವಾಗಿದ್ದ ‘ಅಠಾರಾ ಕಛೇರಿ'ಯನ್ನು (ಸರ್ಕಾರದ ಆಡಳಿತ ಕಛೇರಿ) ರಾಜ್ಯದ ಹೈಕೋರ್ಟ್ ಮಾಡಲಾಯಿತು.[೧][೨]
- ಸ್ವಾತಂತ್ರಾನಂತರದ ಇತಿಹಾಸ
- ಕಾಂಗ್ರೆಸ್ ಪಕ್ಷದ ಕೆ.ಚಂಗಲರಾಯ ರೆಡ್ಡಿ (ಕ್ಯಾಸಂಬಳ್ಳಿ ಚೆಂಗಲರಾಯ ರೆಡ್ಡಿ)25ನೇ ಅಕ್ಟೋಬರ್ 1947 ರಂದುಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿಯಾದರು. ಮೈಸೂರು ಮಹಾರಾಜ ಎಚ್.ಎಚ್.ಶ್ರೀ ಜಯಚಾಮರಾಜೇಂದ್ರ ಒಡೆಯರ್ ರಾಜಪ್ರಮುಖರಾದರು. ನಂತರ ರಾಜ್ಯದ ರಾಜ್ಯಪಾಲರಾದರು. ರೆಡ್ಡಿಯವರ ನಂತರ ದಿ 30ನೇ ಮಾರ್ಚ್ 1952 ರಿಂದ ಕಾಂಗ್ರೆಸ್ ಕೆಂಗಲ್ ಹನುಮಂತಯ್ಯನವರು ಮುಖ್ಯಮಂತ್ರಿಯಾದರು.
ಆಡಳಿತ ವಿಭಾಗಗಳು[ಬದಲಾಯಿಸಿ]
- ಕರ್ನಾಟಕ ರಾಜ್ಯವನ್ನು ಆಡಳಿತಾತ್ಮಕ ಉದ್ದೇಶಗಳಿಗಾಗಿ ನಾಲ್ಕು ಆದಾಯ ವಿಭಾಗಗಳು, 49 ಉಪವಿಭಾಗಗಳು, 30 ಜಿಲ್ಲೆಗಳು, 177 ತಾಲ್ಲೂಕುಗಳು ಮತ್ತು 747 ಹೋಬಳಿ / ಆದಾಯ ವಲಯಗಳು ಮತ್ತು 5628 ಗ್ರಾಮ ಪಂಚಾಯತ್ಗಳಾಗಿ ವಿಭಜಿಸಲಾಗಿದೆ.[1] ರಾಜ್ಯವು 281 ಪಟ್ಟಣಗಳು ಮತ್ತು 7 ಪುರಸಭಾ ಸಂಸ್ಥೆಗಳನ್ನು ಹೊಂದಿದೆ. ಭಾರತದ 23 ನಗರಪ್ರದೇಶಗಳಲ್ಲಿ ಮತ್ತು ನಗರಗಳಲ್ಲಿ, ಬೆಂಗಳೂರು ಐದನೇ ದೊಡ್ಡ ಮಹಾನಗರವಾಗಿದೆ. ಇದು ಪ್ರಪಂಚದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳ ಪೈಕಿ ಒಂದಾಗಿದೆ. . ನಗರೀಕರಣದಿಂದ ಜನ ಸಾಂದ್ರತೆಯು ಹೆಚ್ಚುತ್ತಿದೆ.
ರಾಜಕೀಯ ಮತ್ತು ಆಡಳಿತಾತ್ಮಕ ಪುನಸ್ಸಂಘಟನೆ[ಬದಲಾಯಿಸಿ]
- ಮುಖ್ಯ ಲೇಖನ: ಕರ್ನಾಟಕದ ಏಕೀಕರಣ
- ಮೈಸೂರು ಮತ್ತು ಕೊಡಗು ರಾಜ್ಯಗಳು, ಮುಂಬಯಿ ಮತ್ತು ಹೈದರಾಬಾದ್,ನ ಮತ್ತು ಮದ್ರಾಸ್ ನ ಹಳೆಯ ರಾಜ್ಯಗಳ ಕನ್ನಡ ಮಾತನಾಡುವ ಜಿಲ್ಲೆಗಳು ಕರ್ನಾಟಕದಲ್ಲಿ ವಿಲೀನಗೊಂಡಿತು. *ನಂತರ, 1956 ರಲ್ಲಿ ತನ್ನ ಪ್ರಸಕ್ತ ರೂಪವನ್ನು ತೆಗೆದುಕೊಂಡಿತು. ಮೈಸೂರು ರಾಜ್ಯವು 10 ಜಿಲ್ಲೆಗಳನ್ನು ಹೊಂದಿತ್ತು ಅವು : ಬೆಂಗಳೂರು, ಕೋಲಾರ, ತುಮಕೂರು, ಮಂಡ್ಯ, ಮೈಸೂರು, ಹಾಸನ, ಚಿಕ್ಕಮಗಳೂರು (ಕಡೂರು), ಶಿವಮೊಗ್ಗ ಮತ್ತು ಚಿತ್ರದುರ್ಗ. ಬಳ್ಳಾರಿಯು 1953 ರಲ್ಲಿ ಈಗಿನ ಕರ್ನಾಟಕಕ್ಕೆ ಸೇರಿತು. (ಇವು ಎಲ್ಲಾ ಕರ್ನಾಟಕದಲ್ಲಿ ಸೇರಿದವು.)
- ಹೊಸ ಆಂಧ್ರ ರಾಜ್ಯವು ಮದ್ರಾಸ್` ನ ಉತ್ತರ ಜಿಲ್ಲೆಗಳಲ್ಲಿ ಸೃಷ್ಟಿಯಾಯಿತು. ಆಗ ಮೈಸೂರು ರಾಜ್ಯಕ್ಕೆ ಮದ್ರಾಸ್ ಪ್ರಾಂತ್ಯದಿಂದ ವರ್ಗಾಯಿಸಿದ. ಕೊಡಗು ಜಿಲ್ಲಾ(ಕೇಂದ್ರಾಡಳಿತ), ಹಾಗೂ ದಕ್ಷಿಣ ಕನ್ನಡ ಜಿಲ್ಲೆ, ಮದ್ರಾಸ್ ರಾಜ್ಯದ ಉತ್ತರ ಕನ್ನಡ ಧಾರವಾಡ, ಬೆಳಗಾವಿ ಜಿಲ್ಲೆ, ಮತ್ತು ಮುಂಬಯಿ ಪ್ರಾಂತ್ಯದ ಬಿಜಾಪುರ ಜಿಲ್ಲೆ; ಮತ್ತು ಹೈದರಾಬಾದ್ ಪ್ರಾಂತ್ಯದಿಂದ ಬೀದರ್ ಜಿಲ್ಲೆ, ಗುಲ್ಬರ್ಗಾ ಜಿಲ್ಲೆ, ಮತ್ತು ರಾಯಚೂರು ಜಿಲ್ಲೆಗಳನ್ನು ಕರ್ನಾಟಕಕ್ಕೆ ವರ್ಗಾಯಿಸಲಾಯಿತು . 1989 ರಲ್ಲಿ ಗ್ರಾಮಾಂತರ ಪ್ರದೇಶ ಬೆಂಗಳೂರಿನಿಂದ ಬೇರ್ಪಟ್ಟು ಬೆಂಗಳೂರು ಗ್ರಾಮಾಂತರ ಜಿಲ್ಲೆಯಾಯಿತು. 1997 ರಲ್ಲಿ ಬಾಗಲಕೋಟೆ ಜಿಲ್ಲೆಯ ವಿಜಯಪುರ/ಬಿಜಾಪುರದಿಂದ ಬೇರ್ಪಟ್ಟು ಹೊಸ ಜಿಲ್ಲೆಯಾಯಿತು. ಮೈಸೂರು ಜಿಲ್ಲೆ ಒಡೆದು ಚಾಮರಾಜನಗರ ಜಿಲ್ಲೆ ಆಯಿತು. ಧಾರವಾಡ ಜಿಲ್ಲೆ ಒಡೆದು ಗದಗ ಜಿಲ್ಲೆ ಹುಟ್ಟಿತು. ಮತ್ತೆ ಧಾರವಾಡ ಜಿಲ್ಲೆ ಒಡೆದು ಹಾವೇರಿ ಜಿಲ್ಲೆ ಆಯಿತು. ರಾಯಚೂರು ಜಿಲ್ಲೆ ಒಡೆದು ಕೊಪ್ಪಳ ಜಿಲ್ಲೆ ಆಯಿತು. ದಕ್ಷಿಣ ಕನ್ನಡ ಬೇರ್ಪಟ್ಟು ಉಡುಪಿ ಜಿಲ್ಲೆ ಮತ್ತು ದಕ್ಷಿಣ ಕನ್ನಡ ಆಯಿತು. ದಾವಣಗೆರೆ ಜಿಲ್ಲೆಯನ್ನು ಬಳ್ಳಾರಿ, ಚಿತ್ರದುರ್ಗ, ಧಾರವಾಡ, ಶಿವಮೊಗ್ಗ ಜಿಲ್ಲೆಗಳ ಭಾಗಗಳಿಂದ ರಚಿಸಲಾಗಿದೆ. 2008 ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಇಬ್ಭಾಗಿಸಿ ರಾಮನಗರ ಎಂಬ ಹೊಸ ಜಿಲ್ಲೆಯ ರಚನೆಯಾಯಿತು. ಅದೇ ರೀತಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯನ್ನು, ಹಿಂದಿನ ಕೋಲಾರ ಜಿಲ್ಲೆಯನ್ನು ಒಡೆದು ಮಾಡಲಾಯಿತು.ಇದು ಇಂದಿನ (೨೦೧೬) ಕರ್ನಾಟಕ. ಈಗ ಕರ್ನಾಟಕದಲ್ಲಿ(೨೦೧೬) ೩೦ ಜಿಲ್ಲೆಗಳಿವೆ.(ಕರ್ನಾಟಕದ ಜಿಲ್ಲೆಗಳು).
೨೦೧೩ ರ ಚುನಾಯಿತ ಸರ್ಕಾರ[ಬದಲಾಯಿಸಿ]
ಕರ್ನಾಟಕ ವಿಧಾನಸಭೆ ಚುನಾವಣೆ, 2013 ಭಾರತದ ಕರ್ನಾಟಕ ರಾಜ್ಯದ ಹದಿನಾಲ್ಕನೇ ವಿಧಾನಸಭೆಗೆ 5 ಮೇ 2013 ರಂದು 223 ಕ್ಷೇತ್ರಗಳ ಸದಸ್ಯರನ್ನು ಚುನಾಯಿಸುವ ಚುನಾವಣೆ ನಡೆಯಿತು.ಕರ್ನಾಟಕವು 224 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದರೂ, ಚುನಾವಣೆಯಲ್ಲಿ 223 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯಿತು. ಪೆರಿಯಾಪಟ್ಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಸಾವಿನ ಕಾರಣ ಅಲ್ಲಿಯ ಚುನಾವಣೆ 28 ಮೇ 2013 ಕ್ಕೆ ಮುಂದೂಡಲ್ಪಟ್ಟಿತು. [1] ರಾಜ್ಯದಲ್ಲಿ ಮತದಾನ 70.23 % ಆಗಿತ್ತು[2]. ಕನಾಟಕದ ಕಾಂಗ್ರೆಸ್ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ಇವರ ನೇತ್ರತ್ವದಲ್ಲಿ ಚುನಾವಣೆ ನೆಡೆದು ಕಾಂಗ್ರೆಸ್ 122 ಸ್ಥಾನಗಳನ್ನು (ಪೆರಿಯಾಪಟ್ಣ ಸ್ಥಾನವನ್ನು ಸೇರಿದಂತೆ)ಪಡೆಯಿತು. ಮತದಾನ ದಿ.5-5-2013; ಎಣಿಕೆ 8-5-2013. ಬಹುಮತಕ್ಕೆ ಬೇಕಾದ 113.[3] ಕ್ಕೂ ಹೆಚ್ಚಾಗಿ 9 ಹೆಚ್ಚು ಸ್ಥಾನಗಳನ್ನು ಪಡೆದು ಸಂಪೂರ್ಣ ಬಹುಮತದಿಂದ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಕಾಂ)ಗೆಲುವು ಸಾಧಿಸಿತು. ಕಾಂಗ್ರೆಸ್ ಅಧ್ಯಕ್ಷ ಡಾ.ಜಿ. ಪರಮೇಶ್ವರ್. ತಮ್ಮಕ್ಷೇತ್ರದಲ್ಲಿ ಪ್ರಚಾರಕ್ಕೆ ಗಮನ ಕೊಡದೆ ಉಳಿದ ಕ್ಷೇತ್ರಗಳ ಪ್ರಚಾರ ಕೈಗೊಂಡಿದ್ದರಿಂದ ಚುನಾವಣೆಯಲ್ಲಿ ಸೋಲುಕಂಡರು. ಆದ್ದರಿಂದ ನಂತರದ ಕಾಂಗ್ರೆಸ್ ನಾಯಕ (ಹಿಂದಿನ ಜನತಾ ಪರಿವಾರದ ನಾಯಕ) ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ ಆರಿಸಲಾಯಿತು. ಕಾಂಗ್ರೆಸ್ ತನ್ನ ಸ್ವಂತ ಬಲದಮೇಲೆ ಒಂಬತ್ತು ವರ್ಷಗಳ ನಂತರ ಪುನಃ ಅಧಿಕಾರಕ್ಕೆ ಮರಳಿತು.
೨೦೧೩ ರ ಸರ್ಕಾರ ಮತ್ತು ಮಂತ್ರಿಮಂಡಲ ರಚನೆ[ಬದಲಾಯಿಸಿ]
ದಿ.13-5-2013 ರಂದು 28 ನೇ ಮುಖ್ಯ ಮಂತ್ರಿಯಾಗಿ ಸಿದ್ದರಾಮಯ್ಯ ಒಬ್ಬರೇ ಪ್ರಮಾಣವಚನ ಸ್ವೀಕಾರಮಾಡಿದರು. ದಿ.18-5-2013 ಸಂಪುಟ ವಿಸ್ತರಣೆಮಾಡಿದರು
- ಸಿದ್ದರಾಮಯ್ಯ:ಮುಖ್ಯ ಮಂತ್ರಿ
- ಸಂಪುಟ ಸದಸ್ಯರು (ಮಂತ್ರಿಮಂಡಳ)
- ಕರ್ನಾಟಕ ವಿಧಾನಸಭೆ ಚುನಾವಣೆ, 2013
ಕುಮಾರಸ್ವಾಮಿಯವರ ಮಂತ್ರಿಮಂಡಲ ರಚನೆ 2018[ಬದಲಾಯಿಸಿ]
- ಬಿ.ಎಸ್ ಯಡಿಯೂರಪ್ಪನವರು ಬಹುಮತ ಸಾಬೀತು ಪಡಿಸಲು ವಿಫಲರಾದ ನಂತರ ರಾಜ್ಯ ಪಾಲರ ಆಹ್ವಾನದಂತೆ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಜೆಡಿಎಸ್ ಮತ್ತು ಕಾಂಗ್ರಸ್ ಸಮ್ಮಿಶ್ರ ಸರ್ಕಾರದ ನಾಯಕರಾಗಿ ರಾಜ್ಯದ 29 ನೇ ಮುಖ್ಯಮಂತ್ರಿಯಾಗಿ ದಿ.23 ಮೇ, 2018 ರಂದು ದೇವರು ಮತ್ತು ಕನ್ನಡ ನಾಡಿನ ಜನರ ಹೆಸರಿನಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು ಮತ್ತು ಕೊರಟಗೆರೆ ಶಾಸಕ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಉಪಮುಖ್ಯಮಂತ್ರಿಯಾಗಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. [೩]
ಕಾರ್ಯಾಂಗ[ಬದಲಾಯಿಸಿ]
- ಮೇ ೨೦೧೩
ಮುಖ್ಯ ಕಾರ್ಯದರ್ಶಿ: ಕೆ. ರತ್ನಪ್ರಭಾ
ಹಣಕಾಸು ಕಾರ್ಯದರ್ಶಿ: ಐ ಎಸ್ ಎನ್ ಪ್ರಸಾದ್ [೪]
ಗೃಹ ಕಾರ್ಯದರ್ಶಿ: ಪಿ ಕೆ ಗರ್ಗ್ [೫]
ಹೆಚ್ಚಿನ ಮಾಹಿತಿ[ಬದಲಾಯಿಸಿ]
- ಕರ್ನಾಟಕ ವಿಧಾನಸಭೆ ಚುನಾವಣೆ, 2013
- ಕರ್ನಾಟಕ ವಿಧಾನಸಭೆ ಚುನಾವಣೆ, ೨೦೧೮--2018
- ಕರ್ನಾಟಕದ ಇತಿಹಾಸ
- ಕರ್ನಾಟಕದ ಮುಖ್ಯಮಂತ್ರಿಗಳು
- ಕರ್ನಾಟಕದ ಏಕೀಕರಣ
- ಕರ್ನಾಟಕ ಸರ್ಕಾರದ ಮಂತ್ರಿಮಂಡಲ, ೨೦೧೩
- ಕರ್ನಾಟಕ ಸರ್ಕಾರದ ಮಂತ್ರಿಮಂಡಲ, ೨೦೧೮
- ಕರ್ನಾಟಕ ರಾಜ್ಯ ಸರಕಾರಿ ಒಡೆತನದ ನಿಗಮ ಮಂಡಳಿಗಳು ಮತ್ತು ನೇಮಕ
- ೧ ಸಕ್ಕರೆ ಸಚಿವ ಮಹದೇವಪ್ರಸಾದ್ ಹೃದಯಾಘಾತದಿಂದ ಸಾವು
- ಎಚ್.ಎಸ್. ಮಹದೇವಪ್ರಸಾದ್ ನಡೆದುಬಂದ ಹಾದಿ
ಆಧಾರ[ಬದಲಾಯಿಸಿ]
- 1."Statistics - Karnataka state". Online webpage of the Forest Department. Government of Karnataka. Archived from the original on September 27, 2007. Retrieved 2007-06-04.
- 2.A Jayaram. "Council polls may not give Congress majority". Online Edition of The Hindu, dated 2002-05-31. 2002, The Hindu. Retrieved 2007-06-04.
- 3."Karnataka Legislative Council". Online webpage of Legislative bodies in India. Government of India. Retrieved 2007-06-04.
- 4 [೧]
- http://kannada.oneindia.com/news/2013/05/19/karnataka-siddaramaiah-allots-portfolio-to-ministers-074144.html