ದುಶ್ಯಲಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದುಶ್ಶಲೆಯು ಭಾರತದ ಮಹಾಕಾವ್ಯದ ಮಹಾಭಾರತದಲ್ಲಿ ದುರ್ಯೋಧನ ಮುಂತಾದ ನೂರು ಮಂದಿ ಕೌರವರ ಒಬ್ಬಳೇ ತಂಗಿ. ಅವಳು ಸಿಂಧೂ ಮತ್ತು ಸೌವೀರ ದೇಶದ ಅರಸನಾದ ಜಯದ್ರಥನನ್ನು ಮದುವೆ ಆದಳು. [[ಉತ್ತರೆ (ಮಹಾಭಾರತ)[ಸುಭದ್ರ]]-ಅರ್ಜುನನ ಮಗ ಅಭಿಮನ್ಯುವನ್ನು ಚಕ್ರವ್ಯೂಹದಲ್ಲಿ ಜಯದ್ರಥ ಕೊಂದನೆಂಬ ಕಾರಣಕ್ಕಾಗಿ, ಈ ಜಯದ್ರಥನನ್ನು ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನು ಕೊಲ್ಲುತ್ತಾನೆ. ಕುರುಕ್ಷೇತ್ರದ ಯುದ್ಧ ಮುಗಿದ ನಂತರ ಯುಧಿಷ್ಠಿರ (ಧರ್ಮರಾಯ)ನು ಅಶ್ವಮೇಧ ಯಾಗ ಮಾಡುತ್ತಿರುವಾಗ ಕಪ್ಪ ಸಂಗ್ರಹಿಸಲು ಅರ್ಜುನನು ಸಿಂಧೂದೇಶಕ್ಕೆ ಬಂದಾಗ ಅವನ ಜತೆಗೆ ಅವಳ ಮೊಮ್ಮಗನು ಯುದ್ಧ ಮಾಡಿದನು. ದುರ್ಯೋಧನನ ತಂಗಿಯನ್ನು ತನ್ನ ತಂಗಿಯಂತೆ ಪರಿಗಣಿಸಿದ್ದರಿಂದ, ಅವಳ ಮೇಲಿನ ಪ್ರೀತಿಯಿಂದ ಅವಳ ಮೊಮ್ಮಗನನ್ನು ಕೊಲ್ಲದೆ ಸಿಂಧೂದೇಶದಿಂದ ಅರ್ಜುನನು ಹೊರಟು ಬಂದನು.

ಉಲ್ಲೇಖ[ಬದಲಾಯಿಸಿ]

"https://kn.wikipedia.org/w/index.php?title=ದುಶ್ಯಲಾ&oldid=1191633" ಇಂದ ಪಡೆಯಲ್ಪಟ್ಟಿದೆ