ಜನಮೇಜಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜನಮೇಜಯ
ಹಸ್ತಿನಾಪುರದ ರಾಜ

ಮಹರ್ಷಿ ವ್ಯಾಸರೊಂದಿಗೆ ಜನಮೇಜಯ.
ಪೂರ್ವಾಧಿಕಾರಿ ಪರೀಕ್ಷಿತ
ಉತ್ತರಾಧಿಕಾರಿ ಶತಾನಿಕ
ರಾಜ ವಂಶ ಕುರುವಂಶ
ತಂದೆ ಪರೀಕ್ಷಿತ
ತಾಯಿ ರಾಣಿ ಮದ್ರಾವತಿ
ಧರ್ಮ ಹಿಂದೂ ಧರ್ಮ


ಜನಮೇಜಯನು ಮಹಾಭಾರತದ ಕತೆಯಲ್ಲಿ ಕುರು ವಂಶದ ರಾಜ, ಪರೀಕ್ಷಿತರಾಜನ ಮಗನು; ಪರೀಕ್ಷಿತ ರಾಜನು ಅಭಿಮನ್ಯುವಿನ ಮಗ , ಅರ್ಜುನನ ವೊಮ್ಮಗ. ವ್ಯಾಸಮಹರ್ಷಿಗಳ ಶಿಷ್ಯರಾದ ವೈಶಂಪಾಯನರು ಹೇಳಿದ ಮಹಾಭಾರತದ ಕತೆಯ ಕೇಳುಗನು ಇವನು.

ತಕ್ಷಕನೆಂಬ ನಾಗನಿಂದ ತನ್ನ ತಂದೆ ಪರೀಕ್ಷಿತನು ಸತ್ತದ್ದರಿಂದ ಇವನು ನಾಗವಂಶವನ್ನೆಲ್ಲಾ ನಿರ್ನಾಮ ಮಾಡಲು ಸರ್ಪಯಜ್ಞವನ್ನು ಕೈಗೊಂಡನು. ಆ ಸಮಯದಲ್ಲಿ ವೈಶಂಪಾಯನರು ಭರತನಿಂದಾರಂಭಿಸಿ ಕೌರವ ಪಾಂಡವರ ನಡುವಿನ ಯುದ್ಧದವರೆಗಿನ ಅವನ ಹಿರಿಯರ ಕತೆಯನ್ನು ಹೇಳಿದರು.

ಜನಮೇಜಯನಿಂದ ಸರ್ಪಯಾಗ, ಬಾಲಕ ಆಸ್ತಿಕ ಮುನಿಯಿಂದ ನಿಲುಗಡೆಯ ಪ್ರಯತ್ನ..

ಬಾಲಕನಾದ ಆಸ್ತಿಕ ಮುನಿಯು ಸರ್ಪಗಳನ್ನೆಲ್ಲ ನಾಶ ಪಡಿಸುವ ಯಜ್ಞಕ್ಕೆ ಅಡ್ಡಿಯಾದನು . ಅವನ ತಂದೆ ಒಬ್ಬ ಬ್ರಾಹ್ಮಣ , ತಾಯಿ ನಾಗಕುಲದವಳು. ಜ್ಞಾನಿಯಾದ ಆತನ ಮಾತುಗಳನ್ನು ಕೇಳಿ ತಕ್ಷಕನನ್ನು ಬಿಡುಗಡೆ ಮಾಡಿದನು, ಸರ್ಪಯಜ್ಞವನ್ನು ನಿಲ್ಲಿಸಿ ನಾಗಕುಲದವರೊಂದಿಗೆ ದ್ವೇಷವನ್ನು ಕೈಬಿಟ್ಟನು. ನಂತರ ಕುರು ಕುಲದವರು ಮತ್ತು ನಾಗ ಕುಲದವರು ಶಾಂತಿಯಿಂದ ಬಾಳಿದರು.

"https://kn.wikipedia.org/w/index.php?title=ಜನಮೇಜಯ&oldid=805742" ಇಂದ ಪಡೆಯಲ್ಪಟ್ಟಿದೆ