ಧೀರಶಂಕರಾಭರಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕರ್ನಾಟಕ ಸಂಗೀತ
ಪರಿಕಲ್ಪನೆಗಳು

ಶ್ರುತಿಸ್ವರರಾಗತಾಳ ಮೇಳಕರ್ತಅಸಂಪೂರ್ಣ ಮೇಳಕರ್ತ

ಸಂಗೀತ ರಚನೆಗಳು

ವರ್ಣಮ್ಕೃತಿಗೀತಂಸ್ವರಜತಿರಾಗಂ ತಾನಂ ಪಲ್ಲವಿತಿಲ್ಲಾನ

ಸಂಗೀತೋಪಕರಣಗಳು

ಮಾಧುರ್ಯ: ಸರಸ್ವತಿ ವೀಣೆವೇಣು ಪಿಟೀಲುಚಿತ್ರ ವೀಣನಾದಸ್ವರಮ್ಯಾಂಡೊಲಿನ್

ತಾಳ: ಮೃದಂಗಘಟಂಮೋರ್ಸಿಂಗ್ಕಂಜೀರತವಿಲ್

ಝೇಂಕಾರ: ತಂಬೂರಶ್ರುತಿ ಪಟ್ಟಿಗೆ

ಸಂಗೀತಕಾರರು

ಟೆಂಪ್ಲೇಟು:ಕರ್ನಾಟಕ ಸಂಗೀತ - ಪ್ರಸಿದ್ಧ ಸಂಗೀತಗಾರರು

ಧೀರಶಂಕರಾಭರಣ ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ ೨೯ನೇ ರಾಗ. ಈ ರಾಗವು ಶಂಕರಾಭರಣ ಎಂದು ಜನಬಳಕೆಯಲ್ಲಿದೆ. ಕಟಪಯಾದಿ ಸೂತ್ರಕ್ಕೆ ಹೊಂದಿಕೊಳ್ಳುವಂತೆ 'ಧೀರ' ಎಂಬ ಮುಂಪ್ರತ್ಯಯವನ್ನು ಸೇರಿಸಿ ಧೀರಶಂಕರಾಭರಣ ಎಂಬ ಹೆಸರನ್ನು ಬಳಸುತ್ತಾರೆ. ಶಂಕರಾಭರಣ ರಾಗವು ಕರುಣಾ ರಸ ಭಕ್ತಿ ಪ್ರಧಾನ ರಾಗ. ಹಿಂದೂಸ್ತಾನಿ ಸಂಗೀತ ಪದ್ಧತಿಯಲ್ಲಿ ಬಿಲಾವಲ್ ರಾಗಕ್ಕೆ ಸಮಾನವಾಗಿದೆ.

ರಾಗ ಲಕ್ಷಣ ಮತ್ತು ಸ್ವರೂಪ[ಬದಲಾಯಿಸಿ]

Śaṃkarābharaṇaṃ scale with shadjam at C

ಜಂಟೀಸ್ವರ ಪ್ರಯೋಗಗಳು, ದಾಟುಸ್ವರ ಪ್ರಯೋಗಗಳು ಈ ರಾಗದಲ್ಲಿ ವಿಶೇಷವಾಗಿ ಕಂಡು ಬರುತ್ತವೆ. ಸರ್ವಕಾಲಿಕರಾಗ, ತ್ರಿಸ್ಥಾಯಿಯಲ್ಲಿ ಹಾಡಬಹುದು. ಸರ್ವಸ್ವರ ಮೂರ್ಛನಕಾರಕ ರಾಗ. ರಚನೆಗಳನ್ನು ಷಡ್ಜ, ಗಾಂಧಾರ, ಮಧ್ಯಮ ಮತ್ತು ತಾರಷಡ್ಜಗಳಲ್ಲಿ ಪ್ರಾರಂಭಿಸಬಹುದು.
ಈ ರಾಗದ ಆರೋಹಣ ಮತ್ತು ಅವರೋಹಣದ ಸ್ವರಗಳು ಈ ಕೆಳಗಿನಂತಿವೆ.
ಆರೋಹಣ ಸ ರಿ೨ ಗ೩ ಮ೧ ಪ ದ೨ ನಿ೩ ಸ'
ಅವರೋಹಣ ಸ' ನಿ೩ ದ೨ ಪ ಮ೧ ಗ೩ ರಿ೨ ಸ

ಜನ್ಯ ರಾಗಗಳು[ಬದಲಾಯಿಸಿ]

ಈ ರಾಗದಲ್ಲಿ ಅತ್ಯಂತ ಜನಪ್ರಿಯ ರಾಗಗಳಾದ ಆರಭಿ, ಅಠಾಣ, ಬಿಲಹರಿ, ಹಂಸಧ್ವನಿ, ಶುದ್ಧ ಸಾವೇರಿ ಮತ್ತು ದೇವಗಾಂಧಾರಿ ಜನ್ಯವಾಗಿವೆ.

ಜನಪ್ರಿಯ ರಚನೆಗಳು[ಬದಲಾಯಿಸಿ]

ಈ ರಾಗದಲ್ಲಿರುವ ಜನಪ್ರಿಯ ರಚನೆಗಳು

ವಿಧ ಕೃತಿ ವಾಗ್ಗೇಯಕಾರ ತಾಳ
ಕೃತಿ ಸ್ವರರಾಗಸುಧಾ ತ್ಯಾಗರಾಜರು
ಕೃತಿ ಅಕ್ಷಯಲಿಂಗವಿಭೋ ಮುತ್ತುಸ್ವಾಮಿ ದೀಕ್ಷಿತರು
ಕೃತಿ ಮನಸು ಸ್ವಾಧೀನ ತ್ಯಾಗರಾಜರು
ಕೃತಿ ಪೋಗದಿರೆಲೋ ರಂಗ ಪುರಂದರದಾಸರು

ಉಲ್ಲೇಖಗಳು[ಬದಲಾಯಿಸಿ]

1) ಕರ್ನಾಟಕ ಸಂಗೀತ : ಮಾಧ್ಯಮಿಕ ಹಂತ - ಕರ್ನಾಟಕ ಸರ್ಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]