ಗವಾಂಭೋದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕರ್ನಾಟಕ ಸಂಗೀತ
ಪರಿಕಲ್ಪನೆಗಳು

ಶ್ರುತಿಸ್ವರರಾಗತಾಳ ಮೇಳಕರ್ತಅಸಂಪೂರ್ಣ ಮೇಳಕರ್ತ

ಸಂಗೀತ ರಚನೆಗಳು

ವರ್ಣಮ್ಕೃತಿಗೀತಂಸ್ವರಜತಿರಾಗಂ ತಾನಂ ಪಲ್ಲವಿತಿಲ್ಲಾನ

ಸಂಗೀತೋಪಕರಣಗಳು

ಮಾಧುರ್ಯ: ಸರಸ್ವತಿ ವೀಣೆವೇಣು ಪಿಟೀಲುಚಿತ್ರ ವೀಣನಾದಸ್ವರಮ್ಯಾಂಡೊಲಿನ್

ತಾಳ: ಮೃದಂಗಘಟಂಮೋರ್ಸಿಂಗ್ಕಂಜೀರತವಿಲ್

ಝೇಂಕಾರ: ತಂಬೂರಶ್ರುತಿ ಪಟ್ಟಿಗೆ

ಸಂಗೀತಕಾರರು

ಟೆಂಪ್ಲೇಟು:ಕರ್ನಾಟಕ ಸಂಗೀತ - ಪ್ರಸಿದ್ಧ ಸಂಗೀತಗಾರರು

ಗವಾಂಭೋದಿ (ಎಂದರೆ ಹಸುಗಳ ಶಿಕ್ಷಕ )ಕರ್ನಾಟಕ ಸಂಗೀತ ಪದ್ಧತಿಯಲ್ಲಿ ಒಂದು ರಾಗ. ಇದು ೭೨ ಮೇಳಕರ್ತ ರಾಗಗಳ ಸರಣಿಯಲ್ಲಿ ೪೩ನೆಯ ಮೇಳಕರ್ತ ರಾಗ. ಇದನ್ನು ಮುತ್ತುಸ್ವಾಮಿ ದೀಕ್ಷಿತರ ಕರ್ನಾಟಕ ಸಂಗೀತದ ಗ್ರಂಥಗಳಲ್ಲಿ ಗೀರ್ವಾಣಿ ಎಂದು ಕರೆಯಲಾಗುತ್ತದೆ.[೧][೨][೩]

ರಚನೆ ಮತ್ತು ಲಕ್ಷಣ[ಬದಲಾಯಿಸಿ]

ಗವಾಂಭೋದಿ ಸ್ವರಗಳು

ಇದು ಎಂಟನೆಯ  ವಸು ಚಕ್ರದ ಒಂದನೆಯ ರಾಗ.ಇದರ ಆರೋಹಣ ಮತ್ತು ಅವರೋಹಣ ಕೆಳಗಿನಂತಿದೆ.

  • ಆರೋಹಣ ಸ ರಿ೧ ಗ೨ ಮ೨ ಪ ಧ೧ ನಿ೧ ಸ
  • ಅವರೋಹಣ: ಸ ನಿ೧ ಧ೧ ಪ ಮ೨ ಗ೨ ರಿ೧ ಸ

(ಇದರ ಸ್ವರಶ್ರೇಣಿಯಲ್ಲಿ ಶುದ್ಧ ರಿಷಭ,ಸಾಧಾರಣ ಗಂಧಾರ,ಪ್ರತಿ ಮಧ್ಯಮ,ಶುದ್ಧ ಧೈವತ ಮತ್ತು ಶುದ್ಧ ನಿಶಾಧವನ್ನು ಬಳಸಲಾಗಿದೆ.)

ಇದು ಒಂದು ಮೇಳಕರ್ತ ರಾಗವಾಗಿದ್ದು, ವ್ಯಾಖ್ಯಾನದ ಪ್ರಕಾರ ಇದು ಒಂದು  ಸಂಪೂರ್ಣ ರಾಗ (ಎಲ್ಲಾ ಏಳು ಸ್ವರಗಳು ಆರೋಹಣ ಮತ್ತು ಅವರೋಹಣ ಸ್ವರಶ್ರೇಣಿಲ್ಲಿದೆ.). ಇದರ ಪ್ರತಿ ಮಧ್ಯಮವು ಏಳನೇಯ ಮೇಳಕರ್ತ ರಾಗವಾದ ಸೇನಾವತಿಗೆ ಸಮಾನವಾಗಿದೆ.

ಜನ್ಯ ರಾಗಗಳು[ಬದಲಾಯಿಸಿ]

ಗವಾಂಭೋದಿ ಕೆಲವೇ ಜನ್ಯ ರಾಗಗಳನ್ನು ಹೊಂದಿದೆ.

ರಚನೆಗಳು[ಬದಲಾಯಿಸಿ]

ಗವಾಂಭೋದಿ ರಾಗದ ಕೆಲವು ರಚನೆಗಳು:

  • ವೀರ  ರಾಘವ - ಕೋಟೇಶ್ವರ ಅಯ್ಯರ್
  • ವಿನತಿ ಚಕೊನವಯ್ಯ- ಡಾ. ಎಂ. ಬಾಲಮುರಳಿಕೃಷ್ಣ
  • ನಮೋಮಸ್ತಿ ಗೀರ್ವಾಣಿ- ಮುತ್ತುಸ್ವಾಮಿ ದೀಕ್ಷಿತರು

.

ಉಲ್ಲೇಖಗಳು[ಬದಲಾಯಿಸಿ]

  1. Sri Muthuswami Dikshitar Keertanaigal by Vidwan A Sundaram Iyer, Pub. 1989, Music Book Publishers, Mylapore, Chennai
  2. Ragas in Carnatic music by Dr. S. Bhagyalekshmy, Pub. 1990, CBH Publications
  3. Raganidhi by P. Subba Rao, Pub. 1964, The Music Academy of Madras

ಬಾಹ್ಯ ಸಂಪರ್ಕಗಳು[ಬದಲಾಯಿಸಿ]