ಕೃಷ್ಣ
ವಿಕಿಪೀಡಿಯ ಇಂದ
ಕೃಷ್ಣ ಸಾಂಪ್ರದಾಯಿಕ ಹಿಂದೂ ಧರ್ಮೀಯರ ನಂಬಿಕೆಯಂತೆ ವಿಷ್ಣುವಿನ ಅವತಾರಗಳಲ್ಲಿ ಒಬ್ಬ. ದೇವಕಿ ಮತ್ತು ವಸುದೇವ ಕೃಷ್ಣನ ತಂದೆ ತಾಯಿಗಳು. ರಾಕ್ಷಸನಾದ ಕಂಸ ಕೃಷ್ಣನ ಸೋದರಮಾವ. ಕಂಸ ಕೃಷ್ಣನಿಂದಲೇ ಮರಣ ಹೊಂದುತ್ತಾನೆ.
ಮಹಾಭಾರತದಲ್ಲಿ ಕೃಷ್ಣನ ಪಾತ್ರವನ್ನು ಸೂತ್ರಧಾರನ ಪಾತ್ರಕ್ಕೆ ಹೋಲಿಸಲಾಗಿದೆ. ಕೃಷ್ಣಾವತಾರದ ಕಥೆ ಮಹಾಭಾರತದ ಉದ್ದಕ್ಕೂ ಕಂಡುಬರುತ್ತದೆ. ಕಂಸ, ಶಿಶುಪಾಲ, ಮೊದಲಾದವರನ್ನು ಕೊಲ್ಲುವ ಕೃಷ್ಣ ಪಾಂಡವರ ಮಿತ್ರ. ಪಗಡೆಯಾಟದ ಸಂದರ್ಭದಲ್ಲಿ ದ್ರೌಪದಿಯ ವಸ್ತ್ರಾಪಹರಣವನ್ನು ತಡೆಯುವ ಕೃಷ್ಣ ಮಹಾಭಾರತ ಯುದ್ಧದಲ್ಲಿ ಅರ್ಜುನನ ಸಾರಥಿಯಾಗಿ ಪಾಲ್ಗೊಳ್ಳುತ್ತಾನೆ. ಈ ಸಂದರ್ಭದಲ್ಲಿ ಯುದ್ಧ ಬೇಡವೆಂದು ನಿರಾಕರಿಸುವ ಅರ್ಜುನನಿಗೆ ಕೃಷ್ಣ ಮಾಡುವ ಉಪದೇಶವೇ ಹಿಂದೂಗಳ ಪವಿತ್ರ ಗ್ರಂಥವಾದ ಭಗವದ್ಗೀತೆ ಎಂದು ಪ್ರಸಿದ್ಧವಾಗಿದೆ.
[ಬದಲಾಯಿಸಿ] ಕೃಷ್ಣನ ಇತರ ಹೆಸರುಗಳು
- ಅಚಲ: ಅಲಗಾಡದವ
- ಅಚ್ಯುತ:ಚ್ಯುತಿಯಿಲ್ಲದವ
- ಕಾಲದೇವ:
- ಗಿರಿಧರ: ಗಿರಿಯನ್ನು ಎತ್ತಿದವ (ಗೋವರ್ಧನ)
- ಗೋಪಾಲ:ಗೋವುಗಳನ್ನು ಪಾಲಿಸಿದವ
- ಗೋವಿಂದ: ಹಸುಗಳನ್ನು ರಕ್ಷಿಸುವವ
- ಚಕ್ರಧಾರಿ:ಚಕ್ರಾಯುಧವನ್ನು ಧರಿಸಿದವ
- ದಾಮೋದರ:
- ದ್ವಾರಕಾಧೀಷ:ದ್ವಾರಕಾನಗರಕ್ಕೆ ಒಡೆಯ
- ದ್ವಾರಕಾನಾಥ:ದ್ವಾರಕಾನಗರಕ್ಕೆ ಒಡೆಯ
- ಘನಶ್ಯಾಮ:
- ಜಗನ್ನಾಥ: ಜಗತ್ತಿನ ನಥ
- ಜನಾರ್ದನ: ಎಲ್ಲರಿಗೂ ವರವನ್ನು ಕೊಡುವನು
- ನಂದಗೋಪಾಲ:
- ಪತೀತಪಾವನ:
- ಪರಬ್ರಹ್ಮ:
- ಪಾಂಡುರಂಗ:
- ಪಾರ್ಥಸಾರಥಿ: ಅರ್ಜುನನ ಸಾರಥಿ
- ಮಧುಸೂದನ: ಮಧು ಎಂಬ ರಾಕ್ಷಸನನ್ನು ನಾಶಮಾಡಿದವ
- ಮಾಧವ: ವಸಂತ ಋತು ತರುವವ
- ಮುಕುಂದ: ಮುಕ್ತಿಯನ್ನು ಕೊಡುವವ
- ಮುಖಿಲ:
- ಯೋಗೇಶ್ವರ: ಯೋಗಿಗಳ ನಾಥ
- ವಾಸುದೇವ: ವಸುದೇವನ ಮಗ
- ಶ್ಯಾಮಸುಂದರ:
- ಹೃಷೀಕೇಶ: ಹೃಷಿಕಗಳನ್ನು(ಇಂದ್ರಿಯ) ಹಿಡಿದಿಟ್ಟದವ
- ಕೇಶವ
|
ವಿಷ್ಣುವಿನ ಅವತಾರಗಳು |
|
|---|---|
| ಮತ್ಸ್ಯ | ಕೂರ್ಮ | ವರಾಹ | ನರಸಿಂಹ | ವಾಮನ | ಪರಶುರಾಮ | ರಾಮ | ಕೃಷ್ಣ | ಬಲರಾಮ | ಬುದ್ಧ | ಕಲ್ಕಿ |
| ಹಿಂದೂ ಧರ್ಮ | ಹಿಂದೂ ಪುರಾಣ | ಇತಿಹಾಸ | |
|---|---|
| ದೇವತೆಗಳು: ಶಿವ | ಬ್ರಹ್ಮ | ವಿಷ್ಣು | ರಾಮ | ಕೃಷ್ಣ | ಗಣೇಶ | ಕಾರ್ತಿಕೇಯ | ಹನುಮಂತ | ಲಕ್ಷ್ಮಣ | ಇಂದ್ರ | ಸೂರ್ಯ | |
| ಗಾಯತ್ರಿ | ಸರಸ್ವತಿ | ಲಕ್ಷ್ಮಿ | ಪಾರ್ವತಿ | ಚಾಮುಂಡೇಶ್ವರಿ | ಕಾಳಿ | ಸೀತೆ | ವೈಷ್ಣೋ ದೇವಿ | ರಾಧೆ | |
| ಧರ್ಮಗ್ರಂಥಗಳು: ವೇದಗಳು | ಉಪನಿಷತ್ತುಗಳು | ಪುರಾಣಗಳು | ರಾಮಾಯಣ | ಮಹಾಭಾರತ | ಭಾಗವತ |
|
|||||||||||