ಕರ್ಮ
ಪರಿವಿಡಿ |
: ವ್ಯಾಖ್ಯಾನ [ಬದಲಾಯಿಸಿ]
ಮಂತ್ರ ೨ [ಬದಲಾಯಿಸಿ]
:
- ಕುರ್ವನ್ನೇವೇಹ ಕರ್ಮಾಣಿ|
- ಜಿಜೀವಿಷೇಚ್ಛತಂ ಸಮಾಃ |
- ಏವಂ ತ್ವಯಿ ನಾನ್ಯಥೇತೋಸ್ತಿ|
- ನ ಕರ್ಮ ಲಿಪ್ಯತೇ ನರೇ ||
- * ಪದ್ಯ ೨
- : ಕಾಯಕವು ಈ ಲೋಕದಲಿ ನಿಯಮ ;
- ಜಯಿಸು ನೀ ಬಾಳಿ ನೂರು ವರುಷ |
- ಆಯುವಿಕೆಗನ್ಯ ಮಾರ್ಗವೆ ಇಲ್ಲ ;
- ಬಯಕೆ ಇಲ್ಲದಗೆ ಕರ್ಮದಂಟಿಲ್ಲ ||
- (ಕಾಯಕ= ದುಡಿಮೆ; ಆಯುವಿಕೆಗೆ + ಅನ್ಯ ಮಾರ್ಗವೇ ಇಲ್ಲ; ಆಯುವಿಕೆಗೆ=ಆರಿಸಿಕೊಳ್ಳಲು;
ಬಯಕೆ ಇಲ್ಲದಗೆ=ಇಲ್ಲದವನಿಗೆ ಕರ್ಮದ ಅಂಟು ಇಲ್ಲ ; ಕರ್ಮ ಕೆಲಸ ಅಥವಾ ದುಡಿಮೆಯು ಈಲೋಕದಲ್ಲಿ ಮಾಡಲೇಬೇಕಾದ ನಿಯಮ - ಕರ್ತವ್ಯ; ಜಯಿಸು ನೀನು ಬಾಳಿ ನೂರು ವರ್ಷ; ಬಯಕೆ ಇಲ್ಲದವನಿಗೆ ಕರ್ಮದ ಅಂಟು ಇಲ್ಲ)
ಹೊಂದಿ, ಅತಿಯಾಸೆ ಪಡದೆ ಕರ್ತವ್ಯ ದೃಷ್ಠಿಯಿಂದ ಮಾಡಿದ ಕರ್ಮವು, ಮನುಷ್ಯನಿಗೆ ಅಂಟದು. ಕಾಯಕವನ್ನು ಬಿಟ್ಟು ಆಯ್ಕೆ ಮಾಡಿಕೊಳ್ಳಲು ಅನ್ಯ ಅಥವಾ ಬೇರೆ ಮಾರ್ಗವೇ ಇಲ್ಲ. (ಏಕೆಂದರೆ ಬದುಕಿರುವವನು ಕೆಲಸಮಾಡದೆ ಒಂದು ಕ್ಷಣವೂ ಬದುಕಿರಲು ಆಗುವುದಿಲ್ಲ. - ಭಗವದ್ಗೀತೆ.) ಆದ್ದರಿಂದ ಆಶಾವಾದಿಯಾಗಿ, ಕರ್ತವ್ಯ ಮಾಡುತ್ತಾ ಪರೋಪಕಾರಿಯಾಗಿ (ತ್ಯಕ್ತೇನ)ನೂರು ವರುಷ ಆರೋಗ್ಯವಂತನಾಗಿ ಬಾಳುವ ಪ್ರಯತ್ನ ಮಾಡಬೇಕು. ಈ ಬಾಳಿಗೆ ಅರ್ಥವಿಲ್ಲವೆಂದುನಿರಾಶೆ ಸಲ್ಲದು.
- ಸಂಪ್ರದಾಯಿಕ ಅರ್ಥ:
ಕಾಯಕ ಅಥವಾ ಕರ್ಮ ಎಂದರೆ ಯಜ್ಞ , ಧಾರ್ಮಿಕ ಕ್ರಿಯೆ.
- ಆದರೆ ಸಂಸಾರಿಕರಿಗೆ-ಗೃಹಸ್ತರಿಗೆ, ಜೀವನ ನಿರ್ವಹಣೆಗೆ ಅಗತ್ಯವಾದ ಎಲ್ಲಾ ಕರ್ಮಗಳನ್ನೂ ಎಂದು
ಕರ್ಮ ಎಂಬ ಪದಕ್ಕೆ ಅರ್ಥ ಮಾಡುವುದೇ ಸರಿ. ಭಗವದ್ಗೀತೆ ಯಲ್ಲಿ ಎಲ್ಲಾ ಕ್ರಿಯೆಗಳೂ ಕರ್ಮ ಎಂದೂ ಇದೆ. (ಮೂಲದಲ್ಲಿ, ಇಹ ಕರ್ಮಾಣಿ ಈ ಲೋಕದ ಕರ್ಮಗಳನ್ನು ಎಂದು ಹೇಳಿದೆ. ಈ ಜಗತ್ತಿನಲ್ಲಿ ಬದುಕಿರಲು ಬೇಕಾದ ಎಲ್ಲಾ ಕರ್ಮಗಳು ಎಂದರೆ ದುಡಿಮೆ ಮತ್ತು ಇತರೆ ಕಾರ್ಯಗಳು )
ಮಂತ್ರ ೩: [ಬದಲಾಯಿಸಿ]
- ಅಸುರ್ಯಾ ನಾಮ ತೇ ಲೋಕಾ|
- ಅಂಧೇನ ತಮಸಾSSವೃತಾಃ |
- ತಾಂಸ್ತೇ ಪ್ರೇತ್ಯಾಭಿಗಚ್ಛಂತಿ|
- ಯೇ ಕೇ ಆತ್ಮ ಹನೋ ಜನಾಃ ||
- ಪದ್ಯ ೩:
- ಅಜ್ಞಾನ ತುಂಬಿರುವ |
- ಕತ್ತಲೆಯ ಲೋಕಕ್ಕೆ |
- ತಿರುತಿರುಗಿ ಬರುತಿಹರು|
- ಅರಿವಿರದ ಆತ್ಮ ಹನರು ||
- (ಅಜ್ಞಾನವು ತುಂಬಿರುವ ಕತ್ತಲೆಯ ಲೋಕಕ್ಕೆ ತರುತಿರುಗಿ - ಪುನಃ ಪನಃ ಬರುತ ಇಹರು ; ಬರುತ್ತಿರುವರು
- ಅರಿವು+ಇರದ ಆತ್ಮ ಹನರು - ಕೊಂದವರು)
- ಮೇಲೆ ಹೇಳಿದ ಕರ್ಮಯೋಗದ ರಹಸ್ಯವನ್ನು ಅರಿಯದವರು ಪನಃ ಪನಃ ಜನ್ಮವೆತ್ತಿ ಈ
ಲೋಕಕ್ಕೆ ಮರಳುತ್ತಾರೆ. ಆತ್ಮ ವಿಚಾರ ಮಾಡಿ ಪರಮಾತ್ಮ ತತ್ವವನ್ನು ಅರಿಯದಿರುವುದು ಆತ್ಮ ಹತ್ಯೆಯನ್ನು ಮಾಡಿಕೊಂಡಂತೆ ಎನ್ನುವುದು ಅಭಿಪ್ರಾಯ. ಆತ್ಮವನ್ನು ಯಾರೂ ಕೊಲ್ಲಲು ಸಾಧ್ಯವಿಲ್ಲ.
- ಈ ಎರಡು ಮಂತ್ರಗಳಲ್ಲಿ ಜೀವನ ದರ್ಶನದ ಸಾರಾಂಶವನ್ನು ಹೇಳಿದೆ.
ನಂತರ ಆತ್ಮ ತತ್ವದ ವಿಚಾರ ಹೇಳಿದೆ.
ನೋಡಿ [ಬದಲಾಯಿಸಿ]
- ಲೇಖನ-ವ್ಯಾಖ್ಯಾನ : ( ಸದಸ್ಯ:Bschandrasgr/ಪರಿಚಯದಿಂದ ನಿರ್ದೇಶಿತ :- ಕಾಪಿ ರೈಟಿನಿಂದ ಮುಕ್ತ)
- ಈಶಾವಾಸ್ಯ ಉಪನಿಷತ್
- ವರ್ಗ: ಹಿಂದೂ ಧರ್ಮ | ಉಪನಿಷತ್ತುಗಳು