ಶಲ್ಯ
ವಿಕಿಪೀಡಿಯ ಇಂದ
ಮಾದ್ರ ದೇಶದ ರಾಜ, ನಕುಲ ಸಹದೇವರ ತಾಯಿ ಮಾದ್ರಿಯ ಅಣ್ಣ ಈ ಶಲ್ಯ. ಮಹಾಭಾರತದ ಮತ್ತೊಂದು ಪ್ರಮುಖ ಪಾತ್ರ. ಕುಂತಿಯ ಸ್ವಯಂವರದಲ್ಲಿ ಸೋತು ಪಾಂಡುವಿಗೆ ಕುಂತಿಯನ್ನು ಬಿಟ್ಟುಕೊಟ್ಟ. ನಂತರ ತನ್ನ ತಂಗಿ ಮಾದ್ರಿಯನ್ನು ಅವನಿಗೇ ಕೊಟ್ಟು ಮದುವೆ ಮಾಡಿದ.
ಮಹಾಭಾರತದ ಯುದ್ದ ಆರಂಭವಾದಗ ಪಾಂಡವರಿಗೆ ಸಹಾಯ ಮಾಡಲು ತನ್ನ ಅಪಾರ ಸೈನ್ಯದೊಡನೆ ಬರುತ್ತಿದ್ದಾಗ ದಾರಿಯಲ್ಲಿ ಧುರ್ಯೋಧನನ ಕುತಂತ್ರದಿಂದಾಗಿ ತನಗೆ ಸಿಕ್ಕ ಅತ್ಯುತ್ತಮ ಆಥಿತ್ಯವನ್ನು ಯುಧಿಷ್ಟೀರನ ಆಥಿತ್ಯವೆಂದು ತಪ್ಪಾಗಿ ತಿಳಿದು ಮಾತಿಗೆ ಸಿಲುಕಿ ಧುರ್ಯೋಧನನಿಗೆ ಸಹಾಯ ಮಾಡುವಂತಾಗುತ್ತದೆ. ಆದರೆ ಖಡ್ಗ ಹಿಡಿದು ಯುದ್ದ ಮಾಡದೆ ಕರ್ಣನ ರಥದ ಸಾರಥಿಯಾಗಲು ಮಾತ್ರ ಒಪ್ಪುತ್ತಾನೆ.