ನಾಗಾರ್ಜುನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಾಮ್ಯೆ ಲಿಂಗ್‌ ಸನ್ಯಾಸಿ ಮಂದಿರದಲ್ಲಿರುವ ನಾಗಾರ್ಜುನನ ಬಂಗಾರದ ಪ್ರತಿಮೆ
ಭಾರತದಲ್ಲಿನ ಕುಲುವಿಗೆ ಸಮೀಪದಲ್ಲಿರುವ ಟಿಬೆಟ್ಟಿನವರ ಸನ್ಯಾಸಿ ಮಂದಿರದಲ್ಲಿನ ನಾಗಾರ್ಜುನನ ಪ್ರತಿಮೆ.

ಆಚಾರ್ಯ ನಾಗಾರ್ಜುನ (ಹಿಂದಿ: नागा अर्जुन, ತೆಲುಗು: నాగార్జున, ಟಿಬೆಟನ್‌: ཀླུ་སྒྲུབ་ ಕ್ಲು ಸ್ಗ್ರಬ್‌) (ಸುಮಾರು 150 - 250 CE) ಓರ್ವ ಭಾರತೀಯ ದಾರ್ಶನಿಕನಾಗಿದ್ದ. ಈತ ಮಹಾಯಾನ ಬೌದ್ಧಮತಮಧ್ಯಮಕ ಶಾಲೆಯನ್ನು ಸಂಸ್ಥಾಪಿಸಿದ.

ಅವನ ಬರಹಗಳು ಮಧ್ಯಮಕ ಶಾಲೆಯ ರೂಪುಗೊಳ್ಳುವಿಕೆಗೆ ಆಧಾರಗಳಾಗಿದ್ದು, ಮೂರು ಪ್ರಕರಣ ಗ್ರಂಥ (ಸನ್‌ಲುನ್‌) ಶಾಲೆ ಎಂಬ ಹೆಸರಿನಡಿಯಲ್ಲಿ ಅದು ಚೀನಾಕ್ಕೆ ರವಾನಿಸಲ್ಪಟ್ಟಿತು. ಪ್ರಜ್ಞಾಪರಮಿತ ಸೂತ್ರಗಳ ತತ್ತ್ವಶಾಸ್ತ್ರವನ್ನು ಅಭಿವೃದ್ಧಿಪಡಿಸಿದ ಕೀರ್ತಿ ಅವನಿಗೆ ಸಲ್ಲುತ್ತದೆ. ನಳಂದದ ಬೌದ್ಧಮತೀಯ ವಿಶ್ವವಿದ್ಯಾಲಯದೊಂದಿಗೆ ಅವನಿಗೆ ನಿಕಟ ಒಡನಾಟವಿತ್ತು. ಬೌದ್ಧಮತದ ಜೋಡೋ ಶಿನ್ಷು ಶಾಖೆಯಲ್ಲಿ, ಅವನನ್ನು ಮೊದಲನೇ ಕುಲಜನಕ ಎಂದು ಪರಿಗಣಿಸಲಾಗಿದೆ.

ಐತಿಹಾಸಿಕ ಪ್ರಾಮುಖ್ಯತೆಯ ನಾಗಾರ್ಜುನನ ವಾಸ್ತವಿಕ ಜೀವನದ ಕುರಿತು ಹೆಚ್ಚೇನೂ ತಿಳಿದುಬಂದಿಲ್ಲ. ನಾಗಾರ್ಜುನನ ಎರಡು ಅತ್ಯಂತ ವ್ಯಾಪಕ ಜೀವನ ಚರಿತ್ರೆಗಳ ಪೈಕಿ ಒಂದು ಚೀನೀ ಭಾಷೆಯಲ್ಲಿದ್ದರೆ, ಮತ್ತೊಂದು ಟಿಬೆಟ್ಟಿನ ಭಾಷೆಯಲ್ಲಿದೆ. ಅವನ ಜೀವನದ ಅನೇಕ ಶತಮಾನಗಳ ನಂತರ ಬರೆಯಲ್ಪಟ್ಟ ಈ ಜೀವನಚರಿತ್ರೆಗಳು, ಐತಿಹಾಸಿಕವಾಗಿ ನಂಬಿಕೆಗೆ ಅರ್ಹವಲ್ಲ ಎಂದು ಕೆಲವರು ಅಭಿಪ್ರಾಯಪಟ್ಟಿರುವ ವಿಷಯ ಸಾಮಗ್ರಿಯನ್ನು ಒಳಗೊಂಡಿವೆ. ನಾಗಾರ್ಜುನ ಓರ್ವ ಬ್ರಾಹ್ಮಣನಾಗಿ[೧] ಹುಟ್ಟಿದ. ಪ್ರಾಯಶಃ ಭಾರತದ ದಕ್ಷಿಣ ಭಾಗದ ಆಂಧ್ರ ವಲಯದಲ್ಲಿ, ಪ್ರಾಯಶಃ ಒಂದು ಮೇಲ್ವರ್ಗದ ಬ್ರಾಹ್ಮಣ ಕುಟುಂಬದಲ್ಲಿ ಅವನ ಜನನವಾಯಿತು. ಇದು ಅವನ ಕಾಲದಲ್ಲಿದ್ದ ವೇದಗಳೊಂದಿಗಿನ ಹೊಂದಿದ್ದ ಧಾರ್ಮಿಕ ನಿಷ್ಠೆಯನ್ನು ಸೂಚಿಸುತ್ತದೆ.[೨]

ಇತಿಹಾಸ[ಬದಲಾಯಿಸಿ]

ನಾಗಾರ್ಜುನನ ಕುರಿತು ಅನೇಕ ದಂತಕಥೆಗಳು ಅಸ್ತಿತ್ವದಲ್ಲಿವೆಯಾದರೂ, ಅವನ ಜೀವನದ ಕುರಿತಾದ ಹೆಚ್ಚು ವಿವರಗಳು ಲಭ್ಯವಿಲ್ಲ. ದಕ್ಷಿಣದ ಭಾರತದಲ್ಲಿನ ಆಂಧ್ರ ಪ್ರದೇಶಗುಂಟೂರು ಜಿಲ್ಲೆಯಲ್ಲಿನ ವರ್ತಮಾನ ಕಾಲದ ನಾಗಾರ್ಜುನ ಸಾಗರದಲ್ಲಿನ (నాగార్జునసాగర్) ನಾಗಾರ್ಜುನಕೊಂಡ (నాగార్జునకొండ) ಪಟ್ಟಣದ ಸಮೀಪ ಅವನ ಜನನವಾಯಿತು.[ಸಾಕ್ಷ್ಯಾಧಾರ ಬೇಕಾಗಿದೆ] ಕುಮಾರಜೀವನಂಥ ಸಾಂಪ್ರದಾಯಿಕ ಜೀವನಚರಿತ್ರೆಕಾರರು ಮತ್ತು ಇತಿಹಾಸಕಾರರ ಪ್ರಕಾರ, ಆತ ಒಂದು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದನಾದರೂ ಕಾಲಾನಂತರದಲ್ಲಿ ಬೌದ್ಧಮತಕ್ಕೆ ಮತಾಂತರಗೊಂಡ. ಪಾಲಿ ಅಥವಾ ಬೌದ್ಧಮತೀಯ ಸಂಕರ ಸಂಸ್ಕೃತ ಭಾಷೆಯಲ್ಲಿ ಬರೆಯುವುದಕ್ಕೆ ಬದಲಾಗಿ ರೂಢಿಗತ ಶಿಷ್ಟ ಸಂಸ್ಕೃತ ಭಾಷೆಯಲ್ಲಿ ಬರೆದಿರುವ ಅತಿ ಹಿಂದಿನ ಗಮನಾರ್ಹ ಬೌದ್ಧಮತೀಯ ಚಿಂತನಾಕರರ ಪೈಕಿ ಇವನೂ ಒಬ್ಬನಾಗಿರುವುದಕ್ಕೆ ಇದು ಕಾರಣವಾಗಿರಬಹುದು.

ನಿಕಾಯ ಶಾಲೆಯ ಅನೇಕ ತತ್ತ್ವಚಿಂತನೆಗಳು ಮತ್ತು ಆಗಷ್ಟೇ ಹೊರಹೊಮ್ಮುತ್ತಿದ್ದ ಮಹಾಯಾನ ಸಂಪ್ರದಾಯದೊಂದಿಗೆ ನಾಗಾರ್ಜುನನು ಪರಿಶ್ರಮವನ್ನು ಹೊಂದಿದ್ದ ಎಂಬುದು ಅವನ ಬರಹಗಳನ್ನು ಅಧ್ಯಯನ ಮಾಡುವುದರಿಂದ ಸ್ಪಷ್ಟವಾಗುತ್ತದೆ. ಆದಾಗ್ಯೂ, ಅವನ ಸದರಿ ಬರಹಗಳ ಪೈಕಿ ಅನೇಕ ಭಾಗವು ಸದ್ಯಕ್ಕೆ ಕಳೆದುಹೋಗಿರುವುದರಿಂದ, ಒಂದು ನಿರ್ದಿಷ್ಟ ನಿಕಾಯ ಶಾಲೆಯೊಂದಿಗಿನ ಅವನ ಮೂಲವನ್ನು ಹುಡುಕುವುದು ಕಷ್ಟವಾಗುತ್ತದೆ. ಒಂದು ವೇಳೆ, ಅತ್ಯಂತ ಸಾರ್ವತ್ರಿಕವಾಗಿ ಅಥವಾ ಸಾಮಾನ್ಯವಾಗಿ ಸ್ವೀಕರಿಸಲ್ಪಟ್ಟಿರುವ ಪಠ್ಯಗಳ (ಅಂದರೆ ಕ್ರಿಶ್ಚಿಯನ್‌ ಲಿಂಡ್‌ಟ್ನರ್‌ ಎಂಬಾತ ನೀಡಿರುವ ಮಾಹಿತಿಯ) ವಿಷಯ-ಲಕ್ಷಣಗಳನ್ನು ಪರಿಗಣಿಸುವುದೇ ಆದಲ್ಲಿ, ಸ್ಪಷ್ಟವಾಗಿ ಅವನೊಬ್ಬ ಮಹಾಯಾನ ಪಂಥದ ಅನುಯಾಯಿ ಎನ್ನಬಹುದು. ಆದರೆ ಅವನ ತತ್ತ್ವಶಾಸ್ತ್ರವು ಮಹಾಯಾನ-ಪಂಥದ್ದಲ್ಲದ ಕಟ್ಟಳೆಗೆ ನಿಷ್ಠವಾಗಿರುವಂತೆ ತೋರುತ್ತದೆ, ಮತ್ತು ಮಹಾಯಾನದ ಪಠ್ಯಗಳಿಗೆ ಸಂಬಂಧಿಸಿದಂತೆ ಅವನು ಸುಸ್ಪಷ್ಟವಾದ ಉಲ್ಲೇಖಗಳನ್ನು ಮಾಡುತ್ತಾನಾದರೂ, ಕಟ್ಟಳೆಯಿಂದ ವ್ಯವಸ್ಥೆಗೊಳಿಸಲ್ಪಟ್ಟ ಗುಣ-ಲಕ್ಷಣಗಳ ಒಳಗೇ ನಿಲ್ಲುವಲ್ಲಿ ಅವನು ಯಾವಾಗಲೂ ಎಚ್ಚರಿಕೆಯನ್ನು ವಹಿಸುತ್ತಾನೆ.

ಕಟ್ಟಳೆಯಲ್ಲಿ ದಾಖಲಾಗಿರುವ ರೀತಿಯಲ್ಲಿ ಬುದ್ಧನ ಸಿದ್ಧಾಂತದ ಒಂದು ಏಕನಿಷ್ಠೆಯ ವ್ಯಾಖ್ಯಾನವನ್ನು ಸಾಧಿಸುವ ಒಂದು ಬಯಕೆಯಿಂದ ನಾಗಾರ್ಜುನನು ತನ್ನ ಪ್ರತಿಪಾದನೆಗಳನ್ನು ಮಾಡಿರಬಹುದು. ನಾಗಾರ್ಜುನ ದೃಷ್ಟಿಯಲ್ಲಿ ಬುದ್ಧ ಕೇವಲ ಒಬ್ಬ ಹರಿಕಾರ ಅಥವಾ ಪ್ರವಾದಿ ಮಾತ್ರವೇ ಆಗಿರಲಿಲ್ಲ, ಬದಲಿಗೆ ಮಧ್ಯಮಕ ವ್ಯವಸ್ಥೆಯ ಸಾಕ್ಷಾತ್‌ ಸಂಸ್ಥಾಪಕನಾಗಿದ್ದ.[೩] ನಾಗಾರ್ಜುನನನ್ನು ಮಧ್ಯಮ-ಮಾರ್ಗದ ಓರ್ವ ಪರಿಣಿತನಂತೆ ಹಾಗೂ ಬುದ್ಧನ ತತ್ತ್ವಶಾಸ್ತ್ರದ ಮೂಲ ಮಾದರಿಗಳ ಓರ್ವ ಪುನರುಜ್ಜೀವಕನಂತೆ ನೋಡುವ ಡೇವಿಡ್‌ ಕಲುಪಹಾನಾ, ಅವನನ್ನು ಮೊಗ್ಗಾಲಿಪುಟ್ಟಾ-ಟಿಸ್ಸಾನ ಓರ್ವ ಉತ್ತರಾಧಿಕಾರಿಯಾಗಿ ಪರಿಗಣಿಸುತ್ತಾನೆ.[೪]

ಬರಹಗಳು[ಬದಲಾಯಿಸಿ]

ನಾಗಾರ್ಜುನನಿಗೆ ಸಂಬಂಧಿಸಿದಂತೆ ಅಸಂಖ್ಯಾತ ಪ್ರಭಾವಶಾಲೀ ಪಠ್ಯಗಳು ಲಭ್ಯವಿವೆಯಾದರೂ, ಅವುಗಳಲ್ಲಿ ಬಹುಪಾಲು ಬರಹಗಳು ನಂತರದ ಲೇಖಕರಿಂದ ಬರೆಯಲ್ಪಟ್ಟವುಗಳಾಗಿವೆ. ಎಲ್ಲಾ ವಿದ್ವಾಂಸರೂ ಸಮ್ಮತಿಸುವ ಏಕೈಕ ಕೃತಿಯೆಂದರೆ, ಅದು ನಾಗಾರ್ಜುನ ಬರೆದ ಮೂಲಮಧ್ಯಮಕಕಾರಿಕಾ (ಮಧ್ಯಮಾರ್ಗದ ಕುರಿತಾದ ಮೂಲಭೂತ ಶ್ಲೋಕಗಳು) ಮಾತ್ರ. ಅವನ ಆಲೋಚನೆಯ ಸಾರಭೂತ ಅಂಶಗಳು ಈ ಕೃತಿಯ ಇಪ್ಪತ್ತೇಳು ಕಿರು ಅಧ್ಯಾಯಗಳಲ್ಲಿ ಬಿಂಬಿತವಾಗಿವೆ. ಲಿಂಡ್‌ಟ್ನರ್‌[೫] ಪ್ರಕಾರ, ಖಚಿತವಾಗಿ ನಾಗಾರ್ಜುನನಿಂದಲೇ ಬರೆಯಲ್ಪಟ್ಟಿರುವ ಕೃತಿಗಳೆಂದರೆ:

  • ಮೂಲಮಧ್ಯಮಕ-ಕಾರಿಕಾ (ಮಧ್ಯ ಮಾರ್ಗದ ಮೂಲಭೂತ ಶ್ಲೋಕಗಳು)
  • ಶೂನ್ಯತಾಸಪ್ತತಿ (ಶೂನ್ಯಸ್ಥಿತಿಯ ಕುರಿತಾದ ಎಪ್ಪತ್ತು ಶ್ಲೋಕಗಳು)
  • ವಿಗ್ರಹವ್ಯಾವರ್ತನೀ (ವಿವಾದಗಳ ಅಂತ್ಯ)
  • Vaidalyaprakaraṇa (ವರ್ಗವ್ಯವಸ್ಥೆಗಳನ್ನು ಧೂಳೀಪಟಮಾಡುವಿಕೆ)
  • ವ್ಯವಹಾರಸಿದ್ಧಿ (ರೂಢಿಗತ ಆಚರಣೆಯ ಪುರಾವೆ)
  • Yuktiṣāṣṭika (ತಾರ್ಕಿಕ ಪ್ರಕ್ರಿಯೆಯ ಮೇಲಿನ ಅರವತ್ತು ಶ್ಲೋಕಗಳು)
  • Catuḥstava (ಪರಿಪೂರ್ಣ ವಾಸ್ತವತೆಗೊಂದು ಸ್ತೋತ್ರಪಾಠ)
  • ರತ್ನಾವಳಿ (ಅಮೂಲ್ಯವಾದ ಹಾರ)
  • Pratītyasamutpādahṝdayakārika (ಪರಾವಲಂಬಿ ಹುಟ್ಟುವಳಿಯ ಘಟಕಗಳು)
  • ಸೂತ್ರಸಮುಚ್ಚಯ
  • Bodhicittavivaraṇa (ಸಾಕ್ಷಾತ್ಕಾರಗೊಂಡ ಮನಸ್ಸಿನ ಪ್ರತಿಪಾದನೆ)
  • Suhṛllekha (ಓರ್ವ ಉತ್ತಮ ಸ್ನೇಹಿತನಿಗೆ)
  • Bodhisaṃbhāra (ಜ್ಞಾನೋದಯದ ಅವಶ್ಯಕತೆಗಳು)

ನಾಗಾರ್ಜುನನಿಗೆ ಸಂಬಂಧಿಸಿದ ಇತರ ಕೃತಿಗಳಿವೆಯಾದರೂ, ಅವುಗಳ ಪೈಕಿ ಕೆಲವು ಸಾಚಾ ಆಗಿರಬಹುದು ಮತ್ತು ಕೆಲವು ಅಲ್ಲದಿರಬಹುದು. ನಿರ್ದಿಷ್ಟವಾಗಿ ಹೇಳುವುದಾದರೆ, ಬೌದ್ಧಮತಕ್ಕೆ ಸಂಬಂಧಿಸಿದ ಹಲವಾರು ಪ್ರಮುಖ ಗೂಡಾರ್ಥದ ಕೃತಿಗಳು (ಅವುಗಳಲ್ಲಿ ಅತ್ಯಂತ ಗಮನಾರ್ಹವಾದವುಗಳೆಂದರೆ ಪಂಚಕ್ರಮ ಅಥವಾ "ಐದು ಹಂತಗಳು") ನಾಗಾರ್ಜುನ ಮತ್ತು ಅವನ ಅನುಯಾಯಿಗಳಿಗೆ ಸೇರಿದವು ಎನ್ನಲಾಗಿದೆ. ಸಮಕಾಲೀನ ಸಂಶೋಧನೆಯು ಸೂಚಿಸುವ ಪ್ರಕಾರ, ಬೌದ್ಧಮತೀಯ ಇತಿಹಾಸದಲ್ಲಿನ ಒಂದು ಗಣನೀಯವಾದ ನಂತರದ ಅವಧಿಗೆ (ಎಂಟನೇ ಶತಮಾನದ ಅಂತ್ಯ ಅಥವಾ ಒಂಬತ್ತನೇ ಶತಮಾನದ ಆರಂಭಿಕ ಕಾಲ) ಈ ಕೃತಿಗಳ ಕಾಲವನ್ನು ನಿರ್ಣಯಿಸಬಹುದಾಗಿದೆ. ಆದರೆ ಅವನ್ನು ಒಂದು ಭಾಗವಾಗಿ ಅಂತರ್ಗತಗೊಳಿಸಿಕೊಂಡಿರುವ ಸಂಪ್ರದಾಯವು ಸಮರ್ಥಿಸುವ ಪ್ರಕಾರ, ಅವು ಮಾಧ್ಯಮಿಕ ನಾಗಾರ್ಜುನ ಮತ್ತು ಅವನ ಪಂಥದ ಕೃತಿಗಳಾಗಿವೆ. ಸಾಂಪ್ರದಾಯಿಕ ಇತಿಹಾಸಕಾರರು (ಉದಾಹರಣೆಗೆ, 17ನೇ ಶತಮಾನದಲ್ಲಿದ್ದ ಟಿಬೆಟ್ಟಿನ ತಾರಾನಾಥ) ಇದರಲ್ಲಿ ಸೇರಿಕೊಂಡಿರುವ ಕಾಲಗಣನ ಶಾಸ್ತ್ರದ ತೊಡಕುಗಳನ್ನು ಗಮನಕ್ಕೆ ತಂದುಕೊಂಡು, ಕಾಲದ ತಪ್ಪೆಣಿಕೆಯಾಗಿರಬಹುದೆಂದು ಪರಿಗಣಿಸುತ್ತಾರೆ. ಆಧ್ಯಾತ್ಮಿಕತೆಗೆ ಸಂಬಂಧಿಸಿದ ದಿವ್ಯಜ್ಞಾನ ಅಥವಾ ಅತೀಂದ್ರಿಯಜ್ಞಾನದ ಮೂಲಕದ ನಂತರದ ಬರಹಗಳ ಹಬ್ಬುವಿಕೆಯಂಥ ಸಿದ್ಧಾಂತಗಳ ಒಂದು ಬಹುಮುಖತೆಯ ಮೂಲಕ ಅವರು ಈ ನಿರ್ಧಾರಕ್ಕೆ ಬರುತ್ತಾರೆ. ಈ ಸಂಪ್ರದಾಯ, ಇದರ ಸಾಹಿತ್ಯ, ಹಾಗೂ ಇತಿಹಾಸ ಲೇಖನವನ್ನು ವೆಡೆಮೆಯೆರ್‌ 2007ನಲ್ಲಿ ಕಾಣಬಹುದು.

ಲಿಂಡ್‌ಟ್ನರ್‌ ಪರಿಗಣಿಸುವ ಪ್ರಕಾರ, ಬೃಹತ್‌ ಪ್ರಜ್ಞಾಪರಮಿತದ ಮೇಲಿನ ಒಂದು ಬೃಹತ್‌ ವ್ಯಾಖ್ಯಾನವಾದ ಮಹಾಪ್ರಜ್ಞಾಪರಮಿತೋಪದೇಶ ಎಂಬ ಕೃತಿಯು ನಾಗಾರ್ಜುನನ ಒಂದು ಸಾಚಾ ಕೃತಿಯಲ್ಲ. ಕುಮಾರಜೀವ ಎಂಬಾತನು ಅನುವಾದಿಸಿರುವ ಚೀನೀ ಭಾಷೆಯಲ್ಲಿನ ಒಂದು ಭಾಷಾಂತರದಲ್ಲಿ ಮಾತ್ರವೇ ಇದು ಚಾಲ್ತಿಯಲ್ಲಿದೆ. ಇದು ನಾಗಾರ್ಜುನನ ಕೃತಿಯೇ, ಅಥವಾ ಬೇರೆ ಯಾರದ್ದಾದರೂ ಕೃತಿಯೇ ಎಂಬುದರ ಬಗ್ಗೆ ಹೇರಳವಾಗಿ ಚರ್ಚೆಗಳು ನಡೆಯುತ್ತಿವೆ. ಉಪದೇಶದ ಮೂರನೇ ಒಂದು ಭಾಗವನ್ನು ಫ್ರೆಂಚ್‌ ಭಾಷೆಗೆ ಅನುವಾದಿಸಿದ ಎಟಿಯೆನ್ನೆ ಲ್ಯಾಮೊಟ್ಟಿ ಎಂಬಾತ ಹೇಳುವ ಪ್ರಕಾರ, ಇದು ಸರ್ವಾಸ್ತಿವಾದ ಪಂಥದ ಓರ್ವ ಉತ್ತರಭಾರತೀಯ ಭಿಕ್ಷುವಿನ ಕೃತಿಯಾಗಿದ್ದು, ಈ ಭಿಕ್ಷುವು ನಂತರದಲ್ಲಿ ಮಹಾಯಾನ ಪಂಥಕ್ಕೆ ಮತಾಂತರಗೊಂಡ. ಯಿನ್‌ ಷುನ್‌ ಎಂಬ ಚೀನಾದ ವಿದ್ವಾಂಸ-ಸನ್ಯಾಸಿ ಅಭಿಪ್ರಾಯಪಡುವ ಪ್ರಕಾರ, ಇದು ಓರ್ವ ದಕ್ಷಿಣ ಭಾರತೀಯನ ಕೃತಿಯಾಗಿತ್ತು, ಮತ್ತು ನಾಗಾರ್ಜುನನೇ ಅದರ ಲೇಖಕನಾಗಿರುವ ಸಂಭವವೇ ಹೆಚ್ಚಾಗಿತ್ತು. ವಾಸ್ತವವಾಗಿ ಈ ಎರಡೂ ಅಭಿಪ್ರಾಯಗಳು ಒಂದಕ್ಕೊಂದು ವಿರುದ್ಧವಾಗೇನೂ ಇಲ್ಲ, ಮತ್ತು ಓರ್ವ ದಕ್ಷಿಣ ಭಾರತೀಯನಾದ ನಾಗಾರ್ಜುನನು ಉತ್ತರ ಭಾಗದ ಸರ್ವಾಸ್ತಿವಾದದಲ್ಲಿ ಉತ್ತಮವಾಗಿ ಅಧ್ಯಯನ ಮಾಡಿರಲೂ ಸಾಧ್ಯವಿದೆ. ಇತರರು ಸೂಚಿಸಿರುವಂತೆ ಈ ಕೃತಿಯು ಕುಮಾರಜೀವನಿಂದ ರಚಿಸಲ್ಪಟ್ಟಿದೆ ಎಂದು ಮೇಲಿನ ಇಬ್ಬರಿಗೂ ಅನಿಸಿಲ್ಲ.

ತತ್ವಜ್ಞಾನ[ಬದಲಾಯಿಸಿ]

ಶೂನ್ಯತ್ವ, ಅಥವಾ "ಶೂನ್ಯಸ್ಥಿತಿ"ಯ ಪರಿಕಲ್ಪನೆಯ ಬಳಕೆಯಲ್ಲಿ ಬೌದ್ಧಮತೀಯ ತತ್ತ್ವಶಾಸ್ತ್ರದೆಡೆಗಿನ ನಾಗಾರ್ಜುನನ ಪ್ರಮುಖ ಕೊಡುಗೆ ಕಂಡುಬರುತ್ತದೆ. ಈ ಪರಿಕಲ್ಪನೆಯು ಸರ್ವಸ್ತಿವಾದ ಮತ್ತು ಸೌತ್ರಾಂತಿಕಾಗಳ (ಮಹಾಯಾನ ಪಂಥದ್ದಲ್ಲದ ಅಪ್ರಚಲಿತ ಪಂಥಗಳು) ತತ್ತ್ವಮೀಮಾಂಸೆಯನ್ನು ನಿರಾಕರಿಸಲು ಇತರ ಪ್ರಮುಖ ಬೌದ್ಧಮತೀಯ ಸಿದ್ಧಾಂತಗಳನ್ನು, ನಿರ್ದಿಷ್ಟವಾಗಿ ಹೇಳುವುದಾದರೆ ಅನಾತ್ಮನ್‌ (ತಾನು ಎಂಬುದಿಲ್ಲದ) ಮತ್ತು ಪ್ರತೀತ್ಯಸಮುತ್ಪಾದಗಳನ್ನು (ಪರಾವಲಂಬಿ ಉಪಕ್ರಮ) ಒಗ್ಗೂಡಿಸುತ್ತದೆ. ಆರಂಭಿಕ ಪಠ್ಯಗಳಲ್ಲಿ ಬುದ್ಧನಿಗೆ ಸಂಬಂಧಿಸಿ ಇರುವಂತೆ, ನಾಗಾರ್ಜುನನ ದೃಷ್ಟಿಯಲ್ಲಿ ಇದು ಕೇವಲ "ನಿಸ್ವಾರ್ಥದಿಂದಿರುವ" ಅಥವಾ ವಾಸ್ತವಿಕವಾಗಿಲ್ಲದ ಚೇತನಾತ್ಮಕ ಜೀವಿಗಳು ಅಂತಲ್ಲ; ಎಲ್ಲಾ ಅನುಭವವೇದ್ಯ ಸಂಗತಿಗಳೂ ಯಾವುದೇ ಸ್ವಭಾವವಿಲ್ಲದೆಯೇ ಇದ್ದು, ಅಕ್ಷರಶಃ "ಸ್ವಂತ-ಇರುವಿಕೆ" ಅಥವಾ "ಸ್ವಯಂ-ಸ್ವಭಾವ"ದ ಸ್ವರೂಪದಲ್ಲಿರುತ್ತವೆ, ಮತ್ತು ತನ್ಮೂಲಕ ಆಧಾರವಾಗಿರುವ ಯಾವುದೇ ಸಾರವಿಲ್ಲದೆ ಇರುತ್ತವೆ; ಅವು ಸ್ವತಂತ್ರವಾಗಿ ಅಸ್ತಿತ್ವದಲ್ಲಿರುವುದರ ಶೂನ್ಯ ಸ್ಥಿತಿಯಾಗಿರುತ್ತವೆ; ಈ ರೀತಿಯಾಗಿ, ಆ ಸಮಯದಲ್ಲಿ ಚಲಾವಣೆಯಲ್ಲಿದ್ದ ಸ್ವಭಾವದ ಅಸಾಂಪ್ರದಾಯಿಕ ಸಿದ್ಧಾಂತಗಳು, ಆರಂಭಿಕ ಬೌದ್ಧಮತದ ಸಿದ್ಧಾಂತಗಳ ಆಧಾರದ ಮೇಲೆ ನಿರಾಕರಿಸಲ್ಪಟ್ಟವು. ಇದು ಹೀಗಾಗಲು ಕಾರಣವೇನೆಂದರೆ, ಎಲ್ಲಾ ವಸ್ತುಗಳೂ ಪರಾವಲಂಬಿಗಳಾಗಿಯೇ ಹುಟ್ಟಿಕೊಳ್ಳುತ್ತವೆಯೇ ಹೊರತು, ತಮ್ಮ ಸ್ವಂತ ಶಕ್ತಿಯಿಂದಲ್ಲ. ಅಂದರೆ ಪರಿಸ್ಥಿತಿಗಳ ಮೇಲೆ ಅವಲಂಬಿಸುವ ಮೂಲಕ ತಮ್ಮ ಆಗಮನವು ಇರುವಿಕೆಗೆ ಪ್ರತಿಯಾಗಿ ಅಸ್ತಿತ್ವದೊಳಗೆ ತಲುಪಲು ಕಾರಣವಾಗುತ್ತವೆ. ಎರಡು-ಸತ್ಯಗಳ ಸಿದ್ಧಾಂತದ ಅಭಿವೃದ್ಧಿಯಲ್ಲಿಯೂ ಸಹ ನಾಗಾರ್ಜುನನು ನಿಮಿತ್ತನಾಗಿದ್ದ. ಬೌದ್ಧಮತೀಯ ಬೋಧನೆಯಲ್ಲಿ ಸತ್ಯದ ಎರಡು ಮಟ್ಟಗಳು ಅಸ್ತಿತ್ವದಲ್ಲಿದ್ದವು ಎಂಬುದನ್ನು ಇದು ಸಮರ್ಥಿಸುತ್ತದೆ. ಒಂದನೆಯದು ಪ್ರತ್ಯಕ್ಷವಾಗಿ (ಅಂತಿಮವಾಗಿ) ನಿಜವಾಗಿರುವಂಥದ್ದಾದರೆ, ಎರಡನೆಯದು ಕೇವಲ ಸಾಂಪ್ರದಾಯಿಕವಾಗಿ ಅಥವಾ ಸಾಧನವಾಗಿ ನಿಜವಾಗಿರುವಂಥಾದ್ದಾಗಿದೆ. ನಂತರದ ಮಹಾಯಾನ ಪಂಥದ ಬರವಣಿಗೆಗಳಲ್ಲಿ ಇದನ್ನು ಉಪಾಯ ಎಂದು ಸಾಮಾನ್ಯವಾಗಿ ಕರೆಯಲಾಗಿದೆ. ನೀತಾರ್ಥ (ಸ್ಪಷ್ಟ) ಮತ್ತು ನೇಯಾರ್ಥ (ಅಸ್ಪಷ್ಟ) ಎಂಬ ಪದಗಳನ್ನು ಪ್ರತ್ಯೇಕಿಸುವ ಕಚ್ಚಾಯನಗೊತ್ತ ಸುತ್ತದಲ್ಲಿ ಕಂಡುಬಂದಿರುವ ಈ ಸಿದ್ಧಾಂತದ ಒಂದು ಆರಂಭಿಕ ರೂಪಾಂತರದ ಮೇಲೆ ನಾಗಾರ್ಜುನ ತನ್ನ ಸಮರ್ಥನೆಯನ್ನು ಮಂಡಿಸಿದ -

ಒಟ್ಟಾರೆಯಾಗಿ ಕಚ್ಚಾಯನವಾಗಿರುವ ಈ ಪ್ರಪಂಚಕ್ಕೆ ಅಸ್ತಿತ್ವದ ಮತ್ತು ಅಸ್ತಿತ್ವವಿಲ್ಲದಿರುವುದನ್ನು ಹೊಂದಿದ ಒಂದು ಧ್ರುವೀಯತೆಯ ಬೆಂಬಲವಿದೆ. ಆದರೆ, ವಿಶ್ವವು ಸರಿಯಾದ ಒಳನೋಟದೊಂದಿಗೆ ಇರುವಂತೆ ವಾಸ್ತವವಾಗಿ ಅದರ ಹುಟ್ಟುವಿಕೆಯನ್ನು ಯಾರಾದರೂ ಓದಿದಾಗ, ವಿಶ್ವಕ್ಕೆ ಸಂಬಂಧಿಸಿದಂತಿರುವ 'ಅಸ್ತಿತ್ವವಿಲ್ಲದಿರುವಿಕೆಯು' ಒಬ್ಬರಿಗೆ ಸಂಭವಿಸುವುದಿಲ್ಲ. ವಿಶ್ವವು ಸರಿಯಾದ ಒಳನೋಟದೊಂದಿಗೆ ಇರುವಂತೆ ವಾಸ್ತವಿಕವಾಗಿ ಅದರ ಕೊನೆಗಾಣುವಿಕೆಯನ್ನು ಯಾರಾದರೂ ಓದಿದಾಗ, ವಿಶ್ವಕ್ಕೆ ಸಂಬಂಧಿಸಿದಂತಿರುವ 'ಅಸ್ತಿತ್ವ'ವು ಒಬ್ಬರಿಗೆ ಸಂಭವಿಸುವುದಿಲ್ಲ.
"ಒಟ್ಟಾರೆಯಾಗಿ ಕಚ್ಚಾಯನವಾಗಿರುವ ಈ ಪ್ರಪಂಚವು, ಸೇರಿರುವಿಕೆಗಳು, ಅಂಟಿಕೊಂಡಿರುವಿಕೆಗಳು (ಜೀವನೋಪಾಯಗಳು), ಮತ್ತು ಪೂರ್ವಗ್ರಹಗಳೊಂದಿಗಿನ ಪ್ರಭಾವದಲ್ಲಿರುತ್ತದೆ. ಇದರಂಥ ಒಬ್ಬರು ಈ ಸೇರಿರುವಿಕೆಗಳು, ಅಂಟಿಕೊಂಡಿರುವಿಕೆಗಳು, ಅರಿವಿನ ಬೇರೂರಿಸುವಿಕೆಗಳು, ಪೂರ್ವಗ್ರಹಗಳು, ಅಥವಾ ಗೀಳುಗಳೊಂದಿಗೆ ಸೇರಿಕೊಳ್ಳುವುದಿಲ್ಲ ಅಥವಾ ಅವುಗಳಿಗೆ ಅಂಟಿಕೊಳ್ಳುವುದಿಲ್ಲ; ಅಥವಾ 'ನಾನೇ' ಎಂಬುದರ ಮೇಲೆ ಆತ ಪರಿವರ್ತನೆಯಾಗುವುದಿಲ್ಲ. ಕೇವಲ ಒತ್ತಡವು, ಅದು ಹುಟ್ಟಿಕೊಳ್ಳುತ್ತಿರುವಾಗ, ಅದು ಮೇಲೇಳುತ್ತಿದೆ ಎಂಬ ಬಗ್ಗೆ ಅವನಿಗೆ ಯಾವುದೇ ಅನಿಶ್ಚಿತತೆಯಾಗಲೀ ಅಥವಾ ಸಂದೇಹವಾಗಲೀ ಇರುವುದಿಲ್ಲ; ಒತ್ತಡವು ಕೊನೆಗಾಣುವ ಸಂದರ್ಭ ಬಂದಾಗ, ಕೊನೆಗಾಣುತ್ತಿರುತ್ತದೆ. ಇದರಲ್ಲಿ, ಅವನ ಜ್ಞಾನವು ಇತರರ ಸಂಬಂಧವಿಲ್ಲದೆ ಸ್ವತಂತ್ರವಾಗಿರುತ್ತದೆ. ಕಚ್ಚಾಯನದ ಇಲ್ಲಿಯವರೆಗೆ ಇದರ ಒಂದು ಸರಿಯಾದ ದೃಷ್ಟಿಕೋನ ಕಂಡುಬರುತ್ತದೆ.
"'ಪ್ರತಿಯೊಂದೂ ಅಸ್ತಿತ್ವದಲ್ಲಿರುತ್ತದೆ': ಎಂಬುದೊಂದು ಪರಮಾವಧಿ. 'ಪ್ರತಿಯೊಂದೂ ಅಸ್ತಿತ್ವದಲ್ಲಿರುವುದಿಲ್ಲ': ಎಂಬುದು ಎರಡನೇ ಪರಮಾವಧಿ. ಈ ಎರಡೂ ಪರಮಾವಧಿಗಳನ್ನು ತಪ್ಪಿಸುವ ಮೂಲಕ, ಮಧ್ಯಮದ ಮೂಲಕ ಧಮ್ಮವನ್ನು ತಥಾಗತನು ಬೋಧಿಸುತ್ತಾನೆ..."[೬]

....saṃvṛti (ಸಾಂಪ್ರದಾಯಿಕವಾಗಿ ನಿಜವಾಗಿರುವುದು) ಮತ್ತು ಪರಮಾರ್ಥ (ಅಂತಿಮವಾಗಿ ನಿಜವಾಗಿರುವುದು) ಬೋಧನೆಗಳ ನಡುವಿನ ವ್ಯತ್ಯಾಸವನ್ನು ನಾಗಾರ್ಜುನನು ತೋರಿಸುತ್ತಾನಾದರೂ, ಪರಮಾರ್ಥದ ಬೋಧನೆಗಳ ವರ್ಗಕ್ಕೆ ಸೇರುವ ಕಲ್ಪನಾತ್ಮಕವಾಗಿ ರೂಪುಗೊಂಡಿರುವ ಯಾವುದೇ ಸಿದ್ಧಾಂತಗಳನ್ನು ಎಂದೂ ಅವನು ಘೋಷಿಸುವುದಿಲ್ಲ; ಅವನ ಪ್ರಕಾರ ಶೂನ್ಯತ್ವ ಕೂಡಾ ಶೂನ್ಯತ್ವವೇ; ಶೂನ್ಯಸ್ಥಿತಿಯೂ ಸಹ ಶೂನ್ಯವೇ. ಅಂತಿಮವಾಗಿ ಅವನ ದೃಷ್ಟಿಯಲ್ಲಿ,

nivṛttam abhidhātavyaṃ nivṛtte cittagocare
anutpannāniruddhā hi nirvāṇam iva dharmatā

||7

ಆಲೋಚನಾ ಶ್ರೇಣಿಯು ತಡೆಯಲ್ಪಟ್ಟಾಗ ಸಂಕಲ್ಪಿಸಬಹುದಾದದ್ದು ನಿಲ್ಲುತ್ತದೆ,
ಇಂದ್ರಿಯಗ್ರಾಹ್ಯತೆಗೆ ನಿರ್ವಾಣದಂತೆ ಹುಟ್ಟುವಿಕೆಯೂ ಇರುವುದಿಲ್ಲ ಮತ್ತು ತಡೆಯುವಿಕೆಯೂ ಇರುವುದಿಲ್ಲ.

ತಾರ್ಕಿಕ ಪ್ರತಿಪಾದನೆಗಳೊಂದಿಗೆ ಅವನ ತೇತ್ರಾಲೆಮ್ಮಾ ಕೃತಿಯಲ್ಲಿ ಇದು ಅತ್ಯುತ್ತಮವಾಗಿ ಚಿತ್ರಿಸಲ್ಪಟ್ಟಿತು:

X (ದೃಢೀಕರಣ)
X-ಅಲ್ಲದ್ದು (ನಿರಾಕರಣೆ)
X ಮತ್ತು X-ಅಲ್ಲದಿರುವಿಕೆ (ಎರಡೂ)
X ಆಗಿರುವುದು ಕೂಡಾ ಅಲ್ಲ, X-ಅಲ್ಲದ್ದು ಕೂಡಾ ಅಲ್ಲ (ಎರಡೂ ಅಲ್ಲ)

ಸಾಪೇಕ್ಷತೆಯ ಪರಿಕಲ್ಪನೆಯನ್ನೂ ಸಹ ನಾಗಾರ್ಜುನ ಕಲಿಸಿದ; ಅವನ ರತ್ನಾವಳಿ ಕೃತಿಯಲ್ಲಿ ಇದಕ್ಕೊಂದು ಉದಾಹರಣೆಯನ್ನು ಅವನು ನೀಡುತ್ತಾ, ದೀರ್ಘತೆಯ ಪರಿಕಲ್ಪನೆಗೆ ಸಂಬಂಧಿಸಿದಂತೆ ಮಾತ್ರವೇ ಅಲ್ಪತೆ ಕಂಡುಬರುತ್ತದೆ ಎಂದು ಹೇಳುತ್ತಾನೆ. ಇತರ ವಸ್ತುಗಳು ಅಥವಾ ವಿಷಯಗಳಿಗೆ ಸಂಬಂಧ ಕಲ್ಪಿಸುವುದರಿಂದ ಮಾತ್ರವೇ, ಅದರಲ್ಲೂ ವಿಶೇಷವಾಗಿ ವೈದೃಶ್ಯ ದರ್ಶನದ ಮೂಲಕ ಒಂದು ವಸ್ತು ಅಥವಾ ವಿಷಯದ ನಿರ್ಣಯ ಸಾಧ್ಯ. "ಅಲ್ಪತೆ" ಮತ್ತು "ದೀರ್ಘತೆ"ಯ ಪರಿಕಲ್ಪನೆಗಳ ನಡುವಿನ ಸಂಬಂಧವು ಸ್ವಾಭಾವಿಕ ಸ್ವರೂಪದ (ಸ್ವಭಾವ) ಕಾರಣದಿಂದಾಗಿ ಕಂಡುಬರುವುದಿಲ್ಲ ಎಂಬುದು ಅವನ ಸಮರ್ಥನೆಯಾಗಿತ್ತು. ಪಾಲಿ ಭಾಷೆಯಲ್ಲಿನ ನಿಕಾಯಗಳು ಮತ್ತು ಚೀನೀ ಭಾಷೆಯಲ್ಲಿನ ಆಗಮಗಳಲ್ಲೂ ಈ ಪರಿಕಲ್ಪನೆಯು ಕಂಡುಬಂದಿದ್ದು, ಇವುಗಳಲ್ಲಿ ಸಾಪೇಕ್ಷತೆಯ ಪರಿಕಲ್ಪನೆಯು ಇದೇ ರೀತಿಯಲ್ಲಿ ವಿವರಿಸಲ್ಪಟ್ಟಿದೆ: "ಬೆಳಕಿನ ಮೂಲ ಅಂಶ ಯಾವುದು ಎಂಬುದು..... ಕತ್ತಲೆಯ ಕಾರಣದಿಂದ (ಅದಕ್ಕೆ ಸಂಬಂಧವಾಗಿರುವ ರೀತಿಯಲ್ಲಿ) ಅಸ್ತಿತ್ವದಲ್ಲಿದೆ ಎಂದು ನೋಡಲಾಗುತ್ತದೆ; ಒಳ್ಳೆಯತನದ ಮೂಲ ಅಂಶ ಯಾವುದು ಎಂಬುದನ್ನು ಕೆಟ್ಟದರ ಕಾರಣದಿಂದ ಅಸ್ತಿತ್ವದಲ್ಲಿದೆ ಎಂದು ನೋಡಲಾಗುತ್ತದೆ; ಸ್ಥಳಾವಕಾಶದ ಮೂಲ ಅಂಶ ಯಾವುದು ಎಂಬುದನ್ನು ಸ್ವರೂಪದ ಕಾರಣದಿಂದ ಅಸ್ತಿತ್ವದಲ್ಲಿದೆ ಎಂದು ನೋಡಲಾಗುತ್ತದೆ."[೭]

ನಾಗಾರ್ಜುನನ ತತ್ತ್ವಶಾಸ್ತ್ರದ ಕುರಿತಾದ ಹೆಚ್ಚಿನ ಮಾಹಿತಿಗೆ, ನೋಡಿ: ಮೂಲಮಧ್ಯಮಕಕಾರಿಕಾ.

ಆಯುರ್ವೇದೀಯ ವೈದ್ಯನಾಗಿ ನಾಗಾರ್ಜುನ

ನಾಗಾರ್ಜುನನು ಆಯುರ್ವೇದದ, ಅಥವಾ ಸಾಂಪ್ರದಾಯಿಕ ಭಾರತೀಯ ಆಯುರ್ವೇದೀಯ ಔಷಧಿಯ ಓರ್ವ ಚಿಕಿತ್ಸಕನೂ ಆಗಿದ್ದ. ಸುಶ್ರುತ ಸಂಹಿತ (ಇದಕ್ಕೆ ಸಂಬಂಧಿಸಿದಂತೆ ಆತ ಪರಿಷ್ಕೃತ ಆವೃತ್ತಿಯ ಸಂಗ್ರಹಣಕಾರನಾಗಿದ್ದ) ಎಂಬ ಶೀರ್ಷಿಕೆಯ ಸಂಸ್ಕೃತ ವೈದ್ಯಕೀಯ ಪ್ರಕರಣ ಗ್ರಂಥದಲ್ಲಿ ಇದು ಮೊದಲಬಾರಿಗೆ ವಿವರಿಸಲ್ಪಟ್ಟಿದೆ. ರಕ್ತಪರಿಚಲನಾ ವ್ಯವಸ್ಥೆ ಹಾಗೂ ರಕ್ತ ಅಂಗಾಂಶದ (ಇದನ್ನು ಅವನು ರಕ್ತ ಧಾತು ಎಂಬುದಾಗಿ ಅಪೂರ್ವವಾಗಿ ವರ್ಣಿಸಿದ್ದಾನೆ) ಕುರಿತಾಗಿ ಅವನು ನೀಡಿರುವ ವಿವರಣೆಗಳು ಹಾಗೂ ಅವನಿಗೆ "ರಸವಿದ್ಯೆಯ ಪಿತಾಮಹ" ಎಂಬ ಬಿರುದನ್ನು ತಂದುಕೊಟ್ಟ, ಭಸ್ಮಗಳು ಎಂದು ಕರೆಯಲ್ಪಡುವ ವಿಶೇಷವಾಗಿ ಸಂಸ್ಕರಿಸಲ್ಪಟ್ಟ ಖನಿಜಗಳ ಚಿಕಿತ್ಸಕ ಮೌಲ್ಯದ ಕುರಿತಾದ ಅವನ ಪಥನಿರ್ಮಾಣದ ಕಾರ್ಯ ಇವೇ ಮೊದಲಾದ ಅವನ ಬಹಳಷ್ಟು ಅನನ್ಯ ಆವಿಷ್ಕಾರಗಳು ಫ್ರಾಂಕ್‌ ಜಾನ್‌ ನಿನಿವಗ್ಗಿ ಎಂಬಾತ ಬರೆದಿರುವ ಕೃತಿಯೊಂದರಲ್ಲಿ ವಿವರಿಸಲ್ಪಟ್ಟಿವೆ:ಆಯುರ್ವೇದ: ಎ ಕಾಂಪ್ರಹೆನ್ಸಿವ್‌ ಗೈಡ್‌ ಟು ಟ್ರೆಡಿಷನಲ್‌ ಇಂಡಿಯನ್‌ ಮೆಡಿಸಿನ್‌ ಫಾರ್‌ ದಿ ವೆಸ್ಟ್‌ , ಪುಟ 23. (ಪ್ರೇಗರ್‌/ಗ್ರೀನ್‌ವುಡ್‌ ಪ್ರೆಸ್‌, 2008). ISBN 978-0-313-34837-2.

ಮೂರ್ತಿಚಿತ್ರಣ[ಬದಲಾಯಿಸಿ]

ನಾಗಾರ್ಜುನನು ಮಾನವರ ಮತ್ತು ನಾಗಾಗಳ ಗುಣಲಕ್ಷಣಗಳನ್ನು ಒಳಗೊಂಡಿರುವ ಸಂಯುಕ್ತ ಸ್ವರೂಪವನ್ನು ಹೊಂದಿದ್ದಾನೆ ಎಂದು ಅನೇಕ ಬಾರಿ ಚಿತ್ರಿಸಲ್ಪಟ್ಟಿದ್ದಾನೆ. ಒಂದು ಮೇಲ್ಕಟ್ಟಿನ ಕಿರೀಟಧಾರಣೆ ಮತ್ತು ಅವನ ಮಾನವ ತಲೆಗೆ ರಕ್ಷಾಕವಚವನ್ನು ನೀಡಿರುವುದು ಅನೇಕ ವೇಳೆ ನಾಗಾ ದೃಷ್ಟಿಕೋನದ ಸ್ವರೂಪವಾಗಿ ಹೊರಹೊಮ್ಮುತ್ತದೆ. ನಾಗಾ ಪ್ರಭೇದದ ಪರಿಕಲ್ಪನೆಯು ಭಾರತೀಯ ಧಾರ್ಮಿಕ ಸಂಸ್ಕೃತಿಯಾದ್ಯಂತ ಕಂಡುಬರುತ್ತದೆ, ಮತ್ತು ಒಂದು ಬುದ್ಧಿವಂತ ಸರ್ಪ ಅಥವಾ ನಿಧಿಪಾಲಕವನ್ನು ವಿಶಿಷ್ಟವಾಗಿ ಸೂಚಿಸುತ್ತದೆ. ಈ ಸರ್ಪ ಅಥವಾ ನಿಧಿಪಾಲಕವು ಮಳೆಗಳು, ಸರೋವರಗಳು, ಮತ್ತು ಇತರ ನೀರಿನ ಕಾಯಗಳು ಕಂಡುಬರುವುದಕ್ಕೆ ಕಾರಣನಾಗಿರುತ್ತದೆ. ಬೌದ್ಧಮತದಲ್ಲಿ, ಇದು ಓರ್ವ ಸಾಕ್ಷಾತ್ಕಾರ ಮಾಡಿಕೊಂಡ ಅರ್ಹತ್‌ಗೆ, ಅಥವಾ ಸಾರ್ವತ್ರಿಕವಾಗಿ ಓರ್ವ ಬುದ್ಧಿವಂತ ವ್ಯಕ್ತಿಗಾಗಿರುವ ಒಂದು ಪರ್ಯಾಯಪದವಾಗಿದೆ. ಈ ಪದವು "ಆನೆ" ಎಂಬ ಅರ್ಥವನ್ನೂ ಕೊಡುತ್ತದೆ.

ಇಂಗ್ಲಿಷ್‌ ಅನುವಾದಗಳು[ಬದಲಾಯಿಸಿ]

ಮೂಲಮಧ್ಯಮಕಕಾರಿಕ[ಬದಲಾಯಿಸಿ]

ಇತರ ಕೃತಿಗಳು[ಬದಲಾಯಿಸಿ]

ಲೇಖಕ ಶೀರ್ಷಿಕೆ ಪ್ರಕಾಶಕ ಟಿಪ್ಪಣಿಗಳು
ಲಿಂಡ್‌ಟ್ನರ್‌, C ನಾಗಾರ್ಜುನಿಯಾನಾ ಮೋತಿಲಾಲ್‌, 1987 [1982] Contains ಸಂಸ್ಕೃತ or ಟಿಬೆಟನ್‌ texts and ಅನುವಾದs of theಶೂನ್ಯತಾಸಪ್ತತಿ, ವೈದಲ್ಯಾಪ್ರಕರಣ, ವ್ಯವಹಾರಸಿದ್ಧಿ (fragment),ಯುಕ್ತಿಸಸ್ತಿಕಾ, ಚತುಃಸ್ತವ and ಬೋಧಿಚಿತ್ತವಿವರಣ. A ಅನುವಾದ onlyof the ಬೋಧಿಸಂಭಾರಕ. The ಸಂಸ್ಕೃತ and ಟಿಬೆಟನ್‌ texts are givenfor the ವಿಗ್ರಹವ್ಯಾವರ್ತನೀ. In addition a table of source ಸೂತ್ರs isgiven for the ಸೂತ್ರಸಮುಚ್ಚಯ.
ಕೊಮಿಟೋ, D R ನಾಗಾರ್ಜುನಾಸ್‌ "ಸೆವೆಂಟಿ ಸ್ಟಾಂಜಾಸ್‌" ಸ್ನೋ ಲಯನ್‌, 1987 ಅನುವಾದ of the ಶೂನ್ಯತಾಸಪ್ತತಿ with ಟಿಬೆಟನ್‌ ವ್ಯಾಖ್ಯಾನ
ಭಟ್ಟಾಚಾರ್ಯ, ಜಾನ್‌ಸ್ಟನ್‌ and ಕುನ್ಸ್‌ಟ್‌ ದಿ ಡಯಲೆಕ್ಟಿಕಲ್‌ ಮೆಥಡ್‌ ಆಫ್‌ ನಾಗಾರ್ಜುನ ಮೋತಿಲಾಲ್‌, 1978 A superb ಅನುವಾದ of the ವಿಗ್ರಹವ್ಯಾವರ್ತನೀ
ಕಾವಾಮುರಾ, L ಗೋಲ್ಡನ್‌ ಝೆಫೈರ್‌ ಧರ್ಮ, 1975 ಅನುವಾದ of the ಸುಹ್ರ್‌ಲೆಖ್ಖಾ with a ಟಿಬೆಟನ್‌ ವ್ಯಾಖ್ಯಾನ
ಜಾಮೀಸನ್‌, R.C. ನಾಗಾರ್ಜುನಾಸ್ ವರ್ಸಸ್‌ ಆನ್‌ ದಿ ಗ್ರೇಟ್‌ ವೆಹಿಕಲ್‌ ಅಂಡ್‌ ದಿ ಹಾರ್ಟ್‌ ಆಫ್‌ ಡಿಪೆಂಡೆಂಟ್‌ ಆರಿಜಿನೇಷನ್‌ D.K., 2001 ಅನುವಾದ and edited ಟಿಬೆಟನ್‌ of the ಮಹಾಯಾನವಿಂಸಿಕಾ and the ಪ್ರತಿಯಾಸಮುತ್ಪಾದಹೃದಯಕಾರಿಕಾ, including work on texts from the cave temple at ದುನ್‌ಹುವಾಂಗ್‌, ಗನ್ಸು, ಚೀನಾ
ಲಿಂಡ್‌ಟ್ನರ್‌, C. ಮಾಸ್ಟರ್‌ ಆಫ್‌ ವಿಸ್‌ಡಂ: ರೈಟಿಂಗ್ಸ್‌ ಆಫ್‌ ದಿ ಬುದ್ಧಿಸ್ಟ್‌ ಮಾಸ್ಟರ್‌ ನಾಗಾರ್ಜುನ ಧರ್ಮ, 1986 An excellent introduction to ಮಧ್ಯಮಿಕ, ಮಾಸ್ಟರ್‌ ಆಫ್‌ ವಿಸ್‌ಡಂ contains two ಸ್ತೋತ್ರಪಾಠs of praise to the ಬುದ್ಧ, two ಪ್ರಕರಣ ಗ್ರಂಥs on ಶೂನ್ಯತಾ, and two works that clarify the connection of ವಿಶ್ಲೇಷಣೆ, ಧ್ಯಾನ, and ನೈತಿಕ ನಡವಳಿಕೆ. Includes ಟಿಬೆಟನ್‌ ಶ್ಲೋಕs in transliteration and critical editions of extant ಸಂಸ್ಕೃತ.ಟಿಬೆಟನ್‌ ಅನುವಾದ (product ID: 0-89800-286-9)
ಟೋಲಾ, ಫರ್ನಾಂಡೋ and ಕಾರ್ಮೆನ್‌ ಡ್ರಾಗೊನೆಟಿ ವೈದಲ್ಯಾಪ್ರಕರಣ ಸೌತ್‌ ಏಷ್ಯಾ ಬುಕ್ಸ್‌, 1995
ಹಾಪ್ಕಿನ್ಸ್‌, ಜೆಫ್ರಿ ನಾಗಾರ್ಜುನಾಸ್‌ ಪ್ರೆಷಸ್‌ ಗಾರ್ಲ್ಯಾಂಡ್‌: ಬುದ್ಧಿಸ್ಟ್‌ ಅಡ್ವೈಸ್‌ ಫಾರ್‌ ಲಿವಿಂಗ್‌ ಅಂಡ್‌ ಲಿಬರೇಷನ್‌ ಸ್ನೋ ಲಯನ್‌ ಪಬ್ಲಿಕೇಷನ್ಸ್‌, 2007 ISBN 1-55939-274-6
ಬ್ರುನ್‌ಹೋಲ್ಜ್‌ಲ್‌, ಕಾರ್ಲ್‌ ಇನ್‌ ಪ್ರೈಸ್‌ ಆಫ್‌ ಧರ್ಮಧಾತು ಸ್ನೋ ಲಯನ್‌ ಪಬ್ಲಿಕೇಷನ್ಸ್‌, 2008 ಅನುವಾದ with ವ್ಯಾಖ್ಯಾನ by the 3rd ಕರ್ಮಪ

ಇವನ್ನೂ ಗಮನಿಸಿ[ಬದಲಾಯಿಸಿ]

ಟಿಪ್ಪಣಿಗಳು[ಬದಲಾಯಿಸಿ]

  1. ಬುದ್ಧಿಸ್ಟ್‌ ಆರ್ಟ್‌ & ಆಂಟಿಕ್ವಿಟೀಸ್‌ ಆಫ್‌ ಹಿಮಾಚಲ್‌ ಪ್ರದೇಶ್‌ -ಒಮಕಾಂಡ ಹಾಂಡಾ ಬರೆದದ್ದು (ಪುಟ 97)
  2. [5] ^ [4]
  3. ಕ್ರಿಶ್ಚಿಯನ್‌ ಲಿಂಡ್‌ಟ್ನರ್‌, ಮಾಸ್ಟರ್‌ ಆಫ್‌ ವಿಸ್‌ಡಂ. ಧರ್ಮ ಪಬ್ಲಿಷಿಂಗ್‌ 1997, ಪುಟ 324.
  4. ಡೇವಿಡ್‌ ಕಲುಪಹಾನಾ, ಮೂಲಮಧ್ಯಮಕಕಾರಿಕ ಆಫ್‌ ನಾಗಾರ್ಜುನ: ದಿ ಫಿಲಾಸಫಿ ಆಫ್‌ ದಿ ಮಿಡ್ಲ್‌ ವೇ. ಮೋತಿಲಾಲ್‌ ಬನಾರಸಿದಾಸ್‌, 2005, ಪುಟಗಳು 2,5.
  5. ಲಿಂಡ್‌ಟ್ನರ್‌, C. (1982) ನಾಗಾರ್ಜುನಿಯಾನಾ, ಪುಟ 11
  6. SN 12.15, [೧]. ಸಂಪಬಂಧ ಕಲ್ಪಿಸಲಾಗಿರುವ ಆವೃತ್ತಿ ಅಥವಾ ರೂಪಾಂತರವು ನಿಕಾಯಾಗಳಲ್ಲಿ ಕಂಡುಬಂದಿರುವಂಥದೇ ಆಗಿದೆ, ಮತ್ತು ಇದು ಸಂಯುಕ್ತಗಾಮಾದಲ್ಲಿ ಕಂಡುಬಂದಂಥದುಕ್ಕಿಂತ ಕೊಂಚ ವಿಭಿನ್ನವಾಗಿದೆ. ಅಸ್ತಿತ್ವ ಹಾಗೂ ಅಸ್ತಿತ್ವವಿಲ್ಲದಿರುವಿಕೆಯ ಪರಮಾವಧಿಗಳ ನಡುವಿನ ಮಧ್ಯ ಮಾರ್ಗದ ಮೂಲಕ ಬೋಧಿಸುವ ಪರಿಕಲ್ಪನೆಯನ್ನು ಎರಡೂ ಹೊಂದಿವೆ. ನೋಡಿ: A.K. ವಾರ್ಡರ್‌, ಎ ಕೋರ್ಸ್‌ ಇನ್‌ ದಿ ಇಂಡಿಯನ್‌ ಫಿಲಾಸಫಿ. ಮೋತಿಲಾಲ್‌ ಬನಾರಸಿದಾಸ್‌ ಪ್ರಕಾಶನ., 1998, ಪುಟಗಳು 55-56, ಅಥವಾ ವಿಶ್ಲೇಷಣೆಯೊಂದಿಗಿನ ಎರಡೂ ಆವೃತ್ತಿಗಳ ಸಂಪೂರ್ಣ ಪಠ್ಯಕ್ಕಾಗಿ ಚೂಂಗ್‌ ಮುನ್‌-ಕೀಟ್ ಬರೆದಿರುವ ದಿ ಫಂಡಮೆಂಟಲ್‌ ಟೀಚಿಂಗ್ಸ್‌ ಆಫ್‌ ಅರ್ಲಿ ಬುದ್ಧಿಸಂ: ಎ ಕಂಪ್ಯಾರೆಟಿವ್‌ ಸ್ಟಡಿ ಬೇಸ್ಡ್‌ ಆನ್‌ ದಿ ಸೂತ್ರಾಂಗ ಪೋರ್ಷನ್‌ ಆಫ್‌ ದಿ ಪಾಲಿ ಸಂಯುತ್ತ-ನಿಕಾಯಾ ಅಂಡ್‌ ದಿ ಚೈನೀಸ್‌ ಸಂಯುಕ್ತಗಾಮಾ ದ 192-195 ಪುಟಗಳನ್ನು ನೋಡಿ; ಹರಾಸ್ಸೊವಿಟ್ಜ್‌ ವೆರ್ಲಾಗ್‌, ವೀಸ್‌ಬೇಡೆನ್‌, 2000. ನಾಗಾರ್ಜುನನು ತನ್ನ MMKಯಲ್ಲಿನ ಪಠ್ಯವನ್ನು ನಮೂದಿಸುವಾಗ "ಪ್ರತಿಯೊಂದಕ್ಕೂ" ಅವನು ಉಲ್ಲೇಖಗಳನ್ನು ಮಾಡುವುದಿಲ್ಲ; ಇದಕ್ಕೆ ಸಂಬಂಧಿಸಿದ ವಿವರಗಳಿಗೆ ನೋಡಿ: ಡೇವಿಡ್‌ ಕಲುಪಹಾನಾ ಬರೆದಿರುವ ನಾಗಾರ್ಜುನ: ದಿ ಫಿಲಾಸಫಿ ಆಫ್‌ ದಿ ಮಿಡ್ಲ್‌ ವೇ . SUNY ಪ್ರೆಸ್‌, 1986, ಪುಟ 232.
  7. ಡೇವಿಡ್‌ ಕಲುಪಹಾನಾ, ಕ್ಯಾಷುಯಾಲಿಟಿ: ದಿ ಸೆಂಟ್ರಲ್‌ ಫಿಲಾಸಫಿ ಆಫ್‌ ಬುದ್ಧಿಸಂ. ದಿ ಯೂನಿವರ್ಸಿಟಿ ಪ್ರೆಸ್‌ ಆಫ್‌ ಹವಾಯಿ, 1975, ಪುಟಗಳು 96-97. ನಿಕಾಯಾಗಳಲ್ಲಿ SN 2.150ನಲ್ಲಿ ಉಕ್ತಿಯು ಕಂಡುಬರುತ್ತದೆ.

ಆಕರಗಳು[ಬದಲಾಯಿಸಿ]

  • ಕ್ಯಾಂಪ್‌ಬೆಲ್‌, W. L. ಸಂಪಾದಿತ ಮತ್ತು ಅನುವಾದಿತ 1919. ದಿ ಟ್ರೀ ಆಫ್‌ ವಿಸ್‌ಡಂ: ಬೀಯಿಂಗ್‌ ದಿ ಟಿಬೆಟನ್‌ ಟೆಕ್ಸ್ಟ್‌ ವಿತ್‌ ಇಂಗ್ಲಿಷ್‌ ಟ್ರಾನ್ಸ್ಲೇಷನ್‌ ಆಫ್‌ ನಾಗಾರ್ಜುನಾಸ್‌ ಗ್ನೋಮಿಕ್‌ ವರ್ಸ್‌ ಟ್ರೀಟೈಸ್‌ ಕಾಲ್ಡ್‌ ದಿ ಪ್ರಜ್ಞಾದಂಡ . ಕಲ್ಕತ್ತಾ ವಿಶ್ವವಿದ್ಯಾಲಯ. ಮರುಮುದ್ರಣ: ಸೋನಂ T. ಕಾಝಿ, ಗ್ಯಾಂಗ್‌ಟೋಕ್‌. 1975.
  • ಫೋರಿಜ್ಸ್‌, ಲಸ್‌ಜ್ಲೊ, 1998. "ದಿ ರಿಲವೆನ್ಸ್‌ ಆಫ್‌ ವೈಟ್‌ಹೆಡ್‌ ಫಾರ್‌ ಕಾಂಟೆಂಪರರಿ ಬುದ್ಧಿಸ್ಟ್‌ ಫಿಲಾಸಫಿ. Archived 2009-12-24 ವೇಬ್ಯಾಕ್ ಮೆಷಿನ್ ನಲ್ಲಿ.ಪಾಣಿನಿ, ನಾಗಾರ್ಜುನ ಅಂಡ್‌ ವೈಟ್‌ಹೆಡ್‌." Archived 2009-12-24 ವೇಬ್ಯಾಕ್ ಮೆಷಿನ್ ನಲ್ಲಿ.
  • ಹೂಗ್‌ಕಾರ್ಸ್‌ಪೆಲ್‌, E., 2005. ದಿ ಸೆಂಟ್ರಲ್‌ ಫಿಲಾಸಫಿ, ಬೇಸಿಕ್‌ ವರ್ಸಸ್‌‌ . ಆಲಿವ್‌ ಪ್ರೆಸ್‌ ಆಮ್‌ಸ್ಟರ್‌ಡ್ಯಾಂ (ಸಂಸ್ಕೃತದಿಂದ ಅನುವಾದಿಸಲ್ಪಟ್ಟದ್ದು, ಸಮಕಾಲೀನ ತತ್ತ್ವಶಾಸ್ತ್ರಕ್ಕೆ ಸಂಬಂಧಿಸಿದ ಉಲ್ಲೇಖಗಳೊಂದಿಗಿನ ವ್ಯಾಖ್ಯಾನವನ್ನು ಇದು ಒಳಗೊಂಡಿದೆ)
  • ಕಲುಪಹಾನ, ಡೇವಿಡ್‌ J. ದಿ ಫಿಲಾಸಫಿ ಆಫ್‌ ದಿ ಮಿಡ್ಲ್‌ ವೇ . SUNY, 1986
  • ಲಾಮೊಟ್ಟೆ, E., ಲೆ ಟ್ರೈಟೆ ಡೆ ಲಾ ಗ್ರಾಂಡೆ ವೆರ್ಟು ಡೆ ಸಗೆಸ್ಸೆ , ಸಂಪುಟ I (1944), ಸಂಪುಟ II (1949), ಸಂಪುಟ III (1970), ಸಂಪುಟ IV (1976), ಇನ್‌ಸ್ಟಿಟ್ಯೂಟ್‌ ಓರಿಯೆಂಟಲಿಸ್ಟೆ: ಲೌವೇನ್‌-ಲಾ-ನ್ಯುವೇ.
  • ಮೆಕ್‌ಕಾಗ್ನೆ, ನ್ಯಾನ್ಸಿ, ನಾಗಾರ್ಜುನ ಅಂಡ್‌ ದಿ ಫಿಲಾಸಫಿ ಆಫ್‌ ಓಪನ್‌ನೆಸ್‌ . ಲ್ಯಾನ್‌ಹ್ಯಾಂ, ಮೇರಿಲ್ಯಾಂಡ್‌ : ರೋವ್‌ಮನ್‌ & ಲಿಟ್ಲ್‌ಫೀಲ್ಡ್‌, ಸುಮಾರು 1997.
  • ಮ್ಯಾಗ್ಲಿಯೋಲಾ, ರಾಬರ್ಟ್‌. ಡೆರ್ರಿಡಾ ಆನ್‌ ದಿ ಮೆಂಡ್‌ . ಲಫಾಯೆಟ್ಟೆ, ಇಂಡಿಯಾನಾ: ಪರ್ಡ್ಯೂ UP, 1984; 2ನೇ ಆವೃತ್ತಿ 1986; ಮರುಮುದ್ರಣ: 2000. (ಒಂದು ಸಮರ್ಥಿಸಲ್ಪಟ್ಟ ಹೋಲಿಕೆಯ ಮೂಲಕ, ಜಾಕ್ವೆಸ್‌ ಡೆರಿಡಾ ಮತ್ತು ಫ್ರೆಂಚ್‌ 'ನಿರಾಕರಿಸದಿರುವಿಕೆ'ಯ ಪಂಥದಲ್ಲಿನ ಅಮೆರಿಕಾದ ಮತ್ತು ಐರೋಪ್ಯ ಪರಿಣಿತರ ಗಮನಕ್ಕೆ ನಾಗಾರ್ಜುನನನ್ನು ಈ ಪುಸ್ತಕವು ಮೊದಲಬಾರಿಗೆ ತರುತ್ತದೆ.)
  • ಮ್ಯಾಗ್ಲಿಯೋಲಾ, ರಾಬರ್ಟ್‌. ಆನ್‌ ಡೀಕನ್ಸ್‌ಟ್ರಕ್ಟಿಂಗ್‌ ಲೈಫ್‌-ವರ್ಲ್ಡ್ಸ್‌: ಬುದ್ಧಿಸಂ, ಕ್ರಿಶ್ಚಿಯಾನಿಟಿ, ಕಲ್ಚರ್‌ . ಅಟ್ಲಾಂಟಾ: ಸ್ಕಾಲರ್ಸ್‌ P, ಅಮೆರಿಕನ್‌ ಅಕಾಡೆಮಿ ಆಫ್‌ ರಿಲಿಜನ್‌, 1997; ಆಕ್ಸ್‌ಫರ್ಡ್‌: ಆಕ್ಸ್‌ಫರ್ಡ್‌ UP, 2000. (ನಾಗಾರ್ಜುನನ ಅನುಯಾಯಿಗಳು ಹಾಗೂ ದ್ರವ್ಯಾಸ್ತಿತ್ವವಾದದ ಡೆರಿಡಿಯನ್ನನ ನಿರಾಕರಿಸದಿರುವಿಕೆಗಳ ನಡುವಿನ ಹೋಲಿಕೆಗಳನ್ನು ಈ ಪುಸ್ತಕವು ಮತ್ತಷ್ಟು ಬೆಳೆಸುತ್ತದೆ.)
  • ಮೂರ್ತಿ, T. R. V., 1955. ದಿ ಸೆಂಟ್ರಲ್‌ ಫಿಲಾಸಫಿ ಆಫ್‌ ಬುದ್ಧಿಸಂ . ಜಾರ್ಜ್‌ ಅಲೆನ್‌ ಅಂಡ್‌ ಅನ್‌ವಿನ್‌, ಲಂಡನ್‌. 2ನೇ ಆವೃತ್ತಿ: 1960.
  • ಮೂರ್ತಿ, K. ಸಚ್ಚಿದಾನಂದ. 1971. ನಾಗಾರ್ಜುನ . ನ್ಯಾಷನಲ್‌ ಬುಕ್‌ ಟ್ರಸ್ಟ್‌, ನವದೆಹಲಿ. 2ನೇ ಆವೃತ್ತಿ: 1978.
  • ರಮಣನ್‌, K. ವೆಂಕಟ. 1966. ನಾಗಾರ್ಜುನಾಸ್‌ ಫಿಲಾಸಫಿ . ಚಾರ್ಲ್ಸ್‌ E. ಟಟ್ಲ್‌, ವೆರ್ಮೋಂಟ್‌ ಅಂಡ್‌ ಟೋಕಿಯೋ. ಮರುಮುದ್ರಣ: ಮೋತಿಲಾಲ್‌ ಬನಾರಸಿದಾಸ್‌, ದೆಹಲಿ. 1978. (ನಾಗಾರ್ಜುನನ ತತ್ತ್ವಶಾಸ್ತ್ರದ
ವ್ಯಾಪಕತೆ ಮತ್ತು ಸೂಕ್ಷ್ಮಗ್ರಾಹಿತ್ವಗಳ ಒಂದು ಅದ್ಭುತ ಹಾಗೂ ವಿವರವಾದ ಅವಲೋಕನವನ್ನು ಈ ಪುಸ್ತಕವು ನೀಡುತ್ತದೆ.)
  • ಸ್ಯಾಮ್‌ಧೊಂಗ್‌ ರಿನ್‌ಪೊಚೆ, ಸಂಪಾದಿತ 1977. ಮಧ್ಯಮಿಕ ಡಯಲೆಕ್ಟಿಕ್‌ ಅಂಡ್‌ ದಿ ಫಿಲಾಸಫಿ ಆಫ್‌ ನಾಗಾರ್ಜುನ . ಸೆಂಟ್ರಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಹೈಯರ್‌ ಟಿಬೆಟನ್‌ ಸ್ಟಡೀಸ್‌, ಸಾರನಾಥ್‌, ಭಾರತ.
  • ಶಾಸ್ತ್ರಿ, H. ಚಟರ್ಜೀ, ಸಂಪಾದಿತ 1977. ದಿ ಫಿಲಾಸಫಿ ಆಫ್‌ ನಾಗಾರ್ಜುನ ಆಸ್‌ ಕಂಟೈನ್ಡ್‌ ಇನ್‌ ದಿ ರತ್ನಾವಳಿ . ಭಾಗ I [ ಪಠ್ಯ ಹಾಗೂ ಪೀಠಿಕೆಯನ್ನು ಮಾತ್ರ ಒಳಗೊಂಡಿದೆ ]. ಸಾರಸ್ವತ ಲೈಬ್ರರಿ, ಕಲ್ಕತ್ತಾ.
  • ಸ್ಟ್ರೆಂಗ್‌, ಫ್ರೆಡೆರಿಕ್‌ J. ಎಂಪ್ಟಿನೆಸ್‌: ಎ ಸ್ಟಡಿ ಇನ್‌ ರಿಲಿಜಿಯಸ್‌ ಮೀನಿಂಗ್‌ . ನ್ಯಾಶ್‌ವಿಲ್ಲೆ: ಅಬಿಂಗ್ಡನ್‌ ಪ್ರೆಸ್‌, 1967.
  • ವಾಲ್ಸರ್‌, ಜೋಸೆಫ್‌. ನಾಗಾರ್ಜುನ ಇನ್‌ ಕಂಟೆಕ್ಸ್ಟ್‌: ಮಹಾಯಾನ ಬುದ್ಧಿಸಂ ಅಂಡ್‌ ಅರ್ಲಿ ಇಂಡಿಯನ್‌ ಕಲ್ಚರ್‌ . ನ್ಯೂಯಾರ್ಕ್‌: ಕೊಲಂಬಿಯಾ ಯೂನಿವರ್ಸಿಟಿ ಪ್ರೆಸ್‌, 2005.
  • ವೆಡೆಮೆಯೆರ್‌, ಕ್ರಿಶ್ಚಿಯನ್‌ K. 2007. ಆಯುರ್ವೇದಾ'ಸ್‌ ಲ್ಯಾಂಪ್‌ ದಟ್‌ ಇಂಟಿಗ್ರೇಟ್ಸ್‌ ದಿ ಪ್ರಾಕ್ಟೀಸಸ್‌: ದಿ ಗ್ರಾಜುಯಲ್‌ ಪಾತ್‌ ಆಫ್‌ ವಜ್ರಯಾನ ಬುದ್ಧಿಸಂ ಅಕಾರ್ಡಿಂಗ್‌ ಟು ದಿ ಈಸೊಟೆರಿಕ್‌ ಕಮ್ಯುನಿಟಿ ನೋಬಲ್‌ ಟ್ರೆಡಿಷನ್‌ . ನ್ಯೂಯಾರ್ಕ್‌: AIBS/ಕೊಲಂಬಿಯಾ ಯೂನಿವರ್ಸಿಟಿ ಪ್ರೆಸ್‌.
  • ಝಾಂಗ್ಪೊ, ನ್ಗೋರ್ಚೆನ್‌ ಕುಂಗಾ. 1975. ದಿ ಡಿಸಿಪ್ಲೀನ್‌ ಆಫ್‌ ದಿ ನೊವೀಸ್‌ ಮಾಂಕ್‌ . ಆಚಾರ್ಯ ನಾಗಾರ್ಜುನನ ದಿ (ಡಿಸಿಪ್ಲೀನ್‌) ಆಫ್‌ ದಿ ನೊವೀಸ್‌ ಮಾಂಕ್‌ ಆಫ್‌ ದಿ ಆರ್ಯಮೂಲಾಸರ್ಯಾಷ್ಟಿವಾದೀನ್‌ ಇನ್‌ ವರ್ಸ್‌ , ಮತ್ತು ವಜ್ರಧರ ನ್ಗೋರ್ಚೆನ್‌ ಕುಂಗಾ ಝೆಂಗ್ಪೋನ ವರ್ಲ್ಡ್‌ ಎಕ್ಸ್‌ಪ್ಲನೇಷನ್‌ ಆಫ್‌ ದಿ ಅಬ್ರಿಜ್ಡ್‌ ಟೆನ್‌ ವೋವ್ಸ್‌, ದಿ ಕಾನ್‌ಸೈಸ್‌ ನೋವೀಸ್‌ ಮಾಂಕ್‌'ಸ್‌ ಟ್ರೇನಿಂಗ್‌ ನ್ನು ಒಳಗೊಂಡಂತೆ. ಅನುವಾದ: ಲೊಬ್‌ಸ್ಯಾಂಗ್‌ ದಾಪಾ ಮತ್ತು ಇತರರು. ಸಾಕ್ಯಾ ಕಾಲೇಜು, ಮಸ್ಸೂರಿ, ಭಾರತ

ಹೊರಗಿನ ಕೊಂಡಿಗಳು[ಬದಲಾಯಿಸಿ]

ಟೆಂಪ್ಲೇಟು:Buddhism2