ನಳಂದ
ನಲಂದ | |
---|---|
नालंदा | |
![]() ನಳಂದ ಮಹಾವಿಹಾರ ಅವಶೇಷಗಳು | |
ಸ್ಥಳ | ನಳಂದ ಜಿಲ್ಲೆ, ಬಿಹಾರ್, ಭಾರತ |
ಪ್ರಕಾರ | ಶಿಕ್ಷಣದ ಕೇಂದ್ರ |
ಉದ್ದ | 800 ft (240 m) |
ಅಗಲ | 1,600 ft (490 m) |
ವಿಸ್ತೀರ್ಣ | 12 ha (30 acres) |
ಇತಿಹಾಸ | |
ಸ್ಥಾಪಿತ | ಕ್ರಿ.ಶ. 5 ನೇ ಶತಮಾನ |
ತ್ಯಜಿಸಿದ್ದು | ಕ್ರಿ.ಶ. ೧೩ ನೇ ಶತಮಾನ |
ಘಟನೆಗಳು | ಕ್ರಿ.ಶ. ೧೨೦೦ ರಲ್ಲಿ ಬಖ್ತಿಯಾರ್ ಖಿಲ್ಜಿಯಿಂದ ಅಪಹರಣವಾದ ಸಾಧ್ಯತೆ |
ಸ್ಥಳ ಟಿಪ್ಪಣಿಗಳು | |
ಉತ್ಖನನ ದಿನಾಂಕಗಳು | 1915–1937, 1974–1982[೧] |
ಪುರಾತತ್ವಶಾಸ್ತ್ರಜ್ಞರು | ಡೇವಿಡ್ ಬಿ ಸ್ಪೂನರ್, ಹಿರಾನಂದ್ ಶಾಸ್ತ್ರಿ, ಜೆ.ಎ. ಪೇಜ್, ಎಂ ಖುರೇಶಿ, ಜಿ.ಸಿ. ಚಂದ್ರ, ಎನ್ ನಜೀಮ್, ಅಮಲನಂದ ಘೋಷ್ |
ಸಾರ್ವಜನಿಕ ಪ್ರವೇಶ | ಹೌದು |
ಜಾಲತಾಣ | ಎಎಸ್ಐ |
Official name: Archaeological Site of Nalanda Mahavihara (Nalanda University) at Nalanda, Bihar | |
ಪ್ರಕಾರ | Cultural |
ಮಾನದಂಡ | iv, vi |
ನಾಮಾಂಕಿತ | 2016 (40th session) |
ಉಲ್ಲೇಖ ಸಂ. | 1502 |
ಅಂಗೀಕರಿಸಿದ ದೇಶ | ಭಾರತ |
ASI No. N-BR-43[೨] |
ನಾಲಂದ ( ಹಿಂದಿ/ ಸಂಸ್ಕೃತ/ ಪಾಲಿ: ನಾಲಂದ) ಇದು ಭಾರತ ದೇಶದ ಬಿಹಾರದಲ್ಲಿದ್ದ ಪ್ರಾಚೀನ ಕಾಲದ ಉನ್ನತ ವ್ಯಾಸಂಗ ಕೇಂದ್ರದ ಪ್ರಸಿದ್ಧ ಹೆಸರು. ನಳಂದ ಪ್ರಾಂತ್ಯವು ಭಾರತದ ರಾಜ್ಯ ಬಿಹಾರದ ರಾಜಧಾನಿಯಾದ ಪಾಟ್ನಾದ ಆಗ್ನೇಯ ಭಾಗದಲ್ಲಿ ಸುಮಾರು 55 ಮೈಲು ದೂರದಲ್ಲಿದೆ ಮತ್ತು ಕ್ರಿ.ಶ. 427 ರಿಂದ 1197 ವರೆಗೆ ಬುದ್ಧ ಪ್ರಣೀತ ತತ್ವಜ್ಞಾನದ ವ್ಯಾಸಂಗ ಕೇಂದ್ರವಾಗಿತ್ತು.[೩][೪] ಇದು "ಇತಿಹಾಸದಲ್ಲಿ ನಮೂದಿತವಾದ ಮೊದಲ ಅತಿ ಶ್ರೇಷ್ಠವಾದ ವಿಶ್ವವಿದ್ಯಾಲಯ" ಎಂದು ಕರೆಯಲ್ಪಟ್ಟಿದೆ.[೪] ಕೆಲವು ಕಟ್ಟಡಗಳನ್ನು ಮೌರ್ಯ ವಂಶದ ಚಕ್ರವರ್ತಿ ಅಶೋಕನು ನಿರ್ಮಿಸಿದ್ದಾನೆ. ಗುಪ್ತಾ ಸಾಮ್ರಾಜ್ಯವೂ ಕೆಲವು ಮಠಗಳನ್ನು ನಿರ್ಮಿಸಲು ಪ್ರೋತ್ಸಾಹಿಸಿತು. ಇತಿಹಾಸಜ್ಞರ ಪ್ರಕಾರ, ನಳಂದವು ಗುಪ್ತ ರಾಜ ಶಕ್ರಾದಿತ್ಯ(ಕುಮಾರಗುಪ್ತನೆಂದೂ ಕರೆಯುವರು, ಆಳ್ವಿಕೆ 415-55) ಮತ್ತು ಬೌದ್ಧ ಸಾಮ್ರಾಟರಾದ ಹರ್ಷ ಹಾಗೂ ಪಾಲ ಸಾಮ್ರಾಜ್ಯದ ನಂತರದ ಕೆಲವು ಚಕ್ರವರ್ತಿಗಳ ಕಾಲದಲ್ಲಿ ಪ್ರವರ್ಧಮಾನದಲ್ಲಿತ್ತು.[೫] ಅಲ್ಲಿಯ ಸಂಕೀರ್ಣವು ಕೆಂಪು ಇಟ್ಟಿಗೆಗಳಿಂದ ಕಟ್ಟಲ್ಪಟ್ಟಿತ್ತು ಮತ್ತು ಅದರ ಭಗ್ನಾವಶೇಷವು 14 ಎಕರೆಗಳಷ್ಟು ಸ್ಥಳವನ್ನು ಆಕ್ರಮಿಸಿತ್ತು. ತನ್ನ ಉತ್ತುಂಗ ಸ್ಥಿತಿಯಲ್ಲಿ ಈ ವಿಶ್ವವಿದ್ಯಾಲಯವು ಚೈನಾ, ಗ್ರೀಸ್ ಮತ್ತು ಪರ್ಶಿಯಾದಂತಹ ದೂರದೂರುಗಳ ಪಂಡಿತರು ಮತ್ತು ವಿದ್ಯಾರ್ಥಿಗಳನ್ನು ಆಕರ್ಷಿಸಿತ್ತು.[೬] ನಳಂದವು 1193ರಲ್ಲಿ ಭಕ್ತಿಯಾರ್ ಖಿಲ್ಜಿಯ ನೇತೃತ್ವದಲ್ಲಿ ಟರ್ಕಿಯ ಮುಸ್ಲಿಮ್ ಧಾಳಿಕೋರರಿಂದ ದೋಚಲ್ಪಟ್ಟಿತು, ಇದು ಭಾರತದಲ್ಲಿ ಬೌದ್ಧರ ಪ್ರಾಬಲ್ಯದ ಇಳಿಮುಖದ ಮೈಲಿಗಲ್ಲಾಯಿತು. 2006ರಲ್ಲಿ ಸಿಂಗಪೂರ್, ಚೈನಾ, ಭಾರತ, ಜಪಾನ್ ಮತ್ತು ಇತರ ದೇಶಗಳು ಈ ಐತಿಹಾಸಿಕ ಪ್ರಾಂತ್ಯವನ್ನು ನಳಂದ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯ ಎಂದು ನವೀಕರಿಸುವ ಮತ್ತು ಪುನರುಜ್ಜೀವನಗೊಳಿಸುವ ಯೋಜನೆಯ ಪ್ರಸ್ತಾಪವನ್ನು ಮುಂದಿಟ್ಟಿತು. ನಳಂದ ವಿಶ್ವವಿದ್ಯಾಲಯದ ಗ್ರಂಥಾಲಯವು ಎಷ್ಟು ದೊಡ್ಡದಿತ್ತೆಂದರೆ, ಮೊಘಲರು ಅಲ್ಲಿ ಬೆಂಕಿ ಹಚ್ಚಿದ ಮೂರು ತಿಂಗಳವರೆಗೂ ಆ ಸ್ಥಳವು ಉರಿಯುತ್ತಿತ್ತೆಂದು ವರದಿಯಾಗಿತ್ತು. ಆ ಸ್ಥಳದಿಂದ ಸಂತರನ್ನು ಹೊರಗೆ ಕಳಿಸಿ, ಮಠಗಳನ್ನು ನಾಶಮಾಡಿದ್ದರು.
ವ್ಯುತ್ಪತ್ತಿ[ಬದಲಾಯಿಸಿ]
ನಳಂದ ಎಂದರೆ " ನೀಡಿದಷ್ಟೂ ತೃಪ್ತಿಯಿಲ್ಲ"[೬]
ಚೈನಾದ ಯಾತ್ರಾರ್ಥಿ-ಸಂತ ಜುವಾನ್ಜಂಗ್[೭] ನು ನಾಲಂದ ಹೆಸರಿಗೆ ಅನೇಕ ವಿವರಣೆಗಳನ್ನು ನೀಡುತ್ತಾನೆ. ಅವುಗಳಲ್ಲಿ ಒಂದು, ಮಾವಿನ ತೋಪಿನಲ್ಲಿದ್ದ ಸರೋವರದಲ್ಲಿ ವಾಸಿಸುತ್ತಿದ್ದ ನಾಗನಿಂದ ಈ ಹೆಸರು ಬಂತೆಂದು ಹೇಳಿದ್ದಾನೆ. ಇನ್ನೊಂದು - ಅವನು ಒಪ್ಪಿದ್ದು - ಏನೆಂದರೆ ಇದು ಶಾಕ್ಯ ಮುನಿ ಬುದ್ಧ ನ ಒಂದು ಕಾಲದ ರಾಜಧಾನಿಯಾಗಿತ್ತು ಮತ್ತು ಅವನು "ವಿರಾಮವಿಲ್ಲದೆ ಭಿಕ್ಷೆ" ಎಂಬ ಹೆಸರು ನೀಡಿದ್ದನು.
ಸರಿಪುಟ್ಟನು ’ನಲಕ’ ಎಂಬ ಗ್ರಾಮದಲ್ಲಿ ಮರಣಹೊಂದಿದನು, ಅದನ್ನೇ ಅನೇಕ ಪಂಡಿತರು ನಳಂದ ಎಂದು ಗುರುತಿಸಿದ್ದರು.
ಇತಿಹಾಸ[ಬದಲಾಯಿಸಿ]
(ಕ್ರಿ.ಶ. 500) ಬುದ್ಧನ ಕಾಲದಲ್ಲಿ[ಬದಲಾಯಿಸಿ]
ಬುದ್ದನು ಅನೇಕ ಸಲ ನಳಂದದಲ್ಲಿ ತಂಗಿದ್ದನೆಂದು ಹೇಳಲ್ಪಟ್ಟಿದೆ. ಅವನು ನಳಂದಕ್ಕೆ ಭೇಟಿ ನೀಡಿದಾಗ ಸಾಮಾನ್ಯವಾಗಿ ಪಾವಾರಿಕಾದ ಮಾವಿನ ತೋಪಿನಲ್ಲಿ ತಂಗುತ್ತಿದ್ದನು, ಮತ್ತು ಅಲ್ಲಿ ಅವನು ಉಪಾಲಿ -ಗಹಪತಿ ಮತ್ತು ದೀಘತಪಸ್ಸೀ,[೮] ಕೆವತ್ತಾ[೯] ಮತ್ತು ಅಸಿಬಂಡಕಪುತ್ತನೊಂದಿಗೂ ಅನೇಕ ಸಂಭಾಷಣೆ, ವಿಚಾರವಿನಿಮಯಗಳನ್ನು ನಡೆಸಿದ್ದನು.[೧೦]
ಬುದ್ಧನು ಮಗಧದ ಮೂಲಕ ತನ್ನ ಕೊನೆಯ ಪ್ರವಾಸದಲ್ಲಿ ನಾಲಂದವನ್ನು ಸಂದರ್ಶಿಸಿದ್ದನು ಮತ್ತು ಅವನ ಸಾವಿಗೆ ಸ್ವಲ್ಪ ಮೊದಲು ಸರಿಪುಟ್ಟನು ಬೌದ್ಧ ಧರ್ಮದಲ್ಲಿ ತನಗಿರುವ ಶ್ರದ್ಧೆಯನ್ನು ಸಿಂಹ ಘರ್ಜನೆಯೊಂದಿಗೆ ತಿಳಿಸುತ್ತಾನೆ.[೧೧] ರಾಜಗಹದಿಂದ ನಾಲಂದಕ್ಕೆ ಹೋಗುವ ದಾರಿಯು ಅಂಬಲತ್ತಿಕಾದ [೧೨] ಮೂಲಕ ಸಾಗುತ್ತಿತ್ತು. ಮತ್ತು ನಾಲಂದದಿಂದ ಅದು ಪಾತಲಿಗಾಮಕ್ಕೆ ಹೋಗುತ್ತಿತ್ತು.[೧೩] ರಾಜಗಹ ಮತ್ತು ನಾಲಂದದ ನಡುವೆ ಬಹಪುಟ್ಟವು ನೆಲೆಗೊಂಡಿತ್ತು.[೧೪]
ಕೇವಟ್ಟ ಸುಟ್ಟನ ಪ್ರಕಾರ ಬುದ್ಧನ ಕಾಲಕ್ಕಾಗಲೇ ನಾಲಂದವು ಸಾಕಷ್ಟು ಪ್ರಭಾವಶಾಲೀ ಮತ್ತು ಸಮೃದ್ಧಿಯಿಂದ ಕೂಡಿದ ಊರಾಗಿತ್ತು, ಆದರೆ ಮೊದಲು ಹಾಗಿರಲಿಲ್ಲ, ಉನ್ನತ ವ್ಯಾಸಂಗದ ಕೇಂದ್ರವಾದ ನಂತರ ಅದು ಪ್ರಸಿದ್ಧಿ ಹೊಂದಿತು.[೧೫] ಬುದ್ಧನ ಕಾಲದಲ್ಲಿ ಈ ಪ್ರಾಂತ್ಯವು ತೀವ್ರವಾದ ಕ್ಷಾಮಕ್ಕೆ ಬಲಿಯಾಗಿತ್ತೆಂದು ಸಮ್ಯುತ್ತ ನಿಕಯದಲ್ಲಿ ದಾಖಲಿಸಲ್ಪಟ್ಟಿದೆ.[೧೬] ಬುದ್ಧನ ಬಲಗೈ ಬಂಟನಂತಿದ್ದ ಶಿಷ್ಯ ಸರಿಪುಟ್ಟ ಇದೇ ನಾಲಂದದಲ್ಲಿ ಜನಿಸಿ ಇಲ್ಲೇ ಕೊನೆಯುಸಿರೆಳೆದನು.[೩]
ನಾಲಂದವು ಸೊನ್ನಾದಿನ್ನನ ತವರೂರಾಗಿತ್ತು.[೧೭] ಮಹಾವೀರನು ಅನೇಕ ಸಲ ನಾಲಂದದಲ್ಲಿ ವಿರಮಿಸಿದ್ದನೆಂದು ಹೇಳಲ್ಪಟ್ಟಿದೆ, ಇದು ಖಂಡಿತವಾಗಿ ಜೈನ ಧರ್ಮ ಅನುಯಾಯಿಗಳ ಚಟುವಟಿಕೆಯ ಕೇಂದ್ರವಾಗಿತ್ತು. ಮಹಾವೀರನು ನಳಂದದಲ್ಲಿರುವ ಪಾವಾಪುರಿಯಲ್ಲಿ ಮೋಕ್ಷ ಹೊಂದಿದನೆಂದು ನಂಬಲಾಗಿದೆ (ಜೈನ ಧರ್ಮದ ಒಂದು ಪಂಥದ ಅನುಯಾಯಿಗಳ ಪ್ರಕಾರ ಅವನು ಹತ್ತಿರದ ಗ್ರಾಮವಾದ ಕುಂಡಲಾಪುರದಲ್ಲಿ ಜನಿಸಿದ್ದ)[ಸೂಕ್ತ ಉಲ್ಲೇಖನ ಬೇಕು]
ರಾಜ ಅಶೋಕನು (ಕ್ರಿ.ಶ. 250)ಯಲ್ಲಿ ಸರಿಪುಟ್ಟನ ನೆನಪಿಗಾಗಿ ಒಂದು ಸ್ತೂಪವನ್ನು ಅಲ್ಲಿ ಕಟ್ಟಿಸಿದ್ದನೆಂದು ಹೇಳಲಾಗುತ್ತದೆ. ಟಿಬೆಟಿಯನ್ನರ ಮೂಲದ ಪ್ರಕಾರ ನಾಗಾರ್ಜುನನ ಅಭ್ಯಾಸ ಇಲ್ಲೇ ನಡೆದುದಾಗಿದೆ.[೧೮]
ವಿಶ್ವವಿದ್ಯಾಲಯದ ಸ್ಥಾಪನೆ ಮತ್ತು ಗುಪ್ತರ ಪೂರ್ಣ ವೈಭವದ ಕಾಲ[ಬದಲಾಯಿಸಿ]
ನಳಂದ ವಿಶ್ವವಿದ್ಯಾಲಯವು ಗುಪ್ತ ಸಾಮ್ರಾಟ ಕುಮಾರಗುಪ್ತನ ಕಾಲದಲ್ಲಿ ಸ್ಥಾಪಿತಗೊಂಡಿತೆಂದು ಐತಿಹಾಸಿಕ ಅಧ್ಯಯನವು ತಿಳಿಸುತ್ತದೆ.[೩] ಆ ಸ್ಥಳದಲ್ಲಿ ಅವನ ಒಂದು ಮುದ್ರೆಯು ದೊರೆತಿದ್ದರಿಂದ ಪ್ರಜ್ಞ್ಯಾವರ್ಮ ಮತ್ತು ಜುವಾಂಗ್ಜಾಂಗ್ ಇಬ್ಬರೂ ಅವನನ್ನೇ ಇದರ ಸ್ಥಾಪಕನೆಂದು ಉಲ್ಲೇಖಿಸಿದ್ದಾರೆ.[೫]
ಇತಿಹಾಸಜ್ಞ ಸುಕುಮಾರ್ ದತ್ತರು ಹೇಳುವಂತೆ, ನಳಂದ ವಿಶ್ವವಿದ್ಯಾಲಯದ ಚರಿತ್ರೆಯು " ಎರಡು ಮುಖ್ಯ ವಿಭಾಗವಾಗಿದೆ--ಮೊದಲನೆಯದಾಗಿ ಗುಪ್ತರ ವಂಶಪಾರಂಪರ್ಯದ ಪ್ರಗತಿಪರ ಸಾಂಸ್ಕೃತಿಕ ಸಂಪ್ರದಾಯದ ಮೇಲೆ ಪ್ರಭಾವ ಬೀರಿದ ಆರರಿಂದ ಒಂಬತ್ತನೆಯ ಶತಮಾನದವರೆಗೆ ಇದರ ಬೆಳವಣಿಗೆ, ಅಭಿವೃದ್ಧಿ ಮತ್ತು ಸೌಕರ್ಯ; ಎರಡನೆಯದಾಗಿ ಒಂಬತ್ತರಿಂದ ಹದಿಮೂರನೇ ಶತಮಾನದವರೆಗಿನ ಕ್ರಮವಾದ ಇಳಿಮುಖ ಸಾಧನೆ ಮತ್ತು ಕೊನೆಗೆ ಸಂಪೂರ್ಣ ವಿಭಜನೆ-ಪೂರ್ವ ಭಾರತದಲ್ಲಿ ಬುದ್ಧರ ತಾಂತ್ರಿಕ ಅಭಿವೃದ್ಧಿಯು ಬಲವಾಗಿದ್ದ ಕಾಲ.[೧೯]
ಪಾಲ ಯುಗದಲ್ಲಿ[ಬದಲಾಯಿಸಿ]
ಪಾಲರ ಕಾಲದಲ್ಲಿ ಪುರಾತನ ಬಂಗಾಲ ಮತ್ತು ಮಗಧದಲ್ಲಿ ಅನೇಕ ಮಠಗಳು ಬೆಳೆದವು. ಟಿಬೆಟಿಯನ್ನರ ಮೂಲದ ಪ್ರಕಾರ, ಐದು ಶ್ರೇಷ್ಠ ಮಹಾವಿಹಾರಗಳು ಹೊರಬಂದವು: ವಿಕ್ರಮಶಿಲ, ಆ ಯುಗದ ಸರ್ವ ಶ್ರೇಷ್ಠ ವಿಶ್ವವಿದ್ಯಾಲಯ; ನಳಂದ, ಗತಕಾಲದಲ್ಲಿ ಪ್ರಾಧಾನ್ಯತೆ ಪಡೆದು ಇನ್ನೂ ಹೆಸರುವಾಸಿಯಾಗಿದೆ, ಸೋಮಪುರ, ಓಡಂತಪುರ ಮತ್ತು ಜಗ್ಗದಲ .[೨೦] ಐದು ಮಠಗಳು ಒಂದು ಸಂಪರ್ಕ ವ್ಯವಸ್ಠೆಯನ್ನು ರೂಪುಗೊಳಿಸಿದವು; "ಅವೆಲ್ಲವೂ ರಾಜ್ಯದ ಮೇಲ್ವಿಚಾರಣೆಯಲ್ಲಿದ್ದವು" ಮತ್ತು ಅಲ್ಲಿ "ಅವರಲ್ಲೇ ಒಂದು ಸಹಕಾರ ವ್ಯವಸ್ಥೆ ಇತ್ತು...ಒಂದು ಜಾಲಸಂಪರ್ಕದಲ್ಲಿದ್ದ ಪಾಲರು ಪೂರ್ವ ಭಾರತದಲ್ಲಿ ಬೌದ್ಧರ ವಿವಿಧ ವ್ಯಾಸಂಗ ಪೀಠಗಳು ಅಂತರ ಸಂಬಂಧ ಹೊಂದಿದ ಸಂಸ್ಥೆಗಳಾಗಿ ಕಾರ್ಯ ನಿರ್ವಹಿಸುತ್ತಿದ್ದುದಕ್ಕೆ ಸಾಕ್ಷಿಗಳಿರುವಂತೆ ತೋರುತ್ತದೆ" ಮತ್ತು ಶ್ರೇಷ್ಠ ಪಂಡಿತರು ಒಂದು ಸ್ಥಾನದಿಂದ ಮತ್ತೊಂದು ಸ್ಥಾನಕ್ಕೆ ಸುಲಭವಾಗಿ ವರ್ಗಾವಣೆ ಹೊಂದುವುದು ಸಾಮಾನ್ಯವಾಗಿತ್ತು.[೨೧]
ಪಾಲ ಯುಗದಲ್ಲಿ ನಾಲಂದವು ಮಹೋನ್ನತ ಸ್ಥಾನದಲ್ಲಿದ್ದ ಏಕಮೇವ ಸಂಸ್ಥೆಯಾಗಿತ್ತು, ಬೇರೆಲ್ಲ ಪಾಲ ಸಂಸ್ಥೆಗಳಂತೆ "ಅನೇಕ ಪಾಂಡಿತ್ಯ ಹೊಂದಿದ ಸಂತರು ನಾಲಂದದವರಾಗಿದ್ದು....ಪಾಲರ ಐಜೀಸ ಅಧೀನದಲ್ಲಿದ್ದರು".[೧೯]
ಅವನತಿ ಮತ್ತು ಅಂತ್ಯ[ಬದಲಾಯಿಸಿ]
ಕೆಲವು ಭಾರತೀಯ ಚರಿತ್ರೆಕಾರರ ಪ್ರಕಾರ, ಸುಮಾರು 10ನೆಯ ಶತಮಾನದ ಸಮಯದಲ್ಲಿ ನಳಂದ ಮೇಲಿನ ಒತ್ತಡ ಹೆಚ್ಚತೊಡಗಿತು.[೨೨] ಚರಿತ್ರೆಕಾರ ಪ್ರಕಾಶ್ ಬುದ್ದ್ರ ಪ್ರಕಾರ, ಹಿಂದುಗಳಿಂದ ಮಾಡಿದ ಒಂದು ಯಜ್ಞ ಅಗ್ನಿ ಯಾಗವು ಮಹಾಜ್ವಾಲೆಯಾಗಿ ಮಾರ್ಪಟ್ಟು ಅದು ನಳಂದದ ಒಂಬತ್ತು ಮಹಡಿಯ ಗ್ರಂಥಾಲಯವಾದ, ರತ್ನಭೋದಿಯನ್ನು ನಾಶಪಡಿಸಿತು.[೨೩] ಅವರ ಸೋಷಿಯಲ್ ಹಿಸ್ಟರಿ ಆಫ್ ಇಂಡಿಯಾ ದಲ್ಲಿ, ಚರಿತ್ರೆಕಾರ ಸದಾಶಿವಂ ಹೇಳುತ್ತಾರೆ, "ವಿಶ್ವವಿದ್ಯಾನಿಲಯದ ಬೃಹತ್ತಾದ ಹಸ್ತಪ್ರತಿ ಗ್ರಂಥಾಲಯವನ್ನು ಟ್ರಿಥಿಕಾರು ಜೈನರ ಸಹಾಯದಿಂದ ಅಗ್ನಿಗೆ ಆಹುತಿಮಾಡಿದ್ದರು, ಇದಕ್ಕೆ ಕಾರಣ ಕಲಿಕೆಯ ಭವ್ಯ ಕೇಂದ್ರದ ವಿರುದ್ದ ಅವರು ಹೊಂದಿದ್ದ ಅಸೂಯೆ ಹೆಚ್ಚಾಗುತ್ತಿದ್ದುದು."[೨೪]
1193ರಲ್ಲಿ, ನಳಂದ ವಿಶ್ವವಿದ್ಯಾನಿಲಯವನ್ನು, ಟರ್ಕಿ ದೇಶಸ್ತ ಇಸ್ಲಾಮ್ ಧರ್ಮದ ಮತಾಂಧ ಭಕ್ತಿಯಾರ್ ಖಿಲ್ಜಿ ಕೊಳ್ಳೆಹೊಡೆದನು;[೨೫] ಈ ಪ್ರಸಂಗವನ್ನು ವಿದ್ವಾಂಸರು ಭಾರತದಲ್ಲಿನ ಬೌದ್ಧಮತ ಅವನತಿಯಲ್ಲಿನ ಪ್ರಮುಖಹಂತವನ್ನಾಗಿ ಕಂಡರು. ಪರ್ಶಿಯಾದ ಚರಿತ್ರೆಕಾರ ಮಿನ್ಹಾಜ್-ಐ-ಸಿರಜ್, ಅವರ ಐತಿಹಾಸಿಕ ದಾಖಲೆ ಟಬಾಕ್ವತ್-ಐ-ನಸಿರಿ ಯಲ್ಲಿ, ಬೌದ್ಧಮತವನ್ನು ಕಿತ್ತುಹಾಕಿ ಇಸ್ಲಾಮ್ ಧರ್ಮವನ್ನು ಸ್ಥಾಪಿಸಲು ಖಿಲ್ಜಿ ಮಾಡಿದ ಪ್ರಯತ್ನದಲ್ಲಿ ಸಾವಿರಾರು ಸನ್ಯಾಸಿಗಳನ್ನು ಜೀವಂತ ಸುಡಲಾಯಿತು ಮತ್ತು ಸಾವಿರಾರು ಸನ್ಯಾಸಿಗಳ ಶಿರಚ್ಛೇದ ಮಾಡಲಾಯಿತು ಎಂದು ವರದಿ ಮಾಡಿದ್ದರು;[೨೬] ಗ್ರಂಥಾಲಯ ಉರಿಯುವಿಕೆಯು ಸ್ನೆಕ ತಿಂಗಳ ವರೆಗೂ ಮುಂದುವರೆಯಿತು ಮತ್ತು "ಉರಿಯುತ್ತಿರುವ ಹಸ್ತಪ್ರತಿಗಳಿಂದ ಬರುವ ಹೊಗೆಯು ಅನೇಕ ದಿನಗಳ ವರೆಗೂ ಗುಡ್ಡದ ಮೇಲಿನ ದಟ್ಟ ಮುಸುಕುನಂತೆ ಆವರಿಸಿತ್ತು."[೨೭]
ನಳಂದದ ಕೊನೆಯ ದೊರೆತನ-ಒಡೆಯ, ಶಕ್ಯಶ್ರಿಭದ್ರ, ಕ್ರಿ.ಶ. 1204 ರಲ್ಲಿ ಟಿಬೆಟಿನ ಅನುವಾದಕ ಟ್ರೊಪು ಲೊಟ್ಸವನ (ಖ್ರೊ-ಫು ಲೊ-ತ್ಸ-ಬ ಬ್ಯಾಮ್ಸ್-ಪ ದ್ಪಾಲ್ ) ಆಮಂತ್ರಣದಲ್ಲಿ ಟಿಬೆಟ್ಗೆ ಪಲಾಯನ ಮಾಡಿದರು. ಟಿಬೆಟ್ನಲ್ಲಿ ಅವರು ಇರುವ ಎರಡನ್ನು ಸಂಪೂರ್ಣಗೊಳಿಸಲು ಮುಲಾಸರ್ವಸ್ತಿವಾದಿನ್ ವಂಶಾವಳಿಯ ಶ್ರೇಣೀಕರಣ ವಂಶಾವಳಿಯನ್ನು ಪ್ರಾರಂಭಿಸಿದ್ದರು.
1235ರಲ್ಲಿ ಟಿಬೆಟಿನ ಅನುವಾದಕ ಚಾಂಗ್ ಲೋತ್ಸವಾ (ಚಾಗ್ ಲೊ-ತ್ಸ-ಬ , 1197–1264) ಸ್ಥಳವನ್ನು ಸಂದರ್ಶಿಸಿದಾಗ, ಅವರು ಸುಮಾರು 70 ವಿದ್ಯಾರ್ಥಿಗಳಿಗೆ ಬೋಧಿಸುತ್ತಿದ್ದ 90 ವರ್ಷ ವಯಸ್ಸಿನ ಬೋಧಕರೊಂದಿಗೆ ಇದು ನಾಶವಾಗಿರುವುದು ಮತ್ತು ಕೊಳ್ಳೆಗೊಳಗಾಗಿರುವುದನ್ನು ಕಂಡರು.[೨೮][೨೯] ಚಾಂಗ್ ಲೋತ್ಸವಾ'ರ ಸಮಯದಲ್ಲಿ ಟರ್ಕಿ ಸೈನಿಕರಿಂದ ನಡೆಸಲಾದ ಅನಿರೀಕ್ಷಿತ ದಾಳಿ ಉಳಿದ ವಿದ್ಯಾರ್ಥಿಗಳು ಪಲಾಯನವಾಗುವಂತೆ ಮಾಡಿತು. ಇವುಗಳೆಲ್ಲವನ್ನೂ ಹೊರತುಪಡಿಸಿ, "ದುರ್ಬಲವಾದ ಬುದ್ಧ ಸಮುದಾಯದ ಅಲ್ಪಾಅವಶೇಷಗಳು, ಚಗಲರಾಜ ನಳಂದವನ್ನು ಪ್ರೋತ್ಸಾಹಿಸುವ ಕೊನೆಯ ರಾಜ ಎಂದು ಕಲ್ಪಿಸುಕೊಂಡ ಕ್ರಿ.ಶ. 1400 ವರೆಗೂ ಭೀತಿಯ ಮಾರ್ಗದಡಿಯಲ್ಲಿ ಕಷ್ಟಪಡುವುದು ಮುಂದುವರೆದಿತ್ತು. "[೩೦]
ದೇವಸ್ಥಾನಗಳ, ಮಠಗಳ, ನಳಂದದ ಕಲಿಕಾ ಕೇಂದ್ರಗಳ ವಿನಾಶವನ್ನು ಮತ್ತು ಗಣಿತಶಾಸ್ತ್ರ, ಖಗೋಳ ವಿಜ್ಞಾನ, ರಸವಿದ್ಯ, ಮತ್ತು ಶರೀರ ರಚನಾ ಶಾಸ್ತ್ರದಲ್ಲಿನ ಪುರಾತನ ಭಾರತೀಯ ವೈಜ್ಞಾನಿಕ ಕಲ್ಪನೆಯ ಅಳಿವಿಗೆ ಉತ್ತರದಿಕ್ಕಿನ ಭಾರತವೇ ಹೊಣೆಯಾಗುತ್ತದೆ ಎಂದು ಅಹಿರ್ ಪರಿಗಣಿಸುತ್ತಾರೆ.[೩೧]
ಸ್ಥೂಲ ಸಮೀಕ್ಷೆ[ಬದಲಾಯಿಸಿ]
Pilgrimage to
Buddha's Holy Sites |
![]() |
The Four Main Sites |
---|
Lumbini · Bodh Gaya Sarnath · Kushinagar |
Four Additional Sites |
Sravasti · Rajgir Sankissa · Vaishali |
Other Sites |
Pataliputra · Gaya · Kosambi Kapilavastu · Devadaha Kesariya · Pava Nalanda · Varanasi |
Later Sites |
Sanchi · Mathura Ellora · Ajanta · Vikramshila Ratnagiri · Udayagiri · Lalitgiri Bharhut · Barabar Caves |
——— ನಳಂದವು ಜಗತ್ತಿನ ಮೊತ್ತ ಮೊದಲ ವಸತಿಸೌಕರ್ಯ ಹೊಂದಿದ್ದ ವಿಶ್ವವಿದ್ಯಾಲಯವಾಗಿತ್ತು, ಅಂದರೆ ವಿದ್ಯಾರ್ಥಿಗಳಿಗೆ ವಸತಿಗೃಹಗಳಿದ್ದವು. ಇದುಅತ್ಯಂತ ಪ್ರಸಿದ್ಧವಾದ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿತ್ತು. ಇದು ತನ್ನ ಉತ್ತುಂಗ ಸ್ಥಿತಿಯಲ್ಲಿದ್ದಾಗ ಸುಮಾರು 10,000 ವಿದ್ಯಾರ್ಥಿಗಳನ್ನು ಮತ್ತು 2,000 ಅಧ್ಯಾಪಕರನ್ನು ಒಳಗೊಂಡಿತ್ತು. ವಿಶ್ವವಿದ್ಯಾಲಯವನ್ನು ವಾಸ್ತುಶಾಸ್ತ್ರದ ಮೇರುಕೃತಿ ಎಂದು ಪರಿಗಣಿಸಲಾಗಿದೆ, ಅದನ್ನು ಒಂದು ಉನ್ನತವಾದ ಗೋಡೆಯಿಂದ ಮತ್ತು ಒಂದು ದ್ವಾರದಿಂದ ಗುರುತಿಸಲಾಗುತ್ತದೆ. ನಳಂದವು ಎಂಟು ಬೇರೆ ಬೇರೆ ಮೋಟು ಗೋಡೆಗಳನ್ನು ಮತ್ತು ಹತ್ತು ದೇವಾಲಯಗಳು, ಅಲ್ಲದೆ ಅನೇಕ ಧ್ಯಾನದ ಹಜಾರಗಳು ಮತ್ತು ಪಾಠದ ಕೋಣೆಗಳನ್ನು ಹೊಂದಿತ್ತು. ಮೈದಾನದಲ್ಲಿ ಸರೋವರಗಳು ಮತ್ತು ಉದ್ಯಾನವನಗಳಿದ್ದವು. ಗ್ರಂಥಾಲಯವು ಒಂಬತ್ತು ಅಂತಸ್ತುಗಳ ಕಟ್ಟಡವಾಗಿತ್ತು,ಅಲ್ಲಿ ಶಾಸ್ತ್ರದ ಸೂಕ್ಷ್ಮ ಪ್ರತಿಗಳನ್ನು ಇಡಲಾಗಿತ್ತು. ನಳಂದ ವಿಶ್ವವಿದ್ಯಾಲಯದಲ್ಲಿ ಕಲಿಕೆಯ ಎಲ್ಲ ಕ್ಷೇತ್ರಗಳನ್ನು ಕಲಿಸುವ ವ್ಯವಸ್ಥೆಯಿತ್ತು, ಮತ್ತು ಅದು ಕೊರಿಯ, ಜಪಾನ್, ಚೈನಾ, ಟಿಬೆಟ್, ಇಂಡೊನೇಶಿಯಾ, ಪರ್ಶಿಯ ಮತ್ತು ಟರ್ಕಿಯ ವಿದ್ಯಾರ್ಥಿಗಳು ಮತ್ತು ಪಂಡಿತರನ್ನು ಆಕರ್ಷಿಸಿತ್ತು.[೪]
ಚೈಟ್ಯಾಂಗ್ ವಂಶದ ಚೈನಾ ಯಾತ್ರಿಕ ಜುವಾಂಗ್ಜಂಗ್ನು 7ನೇ ಶತಮಾನದ ವಿಶ್ವವಿದ್ಯಾಲಯದ ಸ್ಥಿತಿ ಗತಿಗಳ ಮೇಲೆ ನಿಖರವಾದ ವಿವರಣೆಯನ್ನು ನೀಡಿದ್ದಾನೆ. ಸಮಾನಾಂತರವಾಗಿ ಶೃಂಗರಿಸಿದ ಗೋಪುರಗಳು, ಕ್ರೀಡಾಂಗಣದ ಗಿಡ ಮರಗಳು, ಕಟ್ಟಡಗಳು ಮತ್ತು ದೇವಾಲಯಗಳು ಆಕಾಶದ ಮಂಜಿನಿಂದ ಮೇಲೆ ಹಾರುತ್ತಿರುವಂತೆ ಕಾಣುತ್ತಿತ್ತು, ಆದ್ದರಿಂದ ಸನ್ಯಾಸಿಗಳು ತಮ್ಮ ಕೋಣೆಗಳಿಂದಲೇ " ವಾಯು ಪ್ರಭಾವ ಮತ್ತು ಮೋಡಗಳ ಆಗಮಿಸುವಿಕೆಗೆ ಸಾಕ್ಷಿಯಾಗುತ್ತಿದ್ದರು" ಎಂದು ಜುವಾಂಗ್ಜಂಗ್ ವಿವರಿಸಿದ್ದಾನೆ.[೩೨] ಜುವಾಂಗ್ಜಂಗ್ ಹೇಳುತ್ತಾನೆ: "ಸಂಪೂರ್ಣವಾಗಿ ಅರಳಿದ ನೀಲಿ ಕಮಲಗಳ ಚೆಲುವಿನಿಂದಾದ ಆಕಾಶ ನೀಲಿ ಬಣ್ಣದ ಸರೋವರದ ಗಾಳಿಯು ಮಠದ ಸುತ್ತ ಪಸರಿಸಿರುತ್ತಿತ್ತು;ಕೆಂಪು ಬಣ್ಣದ ಮನೋಹರವಾದ ಕನಕ ಪುಷ್ಪವು ಅಲ್ಲಲ್ಲೇ ತೂಗಾಡುತ್ತಿರುತ್ತಿದ್ದವು ಮತ್ತು ಹೊರಗಿನ ಮಾವಿನ ತೋಪು ತನ್ನಲ್ಲಿ ವಾಸಮಾಡುವ ಜೀವಿಗಳಿಗೆ ದಟ್ಟವಾದ ಮತ್ತು ರಕ್ಷಣಾತ್ಮಕವಾದ ನೆರಳನ್ನು ನೀಡುತ್ತಿತ್ತು.[೩೩] ಜುವಾಂಗ್ಜಂಗ್ ಹೇಳುತ್ತಾನೆ: " ಇಲ್ಲಿ ವಾಸಿಸುವ ಎಲ್ಲ ಸದ್ಗುಣಿಗಳನ್ನು ಔಪಚಾರಿಕವಾಗಿ ಮತ್ತು ಕಟ್ಟುನಿಟ್ಟಾಗಿ ಗಮನಿಸಲಾಗುತ್ತಿತ್ತು. ಆದ್ದರಿಂದ ಏಳುನೂರು ವರ್ಷಗಳ ಮಠಗಳ ಅಸ್ತಿತ್ವದಲ್ಲಿ ಒಬ್ಬ ವ್ಯಕ್ತಿಯೂ ಶಿಸ್ತಿನ ನಿಯಮಗಳನ್ನು ಉಲ್ಲಂಘಿಸಲಿಲ್ಲ. ರಾಜನು ಗೌರವ ಮತ್ತು ಪೂಜ್ಯಭಾವನೆಯ ಕುರುಹಾಗಿ ಇದನ್ನು ಸುರಿಸುತ್ತಿದ್ದನು ಮತ್ತು ಧರ್ಮದ ಸಂರಕ್ಷಣೆಗಾಗಿ ಹತ್ತು ಪಟ್ಟಣಗಳ ಕಂದಾಯವನ್ನು ಗೊತ್ತುಮಾಡಿದ್ದನು.[೩೪]

ನಳಂದ ವಿಶ್ವವಿದ್ಯಾಲಯದ ವಿಹಾರಗಳ ಪಾಳು ಸ್ಥಳದಲ್ಲಿ ಧನುಸ್ಸಿನ ಚಿತ್ರವಿರುವ ನೆಲಹಾಸನ್ನು ಕಾಣುತ್ತೇವೆ; ಧನುಸ್ಸು ಗುಪ್ತರ ರಾಜ ಮುದ್ರೆಯ ಚಿಹ್ನೆಯಾಗಿತ್ತು.
ಗ್ರಂಥಾಲಯಗಳು[ಬದಲಾಯಿಸಿ]
ಧರ್ಮ ಗಂಜ್ (ನಿಜದ ಪರ್ವತ) ಅಥವಾ ಧರ್ಮಗಂಜಾ (ನಿಜದ ಖಜಾನೆ)ಎಂದು ಕರೆಯಲಾಗುವ ನಳಂದ ಗ್ರಂಥಾಲಯ , ಆ ಕಾಲದಲ್ಲಿ ವಿಶ್ವದಲ್ಲಿಯೇ ಹೆಚ್ಚು ಚಿರಪರಿಚಿತ ಬೌದ್ಧೀಯ ಜ್ಞಾನದ ಖಜಾನೆಯಾಗಿದ್ದ ಅತಿ ದೊಡ್ಡ ಉಗ್ರಾಣವಾಗಿತ್ತು. ಈ ಸಂಗ್ರಹದಲ್ಲಿ ಸಾವಿರಾರು ನೂರುಗಳಷ್ಟು ಸಂಪುಟಗಳನ್ನು ಹೊಂದಿತ್ತು, ಆದ್ದರಿಂದ ಮುಸ್ಲಿಂ ದಾಳಿಕಾರರು ಹತ್ತಿಸಿದ ಬೆಂಕಿಯಿಂದ ತಿಂಗಳುಗಟ್ಟಲೆ ಉರಿದಿತ್ತು. ಗ್ರಂಥಾಲಯವು ಮೂರು ಮುಖ್ಯ ಕಟ್ಟಡಗಳನ್ನು ಒಳಗೊಂಡಿದೆ, ಒಂಭತ್ತು ಮಹಡಿಗಳಷ್ಟು ಎತ್ತರದ್ದಾಗಿದೆ, ರತ್ನಸಾಗರ (ರತ್ನಗಳ ಸಮುದ್ರ), ರತ್ನೊಡಧಿ (ರತ್ನಗಳ ಸಾಗರ), ಮತ್ತು ರತ್ನರಂಜಕ (ರತ್ನಗಳನ್ನು ಸಂತೋಷಗೊಳಿಸುವುದು).[೩೫][೩೬]
ಪಠ್ಯಕ್ರಮ[ಬದಲಾಯಿಸಿ]
ಧರ್ಮ ಸಹಭಾಗಿತ್ವದ (2005) ವಿಶೇಷ ಗುಣಧರ್ಮ ಹೊಂದಿಲ್ಲದ ಲೇಖನದ ಪ್ರಕಾರ, ಮಂಜುಶ್ರಿಮಿತ್ರ ಕಾಲದ ನಳಂದ ವಿಶ್ವವಿದ್ಯಾನಿಲಯ ಒಳಗೊಂಡಿದ್ದ ಪಠ್ಯಕ್ರಮ:
...ವಾಸ್ತವವಾಗಿ ಪ್ರಪಂಚದ ಸಂಪೂರ್ಣ ತಿಳುವಳಿಕೆಯು ಆಗ ಲಭ್ಯವಿತ್ತು. ಬೌದ್ಧ ಮತ್ತು ಹಿಂದು, ಪವಿತ್ರವಾದ ಮತ್ತು ಜಾತ್ಯಾತೀತ, ವಿದೇಶಿ ಮತ್ತು ಸ್ಥಳೀಯ ಹೀಗೆ ಪ್ರತಿಯೊಂದು ಕಲಿಕಾಕ್ಷೇತ್ರದಿಂದಲೂ ಕೋರ್ಸ್ಗಳನ್ನು ಹೊಂದಿತ್ತು. ವಿದ್ಯಾರ್ಥಿಗಳು ವಿಜ್ಞಾನ, ಖಗೋಳ ವಿಜ್ಞಾನ, ವೈದ್ಯಕೀಯ, ಮತ್ತು ತರ್ಕಶಾಸ್ತ್ರವನ್ನು ಅಭ್ಯಸಿಸಲು, ಆಧ್ಯಾತ್ಮಿಕ ಸಿದ್ಧಾಂತ, ತತ್ವಶಾಸ್ತ್ರ, ಸಾಂಖ್ಯ, ಯೋಗ-ಶಾಸ್ತ್ರ, ವೇದ, ಮತ್ತು ಬೌದ್ಧ ಧರ್ಮದ ಪವಿತ್ರ ಗ್ರಂಥಗಳಲ್ಲಿ ತಮ್ಮನ್ನು ತಾವು ಶ್ರದ್ದಾಯುಕ್ತವಾಗಿ ತೊಡಗಿಸಿಕೊಳ್ಳುತ್ತಿದ್ದರು. ಹಾಗೆಯೇ ಅವರು ವಿದೇಶಿ ತತ್ವಶಾಸ್ತ್ರವನ್ನು ಸಹ ಅಭ್ಯಸಿಸುತ್ತಿದ್ದರು.
ಬರ್ಝಿನ್ (2002) ರೂಪುರೇಖೆಗೊಳಿಸಿದ "ಫೋರ್ ಸಿಸ್ಟಮ್ಸ್ ಆಫ್ ಬುದ್ಧಿಸ್ಟ್ ಟೆನೆಟ್ಸ್" ಅಥವಾ "ಫೋರ್ ಡಾಕ್ಸೊಗ್ರಫೀಸ್" (ಟಿಬೆಟಿಯನ್: ಗ್ರಬ್-ಮ್ತಾ’ ), ನಳಂದದಲ್ಲಿ ಶಿಕ್ಷಣ ಪಡೆದದ್ದು, ವೈಭಶಿಕಾ (ಟಿಬೆಟಿಯನ್: ಬೈ-ಬ್ರಾಗ್ ಸ್ಮ್ರಾ-ಬಾ ) ಮತ್ತು ಸೌತ್ರಂತಿಕ (ಟಿಬೆಟಿಯನ್:ಸರ್ವಸ್ತಿವಾದದ mdo-sde-pa ) (ಟಿಬೆಟಿಯನ್: thams-cad yod-par smra-ba ); ಮತ್ತು ಚಿತ್ತಮಾತ್ರ (ಸಂಸ್ಕೃತ: sems-tsam-pa ) ಮತ್ತು ಮಹಾಯಾನದ ಮಧ್ಯಮಾಕ (ಟಿಬೆಟಿಯನ್: dbu-ma-pa ) :
ನಳಂದಗಳಂತಹ, ಭಾರತೀಯ ಮಹಾಯಾಣ ಬೌದ್ಧ ಮಠಗಳಲ್ಲಿ, ಸನ್ಯಾಸಿಗಳು ಬೌದ್ಧ ತತ್ವಗಳ ನಾಲ್ಕು ಪದ್ಧತಿಗಳನ್ನು ಅಭ್ಯಸಿಸಿದ್ದರು. ವೈಭಾಶಿಕ ಮತ್ತು ಸಾತ್ರಾಂತಿಕ – ಎರಡೂ – ಹಿನಾಯಾನ ಒಳಗಿನ ಸರ್ವಸ್ತಿವಾದ ಶಾಲೆಯ ಉಪವಿಭಾಗಗಳು. ಇತರ ಎರಡು – ವಿತ್ತಮಂತ್ರ ಮತ್ತು ಮಾಧ್ಯಮಕಗಳು – ಮಹಾಯಾನದ ಒಳಗಿನ ಉಪವಿಭಾಗಗಳು.[೩೭]
ಬೌದ್ಧಮತದ ಮೇಲಿನ ಪ್ರಭಾವ[ಬದಲಾಯಿಸಿ]
ಯಾವುದೊ ಒಂದು ಬೃಹತ್ ಪ್ರಮಾಣವು ಟಿಬೆಟರ ಬೌದ್ಧಮತವನ್ನು ಅಡಕಮಾಡಲು ಬಂತು, ಇದರ ಸುಟ್ರಿಕ್ (ಸಂಸ್ಕೃತ ಸಾಹಿತ್ಯ) ಮಹಾಯಾನ ಸಂಪ್ರದಾಯಗಳು ಮತ್ತು ಇದರ ವಜ್ರಾಯಣ ಸಂಪ್ರದಾಯಗಳು ಎರಡೂ, ದಿವಂಗತ (9ನೆಯ–12ನೆಯ ಶತಮಾನ) ನಳಂದ ಅಧ್ಯಾಪಕರು ಮತ್ತು ಸಂಪ್ರದಾಯಗಳಿಂದ ಉದ್ಭವಿಸಿವೆ. ವಿದ್ವಾಂಸ ಧರ್ಮಕೀರ್ತಿ (ca. 7ನೆಯ ಶತಮಾನ), ಭಾರತೀಯ ಆಧ್ಯಾತ್ಮಿಕ ತರ್ಕದ ಬೌದ್ಧ ಸಂಸ್ಥಾಪಕರಲ್ಲಿ ಒಬ್ಬರು, ಹಾಗು ನಳಂದದಲ್ಲಿ ಭೋದಿಸಲಾದ, ಬೌದ್ಧ ಪಾರ್ಥ್ಯಕ್ಯವಾದದ ಪ್ರಾಥಮಿಕ ಥೇರಿಸ್ಟ್ಗಳಲ್ಲಿ (ಅಮೂರ್ತವಾದದ ತತ್ವವಿಚಾರಗಳಲ್ಲಿ ಪರಿಣತರು) ಒಬ್ಬರು.
ಬೌದ್ಧಮತದ ಇತರ ನಮೂನೆಗಳು, ವಿಯಟ್ನಂ, ಚೈನಾ, ಕೊರಿಯಾ ಮತ್ತು ಜಪಾನಿನಲ್ಲಿ ಅನುಸರಿಸುವ ಮಹಾಯಾನ ಮಾದರಿಯಲ್ಲಿ, ಪುರಾತನ ವಿಶ್ವವಿದ್ಯಾನಿಲಯಗಳಲ್ಲಿ ಅವುಗಳ ಮೂಲವನ್ನು ಕಂಡುಹಿಡಿದರು.
ಚೈನಾದ ಸಂದರ್ಶಕ ಹ್ವೈ-ಲಿ ಪ್ರಕಾರ, ನಳಂದವನ್ನು ಅದರ ಮಹಾಯಾನ ಸಿದ್ಧಾಂತದ ಮೇಲಿನ ಪ್ರಾಧಾನ್ಯತೆಗಾಗಿ, ಕೆಲವು ಥೆರವಂದಿನರಿಂದ ತಿರಸ್ಕರಿಸಲಾಯಿತು. ಅವರು ರಾಜ ಹರ್ಷವರ್ಧನನನ್ನು ಅವನ ಒಡಿಶಾ ಭೇಟಿಯ ಸಮಯದಲ್ಲಿ ನಳಂದವನ್ನು ಬೆಂಬಲಿಸಿದ್ದಕ್ಕಾಗಿ ಛೀಮಾರಿ ಹಾಕಿದ್ದ ವರದಿಯಾಗಿತ್ತು, "ಸ್ಕೈ-ಫ್ಲವರ್" ಸಿದ್ಧಾಂತವನ್ನು ಅಣಕಿಸುವುದನ್ನು ಅಲ್ಲಿ ನೆನೆಸಲಾಗಿತ್ತು ಮತ್ತು ಅವರು ಕಪಾಲಿಕ ದೇವಸ್ಥಾನವನ್ನು ಪ್ರೋತ್ಸಾಹಿಸಬಹುದು ಎಂಬುದನ್ನು ಸೂಚಿಸಲಾಗಿತ್ತು.[೩೮]
ಭಗ್ನಾವಶೇಷಗಳು[ಬದಲಾಯಿಸಿ]
ಅನೇಕ ಸಂಖ್ಯೆಯ ಭಗ್ನಾವಶೇಷಗಳು ಅಸ್ತಿತ್ವದಲ್ಲಿವೆ. ಹತ್ತಿರದಲ್ಲಿ ಸೂರ್ಯ ಮಂದಿರ ಎಂಬ, ಹಿಂದು ದೇವಾಲಯವಿದೆ. ಪ್ರಸಿದ್ಧ ಮತ್ತು ಅಗೆದು ತೆಗೆದ ಭಗ್ನಾವಶೇಷಗಳು ಸುಮಾರು 150,000 ಚದುರ ಮೀಟರುಗಳಷ್ಟು ಆವರಿಸಿವೆ, ಅದಾಗ್ಯೂ ನಳಂದಾ’ದ ವ್ಯಾಪ್ತಿಯ ಕ್ಸ್ವಾಂಝಾಂಗ್'ನ ಖಾತೆಯು ಪ್ರಸ್ತುತ ಅಗೆದು ತಗೆದವುಗಳೊಂದಿಗೆ ಸಹ ಸಂಬಂಧಹೊಂದಿದ್ದರೂ, ಇವುಗಳಲ್ಲಿ ಸುಮಾರು 90% ಅಗೆದುತಗೆದದ್ದವಲ್ಲ. ನಲಂದಾ ಹೆಚ್ಚುಕಾಲ ಉಳಿಯಲಿಲ್ಲ. ಈಗಿನ ಹತ್ತಿರದ ವಾಸಸ್ಥಳವು ಬರ್ಗನ್ ಎಂದು ಕರೆಯಲ್ಪಡುವ ಗ್ರಾಮ.

1951ರಲ್ಲಿ, ಪಲಿ (ಥೆರವಾಡಿನ್) ಬೌದ್ಧ ಅಧ್ಯಯನಕ್ಕಾಗಿ ಆಧುನಿಕ ಕೇಂದ್ರವನ್ನು ಬಿಕ್ಷು ಜಗ್ದಿಷ್ ಕಷ್ಯಾಪ್, ನವ ನಳಂದ ಮಹಾವಿಹಾರ ಹತ್ತಿರ ಸ್ಥಾಪಿಸಲಾಯಿತು. ಈಗ, ಈ ಸಂಸ್ಥೆಯು ಸಂಪೂರ್ಣ ಪ್ರಾಂತದ ಉಪಗ್ರಹ ಕಲ್ಪನೆಯ ಮಹತ್ವಾಕಾಂಕ್ಷೆಯ ಕಾರ್ಯಕ್ರಮಗಳನ್ನು ನಡೆಸುತ್ತಿದೆ.
ನಳಂದ ಮ್ಯೂಸಿಯಂ (ಸಂಗ್ರಹಾಲಯ) ಅನೇಕ ಸಂಖ್ಯೆಯ ಹಸ್ತಪ್ರತಿಗಳನ್ನು ಹೊಂದಿದೆ, ಮತ್ತು ಅಗೆದುತಗೆದ ವಸ್ತುಗಳ ಅನೇಕ ಉದಾಹರಣೆಗಳನ್ನು ತೋರಿಸುತ್ತದೆ. ಭಾರತ'ದ ಮೊದಲ ಬಹುಮಾಧ್ಯಮ (ಗಣಕಯಂತ್ರದ) ಸಂಗ್ರಹಾಲಯವನ್ನು 26 ಜನವರಿ 2008ರಂದು ತೆರೆಯಲಾಯಿತು, ಇದು ಶೇಖರ್ ಸುಮನ್ ನಿರೂಪಿಸಿದ 3D ಚಲನೆಯ ರೇಖಾಚಿತ್ರ ರಚನಾಕ್ರಮವನ್ನು ಉಪಯೋಗಿಸಿ ನಳಂದ ಇತಿಹಾಸವನ್ನು ರಚಿಸುತ್ತದೆ. ಇದನ್ನು ಹೊರತುಪಡಿಸಿ ಬಹುಮಾಧ್ಯಮ ಸಂಗ್ರಹಾಲಯದಲ್ಲಿ ಇನ್ನೂ ನಾಲ್ಕು ವಿಭಾಗಗಳಿವೆ: ಭೌಗೋಳಿಕ ನೋಟ, ಐತಿಹಾಸಿಕ ನೋಟ, ನಳಂದ ಹಾಲ್ ಮತ್ತು ನಳಂದ ಪುನರುಜ್ಜೀವನ.
ಪುನರುಜ್ಜೀವನದ ಯೋಜನೆಗಳು[ಬದಲಾಯಿಸಿ]
- 9 ಡಿಸೆಂಬರ್ 2006ರಂದು, ನ್ಯೂ ಯಾರ್ಕ್ ಟೈಮ್ಸ್ ಪುರಾತನ ಸ್ಥಳದ ಹತ್ತಿರ ನಳಂದ ವಿಶ್ವವಿದ್ಯಾನಿಲಯವನ್ನು ಪುನರುಜ್ಜೀವನ ಗೊಳಿಸುವ ಕಾರ್ಯಗಳಿಗೆ $1 ಬಿಲಿಯನ್ ವೆಚ್ಚದ ಯೋಜನೆಯ ವಿವರಣೆಯನ್ನು ನೀಡಿತ್ತು. ಸಿಂಗಪೂರ್ ಮುಂದಾಳತ್ವದ ಮತ್ತು ಚೈನಾ, ಭಾರತ, ಜಪಾನ್ ಮತ್ತು ಇತರ ರಾಷ್ಟ್ರಗಳನ್ನು ಒಳಗೊಂಡ ಒಂದು ಒಕ್ಕೂಟ ಹೊಸಾ ವಿಶ್ವವಿದ್ಯಾನಿಲಯವನ್ನು ನಿರ್ಮಿಸಲು $500 ಮಿಲಿಯನ್ ಮತ್ತು ಅಗತ್ಯವಾದ ಮೂಲಸೌಕರ್ಯಗಳ ಅಭಿವೃದ್ದಿಗೆ ಮತ್ತೊಂದು $500 ಮಿಲಿಯನ್ ಸಂಗ್ರಹಿಸುವ ಪ್ರಯತ್ನ ಮಾಡುತ್ತದೆ.[೪]
- 28 ಮೇ 2007ರಂದು, ಮೆರಿನ್ಯೂವ್ಸ್ , ವಿಶ್ವವಿದ್ಯಾನಿಲಯದ ಸಮಾಲೋಚಿಸಿದ ರಿಜಿಸ್ಟರಿನಲ್ಲಿನ ದಾಖಲಾತಿಯು ಇದರ ಮೊದಲ ವರ್ಷದಲ್ಲಿ 1,137 ಇರುತ್ತದೆ ಮತ್ತು ಐದನೆಯ ವರ್ಷದ ವೇಳೆಗೆ ಇದು 4,530ಕ್ಕೆ ಏರುತ್ತದೆ ಎಂದು ವರದಿ ಮಾಡಿತ್ತು. 'ಎರಡನೆಯ ಹಂತದಲ್ಲಿ', ದಾಖಲಾತಿಯು 5,812ಕ್ಕೆ ತಲುಪುತ್ತದೆ.[೩೯]
- 12 ಜೂನ್ 2007ರಂದು, ನ್ಯೂವ್ಸ್ ಪೋಸ್ಟ್ ಇಂಡಿಯಾ , "ಬಿಹಾರ್ನಲ್ಲಿ ನಳಂದದಲ್ಲಿ ಅಂತರರಾಷ್ಟ್ರೀಯ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲು ಜಪಾನ್ ಬಂಡವಾಳ ಹಾಕುತ್ತದೆ" ಎಂಬುದನ್ನು ಜಪಾನ್ ರಾಯಬಾರಿ ನೊರೊ ಮೊಟೊಯಸು ಹೇಳಿದ್ದರು ಎಂದು ವರದಿ ಮಾಡಿತ್ತು. "ಪ್ರಸ್ತಾಪಿಸಿದ ವಿಶ್ವವಿದ್ಯಾನಿಲಯವು ನಳಂದದಲ್ಲಿನ ಪುರಾತನ ಕಲಿಕಾ ಸ್ಥಾನದಂತೆ, ಸಂಪೂರ್ಣವಾಗಿ ವಾಸಸ್ಥಳವಾಗಿರುತ್ತದೆ ಎಂಬುದನ್ನು ವರದಿ ಒಳಗೊಂಡಿತ್ತು. ಯೋಜನೆಯ ಮೊದಲನೇ ಹಂತದಲ್ಲಿ, ಸುಮಾರು 46 ವಿದೇಶಿ ಭೋದಕ ಸದಸ್ಯರನ್ನು ಮತ್ತು ಸುಮಾರು 400 ಭಾರತೀಯ ಶೈಕ್ಷಣಿಕಗಳನ್ನು ಹೊಂದಿದ ಏಳು ಶಾಲೆಗಳು ಅಭಿವೃದ್ದಿಹೊಂದಲಿವೆ." ... "ವಿಶ್ವವಿದ್ಯಾನಿಲಯವು ಇತರ ವಿಷಯಗಳೊಂದಿಗೆ ವಿಜ್ಞಾನ, ತತ್ವಶಾಸ್ತ್ರ ಮತ್ತು ಆಧ್ಯಾತ್ಮವಾದ ಕೋರ್ಸ್ಗಳನ್ನು ಭೋದಿಸಲಿದೆ. ಪ್ರಸಿದ್ಧಿಯಾದ ಅಂತರರಾಷ್ಟ್ರೀಯ ಪಂಡಿತರು ಇದರ ಕುಲಾಧಿಪತಿಗಳು."[೪೦][೪೧]</ref>
- 15 ಆಗಸ್ಟ್ 2007ರಂದು, ದಿ ಟೈಮ್ಸ್ ಆಫ್ ಇಂಡಿಯಾ ಮಾಡಿದ ವರದಿಯ ಪ್ರಕಾರ, ಡಾ. ಎ.ಪಿ.ಕೆ. ಅಬ್ದುಲ್ ಕಲಾಮ್, ಪುನರೂರ್ಜಿತಗೊಳಿಸಿದ ನಳಂದ ಅಂತರರಾಷ್ಟ್ರೀಯ ವಿಶ್ವವಿದ್ಯಾನಿಲಯವನ್ನು ಸೆಪ್ಟೆಂಬರ್ 2007ರಲ್ಲಿ ಸೇರಿಕೊಳ್ಳುವ ಪ್ರಸ್ತಾಪನೆಯನ್ನು ಸಮ್ಮತಿಸಿದರು."[೪೨]
- ನೋಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್ ಪ್ರಕಾರ, ವಿಶ್ವವಿದ್ಯಾನಿಲಯದ ಸ್ಥಾಪನೆಯು 2009ನೆಯ ಇಸವಿಯಲ್ಲಿ ಆಗಬಹುದು ಮತ್ತು ಮೊದಲ ಭೋದನಾ ತರಗತಿಗಳು ಅಂದಿನಿಂದ ಕೆಲವೇ ವರ್ಷಗಳಲ್ಲಿ ಪ್ರಾರಂಭವಾಗಬಹುದು ಎಂದು 5 ಮೇ 2008ರಂದು ಎನ್ಡಿಟಿವಿ ವರದಿ ಮಾಡಿತ್ತು. ನಳಂದ ಮಾರ್ಗದರ್ಶಿ ಗುಂಪಿನ ಮುಖಂಡ ಸೆನ್, ಇದರ ಬಗೆಗಿನ ಅಂತಿಮ ವರದಿಯನ್ನು ಡಿಸೆಂಬರ್ 2008ರಲ್ಲಿ ಈಸ್ಟ್ ಏಷಿಯಾ ಸಮ್ಮಿತ್ಗೆ ಸಲ್ಲಿಸುವುದಾಗಿ ನಿರೀಕ್ಷಿಸಲಾಗಿದೆ ಎಂದು ಹೇಳಿದರು.
- ಹಾಸ್ಟ್ ನ್ಯಾಷನ್ ಇಂಡಿಯಾ ಮತ್ತು ಈಸ್ಟ್ ಏಷಿಯಾ ದೇಶಗಳ ಒಕ್ಕೂಟವು ಮುಂದಿನ ನಳಂದ ಯೋಜನೆಗಳನ್ನು ಚರ್ಚಿಸಲು ನ್ಯೂ ಯಾರ್ಕ್ನಲ್ಲಿ ಬೇಟಿಯಾಗಿದೆ ಎಂದು 11 ಮೇ 2008ರಂದು, ದಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿತ್ತು. ಈ ಕೆಳಗೆ ಸೂಚಿಸಿದ ಶಾಲೆಗಳೊಂದಿಗೆ, ನಳಂದ ಬೃಹತ್ತಾದ ಸ್ನಾತಕೋತ್ತರ ಪದವಿ ಸಂಶೋಧನಾ ವಿಶ್ವವಿದ್ಯಾನಿಲಯವಾಗುತ್ತದೆ ಎಂದು ತೀರ್ಮಾನಿಸಲಾಯಿತು: ಸ್ಕೂಲ್ ಆಫ್ ಬುದ್ದಿಸ್ಟ್ ಸ್ಟಡೀಸ್, ತತ್ವಶಾಸ್ತ್ರ, ಮತ್ತು ತುಲನಾತ್ಮಕ ಧರ್ಮ; ಸ್ಕೂಲ್ ಆಫ್ ಹಿಸ್ಟೋರಿಕಲ್ ಸ್ಟಡೀಸ್; ಸ್ಕೂಲ್ ಆಫ್ ಇಂಟೆರ್ನ್ಯಾಷನಲ್ ರಿಲೇಷನ್ಸ್ ಆಂಡ್ ಪೀಸ್; ಸ್ಕೂಲ್ ಆಫ್ ಬಿಸಿನೆಸ್ ಮ್ಯಾನೆಜ್ಮೆಂಟ್ ಆಂಡ್ ಡೆವಲಫ್ಮೆಂಟ್; ಸ್ಕೂಲ್ ಆಫ್ ಲ್ಯಾಂಗ್ವೇಜೆಸ್ ಆಂಡ್ ಲಿಟೆರೇಚರ್; ಮತ್ತು, ಸ್ಕೂಲ್ ಆಫ್ ಎಕೊಲಜಿ ಆಂಡ್ ಎನ್ವಿರಾನ್ಮೆಂಟಲ್ ಸ್ಟಡೀಸ್. ಶಾಲೆಯ ಧ್ಯೇಯವು "ಏಷಿಯ ಸಮುದಾಯದ ಪರಿಕಲ್ಫನೆಯನ್ನು ಸುಧಾರಿಸುವ ಗುರಿ...ಮತ್ತು ಹಳೇ ಸಂಬಂಧಗಳ ಮರುಶೋಧನೆ."[೪೩]
- ಕ್ಯಾಂಪಸನ್ನು ಭಾರತ’ದ ಜಾಗತಿಕ ಮಹತ್ವಾಕಾಂಕ್ಷೆಗಳನ್ನಾಗಿ ಮರುನಿರ್ಮಿಸಲು ನ್ಯೂ ಡೆಲ್ಲಿ ಸಂಸತ್ತು ವಿದೇಯಕವನ್ನು ಸಮ್ಮತಿಸಿತು ಎಂದು 13 ಸೆಪ್ಟೆಂಬರ್ 2010ರಂದು, ಜಕಾರ್ತ ಗ್ಲೋಬ್ ವರದಿ ಮಾಡಿತ್ತು.[೪೪][೪೫]
ಚಿತ್ರ ಸಂಪುಟ[ಬದಲಾಯಿಸಿ]
-
ನಳಂದ ವಿಶ್ವವಿದ್ಯಾನಿಲಯವನ್ನು ಅಗೆದು ಹಾಕುವ ಮುನ್ನ.
-
ಸರಿಪುಟ್ಟ ಸ್ತೂಪ
-
ಸರಿಪುಟ್ಟ ಸ್ತೂಪದ ಹಿಂಭಾಗದ ದೃಶ್ಯ
-
ಸರಿಪುಟ್ಟ ಸ್ತೂಪದ ಮುಂಭಾಗದ ದೃಶ್ಯ
ಇವನ್ನೂ ಗಮನಿಸಿ[ಬದಲಾಯಿಸಿ]
- ಭಾರತದ ಪುರಾತನ ವಿಶ್ವವಿದ್ಯಾನಿಲಯಗಳು
- ಟಕ್ಸಿಲ
- ಶಾರದ ಪೀಟ
- ವಿಕ್ರಮಾಸಿಲ ವಿಶ್ವವಿದ್ಯಾನಿಲಯ
- ಬೆನಾರೆಸ್
- I ಚಿಂಗ್ (ಮಾಂಕ್)
- ನವ ವಿಹಾರ
- ಪುಸ್ಪಗಿರಿ ವಿಶ್ವವಿದ್ಯಾನಿಲಯ
- ದಿ ಅಕಾಡೆಮಿ
ಉಲ್ಲೇಖಗಳು[ಬದಲಾಯಿಸಿ]
- ↑ "Nalanda". Archaeological Survey of India. Archived from the original on 14 ಜುಲೈ 2014. Retrieved 18 September 2014.
- ↑ "Alphabetical List of Monuments – Bihar". Archaeological Survey of India. Archived from the original on 3 ನವೆಂಬರ್ 2011. Retrieved 17 September 2014.
- ↑ ೩.೦ ೩.೧ ೩.೨ ಆಲ್ಟೆಕರ್, ಅನಂತ್ ಸದಾಶಿವ್ (1965). ಎಝುಕೇಷನ್ ಇನ್ ಯಾನ್ಸಿಯಂಟ್ ಇಂಡಿಯಾ , ಆರನೆಯ, ವಾರಣಾಸಿ: ನಂದ ಕಿಶೋರ್ & ಸಹೋದರರು.
- ↑ ೪.೦ ೪.೧ ೪.೨ ೪.೩ "ರಿಯಲ್ಲಿ ಓಲ್ಡ್ ಸ್ಕೂಲ್," ಗಾರ್ಟೆನ್, ಜೆಫ್ರೇ ಇ. ನ್ಯೂ ಯಾರ್ಕ್ ಟೈಮ್ಸ್, 9 ಡಿಸೆಂಬರ್ 2006.
- ↑ ೫.೦ ೫.೧ ಬುದ್ದಿಸ್ಟ್ ಮಾಂಕ್ಸ್ ಆಂಡ್ ಮೊನಾಸ್ಟೆರೀಸ್ ಆಫ್ ಇಂಡಿಯಾ:ಅವರ ಇತಿಹಾಸ ಮತ್ತು ಭಾರತೀಯ ಸಂಸ್ಕೃತಿಗೆ ಅವರ ಕೊಡುಗೆ. ದತ್, ಸುಕುಮಾರ್ ಅವರು ರಚಿಸಿದ್ದು. ಜಾರ್ಜ್ ಅಲೆನ್ ಆಂಡ್ ಅನ್ವಿನ್ ಲಿಮಿಟೆಡ್, ಲಂಡನ್ 1962. ಪುಟ 329
- ↑ ೬.೦ ೬.೧ Nalanda Digital Library. "Nalanda Digital Library-Nalanda Heritage-Nalanda,the first residential international University of the World". Nalanda.nitc.ac.in. Archived from the original on 2012-05-08. Retrieved 2010-02-22.
- ↑ ಬಿಯಲ್: ಒಪಿ. cit., ii.167ಎಫ್
- ↑ ಎಸ್.ii.110; ಎಮ್..376ಎಫ್ಎಫ್.
- ↑ ಡಿ.i.211ಎಫ್ಎಫ್.
- ↑ ಎಸ್. ii. 311 23
- ↑ ಡಿ.ii.81ಎಫ್.; iii.99ಎಫ್ಎಫ್.; ಎಸ್.ವಿ.159ಎಫ್ಎಫ್.
- ↑ ಡಿ.ii.81; ವಿನ್.ii.287
- ↑ ಡಿ.ii.84
- ↑ ಎಸ್.ii.220
- ↑ ದಿಘ ನಿಕಾಯ.i.211
- ↑ ಎಸ್.iv.322
- ↑ ವಿvಎ.144
- ↑ ಹಾಪ್ಕಿನ್ಸ್, ಜೆಫ್ರೇ (1996). ಮೆಡಿಟೇಷನ್ ಆನ್ ಎಮ್ಟಿನೆಸ್ಸ್ , ಚಾತುರ್ಯ ಪ್ರಕಟಣೆಗಳು.
- ↑ ೧೯.೦ ೧೯.೧ ಬುದ್ದಿಸ್ಟ್ ಮಾಂಕ್ಸ್ ಆಂಡ್ ಮೊನಾಸ್ಟೆರೀಸ್ ಆಫ್ ಇಂಡಿಯಾ: ಅವರ ಇತಿಹಾಸ ಮತ್ತು ಭಾರತೀಯ ಸಂಸ್ಕೃತಿಗೆ ಅವರ ಕೊಡುಗೆ. ದತ್, ಸುಕುಮಾರ್ ಅವರು ರಚಿಸಿದ್ದು. ಜಾರ್ಜ್ ಅಲೆನ್ ಆಂಡ್ ಅನ್ವಿನ್ ಲಿಮಿಟೆಡ್, ಲಂಡನ್ 1962. ಪುಟ 344
- ↑ ವಜ್ರಯೋಗಿನಿ: ಹರ್ ವಿಸ್ಯುಲೈಜೇಷನ್, ರಿಟ್ಯುಲ್ಸ್, ಆಂಡ್ ಎಲಿಝಬೆತ್ ಇಂಗ್ಲಿಷ್. ಚಾತುರ್ಯ ಪ್ರಕಟಣೆಗಳು. ಐಎಸ್ಬಿಎನ್ 0-86171-329-ಎಕ್ಸ್ ಪುಟ 15
- ↑ ಬುದ್ದಿಸ್ಟ್ ಮಾಂಕ್ಸ್ ಆಂಡ್ ಮೊನಾಸ್ಟೆರೀಸ್ ಆಫ್ ಇಂಡಿಯಾ:ಅವರ ಇತಿಹಾಸ ಮತ್ತು ಭಾರತೀಯ ಸಂಸ್ಕೃತಿಗೆ ಅವರ ಕೊಡುಗೆ. ದತ್, ಸುಕುಮಾರ್ ಅವರು ರಚಿಸಿದ್ದು. ಜಾರ್ಜ್ ಅಲೆನ್ ಆಂಡ್ ಅನ್ವಿನ್ ಲಿಮಿಟೆಡ್, ಲಂಡನ್ 1962. ಪುಟ 352-3
- ↑ ಎ ಸೊಸಿಯಲ್ ಹಿಸ್ಟರಿ ಆಫ್ ಇಂಡಿಯಾ ಎಸ್. ಎನ್.ಸದಾಸಿವಂ ಅವರು ರಚಿಸಿದ್ದು, ಪುಟ 209[೧]
- ↑ ಪ್ರಕಾಶ್ ಬುದ್ಧ್, ಆಸ್ಪೆಕ್ಟ್ಸ್ ಆಫ್ ಇಂಡಿಯನ್ ಹಿಸ್ಟರಿ ಆಂಡ್ ಸಿವಿಲೈಜೇಷನ್ , ಆಗ್ರ 1965
- ↑ ಎ ಸೊಸಿಅಲ್ ಹಿಸ್ಟರಿ ಆಫ್ ಇಂಡಿಯಾ ಎಸ್. ಎನ್.ಸದಾಸಿವಂ ಅವರು ರಚಿಸಿದ್ದು, ಪುಟ 209[೨]
- ↑ Scott, David (1995). "Buddhism and Islam: Past to Present Encounters and Interfaith Lessons". Numen. 42 (2): 141. doi:10.1163/1568527952598657.
{{cite journal}}
: Unknown parameter|month=
ignored (help) - ↑ ಇಂಡಿಯಾ'ಸ್ ರಿಲೀಜಿಯಸ್ ಕ್ವೆಸ್ಟ್ , ಯಂಗ್ ಓನ್ ಕಿಂಗೋಲ್ಡನ್ ಗೇಟ್ ಪಬ್. ಕಂ ಅವರು ರಚಿಸಿದ್ದು: 1976
- ↑ ದಿ ಹಿಸ್ಟರಿ ಆಫ್ ಅರ್ಲಿ ಇಂಡಿಯನ್ ಸಿವಿಲೈಜೇಷನ್ ಗರ್ಟ್ರೂಡ್ ಎಮೆರ್ಸನ್ ಸೆನ್. ಓರಿಯಂಟ್ ಲಾಂಗ್ಮನ್ಸ್ ಅವರು ರಚಿಸಿದ್ದು: 1964
- ↑ "About Us". Nalanda Open University. 2009-12-29. Archived from the original on 2011-07-13. Retrieved 2010-02-22.
- ↑ "ದಿ ಹಿಸ್ಟೋರಿಕಲ್ ಇಂಟೆರಾಕ್ಷನ್ ಬಿಟ್ವೀನ್ ದಿ ಬುದ್ದಿಸ್ಟ್ ಆಂಡ್ ಇಸ್ಲಾಮಿಕ್ ಕಲ್ಚರ್ಸ್ ಬಿಫೋರ್ ದಿ ಮೊಂಗಲ್ ಎಂಪೈರ್," ದಿ ಬರ್ಝಿನ್ ಆರ್ಚೀವ್ಸ್. [೩]
- ↑ ಬುದ್ದಿಸ್ಟ್ ಆರ್ಕಿಟೆಕ್ಚರ್ ಲೆ ಹು ಫುಯೊಕ್ ರಚಿಸಿದ್ದು. ಪುಟ 60[೪]
- ↑ ಡಿ. ಸಿ. ಅಹಿರ್, ಬುದ್ದಿಸಮ್ ಡಿಕ್ಲೈನ್ಡ್ ಇನ್ ಇಂಡಿಯಾ: ಹೌ ಆಂಡ್ ವೈ? , ದೆಲ್ಹಿ: ಬಿ. ಆರ್. ಪ್ರಕಟಣೆ, 2005.
- ↑ ರೆನೆ ಗ್ರೌಸ್ಸೆಟ್. ಇನ್ ದಿ ಫುಟ್ಸ್ಟೆಪ್ಸ್ ಆಫ್ ದಿ ಬುದ್ಧ. ಜೆಎ ಅಂಡರ್ವುಡ್ (ಟ್ರಾನ್ಸ್) ಓರಿಯನ್ ಪ್ರೆಸ್. ನ್ಯೂಯಾರ್ಕ್. 1971 ಪು158
- ↑ ರೆನೆ ಗ್ರೌಸ್ಸೆಟ್. ಇನ್ ದಿ ಫುಟ್ಸ್ಟೆಪ್ಸ್ ಆಫ್ ದಿ ಬುದ್ಧ. ಜೆಎ ಅಂಡರ್ವುಡ್ (ಟ್ರಾನ್ಸ್) ಓರಿಯನ್ ಪ್ರೆಸ್. ನ್ಯೂಯಾರ್ಕ್. 1971 ಪು159
- ↑ ರೆನೆ ಗ್ರೌಸ್ಸೆಟ್. ಇನ್ ದಿ ಫುಟ್ಸ್ಟೆಪ್ಸ್ ಆಫ್ ದಿ ಬುದ್ಧ. ಜೆಎ ಅಂಡರ್ವುಡ್ (ಟ್ರಾನ್ಸ್) ಒರಿಯನ್ ಪ್ರೆಸ್ ನ್ಯೂಯಾರ್ಕ್. 1971 ಪು 159
- ↑ ಖ್ಯೆಂಟ್ಸೆ ಫೌಂಡೇಶನ್ ನ್ಯೂಸ್ - ರಾಜಿ ರಾಮನನ್ ಆನ್ ದಿ ಡೀರ್ ಪಾರ್ಕ್[ಶಾಶ್ವತವಾಗಿ ಮಡಿದ ಕೊಂಡಿ]
- ↑ ದಿ ಟಿಬ್ಟನ್ ತಂಜೂರ್: ಹಿಸ್ಟಾರಿಕ್ ಟ್ರಾನ್ಸ್ಲೇಶನ್ ಇನಿಶಿಯೇಟೀವ್, ಥಾಮಸ್ ಎಫ್. ಯರ್ನಲ್, ಪಿಎಚ್.ಡಿ. ಅವರ ರಚನೆ [೫] Archived 2011-06-15 ವೇಬ್ಯಾಕ್ ಮೆಷಿನ್ ನಲ್ಲಿ.[೬] Archived 2011-06-15 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಬರ್ಝಿನ್, ಅಲೆಕ್ಸಾಂಡರ್ (2002). ದಿ ಫೋರ್ ಇಂಡಿಯನ್ ಬುದ್ಧಿಸ್ಟ್ ಟೆನೆಟ್ ಸಿಸ್ಟಂಸ್ ರಿಗಾರ್ಡಿಂಗ್ ಇಲ್ಯೂಶನ್: ಎ ಪ್ರಾಕ್ಟಿಕಲ್ ಅಪ್ರೋಚ್ . ಬರ್ಲಿನ್, ಜರ್ಮನಿ ಮೂಲ: [೭] (2 ಜನವರಿ 2008ರಲ್ಲಿ ಪಡೆದಿದ್ದು)
- ↑ ಬುದ್ಧಿಸ್ಟ್ ಮಾಂಕ್ಸ್ ಅಂಡ್ ಮೊನಾಸ್ಟೆರೀಸ್ ಆಫ್ ಇಂಡಿಯಾ: ಅವರ ಇತಿಹಾಸ ಮತ್ತು ಭಾರತೀಯ ಸಂಸ್ಕೃತಿಗೆ ಅವರ ಕೊಡುಗೆ. ದತ್, ಸುಕುಮಾರ್ ಅವರು ರಚಿಸಿದ್ದು. ಜಾರ್ಜ್ ಅಲ್ಲೆನ್ ಮತ್ತು ಅನ್ವಿನ್ ಲಿಮಿಟೆಡ್, ಲಂಡನ್ 1962. ಪುಟ 334
- ↑ "ನಳಂದ ಇಂಟರ್ನಲ್ ಯೂನಿವರ್ಸಿಟಿ: ಎ ಕಮೆಂಡೆಬಲ್ ಇನಿಷಿಯೇಟೀವ್ Archived 2007-09-27 ವೇಬ್ಯಾಕ್ ಮೆಷಿನ್ ನಲ್ಲಿ.", ಕೆ.ಝಾ, ಅಶೋಕ್, ಮೇರಿನ್ಯೂಸ್, 28 ಮೇ 2007.
- ↑ "ಜಪಾನ್ ಈಗರ್ ಟು ಇನ್ವೆಸ್ಟ್ ಇನ್ ನಳಂದ ಯೂನಿವರ್ಸಿಟಿ," ನ್ಯೂಸ್ ಪೋಸ್ಟ್ ಇಂಡಿಯಾ, 12 ಜೂನ್ 2007.
- ↑ "Japan eager to invest in university at Nalanda". India eNews. 2007-06-12. Archived from the original on 2012-02-09. Retrieved 2010-02-22.
- ↑ "ಕಲಾಂ ಟು ಜಾಯಿನ್ ನಳಂದ ಯೂನಿವರ್ಸಿಟಿ ಸೂನ್," ದಿ ಟೈಮ್ಸ್ ಆಫ್, 15 ಆಗಸ್ಟ್ 2007.
- ↑ "ನಳಂದ ಟು ಮೂವ್ ಫ್ರಂ ರುಯಿನ್ಸ್ ಟು ರಿಚಸ್", 11 ಮೇ 2008.
- ↑ ಉಲ್ಲೇಖ ದೋಷ: Invalid
<ref>
tag; no text was provided for refs namedJakarta Globe
- ↑ http://www.thejakartaglobe.com/education/india-plans-to-lift-ancient-university-from-the-ashes/395949
ಮುಂದಿನ ಓದಿಗಾಗಿ[ಬದಲಾಯಿಸಿ]
- Behl, Benoy K. (2008-03-01). "Art: Thoughts and Images (15 of 25)". Frontline. 25 (5).
ಬಾಹ್ಯ ಕೊಂಡಿಗಳು[ಬದಲಾಯಿಸಿ]

- ವರ್ಲ್ಡ್ ಹೆರಿಟೇಜ್
ವಿಕಿಟ್ರಾವೆಲ್ ನಲ್ಲಿ ನಳಂದ ಪ್ರವಾಸ ಕೈಪಿಡಿ (ಆಂಗ್ಲ)
- Entry on Nalanda in the Buddhist Dictionary of Pali Proper Names
- ಪುರಾತನ ವೈಭವದ ಕಟ್ಟಡ
- ನಳಂದದ ಮೂಲ ಹಸ್ತಪ್ರತಿಗಳು
- ನವ ನಳಂದ ಮಹಾವಿಹಾರ, ಬಿಹಾರ ರಾಜ್ಯ, ಭಾರತ Archived 2005-05-26 ವೇಬ್ಯಾಕ್ ಮೆಷಿನ್ ನಲ್ಲಿ.
- ನಳಂದಕ್ಕೆ ಸಂಪರ್ಕ ಹೊಂದಿದಂತಹ ಹಳ್ಳಿಗಳು Archived 2012-10-06 ವೇಬ್ಯಾಕ್ ಮೆಷಿನ್ ನಲ್ಲಿ.
- ನಳಂದ ಜಿಲ್ಲೆಯ ಅಧಿಕೃತ ವೆಬ್ಸೈಟ್
- Pages with reference errors
- CS1 errors: unsupported parameter
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- Articles with invalid date parameter in template
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Articles containing Sanskrit-language text
- Articles with unsourced statements from February 2007
- Articles with hatnote templates targeting a nonexistent page
- Commons link is locally defined
- 5ನೆಯ-ಶತಮಾನದ ಸ್ಥಾಪನೆಗಳು
- ಬೌದ್ಧರ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳು
- ಪ್ರಾಚೀನ ಬೌದ್ಧರ ದೇವಸ್ಥಾನಗಳು
- ಭಾರತದಲ್ಲಿನ ಅವಶೇಷಗಳು
- ಬಿಹಾರದಲ್ಲಿನ ಶಿಕ್ಷಣ
- ಬಿಹಾರದ ಇತಿಹಾಸ
- ಜೈನಧರ್ಮಕ್ಕೆ ಸಂಬಂಧಪಟ್ಟ ಸ್ಥಳಗಳು
- ಭಾರತದ ಪುರಾತನ ವಿಶ್ವವಿದ್ಯಾನಿಲಯಗಳು
- ಬೌದ್ಧ ಯಾತ್ರೆ
- ನಳಂದ ಜಿಲ್ಲೆಯಲ್ಲಿನ ನಗರಗಳು ಮತ್ತು ಪಟ್ಟಣಗಳು
- ಭಾರತದಲ್ಲಿನ ಪ್ರಾಚೀನ ಪ್ರಸಿದ್ಧ ಸ್ಥಳಗಳು
- ಬಿಹಾರದಲ್ಲಿನ ಪುರಾತತ್ವ ಶಾಸ್ತ್ರದ ಸ್ಥಳಗಳು
- 5ನೆಯ ಶತಮಾನದಲ್ಲಿ ಸ್ಥಾಪಿತವಾದ ಶೈಕ್ಷಣಿಕ ಸಂಸ್ಥೆಗಳು
- ಇತಿಹಾಸ