ವಿಷಯಕ್ಕೆ ಹೋಗು

ಜಿತೇಂದ್ರ ಅಭಿಷೇಕಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಜಿತೇಂದ್ರ ಅಭಿಷೇಕಿ
ಹಿನ್ನೆಲೆ ಮಾಹಿತಿ
ಜನ್ಮನಾಮಗಣೇಶ್ ಬಲವಂತ್ ನವತೆ[೧]
ಜನನ(೧೯೨೯-೦೯-೨೧)೨೧ ಸೆಪ್ಟೆಂಬರ್ ೧೯೨೯[೨]
ಮಂಗೇಶಿ, ಪೋರ್ಚುಗೀಸ್ ಭಾರತ (ಇಂದಿನ ಗೋವಾ, ಭಾರತ)
ಮರಣ7 November 1998(1998-11-07) (aged 69)
ಪುಣೆ, ಮಹಾರಾಷ್ಟ್ರ, ಭಾರತ.
ಸಂಗೀತ ಶೈಲಿಶಾಸ್ತ್ರೀಯ, ಅರೆ-ಶಾಸ್ತ್ರೀಯ, ಭಕ್ತಿ, ಸಂಗೀತ. ರಂಗಭೂಮಿ.
ವೃತ್ತಿಗಾಯಕ, ಸಂಯೋಜಕ, ಸಂಗೀತ ಶಿಕ್ಷಕ.
ಸಕ್ರಿಯ ವರ್ಷಗಳು೧೯೨೯–೧೯೯೮
ಅಧೀಕೃತ ಜಾಲತಾಣjitendraabhisheki.com

ಪಂಡಿತ್ ಜಿತೇಂದ್ರ ಅಭಿಷೇಕಿ (೨೧ ಸೆಪ್ಟೆಂಬರ್ ೧೯೨೯ - ೭ ನವೆಂಬರ್ ೧೯೯೮) ಎಂದು ಕರೆಯಲ್ಪಡುವ ಗಣೇಶ್ ಬಲವಂತ್ ನವತೆ ಅವರು ಭಾರತೀಯ ಗಾಯಕ, ಸಂಯೋಜಕ, ಭಾರತೀಯ ಶಾಸ್ತ್ರೀಯ, ಅರೆ-ಶಾಸ್ತ್ರೀಯ ಮತ್ತು ಭಕ್ತಿ ಸಂಗೀತದ ವಿದ್ವಾಂಸರಾಗಿದ್ದರು. ಅವರು ಹಿಂದೂಸ್ತಾನಿ ಸಂಗೀತದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದರೂ, ೧೯೬೦ ರ ದಶಕದಲ್ಲಿ ಮರಾಠಿ ಸಂಗೀತ ರಂಗಭೂಮಿಯನ್ನು ಪುನರುಜ್ಜೀವನಗೊಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.[೩] ಜಿತೇಂದ್ರ ಅಭಿಷೇಕಿ ಅವರನ್ನು "ತುಮ್ರಿ, ಟಪ್ಪ, ಭಜನೆ ಮತ್ತು ಭಾವಗೀತೆಯಂತಹ ಇತರ ಸಂಗೀತ ಪ್ರಕಾರಗಳನ್ನು ಕರಗತ ಮಾಡಿಕೊಂಡ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ದಿಗ್ಗಜರಲ್ಲಿ ಒಬ್ಬರು" ಎಂದು ಶ್ಲಾಘಿಸಲಾಗಿದೆ. ಮರಾಠಿ ನಾಟ್ಯಸಂಗೀತದಲ್ಲಿ ಅವರ ಕೆಲಸ ಪ್ರಸಿದ್ಧವಾಗಿದೆ.

ವಾರ್ಷಿಕವಾಗಿ ಜಿತೇಂದ್ರ ಅಭಿಷೇಕ ವರ ಮಹೋತ್ಸವವನ್ನು ನಡೆಸಲಾಗುತ್ತದೆ ಮತ್ತು ಕೊನೆಯದಾಗಿ ವಾರ್ಷಿಕ ಮಹೋತ್ಸವವು ೨೦೧೮ ರ, ಅಕ್ಟೋಬರ್ ಮಧ್ಯದಲ್ಲಿ ಮಹಾರಾಷ್ಟ್ರದ ಕೊಥ್ರುಡ್‌‌ನಲ್ಲಿರುವ ಯಶವಂತರಾವ್ ಚವಾಣ್ ನಾಟ್ಯಗೃಹದಲ್ಲಿ ನಡೆಯಿತು.[೪] ಗೋವಾದಲ್ಲಿ, ಸ್ಥಳೀಯ ಕಲಾ ಅಕಾಡೆಮಿಯಲ್ಲಿ ನಡೆದ ಪಂಡಿತ್ ಜಿತೇಂದ್ರ ಅಭಿಷೇಕಿ ಅವರ ಸಂಗೀತ ಉತ್ಸವವು ೨೦೧೮ ರಲ್ಲಿ, ತನ್ನ ೧೪ ನೇ ಆವೃತ್ತಿಯನ್ನು ತಲುಪಿತು.

ಆರಂಭಿಕ ಜೀವನ ಮತ್ತು ಹಿನ್ನೆಲೆ

[ಬದಲಾಯಿಸಿ]

ಜಿತೇಂದ್ರ ಅಭಿಷೇಕಿ ಅವರು ಗೋವಾದ ಮಂಗೇಶಿಯಲ್ಲಿ ಪುರೋಹಿತ ಪದ್ಯೆ ಕರ್ಹಾಡೆ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು.[೫] ಅವರ ಕುಟುಂಬವು ಸಾಂಪ್ರದಾಯಿಕವಾಗಿ ಶಿವನ ಮಂಗೇಶಿ ದೇವಸ್ಥಾನಕ್ಕೆ ಹತ್ತಿರವಾಗಿತ್ತು. ಇವರ ತಂದೆ, ಬಲವಂತರಾವ್ ಅಲಿಯಾಸ್ ಬಿಕಾಂಭಟ್, ದೀನನಾಥ್ ಮಂಗೇಶ್ಕರ್ ಇವರ ಸಹೋದರ, ದೇವಾಲಯದ ಅರ್ಚಕ ಮತ್ತು ಕೀರ್ತಂಕರ್ (ಭಕ್ತಿ ಸಂಗೀತ ಶೈಲಿಯ ಕೀರ್ತನೆಗಳ ಪ್ರದರ್ಶಕ). ಬಲವಂತರಾವ್ ಅವರು ಜಿತೇಂದ್ರ ಅವರಿಗೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಮೂಲ ತತ್ವಗಳನ್ನು ಕಲಿಸಿದವರು. ಜಿತೇಂದ್ರ ಅವರು ಆಗ್ರಾ ಘರಾನಾದ ಜಗನ್ನಾಥಬುವಾ ಪುರೋಹಿತ್, ಖುರ್ಜಾ ಘರಾನಾದ ಅಜ್ಮತ್ ಹುಸೇನ್ ಖಾನ್ ಮತ್ತು ಜೈಪುರ ಘರಾನಾದ ಗುಲ್ಲುಭಾಯ್ ಜಸ್ದಾನ್ವಾಲಾ ಅವರಿಂದ ಗಾಯನ ಸಂಗೀತದಲ್ಲಿ ಹೆಚ್ಚಿನ ತರಬೇತಿ ಪಡೆದರು. ಅಭಿಷೇಕಿ ಅವರು ತಮ್ಮ ಮರಾಠಿ ನಾಟ್ಯ ಸಂಗೀತ ಸಂಯೋಜನೆಗಳಾದ ಗುಂಟತಾ ಹರ್ದಾಯ ಹೈ, ಹೆ ಸುರನ್ನೋ ಚಂದ್ರ ವಾ ಮತ್ತು ಇತರ ಹಾಡುಗಳು ಹಾಗೂ ಮರಾಠಿ ಗಜಲ್‌ಗಳಾದ ಮಾಜೆ ಜೀವನ ಗಾನೆ, ಕೈವಲ್ಯಚ್ಯ, ಸರ್ವಾತ್ಮಕ ಸರ್ವೇಶ್ವರ, ಕಟಾ ರುಟೆ ಕುನಾಲಾ ಮುಂತಾದವುಗಳ ನಿರೂಪಣೆಗೆ ಹೆಸರುವಾಸಿಯಾಗಿದ್ದರು.

ವೃತ್ತಿಜೀವನ

[ಬದಲಾಯಿಸಿ]

ಜಿತೇಂದ್ರ ಅಭಿಷೇಕಿ ಅವರು ಸಂಸ್ಕೃತ ಸಾಹಿತ್ಯದಲ್ಲಿ ಪದವಿ ಪಡೆದ ನಂತರ, ಅವರು ಮುಂಬೈನ ಆಲ್ ಇಂಡಿಯಾ ರೇಡಿಯೋಗೆ (ಎಐಆರ್) ಸ್ವಲ್ಪ ಸಮಯದವರೆಗೆ ಸೇರಿದರು. ಆಗ ಅವರು ಹಲವಾರು ಸಂಗೀತಗಾರರೊಂದಿಗೆ ಸಂಪರ್ಕಕ್ಕೆ ಬಂದರು ಮತ್ತು ರೇಡಿಯೋ ಕಾರ್ಯಕ್ರಮಗಳಿಗೆ ಹಲವಾರು ತುಣುಕುಗಳನ್ನು ಸಂಯೋಜಿಸುವ ಮೂಲಕ ತಮ್ಮ ಸಂಗೀತ ಪ್ರತಿಭೆಯನ್ನು ಪ್ರದರ್ಶಿಸುವ ಅವಕಾಶವನ್ನು ಪಡೆದರು. ಈ ಸಮಯದಲ್ಲಿ, ಅವರು ಅಜ್ಮತ್ ಹುಸೇನ್ ಖಾನ್ ಅವರ ಸಹಯೋಗದೊಂದಿಗೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಸುಧಾರಿತ ತರಬೇತಿಗಾಗಿ ಭಾರತ ಸರ್ಕಾರದಿಂದ ವಿದ್ಯಾರ್ಥಿವೇತನವನ್ನು ಪಡೆದರು.

ಅವರು ಕತ್ಯಾರ್ ಕಲ್ಜತ್ ಘುಸಾಲಿ ನಾಟಕಕ್ಕಾಗಿ ಪದಗಳನ್ನು (ನಾಟಕದ ಸಮಯದಲ್ಲಿ ನೇರ ಪ್ರದರ್ಶನ ನೀಡಿದ ಹಾಡುಗಳು) ಸಂಯೋಜಿಸಿದರು.[೬]


ಜಿತೇಂದ್ರ ಅಭಿಷೇಕಿ ಅವರು ೨೫ ಮರಾಠಿ ನಾಟಕಗಳಿಗೆ ಗಾಯನ ಮತ್ತು ಹಿನ್ನೆಲೆ ಸಂಗೀತವನ್ನು ಸಂಯೋಜಿಸಿದರು. ಅರವತ್ತರ ದಶಕದ ಉತ್ತರಾರ್ಧದಲ್ಲಿ ಹೋಮಿ ಭಾಭಾ ಸಹಭಾಗಿತ್ವ ಪಡೆದ ನಂತರ, ಸಿತಾರ್ ವಾದಕರಾದ ರವಿಶಂಕರ್ ಅವರು ಯುಎಸ್ಎಯಲ್ಲಿ ನಡೆಸುತ್ತಿರುವ ಸಂಗೀತ ಶಾಲೆಯಲ್ಲಿ ಬೋಧಿಸಿದರು. ಕಲಾ ಅಕಾಡೆಮಿಯೊಂದಿಗಿನ ಒಡನಾಟದ ಮೂಲಕ, ಆ ರಾಜ್ಯದ ವಿದ್ಯಾರ್ಥಿಗಳಿಗೆ ಸಲಹೆ ಮತ್ತು ಮಾರ್ಗದರ್ಶನ ನೀಡುವ ಮೂಲಕ ಅವರು ತಮ್ಮ ತಾಯ್ನಾಡಾದ ಗೋವಾದೊಂದಿಗೆ ತಮ್ಮ ಸಂಬಂಧವನ್ನು ಉಳಿಸಿಕೊಂಡರು.

ಮಧುಮೇಹಕ್ಕೆ ಸಂಬಂಧಿಸಿದ ದೀರ್ಘಕಾಲದ ಅನಾರೋಗ್ಯದ ನಂತರ ಮೂತ್ರಪಿಂಡದ ಸಮಸ್ಯೆಗಳಿಂದ ಬಳಲುತ್ತಿದ್ದ, ಜಿತೇಂದ್ರ ಅಭಿಷೇಕಿ ಅವರು ನವೆಂಬರ್ ೭, ೧೯೯೮ ರಂದು ಪುಣೆಯಲ್ಲಿ ನಿಧನರಾದರು.[೭]

ಪರಂಪರೆ

[ಬದಲಾಯಿಸಿ]

ಪಂಡಿತ್ ಜಿತೇಂದ್ರ ಅಭಿಷೇಕಿ ಅವರ ಸಂಗೀತ ಮಹೋತ್ಸವವನ್ನು ಗೋವಾದಲ್ಲಿ ವಾರ್ಷಿಕವಾಗಿ ನಡೆಸಲಾಗುತ್ತದೆ.[೮]

ವಿದ್ಯಾರ್ಥಿಗಳು

[ಬದಲಾಯಿಸಿ]

ಜಿತೇಂದ್ರ ಅಭಿಷೇಕಿ ಅವರ ಮಗನಾದ ಶೌನಕ್ ಅಭಿಷೇಕಿಯಲ್ಲದೆ, ಅವರ ಪ್ರಸಿದ್ಧ ಸಂಗೀತ ಶಿಷ್ಯರಲ್ಲಿ ಆಶಾ ಖಾದಿಲ್ಕರ್, ದೇವಕಿ ಪಂಡಿತ್, ಶುಭಾ ಮುದ್ಗಲ್, ಮೋಹನ್ ಕುಮಾರ್ ದಾರೇಕರ್, ಹೇಮಂತ್ ಪೆಂಡ್ಸೆ, ಅಜಿತ್ ಕಡಕಡೆ, ರಾಜಾ ಕಾಳೆ, ಪ್ರಭಾಕರ್ ಕಾರೇಕರ್, ವಿಜಯ್ ಕೊಪರ್ಕರ್, ಸಮೀರ್ ದುಬ್ಲೆ, ಡಾ.ಹೃಷಿಕೇಶ್ ಮಜುಂದಾರ್, ಡಾ.ಮಾಧುರಿ ಜೋಶಿ ಮತ್ತು ಮಹೇಶ್ ಕಾಳೆ ಸೇರಿದ್ದಾರೆ.

ಪ್ರಶಸ್ತಿಗಳು ಮತ್ತು ಮನ್ನಣೆಗಳು

[ಬದಲಾಯಿಸಿ]
  • ಹೋಮಿ ಭಾಭಾ ಫೆಲೋಶಿಪ್ (೧೯೬೯)
  • ನಾಟ್ಯದರ್ಪಣ್ ಪ್ರಶಸ್ತಿ (೧೯೭೮)
  • ಪದ್ಮಶ್ರೀ (೧೯೮೮)
  • ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (೧೯೮೯)
  • ಮಹಾರಾಷ್ಟ್ರ ಗೌರವ್ ಪುರಸ್ಕಾರ (೧೯೯೦)
  • ಗೋಮಂತಕ್ ಮರಾಠಿ ಅಕಾಡೆಮಿ ಪ್ರಶಸ್ತಿ (೧೯೯೨)
  • ಬಾಲಗಂಧರ್ವ ಪ್ರಶಸ್ತಿ (೧೯೯೫)
  • ಸುರಶ್ರೀ ಕೇಸರ್ಬಾಯಿ ಕೆರ್ಕರ್ ಪ್ರಶಸ್ತಿ (೧೯೯೬)
  • ಮಾಸ್ಟರ್ ದೀನನಾಥ್ ಸ್ಮೃತಿ ಪ್ರಶಸ್ತಿ (೧೯೯೬)
  • ಲತಾ ಮಂಗೇಶ್ಕರ್ ಪ್ರಶಸ್ತಿ (೧೯೯೬)
  • ಬಾಲಗಂಧರ್ವ ಪ್ರಶಸ್ತಿ (ನಾಟ್ಯಪರಿಷತ್, ೧೯೯೭)
  • ಸರಸ್ವತಿ ಪ್ರಶಸ್ತಿ (ಕೈಲಾಸ್ ಮಠ ನಾಸಿಕ್, ೧೯೯೭)

ಉಲ್ಲೇಖಗಳು

[ಬದಲಾಯಿಸಿ]
  1. "Hindustani Classical Vocalist Ganesh Nawathe". 20 September 2020.
  2. "Jitendra Abhisheki". www.jitendraabhisheki.com. Retrieved 2018-10-18.
  3. "Abhisheki festival from October 26 - Times of India". The Times of India. Retrieved 2018-10-18.
  4. "Mudgal, Raikar in lineup for Pt Jitendra Abhisheki music festival - Times of India". The Times of India. Retrieved 2018-10-18.
  5. "Jitendra Abhisheki - ECLP 2367 - (Condition 85-90%)". ngh.co.in. Retrieved 2022-02-06.[ಶಾಶ್ವತವಾಗಿ ಮಡಿದ ಕೊಂಡಿ]
  6. "Pandit Jitendra Abhisheki". IMDb. Retrieved 2018-10-18.
  7. "Pandit Jitendra Abhisheki dead". The Hindu. November 8, 1998. Archived from the original on ಜುಲೈ 9, 2021. Retrieved ಜೂನ್ 7, 2024.
  8. "6th edition of Pt Jitendra Abhisheki Sangeet Mahotsav to be held from Jan 7-9 | Pune News - Times of India". The Times of India.

ಬಾಹ್ಯ ಕೊಂಡಿಗಳು

[ಬದಲಾಯಿಸಿ]