ವಿಷಯಕ್ಕೆ ಹೋಗು

ಕಮಲ್ ಹಾಸನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಕಮಲಹಾಸನ್ ಇಂದ ಪುನರ್ನಿರ್ದೇಶಿತ)
ಕಮಲ್ ಹಾಸನ್

ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಕಮಲ್ ಹಾಸನ್
೭ ನವೆಂಬರ್ ೧೯೫೪
ಪರಮಕುಡಿ, ಮದ್ರಾಸ್ ರಾಜ್ಯ, ಭಾರತ
ವೃತ್ತಿ ನಟ,ರಾಜಕಾರಣಿ, ಚಲನಚಿತ್ರ ನಿರ್ದೇಶಕ
ವರ್ಷಗಳು ಸಕ್ರಿಯ ೧೯೫೯ - ಪ್ರಸ್ತಕ
ಪತಿ/ಪತ್ನಿ ವಾಣಿ ಗಣಪತಿ
(೧೯೭೮-೧೯೮೮)
ಸಾರಿಕ
(೧೯೮೮-೨೦೦೨)

ಕಮಲ್ ಹಾಸನ್ (ಜನನ: ನವೆಂಬರ್ ೭, ೧೯೫೪), ಒಬ್ಬ ಭಾರತೀಯ ಚಿತ್ರನಟ,ರಾಜಕಾರಣಿ, ಚಿತ್ರಕಥೆ ರಚನೆಕಾರ ಮತ್ತು ನಿರ್ಮಾಪಕ. ಭಾರತೀಯ ಚಲನಚಿತ್ರರಂಗದಲ್ಲಿ ಪ್ರಮುಖ ಮೆಥಡ್ ಆಕ್ಟರ್‌ ಗಳಲ್ಲೊಬ್ಬರು ಎಂದು ಪರಿಗಣಿಸಲ್ಪಡುವ ಒಬ್ಬ ಮಹಾನ್ ತಾರೆ.[][] ಕಮಲ್ ಹಾಸನ್ ರವರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಫಿಲ್ಮ್ ಫೇರ್ ಪ್ರಶಸ್ತಿ ಗಳನ್ನೊಳಗೊಂಡ ಹಲವಾರು ಭಾರತೀಯ ಚಲನಚಿತ್ರ ಪ್ರಶಸ್ತಿಗಳನ್ನು ಗಳಿಸುವುದರ ಮೂಲಕ ಚಿರಪರಿಚಿತರು. ಉತ್ತಮ ವಿದೇಶಿ ಚಿತ್ರಕ್ಕಾಗಿ ನೀಡುವ ಅಕಾಡೆಮಿ ಪ್ರಶಸ್ತಿಗೆ ಭಾರತದಿಂದ ಆಯ್ಕೆಯಾಗುವ ಚಿತ್ರಗಳಲ್ಲಿ ಹೆಚ್ಚಿನವು ಕಮಲ್ ಹಾಸನ್ ನಟಿಸಿದ ಚಿತ್ರಗಳಾಗಿರುವುದು ವಿಶೇಷ. ನಟನೆ ಹಾಗೂ ನಿರ್ದೇಶನದ ಜೊತೆಗೆ, ಅವರು ಚಿತ್ರಕಥೆಗಾರ, ಸಾಹಿತ್ಯ ರಚನೆಕಾರ, ಹಿನ್ನೆಲೆ ಗಾಯಕ ಮತ್ತು ನೃತ್ಯ ನಿರ್ದೇಶಕ ರೂ ಆಗಿದ್ದಾರೆ. ಅವರ ಚಿತ್ರ ನಿರ್ಮಾಣದ ಸಂಸ್ಥೆ, ರಾಜ್‌ಕಮಲ್ ಇಂಟರ್‌ನ್ಯಾಷನಲ್‌ ಅವರ ಹಲವಾರು ಚಿತ್ರಗಳನ್ನು ನಿರ್ಮಿಸಿದೆ.

ಬಾಲ ನಟನಾಗಿ ಹಲವಾರು ಚಿತ್ರಗಳಲ್ಲಿ ನಟಿಸಿದ ಮೇಲೆ, ೧೯೭೫ರ ಒಂದು ನಾಟಕ, ಅಪೂರ್ವ ರಾಗಂಗಳ್‌ ನಲ್ಲಿ ಕಮಲ್ ಹಾಸನ್ ಮುಖ್ಯ ಪಾತ್ರದಲ್ಲಿ ನಟಿಸಿದರು. ಅದರಲ್ಲಿ ಛಲಗಾರ ಯುವಕನಾಗಿದ್ದು ತನಗಿಂತ ವಯಸ್ಸಿನಲ್ಲಿ ಹಿರಿಯ ಹೆಂಗಸನ್ನು ಪ್ರೇಮಿಸುವ ಪಾತ್ರವಹಿಸಿದ್ದರು. ಅವರು ೧೯೮೨ರ ಮೂಂದ್ರಮ್ ಪಿರಾಯ್ ಚಲನಚಿತ್ರಕ್ಕಾಗಿ ತಮ್ಮ ಮೊದಲ ಭಾರತೀಯ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದರು. ಇದರಲ್ಲಿ ಆಮ್ನೇಶಿಯಾ ಖಾಯಿಲೆಗೆ ಒಳಗಾದ ಒಂದು ಮಗುವನ್ನು ನೋಡಿಕೊಳ್ಳುವ ಮುಗ್ಧ ಶಾಲೆಯ ಶಿಕ್ಷಕನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇವರು ವಿಶೇಷವಾಗಿ ಮಣಿರತ್ನಂರ ನಾಯಗನ್ (೧೯೮೭) ಚಿತ್ರದ ಅದ್ಭುತ ಅಭಿನಯದಿಂದಾಗಿ ಗುರುತಿಸಲ್ಪಟ್ಟಿದ್ದಾರೆ, ಟೈಮ್ ಮ್ಯಾಗಜೀನ್‌ ಈ ಚಿತ್ರವನ್ನು ಎಲ್ಲಾ ಸಮಯದ ಅತ್ಯುತ್ತಮ ಚಿತ್ರಗಳಲ್ಲೊಂದು ಎಂದು ವರದಿ ಮಾಡಿದೆ.[] ಆ ಕಾಲದಿಂದಲೂ ಇವರು ಹಲವಾರು ಗಮನ ಸೆಳೆಯುವ ಪಾತ್ರಗಳಲ್ಲಿ ಅಭಿನಯಿಸುತ್ತಲೇ ಬಂದಿದ್ದಾರೆ. ಅವುಗಳೆಂದರೆ ತಮ್ಮದೇ ನಿರ್ಮಾಣದ ಹೇ ರಾಮ್ ಮತ್ತು ವಿರುಮಾಂಡಿ ಹಾಗು ಹತ್ತು ವೈವಿಧ್ಯಮಯ ಪಾತ್ರಗಳಲ್ಲಿ ಅಭಿನಯಿಸಿದ ದಶಾವತಾರಮ್.

ಜೀವನ ಚರಿತ್ರೆ

[ಬದಲಾಯಿಸಿ]

ಭಾರತದ ತಮಿಳುನಾಡುರಾಜ್ಯದ ಪರಮಕುಡಿಯಲ್ಲಿ ಜನಿಸಿದರು. ಕಮಲ್ ಹಾಸನ್ ಅವರು ೪ -ವರ್ಷ-ವಯಸ್ಸಿನವರಿರುವಾಗಲೇ ಚಲನಚಿತ್ರ ಅಭಿನಯಕ್ಕೆ ಮೊದಲ ಬಾರಿಗೆ ಕಾಲಿಟ್ಟರು,೧೨ ಆಗಸ್ಟ್ ೧೯೫೯ರಲ್ಲಿ ಬಿಡುಗಡೆಯಾದ A. ಭೀಮ್ ಸಿಂಗ್ ನಿರ್ದೇಶನದ ಕಲತ್ತೂರ್ ಕಣ್ಣಮ್ಮ ಅವರ ಮೊದಲ ಚಿತ್ರವಾಗಿತ್ತು. ಅನುಭವಿ ತಮಿಳು ನಟ ಜೆಮಿನಿ ಗಣೇಶನ್ ಅವರ ಜೊತೆಯಲ್ಲಿ ಅಭಿನಯಿಸಿದ ಪಾತ್ರಕ್ಕೆ ಉತ್ತಮ ಬಾಲನಟ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗಳಿಸಿದರು.[] ನಂತರದಲ್ಲಿ ಬಾಲ ನಟನಾಗಿ ಐದು ಇತರೆ ತಮಿಳು ಚಲನಚಿತ್ರಗಳಲ್ಲಿ ಶಿವಾಜಿ ಗಣೇಶನ್ ಮತ್ತು ಎಮ್. ಜಿ. ರಾಮಚಂದ್ರನ್ ‌ರ ಜೊತೆ ಅಭಿನಯಿಸಿದರು. ನಂತರ ಒಂಭತ್ತು ವರ್ಷಗಳವರೆಗೆ ಇವರು ಚಿತ್ರರಂಗದಿಂದ ದೂರ ಉಳಿದು ವಿದ್ಯಾಭ್ಯಾಸ, ಕರಾಟೆ ಮತ್ತು ಭರತನಾಟ್ಯಂ ಕಲಿಯುವ ಕಡೆಗೆ ಗಮನ ಹರಿಸಿಸಿದರು, ಹಾಸನ್ ಅವರು ಹಿಂತಿರುಗಿದ ನಂತರ ೧೯೭೨ರಲ್ಲಿ ಕಡಿಮೆ ಖರ್ಚಿನ ಚಲನಚಿತ್ರಗಳಲ್ಲಿ ಸಹ ನಟನಾಗಿ ಅಭಿನಯಿಸಿದರು.ಸಿವಕುಮಾರ್ ಜೊತೆ ಸಹ-ನಟನಾಗಿ ಅಭಿನಯಿಸಿದ ಆರಂಗೇಟ್ರಮ್ ಮತ್ತು ಸೊಲ್ಲಾಥಾನ್ ನೈನಾಯ್‌ಕ್ಕಿರೆನ್ ಚಿತ್ರಗಳೂ ಕೂಡಾ ಈ ಚಿತ್ರಗಳಲ್ಲಿ ಸೇರಿವೆ. ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸುವ ಮುನ್ನ ಸಹನಟನಾಗಿ ಅಭಿನಯಿಸಿದ ಕೊನೆಯ ಚಲನಚಿತ್ರ ನಾನ್ ಅವನಿಲ್ಲಾಯ್.[]

೧೯೭೦ರ ಕೊನೆಯಲ್ಲಿ – ೧೯೮೦ರಲ್ಲಿ

[ಬದಲಾಯಿಸಿ]

ಕಮಲ್ ಹಾಸನ್, ಮಲಯಾಳಂ ಚಿತ್ರ ಕನ್ಯಾಕುಮಾರಿ (೧೯೭೪)ಯಲ್ಲಿನ ಪಾತ್ರದ ತಮ್ಮ ನಟನೆಗೆ ಮೊದಲ ಪ್ರಾದೇಶಿಕ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದುಕೊಂಡರು. ನಂತರದ ನಾಲ್ಕು ವರ್ಷಗಳಲ್ಲಿ, ಅವರು ನಾಲ್ಕು ನಿರಂತರ ಉತ್ತಮ ತಮಿಳು ನಟ ಪ್ರಶಸ್ತಿಗಳನ್ನೊಳಗೊಂಡು ಆರು ಪ್ರಾದೇಶಿಕ ಉತ್ತಮ ನಟ ಫಿಲ್ಮ್‌ಫೇರ್ ಪ್ರಶಸ್ತಿ ಗಳಿಸಿದರು. ಕೆ.ಬಾಲಚಂದರ್ ಅವರ ನಿರ್ದೇಶನದ ಚಲನಚಿತ್ರ ವಯಸ್ಸಿನ-ಅಂತರದ ಸಂಬಂಧಗಳ ಕಥೆ ಹೊಂದಿರುವ ಅಪೂರ್ವ ರಾಗಂಗಳ್‌ ನಲ್ಲಿ ಅಭಿನಯಿಸಿದ್ದಾರೆ. ೧೯೭೦ರ ಕೊನೆಯ ಅವಧಿಯು ಕಮಲ್ ಹಾಸನ್ ಹೆಚ್ಚಾಗಿ ಕೆ.ಬಾಲಚಂದರ್ ಅವರ ನಿರ್ದೇಶನದಲ್ಲಿ ಅಭಿನಯಿಸಿರುವುದನ್ನು ಕಂಡಿದೆ, ಇವರು ನಿರ್ದೇಶಿಸಿದ ಅವರ್‌ಗಳ್ (೧೯೭೭)ನಂತಹ ಸಾಮಾಜಿಕ-ವಿಷಯಗಳನ್ನಾದರಿಸಿದ ಚಿತ್ರಗಳಲ್ಲಿ ಹೆಚ್ಚಾಗಿ ನಟಿಸಿದ್ದಾರೆ.[] ಈ ಚಿತ್ರಕ್ಕಾಗಿ ಹಾಸನ್ ಅವರು ಫಿಲ್ಮ್‌ಫೇರ್‌ನ ಉತ್ತಮ ತಮಿಳು ನಟ ಪ್ರಶಸ್ತಿಗಳಿಸಿದ್ದಾರೆ.[] ೧೯೭೬ರಲ್ಲಿ, ಒಂದು ನಾಟಕ ಮೂಂದ್ರು ಮುಡಿಚು ನಲ್ಲಿ ರಜನಿಕಾಂತ್ ಮತ್ತು ಶ್ರೀದೇವಿಯ ಜೊತೆ ಕಾಣಿಸಿಕೊಂಡರು, ಹಾಗೂ ಮತ್ತೊಂದು ಕೆ ಬಾಲಚಂದರ್ ಚಲನಚಿತ್ರ ಮನ್ಮದ ಲೀಲಾಯ್ ಮತ್ತು ಊರು ಊಧಪ್ಪು ಕಣ್ ಸಿಮಿತ್ತುಗಿರಧು ಈ ಚಿತ್ರವು ಅವರ ಕ್ರಮಾನುಗತ ಎರಡನೆಯ ಉತ್ತಮ ನಟ ಪ್ರಶಸ್ತಿಯನ್ನು ತಂದು ಕೊಟ್ಟಿತು. 16 ವಯತಿನಿಲೆ ಚಿತ್ರವು ಅವರ ಮೂರನೆಯ ಪ್ರಶಸ್ತಿ ತಂದು ಕೊಟ್ಟಿತು, ಇದರಲ್ಲಿ ಮಾನಸಿಕ ಖಾಯಿಲೆಯುಳ್ಳ ಒಬ್ಬ ಹಳ್ಳಿಯವನ ಪಾತ್ರದಲ್ಲಿ ಮತ್ತೊಮ್ಮೆ ರಜನಿಕಾಂತ್ ಮತ್ತು ಶ್ರೀದೇವಿಯವರ ಜೊತೆ ಅಭಿನಯಿಸಿದರು.[] ನಾಲ್ಕನೆಯ ಕ್ರಮಾನುಗತ ಪ್ರಶಸ್ತಿಯು ಸಿಗಪ್ಪು ರೊಜಕಲ್ ಚಿತ್ರದಲ್ಲಿನ ಮಾನಸಿಕ ತೊಂದರೆಯುಳ್ಳ ಲೈಂಗಿಕ ಕೊಲೆಗಾರನಾದ ವಿರೋಧಿ-ನಾಯಕನ ಪಾತ್ರದಲ್ಲಿನ ಅಭಿನಯಕ್ಕಾಗಿ ದೊರೆಯಿತು. ೭೦ರ ದಶಕದ ಕೊನೆಯಲ್ಲಿ, ಹಾಸನ್ ಇತರೆ ಚಲನಚಿತ್ರಗಳಾದ ಅಂದರೆ ಹಾಸ್ಯ ಚಿತ್ರ ನಿನಾಯ್‌ತಲೆ ಇನಿಕ್ಕುಮ್(ಈ ಚಿತ್ರದಲ್ಲಿ ರಜನಿಕಾಂತ್ ಮತ್ತು ಜಯಪ್ರದಾರ ಜೊತೆ ಕಾಣಿಸಿಕೊಂಡಿದ್ದಾರೆ.) ಮತ್ತು ಭಯಕಾರಿ ಚಿತ್ರ ನೀಯಾ ದಲ್ಲಿ ಅಭಿನಯಿಸಿದ್ದಾರೆ.ಹಾಸನ್ ಅವರು ೧೯೮೦ರಲ್ಲಿ ಶ್ರೀದೇವಿ ಜೊತೆಯಾಗಿ ಅಭಿನಯಿಸುವುದನ್ನು ಗುರು ಮತ್ತು ವರುಮಯಿನ್ ನಿರಮ್ ಸಿಗಪ್ಪು ನೊಂದಿಗೆ ಮುಂದುವರೆಸಿದರು. ಕಮಲ್ ಹಾಸನ್ ಅತಿಥಿ-ಜೋಕರ್ ಪಾತ್ರಗಳಲ್ಲಿಯೂ ಕಾಣಿಸಿಕೊಂಡರು, ಉದಾಹರಣೆಗೆ ರಜನಿಕಾಂತ್ ಅವರ ಚಿತ್ರ ತಿಲ್ಲು ಮುಲ್ಲು ; ರಜನಿಕಾಂತ್ ಅವರು ಈ ಮೊದಲೆ ಕಮಲ್ ಹಾಸನ್ ಅವರ ಕೆಲವು ಚಿತ್ರಗಳಲ್ಲಿ ಹೀಗೆ ಕಾಣಿಸಿಕೊಂಡಿದ್ದರು. ಹಾಸನ್ ಅವರ ವೃತ್ತಿ ಜೀವನದ ೧೦೦ನೆಯ ಚಲನಚಿತ್ರವು ೧೯೮೧ರಲ್ಲಿ ಬಿಡುಗಡೆಯಾದ ರಾಜಾ ಪಾರ್ವಾಯ್, ಈ ಚಿತ್ರದೊಂದಿಗೆ ಚಿತ್ರ ನಿರ್ಮಾಣವನ್ನು ಪ್ರಾರಂಭಿಸಿದರು. ಈ ಚಿತ್ರವು ಚಿತ್ರರಂಗದಲ್ಲಿ ಅಷ್ಟೇನೂ ಹೆಸರು ಮಾಡಲಿಲ್ಲ, ಆದರೂ ಅವರು ನಿರ್ವಹಿಸಿದ ವಯೋಲಿನ್ ನುಡಿಸುವ ಕುರುಡನ ಪಾತ್ರವು ಅವರಿ ಫಿಲ್ಮ್‌ಫೇರ್ ಪ್ರಶಸ್ತಿ ತಂದುಕೊಟ್ಟಿತು.[] ಅವರ, ನಂತರದ ಪಾತ್ರವು ಎಕ್ ದೂಜೆ ಕೆ ಲಿಯೆ ಚಿತ್ರದಲ್ಲಿ, ಇದು ಅವರ ಹಿಂದಿ -ಭಾಷೆಯ ಮೊದಲ ಚಿತ್ರವಾಗಿದೆ. ಈ ಚಿತ್ರವು ಕೆ.ಬಾಲಚಂದರ್ ಅವರ ತೆಲುಗು-ಭಾಷೆಯ ಚಿತ್ರ ಮರೊ ಚರಿತ್ರ ದ ರೀಮೆಕ್ ಆಗಿದೆ. ನಂತರದ ವರ್ಷದಲ್ಲಿ ಕಮರ್ಷಿಯಲ್ ಚಿತ್ರಗಳಲ್ಲಿ ನಟಿಸಿದರು, ಅದರಲ್ಲಿ ಮೊದಲ ಮೂರು ಚಿತ್ರಗಳಿಗೆ ಉತ್ತಮ ನಟ ರಾಷ್ಟ್ರೀಯ ಪ್ರಶಸ್ತಿ ಗಳಿಸಿದರು, ಇದರಲ್ಲಿ ಶಾಲೆಯ ಶಿಕ್ಷಕನೊಬ್ಬ ಮಾನಸಿಕ ಮರೆವಿನ ಖಾಯಿಲೆಯಿಂದ ಬಳಲುತ್ತಿದ್ದ ಹುಡುಗಿಯನ್ನು ನೋಡಿಕೊಳ್ಳುವ ಪಾತ್ರದಲ್ಲಿ ಅಭಿನಯಿಸಿದ ಬಾಲು ಮಹೇಂದ್ರ ಅವರ ಮೂಂದ್ರಮ್ ಪಿರಾಯ್ ಚಿತ್ರ ಕೂಡಾ ಸೇರಿದೆ, ಈ ಚಿತ್ರದ ಹಿಂದಿ ರೂಪಾಂತರ ಸದ್ಮಾ ದಲ್ಲೂ ಪಾತ್ರ ನಿರ್ವಹಿಸಿದ್ದಾರೆ.[] ೧೯೮೩ರಲ್ಲಿ, ತೂಂಗಾಧೇಯ್ ತಂಬಿ ತೂಂಗಾಧೇಯ್ ಚಿತ್ರದಲ್ಲಿ ಹಾಸನ್ ಅವರು ದ್ವಿಪಾತ್ರದಲ್ಲಿ ಅಭಿನಯಿಸಿದ್ದಾರೆ. ಇದೇ ವರ್ಷದಲ್ಲಿ ತೆಲುಗಿನಲ್ಲಿ ಕೆ.ವಿಶ್ವನಾಥ್ ರ ಸಾಗರ ಸಂಗಮಂ ತೆಲುಗು ಚಿತ್ರದಲ್ಲಿ ಅಭಿನಯಿಸಿದರು. ಈ ಚಿತ್ರದ ನಾಯಕಿ ಜಯಪ್ರದಾ. ಇದು ಇವರಿಬ್ಬ ರ ವೃತ್ತಿಜೀವನದ ಮೈಲಿಗಲ್ಲು. ೧೯೮೫ರವರೆಗೂ, ಹಾಸನ್ ಸಾಗರ್ ಚಿತ್ರವೂ ಸೇರಿದಂತೆ ಹೆಚ್ಚು ಹಿಂದಿ ಭಾಷೆಯ ಚಲನಚಿತ್ರಗಳಲ್ಲಿ ಅಭಿನಯಿಸಿದರು, ಆ ಚಿತ್ರಕ್ಕಾಗಿ ಅವರಿಗೆ ಫಿಲ್ಮ್‌ಫೇರ್ ಉತ್ತಮ ನಟ ಪ್ರಶಸ್ತಿ ಹಾಗೂ ಉತ್ತಮ ಸಹ ನಟ ಪ್ರಶಸ್ತಿ, ಹೀಗೆ ಎರಡೂ ಪ್ರಶಸ್ತಿಗಳನ್ನು ಒಂದೇ ಚಿತ್ರಕ್ಕಾಗಿ ಪಡೆದ ಮೊದಲ ನಟ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಸಾಗರ್ ಚಿತ್ರದಲ್ಲಿ ರಿಶಿ ಕಪೂರ್‌ನ ಜೊತೆಯಲ್ಲಿ ಇಬ್ಬರೂ ಒಂದೇ ಹೆಂಗಸಿನ ಹಿಂದೆ ಬೀಳುವ, ಕೊನೆಗೆ ಹಾಸನ್ ಕಳೆದುಕೊಳ್ಳುವ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಗಿರಫ್ತಾರ್ ಚಿತ್ರದಲ್ಲಿಯೂ ಹಾಸನ್ ಕಾಣಿಸಿಕೊಂಡರು.ಆನಂತರದಲ್ಲಿ ತಮಿಳು ಚಿತ್ರಗಳಾದ ಕಲ್ಯಾಣರಾಮನ್, ನಂತರ ಜಪಾನಿಲ್ ಕಲ್ಯಾಣರಾಮನ್ ದಲ್ಲಿ ನಟಿಸಿದರು, ಜೊತೆಯಲ್ಲಿ ಉರುವಂಗಲ್ ಮರಲಮ್ ಚಿತ್ರದಲ್ಲಿ ಶಿವಾಜಿ ಗಣೇಶನ್ ಮತ್ತು ರಜನಿಕಾಂತ್ ಜೊತೆಯಲ್ಲಿ ಸಹನಟನಾಗಿ ಅಭಿನಯಿಸಿದರು.೧೯೮೦ರ ದಶಕದ ಮಧ್ಯದಲ್ಲಿ ಹಾಸನ್ ಅವರು ಎರಡು ತೆಲುಗು ಚಿತ್ರಗಳಾದ ಸಾಗರ ಸಂಗಮಂ ಮತ್ತು ಸ್ವಾತಿ ಮುತ್ಯಂ ನಲ್ಲಿ ಕಾಸಿನಧುನಿ ವಿಶ್ವನಾಥ್ ನಿರ್ದೇಶನದಲ್ಲಿ ನಟಿಸಿದ್ದಾರೆ. ಕೊನೆಯಲ್ಲಿ ಸೂಚಿಸಿದ ಚಿತ್ರವು ೧೯೮೬ರಲ್ಲಿ ಉತ್ತಮ ವಿದೇಶಿ ಭಾಷಾ ಚಿತ್ರಕ್ಕೆ ಅಕಾಡೆಮಿ ಅವಾರ್ಡ್ ಪ್ರಶಸ್ತಿಯಲ್ಲಿ ಭಾರತವನ್ನು ಪ್ರತಿನಿಧಿಸಿತ್ತು.[] ಆ ಅವಧಿಯ, ಮೊದಲ ಚಿತ್ರದಲ್ಲಿ ಹಾಸನ್ ಅವರು ಒಬ್ಬ ಕುಡುಕ ಹಾಗೂ ಕ್ಲಾಸಿಕಲ್ ನೃತ್ಯಗಾರನ ಪಾತ್ರದಲ್ಲಿ, ಸ್ವಾತಿ ಮುತ್ಯಂ‌ ನಲ್ಲಿ ಸಮಾಜವನ್ನು ಬದಲಿಸುವ ನಿಟ್ಟಿನಲ್ಲಿ ಸ್ವಲೀನತೆಯನ್ನು ಹೊಂದಿದ ವ್ಯಕ್ತಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಂತರದಲ್ಲಿ ಪುನ್ನಗಾಯ್ ಮಣ್ಣನ್, ಇದರಲ್ಲಿ ಚಾರ್ಲಿ ಚಾಪ್ಲಿನ್‌ನ ವಿಡಂಬನಾ ಪಾತ್ರ ಹಾಗೂ ಮರೆವಿಗೆ ಒಳಗಾದ ವೆಟ್ರಿ ವಿಝಾ ಎಂಬ ದ್ವಿಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಹಾಸನ್ ಅವರು ಮಣಿರತ್ನಂ ಅವರ ೧೯೮೭ರ ಚಿತ್ರ ನಾಯಗನ್‌ ನಲ್ಲಿ ನಟಿಸಿದ್ದಾರೆ. ನಾಯಗನ್‌ ನಲ್ಲಿ ಬಾಂಬೆ ಭೂಗತ ಲೋಕದ ಡಾನ್‌ನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಕಥೆಯು ಒಬ್ಬ ಭೂಗತ ಲೋಕದ ಡಾನ್ ವರದರಾಜನ್ ಮೂದಲಿಯಾರ್ ಎಂಬ ನಿಜ-ಜೀವನವನ್ನು ಆಧಾರಿಸಿದೆ, ಆ ಸಮಯದಲ್ಲಿ ಮುಂಬಯಿಯಲ್ಲಿ ವಾಸಿಸುತ್ತಿದ್ದ ದಕ್ಷಿಣ ಭಾರತೀಯರು ಹೋರಾಡಿದ ಕಥೆಯನ್ನು ವರ್ಣಿಸಿದ್ದಾರೆ.[] ಹಾಸನ್ ಅವರು ಭಾರತದ ರಾಷ್ಟ್ರೀಯ ಪ್ರಶಸ್ತಿಯನ್ನು ಅವರ ಅಭಿನಯಕ್ಕೆ ಪಡೆದರು ಮತ್ತು ನಾಯಗನ್ ಚಿತ್ರವು ೧೯೮೭ರಲ್ಲಿ ಉತ್ತಮ ವಿದೇಶೀ ಚಲನಚಿತ್ರಕ್ಕೆ ಅಕಾಡೆಮಿ ಅವಾರ್ಡ್ಸ್ ಭಾರತ ದೇಶದಿಂದ ನಾಮನಿರ್ದೇಶಿತಗೊಂಡ ಚಿತ್ರವಾಗಿತ್ತು ಜೊತೆಗೆ ಟೈಮ್ ಟಾಪ್ ೧೦೦ ಮೂವೀಸ್ ಪಟ್ಟಿಯಲ್ಲಿ ಒಳಗೊಂಡಿತ್ತು. ೧೯೮೮ರಲ್ಲಿ ಹಾಸನ್ ಅವರು ಇಲ್ಲಿಯವರೆಗೆ ನಟಿಸಿದ ಚಿತ್ರಗಳಲ್ಲಿ ಏಕೈಕ ಮೂಕಿ ಚಿತ್ರ ಬ್ಲ್ಯಾಕ್ ಕಾಮಿಡಿ ಪುಷ್ಪಕ್.[] ೧೯೮೯ರಲ್ಲಿ ಹಾಸನ್ ತ್ರಿಪಾತ್ರದಲ್ಲಿ ಅಪೂರ್ವ ಸಗೋದರರ್ಗಳ್ ಎಂಬ ಚಿತ್ರದಲ್ಲಿ ನಟಿಸಿದ್ದಾರೆ.ಈ ಕಮರ್ಷಿಯಲ್ ಚಿತ್ರದಲ್ಲಿ ಒಬ್ಬ ಕುಬ್ಜನ ಪಾತ್ರದಲ್ಲಿ ನಟಿಸಿದ್ದಾರೆ.[] ಅವರು ನಂತರದಲ್ಲಿ ಇಂದ್ರುಡು ಚಂದ್ರುಡು ಚಿತ್ರದಲ್ಲಿ ದ್ವಿಪಾತ್ರದಲ್ಲಿ ಅಭಿನಯಿಸಿದರು ಮತ್ತು ಇದರ ತಮಿಳು ರೀಮೇಕ್ ಚಿತ್ರದ ಅಭಿನಯಕ್ಕಾಗಿ ಉತ್ತಮಪ್ರಾದೇಶಿಕ ಭಾಷಾ ನಟ ಪ್ರಶಸ್ತಿಗೆ ಪಾತ್ರರಾದರು.

೧೯೯೦ರ ಸಮಯದಲ್ಲಿ

[ಬದಲಾಯಿಸಿ]

೧೯೯೧ರಲ್ಲಿ ಬಿಡುಗಡೆಯಾದ ಮೈಕೇಲ್ ಮದನ ಕಾಮರಾಜನ್ ಚಿತ್ರದಿಂದ ಒಂದು ಮೆಟ್ಟಿಲು ಮೇಲೆ ಹತ್ತಿದ ಹಾಸನ್ ನಾಲ್ಕು ವೈವಿಧ್ಯ ಮಯ ಪಾತ್ರಗಳಲ್ಲಿ ಚತುರ್ಪಾತ್ರಗಳಲ್ಲಿ ನಟಿಸಿದರು, ಅಲ್ಲದೆ ಈ ಚಿತ್ರದಿಂದ ಪ್ರಾರಂಭವಾಗಿ ಸಂಭಾಷಣೆ ಬರಹಗಾರ ಕ್ರೇಜಿ ಮೋಹನ್‌ರ ಜೊತೆಯಲ್ಲಿ ಹಾಸ್ಯ ಪ್ರಧಾನ ಚಿತ್ರಗಳನ್ನು ನಿರ್ಮಿಸಿದರು.[] ಹಾಸನ್ ಅವರು ವೀರನಾಯಕನಾಗಿ ಅಭಿನಯಿಸಿದ ಗುನಾ ಮತ್ತು ಶಿವಾಜಿ ಗಣೇಶನ್ ಅವರ ಮಗನಾಗಿ ಅಭಿನಯಿಸಿದ ಥೇವರ್ ಮಗನ್ ಪಾತ್ರಗಳಿಗೆ ಅನುಕ್ರಮವಾಗಿ ಉತ್ತಮ ನಟ ಪ್ರಶಸ್ತಿಗಳನ್ನು ಪಡೆದರು. ಸಿಂಗಾರವೇಲನ್, ಮಹಾರಸನ್ ಮತ್ತು ಕಲೈಗ್ನಾನ್ ಚಿತ್ರಗಳಲ್ಲಿ ಅಭಿನಯಿಸಿದ ನಂತರ ಹಾಸನ್ ಅವರು ಇಂಗ್ಲಿಷ್ ಚಿತ್ರ ಶಿ-ಡೆವಿಲ್ ನ ಆಧಾರಿತ ಸತಿ ಲೀಲಾವತಿ ಯಂತಹ ಹಾಸ್ಯ ಚಿತ್ರಗಳಲ್ಲಿ ಅಭಿನಯಿಸಲು ಆರಂಭಿಸಿದರು, ಅಲ್ಲದೇ ಇಲ್ಲಿಯವರೆಗೆ ತಾವು ಅಭಿನಯಿಸಿದ ತೆಲುಗು ಭಾಷೆಯ ಚಿತ್ರಗಳಲ್ಲಿ ಕೊನೆಯ ಚಿತ್ರವಾದ ಶುಭ ಸಂಕಲ್ಪಂ ನಲ್ಲಿ ಕಾಸಿನಾಧುನಿ ವಿಶ್ವನಾಥ್ ಅವರ ನಿರ್ದೇಶನದಲ್ಲಿ ಅಭಿನಯಿಸಿದರು. ೧೯೯೬ರಲ್ಲಿ ಹಾಸನ್ ಅವರು ಪೋಲೀಸ್ ಕಥೆಯಾದ ಕುರುಥಿಪುನಾಲ್‌ ನಲ್ಲಿ ಅಭಿನಯಿಸಿದರು. ಇಂಡಿಯನ್ ಚಿತ್ರದಲ್ಲಿ ಪಡೆದ ಮೂರನೆಯ ಉತ್ತಮ ನಟನಿಗಾಗಿ ರಾಷ್ಟ್ರೀಯ ಫಿಲ್ಮ್ ಪ್ರಶಸ್ತಿ ಯೊಂದಿಗೆ ಕುರುಥಿಪುನಾಲ್ ಚಿತ್ರದ ಯಶಸ್ಸುಕೂಡಾ ಸೇರಿತು.[೧೦] ಸ್ವತಂತ್ರ ಹೋರಾಟಗಾರ ಹಾಗೂ ನಂಬಿಕೆಯಿಲ್ಲದೆ ಇರುವ ಮಗನ ದ್ವಿಪಾತ್ರದಲ್ಲಿ ನಟಿಸುವ ಮೂಲಕ ಈ ಚಿತ್ರವೂ ಪ್ರಾದೇಶಿಕ ಪ್ರಶಸ್ತಿ ಗಳಿಸಿತು ಮತ್ತು ಅವರ ಪಾತ್ರಕ್ಕೆ ಹೆಚ್ಚಿನ ಪ್ರಶಂಸೆ ದೊರೆಯಿತು.[೧೧] ಹಾಲಿವುಡ್ ನಿರ್ಮಾಣದ Mrs.ಡೌಟ್‌ಫೈರ್ ಚಿತ್ರದಿಂದ ಪ್ರೇರಿತರಾಗಿ ಅವ್ವೈ ಶಣ್ಮುಗೈ ನಲ್ಲಿ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಂಡರು.[೧೨] ೧೯೯೭ರಲ್ಲಿ, ಹಾಸನ್ ಅವರು ಮೊಹಮ್ಮದ್ ಯೂಸುಫ್ ಖಾನ್ ಅವರ ಜೀವನ ಚರಿತ್ರೆ ಆಧಾರಿದ ಮರುಧನಾಯಗಮ್ ನಿರ್ದೇಶನವನ್ನು ಪ್ರಾರಂಭಿಸಿಧರು, ಇದು ಕೇವಲ ಅರ್ಧ ಘಂಟೆಯ ಟ್ರೈಲರ್ ಚಿತ್ರೀರಣದೊಂದಿಗೆ ನಂತರದ ಸಮಯವನ್ನು ಚಿತ್ರೀಕರಿಸುವುದರಲ್ಲಿ ವಿಫಲವಾಯಿತು.[೧೩] ಮರುಧನಾಯಗಮ್ ಚಿತ್ರವು ಭಾರತೀಯ ಚಿತ್ರರಂಗದಲ್ಲಿಯೇ ಅತಿ ದುಬಾರಿಯಾದ, ಅದ್ಧೂರಿಯಾದ ಚಿತ್ರವಾಗುವುದೆಂದು ಊಹಿಸಲಾಗಿತ್ತು ಜೊತೆಯಲ್ಲಿ ಉತ್ತಮ ತಂತ್ರಜ್ಞರು ಹಾಗೂ ಪ್ರಖ್ಯಾತ ನಟರುಗಳು ಈ ಚಿತ್ರಕ್ಕಾಗಿ ಸಹಿ ಹಾಕಿದ್ದರು. ಅದಕ್ಕಿಂತಲೂ ಹೆಚ್ಚಾಗಿ, ಈ ಚಿತ್ರದ ಪ್ರಾರಂಭವನ್ನು ಬಹಿರಂಗಗೊಳಿಸುವುದಕ್ಕಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ೧೯೯೭ರಲ್ಲಿ ಭಾರತಕ್ಕೆ ಬೇಟಿ ನೀಡಿದ್ದ ಯುನೈಟೆಡ್ ಕಿಂಗ್‌ಡಮ್‌ನ ಎಲಿಜಬೆತ್ II ಭಾಗವಹಿಸಿದ್ದುದು ವಿಶೇಷವಾಗಿತ್ತು.[೧೪][೧೫] ಆರ್ಥಿಕ ಒತ್ತಡದಿಂದಾಗಿ, ಈ ಚಿತ್ರವನ್ನು ವಾಸ್ತವಕ್ಕೆ ತರಲು ಸಾಧ್ಯವಾಗಲಿಲ್ಲ, ಆದರೆ ಹಾಸನ್ ಅವರು ಈ ಯೋಜನೆಗಾಗಿ ಹಣವನ್ನು ಸಂಗ್ರಹಿಸಲು ಆಸಕ್ತಿವಹಿಸುವುದಾಗಿ ಹೇಳಿದ್ದಾರೆ.[೧೬] ತಕ್ಷಣವೇ ಹಾಸನ್ ಅವರು ಅವ್ವೈ ಷಣ್ಮುಗಂ ಚಿತ್ರದ ಹಿಂದಿ ರೀಮೇಕ್ ಚಾಚಿ 420 ಚಿತ್ರದ ನಿರ್ದೇಶನದೊಂದಿಗೆ ತಮ್ಮ ನಿರ್ದೇಶನ ವೃತ್ತಿ ಆರಂಭಿಸಿದರು.[೧೭]

೨೦೦೦ದಿಂದ: ಹೇ ರಾಮ್ ಮತ್ತು ಮುಂದೆ

[ಬದಲಾಯಿಸಿ]

ನಂತರದಲ್ಲಿ ಎರಡು ವರ್ಷಗಳು ಭಾರತೀಯ ಚಿತ್ರದಿಂದ ದೂರ ಉಳಿದ ಹಾಸನ್ ಮಾಡಬೀಕಿದ್ದ ತಮ್ಮ ಮಹಾನ್ ಚಿತ್ರ ಮರುಧನಾಯಗಮ್ ಬದಲಾಗಿ ಅವರ ಎರಡನೇ ನಿರ್ದೇಶನದ ಹೇ ರಾಮ್ ಸಾಹಸಕ್ಕೆ ಕೈ ಹಾಕಿದರು, ಇದು ಒಂದು ಕಾಲದ ನಾಟಕ ಇದರಲ್ಲಿ ಭಾರತ ವಿಭಜನೆಯಾಗುವ ಸುತ್ತಮುತ್ತ ಕೇಂದ್ರೀಕರಿಸಿ ಅರೆ-ಸ್ಪಷ್ಟತೆಯ ಫ್ಲಾಷ್ ಬ್ಯಾಕ್ ಮತ್ತು ಮಹಾತ್ಮಾ ಗಾಂಧಿಯವರ ಕಗ್ಗೊಲೆ ಯ ಚಿತ್ರಣಗಳನ್ನೊಳಗೊಂಡಿದೆ. ಅವರದೇ ಸ್ವತಃ ಬ್ಯಾನರ್‌ನಡಿಯಲ್ಲಿ ನಿರ್ಮಾಣಗೊಳ್ಳುತ್ತಿದ್ದ ಈ ಚಿತ್ರದಲ್ಲಿ ಹಾಸನ್ ಅವರು ಚಿತ್ರಕಥೆಗಾರ, ಸಾಹಿತ್ಯ ರಚನೆಕಾರ ಮತ್ತು ನೃತ್ಯ ನಿರ್ದೇಶನಗಳ ಪಾತ್ರಗಳನ್ನು ನಿರ್ವಹಿಸಿದರು. ಈ ಚಿತ್ರದಲ್ಲಿ ಶಾರುಖ್ ಖಾನ್ ಕೂಡಾ ನಟಿಸಿದ್ದರು ಹಾಗೂ ಆ ವರ್ಷದ ಅಕಾಡೆಮಿ ಪ್ರಶಸ್ತಿಗೆ ಭಾರತದಿಂದ ಆಯ್ಕೆಯಾಗಿತ್ತು.[೧೮] ಅವರ ನಂತರದ ಚಿತ್ರವು ಅಲವಂಧನ್, ಇದರಲ್ಲಿ ಎರಡು ವಿಭಿನ್ನ ಪಾತ್ರಗಳಲ್ಲಿ ನಟಿಸಿರುವ ಇವರು ತಲೆ ಬೋಳಿಸಿಕೊಂಡಿದ್ದರು ಹಾಗೂ ದೇಹದ ತೂಕವನ್ನು ಹತ್ತು ಕಿಲೋಗ್ರಾಂಗಳಷ್ಟು ಹೆಚ್ಚಿಸಿಕೊಂಡಿದ್ದರು. ಬಿಡುಗಡೆಗೂ ಮುನ್ನವೇ ಹೆಚ್ಚು ಪ್ರಚಾರ ಪಡೆದಾಗ್ಯೂ, ಈ ಚಿತ್ರ ಆರ್ಥಿಕವಾಗಿ ಸೋತಿತು, ಹಾಸನ್ ಅವರು ಈ ಚಿತ್ರದಿಂದ ನಷ್ಟ ಅನುಭವಿಸಿದ ವಿತರಕರಿಗೆ ಹಣ ನೀಡುವುದಕ್ಕೆ ಮುಂದೆ ಬಂದರು.[೧೯] ನಂತರದಲ್ಲಿ ಸಾಲಾಗಿ ಮೂರು ಹಾಸ್ಯ ಚಿತ್ರಗಳಾದ ತೆನಾಲಿ, ಪಂಚತಂತಿರಮ್ ಮತ್ತು ಪಮ್ಮಾಲ್ ಕೆ.ಸಂಬಂಧಮ್‌ ಗಳ ಯಶಸ್ಸಿನ ನಂತರ ಒಂದೆರಡು ಅತಿಥಿ ನಟನ ಪಾತ್ರದಲ್ಲಿ ಕಾಣಿಸಿಕೊಂಡು, ಹಾಸನ್ ತಮ್ಮ ಮೂರನೆಯ, ಮರಣದಂಡನೆ ವಿಷಯವನ್ನು ಒಳಗೊಂಡ ವಿರುಮಾಂಡಿ ಚಿತ್ರವನ್ನು ನಿರ್ದೇಶಿಸಿದರು.[೨೦] ಹಾಸನ್ ಅವರು ಮಾಧವನ್ ಜೊತೆಯಲ್ಲಿ ಅಂಬೆ ಶಿವಮ್ ಚಿತ್ರದಲ್ಲಿ ಕಾಣಿಸಿಕೊಂಡರು. ಪ್ರಿಯದರ್ಶನ್ ಅವರು ಈ ಚಿತ್ರವನ್ನು ಪ್ರಾರಂಭಿಸಿ, ನಂತರ ಕಮರ್ಷಿಯಲ್ ನಿರ್ದೇಶಕ ಸುಂದರ್ ಸಿ ಅವರಿಗೆ ಚಿತ್ರ ಪೂರ್ಣಗೊಳಿಸುವಂತೆ ಹೇಳಿ ಇದರಿಂದ ದೂರ ಉಳಿದರು.ಅಂಬೆ ಶಿವಮ್ ಚಿತ್ರವು ನಲ್ಲಶಿವಮ್‌ನ ಕಥೆ ಹೇಳುತ್ತದೆ, ಇದರಲ್ಲಿ ಒಬ್ಬ ಆದರ್ಶವಾದಿ, ಸಾಮಾಜಿಕ ಕಾರ್ಯಕರ್ತ ಮತ್ತು ಕಮ್ಯುನಿಸ್ಟ್ ಆಗಿ ಹಾಸನ್ ಪಾತ್ರ ನಿಭಾಯಿಸಿದ್ದಾರೆ.ಕಮಲ್ ಹಾಸನ್‌ರ ಈ ಚಿತ್ರದ ಅಭಿನಯವು ವಿಮರ್ಶಕರಿಂದ ಶ್ಲಾಘನೆಗೆ ಪಾತ್ರವಾಯಿತು ಜೊತೆಗೆ ದಿ ಹಿಂದೂ ಪತ್ರಿಕೆಯುಹಾಸನ್ " ಮತ್ತೊಮ್ಮೆ ತಮಿಳು ಚಿತ್ರರಂಗವು ಹೆಮ್ಮೆ ಪಡುವಂತೆ ಮಾಡಿದ್ದಾರೆ" ಎಂದು ಹೇಳಿಕೆ ಕೊಟ್ಟಿತು.[೨೧] ನಂತರ ಹಾಸನ್, ರೀಮೇಕ್ ಚಿತ್ರ ವಸೂಲ್ ರಾಜಾ ಎಂಬಿಬಿಎಸ್ ದಲ್ಲಿ ಸ್ನೇಹಾ ಜೊತೆ ಕಾಣಿಸಿಕೊಂಡರು. ೨೦೦೬ರ, ಹಾಸನ್ ಅವರ ವಿಳಂಬವಾದ ಯೋಜನೆ, ವೆಟ್ಟಾಯಿಯಾಡು ವಿಲಾಯಿಯಾ ಡು ಚಿತ್ರವು ಅದ್ಭುತ ಯಶಸ್ಸಿನೊಂದಿಗೆ ಹೊರಬಂತು.[೨೨] ಗೌತಮ್ ಮೆನನ್‌ರ ವೆಟ್ಟಾಯಿಯಾಡು ವಿಲಾಯಿಯಾಡು ಚಿತ್ರವು ಮೊದಲ ಪೋಲೀಸ್ ಚಿತ್ರ ಕುರುಥಿಪುನಾಲ್ ನಂತರದ ಪೋಲೀಸ್ ಚಿತ್ರವಾಗಿದೆ. ೨೦೦೮ರಲ್ಲಿ ಹಾಸನ್, ಕೆ.ಎಸ್.ರವಿಕುಮಾರ್ ಅವರ ದಶಾವತಾರಂ ನಲ್ಲಿ ಹತ್ತು ವೈವಿಧ್ಯಮಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಯಶಸ್ಸು ಗಳಿಸಿದರು. ಆಸಿನ್ ತೊಟ್ಟುಮ್ಕಲ್ ಅವರ ಜೊತೆಯಾಗಿ ಅಭಿನಯಿಸಿದ ಈ ಚಿತ್ರ ತಮಿಳು ಚಿತ್ರರಂಗದಲ್ಲಿ ಭಾರೀ ಯಶಸ್ಸು ಹಾಗೂ ಹಣ ಗಳಿಸಿದ ಎರಡನೆಯ ಚಿತ್ರವಾಗಿ ಹೊರಹೊಮ್ಮಿತು ಮತ್ತು ಹಾಸನ್ ಅವರು ವಿಮರ್ಶಕರಿಂದ ಹೊಗಳಿಕೆಗೆ ಪಾತ್ರರಾದರು.[೨೩][೨೪] ಅವರು ಈ ಚಿತ್ರದಲ್ಲಿ ಕಥೆ, ಚಿತ್ರಕಥೆ ಬರೆಯುವ ಅವಕಾಶವನ್ನೂ ಕೈಗೆತ್ತಿಕೊಂಡಿದ್ದರು. ದಶಾವತಾರಂ ಪೂರ್ಣಗೊಂಡ ತಕ್ಷಣ, ಹಾಸನ್ ಅವರು ನಾಲ್ಕನೆಯ ಚಿತ್ರ ನಿರ್ದೇಶಿಸಲು ಮುಂದಾದರು ಆ ಚಲನಚಿತ್ರಕ್ಕೆ ಪ್ರಯೋಗಾತ್ಮಕವಾಗಿ ಮರ್ಮಯೋಗಿ ಎಂದು ಹೆಸರಿಡಲಾಯಿತು, ಒಂದು ವರ್ಷದ ನಂತರ ನಿರ್ಮಾಣಕ್ಕೆ ಮುನ್ನವೇ ಸ್ಥಿರವಾಗಿತ್ತು.[೨೫] ನಂತರದಲ್ಲಿ ನಿರ್ಮಾಣ ಹಾಗೂ ಅಭಿನಯಿಸುವ ಯೋಜನೆಯನ್ನು ಆಯ್ಕೆ ಮಾಡಿಕೊಂಡರು, ಉನ್ನೈಪೋಲ್ ಒರುವನ್ ಚಿತ್ರದಲ್ಲಿ ಮೋಹನ್‌ಲಾಲ್ ರೊಂದಿಗೆ ಅಭಿನಯಿಸಿದರು.ಇದೇ ಚಿತ್ರ ತೆಲುಗುನಲ್ಲಿ ಈನಾಡುಎಂಬ ಹೆಸರಿನಲ್ಲಿ ಹೊರಹೊಮ್ಮಿತು. ಈ ಚಿತ್ರದಲ್ಲಿ, ಶ್ರುತಿ ಹಾಸನ್ ಅವರು ಸಂಗೀತ ನಿರ್ದೇಶಕರಾಗಿ ಕಾಣಿಸಿಕೊಂಡರು, ಇದು ಬಾಕ್ಸ್ ಆಫೀಸ್ ನಲ್ಲಿ ಭಾರೀ ಯಶಸ್ಸು ಗಳಿಸಿತು.[೨೬] ಇದಾದ ಮೇಲೆ ಮನ್ ಮದನ್ ಅಂಬುಚಿತ್ರದಲ್ಲಿ ಹಾಸ್ಯ ಪಾತ್ರದಲ್ಲಿ ಅಭಿನಯಿಸಿದರು.
೨೦೧೩ರಲ್ಲಿ ಇವರ ಇನ್ನೊಂದು ನಿರ್ದೇಶನವಾದ ವಿಶ್ವರೂಪಂ ಚಿತ್ರ ಬಿಡುಗಡೆಯಾಯಿತು.ಈ ಚಿತ್ರ ಭಾರಿ ಯಶಸ್ಸನ್ನು ಕಂಡಿತು.[೨೭] ಈಗ ವಿಶ್ವರೂಪಂ ಚಿತ್ರದ ಎರಡನೆ ಭಾಗ ವಿಶ್ವರೂಪಂ ೨ಯನ್ನು ನಿರ್ದೇಶಿಸುತ್ತಿದ್ದಾರೆ[೨೮].ಇದು ಆಗಸ್ಟ್ ೧೫ರಂದು ಬಿಡುಗಡೆಯಾಗಲಿದೆ.[೨೯]

ವೈಯಕ್ತಿಕ ಜೀವನ

[ಬದಲಾಯಿಸಿ]

ಕೌಟುಂಬಿಕ ಜೀವನ

[ಬದಲಾಯಿಸಿ]

ತಮಿಳು ನಾಡಿರಾಮನಾಥಪುರಂ ಜಿಲ್ಲೆಯ ಪರಮಕುಡಿ ಹಳ್ಳಿಯ ತಮಿಳು ಅಯ್ಯಂಗಾರ್ ಕುಟುಂಬದ ಕ್ರಿಮಿನಲ್ ವಕೀಲರಾದ ಡಿ.ಶ್ರೀನಿವಾಸನ್ ಮತ್ತು ರಾಜಲಕ್ಷ್ಮಿ ದಂಪತಿಗಳಿಗೆ ೧೯೫೪ ನವೆಂಬರ್ ೭ರಂದು ಕಮಲ್ ಹಾಸನ್ ಅವರು ಜನಿಸಿದರು.[೩೦] ಹಾಸನ್ ಇತ್ತೀಚೆಗಿನ ಚಿತ್ರಗಳಲ್ಲಿ ತಮ್ಮ ತಂದೆ ತಾಯಿಯ ಹೆಸರನ್ನು ಉಲ್ಲೇಖಿಸಿದ್ದಾರೆ, ಅವುಗಳೆಂದರೆ ಉನ್ನೈಪೊಲ್ ಒರುವನ್ ಹಾಗೂ ದಶಾವತಾರಮ್‌ ನ ಒಂದು ಹಾಡು ಕಲ್ಲಾಯ್ ಮತ್ತುಮ್.[೩೧] ಕಮಲ್ ಹಾಸನ್ ಅವರು ಮೂರು ಜನ ಸಹೋದರರಲ್ಲಿ ಕಿರಿಯವರು, ಉಳಿದವರು ಚಾರುಹಾಸನ್ ಮತ್ತು ಚಂದ್ರ ಹಾಸನ್.ಚಾರುಹಾಸನ್ ಅವರು ಕಮಲ್ ಹಾಸನ್ ಅವರ ಹಾಗೆಯೇ ರಾಷ್ಟೀಯ ಚಲನಚಿತ್ರ ಪ್ರಶಸ್ತಿ -ವಿಜೇತ ನಟರು, ಹೆಸರಾಂತ ಕನ್ನಡ ಚಲನಚಿತ್ರ ತಬರನ ಕಥೆ ಯಲ್ಲಿ ಕಾಣಿಸಿಕೊಂಡ ಅವರು ಇತ್ತೀಚೆಗೆ ಚಲನಚಿತ್ರರಂಗದಿಂದ ದೂರ ಉಳಿದಿದ್ದಾರೆ. ಕಮಲ್ ಅವರ ಸಹೋದರ ಸಂಬಂಧಿ ( ಚಾರುಹಾಸನ್ ಅವರ ಮಗಳು) ಸುಹಾಸಿನಿಯು ಕೂಡಾ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರು ಹಾಗೂ ಇವರು ಕಮಲ್ ಹಾಸನ್ ಅವರೊಂದಿಗೆ ೧೯೮೭ರಲ್ಲಿ ನಾಯಗನ್ ಚಿತ್ರದಲ್ಲಿ ಕಾರ್ಯನಿರ್ವಹಿಸಿದ ಫೆಲೋ ಪ್ರಶಸ್ತಿ ವಿಜೇತ ಮಣಿ ರತ್ನಮ್ ಅವರನ್ನು ವಿವಾಹವಾಗಿದ್ದಾರೆ.[೩೨] ಕಮಲ್ ಹಾಸನ್ ಅವರ ಸ್ವತಃ ನಿರ್ಮಾಣದ ಕಂಪನಿ ರಾಜ್‌ಕಮಲ್ ಇಂಟರ್ನ್ಯಾಷನಲ್‌ನ ವ್ಯವಸ್ಥಾಪಕ ನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿರುವ ಚಂದ್ರ ಹಾಸನ್ ಹಲವಾರು ಕಮಲ್ ಹಾಸನ್ ಅವರ ಚಿತ್ರಗಳಿಗೆ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಅವರ ಅಣ್ಣನ ಮಗಳು ಅನು ಹಾಸನ್ ಹಲವಾರು ಚಿತ್ರಗಳಲ್ಲಿ ಸಹ ನಟಿಯಾಗಿ ಅಭಿನಯಿಸಿದ್ದಾಳೆ, ಹೆಚ್ಚು ಹೆಸರು ಮಾಡಿದ ಸುಹಾಸಿನಿಯವರ ಇಂದಿರಾ ದಲ್ಲಿಯೂ ಆಕೆ ನಟಿಸಿದ್ದಾಳೆ.[೩೩]

ಸಂಬಂಧಗಳು

[ಬದಲಾಯಿಸಿ]

ಅವರ ವೃತ್ತಿಜೀವನದ ಬಗೆಗೆ ಹಲವಾರು ಪ್ರಶಂಸೆಗಳು, ಹೊಗಳಿಕೆಗಳನ್ನು ಹೊಂದಿದ್ದರೂ, ವೈಯಕ್ತಿಕ ಜೀವನವು ಹೊಂದಿರುವ ಅಡಚಣೆಗಳಿಂದಾಗಿ ಮಾಧ್ಯಮಗಳು ಅದನ್ನು ಬಯಲು ಮಾಡಿವೆ. ಹಾಸನ್ ಅವರ ಪ್ರಾರಂಭಿಕ ವೃತ್ತಿಜೀವನದಲ್ಲಿ, ಹಲವಾರು ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ಹೆಸರಾಂತ ನಟಿ ಶ್ರೀವಿದ್ಯಾರೊಂದಿಗೆ ಅಭಿನಯಿಸಿದ್ದಾರೆ. ೧೯೭೦ರ ದಶಕದಲ್ಲಿ ಇವರಿಬ್ಬರ ಜೋಡಿಯ ಮಧ್ಯೆ ಇದ್ದ ಪ್ರಣಯವು ಪ್ರಖ್ಯಾತಿ ಪಡೆದು ಎಲ್ಲೆಡೆ ಪ್ರಕಟವಾಗಿತ್ತು, ಇದರ ಜೊತೆಗೆ ಮಲಯಾಳಂ ನಿರ್ದೇಶಕ ರೆಂಜಿತ್ ಅವರು ೨೦೦೮ರ ತಮ್ಮ ತಿರಕ್ಕಥಾ ದಲ್ಲಿ ಇವರಿಬ್ಬರ ಕಥೆಯನ್ನು ಚಿತ್ರದಲ್ಲಿ ನಿರೂಪಿಸಿದ್ದಾರೆ, ಇದರಲ್ಲಿ ಕಮಲ್ ಹಾಸನ್ ಆಗಿ ಅನೋಪ್ ಮೆನನ್ ಮತ್ತು ಶ್ರೀವಿದ್ಯಾ ಆಗಿ ಪ್ರಿಯಾಮಣಿ ನಟಿಸಿದ್ದಾರೆ.[೩೪] ಶ್ರೀವಿದ್ಯಾ ಅವರು ೨೦೦೬ರಲ್ಲಿ ನಿಧನ ಹೊಂದಿದರು, ಹಾಸನ್ ಅವರು ಆಕೆಯ ಕೊನೆಯ ದಿನಗಳಲ್ಲಿ ಹಾಸಿಗೆ ಹಿಡಿದಿದ್ದಾಗ ಬೇಟಿ ನೀಡುತ್ತಿದ್ದರು.[೩೪] ೧೯೭೮ರಲ್ಲಿ ಅವರ ೨೪ನೆಯ ವಯಸ್ಸಿನಲ್ಲಿ, ತಮಗಿಂತ ದೊಡ್ಡವಳಾದ ನೃತ್ಯಗಾತಿ ವಾಣಿ ಗಣಪತಿಯವರನ್ನು ಹಾಸನ್ ವಿವಾಹವಾದರು. ವಾಣಿಯವರು ಮದುವೆಯಾದ ತಕ್ಷಣವೇ ಹಾಸನ್ ಅವರ ಚಿತ್ರಗಳಲ್ಲಿ ಅವರಿಗೆ ಕಾಸ್ಟ್ಯೂಮ್ ವಿನ್ಯಾಸಗಾರ್ತಿಯಾಗಿ ಕೆಲಸ ಪ್ರಾರಂಬಿಸಿದರು ಹಾಗೂ ೧೯೮೦ ದಕ್ಷಿಣದ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಹಾಸನ್ ಅವರೊಂದಿಗೆಯೇ ಇದ್ದರು. ಆದಾಗ್ಯೂ ಈ ಜೋಡಿಯು ಹತ್ತು ವರ್ಷಗಳ ಕಾಲ ಜೊತೆಯಲ್ಲಿದ್ದು ಕಮಲ್ ಹಾಸನ್ ಅವರು ತಮ್ಮ ಸಹ ನಟಿ ಸಾರಿಕಾ ಜೊತೆಯಲ್ಲಿ ಡೇಟಿಂಗ್ ಮಾಡುತ್ತಿದ್ದುದರ ಕಾರಣ ಕೊನೆಗೆ ಬೇರೆಯಾದರು, ಹಾಸನ್ ಅವರೂ ಸಹ ಇತ್ತೀಚಿನ ಸಂದರ್ಶನದಲ್ಲಿ ವಾಣಿಯವರೊಂದಿಗೆ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.[೩೫] ಆನಂತರ ೧೯೮೮ರಲ್ಲಿ ಹಾಸನ್ ಸಾರಿಕಾರೊಂದಿಗೆ ವಿವಾಹವಾದರು, ಈ ಜೋಡಿಯು ಎರಡು ಮಕ್ಕಳು, ಶ್ರುತಿ ಹಾಸನ್ (ಹುಟ್ಟಿದ್ದು ೧೯೮೬) ಮತ್ತು ಅಕ್ಷರ ಹಾಸನ್ (ಹುಟ್ಟಿದ್ದು ೧೯೯೧). ಮೊದಲನೆಯವರು ಹಾಡುಗಾರ್ತಿ ಹಾಗೂ ಮುಂಬರುವ ಚಲನಚಿತ್ರ ತಾರೆ, ಎರಡನೆಯವರು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿನಲ್ಲಿ ಇದ್ದಾರೆ. ಸಾರಿಕಾ, ಹಾಸನ್ ಜೊತೆ ಮದುವೆಯ ನಂತರ ಚಿತ್ರಗಳಲ್ಲಿ ನಟಿಸುವುದನ್ನು ಬಿಟ್ಟರು, ಅವರ ಮಾಜಿ-ಹೆಂಡತಿ ವಾಣಿ ಗಣಪತಿಯವರ ಸ್ಥಾನದಲ್ಲಿ ಹಾಸನ್ ಅವರ ವಸ್ತ್ರ ವಿನ್ಯಾಸ ಮಾಡುವ ಕೆಲಸ ವಹಿಸಿಕೊಂಡರು, ಹೇ ರಾಮ್ ನಲ್ಲಿ ವಸ್ತ್ರ ವಿನ್ಯಾಸವನ್ನು ಅವರೇ ಮಾಡಿದ್ದಾರೆ. ಹಾಗಿದ್ದರೂ, ಈ ಜೋಡಿಯು ೨೦೦೨ರಲ್ಲಿ ವಿಚ್ಚೇಧನಕ್ಕೆ ಅರ್ಜಿ ಸಲ್ಲಿಸಿತು, ಅದರಲ್ಲಿ ಸಾರಿಕಾ ಅವರು ತಮ್ಮನ್ನು ಹಾಸನ್ ಹಾಗೂ ಅವರ ಎರಡು ಮಕ್ಕಳಿಂದ ವಿಮುಕ್ತಿ ಕೊಡುವಂತೆ ಅರ್ಜಿಯಲ್ಲಿ ಕೋರಿದ್ದರು, ಈ ರಿವಾಜು ೨೦೦೪ ರಲ್ಲಿ ಕೊನೆಯಾಯಿತು.[೩೬] ಹಾಸನ್ ಅವರ ತಮಗಿಂತಲೂ ಇಪ್ಪತ್ನಾಲ್ಕು ವರ್ಷ ಚಿಕ್ಕವಳಾದ ಸಹ-ನಟಿ ಸಿಮ್ರನ್ ಬಗ್ಗಾ ಜೊತೆ ಹತ್ತಿರವಾದ ಸಂಬಂಧವು, ಈ ಜೋಡಿಯು ಬೇರೆಯಾಗಲು ಕಾರಣವಾಯಿತು.ಸಿಮ್ರನ್ ಜೊತೆಗಿನ ಸಂಕ್ಷಿಪ್ತ ಸಂಬಂಧ, ಅವರು ಹಾಸನ್ ಜೊತೆಯಲ್ಲಿ ಕ್ರಮವಾಗಿ ಎರಡು ಚಿತ್ರಗಳಾದ ಪಮ್ಮಲ್ ಕೆ ಸಂಬಂಧಂ ಮತ್ತು ಪಂಚತಂತಿರಮ್ ಗಳಲ್ಲಿ ಅಭಿನಯಿಸಿದ್ದರು, ಇದರಿಂದಾಗಿ ಆಕೆ ನೃತ್ಯ ನಿರ್ದೇಶಕ ರಾಜು ಸುಂದರಂ ಜೊತೆಗಿನ ಸಂಬಂಧವನ್ನು ಕಳೆದು ಕೊಂಡಿದ್ದಳು. ಆದಾಗ್ಯೂ, ಈ ಜೋಡಿಯು ಬಹಳ ದಿನಗಳು ಜೊತೆಗಿರಲಿಲ್ಲ, ಸಿಮ್ರನ್ ತನ್ನ ಬಾಲ್ಯ ಸ್ನೇಹಿತನ ಜೊತೆ ೨೦೦೪ರಲ್ಲಿ ವಿವಾಹವಾದಳು.[೩೭] ಪ್ರಸ್ತುತ ಹಾಸನ್ ಅವರು ತಮ್ಮ ಜೊತೆ ೮೦ರ ಕೊನೆಯಲ್ಲಿ ಹಾಗೂ ೯೦ರ ಪ್ರಾರಂಭದಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿದ ನಟಿ ಗೌತಮಿ ತಡಿಮಲ್ಲಾ ಅವರ ಜೊತೆ ವಾಸಿಸುತ್ತಿದ್ದಾರೆ ಆಕೆ ಸ್ತನ ಕ್ಯಾನ್ಸರ್‌ನಿಂದ ಬಳಲಿ ಅಘಾತಕಾರಿ ಅನುಭವದಿಂದ ಬಳಲುತ್ತಿದ್ದಾಗ ಸಹಾಯ ಮಾಡಿದರು, ಮತ್ತು ಈ ಜೋಡಿಯು ೨೦೦೫ರಿಂದ ಸಂಬಂಧವನ್ನು ಹೊಂದಿದೆ.ಶ್ರುತಿ ಹಾಗೂ ಅಕ್ಷರರೊಂದಿಗೆ, ಗೌತಮಿಯ ಮದುವೆ ರದ್ದಾದ ಮಗಳು ಸುಬ್ಬಲಕ್ಷ್ಮಿ ಕೂಡಾ ಇವರ ಜೊತೆಯಲ್ಲಿ ವಾಸಿಸುತ್ತಾರೆ.[೩೮]

ಪ್ರಶಸ್ತಿಗಳು ಮತ್ತು ಗೌರವಗಳು

[ಬದಲಾಯಿಸಿ]

ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಹೊಂದಿರುವ ದಾಖಲೆ ಹೊಂದಿದ್ದಾರೆ, ಮೂರು ಉತ್ತಮ ನಟ ಪ್ರಶಸ್ತಿ ಹಾಗೂ ಒಂದು ಬಾಲನಟ ಪ್ರಶಸ್ತಿ.

  • ಅದರ ಜೊತೆಯಲ್ಲಿ, ಹಾಸನ್ ಅವರು ಹತ್ತೊಂಬತ್ತು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದ ದಾಖಲೆ ಹೊಂದಿದ್ದರೆ - ಐದು ಭಾಷೆಗಳಲ್ಲಿ ಮತ್ತು ಅವರ ಇತ್ತೀಚಿನ ೨೦೦೦ರ ಪ್ರಶಸ್ತಿ ಪಡೆದ ನಂತರ ಸಂಸ್ಥೆಗೆ ತಮ್ಮನ್ನು ಮುಂದಿನ ಪ್ರಶಸ್ತಿಗಳಿಂದ ವಿಮುಕ್ತಿ ಕೊಡುವಂತೆ ಬರೆದಿದ್ದಾರೆ.[೩೯]

ಅವರನ್ನು ಗುರುತಿಸಿದ ಇತರೆ ಪ್ರಶಸ್ತಿಗಳೆಂದರೆ ತಮಿಳುನಾಡು ರಾಜ್ಯದ ಚಲನಚಿತ್ರ ಪ್ರಶಸ್ತಿಗಳು, ನಂದಿ ಪ್ರಶಸ್ತಿಗಳು ಮತ್ತು ವಿಜಯ್ ಪ್ರಶಸ್ತಿಗಳು, ಇದರಲ್ಲಿ ದಶಾವತಾರಂ ನಲ್ಲಿ ಕಾರ್ಯ ನಿರ್ವಹಿಸಿದಕ್ಕಾಗಿ ನಾಲ್ಕು ವಿವಿಧ ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಇವರಿಗೆ ೨೦೧೪ರ ಸಾಲಿನ ಪದ್ಮ ಭೂಷಣ ಪ್ರಶಸ್ತಿ ಘೋಷಿಸಲಾಗಿದೆ.[೪೦]

ರಾಜಕೀಯ ಪ್ರವೇಶ

[ಬದಲಾಯಿಸಿ]
  • ಕಮಲ್‌ ಹಾಸನ್‌ ಮಕ್ಕಳ್‌ ನೀದಿ ಮೈಯಂ(ಎಂಎನ್‌ಎಂ) ಎಂಬ ಪಕ್ಷವನ್ನು ೧೯-೧೨-೨೦೧೮ ರಂದು ಸ್ಥಾಪಿಸಿದ್ದಾರೆ. ಮದುರೆಯಲ್ಲಿ ೧೯ರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಕಮಲ್‌ ಹಾಸನ್‌ ತಮ್ಮ ನೂತನ ಪಕ್ಷದ ಹೆಸರು ಮತ್ತು ಚಿಹ್ನೆ ಅನಾವರಣಗೊಳಿಸಿದರು. "ಮಕ್ಕಳ್‌ ನೀದಿ ಮೈಯಂ" "ಜನಕ್ಕಾಗಿ ನ್ಯಾಯ ಕೇಂದ್ರ" ಎನ್ನುವ ಅರ್ಥ ನೀಡುತ್ತದೆ.
  • ಅವರು, 2019ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಸ್ಪರ್ಧಿಸಲಿದ್ದು, ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗುವುದು’ ಎಂದು ಹೇಳಿದರು.. ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ಇದೇ ಮೊದಲ ಬಾರಿಗೆ ದೃಢಪಡಿಸಿದರು. ತಾವು ‘ಸಮಾನ ಮನಸ್ಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಮುಕ್ತವಿರುವುದಾಗಿ ಪಕ್ಷದ ಕಾರ್ಯಕಾರಿಣಿ ಮತ್ತು ಉನ್ನತ ಮಟ್ಟದ ಸಮಿತಿ ಸಭೆಯ ನಂತರ ಚೆನ್ನೈನಲ್ಲಿ ೨೨-೧೨-೨೦೧೮ ರಂದು ಹೇಳಿದರು.[೪೧][೪೨]

ಪ್ರಖ್ಯಾತ ಚಲನಚಿತ್ರಗಳು

[ಬದಲಾಯಿಸಿ]
ವರ್ಷ ಸಿನಿಮಾ ಪಾತ್ರ ಭಾಷೆ ಟಿಪ್ಪಣಿಗಳು
೧೯೬೦ ಕಲತ್ತೂರ್ ಕನ್ನಮ್ಮ ಸೆಲ್ವಂ ತಮಿಳು ವಿಜೇತ : ರಾಷ್ಟ್ರೀಯ ಚಲನಚಿತ್ರ ಅತ್ಯುತ್ತಮ ಬಾಲನಟಪ್ರಶಸ್ತಿ
೧೯೭೫ ಅಪೂರ್ವ ರಾಗಂಗಳ್ ಪ್ರಸನ್ನ ತಮಿಳು ವಿಜೇತ : ಫಿಲ್ಮ್‌ಫೇರ್ ಉತ್ತಮ ತಮಿಳು ನಟ ಪ್ರಶಸ್ತಿ
೧೯೮೨ ಮೂಂದ್ರಮ್ ಪಿರಾಯ್ ಶ್ರೀನಿವಾಸನ್ ತಮಿಳು ವಿಜೇತ : ಉತ್ತಮ ನಟ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
೧೯೮೩ ಸಾಗರ ಸಂಗಮಂ ಬಾಲಕೃಷ್ಣ ತೆಲುಗು ವಿಜೇತ : ಫಿಲ್ಮ್‌ಫೇರ್ ಉತ್ತಮ ತೆಲುಗು ನಟ ಪ್ರಶಸ್ತಿ
ವಿಜೇತ : ಉತ್ತಮ ನಟ ನಂದಿ ಪ್ರಶಸ್ತಿ
೧೯೮೭ ನಾಯಗನ್ ವೇಲು ನಾಯಕ್ಕರ್ ತಮಿಳು ವಿಜೇತ : ಉತ್ತಮ ನಟ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
೧೯೮೮ ಪುಷ್ಪಕ್ ಪುಷ್ಪಕ್ ಮೂಕಿ ವಿಜೇತ : ಫಿಲ್ಮ್‌ಫೇರ್ ಉತ್ತಮ ಕನ್ನಡ ನಟ ಪ್ರಶಸ್ತಿ
೧೯೮೯ ಅಪೂರ್ವ ಸಗೋಧರರ್ಗಳ್ ಸೆಧುಪತಿ,
ರಾಜ
ಅಪ್ಪು
ತಮಿಳು ಮೂರು ಪಾತ್ರಗಳಲ್ಲಿ ನಟಿಸಿದ್ದು; ಒಬ್ಬ ಕುಬ್ಜ
೧೯೯೨ ಥೇವರ್ ಮಗನ್ ಶಕ್ತಿವೇಲು ಥೇವರ್ ತಮಿಳು ವಿಜೇತ : ಫಿಲ್ಮ್‌ಫೇರ್ ಉತ್ತಮ ತಮಿಳು ನಟ ಪ್ರಶಸ್ತಿ
ಕಮಲ್ ಹಾಸನ್ ಇದರಲ್ಲಿ ಸಾಹಿತ್ಯ ರಚನೆ ಹಾಗೂ ನಿರ್ಮಾಣ ಮಾಡಿದ್ದಾರೆ
೧೯೯೬ ಭಾರತೀಯರು ಸೇನಾಪತಿ ಬೋಸ್,
ಚಂದ್ರ ಬೋಸ್
ತಮಿಳು ಇಬ್ಬರು ವ್ಯಕ್ತಿಗಳ ಪಾತ್ರದಲ್ಲಿ
ವಿಜೇತ : ಉತ್ತಮ ನಟ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
ವಿಜೇತ : ಫಿಲ್ಮ್‌ಫೇರ್ ಉತ್ತ್ಮ ತಮಿಳು ನಟ ಪ್ರಶಸ್ತಿ
೨೦೦೦ ಹೇ ರಾಮ್‌ ಸಾಕೇತ್ ರಾಮ್ ತಮಿಳು
ಹಿಂದಿ
ವಿಜೇತ : ಫಿಲ್ಮ್ ಫೇರ್ ಉತ್ತಮ ತಮಿಳು ನಟ ಅವಾರ್ಡ್
ಸ್ಕ್ರಿಪ್ಟ್, ನಿರ್ಮಾಣ ಮತ್ತು ನಿರ್ದೇಶನ - ಕಮಲ್ ಹಾಸನ್
೨೦೦೮ ದಶಾವತಾರಮ್ ಹತ್ತು ವಿವಿಧ ಪಾತ್ರಗಳು ತಮಿಳು ಕಮಲ್ ಹಾಸನ್ ೧೦ ವೈವಿಧ್ಯಮಯ ಪಾತ್ರಗಳಲ್ಲಿ
ಅಭಿನಯಿಸಿ ಸ್ಕ್ರಿಪ್ಟ್ ರಚನೆ ಮಾಡಿದ್ದಾರೆ.
೨೦೦೯ ಉನ್ನೈಪೋಲ್ ಒರುವನ್, ಈನಾಡು ಸಾಮಾನ್ಯ ಮನುಷ್ಯ ತಮಿಳು ಮತ್ತು ತೆಲುಗು ಈ ಚಿತ್ರದ ನಿರ್ಮಾಪಕ, ಲೇಖಕ ಹಾಗು ಸಂಗೀತಸಾಹಿತ್ಯ ರಚನಕರ್ತ
೨೦೧೩ ವಿಶ್ವರೂಪಂ (ಚಲನಚಿತ್ರ) ವಿಶ್ವನಾಥ್, ವಿಸಾಮ್ ಅಹ್ಮೆದ್ ಕಶ್ಮೀರಿ ತಮಿಳು ಮತ್ತು ಹಿಂದಿ ಈ ಚಿತ್ರದ ನಿರ್ದೇಶಕ, ನಿರ್ಮಾಪಕ, ನಾಯಕ.

ಕಮಲ್‌ ಹಾಸನ್‌ ನಟಿಸಿದ ಚಿತ್ರಗಳು

[ಬದಲಾಯಿಸಿ]
ವರ್ಷ ಚಿತ್ರ ಪಾತ್ರ ಭಾಷೆ ನಿರ್ದೇಶಕ ವಿವರ
1959ಕಲತ್ತೂರ್ ಕನ್ನಮ್ಮಸೆಲ್ವಂತಮಿಳುA. Bhimsingh
1962Paarthal Pasi TheerumBabu,
Kumar
ತಮಿಳುA. Bhimsingh
1962Paadha KannikkaiತಮಿಳುK. Shankar
1962Kannum KalarumಮಲಯಾಳಂK. S. Sethumadhavan
1963VanambadiತಮಿಳುG. R. Nathan
1963Anandha JodhiತಮಿಳುV. N. Reddy
1970MaanavanತಮಿಳುM. A. Thirumugam
1971Nootrukku Nooruತಮಿಳುಕೆ. ಬಾಲಚಂದರ್
1972Kurathi MaganHero's FriendತಮಿಳುK. S. Gopalakrishnan
1973ArangetramThiaguತಮಿಳುಕೆ. ಬಾಲಚಂದರ್
1973Sollathaan NinaikkirenKamalತಮಿಳುಕೆ. ಬಾಲಚಂದರ್
1974Paruva KaalamತಮಿಳುJos A.N. Fernando
1974Gumasthavin MagalZamindarತಮಿಳುA. P. Nagarajan
1974Naan Avanillaiತಮಿಳುಕೆ. ಬಾಲಚಂದರ್
1974KanyakumariSankaranಮಲಯಾಳಂK. S. Sethumadhavan
1974Anbu ThangaiGautama BuddhaತಮಿಳುS. P. Muthuraman
1974Vishnu VijayamಮಲಯಾಳಂN. Sankaran Nair
1974Aval Oru Thodar KathaiPrasadತಮಿಳುಕೆ. ಬಾಲಚಂದರ್
1974PanathukkagaತಮಿಳುM. S. Senthil
1975Cinema PaithiyamNatarajanತಮಿಳುMuktha V. Srinivasan
1975PattampoochiತಮಿಳುA. S. Pragasam
1975Aayirathil OruthiತಮಿಳುAvinashi Mani
1975Then Sindhudhe VaanamತಮಿಳುR. A. Sankaran
1975Melnaattu MarumagalRajaತಮಿಳುA. P. Nagarajan
1975Thangathile VairamತಮಿಳುK. Sornam
1975Pattikkaattu RajaತಮಿಳುK. Shanmugam
1975Gnan Ninne PremikkunnuಮಲಯಾಳಂK. S. Gopalakrishnan
1975Maalai Sooda VaaತಮಿಳುC. V. Rajendran
1975ಅಪೂರ್ವ ರಾಗಂಗಳ್ಪ್ರಸನ್ನತಮಿಳುಕೆ. ಬಾಲಚಂದರ್
1975ThiruvonamಮಲಯಾಳಂSreekumaran Thampi
1975Mattoru SeethaಮಲಯಾಳಂP. Bhaskaran
1975RaasaleelaಮಲಯಾಳಂN. Sankaran Nair
1975AndharangamತಮಿಳುMuktha V. Srinivasan
1976AppooppanಮಲಯಾಳಂP. Bhaskaran
1976Agni PushpamಮಲಯಾಳಂJeassy
1976Manmadha LeelaiMadhuತಮಿಳುಕೆ. ಬಾಲಚಂದರ್
1976Anthuleni KathaArunತೆಲುಗುಕೆ. ಬಾಲಚಂದರ್
1976SamassiyaಮಲಯಾಳಂK. Thankappan
1976Swimming PoolಮಲಯಾಳಂJ. Sasikumar
1976AruthuಮಲಯಾಳಂRavi
1976SatyamತಮಿಳುS. A. Kannan
1976Oru Oodhappu Kan SimittugiradhuತಮಿಳುS. P. Muthuraman
1976UnarchigalSelvamತಮಿಳುR. C. Sakthi
1976Kuttavum SikshayumಮಲಯಾಳಂM. Masthan
1976Kumaara VijayamತಮಿಳುA. Jagannathan
1976Idhaya MalarತಮಿಳುGemini Ganesan
1976PonniಮಲಯಾಳಂThoppil Bhasi
1976Nee Ente LahariಮಲಯಾಳಂP. G. Viswambharan
1976Moondru MudichuBalajiತಮಿಳುಕೆ. ಬಾಲಚಂದರ್
1976Mogam Muppadhu VarushamತಮಿಳುS. P. Muthuraman
1976LalithaತಮಿಳುValampuri Somanathan
1977AainaPrem Kapoorಹಿಂದಿಕೆ. ಬಾಲಚಂದರ್
1977UyarndhavargalತಮಿಳುT. N. Balu
1977Siva ThandavumಮಲಯಾಳಂN. Sankaran Nair
1977AasheervaadamಮಲಯಾಳಂI. V. Sasi
1977AvargalJanardan/Johnnyತಮಿಳುಕೆ. ಬಾಲಚಂದರ್
1977MadhuraswapnamಮಲಯಾಳಂM. Krishnan Nair
1977SreedeviಮಲಯಾಳಂN. Sankaran Nair
1977Unnai Suttrum UlagamತಮಿಳುG. Subramanya Reddiar
1977KabitaGopalಬಂಗಾಳಿBharat Shamsher
1977AshtamangalyamಮಲಯಾಳಂP. Gopikumar
1977NirakudumಮಲಯಾಳಂA. Bhimsingh
1977Ormakal MarikkumoChandrasekharanಮಲಯಾಳಂK. S. Sethumadhavan
197716 VayathinileChappaniತಮಿಳುP. Bharathiraja
1977Aadu Puli AattamKamalತಮಿಳುS. P. Muthuraman
1977Aanandham ParamaanandhamಮಲಯಾಳಂI. V. Sasi
1977Naam Pirandha MannತಮಿಳುA. Vincent
1977ಕೋಕಿಲಕನ್ನಡBalu Mahendra
1977Satyavan SavithriSathyavanಮಲಯಾಳಂP. G. Viswambharan
1977Aadhya PaadamಮಲಯಾಳಂAdoor Bhasi
1978Nizhal NijamagiradhuSanjeeviತಮಿಳುಕೆ. ಬಾಲಚಂದರ್
1978Sakka Podu Podu RajaತಮಿಳುS. P. Muthuraman
1978MadanolsavamRajuಮಲಯಾಳಂN. Sankaran Nair
1978Kaathirunna NimishamRajuಮಲಯಾಳಂBaby
1978Aval ViswasthayayirunnuAntoಮಲಯಾಳಂJeassy
1978AnumodhanamಮಲಯಾಳಂI. V. Sasi
1978Maro CharitraBaluತೆಲುಗುಕೆ. ಬಾಲಚಂದರ್
1978Ilamai OonjaladukirathuPrabhuತಮಿಳುC. V. Sridhar
1978Sattam En KaiyilತಮಿಳುT. N. Balu
1978Vayasu PilichindiತೆಲುಗುC. V. Sridhar
1978Thappida Thalaಕನ್ನಡಕೆ. ಬಾಲಚಂದರ್
1978PadakuthiraಮಲಯಾಳಂP. G Vasudevan
1978Vayanadhan ThambanಮಲಯಾಳಂA. Vincent
1978Aval AppadithanArunತಮಿಳುC. Rudhraiya
1978Sigappu RojakalDileepತಮಿಳುP. Bharathiraja
1978Manidharil Ithanai NirangalaತಮಿಳುR. C. Sakthi
1978Thappu Thalangalತಮಿಳುಕೆ. ಬಾಲಚಂದರ್
1978YaettaRamuಮಲಯಾಳಂI. V. Sasi
1979Sommokadidhi SokkadidhiRangadu/Shekarತೆಲುಗುಸಿಂಗೀತಂ ಶ್ರೀನಿವಾಸರಾವ್
1979Sigappukkal MookkuthiತಮಿಳುValampuri Somanathan
1979NeeyaತಮಿಳುDurai
1979Allauddinum Albhutha VilakkumAlauddinಮಲಯಾಳಂI. V. Sasi
1979Thaayillamal Naan IllaiRajaತಮಿಳುR. Thyagarajan
1979Ninaithale InikkumChandruತಮಿಳುಕೆ. ಬಾಲಚಂದರ್
1979Andhamaina AnubhavamChandruತೆಲುಗುಕೆ. ಬಾಲಚಂದರ್
1979Allaudinaum Arputha VilakkumAlauddinತಮಿಳುI. V. Sasi
1979Idi Katha Kaaduತೆಲುಗುಕೆ. ಬಾಲಚಂದರ್
1979Nool Veliತಮಿಳುಕೆ. ಬಾಲಚಂದರ್
1979KalyanaramanKalyanam,
Raman
ತಮಿಳುG. N. Rangarajan
1979PasiತಮಿಳುDurai
1979Guppedu Manasuತೆಲುಗುಕೆ. ಬಾಲಚಂದರ್
1979Mangala VaathiyamತಮಿಳುK. Shankar
1979Neela MalargalತಮಿಳುKrishnan Panju
1979Azhiyadha KolangalGowrishankarತಮಿಳುBalu Mahendra
1980Ullasa ParavaigalRaviತಮಿಳುC. V. Rajendran
1980GuruGuruತಮಿಳುI. V. Sasi
1980Varumayin Niram SigappuRanganತಮಿಳುಕೆ. ಬಾಲಚಂದರ್
1980ಮರಿಯಾ ಮೈ ಡಾರ್ಲಿಂಗ್ಕನ್ನಡDurai
1980Maria, My DarlingತಮಿಳುDurai
1980Saranam AyyappaತಮಿಳುDasarathan
1980NatchathiramKamal HaasanತಮಿಳುDasari Narayana Rao
1981Thillu MulluCharu Haasanತಮಿಳುಕೆ. ಬಾಲಚಂದರ್
1981Aakali Rajyamತೆಲುಗುಕೆ. ಬಾಲಚಂದರ್
1981Meendum KokilaManianತಮಿಳುG. N. Rangarajan
1981Ram LakshmanRamತಮಿಳುR. Thyagarajan
1981Raja PaarvaiRaghuತಮಿಳುSingeetam Srinivasa Rao
1981Ek Duuje Ke LiyeVasudevaಹಿಂದಿಕೆ. ಬಾಲಚಂದರ್
1981Kadal MeengalತಮಿಳುG. N. Rangarajan
1981SavaalP. P. RajaತಮಿಳುR. Krishnamoorthy
1981SankarlalತಮಿಳುT. N. Balu
1981Tick! Tick! Tick!DilipತಮಿಳುP. Bharathiraja
1981Ellam InbamayyamVeluತಮಿಳುG. N. Rangarajan
1982Vazhvey MaayamRajaತಮಿಳುR. Krishnamoorthy
1982Anthiveyilile PonnuಮಲಯಾಳಂRadhakrishnan
1982ಮೂಂದ್ರಮ್ ಪಿರಾಯ್ಶ್ರೀನಿವಾಸನ್ತಮಿಳುBalu Mahendra
1982Ezham RathiriಮಲಯಾಳಂKrishnakumar
1982Simla SpecialGopuತಮಿಳುMuktha V. Srinivasan
1982ಸನಮ್ ತೇರಿ ಕಸಮ್ (Sanam Teri Kasam)Sunil SharmaಹಿಂದಿNarendra Bedi
1982Dil Ka Sathi DilಹಿಂದಿShankaran Nair
1982Sagalakala VallavanVeluತಮಿಳುS. P. Muthuraman
1982Rani TheniKamal HaasanತಮಿಳುG. N. Rangarajan
1982Yeh To Kamaal Ho GayaRatan Chander,
Ajay Saxena
ಹಿಂದಿTatineni Rama Rao
1982Maattuvin ChattangaleಮಲಯಾಳಂK. G. Rajasekharan
1982Pagadai PanirenduತಮಿಳುDhamodharan. N
1982Agni SakshiKamal Haasanತಮಿಳುಕೆ. ಬಾಲಚಂದರ್
1983Zara Si ZindagiRakeshಹಿಂದಿಕೆ. ಬಾಲಚಂದರ್
1983Uruvangal MaralamKamal HaasanತಮಿಳುS. V. Ramanan
1983SattamRajaತಮಿಳುK. Vijayan
1983ಸಾಗರ ಸಂಗಮಂಬಾಲಕೃಷ್ಣತೆಲುಗುK. Viswanath
1983SadmaSomuಹಿಂದಿBalu Mahendra
1983Poikkal KudhiraiKamal Haasanತಮಿಳುಕೆ. ಬಾಲಚಂದರ್
1983ಬೆಂಕಿಯಲ್ಲಿ ಅರಳಿದ ಹೂವುಕನ್ನಡಕೆ. ಬಾಲಚಂದರ್
1983Thoongadhey Thambi ThoongadheyGopi, VinodತಮಿಳುS. P. Muthuraman
1984Yeh DeshMathurಹಿಂದಿTatineni Rama Rao
1984Ek Nai PaheliSandeepಹಿಂದಿಕೆ. ಬಾಲಚಂದರ್
1984YaadgarಹಿಂದಿRajkumar Kohli
1984Raaj TilakSurajಹಿಂದಿRajkumar Kohli
1984Enakkul OruvanMadhan, UpendhraತಮಿಳುS. P. Muthuraman
1984KarishmaSunnyಹಿಂದಿI. V. Sasi
1985Oru Kaidhiyin DiaryDavid, ShankarತಮಿಳುP. Bharathiraja
1985Kaakki SattaiMuraliತಮಿಳುRajasekhar
1985Andha Oru NimidamKumarತಮಿಳುMajor Sundarrajan
1985Uyarndha UllamAnandhತಮಿಳುS. P. Muthuraman
1985SaagarRajaಹಿಂದಿRamesh Sippy
1985GeraftaarKishan Kumar KhannaಹಿಂದಿPrayag Raaj
1985Mangamma SabadhamAshok,
father of Ashok
ತಮಿಳುK. Vijayan
1985Japanil KalyanaramanKalyanam,
Raman
ತಮಿಳುS. P. Muthuraman
1985Dekha Pyar TumharaಹಿಂದಿVirendra Sharma
1986ManakanakkuKamal HaasanತಮಿಳುR. C. Sakthi
1986Swathi MuthyamSivayyaತೆಲುಗುK. Viswanath
1986ಸೂರ್ಯೋದಯ (Naanum Oru Thozhilali)ಕನ್ನಡ and (ತಮಿಳು)C. V. Sridhar
1986VikramVikramತಮಿಳುRajasekhar
1986Oka Radha Iddaru KrishnuluKrishnaತೆಲುಗುA. Kodandarami Reddy
1986Punnagai MannanSethu,
Chaplin Chellappa
ತಮಿಳುಕೆ. ಬಾಲಚಂದರ್
1987Kadhal ParisuMohanತಮಿಳುA. Jagannathan
1987VruthamBaluಮಲಯಾಳಂI. V. Sasi
1987Per Sollum PillaiRamuತಮಿಳುS. P. Muthuraman
1987ನಾಯಗನ್ವೇಲು ನಾಯಕ್ಕರ್ತಮಿಳುMani Ratnam
1987ಪುಷ್ಪಕ ವಿಮಾನPushpakಕನ್ನಡ (Silent film)ಸಿಂಗೀತಂ ಶ್ರೀನಿವಾಸರಾವ್[೪೩]
1987Kadamai Kanniyam KattupaaduKamal HaasanತಮಿಳುSanthana Bharathi
1988SathyaSathyamurthyತಮಿಳುSuresh Krissna
1988DaisyJamesಮಲಯಾಳಂPrathap Pothan
1988Soora SamhaaramA. V. PandiyanತಮಿಳುChitra Lakshmanan
1988Unnal Mudiyum ThambiUdhayamoorthyತಮಿಳುK. Balachander
1989ಅಪೂರ್ವ ಸಗೋಧರರ್ಗಳ್ಸೆಧುಪತಿ,
ರಾಜ,
ಅಪ್ಪು
ತಮಿಳುಸಿಂಗೀತಂ ಶ್ರೀನಿವಾಸರಾವ್
1989Vetri VizhaVetrivelತಮಿಳುPrathap Pothan
1989ChanakyanJohnsonಮಲಯಾಳಂT. K. Rajeev Kumar
1989Indrudu ChandruduG.K Rayudu,
Chandru
ತೆಲುಗುSuresh Krissna
1990Michael Madana Kama Rajan
  • Michael
  • Madhan
  • Kameshwaran
  • Raja
ತಮಿಳುಸಿಂಗೀತಂ ಶ್ರೀನಿವಾಸರಾವ್
1991GunaGunaತಮಿಳುSanthana Bharathi
1992SingaravelanSingaravelanತಮಿಳುR. V. Udayakumar
1992ದೇವರ್ ಮಗನ್ಶಕ್ತಿವೇಲು ಥೇವರ್ತಮಿಳುBharathan
1993MaharasanVadivelu / MaharasanತಮಿಳುG. N. Rangarajan
1993KalaignanIndrajithತಮಿಳುG. B. Vijay
1994ಮಹಾನದಿKrishnaswamyತಮಿಳುSanthana Bharathi
1994Magalir MattumBossತಮಿಳುಸಿಂಗೀತಂ ಶ್ರೀನಿವಾಸರಾವ್
1994NammavarSelvamತಮಿಳುK. S. Sethumadhavan
1995Sathi LeelavathiShakthivelತಮಿಳುBalu Mahendra
1995Subha SankalpamDasuತೆಲುಗುK. Viswanath
1995KuruthipunalAdhi NarayananತಮಿಳುP. C. Sreeram
1996ಇಂಡಿಯನ್ಸೇನಾಪತಿ,
ಚಂದ್ರ ಬೋಸ್
ತಮಿಳುS. Shankar
1996Avvai ShanmugiPandiyan,
Avvai Shanmugi
ತಮಿಳುK. S. Ravikumar
1997Chachi 420Jaiprakash Paswan,
Lakshmi Godbhole
ಹಿಂದಿKamal Haasan
1998Kaathala KaathalaRamalinghamತಮಿಳುಸಿಂಗೀತಂ ಶ್ರೀನಿವಾಸರಾವ್
2000ಹೇ ರಾಮ್‌ಸಾಕೇತ್ ರಾಮ್ತಮಿಳುKamal Haasan
ಹಿಂದಿ
2000ThenaliThenali SomanತಮಿಳುK. S. Ravikumar
2001AalavandhanVijay Kumar,
Nandhu Kumar
ತಮಿಳುSuresh Krissna[೪೪][೪೫]
2001Parthale ParavasamHimselfತಮಿಳುK. Balachander
2002Pammal K. SambandamPammal K. SambandamತಮಿಳುT. S. B. K. Moulee
2002PanchathanthiramRamachandra MoorthyತಮಿಳುK. S. Ravikumar
2003Anbe SivamNalla SivamತಮಿಳುSundar. C
2003Nala DamayanthiHimselfತಮಿಳುT. S. B. K. Moulee
2004VirumaandiVirumaandiತಮಿಳುKamal Haasan
2004Vasool Raja MBBSRajaraman VenkatramananತಮಿಳುSaran
2005Mumbai ExpressAvinashiತಮಿಳುಸಿಂಗೀತಂ ಶ್ರೀನಿವಾಸರಾವ್
Mumbai XpressAvinashಹಿಂದಿ
2005ರಾಮ ಶಾಮ ಭಾಮShamaಕನ್ನಡRamesh Aravind
2006Vettaiyaadu VilaiyaaduRaghavanತಮಿಳುGautham Menon
2008ದಶಾವತಾರಮ್Dr. Govindarajan Ramaswamy,
Rangarajan Nambi,
Christian Fletcher,
Balram Naidu,
Krishnaveni,
Vincent Boovaragan,
Khalifulla,
Avatar Singh,
Shinghen Narahsi,
President George W. Bush
ತಮಿಳುK. S. Ravikumar
2009ಉನ್ನೈಪೋಲ್ ಒರುವನ್ಸಾಮಾನ್ಯ ಮನುಷ್ಯತಮಿಳುChakri Toleti
2009ಈನಾಡುತೆಲುಗು
2010Four FriendsHimselfಮಲಯಾಳಂSaji SurendranGuest appearance
2010Manmadhan AmbuMajor Raja MannarತಮಿಳುK. S. Ravikumar
2013ವಿಶ್ವರೂಪಂWisam Ahmed Kashmiri aka ViswanathತಮಿಳುKamal Haasan
2013Vishwaroopಹಿಂದಿ
2015Uttama VillainUttaman/ManoranjanತಮಿಳುRamesh Aravind
2015PapanasamSuyambulingamತಮಿಳುJeethu Joseph
2015Thoongaa VanamC.K. DiwakarತಮಿಳುRajesh M. Selva
2015Cheekati Rajyamತೆಲುಗು
2018ವಿಶ್ವರೂಪಂ IIWisam Ahmed Kashmiri aka ViswanathತಮಿಳುKamal Haasan
2018Vishwaroop IIಹಿಂದಿ
2021ಇಂಡಿಯನ್ 2ತಮಿಳುPre-production

ಆಕರಗಳು

[ಬದಲಾಯಿಸಿ]
  1. UCLA International Institute. ೨೦೦೫. Screening - Nayakan (Hero). Available from: http://www.international.ucla.edu/showevent.asp?eventid=೩೭೦೦ Archived 2021-06-16 ವೇಬ್ಯಾಕ್ ಮೆಷಿನ್ ನಲ್ಲಿ.. Accessed ೧೫ February ೨೦೦೮.
  2. UCLA School of Arts and Architecture. ೨೦೦೫. UCLA Year of the Arts — Program brochure. Available from: http://www.arts.ucla.edu/yoa/UCLA-YOA-brochure-೦೫೦೬.pdf. Accessed ೧೫ February ೨೦೦೮.
  3. Time Magazine. ೨೦೦೫. All-Time ೧೦೦ Best Films. Available from: http://www.time.com/time/೨೦೦೫/೧೦೦movies/the_complete_list.html. Accessed ೧೩ February ೨೦೦೮.
  4. Mukund Padmanaban (1997). "We are capable of making films for people worldwide". Indian Express. Retrieved 2009-10-09.
  5. Kumar, Shiva (2009). "I'm a limelight moth". ದಿ ಹಿಂದೂ. Retrieved 2009-10-09.
  6. Padmanabhan, Mukund (1997). "We are capable of making films for people worldwide". Indian Express. Retrieved 2009-10-19.
  7. 1 2 3 4 5 6 7 Panicker, Prem (2003). "Kamal's Best". Rediff. Retrieved 2009-10-09.
  8. K. Jeshi (2004). "No stopping him". ದಿ ಹಿಂದೂ. Archived from the original on 2011-04-25. Retrieved 2009-10-19.
  9. Adhiraj,Vijay (2004). "`Each medium has its own USP'". ದಿ ಹಿಂದೂ. Archived from the original on 2011-06-29. Retrieved 2009-10-19.
  10. "Kamal Hassan, Tabu win national awards". Indian Express. 1997. Archived from the original on 2009-10-26. Retrieved 2009-10-19.
  11. Rajitha (1999). "Shilpa to do a Shankar film". Rediff. Retrieved 2009-10-19.
  12. V. S. Srinivasan (1998). "Aunty vs Chachi". Rediff. Retrieved 2009-10-19.
  13. "'Marudanayagam' resurfaces". Indiaglitz.com. 2008. Archived from the original on 2008-01-22. Retrieved 2009-10-19.
  14. T. S. Subramaniam (1997). "A rough passage to India". ದಿ ಹಿಂದೂ. Archived from the original on 2009-07-06. Retrieved 2009-10-19.
  15. V. S. Srinivasan (1998). "Making of an epic". ದಿ ಹಿಂದೂ. Retrieved 2009-10-19.
  16. "Don't let mediocrity be the standard:Kamal". ಟೈಮ್ಸ್ ಆಫ್ ಇಂಡಿಯ. 2009. Retrieved 2009-10-19.
  17. Deepa Deosthalee (1998). "The great Bollywood rip-off". Indian Express. Archived from the original on 2010-06-25. Retrieved 2009-10-19.
  18. "Wide acclaim for Indian films in US festival". ಟೈಮ್ಸ್ ಆಫ್ ಇಂಡಿಯ. 2001. Retrieved 2009-10-19.
  19. "The many faces of success". ದಿ ಹಿಂದೂ. 2005. Archived from the original on 2008-05-02. Retrieved 2009-10-19.
  20. "Drop in releases". Screen India. 2001. Archived from the original on 2009-10-05. Retrieved 2009-10-19.
  21. Malathi Rangarajan (2003). "Anbe Sivam". ದಿ ಹಿಂದೂ. Archived from the original on 2009-09-22. Retrieved 2009-10-19.
  22. Shreedhar Pillai (2006). "Vote is for the different". ದಿ ಹಿಂದೂ. Archived from the original on 2011-06-06. Retrieved 2009-10-19.
  23. "Suriya is king in Mumbai!". Sify. 2009. Retrieved 2009-10-19.
  24. Malathi Rangarajan (2008). "'Dasavathaaram': in the manner of an epic". ದಿ ಹಿಂದೂ. Archived from the original on 2012-11-10. Retrieved 2009-10-19.
  25. "Kamal's 'Marmayogi' shelved". ದಿ ಹಿಂದೂ. 2008. Archived from the original on 2010-01-27. Retrieved 2009-10-19.
  26. Ranjib Mazumder (2009). "Kamal Haasan admits being a player for the market". DNAIndia.com. Retrieved 2009-10-19.
  27. "ಆರ್ಕೈವ್ ನಕಲು". Archived from the original on 2013-06-06. Retrieved 2013-08-11.
  28. http://www.thehindu.com/arts/cinema/article3504938.ece
  29. "ಆರ್ಕೈವ್ ನಕಲು". Archived from the original on 2013-04-19. Retrieved 2013-08-11.
  30. Kumar, Rajitha (2000). "Kamal, as we know him". Rediff.com. Retrieved 2009-06-30.
  31. Pavithra Srinivasan (2008). "Dasavatharam music is mediocre". Rediff. Retrieved 2009-06-30.
  32. "Married to the medium". Tribune India. 2003. Retrieved 2009-06-30.
  33. "Celebrity: Kamal Haasan". Buzz18.in.com. 2009. Archived from the original on 2010-02-01. Retrieved 2009-06-30.
  34. 1 2 TR (2008). "Wasn't Ranjith telling Sreevidya's tale?". Nowrunning.com. Archived from the original on 2009-10-26. Retrieved 2009-06-30.
  35. "Slrrp! Slrrp!". The Telegraph. 2005. Archived from the original on 2016-12-13. Retrieved 2009-06-30.
  36. Jha, Subhash K. (2003). "'My main concern is the kids'". ಟೈಮ್ಸ್ ಆಫ್ ಇಂಡಿಯ. Retrieved 2009-06-30.
  37. Johar, Suhel. (2002). "Simran Moves into Kamal Haasan's House". Smashits.com. Archived from the original on 2009-12-08. Retrieved 2009-06-30.
  38. "Gauthami is next to my Mom – Kamal Haasan". Indiaglitz.com. 2009. Archived from the original on 2010-01-11. Retrieved 2009-10-09.
  39. 1 2 "The legend turns 53". Zee News. 2007. Retrieved 2009-06-30.
  40. "Padma Awards Announced". Press Information Bureau, Ministry of Home Affairs. 25 January, 2014. Retrieved 2014-01-26. {{cite web}}: Check date values in: |date= (help)
  41. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಖಚಿತ: ಕಮಲಹಾಸನ್‌;22 ಡಿಸೆಂಬರ್ 2018
  42. ಕಮಲ್ ಹಾಸನ್‌ ಹೊಸ ಪಕ್ಷ ‘ಮಕ್ಕಳ್‌ ನೀದಿ ಮೈಯಂ’
  43. "Pushpaka Vimanam was India's first silent film". timesofindia.indiatimes.com. Retrieved 2014-11-06.
  44. "Music with a sixth sense — The Hindu". thehindu.com. Retrieved 2014-11-06.
  45. "Kamal Haasan inspired director Quentin Tarantino". ibnlive.in.com. Archived from the original on 2012-07-19. Retrieved 2014-11-06.

ಹೊರಗಿನ ಕೊಂಡಿಗಳು

[ಬದಲಾಯಿಸಿ]