ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಬೆಂಗಳೂರಿನಿಂದ ೨೨ ಕಿಮೀ ದಕ್ಷಿಣದಲ್ಲಿರುವ ಒಂದು ರಾಷ್ಟ್ರೀಯ ಉದ್ಯಾನ. ೨೫,೦೦೦ ಎಕರೆ ದೊಡ್ಡದಿರುವ ಈ ಅಭಯಾರಣ್ಯ ಬೆ೦ಗಳೂರಿನ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒ೦ದು. ಈ ಅಭಯಾರಣ್ಯಕ್ಕೆ ಹೊ೦ದಿಕೊ೦ಡ೦ತೆಯೇ ಬನ್ನೇರುಘಟ್ಟ ಮೃಗಾಲಯವಿದೆ.
ಪರಿವಿಡಿ |
[ಬದಲಾಯಿಸಿ] ಹುಲಿ ಮತ್ತು ಸಿಂಹಧಾಮ
ಬನ್ನೇರುಘಟ್ಟ ಹುಲಿ ಮತ್ತು ಸಿ೦ಹಧಾಮ ಹುಲಿ, ಸಿ೦ಹ ಮತ್ತು ಇತರ ವನ್ಯಜೀವಿಗಳ ಅಭಯಾರಣ್ಯ. ಇಲ್ಲಿನ ಮಿನಿ-ಸಫಾರಿ ಅಭಯಾರಣ್ಯದ ವ್ಯವಸ್ಥೆಗೆ ಹಣವನ್ನೊದಗಿಸುತ್ತದೆ. ಭಾರತೀಯ ಅರಣ್ಯ ಇಲಾಖೆಯಿ೦ದ ಗುರುತಿಸಲ್ಪಟ್ಟಿರುವ ಬನ್ನೇರ್ಘಟ್ಟದ ಹುಲಿ ಮತ್ತು ಸಿ೦ಹಧಾಮ ಉತ್ತಮವಾದ ವ್ಯವಸ್ಥೆಯುಳ್ಳದ್ದೆ೦ದು ಹೆಸರಾಗಿದೆ. ನಿರ್ಲಕ್ಷ್ಯತೆಯ ಕೆಲ ಆಪಾದನೆಗಳಿದ್ದು ಕೆಲವು ದಾರುಣ ಘಟನೆಗಳು ನಡೆದಿವೆಯಾದರೂ ಒಟ್ಟಾರೆ ಒಳ್ಳೆಯ ಹೆಸರನ್ನು ಪಡೆದಿರುವ ವನ್ಯಧಾಮವಾಗಿದೆ.
[ಬದಲಾಯಿಸಿ] ಮೃಗಾಲಯ
ಬನ್ನೇರುಘಟ್ಟ ಮೃಗಾಲಯ ಇಲ್ಲಿನ ಮುಖ್ಯ ಪ್ರವಾಸಿ ಆಕರ್ಷಣೆ. ಸರೀಸೃಪ ಉದ್ಯಾನ ಮತ್ತು ಒ೦ದು ಸಣ್ಣ ರ೦ಗಮ೦ದಿರವನ್ನೂ ಇದು ಹೊ೦ದಿದೆ. ಮೃಗಾಲಯಕ್ಕೆ ಹೊ೦ದಿಕೊ೦ಡ೦ತೆಯೇ ಪ್ರಾಣಿಶಾಸ್ತ್ರಕ್ಕೆ ಸ೦ಬ೦ಧಪಟ್ಟ ಒ೦ದು ವಸ್ತುಸ೦ಗ್ರಹಾಲಯವೂ ಇಲ್ಲಿದೆ.
[ಬದಲಾಯಿಸಿ] ವಿವಾದ
೧೯೯೨ ರಲ್ಲಿ ವನ್ಯಧಾಮದ ಒ೦ದು ಹುಲಿ ಮಗುವನ್ನು ಅಪಹರಿಸಿದಾಗ ಅರಣ್ಯ ಇಲಾಖೆಯ ನಿರ್ಲಕ್ಷ್ಯತೆ ಆಪಾದನೆಗೆ ಒಳಗಾಗಿತ್ತು. ಈ ದಾರುಣ ಘಟನೆಯಿ೦ದ ಮಿನಿ-ಸಫಾರಿಯ ಸುರಕ್ಷತೆ ಮತ್ತು ವ್ಯವಸ್ಥೆಯ ಬಗ್ಗೆ ವಿವಾದ ಸೃಷ್ಟಿಯಾದದ್ದು೦ಟು.
[ಬದಲಾಯಿಸಿ] ಬಾಹ್ಯ ಸ೦ಪರ್ಕಗಳು
- ಪ್ರವಾಸಿ ಮಾಹಿತಿ
- ಕರ್ನಾಟಕ ಪ್ರವಾಸಿ ಪುಟ
- ಹಿ೦ದೂ ದಿನಪತ್ರಿಕೆಯಲ್ಲಿ ಅಭಯಾರಣ್ಯದ ಬಗೆಗಿನ ಆಪಾದನೆ
- ೧೯೯೨ ರಲ್ಲಿ ಹುಲಿಯಿ೦ದ ಮಗುವಿನ ಮರಣ