ಸಂಸ್ಕೃತದಲ್ಲಿ ಇಲ್ಲದ ಅಚ್ಚಗನ್ನಡಕ್ಕೆ ವಿಶಿಷ್ಟವಾದ ವರ್ಣಗಳು ದೇಶಿಯಗಳು.[೧]ಕನ್ನಡದಲ್ಲಿ ಇವುಗಳ ಸ್ಥಾನ, ಕರಣ, ಪ್ರಾಸ ವಿಚಾರಗಳ ಬಗೆಗೆ ಕೇಶಿರಾಜನೊಬ್ಬನೆ ಅಧಿಕೃತವಾಗಿ ಹೇಳಿರುವನಾದುದರೀಂದ ಇವುಗಳಿಗೆ ಹೆಚ್ಚಿನ ಮಹತ್ವವಿದೆ. ದೇಸಿಯಗಳ ಕುರಿತಂತೆ ಕೇಶಿರಾಜ ೧೬, ೧೭ನೆಯ ಸೂತ್ರಗಳಲ್ಲಿ ಅವುಗಳ ವ್ಯುತ್ಪತ್ತಿ, ಸ್ಥಾನ ಮತ್ತು ಉಚ್ಛಾರ ಕ್ರಮಗಳ ಬಗ್ಗೆ ವಿವರಿಸಿದ್ದಾನೆ.[೨]