ಬಸವಕಲ್ಯಾಣ
ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯ ಶಿವ | |
---|---|
ಬಸವಣ್ಣ | |
ಭೂಮಿ | |
17°52′33″N 76°57′03″E / 17.875794°N 76.950729°E | |
ದೇಶ | ಭಾರತ |
ನಾಡು | ಕರ್ನಾಟಕ |
ಜಿಲ್ಲೆ | ಬೀದರ್ |
ತಾಲೂಕು | ಬಸವಕಲ್ಯಾಣ |
ಭಾಷೆ | |
ನುಡಿ | ಕನ್ನಡ |
ಲಿಪಿ | ಕನ್ನಡ ಲಿಪಿ |
ಪ್ರತಿನಿಧಿ | |
ಜನ | |
ಗಣತಿ | ೨೦೧೧ |
ಒಟ್ಟು ಜನರು | ೬೯,೭೧೭ |
ಹೆಣ್ಣು/ಗಂಡು | ೯೩೦♀/೧,೦೦೦♂ |
ಓದು ಬರಹ ಗೊತ್ತಿರುವವರು | ೬೬.೦೪ % |
ಪ್ರಜಾಪ್ರಭುತ್ವ | |
ಕರ್ನಾಟಕ ರಾಜ್ಯ ಚುನಾವಣಾ ಆಯೋಗ | |
ಲೋಕಸಭಾ ಕ್ಷೇತ್ರ | ಬೀದರ್ |
ವಿಧಾನಸಭಾ ಕ್ಷೇತ್ರ | ಬಸವಕಲ್ಯಾಣ |
ಇತರೆ ಮಾಹಿತಿ | |
ಸಮಯ | ಯುಟಿಸಿ+5:30 |
ದಿನಾಂಕ ಬರೆಯುವ ರೀತಿ | ದಿನ-ತಿಂಗಳು-ಇಸವಿ |
ಅಂಚೆ ಅಂಕಿ | ೫೮೫೩೨೭ |
ಗಾಡಿ ಓಡಿಸುವ ಬದಿ | ಎಡಬದಿ |
ಗಾಡಿ ಅಂಕಿ |
|
ಕರೆ ಮಾಡುವ ಅಂಕಿ | +೯೧ |
ಸಂಪರ್ಕ | |
ತುರ್ತು ಸಹಾಯವಾಣಿ | ೧೧೨ |
ಜಾಲತಾಣ | karnataka |
ಬಸವಕಲ್ಯಾಣ ನಗರವು ಕರ್ನಾಟಕ ರಾಜ್ಯದ ಬೀದರ ಜಿಲ್ಲೆಯಲ್ಲಿದೆ. ಬೀದರ್ ನಗರದಿಂದ ಸುಮಾರು 80 ಕಿಲೊಮೀಟರ್ ದೂರದಲ್ಲಿ ಇರುವ ಇದು ರಾಜ್ಯದ ಅತ್ಯಂತ ಐತಿಹಾಸಿಕ ನಗರಗಳಲ್ಲಿ ಒಂದು.
ಚಿತ್ರ[ಬದಲಾಯಿಸಿ]


ಬಸವಕಲ್ಯಾಣ ತಾಲೂಕಿನ ಸಾಹಿತಿಗಳು[ಬದಲಾಯಿಸಿ]
ಪೂಜ್ಯ.ಶ್ರೀ.ಷ.ಬ್ರ.ಡಾ.ಚೆನ್ನವೀರ ಶಿವಾಚಾರ್ಯರು
- ಶರಣಯ್ಯಾ ಕಲ್ಯಾಣ
- ರೇವಣಸಿದ್ದಪ್ಪ ವಾಂಜರಖೇಡೆ
- ಮಾತೆ ಸುಜ್ಞಾನಿದೇವಿ
- ಪಿ.ಬಸವರಾಜ
- ಚಂದ್ರಕಾಂತ ಪೊಸ್ತೆ
- ಸರಸ್ವತಿ ವಿ.ಪಾಟೀಲ್
- ಡಾ.ಬಾಬುರಾವ ಮುಡಬಿ
- ಡಾ.ಬಂಡೆಪ್ಪ ಕಾಳಗಿ
- ಪ್ರೊ.ಸೂರ್ಯಕಾಂತ ಶೀಲವಂತ
- ಲಕ್ಷ್ಮಣ ಬಾಬಶೆಟ್ಟಿ
- ಡಾ.ಮಾಯಾದೇವಿ ಜಿ ಮಾಲಿಪಾಟೀಲ್
- ದಿ.ಶ್ರೀಕಾಂತ ಪಾಟೀಲ್
- ದಿ.ಹಣಮಂತರಾವ ವಿಸಾಜಿ
- ಎಂ.ಡಿ.ಕಾಡಾದಿ
- ಜಿ.ಎಸ್.ಮಾಲಿ ಪಾಟೀಲ್
- ಮಲ್ಲಿಕಾರ್ಜುನ ಎಂ.ಪಂಚಾಳ
- ಮಾಣಿಕರೆಡ್ಡಿ ಕೌಡಾಳೆ
- ಡಾ.ಕೆ.ಎಂ.ಮೇತ್ರಿ
- ಡಾ.ವಿಜಯಲಕ್ಷ್ಮಿ ಗಡ್ಡೆ
- ಡಾ.ಚಿತ್ಕಳಾ ಜಿ.ಮಠಪತಿ
- ಡಾ.ರೋಳೆಕರ ನಾರಾಯಣ
- ನಾರಾಯಣ ರಾಂಪೂರೆ.
- ರುಕ್ಮೊದಿನ್ ಇಸ್ಲಾಂಪೂರ
- ನಾಗೇಂದ್ರ ಆರ್ ಬಿರಾದಾರ
- ಮಲ್ಲಿನಾಥ ಕೆ.ಹಿರೇಮಠ
- ಡಾ.ಸತೀಶಕುಮಾರ ಹೊಸಮನಿ
- ಡಾ.ವೆಂಕಟರೆಡ್ಡಿ ರಾಮರೆಡ್ಡಿ
- ಭೀಮಶೇನ್ ಗಾಯಕವಾಡ
- ಡಾ.ರವೀಂದ್ರನಾಥ ನಾರಾಯಣಪುರ
- ಸೂರ್ಯಕಾಂತ ಸಸಾನೆ.
- ಪ್ರಭುಲಿಂಗಯ್ಯಾ ಬಿ.ಟಂಕಸಾಲಿಮಠ
- ಮಾಣಿಕ ಭುರೆ.
- ದಿ.ಕವಿತಾ ಮಲ್ಲಪ್ಪ
- ವೀರಣ್ಣ ಮಂಠಾಳಕರ್.
- ಈಶ್ವರ ತಡೋಳಾ
- ಡಾ.ಜಯದೇವಿ ಗಾಯಕವಾಡ
- ಡಾ.ಸಾರಿಕಾದೇವಿ ಕಾಳಗಿ
- ಎಂ.ಆರ್.ಶ್ರೀಕಾಂತ
- ಮಚ್ಚೇಂದ್ರ ಪಿ ಅಣಕಲ್
- ಲಕ್ಷ್ಮೀಕಾಂತ ಸಿ.ಪಂಚಾಳ
- ಮೇನಕಾ ಪಾಟೀಲ್
- ದೇವೆಂದ್ರ ಕಟ್ಟಿಮನಿ
- ಅರವಿಂದ ಚಾಂದೆ
- ನೀತಿನ್ ನೀಲಕಂಠೆ
- ಬಸವೇಶ್ವರಿ ಕೆ.ದೇಗಲೂರೆ.
- ವಿವೇಕಾನಂದ ಸಜ್ಜನ
ಕೃಪೆ: ' ಬೀದರ ಜಿಲ್ಲಾ ಸಾಹಿತಿಗಳ ಪರಿಚಯ' ಎಂಬ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ. ಲೇಖಕರು: ಮಚ್ಚೇಂದ್ರ ಪಿ ಅಣಕಲ್.
ಚರಿತ್ರೆ[ಬದಲಾಯಿಸಿ]
ಹನ್ನೆರಡನೇ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿಯ ಪಟ್ಟಣವೇ ಇಂದಿನ ಬಸವ ಕಲ್ಯಾಣ. ಬೀದರ ಜಿಲ್ಲೆಯ ತಾಲ್ಲೂಕು ಕೇಂದ್ರವಾಗಿರುವ ಈ ಊರಿನ ಜನಸಂಖ್ಯೆ ೫೮,೭೪೨ (೨೦೦೧ರ ಭಾರತದ ಜನಗಣತಿಯ ಪ್ರಕಾರ).ಕಲ್ಯಾಣ ಚಾಲುಕ್ಯರ ರಾಜಧಾನಿಯಾಗಿ ಮೆರೆದಿದ್ದ ಕಲ್ಯಾಣದಿ೦ದ ಸುಮಾರು ೨೫೦ ವರುಷಗಳವರೆಗೆ ಆಳ್ವಿಕೆ ನಡೆಸಿದರು.
ಉಮಾಪೂರ ಮಂದಿರ[ಬದಲಾಯಿಸಿ]
ಇದು ಕೂಡ ಬಸವಕಲ್ಯಾಣದಿಂದ 15 ಕಿ.ಮೀ. ದೂರ ಪಶ್ಚಿಮ ದಿಕ್ಕಿಗಿದೆ. ಇಲ್ಲಿ ಉಮಾಮಹೇಶ್ವರ ದೇಗುಲದ ಸಂಕೀರ್ಣವು ಕಾಣಬಹುದಾಗಿದ್ದು ಪೂರ್ತಿ ಜರ್ಝರಿತವಾಗಿದೆ. ಇದು ಕೂಡ ಕಲಾಶಿಲ್ಪ ವೈಭವಕ್ಕೆ ಸಾಕ್ಷಿಯಾಗಿದೆ. (ಶಿಲ್ಪ ಕಲಾ ವೈಭವಕ್ಕೆ ಸಾಕ್ಷಿಯಾಗಿ ನಿಂತಿರು ಉಮಾಮಹೇಶ್ವರ ದೇಗುಲ ಸಂಕೀರ್ಣ )
ಬಸವೇಶ್ವರ ದೇವಾಲಯ[ಬದಲಾಯಿಸಿ]
ಬಸವಣ್ಣನವರು ಮಾಂಡಲಿಕ ಬಿಜ್ಜಳನೊಂದಿಗೆ ಮಂಗಳವೇಡೆಯಿಂದ ಕಲ್ಯಾಣಪುರಕ್ಕೆ ಬಂದು ಅದನ್ನು ತಮ್ಮ ಕರ್ಮಭೂಮಿಯನ್ನಾಗಿಸಿ ಕೊಂಡರು. ಸಾಮಾಜಿಕ, ಧಾರ್ಮಿಕ ಕ್ರಾಂತಿಯನ್ನು ನಡೆಸಿದರು. ಕಲ್ಯಾಣ ಶರಣರ ನಾಡು, ಭಕ್ತಿಯ ಬೀಡು ಆಯಿತು. ಬಲದೇವ ಮಂತ್ರಿಯ ನಂತರ ಬಸವಣ್ಣನವರಿಗೆ ಪ್ರಧಾನಿ ಹುದ್ದೆಯನ್ನು ನೀಡಲಾಯಿತು. ಅವರು ಬಿಜ್ಜಳ ಅರಸರ ಭಾಂಡಾರಿಯಷ್ಟೇ ಆಗಿರದೆ ಭಕ್ತಿ ಭಾಂಡಾರಿಯೂ ಆದರು. ನೆಲ ಪಾವನವಾಯಿತು. ಜನಮನ ನೆಲೆ ಕಂಡಿತು. ಈ ಆಧುನಿಕ ದೇವಾಲಯ ಸಾಂಸ್ಕೃತಿಕ ಕೇಂದ್ರವೂ ಆಗಿದೆ. (ಚಿತ್ರದಲ್ಲಿ ಕಾಣುತ್ತಿರುವದು ಬೊಮ್ಮಗೊಂಡೇಶ್ವರ ಕೆರೆ)
ಪರುಷಕಟ್ಟೆ[ಬದಲಾಯಿಸಿ]
ಬಸವೇಶ್ವರ ದೇವಾಲಯದ ಸಮೀಪ ಇರುವ ಈ ಸ್ಮಾರಕ ಕಟ್ಟೆಯೊಂದರ ರೂಪದಲ್ಲಿದೆ. ಇದರ ಸಂಬಂಧ ಬಸವಣ್ಣನವರೊಂದಿಗೆ ಇದ್ದಿತೆಂದು ತಿಳಿದುಬರುತ್ತದೆ.
ಬಸವಣ್ಣನವರ ಅರಿವಿನ ಮನೆ[ಬದಲಾಯಿಸಿ]
ಬಸವ ಕಲ್ಯಾಣದ ಹೊರವಲಯದಲ್ಲಿರುವ ಇದು ಸ್ಮಾರಕ ಗುಹೆಯ ಮಾದರಿಯಲ್ಲಿದೆ. ಬಸವಣ್ಣನವರ ಮಹಾಮನೆ ಎಂದೇ ಜನರು ಇದನ್ನು ಕಾಣುತ್ತಾರೆ.
ಹಡಪದ ಅಪ್ಪಣನವರ ಗುಹೆ[ಬದಲಾಯಿಸಿ]
ಅರಿವಿನ ಮನೆಯ ಪಕ್ಕದಲ್ಲಿಯೇ ಈ ಗುಹೆ ಇದ್ದು , ತಂಪಾದ ನೆಲೆಯಾಗಿದೆ. ಹಡಪದ ಅಪ್ಪಣನವರು ಬಸವಣ್ಣನವರ ನಿಕಟವರ್ತಿಗಳಾಗಿದ್ದರು. ತಾಂಬೂಲವನ್ನು ಸಲ್ಲಿಸುವ ಕಾಯಕ ಅವರದ್ದಾಗಿತ್ತೆಂದು ತಿಳಿದುಬರುತ್ತದೆ.
ಅಕ್ಕ ನಾಗಮ್ಮ - ನೀಲಮ್ಮನವರ ಗವಿಗಳು[ಬದಲಾಯಿಸಿ]
ಈ ಎರಡೂ ಗವಿಗಳು ಅಕ್ಕಪಕ್ಕದಲ್ಲಿವೆ. ಚೆನ್ನಬಸವಣ್ಣನವರು ತಮ್ಮ ಬಾಲ್ಯದ ದಿನಗಳನ್ನು ಕಳೆದದ್ದು ಇಲ್ಲಿಯೇ ಎಂಬುದು ಅಭಿಪ್ರಾಯ. ಈ ಗವಿಗಳು ಹನ್ನೆರಡನೇ ಶತಮಾನದ ಮಹಿಳೆಯರ ಆಧ್ಯಾತ್ಮಿಕ ಸಾಧನೆಯ ಕುರುಹುಗಳು.ಐತಿಹಾಸಿಕ ಬಸವಕಲ್ಯಾಣ[ಶಾಶ್ವತವಾಗಿ ಮಡಿದ ಕೊಂಡಿ]
ಉಲ್ಲೇಖಗಳು[ಬದಲಾಯಿಸಿ]

- Pages using multiple image with auto scaled images
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- Articles with invalid date parameter in template
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- Commons link is locally defined
- ಬೀದರ್ ಜಿಲ್ಲೆಯ ತಾಲೂಕುಗಳು
- ಲಿಂಗಾಯತ
- ನಕ್ಷೆಗಳಿರುವ ಪುಟಗಳು