ವಿಷಯಕ್ಕೆ ಹೋಗು

ಪಯಸ್ವಿನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಯಸ್ವಿನಿ
ನದಿ
ದೇಶಭಾರತ ಸಂಪಾದಿಸಿ
ಈ ಪ್ರದೇಶದಲ್ಲಿದೆಕೇರಳ, ಕರ್ನಾಟಕ ಸಂಪಾದಿಸಿ
ಸ್ಥಳದ ನಿರ್ದೇಶಾಂಕಗಳ೧೨°೨೮′೨೦″N ೭೪°೫೯′೪೨″E ಸಂಪಾದಿಸಿ
Map

ಈ ನದಿ ಮಡಿಕೇರಿ ತಾಲೂಕಿನ ಭಾಗಮಂಡಲದ ಪಶ್ಚಿಮ ದಿಕ್ಕಿನಲ್ಲಿ ಉಗಮಗೊಂಡು ಜೋಡುಪಾಲದ ಮೂಲಕ ಅರಂತೋಡು, ಸುಳ್ಯ, ಪೈಚಾರ್, ಜಾಲ್ಸೂರು, ಪಂಜಿಕಲ್ಲು, ಮದೇವರಗುಂಡ, ಮುರೂರು ಹಾದು ಮುಡೂರಿನಲ್ಲಿ ಕೇರಳ ಸೇರುತ್ತದೆ. ಕೇರಳದಲ್ಲಿ ಇದನ್ನು ಚಂದ್ರಗಿರಿ ನದಿಯೆಂದು ಕರೆಯುತ್ತಾರೆ. ಇದು ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಹರಿಯುವ ಅತಿದೊಡ್ಡ ನದಿಯಾಗಿದೆ . ಇದನ್ನು ಹಿಂದೆ ಪೆರುಂಪುಳ ಎಂದು ಕರೆಯಲಾಗುತ್ತಿತ್ತು. 17 ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಸಾಮಂತನಾಗಿದ್ದ ದೊರೆ ಶಿವಪ್ಪ ನಾಯಕ್ ನಿರ್ಮಿಸಿದ ಚಂದ್ರಗಿರಿ ಕೋಟೆಯು ಈ ನದಿಯ ದಡದಲ್ಲಿದೆ. ಮೌರ್ಯ ಸಾಮ್ರಾಜ್ಯದ ಸ್ಥಾಪಕ ಚಂದ್ರಗುಪ್ತ ಮೌರ್ಯನ ನೆನಪಿಗಾಗಿ ನದಿ ಮತ್ತು ಕೋಟೆಗೆ "ಚಂದ್ರಗಿರಿ" ಎಂಬ ಹೆಸರನ್ನು ನೀಡಲಾಗಿದೆ . ಈ ನದಿಯನ್ನು ತುಳುನಾಡು ಮತ್ತು ಮಲಯಾಳಂ ಮಾತನಾಡುವ ಪ್ರದೇಶಗಳ ನಡುವಿನ ಸಾಂಪ್ರದಾಯಿಕ ಗಡಿ ಎಂದು ಪರಿಗಣಿಸಲಾಗಿತ್ತು.

ಚಂದ್ರಗಿರಿ ನದಿಯು ಕರ್ನಾಟಕದ ಪಶ್ಛಿಮಘಟ್ಟದ ಭಾಗಮಂಡಲ ಶ್ರೇಣಿಯ,ತಲಕಾವೇರಿ ಅಭಯಾರಣ್ಯದಲ್ಲಿ ಹುಟ್ಟುತ್ತದೆ .

ಉಪನದಿಗಳು

[ಬದಲಾಯಿಸಿ]

1. ಕುಡುಬೂರು ನದಿ - ಕುಡುಬೂರು ನದಿಯು ಕರ್ನಾಟಕದ ತಲಕಾವೇರಿ ಬೆಟ್ಟಗಳಿಂದ ಹುಟ್ಟುತ್ತದೆ . ಇದು ಪಾಣತ್ತೂರು , ಕೊಟ್ಟೋಡಿ ಮತ್ತು ಉದಯಪುರಂ ಪಟ್ಟಣಗಳ ಮೂಲಕ ಹರಿದು ಚಂದ್ರಗಿರಿ ನದಿಯನ್ನು ಸೇರುತ್ತದೆ.

ಕೇರಳದ ಅಧೂರಿನಲ್ಲಿ ಕಂಡಂತೆ ಪಯಸ್ವಿನಿ ನದಿ