ಜಗದೀಶ್ ಶೆಟ್ಟರ್
Jump to navigation
Jump to search
ಜಗದೀಶ್ ಶೆಟ್ಟರ | |
---|---|
![]() | |
ಕರ್ನಾಟಕದ ೨೭ನೆಯ ಮುಖ್ಯಮಂತ್ರಿ
| |
ಅಧಿಕಾರ ಅವಧಿ ೧೨ ಜುಲೈ ೨೦೧೨ – ೦೮ ಮೇ ೨೦೧೩ | |
ಪೂರ್ವಾಧಿಕಾರಿ | ಡಿ. ವಿ. ಸದಾನಂದ ಗೌಡ |
ಉತ್ತರಾಧಿಕಾರಿ | ಸಿದ್ದರಾಮಯ್ಯ |
ಮತಕ್ಷೇತ್ರ | ಹುಬ್ಬಳ್ಳಿ ಗ್ರಾಮೀಣ |
ವೈಯಕ್ತಿಕ ಮಾಹಿತಿ | |
ಜನನ | ಕೆರೂರು, ಬಾದಾಮಿ ತಾಲ್ಲೂಕು, ಬಾಗಲಕೋಟೆ ಜಿಲ್ಲೆ, ಕರ್ನಾಟಕ | 17 December 1955
ರಾಜಕೀಯ ಪಕ್ಷ | ಭಾರತೀಯ ಜನತಾ ಪಕ್ಷ |
ಸಂಗಾತಿ(ಗಳು) | ಶಿಲ್ಪ |
ಮಕ್ಕಳು | ೨ ಮಕ್ಕಳು |
ವಾಸಸ್ಥಾನ | ನಂ ೩೧, ಮಧುರಾ ಎಸ್ಟೇಟ್, ನಾಗಶೆಟ್ಟಿ ಕೊಪ್ಪ, ಹುಬ್ಬಳ್ಳಿ |
ಉದ್ಯೋಗ | ನ್ಯಾಯವಾದಿ |
ಧರ್ಮ | ಹಿಂದೂ ಧರ್ಮ |
ಜಾಲತಾಣ | http://jagadishshettar.com/ |
ಜಗದೀಶ್ ಶಿವಪ್ಪ ಶೆಟ್ಟರ (ಹುಟ್ಟಿದ್ದು: ೧೭-೧೨-೧೯೫೫) ಭಾರತೀಯ ಜನತಾ ಪಕ್ಷದ ಕರ್ನಾಟಕ ಘಟಕದ ಒಬ್ಬ ರಾಜಕಾರಣಿ ಮತ್ತು ಕರ್ನಾಟಕ ರಾಜ್ಯದ ನಿಕಟ ಪೂರ್ವ ಮುಖ್ಯಮಂತ್ರಿ. ಪ್ರಸ್ತುತ ಇವರು ಕರ್ನಾಟಕ ಸರ್ಕಾರದಲ್ಲಿ ವಿತ್ತ, ಗಣಿ, ಕನ್ನಡ ಮತ್ತು ಸಂಸ್ಕ್ರುತಿ, ಪ್ರವಾಸೋದ್ಯಮ ಖಾತೆ ಮುಂತಾದ ಹಲವು ಖಾತೆಗಳನ್ನು ನಿರ್ವಹಿಸಿದ್ದಾರೆ. ಇವರು ಎಚ್. ಡಿ. ಕುಮಾರಸ್ವಾಮಿರವರ ಸಂಪುಟದಲ್ಲಿ ಸಚಿವರಾಗಿದ್ದಾಗ ಕಂದಾಯ ಇಲಾಖೆಯ ಜವಾಬ್ದಾರಿವಹಿಸಿದ್ದರು. ಇವರು ೨೦೦೮-೨೦೦೯ ರಲ್ಲಿ ಕರ್ನಾಟಕ ವಿಧಾನ ಸಭಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.
ವೈಯಕ್ತಿಕ ಜೀವನ[ಬದಲಾಯಿಸಿ]
ಜನನ : ಕೆರೂರ, ಬಾದಾಮಿ ತಾಲ್ಲೂಕು, ಬಾಗಲಕೋಟೆ ಜಿಲ್ಲೆ. ತಂದೆ : ಶಿವಪ್ಪ. ತಾಯಿ : ಬಸವಣೆಮ್ಮ. ಪತ್ನಿ : ಶಿಲ್ಪಾ. ಪುತ್ರರು: ಪ್ರಶಾಂತ ಹಾಗೂ ಸಂಕಲ್ಪ. ವಿದ್ಯಾರ್ಹತೆ: ಬಿ.ಕಾಂ. ಎಲ್.ಎಲ್.ಬಿ
ಹುದ್ದೆಗಳು[ಬದಲಾಯಿಸಿ]
- ಸದಸ್ಯರು: ಎಬಿವಿಪಿ, ಅರ್.ಎಸ್.ಎಸ್
- ೧೯೯೦ : ಬಿಜೆಪಿ ಹುಬ್ಬಳ್ಳಿ ಗ್ರಾಮಾಂತರ ತಾಲ್ಲೂಕು ಘಟಕದ ಅಧ್ಯಕ್ಷ.
- ೧೯೯೪ : ಬಿಜೆಪಿ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ.
- ೧೯೯೪ : ಮೊದಲ ಬಾರಿಗೆ ವಿಧಾನಸಭೆ ಪ್ರವೇಶ ಹುಬ್ಬಳ್ಳಿ ಗ್ರಾಮಾಂತರ ಪ್ರದೇಶದ ಶಾಸಕರಾಗಿ
- ೧೯೯೯ : ಬಿಜೆಪಿ ರಾಜ್ಯ ಕಾರ್ಯದರ್ಶಿ ಸ್ಥಾನ ನಿರ್ವಹಣೆ
- ೧೯೯೯ : ಎರಡನೇ ಬಾರಿಗೆ ವಿಧಾನಸಭೆ ಪ್ರವೇಶ.
- ೧೯೯೯ : ೧೧ನೇ ವಿಧಾನಸಭೆಯ ವಿರೋದ ಪಕ್ಷದ ನಾಯಕ.
- ೨೦೦೪ : ಮೂರನೇ ಬಾರಿಗೆ ವಿಧಾನಸಭೆ ಪ್ರವೇಶ.
- ೨೦೦೫ : ಬಿಜೆಪಿ ರಾಜ್ಯಾಧ್ಯಕ್ಷ (ಕರ್ನಾಟಕದ ರಾಜ್ಯ).
- ೨೦೦೬ : ಕಂದಾಯ ಇಲಾಖೆಯ ಮಂತ್ರಿ (ಬಿಜೆಪಿ ಮತ್ತು ಜೆಡಿ(ಎಸ್)) ಸಮ್ಮಿಶ್ರ ಸರ್ಕಾರ .
- ೨೦೦೮ : ನಾಲ್ಕನೇ ಬಾರಿಗೆ ವಿಧಾನಸಭೆ ಪ್ರವೇಶ.
- ೨೦೦೮ : ೧೩ ನೇ ವಿಧಾನಸಭೆ ಸಭಾದ್ಯಕ್ಷರು.
- ೨೦೦೯ : ಗಾಮೀಣ ಅಭಿವ್ರುದ್ದಿ (ಪಂಚಾಯತ್ ರಾಜ್) ಇಲಾಖೆಯ ಸಚಿವರು(ಬಿಜೆಪಿ) ಸರ್ಕಾರ.
- ೨೦೧೨ : ಜುಲೈ ೧೨ರಂದು ಗುರುವಾರ ಮಧ್ಯಾಹ್ನ, ೧೨-೦೦ ಕ್ಕೆ ಸರಿಯಾಗಿ ಕರ್ನಾಟಕದ ೨೭ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ.
- ೨೦೧೩ : ಐದನೇ ಬಾರಿಗೆ ವಿಧಾನಸಭೆ ಪ್ರವೇಶ.
- ೨೦೧೩ : ವಿಧಾನಸಭೆಯ ವಿರೋದ ಪಕ್ಷದ ನಾಯಕ.
ಬಾಹ್ಯ ಸಂಪರ್ಕಗಳು[ಬದಲಾಯಿಸಿ]
- ಜಗದೀಶ್ ಶೆಟ್ಟರ್ ರವರ ಸ್ವ ವಿವರ[permanent dead link]
- ಸಂಪುಟ ಸಚಿವರ ಪಟ್ಟಿ Archived 2010-06-19 at the Wayback Machine.
ಪೂರ್ವಾಧಿಕಾರಿ ಡಿ. ವಿ. ಸದಾನಂದ ಗೌಡ |
ಕರ್ನಾಟಕದ ಮುಖ್ಯಮಂತ್ರಿ ೧೨ ಜುಲೈ ೨೦೧೨–೮ ಮೇ ೨೦೧೩ |
ಉತ್ತರಾಧಿಕಾರಿ ಸಿದ್ದರಾಮಯ್ಯ |
ವರ್ಗಗಳು:
- Pages using duplicate arguments in template calls
- All articles with dead external links
- Articles with dead external links from ಆಗಸ್ಟ್ 2021
- Articles with invalid date parameter in template
- Articles with permanently dead external links
- Webarchive template wayback links
- ಕರ್ನಾಟಕದ ಮುಖ್ಯಮಂತ್ರಿಗಳು
- ಕರ್ನಾಟಕದ ವಿಧಾನಸಭಾ ಸದಸ್ಯರು