ಸದಸ್ಯ:Vijaya1940564

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ವಿಜಯಾ.ಏಮ್. ನಾನು 6th ಅಕ್ಟೋಬರ್ 2000 ರಲ್ಲಿ ಜನಿಸಿದ್ದೇನೆ. ನನ್ನ ಜನ್ಮ ಸ್ಥಳ ಬೆಂಗಳೂರು. ನನ್ನ ತಾಯಿಯ ಹೆಸರು ಸೆಲ್ವಿ ಹಾಗು ನನ್ನ ತಂದೆಯ ಹೆಸರು ಮಾದೇಶ್ವರ. ನನ್ನ ಬಾಲ್ಯದ ಶಿಕ್ಷಣ ಪರಿಕ್ರಮ ಶಾಲೆಯಲ್ಲಿ ಮುಗಿಸಿದೆ. ನನ್ನ ಪ್ರಾಥಮಿಕ ಶಿಕ್ಷಣ ಹಾಗು ಹಿರಿಯ ಪ್ರಾಥಮಿಕ ಶಿಕ್ಷಣ ಓಯ್ಸ್ಯಾನಿಕ್ ಶಾಲೆಯಲ್ಲಿ ಮುಗಿಸಿದೆ. ನಾನು ನನ್ನ ಎಸ್ಎಲ್ಸಿ ಪರೀಕ್ಷೆಯಯಲ್ಲಿ 87% ಶೇಕಡದೊಂದಿಗೆ ಉತ್ತೀರ್ಣನಾದೆ. ನನ್ನ ದ್ವಿತೀಯ ಪರೀಕ್ಷೆಯಲ್ಲಿ 76% ಶೇಕಡದೊಂದಿಗೆ ಉತ್ತೀರ್ಣನಾದೆ. ನಾನು ನನ್ನ ಈಗಿನ ಬಿಎಸ್ಸಿ ಪದವಿಯನ್ನು ಕ್ರೈಸ್ಟ್ ದೀಮೆಡ್ ಟು ಬಿ ಯುನಿವರ್ಸಿಟಿಯಲ್ಲಿ ಮಾಡುತ್ತಿದ್ದೇನೆ. ನಮ್ಮ ಮನೆಯಲ್ಲಿ ಒಟ್ಟು ಆರು ಜನ. ನಾನು ನಮ್ಮ ಅಪ್ಪ, ಅಮ್ಮ, ಅಕ್ಕ, ಅಣ್ಣ ಮತ್ತು ತಮ್ಮ. ನಾನು ಮತ್ತು ನನ್ನ ತಮ್ಮ ಇಬ್ಬರೂ ಒಂದೇ ಶಾಲೆಯಲ್ಲಿ ಓದಿದ್ವಿ. ನನಗೆ ನನ್ನ ಶಾಲೆ ಎಂದರೆ ತುಂಬಾ ಇಷ್ಟ ಏಕೆಂದರೆ ಅದು ಒಂದು ಕುಟುಂಬದಂತೆ ಇರುತ್ತದೆ. ನಾವು ನಮ್ಮ ಗುರುಗಳನ್ನು ಅಕ್ಕ ಅಣ್ಣ ಎಂದು ಕರೀತಿದ್ವಿ. ನಮ್ಮ ಶಾಲೆಯಲ್ಲಿ ಮಕ್ಕಳು ಗುರುಗಳು ಎಂಬ ವ್ಯತ್ಯಾಸ ವನ್ನು ಮಾಡಿಲ್ಲ ನಾವೆಲ್ಲ ಒಂದು ಎಂದು ಹೇಳಿದರು. ಗುರುಗಳು ನಮ್ಮನ್ನು ಹೊಡೆದಿಲ್ಲ ಒಳ್ಳೆಯ ಮಾತಿನಿಂದ ಪಾಠಗಳನ್ನು ಹೇಳಿಕೊಟ್ಟರು ಇದರಿಂದ ನನಗೆ ನನ್ನ ಶಾಲೆ ಎಂದರೆ ತುಂಬಾ ಇಷ್ಟ. ನಾನು ನನ್ನ ಶಾಲೆ ಮತ್ತು ಕಾಲೇಜಿನ ಓಟದ ಪಂದ್ಯದಲ್ಲಿ ಸೇರಿಕೊಂಡಿದ್ದೆ ಮತ್ತು ಎಷ್ಟೊಂದು ಪದಕಗಳನ್ನು ಗೆದ್ದಿದ್ದೇನೆ ನಾನು ಚೆನ್ನಾಗಿ ಚಿತ್ರವನ್ನು ಬಿಡಿಸುತ್ತೇನೆ. ನನಗೆ ನೃತ್ಯ ಎಂದರೆ ತುಂಬಾ ಇಷ್ಟ ಶಾಲೆಯಲ್ಲಿ ಮತ್ತೆ ಕಾಲೇಜಿನಲ್ಲಿ ಯಾವ ನೃತ್ಯ ಇದ್ದರೂ ನಾನು ಸೇರಿಕೊಳ್ಳುತ್ತಿದೆ. ನನಗೆ ಕಾರ್ಟೂನ್ಸ್ ಅಂದ್ರೆ ತುಂಬಾ ಇಷ್ಟ ಅದರಲ್ಲಿ ಡೋರೆಮಾನ್ ಮತ್ತು ಸಿಂಚನ್ ನನಗೆ ತುಂಬಾ ಇಷ್ಟವಾದ ಕಾರ್ಟೂನ್. ನನಗೆ ಅರಿಶಿನ ಬಣ್ಣ ತುಂಬಾ ಇಷ್ಟ ಅದರಿಂದ ಯಾವ ಅರಿಶಿನ ಬಣ್ಣದ ಬಟ್ಟೆಗಳು ನನಗೆ ಇಷ್ಟವಾಗುತ್ತದೆ. ನಾನು ಎಂಟನೇ ತರಗತಿಯಲ್ಲಿದ್ದಾಗ ನಾನು ಫೆಸ್ಟಿವಲ್ ಸೈನ್ಸ್ ಎಂಬ ಕಾರ್ಯಕ್ರಮದಲ್ಲಿ ಸೇರಿಕೊಂಡಿದ್ದೆ ಆ ಕಾರ್ಯಕ್ರಮದಲ್ಲಿ ನಾನು ಸರ್ ಎಪಿಜೆ ಅಬ್ದುಲ್ ಕಲಾಂ ಅವರನ್ನು ನೋಡಿದೆ ಅವರನ್ನು ನೋಡಿ ನನಗೆ ಬಹಳ ಖುಷಿಯಾಯಿತು. ನಾನು 10ನೇ ತರಗತಿಯಲ್ಲಿ ಮತ್ತು 11ನೆ ತರಗತಿಯಲ್ಲಿ ಸರ್ ಸಿ ಎನ್ ಆರ್ ರಾವ್ ಅವರನ್ನು ನೋಡಿದೆ. ನನ್ನ ಹತ್ತನೆಯ ತರಗತಿ ಮುಗಿಸಿದ ನಂತರ ಎರಡು ತಿಂಗಳು ಜೆ ಎನ್ ಸಿ ಎಸ್ ಆರ್ ಎಂಬ ರಿಸರ್ಚ್ ಇನ್ಸ್ಟಿಟ್ಯೂಷನ್ ಗೆ ಆಯ್ಕೆಗೊಂಡಿದೆ. ಅಲ್ಲಿ ನಾನು ಎಷ್ಟೊಂದು ಸೈಂಟಿಸ್ಟ್ ಗಳನ್ನು ನೋಡಿದೆ ಮತ್ತು ಬಿಎಸ್ಸಿ, ಎಂ ಎಸ್ ಸಿ, ಪಿ ಎಚ್ ಡಿ ವಿದ್ಯಾರ್ಥಿಗಳು ರಿಸರ್ಚ್ ಮಾಡುತ್ತಿದ್ದರು ಅವರು ನಮಗೆ ಎರಡು ತಿಂಗಳು ಪಾಠ ಮಾಡುತ್ತಿದ್ದರು. ಅವರು ನಮಗೆ ಸ್ಫೂರ್ತಿ ಆಗಿದ್ದರು ಹನ್ನೊಂದನೆಯ ತರಗತಿಯಲ್ಲಿದ್ದಾಗ ಇನ್ವೆಂಷನ್ ಅಲ್ ಶಾಲೆಯಲ್ಲಿ ಸಿವಿಲ್ ಸೊಸೈಟಿ ಸದಸ್ಯ ಆಗಿದೆ. ಅದರಲ್ಲಿ ನನಗೆ ಬೆಸ್ಟ್ ಪ್ರಾಬ್ಲಮ್ ಸಲ್ವರ್ ಎಂಬ ಪ್ರಶಸ್ತಿ ದೊರಕಿತ್ತು. ನಾನು ನಮ್ಮ ಏರಿಯಾ ಕೌನ್ಸಿಲರ್ ಅತ್ರ ಮಹಿಳೆಯರ ರಕ್ಷಣೆಗಾಗಿ ಮಾತನಾಡಿದೆ ಮತ್ತು ನೀರಿನ ಅವಶ್ಯಕತೆ ಬಗ್ಗೆ ಮಾತನಾಡಿದೆ. ಇನ್ನು ಮುಂದೆ ಇದೇ ರೀತಿ ಎಲ್ಲ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತೇನೆ. ನನ್ನ ಆಸೆ ಏನಂದರೆ ಎಲ್ಲರಿಗೂ ಒಂದು ಒಳ್ಳೆಯ ಸ್ಪೂರ್ತಿ ಆಗಿರಬೇಕೆಂದು ಮತ್ತು ಎಲ್ಲರಿಗೂ ಒಳ್ಳೆಯ ದಾರಿಯನ್ನು ತೋರಿಸ ಬೇಕೆಂಬುದು.



ಬೆಂಗಳೂರು[ಬದಲಾಯಿಸಿ]


ಬೆಂಗಳೂರು ಕರ್ನಾಟಕ ರಾಜ್ಯದ ದೊಡ್ಡ ನಗರ ಮತ್ತು ರಾಜಧಾನಿ ಕೇಂದ್ರ, ಜಿಲ್ಲಾಕೇಂದ್ರ ಮತ್ತು ತಾಲ್ಲೂಕು ಕೇಂದ್ರ ಹಾಗೂ ಕಸಬಾ ಹೋಬಳಿಯ ಕೇಂದ್ರ ಬೆಂಗಳೂರು ನಗರ.

ಬೆಂಗಳೂರು ನಗರವು ಕ್ರಿ.ಶ.1537ರಲ್ಲಿ ಯಲಹಂಕ ನಾಡಪ್ರಭು ಕೆಂಪೇಗೌಡರಿಂದ ನಿರ್ಮಾಣವಾಯಿತು. ಇದು ದಕ್ಷಿಣ ಪ್ರಸ್ಥಭೂಮಿಯ ಮೇಲಿದ್ದು, ಕರ್ನಾಟಕದ ಆಗ್ನೇಯ ದಿಕ್ಕಿನಲ್ಲಿದೆ. ಭಾರತದ ೫ನೇ ದೊಡ್ಡ ಮಹಾನಗರವಾಗಿರುವ ಬೆಂಗಳೂರು ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ೩ನೇ ಸ್ಥಾನದಲ್ಲಿದೆ. ಜಗತ್ತಿನ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಮಹತ್ತರವಾದ ಕಾಣಿಕೆ ನೀಡುತ್ತಾ ಬಂದಿರುವ ಕಾರಣ ಬೆಂಗಳೂರು ವಿಶ್ವಾದ್ಯಂತ ಭಾರತದ 'ಸಿಲಿಕಾನ್ ವ್ಯಾಲಿ' ಎಂದೇ ಪ್ರಸಿದ್ಧ. ಸಮುದ್ರ ಮಟ್ಟದಿಂದ ಸುಮಾರು ೩೦೦೦ ಅಡಿ (೯೧೪.೪ ಮೀ)ಗಳಿಗಿಂತ ಎತ್ತರದಲ್ಲಿರುವ ಬೆಂಗಳೂರು ನಗರವು ವರ್ಷವಿಡೀ ಆಹ್ಲಾದಕರ ವಾತಾವರಣ ಹೊಂದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕೆರೆಗಳನ್ನು ಹೊಂದಿದೆ. 'ಕಬ್ಬನ್ ಪಾರ್ಕ್', 'ಲಾಲ್ ಬಾಗ್'ಗಳಂತಹ ದೊಡ್ಡ ಉದ್ಯಾನವನಗಳನ್ನು ಹೊಂದಿರುವ ಈ ನಗರವು 'ಉದ್ಯಾನ ನಗರಿ' ಎಂದೂ ಪ್ರಸಿದ್ಧ. ವಿಶ್ವದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯಮಿಗಳ ಅಚ್ಚುಮೆಚ್ಚಿನ ೧೦ ನಗರಗಳಲ್ಲಿ ಬೆಂಗಳೂರು ಕೂಡ ಒಂದು.

ಪರಿವಿಡಿ[ಬದಲಾಯಿಸಿ]

ಬೆಂಗಳೂರು ಜಿಲ್ಲೆಯ ತಾಲ್ಲೂಕುಗಳು[ಬದಲಾಯಿಸಿ][ಬದಲಾಯಿಸಿ]

ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯು ವಿಸ್ತೀರ್ಣದಲ್ಲಿ ಚಿಕ್ಕದಾಗಿರುವ ಕಾರಣ ಒಂದು ಜಿಲ್ಲೆಯಾಗಿ ಮಾಡಲಾಗಿದೆ ಮತ್ತು ಹೆಚ್ಚು ಜನಸಂಖ್ಯೆ ಹೊಂದಿರುವ ಕಾರಣ ಏರಡು ಜಿಲ್ಲಾ ಕೇಂದ್ರಗಳನ್ನೂ ಒಳಗೊಂಡಿದೆ.


ಜಿಲ್ಲೆ ತಾಲೂಕು ಹೋಬಳಿ ನಗರ ಸ್ಥಿತಿ
ಬೆಂಗಳೂರು
1.ಬೆಂಗಳೂರು
01.ಬೆಂಗಳೂರು ಕಸಬಾ ಮಹಾನಗರ ಪಾಲಿಕೆ
02.ಯಶವಂತಪುರ ಮಹಾನಗರ ಪಾಲಿಕೆ
03.ದಾಸನಪುರ ನಗರ ಸಭೆ
2.ಯಲಹಂಕ
01.ಯಲಹಂಕ ಕಸಬಾ ಮಹಾನಗರ ಪಾಲಿಕೆ
02.ಹೆಸರುಘಟ್ಟ ಪಟ್ಟಣ ಪಂಚಾಯತಿ
03.ಚಿಕ್ಕಜಾಲ ಗ್ರಾಮ ಪಂಚಾಯತಿ
3.ಕೆಂಗೇರಿ
01.ಕೆಂಗೇರಿ ಕಸಬಾ ಮಹಾನಗರ ಪಾಲಿಕೆ
02.ಉತ್ತರಹಳ್ಳಿ ಮಹಾನಗರ ಪಾಲಿಕೆ
03.ಬೇಗೂರು ಮಹಾನಗರ ಪಾಲಿಕೆ
04.ತಾವರೆಕೆರೆ ಪಟ್ಟಣ ಪಂಚಾಯತಿ
4. ಕೃಷ್ಣರಾಜ ಪುರ
01.ಕೃಷ್ಣರಾಜ ಪುರ ಕಸಬಾ ಮಹಾನಗರ ಪಾಲಿಕೆ
02.ವರ್ತೂರು ಮಹಾನಗರ ಪಾಲಿಕೆ
03.ಬಿದರಹಳ್ಳಿ ಪಟ್ಟಣ ಪಂಚಾಯತಿ
5.ಆನೇಕಲ್
01.ಆನೇಕಲ್ ಕಸಬಾ ನಗರ ಸಭೆ
02.ಅತ್ತಿಬೆಲೆ ನಗರ ಸಭೆ
03.ಸರ್ಜಾಪುರ ನಗರ ಸಭೆ
04.ಜಿಗಣಿ ನಗರ ಸಭೆ
6.ದೊಡ್ಡಬಳ್ಳಾಪುರ
01.ದೊಡ್ಡಬಳ್ಳಾಪುರ ಕಸಬಾ ನಗರ ಸಭೆ
02.ಮಧುರೆ ಗ್ರಾಮ ಪಂಚಾಯತಿ
03.ದೊಡ್ಡ ಬೆಳವಂಗಲ ಗ್ರಾಮ ಪಂಚಾಯತಿ
04.ಸಾಸಲು ಗ್ರಾಮ ಪಂಚಾಯತಿ
05.ತುಬಗೆರೆ ಗ್ರಾಮ ಪಂಚಾಯತಿ
7.ದೇವನಹಳ್ಳಿ
01.ದೇವನಹಳ್ಳಿ ಕಸಬಾ ಪುರ ಸಭೆ
02.ಕುಂದಾಣ ಗ್ರಾಮ ಪಂಚಾಯತಿ
03.ವಿಜಯಪುರ ಪುರ ಸಭೆ
04.ಚನ್ನರಾಯ ಪಟ್ಟಣ ಗ್ರಾಮ ಪಂಚಾಯತಿ
8.ಹೊಸಕೋಟೆ
01.ಹೊಸಕೋಟೆ ಕಸಬಾ ನಗರ ಸಭೆ
02.ನಂದಗುಡಿ ಗ್ರಾಮ ಪಂಚಾಯತಿ
03.ಸೂಲಿಬೆಲೆ ಗ್ರಾಮ ಪಂಚಾಯತಿ
04.ಅನುಗೊಂಡನಹಳ್ಳಿ ಗ್ರಾಮ ಪಂಚಾಯತಿ
05.ಜಡಿಗೆನಹಳ್ಳಿ ಗ್ರಾಮ ಪಂಚಾಯತಿ
9.ನೆಲಮಂಗಲ
01.ನೆಲಮಂಗಲ ಕಸಬಾ ಪುರ ಸಭೆ
02.ತ್ಯಮಗೊಂಡ್ಲು ಗ್ರಾಮ ಪಂಚಾಯತಿ
03.ಸೋಂಪುರ ನಗರ ಸಭೆ
ಒಟ್ಟು 09 - ತಾಲ್ಲೂಕು 34 - ಹೋಬಳಿ

ಭೂಗೋಳ[ಬದಲಾಯಿಸಿ][ಬದಲಾಯಿಸಿ]

ಬೆಂಗಳೂರು ಸಮುದ್ರ ಮಟ್ಟ ದಿಂದ ೯೦೦ ಮೀ ಎತ್ತರದಲ್ಲಿದೆ. ಭೌಗೋಳಿಕವಾಗಿ ೧೨° ೩೯' ಉ ಹಾಗೂ ೧೩° ಉ ಅಕ್ಷಾಂಶದಲ್ಲಿದ್ದರೂ ಕೂಡ ಬೆಂಗಳೂರಿನಲ್ಲಿ ಸದಾಕಾಲ ತಂಪು ವಾತಾವರಣವಿರುವುದು, ಸುಮಾರು ೨೪°C ರಿಂದ ೩೫°C ರವರೆಗೆ ಉಷ್ಣಾಂಶವಿರುವುದು. ಸದಾಶಿವನಗರದ ರಮಣಶ್ರೀ ಪಾರ್ಕ್ ಬೆಂಗಳೂರಿನ ಅತೀ ಎತ್ತರದ ಪ್ರದೇಶವಾಗಿದೆ. ಈ ಮೊದಲು ಮಲ್ಲೇಶ್ವರದ ವಯ್ಯಾಲಿ ಕಾವಲ್ ಎತ್ತರದ ಪ್ರದೇಶವಾಗಿತ್ತು. ಬೆಂಗಳೂರಿನ ಹೊಸಕೆರೆಹಳ್ಳಿ ಅತಿ ತಗ್ಗಿನ ಪ್ರದೇಶವಾಗಿದೆ.

ಡೆಕ್ಕನ್ ಪ್ರಸ್ತಭೂಮಿಯ ಒಂದು ಭಾಗವಾದ ಮೈಸೂರು ಪ್ರಸ್ತಭೂಮಿಯ ಹೃದಯ ಭಾಗದಲ್ಲಿ ನೆಲೆಸಿರುವ ಈ ನಗರವು, ಕರ್ನಾಟಕಆಗ್ನೇಯ ಭಾಗದಲ್ಲಿದೆ. 741 ಚ.ಕಿ.ಮೀ. ವಿಸ್ತೀರ್ಣವುಳ್ಳ ಈ ಪ್ರದೇಶವು 5.8 ಮಿಲಿಯನ್ (ಅತಿ ಹೆಚ್ಚು ಜನಸಂಖ್ಯೆಯುಳ್ಳ ಮೂರನೆ ನಗರ) ಜನಸಂಖ್ಯೆಯನ್ನು ಹೊಂದಿದೆ. ಮುಖ್ಯವಾಗಿ ಇದು ಸಮುದ್ರ ಮಟ್ಟದಿಂದ 3113 ಅಡಿ(949 ಮಿ.) ಎತ್ತರದಲ್ಲಿ ಸ್ಥಿತವಾಗಿರುವುದರಿಂದ, ಸುಂದರವಾದ ವಾತಾವರಣವನ್ನು ಹೊಂದಿದೆ.

ಉಷ್ಣವಲಯದ ವಾತಾವರಣವಿರುವುದರಿಂದ, ಈ ಪಟ್ಟಣವು ಪದೇ ಪದೇ ಮಳೆಯನ್ನು ಅನುಭವಿಸುತ್ತ ಬೇಸಿಗೆಗಾಲದಲ್ಲಿ ಬೆಚ್ಚಗಿದ್ದು ಚಳಿಗಾಲದಲ್ಲಿ ತಂಪಾಗಿರುತ್ತದೆ. ಇಂತಹ ಸುಂದರ ವಾತಾವರಣವು ಒಂದೊಮ್ಮೆ ನಿವೃತ್ತಿ ಹೊಂದಿದವರನ್ನು ಆಕರ್ಷಿಸಿದ್ದು, ನಿವೃತ್ತಿ ಹೊಂದಿದವರ ಸ್ವರ್ಗ ಎಂದೂ ಕೂಡ ಇದಕ್ಕೆ ಕರೆಯಲಾಗುತ್ತಿತ್ತು. ಬೇಸಿಗೆಯಲ್ಲಿ ತಾಪಮಾನವು 20 ರಿಂದ 36 ಡಿಗ್ರಿಯಿದ್ದು, ಚಳಿಗಾಲದಲ್ಲಿ 17 ರಿಂದ 27 ಡಿಗ್ರಿಯಾಗಿರುತ್ತದೆ.

ಇತಿಹಾಸ[ಬದಲಾಯಿಸಿ][ಬದಲಾಯಿಸಿ]

ಕ್ರಿಸ್ತ ಶಕ ೧೫೩೭ರ ತನಕ ಬೆಂಗಳೂರು ದಕ್ಷಿಣ ಭಾರತದ ಸಂಸ್ಥಾನಗಳಾದ ಗಂಗ, ಚೋಳ ಮತ್ತು ಹೊಯ್ಸಳರ ಆಳ್ವಿಕೆಗೆ ಒಳಪಟ್ಟಿದೆ. ನಂತರ ವಿಜಯನಗರ ಸಾಮ್ರಾಜ್ಯದ ನಾಡ ಪ್ರಭು ಕೆಂಪೇಗೌಡರು ಬೆಂಗಳೂರಿನಲ್ಲಿ ಮಣ್ಣಿನ ಕೋಟೆ ಕಟ್ಟಿ ಆಧುನಿಕ ಬೆಂಗಳೂರಿನ ಉದಯಕ್ಕೆ ಕಾರಣಕರ್ತರಾದರು. ಮರಾಠರು ಮತ್ತು ಮುಘಲರ ಅಲ್ಪಾವಧಿ ಆಡಳಿತಕ್ಕೆ ಒಳಪಟ್ಟಿದ್ದ ಬೆಂಗಳೂರು, ಮೈಸೂರು ರಾಜರ ಆಧಿಪತ್ಯದಲ್ಲೇ ಉಳಿದಿತ್ತು. ನಂತರ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನರ ಆಡಳಿತಕ್ಕೆ ಒಳಪಟ್ಟ ಬೆಂಗಳೂರು, ನಾಲ್ಕನೇ ಆಂಗ್ಲೋ ಮೈಸೂರು ಯುದ್ಧ(೧೭೯೯)ದಲ್ಲಿ ಬ್ರಿಟೀಷರ ಪಾಲಾಯಿತು. ತದನಂತರ ಬ್ರಿಟೀಷರು ಮೈಸೂರು ಸಂಸ್ಥಾನವನ್ನು ತಮ್ಮ ಆಡಳಿತದ ಒಂದು ರಾಜ್ಯವನ್ನಾಗಿಸಿ, ಬೆಂಗಳೂರನ್ನು ಅದರ ರಾಜಧಾನಿಯಾಗಿ ಘೋಷಿಸಿ, ಮೈಸೂರು ಒಡೆಯರ ಆಡಳಿತಕ್ಕೊಪ್ಪಿಸಿದರು.

ಬೆಂಗಳೂರು ೧೫೩೭|೧೫೩೭ರಲ್ಲಿ ಕೆಂಪೇಗೌಡರ (೧೫೧೦ - ೧೫೭೦) ರಾಜಧಾನಿಯಾಗಿತ್ತು.ಈ ನಗರವನ್ನು ಕೆಂಪೇಗೌಡರು ನಿರ್ಮಿಸಿದರು. ಕೆಂಪೇಗೌಡ (೧೫೧೦-೧೫೭೦) ಈ ನಗರವನ್ನು "ಗಂಡು ಭೂಮಿ" ಮತ್ತು "ನಾಯಕರ ರಾಜ್ಯ" ಎಂದು ಹೇಳುತಿದ್ದರು.

ಹದಿನೆಂಟನೇ/ಹತ್ತೊಂಬತ್ತನೇ ಶತಮಾನದಲ್ಲಿ ಬೆಂಗಳೂರು ಒಂದು ನಗರವಾಗಿ ಬೆಳೆಯಿತು. ಆಗ ಪ್ರಮುಖವಾಗಿ ನಗರದಲ್ಲಿ ಎರಡು ಮುಖ್ಯ ರಸ್ತೆಗಳಿದ್ದವು. ಅವು "ಚಿಕ್ಕಪೇಟೆ" ಮತ್ತು "ದೊಡ್ಡಪೇಟೆ" ರಸ್ತೆಗಳು. ಸ್ವಾತಂತ್ರ್ಯಾನಂತರ ಬೆಂಗಳೂರು ಬಹು ದೊಡ್ಡ ಕೈಗಾರಿಕಾ ಉತ್ಪಾದನಾ ಕ್ಷೇತ್ರಗಳಿಗೆ ಮನೆಯಾಯಿತು. ಶಾಂತಿ ಸಮೃದ್ಧಿಯೂ, ಪರಿಸರ ಸಮೃದ್ಧಿಯೂ ಜನರನ್ನು ಈ ಊರಿನೆಡೆಗೆ ಆಕರ್ಷಿಸಿತು. ಹೆಚ್ ಎ ಎಲ್, ಬಿ ಇ ಎಲ್, ಐ ಟಿ ಐ, ಇಸ್ರೋ ನಂತಹ ಬಹು ದೊಡ್ಡ ಉತ್ಪಾದನಾ ಘಟಕಗಳಿಗೆ ಮನೆಯಾಯಿತು.

ಕೆಂಪೇಗೌಡರ ಮಗನಾದ ಕೆಂಪೇಗೌಡ-೨ ಅನೇಕ ದೇವಸ್ಥಾನ ಮತ್ತು ಗೋಪುರಗಳನ್ನು ನಿರ್ಮಿಸಿದನು. ಅವುಗಳಲ್ಲಿ ಪ್ರಮುಖವಾದ ನಾಲ್ಕು ಗೋಪುರಗಳನ್ನು ಈಗಿನ ಈ ಸ್ಥಳಗಳಲ್ಲಿ ಕಾಣಬಹುದಾಗಿದೆ.

  • ಲಾಲಭಾಗ್
  • ಕೆಂಪಾಂಬುಧಿ ಕೆರೆ
  • ಹಲಸೂರು ಕೆರೆ
  • ಮೇಖ್ರಿ ವೃತ್ತಕೃಷ್ಣರಾಜೇಂದ್ರ ಮಾರುಕಟ್ಟೆ

ಸಂಸ್ಕೃತಿ ಮತ್ತು ವಿದ್ಯಾಭ್ಯಾಸ[ಬದಲಾಯಿಸಿ][ಬದಲಾಯಿಸಿ]

ವಿಶ್ವವಿಖ್ಯಾತ ಗಾಜಿನ ಮನೆ, ಲಾಲ್‌ಬಾಗ್ ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕೇಂದ್ರ ಮಹಾತ್ಮಾ ಗಾಂಧಿ ರಸ್ತೆ, ಬೆಂಗಳೂರಿನ ಜನನಿಬಿಡ ರಸ್ತೆ ಕಲೆ ಮತ್ತು ಸಂಸ್ಕೃತಿಯ ಬೀಡಾಗಿರುವ ಬೆಂಗಳೂರು ವಿದ್ಯಾಭ್ಯಾಸಕ್ಕೆ ಬಹಳ ಹೆಸರುವಾಸಿ. ಇಲ್ಲಿಯ ಸಂಸ್ಕೃತಿಯೂ ಹಲವು ಪರದೇಶೀಯರನ್ನು ಶತಮಾನಗಳಿಂದ ಆಕರ್ಷಿಸಿದೆ. ಬೆಂಗಳೂರು ನಗರವು ಬಹುಮುಖ ಸಂಸ್ಕೃತಿಯನ್ನು ಹೊಂದಿದ್ದರೂ ಕೂಡ, ಬಹುಪಾಲು ಜನರು ಹಿಂದುಗಳಾಗಿದ್ದಾರೆ. ಇಲ್ಲಿ ವೈವಿಧ್ಯಮಯ ಸಂಸ್ಕೃತಿ ಇದೆ . ಕನ್ನಡವು ಇಲ್ಲಿಯ ಅಧಿಕೃತ ಭಾಷೆ‌.

ಇಲ್ಲಿ ಬಳಕೆಯಲ್ಲಿರುವ ಇತರ ಭಾಷೆಗಳೆಂದರೆ ತಮಿಳು, ತೆಲುಗು ಮತ್ತು ಮಲಯಾಳಮ್. ಮುಂಬಯಿ ನಂತರ ಹಚ್ಚಿನ ಸಾಕ್ಷರತಾ ಪ್ರಮಾಣ(83%) ಹೊಂದಿದ ಪ್ರದೇಶ ಇದಾಗಿದೆ. ನಗರದ ಶ್ರೀಮಂತ ಸಂಸ್ಕೃತಿಯು, ರಂಗ ಶಂಕರ, ಚೌಡಯ್ಯ ಮೆಮೋರಿಯಲ್ ಹಾಲ್ ಮತ್ತು ರವೀಂದ್ರ ಕಲಾಕ್ಷೇತ್ರಗಳಂತಹ ಸಂಸ್ಥೆಗಳನ್ನು ಪ್ರೋತ್ಸಾಹಿಸುತ್ತ ಸಾಂಸ್ಕೃತಿಕ ಮತ್ತು ಆಧುನಿಕ ರಂಗಭೂಮಿಯಾಗಿ ಬೆಳೆಯಲು ಭದ್ರ ಬುನಾದಿಯಾಗಿದೆ. "ಬೆಂಗಳೂರು ಹಬ್ಬ"ವು ವರ್ಷಕ್ಕೊಮ್ಮೆ ನಡೆಯುವ ಉತ್ಸವವಾಗಿದ್ದು, ಜನರು ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಇದೊಂದು ಉತ್ತಮವಾದ ಅವಕಾಶ ಒದಗಿಸುತ್ತದೆ. ದೀಪಾವಳಿ ಮತ್ತು ಗಣೇಶ ಚತುರ್ಥಿಯು ಇನ್ನೆರಡು ಪ್ರಮುಖ ಹಬ್ಬಗಳಾಗಿದ್ದು ಇಲ್ಲಿಯ ಶ್ರೀಮಂತ ಧಾರ್ಮಿಕ ಸಂಪ್ರದಾಯಕ್ಕೆ ಸಾಕ್ಷಿಯಾಗಿವೆ.

ಬೆಂಗಳೂರಿನ ವೆಂಕಟ್ಟಪ್ಪ ಚಿತ್ರ ಕಲಾ ಪರಿಷತ್ತು, ಭಾರತೀಯ ವಿದ್ಯಾ ಭವನ , ಭಾರತೀಯ ವಿಜ್ಞಾನ ಮಂದಿರ, ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ಮತ್ತಿತರ ವಿವಿಧ ರೀತಿಯ ಶಿಕ್ಷಣದಲ್ಲಿ ಮಂಚೂಣಿಯಲ್ಲಿವೆ. ಬೆಂಗಳೂರಿನಲ್ಲಿ ಹಲವು ದೇಶೀಯ ಮತ್ತು ಪಾಶ್ಚ್ಯಾತ್ಯ ಸಂಸ್ಕೃತಿಗಳು ಮಿಲನಗೊಂಡಿವೆ. ಆದುದರಿಂದ ಇದು ಈಗ ಕಾಸ್ಮೊಪಾಲಿಟನ್ ಸಿಟಿ ಎಂತಲೂ ಕರೆಯಲ್ಪಡುತ್ತಿದೆ. ಇಲ್ಲಿನ ದೂರದರ್ಶನ ಹಾಗೂ ಆಕಾಶವಾಣಿ ಕೇಂದ್ರಗಳು ಹೆಸರುವಾಸಿ. ದೇಶದ ಮೊದಲ ಖಾಸಗಿ ಎಫ್. ಎಮ್. ರೇಡಿಯೋ, ರೇಡಿಯೋ ಸಿಟಿ ಪ್ರಾರಂಭವಾಗಿದ್ದು ಇಲ್ಲೇ. ಹಾಗೂ ಕರ್ನಾಟಕದ ಮೊಟ್ಟಮೊದಲ ಸಮುದಾಯ ರೇಡಿಯೋಗೆ ಪರವಾನಗಿ ಸಿಕ್ಕಿ ತರಂಗಗಳಲ್ಲಿ ಪ್ರಸಾರವಾದದ್ದು ಇಲ್ಲಿಯೇ. ರೇಡಿಯೋ ಹೆಸರು ರೇಡಿಯೋ ಆಕ್ಟೀವ್ ತರಂಗಾಂತರ ೧೦೭.೮

ಪ್ರತಿಷ್ಠೆಯ ವಿದ್ಯಾ ಸಂಸ್ಥೆಗಳಾದ ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ಭಾರತೀಯ ವ್ಯವಸ್ಥಾಪ್ರಬಂಧ ಸಂಸ್ಥೆ(ಐ.ಐ.ಎಮ್) ಗಳನ್ನು ಇಲ್ಲಿ ಕಾಣಬಹುದು. ಇಷ್ಟೇ ಅಲ್ಲದೆ, ಬಹು ಸಂಖ್ಯೆಯಲ್ಲಿ ಇಂಜಿನೀಯರಿಂಗ್, ಮೆಡಿಕಲ್ ಮತ್ತು ಮ್ಯಾನೇಜಮೆಂಟ್ ಕಾಲೇಜುಗಳು ಕೂಡ ಇಲ್ಲಿವೆ.

ಕೈಗಾರಿಕೆ[ಬದಲಾಯಿಸಿ][ಬದಲಾಯಿಸಿ]

ಹಿಂದುಸ್ತಾನ ಏರೊನಾಟಿಕ್ಸ್ ಲಿಮಿಟೆಡ್ (ಎಚ್.ಎ.ಎಲ್), ಭಾರತ ಎಲೆಕ್ಟ್ರೊನಿಕ್ಸ್ ಲಿಮಿಟೆಡ್ (ಬಿ.ಇ.ಎಲ್), ಭಾರತ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿ.ಇ.ಎಮ್.ಎಲ್), ಹಿಂದುಸ್ತಾನ ಮಷೀನ್ ಟೂಲ್ಸ್ (ಎಚ್.ಎಮ್.ಟಿ) ಮತ್ತು ಇಂಡಿಯನ್ ಸ್ಪೆಸ್ ರಿಸರ್ಚ್ ಒರ್ಗನೈಸೆಷನ್ (ಇಸ್ರೊ) ಇವುಗಳು ತಮ್ಮ ಪ್ರಧಾನ ಕಛೇರಿಗಳನ್ನು ಇಲ್ಲಿ ತೆರೆದಿದುದರಿಂದ, ನಗರವು ಒಂದು ಉತ್ಪಾದನಾ ಕೇಂದ್ರವಾಗಿ ಬೆಳೆಯಿತು.

ಕಂಪನಿಗಳಾದ ಇನ್ಫೊಸಿಸ್, ವಿಪ್ರೊ ಮತ್ತು ಟಿಸಿಎಸ್ ಗಳು ಇಲ್ಲಿ ತಮ್ಮ ಪ್ರಧಾನ ಕಛೇರಿಗಳನ್ನು ತೆರೆದಿದುದರಿಂದ, ನಗರದ ಆರ್ಥಿಕ ಪ್ರಗತಿಯು ಮಹತ್ತರವಾಗಿ ಬೆಳೆಯಿತು. ಬೆಂಗಳೂರಿನಲ್ಲಿರುವ ಇತರ ಪ್ರಮುಖ ಕಂಪನಿಗಳೆಂದರೆ ಇಂಟೆಲ್, ಟೆಕ್ಸಸ್ ಇನ್ಸ್ತ್ರುಮೆನ್ತ್ಸ್, ಕ್ವಾಲ್ಕಾಮ್, ಆರ್ಮ್, ಬ್ರಾಡ್ಕಾಮ್, ಇ.ಎಮ್.ಸಿ. ಸ್ಕುವೆರ್, ನೆಟ್ ಆಪ್, ಸ್ಯಾನ್ ಡಿಸ್ಕ್, ಎಲ್.ಜಿ, ಸ್ಯಾಮ್ಸಂಗ್ ಮತ್ತು ಐ.ಬಿ.ಎಮ್. ಇಲ್ಲಿ ಸೃಷ್ಟಿಯಾದಂತಹ ಉದ್ಯೋಗ ಮಾರುಕಟ್ಟೆಯು ಜಗತ್ತಿನಾದ್ಯಂತ ಎಲ್ಲರನ್ನೂ ಆಕರ್ಷಿಸುತ್ತದೆ, ಇದೊಂದು ಬಹುಸಂಸ್ಕೃತಿ ಹಾಗೂ ಬಹುಜನಾಂಗೀಯ ಸಮಾಜವನ್ನಾಗಿ ಪರಿವರ್ತಿಸಲು ಸಹಾಯವಾಯಿತು.

ಮಾಧ್ಯಮ[ಬದಲಾಯಿಸಿ][ಬದಲಾಯಿಸಿ]

ಬೆಂಗಳೂರಿನಲ್ಲಿ ಮೊದಲ ಮುದ್ರಣಾಲಯವನ್ನು ೧೮೪೦ರಲ್ಲಿ ಸ್ಥಾಪಿಸಲಾಯಿತು. ೧೮೫೯ ರಲ್ಲಿ "ಪಂಜಾಬ್ ಕೇಸರಿ" ಎಂಬ ಮೊದಲ ಇಂಗ್ಲಿಷ್ ವಾರ ಪತ್ರಿಕೆ ಪ್ರಕಟವಾಗಿತ್ತು ಮತ್ತು ೧೮೬೦ ರಲ್ಲಿ "ಮೈಸೂರು ವ್ರಿತ್ತಂತ ಬೋಧಿನಿ" ಎಂಬ ಕನ್ನಡ ಪತ್ರಿಕೆ ಪ್ರಕಟವಾಗಿತ್ತು. ಈಗ "ವಿಜಯ ಕರ್ನಾಟಕ" ಮತ್ತು "ದಿ ಟೈಂಸ್ ಆಫ್ ಇಂಡಿಯಾ" ತುಂಬಾ ಜನಪ್ರಿಯವಾಗಿದೆ ಹಾಗೂ "ಪ್ರಜಾವಾಣಿ" ಮತ್ತು "ಡೆಕ್ಕನ್ ಹೆರಾಲ್ಡ್" ಅತಿ ದೊಡ್ಡ ಮುದ್ರಣಾಲಯಗಳನ್ನು ಹೊಂದಿದೆ.

ಬೆಂಗಳೂರು ಟಿವಿ ಮಾಧ್ಯಮ ಮೊದಲ ಬಾರಿಗೆ ನವೆಂಬರ್ ೧ ೧೯೮೧ ರಂದು "ದೂರದರ್ಶನ" ಮುಖಾಂತರ ಪ್ರಾರಂಭವಾಯಿತು. ೧೯ ನವೆಂಬರ್ ೧೯೮೩ ರಂದು ದೂರದರ್ಶನ ನಿರ್ಮಾಣ ಕೇಂದ್ರವನ್ನು ಸ್ಥಾಪಿಸಿ ವಾರ್ತಾ ಪ್ರಸಾರವನ್ನು ಪ್ರಾರಂಭಿಸಿತು. ನಂತರ ೧೯೯೧ ರಂದು ಕನ್ನಡ ದೂರದರ್ಶನ "ಡಿಡಿ ಚಂದನ" ಪ್ರಾರಂಭವಾಯಿತು. ಈಗ ಅನೇಕ ಟಿವಿ ಮಾಧ್ಯಮಗಳು ಜನಪ್ರಿಯವಾಗಿದೆ. ಇದಕ್ಕೆ ಉದಾಹರಣೆ ಟಿವಿ ೯, ಉದಯ, ಈ ಟಿವಿ, ಸುವರ್ಣ, ಜನಶ್ರೀ, ಸಮಯ, ಮುಂತಾದವು.

ಸಂಪರ್ಕ[ಬದಲಾಯಿಸಿ][ಬದಲಾಯಿಸಿ]

ನಗರದ ಒಳ ಹಾಗು ಹೊರಭಾಗಗಳು ಒಂದಕ್ಕೊಂದು ಒಳ್ಳೆಯ ಸಂಪರ್ಕ ಹೊಂದಿರುವ ಕಾರಣ ನಗರದ ಒಳಗೆ ಮತ್ತು ಹೊರಗೆ ಓಡಾಡುವುದು ತುಂಬಾ ಸರಳವಾಗಿದೆ. ನಗರದ ಒಳಗಡೆ ಸಂಚರಿಸಲು, ಜನರು ಆಟೊ ರಿಕ್ಷಾಗಳು, ಕ್ಯಾಬಗಳು, ಮೆಟ್ರೊ ಟ್ರೇನಗಳ ಸೌಲಭ್ಯವನ್ನು ಪಡೆಯಬಹುದು. ವಿಮಾನ ನಿಲ್ದಾಣಕ್ಕೆ ಹೋಗಲು ವಾಯು ವಜ್ರ ಬಸ್ಸುಗಳ ಸೌಲಭ್ಯವಿದೆ. ಬೆಂಗಳೂರು ಆಕಾಶ ಮಾರ್ಗ, ರಸ್ತೆ ಮತ್ತು ರೈಲು ಮಾರ್ಗಗಳ ಮೂಲಕ ಭಾರತದ ಇತರ ಭಾಗಗಳಿಗೂ ಸಂಪರ್ಕ ಹೊಂದಿದೆ.

'ನಮ್ಮ ಮೆಟ್ರೋ'ವಿನ ಮೊದಲನೆಯ ಹಂತ ಪೂರ್ಣವಾಗಿ ಚಾಲನೆಯಲ್ಲಿದೆ. ೪೨ ಕಿಲೋಮೀಟರ್ ಗಳ ಎರಡು ಮಾರ್ಗಗಳು (ಉತ್ತರ ದಕ್ಷಿಣ ದಿಕ್ಕಿನಲ್ಲಿ ಹಸಿರು ಮಾರ್ಗ - ನಾಗಸಂದ್ರದಿಂದ ಯೆಲಚೇನಹಳ್ಳಿವರೆಗೆ, ಪೂರ್ವ ಪಶ್ಚಿಮ ದಿಕ್ಕಿನಲ್ಲಿ ನೇರಳೆ ಮಾರ್ಗ - ಬೈಯ್ಯಪ್ಪನಹಳ್ಳಿಯಿಂದ ನಾಯಂಡಹಳ್ಳಿವರೆಗೆ) ಚಾಲನೆಯಲ್ಲಿದೆ. ಎರಡನೆ ಹಂತದ ಕಾಮಗಾರಿ ನಡೆಯುತ್ತಿದೆ

ಭಾರತದ ನೈಋತ್ಯ ರೇಲ್ವೆ ವಲಯಕ್ಕೆ ಇದು ಮುಖ್ಯ ಕೇಂದ್ರವಾಗಿದ್ದು, ಯಶವಂತಪುರ, ಕ್ಯಾಂಟೊನಮೆಂಟ್ ಮತ್ತು ಕೆ.ಆರ್.ಪುರಂ ನಂತಹ ಕೆಲವು ಇತರ ನಿಲ್ದಾಣಗಳನ್ನೂ ಹೊಂದಿದೆ. ದೇಶೀಯ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರಿಗಾಗಿ, ದೇವನಹಳ್ಳಿ ಎಂಬಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದ್ದು, ಇದು ನಗರದಿಂದ ೪೦ ಕಿ.ಮೀ. ದೂರದಲ್ಲಿದೆ.

ಪ್ರವಾಸಿ ಸ್ಥಳಗಳು[ಬದಲಾಯಿಸಿ][ಬದಲಾಯಿಸಿ]

ಬೆಂಗಳೂರು ಇತರ ಸ್ಥಳಗಳಿಗೆ ಉತ್ತಮವಾದ ಸಂಪರ್ಕ ಹೊಂದಿರುವದರಿಂದ ಪ್ರವಾಸಿಗರಿಗೆ ಸ್ವರ್ಗವಾಗಿದ್ದು, ಅನೇಕ ಆಕರ್ಷಣೀಯ ಸ್ಥಳಗಳಾದ ಜವಾಹರಲಾಲ್ ನೆಹರು ಪ್ಲಾನೇಟೊರಿಯಮ್, ಲಾಲಬಾಗ್, ಕಬ್ಬನ್ ಪಾರ್ಕ್, ಅಕ್ವೇರಿಯಮ್, ವೆಂಕಟಪ್ಪಾ ಆರ್ಟ್ ಗ್ಯಾಲರಿ, ವಿಧಾನ ಸೌಧ ಮತ್ತು ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ಗಳನ್ನು ಇಲ್ಲಿ ಕಾಣಬಹುದು.

ಮುತ್ಯಾಲಮಡುವು(ಮುತ್ತಿನಕಣಿವೆ), ಮೈಸೂರು, ಶ್ರವಣಬೆಳಗೋಳ, ನಾಗರಹೊಳೆ, ಬಂಡಿಪುರ, ರಂಗನತಿಟ್ಟು, ಬೇಲೂರು, ಮಂಡ್ಯ, ಹಳೇಬೀಡು, ಚಿಕ್ಕಮಗಳೂರು, ಕೊಡಗು ಮುಂತಾದ ಸ್ಥಳಗಳಿಗೂ ಕೂಡ ಬೆಂಗಳೂರಿನಿಂದ ಆರಾಮವಾಗಿ ಪ್ರಯಾಣಿಸಬಹುದಾಗಿದೆ.

ನಗರದಲ್ಲಿ ಇಳಿದುಕೊಳ್ಳಲು ಅನೇಕ ಆಯ್ಕೆಗಳಿದ್ದು, ಅವುಗಳಲ್ಲಿ ಲೀಲಾ ಪ್ಯಾಲೇಸ್, ಗೊಲ್ಡನ್ ಲ್ಯಾಂಡಮಾರ್ಕ್, ವಿಂಡ್ಸರ್ ಮ್ಯಾನರ್, ಲಿ ಮೇರಿಡಿಯನ್, ತಾಜ್ ಮತ್ತು ಲಲಿತ್ ಅಶೋಕ ಮುಂತಾದ ಹಲವು ಹೋಟೆಲ್ ಗಳು ಸೂಕ್ತ ಹಾಗು ದುಬಾರಿ ಬೆಲೆಗಳಲ್ಲಿ ಪ್ರವಾಸಿಗರಿಗೆ ಲಭ್ಯವಿವೆ.

ಬಹುಮುಖಿಯ ಸಂಸ್ಕೃತಿಹೊಂದಿರುವ ಕಾರಣ, ವಿವಿಧ ಬಗೆಯ ಖಾದ್ಯಗಳನ್ನು ಕೂಡ ಇಲ್ಲಿ ಕಾಣಬಹುದು. ಬೀದಿ ತಿನಿಸುಗಳಿಂದ ಹಿಡಿದು ಅಂತಾರಾಷ್ಟ್ರೀಯ ಮಟ್ಟದವರೆಗಿನ ತಿನಿಸುಗಳು ಕೂಡ ಇಲ್ಲಿ ಲಭ್ಯ. ಬೆಂಗಳೂರಿನಾದ್ಯಂತ ಬಹುಸಂಖ್ಯೆಯಲ್ಲಿ ಮ್ಯಾಕ್ ಡೊನಾಲ್ಡ್, ಕೆ.ಎಫ್.ಸಿ ಮತ್ತು ಪೀಜ್ಜಾ ಹಟ್ ಗಳ ಔಟ್ ಲೆಟ್ ಗಳನ್ನು ಕಾಣಬಹುದಾಗಿದ್ದು, ಆಸಕ್ತಿಯುಳ್ಳ ಪ್ರವಾಸಿಗರು ಸ್ಥಳೀಯ ತಿಂಡಿತಿನಿಸುಗಳ ಕೇಂದ್ರವಾದ ಎಂ.ಟಿ.ಅರ್. ಗೂ ಕೂಡ ಭೇಟಿ ನೀಡಬಹುದು. ಇತರ ಅನೇಕ ಸ್ಥಳಗಳಲ್ಲಿ ಭಾರತದ ಬೇರೆ ಬೇರೆ ರಾಜ್ಯಗಳ ಖಾದ್ಯಗಳು ಲಭ್ಯವಿದ್ದು, ಉತ್ತರ ಅಥವಾ ಪೂರ್ವ ಭಾರತದ ಅಡುಗೆಗಳಿಗೆ ಯಾವುದೆ ಕೊರತೆಯಿಲ್ಲ.

ದಿ ಫೋರಮ್, ಗರುಡಾ ಮಾಲ್, ಸೆಂಟ್ರಲ್ ,ಒರಾಯನ್ ಮಾಲ್, ಮತ್ತು ಮಂತ್ರಿ ಮಾಲ್ ಗಳಲ್ಲಿ, ದೇಶಿಯ ಹಾಗು ವಿದೇಶಿಯ ಉತ್ಪನ್ನಗಳು ಲಭ್ಯವಿದ್ದು ಖರೀದಿಗೆ ಯೋಗ್ಯವಾದ ಸ್ಥಳಗಳಾಗಿವೆ. ಎಂ.ಜಿ. ರಸ್ತೆಯಲ್ಲಿರುವ ಕಾವೇರಿ ಎಂಪೋರಿಯಮ್ ದೇಶೀಯ ಉತ್ಪನ್ನಗಳಾದ ಚಂದನದ ಸಾಮಗ್ರಿಗಳು, ಜನಪ್ರಿಯವಾದ ಚೆನ್ನಪಟ್ಟಣದ ಕಟ್ಟಿಗೆಯ ಬೊಂಬೆಗಳನ್ನು ಖರೀದಿಸಲು ಉತ್ತಮ ಸ್ಥಳವಾಗಿದೆ. ತುಡಿಯುತ್ತಿರುವ ಯುವಜನಾಂಗದ ಪರಿಣಾಮವಾಗಿ, ಬೆಂಗಳೂರಿನ ರಾತ್ರಿ ಜೀವನವು ಬಲು ಸೊಗಸಾಗಿರುತ್ತದೆ.


ವಿಧಾನಸೌಧ[ಬದಲಾಯಿಸಿ]

https://kn.wikipedia.org/s/9z4

ವಿಧಾನಸೌಧವು ಕರ್ನಾಟಕದ ವಿಧಾನ ಮಂಡಲದ ಸಭೆ ನಡೆಯುವ ಕಟ್ಟಡ .ಇದರ ನಿರ್ಮಾಣವು ಮಾಜಿಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ಆಡಳಿತದ ಅವಧಿಯಲ್ಲಿ ನಿರ್ಮಾಣವಾಯಿತು. ವಿಧಾನಸೌಧಕ್ಕೆ 1951 ಜುಲೈ 13ರಂದು ಅಂದಿನ ಪ್ರಧಾನಿಯಾಗಿದ್ದ ಜವಾಹರಲಾಲ್‌ ನೆಹರು ಶಂಕುಸ್ಥಾಪನೆ ಮಾಡಿದರು. ೧೯೫೨ರಲ್ಲಿ ಪ್ರಾರಂಭವಾದ ಕಟ್ಟಡ ನಿರ್ಮಾಣ ಕಾರ್ಯವು ಪೂರ್ಣಗೊಳ್ಳಲು ನಾಲ್ಕು ವರ್ಷಗಳಾದವು. ೫೦೦೦ಕ್ಕೂ ಹೆಚ್ಚು ಕೆಲಸಗಾರರು ಈ ಕಟ್ಟಡ ನಿರ್ಮಾಣದಲ್ಲಿ ಪಾಲ್ಗೊಂಡಿದ್ದರು. ರಾಜ್ಯ ಸಾರ್ವಜನಿಕ ಕಾರ್ಯಗಳ ಇಲಾಖೆಯಲ್ಲಿ ಮುಖ್ಯ ಎಂಜಿನಿಯರ್‌ ಹಾಗೂ ವಾಸ್ತುಶಿಲ್ಪಿಯಾಗಿದ್ದ ಮಾಣಿಕ್ಯಂ ಕಟ್ಟಡ ನಿರ್ಮಾಣದ ಉಸ್ತುವಾರಿ ನೋಡಿಕೊಂಡರು. ಇದರ ವಾಸ್ತುಶಿಲ್ಪವು ಮೈಸೂರು ದ್ರಾವಿಡ ಶೈಲಿ ಎಂದು ಕೆಲವರು ಕರೆಯುತ್ತಾರೆ.. ಈ ಕಟ್ಟಡದ ವಾಸ್ತುಶೈಲಿಯಲ್ಲಿ ಇಂಡೋ ಸಾರ್ಸೆನಿಕ್ ಮತ್ತು ದ್ರಾವಿಡ ಶೈಲಿಯ ಹಲವಾರು ಅಂಶಗಳು ಆಡಕವಾಗಿದೆ. ಕರ್ನಾಟಕದ ಗೆಜೆಟ್‌ ಪ್ರಕಾರ ಅಂದು ವಿಧಾನಸೌಧ ಕಟ್ಟಲು ತಗುಲಿದ ವೆಚ್ಚ ₹ 1.75ಕೋಟಿ.

ಪರಿವಿಡಿ[ಬದಲಾಯಿಸಿ]

ಕಟ್ಟಡದ ರಚನೆ[ಬದಲಾಯಿಸಿ][ಬದಲಾಯಿಸಿ]

ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಭಾಗಗಳಲ್ಲಿ ಪ್ರವೇಶದ್ವಾರಗಳಿದ್ದು ಎತ್ತರವಾದ ಕೆತ್ನೆಯುಳ್ಳ ಕಂಬಗಳು ಕಟ್ಟಡಕ್ಕೆ ವಿಶೇಷ ಮೆರುಗು ತಂದುಕೊಟ್ಟಿವೆ. ಕಟ್ಟಡದ ಮೇಲ್ಭಾಗದಲ್ಲಿ ಕಣ್ಸೆಳೆವ ಗೋಪುರಗಳೂ ಇವೆ.

ಮುಖ್ಯ ಗೋಪುರದ ಮೇಲ್ಭಾಗದಲ್ಲಿ ಚಿತ್ತಾರಗಳ ಮಧ್ಯೆ ಅಶೋಕಸ್ತಂಭವನ್ನೂ ಸ್ಥಾಪಿಸಲಾಗಿದೆ. ಗೋಪುರಗಳು ಇಂಡೋ ಇಸ್ಲಾಮಿಕ್‌ ಅಂಶಗಳನ್ನು ಒಳಗೊಂಡಿದ್ದು ಕಟ್ಟಡದ ಉಳಿದ ಭಾಗಗಳಿಗೆ ಸಂಬಂಧ ಕಲ್ಪಿಸುವಂತೆ ನಾಲ್ಕೂ ಮೂಲೆಯಲ್ಲಿ ಚಿಕ್ಕದಾದ ಗೋಪುರನ್ನು ನಿರ್ಮಿಸಲಾಗಿದೆ.

ಆಯಾತಾಕಾರದಲ್ಲಿ ನಿರ್ಮಿಸಲಾದ ಕಟ್ಟಡದ ಒಳಭಾಗದಲ್ಲಿಯೂ ಸಾಕಷ್ಟು ಗಾಳಿ– ಬೆಳಕು ಇರುವಂತೆ ಗಮನ ನೀಡಲಾಗಿದೆ. ವಿಸ್ತಾರವಾದ ಹಜಾರ ಕೂಡ ಇಲ್ಲಿಯ ಆಕರ್ಷಣೆ.

ಬಾಲ್ಕನಿಗಳಿಗೆ ರಾಜಸ್ತಾನಿ ಶೈಲಿಯ ಮೆರುಗು ಇದೆ. ಬೆಟ್ಟಹಲಸೂರಿನಿಂದ ತರಿಸಲಾದ ಕಲ್ಲುಗಳಿಗೆ ಬಣ್ಣಗಳ ಲೇಪನವಿಲ್ಲದೆ ಮೂಲ ರೂಪವನ್ನೇ ಉಳಿಸಿಕೊಂಡಿರುವುದು ಕಟ್ಟಡದ ಭವ್ಯತೆಯನ್ನು ಹೆಚ್ಚಿಸಿದೆ.

ವಿಧಾನಸೌಧದ ಬಾಗಿಲುಗಳು, ಕಿಟಕಿಗಳಿಗೆ ಬಳಕೆಯಾಗಿರುವುದು ಹುಣಸೂರು ತೇಗ. ಅವುಗಳಲ್ಲಿನ ಕೆತ್ತನೆ, ನೀಡಲಾದ ಪಾಲಿಶ್‌ ಮೆರುಗು ಎಲ್ಲರ ಗಮನ ಸೆಳೆಯುತ್ತಿವೆ.

ಸರ್ಕಾರದ ಸಚಿವಾಲಯ ಹಾಗೂ ಶಾಸಕಾಂಗ ಎರಡೂ ಒಂದೇ ಕಡೆ ಇರುವುದು ಕಟ್ಟಡದ ವಿಶೇಷ. ಇಂಥ ವ್ಯವಸ್ಥೆ ಬೇರೆ ಯಾವ ರಾಜ್ಯದಲ್ಲಿಯೂ ಇಲ್ಲ. ಸುಮಾರು 700 ಅಡಿ ಉದ್ದ ಹಾಗೂ 350 ಅಡಿ ಅಗಲ ಹೊಂದಿರುವ ವಿಧಾನಸೌಧದಲ್ಲಿ ಒಟ್ಟು ನಾಲ್ಕು ಮಹಡಿಗಳಿವೆ.

ಒಂದನೇ ಮಹಡಿಯಲ್ಲಿ ವಿಧಾನಸಭೆ ಹಾಗೂ ವಿಧಾನಪರಿಷತ್‌ ಸಭಾಂಗಣಗಳಿದ್ದು ವಿಶಾಲವಾಗಿದೆ. ದೊಡ್ಡದಾದ ಈ ಸಭಾಂಗಣದ ಮಧ್ಯಭಾಗದಲ್ಲಿ ಒಂದೂ ಕಂಬ ಇಲ್ಲದಿರುವುದು ಇನ್ನೊಂದು ವಿಶೇಷ.

ಪ್ರತಿ ಮಹಡಿಯಲ್ಲಿಯೂ ನಲವತ್ತರಿಂದ ನಲವತ್ತೈದು ಕೊಠಡಿಗಳಿದ್ದು 3ನೇ ಮಹಡಿಯಲ್ಲಿ ಕ್ಯಾಬಿನೆಟ್‌ ಹಾಲ್‌ ಹಾಗೂ ಕಾನ್‌ಫರೆನ್ಸ್‌ ಹಾಲ್‌ ಇದೆ.

ಇತರೆ ವಿವರಗಳು[ಬದಲಾಯಿಸಿ][ಬದಲಾಯಿಸಿ]

ಎದುರಿನಲ್ಲಿ ಹೈಕೋರ್ಟ್‌ ಹಾಗೂ ಉತ್ತರದಲ್ಲಿ ರಾಜಭವನ ಇದೆ. ಇಟ್ಟಿಗೆ ಹಾಗು ಕಲ್ಲುಗಳ ಅದ್ಭುತ ಕಾಮಗಾರಿಯನ್ನು ಹೊಂದಿರುವ, ರಾಜ್ಯಸಚಿವಾಲಯವೂ ಆಗಿರುವ ಬೆಂಗಳೂರಿನ ವಿಧಾನ ಸೌಧವು ಭೇಟಿ ನೀಡಲೇ ಬೇಕಾದ ಒಂದು ಸ್ಥಳ. ಕಟ್ಟಡವು 46ಮಿ. ಎತ್ತರವಾಗಿದ್ದು ಬೆಂಗಳೂರಿನ ಎತ್ತರದ ಕಟ್ಟಡಗಳಲ್ಲಿ ಒಂದಾಗಿದೆ.ಕಟ್ಟಡವು ದ್ರಾವಿಡಿಯನ್ ಮತ್ತು ಆಧುನಿಕ ಶೈಲಿಯ ಕ್ರಿಯಾತ್ಮಕ ಮಿಶ್ರಣವಾಗಿದ್ದು, ಸಂದರ್ಶಕರಿಗೆ ನಿರಾಸೆಯನ್ನುಂಟು ಮಾಡುವುದಿಲ್ಲ. ಇದನ್ನು ಎಲ್ಲ ದಿಕ್ಕಿನಿಂದಲೂ ಕೂಡ ಸರಳವಾಗಿ ಪ್ರವೇಶಿಸಬಹುದು. ಸಾರ್ವಜನಿಕ ರಜಾ ದಿನಗಳು ಮತ್ತು ಪ್ರತಿ ಭಾನುವಾರ ಸಾಯಂಕಾಲದಂದು ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ದೀಪಗಳಿಂದ ಸಿಂಗರಿಸಲ್ಪಡುವದರಿಂದ ಇನ್ನಷ್ಟು ಸುಂದರವಾಗಿ ಗೋಚರಿಸುತ್ತದೆ. ಸಾಮಾನ್ಯವಾಗಿ ಇದು ಪ್ರತಿದಿನ ಸಾಯಂಕಾಲ 6 ರಿಂದ 8.30 ರ ವರೆಗೆ ದೀಪಗಳಿಂದ ಬೆಳಗುವದರಿಂದ, ನೀವು ಇದನ್ನು ನೋಡುವುದನ್ನು ತಪ್ಪಿಸಿಕೊಳ್ಳಲೇ ಬಾರದು.ಇದು ಬೆಂಗಳೂರು ನಗರ ಜಂಕ್ಷನನಿಂದ 9 ಕಿ.ಮೀ. ದೂರದಲ್ಲಿದೆ. ಹಚ್ಚಹಸಿರಿನ ಕಬ್ಬನ್ ಪಾರ್ಕಿನ ಹತ್ತಿರದಲ್ಲಿರುವ ವಿಧಾನ ಸೌಧವು ಭೇಟಿ ನೀಡಲು ಯೋಗ್ಯವಾದ ಸ್ಥಳವಾಗಿದ್ದು, ಕ್ರಿಯಾತ್ಮಕ ವ್ಯಕ್ತಿಗಳು ಮಧುರತೆಯಿಂದ ದಿನ ಕಳೆಯಲು ಅತ್ಯಂತ ಸೂಕ್ತವಾಗಿದೆ.