ಮಹಾಜನಪದಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಹಾಜನಪದಗಳ ನಕ್ಷೆ
  1. REDIRECT Template:History of South Asia

ಮಹಾಜನಪದಗಳು (ಸಂಸ್ಕೃತ: महाजनपद), ಅಕ್ಷರಶಃ "ಬೃಹತ್ ರಾಜ್ಯ", (ಅಂದರೆ ಮಹಾ , "ಬೃಹತ್", ಮತ್ತು ಜನಪದಗಳು "ಬುಡಕಟ್ಟಿನ ಕಾಲ್ನೆಲೆ", "ದೇಶ") ಪುರಾತನ ಭಾರತೀಯ ರಾಜ್ಯಗಳು ಅಥವಾ ದೇಶಗಳು ಎಂಬುದಾಗಿ ಕರೆಯಲ್ಪಡುತ್ತವೆ. ಅಂಗುತ್ತರ ನಿಕಾಯದಂತಹ ಪುರಾತನ ಬೌದ್ಧಧರ್ಮ[೧] ಪಠ್ಯಗಳು ಹದಿನಾರು ರಾಜ್ಯಗಳು ಮತ್ತು ಗಣರಾಜ್ಯಗಳ (ಸೋಲಾಸ್ ಮಹಾಜಾನಪದಾಸ್ ) ಪುನರಾವರ್ತಿತ ಉಲ್ಲೇಖವನ್ನು ಮಾಡುತ್ತವೆ, ಇವು ವಾಯವ್ಯದ ಗಾಂಧಾರದಿಂದ ಭಾರತೀಯ ಉಪಖಂಡದ ಪೂರ್ವ ಭಾಗದಲ್ಲಿನ ಅಂಗದವರೆಗೆ ವಿಸ್ತರಿಸಿದ ಕ್ಷೇತ್ರದಲ್ಲಿ ವಿಕಸನ ಹೊಂದಿ ಪ್ರವರ್ಧಮಾನಕ್ಕೆ ಬಂದವು ಮತ್ತು ಭಾರತದಲ್ಲಿ ಬೌದ್ಧಮತ (ಬೌದ್ಧಧರ್ಮ) ಪ್ರವರ್ಧಮಾನಕ್ಕೆ ಬರುವುದಕ್ಕೂ ಮುಂಚೆ ವಿಂಧ್ಯ ಪ್ರದೇಶದಾಚೆಗಿನ ಭಾಗಗಳನ್ನು[೨] ಒಳಗೊಂಡಿತ್ತು.[೩]

ಕ್ರಿ.ಪೂ. ೬ನೇ-೫ನೇ ಶತಮಾನವನ್ನು ಮುಂಚಿನ ಭಾರತೀಯ ಇತಿಹಾಸದಲ್ಲಿ ಹಲವುವೇಳೆ ಪ್ರಮುಖ ತಿರುವೆಂದು ಪರಿಗಣಿಸಲಾಗುತ್ತದೆ; ಇದು ಸಿಂಧೂ ಕಣಿವೆ ನಾಗರಿಕತೆಯ ಅಳಿವಿನ ನಂತರ ಭಾರತದ ಮೊದಲ ಮಹಾ ನಗರಗಳ ಹೊರಹೊಮ್ಮುವಿಕೆಯನ್ನು, ಜೊತೆಗೆ ವೈದಿಕ ಕಾಲದ ಧಾರ್ಮಿಕ ಸಂಪ್ರದಾಯಬದ್ಧತೆಗೆ ಸವಾಲೊಡ್ಡಿದ ಶ್ರಮಣ ಚಳುವಳಿಗಳ ಉಗಮವನ್ನು ಕಂಡಿತು. ಪುರಾತತ್ತ್ವ ಶಾಸ್ತ್ರ ರೀತ್ಯಾ, ಈ ಅವಧಿಯು ಭಾಗಶಃ ಉತ್ತರ ಕಪ್ಪು ನಯಗೊಳಿಸಿದ ವಸ್ತು ಸಂಸ್ಕೃತಿಗೆ ಅನುರೂಪವಾಗಿದೆ.

ಸ್ಥೂಲ ಅವಲೋಕನ[ಬದಲಾಯಿಸಿ]

ಪ್ರಾಚೀನ ಭಾರತೀಯರ ರಾಜಕೀಯ ಸ್ವರೂಪವು ಜನ (ವಸ್ತುಗಳು ಎಂಬ ಅರ್ಥವನ್ನು ಕೊಡುವ) ಎಂಬುದಾಗಿ ಕರೆಯಲ್ಪಟ್ಟ ಅರೆ-ಅಲೆಮಾರಿ ಬುಡಕಟ್ಟು ಘಟಕಗಳ ಜೊತೆಗೆ ಪ್ರಾರಂಭವಾಯಿತು ಎಂಬಂತೆ ಕಂಡುಬರುತ್ತದೆ. ಮುಂಚಿನ ವೇದದ ಪಠ್ಯಗಳು ಇಂಡೋ-ಆರ್ಯನ್ನರ ಹಲವಾರು ಜನಾಂಗಗಳು ಅಥವಾ ಬುಡಕಟ್ಟುಗಳನ್ನು ಉಲ್ಲೇಖಿಸುತ್ತವೆ, ಅರೆ-ಅಲೆಮಾರಿ ಬುಡಕಟ್ಟು ರಾಜ್ಯಗಳಲ್ಲಿ ವಾಸಿಸುತ್ತಿದ್ದ ಇಂಡೋ-ಆರ್ಯನ್ನರು ತಮ್ಮ ತಮ್ಮ ನಡುವೆಯೇ ಮತ್ತು ಇತರ-ಆರ್ಯನ್ನರಲ್ಲದ ಬುಡಕಟ್ಟು ಜನಾಂಗದ ಜೊತೆಗೆ ದನಗಳು, ಕುರಿಗಳು ಮತ್ತು ಹಸಿರು ಹುಲ್ಲುಗಳಿಗಾಗಿ ಹೊಡೆದಾಡುತ್ತಿದ್ದರು. ಈ ಮುಂಚಿನ ವೇದಕಾಲದ ಜನರು ನಂತರದಲ್ಲಿ ಮಹಾಕಾವ್ಯ ಯುಗದ ಜನಪದಗಳಿಗೆ ಏಕೀಕೃತಗೊಂಡರು.

"ಜನಪದ" ಎಂಬ ಪದವು ಅಕ್ಷರಶಃವಾಗಿ ಬುಡಕಟ್ಟಿನ ಕಾಲ್ನೆಲೆ ಎಂಬ ಅರ್ಥವನ್ನು ಕೊಡುತ್ತದೆ. ಜನಪದ ಶಬ್ದವು ಜನ ಶಬ್ದದಿಂದ ವ್ಯುತ್ಪನ್ನವಾಗಿದೆ ಎಂಬ ವಾಸ್ತವಾಂಶವು ನೆಲೆಗೊಂಡ ಜೀವನ ಕ್ರಮಕ್ಕಾಗಿ ಜನ ಬುಡಕಟ್ಟಿನಿಂದ ಭೂಮಿಯನ್ನು-ತೆಗೆದುಕೊಳ್ಳುವ ಮುಂಚಿನ ಹಂತವನ್ನು ಸೂಚಿಸುತ್ತದೆ. ಭೂಮಿಯ ಮೇಲೆ ಮೊದಲ ನೆಲೆಯೂರುವಿಕೆಯ ಈ ಪ್ರಕ್ರಿಯೆಯು ತನ್ನ ಅಂತಿಮ ಹಂತವನ್ನು ಬುದ್ಧ ಮತ್ತು ಪಾಣಿನಿಯರ ಅವಧಿಗೂ ಮುಂಚೆಯೇ ಪೂರ್ಣಗೊಳಿಸಿತ್ತು. ಭಾರತೀಯ ಉಪ-ಖಂಡದ ಬೌದ್ಧಪೂರ್ವ ವಾಯವ್ಯ ಪ್ರದೇಶವು ಹಲವಾರು ಜನಪದಗಳಾಗಿ ವಿಂಗಡಿಸಲ್ಪಟ್ಟಿತ್ತು, ಮತ್ತು ಪ್ರತಿ ಜನಪದವೂ ಮತ್ತೊಂದರಿಂದ ಗಡಿಯಿಂದ ಬೇರ್ಪಡಿಸಲ್ಪಟ್ಟಿತ್ತು. ಪಾಣಿನಿಯ ಅಷ್ಟಾಧ್ಯಾಯಿಯಲ್ಲಿ, ಜನಪದ ಶಬ್ದವು ದೇಶ ಮತ್ತು ಜನಪದಿನ್ ಶಬ್ದವು ಅದರ ಪ್ರಜಾಸಮುದಾಯ ಎಂಬ ಅರ್ಥವನ್ನು ನೀಡುತ್ತದೆ. ಈ ಪ್ರತಿಯೊಂದು ಜನಪದಗಳು ಅಲ್ಲಿ ನೆಲೆಗೊಂಡ ಕ್ಷತ್ರಿಯ ಬುಡಕಟ್ಟಿನ ಜನರಿಂದ (ಅಥವಾ ಕ್ಷತ್ರಿಯ ಜನ) ಹೆಸರಿಸಲ್ಪಟ್ಟವು.[೪][೫] ಬೌದ್ಧಧರ್ಮದ ಮತ್ತು ಇತರ ಪಠ್ಯಗಳು ಹದಿನಾರು ಮಹತ್ವದ ದೇಶಗಳನ್ನು (ಸೋಲಾಸ್ ಮಹಾಜನಪದಾಸ್ ) ಕೇವಲ ಆಕಸ್ಮಿಕವಾಗಿ ಮಾತ್ರವೇ ಉಲ್ಲೇಖಿಸುತ್ತವೆ, ಅವು ಬುದ್ಧನ ಅವಧಿಗಿಂತಲೂ ಮುಂಚೆಯೇ ಅಸ್ತಿತ್ವದಲ್ಲಿದ್ದವು. ಅವು ಮಗಧರ ದೃಷ್ಟಾಂತವನ್ನು ಹೊರತುಪಡಿಸಿ ಉಳಿದ ಯಾವುದೇ ದೃಷ್ಟಾಂತಗಳಿಗೆ ಸಂಬಂಧಿಸಿದ ಇತಿಹಾಸವನ್ನು ಒದಗಿಸುವುದಿಲ್ಲ. ಬುದ್ಧರ ಅಂಗುತ್ತರ ನಿಕಾಯವು, ಹಲವಾರು ಸ್ಥಳಗಳಲ್ಲಿ,[೬] ಹದಿನಾರು ಮಹತ್ವದ ರಾಷ್ಟ್ರಗಳ ಯಾದಿಯನ್ನು ನೀಡುತ್ತದೆ:

  1. ಅಂಗ
  2. ಕೊಸಲ
  3. ಕಾಂಬೋಜ
  4. ಮಗಧ
  5. ವಜ್ಜಿ (ಅಥವಾ ವ್ರಿಜಿ)
  6. ಮಲ್ಲ
  7. ಚೇದಿ
  8. ವತ್ಸ(ಅಥವಾ ವಂಶ)
  9. ಕುರು
  10. ಪಾಂಚಾಲ
  11. ಮಚ್ಚ (ಅಥವ ಮತ್ಸ್ಯ್ಯ)
  12. ಶೂರಸೇನ
  13. ಅಸ್ಸಾಕಾ
  14. ಆವಂತಿ
  15. ಗಾಂಧಾರ
  16. ಕಾಂಬೋಜ

ಬೌದ್ಧರ ಮತ್ತೊಂದು ಪಠ್ಯವಾದ ದಿಘಾ ನಿಕಾಯವು ಈ ಮೇಲಿನ ಯಾದಿಯಲ್ಲಿರುವ ಕೇವಲ ಮೊದಲಿನ ಹನ್ನೆರಡು ಜನಪದಗಳನ್ನು ಮಾತ್ರ ಉಲ್ಲೇಖಿಸುತ್ತದೆ ಮತ್ತು ನಂತರದ ನಾಲ್ಕು ಜನಪದಗಳ ಉಲ್ಲೇಖವನ್ನೇ ಮಾಡುವುದಿಲ್ಲ.[೭]

ಬುದ್ಧರ ಗ್ರಂಥಮಾಲೆಯ ಮತ್ತೊಂದು ಪ್ರಾಚೀನ ಪಠ್ಯವಾದ ಚುಲ್ಲಾ-ನಿದೇಸವು ಯಾದಿಗೆ ಕಲಿಂಗವನ್ನು ಸೇರಿಸುತ್ತದೆ ಮತ್ತು ಗಾಂಧಾರಕ್ಕೆ ಬದಲಾಗಿ ಯೋನವನ್ನು ಸೇರಿಸುತ್ತದೆ, ಆ ಮೂಲಕ ಕಾಂಬೋಜ ಮತ್ತು ಯೋನವನ್ನು ಉತ್ತರಪಥದ ಮಹಾಜಾನಪದಗಳು ಎಂಬುದಾಗಿ ಹೆಸರಿಸುತ್ತದೆ.[೮][೯]

ಜೈನ ಭಗವತಿ ಸೂತ್ರವು ಹದಿನಾರು ಮಹಾಜಾನಪದಗಳ ಸ್ವಲ್ಪ ಬದಲಾವಣೆ ಹೊಂದಿದ ಯಾದಿಯನ್ನು ಪ್ರಸ್ತುತಪಡಿಸುತ್ತದೆ, ಅವು ಯಾವುವೆಂದರೆ:ಅಂಗಾ, ಬಂಗಾ (ವಂಗಾ), ಮಗಧ, ಮಲಯ, ಮಾಳವಕಾ, ಆಚ್ಚಾ, ವಚ್ಚಾ, ಕೊಚ್ಚಾ (ಕಚ್ಚಾ?), ಪಧ, ಲಧ (ಲತಾ), ಬಜ್ಜಿ (ವಜ್ಜಿ), ಮೋಲಿ (ಮಲ್ಲ), ಕಾಶಿ, ಕೋಸಲ, ಅವಹ ಮತ್ತು ಸಂಭುತ್ತಾರಾ. ಭಗವತಿ ಸೂತ್ರದ ಲೇಖಕನು ಮಧ್ಯದೇಶ, ಮತ್ತು ದೂರಪ್ರಾಚ್ಯ ಹಾಗೂ ದಕ್ಷಿಣದ ಕಡೆಗಿರುವ ರಾಷ್ಟ್ರಗಳ ಮೇಲೆ ಮಾತ್ರ ತನ್ನ ಗಮನವನ್ನು ಕೇಂದ್ರೀಕರಿಸಿದ್ದನು. ಅವನು ಕಾಂಭೋಜ ಮತ್ತು ಗಾಂಧಾರದಂತಹ ಉತ್ತರಪಥದ ರಾಷ್ಟ್ರಗಳನ್ನು ಸೇರಿಸಿಲ್ಲ. ಭಗವತಿ ಯ ಹೆಚ್ಚು ವಿಸ್ತೃತವಾದ ದೃಷ್ಟಿಕೋನ ಮತ್ತು ಉತ್ತರಪಥದ ಎಲ್ಲ ರಾಷ್ಟ್ರಗಳ ಸೇರಿಸದಿರುವಿಕೆಯು "ಭಗವತಿ ಯಾದಿಯು ನಂತರದ ಮೂಲದ್ದಾಗಿದೆ ಮತ್ತು ಆದ್ದರಿಂದ ಹೆಚ್ಚು ವಿಶ್ವಾಸಯೋಗ್ಯವಾಗಿಲ್ಲ ಎಂಬುದನ್ನು ಸಮರ್ಪಕವಾಗಿ ತೋರಿಸುತ್ತದೆ."[೧೦]

ಜನಪದ ಯಾದಿಯನ್ನು ತಯಾರಿಸಿದ ಜನರ ಮನಸ್ಸಿನಲ್ಲಿದ್ದ ಪ್ರಮುಖ ಕಲ್ಪನೆಯು ಮೂಲಭೂತವಾಗಿ ಭೂಗೋಳಕ್ಕಿಂತ ಹೆಚ್ಚಾಗಿ ಬುಡಕಟ್ಟನ್ನು ಅವಲಂಬಿಸಿತ್ತು, ಆ ಕಾರಣದಿಂದ ಯಾದಿಗಳು ಜನರ ಹೆಸರುಗಳನ್ನೇ ಒಳಗೊಂಡಿವೆ ಮತ್ತು ಅಲ್ಲಿ ದೇಶಗಳ ಉಲ್ಲೇಖವು ಕಂಡುಬರುವುದಿಲ್ಲ. ಬುದ್ಧ ಮತ್ತು ಜೈನ ಬರಹಗಳು ಕೇವಲ ಆಕಸ್ಮಿಕವಾಗಿ ಇತಿಹಾಸದ ಬಗ್ಗೆ ಯಾವುದೇ ವಿವರಗಳಿಲ್ಲದೆಯೇ ಮಹಾಜನಪದಗಳನ್ನು ಉಲ್ಲೇಖಿಸುವ ಕಾರಣದಿಂದ, ಈ ಕೆಳಗೆ ನಮೂದಿಸುವ ಕೆಲವು ಪ್ರತ್ಯೇಕಿತ ಸಂಗತಿಗಳು, ಅತ್ಯುತ್ತಮವಾಗಿ, ಈ ಪ್ರಾಚೀನ ರಾಷ್ಟ್ರಗಳ ಬಗ್ಗೆ ಅವುಗಳಿಂದ ಮತ್ತು ಇತರ ಪ್ರಾಚೀನ ಬರಹಗಳಿಂದ ಸಂಗ್ರಹಿಸಲ್ಪಟ್ಟಿದೆ.

ಕಾಶಿ[ಬದಲಾಯಿಸಿ]

ಈ ಸವಿವರ ನಕ್ಷೆಯು ಭಾರತದ ಮಹಾಗ್ರಂಥಗಳಲ್ಲಿ ಉಲ್ಲೇಖಿತ ಸ್ಥಳಗಳನ್ನು ತೋರಿಸುತ್ತದೆ.

ಕಾಶಿಯು ಅದರ ರಾಜಧಾನಿ ವಾರಾಣಸಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ನೆಲೆಗೊಂಡಿತ್ತು. ಪಟ್ಟಣವು ಉತ್ತರ ಮತ್ತು ದಕ್ಷಿಣದಲ್ಲಿ ವರುಣಾ ಮತ್ತು ಅಸಿ ನದಿಗಳಿಂದ ಆವೃತವಾಗಿತ್ತು, ಈ ನದಿಗಳೇ ಅದಕ್ಕೆ ವಾರಾಣಸಿ ಎಂಬ ಹೆಸರನ್ನು ನೀಡಿದವು. ಬುದ್ಧನಿಗಿಂತ ಮುಂಚೆ, ಕಾಶಿಯು ಹದಿನಾರು ಮಹಾಜನಪದಗಳಲ್ಲಿ ಅತ್ಯಂತ ಹೆಚ್ಚು ಬಲಶಾಲಿಯಾಗಿತ್ತು. ಹಲವಾರು ಜಾತಕಗಳು ಭಾರತದ ಇತರ ನಗರಗಳಿಗಿಂತ ಇದರ ರಾಜಧಾನಿಯ ಉತ್ಕೃಷ್ಟತೆಗೆ ಸಾಕ್ಷಿಯಾಗಿವೆ ಮತ್ತು ಇದರ ಸಮೃದ್ಧತೆ ಮತ್ತು ಐಶ್ವರ್ಯದ ಕುರಿತು ವಿಸ್ತೃತವಾಗಿ ಮಾತನಾಡುತ್ತವೆ. ಈ ಕಥೆಗಳು ಕೋಸಲ, ಅಂಗ ಮತ್ತು ಮಗಧರ ಜೊತೆಗೆ ಕಾಶಿಯ ದೀರ್ಘಕಾಲದ ಶತ್ರುತ್ವದ ಬಗ್ಗೆಯೂ ಹೇಳುತ್ತವೆ. ಅವುಗಳ ನಡುವೆ ಸರ್ವಶ್ರೇಷ್ಠತೆಗಾಗಿ ದೀರ್ಘಕಾಲದ ಹೋರಾಟವು ಅಸ್ತಿತ್ವದಲ್ಲಿತ್ತು. ಕಾಶಿಯ ರಾಜ ಬೃಹದ್ರಥನು ಕೋಸಲವನ್ನು ಪರಾಜಯಗೊಳಿಸಿದನು, ಆದರೆ ಕಾಶಿಯು ನಂತರದಲ್ಲಿ ಬುದ್ಧನ ಅವಧಿಯಲ್ಲಿ ರಾಜ ಕಂಸನಿಂದ ಕೋಸಲಕ್ಕೆ ಸೇರಿಸಲ್ಪಟ್ಟಿತು. ಕೋಸಲರ ಜೊತೆಗೆ ಕಾಶಿಯರು ಮತ್ತು ವಿದೇಹದವರು ವೈದಿಕ ಪಠ್ಯಗಳಲ್ಲಿ ನಮೂದಿಸಲ್ಪಟ್ಟಿದ್ದಾರೆ ಮತ್ತು ನಿಕಟವಾಗಿ ಸಂಬಂಧವನ್ನು ಹೊಂದಿದ ಜನರಂತೆ ಕಂಡುಬರುತ್ತಾರೆ. ಮತ್ಸ್ಯ ಪುರಾಣ ಮತ್ತು ಅಲ್ಬೇರುನಿ ಕಾಶಿಯನ್ನು ಅನುಕ್ರಮವಾಗಿ ಕೌಶಿಕ ಮತ್ತು ಕೌಶಕ ಎಂಬುದಾಗಿ ಉಚ್ಚರಿಸಿದ್ದಾರೆ. ಎಲ್ಲಾ ಇತರ ಪ್ರಾಚೀನ ಪಠ್ಯಗಳು ಇದನ್ನು ಕಾಶಿ ಎಂಬುದಾಗಿಯೇ ಉಲ್ಲೇಖಿಸಿವೆ.

ಕೋಸಲ[ಬದಲಾಯಿಸಿ]

ಕೋಸಲ ದೇಶವು ಮಗಧ ದೇಶದ ವಾಯವ್ಯ ಭಾಗದಲ್ಲಿ ನೆಲೆಗೊಂಡಿತ್ತು. ಆಧುನಿಕ ಅಯೋಧ್ಯಾದ ಉತ್ತರಕ್ಕೆ ಸುಮಾರು ೬೦ ಮೈಲಿ ದೂರದ, ಸಾಹೇತ್-ಮಾಹೇತ್ ಪ್ರದೇಶದಲ್ಲಿನ ಗೋಂಡಾ ಹಾಗೂ ಬಹ್ರೈಚ್ ಜಿಲ್ಲೆಗಳ ಗಡಿಯಲ್ಲಿದ್ದ ಸಾವತ್ತಿ (ಶ್ರಾವಸ್ತಿ) ಈ ದೇಶದ ರಾಜಧಾನಿಯಾಗಿತ್ತು. ಈ ದೇಶವು ಗೋರಖಪುರದ ಪಶ್ಚಿಮೋತ್ತರ ಭಾಗದಲ್ಲಿ ೭೦ ಮೈಲಿಗಳವರೆಗೆ ವ್ಯಾಪಿಸಿತ್ತು ಮತ್ತು ಉತ್ತರ ಪ್ರದೇಶದ ಈಗಿನ ಅವಧ್ (ಔಧ್) ನ ಪ್ರದೇಶವನ್ನೂ ಒಳಗೊಂಡಿತ್ತು. ಇದು ದಕ್ಷಿಣಗಡಿಯಲ್ಲಿ ಗಂಗಾ ನದಿಯನ್ನೂ, ಗಂಡಕಿ ನದಿಯನ್ನು ಪೂರ್ವ ಗಡಿಯಲ್ಲೂ, ಮತ್ತು ಉತ್ತರದ ಗಡಿಯಾಗಿ ಹಿಮಾಲಯ ಪರ್ವತವನ್ನೂ ಹೊಂದಿತ್ತು. ಇದು ವೈದಿಕ ಧರ್ಮದ ಕೇಂದ್ರವೆಂದು ಉಲ್ಲೇಖಿಸಲ್ಪಟ್ಟಿದೆ. ಇದರ ರಾಜರು ದೈತ್ಯರು, ರಾಕ್ಷಸರು ಮತ್ತು ಅಸುರರ ವಿರುದ್ಧದ ವಿವಿಧ ಯುದ್ಧಗಳಲ್ಲಿ ದೇವತೆಗಳೊಂದಿಗೆ ಮೈತ್ರಿ ಮಾಡಿಕೊಂಡರು. ಹಿಂದೂ ಧರ್ಮಗ್ರಂಥಗಳು, ಇತಿಹಾಸ ಮತ್ತು ಪುರಾಣಗಳಲ್ಲಿ ಕೋಸಲ ಮತ್ತು ಅಯೋಧ್ಯಾ ಕೇಂದ್ರ ಸ್ಥಳವನ್ನು ಹೊಂದಿವೆ. ರಘುವಂಶ-ಇಕ್ಷ್ವಾಕುವಂಶ ಅತ್ಯಂತ ಉದ್ದದ ಅವಿಚ್ಛಿನ್ನ ರಾಜವಂಶವಾಗಿತ್ತು; ರಾಮನು ಈ ರಾಜವಂಶದ ಒಬ್ಬ ರಾಜನಾಗಿದ್ದನು. ಪೃಥು, ಹರಿಶ್ಚಂದ್ರ ಮತ್ತು ದಿಲೀಪ ಇತರ ಮಹಾನ್ ರಾಜರಾಗಿದ್ದರು, ಇವರನ್ನು ವಿಭಿನ್ನ ಪುರಾಣಗಳು, ರಾಮಾಯಣ ಮತ್ತು ಮಹಾಭಾರತದಲ್ಲಿ ಉಲ್ಲೇಖಿಸಲಾಗಿದೆ. ಈ ಪಠ್ಯಗಳ ಪ್ರಕಾರ, ಕೋಸಲವು ದಾಖಲಿತ ಇತಿಹಾಸದಲ್ಲಿನ ಅತ್ಯಂತ ಬಲಶಾಲಿ ಹಾಗೂ ದೊಡ್ಡ ರಾಜ್ಯವಾಗಿತ್ತು. ನಂತರ, ಮಹಾವೀರ ಮತ್ತು ಬುದ್ಧರ ಕಾಲದಲ್ಲಿ ಈ ದೇಶವು ರಾಜಾ ಪ್ರಸೇನಜಿತ್ ಮತ್ತು ಅವನ ಮಗ ವಿಡೂಡಭರಿಂದ ಆಳಲ್ಪಟ್ಟಿತು. ರಾಜಾ ಪ್ರಸೇನಜಿತ್ ಬಹಳ ವಿದ್ಯಾವಂತನಾಗಿದ್ದನು. ಮಗಧದೊಂದಿಗಿನ ವೈವಾಹಿಕ ಸಂಬಂಧದಿಂದ ಇವನ ಸ್ಥಾನ ಮತ್ತಷ್ಟು ಸುಧಾರಿಸಿತು: ಇವನ ಸೋದರಿ ಬಿಂಬಿಸಾರನನ್ನು ವಿವಾಹವಾದಳು ಮತ್ತು ವರದಕ್ಷಿಣೆಯಾಗಿ ಕೋಸಲದ ಭಾಗವನ್ನು ನೀಡಲಾಗಿತ್ತು. ರಾಜಾ ’ಪಸೆನದಿ’(ಪ್ರಸೇನ್ ಜಿತ್) ಮತ್ತು ಮಗಧ ದೇಶದ ರಾಜಾ ಅಜಾತಶತ್ರು ಇವರ ನಡುವೆ ಅಧಿಕಾರಕ್ಕಾಗಿ ಹೋರಾಟ ನಡೆಯುತ್ತಿತ್ತು ಮತ್ತು ಅಂತಿಮವಾಗಿ ಲಿಚ್ಛವಿಗಳ ಸಂಯುಕ್ತ ರಾಜ್ಯವು ಮಗಧ ದೇಶದೊಂದಿಗೆ ಜೊತೆಗೂಡಿದಾಗ ಬಗೆಹರಿಯಿತು. ಕೋಸಲ ದೇಶವು ವಿಡೂಡಭ ರಾಜನಿಂದ ಆಳಲ್ಪಡುತ್ತಿರುವ ಸಮಯದಲ್ಲಿ ಮಗಧ ದೇಶದೊಂದಿಗೆ ವಿಲೀನಗೊಂಡಿತು. ಅಯೋಧ್ಯಾ, ಸಾಕೇತ, ಬನಾರಸ್ ಮತ್ತು ಸ್ರಾವಸ್ತಿ ಇವುಗಳು ಕೋಸಲ ದೇಶದ ಪ್ರಮುಖ ನಗರಗಳಾಗಿದ್ದವು.

ಅಂಗ[ಬದಲಾಯಿಸಿ]

ಮಗಧರು, ಗಾಂಧಾರರು ಮತ್ತು ಮುಜಾವತರ ಜೊತೆಗೆ, ಮೇಲ್ನೋಟಕ್ಕೆ ಕೀಳು ವರ್ಗಕ್ಕೆ ಸೇರಿದವರೆಂದು ಅಥರ್ವ ವೇದದಲ್ಲಿ ಅಂಗ ದೇಶದವರ ಮೊದಲ ಉಲ್ಲೇಖವಾಗಿದೆ. ’ಜೈನ ಪ್ರಜ್ಞಾಪಾನ’ವು ಆರ್ಯ ಜನರ ಮೊದಲ ಗುಂಪಿನಲ್ಲಿ ಅಂಗರು ಮತ್ತು ವಂಗರನ್ನು ವರ್ಗೀಕರಿಸುತ್ತದೆ. ಇದರಲ್ಲಿ ಪ್ರಾಚೀನ ಭಾರತದ ಪ್ರಮುಖ ನಗರಗಳನ್ನು ಹೆಸರಿಸಲಾಗಿದೆ.[೧೧] ಈ ಪ್ರದೇಶವು ವ್ಯಾಪಾರ ಮತ್ತು ವಾಣಿಜ್ಯದ ಪ್ರಮುಖ ಕೇಂದ್ರವೂ ಆಗಿತ್ತು ಮತ್ತು ಇಲ್ಲಿನ ವ್ಯಾಪಾರಿಗಳು ನಿಯಮಿತವಾಗಿ ಸುವರ್ಣಭೂಮಿಗೆ ಕ್ರಮಿಸಲು ಆಧುನಿಕ ದೋಣಿಗಳನ್ನು ಬಳಸುತ್ತಿದ್ದರು. ಬಿಂಬಿಸಾರನ ಕಾಲದಲ್ಲಿ ಅಂಗವನ್ನು ಮಗಧದೊಂದಿಗೆ ಸೇರಿಸಲಾಯಿತು. ಇದು ಬಿಂಬಿಸಾರನ ಏಕಮಾತ್ರ ವಿಜಯವಾಗಿತ್ತು.

ಮಗಧ[ಬದಲಾಯಿಸಿ]

ಅಥರ್ವ ವೇದದಲ್ಲಿ ಮಗಧದ ಬಗೆಗಿನ ಪ್ರಥಮ ಉಲ್ಲೇಖವಿದ್ದು ಮಗಧ ದೇಶದವರನ್ನು ಅಂಗದೇಶ, ಗಾಂಧಾರರು ಮತ್ತು ಮುಜಾವತರಂತೆ ನಿಕೃಷ್ಟತೆಯಿಂದ ವರ್ಣಿಸಲಾಗಿದೆ. ಮಗಧದ ಪುರಾಣದ ಬಗ್ಗೆ ವೇದಗಳಲ್ಲಿ ಹೆಚ್ಚಿನ ಮಾಹಿತಿ ಇದೆ ಮತ್ತು ಅಲ್ಲಿಯೂ ಕೂಡ ಮಗಧದ ಬಗ್ಗೆ ತಿರಸ್ಕಾರದ ನುಡಿಗಳೇ ಇವೆ. ಋಗ್ವೇದದಲ್ಲಿ ಕಿಕಾತಾ ರಾಜ್ಯವನ್ನು ಆಳಿದ ದೊರೆಯಾದ ಪ್ರಮಗಂಧ ಎಂಬ ಅರಸನ ಉಲ್ಲೇಖವಿದೆ. ಯಶಾಕಾರ ಪ್ರಕಾರ ಕಿಕಾತಾ ದೇಶವು ಆರ್ಯರ ದೇಶವಾಗಿರಲಿಲ್ಲ. ಮುಂದಿನ ಉಲ್ಲೇಖಗಳಲ್ಲಿ ಕಿಕಾತಾವನ್ನು ಮಗಧ ರಾಜ್ಯದ ಹೆಸರಿನ ಸಮಾನಾಂತರವಾಗಿ ಬಳಸಿರುವುದು ಕಂಡುಬರುತ್ತದೆ. ಋಗ್ವೇದದಲ್ಲಿ ಉಲ್ಲೇಖಿಸಿದ ಪ್ರಮಗಂಧನ ರಾಜನ ಮಗಧದೊಂದಿಗಿನ ಸಂಬಂದವು ಕೇವಲ ಕಲ್ಪನೆಯದ್ದಾಗಿರುವುದಾಗಿ ತೋರುತ್ತದೆ. ವೇದಗಳಲ್ಲಿ ಇನ್ನಾವುದೂ ಮಗಧದ ರಾಜರ ಬಗೆಗಿನ ಉಲ್ಲೇಖಗಳಿಲ್ಲ. ಮಹಾಭಾರತ ಮತ್ತು ಪುರಾಣಗಳ ಪ್ರಕಾರ ಮಗಧ ರಾಜ್ಯವು ಬೃಹದೃತ ಎನ್ನುವವನಿಂದ ಸಂಸ್ಥಾಪಿಸಲ್ಪಟ್ಟಿತು. ಆದರೆ ಮಗಧ ರಾಜ್ಯವು ಬಿಂಬಿಸಾರ ಮತ್ತು ಅವನ ಮಗನಾದ ಅಜಾತಶತ್ರು ಇವರಿಂದ ಪ್ರಖ್ಯಾತಿಗೆ ಬಂದಿತು. ಮಜ್ಜಿಮಾದೇಶದ ಜೊತೆಗಿನ ಬಹಳಕಾಲದ ಹೋರಾಟದ ನಂತರ ಮಗಧರಾಜ್ಯವು ವಿಜಯಶಾಲಿಯಾಗಿ ಮಧ್ಯಭಾರತದ ಪ್ರಖ್ಯಾತ ದೇಶವಾಗಿ ಹೊರಹೊಮ್ಮಿತು.

ಮಗಧ ರಾಜ್ಯವು ಸಾಮಾನ್ಯವಾಗಿ ಉತ್ತರದಲ್ಲಿ ಈಗಿನ ಜಿಲ್ಲೆಗಳಾದ ಪಾಟ್ನಾ ಮತ್ತು ಗಯಾದವರೆಗೂ ಹಾಗೂ ಪೂರ್ವದಲ್ಲಿ ಬಿಹಾರ ಮತ್ತು ಬಂಗಾಳದ ಭಾಗದವರೆಗೂ ಹರಡಿತ್ತು. ಇದರ ಗಡಿಯು ಉತ್ತರದಲ್ಲಿ ಗಂಗಾ ನದಿಯವರೆಗೆ, ಪೂರ್ವದಲ್ಲಿ ಚಂಪಾ ನದಿಯವರೆಗೆ, ದಕ್ಷಿಣದಲ್ಲಿ ವಿಂಧ್ಯಪರ್ವತದವರೆಗೆ ಪಶ್ಚಿಮದಲ್ಲಿ ಸೋನಾ ನದಿಯವರೆಗೆ ವಿಸ್ತರಿಸಿತ್ತು. ಬುದ್ಧನ ಕಾಲದಲ್ಲಿ ಈ ಗಡಿಗಳು ಅಂಗದೇಶದ ಗಡಿಗಳಾಗಿದ್ದವು. ಇದರ ಮೊದಲ ರಾಜಧಾನಿಯು ಗಿರಿವಜ್ರ ಅಥವಾ ರಾಜಗ್ರಹ (ಈಗಿನ ಬಿಹಾರದ ಪಾಟ್ನಾ ಜಿಲ್ಲೆಯ ರಾಜಗ್ರಹ‌). ಇದರ ಇತರ ಹೆಸರುಗಳೆಂದರೆ ಮಗಧಪುರ, ಬೃಗದೃತಪುರ, ವಸುಮತಿ, ಕುಶಾಗ್ರಪುರ, ಮತ್ತು ಬಿಂಬಿಸಾರಪುರಿ. ಇದು ಹಿಂದಿನ ಕಾಲದಲ್ಲಿ ಜೈನ ಮತದ ಪ್ರಮುಖ ಕಾರ್ಯಕ್ಷೇತ್ರವಾಗಿತ್ತು. ಮೊದಲ ಬುದ್ಧ ಮತದ ಸಭೆಯು ವೈಬರ ಪರ್ವತದ ರಾಜಗೃಹದಲ್ಲಿ ನಡೆಯಿತು. ನಂತರ ಪಾಟಲಿಪುತ್ರವು ಮಗಧದ ರಾಜಧಾನಿಯಾಯಿತು.

ವಜ್ಜಿ ಅಥವಾ ವೃಜಿ[ಬದಲಾಯಿಸಿ]

ವಜ್ಜಯನರು ಅಥವಾ ವಿರಜಿಗಳು ಸುಮಾರು ೮ ಅಥವಾ ೯ ವಂಶದವರನ್ನು ಹೊಂದಿದ ಒಂದು ಒಕ್ಕೂಟವಾಗಿತ್ತು. ಇದು ಲಿಚ್ಛವಿಗಳು, ವಿದೇಹದವರು, ಜ್ಞಾತ್ರಿಕರು ಮುಂತಾದವರನ್ನು ಹೊಂದಿತ್ತು. ಅದರಲ್ಲಿ ವಜ್ಜಿಗಳು ಪ್ರಮುಖರಾಗಿದ್ದರು. ಮಿಥಿಲಾ(ಈಗಿನ ತಿರಹುತ್‌ ಜಿಲ್ಲೆಯ ಜನಕಪುರ) ಇದು ವಿದೇಹದ ರಾಜಧಾನಿಯಾಗಿದ್ದು ಇದು ಉತ್ತರ ಭಾರತದ ರಾಜಕೀಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರಬಿಂದುವಾಗಿತ್ತು. ’ವಿದೇಹವು’ ಜನಕ ರಾಜನ ಕಾಲದಲ್ಲಿ ಪ್ರಖ್ಯಾತಿಗೆ ಬಂದಿತು. ವಿದೇಹದ ಕೊನೆಯ ರಾಜನು ಕಲರಾ ಎಂದು ಗುರುತಿಸಲಾಗಿದ್ದು ಈತನು ಬ್ರಾಹ್ಮಣ ಕನ್ಯೆಯನ್ನು ಕೆಡಿಸಲು ಹೋಗಿ ತನ್ನ ರಾಜ್ಯದೊಂದಿಗೆ ತಾನೂ ಸರ್ವನಾಶವಾದನು. ಈತನ ಸಾಮ್ರಾಜ್ಯದ ಪತನದೊಂದಿಗೆ ಲಿಚ್ಛವಿಯರು, ವಿದೇಹದವರು ಮತ್ತು ಇತರ ಸಣ್ಣ ಗುಂಪುಗಳು ಅಸ್ತಿತ್ವಕ್ಕೆ ಬಂದವು. ಮಹಾವೀರನ ತಾಯಿಯು ಲಿಚ್ಛವಿಗಳ ಮಹಾರಾಣಿಯಾಗಿದ್ದಳು. ವೈಶಾಲಿ(ಈಗಿನ ಉತ್ತರ ಬಿಹಾರದ ವೈಶಾಲಿ ಜಿಲ್ಲೆಯ ಬಸರ್ಹಾ) ಇದು ಲಿಚ್ಛವಿಗಳ ರಾಜಧಾನಿಯಾಗಿತ್ತು ಮತ್ತು ಮೈತ್ರೀಕೂಟದ ಪ್ರಧಾನ ರಾಜಕೀಯ ಸ್ಥಾನವಾಗಿತ್ತು. ವೈಶಾಲಿಯು ಗಂಗಾನದಿಯಿಂದ ೨೫ಮೈಲಿ ಉತ್ತರದಲ್ಲಿಯೂ ಮತ್ತು ೩೮ ಮೈಲಿ ರಾಜಗೃಹದಿಂದಲೂ ದೂರವಿತ್ತು ಮತ್ತು ಪ್ರವರ್ಧಮಾನದಲ್ಲಿರುವ ನಗರವಾಗಿತ್ತು. ಎರಡನೇ ಬುದ್ಧಮತದ ಸಭೆಯು ವೈಶಾಲಿಯಲ್ಲಿ ನಡೆಯಿತು. ಲಿಚ್ಛವಿಗಳು ಬುದ್ಧನ ಅನುಯಾಯಿಗಳಾಗಿದ್ದರು ಮತ್ತು ಬುದ್ಧನು ಬಹಳ ಬಾರಿ ಇಲ್ಲಿಗೆ ಭೇಟಿ ನೀಡಿದ್ದನು. ಇವರು ಮಗಧದೊಂದಿಗೆ ಮಧ್ಯಯುಗದ ವರೆಗೆ ನೇಪಾಳವನ್ನು ಆಳಿದ ಅರಸು ಮನೆತನದೊಂದಿಗೆ ವೈವಾಹಿಕ ಸಂಬಂಧವನ್ನು ಹೊಂದಿದ್ದರು. ಆದರೆ ಈಗ ನೇಪಾಳವನ್ನು ಆಳುತ್ತಿರುವ ಶಾ ರಾಜವಂಶಕ್ಕೆ ಯಾವುದೇ ರೀತಿಯ ಸಂಬಂಧಗಳು ಇಲ್ಲ. ಲಿಚ್ಛವಿಗಳು (ವ್ರತ್ಯಾ) ಕ್ಷತ್ರಿಯರೆಂದು ಮನುಸ್ಮೃತಿಯಲ್ಲಿ ಉಲ್ಲೇಖವಿದೆ. ವಜ್ಜಿಯ ಶಕ್ತಿಯುತ ಗಣರಾಜ್ಯವೂ ಮತ್ತು ಪ್ರಧಾನಸ್ಥಳವೂ ಮತ್ತು ಲಿಚ್ಛವಿಗಳ ರಾಜಧಾನಿಯೂ ಆದ ವೈಶಾಲಿಯು ಮಗಧದ ಅಜಾತಶತ್ರುವಿನಿಂದ ಸೋಲಿಸಲ್ಪಟ್ಟಿತು.

ಮಲ್ಲ[ಬದಲಾಯಿಸಿ]

ಮಲ್ಲರು ಬುದ್ಧರ ಮತ್ತು ಜೈನರ ಬರಹಗಳಲ್ಲಿ ಪುನರಾವರ್ತಿತವಾಗಿ ಉಲ್ಲೆಖಿಸಲ್ಪಟ್ಟಿದ್ದಾರೆ. ಭಾರತದ ಉತ್ತರ-ಕೇಂದ್ರಭಾಗದಲ್ಲಿ ನೆಲೆಗೊಂಡಿದ್ದ ಅವರು ಅತ್ಯಂತ ಬಲಶಾಲಿ ಜನರಾಗಿದ್ದರು. ವಾಲ್ಮೀಕಿ ರಾಮಾಯಣದ ಪ್ರಕಾರ, ಲಕ್ಷ್ಮಣನ ಮಗ ಚಂದ್ರಕೇತುವು ಮಲ್ಲಯುದ್ಧದಲ್ಲಿ ಪ್ರವೀಣನಾಗಿದ್ದ ಕಾರಣದಿಂದ ಲಕ್ಷ್ಮಣನಿಂದಲೇ ಮಲ್ಲ ಎಂಬ ಹೆಸರನ್ನು ನೀಡಲ್ಪಟ್ಟಿದ್ದನು. ಚಂದ್ರಕೇತುವು ಚಂದ್ರಕಾಂತವನ್ನು ರಾಜಧಾನಿಯಾಗಿ ಹೊಂದಿರುವ ಕರುಪ್ರತ (ಆಧುನಿಕ ಕುಶಿನಗರ) ಪ್ರದೇಶದಲ್ಲಿ ಆಳ್ವಿಕೆಯನ್ನು ನಡೆಸುತ್ತಿದ್ದನು. ಈ ಪ್ರದೇಶವು ವಾಲ್ಮೀಕಿ ರಾಮಾಯಣದಲ್ಲಿ ಮಲ್ಲ-ಭೂಮಿ ಅಥವಾ ಮಲ್ಲ ರಾಷ್ಟ್ರ ಎಂಬುದಾಗಿ ಉಲ್ಲೇಖಿಸಲ್ಪಟ್ಟಿದೆ. ಮಹಾಭಾರತದ ಪ್ರಕಾರ, ಪಾಂಡುಪುತ್ರ ಭೀಮಸೇನನು ಪೌರಾತ್ಯ ಭಾರತದಲ್ಲಿ ತನ್ನ ದಂಡಯಾತ್ರೆಯ ಸಂದರ್ಭದಲ್ಲಿ ಮಲ್ಲರ ಮುಖ್ಯಸ್ಥನನ್ನು ಸೋಲಿಸಿದ್ದನೆಂಬ ಪ್ರತೀತಿಯಿದೆ. ಬುದ್ಧರ ಅವಧಿಯ ಸಮಯದಲ್ಲಿ, ಮಲ್ಲ ಕ್ಷತ್ರಿಯರು ಒಂಬತ್ತು ಸಹಾಯಕ ಗುಂಪುಗಳಿಗೆ ಸಂಬಂಧಿಸಿದ ಒಂಬತ್ತು ಭೂಕ್ಷೇತ್ರಗಳನ್ನು[೧೨] ಒಳಗೊಂಡಿರುವ ಅವರ ಪರಮಾಧಿಕಾರದ ಜೊತೆಗೆ ಗಣರಾಜ್ಯವನ್ನು ಹೊಂದಿದ ಜನರಾಗಿದ್ದರು. ಈ ಗಣರಾಜ್ಯ ಪ್ರದೇಶಗಳು ಗಣ ಎಂಬುದಾಗಿ ಕರೆಯಲ್ಪಡುತ್ತಿದ್ದವು. ಈ ಸಹಾಯಕ ಗುಂಪುಗಳಲ್ಲಿ ಎರಡು ಗುಂಪುಗಳು - ಮೊದಲನೆಯದು ಕುಶಿನಾರಾವನ್ನು (ಗೋರಕ್‌ಪುರದ ಬಳಿಯಿರುವ ಆಧುನಿಕ ಕಾಶಿಯಾ) ರಾಜಧಾನಿ ಯಾಗಿ ಹೊಂದಿದ ಪ್ರದೇಶ ಮತ್ತು ಎರಡನೆಯದು ಪಾವಾ (ಆಧುನಿಕ ಪದ್ರೌನ, ಕಾಶಿಯಾದಿಂದ ೧೨ ಮೈಲಿ ದೂರವಿರುವ) - ಬುದ್ಧನ ಅವಧಿಯಲ್ಲಿ ಅತ್ಯಂತ ಪ್ರಮುಖ ಸ್ಥಳಗಳಾಗಿದ್ದವು. ಕುಶಿನಾರಾ ಮತ್ತು ಪಾವಾ ಇವುಗಳು ಬೌದ್ಧತತ್ವ ಮತ್ತು ಜೈನತತ್ವದ ಇತಿಹಾಸದಲ್ಲಿ ಅತ್ಯಂತ ಪ್ರಮುಖ ಪ್ರದೇಶಗಳಾಗಿದ್ದವು, ಏಕೆಂದರೆ ಬುದ್ಧ ಮತ್ತು ೨೪ನೆಯ ತೀರ್ಥಂಕರರಾದ ಭಗವಾನ್ ಮಹಾವೀರ ಇವರು ಅನುಕ್ರಮವಾಗಿ ಕುಶಿನಾರಾ ಮತ್ತು ಪಾವಾಪುರಿಯಲ್ಲಿ ತಮ್ಮ ಕೊನೆಯ ಭೋಜನವನ್ನು ಮಾಡಿದ್ದರು. ಬುದ್ಧ ಪಾವಾದಲ್ಲಿ ಅಸ್ವಸ್ಥನಾಗಿದ್ದನು ಮತ್ತು ಕುಶಿನಾರಾದಲ್ಲಿ ಅಸುನೀಗಿದನು, ಹಾಗೆಯೇ ಭಗವಾನ್ ಮಹಾವೀರರು ಪಾವಾ ಪುರಿಯಲ್ಲಿ ನಿರ್ವಾಣ ಹೊಂದಿದರು. ಭಗವಾನ್ ಗೌತಮ ಕುಶಿನಗರ/ಕುಶಿನಾರಾದ ರಾಜ ಸಸ್ತಿಪಾಲ ಮಲ್‌ರ ಪ್ರದೇಶದಲ್ಲಿ ಮರಣಹೊಂದಿದರು ಎಂಬುದನ್ನು ವ್ಯಾಪಕವಾಗಿ ನಂಬಲಾಗಿದೆ. ಕುಶಿನಗರವು ಪ್ರಸ್ತುತದಲ್ಲಿ ಬೌದ್ಧ ಯಾತ್ರಾವಲಯದ ಕೇಂದ್ರಪ್ರದೇಶವಾಗಿದೆ, ಅದು ಉತ್ತರ ಪ್ರದೇಶದ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯಿಂದ ಅಭಿವೃದ್ಧಿಗೊಳ್ಳಲ್ಪಟ್ಟಿದೆ.

ಲಿಚ್ಛವಿಗಳಂತಹ ಮಲ್ಲರು ಮನುಸ್ಮೃತಿಯಲ್ಲಿ ವ್ರಾತ್ಯಾ ಕ್ಷತ್ರಿಯ ಎಂಬುದಾಗಿ ಉಲ್ಲೇಖಿಸಲ್ಪಟ್ಟಿದ್ದಾರೆ. ಅವರು ಮಹಾಪ್ಪರ್ಣಿಬ್ಬನ ಸುತ್ತಾಂತಾದಲ್ಲಿ ವಶಿಷ್ಟರು (ವಸೇಥಾಸ್) ಎಂಬುದಾಗಿ ಕರೆಯಲ್ಪಟ್ಟಿದ್ದಾರೆ. ಮಲ್ಲರು ಮೂಲಭೂತವಾಗಿ ಒಂದು ರಾಜತ್ವ ಸ್ವರೂಪದ ಸರ್ಕಾರವನ್ನು ಹೊಂದಿದ್ದರು, ಆದರೆ ನಂತರದಲ್ಲಿ ಅವರು ಸಂಘ (ಗಣರಾಜ್ಯ) ಎಂದು ಕರೆಯಲ್ಪಡುವ ಸ್ವರೂಪಕ್ಕೆ ಬದಲಾಯಿಸಲ್ಪಟ್ಟರು, ಅದರ ಸದಸ್ಯರುಗಳು ತಮ್ಮನ್ನು ತಾವೇ ರಾಜರೆಂದು ಕರೆದುಕೊಳ್ಳುತ್ತಿದ್ದರು. ಮಲ್ಲರು ಧೈರ್ಯಶಾಲಿ ಮತ್ತು ಯುದ್ಧಪ್ರೇಮಿ ಜನಗಳಾಗಿದ್ದರು. ಅವರ ಪ್ರಾಚೀನ ಸಂತತಿಯ ಕಾರಣದಿಂದಾಗಿ ಅವರು ತಮ್ಮನ್ನು ಕ್ಷತ್ರಿಯರಲ್ಲಿ ಅತ್ಯಂತ ಪರಿಶುದ್ಧರು ಎಂಬುದಾಗಿ ಪರಿಗಣಿಸಿಕೊಂಡಿದ್ದರು. ಜೈನಮತ ಮತ್ತು ಬೌದ್ಧಮತಗಳು ಮಲ್ಲರಲ್ಲಿ ತಮ್ಮ ಹಲವಾರು ಅನುಯಾಯಿಗಳನ್ನು ಕಂಡುಕೊಂಡಿತು. ಬುದ್ಧರ ಅವಧಿಯಲ್ಲಿ ಅಲ್ಲಿ ಒಟ್ಟಾರೆಯಾಗಿ ಒಂಬತ್ತು ಮಲ್ಲ ರಾಜರುಗಳಿದ್ದರು. ಮಲ್ಲರು ಲಿಚ್ಚವಿಗಳ ಜೊತೆಗೆ ಸ್ವಯಂ ರಕ್ಷಣೆಯ ಸಲುವಾಗಿ ಒಂದು ಮೈತ್ರಿಯನ್ನು ಸಂಘಟಿಸಿದರು ಆದರೆ ಬುದ್ಧರ ಮರಣದ ಸ್ವಲ್ಪ ಕಾಲದಲ್ಲಿಯೇ ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಂಡರು ಮತ್ತು ಅವರ ಅಧಿಪತ್ಯಗಳು ಮಗಧ ರಾಜರುಗಳಿಗೆ ಸಂಯೋಜಿಸಲ್ಪಟ್ಟವು. ಮಲ್ಲರ ನಂತರದ ವಂಶಸ್ಥರು ಗೋರಕ್‌ಪುರ/ಡಿಯೋರಿಯಾ ಮತ್ತು ಕುಶಿನಗರದ ನೆರೆಪಟ್ಟಣಗಳಲ್ಲಿ ಈಗಲೂ ಕೂಡ ಕಂಡುಬರುತ್ತಾರೆ. ಲಿಚ್ಛವಿಗಳು, ಕೋಲಿಯಾಗಳು ಮತ್ತು ಶಾಕ್ಯರಂತಹ ಇತರ ಸಂಘೀಯ ಕ್ಷತ್ರಿಯರ ಜೊತೆಗೆ ಮಲ್ಲರು ತಮ್ಮ ಶಾಂತನಗರದ ಅಧಿಕಾರವನ್ನು ನಿರ್ವಹಿಸುತ್ತಿದ್ದರು, ಅದು ಒಂದು ಸಮಾವೇಶ ಸಭಾಂಗಣವಾಗಿತ್ತು. ಬೌದ್ಧಮತದ ಕ್ಷೀಣಿಸುವಿಕೆಯ ಜೊತೆಗೆ, ಗೋರಕ್‌ಪುರ ಮತ್ತು ಡಿಯೋರಿಯಾ ಜಿಲ್ಲೆಗಳ ಸುತ್ತಮುತ್ತಲಿರುವ ಬೌದ್ಧಧರ್ಮವನ್ನು ಅನುಸರಿಸುತ್ತಿದ್ದ ಗಣರಾಜ್ಯ ಕ್ಷತ್ರಿಯರು ಹಿಂದೂಮತಕ್ಕೆ ಬದಲಾವಣೆ ಹೊಂದಿದರು, ಅದಾಗ್ಯೂ ಇದರ ನಿಖರವಾದ ಅವಧಿಯು ತಿಳಿಯಲ್ಪಟ್ಟಿಲ್ಲ. ಈ ಶಾಂತನಗರ ಕ್ಷತ್ರಿಯರು ಸಾಮಾಜಿಕ ಶ್ರೇಣಿವ್ಯವಸ್ಥೆಯಲ್ಲಿ ವೇದಿಕ ಕ್ಷತ್ರಿಯರ ನಂತರದಲ್ಲಿ ಬರುತ್ತಿದ್ದರು ಮತ್ತು ಅವರು "ಶಾಂತಾ-ಯುದ್ಧ" (ಸೈಂತ್‌ವಾರ್) ಎಂಬುದಾಗಿ ಕರೆಯಲ್ಪಟ್ಟರು, ಅದರ ಅರ್ಥವೇನೆಂದರೆ "ಶಾಂತಾವನ್ನು ಅಥವಾ ಸಂಸ್ಥಾವನ್ನು ಬಿಡುವುದಕ್ಕೆ" ಎಂಬುದಾಗಿದೆ. ಈ ಪ್ರಾಚೀನ ಮಲ್ಲರನ್ನು ಡಿಯೋರಿಯಾದ ಮಜೌಲಿ ಮಲ್ಲರೊಂದಿಗೆ ಸೇರಿಸಿ ಗೊಂದಲವನ್ನುಂಟುಮಾಡಿಕೊಳ್ಳಬಾರದು. ಮಜೌಲಿ ಮಲ್ಲರ ಬಗ್ಗೆ ಅಲ್ಲಿ ಎರಡು ಸಿದ್ಧಾಂತಗಳು ಅಸ್ತಿತ್ವದಲ್ಲಿವೆ. ಮಜೌಲಿ ಮಲ್ಲರು ತಮ್ಮ ವಂಶಸ್ಥರು ಜನಪ್ರಿಯ ತಪಸ್ವಿ ಮಯೂರ ಭಟ್‌ರ ವಂಶದಿಂದ ಬಂದವರು ಎಂಬುದಾಗಿ ಹೇಳಿಕೊಳ್ಳುತ್ತಾರೆ, ಮಯೂರ ಭಟ್ ಇವರು ಋಷಿ ಜಮದಗ್ನಿಯ ವಂಶಸ್ಥರಾಗಿದ್ದಾರೆ. ಮಯೂರ ಭಟ್ ಇವರು ತಮ್ಮ ಸೂರಜ್‌ವಂಶಿಗಳಲ್ಲಿ ಒಬ್ಬರಾದ "ಸೂರ್ಯ ಪ್ರಭಾ"ರಿಂದ "ಬಿಸ್ವ ಸೇನ್" ಎಂಬ ಒಬ್ಬ ಮಗನನ್ನು ಪಡೆದಿದ್ದರು, ಬಿಸ್ವ ಸೇನರು "ಬಿಸೇನ್ ರಜಪೂತ್"[೧೩] ವಂಶದ ಮೊದಲ ವ್ಯಕ್ತಿಯಾಗಿದ್ದರು. ರಾಜಕುಮಾರಿ ಸೂರ್ಯ ಪ್ರಭಾ ಈಕೆಯು ಬೌದ್ಧ-ಅಲ್ಲದ ಮಲ್ಲ ರಾಜವಂಶಸ್ಥಳು ಎಂಬುದಾಗಿ ಅಂದಾಜಿಸಲಾಗುತ್ತದೆ. ಬಿಸ್ವ ಸೇನರ ೮೦ನೆಯ ವಂಶಸ್ಥರಾದ ರಾಜಾ ಹರ್ಡಿಯೋ ಸೇನನು ೧೧ನೆಯ ಶತಮಾನದ ಸಮಯದಲ್ಲಿ ತನ್ನ ವೀರತ್ವದ ಕಾರಣದಿಂದಾಗಿ ದೆಹಲಿಯ ರಾಜನಿಂದ "ಮಲ್ಲ" ಎಂಬ ಬಿರುದನ್ನು ಪಡೆದುಕೊಂಡಿದ್ದನು. ಮಧ್ಯಯುಗದ ಸಮಯದಲ್ಲಿ ಬಿಸೇನ್ ಮಲ್ಲರ ಕೆಲವು ಸದಸ್ಯರು ನೇಪಾಳಕ್ಕೆ ವಲಸೆ ಹೋದರು ಎಂಬುದಾಗಿ ನಂಬಲಾಗುತ್ತದೆ, ಅಲ್ಲಿ ಅವರು ಈಗಲೂ ಕೂಡ "ಮಲ್ಲ ರಾಜರು" ಎಂಬುದಾಗಿ ಕರೆಯಲ್ಪಡುತ್ತಾರೆ. ಬೌದ್ಧ ವಿದ್ವಾಂಸರಿಂದ ಮತ್ತು ಮಧುಬನ ಮಲ್ಲರಿಂದ (ಅವರು ಸಹಸ್ತ್ರವಾರ್ ಎಂಬುದಾಗಿ ಕೂಡ ಕರೆಯಲ್ಪಡುತ್ತಾರೆ, ಮತ್ತು ಅವರು ಭಾರತ ಸರ್ಕಾರದಿಂದ ಸಾಮಾನ್ಯವಾಗಿ ಕ್ಷತ್ರಿಯರೆಂದು ಪರಿಗಣಿಸಲ್ಪಡುವುದಿಲ್ಲ ಮತ್ತು ಇತರ ಹಿಂದುಳಿದ ವರ್ಗಗಳ ಸದಸ್ಯರಾಗಿ ಪರಿಗಣಿಸಲ್ಪಡುತ್ತಾರೆ) ನೀಡಲ್ಪಟ್ಟ ಎರಡನೆಯ ಸಿದ್ಧಾಂತವು "ಮಜೌಲಿ ಮಲ್ಲ"ರು[೧೪] ಬೌದ್ಧ-ಅಲ್ಲದ ಮಲ್ಲ ರಾಜ ಮತ್ತು ಬುದ್ಧನ ಅವಧಿಯ ಮೌರ್ಯ ರಾಜಕುಮಾರಿಯ ವಂಶಸ್ಥರು ಎಂಬುದಾಗಿ ಪರಿಗಣಿಸುತ್ತದೆ.

ಚೇದಿ ಅಥವ ಚೇತಿ[ಬದಲಾಯಿಸಿ]

ಚೇದಿಗಳು, ಚೇತಿಗಳು ಅಥವಾ ಚೇತ್ಯರು ಎರಡು ವಿಭಿನ್ನವಾದ ನೆಲೆಗಳನ್ನು ಹೊಂದಿದ್ದರು, ಅವುಗಳಲ್ಲಿ ಒಂದು ನೆಪಾಳದ ಪರ್ವತಶ್ರೇಣಿಗಳಲ್ಲಿತ್ತು ಮತ್ತು ಮತ್ತೊಂದು ಕೌಸಾಂಬಿಯ ಬಳಿಯಿರುವ ಬುಂದೇಲ್‌ಖಂಡದಲ್ಲಿತ್ತು. ಹಳೆಯ ಅಧಿಕಾರಿಗಳ ಪ್ರಕಾರ, ಚೇದಿಗಳು ಕುರುಗಳು ಮತ್ತು ವಾತ್ಸ್ಯರ ರಾಜ್ಯಗಳ ನಡುವಣ ಯಮುನಾದ ಮಧ್ಯದಲ್ಲಿ ವಾಸಿಸುತ್ತಿದ್ದರು. ಮಧ್ಯಯುಗದ ಅವಧಿಯಲ್ಲಿ, ಚೇದಿ ರಾಜ್ಯದ ದಕ್ಷಿಣ ಗಡಿಯು ನರ್ಮದಾ ನದಿಯ ದಡದವರೆಗೂ ವಿಸ್ತರಿಸಲ್ಪಟ್ಟಿತು. ಮಹಾಭಾರತದ ಸೂಕ್ತಿ ಅಥವಾ ಸೂಕ್ತಿಮತಿಯಾದ ಸೊತ್ತಿವತ್ನಾಗಾರವು ಚೇದಿಗಳ ರಾಜಧಾನಿಯಾಗಿತ್ತು. ಚೇದಿಗಳು ಭಾರತದ ಪ್ರಾಚೀನ ಜನಾಂಗದವರಾಗಿದ್ದರು ಮತ್ತು ಋಗ್ವೇದದಲ್ಲಿ ಅವರ ಉಲ್ಲೇಖವು ಕಂಡುಬರುತ್ತದೆ. ಖಾರವೇಲನ ಹಾಥಿಗುಂಫಾ ಶಾಸನಕ್ಕೆ ಅನುಗುಣವಾಗಿ ಚೇದಿಗಳ ಒಂದು ಶಾಖೆಯು (ಗುಂಪು) ಕಳಿಂಗ ರಾಜ್ಯದಲ್ಲಿ ತನ್ನ ರಾಜ್ಯಾಧಿಕಾರವನ್ನು ಹೊಂದಿತ್ತು.

ವಂಸ ಅಥವಾ ವತ್ಸ[ಬದಲಾಯಿಸಿ]

ವತ್ಸರು, ವಂಸರು ಅಥವಾ ವಚ್ಛರು ಕುರುಗಳ ವಂಶಸ್ಥರು ಎಂದು ಹೇಳಲಾಗಿದೆ. ವತ್ಸ ಅಥವಾ ವಂಸ ದೇಶವು ಉತ್ತರ ಪ್ರದೇಶದಲ್ಲಿನ ಆಧುನಿಕ ಅಲ್ಲಹಾಬಾದ್‌ನ ಸೀಮೆಯ ಜೊತೆಗೆ ಸಂಬಂಧಿಸಿದೆ. ಇದು ಕೌಸಾಂಬಿಯನ್ನು (ಅಲಹಾಬಾದ್‌ನಿಂದ ೩೮ ಮೈಲಿ ದೂರವಿರುವ ಕೋಸಮ್ ಎಂಬ ಗ್ರಾಮದ ಜೊತೆಗೆ ಸಂಬಂಧಿತವಾಗಿದೆ) ತನ್ನ ರಾಜಧಾನಿಯನ್ನು ಹೊಂದುವುದರ ಜೊತೆಗೆ ರಾಜತ್ವ ಸ್ವರೂಪದ ಒಂದು ಸರ್ಕಾರವನ್ನು ಹೊಂದಿತ್ತು. ಕೌಸಾಂಬಿಯು ಅತ್ಯಂತ ಸಂಪದ್ಭರಿತವಾದ ಪಟ್ಟಣವಾಗಿತ್ತು, ಅಲ್ಲಿ ಹಲವಾರು ಸಂಖ್ಯೆಯ ಲಕ್ಷಾಧಿಪತಿ ವಣಿಕರು ವಾಸವಾಗಿದ್ದರು. ಇದು ಉತ್ತರ-ಪಶ್ಚಿಮ ಮತ್ತು ದಕ್ಷಿಣದಿಂದ ಸರಕುಗಳು ಮತ್ತು ಪ್ರಯಾಣಿಕರ ಒಂದು ಅತ್ಯಂತ ಪ್ರಮುಖವಾದ ಪ್ರವೇಶದ್ವಾರವಾಗಿತ್ತು. ಉದಯನನು ಕ್ರಿ.ಪೂ. ಆರನೆಯ ಶತಮಾನದಲ್ಲಿ, ಅಂದರೆ ಬುದ್ಧನ ಅವಧಿಯಲ್ಲಿ ವತ್ಸರ ಅಧಿಪತಿಯಾಗಿದ್ದನು. ಅವನು ಅತ್ಯಂತ ಬಲಶಾಲಿ, ಯುದ್ಧೋಚಿತ ಮತ್ತು ಬೇಟೆಯಲ್ಲಿ ಆಸಕ್ತಿಯುಳ್ಳವನಾಗಿದ್ದನು. ಮೂಲಭೂತವಾಗಿ ರಾಜ ಉದಯನ ಬೌದ್ಧಧರ್ಮದ ವಿರುದ್ಧವಾಗಿದ್ದನು ಆದರೆ ನಂತರದಲ್ಲಿ ಬುದ್ಧನ ಅನುಯಾಯಿಯಾದನು ಮತ್ತು ಬೌದ್ಧಧರ್ಮವನ್ನು ರಾಷ್ಟ್ರದ ಧರ್ಮವನ್ನಾಗಿ ಮಾಡಿದನು.

ಕುರು[ಬದಲಾಯಿಸಿ]

ಪುರು-ಭಾರತ ’ ಕುಟುಂಬವು ’ಕುರು’ಗಳ ಉಗಮಸ್ಥಾನವೆಂದು ಪುರಾಣಗಳು ತಿಳಿಸುತ್ತವೆ. ಐತರೇಯ ಬ್ರಾಹ್ಮಣವು ಕುರುಗಳು ಮಧ್ಯದೇಶದಲ್ಲಿದ್ದ ಜನರೆಂದು ಮತ್ತು ಉತ್ತರ ಕುರುಗಳು ಹಿಮಾಲಯದ ಆಚೆಗಿನ ಪ್ರದೇಶಗಳಲ್ಲಿ ವಾಸಿಸುತ್ತಿದ್ದರು ಎಂದು ಹೇಳುತ್ತದೆ. ಬೌದ್ಧರ ಗ್ರಂಥವಾದ ’ಸುಮಂಗವಿಲಾಸಿನಿ’ ಯಲ್ಲಿ ಹೇಳಿರುವ ಪ್ರಕಾರ ಕುರುಕ್ಷೇತ್ರದಲ್ಲಿರುವ ಕುರು ಜನರು ಉತ್ತರಕುರುವಿನಿಂದ ಬಂದವರಾಗಿದ್ದಾರೆ.[೧೫] ವಾಯು ಪುರಾಣವು ಪುರು ವಂಶ ಪರಂಪರೆಯ ಸಂವರ್‍ಸನ ನ ಮಗನಾದ ಕುರುವು ಈ ಕ್ಷೇತ್ರದ ಹೆಸರಿನ ಮೂಲ ಮತ್ತು ಕುರುಕ್ಷೇತ್ರದಲ್ಲಿನ ಕುರುರಾಷ್ಟ್ರದ (ಕುರು ಜಾನಪದ) ಸ್ಥಾಪಕನೆಂದು ಧೃಢೀಕರಿಸುತ್ತದೆ. ಕುರು ದೇಶವು ಹೆಚ್ಚುಕಡಿಮೆ ಇಂದಿನ ದಿಲ್ಲಿ ರಾಜ್ಯದ ಥಾನೆಸರ ಮತ್ತು ಉತ್ತರಪ್ರದೇಶದ ಮೀರತ್ ಜಿಲ್ಲೆಗಳಲ್ಲಿ ವ್ಯಾಪಿಸಿತ್ತು. ಜಾತಕಗಳು ಹೇಳುವ ಪ್ರಕಾರ ಕುರುರಾಜ್ಯದ ರಾಜಧಾನಿಯು ಈಗಿನ ನವದೆಹಲಿ ಹತ್ತಿರದ ಇಂದ್ರಪ್ರಸ್ಥ (ಇಂದಪತ್ತಾ)ವಾಗಿತ್ತು. ಬುದ್ಧನ ಕಾಲದಲ್ಲಿ ಕುರು ದೇಶವು ನಾಮಕಾವಾಸ್ತೆಗೆ ರಾಜನಾಗಿದ್ದ ಕೋರೈವ್ಯಾ ಎಂಬುವವನಿಂದ ಆಳಲ್ಪಡುತ್ತಿತ್ತು. ಬುದ್ಧನ ಕಾಲದಲ್ಲಿ ಕುರು ವಂಶಜರು ವೇದ ಕಾಲದಲ್ಲಿ ಹೊಂದಿದ್ದಂತಹ ಸ್ಥಾನಮಾನಗಳನ್ನು ಪಡೆಯಲು ಸಾಧ್ಯವಾಗಲಿಲ್ಲ. ಆದರೆ ಆಳ ಜ್ಞಾನ, ತೀಕ್ಣ ಬುದ್ಧಿ ಮತ್ತು ಉತ್ತಮ ಆರೋಗ್ಯ ಹೊಂದಿದ್ದರಿಂದ ಪ್ರಖ್ಯಾತರಾಗಿಯೇ ಮುಂದುವರೆದರು. ಕುರು ವಂಶಜರು ಯಾದವರು, ಭೋಜರು ಮತ್ತು ಪಾಂಚಾಲರೊಂದಿಗೆ ವೈವಾಹಿಕ ಸಂಬಂಧಗಳನ್ನು ಹೊಂದಿದ್ದರು. ಯುಧಿಷ್ಠಿರನ ಕಾಲದಲ್ಲಿ ರಾಜನೆಂದು ಹೆಸರಿಸಲಾದ ಧನಂಜಯನನ್ನು ಜಾತಕ ಎಂತಲೂ ಸೂಚಿಸಲಾಗಿದೆ. ಹಿಂದಿನ ಕಾಲದಲ್ಲಿ ಚಿರಪರಿಚಿತರಾದ ರಾಜರು ಇದ್ದರೂ ಕುರು ಜನರು ಕ್ರಿಸ್ತಪೂರ್ವ ಆರರಿಂದ ಐದನೇ ಶತಮಾನದ ವೇಳೆಯಲ್ಲಿ ಪ್ರಜಾತಂತ್ರ ಮಾದರಿ ಆಡಳಿತವನ್ನು ಹೊಂದಿದ್ದರು. ಕ್ರಿ.ಪೂ. ನಾಲ್ಕನೇ ಶತಮಾನದಲ್ಲಿ ಕೌಟಿಲ್ಯನ ಅರ್ಥಶಾಸ್ತ್ರವೂ ಕೂಡಾ ಕುರುಗಳು ರಾಜಶಬ್ದೋಪಜೀವಿನ್ (ರಾಜ ಪ್ರಭುತ್ವ) ಸಂವಿಧಾನ ಅನುಸರಿಸುತ್ತಿದ್ದರೆಂದು ಧೃಢೀಕರಿಸುತ್ತದೆ.

ಪಾಂಚಾಲ[ಬದಲಾಯಿಸಿ]

ಪಾಂಚಾಲ ದೇಶವು ಕುರುದೇಶದ ಪೂರ್ವಭಾಗ ಅಂದರೆ ಬೆಟ್ಟ ಪ್ರದೇಶ ಮತ್ತು ಗಂಗಾ ನದಿಯ ಮಧ್ಯದ ಪ್ರದೇಶದಲ್ಲಿ ವ್ಯಾಪಿಸಿತ್ತು. ಇದು ಸುಮಾರು ಇಂದಿನ ಬುದಾವ್ನ್ ಫರೂಕಾಬಾದ್ ಮತ್ತು ಉತ್ತರ ಪ್ರದೇಶದ ಕೆಲವು ಪ್ರದೇಶಗಳಲ್ಲಿ ಹರಡಿಕೊಂಡಿತ್ತು. ಉತ್ತರ ಪಾಂಚಾಲವು ಆಧಿಛತ್ರ ಅಥವಾ ಛತ್ರಾವತಿ (ಇಂದಿನ ಬರೇಲಿ ಜಿಲ್ಲೆಯ ರಾಮನಗರ) ಎಂಬಲ್ಲಿ ರಾಜಧಾನಿಯನ್ನು ಹೊಂದಿತ್ತು. ಹಾಗೆಯೇ ದಕ್ಷಿಣ ಪಾಂಚಾಲವು ತನ್ನ ರಾಜಧಾನಿಯನ್ನು ಫರೂಕಾಬಾದ್ ಜಿಲ್ಲೆಯ ಕಂಪಿಲ್ಯಾ ಅಥವಾ ಕಂಪಿಲ ಎಂಬಲ್ಲಿ ಹೊಂದಿತ್ತು. ಪ್ರಸಿದ್ದ ನಗರವಾದ ಕನ್ಯಾಕುಬ್ಜ ಅಥವಾ ಕನೌಜ್ ನಗರವು ಪಾಂಚಾಲ ರಾಜ್ಯದಲ್ಲಿಯೇ ಇತ್ತು. ಮೊದಲಿನಿಂದಲೂ ರಾಜವಂಶ ಆಡಳಿತ ಹೊಂದಿದ್ದರೂ ಪಾಂಚಾಲರು ಕ್ರಿ.ಪೂ ಆರನೇ ಮತ್ತು ಐದನೇ ಶತಮಾನದಲ್ಲಿ ಪ್ರಜಾತಂತ್ರ ಮಾದರಿ ಆಡಳಿತಕ್ಕೆ ಬದಲಾವಣೆಗೊಂಡರು. ಕೌಟಿಲ್ಯನ ಅರ್ಥಶಾಸ್ತ್ರವೂ ಕೂಡಾ ಪಾಂಚಾಲರು ರಾಜಶಬ್ದೋಪಜೀವಿನ್ (ರಾಜ ಪ್ರಭುತ್ವ) ಸಂವಿಧಾನವನ್ನು ಅನುಸರಿಸುತ್ತಿದ್ದರೆಂದು ದೃಢೀಕರಿಸುತ್ತದೆ.

ಮಚ್ಚ ಅಥವಾ ಮತ್ಸ್ಯ[ಬದಲಾಯಿಸಿ]

ಮಚ್ಛ ಅಥವಾ ಮತ್ಸ್ಯ ಬುಡಕಟ್ಟಿನ ದೇಶವು ಉತ್ತರದಲ್ಲಿ ಕುರುವಿನವರೆಗೂ ಮತ್ತು ಪಶ್ಚಿಮದಲ್ಲಿ ಯಮುನಾ ನದಿಯವರೆಗೂ ಹರಡಿದ್ದು ಪಾಂಚಾಲರಿಂದ ಬೇರ್ಪಡಿಸಲ್ಪಟ್ಟಿತ್ತು. ಇದು ಸಾಮಾನ್ಯವಾಗಿ ರಾಜಸ್ಥಾನದ ಹಿಂದಿನ ಜೈಪುರಕ್ಕೆ ಸಂಬಂಧಿಸಿದ್ದು ಪೂರ್ಣ ಆಲ್ವಾರ ಮತ್ತು ಭರತ್‌ಪುರದ ಒಂದು ಭಾಗವನ್ನು ಒಳಗೊಂಡಿತ್ತು. ವಿರಾಟನಗರ (ಈಗಿನ ಬೈರಾಟ್‌)ವು ಮತ್ಸ್ಯ ದೇಶದ ರಾಜಧಾನಿಯಾಗಿತ್ತು. ಈ ರಾಜ್ಯವನ್ನು ವಿರಾಟನೆಂಬ ಅರಸನು ಸ್ಥಾಪಿಸಿದ್ದರಿಂದ ಈ ಹೆಸರು ಬಂದಿತು. ಪಾಲಿ ಸಾಹಿತ್ಯದಲ್ಲಿ ಮತ್ಸ್ಯದೇಶವು ಶೂರಸೇನನಿಗೆ ಸಂಬಂಧಿಸಿತ್ತೆಂದು ಉಲ್ಲೇಖವಿದೆ. ಪಶ್ಚಿಮ ಮತ್ಸ್ಯವು ಚಂಬಲ್ ಕಣಿವೆಯ ಪರ್ವತಪ್ರದೇಶಗಳಲ್ಲಿತ್ತು. ನಂತರದ ದಿನಗಳಲ್ಲಿ ವಿಜಗಪಥಮ್ ಪ್ರಾಂತ್ಯದಲ್ಲಿ ಮತ್ಯದ ಒಂದು ಶಾಖೆಯೂ ಇತ್ತೆಂದು ಕಂಡುಬರುತ್ತದೆ. ಬುದ್ಧನ ಕಾಲದಲ್ಲಿ ಮತ್ಸ್ಯರು ರಾಜಕೀಯವಾಗಿ ಹೆಚ್ಚಾಗಿ ಪ್ರವರ್ಧಮಾನದಲ್ಲಿರಲಿಲ್ಲ. ಸುಜಾತಾ ರಾಜನು ಮತ್ಸ್ಯರನ್ನು ಮತ್ತು ಚೇದಿಗಳನ್ನು ಆಳಿದ್ದನು. ಇದರಿಂದಾಗಿ ಮತ್ಸ್ಯವು ಚೇದಿ ರಾಜ್ಯದ ಒಂದು ಭಾಗವಾಗಿತ್ತೆಂದು ಕಂಡುಬರುತ್ತದೆ.

ಶೂರಸೇನ[ಬದಲಾಯಿಸಿ]

ಶೂರಸೇನನ ರಾಜ್ಯವು ಮತ್ಸ್ಯದ ಉತ್ತರ-ಪೂರ್ವದಲ್ಲಿಯೂ ಮತ್ತು ಪಶ್ಚಿಮದಲ್ಲಿ ಯಮುನೆಯನ್ನು ಹೊಂದಿತ್ತು. ಇದರ ರಾಜಧಾನಿಯು ಮಧುರಾ ಅಥವಾ ಮಥುರಾ ಆಗಿತ್ತು. ಅವಂತಿಪುರದಲ್ಲಿ ಶೂರಸೇನ ಮಹಾರಾಜನು ಬೌದ್ಧಧರ್ಮದ ಅನುಯಾಯಿಗಳಲ್ಲಿ ಪ್ರಮುಖನಾಗಿದ್ದನು. ಇದರಿಂದಾಗಿ ಮಥುರಾವು ಬೌದ್ಧಧರ್ಮದ ಪ್ರಮುಖ ನೆಲೆಯಾಯಿತು. ಪಾಣಿನಿಯ ಅಷ್ಟಾಧ್ಯಾಯಿಯಲ್ಲಿ ಮಥುರಾ/ಶೂರಸೇನದ ಅಂಧಕರು ಮತ್ತು ವೃಷ್ಣಿಗಳ ಉಲ್ಲೇಖವನ್ನು ನೀಡಲಾಗಿದೆ. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ವೃಷ್ಣಿಗಳನ್ನು ಸಂಘ ಅಥವಾ ಗಣತಂತ್ರವೆಂದು ವರ್ಣಿಸಲಾಗಿದೆ. ಯಾದವರ ವೃಷ್ಣಿಗಳು, ಅಂಧಕರು, ಮತ್ತು ಅಲ್ಲಿನ ಇತರ ಬುಡಕಟ್ಟಿನವರಿಂದ ಸಾಮಗ ಮತ್ತು ವಾಸುದೇವ(ಕೃಷ್ಣನ) ಮೂಲ ಸ್ಥಾನವೆಂದು ಸಾಮಗ-ಮುಖ್ಯ ದಲ್ಲಿ ವರ್ಣಿಸಲಾಗಿದೆ. ಶೂರಸೇನದ ರಾಜಧಾನಿಯಾದ ಮಥುರಾವು ಮೆಗಾಸ್ತನೀಸನ ಕಾಲದಲ್ಲಿ ಕೃಷ್ಣನ ಆರಾಧನೆಯ ಮುಖ್ಯ ಕ್ಷೇತ್ರವಾಗಿತ್ತೆಂದು ಹೇಳಲಾಗಿದೆ. ಶೂರಸೇನದ ರಾಜ್ಯವು ಮಗಧದ ದೊರೆಯಿಂದ ಸೋತು ತನ್ನ ಸ್ವಾಂತತ್ರ್ಯವನ್ನು ಕಳೆದುಕೊಂಡಿತು.

ಅಸ್ಸಕ ಅಥವಾ ಅಶ್ಮಕ[ಬದಲಾಯಿಸಿ]

ಅಸ್ಸಕ ಅಥವಾ ಅಶ್ಮಕ ಬುಡಕಟ್ಟಿನ ಜನಾಂಗವು ದಕ್ಷಿಣಪಥ ಅಥವಾ ದಕ್ಷಿಣ ಭಾರತದಲ್ಲಿ ಕಂಡುಬರುತ್ತದೆ. ಬುದ್ಧನ ಕಾಲದಲ್ಲಿ ಅಸ್ಸಕ ಜನಾಂಗದವರು ಗೋದಾವರಿ ನದಿ ತೀರ(ವಿಂಧ್ಯ ಪರ್ವತದ ಉತ್ತರ ಭಾಗ)ದಲ್ಲಿ ವಾಸವಾಗಿದ್ದರು. ಪೊಟಾನಾ ಅಥವಾ ಪೊಟಾಲಿ ಇದು ಅಸ್ಸಕ ಜನಾಂಗದ ರಾಜಧಾನಿಯಾಗಿತ್ತು. ಇದು ಮಹಾಭಾರತ ಕಾಲದ ಪೌಂಡನ್ಯ ಎಂದು ಹೇಳುತ್ತಾರೆ. ಅಶ್ಮಕರನ್ನು ಸಹ ಪಾಣಿನಿ ಉಲ್ಲೇಖಿಸಿದ್ದಾನೆ. ಮಾರ್ಕಾಂಡೇಯ ಪುರಾಣ ಮತ್ತು ಬೃಹತ್ ಸಂಹಿತಾ ಗಳ ಪ್ರಕಾರ ಅವರು ಉತ್ತರ-ಪಶ್ಚಿಮಗಳಲ್ಲಿ ವಾಸವಾಗಿದ್ದರೆಂದು ಉಲ್ಲೇಖವಿದೆ. ಗೋದಾವರಿ ನದಿಯು ಅಸ್ಸಕರ ರಾಜ್ಯವನ್ನು ಮೂಲಕರ (ಅಥವಾ ಅಲಕರು) ರಾಜ್ಯದಿಂದ ಬೇರ್ಪಡಿಸಿತ್ತು. ಕೌಟಿಲ್ಯನ ಅರ್ಥಶಾಸ್ತ್ರದ ವಿವರಣಕಾರರು ಅಶ್ಮಕವು ಮಹಾರಾಷ್ಟ್ರದಲ್ಲಿತ್ತೆಂದು ಗುರುತಿಸಿದ್ದಾರೆ. ಅಸ್ಸಕ ದೇಶವು ತನ್ನ ಪ್ರಭಾವವನ್ನು ಮಧ್ಯದೇಶದ ಆಚೆಗೂ ಹೊಂದಿತ್ತು. ಇದು ದಕ್ಷಿಣಪಥ ದ ಉತ್ತರದ ಹೆದ್ದಾರಿಗೆ ಹೊಂದಿಕೊಂಡಿತ್ತು. ಅಸ್ಸಕವು ಒಂದು ಕಾಲದಲ್ಲಿ ಮೂಲಕ ಮತ್ತು ಮುಂದೆ ಅವಂತಿದೇಶವಾದ ಪ್ರದೇಶಗಳನ್ನು ಒಳಗೊಂಡಿತ್ತು.[೧೬]

ಅವಂತಿ[ಬದಲಾಯಿಸಿ]

ಪಶ್ಚಿಮ ಭಾರತದ ಪ್ರಮುಖ ಸಾಮ್ರಾಜ್ಯವಾಗಿದ್ದ ಅವಂತಿ ರಾಷ್ಟ್ರವು ಬೌದ್ಧಧರ್ಮವು ಉದಯವಾದ ಸಂದರ್ಭದಲ್ಲಿದ್ದ ಪ್ರಸಿದ್ಧ ನಾಲ್ಕು ರಾಜಪ್ರಭುತ್ವಗಳಲ್ಲೊಂದು, ಉಳಿದ ಮೂರು ರಾಜಪ್ರಭುತ್ವಗಳೆಂದರೆ ಕೋಸಲ, ವತ್ಸ, ಮತ್ತು ಮಗಧ. ವೇತ್ರಾವತಿ ನದಿಯು ಅವಂತಿಯನ್ನು ಉತ್ತರ ಮತ್ತು ದಕ್ಷಿಣ ಎಂದು ವಿಭಜನೆ ಮಾಡಿತ್ತು. ಆರಂಭದಲ್ಲಿ, ಮಹಿಸ್ಸತಿಯು (ಸಂಸ್ಕೃತದಲ್ಲಿ ಮಾಹಿಷ್ಮತಿ) ದಕ್ಷಿಣ ಅವಂತಿಯ ರಾಜಧಾನಿಯಾಗಿದ್ದು ಉಜ್ಜೈನಿಯು (ಸಂಸ್ಕೃತದಲ್ಲಿ ಉಜ್ಜಯಿನಿ) ಉತ್ತರ ಅವಂತಿಯ ರಾಜಧಾನಿಯಾಗಿತ್ತು. ಆದರೆ, ಮಹಾವೀರ ಮತ್ತು ಬುದ್ಧರ ಕಾಲದಲ್ಲಿ ಉಜ್ಜೈನಿಯೇ ಇಡೀ ಅವಂತಿಯ ರಾಜಧಾನಿಯಾಗಿತ್ತು. ಅವಂತಿ ರಾಷ್ಟ್ರವು ಇಂದಿನ ಮಾಳ್ವ, ನಿಮಾರ್ ಮತ್ತು ಇವುಗಳ ಮಗ್ಗುಲಲ್ಲಿರುವ ಮಧ್ಯಪ್ರದೇಶದ ಭೂಭಾಗಗಳೊಂದಿಗೆ ಅಸ್ಪಷ್ಟ ಹೋಲಿಕೆಯನ್ನು ಹೊಂದಿತ್ತು. ಮಾಹಿಷ್ಮತಿ ಮತ್ತು ಉಜ್ಜೈನಿಗಳೆರಡೂ ಸಹ ದಕ್ಷಿಣಪಥ ಎಂದು ಕರೆಯಲ್ಪಡುವ ದಕ್ಷಿಣಭಾಗದ ಹೆದ್ದಾರಿಯಲ್ಲಿ ಸ್ಥಾಪಿತವಾಗಿದ್ದು ಇದು ರಾಜಗೃಹದಿಂದ ಪ್ರತಿಷ್ಠಾನ (ಇಂದಿನ ಪೈಥಾನ್)ದವರೆಗೆ ವಿಸ್ತರಿಸಲ್ಪಟ್ಟಿತ್ತು. ಅವಂತಿಯು ಬೌದ್ಧಧರ್ಮದ ಪ್ರಧಾನ ಕೇಂದ್ರವೂ ಆಗಿತ್ತು ಮತ್ತು ಕೆಲವು ಪ್ರಮುಖ ನಾಯಕರಾದ ಥೆರಾ ಮತ್ತು ಥೆಯರ್ ಎಂಬವರು ಇಲ್ಲೇ ಹುಟ್ಟಿ ಇಲ್ಲೇ ವಾಸಮಾಡಿದ್ದರು. ಅವಂತಿಯ ರಾಜ ನಂದಿವರ್ಧನನು ಮಗಧ ರಾಜವಂಶದ ರಾಜ ಶಿಶುನಾಗನಿಂದ ಸೋತನು. ನಂತರದಲ್ಲಿ ಅವಂತಿಯು ಮಗಧ ಸಾಮ್ಯಾಜ್ಯದ ಒಂದು ಭಾಗವಾಗಿ ಸೇರಿಕೊಂಡಿತು.

ಗಾಂಧಾರ[ಬದಲಾಯಿಸಿ]

ಗಾಂಧಾರರ ಉಣ್ಣೆಯು ಋಗ್ವೇದದಲ್ಲಿ ಉಲ್ಲೇಖಿಸಲ್ಪಟ್ಟಿದೆ. ಮುಜವಂತರು, ಅಂಗರು ಮತ್ತು ಮಗಧರೊಂದಿಗೆ ಗಾಂಧಾರದವರು ಕೂಡಾ ಅಥರ್ವವೇದದಲ್ಲಿ ಹೆಸರಿಸಲ್ಪಟ್ಟರೂ, ಸ್ಪಷ್ಟವಾಗಿ ಉಪೇಕ್ಷೆಗೊಳಪಟ್ಟ ಜನರಂತೆ ಹೇಳಲ್ಪಟ್ಟಿದ್ದಾರೆ. ಗಾಂಧಾರ ಪ್ರದೇಶಗಳು ಪುರಾಣ ಮತ್ತು ಬೌದ್ಧಧರ್ಮದ ಸಂಪ್ರದಾಯ ವಿಭಾಗಗಳ ಉತ್ತರಪಥದಲ್ಲಿ ಸೇರಿಸಲ್ಪಟ್ಟಿವೆ. ಐತರೇಯ ಬ್ರಾಹ್ಮಣವು ಗಾಂಧಾರದ ರಾಜ ನಾಗನಜಿತ್‌ನ್ನು ವಿದೇಹದ ಜನಕ ಮಹಾರಾಜನ ಸಮಕಾಲೀನನೆಂದು ಉಲ್ಲೇಖಿಸಿತ್ತು. ಡಾ|| ಝಿಮ್ಮರ್ ಪ್ರಕಾರ, ಗಾಂಧಾರರು ವೇದಗಳ ಕಾಲದಿಂದಲೂ ಕುಭಾ (ಕಾಬೋಲ್) ನದಿಯು ತನ್ನನ್ನು ಇಂಡಸ್ ನಾಗರಿಕತೆಗೆ ತೆರೆದುಕೊಳ್ಳುವವರೆಗೆ ಇದರ ದಕ್ಷಣತಟದಲ್ಲಿ ನೆಲೆಸಿದ್ದರು. ನಂತರದಲ್ಲಿ, ಗಾಂಧಾರರು ಇಂಡಸ್ ನದಿಯನ್ನು ದಾಟಿ ಪಂಜಾಬಿನ ವಾಯವ್ಯ ಭಾಗದ ಭೂಪ್ರದೇಶಗಳಿಗೂ ವಿಸ್ತರಿಸಿದರು. ಗಾಂಧಾರರು ಮತ್ತು ಅವರ ರಾಜರು ಮಹಾಭಾರತ ಯುದ್ಧದಲ್ಲಿ ಪಾಂಡವರ ವಿರುದ್ಧ ಕುರುವಂಶದ ಪ್ರಬಲ ಮಿತ್ರರಾಗಿ ನಿಂತಿದ್ದರು. ಗಾಂಧಾರರು ಉಗ್ರರಾಗಿದ್ದು ಯುದ್ಧಕಲೆಯಲ್ಲಿ ಅತ್ಯುತ್ತಮ ಪರಿಣತಿಯನ್ನು ಸಾಧಿಸಿದ್ದರು. ಪೌರಾಣಿಕ ಶಾಸ್ತ್ರಗಳ ಪ್ರಕಾರ, ಗಾಂಧಾರ ಜನಪದವು ಯಯಾತಿಯ ವಂಶಸ್ಥನಾದ ಆರುದ್ಧನ ಮಗ ಗಾಂಧಾರ ಎಂಬವನಿಂದ ಸ್ಥಾಪಿಸಲ್ಪಟ್ಟಿತ್ತು. ಈ ರಾಷ್ಟ್ರದ ರಾಜಕುಮಾರರು ಋಗ್ವೇದದ ಕಾಲದ ದೃಹ್ಯು ಎಂಬ ಸುಪ್ರಸಿದ್ಧ ರಾಜನ ಸಾಲಿನಿಂದ ಬಂದವರೆಂದು ಹೇಳಲ್ಪಟ್ಟಿದ್ದಾರೆ. ಗಾಂಧಾರದ ಭೂಪ್ರದೇಶಗಳಿಗೆಲ್ಲಾ ಇಂಡಸ್ ನದಿಯು ನೀರುಣಿಸುತ್ತಿತ್ತು. ತಕ್ಷಶಿಲಾ ಮತ್ತು ಪುಷ್ಕಲಾವತಿಗಳು ಈ ಮಹಾಜನಪದದ ಎರಡು ನಗರಗಳಾಗಿದ್ದು ಅಯೋಧ್ಯೆಯ ರಾಜಪುತ್ರ ಭರತನ ಇಬ್ಬರು ಮಕ್ಕಳಾದ ತಕ್ಷ ಮತ್ತು ಪುಷ್ಕರಾರ ನಂತರದಲ್ಲಿ ಇವರ ಹೆಸರುಗಳನ್ನೇ ಕ್ರಮವಾಗಿ ಈ ನಗರಗಳು ಪಡೆದಿರಬಹುದೆಂದು ಹೇಳಲಾಗಿದೆ. ವಾಯುಪುರಾಣದ ಪ್ರಕಾರ (II.೩೬.೧೦೭), ಗಾಂಧಾರರು ಕಲಿಯುಗದ ಅಂತ್ಯದಲ್ಲಿ ಪ್ರಮಿತಿ(ಅಕ ಕಾಲಿಕ)ಯಿಂದ ನಿರ್ನಾಮ ಹೊಂದಿದ್ದರು. ಪಾಣಿನಿಯು ತನ್ನ ಅಷ್ಟಾಧ್ಯಾಯಿಯಲ್ಲಿ ವೇದಯುಗದ ಗಾಂಧಾರದ ರೂಪ ಹಾಗೂ ನಂತರದಲ್ಲಿ ಗಾಂಧಾರದ ಸ್ವರೂಪವೆರಡನ್ನೂ ಚೆನ್ನಾಗಿ ಬಿಂಬಿಸಿದ್ದಾನೆ. ಗಾಂಧಾರ ಸಾಮ್ರಾಜ್ಯವನ್ನು ಕೆಲವೊಮ್ಮೆ ಕಾಶ್ಮೀರದೊಂದಿಗೂ ಸೇರಿಸಲ್ಪಟ್ಟಿದೆ.[೧೭] ಮಿಲೇಟಸ್‌ನ ಹೆಕಾಟೀಸ್ (೫೪೯-೪೬೮) ಕಾಸ್ಪಪೈರೋಸ್‌ನ್ನು (ಕಸ್ಯಾಪುರ ಅಂದರೆ, ಕಾಶ್ಮೀರ) ಗಾಂಧಾರ ನಗರವೆಂದು ಉಲ್ಲೇಖಿಸಿದೆ. ಗಾಂಧಾರ ಜಾತಕದ ಪ್ರಕಾರ, ಒಂದೊಮ್ಮೆ ಗಂಧಾರವು ಕಾಶ್ಮೀರ ಸಾಮ್ರಾಜ್ಯದ ಒಂದು ಭಾಗವಾಗಿ ನಿರ್ಮಾಣಗೊಂಡಿತು ಎಂದು ಹೇಳಲಾಗಿದೆ. ಈ ಜಾತಕವು ಗಾಂಧಾರಕ್ಕೆ ಚಂದಹಾರ ಎಂಬ ಇನ್ನೊಂದು ಹೆಸರನ್ನೂ ನೀಡುತ್ತದೆ. ಬೌದ್ಧಧರ್ಮ ಶಾಸ್ತ್ರದ ಗಾಂಧಾರ ಮಹಾಜನಪದವು ಪೂರ್ವ ಅಫ್ಘಾನಿಸ್ತಾನದ ಭೂಭಾಗಗಳನ್ನು ಮತ್ತು ಪಂಜಾಬಿನ ವಾಯವ್ಯ ಭಾಗಗಳನ್ನೂ(ಈಗಿನ ಪೇಶಾವರ ಜಿಲ್ಲೆಗಳು[ಪುರುಷಪುರ] ಮತ್ತು ರಾವಲ್ಪಿಂಡಿ) ಹೊಂದಿದೆ. ತಕ್ಷಶಿಲೆಯು (ಪ್ರಾಕೃತ್ ತಕ್ಷಿಲಾ) ಇದರ ರಾಜಧಾನಿಯಾಗಿತ್ತು. ಜಗತ್ತಿನ ಎಲ್ಲಾ ಭಾಗಗಳ ವಿದ್ವಾಂಸರು ಉನ್ನತ ವ್ಯಾಸಂಗವನ್ನು ಬಯಸಿ ಬರುತ್ತಿದ್ದ ತಕ್ಷಿಲಾ ವಿಶ್ವವಿದ್ಯಾನಿಲಯವು ಪುರಾತನಕಾಲದಲ್ಲಿ ಪ್ರಸಿದ್ಧ ವಿದ್ಯಾಕೇಂದ್ರವೆಂಬ ಖ್ಯಾತಿಪಡೆದಿತ್ತು. ವ್ಯಾಕರಣ ಶಾಸ್ತ್ರದ ಅಧಿದೇವತೆ ಎಂದೇ ಖ್ಯಾತಿವೆತ್ತ ಭಾರತೀಯ ವ್ಯಾಕರಣಶಾಸ್ತ್ರಜ್ಞ ಪಾಣಿನಿ ಮತ್ತು ಕೌಟಿಲ್ಯರಿಬ್ಬರು ತಕ್ಷಿಲಾ ವಿಶ್ವವಿದ್ಯಾನಿಲಯದಲ್ಲಿ ಉದಯಿಸಿದ ಪ್ರತಿಭೆಗಳು. ಕ್ರಿ.ಪೂ. ಆರನೇ ಶತಮಾನದ ಮಧ್ಯಭಾಗದಲ್ಲಿ ರಾಜ ಪುಕ್ಕುಸತಿ ಅಥವಾ ಗಾಂಧಾರದ ಪುಷ್ಕರಸಾರಿನ್ ರಾಜನು ಮಗಧದ ರಾಜ ಬಿಂಬಿಸಾರರ ಸಮಕಾಲೀನನಾಗಿದ್ದನು. ಗಾಂಧಾರವು ಉತ್ತರ ಹೆದ್ದಾರಿಯಲ್ಲಿ ಸ್ಥಾಪಿತವಾಗಿತ್ತು (ಉತ್ತರಪಥ) ಮತ್ತು ಇದು ಅಂತರಾಷ್ಟ್ರೀಯ ವಾಣಿಜ್ಯ ಚಟುವಟಿಕೆಗಳ ಕೇಂದ್ರವೂ ಆಗಿತ್ತು. ಪ್ರಾಚೀನ ಇರಾನ್ ಮತ್ತು ಮಧ್ಯ ಏಷಿಯಾದೊಂದಿಗಿನ ಪ್ರಮುಖ ಸಂಪರ್ಕ ಮಾಧ್ಯಮವಾಹಿನಿಯಾಗಿತ್ತು. ಒಂದು ಚಿಂತನಾಕ್ರಮದ ವಿದ್ವಾಂಸರ ಪ್ರಕಾರ, ಗಾಂಧಾರ ಮತ್ತು ಕಾಂಬೋಜಗಳು ಒಂದೇ ಮೂಲದ ಜನರನ್ನು ಹೊಂದಿದ್ದುವು.[೧೮][೧೯][೨೦] ಕುರುವಂಶಜರು, ಕಾಂಬೋಜರು, ಗಾಂಧಾರರು ಮತ್ತು ಬಾಹ್ಲಿಕಾರು ಒಂದೇ ಮೂಲದ ಜನರು ಮತ್ತು ಇವರೆಲ್ಲರೂ ಇರಾನ್ ಮೂಲದ ಗುಣಸಾದೃಶ್ಯವನ್ನು ಹೊಂದಿದ್ದಾರೆ ಎಂಬ ವಾದ-ಪ್ರತಿವಾದಗಳೂ ಸಹ ಇದೆ.[೨೧] ಡಾ|| ಟಿ.ಎಲ್. ಶಾಃ‌ರ ಪ್ರಕಾರ, ಗಾಂಧಾರ ಮತ್ತು ಕಾಂಬೋಜಗಳು ಒಂದೇ ಸಾಮ್ರಾಜ್ಯದ ಎರಡು ಪ್ರಾಂತ್ಯಗಳು ಮತ್ತು ಇವು ಒಂದೇ ಎಲ್ಲೆಯುಳ್ಳಾದ್ದಾಗಿದ್ದುದರಿಂದ ತಮ್ಮ ಭಾಷೆಗಳ ಮೇಲೆ ಪರಸ್ಪರ ಬೆಂಬಲವನ್ನು ಪಡೆದಿವೆ.[೨೨] ಸ್ವಾಭಾವಿಕವಾಗಿ, ಒಂದೊಮ್ಮೆ ಇವುಗಳು ಒಂದೇ ಮೂಲದ ಜನರನ್ನು ಹೊಂದಿದ್ದುವು.[೨೩][೨೪][೨೫][೨೬] ಪ್ರತೀ ಬಾರಿಯೂ ಗಾಂಧಾರವು ಕಾಶ್ಮೀರ ಮತ್ತು ಕಾಂಬೋಜದ ನೆರೆಯ ಭಾಗಗಳೊಂದಿಗೆ ರಾಜಕೀಯ ಸಂಬಂಧ ಹೊಂದಿತ್ತು.[೨೭]

ಕಾಂಬೋಜ[ಬದಲಾಯಿಸಿ]

ಕಾಂಬೋಜರು ಕೂಡಾ ಉತ್ತರಪಥದಲ್ಲಿ ಒಳಗೊಂಡಿದ್ದಾರೆ. ಪುರಾತನ ಇತಿಹಾಸದಲ್ಲಿ, ಕಾಂಬೋಜವು ಹಲವಾರು ರೀತಿಯಲ್ಲಿ ಗಾಂಧಾರ, ದಾರದ ಹಾಗೂ ಬಹ್ಲಿಕಾಗಳಿಗೆ (ಬಕ್ಟ್ರಿಯಾ) ಸಂಬಂಧಿಸಿದೆ. ಹಿಂದುಕುಶ್ ಪರ್ವತದ ಎರಡೂ ಬದಿಗಳಲ್ಲಿ ಸುತ್ತುವರಿದ ಪ್ರದೇಶಗಳನ್ನು ಪುರಾತನ ಕಾಂಬೋಜ ಹೊಂದಿತ್ತೆಂದು ಹೇಳಲಾಗುತ್ತದೆ. ಮೂಲ ಕಾಂಬೋಜವು ಪೂರ್ವದ ಆಕ್ಸಸ್ ದೇಶದ ನೆರೆಯ ಬಹ್ಲಿಕಾದಲ್ಲಿತ್ತು, ಸಮಯದ ಜೊತೆಗೆ, ಕಾಂಬೋಜರ ಕೆಲವು ವಂಶಗಳು ಹಿಂದುಕುಶ್‌ನವರ ಜೊತೆಗಿನ ಮಿಶ್ರತಳಿ ಜನರು ದಕ್ಷಿಣ ಭಾಗದಲ್ಲಿ ವಾಸಿಸಲು ಪ್ರಾರಂಭಿಸಿದರು. ನಂತರದ ಈ ಕಾಂಬೋಜರು ಭಾರತೀಯ ಇತಿಹಾಸದಲ್ಲಿ ದಾರದ ಹಾಗೂ ಗಾಂಧಾರರಿಗೆ ಸಂಬಂಧಿಸಿದ್ದಾರೆ ಹಾಗೂ ಅಶೋಕನ ರಾಜಶಾಸನಗಳಲ್ಲಿ ಇದು ನಮೂದಿತವಾಗಿದೆ. ಮಹಾಭಾರತದಲ್ಲಿ ಹಾಗೂ ತೋಲಿಮಿಯ ಭೂಗೋಳ ಶಾಸ್ತ್ರದಲ್ಲಿರುವ ಪುರಾವೆಗಳು ವಿವಿಧ ರೀತಿಯಲ್ಲಿ ಕಾಂಬೋಜರ ಎರಡು ನೆಲೆಗಳನ್ನು ಹೇಳುತ್ತವೆ.[೨೮] ಹಿಂದುಕುಶ್ ಪ್ರದೇಶವು ನುರೆಸ್ತಾನ್‌ನಿಂದ ಕಾಶ್ಮೀರದ ನೈಋತ್ಯ ಭಾಗದಲ್ಲಿರುವ ರಾಜಪುರಿವರೆಗೆ ಇದೆ, ಇದರ ನೆರೆಯಲ್ಲಿರುವ ದಾರದರು ಹಾಗೂ ಗಾಂಧಾರರ ಸಂಘಟನೆಯಿಂದ ಕಾಂಬೋಜ ದೇಶವಾಗಿದೆ.[೨೯] ಕಾಂಬೋಜ ದ ರಾಜಧಾನಿಯು ಬಹುಶಃ ಕಾಶ್ಮೀರದ ನೈಋತ್ಯ ಭಾಗದ ರಾಜಪುರ ವಾಗಿದ್ದಿರಬಹುದು (ಆಧುನಿಕ ರಾಜೋರಿ). ಬೌದ್ಧ ಸಂಪ್ರದಾಯದ ಕಾಂಬೋಜ ಮಹಾಜನಪದ ವು ಪುರಾತನ ಕಾಂಬೋಜದ ಹಿಂದುಕುಶ್ ಭಾಗವನ್ನು ಉಲ್ಲೇಖಿಸುತ್ತದೆ.[೩೦]

ಪಾಮಿರ್ ಹಾಗೂ ಬದಕ್ಷನ್ ಅನ್ನು ಒಳಗೊಂಡ ಹಿಂದುಕುಷ್-ಆಚೆ ಕಡೆ ಪ್ರದೇಶ ಪಶ್ಚಿಮದಲ್ಲಿ ಬಹ್ಲಿಕಾಸ್ (ಬಕ್ಟ್ರಿಯ), ಉತ್ತರದಲ್ಲಿ ಲೊಹಾಸ್ ಹಾಗೂ ಸೊಗ್ಡಿಯನ ಫರ್ಗನದ ರಿಶಿಕಾಸ್‌ಗಳಿಂದ ಸುತ್ತುವರೆದಿದ್ದು, ಪರಮ-ಕಾಂಬೋಜ ದೇಶವಾಗಿ ನಿಯೋಜಿತವಾಗಿತ್ತು.[೩೧] ಕಾಂಬೋಜದ ಹಿಂದುಕುಷ್ ಆಚೆ ಕಡೆ ಘಟಕ ಶುದ್ಧ ಇರಾನಿಯಾಗಿ ಉಳಿಯಿತು, ಆದರೆ ಸಿಸ್-ಹಿಂದುಕುಷ್‌ ಕಾಂಬೋಜದ ಒಂದು ದೊಡ್ಡ ವಿಭಾಗ ಭಾರತದ ಸಾಂಸ್ಕೃತಿಕ ಪ್ರಭಾವದ ಅಡಿಯಲ್ಲಿ ಬಂದ ಹಾಗೆ ತೋರುತ್ತದೆ. ಕಾಂಬೋಜರು ಇರಾನಿ ಹಾಗೂ ಭಾರತೀಯ ಎರಡರ ಆಕರ್ಷಣೆಯನ್ನು ಹೊಂದಿರುವುದಾಗಿ ತಿಳಿದಿದೆ.[೩೨][೩೩][೩೪][೩೫][೩೬][೩೭][೩೮][೩೯][೪೦][೪೧][೪೨]

ಮಹಾಕಾವ್ಯದ ಸಮಯದಿಂದ ಕಾಂಬೋಜರು ಪ್ರಚಲಿತ ಗಣರಾಜ್ಯತ್ವದ ಜನರು. ಮಹಾಭಾರತ ಕಾಂಬೋಜರ ಹಲವು ಗಣಗಳನ್ನು (ಅಥವಾ ಪ್ರಜಾಧಿಪತ್ಯಗಳ) ಉಲ್ಲೇಖಿಸುತ್ತದೆ.[೪೩] ಕಾಂಬೋಜರು ಗಣರಾಜ್ಯತ್ವವನ್ನು ಅನುಸರಿಸುತ್ತಿದ್ದರು ಎಂದು ಕೌಟಿಲ್ಯರ ಅರ್ಥಶಾಸ್ತ್ರ[೪೪] ಹಾಗೂ ಅಶೋಕರ ರಾಜಾಜ್ಞೆ ಸಂಖ್ಯೆ. XIII ಕೂಡ ರುಜುಪಡಿಸಿದೆ. ಪಾಣಿನಿಯ ಸೂತ್ರಗಳು,[೪೫] ಇವು ಕಾಂಬೋಜರು ಕ್ಷತ್ರಿಯ ರಾಜಪ್ರಭುತ್ವದವರು ಎಂದು ತಿಳಿಸಲು ಪ್ರಯತ್ನಿಸಿದರು ಸಹ, ಕಾಂಬೋಜದ ರಾಜನನ್ನು ದರ್ಶಿಸಲು ಅವರು ನೀಡುವ "ವಿಶೇಷ ನಿಯಮ ಹಾಗೂ ನಿಷ್ಪನ್ನದ ವಿಶಿಷ್ಟವಾದ ಸ್ವರೂಪ", ಕಾಂಬೋಜದ ರಾಜ ಒಬ್ಬ ನಾಮಮಾತ್ರದ ಮುಖ್ಯಸ್ಥನಾಗಿದ್ದ ಎಂದು ವ್ಯಕ್ತಗೊಳಿಸುತ್ತದೆ (ರಾಜ ರಾಯಭಾರಿ ).[೪೬] ಬೌದ್ಧ ಸಿದ್ಧಾಂತದ ಪಠ್ಯಗಳ ಅನುಸಾರ, ಮೇಲಿನ ಮಹಾಜನಪದಗಳ ಮೊದಲ ಹದಿನಾಲ್ಕು ಮಝಿಮದೆಸಕ್ಕೆ (ಮಧ್ಯ ಭಾರತ ) ಹಾಗೂ ಕೊನೆಯ ಎರಡು ಉತ್ತರಪಥ ಅಥವಾ ಜಂಬುದ್ವಿಪದ ಉತ್ತರ-ಪಶ್ಚಿಮ ವಿಭಾಗಕ್ಕೆ ಸೇರಿದ್ದವರಾಗಿದ್ದರು.

ಕ್ರಿ.ಪೂ. ಆರನೇಯ/ಐದನೇಯ ಶತಮಾನದಲ್ಲಿ ಅನುಕರಣೆಗೊಂಡ ಸರ್ವಶ್ರೇಷ್ಠತೆಯ ಹೋರಾಟದಲ್ಲಿ, ಪುರಾತನ ಭಾರತದಲ್ಲಿ ಮಝಿಮದೇಸದ ಹಲವು ಜನಪದಗಳನ್ನು ವಶಪಡಿಸಿಕೊಂಡು, ಮಗಧದ ಬೆಳೆಯುತ್ತಿದ್ದ ರಾಜ್ಯ ಅತಿ ಪ್ರಮುಖ ಶಕ್ತಿಯಾಗಿ ಉದ್ಭವವಾಯಿತು. ಮಘದದ ಸಾರ್ವಭೌಮ ಮಹಾಪದ್ಮನಂದ ಎಲ್ಲ ಕ್ಷತ್ರಿಯರನ್ನು ನಿರ್ನಾಮಮಾಡಿದ ಎಂದು ಬ್ರಾಹ್ಮಣ ಪುರಾಣದ ಒಂದು ಕಹಿ ವಾಕ್ಯದಲ್ಲಿ ಗೋಳಾಡಲಾಗಿದೆ, ಅದಾದ ಮೇಲೆ ಕ್ಷತ್ರಿಯ ಎಂಬ ಹೆಸರಿನಿಂದ ಕರೆದುಕೊಳ್ಳಲು ಯಾರೂ ಯೋಗ್ಯರಿರಲಿಲ್ಲ. ಕಾಶಿ, ಕೋಸಲ, ಕುರು, ಪಾಂಚಾಲ, ವತ್ಸ್ಯ ಹಾಗೂ ಪೂರ್ವ ಪಂಜಾಬ್‌ನ ಇತರ ವೇದಿಕವಲ್ಲದ ಜನಾಂಗಗಳನ್ನು ಇದು ಪ್ರಕಟಿಸುತ್ತದೆ, ಇವರುಗಳ ಬಗ್ಗೆ ಪುರಾಣ ಕಥೆ ಹಾಗೂ ಕಾವ್ಯಗಳಲ್ಲಿ ಹೊರೆತು ಪಡಿಸಿದರೆ ಎಲ್ಲೂ ಏನೂ ಕೇಳಲು ದೊರಕಿಲ್ಲ.

ಹೇಗಿದ್ದರೂ, ಚಂದ್ರಗುಪ್ತ ಹಾಗೂ ಕೌಟಿಲ್ಯರು ದೃಶ್ಯದಲ್ಲಿ ಏಳುವವರೆಗೂ ಕಾಂಬೋಜರು ಹಾಗೂ ಗಾಂಧಾರರು, ಮಗಧ ರಾಜ್ಯದ ನೇರ ಸಂಪರ್ಕಕ್ಕೆ ಬಂದಿರಲಿಲ್ಲ. ಆದರೆ, ಸೈರಸ್‌ನ (೫೫೮-೫೩೦ BCE) ಆಳ್ವಿಕೆಯ ಸಮಯದಲ್ಲಿ ಅಥವಾ ಡೆರಿಯಸ್‌ನ ಮೊದಲ ವರ್ಷದಲ್ಲಿ, ಪರ್ಷಿಯಾದ ಅಕೀಮಿನಿಡ್‌ಗೆ ಈ ದೇಶಗಳು ಕೂಡ ಬಲಿಯಾದವು. ಅಕೀಮಿನಿಡ್ ಸಾಮ್ರಾಜ್ಯದ ಇಪ್ಪತ್ತನೇಯ ಹಾಗೂ ಶ್ರೀಮಂತ ಸ್ಟ್ರಾಪಿಯಾಗಿ ಕಾಂಬೋಜ ಹಾಗೂ ಗಂಧರ್ವ ರೂಪಗೊಂಡಿತು. ಪ್ಯಾರೊಪಮಿಸೆಡ್‌ನಲ್ಲಿನ ಕಪಿಸಿ (ಆಧುನಿಕ ಬೆಗ್ರಾಂ) ಎಂದು ಕರೆಯಲಾದ ಪ್ರಸಿದ್ಧ ಕಾಂಬೋಜ ನಗರವನ್ನು ಸೈರಸ್ I ನಾಶಪಡಿಸಿದ ಎಂದು ಹೇಳಲಾಗಿದೆ.

ಇವನ್ನೂ ಗಮನಿಸಿ‌[ಬದಲಾಯಿಸಿ]

  • ಐರನ್ ಏಜ್ ಇಂಡಿಯಾ
  • ಕಿಂಗ್ಡಮ್ಸ್ ಆಫ್ ಎನಿಸಿಯಂಟ್ ಇಂಡಿಯಾ

ಉಲ್ಲೇಖಗಳು‌[ಬದಲಾಯಿಸಿ]

  1. ಅಂಗುತ್ತರಾ ನಿಕಯಾ I. p ೨೧೩; IV. pp ೨೫೨, ೨೫೬, ೨೬೧.
  2. Singh, Upinder (2008). A History of Ancient and Early Medieval India: From the Stone Age to the 12th Century. Delhi: Pearson Education. pp. 260–4. ISBN 81-317-1120-0. {{cite book}}: Check |isbn= value: checksum (help)
  3. http://www.iloveindia.com/history/ancient-india/16-mahajanapadas.html
  4. ಇಂಡಿಯಾ ಆಸ್ ನೊನ್ ಟು ಪಿನಿನಿ: ಎ ಸ್ಟಡಿ ಆಫ್ ದಿ ಕಲ್ಚರಲ್ ಮಟಿರಿಯಲ್ ಇನ್ ದಿ ಅಷ್ಟಾಧ್ಯಾಯಿ, ೧೯೬೩, p ೪೨೭, ವಾಸುದೇವ ಶರನಾ ಅಗ್ರವಾಲ- ಇಂಡಿಯಾ; ಇಂಡಿಯಾ ಇನ್ ದಿ ಟೈಮ್ ಆಫ್ ಪತಂಜಲಿ, ೧೯೬೮, p ೬೮, ಡಾ.ಬಿ. ಎನ್. ಪುರಿ- ಇಂಡಿಯಾ; ಸೊಸಿಯೊ-ಎಕಾನಾಮಿಕ್ ಪೊಲಿಟಿಕಲ್ ಹಿಸ್ಟ್ರಿ ಆಫ್ ಈಸ್ಟರ್ನ್ ಇಂಡಿಯಾ, ೧೯೭೭, p ೯, ವೈ. ಕೆ ಮಿಶ್ರಾ- ಬಿಹಾರ್ (ಇಂಡಿಯಾ); ಟ್ರೈಬ್ಸ್ ಆಫ್ ಎನಿಸ್ಯಿಂಟ್ ಇಂಡಿಯಾ, ೧೯೭೭, p ೧೮, ಮಮತಾ ಚೌಧರಿ-ಎಥಿನಾಲಜಿ; ಟ್ರೈಬಲ್ ಕಾಯಿನ್ಸ್ ಆಫ್ ಎನಿಸಿಯಂಟ್ ಇಂಡಿಯಾ, ೨೦೦೭, p xxiv, ದೆವೆಂದ್ರಾ ಹಂಡಾ- ಕೊಯಿನ್ಸ್, ಇಂಡಿಕ್-೨೦೦೭; ದಿ ಜರ್ನಲ್ ಆಫ್ ದಿ ನ್ಯ್ಮ್ಸಿಟಿಕ್ ಸೊಸೈಟಿ ಆಫ್ ಇಂಡಿಯಾ,೧೯೭೨, p ೨೨೧, ನುಮಿಸ್ಮಾಟಿಕ್ ಸೊಸೈಟಿ ಆಫ್ ಇಂಡಿಯಾ - ನುಮಿಸ್ಟಿಕ್.
  5. ಎ ಹಿಸ್ಟ್ರಿ ಆಫ್ ಪಾಲಿ ಲಿಟರೇಚರ್, ೨೦೦೦ ಎಡಿಶನ್ಜ್, p ೬೪೮ ಬಿ. ಸಿ. ಲಾ & ಸಮ್ ಕಸ್ತುರಿಯಾ ಟ್ರೈಬ್ಸ್ ಆಫ್ ಎನ್ಸಿಇಯಂಟ್ ಇಂಡಿಯಾ, ೧೯೨೪, pp ೨೩೦-೨೫೩, ಡಾ.ಬಿ. ಸಿ. ಲಾ.
  6. ಅಂಗುತ್ತಾರಾ ನಿಕಯಾ: Vol I, p ೨೧೩, Vol IV, pp ೨೫೨, ೨೫೬, ೨೬೦ etc.
  7. ದಿಘಾ ನಿಕಯಾ, Vol II, p ೨೦೦.
  8. ಚುಲ್ಲಾ-ನಿದ್ದೆಸಾ(P.T.S.), p ೩೭.
  9. ಲಾರ್ಡ್ ಮಹಾವೀರ್ ಅಂಡ್ ಹೀಸ್ ಟೈಮ್ಸ್, ೧೯೭೪, p ೧೯೭, ಡಾ.ಕೈಲಾಶ್ ಚಂದ್ ಜೈನ್; ದಿ ಹಿಸ್ಟರಿ ಅಂಡ್ ಕಲ್ಚರ್ ಆಫ್ ದಿ ಇಂಡಿಯನ್ ಪೀಪಲ್, ೧೯೬೮, p lxv, ಡಾ.ರಮೇಶ್ ಚಂದ್ರ ಮಜುಮ್ದಾರ್, ಭಾರತೀಯ ವಿದ್ಯಾ ಭವನ, ಭಾರತೀಯ್ ಇತಿಹಾಸ್ ಸಮಿತಿ; ಪ್ರಾಬ್ಲೆಮ್ಸ್ ಆಫ್ ಎನಿಸಿಯಂಟ್ ಇಂಡಿಯಾ, ೨೦೦೦, p ೭, ಕೆ. ಡಿ. ಸೆಥನಾ.
  10. ಪಾಲಿಟಿಕಲ್ ಹಿಸ್ಟ್ರಿ ಆಫ್ ಎನಿಸಿಯಂಟ್ ಇಂಡಿಯಾ, ೧೯೯೬, p ೮೬; ಹಿಸ್ಟ್ರಿ& ಕಲ್ಚರ್ ಆಫ್ ಇಂಡಿಯಾ ಪೀಪಲ್, ಏಜ್ ಆಫ್ ಇಂಪಿರಿಯಲ್ ಯುನಿಟಿ, p ೧೫-೧೬
  11. ದಿಘಾ ನಿಕಯಾ
  12. ಕಲ್ಪಾ ಸೂತ್ರ; ನಿರಯಾವಲಿ ಸೂತ್ರ
  13. http://books.google.co.in/books?id=VfKA9FGPTQoC&pg=PA530&lpg=PA530&dq=bisen+rajput&source=bl&ots=1QgrwKQfXw&sig=9xTkpMOhkl_Qw2mxgj400seXhRE&hl=en&ei=rNZaS5LfC4S26APQ_vDpDw&sa=X&oi=book_result&ct=result&resnum=4&ved=0CBMQ6AEwAw#v=onepage&q=bisen%20rajput&f=false
  14. http://books.google.co.in/books?id=7iOsNUZ2MXgC&pg=PA547&dq=hardeo+sen&cd=1#v=onepage&q=hardeo%20sen&f=false
  15. II. p ೪೮೧
  16. ಡಾ.ಭಂಡಾರಕರ್
  17. ಜಾತಕ ನಂ ೪೦೬.
  18. Revue des etudes grecques ೧೯೭೩, p ೧೩೧, Ch-Em Ruelle, Association pour l'encouragement des etudes grecques en France.
  19. ಅರ್ಲಿ ಇಂಡಿಯನ್ ಎಕಾನಾಮಿಕ್ ಹಿಸ್ಟ್ರಿ, ೧೯೭೩, pp ೨೩೭, ೩೨೪, ರಾಜಾರಾಮ್ ನಾರಾಯಣ ಸೆಲೆಟೊರ್.
  20. ಮಿಥ್ಸ್ ಆಫ್ ದಿ ಡಾಗ್-ಮ್ಯಾನ್, ೧೯೯, p ೧೧೯, ಡೇವಿಡ್ ಗಾರ್ಡನ್ ವ್ಹೈಟ್; ಜರ್ನಲ್ ಆಫ್ ದಿ ಒರಿಯಂಟಲ್ ಇನ್‌ಸ್ಟಿಟ್ಯೂಟ್, ೧೯೧೯, p ೨೦೦; ಜರ್ನಲ್ ಆಫ್ ಇಂಡಿಯನ್ ಮ್ಯುಜಿಯಮ್, ೧೯೭೩, ಪು ೨, ಮ್ಯುಜಿಯಮ್ ಅಸೊಶಿಯೇಶನ್ ಆಫ್ ಇಂಡಿಯಾ; ದಿ ಪಾರಾಡಾಸ್: ಎ ಸ್ಟಡಿ ಇನ್ ದೇರ್ ಕೊಯ್ನೇಜ್ ಅಂಡ್ ಹಿಸ್ಟ್ರಿ, ೧೯೭೨, p ೫೨, ಡಾ.ಬಿ. ಎನ್. ಮುಖರ್ಜಿ- ಪರಡಾಸ್; ಜರ್ನಲ್ ಆಫ್ ದಿ ಡಿಪಾರ್ಟ್‌ಮೆಂಟ್ ಆಫ್ ಸಂಸ್ಕೃತ್, ೧೯೮೯, p ೫೦, ರಬೀಂದ್ರ್ ಭಾರತಿ ಯುನಿವರ್ಸಿಟಿ, ಡಿಪ್. ಆಫ್ ಸಂಸ್ಕೃತಿ- ಲಿಟರೇಚರ್; ದಿ ಜರ್ನಲ್ ಆಫ್ ಅಕಾಡೆಮಿ ಆಫ್ ಇಂಡಿಯನ್ ನ್ಯೂಮಿಸ್‌ಮ್ಯಾಟಿಕ್ಸ್‌ & ಸಿಗ್ಲೊಗ್ರಾಫಿ, ೧೯೮೮, p ೫೮, ಆಕಾಡೆಮಿ ಆಫ್ ಇಂಡಿಯನ್ ನ್ಯೂಮಿಸ್‌ಮ್ಯಾಟಿಕ್ಸ್‌ ಅಂಡ್ ; Cf: ರಿವರ್ಸ್ ಆಫ್ ಲೈಫ್: ಆರ್ ಸೌರ್ಸಸ್ ಅಂಡ್ ಸ್ಟ್ರೀಮ್ಸ್ ಆಫ್ ಫೇಥ್ಸ್ ಆಫ್ ಮ್ಯಾನ್ ಇನ್ ಆಲ್ ಲ್ಯಾಂಡ್ಸ್, ೨೦೦೨, p ೧೧೪, ಜೆ. ಜಿ. ಆರ್. ಫ್ರೊಲಾಂಗ್.
  21. ಜರ್ನಲ್ ಆಫ್ ದಿ ಒರಿಯಂಟಲ್ ಇನ್ಸ್‌ಟಿಟ್ಯೂಟ್‌, ೧೯೧೯, p ೨೬೫, ಒರಿಯಂಟಲ್ ಇನ್ಸ್‌ಟಿಟ್ಯೂಟ್‌ (ವಡೊದರಾ, ಇಂಡಿಯಾ) - ಒರಿಯಂಟಲ್ ಸ್ಟಡೀಸ್; ಫಾರ್ ಕುರು-ಕಾಂಬೊಜ್ ಕನೆಕ್ಷನ್ಸ್, ನೋಡಿ ಡಾ.ಚಕ್ರಬರ್ತಿ ವಿವ್ಜ್ ಇನ್: ಲಿಟರರಿ ಹಿಸ್ಟರಿ ಆಫ್ ಎನಿಸ್ಯಂಟ್ ಇಂಡಿಯಾ ಇನ್ರ್ ಇಲೇಶನ್ ಟು ಇಟ್ಸ್ ರೇಕಿಯಲ್ ಅಂಡ್ ಲಿಂಗ್ಯುಸ್ಟಿಕ್ ಅಫ್ಲಿಯೇಶನ್ಸ್, pp ೧೪,೩೭, ವೆದಾಸ್; ದಿ ರೇಸಿಯಲ್ ಹಿಸ್ಟ್ರಿ ಆಫ್ ಇಂಡಿಯಾ, ೧೯೪೪, p ೧೫೩, ಚಂದ್ರ ಚಕ್ರಬರ್ತಿ - ಎಥ್ನಾಲಜಿ; ಪ್ಯಾರಾಡೈಸ್ ಆಫ್ ಗಾಡ್ಸ್, ೧೯೬೬, p ೩೩೦, ಕ್ವಾಮರ್ಸ್ ಡಿನ್ ಅಹ್ಮೆದ್- ಪಾಕಿಸ್ತಾನ್.
  22. ಎನಿಸಿಯಂಟ್ ಇಂಡಿಯಾ, ಹಿಸ್ಟ್ರಿ ಆಫ್ ಇಂಡಿಯಾ ಫಾರ್ ೧೦೦೦ ಇಯರ್ಸ್, ಫೋರ್ ವಾಲುಮ್ಸ್, Vol I, ೧೯೩೮, ಪು ೩೮, ೯೮ ಡಾ.ಟಿ. ಎಲ್. ಶಾಹ್.
  23. ಇಂಪಾರ್ಟಂಟ್ ನೋಟ್: ದಿ ಎನಿಸಿಯಂಟ್ ಬುದ್ಧಿಸ್ಟ್ ಟೆಕ್ಸ್ಟ್ ಅಂಗುತ್ತಾರಾ ನಿಕಯಾಸ್ ಲಿಸ್ಟ್ ಮಹಾಜನಪಾದ್ಸ್ ಇನ್‌ಕ್ಲೂಡ್ಸ್‌ ದಿ ಗಾಂಧಾರ ಅಂಡ್ ದಿ ಒನ್ಲಿ ಟು ಸೇಲಿಯಂಟ್ ಮಹಾಜನಪದಾಸ್ ಇನ್ ಉತ್ತರಪಥ. ಹೇಗೆಯಾದರೂ, ಈ ಚುಲ್ಲಾ-ನಿದ್ದೆಸಾ ಪಟ್ಟಿ(೫ನೇ ಶತಮಾನ BCE), ಇದು ಬೌದ್ಧರ ಅವರ ಪುರಾತನ ವಿಮರ್ಶೆಗಳು ಮತ್ತು ಅತ್ಯಂತ ಹಳೆಯ ಕಾಲದ ವಿಶ್ಲೇಶಣೆಗಳಿವೆ ಇದರಲ್ಲಿ ಕಾಂಬೊಜ್ ಮತ್ತು ಅಂಡ್ ಯೊನಾ ಆದರೆ ಗಾಂಧಾರ್ ಮಾತ್ರ ಕಾಣದು. (ನೋಡಿ: ಚುಲ್ಲಾ-ನಿದ್ದೆಸಾ, (P.T.S.), p.೩೭). ಇದು ಚುಲ್ಲಾ-ನಿದ್ದೆಸಾ ಕಮೆಂಟರಿ ಬರೆದನಂತರ ಕಾಂಬೊಜ್ ನಲ್ಲಿ ಉತ್ತರಪಥಗಳು ಮೂಲವಾಗಿವೆ.ಆಗಿನ ಪ್ರಮುಖ ವ್ಯಕ್ತಿಗಳು ಮತ್ತು ಗಾಂಧಾರದ ವ್ಯಕ್ತಿಗಳು ಎಲ್ಲಾ ಕಾಲದಲ್ಲೂ ದೊರಕಿದ್ದಾನೆ.ಇದೇ ಕಾಲದಲ್ಲಿ ಅವರು ಮಹಾಜನಪದಾಸ್ ನ ಭಾಗವಾಗಿದ್ದಾರೆ.ಇದು ಎಲ್ಲಾ ಜನರನ್ನು ಒಂದಾಗುವಂತೆ ಮಾಡಿದೆ. ಕೌಟಿಲ್ಯನ ಅರ್ಥಶಾಸ್ತ್ರ (೧೧.೧.೧-೪) (೪th c. BCE) ಇದು ಕೇವಲ ಕುರು ವಂಶಜರ ಪರಂಪರೆ ಉಲ್ಲೇಖಿಸುತ್ತದೆ.ಪಾಂಚಾಲರು, ಮದ್ರಕಾಸ್, ಕಾಂಬೊಜ್ ರು ಇತ್ಯಾದಿ.ಆದರೆ ಗಾಂಧಾರರು ಕಾಂಬೊಜ್ ನಿಂದ ಪ್ರತ್ಯೇಕವಾಗಿರಲಿಲ್ಲ. ವಿಶಾಖದತ್ತನ ನಾಟಕ ಮುದ್ರಾರಾಕ್ಷಸ ಕೂಡಾ ಸಕಾಸ್,ಕಾಂಬೊಜರಿಗೆ,ಯಾವನರಿಗೆ,ಪಹಲ್ವಾಗಳಿಗೆ,ಬಹ್ಲಿಕಾಗಳಿಗೆ ಮತ್ತು ಕಿರಾತಸರಿಗೆ ಉಲ್ಲೇಖಿತವಾಗಿದೆ.ಅಲ್ಲದೇ ಚಂದ್ರಗುಪ್ತ ರ ಸೈನಿಕರ ಪಟ್ಟಿಯಲ್ಲಿ ಗಾಂಧಾರರ ಉಲ್ಲೇಖವಿಲ್ಲ. ಅತ್ಯಂತ ಜನಪ್ರಿಯ ಪುರಾಣದ ಕತೆ(ಅದನ್ನು ಹಲವು ಪುರಾಣಗಳಲ್ಲಿ ತಿಳಿಸಲಾಗಿದೆ)ರಾಜ ಸಾಗರಾಸ್ ಯುದ್ದಗಳಲ್ಲಿ ದಾಳಿ ಮಾಡಿದ ಗುಡ್ಡಗಾಡು ಜನಾಂಗಗಳ ಬಗ್ಗೆ ಉಲ್ಲೇಖವಿದೆ.ವಾಯುವ್ಯ ಭಾಗದ ಗುಡ್ಡಗಾಡು ಭಾಗದ ಕಾಂಬೊಜ್ ಗಳು,ಸಕಸ್ ಗಳು,ಯವನಾಗಳು,ಪಹ್ಲನಾವಾಗಳು ಮತ್ತು ಪರದಾಸ್ ಇದ್ದರಾದರೂ ಗಾಂಧಾರರ ಉಲ್ಲಿಖವಿರಲಿಲ್ಲ.ಗಾಂಧಾರರು ಹೈಯಾಸ್ ಸೈನ್ಯ ಗಳ ಬಗೆಗೂ ಮಾಹಿತಿ ಇಲ್ಲ.(ಹರಿವಂಶ ೧೪.೧-೧೯; ಉದಾ; ವಾಯು ಪುರಾನಾ ೮೮.೧೨೭-೪೩; ಬ್ರಹ್ಮ ಪುರಾನಾ(೮.೩೫-೫೧); ಬ್ರಹಂದ್ ಪುರಾನಾ (೩.೬೩.೧೨೩-೧೪೧); ಶಿವ ಪುರಾನಾ (೭.೬೧.೨೩); ವಿಷ್ಣು ಪುರಾನಾ(೫.೩.೧೫-೨೧), ಪದ್ಮ ಪುರಾಣ(೬.೨೧.೧೬-೩೩)ಇತ್ಯಾದಿ). ಮತ್ತೆ, the ವಾಲ್ಮೀಕಿ ರಾಮಾಯಣ--(ನಂತರದ ಪಟ್ಟಿ) ಇದರಲ್ಲಿ ಜನಪದಗಳಾದ ಆಂಧ್ರಾಸ್,ಪಂಡ್ರಾಸ್,ಚೋಳರು,ಪಾಂಡ್ಯನ್ ರು,ಕೇರಳಿಯನ್ನರು,ಮೆಖಾಲರು,ಉತ್ಕಲರು,ದಾಶರಾನರು,ಅಬ್ರವಂತಿಗಳು,ಅದ್ವಂತಿಗಳು,ವಿಧರ್ಭರು,ಮ್ಲೇಚ್ಛರು,ಪುಲಿಂದರು,ಸುರಸೇನರು,ಪ್ರಸ್ತಳರು,ಭಾರತಾರಗಳು,ಕುರುವಾಸ್,ಮದ್ರಕಾಗಳು,ಕಾಂಬೊಜರು,ದರದಾಗಳು,ಯವನರು,ಕಾಂಬೊಜ್ ನ ಸಕರು,ದ್ರದಾರಗಳು,(ಸಕಾ ದ್ವಿಪಾದಿಂದ)ಋಷಿಕರು,ಟುಕ್ನಾರಗಳು,ಚಿನಾಗಳು,ಮಹಾಚಿನಾಗಳು,ಕಿರಟಾಗಳು,ಬಾರ್ಬರಾಗಳು,ತಂಗಾನಾಗಳು,ನಿಹಾರಾಗಳು ಮತ್ತು ಪುಸ್ಪಾಲರು ಇತ್ಯಾದಿ(ರಾಮಾಯಣ ೪.೪೩) ಇದೇ ಸಂದರ್ಭದಲ್ಲಿ ರಾಮಾಯಣದ ಇನ್ನೊಂದು ಜಾಗೆ ಇದೆ.(I.೫೪.೧೭; I.೫೫.೨ seq),ಈಶಾನ್ಯ ಭಾಗದ ಸಕಾಸ್,ಕಾಂಬೊಜರು,ಯವನರು,ಫ್ಲವರು,ಕಿರಿಟರು,ಹರಿತಾಸ್ /ತುಖರರು,ಆರಬರರಾಗಳು ಮತ್ತು ಮ್ಲೇಚ್ಚಾದ ಇತ್ಯಾದಿ ಪಂಗಡದ ಗುಡ್ಡಜನಾಂಗದವರು ಕನೋಜಾದ ಆರ್ಯ ರಾಜ ವಿಶ್ವಾಮಿತ್ರನೊಂದಿಗೆ ಕಾಮಧೇನು ಯುದ್ಧದಲ್ಲಿ ವಸಿಷ್ಟ ಋಷಿಯ ಸೇನೆಯಲ್ಲಿ ಸೇರಿದ್ದರು. ಎರಡೂ ಉಲ್ಲೇಖಗಳ ರಾಮಾಯಣಗಳಲ್ಲಿ ಕಾಂಬೊಜ್ ಗಳನ್ನು ವಾಯವ್ಯ ಮುಂಚೂಣಿಯ ಸೇನೆಯ ಪಟ್ಟಿಯಲ್ಲಿ ಅನುಮಾನಸ್ಪಾದವಾಗಿ ಸೂಚಿಸಲಾಗಿದೆ.ಆದರೆ ಗಾಂಧಾರಗಳು ಮತ್ತು ದರದಾಸ್ ಗಳ ಉಲ್ಲೇಖವಿಲ್ಲ. ಯಾಸ್ಕನು ತನ್ನ ನಿರುಕ್ತಾ (II.೨)ದಲ್ಲಿ ಕಾಂಬೊಜರನ್ನು ಉಲ್ಲೇಖಿಸಲಾಗಿದೆ.ಆದರೆ ಗಾಂಧಾರರ ಉಲ್ಲೇಖವಿಲ್ಲ. ಹಲವು ಅಸಾಂಪ್ರದಾಯಿಕವಲ್ಲದ ಕೆಲವು ಕೃತ್ಯಗಳ ಬಗ್ಗೆ ಉಲ್ಲೇಖವಿದೆ,(ಇದರಲ್ಲಿ ಆರ್ಯನ್ ರಾಜ ವಿಕ್ರಮಾದಿತ್ಯನ್ ವಿರೋಧವಿದೆ) ಕ್ಷೇಮೆಂದ್ರ ಬ್ರಹತ್ ಕಥಾ (೧೦.೧.೨೮೫-೮೬)ಮತ್ತು ಸೋಮದೇವನ ಕಥಾಸರಿತ್ಸಾಗರ(೧೮.೧.೭೬-೭೮)ಇದರಲ್ಲಿ ಸಕಗಳು,ಮ್ಲೇಚ್ಛರು,ಕಾಂಬೊಜಗಳು,ಯವನಾ,ನೀಚಾರುಗಳು,ಹುನಾಗಳು,ತುಷಾರರು,ಪರಸಿಕರು ಇತ್ಯಾದಿ ಇದ್ದರೂ ಗಾಂಧಾರರ ಉಲ್ಲೇಖವಿಲ್ಲ. ಮಹಾಭಾರತದ ವಾನ ಪರ್ವ ಹೇಳುವಂತೆ the ಅಂಧಾಗಳು, ಪುಲಿಂಡರು, ಸಕರು, ಕಾಂಬೊಜರು, ಯವನರು, ವಾಲ್ಹಿಕಾಗಳು, ಅರುಣಿಕಾರು ಮತ್ತು ಅಭಿರಾ ಇತ್ಯಾದಿಗಳು ಅವರು ಕಲಿಯುಗದಲ್ಲಿ ಆಡಳಿತಗಾರರಾಗಿದ್ದರು.ಇವರೇ ಭೂಮಿ ಆಳುವವರಾಗಿದ್ದಾರೆ.(ಇಂಡಿಯಾ) ಅಸಾಂಪ್ರದಾಯಗಳ(MBH ೩.೧೮೭.೨೮-೩೦). ಇವರನ್ನು ಕಾಂಬೊಜರಲ್ಲಿ ಸೇರಿಸಿದ್ದರಿಂದ ಗಾಂಧಾರರ ಉಲ್ಲೇಖವಿಲ್ಲ. ಮಹಾಭಾರತದ ಸಭಾ ಪರ್ವದಲ್ಲಿ ಪಾಂಡವ ರಾಜ ಯುಧಿಷ್ಟರ ನ ರಾಜಾಸೂಯಾ ಸಂದರ್ಭದಲ್ಲಿ ಅಸಂಖ್ಯಾತ ರಾಜರು ತಮ್ಮ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.ಅದರಲ್ಲಿ ಮುಖ್ಯವಾಗಿ ಕಾಂಬೊಜರು,ವೈರಮರು,ಪರದರು,ಪುಲಿಂದಾಗಳು,ತುಂಗರು,ಕಿರಿಟರು,ಪ್ರಗ್ಯಜ್ಯೋತಿಷ್ಯಯವನರು,ಆಶುಮಿಕಾಗಳು,ನಿಶಾದರು,ರೊಮಿಕಮರು ವೃಷ್ಣಿಗಳು,ಹರಹುನರು,ಚಿನಾರು,ಸಕರು,ಶೂದ್ರರು,ಅಭಿರರು,ನಿಪಾಸ್ ರು ವಲ್ಹಿಕರು,ತುಖುರರು,ಕನಕರು ಇತ್ಯಾದಿ.ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.(ಮಹಾಭಾರತ೨.೫೦-೧.seqq)) ಈ ಪಟ್ಟಿಗಳು ಗಾಂಧಾರರನ್ನು ಒಳಗೊಂಡಿಲ್ಲ,ಯಾಕೆಂದರೆ ಈ ಪಟ್ಟಿ ಕಾಂಬೊಜರನ್ನು ಒಳಗೊಂಡಿದೆ. ಕೃಷ್ಣನ ದಿಗ್ವಿಜಯದಲ್ಲಿ ಮಹಾಭಾರತವು ಇಪ್ಪತ್ತೈದು ಪುರಾತನ ಜನಪದರ ಪಟ್ಟಿಯನ್ನು ತಿಳಿಸುತ್ತದೆ.ಉದಾಹರಣೆಗೆ:ಅಂಗರು,ವಂಗರು,ಕಳಿಂಗ,ಮಗಧ,ಕಾಶಿ,ಕೊಶಲಾ,ವತ್ಸ,ಗರ್ಗ,ಕರುಶಾ,ಪುಂದ್ರಾ,ಆವಂತಿ,ದಕ್ಷಿಣಾಟ್ಯ,ಪರ್ವರ್ತಕ,ದಾಶೆರೆಕಾ,ಕ್ಷಮಿರಾ,ಉರಸಾ,ಪಿಶ್ಛಾ,ಮುದ್ಗಳ,ಕಾಂಬೊಜ,ವಟಧನಾ,ಚೋಳ,ಪಾಂಡ್ಯರು,ತ್ರಿಗರ್ತರು,ಮಲವರು ಮತ್ತು ದರದಾ(MBH ೭/೧೧/೧೫-೧೭)ಇತ್ಯಾದಿಗಳು. ಅದಲ್ಲದೇ ಕುರುಸರ ಮತ್ತು ಪಾಂಚಾಲರ ಜನಪದರು ಇಲ್ಲಿ ದೊರೆಯುತ್ತಾರೆ. ಆಶ್ಚರ್ಯವೆಂದರೆ ಈ ಪಟ್ಟಿಯಲ್ಲಿ ಗಾಂಧಾರರ ಉಲ್ಲೇಖ ಇರಲಿಲ್ಲ. ಅದಲ್ಲದೇ ಮಹಾಭಾರತದ ಜನಪ್ರಿಯ ಶ್ಲೋಕಗಳ ಪಟ್ಟಿಯೂ ಇಲ್ಲಿದೆ.(XIII, ೩೩.೨೦-೨೩; XIII, ೩೫, ೧೭-೧೮), ಇದ್ರರ ಪಟ್ತಿಯಲ್ಲಿರುವವೆಂದರೆ,ಸಕರು, ಯವನರು, ಕಾಂಬೊಜರು, ದ್ರಾವಿಡರು, ಕಳಿಂಗರು, ಪುಲಿಂಡರು, ಉಸಿನರರು, ಕೊಲಿಸರ್ಪರು, ಮೆಕಲರು, ಶೂದ್ರರು, ಮಹಿಷಕರು, ಲಾಟರು, ಕಿರಿಟರು, ಪುಂಡರಕರು, ದಾರ್ದರ ಇತ್ಯಾದಿ ಇದರಲ್ಲಿಒ ವೃಶಿಲರನ್ನು /ಕೆಳ ಹಂತದ ಯೋಧರ ಪಡೆ ಕ್ಷತ್ರಿಯರು(ಇದನ್ನು ನೋಡಿ: ಕಾಂಪ್ರೆಹೆನನ್ಸಿವ್ ಹಿಸ್ಟ್ರಿ ಆಫ್ ಇಂಡಿಯಾ, ೧೯೫೭, p ೧೯೦,ಕೆ. ಎ. ಎನ್. ಸಾಸ್ತ್ರಿ). ಇದರಲ್ಲಿ ಇನ್ನೊಂದು ಶ್ಲೋಕದಲ್ಲ್ರಿಉವಂತೆ ಗಾಂಧಾರರ ಪಟ್ಟಿ ಕಾಣಸಿಗುವುದಿಲ್ಲ.(MBH ೧೨.೨೦೭.೪೩-೪೪)ಇದೇ ಮಹಾಗ್ರಂಥವು ಯವನರು,ಕಾಂಬೊಜರು,ಗಾಂಧಾರರು,ಕಿರಿಟರು ಮತ್ತು ಬಾರಬರಾಗಳು (ಯಾವುನಾ ಕಾಂಬೊಜ ಗಾಂಧಾರ ಕಿರಿಟಾ ಬಾರ್ಬರಯ )ಇತ್ಯಾದಿಗಳು ಪಟ್ಟಿಯಲ್ಲಿ ಕಾಣಿಸಿದೆ.ಮ್ಲೇಚ್ಚರು ಗುಡ್ಡಗಾಡು ಪಂಗಡದವರು ದಾಸ್ಯುವ್ ಅಥವಾ ಬಾರ್ಬಾರಿಗಳಂತೆ ಬದುಕಿದ್ದರು. ಹೀಗೆ ಮೊದಲ ಶ್ಲೋಕಗಳಲ್ಲಿ ಗಾಂಧಾರರು ಮತ್ತು ಕಾಂಬೊಜರು ನಿಶ್ಚಿತವಾಗಿಯೂ ಒಂದೇ ಜನಸಮುದಾಯದವರೆನ್ನಲಾಗಿದೆ. ಅಸ್ಸಲಯನಾ ಸೂಕ್ತದಲ್ಲಿ ಮಜ್ಜಿಮಾ ಮತು ನಕಯಾ ಹೇಲೋವಂತೆ ಯೊನರ,ಕಾಂಬೊಜರ ಮತ್ತು ದೇಶದ ಇನ್ನಿತರ ಪ್ರಮುಖ ಭೂಪ್ರದೇಶಗಳು ಜನರಲ್ಲಿ ವರ್ಗೀಕರಣ ಕಾಣಿಸಿದ್ದವು.ಇದರಲ್ಲಿ ಪ್ರಮುಖವಾಗಿ ಆರ್ಯ-ದಾಸ,ಇಲ್ಲಿ ಆರ್ಯರು ಮಜ್ಜಿಮಾ ಆಗಿ ಪರಿವರ್ತನೆಯಾಗಬಹುದಾಗಿತ್ತು.(ಅಂದರೆ ಮಜ್ಜಿಮಾ ನಾಕಯ್ಯಾ ಧರ್ಮಾಂತರ೪೩.೧.೩)) ಮತ್ತೆ ಗಾಂಧಾರರನ್ನು ಕಾಂಬೊಜರೊಂದಿಗೆ ಒಟ್ಟುಸೇರಿಸಿದ ಜನರೆಂದು ಪರಿಗಣಿಸಲಾಗಿತ್ತು. ಉತ್ತರದ ಸಂಸ್ಕೃತ ಪಠ್ಯ ರಾಜತರಂಗಿಣಿಯು ಉತ್ತರ ದೇಶಗಳ ಪಟ್ಟಿಯನ್ನು ನೀಡುತ್ತದೆ.ಇದರಲ್ಲಿ ರಾಜ ಲಲಿತಾದಿತ್ಯ ಮುಕ್ತಾಪಿದಾ(ಕಾಶ್ಮೀರ್) (೮th c. CE) ಆತ ತನ್ನ ದಿಗ್ವಿಜಯಗಳನ್ನು ಕಡಿಮೆ ಮಾಡಲು ಮುಂದಾಗಿರುತ್ತಾನೆ. ಈ ಪಟ್ಟಿಯಲ್ಲಿ ಕಾಂಬೊಜರು, ತುಖಾರರು, ಭಾತಾಸ್ ಗಳು(ಪಶ್ಚಿಮ ಟಿಬೆಟ್ ನಲ್ಲಿನ ಬಾಲ್ತಿಸ್ತಾನ್ ಗಳು), ದರದಾಸ್ ಗಳು, ವಲುಂಕಾಭುದಿ, ಸ್ತ್ರಿರಾಜ್ಯ, ಉತ್ತರಕುರುಗಳು ಮತ್ತು ಪ್ರಗ್ಜೋತಿಷ್ಯಗಳನ್ನು ಅನುಕ್ರಮವಾಗಿ ಹೆಸರಿಸಲಾಗಿದೆ.ಆದರೆ ಗಾಂಧಾರರ ಉಲ್ಲೇಖವಿಲ್ಲ, (ರಾಜತರಂಗಿಣಿ: ೪.೧೬೪- ೪.೧೭೫). ಗಾಂಧಾರರನ್ನು ಇಲ್ಲಿ ಕಾಂಬೊಜರ ಜೊತೆಗೆ ಪರಿಗಣಿಸಿದ್ದು ಸ್ಪಷ್ಟವಾಗಿದೆ. ಸಿಕಂದ (ಸ್ಕಂದ)ಪುರಾಣ(ಭೌಗೋಳಿಕ ಶಾಸ್ತ್ರದ ಅಧ್ಯಯನ, ೧೯೭೧, p ೨೫೯-೬೨, ಸರ್ಕಾರ್, ಹ್ಸಿಟ್ ಆಫ್ ಪಂಜಾಬ್, ೧೯೯೭, p ೪೦, ಡಾ.ಎಲ್. ಎಂ. ಜೋಶಿ ಮತ್ತು ಡಾ.ಫೌಜ್ ಸಿಂಘ್ (ಸಂಪಾದಕರು)), ಇದರಲ್ಲಿ ೭೫ ದೇಶಗಳ ಪಟ್ಟಿಯಿದೆ,ಇದರಲ್ಲಿ ಖೊರಸಸನಾ, ಕುರು, ಕೊಸಲಾ, ಬಹಲಿಕಾ, ಯಾವನ, ಕಾಂಬೊಜ, ಶಿವ, ಸಿಂಧು, ಕಶ್ಮಿರಾ, ಜಲಂಧರಾ(ಜುಲ್ಲಂದರ್), ಹರಿಯಾಲಾ(ಹರ್ಯಾಣಾ), ಭದ್ರ(ಮದ್ರಾ), ಕಚ್ಚಾ, ಸೌರಾಷ್ಟ್ರಾ, ಲಾಡಾ, ಮಗಧಿ, ಕನ್ಯಾಕುಬ್ಜ್, ವಿದರ್ಭಾ, ಕಿರಟ, ಗೌದಾ, ನೆಪಾಲಿ ಇತ್ಯಾದಿ ಗಾಂಧಾರರ ಉಲ್ಲೇಖವಿಲ್ಲ,ಹೀಗೆ ೭೫ ದೇಶಗಳ ಪಟ್ಟಿಯಿದೆ. ರಾಜಶೇಖರದ ಕಾವ್ಯಮಿಮಾಂಶೆ (೮೮೦-೯೨೦ AD) ಅಲ್ಲದೇ ೨೧ ನೈಋತ್ಯ-ದೇಶಗಳು/ರಾಷ್ಟ್ರಗಳಾದ ಸಕಾ, ಕೆಕಯಾ, ವೊಕ್ಕನಾ, ಹುನಾ, ವನಯುಜಾ, ಕಾಂಬೊಜ, ವಹ್ಲಿಕಾ, ವಾವ್ಹಲಾ, ಲಂಪಕ, ಕುಲುತಾ, ಕಿರಾ, ತಂಗಣಾ, ತುಷಾರಾ, ತುರುಷ್ಕಾ, ಬಾರ್ಬರಾ, ಹರ-ಹುರವಾ, ಹುಹುಕಾ, ಸಹುದಾ, ಹಂಸಮಾರ್ಗ(ಹುಂಜ್), ರಾಮಥಾ ಮತ್ತು ಕರ್ನಾಟಕ ಇತ್ಯಾದಿ,ಆದರೆ ಗಾಂಧಾರ ಅಥವಾ ದರದಾ ಮಾಹಿತಿಯಿಲ್ಲ. (ನೋಡಿ: ಕಾವ್ಯಮಿಮಾಂಸಾ, ರಾಜಶೇಖರ್, ಅಧ್ಯಾಯ ೧೭; ಅಲ್ಲದೇ: ಕಾವ್ಯಮಿಮಾಂಸೆ ಎಡಿಟರ್ ಕೆದರನಾಥ್, trans. ಕೆ. ಮೀನಾಕ್ಷಿ, pp ೨೨೬-೨೨೭). ಇಲ್ಲಿ ಎರಡೂ ಪಟ್ಟಿಗಳಲ್ಲಿ ದರದಾಸ್ ಮತ್ತು ಗಾಂಧಾರರನ್ನು ಕಾಂಬೊಜ್ ರೆಂದು ತಿಳಿಸಲಾಗಿದೆ. ಸಕ್ತಿಸಗಮ ಸತ್ತದ ಸತಪಾಂಕರಸಿದ್ದಿವಿಭಾಗ (ಬುಕ್ III, Ch VII, ೧-೫೫) ಇದರಲ್ಲಿ ಗುರ್ಜರಾ, ಆವಂತಿ, ಮಾಳವ, ವಿದರ್ಭ, ಮಾರು, ಅಭಿರಾ, ವಿರಾಟ್, ಪಾಂಡು, ಪಂಕಲಾ, ಕಾಂಬೊಜ್, ಬಹ್ಲಿಕಾ, ಕಿರಟಾ, ಖುರುಸಾನಾ, ಸಿನಾ, ಮಹಾ-ಸಿನಾ, ನೇಪಾಳ, ಗೌಡಾ, ಮಗಧ, ಉತ್ಕಲಾ, ಹುನಾ, ಕೈಕೆಯಿ, ಸೊರಸೆನಾ, ಕುರು ಸೈಂಧವ, ಕಚ್ಚಾ ಇವರೆಲ್ಲ ಒಟ್ಟು ೫೬ ದೇಶಗಳ ಪಟ್ಟಿಯಲ್ಲಿದ್ದಾರೆ.ಆದರೆ ಈ ಪಟ್ಟಿಯಲ್ಲಿ ದರದಾಸ್ ಮತ್ತು ಗಾಂಧಾರರ ಮಾಹಿತಿಯಿಲ್ಲ. ಅದೇ ರೀತಿ, ಸಮ್ಮೋಹ ತಂತ್ರವು ೫೬ ದೇಶಗಳ ಪಟ್ಟಿ ಮಾಡಿದೆ. ಕಾಸ್ಮಿರಾ, ಕಾಂಬೊಜ, ಯಾವನ, ಸಿಂಢು, ಬಹ್ಲಿಕಾ,ಬರ್ಸಿಕಾ, ಬಾರಬಾರಾ, ಸೌರಾಷ್ಟ್ರ, ಮಲಯಾ, ಮಹಾರಾಷ್ಟ್ರ, ಕೊಂಕಣ, ಆವಂತಿ, ಚೋಳ, ಕಾಮರೂಪ, ಕೇರಳಾ, ಸಿಂಹಳ ಇತ್ಯಾದಿ ಆದರೆ ಇದರಲ್ಲಿಯೂ ಗಾಂಧಾರ ಮತ್ತು ದರ್ದಾಸ್ ಗೆ ಮಾಹಿತಿ ಇಲ್ಲ. (ನೋಡಿ ಇಲ್ಲಿ ಕೋಟ್ಟ್ಸ್ : ಸ್ಟಡೀಸ್ ಇನ್ ಜಿಯಾಗ್ರಫಿ, ೧೯೭೧, p ೭೮, ಡಿ. ಸಿ. ಸರ್ಕಾರ್; ಸ್ಟಡೀಸ್ ಇನ್ ದಿ ತಂತ್ರ, pp ೯೭-೯೯, ಡಾ.ಪಿ. ಸಿ. ಬಗಚಿ). ಇಲ್ಲಿಯೂ ಕೂಡಾ ಹೀಗೆ ಗಾಂಧಾರರು ಮತ್ತು ದರ್ದಸರು ನಿಶ್ಚಿತವಾಗಿಯೂ ಕಾಂಬೊಜ ಜನಸಮುದಾಯದವರೆನ್ನಲಾಗಿದೆ. ಕಾಳಿದಾಸನ ರಘವಂಶವು ಅಸಂಖ್ಯಾತ ಪಂಗಡಗಳು/ಪೂರ್ವದ ದೇಶಗಳು(ಇದರಲ್ಲಿ ಸುಶ್ಮಾಗಳು, ವಂಗರು, ಉತ್ಕಲರು, ಕಲಿಂಗರು ಮತ್ತು ಮಹೆಂದ್ರ ಪರ್ವತ ಶ್ರೇಣಿಗಳಲ್ಲಿರುವವರು), ದಕ್ಷಿಣದಲ್ಲಿ (ಪಾಂಡ್ಯರು, ಮಲಯ, ದರ್ದುರಾ, ಮತ್ತು ಕೆರಳಾ ಒಳಗೊಂಡಿವೆ), ಪಶ್ಚಿಮದಲ್ಲಿ (ಅಪ್ರಾಂತಗಳು), ಮತ್ತಲ್ಲದೇ ವಾಯುವ್ಯದಲ್ಲಿ (ಇನ್ನುಳಿದಂತೆ ಯಾವನಾಸ್, ಪರಿಸಿಕರು, ಹುನರು,ಕಾಂಬೊಜರು) ಅಲ್ಲದೇ ಕೊನೆಯದಾಗಿ ಉತ್ತರ ಹಿಮಾಲಯದ (ಕಿರಿಟರು, ಉತ್ಸವಾಕೆಟರು, ಕಿನ್ನರರು, ಪ್ರಗ್ಜ್ಯೋತಿಷ್ಯಗಳು)ಇತ್ಯಾದಿ (ನೋಡಿ: ರಘವಂಶ IV.೬೦ seq). ಇಲ್ಲಿ ಮತ್ತೆ ಗಾಂಧಾರರ ಮಾಹಿತಿ ಇಲ್ಲ.ರಘು ಕಾಂಬೊಜರ ಬಗ್ಗೆ ಮಾತನಾಡಿದರೂ ಅದರ ಉಲ್ಲೇಖವಿಲ್ಲ. ಕೊನೆಯದಾಗಿ ಆದರೆ ಕಡೆಯದಾಗಿ ಅಲ್ಲ; ಈ ಹಿಂದುಗಳ ಕಾನೂನು ಪುಸ್ತಕ ಎನಿಸಿದ ಮನುಸ್ಮೃತಿ ಕೂಡ, ಕಾಂಬೊಜರು, ಯಾವನರು, ಶಕರು, ಪರದಾಸ್, ಪಹ್ಲ್ವಾರು, ಚೀನಾರು, ಕಿರಿಟರು, ದರದಾಸರು ಮತ್ತು ಖುಶ ಇವರಲ್ಲದೇ ಪೌಂಡುರ್ಕಾಗಳು, ಚೊಡಾಸ್, ದ್ರಾವಿಡ್ಸ್ ಮತ್ತು ಆಶ್ಚರ್ಯವೆಂದರೆ ಇದರಲ್ಲಿ ಗಾಂಧಾರರ ವೃಶಲಾರ ಕ್ಷತ್ರಿಯರ ಮಾಹಿತಿ ಇಲ್ಲ.(ಮನುಸ್ಮೃತಿ X.೪೩-೪೪) ಮೇಲಿನ ಎಲ್ಲಾ ಸಂಬಂಧಗಳಲ್ಲಿ ಕಾಣುವುದೇನೆಂದರೆ ಎಲ್ಲಾ ಸಂದರ್ಭಗಳಲ್ಲಿ ಕಾಂಬೊಜರ ಸಮುದಾಯದಲ್ಲಿಯೇ ಇವರನ್ನು ಸೇರಿಸಲಾಗಿದೆ.ಅವರನ್ನೇ ಅದೇ ಜನಾಂಗದವರೆಂದು ಪರಿಗಣಿಸಲಾಗುತ್ತದೆ. ಹೀಗೆ ಕಾಂಬೊಜರು ಮತ್ತು ಗಾಂಧಾರರು ಸಮಷ್ಟಿಯ ಜನರಾಗಿದ್ದಾರೆ.
  24. ಇನ್ನೂ ಕೆಲವು ಪುರಾತನ ಉದಾಹರಣೆಗಳಲ್ಲಿ ಕೇವಲ ಗಾಂಧಾರರ ಬಗ್ಗೆ ಉಲ್ಲೇಖವಿದೆ,ಆದರೆ ಅಲ್ಲಿ ಕಾಂಬೊಜರ ಮಾಹಿತಿ ಇಲ್ಲದಿರುವುದು ಕಾಣುತ್ತದೆ. ಇಂತಹ ಪ್ರಕರಣಗಳಲ್ಲಿ ಕಾಂಬೊಜರನ್ನು ಗಾಂಧಾರರೊಂದಿಗೇ ಸಮೀಕರಿಸಲಾಗುತ್ತದೆ.
  25. ಬೆಂಗಾಲದ ಪಾಲಾ ರಾಜ ಧರ್ಮಪಾಲ ನ ಕಲಿಮಪುರ್ ಶಾಸನ ಬರೆಹಗಳಲ್ಲಿ (೭೭೦-೮೧೦ AD) ಆತನ ದೇಶದ ಸುತ್ತಮುತ್ತಲಿನ ದೇಶಗಳ ಪಟ್ಟಿ ಇದೆ.ಅದೆಂದರೆ ಭೋಜ(ಗುರ್ಜರಾ), ಮತ್ಸ್ಯ್ಯ, ಮದ್ರಾ, ಕುರು, ಅವಂತಿ, ಗಾಂಧಾರ ಮತ್ತು ಕಿರಾ(ಕಂಗ್ರಾ) ಇವೆಲ್ಲವೂ ಆಗಿನ ಸಾಮಂತ ರಾಜ್ಯಗಳೆನಿಸಿದ್ದವು. ಮೊಂಘಿರ್ ಶಾಸನ ಬರೆಹಗಳ ಪ್ರಕಾರ ರಾಜ ದೆವಪಾಲ (೮೧೦ - ೮೫೦AD)ಧರ್ಮಪಾಲಾನ ಉತ್ತರಾಧಿಕಾರಿ ಕೂಡಾ ಇನ್ನಿತರ ಸಾಮಂತರಾಜರಿದ್ದರು,ಅದರಲ್ಲಿನ ಪಟ್ಟಿಯೆಂದರೆ,ಉತ್ಕಲಾ (ಕಲಿಂಗ್)ಪ್ರಗ್ಯೋಜ್ಯೋತಿಷ್ಯ (ಆಸಾಮ್)ದ್ರಾವಿಡ್,ಗುರ್ಜರಾ (ಭೋಜಾ)ಹುನಾ ಮತ್ತು ಕಾಂಬೊಜಗಳು ಇದ್ದವು. ದೇವಪಾಲಾದ ರಾಜಾ ಪಾಲಾ ತನ್ನ ಸೈನ್ಯವನ್ನು ತನ್ನ ದಾಳಿಗಳಲ್ಲಿ ಬಳಸಿದ್ದನು.ಈ ಜನರ ವಿದುದ್ದ ಗಂಧಾರದಲ್ಲಿ ಯುದ್ಧ ಸಾರಿದ್ದನು. ಇಲ್ಲಿ ಸ್ಪಷ್ಟವಾಗಿರುವಂತೆ ರಾಜ ದೇವಪಾಲಾ ಶಾಸನದಲ್ಲಿ ಕಾಂಬೊಜ್ ಮೊಂಘಿರ್ ರಚನೆಗಳು ದೊರಕಿವೆ.ಅದೇ ರೀತಿ ರಾಜಾ ಧರ್ಮಪಾಲಾ ಕಾಲದ ಶಾಸನಗಳು ಗಾಂಧಾರದ ಬಗ್ಗೆ ಇರುವ ಕೆತ್ತನೆ ದೊರಕಿದೆ. ಆದ್ದರಿಂದ ಗಾಂಧಾರ ಮತ್ತು ಕಾಂಬೊಜ್ ಗಳನ್ನು ಪರಸ್ಪರ ವಿನಿಮಯವಾಗುವಂತೆ ಬೆಂಗಾಲ್ ನ್ ಪಾಲಾ ರಾಜರುಗಳ ದಾಖಲೆಯಲ್ಲಿ ವಿವರಿಸಲಾಗಿದೆ.
  26. ಜೇಮ್ಸ್ ಫೆರ್ಗ್ಯುಸನ್ ಹೇಳುವಂತೆ: "ವ್ಯಾಪಕ ಅರ್ಥದಲ್ಲಿ ಗಾಂಧಾರ ಹೆಸರನ್ನು ಇಂದೂಸ್ ನ ಎಲ್ಲಾ ಭಾಗಗಳಲ್ಲಿ ಕಾಣಬಹುದು.ಗಾಂಧಾರ ಎನ್ನುವಂತೆ ಕಾಣಬಹುದು" (ದಿ ಟ್ರೀ ಅಂಡ್ ಸೆರ್ಪಂಟ್ ವರ್ಶಿಪ್, ೨೦೦೪, p ೪೭, ಜೇಮ್ಸ್ ಫೆರ್ಗ್ಯುಸನ್).
  27. ಎನ್ ಸೈಕ್ಲೊಪಿಡಿಯಾ ಅಮೆರಿಕಾನಾ , ೧೯೯೪, p ೨೭೭, ಎನ್ ಸೈಕ್ಲೊಪಿಡಿಯಾ ಅಂಡ್ ಡಿಕ್ಷನರೀಸ್.
  28. ಟೊಲ್ಮಿಸ್' ಜಿಯಾಗ್ರಫಿ ಮೆನ್ಶನ್ಸ್ ತಾಂಬೊಜಿ ಲಿಕೆಟೆಡ್ ಇನ್ ಈಸ್ಟರನ್ ಬಾಕ್ಟ್ರಿಯ್ (ನ್ಸಿಯಂಟ್ ಇಂಡಿಯಾ ಆಸ್ ಡಿಸ್ಕ್ರೈಬ್ಡ್ ಬೈ ಟೊಲ್ಮಿ: ಬೀಯಿಂಗ್ ಎ ಟ್ರಾನ್ಸ್ಲೇಶನ್ ಆಫ್ ದಿ ಚಾಪ್ಟರ್ಸ್ ... ೧೮೮೫, p ೨೬೮, ಜಾನ್ ವಾಟ್ಸನ್ ಮಾಕ್ರಿಂಡಲ್- ಜಿಯಾಗ್ರಫಿ, ಎನಿಸಿಯಿಂಟ್; ಬಾರಿಂಗ್ಟನ್ ಅಟ್ಲಾಸ್ ಆಫ್ ದಿ ಗ್ರೀಕ್ ಅಂಡ್ ರೊಮನ್ ವರ್ಲ್ಡ್ ಹಿಸ್ಟ್ರಿ- ೨೦೦೦, p ೯೯,(ಐಡಿತರ್ಸ್) ರಿಚರ್ಡ್ ಜೆ.ಎ. ಟಾಲ್ಬರ್ಟ್) ಅಂಡ್ ಅಂಬುತಾಯಿ ಪೀಪಲ್ ಲೊಕೆಟೆಡ್ ಟು ಸೌತ್ ಆಫ್ ಹಿಂದುಖುಶ್ ಮೌಂಟೇನ್ಸ್(ಜಿಯಾಗ್ರಫಿ೬.೧೮.೩; ನೋಡಿ ಮ್ಯಾಪ್ ಇನ್ ಮ್ಯಾಕಂಡಲ್, p ೮). ಡಾ.ಎಸ್ ಲೆವಿ ಹ್ಯಾಸ್ ಐಡೆಂಟಿಫೈಯ್ಡ್ ತಂಬಿಜೊಯ್ ಉಯಿತ್ ಕಾಂಬೊಜ್(ಇಂಡಿಯನ್ ಆಂಟಿಕ್ವಾರಿ, ೧೯೨೩, p ೫೪; ಪ್ರಿ ಆರ್ಯನ್ ಅಂಡ್ ಪ್ರಿ ದ್ರಾವಿಡಿಯನ್ ಇನ್ ಇಂಡಿಯಾ, ೧೯೯೩, p ೧೨೨, ಡಾ.ಸಿಲ್ವೆನ್ ಲೆವಿ, ಡಾ.ಜೀನ್ ಪ್ರಜಿಲುಸ್ಕಿ, ಜುಲೆಸ್ ಬ್ಲಾಚ್, ಏಷಿಯನ್ ಎಜುಕೇಶನಲ್ ಸರ್ವಿಸಿಸ್) ವೈಲ್ ಲ್ಯಾಂಡ್ ಆಫ್ ಅಂಬುತಾಯಿ ಲ್ಯಾಂಡ್ ಹ್ಯಾಸ್ ಆಲ್ಸೊ ಬೀನ್ ಐಡೆಂಟಿಫೈಯ್ಡ್ ಬೈ ಡಾ.ಮೈಕೆಲ್ವಿಜೆಲ್ (ಹಾರ್ವರ್ಡ್ ಯುನಿವರ್ಸಿಟಿ) ಉಯಿತ್ ಸಂಸ್ಕೃತಿ ಕಾಂಬೊಜ್(ಎಲ್ಕ್ಟ್ರೊನಿಕಲ್ ಜರ್ನಲ್ ಆಫ್ ವೇದಿಕ್ ಸ್ಟಡೀಸ್, ಸಂ. ೫,೧೯೯೯, ಸಂಚಿಕೆ ೧ (ಸೆಪ್ಟೈಂಬರ್), ಡಾ. ಎಂ. ವಿಜ್ನೆಲ್; ಇಂಡೊ-ಆರ್ಯನ್ ಕಾಂಟ್ರಾವರ್ಸಿ: ಎವಿಡನ್ಸ್ ಅಂಡ್ ಇನ್ ಫೆರೆನ್ಸ್ ಇನ್ ಇಂಡಿಯನ್ ಹಿಸ್ಟ್ರಿ, ೨೦೦೫, p ೨೫೭, ಲಾರೀ ಎಲ್. ಪ್ಯಾಟನ್, ಎಡ್ವಿನ್ ಬ್ರಿಯಾಂಟ್; ದಿ ಇಂಡೊ-ಆರ್ಯನ್ಸ್ ಆಫ್ ಎನ್ಸಿಯಂಟ್ ಸೌತ್ ಏಷಿಯಾ: : ಲ್ಯಾಂಗ್ವೇಜ್, ಮಟಿರಿಯಲ್ ಕಲ್ಚರ್ ಅಂಡ್ ಎಥಿನಿಸಿಟಿ, ೧೯೯೫, p ೩೨೬, ಜಾರ್ಜ್ ಎರ್ಡೊಸಿ.
  29. MBH VII.೪.೫; II.೨೭.೨೩.
  30. ನೋಡಿ: ಪ್ರ್ಬ್ಲೆಮ್ಸ್ ಆಫ್ ಅನಿಸ್ಯಂಟ್ ಇಂಡಿಯಾ, ೨೦೦೦, p ೫-೬; cf: ಜಿಯಾಗ್ರಫಿಕಲ್ ಡಾಟಾ ಇನ್ ದಿ ಅರ್ಲಿಯರ್ ಪುರಾನಾಸ್, p ೧೬೮.
  31. MBH II.೨೭.೨೭.
  32. ವೇದಿಕ್ ಇಂಡೆಕ್ಸ್ I, p ೧೩೮, ಡಾ.ಮ್ಯಾಕ್ಡೊನಲ್, ಡಾ.ಕೇತ್.
  33. ಎಥೊನಾಲ್ಜಿ ಆಫ್ ಏನಿಸಿಯಂಟ್ ಭಾರತ – ೧೯೭೦, p ೧೦೭, ಡಾ.ರಾಮ್ ಚಂದ್ರ ಜೈನ್.
  34. ದಿ ಜರ್ನಲ್ ಆಫ್ ಏಷಿಯನ್ ಸ್ಟಡೀಸ್ –೧೯೫೬, p ೩೮೪, ಅಸೊಶಿಯೇಶನ್ ಫಾರ್ ಏಶಿಯನ್ ಸ್ಟ್ಡೀಸ್, ಫಾರ್ ಈಸ್ಟರ್ನ್ ಅಸೊಶಿಯೇಶನ್(U.S.).
  35. ಬಲುಚಿಸ್ತಾನ್: ಸಿಯಾಸಿ ಕಶ್ಮಕಶ್ಮ್, ಮುಜ್ಮಿತಿರತ್ va rujḥānāt – ೧೯೮೯, p ೨, ಮುನಿರ್ ಅಹ್ಮದ್ ಮಾರಿ.
  36. ಇಂಡಿಯಾ ಆಸ್ ಒನ್ ಟು ಪನಿನಿ: ಎ ಸ್ಟಡಿ ಆಫ್ ದಿ ಕಲ್ಚರಲ್ ಮಟಿರಿಯಲ್ ಇನ್ ದಿ ಆಷ್ಟಾಧ್ಯಾಯಿ – ೧೯೫೩, p ೪೯, ಡಾ.ವಾಸುದೇವ್ ಶರನಾ ಅಗ್ರವಾಲ್.
  37. ಆಫ್ಘಾನಿಸ್ತಾನ್, p ೫೮, ಡಬ್ಲು. ಕೆ. ಫ್ರೇಸರ್, ಎಂ. ಸಿ. ಗಿಲ್ಲೆಟ್.
  38. ಅಫ್ಘಾನಿಸ್ತಾನ್, ಇಟ್ಸ್ ಪೀಪಲ್ ಸೊಸೈಟಿ, ಇಟ್ಸ್ ಕಲ್ಚರ್ , ಡೊನಾಲ್ ಎನ್. ವಿಲ್ಬರ್, ೧೯೬೨, p ೮೦, ೩೧೧ ಇತ್ಯಾದಿ.
  39. ಇರಾನ್, ೧೯೫೬, p ೫೩, ಹರ್ಬರ್ಟ್ ಹರೊಲ್ಡ್ ವ್ರೀಲ್ಯಾಂಡ್, ಕ್ಲಿಫೊರ್ಡ್ ಆರ್. ಬರ್ನೆಟ್.
  40. ಎ ಗ್ರಾಮೆಟಿಕಲ್ ಡಿಕ್ಷನರಿ ಆಫ್ ಸಂಸ್ಕೃತ (ವೇದಿಕ್){/1}: ೭೦೦ ಕಂಪ್ಲೆಟ್ ರಿವಿವ್ಸ್ ಆಫ್ ದಿ.ಬೆಸ್ಟ್ ಬುಕ್ಸ್.., ೧೯೫೩, ಪು ೪೯, ಡಾ.ವಿ ಎಸ್ ಅಗ್ರವಾಲ್, ಡಾ.ಸೂರ್ಯ ಕಾಂತ, ಡಾ.ಜಾಕೊಬ್ ವಾಕರ್ನೆಅಲ್ ಗೆಲ್, ಆರ್ಥರ್ ಆಂಥೊನೊ ಮೆಕ್ಡೊನೆಲ್, ಪೆಗ್ಗಿ ಮೆಚೆರ್- ಇಂಡಿಯಾ.
  41. ಜಿಯಾಗಾಫಿಕಲ್ ಅಂಡ್ ಎಕನಾಮಿಕ್ ಸ್ಟಡೀಸ್ ಇನ್ ದಿ ಮಹಾಭಾರತಾ: ಉಪಾಯನಾ ಪರ್ವ, ೧೯೪೫, p ೩೩, ಡಾ.ಮೊತಿ ಕಹಂದ್ರ- ಇಂಡಿಯಾ.
  42. ಎ ಗ್ರಾಮೆಟಿಕಲ್ ಡಿಕ್ಷನರಿ ಆಫ್ ಸಂಸ್ಕೃತ (ವೇದಿಕ್) : ೭೦೦ ಕಂಪ್ಲೆಟ್ ರಿವಿವ್ಸ್ ಆಫ್ ದಿ..., ೧೯೫೩, p ೪೯, ಡಾ.ವಾಸುದೇವ್ ಶರನಾ ಅಗ್ರವಾಲ್, ಸೂರ್ಯಕಾಂತ, ಜಾಕೊಬ್ ವಾಕರ್ನೆಅಲ್ ಗೆಲ್, ಆರ್ಥರ್ ಆಂಥೊನೊ ಮೆಕ್ಡೊನೆಲ್, ಪೆಗ್ಗಿ ಮೆಚೆರ್- ಇಂಡಿಯಾ.
  43. MBH ೭/೯೧/೩೯.
  44. ಅರ್ಥಶಾಸ್ತ್ರ೧೧/೧/೪.
  45. ಅಷ್ಟಾಧ್ಯಾಯಿ IV.೧.೧೬೮-೧೭೫.
  46. ಹಿಂದು ಪಾಲಿಟಿ: ಎ ಕಾನ್ ಸ್ಟಿಟುಶನಲ್ ಹಿಸ್ಟ್ರಿ ಆಫ್ ಇಂಡಿಯಾ ಇನ್ ಹಿಂದು ಟೈಮ್ಸ್ , ಪಾರ್ಟ್ಸ್ I ಅಂಡ್ ` II., ೧೯೫೫, p ೫೨, ಡಾ.ಕಾಶಿ ಪ್ರಸಾದ್ ಜಯಸ್ವಾಲ್ - ಕಾನ್ ಸ್ಟಿಟುಶನಲ್ ಹಿಸ್ಟ್ರಿ; ಪ್ರಸೆನಾ ಆಂಬೊಜ್, ಜಾನಾ ಔರ್ ಜನಪದ =: ಎನ್ಸಿಯಂಟ್ ಕಾಂಬೊಜ್, ಪೀಪಲ ಅಂಡ್ ಕಂಟ್ರಿ, ೧೯೮೧, ಡಾ.ಜಿಯಾಲಾಲಾ ಕಾಂಬೊಜ್-ಕಾಂಬೊಜ್(ಪಾಕಿಸ್ತಾನ್).