ಗುಂಜಾ ನರಸಿಮ ಸ್ವಾಮಿ ದೇವಸ್ಥಾನವುತಿರುಮಕೂಡಲು ನರಸೀಪುರದಲ್ಲಿರುವಹಿಂದೂ ದೇವಾಲಯವಾಗಿದೆ, ಇದು ಮೈಸೂರು ಜಿಲ್ಲೆಯ, ಕರ್ನಾಟಕ ರಾಜ್ಯದ, ಭಾರತದಲ್ಲಿದೆ. ಈ ಪಟ್ಟಣವು ಮೈಸೂರಿನಿಂದ ಆಗ್ನೇಯಕ್ಕೆ ೨೦ ಮೈಲುಗಳಷ್ಟು ದೂರದಲ್ಲಿದೆ. ಈ ದೇವಾಲಯವು ವಿಜಯನಗರ ಸಾಮ್ರಾಜ್ಯದ ಸುಮಾರು ೧೬ ನೇ ಆಳ್ವಿಕೆಗೂ ಹಿಂದಿನದು ಮತ್ತು ಪ್ರವೇಶ ದ್ವಾರದ ಮೇಲೆ (ಮಹಾದ್ವಾರ) ಭವ್ಯವಾದ ಗೋಪುರ ಮತ್ತು ಗರ್ಭಗುಡಿಯ ಮುಂಭಾಗದಲ್ಲಿ ನಾಲ್ಕು ಕಂಬಗಳ ಮಂಟಪವಿದ್ದುದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯವು ಕಾವೇರಿ ನದಿ ಮತ್ತು ಕಬಿನಿ ನದಿಯ ಸಂಗಮದಲ್ಲಿದೆ ಮತ್ತು ಇದನ್ನು ಹಿಂದೂಗಳು ಪವಿತ್ರಕ್ಷೇತ್ರವೆಂದು ಪರಿಗಣಿಸುತ್ತಾರೆ. ಮುಖ್ಯ ದ್ವಾರದ ಮುಂಭಾಗದಲ್ಲಿ ಬೆಳೆಯುವ ಗುಂಜಾ (ಗುಲಗಂಜಿ) ಮರದಿಂದಾಗಿ (ಸಸ್ಯ ಶಾಸ್ತ್ರದಲ್ಲಿ ಅಬ್ರಸ್ ಪ್ರಿಕಾಟೋರಿಯಸ್ ) ದೇವಾಲಯವು ಈ ಹೆಸರನ್ನು ಪಡೆದುಕೊಂಡಿದೆ; ಗುಲಗಂಜಿ ಗಿಡದ ತೂಕದಷ್ಟು ವಾರಣಾಸಿ (ಕಾಶಿ) ಗಿಂತ ಈ ದೇವಾಲಯವು ಹೆಚ್ಚು ಪವಿತ್ರವಾಗಿದೆ ಎಂಬುದು ಸ್ಥಳೀಯರು ಹೆಮ್ಮೆಯಿಂದ ಹೇಳಿಕೋಳ್ಳುತ್ತಾರೆ. ದೇವಾಲಯದಲ್ಲಿನ ಶಿಲ್ಪಗಳು ಹಿಂದೂ ದೇವರು ನರಸಿಂಹ (ಗುಂಜಾ ಬೆರ್ರಿ ಮತ್ತು ಕಾಂಡವನ್ನು ಹಿಡಿದಿರುವ) ಮತ್ತು ರಾಕ್ಷಸ ರಾಜ ಹಿರಣ್ಯಕಶಿಪುವನ್ನು ಒಳಗೊಂಡಿವೆ. [೧]
ಬ್ರಿಟಿಷ್ ರಾಜ್ ಇತಿಹಾಸಕಾರ ಮತ್ತು ಶಾಸನಶಾಸ್ತ್ರಜ್ಞಬಿ. ಲೆವಿಸ್ ರೈಸ್ ಪ್ರಕಾರ, ಈ ದೇವಾಲಯವು ವಾರ್ಷಿಕ ನಿರ್ವಹಣೆಯೊಂದಿಗೆ ಮೈಸೂರಿನ ("ಊಳಿಗಮಾನ್ಯ ಪ್ರಭು") ಆಶ್ರಯದಲ್ಲಿತ್ತು. ಈ ಸಮಯದಲ್ಲಿ ದೇವಾಲಯವು ದುರಸ್ತಿ ಮತ್ತು ನವೀಕರಣವಾಯಿತು ಎಂದು ದಾಖಲೆಗಳು ಸೂಚಿಸುತ್ತವೆ ಎನ್ನುತ್ತಾನೆ. ಈ ದೇವಾಲಯವು ಭಾರತೀಯ ಪುರಾತತ್ವ ಸಮೀಕ್ಷೆಯ ಕರ್ನಾಟಕ ರಾಜ್ಯ ವಿಭಾಗದ ಅಡಿಯಲ್ಲಿ ಸಂರಕ್ಷಿತ ಸ್ಮಾರಕವಾಗಿದೆ. [೨] "ಅಗಸ್ತ್ಯೇಶ್ವರ" ದೇವಸ್ಥಾನ ಎಂದು ಕರೆಯಲ್ಪಡುವ ಮತ್ತೊಂದು ದೇವಾಲಯವಿದೆ, ಮತ್ತು ಎರಡೂ ದೇವಾಲಯಗಳು ವಾರ್ಷಿಕವಾಗಿ ಹೆಚ್ಚಿನ ಸಂಖ್ಯೆಯ ಭಕ್ತರನ್ನು ಆಕರ್ಷಿಸುವ ಧಾರ್ಮಿಕ ಜಾತ್ರೆಯ ( ಜಾತ್ರಾ ) ಸ್ಥಳವಾಗಿದೆ. [೧]
ಗುಂಜಾ ನರಸಿಂಹ ಸ್ವಾಮಿ ದೇವಾಲಯದ ಸಂಕೀರ್ಣ, ತಿರುಮಕೂಡಲ್ ನರಸೀಪುರದಪ್ರಾಕಾರದಹೊರಗೆ
ತಿರುಮಕೂಡಲ್ ನರಸೀಪುರದ ಗುಂಜಾನರಸಿಂಹಸ್ವಾಮಿ ದೇವಸ್ಥಾನದಲ್ಲಿ ಹಿಂಬದಿಯ ನೋಟ
ತಿರುಮಕೂಡಲ್ ನರಸೀಪುರದ ಗುಂಜಾ ನರಸಿಂಹ ಸ್ವಾಮಿ ದೇವಸ್ಥಾನದ ಹಿಂಭಾಗದಪ್ರಾಕಾರದಲ್ಲಿದೆಚಿಕ್ಕ ದೇಗುಲದ ಮೇಲೆ ಅಲಂಕಾರಿಕ ಬಾಗಿಲು ಜಾಂಬ್ ಮತ್ತು ಲಿಂಟಲ್
ತಿರುಮಕೂಡಲ್ ನರಸೀಪುರದ ಗುಂಜಾ ನರಸಿಂಹಸ್ವಾಮಿ ದೇವಸ್ಥಾನದಮಂಟಪಕ್ಕೆಕಂಬದ ಪ್ರವೇಶ
↑ ೧.೦೧.೧"Ancient shrine wears a new look". R Krishna Kumar. The Hindu. Retrieved 10 June 2015. ಉಲ್ಲೇಖ ದೋಷ: Invalid <ref> tag; name "hiranya" defined multiple times with different content
↑"Protected Monuments in Karnataka". Archaeological Survey of India, Government of India. Indira Gandhi National Center for the Arts. Retrieved 2 June 2015.