ವಿಶ್ವಮೋಹನ ಭಟ್
ವಿಶ್ವ ಮೋಹನ ಭಟ್ | |
---|---|
![]() ಭುವನೇಶ್ವರದಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ | |
ಹಿನ್ನೆಲೆ ಮಾಹಿತಿ | |
ಅಡ್ಡಹೆಸರು | ವಿ ಎಂ ಭಟ್ |
ಜನನ | ೨೭ ಜುಲೈ ೧೯೫೦ |
ಮೂಲಸ್ಥಳ | ಜೈಪುರ, ರಾಜಸ್ಥಾನ |
ಸಂಗೀತ ಶೈಲಿ | ಭಾರತೀಯ ಶಾಸ್ತ್ರೀಯ ಸಂಗೀತ |
ವೃತ್ತಿ | ಮೋಹನ ವೀಣಾ ವಾದಕ |
ವಾದ್ಯಗಳು | ಮೋಹನ ವೀಣೆ |
ಸಕ್ರಿಯ ವರ್ಷಗಳು | ೧೯೬೫ರಿಂದ |
ಅಧೀಕೃತ ಜಾಲತಾಣ | vishwamohanbhatt |
ಪಂಡಿತ್ ವಿಶ್ವಮೋಹನ ಭಟ್ ಪ್ರಸಿದ್ಧ ಹಿಂದೂಸ್ಥಾನಿ ಸಂಗೀತಗಾರರು.ಸಂಗೀತಕಾರರ ಕುಟುಂಬದಲ್ಲಿ ಜುಲೈ,೧೯೫೨ ರಲ್ಲಿ ಜೈಪುರ ದಲ್ಲಿ ಜನಿಸಿದರು.ಪ್ರಾರಂಭದ ಸಂಗೀತ ಶಿಕ್ಷಣ ತಂದೆಯವರಿಂದಲೇ ದೊರೆಯಿತು.ಖ್ಯಾತ ಸಿತಾರ್ ವಾದಕ ಪಂಡಿತ್ ರವಿಶಂಕರ್ ರವರ ಶಿಷ್ಯರಾದ ಬಳಿಕ ಇವರ ಪ್ರತಿಭೆ ಹೆಚ್ಚು ಬೆಳಕಿಗೆ ಬಂದಿತು.ಇವರು ಸ್ಪಾನಿಷ್ ಗಿಟಾರ್ ಹಾಗೂ ವೀಣೆಯ ಅಂಶಗಳನ್ನು ಸೇರಿಸಿ ಮೋಹನ ವೀಣೆ ಎಂಬ ಹೊಸವಾದ್ಯವನ್ನು ಸೃಷ್ಟಿಸಿದರು.ಸದ್ಯ ಮೋಹನವೀಣೆಯನ್ನು ಪ್ರಚುರಪಡಿಸಿಕೊಂಡು ಕಲಾಸೇವೆ ಮಾಡುತ್ತಿದ್ದಾರೆ.
ಪ್ರಶಸ್ತಿ ಪುರಸ್ಕಾರ[ಬದಲಾಯಿಸಿ]
- ೧೯೯೪ ರಲ್ಲಿ ಗ್ರಾಮ್ಮೀ ಪ್ರಶಸ್ತಿ.
- ೨೦೦೨ ರಲ್ಲಿ ಪದ್ಮಶ್ರೀ ಪ್ರಶಸ್ತಿ.
- ೧೯೯೮ ರಲ್ಲಿ ಸಂಗೀತ ನಾಟಕ ಪ್ರಶಸ್ತಿ.
- ೨೦೧೭ರಲ್ಲಿ ಪದ್ಮ ಭೂಷಣ ಪ್ರಶಸ್ತಿ ಘೋಷಣೆ.[೧]