ಮಂಥರ


ಮಂಥರೆ ರಾಮಾಯಣದ ಒಂದು ವಿಶೇಷ ಪಾತ್ರ. ರಾಮಾಯಣದಲ್ಲಿ ಅವಳನ್ನು ಕುರೂಪಿಯಂತೆ ವರ್ಣಿಸಲಾಗಿದೆ. ಅವಿವಾಹಿತೆಯಾದ ಅವಳು ಕೈಕೇಯಿಯ ನಂಬುಗಸ್ತ ಸೇವಕಿ, ಸಖಿ. ಕುವೆಂಪು ಅವರು ತಮ್ಮ "ರಾಮಾಯಣದರ್ಶನಂ" ಕೃತಿಯಲ್ಲಿ ಮಂಥರೆ ಪಾತ್ರವನ್ನು 'ಕರುಣಾಳು ಮಂಥರೆ' ಎಂದು ಕರೆದಿದ್ದಾರೆ. ಅವರ ಪ್ರಕಾರ ಮಂಥರೆ ಇಲ್ಲದಿದ್ದರೆ ರಾಮನ ವ್ಯಕ್ತಿತ್ವ ನಾಡಿನಾದ್ಯಂತ ಪ್ರಜ್ವಲಿಸುತ್ತಿರಲಿಲ್ಲ.
ಪರಿಚಯ[ಬದಲಾಯಿಸಿ]
- ಮಂಥರೆ ಅಯೋಧ್ಯೆಯ ರಾಜ ದಶರಥನ ಮೂರನೆಯ ಮಡದಿ ಕೈಕೇಯಿಯ ಸೇವಕಿಯಾಗಿದ್ದಳು. ಮದುವೆಯಾಗದ ಅವಳ ಮನದಲ್ಲೂ ಮಾತೃಸೆಲೆ ಜಿನುಗುತ್ತಿತ್ತು. ಆದರೆ ಕೈಕೇಯಿಯನ್ನು ಹೊರತು ಪಡಿಸಿ ಬೇರೆ ಯಾವ ರಾಣಿಯರು ಅವಳ ಕೈಗೆ ತಮ್ಮ ಮಕ್ಕಳನ್ನು ಆಡಿಸಲು ಕೊಡುತ್ತಿರಲಿಲ್ಲ. ಹಾಗಾಗಿ ಅವಳಿಗೆ ತಾನೇ ಬೆಳೆಸಿದ ಕೈಕೇಯಿಯ ಮಗ ಭರತನ ಮೇಲೆ ಅಪರಿಮಿತ ಪ್ರೀತಿ.
- ಆದರೆ ಒಮ್ಮೆ ಬಾಲಕ ರಾಮ ಆಗಸದ ಚಂದ್ರ ಬೇಕೆಂದು ಹಠ ಮಾಡಿ ಅಳುವಾಗ, ಅಂತಃಪುರದ ಯಾವ ರಾಣಿಯರ ಕೈಲು ಬಾಲಕ ರಾಮನನ್ನು ಸಂಭಾಳಿಸಲು ಆಗುವುದಿಲ್ಲ. ಆಕಸ್ಮಿಕವಾಗಿ ಅಲ್ಲಿಗೆ ಆಗಮಿಸಿದ ಮಂಥರೆ, ರಾಮನನ್ನು ಓಲೈಸಿ, ದೊಡ್ಡ ಹರಿವಾಣದಲ್ಲಿ ಪನ್ನೀರನ್ನು ತರಿಸಿ, ಆಕಾಶದ ಚಂದ್ರನಿಗೆ ಇದಿರಾಗಿ ಹರಿವಾಣವನ್ನು ಇರಿಸುತ್ತಾಳೆ.
- ಆಗ ಹರಿವಾಣದ ಪನ್ನೀರಿನೊಳಗೆ ಚಂದ್ರಬಿಂಬ ಒಡಮೂಡುತ್ತದೆ. ಆಗ ಮಂಥರೆ ರಾಮನನ್ನು ಕರೆದು ನಿನ್ನ ಚಂದ್ರನನ್ನು ಭೂಮಿಗೆ ತಂದಿದ್ದೇನೆ ಆಟ ಆಡಿಕೊ ಹೋಗು ಎಂದಾಗ ಬಾಲ ರಾಮ ಅಳು ನಿಲ್ಲಿಸಿ ಕಿಲಕಿಲ ನಗುತ್ತಾನೆ. ಬೇರೆ ರಾಣಿಯರು ಮಂಥರೆಗೆ ಮಾಡಿದ ತಾರತಮ್ಯದಿಂದಾಗಿ ಮಂಥರೆ ಅವರ ಬಗ್ಗೆ ದ್ವೇಷ ಭಾವವನ್ನು ತಾಳುತ್ತಾಳೆ. ಇದು ರಾಮನ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ.
ರಾಮನನ್ನು ಕಾಡಿಗೆ ಕಳುಹಿಸುವಲ್ಲಿ ಪ್ರಮುಖ ಪಾತ್ರವಾಗಿ[ಬದಲಾಯಿಸಿ]
ಶ್ರೀರಾಮ ಪ್ರಾಪ್ತ ವಯಸ್ಕನಾಗಿ, ವಿವಾಹವಾಗಿ ಯುವರಾಜನಾಗಿ ಪಟ್ಟಾಭಿಷಿಕ್ತನಾಗುವ ಸುದ್ದಿ ತಿಳಿದು, ತನ್ನ ಪ್ರಿಯ ರಾಣಿ ಕೈಕೇಯಿಯ ಮಗ ಭರತನೇ ಯುವರಾಜನಾಗಬೇಕೆಂದು ಆಶಿಸಿ, ಕೈಕೇಯಿಯ ಮನಸ್ಸು ಕೆಡಿಸಿ, ಅಯೋದ್ಯೆಯ ಸಿಂಹಾಸನಕ್ಕೆ ರಾಮನ ಬದಲು ಕೈಕೇಯಿಯ ಮಗನಾದ ಭರತನೇ ಪಟ್ಟವೇರುವಂತೆ ದಶರಥನನ್ನು ಒತ್ತಾಯಿಸಲು ಪ್ರೇರೇಪಿಸುವಳು. ಇದು ಮುಂದೆ ರಾಮಾಯಣದ ಎಲ್ಲಾ ಕಥೆಗೆ ಮೂಲವಾಯಿತು. ರಾಮ ರಾವಣನನ್ನು ಸಂಹರಿಸಿ ಲಂಕೆಯಿಂದ ಹಿಂದಿರುಗುವಾಗ ಹೆಚ್ಚು ಸಂತಸಪಟ್ಟವಳು ಮಂಥರೆಯೆಂದು ಕುವೆಂಪು ಅವರು ತಮ್ಮ "ರಾಮಾಯಣದರ್ಶನಂ" ಕೃತಿಯಲ್ಲಿ ಹೇಳಿದ್ದಾರೆ.
ವಾಲ್ಮೀಕಿ ವಿರಚಿತ ರಾಮಾಯಣ |
---|
ಪಾತ್ರಗಳು |
ವಾಲ್ಮೀಕಿ | ದಶರಥ | ಕೌಸಲ್ಯ | ಸುಮಿತ್ರ | ಕೈಕೇಯಿ | ಜನಕ | ಮಂಥರ | ರಾಮ | ಭರತ | ಲಕ್ಷ್ಮಣ | ಶತ್ರುಘ್ನ | ಸೀತಾ | ಊರ್ಮಿಳಾ | ಮಾಂಡವಿ | ಶ್ರುತಕೀರ್ತಿ | ವಿಶ್ವಾಮಿತ್ರ | ಅಹಲ್ಯೆ | ಜಟಾಯು | ಸಂಪಾತಿ | ಹನುಮಂತ | ಸುಗ್ರೀವ | ವಾಲಿ | ಅಂಗದ | ಜಾಂಬವಂತ | ವಿಭೀಷಣ | ತಾಟಕಿ | ಶೂರ್ಪನಖಿ | ಮಾರೀಚ | ಸುಬಾಹು | ಖರ | ರಾವಣ | ಕುಂಭಕರ್ಣ | ಮಂಡೋದರಿ | ಮಯಾಸುರ | ಇಂದ್ರಜಿತ್ | ಪ್ರಹಸ್ತ | ಅಕ್ಷಯಕುಮಾರ | ಅತಿಕಾಯ | ಲವ | ಕುಶ |ಕಬಂಧ |
ಇತರೆ |
ಅಯೋಧ್ಯೆ | ಮಿಥಿಲಾ | ಲಂಕಾ | ಸರಯು | ಸುಗ್ರೀವಾಜ್ಞೆ | ತ್ರೇತಾಯುಗ | ರಘುವಂಶ | ಲಕ್ಷ್ಮಣ ರೇಖೆ | ಆದಿತ್ಯ ಹೃದಯಂ | ಸಂಜೀವಿನಿ ಪರ್ವತ | ಸುಂದರಕಾಂಡ | ಪುಷ್ಪಕ ವಿಮಾನ | ವೇದಾವತಿ | ವಾನರ |ಜಟಾಯು | |