ಗುರುಪುರ

Coordinates: 12°56′20″N 74°55′52″E / 12.938828°N 74.931107°E / 12.938828; 74.931107
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗುರುಪುರ
town
ಗುರುಪುರ is located in Karnataka
ಗುರುಪುರ
ಗುರುಪುರ
Location in Karnataka, India
Coordinates: 12°56′20″N 74°55′52″E / 12.938828°N 74.931107°E / 12.938828; 74.931107
Country ಭಾರತ
Stateಕರ್ನಾಟಕ
Districtದಕ್ಷಿಣ ಕನ್ನಡ
Government
 • Bodyಮೂಳೂರು ಗ್ರಾಮ ಪಂಚಾಯತ್
Population
 (೨೦೧೧)
 • Total೫೪೬೫
ಭಾಷೆಗಳು
 • Officialತುಳು
Time zoneUTC+5:30 (IST)
PIN
೫೭೪೧೪೫[೧]
Nearest cityಮಂಗಳೂರು
Lok Sabha constituencyಮಂಗಳೂರು
Vidhan Sabha constituencyಮಂಗಳೂರು ಉತ್ತರ
Civic agencyಮೂಳೂರು ಗ್ರಾಮ ಪಂಚಾಯತ್

ಗುರುಪುರವು ಫಾಲ್ಗುಣಿ ಅಥವಾ ಗುರುಪುರ ನದಿಯಲ್ಲಿರುವ ಒಂದು ಸಣ್ಣ ಪಟ್ಟಣ .[೨] ಇದು ಕರ್ನಾಟಕ ರಾಜ್ಯದ ರಾಜಧಾನಿಯಾದ ಬೆಂಗಳೂರಿನಿಂದ ಪಶ್ಚಿಮಕ್ಕೆ ಸುಮಾರು ೩೪೫ ಕಿಲೋಮೀಟರ್ (೨೧೪ ಮೈಲು) ಮತ್ತು ಕರ್ನಾಟಕದ ಮುಖ್ಯ ಬಂದರು ನಗರವಾದ ಮಂಗಳೂರಿನಿಂದ ಪೂರ್ವ ದಿಕ್ಕಿಗೆ ಸುಮಾರು ೧೩ ಕಿಲೋಮೀಟರ್ (೮ ಮೈಲು) ದೂರದಲ್ಲಿದೆ .[೩]
ಅಲ್ಲಿನ ನಿವಾಸಿಗಳು ವಿವಿಧ ಸಾಂಸ್ಕೃತಿಕ ಹಿನ್ನೆಲೆಯುಳ್ಳವರು . ಅದರಲ್ಲಿ ಬಿಲ್ಲವ , ಬಂಟ್ಸ್ , ಗೌಡ , ಮತ್ತು ಸರಸತ್ವ ಬ್ರಾಹ್ಮಣರು ಸೇರಿದ್ದಾರೆ . ಸಾಮಾನ್ಯ ಸಂವಹನಕ್ಕಾಗಿ ತುಳು ಪ್ರಾಥಮಿಕ ಭಾಷೆಯಾಗಿದೆ . ಆದರೆ ಕೊಂಕಣಿ , ಬ್ಯಾರಿ ಮತ್ತು ಕನ್ನಡ ಭಾಷೆ ಗಳಲ್ಲೂ ಜನರು ಮಾತನಾಡುತ್ತಾರೆ .[೪]

ಪರಿಚಯ[ಬದಲಾಯಿಸಿ]

ಗುರುಪುರ ಭಾರತದ ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನಲ್ಲಿರುವ ಒಂದು ಸಣ್ಣ ಗ್ರಾಮ / ಕುಗ್ರಾಮ . ಇದು ಗುರುಪುರ ಪಂಚಾಯತ್ ಅಡಿಯಲ್ಲಿ ಬರುತ್ತದೆ. ಇದು ಮೈಸೂರು ವಿಭಾಗಕ್ಕೆ ಸೇರಿದೆ ಹಾಗೂ ಜಿಲ್ಲಾ ಕೇಂದ್ರವಾದ ಚಿಕ್ಕಮಗಳೂರಿನಿಂದ ಉತ್ತರಕ್ಕೆ ೪೧ ಕಿ.ಮೀ ದೂರದಲ್ಲಿದೆ. ತರೀಕೆರೆಯಿಂದ ೧೮ ಕಿ.ಮೀ. ಮತ್ತು ರಾಜ್ಯದ ರಾಜಧಾನಿ ಬೆಂಗಳೂರಿನಿಂದ ೨೫೨ ಕಿ.ಮೀ. ದೂರದಲ್ಲಿದೆ .

ಇತಿಹಾಸ[ಬದಲಾಯಿಸಿ]

ಸ್ಥಳೀಯ ದೇವಾಲಯಗಳ ದಾಖಲೆಗಳ ಪ್ರಕಾರ , ಗುರುಪುರ ಪಟ್ಟಣವನ್ನು ಹಿಂದೆ ಗುಲಿಪುರ ಎಂದು ಕರೆಯುತ್ತಿದ್ದರು . ಫಾಲ್ಗುಣಿ ನದಿಯ ದಡದಲ್ಲಿ ನೆಲೆಗೊಂಡಿರುವ ಗುಲಿಪುರ ವಾಣಿಜ್ಯ ಪಟ್ಟಣವಾಗಿದ್ದು , ನದಿಯ ಇತರ ಭಾಗಗಳಿಗೆ ಅದರ ಸಂಪರ್ಕ ಹೊಂದಿದೆ .[೫] ಬಂಡಸಾಲೆ ಎಂಬುದು ಅಲ್ಲಿನ ಒಂದು ಸ್ಥಳ [೬], ಅಲ್ಲಿನ ಸಿಗುವ ಸರುಕುಗಳನ್ನು ಸಂಗ್ರಹಿಸಿ ಅನೇಕ ಸ್ಥಳಗಳಿಗೆ ವಿತರಿಸಲಾಗುತ್ತದೆ . ಕುಡಿಯುವ ನೀರಿನ ಸರಬರಾಜು ಗಾಗಿ ನಿರ್ಮಿಸಲಾದ ಅಣೆಕಟ್ಟಿನಂತಹ ರಚನೆಯುಳ್ಳ 'ಬಾಂಗ್ಲಾ ಗುಡ್ಡೆ' ಯನ್ನು ಗುರುಪುರದಲ್ಲಿ ಟಿಪ್ಪು ಸುಲ್ತಾನ್ ರವರು ನಿರ್ಮಿಸಿದ್ದಾರೆ.[೭] [೮]

ಹತ್ತಿರದ ಸ್ಥಳಗಳು[ಬದಲಾಯಿಸಿ]

ಗುರುಪುರವು ಮಂಗಳೂರು ನಗರದಿಂದ - ೧೨ ಕಿ.ಮಿ(೭.೫ ಮೈಲು) .[೯][೧೦] ; ಕೈಕಂಬದಿಂದ - ೦೫ ಕಿ.ಮೀ. (೩.೧ ಮೈಲು) .[೧೧]; ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ , ಕರ್ನಾಟಕದಿಂದ - ೨೮ ಕಿ.ಮೀ(೧೭ ಮೈಲು) .[೧೨]; ಸುರತ್ಕಲ್ ನಿಂದ‌ - ೨೯ ಕಿ.ಮೀ(೧೮ ಮೈಲು) .[೧೩]; ಫಾಲ್ಗುಣಿ ನದಿತಿಂದ - ೦೦ ಕಿ.ಮೀ(೦ ಮೈಲು); ಉಡುಪಿಯಿಂದ - ೬೬ ಕಿ.ಮೀ(೪೧ ಮೈಲು) .[೧೪] ದೂರದಲ್ಲಿದೆ .

ಗುರುಪುರ ತಲುಪಲು ದಾರಿ[ಬದಲಾಯಿಸಿ]

ರಸ್ತೆ ಮೂಲಕ[ಬದಲಾಯಿಸಿ]

ತರೀಕೆರೆ ಗುರುಪುರಕ್ಕೆ ಹತ್ತಿರದ ಪಟ್ಟಣ. ತರೀಕೆರೆ ಗುರುಪುರದಿಂದ ೨೩ ಕಿ.ಮೀ ದೂರದಲ್ಲಿದೆ. ತರೀಕೆರೆದಿಂದ ಗುರುಪುರದವರೆಗೆ ರಸ್ತೆ ಸಂಪರ್ಕವಿದೆ.

ರೈಲು ದಾರಿ[ಬದಲಾಯಿಸಿ]

ಗುರುಪುರ ಬಳಿ ೧೦ ಕಿ.ಮೀ.ಗಿಂತ ಕಡಿಮೆ ದೂರದಲ್ಲಿ ಯಾವುದೇ ರೈಲು ನಿಲ್ದಾಣವಿಲ್ಲ. ಪಟ್ಟಣದ ತರೀಕೆರೆ ಹತ್ತಿರದಲ್ಲಿ ರೈಲ್ವೆ ನಿಲ್ದಾಣಗಳಿವೆ . ಅಲ್ಲಿಂದ ಗುರುಪುರಕ್ಕೆ ತಲುಪಬಹುದು.[೧೫]

ಧಾರ್ಮಿಕ ತಾಣಗಳು[ಬದಲಾಯಿಸಿ]

ಗುರುಪುರವು ಧಾರ್ಮಿಕ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ ಮತ್ತು ಈ ಪಟ್ಟಣದ ನಂತರ ಫಾಲ್ಗುಣಿ ನದಿಯನ್ನು ಗುರುಪುರ ಎಂದು ಹೆಸರಿಸಲಾಗಿದೆ . ಇದು ವಾಮಂಜೂರು ಮತ್ತು ಕಾಳಿಕಾಂಬ ಸ್ಥಳಕ್ಕೂ ಹತ್ತಿರದಲ್ಲಿದೆ .[೧೬] ದಕ್ಷಿಣ ಕನ್ನಡ ಜಿಲ್ಲೆಯ ತ್ವರಿತ ನಗರೀಕರಣದೊಂದಿಗೆ ಈ ಗ್ರಾಮವು ಒಂದು ಸಣ್ಣ ಪಟ್ಟಣವಾಗಿ ಮಾರ್ಪಟ್ಟಿದೆ. ಹಿಂದೂ ದೇವತೆಗಳಾದ ವರದ್ರಾಜ , ವೆಂಕಟರಮಣ ಮತ್ತು ಶ್ರೀ ಸತ್ಯದೇವತೆ ಧರ್ಮದೇವತೆ[೧೭] ಯ ದೇವಾಲಯಗಳು ಇಲ್ಲಿ ಕಂಡುಬರುತ್ತವೆ.[೧೮] ಹಬ್ಬಗಳು ವರ್ಷದ ಬಹುಪಾಲು ಇಲ್ಲಿ ನಡೆಯುತ್ತವೆ, ಆದರೆ ಮುಖ್ಯ ಹಬ್ಬವು ಸಾಮಾನ್ಯವಾಗಿ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ನಡೆಯುತ್ತದೆ . ಭಾರತೀಯ ಕ್ಯಾಲೆಂಡರ್ ತಿಂಗಳಲ್ಲಿ ಗುರುಪುರ ತೆರು[೧೯] , ಓಕುಲ್, ಒಡು ತೆರು ಎಂದು ಹೆಸರಿಸಲಾಗುತ್ತದೆ . ಶ್ರೀ ಸತ್ಯದೇವತಾ ಧರ್ಮದೇವತಾ ದೇವಸ್ಥಾನದ ಸ್ವಲ್ಪ ದೂರದಲ್ಲಿ ದೊಡ್ಡ ಮಸೀದಿ ಇದೆ .

ಉಲ್ಲೇಖಗಳು[ಬದಲಾಯಿಸಿ]

  1. ಪಿನ್ ಕೋಡ್
  2. ಗುರುಪುರ ನದಿ
  3. "Indian express". Archived from the original on 2022-07-17. Retrieved 2019-06-20.
  4. Explore India
  5. [೧]
  6. ಬಂಡಸಲೆ[ಶಾಶ್ವತವಾಗಿ ಮಡಿದ ಕೊಂಡಿ]
  7. Megamedia news
  8. ಟಿಪ್ಪು ಸುಲ್ತಾನ್ ರವರು ನಿರ್ಮಿಸಿದ ಬಾಂಗ್ಲಾ ಗುಡ್ಡೆ[ಶಾಶ್ವತವಾಗಿ ಮಡಿದ ಕೊಂಡಿ]
  9. ಗುರುಪುರ[ಶಾಶ್ವತವಾಗಿ ಮಡಿದ ಕೊಂಡಿ]
  10. ಮಂಗಳೂರಿನಿಂದ ಗುರುಪುರಕ್ಕೆ
  11. ಗುರುಪುರದಿಂದ ಕೈಕಂಬಕ್ಕಿರುವ ಅಂತರ
  12. ಎನ್ಐಟಿಕೆ ಯಿಂದ ಗುರುಪುರಕ್ಕಿರುವ ಅಂತರ
  13. ಗುರುಪುರದಿಂದ ಸುರತ್ಕಲ್ ಗೆ ಇರುವ ಅಂತರ
  14. ಉಡುಪಿಯಿಂದ ಗುರುಪುರಕ್ಕಿರುವ ಅಂತರ
  15. https://www.onefivenine.com/india/villages/Chikmagalur/Tarikere/Gurupura
  16. ಗುರುಪುರ ಮತ್ತು ವಾಮಂಜೂರಿಗೆ ಇರುವ ಅಂತರ
  17. ಶ್ರೀ ಸತ್ಯದೇವತೆ ಮಂದಿರ
  18. "ಗುರುಪುರದಲ್ಲಿನ ದೇವಾಲಯ". Archived from the original on 2021-12-24. Retrieved 2019-06-20.
  19. ಗುರುಪುರ ತೆರು
"https://kn.wikipedia.org/w/index.php?title=ಗುರುಪುರ&oldid=1186484" ಇಂದ ಪಡೆಯಲ್ಪಟ್ಟಿದೆ