ಆಳಂದ (ಕರ್ನಾಟಕ)
ಆಳಂದ Aland | |
---|---|
Town | |
ದೇಶ | ![]() |
ರಾಜ್ಯ | ಕರ್ನಾಟಕ |
ಜಿಲ್ಲೆ | ಕಲಬುರಗಿ |
ಕ್ಷೇತ್ರಫಲ | |
• ಒಟ್ಟು | ೮ km೨ (೩ sq mi) |
Elevation | ೪೮೦ m (೧,೫೭೦ ft) |
ಜನಸಂಖ್ಯೆ (2011) | |
• ಒಟ್ಟು | ೪೨,೩೭೧ |
• ಸಾಂದ್ರತೆ | ೪,೪೧೩.೫/km೨ (೧೧,೪೩೧/sq mi) |
ಭಾಷೆಗಳು | |
• ಅಧಿಕೃತ | ಕನ್ನಡ |
ಸಮಯ ವಲಯ | ಯುಟಿಸಿ+5:30 (IST) |
ಪಿನ್ ಕೋಡ್ | 585 302 |
Telephone code | 08477 |
ವಾಹನ ನೋಂದಣಿ | KA-32 |
ಲೋಕ ಸಭೆ | ಬೀದರ್ (ಲೋಕ ಸಭೆ) |
ವಿಧಾನ ಸಭೆ | ಆಳಂದ |
ಜಾಲತಾಣ | www.alandatown.mrc.gov.in |
ಆಳಂದ ಕರ್ನಾಟಕ ರಾಜ್ಯದ ಕಲಬುರಗಿ ಜಿಲ್ಲೆಯ ಪಟ್ಟಣ ಪಂಚಾಯಿತಿ ಮತ್ತು ತಾಲ್ಲೂಕು ಕೆಂದ್ರ.
ಭೌಗೋಲಿಕ ವಿವರಗಳು[ಬದಲಾಯಿಸಿ]
- ಅಕ್ಷಾಂಶ / ರೇಖಾಂಶ : ೧೭.೫೭ ಡಿಗ್ರಿ ಉತ್ತರ ಮತ್ತು ೭೬.೫೭ ಡಿಗ್ರಿ ಉತ್ತರ,ಸಮುದ್ರಮಟ್ಟದಿಂದ ಸರಾಸರಿ ಎತ್ತರ : ೪೮೦ ಮೀಟರುಗಳು,ಕ್ಷೇತ್ರಫಲ : ೮ ಚದರ ಕಿ.ಮೀ
- ಅಕ್ಕಪಕ್ಕದ ತಾಲೂಕುಗಳು : ಗುಲ್ಬರ್ಗ ಪೂರ್ವಕ್ಕೆ, ಅಫಜಲ್ಪುರ ತಾಲೂಕು ದಕ್ಷಿಣಕ್ಕೆ ,ಮತ್ತು ಬೀದರ್ ಜಿಲ್ಲೆಯ ಬಸವಕಲ್ಯಾಣ ಉತ್ತರ-ಪಶ್ಷಿಮಕ್ಕೆ, ಮಹಾರಾಷ್ಟ್ರದ ಅಕ್ಕಲಕೋಟೆ ಪಶ್ಚಿಮಕ್ಕೆ ಮತ್ತು ಮಹಾರಾಷ್ಟ್ರದ ಉಮರ್ಗಾ ಉತ್ತರಕ್ಕೆ.ಅಮರ್ಗಾ.
ಜನಸಂಖ್ಯಾ ಅಂಕಿ ಅಂಶ[ಬದಲಾಯಿಸಿ]
೨೦೧೧ರ ಜನಗಣತಿ ಯ ಪ್ರಕಾರ ಆಳಂದಿನ ಜನಸಂಖ್ಯೆ ೪೨,೩೭೧.[೧] ಇದರಲ್ಲಿ ೫೨% ಶೇಕಡಾ ಪುರುಷರು ಮತ್ತು ಬಾಕಿ ೪೮% ಸ್ತ್ರೀಯರು. ಇಲ್ಲಿಯ ೪೯.೪% ಸರಾಸರಿ ಸಾಕ್ಷರತೆ ಭಾರತದ ಸಾಕ್ಷರತಾ ಪ್ರಮಾಣಕ್ಕಿಂತ (೫೯.೫%) ಕಡಿಮೆಯಿದೆ. ೬೦% ಪುರುಷರು ಮತ್ತು ೪೦% ಸ್ತ್ರೀಯರು ಅದರಲ್ಲಿದ್ದಾರೆ. ಒಟ್ಟು ಜನಸಂಖ್ಯೆಯಲ್ಲಿ ೬ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ೧೬%ರಷ್ಟಿದ್ದಾರೆ.
ಪ್ರಮುಖ ಬೆಳೆಗಳು[ಬದಲಾಯಿಸಿ]
ಕೃಷಿ ಇಲ್ಲಿನ ಪ್ರಮುಖ ಕಸುಬಾಗಿದೆ, ಪ್ರಮುಖ ಬೆಳೆಗಳೆಂದರೆ ತೊಗರಿ, ಜೋಳ, ಉದ್ದು, ಕಬ್ಬು, ಶೆಂಗಾ, ಗೋದಿ ಇತ್ಯಾದಿ . ಇದೀಗ ರೇಷ್ಮೇ ಬೆಳೆಯುತ್ತಿದ್ದಾರೆ.ಕಬ್ಬು ಪ್ರಮುಖ ಬೆಳೆ ಆಗಿದೆ.
ಆಳಂದ ತಾಲ್ಲೂಕಿನ ಪ್ರಮುಖ ಹೊಬಳಿಗಳು[ಬದಲಾಯಿಸಿ]
- ಆಳಂದ ಕಸಬಾ
- ಮಾದನ ಹಿಪ್ಪಾರಗಾ
- ಖಜ್ಜುರಗಿ
- ನರೋಣಾ
- ನಿಂಬರಗಾ
- ಮಾಡಿಯಾಳ
ಉಲ್ಲೆಖ[ಬದಲಾಯಿಸಿ]
ಆಳಂದ ತಾಲ್ಲೂಕಿನಲ್ಲಿ ೧೩೫ ಹಳ್ಳಿಗಳಿವೆ. ಮಾದನ ಹಿಪ್ಪಾರಗಾ ಹೋಬಳಿಯಲ್ಲಿ ಶ್ರೀ ಶೀವಲಿಂಗೇಶ್ವರ ವಿರಕ್ತ ಮಠ, ಸದ್ಗುರು ಶರಣ ಶಿವಲಿಂಗೇಶ್ವರ ಮಠ, ಶಾಂತವೀರ ಶಿವಾಚಾರ್ಯ ಹಿರೇಮಠ, ಶಾಂತಲಿಂಗೇಶ್ವರ ದೇವಸ್ಥಾನ,ಖಂಡೇಶ್ವರ ದೇವಾಲಯ, ನೂಲಿ ಚೆನ್ನಯ್ಯ ದೇವಸ್ಥಾನ ಸುಂದರವಾಗಿದೆ. ಝಳಕಿ(ಕೆ) ಎಂಬ ಗ್ರಾಮದಲ್ಲಿ ಶ್ರೀ ಭಿಮಾಶಂಕರ ದೇವಾಲಯ ನೋಡಲು ಸುಂದರವಾಗಿದೆ.
ಆಳಂದ ತಾಲ್ಲೂಕಿನ ಚಲಗೇರಾ ಗ್ರಾಮದಲ್ಲಿ ಹನುಮಾನ ದೇವಾಲಯ ಸುಂದರವಾಗಿದೆ. ಮತ್ತು ಸಿದ್ದಲಿಂಗ ಕಲ್ಯಾಣ ಮಂಟಪ ನೋಡುವಹಾಗಿದೆ.ಶ್ರಿ ಶಾಂತೇಶ್ವರ ಆಶ್ರಮ ಹಾಗೂ ದೇವಿಲಿಂಗ ಹವಾ ಮಲ್ಲಿನಾಥ ಆಶ್ರಮ ಸುಂದರವಾಗಿವೆ. ಚಲಗೇರಾ ಗ್ರಾಮದಲ್ಲಿ ಪ್ರತಿ ವರ್ಷ ದವನದ ಹುಣ್ಣಿಮೆ,ಹನುಮ ಜಯಂತಿಆಗಿ ಮೂರನೇ ದಿನ ಸಂಕಷ್ಟ ಚತುರ್ಥಿಯ ದಿನ ರಾತ್ರಿ ಹನುಮಾನ ದೇವರ ರಥೋತ್ಸವವು ಅದ್ದೂರಿಯಾಗಿ ಜರುಗುತ್ತದೆ. ಅದರ ಮರುದಿನ ಪಲ್ಲಕ್ಕಿ ಉತ್ಸವ ಇರುತ್ತದೆ.
ಲಿಂಗದಳ್ಳಿ ಗ್ರಾಮದಲ್ಲಿ ಬಸವೇಶ್ವರ ದೇವಸ್ಥಾನ ಇದೆ
ಅಳಂದ ತಾಲೂಕಿನ ಧುತ್ತರಗಾಂವ ಗ್ರಾಮದಲ್ಲಿ ಅತೀ ಹಳೆಯ ವೀರೇಶ್ವರ ದೇವಾಲಯವಿದೆ.ಧಂಗಾಪುರ ಗ್ರಾಮ ಚೆನ್ನಾಗಿದೆ.ಆಳಂದ ತಾಲ್ಲೂಕಿನ ಖೇಡಉಮರಗಾ ಅತೀ ಚಿಕ್ಕ ಹಳ್ಳಿಯಾಗಿದೆ.ತಾಲ್ಲೂಕಿನ ನಿಂಬಾಳ ಗ್ರಾಮದಲ್ಲಿ ಶ್ರೀ ಜಡೆಯ ಶಾಂತಲಿಂಗೇಶ್ವರ ಮಠ ಇದೆ.ಮದಗುಣಕಿ ಗ್ರಾಮದಲ್ಲಿ ಪಂಚಮಸಾಲಿ ಜಾತಿಯವರು ಬಹಳ ಹೆಚ್ಚು ಇದ್ದಾರೆ.ಆಳಂದ ನಗರದಲ್ಲಿ ಮುಸ್ಲಿಂಮರು ಬಹಳ ಇದ್ದಾರೆ.