ಉಮಾ ರಾಮರಾವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೆ. ಉಮಾ ರಾಮರಾವ್
೨೦೦೪ ರಲ್ಲಿ
Born
ಉಮಾ ಮಹೇಶ್ವರಿ

(೧೯೩೮-೦೭-೦೪)೪ ಜುಲೈ ೧೯೩೮
DiedAugust 27, 2016(2016-08-27) (aged 78)
Awardsಕಲಾ ನೀರಾಜನಂ, ಶ್ರೀ ಕಲಾ ಪೂರ್ಣ, ಪ್ರತಿಭಾ ಪುರಸ್ಕಾರ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ.

 

ಕೆ. ಉಮಾ ರಾಮ ರಾವ್ ಅವರು (೪ ಜುಲೈ ೧೯೩೮ - ೨೭ ಆಗಸ್ಟ್ ೨೦೧೬) [೧] ಭಾರತೀಯ ಕೂಚಿಪುಡಿ ನೃತ್ಯಗಾರ್ತಿ, ನೃತ್ಯ ಸಂಯೋಜಕಿ, ಸಂಶೋಧನಾ ವಿದ್ವಾಂಸೆ, ಲೇಖಕಿ ಮತ್ತು ನೃತ್ಯ ಶಿಕ್ಷಕಿ. [೨] ಇವರು ಭಾರತದ ಹೈದರಾಬಾದ್‌ನಲ್ಲಿ ೧೯೮೫ ರಲ್ಲಿ ಸ್ಥಾಪಿಸಲಾದ ಲಾಸ್ಯ ಪ್ರಿಯಾ ಡ್ಯಾನ್ಸ್ ಅಕಾಡೆಮಿಯ ಸಂಸ್ಥಾಪಕ ಮತ್ತು ನಿರ್ದೇಶಕರಾಗಿದ್ದರು. [೩]

೨೦೦೩ ರಲ್ಲಿ, ಇವರಿಗೆ ಭಾರತದ ರಾಷ್ಟ್ರೀಯ ಸಂಗೀತ ನೃತ್ಯ ಮತ್ತು ನಾಟಕ ಅಕಾಡೆಮಿಯಿಂದ ಕೊಡಲ್ಪಡುವ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ಕೂಚಿಪುಡಿಯ ಪ್ರಾವೀಣ್ಯತೆಗಾಗಿ ನೀಡಲಾಯಿತು. [೪] ಇವರು ಸಂಗೀತ ನಾಟಕ ಅಕಾಡೆಮಿಯ ಮೂಲಕ ಭಾರತ ಸರ್ಕಾರದ ಸಂಸ್ಕೃತಿ ಇಲಾಖೆಯು ನೀಡುವ ರಾಷ್ಟ್ರೀಯ ಹಿರಿಯ ಫೆಲೋಶಿಪ್ ಅನ್ನು ಪಡೆದಿದ್ದಾರೆ.

ಆರಂಭಿಕ ಜೀವನ ಮತ್ತು ಶಿಕ್ಷಣ[ಬದಲಾಯಿಸಿ]

ಉಮಾ ರಾಮರಾವ್ ಅವರ ಆರಂಭಿಕ ವೃತ್ತಿಜೀವನದಲ್ಲಿ

ಉಮಾ ರಾಮ ರಾವ್ ಅವರು ೪ ಜುಲೈ ೧೯೩೮ ರಂದು ಆಂಧ್ರಪ್ರದೇಶದ ವಿಶಾಖಪಟ್ಟಣಂನ 'ವಡ್ಡಾಡಿ' ಕುಟುಂಬದಲ್ಲಿ ಡಾ. ವಿ.ವಿ.ಕೃಷ್ಣ ರಾವ್ ಮತ್ತು ಸೌಭಾಗ್ಯಮ್ಮರಿಗೆ "ಉಮಾ ಮಹೇಶ್ವರಿ" ಆಗಿ ಜನಿಸಿದರು. ಸಾಹಿತ್ಯ, ಸಂಗೀತ ಮತ್ತು ನೃತ್ಯದಲ್ಲಿ ಅಪಾರ ಆಸಕ್ತಿ ಹೊಂದಿರುವ ಪ್ರತಿಷ್ಠಿತ ವಿದ್ವಾಂಸರ ಹಿನ್ನೆಲೆಯನ್ನು ಹೊಂದಿರುವ ಅವರ ಕುಟುಂಬದಿಂದ ಉತ್ತೇಜಿತರಾದ ಅವರು ಆಚಾರ್ಯ ಪಿ.ವಿ.ನರಸಿಂಹರಾವ್, ಪದ್ಮಶ್ರೀ ಡಾ. ನಟರಾಜ ರಾಮಕೃಷ್ಣ, ಬ್ರಹ್ಮಶ್ರೀ ಮುಂತಾದ ಗುರುಗಳಿಂದ ೫ ವರ್ಷ ವಯಸ್ಸಿನಿಂದಲೇ ನೃತ್ಯ ತರಬೇತಿಯನ್ನು ಪ್ರಾರಂಭಿಸಿದರು. ವೇದಾಂತ ಲಕ್ಷ್ಮೀ ನಾರಾಯಣ ಶಾಸ್ತ್ರಿ, ಗುರು ಪಕ್ಕಿರಿಸ್ವಾಮಿ ಪಿಳ್ಳೈ ಮತ್ತು ಗುರು ಸಿಆರ್ ಆಚಾರ್ಯ ಕೂಚಿಪುಡಿ, ಭರತ ನಾಟ್ಯ ಮತ್ತು ಧಾರ್ಮಿಕ ನೃತ್ಯ ಸಂಪ್ರದಾಯಗಳನ್ನು ಕಲಿತರು. ಈ ಪ್ರಾಚೀನ ಸಾಂಪ್ರದಾಯಿಕ ಕಲಾ ಪ್ರಕಾರಗಳ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ಅಂಶಗಳಲ್ಲಿ ಅವರು ಪ್ರವೀಣರಾದರು. ಅವರ ಆರಂಭಿಕ ವರ್ಷಗಳಲ್ಲಿ, ಅವರ ಸಹೋದರಿ ಸುಮತಿ ಕೌಶಲ್ ಜೊತೆಗೆ, ತಮ್ಮ ಗುರುಗಳ ವೈಯಕ್ತಿಕ ಮಾರ್ಗದರ್ಶನದಲ್ಲಿ ಹಲವಾರು ಸ್ಥಳಗಳಲ್ಲಿ ವಿವಿಧ ಸಂದರ್ಭಗಳಲ್ಲಿ ಪ್ರದರ್ಶನ ನೀಡಿದರು. ಈ ಅವಧಿಯಲ್ಲಿ ೧೯೫೩ ಮತ್ತು ೧೯೫೫ ರಲ್ಲಿ, ಅವರು ಆಗಿನ ಮದ್ರಾಸ್ ಸರ್ಕಾರವು ನಡೆಸಿದ ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಪರೀಕ್ಷೆಗಳಲ್ಲಿ ಉತ್ತೀರ್ಣರಾದರು. ನಂತರ ತಮ್ಮ ಗುರುಗಳ ಮುಖ್ಯವಾಗಿ ಡಾ.ನಟರಾಜ ರಾಮ ಕೃಷ್ಣ ಅವರ ಆಶೀರ್ವಾದದಿಂದ ಈ ಸಂಪ್ರದಾಯವನ್ನು ಯುವ ಪೀಳಿಗೆಗೆ ವರ್ಗಾಯಿಸಲು ಅವರು ಬೋಧನೆಯನ್ನು ತೆಗೆದುಕೊಂಡರು.

ಅಷ್ಟೇ ಅಲ್ಲದೇ ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದರು.

ಪ್ರದರ್ಶನಗಳು[ಬದಲಾಯಿಸಿ]

ಉಮಾ ಅವರು ಹಲವಾರು ಏಕವ್ಯಕ್ತಿ ವಸ್ತುಗಳು, ನೃತ್ಯ ವೈಶಿಷ್ಟ್ಯಗಳು, ನೃತ್ಯ ನಾಟಕಗಳು ಮತ್ತು ಸಾಂಪ್ರದಾಯಿಕ ಯಕ್ಷಗಾನಗಳನ್ನು ನೃತ್ಯ ಸಂಯೋಜನೆ ಮಾಡಿದರು. ಇದು ಹಿಂದಿನ ವರ್ಷಗಳ ಶ್ರೇಷ್ಠ ಸಂಯೋಜಕರು ಮತ್ತು ಇಂದಿನ ಸಮಕಾಲೀನ ಬರಹಗಾರರ ಸಾಹಿತ್ಯವನ್ನು ಆಧರಿಸಿದೆ. ಇದು ಅವರಿಗೆ ಪ್ರಶಸ್ತಿಗಳನ್ನು ತಂದುಕೊಟ್ಟಿತು. ಮೂಲ ಸಾಂಪ್ರದಾಯಿಕ ರಚನೆಯಿಂದ ತಮ್ಮ ಸೌಂದರ್ಯ, ತಾತ್ವಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳೊಂದಿಗೆ ವಿಮುಖವಾಗದೆ, ಹಳೆಯ ಸಾಂಪ್ರದಾಯಿಕ ಸಾಹಿತ್ಯ ರತ್ನಗಳನ್ನು ಬೆಳಕಿಗೆ ತರುವುದು ಮತ್ತು ಹೊಸ ದೃಷ್ಟಿಕೋನವನ್ನು ನೀಡುವುದು ಅವರ ಧ್ಯೇಯವಾಕ್ಯವಾಗಿದೆ. ಕೆಲವು ಸಾಂಪ್ರದಾಯಿಕ ನಾಟಕಗಳಾದ ಶ್ರೀ ತ್ಯಾಗರಾಜರ ನೌಕ ಚರಿತ್ರೆ, ಪ್ರಹ್ಲಾದ ಭಕ್ತಿ ವಿಜಯಂ, ರಾಜ ಶಹಾಜಿಯ ಶಂಕರ ಮತ್ತು ವಿಷ್ಣು ಪಲ್ಲಕಿ ಸೇವಾ ಪ್ರಬಂಧಗಳು, ವಿಘ್ನೇಶ್ವರ ಕಲ್ಯಾಣ, ನಾರಾಯಣ ತೀರ್ಥರ ಸಾಧ್ವಿ ರುಕ್ಮಿಣಿ, ಮಾತೃಭೂತಯ್ಯನ ಪಾರಿಜಾತಾಪಹರಣಂ, ಕಾಕುತೂರಿಯ ವಿಶ್ವಾತ್ಯಂ ಪದ್ಮಾವತಿಯ ನೃತ್ಯ, ಶಿವನ ಕುತುರಿ ಮಂಡನೆಯ ಪದ್ಮಾವತಿ ಮುಂತಾದವುಗಳನ್ನು ಉಲ್ಲೇಖಿಸಬಹುದು. ಪದ್ಮಭೂಷಣ ಡಾ. ಸಿ.ನಾರಾಯಣ ರೆಡ್ಡಿ ಅವರ ಸ್ವರ ರಾಗ ನರ್ತನಂ, ತೆಲುಗು ವೆಲುಗುಲು, ಮೇಧಾ, ಕಂಪ್ಯೂಟರ್‌ನಲ್ಲಿ ಮೇಧಾ ವಿಕಾಸ್, ಇದು ಇವರ ಬಹುಮುಖ ನೃತ್ಯ ಪ್ರತಿಭೆ ಮತ್ತು ವಿಷಯದಲ್ಲಿ ಅವರ ಪಾಂಡಿತ್ಯಪೂರ್ಣ ಜ್ಞಾನವನ್ನು ಪ್ರದರ್ಶಿಸಿತು.

ಶಿಕ್ಷಕ ವೃತ್ತಿ[ಬದಲಾಯಿಸಿ]

ಉಮಾ ರಾಮ ರಾವ್ ಹೈದರಾಬಾದ್‌ನ ಶ್ರೀ ತ್ಯಾಗರಾಜರ ಸರ್ಕಾರಿ ಸಂಗೀತ ಮತ್ತು ನೃತ್ಯ ಕಾಲೇಜಿನಲ್ಲಿ ೧೯೬೯ ರಿಂದ ೧೯೮೮ ರವರೆಗೆ ಹಿರಿಯ ನೃತ್ಯ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು ಮತ್ತು ವಿದ್ಯಾರ್ಥಿಗಳಿಗೆ ಭರತ ನಾಟ್ಯದಲ್ಲಿ ಪ್ರಮಾಣಪತ್ರ, ಡಿಪ್ಲೊಮಾ ಮತ್ತು ಪದವಿ ಕೋರ್ಸ್‌ಗಳಲ್ಲಿ ತರಬೇತಿ ನೀಡಿದರು. ಪರಿಣಾಮವಾಗಿ, ಅವರು ಹೈದರಾಬಾದ್‌ನ ಪೊಟ್ಟಿ ಶ್ರೀರಾಮುಲು ತೆಲುಗು ವಿಶ್ವವಿದ್ಯಾನಿಲಯದಲ್ಲಿ ಅಸೋಸಿಯೇಟ್ ಪ್ರೊಫೆಸರ್ ಹುದ್ದೆಯಲ್ಲಿ ನೃತ್ಯ ವಿಭಾಗದ ಮುಖ್ಯಸ್ಥರ ಜವಾಬ್ದಾರಿಯನ್ನು ವಹಿಸಿಕೊಂಡರು.

ಕಲಾ ವಿದ್ಯಾರ್ಥಿಗಳಿಗೆ ನೃತ್ಯ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಇತರ ಚಟುವಟಿಕೆಗಳಿಗೆ ಮಾರ್ಗದರ್ಶನ ನೀಡಲು, ಅವರು ' ಯಕ್ಷಗಾನ [೫] ರಾಜ ಶಹಾಜಿ -೧೧ ರ ಪ್ರಬಂಧಗಳು' - (ಕ್ರಿ.ಶ. ೧೬೮೪ ರಿಂದ ೧೭೧೨ ರವರೆಗೆ ತಂಜಾವೂರನ್ನು ಆಳಿದ ಮತ್ತು೨೦ ಯಕ್ಷಗಾನಗಳನ್ನು ರಚಿಸಿದ ಮಹಾರಾಷ್ಟ್ರದ ತೆಲುಗು ಭಾಷೆಯಲ್ಲಿನ ನಾಟಕಗಳು) ಕುರಿತು ತಮ್ಮ ಪ್ರಬಂಧವನ್ನು ಸಲ್ಲಿಸಿದ್ದರು. ೧೯೯೪ ರಲ್ಲಿ ಚಿನ್ನದ ಪದಕದೊಂದಿಗೆ ಪಿಎಚ್‌ಡಿ ಪದವಿಯನ್ನು ಪಡೆದರು.

ಅವರ ಕೆಲವು ಪ್ರಸಿದ್ಧ ಶಿಷ್ಯೆಯರೆಂದರೆ, ಡಾ. ಅಲೇಖ್ಯಾ ಪುಂಜಾಲ (ತೆಲುಗು ವಿಶ್ವವಿದ್ಯಾನಿಲಯದಲ್ಲಿ ನೃತ್ಯ ವಿಭಾಗದ ಮುಖ್ಯಸ್ಥರು), [೬] ಜ್ಯೋತಿ ಲಕ್ಕರಾಜು, ಮಾಧುರಿ ಕಿಶೋರ್, ಪದ್ಮಾ ಚೆಬ್ರೋಲು, ಪಲ್ಲವಿ ಕುಮಾರ್, ಫಣಿ ಜಯಂತಿ ಸೇನ್ ಇನ್ನೂ ಅನೇಕರು. [೭]

ಲಾಸ್ಯ ಪ್ರಿಯಾ ಡ್ಯಾನ್ಸ್ ಅಕಾಡೆಮಿ[ಬದಲಾಯಿಸಿ]

ಅವರು ೧೯೮೫ ರಲ್ಲಿ ಆಂಧ್ರಪ್ರದೇಶದ ಹೈದರಾಬಾದ್‌ನಲ್ಲಿ ಲಾಸ್ಯ ಪ್ರಿಯಾ ಎಂಬ ನೃತ್ಯ ಸಂಸ್ಥೆಯನ್ನು ಸ್ಥಾಪಿಸಿದರು. ಇದು ಕೂಚಿಪುಡಿ ಮತ್ತು ಭರತ ನಾಟ್ಯ ಶಾಸ್ತ್ರೀಯ ನೃತ್ಯ ಸಂಪ್ರದಾಯಗಳಲ್ಲಿ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ಅಂಶಗಳಲ್ಲಿ ತರಬೇತಿಯನ್ನು ನೀಡುತ್ತದೆ ಮತ್ತು ವಿವಿಧ ಹಂತದ ರಾಜ್ಯ ಸರ್ಕಾರ ಮತ್ತು ವಿಶ್ವವಿದ್ಯಾಲಯ ಪರೀಕ್ಷೆಗಳಿಗೆ ಅವರನ್ನು ಸಿದ್ಧಪಡಿಸುತ್ತದೆ. ಲಾಸ್ಯ ಪ್ರಿಯಾ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ ಸಂಯೋಜಿತ ಅಧ್ಯಯನ ಕೇಂದ್ರವಾಗಿದೆ. [೮]

ನೃತ್ಯ ಕಲೆಯ ಕಡೆಗೆ ಅವರ ಸಮರ್ಪಣೆ, ಬದ್ಧತೆ ಮತ್ತು ಸೇವೆಯನ್ನು ಗುರುತಿಸಿ ಅವರು ಅನೇಕ ಪ್ರಶಸ್ತಿಗಳು ಮತ್ತು ಗೌರವಗಳನ್ನು ಪಡೆದರು.ಅವೆಂದರೆ:

ಡಾ. ಉಮಾ ರಾಮರಾವ್ ಅವರು ಕೂಚುಪುಡಿ ನರ್ತಕಿ ಅಪರ್ಣಾ ಕ್ರೋವ್ವಿಡಿ ಅವರೊಂದಿಗೆ HICC, ಹೈದರಾಬಾದ್, ಸಿಲಿಕಾನ್ ಆಂಧ್ರದ ೨ ನೇ ಅಂತರರಾಷ್ಟ್ರೀಯ ಕೂಚಿಪುಡಿ ನೃತ್ಯ ಸಮಾವೇಶದ ಸಮಾರಂಭದಲ್ಲಿ ದಿನಾಂಕ: ೨೫ ಡಿಸೆಂಬರ್ ೨೦೧೦.
  • ಕೂಚಿಪುಡಿ ನೃತ್ಯದ ಕೂಚಿಪುಡಿ ಭರತಂ: ದಕ್ಷಿಣ ಭಾರತೀಯ ಶಾಸ್ತ್ರೀಯ ನೃತ್ಯ ಸಂಪ್ರದಾಯ . ಶ್ರೀ ಸದ್ಗುರು ಪಬ್ಲಿಕೇಷನ್ಸ್, ೧೯೯೨.

ಇತ್ತೀಚೆಗೆ ಡಾ. ಉಮಾ ರಾಮರಾವ್ ಅವರು ೨೪, ೨೫, ೨೬ ಡಿಸೆಂಬರ್ ೨೦೧೦ ರಂದು ಹೈದರಾಬಾದ್‌ನ ಎಚ್‌ಐ‌ಸಿ‌ಸಿ ಮತ್ತು ಜಿ‌ಎಂ‌ಸಿ ಬಾಲಯೋಗಿ ಅಥ್ಲೆಟಿಕ್ ಸ್ಟೇಡಿಯಂನಲ್ಲಿ ನಡೆದ ಐತಿಹಾಸಿಕ ೨ ನೇ ಅಂತರರಾಷ್ಟ್ರೀಯ ಕೂಚಿಪುಡಿ ನೃತ್ಯ ಸಮ್ಮೇಳನದಲ್ಲಿ ಭಾಗವಹಿಸಿದರು. ಅಲ್ಲಿ ಸುಮಾರು ೨,೮೦೦ ಕೂಚಿಪುಡಿ ನೃತ್ಯಗಾರರು, ೨೦೦+ ನಾಟ್ಯ ಗುರುಗಳು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ. ಅವರು ಸಾಂಸ್ಕೃತಿಕ ನೃತ್ಯ ಕೂಚಿಪುಡಿಯನ್ನು ದೀರ್ಘಕಾಲ ಬದುಕಿಸಲು ಅನೇಕ ವಿದ್ಯಾರ್ಥಿಗಳನ್ನು ನೇರವಾಗಿ ಪ್ರೇರೇಪಿಸಿದರು, ಪ್ರೋತ್ಸಾಹಿಸಿದರು ಮತ್ತು ಆಶೀರ್ವದಿಸಿದರು.

ಉಲ್ಲೇಖಗಳು[ಬದಲಾಯಿಸಿ]

  1. "Kuchipudi doyenne passes away". 28 August 2016.
  2. Kothari, p. 11
  3. Profile: K Uma Rama Rao Narthaki website.
  4. "SNA: List of Akademi Awardees". Sangeet Natak Akademi Official website. Archived from the original on 17 February 2012.
  5. Yakshagana research Hindu news
  6. Alekhya
  7. "Few disciples of Uma Rama Rao". Archived from the original on 2010-07-02. Retrieved 2023-10-15.
  8. "IGNOU Study Centers". Archived from the original on 2010-08-08. Retrieved 2023-10-15.
  9. Sangeet Natak Acedemy Hindu News

ಬಾಹ್ಯ ಕೊಂಡಿಗಳು[ಬದಲಾಯಿಸಿ]