ಮದರ್‌ ತೆರೇಸಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಮದರ್ ತೆರೆಸಾ ಇಂದ ಪುನರ್ನಿರ್ದೇಶಿತ)
Mother Teresa of Calcutta
Agnesë Gonxhe Bojaxhiu
Born(೧೯೧೦-೦೮-೨೬)೨೬ ಆಗಸ್ಟ್ ೧೯೧೦
Died5 September 1997(1997-09-05) (aged 87)
CitizenshipIndia (1948 - 1997)
Occupation(s)Roman Catholic nun, humanitarian[೧]
Memorial House of Mother Teresa, in her native Skopje.
Missionaries of Charity's Mother House (Headquarters) in ಕೊಲ್ಕತ್ತ
Missionaries of charity with the traditional sari.

ಮದರ್‌ ತೆರೇಸಾಸುಮಾರು 45 ವರ್ಷಗಳಿಗೂ ಹೆಚ್ಚು ಕಾಲ ಇವರು ಬಡವರ, ರೋಗಿಗಳ, ಅನಾಥರ ಮತ್ತು ಮರಣ ಸಂಕಟದಲ್ಲಿರುವವರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡವರು. 1970ರ ವೇಳೆಗೆ ಇವರು ಒಬ್ಬ ಮಾನವತಾ ವಾದಿಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾದರು. ಮದರ್‌ ತೆರೇಸಾ ಒಬ್ಬ ಮಹಾ ಮಾನವತಾವಾದಿಯಾಗಿ ಬಡವರ, ನಿರ್ಗತಿಕರ, ರೋಗಿಗಳ, ಅನಾಥರ, ವೃದ್ಧರ ಪರವಾಗಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಇವರಿಗೆ ವಿಶ್ವದ ಅತ್ಯುನ್ನತ ನೊಬೆಲ್‌ ಶಾಂತಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಮದರ್ ತೆರೇಸಾರ ಸಂಕ್ಷಿಪ್ತ ಪರಿಚಯ[ಬದಲಾಯಿಸಿ]

  • ಮದರ್‌ ತೆರೇಸಾ (26 ಆಗಸ್ಟ್‌ 1910–-5 ಸೆಪ್ಟೆಂಬರ್‌ 1997) ಅವರ ಮೊದಲ ಹೆಸರು ಆಞೆಜ ಗೊಂಜೆ ಬೊಯಾಜಿಉ ಟೆಂಪ್ಲೇಟು:Pron, ಅಲ್ಬೇನಿಯಾ[೨][೩] ದವರಾದ ಈ ರೋಮನ್‌ ಕ್ಯಾಥೊಲಿಕ್‌ ನನ್‌‌ ಭಾರತದ ಪೌರತ್ವ[೪] ಪಡೆದಿದ್ದರು.
  • ಇವರು 1950ರಲ್ಲಿ ಮಿಷನರೀಸ್‌ ಆಫ್‌ ಚಾರಿಟಿ ಎಂಬ ಸ್ವಯಂ ಸೇವಾ ಸಂಘವನ್ನುಭಾರತಕೋಲ್ಕೊತ್ತಾ(ಕಲ್ಕತ್ತಾ)ದಲ್ಲಿ ಸ್ಥಾಪಿಸಿದರು. ಮಿಷನರೀಷ್‌ ಆಫ್‌ ಚಾರಿಟೀಸ್‌ ಎಂಬ ಸ್ವಯಂ ಸೇವಾ ಸಂಸ್ಥೆಯನ್ನು ಮೊದಲು ಭಾರತಾದ್ಯಂತ ವಿಸ್ತರಿಸಲು ಮಾರ್ಗದರ್ಶಿ ಯಾಗಿ, ನಂತರ ವಿಶ್ವದ ಇತರೆ ರಾಷ್ಟ್ರಗಳಿಗೂ ಸಂಸ್ಥೆಯ ಕಾರ್ಯಾಚರಣೆಯನ್ನು ವ್ಯಾಪಿಸುವಂತೆ ಮೇಲ್ವಿಚಾರಣೆ ನಡೆಸಿದರು.
  • ಸುಮಾರು 45 ವರ್ಷಗಳಿಗೂ ಹೆಚ್ಚು ಕಾಲ ಇವರು ಬಡವರ, ರೋಗಿಗಳ, ಅನಾಥರ ಮತ್ತು ಮರಣ ಸಂಕಟದಲ್ಲಿರುವವರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡವರು.1970ರ ವೇಳೆಗೆ ಇವರು ಒಬ್ಬ ಮಾನವತಾವಾದಿಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾದರು. ಅಲ್ಲದೆ ಬಡವರ,ಅಸಹಾಯಕರ ಪರ ಪ್ರಬಲ ಪ್ರತಿಪಾದಕರಾಗಿದ್ದರು.
  • ಇವರ ಬಗ್ಗೆ ಸಾಕ್ಷ್ಯಚಿತ್ರ ಮತ್ತು ಮ್ಯಾಲ್ಕಮ್ ಮುಗ್ಗರಿಜ್‌ ಸಮ್‌ಥಿಂಗ್‌ ಬ್ಯೂಟಿಫುಲ್‌ ಫಾರ್‌ ಗಾಡ್‌ ಕೃತಿಯನ್ನು ರಚಿಸಿದ್ದಾರೆ ,ಮತ್ತು ಇದೇ ಕೃತಿಯನ್ನು ಆಧರಿಸಿ ಸಾಕ್ಷ್ಯ ಚಿತ್ರವೊಂದನ್ನು ನಿರ್ಮಿಸಿದ್ದಾರೆ. ಮದರ್‌ ತೆರೇಸಾ ಒಬ್ಬ ಮಹಾ ಮಾನವತಾವಾದಿಯಾಗಿ ಬಡವರ, ನಿರ್ಗತಿಕರ, ರೋಗಿಗಳ, ಅನಾಥರ, ವೃದ್ಧರ ಪರವಾಗಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಇವರಿಗೆ ವಿಶ್ವದ ಅತ್ಯುನ್ನತ ನೊಬೆಲ್‌ ಶಾಂತಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
  • ಭಾರತ ಸರ್ಕಾರವೂ ಕೂಡ ಈ ಮಹಾಮಾತೆಗೆ ದೇಶದ ಅತ್ಯುನ್ನತ ಪೌರ ಪ್ರಶಸ್ತಿಯಾದ ಭಾರತ ರತ್ನಪ್ರಶಸ್ತಿ ನೀಡಿ ಗೌರವ ಸಲ್ಲಿಸಿದೆ. ಮದರ್‌ ತೆರೇಸಾ ಸ್ಥಾಪಿಸಿದ ಮಿಷನರೀಷ್‌ ಆಫ್‌ ಚಾರಿಟಿ ಸಂಸ್ಥೆ ತನ್ನ ಸೇವೆಯನ್ನು ವಿಸ್ತರಿಸುತ್ತಾ ಹೋಯಿತು. ಇದು ಧರ್ಮಶಾಲೆಗಳು, HIV/AIDS ಪೀಡಿತರ ಸೇವೆ, ಕುಷ್ಠರೋಗಿಗಳ ಆರೈಕೆ, ಕ್ಷಯರೋಗಿಗಳ ಶುಶ್ರೂಶೆಯಲ್ಲಿ ತೊಡಗಿದ್ದರು.
  • ಇದರ ಜೊತೆ ಸಾರಿನ ಅರವಟ್ಟಿಗೆಗಳು, ಮಕ್ಕಳ ಮತ್ತು ಕೌಟುಂಬಿಕ ಆಪ್ತ ಸಲಹೆ, ಅನಾಥಾಶ್ರಮಗಳು ಮುಂತಾದ ವಿವಿಧ ಸೇವಾ ಸೌಲಭ್ಯಗಳನ್ನು ಇಲ್ಲದವರ ಪಾಲಿಗೆ ಉಂಟಾಗಿಸಿದರು. ತೆರೆಸಾ ನಿಧನದ ಹೊತ್ತಿಗೆ 123 ದೇಶಗಳಲ್ಲಿ 610 ಮಿಷನರಿ ಗಳು ಕಾರ್ಯಾಚರಣೆ ನಡೆಸುತ್ತಿತ್ತು. ಹಲವಾರು ಸರ್ಕಾರ, ಸಂಘ ಸಂಸ್ಥೆ ಹಾಗೂ ವ್ಯಕ್ತಿಗಳಿಂದ ಹೊಗಳಿಕೆಗೆ ಪಾತ್ರರಾಗಿದ್ದ ಇವರು ನಾನಾ ಬಗೆಯ ಟೀಕೆಗಳಿಗೂ ಗುರಿಯಾಗಿದ್ದರು.
  • ಸಾವಿನ ದವಡೆಯಲ್ಲಿರುವವರಿಗಾಗಿ ಚರ್ಚ್‌ಗೆ ಸೇರಿಸಿಕೊಳ್ಳುವಾಗ ಮಾಡಿಸಲಾಗುವ ಶುದ್ಧಿಸ್ನಾನ ಅಥವಾ ದೀಕ್ಷಾವಿಧಿ, ಗರ್ಭಪಾತದ ವಿರುದ್ಧದ ಇವರ ಬಲವಾದ ನಿಲುವು ಮೊದಲಾದವುಗಳ ಮೇಲೆ ಬೆಳಕು ಚೆಲ್ಲಿದ ಕೆಲವರು ಇವೆಲ್ಲಾ ಮತಾಂತರಕ್ಕೆ ಪ್ರೇರೇಪಿಸುವ ಕೃತ್ಯಗಳೆಂದು ಖಂಡಿಸಿದರು. ಕ್ರಿಸ್ಟೋಫರ್‌ ಹಿಚೆನ್ಸ್‌, ಮೈಕೇಲ್‌ ಪಾರೆಂತಿ,ಅರೌಪ್‌ ಚಟರ್ಜೀ, ವಿಶ್ವ ಹಿಂದೂ ಪರಿಷತ್‌ ಮುಂತಾದವರು-ಖಂಡಿಸಿದವರಲ್ಲಿ ಕೆಲವರು.
  • ಇವರ ಅನಾಥಾಲಯಗಳಲ್ಲಿನ ವೈದ್ಯಕೀಯ ಚಿಕಿತ್ಸೆಯ ಗುಣಮಟ್ಟವನ್ನು ವೈದ್ಯಕೀಯ ನಿಯತಕಾಲಿಕೆಗಳೂ ಟೀಕಿಸಿದ್ದವು ಮತ್ತು ಸಂಸ್ಥೆಗೆ ದಾನವಾಗಿ ಬಂದ ಹಣವನ್ನು ವ್ಯಯ ಮಾಡುವ ವಿಚಾರದಲ್ಲಿದ್ದ ಅಪಾರದರ್ಶಕತೆ ವಿರುದ್ಧ ಕಳವಳ ವ್ಯಕ್ತ ಮಾಡಿದ್ದವು. 1996ರಲ್ಲಿ ಮದರ್‌ತೆರೇಸಾ ಅವರನ್ನುಯುನೈಟೆಡ್‌ ಸ್ಟೇಟ್ಸ್‌ನ ಗೌರವ ಪ್ರಜೆಯಾಗಿ ನೇರವಾಗಿಆಕ್ಟ್‌ ಆಫ್‌ ಕಾಂಗ್ರೆಸ್‌ಮೊಲಕ ಅಧಿಕೃತವಾಗಿ ಪ್ರಕಟಿಸಲಾಯಿತು.
  • ಇವರ ಸಾವಿನ ನಂತರ ಪೋಪ್‌ ಜಾನ್‌ ಪಾಲ್‌ II ತೆರೇಸಾಗೆ 'ಬ್ಲೆಸ್ಸ್ಡ್‌ ತೆರೇಸಾ ಆಫ್‌ ಕಲ್ಕತಾ'(= ಕಲ್ಕತ್ತಾದ ಪೂಜ್ಯ ತೆರೇಸಾ)ಎಂಬ ಬಿರುದನ್ನಿತ್ತು ಪರಮಪದ ಪ್ರಾಪ್ತಿ ಯನ್ನು ನೀಡಿದರು.[೫][೬]

ಬಾಲ್ಯ[ಬದಲಾಯಿಸಿ]

  • ಆಗ್ನೆಸೇ ಗೋನ್‌ಕ್ಸೆ ಬೋಜಕ್ಸಿಯು(ಗೋನ್‌ಕ್ಸೆಎಂದರೆ ಅಲ್ಬೇನಿಯಾದಲ್ಲಿ "ಗುಲಾಬಿ ಮೊಗ್ಗು" ಎಂದರ್ಥ)1910ರಆಗಸ್ಟ್‌ 26 ರಂದು ಒಟ್ಟೋಮನ್‌ ಎಂಪೈರ್‌ಊಸ್ಕೂಬ್‌ನಗರದಲ್ಲಿ ಜನಿಸಿದರು.(ಇದರ ಈಗಿನ ಹೆಸರುಸ್ಕೋಪ್ಜೆ,ರಿಪಬ್ಲಿಕ್‌ ಆಫ್‌ ಮ್ಯಾಸೆಡೋನಿಯ)ದ ರಾಜಧಾನಿ.) ಆಗಸ್ಟ್‌ 26 ರಂದು ಜನಿಸಿದ್ದರೂ ಸಹ ಇವರು ತಾವು ದೀಕ್ಷಾವಿಧಿ ಸ್ವೀಕರಿಸಿದ ಆಗಸ್ಟ್‌ 27ರ ದಿನಾಂಕವನ್ನೇ ತಮ್ಮ "ನೈಜ ಜನ್ಮ ದಿನಾಂಕ" ಎಂದು ಪರಿಗಣಿಸಿದ್ದರು.[೭]
  • ತೆರೇಸಾ ಅಲ್ಬೇನಿಯಾಸ್ಕೋಡರ್‌ನಗರ ವಾಸಿಗಳಾದ ನಿಕೊಲ್ಲೇ ಮತ್ತು ಡ್ರಾನ ಬೋಜಕ್ಸಿಯು ದಂಪತಿಗಳಿಗೆ ಜನಿಸಿದ ಮಕ್ಕಳಲ್ಲೇ ಅತಿ ಕಿರಿಯಳು.[೮]
  • ಅಲ್ಬೇನಿಯಾದ ರಾಜಕಾರಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಈಕೆಯ ತಂದೆ 1919ರಲ್ಲಿ ತೀರಿಕೊಂಡಾಗ ಅವಳಿನ್ನೂ ಎಂಟು ವರ್ಷದ ಹುಡುಗಿ.[೯] ತಂದೆ ನಿಧನದ ನಂತರ ತಾಯಿಯು ಈಕೆಯನ್ನು ರೋಮನ್‌ ಕ್ಯಾಥೊಲಿಕ್‌ ಚರ್ಚ್‌‌ನ ಅನುಯಾಯಿಯಾಗಿ ಬೆಳೆಸಿದರು.
  • ಮಿಷನರಿಗಳು ಮತ್ತು ಅವುಗಳ ಸೇವಾಕಾರ್ಯಗಳ ಕುರಿತು ಆಗ್ನೆಸ್‌ ಅಥವಾ ತೆರೇಸಾ ಆಕರ್ಷಿತಳಾಗಿದ್ದಳೆಂದು ತೆರೇಸಾ ಜೀವನ ಚರಿತ್ರೆಯನ್ನು ರಚಿಸಿರುವ ಗ್ಯ್ರಾಫ್‌ ಕ್ಲೂಕಾಸ್‌ ಬರೆಯುತ್ತಾರೆ. ಜೊತೆಗೆ ಅವಳು ತನ್ನ 12ನೇ ವಯಸ್ಸಿಗಾಗಲೇ ತನ್ನ ಉಳಿದ ಬದುಕನ್ನು ಧಾರ್ಮಿಕ ಸೇವೆಗೆ ಮುಡಿಪಾಗಿಡಬೇಕೆಂದು ತೀರ್ಮಾನಿಸಿದ್ದಳು.[೧೦] ತಮ್ಮ 18ನೇ ವಯಸ್ಸಿಗೆ ಮನೆ ತೊರೆದ ತೆರೇಸಾ ಸಿಸ್ಟರ್ಸ್ ಆಫ್‌ ಲೊರೇಟೋಮಿಷನರಿಯನ್ನು ಸೇರಿಕೊಂಡರು. ಮತ್ತೆ ಅವರ ತಾಯಿಯನ್ನಾಗಲೀ ಅಥವಾ ಸಹೋದರಿಯನ್ನಾಗಲೀ ಇವರು ಹಿಂತಿರುಗಿ ನೋಡಲೇ ಇಲ್ಲ.[೧೧]
  • ಇಂಗ್ಲಿಷ್‌ ಕಲಿಯುವ ಸಲುವಾಗಿ ಆಗ್ನೆಸ್‌ ಆರಂಭದಲ್ಲಿ ಐರ್ಲೆಂಡ್‌ರಾಥ್‌ಫರ್ನ್‌‌ಹ್ಯಾಮ್‌ನಲ್ಲಿರುವ ಲೊರೇಟೋ ಆಬ್ಬೀ ಶಾಲೆಗೆ ಸೇರಿಕೊಂಡರು; ಆಗ ಸಿಸ್ಟರ್ಸ್ ಆಫ್‌ ಲೊರೇಟೋ ಮಿಷನರಿ ಭಾರತದಲ್ಲಿ ಮಕ್ಕಳಿಗೆ ಇಂಗ್ಲಿಷ್ ಶಿಕ್ಷಣ ನೀಡುತ್ತಿತ್ತು.[೧೨]
  • ಇವರು1929ರಲ್ಲಿ ಭಾರತಕ್ಕೆ ಆಗಮಿಸಿ,ಹಿಮಾಲಯದ ತಪ್ಪಲಿನಲ್ಲಿರುವ ಡಾರ್ಜೀಲಿಂಗ್‌ನಲ್ಲಿ ತಮ್ಮ ದೀಕ್ಷಾ ತರಬೇತಿ ಅವಧಿಯನ್ನು ಆರಂಭಿಸಿದರು.[೧೩] ಕ್ರೈಸ್ತ ನನ್‌ ಆಗಿ ತಮ್ಮ ಮೊದಲ ಧಾರ್ಮಿಕ ದೀಕ್ಷಾ ಪ್ರತಿಜ್ಞೆಯನ್ನು ಇವರು 1931ರ ಮೇ 24ರಂದು ಸ್ವೀಕರಿಸಿದರು. ಕ್ರೈಸ್ತ ಮಿಷನರಿಗಳ ಪೋಷಕರಾಗಿದ್ದ ಥೇರೇಸೆ ಡಿ ಲಿಸಿಯುಕ್ಸ್‌ ಅವರ ಗೌರವಾರ್ಥ ಈ ಸಮಯದಲ್ಲಿ ಆಗ್ನೇಸ್‌ ತಮ್ಮ ಹೆಸರನ್ನು ತೆರೇಸಾ ಎಂದು ಬದಲಾಯಿಸಿಕೊಂಡರು.[೧೪][೧೫]
  • ಪೂರ್ವ ಕಲ್ಕತ್ತಾದ ದಿ ಲೊರೇಟೋ ಕಾನ್ವೆಂಟ್‌ನಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಸಮಯದಲ್ಲಿ ಇವರು 1937ರ ಮೇ 14ರಂದು ವಿಧಿವತ್ತಾಗಿ ತಮ್ಮ ದೀಕ್ಷಾ ಪ್ರತಿಜ್ಞೆ ಸ್ವೀಕರಿಸಿದರು.[೨][೧೬]
  • ತೆರೇಸಾ ತಮ್ಮ ಶಿಕ್ಷಕ ವೃತ್ತಿಯಲ್ಲಿ ಸಂತೋಷದಿಂದಿದ್ದರೂ, ಕಲ್ಕತ್ತಾದಲ್ಲಿ ತಮ್ಮ ಸುತ್ತಮುತ್ತ ಇದ್ದ ಬಡತನವನ್ನು ಕಂಡು ತೀವ್ರವಾಗಿ ವಿಚಲಿತರಾದರಾದರು.[೧೭]
  • 1943ರಲ್ಲಿ ಉಂಟಾದ ಕ್ಷಾಮ ಕಲ್ಕತ್ತಾ ನಗರವನ್ನು ದುಸ್ಥಿತಿಗೆ ತಳ್ಳಿತಲ್ಲದೆ ಸಾಕಷ್ಟು ಸಾವು-ನೋವುಗಳನ್ನು ತಂದೊಡ್ಡಿತು.ಇದರ ಜೊತೆಗೆ ಅದೇ ಸಮಯದಲ್ಲಿ ಎಂದರೆ ಆಗಸ್ಟ್‌ 1946ರಲ್ಲಿ ಭುಗಿಲೆದ್ದ ಹಿಂದೂ-ಮುಸ್ಲಿಂ ಗಲಭೆ ನಗರದ ಜನತೆಯನ್ನು ಹತಾಶೆ ಮತ್ತು ಭೀತಿಯಲ್ಲಿ ಮುಳುಗಿಸಿತು.[೧೮]

ಮಿಷನರೀಸ್ ಆಫ್‌ ಚಾರಿಟಿ[ಬದಲಾಯಿಸಿ]

  • 1946ರ ಸೆಪ್ಟೆಂಬರ‍್ 10ರಂದು ತೆರೇಸಾ ತಮ್ಮ ವಾರ್ಷಿಕ ಏಕಾಂತವಾಸಕ್ಕೆಡಾರ್ಜೀಲಿಂಗ್‌ನಲ್ಲಿದ್ದ ಲೊರೇಟೋ ಕಾನ್ವೆಂಟ್‌ಗೆ ಕಲ್ಕತ್ತಾದಿಂದ ಪ್ರಯಾಣ ಮಾಡು ತ್ತಿದ್ದಾಗ, ಅವರೇ ವರ್ಣಿಸಿರುವ ಹಾಗೆ "ದಿ ಕಾಲ್‌ ವಿಥಿನ್‌ ದಿ ಕಾಲ್‌" ಎಂಬುದನ್ನು ಮನಗಂಡರು.ಆ ಅನುಭವ ವನ್ನು ಅವರು ಹೀಗೆ ವರ್ಣಿಸುತ್ತಾರೆ. "ಬಡವರೊಂದಿಗೆ ನಾನೂ ಒಬ್ಬಳಾಗಿ ಬದುಕುತ್ತಿರುವಾಗ, ಬಡವರ ಸೇವೆ ಮಾಡಲೆಂದು ನಾನು ಕಾನ್ವೆಂಟ್‌ ತೊರೆಯಲು ನಿರ್ಧರಿಸಿದ್ದೆ. ಇದೊಂದು ದೈವಾಜ್ಞೆಯಾಗಿತ್ತು.
  • ಇದರ ಉಲ್ಲಂಘನೆ ಮಾಡುವುದೆಂದರೆ ನಂಬಿಕೆಯನ್ನೇ ಕಳೆದು ಕೊಂಡಂತಾಗುತ್ತಿತ್ತು. ನಂಬಿಕೆಯನ್ನು ಮುರಿಯಲು ಸೋಲಬೇಕಿತ್ತು." [೧೯] ಇವರು ತಮ್ಮ ಮಿಷನರಿ ಸೇವೆಯನ್ನು 1948ರಲ್ಲಿ ಬಡ ಜನತೆಯೊಂದಿಗೆ ಆರಂಭಿಸಿದರು;
  • ಲೊರೇಟೋ ಕಾನ್ವೆಂಟ್‌ನ ಸಾಂಪ್ರದಾಯಿಕ ಹವ್ಯಾಸವನ್ನು ತೊರೆದು ಬಿಳಿ ಬಣ್ಣದ ಮತ್ತು ನೀಲಿ ಅಂಚಿರುವ ಸರಳವಾದ ಹತ್ತಿ ಸೀರೆ ಯನ್ನು ತಮ್ಮ ನಿತ್ಯದ ಉಡುಗೆಯಾಗಿಸಿ ಕೊಂಡರು; ಭಾರತದ ಪೌರತ್ವವನ್ನು ಪಡೆದುಕೊಂಡು ಬಡವರ ಉದ್ಧಾರಕ್ಕೆಂದು ಕೊಳೆಗೇರಿಗಳಿಗೆ ಧಾವಿಸಿದರು.[೨೦][೨೧]
  • ಆರಂಭದಲ್ಲಿ ಇವರು ಮೊತಿಜ್‌ಹಿಲ್‌ನಲ್ಲಿ ಶಾಲೆಯನ್ನು ತೆರೆದರಾದರೂ, ಬಹುಬೇಗನೆ ನಿರ್ಗತಿಕರ ಮತ್ತು ಹಸಿದವರ ಪರವಾಗಿ ದುಡಿಯಲು ಅವರ ಮನಸ್ಸು ಬಾಗಿತು. ಇವರ ಸೇವಾ ಕೈಂಕರ್ಯಗಳು ಬಹುಬೇಗ ಭಾರತದ ಅಧಿಕಾರಿಗಳ ಹಾಗೂ ಪ್ರಧಾನ ಮಂತ್ರಿಯ ಗಮನ ಸೆಳೆದವು. ಪ್ರಧಾನ ಮಂತ್ರಿಗಳು ಇವರ ಕಾರ್ಯವನ್ನು ಶ್ಲಾಘಿಸಿದರು.[೨೨]
  • ಮೊದಲ ವರ್ಷವೆಂಬುದು ಹಲವಾರು ಎಡರು-ತೊಡರುಗಳಿಂದ ತುಂಬಿತ್ತು ಎಂದು ತೆರೇಸಾ ತಮ್ಮ ದಿನಚರಿಯಲ್ಲಿ ದಾಖಲಿಸಿದ್ದಾರೆ. ಆದಾಯದ ಯಾವುದೇ ಮೊಲಗಳು ಇರಲಿಲ್ಲ, ಹೀಗಾಗಿ ಇವರು ಆಹಾರ ಮತ್ತು ಅಗತ್ಯ ಪೂರೈಕೆಗಾಗಿ ಅನ್ಯರನ್ನು ಬೇಡುವ ಪರಿಸ್ಥಿತಿಗೆ ಬಿದ್ದರು. ಸಂಶಯದ ಸುಳಿಗೆ ಸಿಕ್ಕ ತೆರೇಸಾರನ್ನು ಒಂಟಿತನ ಕಾಡಿತು ಮತ್ತು ಆರಂಭಿಕ ತಿಂಗಳಲ್ಲಿದ್ದ ಸಾಂಘಿಕ ಬದುಕಿನ ಸೌಕರ್ಯಗಳಿಗೆ ಹಿಂತಿರುಗುವ ಪ್ರಲೋಭನೆಯೂ ಉಂಟಾಯಿತು. ಇವೆಲ್ಲವನ್ನೂ ಇವರು ತಮ್ಮ ದಿನಚರಿಯಲ್ಲಿ ದಾಖಲಿಸಿ ದ್ದಾರೆ.

Our Lord wants me to be a free nun covered with the poverty of the cross. Today I learned a good lesson. The poverty of the poor must be so hard for them. While looking for a home I walked and walked till my arms and legs ached. I thought how much they must ache in body and soul, looking for a home, food and health. Then the comfort of Loreto [her former order] came to tempt me. 'You have only to say the word and all that will be yours again,' the Tempter kept on saying ... Of free choice, my God, and out of love for you, I desire to remain and do whatever be your Holy will in my regard. I did not let a single tear come.[೨೩]

  • ಡಯಾಸಿಸನ್‌ ಧಾರ್ಮಿಕ ಕೂಟ ಅಥವಾ ಸಂಘವನ್ನು ಆರಂಭಿಸಲು ಮದರ್‌ ತೆರೇಸಾರಿಗೆ 1950ರ ಅಕ್ಬೋಬರ್‌ 7ರಂದು ವ್ಯಾಟಿಕನ್‌ನಿಂದ ಅನುಮತಿ ದೊರೆಯಿತು.ಇದೇ ಸಂಘ ಮುಂದೆ ವಿಶ್ವ ಪ್ರಸಿದ್ಧಮಿಷನರೀಸ್ ಆಫ್‌ ಚಾರಿಟಿಎಂಬ ಸಂಸ್ಥೆಯಾಗಿ ಬೆಳೆಯಿತು.[೨೪]
  • ತೆರೇಸಾ ಅವರೇ ಹೇಳುವಂತೆ "ಹೊಟ್ಟೆಗೆ ಬಟ್ಟೆಗೆ ಇಲ್ಲದವರು, ಸೂರಿಲ್ಲದವರು, ಅಂಗವಿಕಲರು, ಕುರುಡರು, ಕುಷ್ಠರೋಗಿಗಳು, ಸಮಾಜಕ್ಕೆ ಬೇಡವಾದವರು, ಪ್ರೀತಿ ವಂಚಿತರು, ಜನತೆಯ ಆದರ-ಪೋಷಣೆ ಇಲ್ಲದೆ ಸಮಾಜದಲ್ಲಿ ಉಪೇಕ್ಷೆಗೆ ಈಡಾದವರು, ಸಮಾಜಕ್ಕೆ ಹೊರೆಯೆನಿಸಿ ಎಲ್ಲರಿಂದ ಪರಿತ್ಯಕ್ತರಾದವರು-ಇವರೆಲ್ಲರ ಸೇವೆ ಮಾಡುವುದೇ ಈ ಮಿಷನರಿಯ ಮೂಲ ಧ್ಯೇಯ"
  • ಈ ಸಂಸ್ಥೆ 13 ಸದಸ್ಯರ ಒಂದು ಸಣ್ಣ ಪ್ರಮಾಣದಲ್ಲಿಕಲ್ಕತ್ತದಲ್ಲಿ ಆರಂಭವಾಯಿತು.ಆದರೆ ಇಂದು ಸುಮಾರು 4,000ನನ್‌ಗಳನ್ನು ಹೊಂದಿದ್ದು,ಅನಾಥಾ ಶ್ರಮಗಳು,AIDS ಧರ್ಮಶಾಲೆಗಳು ಮತ್ತು ವಿಶ್ವಾದಾದ್ಯಂತ ದತ್ತಿ ಕೇಂದ್ರಗಳನ್ನು ಹೊಂದಿರುವ ಬೃಹತ್‌ ಸಂಸ್ಥೆಯಾಗಿದೆ.
  • ಆ ಮೂಲಕ ನಿರಾಶ್ರಿತರ, ಕುರುಡರ, ಅಂಗವಿಕಲರ, ವೃದ್ಧರ, ಮದ್ಯ ವ್ಯಸಿನಿಗಳ, ಬಡವರ, ನಿರಾಶ್ರಿತರ ಹಾಗೂ ಪ್ರವಾಹ ಸಂತ್ರಸ್ತರ, ಸಾಂಕ್ರಾಮಿಕ ರೋಗಕ್ಕೆ ಈಡಾದವರ ಮತ್ತು ಕ್ಷಾಮಕ್ಕೆ ತುತ್ತಾದವರ ಪಾಲನೆ, ಪೋಷಣೆ ಮಾಡುತ್ತಿದೆ.[೨೫]
  • ಕಲ್ಕತ್ತ ನಗರಾಡಳಿತ ನೀಡಿದ ಸ್ಥಳದಲ್ಲಿ ಮದರ್‌ ತೆರೇಸಾ ಮರಣ ಸಂಕಟದಲ್ಲಿರುವವರಿಗಾಗಿ ಮೊದಲ ಆಶ್ರಯಧಾಮವನ್ನು 1952ರಲ್ಲಿ ತೆರೆದರು. ಭಾರತೀಯ ಅಧಿಕಾರಿಗಳ ಸಹಕಾರದೊಂದಿಗೆ ಪಾಳುಬಿದ್ದಿದ್ದಹಿಂದೂ ದೇವಾಲಯವೊಂದನ್ನು ಕಾಳಿಘಾಟ್‌ ಹೋಮ್‌ ಫಾರ್‌ ದಿ ಡೈಯಿಂಗ್‌ (=ಮರಣಕಾಲೀನರ ಕಾಳಿಘಾಟ್‌ ಆಶ್ರಯಧಾಮ) ಎಂಬ ಹೆಸರಿನಲ್ಲಿ ಬಡವರಿಗಾಗಿ ಉಚಿತ ಧರ್ಮಶಾಲೆಯಾಗಿ ಪರಿವರ್ತಿಸಿದರು.
  • ನಂತರ ಅದರ ಹೆಸರನ್ನು ಕಾಳಿಘಾಟ್‌,ದಿ ಹೋಮ್‌ ಫಾರ್‌ ಪ್ಯೂರ್‌ ಹಾರ್ಟ್(ನಿರ್ಮಲ ಹೃದಯ)ಎಂದು ಮರು ನಾಮಕರಣ ಮಾಡಿದರು.[೨೬]
  • ಈ ಆಶ್ರಯಧಾಮಕ್ಕೆ ಕರೆತರಲಾಗುವ ಜನರಿಗೆ ಸೂಕ್ತ ವೈದ್ಯಕೀಯ ಸೇವೆಗಳನ್ನು ನೀಡುತ್ತಿದ್ದರು; ಅಲ್ಲದೆ ಅವರವರ ಧರ್ಮದ ನಂಬಿಕೆಯ ಅನುಸಾರವೇ ಘನತೆಯಿಂದ ಸಾಯುವ ಅವಕಾಶವನ್ನು ರೋಗಿಗಳು ಪಡೆದಿದ್ದರು; ಮುಸ್ಲಿಮರಿಗೆ ಕುರಾನ್‌ ಅನ್ನು ಪಠಿಸುವ ಅವಕಾಶವಿತ್ತು; ಹಿಂದೂಗಳಿಗೆ ಪವಿತ್ರ ಗಂಗಾಜಲವನ್ನು ನೀಡಲಾಗುತ್ತಿತ್ತು; ಕ್ಯಾಥೊಲಿಕ್‌ ಕ್ರೈಸ್ತರಿಗೆ ಅವರ ಧರ್ಮದ ಅನುಸಾರ ಅಂತ್ಯ ಸಂಸ್ಕಾರ ಸಿಗುತ್ತಿತ್ತು. "ಇರುವಾಗ ಪ್ರಾಣಿಗಳಂತೆ ಬದುಕಿ, ಸಾಯುವಾಗ ಎಲ್ಲರಿಗೂ ಬೇಕಾದವರೂ, ಪ್ರೀತಿ ಪಾತ್ರರೂ ಆಗಿ ದೇವತೆಗಳಂತೆ ಸಾವನ್ನಪ್ಪುವಂಥ" "ಗೌರವಾನ್ವಿತ ಸಾವು," ಎಂದು ಇಲ್ಲಿನ ಸೇವೆಯನ್ನು ಅವರು ವರ್ಣಿಸುತ್ತಾರೆ.[೨೭]
  • ಕುಷ್ಠರೋಗ ಎಂದು ಜನಜನಿತವಾಗಿರುವ ಹಾನ್‌ಸೇನ್ಸ್‌ ಡಿಸೀಸ್‌ನಿಂದ ನರಳುವವರಿಗಾಗಿ ತೆರೇಸಾ ಕೂಡಲೇ ಮತ್ತೊಂದು ಆಶ್ರಯಧಾಮವನ್ನು ತೆರೆದರು.ಈ ಧರ್ಮ ಶಾಲೆಯನ್ನು ಶಾಂತಿ ನಗರ ಎಂದು ಕರೆಯಲಾಯಿತು.(ಶಾಂತಿಯ ನಗರ).[೨೮]ಮಿಷನರೀಸ್ ಆಫ್‌ ಚಾರಿಟಿ ಕಲ್ಕತ್ತಾದ ಉದ್ದಗಲಕ್ಕೂ ಕುಷ್ಠರೋಗಿಗಳ ಹಲವು ಚಿಕಿತ್ಸಾ ಕೇಂದ್ರಗಳನ್ನು ತೆರೆಯಿತು.ಇಲ್ಲಿ ಬರುವ ರೋಗಿಗಳಿಗೆ ಚಿಕಿತ್ಸೆ,ಬ್ಯಾಂಡೇಜ್ ಮತ್ತು ಊಟವನ್ನು ನೀಡಲಾಗುತ್ತಿತ್ತು.
  • ಮಿಷನರೀಸ್ ಆಫ್‌ ಚಾರಿಟಿ ಸಂಸ್ಥೆಗೆ ಬರುತ್ತಿದ್ದ ಕಳೆದು ಹೋದ ಮಕ್ಕಳ ಸಂಖ್ಯೆ ಹೆಚ್ಚುತ್ತಾ ಹೋಗಿದ್ದರಿಂದ, ಇವರಿಗಾಗಿ ಒಂದು ನೆಲೆ ನಿರ್ಮಿಸುವ ಅಗತ್ಯವಿದೆ ಎಂದು ಮದರ್‌ ತೆರೇಸಾ ಭಾವಿಸಿದರು.ಇವರು 1955ರಲ್ಲಿ ಮಕ್ಕಳಿಗಾಗಿ ಪರಿಶುದ್ಧ ಹೃದಯದ ತಾಣದಂತಿದ್ದ ನಿರ್ಮಲ ಶಿಶು ಭವನವನ್ನು ಸ್ಠಾಪಿಸಿದರು. ಇದು ಸೂರಿಲ್ಲದ ಯುವಕರ ಮತ್ತು ಅನಾಥರ ಸ್ವರ್ಗ ಎನಿಸಿತು.[೨೯]
  • ಮಿಷನರಿಯು ಆದಷ್ಟು ಬೇಗ ಹೊಸಬರನ್ನು ಮತ್ತು ದತ್ತಿ ನಿಧಿಗಳನ್ನು ಆಕರ್ಷಿಸಿತು,ಅಲ್ಲದೆ 1960ರ ವೇಳೆಗೆಧರ್ಮಶಾಲೆಗಳು,ಅನಾಥಾಶ್ರಮಗಳು,ಮತ್ತು ಕುಷ್ಠರೋಗದ ಚಿಕಿತ್ಸಾ ಕೇಂದ್ರಗಳನ್ನು ಭಾರತ ದಾದ್ಯಂತ ತೆರೆಯಿತು. ಆ ನಂತರ ಮದರ್‌ತೆರೇಸಾ ಮಿಷನರಿಯನ್ನು ವಿಶ್ವಾದಾದ್ಯಂತ ವಿಸ್ತರಿಸಿದರು.ವೆನಿಜುವೆಲಾದಲ್ಲಿ ತೆರೆಯಲಾದದ್ದೇ ಭಾರತದ ಹೊರಗೆ ಸ್ಥಾಪಿತವಾದ ಮೊದಲ ಧರ್ಮಶಾಲೆ.[೩೦] 1965ರಲ್ಲಿ ಆರಂಭಿಸಲಾದ ಈ ಧಾಮದಲ್ಲಿ ಐವರುಸಿಸ್ಟರ್‌ಗಳಿದ್ದರು.
  • ನಂತರ ರೋಮ್‌,ತಾನ್‌ಝೇನಿಯಾ,ಮತ್ತು 1968ರಲ್ಲಿ ಆಸ್ಟ್ರೇಲಿಯಾದಲ್ಲಿ ಮತ್ತಷ್ಟು ಕೇಂದ್ರಗಳನ್ನು ತೆರೆದರು.1970ರ ವೇಳೆಗೆ ಏಷ್ಯಾ, ಆಫ್ರಿಕಾ, ಯುರೋಪ್‌,ಮತ್ತುಯುನೈಟೆಡ್‌ ಸ್ಟೇಟ್ಸ್‌ಮುಂತಾದ ಹತ್ತು ಹಲವು ದೇಶಗಳಲ್ಲಿ ಧರ್ಮಶಾಲೆಗಳನ್ನು ಮತ್ತು ಸೇವಾ ಕೇಂದ್ರಗಳನ್ನು ತೆರೆದರು.[೩೧]
  • ಇವರ ತತ್ವ ಅಥವಾ ಚಿಂತನೆಗಳನ್ನು ಜಾರಿ ಮಾಡುವಾಗ ಹಲವಾರು ಟೀಕೆಗಳಿಗೆ ಒಳಗಾದವು.ಮದರ್‌ ತೆರೇಸಾ ಬಡತನವನ್ನು ತಗ್ಗಿಸುವುದರ ಬದಲು ಜನರನ್ನು ಜೀವಂತವಾಗಿ ಇರಿಸುವುದಕ್ಕಷ್ಟೇ ತಮ್ಮ ವ್ಯಾಪ್ತಿಯನ್ನು ಸೀಮಿತಗೊಳಿಕೊಂಡಿದ್ದಾರೆ, ಎಂದು ಡೇವಿಡ್‌ ಸ್ಕಾಟ್‌ ಟೀಕಿಸುತ್ತಾನೆ.[೩೨] ಜನರ ಸಂಕಟವನ್ನು ಕುರಿತಾದ ಇವರ ದೃಷ್ಟಿಕೋನ ಹಲವು ಟೀಕೆಗಳಿಗೆ ಗುರಿಯಾಗಿದೆ.[[’ಸಂಕಟ ಅಥವಾ ವೇದನೆ ಜನರು ಜೀಸಸ್‌ನ ಸಮೀಪ ಬರುವಂತೆ ಮಾಡುತ್ತದೆ ಎಂದು ತೆರೇಸಾ ಭಾವಿಸುತ್ತಾರೆ’ಎಂದು ಅಲ್ಬೆರ್ಟಾ ರಿಪೋರ್ಟ್‌]]ನಲ್ಲಿ ಪ್ರಕಟವಾಗಿರುವ ಲೇಖನವೊಂದರಲ್ಲಿ ಉಲ್ಲೇಖಿಸಲಾಗಿದೆ.
*ಮಾರಣಾಂತಿಕ ರೋಗಗಳಿಗೆ ತುತ್ತಾಗಿ ಸಾವಿನ ದವಡೆಯಲ್ಲಿರುವವರಿಗೆ ಇವರ ಆಶ್ರಯಧಾಮದಲ್ಲಿ ನೀಡಲಾಗುವ ಚಿಕಿತ್ಸೆಯ ಗುಣಮಟ್ಟವನ್ನು ಹಲವು ವೈದ್ಯಕೀಯ ಪತ್ರಿಕೆ ಗಳು ಟೀಕಿಸಿವೆ.ದಿ ಲ್ಯಾನ್‌ಸೆಟ್‌ಮತ್ತುಬ್ರಿಟಿಷ್‌ ಮೆಡಿಕಲ್‌ ಜರ್ನಲ್‌ಪತ್ರಿಕೆಗಳು ಇವುಗಳಲ್ಲಿ ಗಮನಾರ್ಹವಾದವು.ಹೈಪೋಡರ್ಮಿಕ್‌ ಸೂಜಿಗಳ ಮರುಬಳಕೆ ಮಾಡಲಾಗುತ್ತದೆ.
  • ಎಲ್ಲ ರೋಗಿಗಳಿಗೂ ತಣ್ಣೀರಿನದೇ ಸ್ನಾನ, ರೋಗಿಗಳಿಗೆ ಕಳಪೆ ವಾಸಸ್ಥಾನ, ರೋಗ ಪತ್ತೆ ಮಾಡುವುದರಿಂದ ಹಿಡಿದು ನೀಡುವ ಚಿಕಿತ್ಸೆಯಲ್ಲಿ ಹಲವು ಆಧುನಿಕ ಚಿಕಿತ್ಸಾ ಪದ್ಧತಿಗಳ ನಿರಾಕರಣೆ- ಇವರ ಅಸಮಪರ್ಕಕ ದೃಷ್ಟಿಕೋನ ಎಂದು ಪತ್ರಿಕೆಗಳು ಖಂಡಿಸಿವೆ.
  • ದಿ ಲ್ಯಾನ್‌ಸೆಟ್‌ಪತ್ರಿಕೆಯ ಸಂಪಾದಕರಾದ ಡಾ.ರಾಬಿನ್ ಫಾಕ್ಸ್‌ ಇಲ್ಲಿನ ಚಿಕಿತ್ಸೆಯನ್ನು "ಎದ್ವಾ ತದ್ವಾ" ಎಂದು ವರ್ಣಿಸುತ್ತಾರೆ. ಇಲ್ಲಿ ವೈದ್ಯರ ಕೊರತೆ ಇರುವುದರಿಂದ ವೈದ್ಯಕೀಯ ಜ್ಞಾನವಿಲ್ಲದ ಸ್ವಯಂ ಸೇವಕರೇ ರೋಗಿಗಳ ಚಿಕಿತ್ಸೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕಾದ ಸ್ಥಿತಿ ಇಲ್ಲಿದೆ ಎನ್ನುತ್ತಾರೆ. ತೆರೇಸಾರ ಸಂಸ್ಥೆ ಗುಣಮುಖವಾಗಬಲ್ಲ ಮತ್ತು ಆಗದಿರುವ ರೋಗಿಗಳನ್ನು ಪ್ರತ್ಯೇಕಿಸುವುದಿಲ್ಲ. ಹೀಗಾಗಿ ರೋಗಗಳಿಂದ ಗುಣಮುಕ್ತರಾಗಿ ಬದುಕಬಹುದಾದ ರೋಗಿಗಳೂ ಕೂಡ ಮಾರಣಾಂತಿಕ ಸೋಂಕಿಗೆ ಒಳಗಾಗಿ ಚಿಕಿತ್ಸೆಯ ಕೊರತೆ ಎದುರಿಸಿ ಸಾವನ್ನಪ್ಪುವ ಗಂಡಾಂತರವಿದೆ ಎಂಬುದನ್ನು ಅವರು ಗಮನಿಸಿದ್ದಾರೆ.[೩೩]
  • ಮಿಷನರೀಸ್ ಆಫ್‌ ಚಾರಿಟಿ ಬ್ರದರ್ಸ್‌ 1963ರಲ್ಲಿ ಸ್ಥಾಪನೆಯಾಯಿತು,ಮತ್ತು ಸಿಸ್ಟರ್‌ಗಳ ಚಿಂತನಶೀಲ ಶಾಖೆ 1976ರಲ್ಲಿ ಸ್ಥಾಪನೆಗೊಂಡಿತು.ಮದರ್‌ ತೆರೇಸಾರ ಸಹೋದ್ಯೋಗಿ ಬಳಗದಲ್ಲಿ ಲೇ ಕ್ಯಾಥೊಲಿಕ್ಕರು ಮತ್ತು ನಾನ್‌ ಕ್ಯಾಥೊಲಿಕ್ಕರು ಸೇರಿಕೊಂಡರು.ಅನಾರೋಗ್ಯ ಪೀಡಿತರು ಮತ್ತು ನರಳುವ ಸಹೋದ್ಯೋಗಿಗಳು,ಮತ್ತು ಲೇ ಮಿಷನರೀಸ್ ಆಫ್‌ ಚಾರಿಟಿಯಲ್ಲಿ ಸೇರ್ಪಡೆಯಾದರು.
  • ಪ್ರೀಸ್ಟ್‌ಗಳ ಕೋರಿಕೆಗೆ ನೀಡಿದ ಉತ್ತರದಲ್ಲಿ,1981ರಲ್ಲಿ ಮದರ್‌ತೆರೇಸಾ ಪ್ರೀಸ್ಟ್‌ಗಳಿಗಾಗಿ'ಕಾರ್ಪಸ್‌ ಕ್ರಿಸ್ಟಿ ಮೂವ್‌ವೆಂಟ್‌'[೩೪] ಅನ್ನೂ ಆರಂಭಿಸಿದರು.
  • ಅಲ್ಲದೆ ಮಿಷನರೀಸ್‌ ಆಫ್‌ ಚಾರಿಟಿಯ ವೃತ್ತಿಪರ ಗುರಿಗಳನ್ನು ಅಧಿಕಾರಯುತ ಪ್ರೀಸ್ಟ್‌ಹುದ್ದೆಯ ಮೂಲಸೌಲಭ್ಯಗಳೊಂದಿಗೆ ಸಂಯೋಜನೆಗೊಳಿಸಲು 1984ರಲ್ಲಿ ಫಾದರ್‌.ಜೋಸೆಫ್‌ ಲ್ಯಾಂಗ್‌ಫೋರ್ಡ್ ಅವರೊಂದಿಗೆ ಸೇರಿ 'ಮಿಷನರೀಸ್‌ ಆಫ್‌ ಚಾರಿಟಿ ಫಾದರ್ಸ್'[೩೫] ಅನ್ನು ಆರಂಭಿಸಿದರು.
  • ಮಿಷನರೀಸ್ ಆಫ್‌ ಚಾರಿಟಿ ಸಂಸ್ಥೆ 2007ರ ಹೊತ್ತಿಗೆ ಜಗತ್ತಿನಾದ್ಯಂತ ಅಂದಾಜು 450 ಬ್ರದರ್ಸ್ ಮತ್ತು 5,000 ನನ್‌ಗಳನ್ನು ಹೊಂದಿತ್ತು. ಅಲ್ಲದೆ 120 ದೇಶಗಳಲ್ಲಿ 600 ಮಿಷನ್‌ಗಳು,ಶಾಲೆಗಳು,ಮತ್ತು ಆಶ್ರಯಧಾಮಗಳನ್ನು ನಡೆಸುತ್ತಿತ್ತು.[೩೬]

ಅಂತರಾಷ್ಟ್ರೀಯ ದತ್ತಿ[ಬದಲಾಯಿಸಿ]

  • ಸೀಜ್‌ ಆಫ್‌ ಬೀರಟ್‌ ಎತ್ತರದಲ್ಲಿ 1982ರಲ್ಲಿ, ಮದರ್‌ ತೆರೇಸಾ ಇರ್ಸೇಲಿ ಸೇನೆ ಮತ್ತು ಪ್ಯಾಲೆಸ್ತೇನಿನ ಗೆರಿಲ್ಲಾಗಳ ನಡುವೆ ತಾತ್ಕಾಲಿಕ ಯುದ್ಧ ವಿರಾಮ ಘೋಷಿಸಲು ಮಧ್ಯಸ್ಥಿಕೆ ವಹಿಸುವ ಮೂಲಕ ಫ್ರಂಟ್‌ಲೈನ್‌ ಆಸ್ಪತ್ರೆಯಲ್ಲಿ ಸಿಲುಕಿಕೊಂಡಿದ್ದ 37 ಮಕ್ಕಳನ್ನು ಅಪಾಯದಿಂದ ಪಾರುಮಾಡಿದ್ದರು.[೩೭]
  • ಧ್ವಂಸಗೊಂಡಿರುವ ಆಸ್ಪತ್ರೆಗಳಲ್ಲಿ ಸಿಲುಕಿಕೊಂಡಿದ್ದ ಯುವ ರೋಗಿಗಳನ್ನು ಅಲ್ಲಿಂದ ಪಾರುಮಾಡಲು ಇವರು ರೆಡ್‌ ಕ್ರಾಸ್ ಕಾರ್ಯಕರ್ತರೊಡನೆ ಸೇರಿ ಯುದ್ಧವಲಯ ದುದ್ದಕ್ಕೂ ತಿರುಗಾಡಿದ್ದರು.[೩೮]
  • ಮುಕ್ತ ವಾತಾವರಣ ಎಂಬುದು ಪೂರ್ವ ಯುರೋಪ್‌ನಲ್ಲಿ 1980ರ ದಶಕದಲ್ಲಿ ಏರುಗತಿಯಲ್ಲಿದ್ದ ಸನ್ನಿವೇಶದಲ್ಲಿ, ಇವರು ತಮ್ಮ ಸೇವಾ ಕಾರ್ಯಗಳನ್ನು ಕಮ್ಯುನಿಸ್ಟ್‌ ಆಡಳಿತವಿರುವ ರಾಷ್ಟ್ರಗಳಿಗೂ ವಿಸ್ತರಿಸಿ, ಹತ್ತು ಹಲವು ಯೋಜನೆಗಳನ್ನು ಆರಂಭಿಸಿ ದರು. ಆದರೆ ಹಿಂದೆ ಇದೇ ರಾಷ್ಟ್ರಗಳು ಮಿಷನರೀಸ್ ಆಫ್‌ ಚಾರಿಟಿ ಸಂಸ್ಥೆಯ ಯೋಜನೆಗಳನ್ನು ತಿರಸ್ಕರಿಸಿದ್ದವು.
  • ಗರ್ಭಪಾತ ಮತ್ತು ವಿವಾಹ ವಿಚ್ಛೇದನದ ಕುರಿತು ಇವರು "ಯಾರು ಏನೇ ಹೇಳಲಿ, ನೀವದನ್ನು ನಗುಮೊಗದಿಂದ ಸ್ವೀಕರಿಸಿ ಮತ್ತು ನಿಮ್ಮದೇ ನಿಲುವಿನ ಕೆಲಸವನ್ನು ನೀವು ಮಾಡಿ" ಎಂದು ನೀಡಿದ ಹೇಳಿಕೆಗೆ ಬಂದ ಟೀಕಾಸ್ತ್ರಗಳಿಗೆ ಇವರು ಎದೆಗುಂದಲಿಲ್ಲ.
  • ಇಥಿಯೋಪಿಯಾದಲ್ಲಿ ತೀವ್ರ ಹಸಿವಿನಿಂದ ಬಳಲುತ್ತಿರುವವರಿಗೆ,ಚೆರ್ನೋಬಿಲ್‌ದುರಂತದಲ್ಲಿ ವಿಕಿರಣಕ್ಕೀಡಾದವರಿಗೆ ಮತ್ತು ಅರ್ಮೇನಿಯಾದಲ್ಲಿ ಭೂಕಂಪ ಕ್ಕೆ ತುತ್ತಾದವರಿಗೆ ಸಹಾಯಹಸ್ತ ನೀಡಲು ಹಾಗೂ ಅದರ ಮೇಲ್ವಿಚಾರಣೆ ನಡೆಸಲು ಮದರ್‌ ತೆರೇಸಾ ಇಲ್ಲೆಲ್ಲಾ ಪ್ರವಾಸ ಕೈಗೊಂಡರು.ಮೊದಲ ಬಾರಿಗೆ ತಮ್ಮ ಮಾತೃ ಭೂಮಿಗೆ 1991ರಲ್ಲಿ ಮರಳಿದ ಮದರ್‌ ತೆರೇಸಾ ಅಲ್ಬೇನಿಯಾತಿರಾನದಲ್ಲಿ ಮಿಷನರೀಸ್ ಆಫ್‌ ಚಾರಿಟಿ ಬ್ರದರ್ಸ್‌ನ ಶಾಖೆಯನ್ನು ತೆರೆದರು.
  • 1996ರ ವೇಳೆಗೆ 100 ದೇಶಗಳಲ್ಲಿ 517 ಮಿಷನ್‌ಗಳನ್ನು ಇವರು ನಿರ್ವಹಿಸುತ್ತಿದ್ದರು.[೩೯]
  • ವರ್ಷಗಳುರುಳಿದಂತೆ ಮದರ್‌ ತೆರೇಸಾರ ಮಿಷನರೀಸ್ ಆಫ್‌ ಚಾರಿಟಿ ಸಂಸ್ಥೆ ಜಗತ್ತಿನಾದ್ಯಂತ ಸುಮಾರು 450 ಕೇಂದ್ರಗಳ ಮೂಲಕ "ಕಡು ಬಡವರ" ಸೇವೆ ಮಾಡು ತ್ತಾ ಸಾಗಿದೆ. ಹನ್ನೆರಡರಿಂದ ಆರಂಭವಾದ ಸೇವೆಗೈವರ ಸಂಖ್ಯೆ ಸಾವಿರಾರು ತಲಪಿ ಬೆಳೆಯುತ್ತಾ ಹೋಯಿತು. ಮಿಷನರೀಸ್ ಆಫ್‌ ಚಾರಿಟಿ ಸಂಸ್ಥೆಯಯುನೈಟೆ ಡ್‌ ಸ್ಟೇಟ್ಸ್‌ನ ಮೊದಲ ಆಶ್ರಯಧಾಮ ನ್ಯೂಯಾರ್ಕ್ಸೌಥ್‌ ಬ್ರಾಂಕ್ಸ್‌ನಲ್ಲಿ ಆರಂಭವಾಯಿತು. ಮಿಷನರಿಯು 1984ರ ವೇಳೆಗೆ 19 ಶಾಖೆಗಳನ್ನು ದೇಶದಾ ದ್ಯಂತ ನಡೆಸುತ್ತಿತ್ತು.[೪೦]
  • ಸಂಸ್ಥೆಗೆ ದೇಣಿಗೆಯಾಗಿ ಬಂದ ದಾನದ ಹಣವನ್ನು ಸಮರ್ಪಕವಾಗಿ ಖರ್ಚು ಮಾಡುವ ವಿಚಾರದಲ್ಲಿ ಇವರನ್ನು ಹಲವರು ಟೀಕಿಸಿದರು.ಕ್ರಿಸ್ಟೋಫರ್‌ ಹಿಚೆನ್ಸ್‌ ಮತ್ತು ಜರ್ಮನಿ ಯ ನಿಯತಕಾಲಿಕ ಸ್ಟರ್ನ್‌ ಇಬ್ಬರೂ ಹೇಳಿದ್ದಿಷ್ಟೇ:’ಮದರ್‌ತೆರೇಸಾ ದೇಣಿಗೆಯಾಗಿ ಬಂದ ಹಣವನ್ನು ಬಡತನವನ್ನು ತಗ್ಗಿಸಲಾಗಲೀ ಅಥವಾ ಅವರದೇ ಧರ್ಮ ಶಾಲೆಗಳ ಸ್ಥಿತಿಗತಿಯನ್ನು ಉತ್ತಮಪಡಿಸಲಾಗಲೀ ಬಳಸಲಿಲ್ಲ.
  • ಬದಲಿಗೆ ಹೊಸ ಕಾನ್ವೆಂಟ್‌ಗಳನ್ನು ಹೆಚ್ಚುಹೆಚ್ಚಾಗಿ ತೆರೆಯುವುದಕ್ಕೂ ಮತ್ತು ಮಿಷನರಿ ಕೆಲಸಗಳನ್ನು ಹೆಚ್ಚಿಸುವು ದಕ್ಕೂ ಬಳಸಿದ್ದಾರೆ’. ಇದರ ಜೊತೆಗೆ,ಇವರು ಸ್ವೀಕರಿಸಿದ ದೇಣಿಗೆಯ ಮೂಲಗಳೂ ಟೀಕೆಗೊಳಗಾದವು.ಹೈಟಿಯಲ್ಲಿ ನಿರಂಕುಶಾ ಧಿಕಾರಿಮತ್ತು ಭ್ರಷ್ಟಾಚಾರಿ ದುವಾಲಿಯರ್‌ ಕುಟುಂಬದಿಂದ ದತ್ತಿ ಸ್ವೀಕರಸಿದ ಮದರ್‌ ತೆರೇಸಾ ದಾನಿಗಳಿಬ್ಬರನ್ನೂ ಬಹಿರಂಗವಾಗಿಯೇ ಹೊಗಳಿದರು.
  • ಕೀಟಿಂಗ್‌ ಫೈವ್‌ ಹಗರಣ ಎಂದೇ ಹೆಸರುವಾಸಿಯಾಗಿರುವ ವಂಚನೆ ಮತ್ತು ಭ್ರಷ್ಟಾಚಾರ ಯೋಜನೆಯಲ್ಲಿ ಭಾಗಿಯಾಗಿದ್ದ ಚಾರ್ಲ್ಸ್ ಕೀಟಿಂಗ್‌ನಿಂದ 1.4 ದಶಲಕ್ಷ ಡಾಲರ್‌ ಹಣವನ್ನು ಇವರು ದೇಣಿಗೆಯಾಗಿ ಸ್ವೀಕರಿದರು, ಅಲ್ಲದೆ ಅವನ ಬಂಧನಕ್ಕೆ ಮುಂಚೆ ಮತ್ತು ನಂತರ ಅವನನ್ನು ಬೆಂಬಲಿಸಿದರು.
  • ಇದಕ್ಕೆ ಲಾಸ್‌ ಏಂಜೆಲಿಸ್‌ಡೆಪ್ಯುಟಿ ಡಿಸ್ಟ್ರಿಕ್ಟ್‌ ಅಟಾರ್ನಿಯಾಗಿದ್ದ ಪಾಲ್‌ ಟರ್ಲೆ ಮದರ್‌ ತೆರೇಸಾರಿಗೆ ಪತ್ರ ಬರೆದು ದೇಣಿಗೆಯಾಗಿ ಪಡೆದಿರುವ ಹಣವನ್ನು ಕೀಟಿಂಗ್‌ ಯಾರಿಂದ ಕಸಿದುಕೊಂಡಿದ್ದನೋ ಅವರಿಗೆ ಮರಳಿ ನೀಡುವಂತೆ ಕೋರಿದ್ದರು. ಹೀಗೆ ದೋಚಿಕೆಗೆ ಒಳಗಾದವರಲ್ಲಿ ಒಬ್ಬ "ಬಡ ಕಾರ್ಪೆಂಟರ್‌" ಕೂಡ ಸೇರಿದ್ದ. ದತ್ತಿ ಹಣಕ್ಕೆ ಯಾವುದೇ ಲೆಕ್ಕ ಇಟ್ಟಿರಲಿಲ್ಲ, ಅಲ್ಲದೆ ಟರ್ಲೆಗೆ ಯಾವ ಉತ್ತರವೂ ದೊರಕಲಿಲ್ಲ.
  • ಹಿಂದಿನ ಮಿಷನರಿ ಆಫ್‌ ಚಾರಿಟಿಯಾಗಿದ್ದ ಕೊಲೆಟ್ಟೆ ಲಿವರ್‌ಮೋರ್ ತಮ್ಮ ಹೋಪ್‌ ಎನ್‌ಡ್ಯೂರ್ಸ್‌: ಲೀವಿಂಗ್‌ ಮದರ್‌ ತೆರೇಸಾ, ಲೂಸಿಂಗ್‌ ಫೆಯಿಥ್‌‌, ಅಂಡ್‌ ಸರ್ಚಿಂಗ್ ಫಾರ್‌ ಮೀನಿಂಗ್ ಎಂಬ ಕೃತಿಯಲ್ಲಿ ತಾವು ಮಿಷನರಿಯನ್ನು ಬಿಡುವುದಕ್ಕೆ ಕಾರಣಗಳೇನು ಎಂಬುದನ್ನು ವಿವರಿಸಿದ್ದಾರೆ.ಮದರ್‌ ತೆರೇಸಾರ "ವೇದನೆಯ ತಾತ್ತ್ವಿಕ ಸಿದ್ಧಾಂತ" ಕಳಂಕ ಭರಿತವಾದದ್ದು, ಆದರೂ ಈಕೆಯೊಬ್ಬ ಸಾಧ್ವಿ, ಧೈರ್ಯಸ್ಥೆ ಎಂದು ಲಿವರ್‌ಮೋರ್‌ ಅಭಿಪ್ರಾಯ ಪಡುತ್ತಾರೆ.
  • ಕ್ರಿಸ್ತನ ಉಪದೇಶಗಳನ್ನು ತಾತ್ವಿಕ ಪ್ರವಚನಗಳ ಮೂಲಕ ಹರಡುವುದರ ಬದಲಾಗಿ ಕಾರ್ಯಾ ಚರಣೆಗಳ ಮೂಲಕ ಹರಡುವುದು ಮುಖ್ಯವಾದದ್ದೆಂದು ಮದರ್‌ ತೆರೇಸಾ ತಮ್ಮ ಅನುಯಾಯಿಗಳಿಗೆ ಸೂಚಿಸಿದ್ದರು. ಸಂಸ್ಥೆಯೇ ನಡೆಸುವ ಕೆಲವು ಆಚರಣೆಗಳೊಂದಿಗೆ ತೆರೇಸಾ ಸೂಚಿಸಿದ್ದು ಹೊಂದಿಕೆಯಾಗುತ್ತಿರಲಿಲ್ಲ ಎಂಬುದನ್ನು ಲಿವರ್‌ಮೋರ್‌ ಗ್ರಹಿಸಿದ್ದರು.
  • ನಿಗದಿತ ಸಮಯವನ್ನು ಬಿಟ್ಟು ಬೇರೆ ಸಮಯದಲ್ಲಿ ಅಗತ್ಯದ ಸಹಾಯಕ್ಕೂ ನನ್‌ಗಳು ಅನಗತ್ಯವಾಗಿ ತಿರಸ್ಕರಿಸುವುದು, ನನ್‌ಗಳು ತಾವು ದಿನನಿತ್ಯ ಮುಖಾಮುಖಿ ಯಾಗುವ(ದುರ್ಬಲರಿಗೆ ಮತ್ತು ಅಜ್ಞಾನಿಗಳಿಗೆ ದೇವರು ಶಕ್ತಿತುಂಬುತ್ತಾನೆ ಎನ್ನುವ ಸಮರ್ಥನೆಯೊಂದಿಗೆ) ಕಾಯಿಲೆಗಳ ಬಗ್ಗೆ ಅಗತ್ಯವಾಗಿರುವ ವೈದ್ಯಕೀಯ ಚಿಕಿತ್ಸೆಯ ತರಬೇತಿಯನ್ನು ಬಯಸಿದರೆ, ಅವರನ್ನು ನಿರುತ್ಸಾಹಿಗಳನ್ನಾಗಿ ಮಾಡುತ್ತಿದ್ದುದು, ಮತ್ತು ತಪ್ಪಿತಸ್ತರಿಗೆ "ನ್ಯಾಯಸಮ್ಮತವಲ್ಲದ" ಶಿಕ್ಷೆಗಳನ್ನು ನೀಡುತ್ತಿದ್ದುದು, ಉದಾ: ಸ್ನೇಹಿತರನ್ನು ಅಗಲಿಸುವುದು ಮುಂತಾದ ಕಾರಣಗಳನ್ನು ಲಿವರ್‌ಮೋರ್‌ ತಾವು ಸಂಸ್ಥೆಯಿಂದ ಹೊರಬಂದಿದ್ದಕ್ಕೆ ನೀಡುತ್ತಾರೆ.
  • ಮಿಷನರೀಸ್ ಆಫ್‌ ಚಾರಿಟಿ ತನ್ನ ನನ್‌ಗಳು ಅನ್ಯಧರ್ಮದ ಕೃತಿಗಳನ್ನು ಮತ್ತು ಪತ್ರಿಕೆಗಳನ್ನು ಓದುವುದನ್ನು ನಿಷೇಧ ಹೇರುವ ಮೂಲಕ ಅವರನ್ನು "ಅಪ್ರಬುದ್ಧ ಸ್ಥಿತಿಯಲ್ಲಿರಿಸಿತ್ತು", ಅಲ್ಲದೆ ನನ್‌ಗಳು ಸ್ವತಂತ್ರವಾಗಿ ಆಲೋಚಿಸುವ ಮತ್ತು ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಕುರಿತು ಚಿಂತಿಸುವುದಕ್ಕೆ ಪ್ರೋತ್ಸಾಹ ನೀಡದಷ್ಟರ ಮಟ್ಟಿಗಿನ ವಿಧೇಯತೆ ಅಲ್ಲಿದೆ ಎಂದು ಲಿವರ್‌ಮೋರ್‌ ಹೇಳುತ್ತಾರೆ.[೪೧]

ಕ್ಷೀಣಿಸಿದ ಆರೋಗ್ಯ ಮತ್ತು ಸಾವು[ಬದಲಾಯಿಸಿ]

  • 1983ರಲ್ಲಿ ಪೋಪ್‌ ಜಾನ್‌ ಪಾಲ್‌ II ಅವರನ್ನು0} ರೋಮ್‌ನಲ್ಲಿ ಭೇಟಿ ಮಾಡುವ ಸಂದರ್ಭದಲ್ಲಿ ಮದರ್‌ ತೆರೇಸಾ ಹೃದಯಾಘಾತಕ್ಕೆ ಈಡಾದರು. ಇವರು ಮತ್ತೆ ಎರಡನೇ ಬಾರಿ 1989ರಲ್ಲಿ ಹೃದಯಾಘಾತಕ್ಕೆ ಒಳಗಾದಾಗ ಇವರಿಗೆ ಕೃತಕ ಹೃದಯಕ್ಕೆಕೃತಕ ಪೇಸ್‌ಮೇಕರ್ ಅನ್ನು ಅಳವಡಿಸಲಾಯಿತು. ನ್ಯುಮೋನಿಯ(=ಶ್ವಾಸಕೋಶದಲ್ಲಿ ಕಫ ತುಂಬುವಿಕೆ) ಕಾಯಿಲೆಯೊಂದಿಗೆ ಹೋರಾಡಿದ ತರುವಾಯ 1991ರಲ್ಲಿ ಅವರು ಮೆಕ್ಸಿಕೋದಲ್ಲಿ ಮತ್ತೊಮ್ಮೆ ಹೃದಯ ಸಂಬಂಧೀ ತೊಂದರೆಗೆ ಸಿಲುಕಿದರು.
  • ಇವರು ಮಿಷನರೀಸ್ ಆಫ್‌ ಚಾರಿಟಿ ಸಂಸ್ಥೆಯ ಮುಖ್ಯಸ್ಥರ ಹುದ್ದೆಗೆ ರಾಜೀನಾಮೆ ನೀಡಲು ಮುಂದಾದರು.ಆದರೆ ಮಿಷನರಿಯ ನನ್‌ಗಳು ಗುಪ್ತ ಮತದಾನದಲ್ಲಿ ಮತ ಚಲಾಯಿಸಿ ತೆರೇಸಾ ತಮ್ಮ ಹುದ್ದೆಯಲ್ಲಿ ಮುಂದುವರಿಯುವಂತೆ ನೋಡಿಕೊಂಡರು.ಈ ಕಾರಣದಿಂದಾಗಿ ತೆರೇಸಾ ಅದೇ ಹುದ್ದೆಯಲ್ಲಿ ಮುಂದುವರಿದರು. 1996 ಏಪ್ರಿಲ್‌ನಲ್ಲಿ ಮದರ್‌ ತೆರೇಸಾ ಬಿದ್ದ ಪರಿಣಾಮವಾಗಿ ಅವರಕೊರಳ ಮೂಳೆ ಅಥವಾ ಕ್ಲಾವಿಕಲ್‌ ಬೋನ್‌ ಮುರಿಯತು.
  • ಆಗಸ್ಟ್‌ನಲ್ಲಿ ಇವರು ಮಲೇರಿಯಕ್ಕೆ ತುತ್ತಾದರು ಅಲ್ಲದೆ ಇವರ ಎಡ ಹೃತ್ಕುಹರ(=ಹಾರ್ಟ್‌ ವೆಂಟ್ರಿಕಲ್‌) ವಿಫಲವಾಯಿತು. ಹೃದಯ ಶಸ್ತ್ರಚಿಕಿತ್ಸೆನಡೆಸ ಲಾಯಿತಾದರೂ,ಅವರ ಆರೋಗ್ಯ ಕ್ಷೀಣಿಸುತ್ತಿತ್ತು. ಕಾಯಿಲೆ ಬಿದ್ದಾಗ ಅವರದೇ ಒಂದು ಚಿಕಿತ್ಸಾ ಕೇಂದ್ರದಲ್ಲಿ ಅವರು ಚಿಕಿತ್ಸೆ ಪಡೆಯಲಿಲ್ಲ. ಬದಲಾಗಿ ಸಕಲ ಸೌಲಭ್ಯವಿರುವ ಅತ್ಯಾಧುನಿಕ ಕ್ಯಾಲಿಫೋರ್ನಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿರಿ ಎಂಬ ಅವರ ನಿಲುವು ದೊಡ್ಡ ವಿವಾದವನ್ನು ಹುಟ್ಟುಹಾಕಿತು.[೪೨]
  • ಮದರ್‌ ತೆರೇಸಾ ಹೃದಯ ಸಂಬಂಧಿ ಸಮಸ್ಯೆಗಳಿಗೆ ಈಡಾಗಿ ಮೊದಲ ಬಾರಿಗೆ ಆಸ್ಪತ್ರೆಗೆ ದಾಖಲಾದಾಗ ಕಲ್ಕತ್ತಾದ ಆರ್ಚ್‌ಬಿಷಪ್‌ ಹೆನ್ರಿ ಸೆಬಾಸ್ಟಿಯನ್‌ ಡಿಸೋಝ ತೆರೇಸಾ ಅವರ ಅನುಮತಿ ಪಡೆದು ಅವರಿಗೆ ದೆವ್ವ ಬಿಡಿಸುವ ಕ್ರಿಯಾದಿಗಳನ್ನು ನೆರವೇರಿಸಲು ಪಾದ್ರಿಗೆ ಸೂಚಿಸಿದರು. ತೆರೇಸಾರಿಗೆ ದೆವ್ವ ಹಿಡಿದಿದೆ ಎಂಬುದು ಡಿಸೋಝ ಅವರ ಭಾವನೆಯಾಗಿತ್ತು.[೪೩]
  • 1997ರ ಮಾರ್ಚ್‌ 13ರಂದು ತೆರೇಸಾ ಮಿಷನರೀಸ್ ಆಫ್‌ ಚಾರಿಟೀಸ್‌ನಿಂದ ಹೊರ ಬಂದರು. ಮದರ್‌ ತೆರೇಸಾ 1997ರ ಸೆಪ್ಟೆಂಬರ್‌ 5ರಂದು ಇಹ ಲೋಕ ತ್ಯಜಿಸಿದರು. ಮದರ್‌ ತೆರೇಸಾ ನಿಧನರಾದ ಸಮಯದಲ್ಲಿ ಅವರ ಮಿಷನರೀಸ್ ಆಫ್‌ ಚಾರಿಟಿ ಸಂಸ್ಥೆ ಸುಮಾರು 4,000ಕ್ಕೂ ಹೆಚ್ಚು ಸಿಸ್ಟರ್‌ಗಳನ್ನು, ಮತ್ತು ಸಂಘಟಿತ ಬ್ರದರ್‌ಗಳ 300 ಸದಸ್ಯರನ್ನು ಹೊಂದಿತ್ತಲ್ಲದೆ, 123 ದೇಶಗಳಲ್ಲಿ 610 ಮಿಷನ್‌ಗಳ ಮೂಲಕ ಕಾರ್ಯ ನಿರ್ವಹಿಸುತ್ತಿತ್ತು.
  • ಧರ್ಮಶಾಲೆಗಳು ಮತ್ತು HIV/AIDS ರೋಗಿಗಳ ಆಶ್ರಯಧಾಮಗಳು,ಕುಷ್ಠರೋಗ ಮತ್ತು ಕ್ಷಯರೋಗ ಕೇಂದ್ರಗಳು, ಸಾರಿನ ಅರವಟ್ಟಿಗೆಗಳು, ಮಕ್ಕಳು ಮತ್ತು ಕೌಟುಂಬಿಕ ಆಪ್ತ ಸಲಾಹಾ ಯೋಜನೆಗಳು, ವೈಯಕ್ತಿಕ ಸಹಾಯಕರು, ಅನಾಥಾಶ್ರಮಗಳು, ಮತ್ತು ಶಾಲೆಗಳು ಇವುಗಳಲ್ಲಿ ಸೇರಿವೆ. 1990ರ ದಶಕದ ವೇಳೆಗೆ ಮಿಷನರೀಸ್ ಆಫ್‌ ಚಾರಿಟಿ ಸಂಸ್ಥೆಗೆ ಸೇರ್ಪಡೆಗೊಂಡಿದ್ದ 1 ದಶಲಕ್ಷಕ್ಕೂ ಅಧಿಕ ಸಂಖ್ಯೆಯ ಕಾರ್ಯಕರ್ತರು ತಮ್ಮ ಸೇವೆ ಸಲ್ಲಿಸಿ ಅದನ್ನು ಎತ್ತರಕ್ಕೆ ಬೆಳೆಸಿದರು.[೪೪]

ಜಾಗತಿಕ ಮನ್ನಣೆ ಮತ್ತು ಪುರಸ್ಕಾರ[ಬದಲಾಯಿಸಿ]

ಭಾರತದಲ್ಲಿ ಪುರಸ್ಕಾರ[ಬದಲಾಯಿಸಿ]

  • ಮದರ್‌ ತೆರೇಸಾರಿಗೆ 1962ರಲ್ಲಿ ಪದ್ಮಶ್ರೀಪ್ರಶಸ್ತಿ ನೀಡಿ ಭಾರತ ಸರ್ಕಾರ ತನ್ನ ಗೌರವ ಸಲ್ಲಿಸಿತು. ಮುಂದಿನ ದಶಕಗಳಲ್ಲಿ ಪ್ರಮುಖ ಭಾರತೀಯ ಪುರಸ್ಕಾರ ಗಳನ್ನು ಇವರು ಪಡೆಯುತ್ತಲೇ ಬಂದರು. ಅಂತಾರಾಷ್ಟ್ರೀಯ ಸಂವೇದನಾ ಶೀಲತೆಗೆ 1972ರಲ್ಲಿ ಜವಾಹರಲಾಲ್‌ ನೆಹರು ಪ್ರಶಸ್ತಿ, 1980ರಲ್ಲಿ ಭಾರತದ ಅತ್ಯುನ್ನತ ಪೌರ ಪ್ರಶಸ್ತಿಯಾದ ಭಾರತ ರತ್ನ.[೪೫] ಇವರ ಪಾಲಾದವು.
  • ಇವರ ಅಧಿಕೃತ ಜೀವನ ಚರಿತ್ರೆಯನ್ನು ಬರೆದದ್ದು ಭಾರತೀಯ ನಾಗರಿಕ ಸೇವೆಯಲ್ಲಿದ್ದ ನವೀನ್‌ ಚಾವ್ಲಾ.ಅದು ಪ್ರಕಟವಾದದ್ದು 1992ರಲ್ಲಿ.[೪೬] ಮದರ್‌ ತೆರೇಸಾರ ಮೇಲೆ ಭಾರತೀಯ ದೃಷ್ಟಿಕೋನ ಏಕರೂಪದಲ್ಲಿ ಅವರ ಪರವಾಗಿ ಇರಲಿಲ್ಲ.
  • "ತಮ್ಮ ಜೀವಿತ ಕಾಲದಲ್ಲಿ ತೆರೇಸಾ ಕಲ್ಕತ್ತದಲ್ಲಿ ಒಬ್ಬ ಮಹತ್ವದ ವ್ಯಕ್ತಿಯಾಗಿರಲೇ ಇಲ್ಲ" ಎಂದು ಕಲ್ಕತ್ತದಲ್ಲಿ ಹುಟ್ಟಿ; ಬೆಳೆದು, ಲಂಡನ್‌ ನಿವಾಸಿಯಾದ ತೆರೇಸಾರ ವಿಮರ್ಶಕ ಅರೌಪ್‌ ಚಟರ್ಜೀಹೇಳುತ್ತಾರೆ. ಮದರ್‌ ತೆರೇಸಾ ತಮ್ಮ ಮೂಲ ನೆಲೆಯಾಗಿದ್ದ ಕಲ್ಕತ್ತ ನಗರವನ್ನು ನಕಾರಾತ್ಮಕವಾಗಿ ಬಿಂಬಿಸಿದ್ದನ್ನು ಚಟರ್ಜೀ ಹೀಗಳೆಯುತ್ತಾರೆ.[೪೭]
  • ಆಗಿಂದಾಗ್ಗೆ ಹಿಂದೂ ಹಕ್ಕುಗಳನ್ನು ವಿರೋಧಿಸುತ್ತಿದ್ದರಿಂದ ಅವರ ಇರುವು ಅವರ ಬಗೆಗಿನ ಚಿತ್ರಣ ಭಾರತದ ರಾಜಕೀಯ ಜಗತ್ತಿನ ಕೆಲವು ಭಾಗಗಳಲ್ಲಿ ಹಲ್ಲು ಮಸೆಯುವಂತೆ ಮಾಡಿತ್ತು. ಭಾರತೀಯ ಜನತಾ ಪಾರ್ಟಿ ಕ್ರಿಶ್ಚಿಯನ್‌ ದಲಿತರ ವಿಚಾರದಲ್ಲಿ ಇವರೊಂದಿಗೆ ಸಂಘರ್ಷಕ್ಕಿಳಿದಿತ್ತು. ಆದರೂ ಇವರು ನಿಧನರಾದಾಗ ಇದೇ ಪಕ್ಷ ಅಂತ್ಯ ಸಂಸ್ಕಾರಕ್ಕೆ ತಮ್ಮ ಪ್ರತಿನಿಧಿಯನ್ನು ಕಳಿಸಿ ಹಾಡಿ ಹೊಗಳಿತ್ತು.
  • ಇನ್ನೊಂದೆಡೆಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಇವರ ಅಂತ್ಯ ಸಂಸ್ಕಾರ ಮಾಡಿದ್ದನ್ನು ವಿಶ್ವ ಹಿಂದೂ ಪರಿಷತ್‌ ವಿರೋಧಿಸಿತು. ಇದರ ಕಾರ್ಯದರ್ಶಿ ಗಿರಿರಾಜ್‌ ಕಿಶೋರ್‌ "ತೆರೇಸಾ ಮೊದಲ ಆದ್ಯತೆ ಚರ್ಚ್‌ ಕರ್ತವ್ಯ, ಸಮಾಜ ಸೇವೆ ಆಕಸ್ಮಿಕವಾದ್ದು" ಎಂದು ಪ್ರತಿಕ್ರಿಯಿಸಿದರು. ಅವರ ಧೋರಣೆ ಕ್ರಿಶ್ಚಿಯನ್ನರ ಪರವಾಗಿತ್ತು ಮತ್ತು ಮರಣ ಶಯ್ಯೆಯಲ್ಲಿರುವವರಿಗೆ ಇವರು "ಗುಪ್ತ ದೀಕ್ಷಾವಿಧಿ" ನಡೆಸುತ್ತಿದ್ದರು ಎಂದು ಅವರ ವಿರುದ್ಧ ಗಿರಿರಾಜ್‌ ಆಪಾದನೆ ಮಾಡಿದ್ದರು.
  • ಆದರೆ ಭಾರತದ ಪಾಕ್ಷಿಕ ಪತ್ರಿಕೆ ಫ್ರಂಟ್‌ಲೈನ್‌ ತನ್ನ ಮುಖಪುಟದಲ್ಲಿ ಗೌರವ ಸಲ್ಲಿಸಿ ಮಾಡಲಾಗಿರುವ ಆರೋಪಗಳೆಲ್ಲವೂ "ಹಸೀ ಸುಳ್ಳು" ಎಂದು ತಿರಸ್ಕರಿಸಿತು. ಅಲ್ಲದೆ "ಅವರು ನಿರ್ವಹಿಸುತ್ತಿದ್ದ ಕೆಲಸದ ಮೇಲೆ ಸಾರ್ವಜನಿಕರಿಗೆ ವಿಶೇಷವಾಗಿ ಕಲ್ಕತ್ತದಲ್ಲಿ ಯಾವುದೇ ಪರಿಣಾಮವನ್ನೂ ಬೀರಲಿಲ್ಲ" ಎಂದು ಅದು ಹೇಳಿತು.ಅವರ "ನಿಸ್ವಾರ್ಥ ಸೇವೆ",ಶಕ್ತಿ ಹಾಗೂ ಧೈರ್ಯವನ್ನು ಹೊಗಳಿದರೂ, ದಿ ಟ್ರಿಬ್ಯೂಟ್‌ ಕೃತಿಯ ಲೇಖಕನ ಗರ್ಭಪಾತದ ವಿರುದ್ಧ ಮದರ್‌ ತೆರೇಸಾ ನಡೆಸಿದ ಸಾರ್ವಜನಿಕ ಅಭಿಯಾನ ಅಪಾಯಕಾರಿಯಾಗಿತ್ತು.
  • ತೆರೇಸಾ ಇದನ್ನು ರಾಜಕೀಯಕ್ಕೆ ಸಂಬಂಧಿಸಿದ್ದಲ್ಲ ಎಂದು ವಾದಿಸಿದ್ದರು ಎಂದು ಬರೆಯಿತು.[೪೫]
  • "ಬಡವರ ಸ್ಥಿತಿಗತಿಯನ್ನು ಉತ್ತಮಪಡಿಸಲು ಏನಾದರೂ ಪ್ರಯತ್ನಿಸಿದ್ದಾರೋ ಅಥವಾ ರೋಗಿಗಳಿಗೆ, ಬಡವರಿಗೆ, ಮರಣಕಾಲದಲ್ಲಿರುವವರಿಗೆ ಮತ್ತು ಇವರ ಅಗತ್ಯ ಇರುವವರನ್ನು ಕೇವಲ ನೈತಿಕ ಕಾರಣದಿಂದ ಭಾವನಾತ್ಮಕವಾಗಿ ಉಪಚರಿಸಿದ್ದಾರೋ ಎನ್ನುವುದನ್ನು ಪತ್ತೆ ಹಚ್ಚಲು ರೋಮ್‌ ಅನ್ನು ತನಿಖೆಗೆ ಕೋರಲಾಗಿತ್ತು" ಎನ್ನುವುದನ್ನು ತೀರಾ ಇತ್ತೀಚೆಗೆ ಭಾರತೀಯ ದೈನಿಕ ದಿ ಟೆಲಿಗ್ಯ್ರಾಫ್‌ ವರದಿ ಮಾಡಿದೆ.[೪೮]
  • ಮದರ್‌ ತೆರೇಸಾರ ಪಾರ್ಥಿವ ಶರೀರವನ್ನು ಅಂತ್ಯ ಸಂಸ್ಕಾರಕ್ಕೂ ಮುಂಚೆ ಒಂದು ವಾರ ಕಾಲ 1997ರ ಸೆಪ್ಟೆಂಬರ‍್ನಲ್ಲಿ ಸೇಂಟ್‌ ಥಾಮಸ್‌, ಕಲ್ಕತ್ತಾದಲ್ಲಿ ಇಡಲಾಗಿತ್ತು. ಭಾರತದ ಎಲ್ಲ ಧರ್ಮದ ಬಡಬಗ್ಗರಿಗೆ ಸೇವೆ ಸಲ್ಲಿಸಿದ್ದರ ಕೃತಜ್ಞತೆಯ ದ್ಯೋತಕವಾಗಿ ಇವರಿಗೆಭಾರತ ಸರ್ಕಾರವು ಅಂತ್ಯ ಸಂಸ್ಕಾರದಲ್ಲಿ ಸಕಲ ಸರ್ಕಾರಿ ಗೌರವಾರ್ಪಣೆ ನೀಡಿ ಭಾಗಿಯಾಯಿತು.[೪೯]

ಜಗತ್ತಿನ ಉಳಿದೆಡೆಯಿಂದ ಬಂದ ಪುರಸ್ಕಾರ[ಬದಲಾಯಿಸಿ]

1985ರಲ್ಲಿ ಶ್ವೇತಭವನದ ಸಮಾರಂಭದಲ್ಲಿ ಪ್ರೆಸಿಡೆಂಟ್‌ ರೊನಾಲ್ಡ್‌ ರೀಗನ್‌ ಮದರ್‌ ತೆರೇಸಾರಿಗೆ ಪ್ರೆಸಿಡೆನ್‌ಷಿಯಲ್‌ ಮೆಡಲ್‌ ಆಫ್‌ ಫ್ರೀಡಮ್‌ ಪ್ರಶಸ್ತಿಯನ್ನು ನೀಡುತ್ತಿದ್ದಾರೆ.
  • ಇವರ ಅಂತರಾಷ್ಟ್ರೀಯ ಅರಿವು ಹಾಗೂ ದಕ್ಷಿಣ ಮತ್ತು ಪೂರ್ವ ಏಷ್ಯಾದಲ್ಲಿ ಸಲ್ಲಿಸಿದ ಸೇವೆಗೆ ಫಿಲಿಪ್ಪೈನ್ಸ್ ಮೂಲದ ರಾಮನ್‌ ಮ್ಯಾಗ್ಸೆಸೆ ಪ್ರಶಸ್ತಿ1962ರಲ್ಲಿ ಇವರ ಮುಡಿಗೇರಿತು.ಮೊಲದೊಡನೆ ಹೋಲಿಸಿ. "ವಿದೇಶಿ ನೆಲದ ಬಡವರ ದುಸ್ಥಿತಿಯ ಕುರಿತು ಇವರಿಗಿದ್ದ ಕರುಣೆಯನ್ನು ಟ್ರಸ್ಟೀಗಳ ಮಂಡಳಿ ಮಾನ್ಯಮಾಡುತ್ತದೆ. ಇವರ ಸೇವೆ ನವ ಸಮಾಜದ ನಿರ್ಮಾಣಕ್ಕೆ ಕಾರಣವಾಗಿವೆ." ಎಂದು[೫೦] ಪ್ರಶಸ್ತಿ ಪತ್ರ ಉಲ್ಲೇಖಿಸುತ್ತದೆ.
  • 1970ರ ದಶಕದ ಪೂರ್ವಾರ್ಧದಲ್ಲೇ ಮದರ್‌ ತೆರೇಸಾ ಅಂತರಾಷ್ಟ್ರೀಯ ಖ್ಯಾತಿ ಗಳಿಸಿದ್ದರು.ದೊಡ್ಡಮಟ್ಟದ ಇವರ ಜನಪ್ರಿಯತೆ ಸಮ್‌ಥಿಂಗ್ ಬ್ಯೂಟಿಫುಲ್‌ ಫಾರ‍್ ಗಾಡ್‌ ಎಂಬ 1969ರ ಸಾಕ್ಷ್ಯಚಿತ್ರದಲ್ಲಿ ಬಿಂಬಿತವಾಗಿತ್ತು. ಇದನ್ನು ಮ್ಯಾಲ್ಕಮ್ ಮುಗ್ಗರಿಜ್‌ ಎಂಬ ಲೇಖಕ 1971ರಲ್ಲಿ ಪ್ರಕಟವಾದ ಇದೇ ಹೆಸರಿನ ತನ್ನದೇ ಕೃತಿಯನ್ನು ಆಧರಿಸಿ ಚಿತ್ರಿಸಿದ್ದ. ಆ ಸಮಯದಲ್ಲಿ ಮುಗ್ಗರಿಜ್‌ ತನ್ನದೇ ಆದ ಆಧ್ಯಾತ್ಮಿಕ ಹಾದಿಯಲ್ಲಿ ಸಾಗುತ್ತಿದ್ದರು.[೫೧]
  • ಸಾಕ್ಷ್ಯಚಿತ್ರ ನಿರ್ಮಾಣದ ಸಮಯದಲ್ಲಿ ದೃಶ್ಯಗಳನ್ನು, ವಿಶೇಷವಾಗಿ ಮರಣ ಶಯ್ಯೆಯಲ್ಲಿರುವವರ ಆಶ್ರಯಧಾಮದ ದೃಶ್ಯಗಳನ್ನು ಮಂದಬೆಳಕಿನಲ್ಲಿ ಚಿತ್ರೀಕರಿಸಲಾಗಿತ್ತು, ಬಳಸಬಲ್ಲ ಗುಣಮಟ್ಟದಲ್ಲಿ ದೃಶ್ಯಗಳನ್ನು ಚಿತ್ರೀಕರಿಸುವುದು ಅಸಂಭವ ಎಂದೇ ಚಿತ್ರತಂಡ ಭಾವಿಸಿತ್ತು. ಭಾರತದಿಂದ ಹಿಂತಿರುಗಿದ ನಂತರ, ಚಿತ್ರೀಕರಿಸಿದ ದೃಶ್ಯಗಳು ಪ್ರಕಾಶಮಾನವಾದ ಬೆಳಕಿನಲ್ಲಿ ಮೊಡಿಬಂದಿರುವುದು ಕಂಡು ಬಂತು.
  • ಮದರ್‌ ತೆರೇಸಾರಿಂದ ಚಿಮ್ಮಿರುವ "ದಿವ್ಯ ಪ್ರಕಾಶದ" ಪವಾಡ ಇದು ಎಂದು ಮುಗ್ಗರಿಜ್‌ ವಾದಿಸುತ್ತಾರೆ.[೫೨] ಅಲ್ಟ್ರಾ-ಸೆನ್ಸಿಟಿವ್‌ ಕೋಡ್ಯಾಕ್‌ ಫಿಲ್ಮ್‌ ಇದಕ್ಕೆ ಕಾರಣ ಎಂಬುದು ಚಿತ್ರ ತಂಡದಲ್ಲಿದ್ದ ಇತರರ ಅಭಿಪ್ರಾಯವಾಗಿತ್ತು. ನಂತರ ಮುಗ್ಗರಿಜ್‌ ಮತಾಂತರಗೊಂಡು ಕ್ಯಾಥೊಲಿಕ್‌ ಆದರು.
  • ಈ ಸಮಯದಲ್ಲಿ ಕ್ಯಾಥೊಲಿಕ್‌ ಜಗತ್ತು ಮದರ್‌ ತೆರೇಸಾರಿಗೆ ಪೌರ ಸನ್ಮಾನ ಸಲ್ಲಿಸುವುದನ್ನು ಆರಂಭಿಸಿತು. 1971ರಲ್ಲಿ ಪಾಲ್‌ VI ಇವರಿಗೆ ಮೊದಲ ಬಾರಿಗೆ ಪೋಪ್‌ ಜಾನ್‌ XXIII ಶಾಂತಿ ಪ್ರಶಸ್ತಿ ನೀಡಿ ಗೌರವಿಸಿದರು. ಅಲ್ಲದೆ ಬಡವರಿಗಾಗಿ ಇವರು ಸಲ್ಲಿಸಿದ ಸೇವೆ, ಕ್ರಿಶ್ಚಿಯನ್‌ ಧರ್ಮದ ದಾನಗುಣದ ಪ್ರದರ್ಶನ ಮತ್ತು ಶಾಂತಿಗಾಗಿ ಪಟ್ಟ ಶ್ರಮ ಎಂದು ಇವರನ್ನು ಪ್ರಶಂಸಿದರು.[೫೩]
  • ನಂತರ ಇವರಿಗೆ ಪೇಸೆಮ್‌ ಇನ್‌ ಟೆರ್ರಿಸ್ ಅವಾರ್ಡ್‌ ದೊರೆಯಿತು(1976).[೫೪]
  • ಮದರ್‌ ತೆರೇಸಾ ತಮ್ಮ ಸಾವಿನವರೆಗೂಸ್ಯೇಂಟ್‌ಹುಡ್‌ದಿಕ್ಕಿನೆಡೆ ಇರಿಸಿದ ಹೆಜ್ಜೆಗಳೊಂದಿಗೆ ಅವರು ಕ್ಷಿಪ್ರವಾಗಿ ಬೆಳೆದರು, ಅಂತಿಮವಾಗಿ ದೈವತ್ವದ ಪರಮಪದ ಪ್ರಾಪ್ತಿ ಹಂತಕ್ಕೆ ತಲುಪಿದರು. ಮದರ್‌ ತೆರೇಸಾರನ್ನು ಸರ್ಕಾರಗಳು ಮತ್ತು ನಾಗರಿಕ ಸಂಘಟನೆಗಳೆರಡೂ ಪ್ರಶಸ್ತಿ-ಪುರಸ್ಕಾರ ನೀಡಿ ಗೌರವಿಸಿವೆ.
  • 1982ರಲ್ಲಿ ಆರ್ಡರ್‌ ಆಫ್‌ ಆಸ್ಟ್ರೇಲಿಯಾದ ಗೌರವ ಒಡನಾಡಿಯಾಗಿ "ಆಸ್ಟ್ರೇಲಿಯ ಜನಸಮುದಾಯದ ಮತ್ತು ವಿಶಾಲ ದೃಷ್ಟಿಯಲ್ಲಿ ಇಡೀ ಮಾನವ ಕುಲದ ಸೇವೆ ಮಾಡಲು" ಇವರನ್ನು ನೇಮಿಸಲಾಗಿತ್ತು.[೫೫] ಊರ್ಧ್ವಗಾಮಿಯಾಗಿ ಬೆಳೆಯುತ್ತಿರುವುದ ಕ್ಕಾಗಿಯುನೈಟೆಡ್‌ ಕಿಂಗ್‌ಡಮ್‌ ಮತ್ತು ಯುನೈಟೆಡ್‌ ಸ್ಟೇಟ್ಸ್‌ಗಳು ಇವರಿಗೆ ಪ್ರತ್ಯೇಕವಾಗಿ ಮೇಲಿಂದ ಮೇಲೆ ಪ್ರಶಸ್ತಿ ನೀಡಿ,1983ರಲ್ಲಿ ಆರ್ಡರ್‌ ಆಫ್‌ ಮೆರಿಟ್‌ಎಂಬ ಪ್ರಶಸ್ತಿಯ ಪರಾಕಾಷ್ಟೆಗೆ ಅವರನ್ನು ಕೊಂಡೊಯ್ಯಿತು.
  • ಅಲ್ಲದೆ ಯುನೈಟೆಡ್‌ ಸ್ಟೇಟ್ಸ್‌ 1996ರ ನವೆಂಬರ್‌ 16ರಂದು ಇವರಿಗೆ ಗೌರವ ಪೌರತ್ವ ನೀಡಿತು. ಮದರ್‌ ತೆರೇಸಾರ ಮಾತೃ ಭೂಮಿಯಾದ ಅಲ್ಬೇನಿಯಾ ಇವರಿಗೆ 1994ರಲ್ಲಿ ಗೋಲ್ಡನ್‌ ಆನರ್‌ ಆಫ್ ದಿ ನೇಷನ್‌ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿತು.[೪೫]
  • ಅಲ್ಬೇಲಿಯಾ ಸರ್ಕಾರದ ಪುರಸ್ಕಾರ ಹಾಗೂ ಹೈಟಿ ಸರ್ಕಾರ ನೀಡಿದ ಮತ್ತೊಂದು ಪುರಸ್ಕಾರವನ್ನು ಸ್ವೀಕರಿಸಿದ ಇವರ ನಿರ್ಧಾರ ವಿವಾದಾತ್ಮಕವೆಂದು ಸಾಬೀತಾಗಿದೆ. ಮದರ್‌ತೆರೇಸಾ ಹಲವರಿಂದ, ನಿರ್ದಿಷ್ಟವಾಗಿ ಎಡಪಂಥೀಯರಿಂದ ಟೀಕೆಗೆ ಗುರಿಯಾಗಬೆಕಾಯಿತು. ಇವರು ದುವಾಲಿಯರ್‌ಗೆ ಮತ್ತು ಚಾರ್ಲ್ಸ್ ಕೀಟಿಂಗ್‌ ಹಾಗೂ ರಾಬರ್ಟ್‌ ಮ್ಯಾಕ್ಸ್‌ವೆಲ್‌ರಂತಹ ಭ್ರಷ್ಟಾಚಾರಿ ಉದ್ಯಮಿಗಳಿಗೆ ಬಹಿರಂಗ ಬೆಂಬಲ ನೀಡಿದ್ದು ಈ ವಿವಾದವೇಳಲು ಕಾರಣವಾಗಿತ್ತು. ಕೀಟಿಂಗ್‌ ಪ್ರಕರಣದಲ್ಲಿ ಇದರ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶರಿಗೆ ತೆರೇಸಾ ಪತ್ರ ಬರೆದು ಆತನಿಗೆ ದಯೆ ದಯಪಾಲಿಸುವಂತೆ ಕೋರಿದ್ದರು.[೪೫][೫೬]
  • ಪಶ್ಚಿಮ ದೇಶಗಳ ಮತ್ತು ಭಾರತದ ವಿಶ್ವವಿದ್ಯಾಲಯಗಳೆರಡೂ ಇವರಿಗೆ ಗೌರವ ಪದವಿ ನೀಡಿವೆ.[೪೫] ಇವರಿಗೆ ಸಂದಿರುವ ಇತರೆ ಪೌರ ಪ್ರಶಸ್ತಿಗಳೆಂದರೆ, ಜನರ ನಡುವೆ ಭಾತೃತ್ವ, ಶಾಂತಿ, ಮಾನವೀಯ ಮೌಲ್ಯಗಳ ಪ್ರತಿಪಾದನೆಗಾಗಿ ಪಾಲ್‌ಝಾನ್‌ ಪ್ರೈಸ್‌(1978) ಮತ್ತು ಆಲ್ಬರ್ಟ್‌ ಸ್ಕ್ವೀಟ್ಜರ್‌ ಅಂತರಾಷ್ಟ್ರೀಯ ಪ್ರಶಸ್ತಿ (1975)ಗಳು ಸಂದಿವೆ.
  • "ಶಾಂತಿ ಭಂಗಕ್ಕೂ ಕಾರಣವಾಗಬಹುದಾದ ಬಡತನ ಮತ್ತು ಬೇಗುದಿಯನ್ನು ಮೆಟ್ಟಿನಿಲ್ಲಲು ನಡೆಸಿದ ಹೋರಾಟದಲ್ಲಿ ಕೈಗೊಂಡ ಕಾರ್ಯಗಳಿಗಾಗಿ" 1979ರಲ್ಲಿ ಮದರ್‌ ತೆರೇಸಾರಿಗೆ ವಿಶ್ವದ ಅತ್ಯುನ್ನತ ಪ್ರಶಸ್ತಿಯಾದ ನೊಬೆಲ್‌ ಶಾಂತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ವಿಜೇತರಿಗೆ ನೀಡಲಾದ ಸಾಂಪ್ರದಾಯಿಕ ಔತಣಕೂಟ ವನ್ನು ಇವರು ತಿರಸ್ಕರಿಸಿದರಲ್ಲದೆ, $192,000 ಮೊತ್ತದ ನಿಧಿಯನ್ನು ಭಾರತದಲ್ಲಿರುವ ಬಡವರಿಗೆ ನೆರವಾಗಲು ನೀಡಬೇಕೆಂದು ಕೋರಿದರು.[೫೭] ಜಗತ್ತಿನ ನಿರ್ಗತಿಕರಿಗೆ ಸಹಾಯ ಮಾಡಲು ಸಹಕರಿಸುವಂತಾದರೆ ಮಾತ್ರ ತಮಗೆ ಪ್ರಾಪಂಚಿಕ ಪ್ರತಿಫಲಗಳು ಮುಖ್ಯವಾಗುತ್ತವೆ ಎಂದು ಅವರು ಇದಕ್ಕೆ ಪ್ರತಿಕ್ರಿಯಿಸಿದರು.
  • ಪ್ರಶಸ್ತಿ ಪ್ರದಾನ ಮಾಡಿದ ಮೇಲೆ "ವಿಶ್ವ ಶಾಂತಿಯನ್ನು ಉತ್ತೇಜಿಸಲು ನಾವು ಏನು ಮಾಡಬಹುದು?" ಎಂದು ಮದರ್‌ ತೆರೇಸಾರನ್ನು ಪ್ರಶಸ್ತಿ ಸಂಸ್ಥೆ ಕೇಳಿತ್ತು. "ಮನೆಗೆ ಹೋಗಿ, ನಿಮ್ಮ ಕುಟುಂಬವನ್ನು ಪ್ರೀತಿಸಿ" ಎಂಬ ಚುಟುಕು ಉತ್ತರವನ್ನು ತೆರೇಸಾ ನೀಡಿದ್ದರು. "ಬಡ ರಾಷ್ಟ್ರಗಳಲ್ಲಿ ಮಾತ್ರವಲ್ಲ ಪಶ್ಮಿಮದಲ್ಲೂ ನಾನು ಬಡತನವನ್ನು ಕಂಡಿದ್ದೇನೆ.
  • ಪಶ್ಚಿಮದಲ್ಲಿರುವ ದಾರಿದ್ರ್ಯ ನಿವಾರಣೆ ತೊಲಗಿಸುವುದು ತುಂಬಾ ಕಷ್ಟ ಸಾಧ್ಯ" ಎಂದು ತಮ್ಮ ಪ್ರಶಸ್ತಿ ಉಪನ್ಯಾಸದಲ್ಲಿ ತಮ್ಮ ಕಲ್ಪನೆಯನ್ನು ವಿಸ್ತರಿಸಿದರು. ಒಬ್ಬ ಹಸಿದ ವ್ಯಕ್ತಿಯನ್ನು ಬೀದಿಯಿಂದ ಕರೆ ತಂದಾಗ ಅವನಿಗೆ ಒಂದು ತಟ್ಟೆ ಅನ್ನ ಒಂದು ತುಂಡು ಬ್ರೆಡ್‌ ನೀಡಿ ನಾನು ಅವನನ್ನು ತೃಪ್ತಿಪಡಿಸಿದ್ದೇನೆ. ಅವನ ಹಸಿವನ್ನು ಹಿಂಗಿಸಿದ್ದೇನೆ. ಸಮಾಜ ಸ್ವೀಕಾರ ಮಾಡದಂಥ ವ್ಯಕ್ತಿಯನ್ನು ತಾನು ಅನಪೇಕ್ಷಿತನೆಂದೂ, ಪ್ರೀತಿವಂಚಿತನೆಂದೂ ಭಯದ ನೆರಳು ಹಿಂಬಾಲಿಸುತ್ತದೆ, ಭೀತಗ್ರಸ್ತ ಭಾವನೆಗಳು ಅವನನ್ನು ಕಾಡುತ್ತವೆ.
  • ಸಮಾಜದಿಂದ ಬಹಿಷ್ಕೃತನಾದ ವ್ಯಕ್ತಿಗಿರುವ ನೋವೇ ಒಂದು ಬಡತನ[sic], ಇದು ಸಹಿಸಲಸಾಧ್ಯವಾದದ್ದು. ’ಗರ್ಭಪಾತ ವಿಶ್ವದ ಬಹುದೊಡ್ಡ ಶಾಂತಿ ಘಾತಕ ಕೃತ್ಯ’ ಎಂದು ಅವರು ಘೋಷಿಸುತ್ತಾರೆ.[೫೮] ಜೀವನದ ಅಂತಿಮ ದಿನಗಳಲ್ಲಿ ಪಾಶ್ಚಿಮಾತ್ಯ ಮಾಧ್ಯಮಗಳಲ್ಲಿ ಇವರನ್ನು ಒಂದಿಷ್ಟು ನಕಾರಾತ್ಮಕವಾಗಿ ಬಿಂಬಿಸಲಾಯಿತು. ಇವರನ್ನು ಟೀಕೆ ಮಾಡುವುದರಲ್ಲಿ ಪತ್ರಕರ್ತ ಕ್ರಿಸ್ಟೋಫರ್‌ ಹಿಚೆನ್ಸ್‌ ಅಗ್ರಗಣ್ಯರಲ್ಲೊಬ್ಬ.
  • ಇವರ ಕುರಿತಾದ ಹೆಲ್ಸ್‌ ಏಂಜೆಲ್ಸ್‌ (=ನರಕದ ದೇವತೆಗಳು) ಎನ್ನುವ ಸಾಕ್ಷ್ಯಚಿತ್ರಕ್ಕೆ ಸಹಲೇಖಕನಾಗಲು ಮತ್ತು ನಿರೂಪಣೆ ಮಾಡಲು ಬ್ರಿಟಿಷ್‌ ವಾಹಿನಿ ಚಾನೆಲ್‌ 4 ಇವನನ್ನು ನೇಮಿಸಿತು. ಇಂತಹ ಒಂದು ಸಾಕ್ಷ್ಯಚಿತ್ರ ರೂಪಿಸಲು ಅರೌಪ್‌ ಚಟರ್ಜೀ ಉತ್ತೇಜನ ವಿತ್ತು. ಆದರೆ ಸಾಕ್ಷ್ಯಚಿತ್ರದ ನಿರ್ಮಾಣದ ಅಂತ್ಯದಲ್ಲಿ ನಿರೂಪಣೆಗೊಂಡಿದ್ದ ಭಾವೋದ್ರೇಕದ ಸಿದ್ದಾಂತದ ಈತನ ದೃಷ್ಟಿಕೋನಕ್ಕೆ ಚಟರ್ಜೀಯ ಅಸಮಾಧಾನವಿತ್ತು. 1995ರಲ್ಲಿ ಪ್ರಕಟಿಸಿದ ದಿ ಮಿಷನರಿ ಪೊಸಿಷನ್‌ ಎಂಬ ತಮ್ಮ ಕೃತಿಯಲ್ಲಿ ಹಿಚೆನ್ಸ್‌ ಟೀಕೆಯನ್ನು ಮತ್ತಷ್ಟು ವಿಸ್ತರಿಸಿದರು.[೫೯]
  • ತಾವು ಬಗೆದು ತೆಗೆದ ಮಾಹಿತಿಗಳನ್ನು ತನಿಖೆ ಮಾಡಲು ಅವರ ಜೀವಿತ ಕಾಲದಲ್ಲಿ ತೆರೇಸಾ ಅವರಾಗಲೀ ಮತ್ತು ಅವರ ಅಧಿಕೃತ ಜೀವನ ಚರಿತ್ರಕಾರರಾಗಲೀ ನಿರಾಕರಿಸಿದರೆಂದೂ, ಹಾಗೂ ಪಾಶ್ಚಾತ್ಯ ಪತ್ರಿಕೆಗಳಲ್ಲಿ ಪ್ರಕಟವಾದದ್ದನ್ನು ಸಮರ್ಥಿಸಿಕೊಳ್ಳುವಲ್ಲಿ ಅವರು ವಿಫಲರಾದರೆಂದೂ ಚಟರ್ಜೀ ಬರೆಯುತ್ತಾರೆ.
  • "ಇವರ ಅನಾಥಾಶ್ರಮಗಳಲ್ಲಿದ್ದ ಸ್ಥಿತಿಗತಿಯ ಮೇಲೆ ನಿಷ್ಠುರ(ಮತ್ತು ಒಂದಷ್ಟು ವಿಸ್ತೃತವಾಗಿ)ದಾಳಿ...ಎದ್ದು ಕಾಣುವಂಥ ಉಪೇಕ್ಷೆಯ ಮೇಲಿನ ಆಕ್ರಮಣ [ಒಳಗೊಂಡು] ಮತ್ತು ದೈಹಿಕ ಹಾಗೂ ಭಾವನಾತ್ಮಕ ದುರುಪಯೋಗ"[೬೦] ದ ಮೇಲೆ ಬ್ರಿಟನ್‌ನ ದಿ ಗಾರ್ಡಿಯನ್‌ ಪತ್ರಿಕೆಯಲ್ಲಿ ಪ್ರಕಟವಾದ ಒಂದು ವರದಿ ಖಾರವಾಗಿ ಟೀಕಿಸಿತ್ತು. ಮತ್ತೊಂದು ಸಾಕ್ಷ್ಯಚಿತ್ರ ಮದರ್‌ ತೆರೇಸಾ: ಟೈಮ್‌ ಫಾರ್‌ ಛೇಂಜ್‌?ಯುರೋಪಿನ ಹಲವಾರು ದೇಶಗಳಲ್ಲಿ ಪ್ರಸಾರವಾಯಿತು.[೪೭]
  • ಚಟರ್ಜೀ ಮತ್ತು ಹಿಚೆನ್ಸ್‌ ಇಬ್ಬರೂ ತಮ್ಮದೇ ಆದ ನಿಲುವುಗಳಿಗೆ ಬದ್ಧರಾಗಿದ್ದರು. ಸ್ಟರ್ನ್‌ ಎಂಬ ಜರ್ಮಿನಿಯ ನಿಯತಕಾಲಿಕವೊಂದು ಮದರ್‌ ತೆರೇಸಾರ ಮೊದಲನೇ ಪುಣ್ಯತಿಥಿಯ ಸಂದರ್ಭದಲ್ಲಿ ಒಂದು ವಿಮರ್ಶಾತ್ಮಕ ಲೇಖನ ಪ್ರಕಟಿಸಿತು. ಸಂಸ್ಥೆಯ ಹಣಕಾಸಿನ ವಿಚಾರಗಳು ಮತ್ತು ದಾನದ ಹಣವನ್ನು ವ್ಯಯಿಸುವ ಕುರಿತು ಬಂದಿದ್ದ ಆರೋಪಗಳಿಗೆ ಇದು ಕಾಳಜಿ ವ್ಯಕ್ತಪಡಿಸಿತು.
  • ರೋಗಿಯ ಅಗತ್ಯಗಳ ಆದ್ಯತೆಗಳಿಂದ ಏಳುವ ಪ್ರಶ್ನೆಗಳನ್ನು ಆಧರಿಸಿ ವೈದ್ಯಕೀಯ ಪತ್ರಿಕೆಗಳು ಕೂಡ ಇವರ ಮೇಲೆ ವಿಭಿನ್ನ ದೃಷ್ಟಿಕೋನದ ವಿಮರ್ಶೆಯನ್ನು ಪ್ರಕಟಿಸಿದವು.[೫೬]ನ್ಯೂ ಲೆಫ್ಟ್‌ ರಿವ್ಯೂ ನ ಸಂಪಾದಕೀಯ ಸಮಿತಿಯ ಸದಸ್ಯರಾಗಿದ್ದ ತಾರಿಖ್‌ ಅಲಿ, ಮತ್ತು ಐರಿಷ್‌ ಮೂಲದ ತನಿಖಾ ಪತ್ರಕರ್ತ ಡೊನಾಲ್‌ ಮ್ಯಾಕ್ಲನ್‌ಟೈರ್‌.[೫೯] ಇವರ ಕಾರ್ಯ ವೈಖರಿಯ ಇತರ ವಿಮರ್ಶಕರು.
  • ಇವರ ಸಾವಿಗೆ ಧಾರ್ಮಿಕ ಮತ್ತು ಧರ್ಮಾತೀತ ಸಮುದಾಯಗಳೆರಡೂ ಕಂಬನಿಗರೆದವು. ಪಾಕಿಸ್ತಾನದ ಪ್ರಧಾನಮಂತ್ರಿ ನವಾಝ್‌ ಷರೀಫ್‌ ತೆರೇಸಾರಿಗೆ ಗೌರವ ಸಲ್ಲಿಕೆ ಭಾಷಣದಲ್ಲಿ "ಉನ್ನತ ಉದ್ದೇಶಕ್ಕಾಗಿ ಬಹುಕಾಲ ಬದುಕಿದ ಅಪರೂಪದ ಮತ್ತು ಅನನ್ಯ ವ್ಯಕ್ತಿ ಬಡಬಗ್ಗರ, ರೋಗಿಗಳ ಮತ್ತು ಅನುಕೂಲ ವಂಚಿತರ ಆರೈಕೆ ಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದರು, ಇದು ನಮ್ಮ ಮಾನವ ಸಮುದಾಯಕ್ಕೆ ಅವರು ಸಲ್ಲಿಸಿದ ಸೇವೆಗಳಲ್ಲಿ ಅತ್ಯುನ್ನತ ಉದಾಹರಣೆಗಳಲ್ಲೊಂದು." ಎಂದಿದ್ದಾರೆ.[೬೧] ಮಾಜಿ U.N. ಸೆಕ್ರೆಟರಿ-ಜನ್‌ರಲ್‌ ಜೇವಿಯರ್‌ ಪೇರೆಝ್‌ ಡಿ ಸೆಲ್ಲರ್‌ ಅವರನ್ನು ಕುರಿತು ಹೀಗೆ ಹೇಳುತ್ತಾರೆ:
  • "ವಿಶ್ವಸಂಸ್ಥೆ ಎಂದರೆ ಅವರು. ಅವರೇ ಜಗತ್ತಿನ ಶಾಂತಿ". ಅವರ ಜೀವಿತಾವಧಿಯಲ್ಲಿ ಮತ್ತು ಸಾವಿನ ನಂತರ, ಮದರ್‌ ತೆರೇಸಾ ಗ್ಯಾಲಪ್‌ ಸಂಘಟನೆ ನಡೆಸಿದ ಸಮೀಕ್ಷೆಯಲ್ಲಿ ದೃಢವಾಗಿ USನಲ್ಲಿ ಅತ್ಯಂತ ಮೆಚ್ಚುಗೆಗೆ ಪಾತ್ರವಾದ ಏಕೈಕ ವ್ಯಕ್ತಿಯಾಗಿ ಹೊಹೊಮ್ಮಿದರು.ಅಲ್ಲದೆ 1999ರಲ್ಲಿ USನಲ್ಲಿ ನಡೆದ ಮತದಾನದಲ್ಲಿ "20ನೇ ಶತಮಾನದ ಅತ್ಯಂತ ಪ್ರಶಂಸನೀಯ ವ್ಯಕ್ತಿ"ಯಾಗಿ ಮೊದಲ ಸ್ಥಾನವನ್ನು ಪಡೆದಿದ್ದರು.
  • ಹೆಚ್ಚಿನ ಅಂತರದ ಮೂಲಕ ಇತರೆ ಎಲ್ಲ ಸ್ವಯಂ ಪ್ರೇರಿತ ಉತ್ತರಗಳನ್ನು ಸತ್ಯಕ್ಕೆ ದೂರ ಎನ್ನುವಂತೆ ಮಾಡಿದ್ದರು, ಅಲ್ಲದೆ ತರುಣ ವರ್ಗವೊಂದನ್ನು ಬಿಟ್ಟು ಬೇರೆಲ್ಲ ವರ್ಗದ ಜನರಲ್ಲೂ ಇವರು ಮೊದಲ ಸ್ಥಾನ ಗಳಿಸಿದ್ದರು.[೬೨][೬೩]

ಆಧ್ಯಾತ್ಮಿಕ ಜೀವನ[ಬದಲಾಯಿಸಿ]

"ಇತರರ ಸೇವೆಯಲ್ಲಿ ತಮ್ಮನ್ನು ಪೂರ್ಣವಾಗಿ ತೊಡಗಿಸಿಕೊಳ್ಳುವ ಶಕ್ತಿ ಮತ್ತು ದೃಢ ನಿಷ್ಠೆಯನ್ನು ಮದರ್‌ ತೆರೇಸಾ ಎಲ್ಲಿ ಕಂಡುಕೊಂಡರು? ದೇವರ ಪ್ರಾರ್ಥನೆಯಲ್ಲಿ ಮತ್ತು ಜೀಸಸ್‌ ಕ್ರಿಸ್ತನ ಮೌನ ಧ್ಯಾನ, ಅವನ ಪವಿತ್ರ ಮುಖ ದರ್ಶನ, ಅವನ ನಿರ್ಮಲ ಹೃದಯದಲ್ಲಿ ಅದನ್ನು ಅವರು ಕಂಡು ಕೊಂಡಿದ್ದರು " ಎಂದು [೬೪][64]ಅವರ ಕಾರ್ಯ ಮತ್ತು ಸಾಧನೆಗಳನ್ನು ವಿಶ್ಲೇಷಣೆ ಮಾಡುತ್ತಾ,ಜಾನ್‌ ಪಾಲ್‌ II ಹೇಳಿದ್ದರು.

  • ಅವರ ಪಾಸ್ಟ್ಯುಲೇಟರ್‌ ರೆವರೆಂಡ್‌ ಬ್ರಿಯಾನ್‌ ಕೊಲೊಡೀಜಕ್‌ ಉಲ್ಲೇಖಿಸಿರುವಂತೆ "ಏನೇ ಆಗಲಿ ದೇವರ ಅಸ್ತಿತ್ವವಿಲ್ಲ ಎಂದು ಅವರಿಗನ್ನಿಸಿತ್ತು", "ಪ್ರಭು ಭೋಜನ ಪ್ರಸಾದದಲ್ಲೂ ಇಲ್ಲ, ಹೃದಯದಲ್ಲೂ ಇಲ್ಲ" ಎಂದೆನಿಸಿದ್ದ ಸಮಯದಲ್ಲಿ ಮದರ್‌ ತೆರೇಸಾ ಖಾಸಗಿಯಾಗಿ ತಾವು ಸುಮಾರು ಐವತ್ತು ವರ್ಷಗಳ ಕಾಲ ಎಂದರೆ ಜೀವನದ ಕಡೆಯವರೆಗೂ ನಂಬಿದ್ದ ತಮ್ಮ ಧಾರ್ಮಿಕ ಅಥವಾ ಆಧ್ಯಾತ್ಮಿಕ ನಂಬಿಕೆಗಳಲ್ಲಿ ಸಂಶಯ ಕಂಡಿದ್ದರು, ಹೋರಾಟ ನಡೆಸಿದ್ದರು,[೬೫]
  • ದೇವರ ಅಸ್ತಿತ್ವದ ಬಗ್ಗೆ ಮತ್ತು ಈ ಸಂಬಂಧ ಅವರಿಗಿದ್ದ ನಂಬಿಕೆಯ ಕೊರತೆಯ ನೋವಿನ ಮೇಲೆ ಘನ ಅನುಮಾನಗಳನ್ನು ಮದರ್‌ ತೆರೇಸಾ ವ್ಯಕ್ತಪಡಿಸಿದ್ದರು.

    Where is my faith? Even deep down ... there is nothing but emptiness and darkness ... If there be God—please forgive me. When I try to raise my thoughts to Heaven, there is such convicting emptiness that those very thoughts return like sharp knives and hurt my very soul ... How painful is this unknown pain—I have no Faith. Repulsed, empty, no faith, no love, no zeal, ... What do I labor for? If there be no God, there can be no soul. If there be no soul then, Jesus, You also are not true.[೬೬]

*ಝೆಕ್‌ ಗಣರಾಜ್ಯದ ಓಲೋಮೌಕ್‌ನ ವೆನ್ಸ್‌ಲಾಸ್‌ ಸ್ಕ್ವೇರ್‌ನಲ್ಲಿರುವ ಕಟ್ಟಡವನ್ನು ಮದರ್‌ ತೆರೇಸಾರ ನೆನಪಿಗಾಗಿ ಸಮರ್ಪಿಸಲಾಗಿದೆ.
  • ಮೇಲಿನ ವಾಕ್ಯಗಳ ಉಲ್ಲೇಖದೊಂದಿಗೆ ಅವರಪಾಸ್ಟ್ಯುಲೇಟರ್‌(ಸಂತ ಪದ ಗ್ರಹಣದ ಆಧಾರಗಳ ವ್ಯವಸ್ಥೆಯ ಅಧಿಕೃತ ಜವಾಬ್ಧಾರಿ ಹೊತ್ತವನು) ಆಗಿದ್ದ ರೆವರೆಂಡ್‌ ಬ್ರಿಯಾನ್‌ ಕೊಲೊಡೀಜಕ್‌, ಅವರ ಮಾತುಗಳನ್ನು ಕೆಲವರು ತಪ್ಪಾಗಿ ಅರ್ಥೈಸುವ ಅಪಾಯವಿತ್ತು. ಆದರೆ ದೇವರು ತಮ್ಮ ಮೂಲಕ ಕೆಲಸ ಮಾಡುತ್ತಿದ್ದಾನೆ ಉಳಿದದ್ದೆಲ್ಲ ಕುಂದಿಹೋಗುತ್ತದೆ ಎನ್ನುವ ಅವರ ನಂಬಿಕೆ, ಮತ್ತು ದೇವರೊಂದಿಗೆ ಒಂದು ಆಪ್ತ ಸಲಿಗೆಯ ಕಳೆದುಹೋದ ಸಂದರ್ಭದಲ್ಲೂ ಅವರು ದೇವರ ಅಸ್ತಿತ್ವವನ್ನು ಪ್ರಶ್ನಿಸಲಿಲ್ಲ.[೬೭]
  • ಕ್ಯಾಥೊಲಿಕ್ಕರು ಆಧ್ಯಾತ್ಮಿಕ ಪರೀಕ್ಷೆ ಎಂದು ನಂಬುವ ಧಾರ್ಮಿಕ ಸಂಶಯಗಳ ಇಂಥದೇ ಅನುಭವವನ್ನು ಹಲವು ಸಂತರು ಅನುಭವಿಸಿದ್ದಾರೆ. ಅವರೆಂದರೆ, ಮದರ‍್ ತೆರೇಸಾರ ಹೆಸರನ್ನೇ ಹೋಲುವ ಲೀಸೆಕ್ಸ್‌ನ ಸೇಂಟ್| ಥೆರೇಸೇ ಈ ಅನುಭವವನ್ನು ಇವರು "ಶೂನ್ಯ ರಾತ್ರಿ " ಎಂದು ಕರೆಯುತ್ತಾರೆ.[೬೭]
  • ಸಂತ ಪದ ಪಥಕ್ಕೆ ಇವರ ಚಿಂತನೆಗಳು ಚರ್ಚಿನ ಅಂಗೀಕಾರ ಹಾದಿಯಲ್ಲಿ ಅಡ್ಡಿ ಆತಂಕಗಳಾಗಬಹುದು ಎಂಬುದು ಕೆಲವರ ಸಂಶಯವಾಗಿತ್ತು. ಆದರೆ ಈ ಸಂಶಯದ ವೈರುಧ್ಯವೇ ಸತ್ಯ; ಪಾವಿತ್ರೀಕರಿಸುವ ಅತೀಂದ್ರಿಯ ಅನುಭವಗಳೊಂದಿಗೆ ಇದು ಬಹಳ ಸ್ಥಿರವಾಗಿರುತ್ತದೆ. ಹತ್ತು ವರ್ಷಗಳ ಅನುಮಾನದ ನಂತರ,ಮದರ್‌ ತೆರೇಸಾ ಒಂದು ಸಣ್ಣ ಅವಧಿಯ ನವೀಕೃತ ನಂಬಿಕೆ ಎಂದು ವರ್ಣಿಸಿದ್ದಾರೆ,
  • ಪೋಪ್‌ ಪೀಯುಸ್‌ XII 1958ರಲ್ಲಿ ಕಾಲವಶರಾದ ಸಮಯದಲ್ಲಿ, ಅವರ ಆತ್ಮಕ್ಕೆ ಶಾಂತಿ ಕೋರಿ ರಿಕ್ವಿಯೆಮ್‌ ಮಾಸ್‌ನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾಗ,"ದೀರ್ಘಾವಧೀ ಕತ್ತಲೆ: ವಿಚಿತ್ರ ವೇದನೆ" ಯಿಂದ ತಮಗೆ ಬಿಡುಗಡೆ ದೊರೆತಿತ್ತು ಎಂದು ಅವರು ಹೇಳಿದರು. ಆದರೂ, ಐದು ವಾರಗಳ ನಂತರ, ನಂಬಿಕೆಯಲ್ಲಿದ್ದ ಅವರ ಕಷ್ಟಗಳನ್ನು ವಿವರಿಸಿದರು.[೬೮]
  • ಪಾಪ ನಿವೇದಕರಿಗೆ ಮತ್ತು ಹಿರಿಯರಿಗೆ ಸುಮಾರು 66-ವರ್ಷಗಳಿಗೂ ಹೆಚ್ಚು ಕಾಲ ಹಲವಾರು ಪತ್ರಗಳನ್ನು ತೆರೇಸಾ ಬರೆದಿದ್ದಾರೆ."ಜೀಸಸ್‌ಗಿಂತಲೂ ನನ್ನ ಬಗ್ಗೆ ಜನ ಹೆಚ್ಚು ಚಿಂತಿಸುತ್ತಾರೆ" ಎಂಬ ಕಾಳಜಿಯಿಂದ ಅವರು ತಮ್ಮ ಪತ್ರಗಳನ್ನು ನಾಶಪಡಿಸುವಂತೆ ಕೋರಿದ್ದರು.[೫೧][೬೯]
  • ಆದರೂ ಈ ಕೋರಿಕೆಯಂತೆ ಅವನ್ನು ನಾಶಪಡಿಸುವುದರ ಬದಲಾಗಿ ಆ ಪತ್ರ ವ್ಯವಹಾರಗಳನ್ನು ಮದರ್‌ ತೆರೇಸಾ: ಕಮ್‌ ಬೀ ಮೈ ಲೈಟ್‌(=ಮದರ್‌ತೆರೇಸಾ: ಬಾ ನನ್ನ ಬೆಳಕಾಗು)(ಡಬಲ್‌ಡೆ ಪ್ರಕಾಶನ) ಕೃತಿಯಲ್ಲಿ ಸಂಕಲಿಸಲಾಗಿದೆ.[೫೧][೬೬]
  • ಸಾರ್ವಜನಿಕವಾಗಿ ಬಿಡುಗಡೆಯಾದ ಆಧ್ಯಾತ್ಮಿಕ ಆಪ್ತಮಿತ್ರ ರೆವರೆಂಡ್‌ ಮೈಕೇಲ್‌ ವ್ಯಾನ್‌ ಡೆರ್‌ ಪೀಟ್‌ ಅವರಿಗೆ ಬರೆದ ಪತ್ರವೊಂದರಲ್ಲಿ "ಜೀಸಸ್‌ ನಿಮಗಾಗಿ ವಿಶೇಷ ಪ್ರೀತಿ ಹೊಂದಿದ್ದಾನೆ.[ಆದರೆ] ನನಗೆ, ನಾನು ದಿಟ್ಟಿಸುವ ಮತ್ತು ಕಾಣಿಸದ,ಮೌನ ಮತ್ತು ಶೂನ್ಯ ಭಾವನೆಗಳು ಬಹಳ ಅತ್ಯುನ್ನತವಾದವು, -ಆಲೈಸು ಮತ್ತು ಕೇಳಬೇಡ -ನಾಲಿಗೆ ಚಲಿಸುತ್ತದೆ (ಪ್ರಾರ್ಥನೆಯಲ್ಲಿ) ಆದರೆ ಮಾತನಾಡುವುದಿಲ್ಲ...ನನಗಾಗಿ ನೀನು ಪ್ರಾರ್ಥಿಸಬೇಕು-ಅವನ ಕೈಗಳನ್ನು [ಒಂದು] ಮುಕ್ತಗೊಳಿಸಬೇಕು." ಎಂದು ಬರೆದಿದ್ದರು.
  • ಮದರ್‌ ತೆರೇಸಾರ ಬರವಣಿಗೆಯನ್ನು "ನಂಬಿಕೆಯ ಬಿಕ್ಕಟ್ಟಿನ" ಸೂಚನೆ ಎಂದು ಸುದ್ದಿ ಮೂಲಗಳು ಉಲ್ಲೇಖಿಸಿದವು.[೭೦] ತೆರೇಸಾರ ವೈಯಕ್ತಿಕ ನಂಬಿಕೆಗಳು ಮತ್ತು ಈಡೇರಿಸಿದ ಕಾರ್ಯಗಳಿಗಿಂತಲೂ ಮುಖ್ಯವಾಗಿ ಪ್ರಚಾರಕ್ಕೆಂದೇ ಅವರ ಸಾರ್ವಜನಿಕ ವರ್ಚಸ್ಸನ್ನು ರೂಪುಗೊಳಿಸಲಾಗಿದೆ ಎಂದು ಅವರ ಬರವಣಿಗೆಯನ್ನು ಅವಲೋಕಿಸಿರುವ ಕ್ರಿಸ್ಟೋಫರ್‌ ಹಿಚೆನ್ಸ್‌ರಂತಹ ಕೆಲವು ಟೀಕಾಕಾರರ ಅಭಿಮತ. "ಹಾಗಿದ್ದರೆ, ಯಾವುದು ಹೆಚ್ಚು ಗಮನಾರ್ಹ: ನಂಬಲರ್ಹವಾದದ್ದು ಅವರ ಅಸಾಧಾರಣವಾದ ಎಲ್ಲ ಸಾಧನೆಗಳ ಲ್ಲೊಂದಾದರೆ, ತಮ್ಮದೇ ಆದ ನಂಬಿಕೆಯನ್ನು ಕೆಳೆದುಕೊಂಡ ಸತ್ಯವನ್ನು ಧೈರ್ಯದಿಂದ ಎದುರಿಸಬೇಕೆನ್ನುವು‌ದೇ, ಅಥವಾ ಚರ್ಚ್‌ ಅದನ್ನು ಅನುಕೂಲಕರ ಪ್ರಚಾರದ ಪ್ರತಿಮೆಯಂತೆ ಕಾರ್ಯಾಚರಣೆಗೆ ತರುವಲ್ಲಿ ದುಡಿಸಿಕೊಳ್ಳುವುದೇ?-ವಾಸ್ತವವಾಗಿ ನಂಬಿಕೆಗೆ ಮಂಗಳ ಹಾಡಿದ ಗೊಂದಲಮಯ ವಯೋವೃದ್ಧೆಗೆ ತಿಳಿಯದಾಯಿತೇ? ಎಂದು ಹಿಚೆನ್ಸ್‌ ಪೇಚಾಡುತ್ತಾರೆ.
  • ಆದರೂ, ಕಮ್‌ ಬೀ ಮೈ ಲೈಟ್‌ ಕೃತಿಯ ಸಂಪಾದಕ ಬ್ರಿಯಾನ್‌ ಕೋಲೋಡೀಜುಕ್‌ ಹಾಗೂ ಇತರರು, ಕೆಲವು ಆಧ್ಯಾತ್ಮಿಕ ಗುರುಗಳ ಏಳಿಗೆಯಲ್ಲಿ ಒಂದು ನಿರ್ದಿಷ್ಟ ಹಂತವನ್ನು ವಿವರಿಸಲು "ಡಾರ್ಕ್‌ ನೈಟ್‌ ಆಫ್‌ ದಿ ಸೋಲ್‌ (=ಆತ್ಮದ ಕಗ್ಗತ್ತಲು)" ಎನ್ನುವ ಪರಿಕಲ್ಪನೆಯನ್ನು ಸೃಷ್ಟಿಸಿದ 16ನೇ ಶತಮಾನದ ಅನುಭಾವಿ ಸೇಂಟ್‌. ಜಾನ್‌ ಆಫ್‌ ದಿ ಕ್ರಾಸ್‌ ನೊಂದಿಗೆ ಹೋಲಿಕೆ ನಡೆಸಿದ್ದಾರೆ.[೫೧] ತೆರೇಸಾರ ಸಂತ ಪದ ಪ್ರಾಪ್ತಿಯ ದಾರಿಯಲ್ಲಿ ಆ ಪತ್ರಗಳು ಅವರಿಗೆ ತೊಡಕಾಗುವುದಿಲ್ಲ ಎನ್ನುವುದನ್ನು ವ್ಯಾಟಿಕನ್‌ ಸೂಚಿಸಿದೆ.[೭೧] ಈ ಕೃತಿಯನ್ನು ನಿಜಕ್ಕೂ ಸಂಪಾದಿಸಿದ್ದು, ಅವರ ಪಾಸ್ಟ್ಯುಲೇಟರ್‌(=ದಿವ್ಯ ಪದ ಸ್ಥಾನಕ್ಕೆ ಏರಿಸುವಾಗ ಅಭ್ಯರ್ಥಿಯನ್ನು ಸಮರ್ಥಿಸುವವ)ಆಗಿದ್ದ ರೆವರೆಂಡ್‌. ಬ್ರಿಯಾನ್‌ ಕೋಲೋಡೀಜುಕ್‌ ಅವರೇ.[೫೧]
  • ಡೀಯುಸ್‌ ಕ್ಯಾರಿಟಾಸ್‌ ಎಸ್ಟ್‌,ಬೆನೆಡಿಕ್ಟ್‌ XVIತಮ್ಮ ಮೊದಲ ಎನ್‌ಸೈಕ್ಲಿಕಲ್‌ (=ಪೋಪ್‌ ಸುತ್ತೋಲೆ)'ನಲ್ಲಿ ಕಲ್ಕತ್ತಾದ ತೆರೇಸಾರನ್ನು ಮೊರು ಬಾರಿ ಸ್ಮರಿಸಿದ್ದಾರೆ, ಅಲ್ಲದೆ ಅವರ ಎನ್‌ಸೈಕ್ಲಿಕಲ್‌ನ ಒಂದು ಮುಖ್ಯವಾದ ಅಂಶವನ್ನು ವಿವರಿಸಲು ತೆರೇಸಾರ ಜೀವನವನ್ನು ನಿರ್ದಶನವಾಗಿ ಬಳಸಿಕೊಂಡಿದ್ದಾರೆ. " ಕಲ್ಕತ್ತಾದ ಪೂಜ್ಯ ತೆರೇಸಾರ ಸ್ಪಷ್ಟ ಚಿತ್ರಣ ನಮ್ಮ ಕಣ್ಮುಂದಿದೆ:ಪ್ರಾರ್ಥನೆಯಲ್ಲಿ ದೇವರಿಗೆ ಮೀಸಲಾಗಿರುವ ಕಾಲ, ನಮ್ಮ ನೆರೆಹೊರೆಯವರಿಗೆ ನಾವು ನೀಡುವ ಪರಿಣಾಮಕಾರಿ ಮತ್ತು ಪ್ರೀತಿಯ ಸೇವೆಯಿಂದ ನಮ್ಮನ್ನು ಹಿಂದೆಳೆಯುವುದಿಲ್ಲ, ಮಾತ್ರವಲ್ಲ ಸೇವೆಯ ಅಕ್ಷಯಗಣಿಯೂ ಹೌದು ಎನ್ನುವ ಸತ್ಯದ ಸ್ಪಷ್ಟ ನಿರೂಪಣೆ ಸಿಗುತ್ತದೆ."[೭೨]
  • "ಮಾನಸಿಕ ಧ್ಯಾನ ಮತ್ತು ಆಧ್ಯಾತ್ಮಿಕ ಪಠಣಗಳಿಂದ ಮಾತ್ರ ನಾವು ಪ್ರಾರ್ಥನೆಯಲ್ಲಿ ತೊಡಗುವುದನ್ನು ವಿಕಾಸಗೊಳಿಸಬಹುದು."[೭೩] ಎನ್ನುತ್ತಾರೆ ಮದರ್‌ ತೆರೇಸಾ.
  • ಮದರ್‌ ತೆರೇಸಾರ ಸಂಸ್ಥೆ ಮತ್ತು ಫ್ರಾನ್ಸಿಸ್ಕನ್‌ ಸಂಸ್ಥೆ ನಡುವೆ ಯಾವುದೇ ನೇರ ಸಂಪರ್ಕವಿಲ್ಲದಿದ್ದರೂ, ತೆರೇಸಾ ಸೇಂಟ್‌| ಫ್ರಾನ್ಸಿಸ್‌ ಆಫ್‌ ಅಸ್ಸಿಸಿ ಅವರನ್ನು ಅಪಾರವಾಗಿ ಮೆಚ್ಚಿಕೊಂಡಿದ್ದರು.[೭೪]
  • ಹೀಗಾಗಿ ತೆರೇಸಾರ ಜೀವನದಲ್ಲಿ ಫ್ರಾನ್ಸಿಸ್ಕನ್‌ ಅಧ್ಯಾತ್ಮದ ಪ್ರಭಾವವನ್ನು ಕಾಣಬಹುದು. ಸಿಸ್ಟರ್ಸ್ ಆಫ್‌ ಚಾರಿಟಿ ಸೇಂಟ್‌|ಫ್ರಾನ್ಸಿಸ್‌ ಅವರ ಶಾಂತಿ ಪ್ರಾರ್ಥನೆಯನ್ನು ಪ್ರತಿದಿನ ಬೆಳಗ್ಗೆ ಕಮ್ಯುನಿಯನ್‌ನ ನಂತರ ಕೃತಜ್ಞತಾ ಸಲ್ಲಿಕೆಯ ಅವಧಿಯಲ್ಲಿ ಮತ್ತು ಹಲವು ಪ್ರತಿಜ್ಞೆಗಳಲ್ಲಿ ಹಾಗೂ ಪ್ರಾಧಾನ್ಯತೆಯ ಅವರ ಪಾದ್ರಿವರ್ಗ ಪಠಿಸುತ್ತದೆ. ಇವೆರಡರಲ್ಲೂ ಸಾಮ್ಯತೆ ಇದೆ.
  • ಸೇಂಟ್|ಫ್ರಾನ್ಸಿನ್‌ ಬಡತನ, ಶೀಲ ಸಂಪನ್ನತೆ , ವಿಧೇಯತೆ, ಮತ್ತು ಕ್ರಿಸ್ತನಿಗೆ ಶರಣಾಗತಿ, ಈ ಮೌಲ್ಯಗಳನ್ನು ಒತ್ತಿ ಹೇಳಿದರು. ಜೀವನದ ಬಹು ಭಾಗವನ್ನು ಇವರು ಬಡವರ ಸೇವೆಗಾಗಿ,ಅದರಲ್ಲೂ ವಿಶೇಷವಾಗಿ ತಮ್ಮ ಸುತ್ತಮುತ್ತ ವಾಸಿಸುತ್ತಿದ್ದ ಪ್ರದೇಶದಲ್ಲಿದ್ದ ಕುಷ್ಠರೋಗಿಗಳ ಸೇವೆಗಾಗಿ ಅರ್ಪಿಸಿಕೊಂಡಿದ್ದರು.

ಪವಾಡ ಮತ್ತು ಪರಮಪದ ಪ್ರಾಪ್ತಿ[ಬದಲಾಯಿಸಿ]

Blessed Teresa of Calcutta
Venerated inRoman Catholicism
BeatifiedOctober 19, 2003, St. Peter's Basilica, Rome by Pope John Paul II
Major shrineMother House of the Missionaries of Charity, Calcutta, India
FeastSeptember 5
PatronageWorld Youth Day
  • ಮದರ್‌ ತೆರೇಸಾ 1997ರಲ್ಲಿ ಇಹ ಲೋಕ ತ್ಯಜಿಸಿದ ನಂತರ [[ಬರಿದಾದ ಆಕೆಯ ಸ್ಥಾನ ತುಂಬಲು ಅಧಿಕಾರವುಳ್ಳವರು ಪರಮಪದ ಪ್ರಾಪ್ತಿ(ಬ್ಯೂಟಿಫಿಕೇಶನ್‌) ಪ್ರಕ್ರಿಯೆಯಲ್ಲಿ ತೊಡಗಿದರು. ಇದರ ಮೊರನೇ ಹಂತ ಸಂಭಾವ್ಯ ಸಂತ ಪದ ಗ್ರಹಣ|ಬರಿದಾದ ಆಕೆಯ ಸ್ಥಾನ ತುಂಬಲು ಅಧಿಕಾರವುಳ್ಳವರು ಪರಮಪದ ಪ್ರಾಪ್ತಿ(=ಬ್ಯೂಟಿಫಿಕೇಶನ್‌) ಪ್ರಕ್ರಿಯೆಯಲ್ಲಿ ತೊಡಗಿದರು. ಇದರ ಮೂರನೇ ಹಂತ ಸಂಭಾವ್ಯ ಸಂತ ಪದ ಗ್ರಹಣ.
  • ಈ ಪ್ರಕ್ರಿಯೆಯಲ್ಲಿ ಮದರ್‌ ತೆರೇಸಾರ ಇಂಟರ್‌ಸೆಷನ್‌ (=ಒಬ್ಬರ ಪರವಾಗಿ ಮತ್ತೊಬ್ಬರು ಮಾಡುವ ಪ್ರಾರ್ಥನೆ)ನಲ್ಲಿ ನಡೆಯುವ 'ಪವಾಡ'ವನ್ನು ದಾಖಲಿಸಬೇಕಾಗುತ್ತದೆ. 2002ರಲ್ಲಿ ಮೋನಿಕ ಬೆಸ್ರ ಎನ್ನುವ ಭಾರತೀಯ ಮಹಿಳೆಯ ಮೇಲೆ ಮದರ್‌ ತೆರೇಸಾರ ಚಿತ್ರವಿರುವ ಲಾಕೆಟ್‌ ಒಂದನ್ನು ಇಟ್ಟು ಕಿಬ್ಬೊಟ್ಟೆಯಲ್ಲಿದ್ದ ಗೆಡ್ಡೆಯನ್ನು ಗುಣಪಡಿಸಿದ ಪವಾಡವನ್ನು ವ್ಯಾಟಿಕನ್‌ ಗುರ್ತಿಸಿತು.
  • ಬೆಳಕಿನ ಕಿರಣವೊಂದು ಚಿತ್ರದಿಂದ ಹೊರಹೊಮ್ಮಿತು, ಅದು ನನ್ನ ಕ್ಯಾನ್ಸರ್‌ ಗೆಡ್ಡೆಯನ್ನು ಗುಣಪಡಿಸಿತು ಎಂದು ಮೋನಿಕ ಬೆಸ್ರ ಹೇಳಿದರು. ಬೆಸ್ರ ಅವರ ಕೆಲವು ವೈದ್ಯಕೀಯ ಸಿಬ್ಬಂದಿಯನ್ನೂ ಒಳಗೊಂಡಂತೆ ಕೆಲವು ಟೀಕಾಕಾರರು ಮತ್ತು ಬೆಸ್ರಾಳ ಗಂಡ ಆರಂಭದಲ್ಲಿ ನೀಡಿದ್ದ ಪಾರಂಪರಿಕ ವೈದ್ಯಕೀಯ ಚಿಕಿತ್ಸೆ ಗೆಡ್ಡೆಯನ್ನು ಹೋಗಲಾಡಿಸಿತು ಎಂದು ಸಮರ್ಥಿಸಿದರು.[೭೫]
  • ಕೋಶ ಕ್ಷಯರೋಗದಿಂದ ಉದ್ಭವಿಸಿತ್ತೇ ವಿನಾ ಕ್ಯಾನ್ಸರ‍್ ಆಗಿರಲೇ ಇಲ್ಲ ಎಂದು ಬೆಸ್ರಾಳಿಗೆ ಚಿಕಿತ್ಸೆ ನೀಡಿದ್ದ ಡಾ.ರಾಜನ್‌ ಮುಸ್ತಾಫಿ ನ್ಯೂಯಾರ್ಕ್ ಟೈಮ್ಸ್‌ ಗೆ ಹೇಳಿಕೆ ನೀಡಿದ. "ಅದು ಪವಾಡವಲ್ಲ….ಅವಳು ಸುಮಾರು ಒಂಭತ್ತು ತಿಂಗಳಿಂದ ಒಂದು ವರ್ಷದವರೆಗೆ ಔಷಧ ಸೇವಿಸುತ್ತಿದ್ದಳು" ಎಂದು ಅವರು ಸಮರ್ಥಿಸಿದರು. ಮೋನಿಕಾರ ವೈದ್ಯಕೀಯ ದಾಖಲೆಗಳು ಸೋನೋಗ್ರಾಮ್‌, ಸೂಚಿತ ಔಷಧಿಗಳು, ವೈದ್ಯರ ಸಲಹಗಳನ್ನು ಒಳಗೊಂಡಿವೆ.
  • ಅಲ್ಲದೆ ಅಲ್ಲಿನ ಉಲ್ಲೇಖಗಳು ಅದು ಪವಾಡವೋ ಇಲ್ಲ ಚಿಕಿತ್ಸೆಯಿಂದ ಗುಣಪಡಿಸಿದ್ದೋ ಎನ್ನುವುದನ್ನು ನಿರೂಪಿಸುತ್ತವೆ ಎಂದು ಪವಾಡ ವಿರೋಧಿಗಳು ವಾದ ಮಂಡಿಸಿದರು. ಮಿಷನರೀಸ್ ಆಫ್‌ ಚಾರಿಟಿಯ ಸಿಸ್ಟರ್‌ ಬೆಟ್ಟ ಈ ಎಲ್ಲ ವಿವರಗಳನ್ನೂ ಹಿಡಿದುಕೊಂಡಿದ್ದಾರೆ ಎಂದು ಮೋನಿಕ ಹೇಳಿದರು. ಪ್ರಕಟಣೆಗೆ "ಪ್ರತಿಕ್ರಿಯೆ ಇಲ್ಲ"ಎಂಬ ಹೇಳಿಕೆ ನೀಡಿದ ಸಿಸ್ಟರ್‌ ಬೆಟ್ಟ ಕೈಚೆಲ್ಲಿದರು.
  • ಈ ಕಾಯಿಲೆಗೆ ಚಿಕಿತ್ಸೆಯಿಲ್ಲದೆಯೇ ಗುಣಮುಖವಾಗಿರುವುದೊಂದು ಪವಾಡ ಎಂದು ಘೋಷಿಸುವಂತೆ ಕ್ಯಾಥೊಲಿಕ್‌ ಚರ್ಚ್‌ನಿಂದ ಅವರ ಮೇಲೆ ಒತ್ತಡ ಬಂದಿತ್ತು ಎಂದು ಮೋನಿಕ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದ ಬಾಲೂರ್‌ಘಾಟ್‌ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ಧಾರೆ.[೭೬]
  • ಮದರ್‌ ತೆರೇಸಾರ ಪರಮಪದ ಪ್ರಾಪ್ತಿ ಮತ್ತು ಸಂತ ಪದ ಗ್ರಹಣ ಪ್ರಕ್ರಿಯೆಯಲ್ಲಿ ಸಾಕ್ಷಿಯಾಗಿ ಭಾಗಿಯಾಗಲು ವ್ಯಾಟಿಕನ್‌ ಕ್ರಿಸ್ಟೋಫರ್‌ ಹಿಚೆನ್ಸ್‌ ಅವರನ್ನು ಆಹ್ವಾನಿಸಿತ್ತು. ಈ ಪ್ರಕ್ರಿಯೆಯಲ್ಲಿ ಇವರು ಏಕೈಕ ಸಾಕ್ಷಿ. 'ಪವಾಡ'ದ ಉದ್ದೇಶ ಈಡೇರಿಸುವುದೇ ಈ ವಿಧಿ ವೀಧಾನದ್ದೂ ಆಗಿದೆ ಎಂಬ ಕಾರಣದ ಮೇಲೆ "ಡೆವಿಲ್ಸ್‌ ಅಡ್ವೊಕೇಟ್‌" ಎಂಬ ಸಾಂಪ್ರದಾಯಕ ವಿಧಿಯ ಮೇಲೆ ವ್ಯಾಟಿಕನ್ ನಿಷೇಧ ಹೇರಿತ್ತು.
  • ಅದಕ್ಕೆಂದೇ ಹಿಚೆನ್ಸ್ ಅವರನ್ನು ನೆರವೇರಿತೆನ್ನಲಾದ ಎಲ್ಲ ಪ್ರಕ್ರಿಯೆಯ ವಿರುದ್ಧ ಸಾಕ್ಷ್ಯ ನೀಡಲು ಕರೆಸಲಾಗಿತ್ತು. "ಜನರಿಗೆ ಸಹಾಯ ಮಾಡುವುದು ಅವರ ಉದ್ದೇಶ ಆಗಿರಲಿಲ್ಲ" ಎಂದು ಹಿಚೆನ್ಸ್‌ ವಾದಿಸಿದರು, ಅಲ್ಲದೆ ಸ್ವೀಕರಿಸಿದ ದಾನದ ಹಣವನ್ನು ಖರ್ಚು ಮಾಡುವ ವಿಚಾರದಲ್ಲಿ ಇವರು ದಾನಿಗಳಿಗೆ ಸುಳ್ಳು ಹೇಳಿದರು ಎಂದು ಹಿಚೆನ್ಸ್‌ ಆಪಾದಿಸಿದರು.
  • " ಅವರು ಬಡತನವನ್ನು ತಗ್ಗಿಸಲು ಕೆಲಸ ಮಾಡುತ್ತಿರ ಲಿಲ್ಲ ಎಂಬುದನ್ನು ಅವರೊಂದಿಗೆ ಮಾತನಾಡುತ್ತಿದ್ದಾಗ ನಾನು ಕಂಡುಕೊಂಡೆ." ಎಂದು ಹಿಚೆನ್ಸ್‌ ಹೇಳುತ್ತಾರೆ. "ಅವರು ಕ್ಯಾಥೊಲಿಕ್‌ ಸಮುದಾಯವನ್ನು ವಿಸ್ತರಿಸುವ ಉದ್ದೇಶದಿಂದ ಕೆಲಸ ಮಾಡುತ್ತಿದ್ದರು. ’ನಾನು ಸಮಾಜ ಸೇವಕಿಯಲ್ಲ’ ಎಂದು ಅವರೇ ಹೇಳಿದ್ದರು. ಅದಕ್ಕೋಸ್ಕರ ನಾನಿದನ್ನು ಮಾಡುವುತ್ತಿಲ್ಲ. ಕ್ರಿಸ್ತನಿಗಾಗಿ ಇದನ್ನೆಲ್ಲ ಮಾಡುತ್ತೇನೆ. ಚರ್ಚ್‌‌ಗಾಗಿ ಮಾಡುತ್ತೇನೆ’."[೭೭][೭೮]
  • ಪರಮ ಪದ ಪ್ರಾಪ್ತಿ ಮತ್ತು ಸಂತ ಪದ ಗ್ರಹಣಕ್ಕೆ ತೆರೇಸಾ ಅರ್ಹರೇ ಎನ್ನುವುದನ್ನು ಪರೀಕ್ಷಿಸುವ ಪ್ರಕ್ರಿಯೆಯಲ್ಲಿ ರೋಮನ್ ಕ್ಯುರಿಯಾ (ವ್ಯಾಟಿಕನ್‌) ತೆರೇಸಾರ ಬದುಕು ಮತ್ತು ಸೇವೆಗಳ ಮೇಲೆ ಬಂದಿರುವ ಪ್ರಕಟಿತ ಮತ್ತು ಅಪ್ರಕಟಿತ ಟೀಕಾ ಪ್ರಹಾರಗಳ ದಾಖಲೀಕರಣದ ಬಹುದೊಡ್ಡ ಕೆಲಸವನ್ನು ಗಂಭೀರವಾಗಿ ಪರ್ಯಾಲೋಚಿಸಿತು.
  • ಹಿಚೆನ್ಸ್‌ ಮಾಡಿರುವ ಆರೋಪಗಳನ್ನು ಇಂಥದೇ ವಿಚಾರಗಳ ಹೊಣೆ ಹೊತ್ತಿರುವ ಏಜೆನ್ಸಿಯಿಂದ ತನಿಖೆ ನಡೆಸಲಾಗಿದೆ. ಸಂತರ ಕಾರಣದಿಂದ ಹುಟ್ಟಿರುವ ಧಾರ್ಮಿಕ ಕೂಟಗಳು ಮದರ್‌ ತೆರೇಸಾರ ಪರಮಪದ ಪ್ರಾಪ್ತಿಗೆ ಯಾವುದೇ ಅಡ್ಡಿಯಿಲ್ಲ ಎಂದಿವೆ ಎಂದು ಏಜೆನ್ಸಿ ಪತ್ತೆ ಮಾಡಿದೆ ಎಂದು ವ್ಯಾಟಿಕನ್‌ ಅಧಿಕಾರಿಗಳು ಹೇಳುತ್ತಾರೆ.
  • ಅವರಿಗೆ ಬಂದ ಟೀಕಾಸ್ತ್ರಗಳನ್ನು ಗಮನಿಸಿದ ಕೆಲವು ಕ್ಯಾಥೊಲಿಕ್‌ ಬರಹಗಾರರು ತೆರೇಸಾರನ್ನು ವಿವಾದಗಳ ಸಂಕೇತ ಎಂದು ಕರೆದಿದ್ದಾರೆ.[೭೯]
  • ಮದರ್‌ ತೆರೇಸಾರ ಪರಮಪದ ಪ್ರಾಪ್ತಿ ಅಕ್ಟೋಬರ‍್ 19, 2003ರಂದು ನೆರವೇರಿತು. ಆದ್ದರಿಂದ ಅವರ ಹೆಸರಿನೊಂದಿಗೆ "ಪವಿತ್ರ" ಎಂಬ ಗೌರವ ಸೂಚಕ ಪದ ಸೇರ್ಪಡೆಯಾಯಿತು.[೮೦] ಸಂತ ಪದಗ್ರಹಣನೀಡಲು ಎರಡನೇ ಬಾರಿಗೆ ಅವರಿಂದ ಪವಾಡ ಜರುಗಬೇಕು.

ಪ್ರಶಸ್ತಿ/ಗೌರವ/ಪುರಸ್ಕಾರ[ಬದಲಾಯಿಸಿ]

  1. ಮದರ್‌ ತೆರೇಸಾ ಒಬ್ಬ ಮಹಾ ಮಾನವತಾವಾದಿಯಾಗಿ ಬಡವರ, ನಿರ್ಗತಿಕರ, ರೋಗಿಗಳ, ಅನಾಥರ, ವೃದ್ಧರ ಪರವಾಗಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಇವರಿಗೆ ವಿಶ್ವದ ಅತ್ಯುನ್ನತ ನೊಬೆಲ್‌ ಶಾಂತಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
  2. ಮದರ್‌ ತೆರೇಸಾರ ಪರಮಪದ ಪ್ರಾಪ್ತಿ ಮತ್ತು ಸಂತ ಪದ ಗ್ರಹಣ ಪ್ರಕ್ರಿಯೆಯಲ್ಲಿ ಸಾಕ್ಷಿಯಾಗಿ ಭಾಗಿಯಾಗಲು ವ್ಯಾಟಿಕನ್‌ ಕ್ರಿಸ್ಟೋಫರ್‌ ಹಿಚೆನ್ಸ್‌ ಅವರನ್ನು ಆಹ್ವಾನಿಸಿತ್ತು.
  3. ಯುನೈಟೆಡ್‌ ಸ್ಟೇಟ್ಸ್‌ 1996ರ ನವೆಂಬರ್‌ 16ರಂದು ಇವರಿಗೆ ಗೌರವ ಪೌರತ್ವ ನೀಡಿತು.
  4. ಮದರ್‌ ತೆರೇಸಾರ ಮಾತೃ ಭೂಮಿಯಾದ ಅಲ್ಬೇನಿಯಾ ಇವರಿಗೆ 1994ರಲ್ಲಿ ಗೋಲ್ಡನ್‌ ಆನರ್‌ ಆಫ್ ದಿ ನೇಷನ್‌ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿತು.[೪೫]
  5. ಮದರ್‌ ತೆರೇಸಾರಿಗೆ 1962ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಭಾರತ ಸರ್ಕಾರ ತನ್ನ ಗೌರವ ಸಲ್ಲಿಸಿತು.
  6. ಅಂತಾರಾಷ್ಟ್ರೀಯ ಸಂವೇದನಾ ಶೀಲತೆಗೆ 1972ರಲ್ಲಿ ಜವಾಹರಲಾಲ್‌ ನೆಹರು ಪ್ರಶಸ್ತಿ,
  7. 1980ರಲ್ಲಿ ಭಾರತದ ಅತ್ಯುನ್ನತ ಪೌರ ಪ್ರಶಸ್ತಿಯಾದ ಭಾರತ ರತ್ನ.[೪೫]ಇವರ ಪಾಲಾದವು.
  8. ಇವರ ಅಂತರಾಷ್ಟ್ರೀಯ ಅರಿವು ಹಾಗೂ ದಕ್ಷಿಣ ಮತ್ತು ಪೂರ್ವ ಏಷ್ಯಾದಲ್ಲಿ ಸಲ್ಲಿಸಿದ ಸೇವೆಗೆ ಫಿಲಿಪ್ಪೈನ್ಸ್ ಮೂಲದ ರಾಮನ್‌ ಮ್ಯಾಗ್ಸೆಸೆ ಪ್ರಶಸ್ತಿ1962ರಲ್ಲಿ ಇವರ ಮುಡಿಗೇರಿತು.

ಸ್ಮಾರಕ[ಬದಲಾಯಿಸಿ]

  • ವೈವಿಧ್ಯಮಯ ಸ್ಮಾರಕಗಳಿಗೆ ತೆರೇಸಾ ಒಂದು ಸ್ಫೂರ್ತಿಯ ಸೆಲೆ. ಹಲವು ವಸ್ತು ಸಂಗ್ರಹಾಲಯಗಳ ಮೂಲಕ ಅವರ ನೆನಪನ್ನು ಚಿರ ಸ್ಥಾಯಿಯಾಗಿಸಲಾಗಿದೆ. ಹಲವು ಚರ್ಚ್‌ಗಳಿಗೆ,ಕಟ್ಟಡಗಳಿಗೆ,ರಸ್ತೆಗಳಿಗೆ ಇವರ ಹೆಸರಿಡಲಾಗಿದೆ. ಜೀವನ ಚರಿತ್ರಕಾರ ನವೀನ್‌ ಚಾವ್ಲಾ ತೇರೇಸಾ ಬಗ್ಗೆ ಬರೆದಿರುವ ಹಲವು ನುಡಿನಮನಗಳು ಭಾರತದ ಹಲವು ಪತ್ರಿಕೆ ಮತ್ತು ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ.[೮೧][೮೨][೮೩][೮೪][೮೫][೮೬][೮೭]

ಇದನ್ನೂ ನೋಡಿ[ಬದಲಾಯಿಸಿ]

ಟೆಂಪ್ಲೇಟು:Portalpar

ಟಿಪ್ಪಣಿಗಳು[ಬದಲಾಯಿಸಿ]

  1. PBS Online Newshour (September 5, 1997). Mother Teresa Dies, www.pbs.org. Retrieved August, 2007
  2. ೨.೦ ೨.೧ ಸ್ಪಿಂಕ್‌ ಕ್ಯಾಥರಿನ್‌, (1997). ಮದರ್‌ ತೆರೇಸಾ: ಎ ಕಂಪ್ಲೀಟ್‌ ಆಥರೈಸ್ಡ್‌ ಬಯಾಗ್ರಫಿ . ನ್ಯೂಯಾರ್ಕ್ ಹರ್ಪರ್‌ಕೋಲಿನ್ಸ್‌, ಪುಟ.16. ISBN 0-06-250825-3.
  3. ಮದರ್‌ ತೆರೇಸಾ ಆಫ್‌ ಕ್ಯಾಲ್‌ಕಟ್ಟಾ (1910-1997)
  4. ಮದರ್‌ ತೆರೇಸಾ | ಹುಮ್ಯಾನಿಟೇರಿಯನ್‌
  5. ಅಸೋಸಿಯೇಟ್‌ ಪ್ರೆಸ್. ಅಕ್ಟೋಬರ್‌ 14, 2006 cnn.com/ 2003/WORLD/ europe/10/14/rome.teresa.ap/index.html "ಫುಲ್‌ ಹೌಸ್‌ ಫಾರ್‌ ಮದರ್‌ ತೆರೇಸಾ ಸೆರೆಮೋನಿ". CNN. ಮೇ 30, 2007ರಂದು ಪುನರ್‌ಸಂಪಾದಿಸಲಾಗಿದೆ.
  6. "ಬ್ಲೆಸ್ಡ್‌ ಮದರ್‌ ತೆರೇಸಾ". 2007 ಬ್ರಿಟಾನಿಕಾ ವಿಶ್ವಕೋಶ ಮೇ 30, 2007ರಂದು ಪುನರ್‌ಸಂಪಾದಿಸಲಾಗಿದೆ
  7. (2002) en.html "ಮದರ್‌ ತೆರೇಸಾ ಆಫ್‌ ಕ್ಯಾಲ್‌ಕಟ್ಟಾ (1910-1997)" ವ್ಯಾಟಿಕನ್‌ ನ್ಯೂ ಸರ್ವೀಸಸ್‌.ಮೇ 30,2007ರಂದು ಪುನರ್‌ ಸಂಪಾದಿಸಲಾಗಿದೆ.
  8. Lester, Meera (2004). lpg=PA139&dq= Nikolle+ bojaxhiu&source= web&ots=bCgwkpbTe7&sig= sIXUKONOEt1BcY9DtqkJcg_NQfM&hl= en&sa=X&oi= book_ result&resnum=2&ct=result Saints' Blessings By Meera Lester Saints' Blessing. Fair Winds. p. 138. ISBN 1592330452. Retrieved 2008-12-14. {{cite book}}: Check |url= value (help)[ಶಾಶ್ವತವಾಗಿ ಮಡಿದ ಕೊಂಡಿ]
  9. ಇವರ ತಂದೆ ತೀರಿಕೊಂಡಾಗ ಇವರಿಗಿನ್ನೂ 10 ವರ್ಷ ಎಂದು ಕೆಲವು ಮೊಲಗಳು ಉಲ್ಲೇಖ ಮಾಡಿವೆಯಾದರೂ, ಅವರ ಸಹೋದರನೊಂದಿಗೆ ನಡೆಸಲಾದ ಸಂದರ್ಶನವೊಂದರಲ್ಲಿ, ವ್ಯಾಟಿಕನ್‌ ದಾಖಲೆಗಳ ಪ್ರಕಾರ ಆ ಸಮಯದಲ್ಲಿ ಅವರ ವಯಸ್ಸು "ಸುಮಾರು ಎಂಟು ವರ್ಷ"ವಾಗಿತ್ತು ಎಂಬುದು ತಿಳಿದುಬಂದಿದೆ. ಉಲ್ಲೇಖ ಅಗತ್ಯವಿದೆ.
  10. ಕ್ಲೂಕಾಸ್‌, ಜೋಆನ್‌ ಗ್ಯ್ರಾಫ್‌.(1988)ಮದರ್‌ ತೆರೇಸಾ ನ್ಯೂಯಾರ್ಕ್ ಚೆಲ್ಸಿಯಾ ಹೌಸ್‌ ಪಬ್ಲಿಕೇಷನ್ಸ್‌,ಪುಟ.24.ISBN 1-55546-855-1.
  11. ಶಾರ್ನ್, ಲೋರಿ (ಸೆಪ್ಟೆಂಬರ‍್ 5, 1997)."ಮದರ್‌ ತೆರೇಸಾ ಡೈಸ್‌ ಅಟ್ 87".ಯುಎಸ್‌ಎ ಟುಡೆ ಮೇ 30,2007ರಂದು ಪುನರ್‌ ಸಂಪಾದಿಸಲಾಗಿದೆ.
  12. ಕ್ಲೂಕಾಸ್‌, ಜೋಆನ್‌ ಗ್ಯ್ರಾಫ್‌ (1988) ಮದರ್‌ ತೆರೇಸಾ ನ್ಯೂಯಾರ್ಕ್ ಚೆಲ್ಸಿಯಾ ಹೌಸ್‌ ಪಬ್ಲಿಕೇಷನ್ಸ್‌, ಪುಟ. 28-29. ISBN 1-55546-855-1.
  13. ಕ್ಲೂಕಾಸ್‌, ಜೋಆನ್‌ ಗ್ಯ್ರಾಫ್‌ (1988) ಮದರ್‌ ತೆರೇಸಾ ನ್ಯೂಯಾರ್ಕ್ ಚೆಲ್ಸಿಯಾ ಹೌಸ್‌ ಪಬ್ಲಿಕೇಷನ್ಸ್‌, ಪುಟ.31.ISBN 1-55546-855-1.
  14. ಸೆಬ್ಬಾ, ಅನ್ನೆ(1997).ಮದರ್‌ ತೆರೇಸಾ: ಬಿಯಾಂಡ್‌ ದಿ ಇಮೇಜ್‌.ನ್ಯೂಯಾರ್ಕ್ ಡಬಲ್‌ಡೇ, ಪುಟ.35. ISBN 0-385-48952-8.
  15. blessed-mother-teresa-of-calcu/ ಬ್ಲೆಸ್ಡ್‌ ಮದರ್‌ ತೆರೇಸಾ ಆಫ್‌ ಕ್ಯಾಲ್‌ಕಟ್ಟಾ ಅಂಡ್ ಸೆಂಟ್‌. ಥೆರೇಸೆ ಆಫ್‌ ಸಿಯೆಕ್ಸ್: ಸ್ಪಿರಿಚುಯಲ್‌ ಸಿಸ್ಟರ್ಸ್ ಇನ್‌ ದಿ ನೈಟ್‌ ಆಫ್‌ ಫೆಯಿಥ್‌
  16. ಕ್ಲೂಕಾಸ್‌, ಜೋಆನ್‌ ಗ್ಯ್ರಾಫ್‌ (1988) ಮದರ್‌ ತೆರೇಸಾ ನ್ಯೂಯಾರ್ಕ್ ಚೆಲ್ಸಿಯಾ ಹೌಸ್‌ ಪಬ್ಲಿಕೇಷನ್ಸ್‌, ಪುಟ. 32.ISBN 1-55546-855-1.
  17. ಸ್ಪಿಂಕ್‌ ಕ್ಯಾಥರಿನ್‌(1997).ಮದರ್‌ ತೆರೇಸಾ:ಎ ಕಂಪ್ಲೀಟ್‌ ಆಥರೈಸ್ಡ್‌ ಬಯಾಗ್ರಫಿ.ನ್ಯೂಯಾರ್ಕ್ ಹರ್‌ಪರ್‌ಕೋಲಿನ್ಸ್‌, ಪುಟ.18-21. ISBN 0-06-250825-3.
  18. ಸ್ಪಿಂಕ್‌ ಕ್ಯಾಥರಿನ್‌ (1997).ಮದರ್‌ ತೆರೇಸಾ:ಎ ಕಂಪ್ಲೀಟ್‌ ಆಥರೈಸ್ಡ್‌ ಬಯಾಗ್ರಫಿ. ನ್ಯೂಯಾರ್ಕ್ ಹರ್‌ಪರ್‌ಕೋಲಿನ್ಸ್‌, ಪುಟ.18, 21-22. ISBN 0-06-250825-3.
  19. ಕ್ಲೂಕಾಸ್‌, ಜೋಆನ್‌ ಗ್ಯ್ರಾಫ್‌ (1988) ಮದರ್‌ ತೆರೇಸಾ ನ್ಯೂಯಾರ್ಕ್ ಚೆಲ್ಸಿಯಾ ಹೌಸ್‌ ಪಬ್ಲಿಕೇಷನ್ಸ್‌, ಪುಟ. 35. ISBN 1-55546-855-1.
  20. ಕ್ಲೂಕಾಸ್‌, ಜೋಆನ್‌ ಗ್ಯ್ರಾಫ್‌ (1988) ಮದರ್‌ ತೆರೇಸಾ ನ್ಯೂಯಾರ್ಕ್ ಚೆಲ್ಸಿಯಾ ಹೌಸ್‌ ಪಬ್ಲಿಕೇಷನ್ಸ್‌, ಪುಟ. 39. ISBN 1-55546-855-1.
  21. "Blessed Mother Teresa". Encyclopædia Britannica Online. Encyclopædia Britannica. Retrieved 2007-12-20. {{cite web}}: Cite has empty unknown parameter: |coauthors= (help)
  22. ವಿಲಿಯಮ್ಸ್‌, ಪಾಲ್‌.(2002).ಮದರ್‌ ತೆರೇಸಾ ಇಂಡಿಯನಾಪೊಲಿಸ್‌. ಆಲ್ಫಾ ಬುಕ್ಸ್‌, ಪುಟ.57. ISBN 0-02-864278-3.
  23. Spink, Kathryn (1997). Mother Teresa: A Complete Authorized Biography. New York. HarperCollins, pp.37. ISBN 0-06-250825-3.
  24. ವಿಲಿಯಮ್ಸ್‌, ಪಾಲ್‌.(2002).ಮದರ್‌ ತೆರೇಸಾ ಇಂಡಿಯನಾಪೊಲಿಸ್. ಆಲ್ಫಾ ಬುಕ್ಸ್‌, ಪುಟ.62. ISBN 0-02-864278-3.
  25. ಸ್ಪಿಂಕ್‌ ಕ್ಯಾಥರಿನ್‌(1997). ಮದರ್‌ ತೆರೇಸಾ: ಎ ಕಂಪ್ಲೀಟ್‌ ಆಥರೈಸ್ಡ್‌ ಬಯಾಗ್ರಫಿ . ನ್ಯೂಯಾರ್ಕ್ ಹರ್‌ಪರ್‌ಕೋಲಿನ್ಸ್‌, ಪುಟ.284. ISBN 0-06-250825-3.
  26. ಸೆಬ್ಬಾ, ಅನ್ನೆ(1997).ಮದರ್‌ ತೆರೇಸಾ: ಬಿಯಾಂಡ್‌ ದಿ ಇಮೇಜ್‌ .ನ್ಯೂಯಾರ್ಕ್ ಡಬಲ್‌ಡೇ, ಪುಟ. 58–60. ISBN 0-385-48952-8.
  27. ಉಲ್ಲೇಖ ದೋಷ: Invalid <ref> tag; no text was provided for refs named Spink55
  28. ಸೆಬ್ಬಾ, ಅನ್ನೆ(1997). ಮದರ್‌ ತೆರೇಸಾ: ಬಿಯಾಂಡ್‌ ದಿ ಇಮೇಜ್‌. ನ್ಯೂಯಾರ್ಕ್ಡ ಡಬಲ್‌ಡೇ, ಪುಟ.62-63.ISBN 0-385-48952-8.
  29. ಕ್ಲೂಕಾಸ್‌, ಜೋಆನ್‌ ಗ್ಯ್ರಾಫ್‌ ದಿಲ್‌ ದರಿಯಾ (1988) ಮದರ್‌ ತೆರೇಸಾ ನ್ಯೂಯಾರ್ಕ್ ಚೆಲ್ಸಿಯಾ ಹೌಸ್‌ ಪಬ್ಲಿಕೇಷನ್ಸ್‌, ಪುಟ. 58-59. ISBN 1-55546-855-1.
  30. ಸ್ಪಿಂಕ್‌ ಕ್ಯಾಥರಿನ್‌(1997). ಮದರ್‌ ತೆರೇಸಾ: ಎ ಕಂಪ್ಲೀಟ್‌ ಆಥರೈಸ್ಡ್‌ ಬಯಾಗ್ರಫಿ . ನ್ಯೂಯಾರ್ಕ್ ಹರ್‌ಪರ್‌ಕೋಲಿನ್ಸ್‌, ಪುಟ.82. ISBN 0-06-250825-3.
  31. ಸ್ಪಿಂಕ್‌ ಕ್ಯಾಥರಿನ್‌(1997).ಮದರ್‌ ತೆರೇಸಾ:ಎ ಕಂಪ್ಲೀಟ್‌ ಆಥರೈಸ್ಡ್‌ ಬಯಾಗ್ರಫಿ. ನ್ಯೂಯಾರ್ಕ್ ಹರ್‌ಪರ್‌ಕೋಲಿನ್ಸ್‌, ಪುಟ.286-287. ISBN 0-06-250825-3.
  32. ಸ್ಕಾಟ್‌, ಡೇವಿಡ್‌.ಎ ರೆವೊಲ್ಯೂಷನ್‌ ಆಫ್‌ ಲವ್‌: ದಿ ಮೀನಿಂಗ್‌ ಆಫ್‌ ಮದರ್‌ ತೆರೇಸಾಚಿಕಾಗೋ,ಲಯೋಲ ಪ್ರೆಸ್‌, 2005. ISBN 0-8294-2031-2 ಪುಟ.ff "ಅವರು ರೋಗಗಳನ್ನು (ಬಡತನದ) ಗುಣಪಡಿಸಲು ಮಾತ್ರ ಕಾರ್ಯ ನಿರ್ವಹಿಸುತ್ತಾರೆ.
    • ಅದನ್ನು ತಡೆಯುವ ಕುರಿತಲ್ಲ, ಆದರೂ ಪಶ್ಚಿಮದಲ್ಲಿ ಜನರು ದೇಣಿಗೆ ನೀಡುವುದನ್ನು ಮುಂದುವರಿಸುತ್ತಾರೆ."
  33. Fox, Robin (1994), "Mother Theresa's care for the dying", The Lancet, 344 (8925): 807
  34. movement.com/ ಗಾಡ್ಸ್ ಪೀಪಲ್‌ ಯಾರ್ನ್‌ ಫಾರ್‌ ಹೋಲಿ ಪ್ರೀಸ್ಟ್ಸ್‌, ಫೌಂಡೆಡ್‌ ಬೈ ಬ್ಲೆಸ್ಡ್‌ ಮದರ್‌ ತೆರೇಸಾ ಆಫ್‌ ಕ್ಯಾಲ್‌ಕಟ್ಟಾ[ಶಾಶ್ವತವಾಗಿ ಮಡಿದ ಕೊಂಡಿ].ಕಾರ್ಪಸ್‌ ಕ್ರಿಸ್ಟಿ ಮೂವ್‌ ಮೆಂಟ್‌ ಫಾರ್‌ ಪ್ರೀಸ್ಟ್ಸ್‌. ಆಗಸ್ಟ್ 20, 2009ರಲ್ಲಿ ಪುನರ‍್ಸಂಪಾದಿಸಲಾಗಿದೆ.
  35. ದಿ ರಿಲಿಜಿಯಸ್‌ ಕಮ್ಯುನಿಟಿ ಆಫ್‌ ಪ್ರೀಸ್ಟ್ಸ್‌ ಫೌಂಡೆಡ್‌ ಬೈ ಮದರ್‌ ತೆರೇಸಾ . ಮಿಷನರೀಸ್ ಆಫ್‌ ಚಾರಿಟಿ ಫಾದರ್ಸ್‌ . ಅಗಸ್ಟ್ 20, 2009ರಲ್ಲಿ ಪುನರ‍್ಸಂಪಾದಿಸಲಾಗಿದೆ.
  36. ಸ್ಲೇವಿಸೆಕ್‌, ಲೋಯಿಸ್‌‌.(2007).ಮದರ್‌ ತೆರೇಸಾ ನ್ಯೂಯಾರ್ಕ್; ಇನ್ಫೋಬೇಸ್‌ ಪಬ್ಲಿಷಿಂಗ್‌, ಪುಟ. 90-91. ISBN 978-0-7513-2886-8
  37. CNN ಸಿಬ್ಬಂದಿ, "ಮದರ್‌ ತೆರೇಸಾ: ಎ ಪ್ರೋಫೈಲ್‌", CNN ಆನ್‌ಲೈನ್‌ ಮೇ 30, 2007ರಂದು ಪುನರ್‌ಸಂಪಾದಿಸಲಾಗಿದೆ
  38. ಕ್ಲೂಕಾಸ್‌, ಜೋಆನ್‌ ಗ್ಯ್ರಾಫ್‌ (1988) ಮದರ್‌ ತೆರೇಸಾ ನ್ಯೂಯಾರ್ಕ್ ಚೆಲ್ಸಿಯಾ ಹೌಸ್‌ ಪಬ್ಲಿಕೇಷನ್ಸ್‌, ಪುಟ. 17. ISBN 1-55546-855-1.
  39. ವಿಲಿಯಮ್ಸ್‌, ಪಾಲ್‌.(2002).ಮದರ್‌ ತೆರೇಸಾ ಇಂಡಿಯನಾಪೊಲಿಸ್‌. ಆಲ್ಫಾ ಬುಕ್ಸ್‌, ಪುಟ. 199–204. ISBN 0-02-864278-3.
  40. ಕ್ಲೂಕಾಸ್‌, ಜೋಆನ್‌ ಗ್ಯ್ರಾಫ್‌ (1988) ಮದರ್‌ ತೆರೇಸಾ ನ್ಯೂಯಾರ್ಕ್ ಚೆಲ್ಸಿಯಾ ಹೌಸ್‌ ಪಬ್ಲಿಕೇಷನ್ಸ್‌, ಪುಟ. 104. ISBN 1-55546-855-1.
  41. podcast/77/ 510036/98314432/KERA_98314432.mp3 KERA ಯ ಥಿಂಕ್‌ ಪಾಡ್‌ಕಾಸ್ಟ್‌ : ಲೀವಿಂಗ್ ಮದರ್‌ ತೆರೇಸಾ, ಲಾಸಿಂಗ್‌ ಫೆಯಿಥ್, ಅಂಡ್‌ ಸರ್ಚಿಂಗ್ ಫಾರ್‌ ಮೀನಿಂಗ್‌ . ಡಿಸೆಂಬರ್‌ 15, 2008.
  42. ಐರಿಶ್‌ ಸ್ವತಂತ್ರ http.//www.independent.ie/unsorted/features/easter-the-church-and-the-same-party-line-42461.html
  43. ಬಿಂದ್ರ, ಸತೀಂದರ್‌ (ಸೆಪ್ಟೆಂಬರ‍್ 7, 2001). "[http: //archives. cnn.com/ 2001/ WORLD/asiapcf/south/09/04/mother.theresa.exorcism/ ಆರ್ಚ್‌‌ಬಿಷಪ್‌:ಮದರ್‌ ತೆರೇಸಾ ಅಂಡರ್‌ವೆಂಟ್‌ ಎಕ್ಸಾರ್ಸಿಯಮ್‌]". CNN ನಿಂದ ಮೇ 30, 2007ರಂದು ಪುನರ್‌ಸಂಪಾದಿಸಲಾಗಿದೆ.
  44. [http:// nobelprize.org/nobel_prizes/peace/laureates/teresa-bio.html "Mother Teresa - The Nobel Peace Prize 1979"]. Nobel Prize.org. The Nobel Foundation. 1979. Retrieved 2009-10-15. {{cite web}}: Check |url= value (help)
  45. ೪೫.೦ ೪೫.೧ ೪೫.೨ ೪೫.೩ ೪೫.೪ ೪೫.೫ ಪಾರ್ವತಿ ಮೆನನ್‌ ಮುಖಪುಟ.ಲೇಖನ: ಎ ಲೈಫ್‌ ಆಫ್‌ ಸೆಲ್ಫ್‌ಲೆಸ್‌ ಕೇರಿಂಗ್‌ Archived 2009-07-20 ವೇಬ್ಯಾಕ್ ಮೆಷಿನ್ ನಲ್ಲಿ., ಫ್ರಂಟ್‌ಲೈನ್‌ , ಸಂp.14 :: ಸಂಖ್ಯೆ. 19 :: ಸೆಪ್ಟೆಂಬರ್‌.20 - ಅಕ್ಟೋಬರ‍್ 3, 1997
  46. "ಮದರ್‌ ತೆರೇಸಾ: ದಿ ಆಥರೈಸ್ಡ್‌ ಬಯಾಗ್ರಫಿ" ISBN 978-0-7567-5548-5.
  47. ೪೭.೦ ೪೭.೧ ಉಲ್ಲೇಖ ದೋಷ: Invalid <ref> tag; no text was provided for refs named Chatterjee
  48. ವಿಕ್ಟರ್‌ ಬ್ಯಾನರ್ಜೀ [http: //www. telegraphindia. com/1020908/asp/ opinion/story_ 1176867 .asp ಎ ಕ್ಯಾನೋಪಿ ಮೋಸ್ಟ್‌ ಫ್ಯಾಟಲ್‌], ದಿ ಟೆಲಿಗ್ಯ್ರಾಫ್‌ ,ಸಂಡೆ, ಸೆಪ್ಟೆಂಬರ‍್ 8, 2002.
  49. ಅಸೋಸಿಯೇಟೆಡ್‌ ಪ್ರೆಸ್‌ (ಸೆಪ್ಟೆಂಬರ‍್ 14, 1997). "{{| ಹೋಸ್ಟನ್‌ ಕ್ರಾನಿಕಲ್‌ . ಮೇ 30, 2007ರಂದು ಪುನರ್‌ಸಂಪಾದಿಸಲಾಗಿದೆ.
  50. ರಾಮನ್‌ ಮ್ಯಾಗ್ಸೆಸೆ ಅವಾರ್ಡ್‌ ಫೌಂಡೇಷನ್‌ (1962) rmaf.org. ph/Awardees/ Citation /CitationMotherTer.htm ಸೈಟೇಷನ್‌ ಫಾರ್‌ ಮದರ್‌ ತೆರೇಸಾ.
  51. ೫೧.೦ ೫೧.೧ ೫೧.೨ ೫೧.೩ ೫೧.೪ "Mother Teresa's Crisis of Faith". Time. Archived from the original on 2013-08-16. Retrieved 2007-08-24.
  52. ಸೆಬ್ಬಾ, ಅನ್ನೆ(1997).ಮದರ್‌ ತೆರೇಸಾ: ಬಿಯಾಂಡ್‌ ದಿ ಇಮೇಜ್‌. ನ್ಯೂಯಾರ್ಕ್ ಡಬಲ್‌ಡೇ, ಪುಟ. 80–84. ISBN 0-385-48952-8.
  53. ಕ್ಲೂಕಾಸ್‌, ಜೋಆನ್‌ ಗ್ಯ್ರಾಫ್‌ (1988) ಮದರ್‌ ತೆರೇಸಾ ನ್ಯೂಯಾರ್ಕ್ ಚೆಲ್ಸಿಯಾ ಹೌಸ್‌ ಪಬ್ಲಿಕೇಷನ್ಸ್‌, ಪುಟ. 81-82. ISBN 1-55546-855-1.
  54. ಕ್ವಾಡ್‌ ಸಿಟಿ ಟೈಮ್ಸ್‌ ಸಿಬ್ಬಂದಿ (ಅಕ್ಟೋಬರ‍್ 17, 2005). "ಹ್ಯಾಬಿಟ್ಯಾಟ್‌ ಅಫ್ಪಿಷಿಯಲ್‌ ಟು ರಿಸೀವ್‌ ಪೇಸೆಮ್‌ ಇನ್ ಟೆರ್ರಿಸ್ ಹಾನರ್‌ Archived 2011-08-24 ವೇಬ್ಯಾಕ್ ಮೆಷಿನ್ ನಲ್ಲಿ.". ಪೀಸ್‌ ಕಾರ್ಪ್ಸ್. 26 ಮೇ 2007ತರಲ್ಲಿ ಪುನರ್‌ಸಂಪಾದಿಸಲಾಗಿದೆ.
  55. award _id=882114&search_type=advanced&showInd=true ಇಟ್ಸ್‌ ಆನ್‌ ಹಾನರ್‌: AC[ಶಾಶ್ವತವಾಗಿ ಮಡಿದ ಕೊಂಡಿ]
  56. ೫೬.೦ ೫೬.೧ ಉಲ್ಲೇಖ ದೋಷ: Invalid <ref> tag; no text was provided for refs named BMJ
  57. ಮದರ್‌ ತೆರೇಸಾ (11 ಡಿಸೆಂಬರ್‌ 1979). "ನೊಬೆಲ್‌ ಪ್ರೈಸ್‌ ಲೆಕ್ಚರ್‌". NobelPrize.org. 25 ಮೇ 2007ರಂದು ಪುನರ್‌ಸಂಪಾದಿಸಲಾಗಿದೆ.
  58. ೫೯.೦ ೫೯.೧ MacIntyre, Donal (August 22, 2005), New Statesman, vol. 134, no. 4754, p. 24-25 http://www.newstatesman.com/200508220019 {{citation}}: Missing or empty |title= (help); Text "The Squalid Truth Behind the Legacy of Mother Teresa" ignored (help)
  59. "Sins of the Missions". The Guardian. 14 October 1996. {{cite news}}: |access-date= requires |url= (help); Check date values in: |accessdate= (help)
  60. ಉಲ್ಲೇಖ ದೋಷ: Invalid <ref> tag; no text was provided for refs named Tribute
  61. ಫ್ರಾಂಕ್‌ ನ್ಯೂಫರ್ಟ್ (ಡಿಸೆಂಬರ್‌31, 1999). ಮದರ್‌ ತೆರೇಸಾ ವೋಟೆಡ್‌ ಬೈ ಅಮೆರಿಕನ್‌ ಪೀಪಲ್‌ ಯಾಸ್‌ ದಿ ಮೋಸ್ಟ್‌ ಅದಮೈರ್ಡ್ ಪರ್ಸನ್‌ ಆಫ್‌ ದಿ ಸೆಂಚುರಿ
  62. ಗ್ರೇಟೆಸ್ಟ್‌ ಆಫ್‌ ದಿ ಸೆಂಚುರಿ ಗ್ಯಾಲಪ್‌.NN/USA ಟುಡೆ ಪೋಲ್‌. ಡಿಸೆಂಬರ್‌. 20-21, 1999.
  63. John Paul II (October 20, 2003). vatican. va/holy_father/john_paul_ii/speeches/2003/october/documents/hf_jp-ii_spe_20031020_pilgrims-mother-teresa_en.html "Address Of John Paul II To The Pilgrims Who Had Come To Rome For The Beatification Of Mother Teresa". Vatican.va. Retrieved 2007-03-13. {{cite web}}: Check |url= value (help); Italic or bold markup not allowed in: |work= (help)
  64. David Van Biema (2007-08-23). "Mother Teresa's Crisis of Faith". TIME. Archived from the original on 2013-08-16. Retrieved 2009-11-17.
  65. ೬೬.೦ ೬೬.೧ Teresa, Mother; Kolodiejchuk, Brian (2007). Mother Teresa: Come Be My Light. New York: Doubleday. ISBN 0385520379.
  66. ೬೭.೦ ೬೭.೧ ನ್ಯೂ ಬುಕ್‌ ರಿವೀಲ್ಸ್‌ ಮದರ್‌ ತೆರೇಸಾಸ್‌ ಸ್ಟ್ರಗಲ್‌ ವಿಥ್‌ ಪೈಯಿಥ್‌ ಬಿಲೀಫ್‌ನೆಟ್‌, AP.2007
  67. ಉಲ್ಲೇಖ ದೋಷ: Invalid <ref> tag; no text was provided for refs named Newsweekteresa
  68. "Mother Teresa's Crisis of Faith". Sun Times. Archived from the original on 2007-10-11. Retrieved 2007-08-26.
  69. [http: //www.telegraph.co.uk/news/main.jhtml?xml=/news/2002/11/29/wteres29.xml "Mother Teresa's Crisis of Faith"]. Daily Telegraph. Retrieved 2007-08-26. {{cite web}}: Check |url= value (help)
  70. telegraph. co.uk/news/main.jhtml?xml=/news/2007/08/24/wteresa224.xml "Mother Teresa's canonisation not at risk". Daily Telegraph. Retrieved 2007-08-26. {{cite web}}: Check |url= value (help)
  71. ಪೋಪ್‌ ಬೆನೆಡಿಕ್ಟ್‌ XVI (ಡಿಸೆಂಬರ್‌ 25, 2005). ಡೀಯುಸ್‌ ಕ್ಯಾರಿಟಾಸ್‌ ಎಸ್ಟ್‌(PDF). ವ್ಯಾಟಿಕನ್‌ ಸಿಟಿ, ಪುಟ.10. ಅಗಸ್ಟ್ 20, 2009ರಲ್ಲಿ ಪುನರ‍್ಸಂಪಾದಿಸಲಾಗಿದೆ.
  72. Mother Teresa (197). PA5&lpg=PA5&dq= mental+prayer& source=web& ots= dqQvjV7q0E&sig=7jADR3Y9qakbaUyq0EugJxpzll0#PPA5,M1 "No Greater Love". Google Books. Retrieved 2007-08-12. {{cite web}}: Check |url= value (help)
  73. "ಮದರ್‌ ತೆರೇಸಾ ಆಫ್‌ ಕ್ಯಾಲ್‌ಕಟ್ಟಾ ಪೈಸ್‌ ಟ್ರಿಬ್ಯೂಟ್‌ ಟು ಸೇಂಟ್‌.ಫ್ರಾನ್ಸಿಸ್‌ ಆಫ್‌ ಅಸ್ಸಿಸಿ" ಅಮೆರಿಕನ್‌ ಕ್ಯಾಥೊಲಿಕ್‌ ವೆಬ್‌ಸೈಟ್‌ನಲ್ಲಿ Archived 2010-06-05 ವೇಬ್ಯಾಕ್ ಮೆಷಿನ್ ನಲ್ಲಿ., ಮೇ 30, 2007ರಂದು ಪುನರ್‌ಸಂಪಾದಿಸಲಾಗಿದೆ.
  74. ಓರ್‌, ಡೇವಿಡ್‌(ಮೇ 10. 2003 [http:// www. telegraph.co.uk/news/main.jhtml?xml=/news/2003/ 10/05/wteres05 .xml&sSheet= /news/ 2003/10/ 05/ ixworld.html "ಮೆಡಿಸಿನ್‌ ಕ್ಯೂರ್ಡ್ 'ಮಿರ್ಯ್ಯಾಕಲ್‌' ವುಮನ್‌- ನಾಟ್‌ ಮದರ್‌ ತೆರೇಸಾ, ಸೇ ಡಾಕ್ಟರ್ಸ್"]. ದಿ ಟೆಲಿಗ್ಯ್ರಾಫ್‌ ಮೇ 30, 2007ರಂದು ಪುನರ್‌ಸಂಪಾದಿಸಲಾಗಿದೆ.
  75. ಅನಾಮಿಕ (ಅಕ್ಟೋಬರ‍್ 14.2002 ವಾಟ್ಸ್‌ ಮದರ್‌ ತೆರೇಸಾ ಗಾಟ್‌ ಟು ದೊ ವಿಥ್‌ ಇಟ್‌?" Archived 2009-08-19 ವೇಬ್ಯಾಕ್ ಮೆಷಿನ್ ನಲ್ಲಿ.. ಟೈಮ್ ಮ್ಯಾಗಜೀನ್ 10 ಅಕ್ಟೋಬರ‍್, 2008ರಂದು ಪರಿಷ್ಕರಿಸಲಾಗಿದೆ.
  76. com/stories/2003/ 10/09/60minutes/ main 577394.shtml ದಿ ಡಿಬೇಟ್‌ ಓವರ‍್ ಸೇಂಟ್‌ವುಡ್‌ [ಶಾಶ್ವತವಾಗಿ ಮಡಿದ ಕೊಂಡಿ]. (9 ಅಕ್ಟೋಬರ‍್ 2003). CBS ನ್ಯೂಸ್‌ . 26 ಮೇ 2007ರಂದು ಪುನರ್‌ ಸಂಪಾದಿಸಲಾಗಿದೆ.
  77. ದಿ ಡಿಬೇಟ್‌ ಓವರ‍್ ಸೇಂಟ್‌ವುಡ್‌ . (9 ಅಕ್ಟೋಬರ‍್ 2003). CBS ನ್ಯೂಸ್‌ . 26 ಮೇ 2007ರಂದು ಪುನರ್‌ಸಂಪಾದಿಸಲಾಗಿದೆ.
  78. ಷಾ, ರಸ್ಸೆಲ್‌. ಸಪ್ಟೆಂಬರ್‌ 1, 2008 ಅಟ್ಯಾಕಿಂಗ್ ಎ ಸೇಂಟ್‌ Archived 2008-12-06 ವೇಬ್ಯಾಕ್ ಮೆಷಿನ್ ನಲ್ಲಿ., ಕ್ಯಾಥೊಲಿಕ್‌ ಹೆರಾಲ್ಡ್‌ . ಮೇ 1, 2007ರಂದು ಪುನರ್‌ಸಂಪಾದಿಸಲಾಗಿದೆ.
  79. "va/news_services/liturgy/ saints/ns_lit_doc_ 20031019_ index_madre-teresa_en.html ವ್ಯಾಟಿಕನ್‌ ನ್ಯೂಸ್‌ ರಿಲೀಸ್‌". Archived from the original on 2013-07-25. Retrieved 2020-12-09.
  80. ""ದಿ ಮಿ‌ರ್ಯಾಕಲ್‌ ಆಫ್‌ ಫೆಯಿಥ್‌"". Archived from the original on 2007-11-04. Retrieved 2009-11-17.
  81. [http./www.hinduonnet.com/2006/08/26/stories/2006082604071000.htm"ಮೆಮೋರೀಸ್‌ ಆಫ್‌ ಮದರ್‌ ತೆರೇಸಾ"]
  82. " ಟಚ್‌ ದಿ ಪೂವರ‍್... Archived 2010-09-03 ವೇಬ್ಯಾಕ್ ಮೆಷಿನ್ ನಲ್ಲಿ.' Archived 2010-09-03 ವೇಬ್ಯಾಕ್ ಮೆಷಿನ್ ನಲ್ಲಿ.
  83. "" ದಿ ಪಾಥ್‌ ಟು ಸೇಂಟ್‌ವುಡ್‌"". Archived from the original on 2008-12-02. Retrieved 2009-11-17.
  84. "" ಇನ್‌ ದಿ ಶಾಡೋ ಆಫ್‌ ಎ ಸೇಂಟ್". Archived from the original on 2008-12-02. Retrieved 2009-11-17.
  85. content&task=view&&issueid=49&id=6961&Itemid=1&page=in&latn=2 "ಮಿಷನ್‌ ಪಾಸಿಬಲ್‌"
  86. [http./www.hindu.com/2008/08/26/stories/2008082655280900.htm" ಮದರ್‌ ತೆರೇಸಾ ಅಂಡ್‌ ಜಾಯ್‌ ಆಫ್‌ ಗಿವಿಂಗ್‌]

ಆಕರಗಳು[ಬದಲಾಯಿಸಿ]

  • ನವೀನ್‌ ಚಾವ್ಲಾ. ಮದರ್‌ ತೆರೇಸಾ: ದಿ ಆಥರೈಸ್ಡ್‌ ಬಯಾಗ್ರಫಿ . ಡಿಯಾನೆ ಪಬ್‌ ಕಂ. (ಮಾರ್ಚ್‌ 1983. ISBN 978-0-7513-2886-8 ಮೊದಲು ಪ್ರಕಟಪಡಿಸಿದ್ದು, ಸಿನ್‌ಕ್ಲೇರ್‌-ಸ್ಟೀವೆನ್‌ಸನ್ U.K. (1992), ಇದು ಭಾರತದಲ್ಲಿ ಮತ್ತು ವಿದೇಶಗಳಲ್ಲಿ 14 ಭಾಷೆಗಳಿಗೆ ಅನುವಾದಗೊಂಡಿದೆ. ಭಾರತೀಯ ಭಾಷೆಗಳ ಆವೃತ್ತಿ ಹಿಂದಿ, ಬಂಗಾಳಿ, ಗುಜರಾತಿ, ಮಲಯಾಳಂ, ತಮಿಳು, ತೆಲುಗು, ಮತ್ತು ಕನ್ನಡ ಭಾಷೆಯಲ್ಲಿ ಪ್ರಕಟಗೊಂಡಿದೆ. ಈ ಆವೃತ್ತಿ ಪ್ರಕಟಗೊಂಡಿರುವ ವಿದೇಶಿ ಭಾಷೆಗಳೆಂದರೆ, ಫ್ರೆಂಚ್‌, ಜರ್ಮನ್‌, ಡಚ್, ಸ್ಟ್ಯಾನಿಷ್‌, ಇಟಾಲಿಯನ್‌, ಪೋಲಿಷ್, ಜಾಪನೀಸ್‌, ಮತ್ತು ಥಾಯ್‌. ಭಾರತೀಯ ಮತ್ತು ವಿದೇಶಿ ಭಾಷೆಗಳ ಆವೃತ್ತಿಗಳೆರಡರಲ್ಲೂ ವಿವಿಧ ಆವೃತ್ತಿಗಳು ರೂಪುಗೊಂಡಿವೆ. ರಾಯಧನದ ಆದಾಯದ ಬೃಹತ್‌ ಮೊತ್ತ ದತ್ತಿಗೆ ಹೋಗುತ್ತದೆ.
  • ಎಯ್‌ಲೀನ್‌ ಈಗನ್‌ ಮತ್ತು ಕ್ಯಾಥಲೀನ್‌ ಈಗನ್‌, OSB. ಪ್ರೇಯರ್‌ಟೈಮ್ಸ್‌ ವಿಥ್‌ ಮದರ್‌ ತೆರೇಸಾ: ಎ ನ್ಯೂ ಅಡ್ವೆಂಚರ್‌ ಇನ್‌ ಪ್ರೇಯರ್‌ , ಡಬಲ್‌ಡೇ, 1989. ISBN 978-0-385-26231-6.
  • ಬ್ರಿಯಾನ್‌ ಕೋಲೋಡೀಜುಕ್‌ (ed.). ಮದರ್‌ ತೆರೇಸಾ: ಕಮ್‌ ಬಿ ಮೈ ಲೈಟ್‌ , ಡಬಲ್‌ಡೇ, 2007, ISBN 978-0-385-52037-9.
  • ರಘು ರಾಯ್‌ ಮತ್ತು ನವೀನ್‌ ಚಾವ್ಲಾ. ಫೆಯಿಥ್‌ ಅಂಡ್‌ ಕಂಪ್ಯಾಷನ್‌ : ದಿ ಲೈಫ್‌ ಅಂಡ್‌ ವರ್ಕ್‌ ಆಫ್‌ ಮದರ್‌ ತೆರೇಸಾ . ಎಲಿಮೆಂಟ್‌ ಬುಕ್ಸ್‌ ಲಿಮಿಟೆಡ್‌. (ಡಿಸೆಂಬರ್ 1996) ISBN 978-0-7513-2886-8 ಡಬ್‌ ಮತ್ತು ಸ್ಪ್ಯಾನಿಷ್‌ ಭಾಷೆಗಳಿಗೂ ಅನುವಾದಗೊಂಡಿದೆ.

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

  • ಆಲ್‌ಪಿಯನ್‌, ಗೆಝಿಮ್‌ ಮದರ್‌ ತೆರೇಸಾ: ಸೇಂಟ್‌ ಆರ‍್ ಸೆಲೆಬ್ರಿಟಿ? . ಲಂಡನ್‌: ರೂಟ್‌ಲೆಡ್ಜ್‌ ಪ್ರೆಸ್‌, 2007. ISBN 0-415-39247-0
  • ಬಿನೆನೇಟ್‌, ಬೆಕಿ ಅಂಡ್‌ ಜೋಸೆಫ್‌ ಡ್ಯುರೆಪೋಸ್‌ (eds). ಮದರ್‌ ತೆರೇಸಾ: ನೋ ಗ್ರೇಟರ್‌ ಲವ್‌ (ಫೈನ್‌ ಕಮ್ಯುನಿಕೇಷನ್ಸ್‌, 2000) ISBN 1-56731-401-5
  • Bindra, Satinder (2001-09-07). "Archbishop: Mother Teresa underwent exorcism". CNN.com World. Archived from the original on 2006-12-17. Retrieved 2006-10-23.
  • ಚಟರ್ಜೀ, ಅರೌಪ್‌. ಮದರ್‌ ತೆರೇಸಾ: ದಿ ಫೈನಲ್‌ ವರ್ಡಿಕ್ಟ್‌ (ಮೀಟೋರ್‌ ಬುಕ್ಸ್‌, 2003). ISBN 81-88248-00-2, [http./www. meteorbooks.com/index.html ಪರಿಚಯ ಮತ್ತು ಹದಿನಾಲ್ಕರಲ್ಲಿ ಮೊದಲ ಮೂರು ಅಧ್ಯಾಯಗಳು (ಚಿತ್ರಗಳಿಲ್ಲ). ಆಗ್ನೆಸ್‌ ಬೋಜಕ್ಸಿಯು ಅವರ ಬದುಕು ಮತ್ತು ಸೇವೆಗಳ ವಿಮರ್ಶಾತ್ಮಕ ಅವಲೋಕನ
  • ಚಾವ್ಲಾ, ನವೀನ್‌. ಮದರ್‌ ತೆರೇಸಾ . ರಾಕ್‌ಪೋರ್ಟ್‌, ಮಾಸ್‌: ಎಲಿಮೆಂಟ್‌ ಬುಕ್ಸ್‌, 1996. ISBN 1-85230-911-3
  • ಚಾವ್ಲಾ, ನವೀನ್‌. ಮದರ್‌ ತೆರೇಸಾ: ದಿ ಆಥರೈಸ್ಡ್‌ ಬಯಾಗ್ರಫಿ , ಡಿಯಾನೆ ಪಬ್‌ ಕಂ. (ಮಾರ್ಚ್ 1992), ISBN 978-0-7567-5548-5.
  • ಚಾವ್ಲಾ, ನವೀನ್‌. ದಿ ಮಿ‌ರ್ಯಾಕಲ್‌ ಆಫ್‌ ಫೆಯಿಥ್‌ ,

ದಿನಾಂಕ ಆಗಸ್ಟ್‌ 25, 2007ರಂದು ದಿ ಹಿಂದುವಿನಲ್ಲಿ ಪ್ರಕಟವಾದ ಲೇಖನ " ದಿ ಮಿ‌ರ್ಯಾಕಲ್‌ ಆಫ್‌ ಫೆಯಿಥ್‌" Archived 2007-11-04 ವೇಬ್ಯಾಕ್ ಮೆಷಿನ್ ನಲ್ಲಿ.

ಹೊರಗಿನ ಕೊಂಡಿಗಳು[ಬದಲಾಯಿಸಿ]

Wikiquote
Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
[[wikiquote:kn:{{{1}}}|ಮದರ್‌ ತೆರೇಸಾ]]


Catholic Church titles
ಪೂರ್ವಾಧಿಕಾರಿ
Superior General of the Missionaries of Charity
1950–1997
ಉತ್ತರಾಧಿಕಾರಿ
Nirmala Joshi