ವರ್ಗ:ಮೈಸೂರು ಜಿಲ್ಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೆಬ್ಬಾಳು ಕೊಪ್ಪಲು ಗ್ರಾಮ, ಕೆ ಆರ್ ನಗರ ತಾಲ್ಲೂಕು, ಮೈಸೂರು ಜಿಲ್ಲೆ.

 ಶ್ರೀ ಕ್ಷೇತ್ರ ಕಪ್ಪಡಿ
ಶ್ರೀ ಕ್ಷೇತ್ರ ಕಪ್ಪಡಿಯು ಹೆಬ್ಬಾಳು ಗ್ರಾಮದಿಂದ ಉತ್ತರಕ್ಕೆ 5 ಕಿಲೋಮೀಟರ್ ದೂರದಲ್ಲಿ ಇದೆ.ಇದು ರಾಚಪ್ಪಾಜಿ(ರಾಜಪ್ಪಾಜಿ) ಮತ್ತು ಚೆನ್ನಮ್ಮಾಜಿ ಅವರ ಐಕ್ಯಸ್ಥಳವಾಗಿದೆ. ಇದನ್ನು ಗದ್ದುಗೆ ಎಂತಲೂ ಸಹ ಕರೆಯುತ್ತಾರೆ.
 ಶ್ರೀ ಕ್ಷೇತ್ರ ಕಪ್ಪಡಿಯಲ್ಲಿ  ಕಾವೇರಿ ನದಿಯ ಹರಿಯುವಿಕೆ, ರಾಚಪ್ಪಾಜಿ ಮತ್ತು ಚೆನ್ನಮ್ಮಾಜಿ ಗದ್ದುಗೆ, ಶ್ರೀ ಸಿದ್ದಪ್ಪಾಜಿ ಅವರ ಸರಳ ದೇಗುಲ,  ಮಂಟೇಸ್ವಾಮಿ ಬಸವ ಎಂಬ ಪವಿತ್ರ ಗೂಳಿ, ಹಾಗೂ ಉರಿ ಗದ್ದುಗೆಯನ್ನು ನೋಡಬಹುದು.

ಇಲ್ಲಿ ಪ್ರತಿ ವರ್ಷವೂ ಶಿವರಾತ್ರಿಯಿಂದ ಯುಗಾದಿಯವರೆಗೆ ನಡೆಯುವ ಒಂದು ತಿಂಗಳ ಜಾತ್ರೆಯು ವಿಶೇಷವಾಗಿದೆ.