ಚಾಮಲಾಪುರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಾಮಲಾಪುರ ಮೈಸೂರು ಜಿಲ್ಲೆಯ ಹೆಗ್ಗಡದೇವನ ಕೋಟೆ ತಾಲೂಕಿನಲ್ಲಿ ಇರುವ ಒಂದು ಹಳ್ಳಿ. ಮೈಸೂರು ನಗರದಿಂದ ರಸ್ತೆಯಲ್ಲಿ ಹೋದರೆ ಸುಮಾರು ಮೂವತ್ತು ಕಿಲೋಮೀಟರು.

ಹೆಸರಿನ ಮೂಲ[ಬದಲಾಯಿಸಿ]

ಈ ಊರಿನ ಹೆಸರರಿನ ಮೂಲದ ಬಗ್ಗೆ ಇಲ್ಲಿಯ ಜನರಿಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು "ಎಪಿಗ್ರಾಫಿಯ ಕರ್ನಾಟಕ"ದಲ್ಲಿ ಹುಡುಕಬಹುದು.

ಮಾರ್ಗ[ಬದಲಾಯಿಸಿ]

ಮೈಸೂರಿನ ಹುಣಸೂರು ರಸ್ತೆಯ ಪಕ್ಕದಲ್ಲಿ ಇರುವ ಬೋಗಾದಿ ಕಡೆ ಹೋಗಿ, ಅಲ್ಲಿಯ ಗದ್ದಿಗೆ ರಸ್ತೆಯಲ್ಲೆ ಸುಮಾರು ೨೫ ಕಿಲೋಮೀಟರು ಸಂಚಾರ ಮಾಡಿದರೆ, ನಮಗೆ ಸಿಗುವುದು ಹಾಲನಹಳ್ಳಿ. ಅಲ್ಲಿಂದ ಸ್ವಲ್ಪ ಮುಂದೆ ಹೋಗಿ, ಎಡಕ್ಕೆ ತಿರುಗಿ ಸುಮಾರು ೫ ಕಿಲೋಮೀಟರು ಸಂಛರಿಸಿದರೆ ಚಾಮಲಾಪುರ ಸಿಗುತ್ತದೆ.

ಉಷ್ಣ ವಿದ್ಯುತ್ ಸ್ಥಾವರ[ಬದಲಾಯಿಸಿ]

ಕರ್ನಾಟಕ ಸರ್ಕಾರವು ಈ ಫಲವತ್ತಾದ ಭೂಮಿಯಲ್ಲಿ ಉಷ್ಣ ವಿದ್ಯುತ್ ಸ್ಥಾವರ ನಿರ್ಮಿಸಲು ಮುಂದಾಗಿದೆ. ಇದರಿಂದ ಕರ್ನಾಟಕ ರಾಜ್ಯದಲ್ಲಿ ಇರುವ ವಿದ್ಯುತ್ ಕೊರತೆಯನ್ನು ನೀಗಿಸಬಹುದು ಎಂಬುದು ಸರ್ಕಾರದ ಸಮಜಾಯಿಷಿ. ಆದರೆ ಮೈಸೂರಿನ ನಾಗರೀಕರು, ಚಾಮಲಾಪುರದ ಜನರು, ಪರಿಸರವಾದಿಗಳು, ಮತ್ತು ಸುತ್ತಮುತ್ತಲಿನ ಜನರು ಈ ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಇದರಿಂದ ಸಾವಿರಾರು ರೈತರು ಭೂಮಿ ಕಳೆದುಕೊಳ್ಳುವುದಲ್ಲದೆ, ಸುತ್ತಲಿನ ೫೦ ಕಿ.ಮೀ. ಪರಿಸರ ಹಾಳಾಗುತ್ತದೆ ಎಂಬುದು ಅವರ ವಾದ. ನಾಗರಹೊಳೆ ಮತ್ತು ಕಬಿನಿ ನದಿಗಳು ಸಹ ಸ್ವಲ್ಪ ದೂರದಲ್ಲೆ ಇರುವುದರಿಂದ ಅಲ್ಲಿನ ನೈಸರ್ಗಿಕ ಪರಿಸರಕ್ಕೂ ಹಾನಿಯಾಗಲಿದೆ.