ಸದಸ್ಯ:Satish.sub/ಭಾರತ ಮಾತೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭಾರತ ಮಾತೆಯ ಪ್ರತಿಮೆ

ಭಾರತ ಮಾತೆ (Sanskrit;भारताम्बा, 'अम्बा' ಅಂಬಾ ಎಂದರೆ ತಾಯಿ) ಭಾರತ ಮಾತೆಯನ್ನು ಇಂಗ್ಲೀಷನಲ್ಲಿ ಮದರ್ ಇಂಡಿಯಾ ಎಂದೂ ಕರೆಯುತ್ತಾರೆ. ದೇಶವನ್ನು ಗೌರವಿಸಲು ಭಾರತವನ್ನು ಭಾರತ ಮಾತೆ ಎಂದು ಕರೆಯಲಾಗುತ್ತದೆ. ಆಕೆಯನ್ನು ಸಾಮಾನ್ಯವಾಗಿ ಭಾರತದ ರಾಷ್ಟ್ರ ಧ್ವಜ ಹೊಂದಿರುವ ಕೇಸರಿ ಸೀರೆಯನ್ನು ಧರಿಸಿದ ಮಹಿಳೆಯಂತೆ ಚಿತ್ರಿಸಿಲಾಗುತ್ತದೆ ಹಾಗು ಕೆಲವೊಮ್ಮೆ ಸಿಂಹದ ಜೊತೆಗೂ ಚಿತ್ರಿಸಲಾಗುತ್ತದೆ.

ಪರಿಚಯ ಮತ್ತು ಅರ್ಥ[ಬದಲಾಯಿಸಿ]

ತಮಿಳು ನಿಯತಕಾಲಿಕೆ 'ವಿಜಯ'ದ ೧೯೦೯ ರ ಸಂಚಿಕೆಯ ಮುಖಪುಟವು "ಭಾರತ ಮಾತಾ" (ಭಾರತ ಮಾತೆಯನ್ನು) ತನ್ನ ವೈವಿಧ್ಯಮಯ ಸಂತತಿ ಮತ್ತು " ವಂದೇ ಮಾತರಂ " ಎಂಬ ಕೂಗಿನೊಂದಿಗೆ ತೋರಿಸುತ್ತದೆ.

ಭಾರತ ಮಾತೆಯ ಪರಿಕಲ್ಪನೆಯು ಅಂದರೆ ದೇಶವನ್ನು ವ್ಯಕ್ತಿ ರೂಪದಲ್ಲಿ ಬಿಂಬಿಸುವುದು ೧೯ನೇ ಶತಮಾನದ ಉತ್ತರಾರ್ಧದಲ್ಲಿ, ವಿಶೇಷವಾಗಿ ಬ್ರಿಟಿಷರ ವಿರುದ್ಧದ ೧೮೫೭ರ ಭಾರತೀಯ ದಂಗೆಯ ನಂತರ ಆರಂಭವಾಯಿತು. ಭಾರತ ಮಾತೆಯನ್ನು ಒಂದು ಪರಿಕಲ್ಪನೆಯಾಗಿ ಮೊದಲು ಭಾರತದ ನ‍‍‍ಕ್ಷೆಯಂತೆ ಬಂಕಿಮಚಂದ್ರ ಚಟರ್ಜಿಯವರು ೧೮೮೦ರಲ್ಲಿ ಅವರ 'ಆನಂದ ಮಠ' ಎಂಬ ಪುಸ್ತಕದಲ್ಲಿ ಚಿತ್ರಿಸಿದರು ಮತ್ತು ಅಬನೀಂದ್ರನಾಥ ಟ್ಯಾಗೋರರು ೧೯೦೫ರಲ್ಲಿ ಒಂದು ವರ್ಣಚಿತ್ರದ ಮೂಲಕ ಗ್ರಹಿಸಿದರು. [೧]

ಐತಿಹಾಸಿಕ ದೃಷ್ಟಿಕೋನ[ಬದಲಾಯಿಸಿ]

ಭಾರತ ಮಾತೆಯ ಚಿತ್ರಣವು ೧೯ನೇ ಶತಮಾನದ ಉತ್ತರಾರ್ಧದ ಭಾರತೀಯ ಸ್ವಾತಂತ್ರ್ಯ ಚಳುವಳಿಯೊಂದಿಗೆ ರೂಪಗೊಂಡಿತು. ಕಿರಣ ಚಂದ್ರ ಬ್ಯಾನರ್ಜಿಯವರ ಭಾರತ ಮಾತೆಯ ನಾಟಕವನ್ನು ಮೊದಲು ೧೮೭೩ರಲ್ಲಿ ಪ್ರದರ್ಶಿಸಲಾಯಿತು. ೧೭೭೦ರ ಬಂಗಾಳದ ಕ್ಷಾಮದ ಸಮಯದಲ್ಲಿ ರಚಿಸಲಾದ ಈ ನಾಟಕವು ಓರ್ವ ಮಹಿಳೆ ಮತ್ತು ಆಕೆಯ ಗಂಡ ಕಾಡಿಗೆ ಹೋಗಿ ಬಂಡುಕೋರರನ್ನು ಎದುರಿಸುವದನ್ನು ಚಿತ್ರಿಸುತ್ತದೆ. ಒಬ್ಬ ಅರ್ಚಕರು ಅವರನ್ನು ದೇವಸ್ಥಾನಕ್ಕೆ ಕರೆದೊಯ್ಯುತ್ತಾರೆ. ಅಲ್ಲಿ ಅವರಿಗೆ ಭಾರತ ಮಾತೆಯನ್ನು ತೋರಿಸಲಾಗಿದೆ. ಹೀಗಾಗಿ ಅವರು ಸ್ಫೂರ್ತಿಗೊಂಡು ದಂಗೆಯನ್ನು ಮುನ್ನಡೆಸಿ ಬ್ರಿಟಿಷರ ಸೋಲಿಗೆ ಕಾರಣರಾಗುತ್ತಾರೆ. ೧೮೬೬ರಲ್ಲಿ ಮಾನುಷಿ ಪತ್ರಿಕೆಯಲ್ಲಿಅನಾಮಧೇಯವಾಗಿ ಪ್ರಕಟವಾದ ಒಂದು ಕಥೆಯು ಇದರ ಮೂಲವನ್ನ ಭುದೇಬ ಮುಖ್ಯೋಪಾಧ್ಯಾಯರ ಒಂದು ವಿಡಂಬನಾತ್ಮಕ ಕೃತಿ 'ಉನಬಿಶ್ಮ ಪುರಾಣ' ಅಥವಾ 'ನೈಂಟೀನ್ತ್ ಪುರಾಣ 'ದ ಕಡೆಗೆ ಸೂಚಿಸುತ್ತದೆ. [೨] ಬಂಕಿಂ ಚಂದ್ರ ಚಟ್ಟೋಪಾಧ್ಯಾಯರು ೧೮೮೨ರಲ್ಲಿ ಆನಂದಮಠ ಎಂಬ ಕಾದಂಬರಿಯನ್ನು ಬರೆದು ಅದರಲ್ಲಿ" ವಂದೇ ಮಾತರಂ " [೩] ಸ್ತುತಿಗೀತೆಯ ಪ್ರಯೋಗ ಮಡಿದರು. ಅದು ಶೀಘ್ರದಲ್ಲೇ ಭಾರತದಲ್ಲಿ ಉದಯೋನ್ಮುಖ ಸ್ವಾತಂತ್ರ್ಯ ಚಳುವಳಿಯ ಘೋಷಣೆಯಾಯಿತು. ಬ್ರಿಟಿಷರು ಭಾರತದ ಭೂವೈಜ್ಞಾನಿಕ ಸಮೀಕ್ಷೆಯ ಮೂಲಕ ಭಾರತದ ನಕ್ಷೆಯನ್ನು ರಚಿಸಿದಂತೆ ಭಾರತದ ರಾಷ್ಟ್ರವಾದಿಗಳು ಇದನ್ನು ರಾಷ್ಟ್ರೀಯತೆಯ ಪ್ರತೀಕದಂತೆ ಬೆಳೆಸಿದರು. ೧೯೨೦ರ ದಶಕದಲ್ಲಿ ಇದು ಮಹಾತ್ಮ ಗಾಂಧಿ ಮತ್ತು ಭಗತ್ ಸಿಂಗರ ಚಿತ್ರಗಳನ್ನು ಒಳಗೊಂಡು ರಾಜಕೀಯ ಚಿತ್ರಣವಾಯಿತು. ಈ ಅವಧಿಯಲ್ಲಿ ತಿರಂಗ ಧ್ವಜವನ್ನು ಸೇರಿಸಲು ಆರಂಭಿಸಲಾಯಿತು. ೧೯೩೦ರಲ್ಲಿ ಈ ಚಿತ್ರ ಧಾರ್ಮಿಕ ಆಚರಣೆಯನ್ನೂ ಪ್ರವೇಶಿಸಿತು. ಭಾರತ ಮಾತೆಯ ದೇವಸ್ಥಾನವನ್ನು ಶಿವಪ್ರಶಾದ ಗುಪ್ತ ಅವರು ೧೯೩೬ರಲ್ಲಿ ಬನಾರಸನಲ್ಲಿ ನಿರ್ಮಿಸಿದರು ಮತ್ತು ಇದನ್ನು ಮಹಾತ್ಮಾ ಗಾಂಧಿ ಉದ್ಘಾಟಿಸಿದರು. ಈ ದೇವಸ್ಥಾನವು ಯಾವುದೇ ಪ್ರತಿಮೆಯನ್ನು ಹೊಂದಿಲ್ಲ ಆದರೆ ಭಾರತದ ನಕ್ಷೆಯನ್ನು ಅಮೃತಶಿಲೆಯಲ್ಲಿ ರೂಪಿಸಲಾಗಿದೆ. [೨]

ಕನ್ಯಾಕುಮಾರಿಯಲ್ಲಿ ಭಾರತ ಮಾತೆಯ ಪ್ರತಿಮೆ

ಬಿಪಿನ್ ಚಂದ್ರ ಪಾಲ್ ಅವರು ಹಿಂದೂ ತಾತ್ವಿಕ ಸಂಪ್ರದಾಯ ಮತ್ತು ಭಕ್ತಿ ಪದ್ಧತಿಗಳ ಜೊತೆಗೆ ಆದರ್ಶವಾದಿ ಪದಗಳಲ್ಲಿ ಅದರ ಅರ್ಥವನ್ನು ವಿವರಿಸಿದರು. ಇದು ಪುರಾತನ ಆಧ್ಯಾತ್ಮಿಕ ಸಾರವನ್ನು ಪ್ರತಿನಿಧಿಸುತ್ತದೆ, ಬ್ರಹ್ಮಾಂಡದ ಅತೀಂದ್ರಿಯ ಕಲ್ಪನೆ ಹಾಗೂ ಸಾರ್ವತ್ರಿಕ ಹಿಂದೂ ಧರ್ಮ ಮತ್ತು ರಾಷ್ಟ್ರೀಯತೆಯನ್ನು ವ್ಯಕ್ತಪಡಿಸುತ್ತದೆ.

ಅಬನೀಂದ್ರನಾಥ ಟ್ಯಾಗೋರರು ಭಾರತ ಮಾತೆಯನ್ನುಕೇಸರಿ ಬಣ್ಣದ ಸೀರೆ ಧರಿಸಿದ, ಕೈಯಲ್ಲಿ ಹಸ್ತಪ್ರತಿ, ಜಪಮಾಲೆ ಮತ್ತು ಬಿಳಿ ಬಟ್ಟೆಯನ್ನು ಹಿಡಿದ ಹಿಂದೂ ದೇವತೆಯಂತೆ ಚಿತ್ರಿಸಿದ್ದಾರೆ. ಭಾರತಮಾತೆಯ ಚಿತ್ರವು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಭಾರತೀಯರಲ್ಲಿ ರಾಷ್ಟ್ರೀಯತೆಯ ಭಾವನೆಯನ್ನು ಮೂಡಿಸುವ ಪ್ರತಿಮೆಯಾಗಿತ್ತು. ಈ ವರ್ಣಚಿತ್ರದ ಅಭಿಮಾನಿಯಾದ ಸಹೋದರಿ ನಿವೇದಿತಾ ಅವರು ಈ ಚಿತ್ರವು ಪರಿಷ್ಕೃತ ಮತ್ತು ಕಾಲ್ಪನಿಕವಾಗಿದೆ ಎಂದು ಅಭಿಪ್ರಾಯಪಟ್ಟರು. ಭಾರತಮಾತೆ ಹಸಿರು ಭೂಮಿಯ ಮೇಲೆ ನಿಂತಿದ್ದಾಳೆ, ಅವಳ ಹಿಂದೆ ನೀಲಿ ಆಕಾಶವಿದೆ ಮತ್ತು ನಾಲ್ಕು ತೋಳುಗಳನ್ನು ಹೊಂದಿದ್ದಾಳೆ ಎಂದರೆ ಅವಳು ದೈವಿಕ ಶಕ್ತಿ. ಬಿಳಿ ಪ್ರಭಾವಳಿ ಮತ್ತು ಅವಳ ತೀಕ್ಷ್ಣ ಕಣ್ಣುಗಳು; ಮತ್ತು ತಾಯ್ನಾಡಿನ ಶಿಕ್ಷ-ದೀಕ್ಷಾ-ಅನ್ನ-ಬಾಸ್ತ್ರವನ್ನು ಅವಳು ತನ್ನ ಮಕ್ಕಳಿಗೆ ಉಡುಗೊರೆಯಾಗಿ ನೀಡುತ್ತಾಳೆ ಎಂದು ಬಣ್ಣಿಸಿದ್ದಾರೆ.

ವಾರಾಣಸಿಯ ಭಾರತ ಮಾತಾ ಮಂದಿರದಲ್ಲಿ ಅಮೃತಶಿಲೆಯಿಂದ ಭಾರತ ಮಾತೆಯಂತೆ ಕೆತ್ತಲಾದ ಭಾರತದ ಪರಿಹಾರ ನಕ್ಷೆ

ಭಾರತೀಯ ಸ್ವಾತಂತ್ರ ಹೋರಾಟಗಾರ ಸುಬ್ರಮಣಿಯನ್ ಭಾರತಿ ಭಾರತ ಮಾತೆಯನ್ನು ಗಂಗೆಯ ನಾಡಾಗಿ ಕಂಡರು. ಅವರು ಭಾರತ ಮಾತೆಯನ್ನು ಆದಿ ಪರಾಶಕ್ತಿ ಎಂದು ಗುರುತಿಸಿದರು. [೪] ಅವರು ತಮ್ಮ ಗುರುಗಳಾದ ಸಹೋದರಿ ನಿವೇದಿತಾ ಅವರ ಭೇಟಿಯ ಸಮಯದಲ್ಲಿ ಭಾರತ ಮಾತೆಯ ದರ್ಶನ ಪಡೆದರು ಎಂದೂ ಅವರು ಹೇಳಿದ್ದಾರೆ. 

ಮಹತ್ವ[ಬದಲಾಯಿಸಿ]

ಶೌರ್ಯ ಸ್ಮಾರಕ ಭೋಪಾಲ್ ನಲ್ಲಿ ಭಾರತ ಮಾತೆಯ ಪ್ರತಿಮೆ

'ಎವೆರಿಡೇ ನ್ಯಾಷನಲಿಸಂ: ವುಮೆನ್ ಆಫ್ ದಿ ಹಿಂದೂ ರೈಟ್ ಇನ್ ಇಂಡಿಯಾ' ಎಂಬ ಪುಸ್ತಕದಲ್ಲಿ ಕಲ್ಯಾಣಿ ದೇವಕಿ ಮೆನನ್ ಅವರು " ಈ ರೀತಿ ದೇಶವನ್ನು ಭಾರತ ಮಾತೆಯಾಗಿ ಬಿಂಬಿಸುವುದರಿಂದ ಹಿಂದೂ ರಾಷ್ಟ್ರೀಯತೆಯ ರಾಜಕೀಯದ ಮೇಲೆ ಆಳವಾದ ಪ್ರಭಾವ ಬೀರುತ್ತದೆ" ಎಂದು ವಾದಿಸುತ್ತ, ಭಾರತವನ್ನು ಹಿಂದೂ ದೇವತೆಯಾಗಿ ಚಿತ್ರಿಸುವುದನ್ನು ಸೂಚಿಸುತ್ತದೆ ಎಂದಿದ್ದಾರೆ. ಈ ರೀತಿ ಹಿಂದೂ ದೇವತೆಯಂತೆ ಚಿತ್ರಿಸುವುದು ಕೇವಲ ದೇಶಭಕ್ತಿಯಲ್ಲದೇ ರಾಷ್ಟ್ರವನ್ನು ರಕ್ಷಿಸುವ ರಾಷ್ಟ್ರೀಯ ಹೋರಾಟದಲ್ಲಿ ಭಾಗವಹಿಸುವುದು ಎಲ್ಲಾ ಹಿಂದೂಗಳ ಧಾರ್ಮಿಕ ಕರ್ತವ್ಯವಾಗಿದೆ ಎಂದು ಸೂಚಿಸುತ್ತದೆ. ಈ ನಿಲುವು ಧಾರ್ಮಿಕ ಮುಸ್ಲಿಮರಲ್ಲಿ ವಿವಾದವನ್ನು ಉಂಟುಮಾಡಿತು. ಅವರ ದೇವರ ಏಕತೆಯಲ್ಲಿನ ನಂಬಿಕೆಯು ಅವರನ್ನು ಅಲ್ಲಾಹನನ್ನು ಹೊರತುಪಡಿಸಿ ಯಾವುದೇ ದೇವರಿಗೆ ದೈವತ್ವವನ್ನು ನಿಯೋಜಿಸದಂತೆ ಮಾಡುತ್ತದೆ. [೫] [೬] [೭] [೮] ಆದಾಗ್ಯೂ ಮುಸ್ಲಿಂ ಬಹುಸಂಖ್ಯಾತ ಬಾಂಗ್ಲಾದೇಶದ ಮುಸ್ಲಿಮರು ವಿಶೇಷವಾಗಿ ಬಾಂಗ್ಲಾದೇಶಿ ರಾಷ್ಟ್ರೀಯವಾದಿಗಳು ಬಾಂಗ್ಲಾದೇಶವನ್ನು ಬಂಗಮಾತಾ ("ತಾಯಿ ಬಾಂಗ್ಲಾದೇಶ") ಎಂದು ಗೌರವಿಸುತ್ತಾರೆ, ಆದರೂ ಇದು ದೇವತೆಯಲ್ಲ ಆದರೆ ಮಾತೃಭೂಮಿಯ ಅಮೂರ್ತ ಉಲ್ಲೇಖವಾಗಿದೆ. [೯] [೧೦] [೧೧] 

ಭಾರತ ಮಾತಾ - ಕೇಸರಿ ಬಣ್ಣದ ದೇವತೆ ರೂಪದಲ್ಲಿ. ಅಬನೀಂದ್ರನಾಥ ಟ್ಯಾಗೋರ್ ಅವರ ವರ್ಣಚಿತ್ರ

'ಭಾರತ ಮಾತಾ ಕಿ ಜೈ' ("ಭಾರತ ಮಾತೆಗೆ ಜಯ") ಎಂಬ ಧ್ಯೇಯವಾಕ್ಯವನ್ನು ಭಾರತೀಯ ಸೇನೆ ಬಳಸುತ್ತದೆ . [೧೨] ಆದಾಗ್ಯೂ ಸಮಕಾಲೀನ ಆಡುಮಾತಿನ ಬಳಕೆಯಲ್ಲಿ ಈ ಅಭಿವ್ಯಕ್ತಿ "ಭಾರತಮಾತೆ ಜೀವಂತವಾಗಿರಲಿ" ಅಥವಾ "ಭಾರತಮಾತೆಗೆ ನಮಸ್ಕಾರ" ಎಂಬುದಕ್ಕೆ ಹೋಲುತ್ತದೆ. (ಜೈ ಹಿಂದ್ ಕೂಡ ನೋಡಿ) ಮುಸ್ಲಿಂ-ಬಹುಸಂಖ್ಯಾತ ಇಂಡೋನೇಷ್ಯಾದ ಹಲವಾರು ರಾಷ್ಟ್ರೀಯ ಸಶಸ್ತ್ರ ಘಟಕಗಳು ರಾಷ್ಟ್ರೀಯ ಮೂಲದ ಸಶಸ್ತ್ರ ಪಡೆಗಳು, [೧೩] ಸೇನೆ, ನೌಕಾಪಡೆ ಸೇರಿದಂತೆ ಸಂಸ್ಕೃತ ಭಾಷೆಯ ಧ್ಯೇಯವಾಕ್ಯಗಳನ್ನು ಬಳಸುತ್ತವೆ. ಉದಾಹರಣೆಗೆ ಇಂಡೋನೇಷಿಯನ್ ವಾಯುಪಡೆಯ ಧ್ಯೇಯ 'ಸ್ವಾಭೂನ ಪಕ್ಷ ' ("ತಾಯ್ನಾಡಿನ ರೆಕ್ಕೆ" ) ಮತ್ತು ಇಂಡೋನೇಷಿಯನ್ ನ್ಯಾಷನಲ್ ಪೋಲಿಸ್‌ನ ಧ್ಯೇಯವಾಕ್ಯವು 'ರಾಷ್ಟ್ರ ಸೇವಾಕೊತ್ತಮ' ("ರಾಷ್ಟ್ರದ ಮುಖ್ಯ ಸೇವಕರು"). [೧೪]

ಭಾರತ ಮಾತೆಯ ದೇವಾಲಯಗಳು[ಬದಲಾಯಿಸಿ]

ವಾರಣಾಸಿ[ಬದಲಾಯಿಸಿ]

ಭಾರತ ಮಾತೆಯ ದೇವಸ್ಥಾನವು ವಾರಣಾಸಿಯ ಮಹಾತ್ಮ ಗಾಂಧಿ ಕಾಶಿ ವಿದ್ಯಾಪೀಠದ ಆವರಣದಲ್ಲಿದೆ. ಈ ದೇವಾಲಯವು ಅಮೃತಶಿಲೆಯ ಭಾರತ ಮಾತೆಯ ವಿಗ್ರಹವನ್ನು ಹೊಂದಿದ್ದು ಭಾರತದ ಅಮೃತಶಿಲೆಯ ಪರಿಹಾರ ನಕ್ಷೆಯನ್ನು ಹೊಂದಿದೆ. [೧೫] [೧೬]

ರಾಷ್ಟ್ರೀಯವಾದಿಗಳಾದ ಶಿವಪ್ರಸಾದ್ ಗುಪ್ತಾ ಮತ್ತು ದುರ್ಗಾ ಪ್ರಸಾದ ಖತ್ರಿಯವರ ಉಡುಗೊರೆಯಾದ ಈ ದೇವಸ್ಥಾನವನ್ನು ಮಹಾತ್ಮ ಗಾಂಧಿಯವರು ೧೯೩೩೬ರಲ್ಲಿ ಉದ್ಘಾಟಿಸಿದರು. ಆಗ ಗಾಂಧಿಯವರು ಈ ರೀತಿ ಹೇಳಿದ್ದರು: "ಹರಿಜನರು ಸೇರಿದಂತೆ ಎಲ್ಲಾ ಧರ್ಮ, ಜಾತಿಗಳು ಮತ್ತು ಪಂಥಗಳ ಜನರಿಗೆ ವಿಶ್ವ ವೇದಿಕೆಯಾಗಿ ಕಾರ್ಯನಿರ್ವಹಿಸುವ ಈ ದೇವಸ್ಥಾನವು ದೇಶದಲ್ಲಿ ಧಾರ್ಮಿಕ ಐಕ್ಯತೆ, ಶಾಂತಿ ಮತ್ತು ಪ್ರೀತಿಯನ್ನು ಉತ್ತೇಜಿಸಲಿದೆ ಎಂದು ನಾನು ಭಾವಿಸುತ್ತೇನೆ." [೧೭]

Bharat Mata at Jatiya Shaktipeeth, Kolkata
ಕೋಲ್ಕತ್ತಾದ ರಾಷ್ಟ್ರೀಯ ಶಕ್ತಿಪೀಠದಲ್ಲಿ ಭಾರತ ಮಾತೆ

ಹರಿದ್ವಾರ[ಬದಲಾಯಿಸಿ]

ಈ ದೇವಸ್ಥಾನವನ್ನು ಹರಿದ್ವಾರದ ಗಂಗಾ ನದಿ ತೀರದಲ್ಲಿ ಸ್ವಾಮಿ ಸತ್ಯಮಿತ್ರಾನಂದ ಗಿರಿ ಅವರು ಸ್ಥಾಪಿಸಿದರು. ಇದು ೮ ಮಹಡಿಗಳನ್ನು ಹೊಂದಿದ್ದು ೧೮೦ ಅಡಿ ಎತ್ತರವಿದೆ. [೧೮] ಇದನ್ನು ೧೯೮೩ ರಲ್ಲಿ ಇಂದಿರಾ ಗಾಂಧಿ[೧೮]ಯವರು ಉದ್ಘಾಟಿಸಿದರು. ಅಲ್ಲಿಯ ಮಹಡಿಗಳನ್ನು ಪೌರಾಣಿಕ ದಂತಕಥೆಗಳು, ಧಾರ್ಮಿಕ ದೇವತೆಗಳು, ಸ್ವಾತಂತ್ರ್ಯ ಹೋರಾಟಗಾರರು ಮತ್ತು ನಾಯಕರಿಗೆ ಸಮರ್ಪಿಸಲಾಗಿದೆ. [೧೮]

ಕೋಲ್ಕತಾ[ಬದಲಾಯಿಸಿ]

ಈ ದೇವಸ್ಥಾನವು ಜೆಸ್ಸೋರ್ ರಸ್ತೆಯ ಮೈಕೆಲ್ ನಗರದಲ್ಲಿದೆ. ಇದು ಕೋಲ್ಕತಾ ವಿಮಾನ ನಿಲ್ದಾಣದಿಂದ ಕೇವಲ ೨ ಕಿಮೀ ದೂರದಲ್ಲಿದೆ. ಇಲ್ಲಿ ಭಾರತ ಮಾತೆಯನ್ನು (ಮಾತೃ ಭೂಮಿ) ದುರ್ಗಾ ಮಾತೆಯ ಚಿತ್ರದಂತೆ ಚಿತ್ರಿಸಲಾಗಿದೆ. ಇದನ್ನು ಅಕ್ಟೋಬರ್ ೧೯, ೨೦೧೫ರಂದು (ಆ ವರ್ಷ ದುರ್ಗಾ ಪೂಜೆಯ ಮಹಾಶಷ್ಠಿ ದಿನ) ಪಶ್ಚಿಮ ಬಂಗಾಳದ ರಾಜ್ಯಪಾಲರಾದ ಶ್ರೀ ಕೇಶರಿ ನಾಥ್ ತ್ರಿಪಾಠಿ ಅವರು ಉದ್ಘಾಟಿಸಿದರು. ನಮ್ಮ ಮಾತೃ ಭೂಮಿಯ ಸ್ತುತಿಗೀತೆಯಾದ "ವಂದೇ ಮಾತರಂ" ನ ೧೪೦ನೇ ವಾರ್ಷಿಕೋತ್ಸವದ ನಿಮಿತ್ತ ಭಾರತೀಯ ಆಧ್ಯಾತ್ಮಿಕ ಸೊಸೈಟಿಯು ಈ ದೇವಸ್ಥಾನ ನಿರ್ಮಿಸುವ ಉಪಕ್ರಮವನ್ನು ಕೈಗೊಂಡಿತ್ತು. ಈ ದೇವಸ್ಥಾನವನ್ನು 'ರಾಷ್ಟ್ರೀಯ ಶಕ್ತಿಪೀಠ' ಎಂದು ಹೆಸರಿಸಲಾಗಿದೆ.

ಕುರುಕ್ಷೇತ್ರ[ಬದಲಾಯಿಸಿ]

ಜುಲೈ ೨೦೧೯ರಲ್ಲಿ ಹರಿಯಾಣದ ಮುಖ್ಯಮಂತ್ರಿ ಮನೋಹರ ಲಾಲ ಖಟ್ಟರ ಅವರು ಭಾರತ ಮಾತೆಯ ಮುಂದಿನ ದೇವಾಲಯವನ್ನು ನಿರ್ಮಿಸಲು ೫ ಎಕರೆ ಭೂಮಿಯನ್ನು ನೀಡಿದ್ದಾರೆ.  ಈ ಭೂಮಿಯು ಮಹಾಭಾರತ ಕಾಲದ ಜ್ಯೋತಿಸರ ತೀರ್ಥದ ಸಮೀಪದಲ್ಲಿದೆ.

ಸಹ ನೋಡಿ[ಬದಲಾಯಿಸಿ]

  • ಭಾರತ ಮಾತಾ ಮಂದಿರ
  • ಶೌರ್ಯ ಸ್ಮಾರಕ
  • ಬಂಗಾ ಮಾತಾ
  • ಶ್ರೀಲಂಕಾ ಮಾತಾ
  • ತೆಲುಗು ಥಲ್ಲಿ
  • ಸಿಯಾಮ್ ದೇವಾಧಿರಾಜ್
  • ವಂದೇ ಮಾತರಂ
  • ಮದರ್ ಇಂಡಿಯಾ (ಪತ್ರಿಕೆ)

ಉಲ್ಲೇಖಗಳು[ಬದಲಾಯಿಸಿ]

 

  1. "Far from being eternal, Bharat Mata is only a little more than 100 years old".
  2. ೨.೦ ೨.೧ Roche, Elizabeth (17 March 2016). "The origins of Bharat Mata". livemint.com/. Retrieved 22 March 2017.
  3. "A Mother's worship: Why some Muslims find it difficult to say 'Bharat Mata ki jai'". November 2017.
  4. "Archived copy". Archived from the original on 2016-03-10. Retrieved 2016-03-09.{{cite web}}: CS1 maint: archived copy as title (link)
  5. What’s wrong in saying Bharat Mata Ki Jai: Congress, Indian Express.
  6. "Patriotism in India: Oh mother: A nationalist slogan sends sectarian sparks". The Economist. 9 April 2016. Retrieved 9 April 2016.
  7. The Sound of Dog-Whistling: 'Vande Mataram' itself is not communal., DailyO, 2019.
  8. "Thinking Allowed: Feeling seditious or patriotic?". Deccan Chronicle (Opinion). 21 March 2016. Retrieved 30 October 2016.
  9. Dasgupta, Tapati (1993). Social Thought of Rabindranath Tagore: A Historical Analysis. Abhinav Publications. ISBN 9788170173021.
  10. Paranjape, Makarand (2014). Science, Spirituality and the Modernization of India. Anthem Press. ISBN 9781843317760.
  11. "Symbols of Water and Woman on Selected Examples of Modern Bengali Literature in the Context of Mythological Tradition". Archived from the original on 12 December 2013. Retrieved 12 December 2013.
  12. Vinay Kumar (2 October 2012). "It is Jai Hind for Army personnel". The Hindu. Chennai, India. Retrieved 8 October 2012.
  13. "TNI Doctrine". www.tni.mil.id. Retrieved 28 May 2018.
  14. "Arti Lambang Polri (Meaning of the national police symbol)". www.polri.go.id. Archived from the original on 13 May 2017. Retrieved 28 May 2018.
  15. ಉಲ್ಲೇಖ ದೋಷ: Invalid <ref> tag; no text was provided for refs named BHARAT-MATA-TEMPLE
  16. "Bharat Mata Temple - Bharat Mata Temple Varanasi - Bharat Mata Mandir". Archived from the original on 2011-02-11.
  17. Eck, Diana L (27 March 2012), India: A Sacred Geography, Potter/TenSpeed/Harmony, pp. 100–, ISBN 978-0-385-53191-7
  18. ೧೮.೦ ೧೮.೧ ೧೮.೨ Bharat Mata Temple, mapsofIndia.com

[[ವರ್ಗ:ಭಾರತೀಯ ಸ್ವಾತಂತ್ರ್ಯ ಚಳುವಳಿ]]