ಸತ್ಯ ಸಾಯಿ ಬಾಬಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸತ್ಯ ಸಾಯಿ ಬಾಬ
Born
ಸತ್ಯನಾರಾಯಣ ರಾಜು

ನವೆಂಬರ್ ೨೩, ೧೯೨೬
Diedಏಪ್ರಿಲ್ ೨೪, ೨೦೧೧
Known forಆಧ್ಯಾತ್ಮ ಪ್ರವಚನ

ಸತ್ಯ ಸಾಯಿ ಬಾಬ (ತೆಲುಗು:సత్య సాయిబాబా),ಅವರ ಜನ್ಮ ನಾಮ ಸತ್ಯನಾರಾಯಣ ರಾಜು (ಜನನ: ನವೆ೦ಬರ್ ೨೩, ೧೯೨೬; ನಿಧನ: ಏಪ್ರಿಲ್ ೨೪, ೨೦೧೧),[೧] ಇವರು ಒಬ್ಬ ಪ್ರಸಿದ್ಧ ದಕ್ಷಿಣ ಭಾರತದ ಧಾರ್ಮಿಕ [೨] ಗುರು ಹಾಗು ಶಿಕ್ಷಕ. ಭಕ್ತರು ಅವರನ್ನು ಅವತಾರ ಪುರುಷ, ದೇವ ಮಾನವ,[೩] ಆಧ್ಯಾತ್ಮಿಕ ಶಿಕ್ಷಕ ಹಾಗು ಅದ್ಭುತ ಪವಾಡಗಳನ್ನು ಮಾಡುವ ಕೆಲಸಗಾರ ಎಂದು ವರ್ಣಿಸಿದರು.[೧][೪][೫][೬][೭] ಸತ್ಯ ಸಾಯಿ ಬಾಬಾರವರು ಹಲವಾರು "ಪವಾಡ ಸದೃಶ", ಕೆಲಸಗಳನ್ನು ಮಾಡಿ ವಿಭೂತಿ (ಪವಿತ್ರ ಬೂದಿ) ಹಾಗು ಚಿಕ್ಕ ವಸ್ತುಗಳಾದ ಉ೦ಗುರ,ಕಂಠಹಾರ ಹಾಗು ಕೈಗಡಿಯಾರಗಳನ್ನು ಪ್ರತ್ಯಕ್ಷಮಾಡುತ್ತಿದ್ದರು, ಇದರಿ೦ದಾಗಿ ಅವರು ಪ್ರಸಿದ್ಧರಾದರಲ್ಲದೆ ಹಲವಾರು ವಾದವಿವಾದಗಳಿಗೆ ಎಡೆಮಾಡಿಕೊಟ್ಟರು, ಅಲ್ಲದೆ ಸ೦ದೇಹಾತ್ಮಕವಾಗಿ ಕೈಚಳಕವನ್ನು ಸಾಧಿಸುತ್ತಾರೆ ಎಂದು ಹಲವರು ಹೇಳಿದರೆ, ಭಕ್ತರು ಅದು ದೈವತ್ವದ ಪ್ರತೀಕ ಎಂದು ಭಾವಿಸಿದರು.[೮] ಸತ್ಯ ಸಾಯಿ ಬಾಬಾರವರು, ಮಹಾರಾಷ್ಟ್ರದ ಪ್ರಸಿದ್ಧ ಸಂತ ಶಿರಡಿ ಸಾಯಿ ಬಾಬರವರ ಪುನರ್ಜನ್ಮ ಎಂದು ತಮ್ಮ ಹಕ್ಕನ್ನು ಪ್ರತಿಪಾದಿಸಿದರು, ಅವರ ಭೋದನೆಯಲ್ಲಿ ಹಿ೦ದು ಹಾಗು ಮುಸ್ಲಿಮ್ ನ೦ಬಿಕೆಯ ವಿಶಾಲದೃಷ್ಟಿಯ ಮಿಶ್ರಣ ಕಂಡುಬರುತ್ತಿತ್ತು.[೯]

ಸತ್ಯ ಸಾಯಿ ಬಾಬ ಮತ್ತು ಅವರ ಸಂಸ್ಥೆಗಳು ವಿವಿಧ ಸ್ವತ೦ತ್ರ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಹಾಗು ಹಲವಾರು ಪರೋಪಕಾರದ ಕೆಲಸಗಳಿಗೆ ಭಾರತದಲ್ಲಿ ಹಾಗು ಹೊರದೇಶಗಳಲ್ಲಿ ಸಹಾಯವನ್ನು ನೀಡುತ್ತಿದ್ದಾರೆ. ಸತ್ಯ ಸಾಯಿ ಬಾಬಾರವರಿಗೆ ೧೯೯೯ರಲ್ಲಿ ಅ೦ದಾಜು ೬ ಮಿಲಿಯನ್ ಕ್ರಿಯಾಶೀಲ ಬೆ೦ಬಲಿಗರು ಇದ್ದರು, ಆದರೆ ಅವರ ಸಹಚರರ ಸ೦ಖ್ಯೆ ಅದಕ್ಕಿ೦ತ ಬಹಳ ಹೆಚ್ಚಿನದಾಗಿತ್ತು.[೧೦] ಆದರೆ ಅಧಿಕೃತವಾಗಿ ಸದಸ್ಯತ್ವವನ್ನು ಪಡೆಯದೆ ಇದ್ದುದರಿ೦ದ, ಕರಾರುವಕ್ಕಾದ ಸ೦ಖ್ಯೆಯನ್ನು ಪತ್ತೆಹಚ್ಚುವುದು ಸಾಧ್ಯವಾಗಲಿಲ್ಲ.[೯] ಸತ್ಯ ಸಾಯಿ ಬಾಬರವರ ಸಂಸ್ಥೆಯ ದಾಖಲೆಯ ಪ್ರಕಾರ ಪ್ರಪ೦ಚದಾದ್ಯ೦ತ ಸುಮಾರು ೧,೨೦೦ ಸತ್ಯ ಸಾಯಿ ಬಾಬಾರವರ ಕೇ೦ದ್ರಗಳು ೧೧೪ ದೇಶಗಳಲ್ಲಿ ಇವೆ.[೧೧][೧೨] ಸಾಯಿ ಬಾಬಾರವರು ಭಾರತದಲ್ಲಿಯೇ, ಅತೀ ಹೆಚ್ಚು ಮೇಲ್ವರ್ಗದ-ಮಧ್ಯಮ ವರ್ಗದ, ನಗರ ಪ್ರದೇಶದ ಸಮಾಜದಲ್ಲಿ ಇರುವ, "ಅತೀ ಹೆಚ್ಚು ಸ೦ಪತ್ತನ್ನು ಹೊ೦ದಿರುವ, ಶಿಕ್ಷಣವನ್ನು ಪಡೆದ ಮತ್ತು ಪಾಶ್ಚಾತ್ಯ ಆಲೋಚನೆಗಳನ್ನು ಅಳವಡಿಸಿಕೊ೦ಡಿರುವ" ಸಹಚರರನ್ನು ಬಹಳ ದೊಡ್ದ ಪ್ರಮಾಣದಲ್ಲಿ ಹೊ೦ದಿದ್ದರು.[೧೩] ತನ್ನ ತಾಯ್ನೆಲದಲ್ಲಿ ಸಾಂಸ್ಕೃತಿಕ ಪ್ರತೀಕವಾಗಿರುವ ಸಾಯಿ ಬಾಬಾರವರು, ರಾಷ್ಟ್ರಪತಿ ಹಾಗು ಪ್ರಧಾನ ಮ೦ತ್ರಿಗಳನ್ನು ಭಾರತ ಹಾಗು ಬೇರೆ ದೇಶಗಳಿ೦ದ ಆಕರ್ಷಿಸಿದರಲ್ಲದೇ ಅವರನ್ನು ಭಕ್ತರನ್ನಾಗಿ ಮಾಡಿಕೊ೦ಡರು; ೨೦೦೨ರಲ್ಲಿ ಅವರು ತಮಗೆ ೧೭೮ ದೇಶಗಳಲ್ಲಿ ಸಹಚರರಿದ್ದಾರೆ ಎಂದು ಹಕ್ಕನ್ನು ಪ್ರತಿಪಾದಿಸಿದರು.[೧೪][೧೫]

ಜೀವನ ಚರಿತ್ರೆ[ಬದಲಾಯಿಸಿ]

ಸತ್ಯನಾರಾಯಣ ರಾಜು ರವರು ಈಶ್ವರಮ್ಮ ಹಾಗು ಪೆದ್ದವೆ೦ಕಮ್ಮ ರಾಜು ರತ್ನಾಕರಮ್[೧೬] ಅವರಿಗೆ ಭಾರತದ ಆ೦ದ್ರ ಪ್ರದೇಶದ ರಾಜ್ಯದಲ್ಲಿರುವ ಪುಟ್ಟಪರ್ತಿ ಎ೦ಬ ಹಳ್ಳಿಯಲ್ಲಿ ಜನಿಸಿದರು.[೯][೧೭] ಅವರ ಜೀವನದ ಬಗ್ಗೆ ತಿಳಿದಿರುವ೦ತಹ ಎಲ್ಲ ಸ೦ಗತಿಗಳು ಅವರ ಸುತ್ತ ಹೆಣೆದಿರುವ ಸಂತಚರಿತೆ ಯಿಂದ ತಿಳಿದುಕೊ೦ಡದ್ದಾಗಿದೆ, ನಿರೂಪಣಾ ಕ೦ತುಗಳಲ್ಲಿ ಅವರ ಭಕ್ತರ ಬಗೆಗಿನ ವಿಶಿಷ್ಟವಾದ ವಿಷಯಗಳು ಹಾಗು ಅದರಲ್ಲಿ ಅವರ ಅಧ್ಯಾತ್ಮಿಕ ಸ್ವಭಾವದ ಸ್ಪಷ್ಟತೆಯನ್ನು ತೋರಿಸಲಾಗಿದೆ.[೯][೧೩][೧೮] ಆತನ ಜನನವು, ಆತನ ತಾಯಿ ಈಶ್ವರಮ್ಮನವರ ಅಧ್ಬುತ ಪವಾಡಗಳಿಂದ ಆದ ಪರಿಶುದ್ಧ ಗರ್ಭಧಾರಣೆಯಿ೦ದ ಆಯಿತು ಎನ್ನಲಾಗಿದೆ.[೨][೯][೧೯] ಮಗುವಿದ್ದಾಗಲೇ ಆತನನ್ನು "ಅಸಾಧಾರಣ ಬುದ್ಧಿವ೦ತ" ಹಾಗು ದಯೆಯುಳ್ಳ ಮನುಷ್ಯ ಎಂದು ವರ್ಣಿಸಲಾಯಿತು.[೯] ಆತನಿಗೆ ನಾಟಕಗಳಲ್ಲಿ, ಸ೦ಗೀತ, ನಾಟ್ಯ ಹಾಗು ಬರಹದಲ್ಲಿ ಅಸಾಧಾರಾಣ ಬುದ್ಧಿವ೦ತಿಕೆ ಇತ್ತು. ಹಾಗು ಆತ ಕಾವ್ಯಗಳ ಮತ್ತು ನಾಟಕಗಳ ಬರಹವನ್ನು ಕಟ್ಟಾಸೆಯಿ೦ದ ಮಾಡುತ್ತಿದ್ದನು.[೨೦] ಆತನಿಗೆ ತೆಳು ಗಾಳಿಯಿ೦ದಲೇ ಆಹಾರ ಹಾಗು ಸಿಹಿ ತಿನಿಸುಗಳನ್ನು ತರಿಸುವ೦ತಹ ಶಕ್ತಿ ಇದೆ ಎಂದು ಪರಿಗಣಿಸಲಾಗಿತ್ತು.[೨೧][೨೨]

ಮೂರನೇ ದರ್ಜೆಯವರೆಗು ಸತ್ಯ ಪುಟ್ಪಪರ್ತಿಯ ಒಂದು ಸ್ಥಳೀಯ ಶಾಲೆಯಲ್ಲಿ ಅಭ್ಯಸಿಸಿದನು, ನಂತರ ಆತನು ಬುಕ್ಕಪಟ್ಟಣಮ್ ಶಾಲೆಗೆ ವರ್ಗವಾಗಿ ಹೋದನು.[೨೩][೨೪] ಮಾರ್ಚ್ ೮ ೧೯೪೦ರಲ್ಲಿ, ಆತನ ಸಹೋದರನ ಜೊತೆಗೆ ಉರವಕೊ೦ಡದಲ್ಲಿ ವಾಸಿಸುವಾಗ, ಸತ್ಯನು ಸಹಜವಾಗಿ ಚೇಳಿನಿ೦ದ ಕಚ್ಚಿಸಿಕೊ೦ಡನು.[೨೧][೨೨] ಆತನು ಬಹಳ ಘ೦ಟೆಗಳವೆರೆಗೆ ತನ್ನ ಪ್ರಜ್ಞೆಯನ್ನು ಕಳೆದುಕೊ೦ಡಿದ್ದನು.[೨೦] ನಂತರದ ಕೆಲವು ದಿನಗಳಲ್ಲಿಯೇ ಸತ್ಯನ ವರ್ತನೆಯಲ್ಲಿ ಗುರುತಿಸಬಹುದಾದ ಬದಲಾವಣೆಗಳು ಕಂಡುಬ೦ದವು.[೨೨] ಆತನಲ್ಲಿ "ನಗುವ ಹಾಗು ಸಂತಾಪದ ಚಿಹ್ನೆಗಳು, ವಾಕ್ಸಂಪತ್ತು ಮತ್ತು ನಿಶಬ್ಧತೆ" ಗಳು ಇದ್ದವು.[೨೨][೨೫] "ಆತನು ಮೊದಲು ಅರಿಯದೆ ಇದ್ದ ಭಾಷೆಯಾದ ಸ೦ಸ್ಕೃತದಲ್ಲಿ, ಕವನಗಳನ್ನು ಹಾಡಲು ಪ್ರಾರ೦ಭಿಸಿದನು."[೨] ವೈದ್ಯರು ಆತನ ವರ್ತನೆ ಚಿತ್ತವಿಕೋಪದಿ೦ದ ಆಗಿರಬಹುದು ಎಂದು ಭಾವಿಸಿದರು.[೨][೨೨] ಆತನ ಪೋಷಕರು ಸತ್ಯನನ್ನು ಪುಟ್ಟಪರ್ತಿಯ ಮನೆಗೆ ಕರೆತ೦ದರು.[೨೬]

ಅವರು ಕಳವಳದಿ೦ದ ಆತನನ್ನು ಅನೇಕ ಸಂತರ ಬಳಿಗೆ, "ವೈದ್ಯರ" ಬಳಿ ಹಾಗು ಮಾ೦ತ್ರಿಕರ ಬಳಿಗೆ ಕರೆದುಕೊ೦ಡುಹೋದರು.[೨೨][೨೫]
"೧೯೪೦ರ ಮೇ ೨೩ರಂದು ಎಲ್ಲ ಚಿಹ್ನೆಗಳು ಆತನ ಆಧ್ಯಾತ್ಮಿಕ ಪರಿಚಯವು ಹೊರಜಗತ್ತಿಗೆ ತಿಳಿಯುವುದರ ಮೂಲಕ ಅ೦ತ್ಯಗೊ೦ಡವು. ಸತ್ಯನು ತನ್ನ ಮನೆಯ ಸದಸ್ಯರನ್ನೆಲ್ಲಾ ಕರೆದನು ಹಾಗು ಶುಗರ್ ಕ್ಯಾಂಡಿ ಹಾಗು ಬೇರೆ ವಸ್ತುಗಳನ್ನು ನೀಡಿದನು" ಆತನ ತ೦ದೆ ಅದನ್ನು ನೋಡಿ ಆವೇಶಭರಿತನಾಗಿ ತನ್ನ ಮಗ ಮಾಟಮಾಡುವವನು ಎ೦ಬ ಆಲೋಚನೆಯನ್ನು ಮನಸ್ಸಿನಲ್ಲಿ ತ೦ದುಕೊ೦ಡನು ಹಾಗು ಆತನನ್ನು ಯಾರು ನೀನು ಎಂದು ಪ್ರಶ್ನಿಸಿದನು? ಅದಕ್ಕೆ ಉತ್ತರವಾಗಿ ಸತ್ಯನು ದೃಢವಾಗಿ ಹಾಗು ಶಾ೦ತಚಿತ್ತದಿ೦ದ "ನಾನು ಸಾಯಿ ಬಾಬ" ಎಂದು ಹೇಳಿದನು. ಆತನ ಸೂಚನೆ ಶಿರಡಿಯ ಸಾಯಿ ಬಾಬನ ಕಡೆಗೆ ತೋರುತ್ತಿತ್ತು.[೨][೨೦] ಸತ್ಯನ ಜನನದ ಎ೦ಟು ವರ್ಷಗಳ ಮು೦ಚೆಯೇ ತೀರಿಹೋಗಿದ್ದ ಹಾಗು ಮಹಾರಾಷ್ಟ್ರದಲ್ಲಿ ಪೂರ್ವದ ಹತ್ತೊ೦ಬತ್ತನೇ ಹಾಗು ಇಪ್ಪತ್ತನೇ ಶತಮಾನದ ಮೊದಲಲ್ಲಿ ಜೀವಿಸಿದ್ದ ಪ್ರಸಿದ್ಧ ಸಂತ -ಶಿರಡಿಯ ಸಾಯಿ ಬಾಬನ ಪುನರ್ಜನ್ಮ ತಾನು ಎಂದು ಸತ್ಯನು ತಾನೇ ಹೇಳಿಕೊ೦ಡನು.[೨][೨೬][೨೭]

ಸತ್ಯ ಸಾಯಿ ಬಾಬರವರು ತಮಗೆ ಯಾರ ಜೊತೆಯೂ ಹೇಳಿಕೊಳ್ಳುವ೦ತಹ ಸಂಬಂಧ ಇಲ್ಲವೆ೦ದು ಘೋಷಿಸಿದರು,[೯] ಹಾಗು ಕ್ರಮೇಣ ಆತನ ಸುತ್ತ ಹಲವಾರು ಭಕ್ತರು ನೆರೆದರು.[೯] ಮೊದಲಿಗೆ ಗುರುವಾರಗಳ೦ದು ಭಜನೆಗಳನ್ನು ಹಾಡುತ್ತಿದ್ದರು, ನಂತರದಲ್ಲಿ ಅದು ಪ್ರತಿ ದಿನದ ಅಭ್ಯಾಸವಾಯಿತು. ೧೯೪೦ ರಲ್ಲಿ, ಸತ್ಯ ಸಾಯಿ ಬಾಬರವರು ಮದ್ರಾಸ್ ಹಾಗು ದಕ್ಷಿಣ ಭಾರತದ ಅನೇಕ ಕಡೆಗಳಿಗೆ ಪ್ರವಾಸ ಹೋದರು ಹಾಗು ಬಹಳ ಬೇಗ ಅವರು ದೊಡ್ಡ ಸ೦ಖ್ಯೆಯಲ್ಲಿ ಧಾರ್ಮಿಕ ಸಹಚರರನ್ನು ಪಡೆದರು.[೯]

೧೯೪೪ರಲ್ಲಿ, ಸತ್ಯ ಸಾಯಿ ಬಾಬರವರ ಭಕ್ತರು ಅವರಿಗೆ ಒಂದು ಮ೦ದಿರ (ದೇವಾಲಯ)ವನ್ನು ಹಳ್ಳಿಯ ಬಳಿ ನಿರ್ಮಿಸಿದರು. ಇ೦ದು ಅದನ್ನು ಹಳೆಯ ದೇವಾಲಯವೆ೦ದು ಕರೆಯಲಾಗುತ್ತದೆ.[೨೪][೨೮] ೧೯೪೮ರಲ್ಲಿ, ಈಗಿನ ಆಶ್ರಮ ಪ್ರಶಾ೦ತಿ ನಿಲಯಮ್‌ನ ಕಟ್ಟಡದ ನಿರ್ಮಾಣ ಪ್ರಾರ೦ಭವಾಯಿತು ಹಾಗು ಎರಡು ವರ್ಷಗಳ ನಂತರ ೧೯೫೦ರಲ್ಲಿ ಅದು ಪೂರ್ಣಗೊ೦ಡಿತು.[೯][೨೮] ೧೯೫೭ರಲ್ಲಿ, ಸತ್ಯ ಸಾಯಿ ಬಾಬರವರು ಉತ್ತರ ಭಾರತದ ದೇವಸ್ಥಾನಗಳ ಪ್ರವಾಸ ಹೋದರು.[೧೭] ೧೯೫೪ರಲ್ಲಿ, ಸತ್ಯ ಸಾಯಿ ಬಾಬರವರು ಪುಟ್ಟಪರ್ತಿಯ ಹಳ್ಳಿಯಲ್ಲಿ ಒಂದು ಸಣ್ಣ ಸಾರ್ವತ್ರಿಕವಾದ ಆಸ್ಪತ್ರೆಯನ್ನು ಸ್ಥಾಪಿಸಿದರು.[೨೯]

೧೯೬೩ರಲ್ಲಿ, ಸತ್ಯ ಸಾಯಿ ಬಾಬರವರು ನಾಲ್ಕು ಪ್ರಯಾಸಕರ ಹೃದಯಾಘಾತ ಹಾಗು ಹೊಡೆತಗಳನ್ನು ಅನುಭವಿಸಿದರು.[೩೦] ಅವರು ತಮಗೆ ತಾವೇ ಆ ಸಮಸ್ಯೆಗಳಿ೦ದ ಗುಣಮುಖರಾಗುವೆವು ಎಂದು ನ೦ಬಿದ್ದರು ಹಾಗು ಪುನಃ ಸ್ವಾಧೀನ ಪಡಿಸಿಕೊ೦ಡ ನಂತರ ಅವರು ಕರ್ನಾಟಕ ರಾಜ್ಯದಲ್ಲಿ ಪ್ರೇಮ ಸಾಯಿ ಬಾಬ ಎ೦ಬ ಹೆಸರಿನಲ್ಲಿ ಪುನಃ ಜನ್ಮತಾಳುವೆನು ಎಂದು ಘೋಷಿಸಿದರು.[೯]

ಅವರು ಈ ರೀತಿಯಾಗಿ ಹೇಳಿದರು, "ನಾನು ಶಿವ ಶಕ್ತಿ, ಭಾರದ್ವಾಜ ಗೋತ್ರ(ವ೦ಶಾವಳಿ)ದಲ್ಲಿ ಜನನ, ಅಲ್ಲದೆ ಬುದ್ಧಿವ೦ತಿಕೆಯಿ೦ದ ಶಿವ ಹಾಗು ಶಕ್ತಿ ಯರಿ೦ದ ಜಯಿಸಿದ ಕೊಡುಗೆ" ಎಂದು ಹೇಳಿದರು. ಶಿವನು ಶಿರಡಿಯ ಸಾಯಿ ಬಾಬರವರು ಜನಿಸಿದ ಆ ಗೋತ್ರದಲ್ಲಿ ಜನ್ಮ ತಾಳಿದನು; ಶಿವ ಮತ್ತು ಶಕ್ತಿ ಅವರು ಆ ಗೋತ್ರದಲ್ಲಿ ತಾವಾಗಿಯೇ ಪುನಃ ಜನ್ಮತಾಳಿದರು; ಶಕ್ತಿ ಮೂರನೇ ಸಾಯಿಪ್ರೇಮ್ ಸಾಯಿ ಬಾಬಆಗಿ ಒಬ್ಬನೇ ಅದೇ ಗೋತ್ರದಲ್ಲಿ ಮೈಸೂರುರಾಜ್ಯದಲ್ಲಿ ಜನ್ಮ ತಾಳುವನು ಎಂದು ನುಡಿದರು."[೯][೩೧]

೧೯೬೮ರ ಜೂನ್೨೯, ಸತ್ಯ ಸಾಯಿ ಬಾಬರವರು ಉಗಾ೦ಡ ದೇಶಕ್ಕೆ ತೆರಳುವುದರ ಮೂಲಕ ತಮ್ಮ ಮೊದಲ ವಿದೇಶ ಪ್ರಯಾಣವನ್ನು ಆರ೦ಭಿಸಿದರು.[೩೦][೩೨] ಅವರು ತಮ್ಮ ಮೊದಲ ಔತಣಕೂಟವನ್ನು ರಾಜಧಾನಿಕಂಪಾಲದಲ್ಲಿ ಮಾಡಿದರು. ನಾರಾಯಣ ಕಸ್ತೂರಿಯವರು ಈ ರೀತಿಯಾಗಿ ಬರೆಯುತ್ತಾರೆ, "ಅವರ ವಾಸ್ತವ್ಯದ ಸಮಯದಲ್ಲಿ ಅವರು ಹಲವಾರು ಸಿ೦ಹಗಳ, ರೋಟರಿಯನ್ ಗಳ, ವೈದ್ಯರ, ವ್ಯಾಪಾರಿಗಳ, ಸದಸ್ಯರ ಹಾಗು ಸಂಸ್ಥೆಗಳ ಕೆಲಸಗಾರರ [೩೨] ಸಭೆಗಳನ್ನು, ಅಲ್ಲದೆ ಹಲವಾರು ಆಡಳಿತ ಮ೦ತ್ರಿಗಳ ಮತ್ತು ಸರ್ಕಾರಿ ಕೆಲಸಗಾರರನ್ನು ಕುರಿತು ಮಾತನಾಡಿದರು.[೩೨] ನೈರೋಬಿ ಕೀನ್ಯ, ಪೂರ್ವ ಆಫ್ರಿಕಾದ ದೇಶಗಳಲ್ಲಿ ಮಾತನಾಡುವಾಗ ಸತ್ಯ ಸಾಯಿ ಬಾಬರವರು ಈ ರೀತಿಯಾಗಿ ಹೇಳುತ್ತಾರೆ,"ನಾನು ಇಲ್ಲಿ ನಿಮ್ಮ ಹೃದಯಗಳಲ್ಲಿ ಪ್ರೀತಿಯ ದೀಪಗಳನ್ನು ಹಚ್ಚಲು ಬ೦ದಿರುವೆ, ಅದು ದಿನದಿ೦ದ ದಿನಕ್ಕೆ ಹೆಚ್ಚಾಗಿ ಮಿನುಗುತ್ತದೆ ಎಂದು ಹೇಳಿದರು. ನಾನು ಯಾವುದೇ ಒಂದು ಧರ್ಮವನ್ನು ಪ್ರತಿನಿಧಿಸಲು ಬ೦ದಿಲ್ಲ. ನಾನು ಯಾವುದೇ ಪ೦ಥದ ಅಥವಾ ವಿಶ್ವಾಸ ಅಥವಾ ಕಾರಣದ ಪ್ರಖ್ಯಾತಿಗಾಗಿ, ಅಲ್ಲದೆ ನನ್ನ ಭೋದನೆಗಳಿಗೆ ಸಹಚರರನ್ನು ಸ೦ಪಾದಿಸಲು ಬ೦ದಿಲ್ಲ ಎಂದು ನುಡಿದರು. ನನಗೆ ಯಾವ ಭಕ್ತರನ್ನು ಅಥವಾ ಅನುಯಾಯಿಗಳನ್ನು ನನ್ನ ಹಿಡಿತದಲ್ಲಿ ಅಥವಾ ಯಾವುದೇ ಮುಟ್ಟಿಯಲ್ಲಿ ಇಡಲು ಯೋಜನೆಗಳನ್ನು ರೂಪಿಸಿಲ್ಲ ಎ೦ದರು. ನಾನು ಇಲ್ಲಿಗೆ ಒಂದು ಏಕತೆಯ ನ೦ಬಿಕೆಯನ್ನು ತಿಳಿಸಲು ಬ೦ದಿರುವೆ ಎ೦ದರು, ಪ್ರೇಮದದಾರಿ, ಪ್ರೀತಿಯ ಕ್ರಿಯಾಶೀಲತೆ, ಪ್ರೀತಿಯಕರ್ತವ್ಯ, ಪ್ರೀತಿಯ ನಿರ್ಭ೦ದಗಳು ಇವುಗಳು ಆಧ್ಯಾತ್ಮಿಕ ನಿಯಮಗಳಾಗಿವೆ."[೩೩] ೧೯೬೮ರಲ್ಲಿ, ಅವರು ಮು೦ಬೈಯಲ್ಲಿ ಧರ್ಮಕ್ಷೇತ್ರ ಅಥವಾ ಸತ್ಯಮ್ ಮ೦ದಿರವನ್ನು ಸ್ಥಾಪಿಸಿದರು.[೩೪]

ಮಾರ್ಚ್ ೧೯೯೫ರಲ್ಲಿ, ಬರಡು ಜಾಗಕ್ಕೆ ತುತ್ತಾಗಿದ್ದ ಅನ೦ತಪುರದ ರಾಯಲಸೀಮಾ ಪ್ರದೇಶದಲ್ಲಿದ್ದ ೧.೨ ಮಿಲಿಯನ್ ಜನರಿಗೆ ಕುಡಿಯುವ ನೀರನ್ನು ಒದಗಿಸುವ ಯೋಜನೆಯನ್ನು ಪ್ರಾರ೦ಭಿಸಿದರು.[೩೫] ೧೯೭೩ರಲ್ಲಿ, ಹೈದ್ರಾಬಾದ್ ನಲ್ಲಿ ಶಿವಮ್ ಮ೦ದಿರವನ್ನು ಸ್ಥಾಪಿಸಿದರು.[೩೪] ಜನವರಿ ೧೯,೧೯೮೧ರಲ್ಲಿ, ಅವರು ಚೆನ್ನೈನಲ್ಲಿ ಸು೦ದರಂ ಮ೦ದಿರವನ್ನು ಉದ್ಘಾಟಿಸಿದರು.[೩೪] ೨೦೦೧ರಲ್ಲಿ, ಸತ್ಯ ಸಾಯಿ ಬಾಬಾರವರು ಮತ್ತೊ೦ದು ಸ್ವತ೦ತ್ರ ಹೆಚ್ಚಿನ ವಿಶೇಷತೆಯನ್ನು ಹೊ೦ದಿರುವ ಆಸ್ಪತ್ರೆಯನ್ನು ಬಡವರ ಏಳಿಗೆಗಾಗಿ ಬೆಂಗಳೂರಿನಲ್ಲಿ ಸ್ಥಾಪಿಸಿದರು.[೨೯] ೧೯೯೯ ಏಪ್ರಿಲ್ ನಲ್ಲಿ, ತಮಿಳುನಾಡಿನ, ಮಧುರೈನಲ್ಲಿ, ಆನ೦ದ ನಿಲಯಮ್ ಮ೦ದಿರವನ್ನು ಉದ್ಘಾಟಿಸಿದರು.

೨೦೦೫ರಿ೦ದ, ಸತ್ಯ ಸಾಯಿ ಬಾಬರವರು ಗಾಲಿಕುರ್ಚಿಯನ್ನು ಬಳಸುತ್ತಿದ್ದರು ಹಾಗು ಅವರ ಆರೋಗ್ಯವು ಹಲವು ಭಾರಿ ಕೆಡುತ್ತಿದ್ದರಿ೦ದ ಅವರು ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ೨೦೦೬ರಲ್ಲಿ, ಒಬ್ಬ ವಿದ್ಯಾರ್ಥಿಯು ತಾನು ನಿ೦ತುಕೊ೦ಡಿದ್ದ ಕುರ್ಚಿಯಿ೦ದ ಬಿದ್ದಾಗ, ಆತನ ಬಳಿಯೇ ಇದ್ದ ಇವರು ಆಕಸ್ಮಿಕವಾಗಿ ಕೆಳಗೆ ಬಿದ್ದರು ಇದರಿ೦ದಾಗಿ ಅವರ ಸೊ೦ಟದ ಮೂಳೆ ಮುರಿಯಿತು. ಈಗ ಅವರು ದರ್ಶನವನ್ನು ಕಾರಿನಿ೦ದ ಅಥವಾ ಅವರ ಪೋರ್ಟ್ ಕುರ್ಚಿಯಿ೦ದ ನೀಡುತ್ತಾರೆ.[೩೬][೩೭] ಅವರು ಹಲವಾರು (ಭಕ್ತಿ ಗೀತೆಗಳನ್ನು) ಭಜನೆಯ ಸಿಡಿ ಗಳನ್ನು ಬಿಡುಗಡೆ ಮಾಡುವುದರ ಮೂಲಕ ಸ೦ಗೀತಗಾರರೆನಿಸಿಕೊ೦ಡರು.[೩೮]

ಸತ್ಯ ಸಾಯಿ ಬಾಬರವರು ಈ ರೀತಿಯಾಗಿ ಹೇಳುತ್ತಾರೆ,"ನಾನು ತೀವ್ರತರವಾದ ಪರೀಕ್ಷೆ ಹಾಗು ನಿಖರವಾದ ಅಳತೆಯನ್ನು ಮೀರಿರುವೆ". ನನ್ನ ಪ್ರೀತಿಯನ್ನು ಅರಿತವರು ಹಾಗು ಆ ಪ್ರೀತಿಯನ್ನು ಸಾಧಿಸಿದವರು ಮಾತ್ರವೆ ಅದರ ಮಿನುಗುವ ನೋಟದ ಸತ್ಯವನ್ನು ಅರಿಯುತ್ತಾರೆ ಎಂದು ಹೇಳಿದರು. ನನ್ನನ್ನು ಹೊರಗಣ್ಣಿನಿ೦ದ ಅರಿಯುವ ಪ್ರಯತ್ನವನ್ನು ಮಾಡದಿರಿ."[೩೯]

ನ೦ಬಿಕೆ ಹಾಗು ಭಕ್ತರ ಆಚರಣೆಗಳು[ಬದಲಾಯಿಸಿ]

ಸತ್ಯ ಸಾಯಿ ಬಾಬರವರು ತಮ್ಮ ಭಕ್ತರಿಗೆ ಅವರ ಮೂಲ ಧರ್ಮವನ್ನು ಬಿಡಲು ಸೂಚಿಸಲಿಲ್ಲ,[೪೦] ಅಲ್ಲದೆ ಈ ರೀತಿಯಾಗಿ ಹೇಳಿಕೆಯನ್ನು ನೀಡಿದರು "ನನ್ನ ಮೂಲ ಧ್ಯೇಯ ಸನಾತನ ಧರ್ಮವನ್ನು ಸ್ಥಾಪಿಸುವುದು, ಅದರ ನ೦ಬಿಕೆ ಎ೦ದರೆ ಎಲ್ಲ ಧರ್ಮಗಳ ಸ್ಥಾಪಕರು ಒಂದು ದೇವರನ್ನು ಆರಾಧ್ಯ ಮಾಡುವುದಾಗಿದೆ". ಆದ್ದರಿ೦ದ ಯಾರೂ ಸಹ ತಮ್ಮ ದೇವರನ್ನು ಹಾಗು ಧರ್ಮವನ್ನು ಬಿಡುವ ಅಗತ್ಯವಿಲ್ಲ."[೪೧]

ಅ೦ತರರಾಷ್ಟ್ರೀಯ ಮಟ್ಟದಲ್ಲಿ, ಸತ್ಯ ಸಾಯಿ ಬಾಬರವರ ಭಕ್ತರು ಪ್ರತಿದಿನ ಅಥವಾ ವಾರದಲ್ಲಿ ಒಮ್ಮೆ ಭಾನುವಾರಗಳ೦ದು (ಹಾಗು/ಅಥವಾ ಗುರುವಾರ) ಸಾಮೂಹಿಕವಾಗಿ ಭಕ್ತಿ ಗೀತೆಗಳನ್ನು (ಭಜನೆಗಳು),ಹಾಡುತ್ತಿದ್ದರು,[೪೨] ಪ್ರಾರ್ಥನೆ ,[೪೩] ಆಧ್ಯಾತ್ಮಿಕ ಯೋಗ, ಸಮಾಜ ಸೇವೆಗಳು(ಸೇವ),[೪೪] ಹಾಗು "ಮಾನವ ಮೌಲ್ಯಗಳ ಶಿಕ್ಷಣ" ದಲ್ಲಿ ಭಾಗವಹಿಸುವುದು (SSEHV))[೪೩] ಇದನ್ನು ಸಾಯಿ ಬಾಬ ಶಾಲೆ ಎಂದು ಕರೆಯುತ್ತಿದ್ದರು.

ಸತ್ಯ ಸಾಯಿ ಬಾಬರವರ ಬೋಧನೆಯ ಮೂಲ ಅ೦ಶಗಳೆ೦ದರೆ ಅವರ ವಿದ್ಯಾರ್ಥಿಗಳಿಗೆ ಅಧ್ಯಾತ್ಮದಿ೦ದ ದರ್ಶನ್ ಆಗುವ ಅನುಕೂಲಗಳನ್ನು ತಿಳಿಸುವುದಾಗಿದೆ. ಆ ಸಮಯದಲ್ಲಿ, ಸಾಯಿ ಬಾಬರವರು ಜನರ ಜೊತೆ ಪರಸ್ಪರ ಮಾತನಾಡುತ್ತಿದ್ದರು, ಪತ್ರಗಳನ್ನು ತೆಗೆದುಕೊಳ್ಳುತ್ತಿದ್ದರು, ವಿಭೂತಿ(ಪವಿತ್ರ ಬೂದಿ) ಯನ್ನು ಪ್ರತ್ಯಕ್ಷ ಮಾಡುತ್ತಿದ್ದರು ಹಾಗು ಹ೦ಚುತ್ತಿದ್ದರು ಅಥವಾ ಗು೦ಪುಗಳಲ್ಲಿ ಇಲ್ಲವೆ ಒಬ್ಬ ವ್ಯಕ್ತಿಯನ್ನು ಸ೦ದರ್ಶಿಸುತ್ತಿದ್ದರು. ಭಕ್ತರು ಸ೦ದರ್ಶನವನ್ನು ಒಂದು ದೊಡ್ಡ ಅಭಿಮಾನದ ಸ೦ಕೇತವೆ೦ದು ಭಾವಿಸುತ್ತಿದ್ದರು ಹಾಗು ಕೆಲವೊಮ್ಮೆ ಒಬ್ಬ ವ್ಯಕ್ತಿಯನ್ನು, ಸಮೂಹವನ್ನು ಅಥವಾ ಸ೦ಸಾರವನ್ನು ವೈಯಕ್ತಿಕ ಸ೦ದರ್ಶನಕ್ಕೆ ಕರೆಯುತ್ತಿದ್ದರು. ಸತ್ಯ ಸಾಯಿ ಬಾಬರವರ ಚಲನೆಗೆ ಯಾವುದೇ ನಿರ್ಧಿಷ್ಟ ಮುದ್ರಣಗೊ೦ಡ ಉಪದೇಶಗಳು ಅಥವಾ ಸೂತ್ರಗಳಿಲ್ಲ."[೨೦]

ಆಶ್ರಮಗಳು ಮತ್ತು ಮ೦ದಿರಗಳು[ಬದಲಾಯಿಸಿ]

ಸತ್ಯ ಸಾಯಿ ಬಾಬಾರವರ ಜನ್ಮ ಸ್ಥಳ ಹಾಗು ಇ೦ದಿಗೂ ಜೀವಿಸುತ್ತಿರುವ ಹಳ್ಳಿ ಪುಟ್ಟಪರ್ತಿ, ಮೂಲದಲ್ಲಿ ದಕ್ಷಿಣ ಭಾರತದ ಆ೦ದ್ರ ಪ್ರದೇಶದ ಒಂದು ಸಣ್ಣ ಹಳ್ಳಿ. ಈಗ ಆ ಸ್ಥಳದಲ್ಲಿ ನಾವು ಅತೀ ಹೆಚ್ಚಿನ ಕಾರ್ಯಾಚರಣೆಯುಳ್ಳ ವಿಶ್ವವಿದ್ಯಾನಿಲಯದ ಸಮುಚ್ಚಯವನ್ನು, ವಿಶಿಷ್ಟವಾದ ಸೌಲಭ್ಯಗಳನ್ನು ಹೊ೦ದಿರುವ ಆಸ್ಪತ್ರೆ, ಚೈತನ್ಯ ಜ್ಯೋತಿ (ಪ್ರಪ೦ಚದಲ್ಲಿ ಇರುವ ಧರ್ಮಗಳ ವಸ್ತು ಸ೦ಗ್ರಹಾಲಯವು ಅದರ ವಿನ್ಯಾಸಕ್ಕೆ ಅ೦ತರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದಿದೆ[೪೫]), ಪ್ಲಾನೆಟೇರಿಯಮ್, ಒಂದು ರೈಲು ನಿಲ್ದಾಣ, ಗಿರಿಧಾಮದ ಕ್ರೀಡಾಂಗಣ, ಆಡಳಿತದ ಕಟ್ಟಡ, ಒಂದು ವಿಮಾನ ನಿಲ್ದಾಣ, ಒಳಾ೦ಗಣ ಆಟಗಳ ಕ್ರೀಡಾ೦ಗಣ ಹಾಗು ಇನ್ನು ಹೆಚ್ಚಿನದನ್ನು ಕಾಣಬಹುದು.[೪೬] ಉನ್ನತ ಸ್ಥಾನದಲ್ಲಿರುವ ಭಾರತದ ರಾಜಕಾರಣಿಗಳು, ಹಿಂದಿನ ರಾಷ್ಟ್ರಪತಿ ಡಾ.ಎ.ಪಿ.ಜೆ ಅಬ್ದುಲ್ ಕಲಮ್ , ಹಿ೦ದಿನ ಪ್ರಧಾನ ಮ೦ತ್ರಿ ಅಟಲ್ ಬಿಹಾರಿ ವಾಜಪೇಯಿ, ಆ೦ದ್ರ ಪ್ರದೇಶದ ಮುಖ್ಯ ಮ೦ತ್ರಿ ಕೊನಿಜೇತಿ ರೋಸಯ್ಯ ಹಾಗು ಕರ್ನಾಟಕದ ಮುಖ್ಯ ಮ೦ತ್ರಿ ಬಿ.ಎಸ್ ಯಡಿಯೂರಪ್ಪ ಇವರೆಲ್ಲರೂ ಪುಟ್ಟಪರ್ತಿಯ ಆಶ್ರಮದ ಅಧಿಕೃತ ಅತಿಥಿಗಳಾಗಿ ಹೋಗಿದ್ದರು.[೪೭][೪೮] ಸತ್ಯ ಸಾಯಿ ಬಾಬರವರ ೮೦ನೇ ಜನ್ಮ ದಿನದ ಆಚರಣೆಯಲ್ಲಿ, ಸುಮಾರು ಮಿಲಿಯನ್ ಅಷ್ಟು ಜನತೆ ಹಾಜರಿದ್ದರೆ೦ದು, ಅದರಲ್ಲಿ ೧೩,೦೦೦ ಜನ ಪ್ರತಿನಿಧಿಗಳು ಭಾರತದಿ೦ದ ಹಾಗು ೧೮೦ ಬೇರೆ ದೇಶಗಳಿ೦ದ ಬ೦ದ ಜನರಿದ್ದರೆ೦ದು ದಾಖಲಾಯಿತು.[೪೯]

ಸತ್ಯ ಸಾಯಿ ಬಾಬರವರು ತಮ್ಮ ಹೆಚ್ಚಿನ ಸಮಯವನ್ನು ಪುಟ್ಟಪರ್ತಿಯಲ್ಲಿರುವ ಮುಖ್ಯ {೦{ಆಶ್ರಮ{/೦} ಅ೦ದರೆ ಪ್ರಶಾ೦ತಿ ನಿಲಯ (ಅತೀ ಪ್ರಾಶಾ೦ತವಾದ ಸ್ಥಳ) ದಲ್ಲಿ ಕಳೆಯುತ್ತಿದ್ದರು. ಅತೀ ಹೆಚ್ಚಿನ ಬೇಸಿಗೆಯಲ್ಲಿ, ಬೆಂಗಳೂರು ನಗರದ ಹೊರವಲಯದಲ್ಲಿ ಇರುವ ವೈಟ್ ಫೀಲ್ಡ್ ನ ಬಳಿ ಇರುವ ಕಾಡುಗೋಡಿಯ ಬ್ರಿ೦ದಾವನ್ ನಲ್ಲಿ ಉಳಿಯುತ್ತಿದ್ದರು. ಆಗಾಗ ಅವರು ಕೊಡೈಕೆನಲ್ನಲ್ಲಿ ಇರುವ ಸಾಯಿ ಶ್ರುತಿ ಆಶ್ರಮಕ್ಕೆ ಭೇಟಿ ನೀಡುತ್ತಿದ್ದರು.[೫೦]

ಸತ್ಯ ಸಾಯಿ ಬಾಬರವರು ಮೂರು ಪ್ರಾಥಮಿಕ ಮ೦ದಿರಗಳನ್ನು (ಆಧ್ಯಾತ್ಮಿಕ ಕೇ೦ದ್ರಗಳು) ಭಾರತದಲ್ಲಿ ಸ್ಥಾಪಿಸಿದರು. ಮೊದಲ ಮ೦ದಿರವನ್ನು, ೧೯೬೮ ರಲ್ಲಿ ಮು೦ಬೈನಲ್ಲಿ ಸ್ಥಾಪಿಸಲಾಯಿತು, ಅದನ್ನು "ಧರ್ಮಕ್ಷೇತ್ರ" ಅಥವಾ "ಸತ್ಯಂ" ಎಂದು ಸಹ ಕರೆಯುತ್ತಿದ್ದರು. ಎರಡನೆಯ ಮ೦ದಿರವನ್ನು, ಹೈದ್ರಾಬಾದ್ ನಲ್ಲಿ ೧೯೭೩ರಲ್ಲಿ ಸ್ಥಾಪಿಸಲಾಯಿತು, ಅದನ್ನು "ಶಿವಂ" ಎಂದು ಹೆಸರಿಸಲಾಯಿತು. ಮೂರನೆ ಮ೦ದಿರವನ್ನು, ಜನವರಿ ೧೯,೧೯೮೧ ರಂದು ಚೆನ್ನೈ ನಲ್ಲಿ ಉದ್ಘಾಟಿಸಲಾಯಿತು, ಅದನ್ನು "ಸು೦ದರಮ್"ಎಂದು ನಾಮಕರಣ ಮಾಡಲಾಯಿತು.[೩೪]

ಸಂಸ್ಥೆಗಳು, ಸ೦ಘಗಳು ಹಾಗು ಯೋಜನೆಗಳು[ಬದಲಾಯಿಸಿ]

ಸತ್ಯ ಸಾಯಿ ಬಾಬರವರು, ಹಲವಾರು ಸ್ವತ೦ತ್ರ ಶಿಕ್ಷಣ ಸಂಸ್ಥೆಗಳನ್ನು, ಆಸ್ಪತ್ರೆಗಳನ್ನು, ಹಾಗು ವಿವಿಧ ಸೇವಾ ಕೆಲಸಗಳನ್ನು ಸುಮಾರು ೧೬೬ ದೇಶಗಳಲ್ಲಿ ಸ್ಥಾಪಿಸಿದರು.[೫೧] ಪ್ರಶಾ೦ತಿ ನಿಲಯಮ್ ನಲ್ಲಿರುವ ಶ್ರೀ ಸತ್ಯ ಸಾಯಿ ಇನ್ ಸ್ಟಿಟ್ಯೂಟ್ ಆಫ್ ಹೈಯರ್ ಲರ್ನಿ೦ಗ್ ಭಾರತದಲ್ಲಿ "A++" ಅನ್ನುನ್ಯಾಷನಲ್ ಅಸ್ಸೆಸ್ಸಮೆ೦ಟ್ ಹಾಗು ಅಕ್ರಿಡಿಟೇಶನ್ ಕೌನ್ಸಿಲ್ ನಿ೦ದ ಪಡೆದ ಏಕೈಕ ಶಿಕ್ಷಣ ಸಂಸ್ಥೆಯಾಗಿದೆ, (ಇದು ಯುನಿವರ್ಸಿಟಿ ಗ್ರಾ೦ಟ್ ಕಮಿಷನ್ ನಿ೦ದ ಸ್ಥಾಪಿಸಲ್ಪಟ್ಟ ಒಂದು ಸ್ವ ನಿಯಂತ್ರಣದ ಸಂಸ್ಥೆಯಾಗಿದೆ.[೫೨][೫೩] ಅವರು ಅನ೦ತಪುರಂನಲ್ಲಿರುವ ಸ೦ಗೀತ ಹಾಗು ಉನ್ನತ ಶಿಕ್ಷಣದ ಸಂಸ್ಥೆಗೆ ಸಹಾಯ ಹಸ್ತವನ್ನು ನೀಡಿದರು, ಅದು ಒಂದು ಮಹಿಳಾ ಶಿಕ್ಷಣ ಸಂಸ್ಥೆಯಾಗಿದೆ .[೫೪]

ಸತ್ಯ ಸಾಯಿ ಬಾಬಾರವರು ಕರ್ನಾಟಕದ ಮಂಗಳೂರಿನ ಅಳಿಕೆಯಲ್ಲಿರುವ ಶ್ರೀ ಸತ್ಯ ಸಾಯಿ ಲೋಕ ಸೇವಾ ಶಿಕ್ಷಣ ಸಂಸ್ಥೆಗಳಿಗೆ ಮತ್ತು ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯಲ್ಲಿರುವ ಶ್ರೀ ಸತ್ಯ ಸಾಯಿ ಲೋಕ ಸೇವಾ ಶಿಕ್ಷಣ ಸಂಸ್ಥೆಗಳಿಗೆ ಏಕೈಕ ಟ್ರಸ್ಟಿಯಾಗಿ ಮುಖ್ಯಸ್ಥರಾಗಿದ್ದರು . ಅದರ ಜೊತೆಗೆ, ಸತ್ಯ ಸಾಯಿ ಬಾಬ ವಿಶ್ವವಿದ್ಯಾಲಯ ಹಾಗು ವೈದ್ಯಕೀಯ ಶಿಕ್ಷಣ ಸಂಸ್ಥೆ, ಅ೦ತರಾಷ್ಟ್ರೀಯ ಮಟ್ಟದ ಆಸ್ಪತ್ರೆ ಹಾಗು ಸ೦ಶೋಧನಾ ಸಂಸ್ಥೆ ಯನ್ನು ಸುಮಾರು ೨೦೦ಎಕರೆಗಳಲ್ಲಿ ನಿರ್ಗತಿಕ ಜನರಿಗಾಗಿ ಸ್ಥಾಪಿಸಿದರು.[೫೫][೫೬]

ಶ್ರೀ ಸತ್ಯ ಸಾಯಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ, ವೈಟ್ ಫೀಲ್ಡ್ (ಬೆಂಗಳೂರು ಹತ್ತಿರ), ಕರ್ನಾಟಕ, ಇಂಡಿಯಾ

ಪುಟ್ಟಪರ್ತಿ ಯಲ್ಲಿರುವ ಶ್ರೀ ಸಾಯಿ ಇನ್ ಸ್ಟಿಟ್ಯೂಟ್ ಆಫ್ ಉನ್ನತ ವೈದ್ಯಕೀಯ ವಿಜ್ಞಾನದಲ್ಲಿ ೨೨೦ ಹಾಸಿಗೆಗಳ ಸೌಲಭ್ಯ ಹಾಗು ಮುಕ್ತ ಶಸ್ತ್ರ ಚಿಕಿತ್ಸೆ ಮತ್ತು ವೈದ್ಯಕೀಯ ಚಿಕಿತ್ಸೆ ಯನ್ನು ನೀಡುತ್ತದೆ, ಇದನ್ನು ನವೆ೦ಬರ್ ೨೨, ೧೯೯೧ ರಲ್ಲಿ ಪ್ರಧಾನ ಮ೦ತ್ರಿ ನರಸಿ೦ಹ ರಾವ್ ಅವರು ಉದ್ಘಾಟಿಸಿದರು.[೨೯] ಬೆಂಗಳೂರಿನಲ್ಲಿ ಇರುವ ಶ್ರೀ ಸತ್ಯ ಸಾಯಿ ಉನ್ನತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಯು ೩೩೩ ಹಾಸಿಗೆಗಳನ್ನು ಹೊಂದಿದೆ ಹಾಗು ಅದು ಬಡಜನರಿಗೆ ಮೀಸಲಾಗಿದೆ.[೫೭] ಆಗಿನ ಪ್ರಧಾನ ಮ೦ತ್ರಿ ಅಟಲ್ ಬಿಹಾರಿ ವಾಜಪೇಯಿ ಯವರು ಜನವರಿ ೧೯,೨೦೦೧ರಲ್ಲಿ ಈ ಆಸ್ಪತ್ರೆಯನ್ನು ಉದ್ಘಾಟಿಸಿದರು.[೫೮][೫೯] ಈ ಆಸ್ಪತ್ರೆಯು ಸುಮಾರು ೨೫೦,೦೦೦ ರೋಗಿಗಳಿಗೆ ಉಚಿತ ವೈದ್ಯಕೀಯ ವ್ಯವಸ್ಥೆಯನ್ನು ನೀಡಿತು.[೬೦]

ಬೆಂಗಳೂರಿನ, ವೈಟ್ ಫೀಲ್ಡ್ ನಲ್ಲಿ, ಶ್ರೀ ಸತ್ಯ ಸಾಯಿ ಸಾರ್ವತ್ರಿಕ ಆಸ್ಪತ್ರೆಯನ್ನು ೧೯೭೭ ರಲ್ಲಿ ತೆರೆಯಲಾಯಿತು, ಇದು ಸಂಕೀರ್ಣ ಶಸ್ತ್ರ ಚಿಕಿತ್ಸೆ, ಆಹಾರ ಹಾಗು ಔಷಧಿಗಳನ್ನು ಉಚಿತವಾಗಿ ಒದಗಿಸುತ್ತದೆ. ಈ ಅಸ್ಪತ್ರೆಯಲ್ಲಿ ಸುಮಾರು ೨ ಮಿಲಿಯನ್ ರೋಗಿಗಳು ಚಿಕಿತ್ಸೆಯನ್ನು ಪಡೆದಿದ್ದಾರೆ.[೬೧]

ಶ್ರೀ ಸತ್ಯ ಸಾಯಿ ಕೇ೦ದ್ರೀಯ ಟ್ರಸ್ಟ್ ಹಲವಾರು ಸಾರ್ವತ್ರಿಕ ಆಸ್ಪತ್ರೆಗಳನ್ನು, ಎರಡು ವಿಶಿಷ್ಟ ಸೌಲಭ್ಯದ ಆಸ್ಪತ್ರೆಗಳು, ಕಣ್ಣಿನ ಆಸ್ಪತ್ರೆ, ಹಾಗು ಮೊಬೈಲ್ ಔಷಧಾಲಯಗಳು, ಹಾಗು ವೈದ್ಯಕೀಯ ಶಿಬಿರಗಳನ್ನು ಭಾರತದ ನಗರ ಮತ್ತು ಕೊಳಚೆ ಪ್ರದೇಶಗಳಲ್ಲಿ ಸ್ಥಾಪಿಸಿದರು{.1/} ಈ ಟ್ರಸ್ಟ್ ಹಲವಾರು ಕುಡಿಯುವ ನೀರಿನ ಯೋಜನೆಗಳಿಗೆ ಸಹ ಧನ ಸಹಾಯವನ್ನು ನೀಡುತ್ತದೆ. ೧೯೯೬ರಲ್ಲಿ ಆ೦ದ್ರ ಪ್ರದೇಶದ ಅನ೦ತಪುರ ಜಿಲ್ಲೆಯ ಸುಮಾರು ೭೫೦ ಬರ-ಪೀಡಿತ ಹಳ್ಳಿಗಳಲ್ಲಿ ಇರುವ ಸುಮಾರು ೧.೨ ಮಿಲಿಯನ್ ಜನರಿಗೆ ಕುಡಿಯುವ ನೀರನ್ನು ಸರಬರಾಜು ಮಾಡುವ ಯೋಜನೆಯನ್ನು ಪೂರ್ಣಗೊಳಿಸಿದರು.[೩೫][೬೨] ಎರಡನೇ ಕುಡಿಯುವ ನೀರಿನ ಯೋಜನೆಯನ್ನು ೨೦೦೪ರಲ್ಲಿ ಪೂರ್ಣಗೊಳಿಸಲಾಯಿತು, ಅದರಲ್ಲಿ ಮರುಕಾಮಗಾರಿ ಮಾಡಿದ ನೀರಿನ ಕಾಲುವೆ "ಸತ್ಯ ಸಾಯಿ ಗ೦ಗಾ ಕಾಲುವೆ" ಯ ಅಡಿಯಲ್ಲಿ ಚೆನ್ನೈಗೆ ನೀರನ್ನು ಒದಗಿಸಲಾಯಿತು ತಮಿಳುನಾಡು ಮುಖ್ಯ ಮ೦ತ್ರಿ ಎಮ್.ಕರುಣಾನಿಧಿಯವರು ಚೆನ್ನೈ ನೀರಿನ ಯೋಜನೆಯನ್ನು ಹಾಗು ಅದರಲ್ಲಿಯ ಸಾಯಿ ಬಾಬರವರ ಪಾತ್ರವನ್ನು ಶ್ಲಾಘಿಸಿದರು.[೬೩][೬೪] ಹಲವು ಪೂರ್ಣಗೊ೦ಡ ಯೋಜನೆಗಳೆ೦ದರೆ, ಮೇಡಕ್ಜಿಲ್ಲಾ ಯೋಜನೆ ೧೭೯ ಹಳ್ಳಿಗಳಲ್ಲಿ ೪೫೦,೦೦೦ ಜನರು ಲಾಭಪಡೆದರು ಹಾಗು ಮಹಬೂದ್ ನಗರಜಿಲ್ಲಾ ಯೋಜನೆಯಡಿಯಲ್ಲಿ ೧೪೧ ಹಳ್ಳಿಗಳ ೩೫೦,೦೦೦ ಜನರು ಲಾಭವನ್ನು ಪಡೆದರು.[೩೫] ಜನವರಿ ೨೦೦೭ರಲ್ಲಿ, ಶ್ರೀ ಸತ್ಯ ಸಾಯಿ ಕೇ೦ದ್ರೀಯ ಟ್ರಸ್ಟ್ ಅವರು ಒಂದು ಕುಡಿಯುವ ನೀರಿನ ಯೋಜನೆಯನ್ನು ಮಹಾರಾಷ್ಟ್ರದ, ಲಾತೂರ್‌ನಲ್ಲಿ ಪ್ರಾರ೦ಭಿಸಲಾಗುವುದು ಎಂದು ಹೇಳಿದರು.[೩೫]

ಸತ್ಯ ಸಾಯಿ ಬಾಬ ರವರ ಎಜುಕೇರ್ ಯೋಜನೆಯಲ್ಲಿ ಪ್ರಪ೦ಚದಾದ್ಯ೦ತ ಶಾಲೆಗಳನ್ನು ಸ್ಥಾಪಿಸಿ ಮಕ್ಕಳಿಗೆ ಐದು ಮಾನವ ಮೌಲ್ಯಗಳನ್ನು ಒಳಗೊ೦ಡ ಶಿಕ್ಷಣವನ್ನು ನೀಡುವ ಗುರಿಯನ್ನು ಹೊ೦ದಿದ್ದರು. ಸಾಯಿ ಎಜುಕೇರ್‌ ವೆಬ್‌ಸೈಟ್‌ನ ಪ್ರಕಾರ, ಆಸ್ಟ್ರೇಲಿಯಾ, ಮೆಕ್ಸಿಕೊ, ಯುಕೆ, ಹಾಗು ಪೆರು ದೇಶಗಳನ್ನು ಒಳಗೊ೦ಡು ೩೩ ದೇಶಗಳಲ್ಲಿ ಶಾಲೆಗಳನ್ನು ಸ್ಥಾಪಿಸಿದ್ದಾರೆ.[೬೫][೬೬] ದಿ ಟೈಮ್ಸ್ ಆಫ್ ಜಾ೦ಬಿಯಾದ ಹೇಳಿಕೆಯ೦ತೆ, "ಸತ್ಯ ಸಾಯಿ ಅವರ ಪ್ರಭಾವ ಧನಾತ್ಮಕವಾಗಿ ಅಭೂತಪೂರ್ವ ಯಶಸ್ಸನ್ನು ಜಾ೦ಬಿಯಾದ ವಾರ್ಷಿಕ ಶಿಕ್ಷಣದಲ್ಲಿ ನೀಡಿತು." ಶಿಕ್ಷಣದಲ್ಲಿರುವ ಮಾನವ ಮೌಲ್ಯಗಳ-ನೆಲೆಯ ಮೇಲೆ ನಿ೦ತ ಸಾಯಿ ಬಾಬ ರವರ ಆದರ್ಶಪ್ರಾಯವಾದ ಯೋಚನೆಗಳು ಜಾ೦ಬಿಯಾದ ಶಿಕ್ಷಣ-ಶಾಸ್ತ್ರಜ್ಞರಲ್ಲಿ ಆಶ್ಚರ್ಯಕ್ಕೆ ಎಡೆಮಾಡಿಕೊಟ್ಟಿತು."[೬೭][67]

ಕೆನಡಾದಲ್ಲಿರುವ,ಫ್ರೇಸರ್ ಇನ್ಸಟಿಟ್ಯೂಟ್, ಒಂದು ಸ್ವತ೦ತ್ರ ಕೆನಡಿಯನ್ ಸ೦ಶೋಧನಾ ಹಾಗು ಶಿಕ್ಷಣ ಸಂಸ್ಥೆ, ಸತ್ಯ ಸಾಯಿ ಸ್ಕೂಲ್ ಆಫ್ ಕೆನಡ ವನ್ನುಒ೦ಟಾರಿಯೊನಲ್ಲಿರುವ ಮೊದಲ ೩೭ ಪ್ರಾಥಮಿಕ ಶಾಲೆಗಳಲ್ಲಿ ಒಂದು ಎಂದು ಘೋಷಿಸಿತು.[೬೮] ಸತ್ಯ ಸಾಯಿ ಶಾಲೆಯು ಶೈಕ್ಷಣಿಕ ಕಾರ್ಯ ನಿರ್ವಹಣೆಯಲ್ಲಿ ಎಲ್ಲ ಸಂಸ್ಥೆಗಳ ಸಮಗ್ರ ಯೋಜನೆಯಲ್ಲಿ ಹತ್ತಕ್ಕೆ ಹತ್ತು ಅ೦ಕಗಳನ್ನು ಪಡೆಯಿತು.[೬೮][೬೯][೭೦]

ನವೆ೦ಬರ್ ೨೩,೧೯೯೯ರಲ್ಲಿ,ಭಾರತ ಸರ್ಕಾರದ ಅ೦ಚೆ ವಿಭಾಗವು, ಒಂದು ಅ೦ಚೆಯ ಸ್ಟಾ೦ಪ್ ಅನ್ನು ಬಿಡುಗಡೆಗೊಳಿಸಿದರು ಹಾಗು ಭಗವಾನ್ ಶ್ರೀ ಸತ್ಯ ಸಾಯಿ ಬಾಬರವರು ನಗರ ಪ್ರದೇಶಗಳಲ್ಲಿ ಇರುವ ಜನರ ಕುಡಿಯುವ ನೀರಿನ ಕೊರತೆಯನ್ನು ನೀಗಿಸಲು ಅವರನ್ನು ಉದ್ದೇಶಿಸಿ ಮಾತನಾಡಿದ ಹಾಗು ಅವರ ತೊ೦ದರೆಗಳಿಗೆ ಸ್ಪ೦ದಿಸುವ, ಸೇವಾ ಕಾರ್ಯಗಳನ್ನು ಮಾಡುತ್ತಿರುವ ಚಿತ್ರವನ್ನು ಆ ಅ೦ಚೆಯ ಹೊದಿಕೆಯ ಮೇಲೆ ಮುದ್ರಿಸಲಾಗಿತ್ತು.[೭೧]

೨೦೦೧ರ ನವೆ೦ಬರ್ ೨೩ರಂದು, "ರೇಡಿಯೋ ಸಾಯಿ ಗ್ಲೋಬಲ್ ಹಾರ್ಮೊನಿ" ಎ೦ಬ ಡಿಜಿಟಲ್ ರೇಡಿಯೊ ಜಾಲವನ್ನು USAಯ, ವರ್ಲ್ಡ್ ಸ್ಪೇಸ್ ಆರ್ಗನೈಜೇಶನ್ ನ ಡಾ.ಮೈಕೆಲ್ ಓಲಿನಿಕಾಫ್ ನೊಬೆಲ್ (ಆಲ್ಫ್ರೆಡ್ ನೊಬೆಲ್‌ರ ದೂರದ ಸಂಬಂಧಿ ಹಾಗು ರೇಡಿಯೊ ಜಾಲದ ಒಬ್ಬ ಪೋಷಕ) ಅವರು ಆರ೦ಭಿಸಿದರು, ನಂತರ ಅವರು ರೇಡಿಯೊ ಜಾಲದ ಮೂಲಕ ಸತ್ಯ ಸಾಯಿ ಬಾಬರವರ ವಿಶ್ವ ಸಮರಸ ಹಾಗು ಶಾ೦ತಿಯನ್ನು ಒಳಗೊ೦ಡ ಸಂದೇಶ ಎಲ್ಲ ಕಡೆ ಹರಡುತ್ತದೆ ಎಂದು ಹೇಳಿದರು.[೭೨]

೨೦೦೩ರಲ್ಲಿ ಕೆನಡಾದ ಸತ್ಯ ಸಾಯಿ ಶಾಲೆಯು ಮೌಲ್ಯಗಳಿಗಾಗಿ ನಡಿಗೆಯನ್ನು ಪ್ರಾರ೦ಭಿಸಿದರು.[೭೩][೭೪] ಮೌಲ್ಯಗಳಿಗಾಗಿ ನಡಿಗೆಯು ಐದು ಮಾನವ ಮೌಲ್ಯಗಳಾದ:ಪ್ರೀತಿ, ಶಾ೦ತಿ, ಸತ್ಯ, ಅಹಿ೦ಸೆ ಹಾಗು ಒಳ್ಳೆಯ ನಡವಳಿಕೆ ಇವುಗಳ ಬಗ್ಗೆ ಪ್ರಜ್ಞೆಯನ್ನು ಮೂಡಿಸಲು ಮಾಡಿದ ಒಂದು ವಾರ್ಷಿಕ ನಡಿಗೆ, ಇದರಲ್ಲಿ[೭೫] ಯಾವುದೇ ಹಣವನ್ನು ಕೋರುವುದಿಲ್ಲ,[೭೬] "ಬದಲಾಗಿ, ಜನರಿಗೆ ತಮ್ಮ ಜೀವನದಲ್ಲಿ ಒಂದು ಅಥವಾ ಹೆಚ್ಚಿನ ಮಾನವ ಮೌಲ್ಯಗಳನ್ನು ಅಳವಡಿಸಲು ಕೋರಲಾಯಿತು."[೭೭] ಕೆಲವೊಬ್ಬರು ಈ ರೀತಿಯಾಗಿ ಹೇಳಿದರು, "ಇದು ಒಂದು ಮಾನವನ್ನು ಗಮನವನ್ನು ಸೆಳೆಯಲು ಮುಂದೆ ಸಾಗುತ್ತಿರುವುದು , ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ನೀಡಿದ ಕರೆ." [೭೮] ೨೦೦೯ ನ ಮೌಲ್ಯಗಳಿಗಾಗಿ ನಡಿಗೆಯು ಹಲವಾರು ಸ್ಥಳಗಳಲ್ಲಿ ನಡೆಯಿತು ಅವುಗಳೆ೦ದರೆ, ಕೆನಡಿಯನ್ ನಗರಗಳಾದ (ಟೊರಾ೦ಟೊ, ವಾನ್ಕವರ್, ಕಾಲ್ಗರಿ,[೭೯] ನ್ಯೂಜಿಲೆ೦ಡ್,[೭೭] ಮಲೇಶಿಯ,[೭೭] ಆಸ್ಟ್ರೇಲಿಯ ದ (ಸಿಡ್ನಿ,ಅಡೆಲೈಡ್, ಪರ್ತ್[೮೦]) ಹಾಗು ಯುನೈಟೆಡ್ ಸ್ಟೇಟ್ಸ್ ನ (ನ್ಯೂಯಾರ್ಕ್ ಸಿಟಿ, ಸೀಟಲ್, ಡಲಾಸ್[೮೧]). ಕೆನಡಿಯನ್ ಪ್ರಧಾನ ಮ೦ತ್ರಿ ಸ್ಟಿಫನ್ ಹಾರ್ಪರ್ ನಡಿಗೆಯಲ್ಲಿ ಭಾಗವಹಿಸಿದ ಎಲ್ಲ ಜನರಿಗೆ "ಪ್ರಪ೦ಚವನ್ನು ಬದಲಾಯಿಸುವ ಅವರ ಬದ್ಧತೆ ಯನ್ನು" ಕಂಡು ಪ್ರಶಂಸೆ ವ್ಯಕ್ತಪಡಿಸಿದರು."[೮೨] ಜನವರಿ ೨೦೦೭ರಲ್ಲಿ, ಆ೦ದ್ರ ಪ್ರದೇಶದ ಕೃಷ್ಣ ನದಿಯಿ೦ದ ಚೆನ್ನೈನಗರಕ್ಕೆ ನೀರು ಪೂರೈಸಲು ೨೦೦ ಎಕರೆ ಪ್ರದೇಶದಲ್ಲಿ ಕೈಗೊ೦ಡ ಯೋಜನೆಯನ್ನು ರೂಪಿಸಿದ ಸತ್ಯ ಸಾಯಿ ಬಾಬರವರಿಗೆ ತಮ್ಮ ಕೃತಜ್ಞತೆ ಸೂಚಿಸಲು ಚೆನ್ನೈನ ನಾಗರಿಕರು ಚೆನ್ನೈ ನೆಹರು ಕ್ರೀಡಾ೦ಗಣದಲ್ಲಿ ಸಮಾರ೦ಭವನ್ನು ಆಯೋಜಿಸಿದ್ದರು. ನಾಲ್ಕು ಜನ ಮುಖ್ಯ ಮ೦ತ್ರಿಗಳು ಆ ಸಮಾರ೦ಭದಲ್ಲಿ ಉಪಸ್ಥಿತರಿದ್ದರು.[೮೩][೮೪]

"ಪವಾಡಗಳು"[ಬದಲಾಯಿಸಿ]

ಸತ್ಯ ಸಾಯಿ ಬಾಬ ಅವರ ಅನುಯಾಯಿಗಳು ಅವರು ವಿಭೂತಿ (ಪವಿತ್ರ ಬೂದಿ) ಹಾಗು ಕೆಲವೊಮ್ಮೆ ಆಹಾರ, ಹಾಗು ಸಣ್ಣ ಪದಾರ್ಥಗಳಾದ ಉ೦ಗುರಗಳು, ಕ೦ಠಹಾರ ಹಾಗು ಕೈಗಡಿಯಾರಗಳನ್ನು ಸೃಷ್ಠಿಸುವುದನ್ನು ನೋಡಿದ್ದೇವೆಂದು ಹೇಳುತ್ತಾರೆ .[೮೫] ಕೆಲವು ಪುಸ್ತಕಗಳಲ್ಲಿ, ಪತ್ರಿಕೆಗಳಲ್ಲಿ, ಚಿತ್ರೀಕರಿಸಲಾದ ಸಂದರ್ಶನಗಳಲ್ಲಿ ಮತ್ತು ಚಿಕ್ಕ ಸಾಹಿತ್ಯ ಲೇಖನದಲ್ಲಿ ಸತ್ಯಸಾಯಿಬಾಬಾನ ಅನುಯಾಯಿಗಳು ಅವರ ವಿವಿಧ ಬಗೆಯ ಪವಾಡಗಳ ಬಗೆಗೆ ಆರೋಪಿಸುತ್ತಾರೆ[೮೬] ಭಕ್ತಾದಿಗಳು ಹೇಳುವುದೇನೆಂದರೆ ವಸ್ತುಗಳು ಸ್ವಯಂಪ್ರೇರಿತವಾಗಿ ಚಿತ್ರಪಟಗಳು ಮತ್ತು ಸತ್ಯಸಾಯಿಬಾಬಾನ ಪವಿತ್ರಸ್ಥಾನದ ಸಂರ್ಪಕದಿಂದ ಕಾಣಿಸಿಕೊಳ್ಳುತ್ತವೆ.[೮೭][೮೮] ಸತ್ಯಸಾಯಿಬಾಬಾನ ಭಕ್ತಾದಿಗಳ ನಂಬಿಕೆಯೇನೆಂದರೆ, ಅವರು ಇವರ ಸಂಕಟಗಳನ್ನು ತಮ್ಮೊಳಗೆ ವರ್ಗಾವಣೆ ಮಾಡಿಕೊಂಡು ತಮ್ಮನ್ನು ಮುಕ್ತಿಗೊಳಿಸುತ್ತಾರೆ ಎ೦ಬುದಾಗಿದೆ.[೮೯]

ಪ್ರಪಂಚದ ನಾನಾ ಭಾಗದ ಭಕ್ತಾದಿಗಳ ಮನೆಯಲ್ಲಿ,ವೀಕ್ಷಣಾಗಾರರ ಮತ್ತು ಭಕ್ತಾದಿಗಳ ವರದಿಯ ಪ್ರಕಾರ, ವಿಭೂತಿ,ಕುಂಕುಮ, ಅರಿಶಿಣ,ಪುಡಿ, ತೀರ್ಥ, ಶಿವ ಲಿಂಗಗಳ, (ಕಂಚು ಮತ್ತು ಚಿನ್ನ) ದೇವತೆಗಳ ಮೂರ್ತಿಗಳು, ಕಲ್ಲು ಸಕ್ಕರೆ, ಹಣ್ಣುಗಳು, ಗಿಡಮೂಲಿಕೆ, ಅಮೃತ (ಸುವಾಸನೆಯುಕ್ತ ಮಕರಂದ), ಮಣಿಗಳು, ಬಣ್ಣದ ಮಾಲೆ, ಬೂದಿಯಲ್ಲಿ ಬರೆದ ಬರವಣಿಗೆಗಳು ಮತ್ತು ಬೇರೆ ವಿವಿಧ ವಸ್ತುಗಳು ಸ್ವಯಂಪ್ರೇರಿತವಾಗಿ ಪ್ರದರ್ಶನ ಮತ್ತು ಗೋಡೆಗಳ ಮೇಲೆ, ಪೀಠೋಪಕರಣಗಳ, ಚಿತ್ರಗಳ ಮತ್ತು ಸತ್ಯಸಾಯಿಬಾಬರ ಪವಿತ್ರಸ್ಥಾನದ ಮೇಲೆ ಸೃಷ್ಠಿಯಾಗುತ್ತವೆ..[೮೭][೮೮][೯೦][೯೧][೯೨][೯೩]

ನಿವೃತ್ತ ಮನಃಶಾಸ್ತ್ರದ ಪ್ರೊಫೆಸರ್ ಆದ ಎರ್ ಲೆಂಡುರ್ ಹರಾಲ್ಡ್ ಸ್ಸನ್ರವರ ಹೇಳಿಕೆಯ೦ತೆ ಇವರಿಗೆ ಅಧ್ಯಯನ ಮಾಡಲು ನಿರ್ಭಂದದ ಸನ್ನಿವೇಶಗಳ ಕೆಳಗೆ ಸಾಯಿಬಾಬಾನ ಅನುಮತಿ ಸಿಗಲಿಲ್ಲ. ಅದಾಗ್ಯೂ, ಅವರು ಗುರುವಿನ ಖಚಿತವಾದ ಪವಾಡಗಳನ್ನು ಮತ್ತು ಪ್ರದರ್ಶನಗಳನ್ನು ಭಕ್ತಾದಿಗಳು ಮತ್ತು ಹಿಂದಿನ ಭಕ್ತಾದಿಗಳೊಂದಿಗೆ ಮೊದಲ ಸಂದರ್ಶನವನ್ನು ಮಾಡುವ ಮೂಲಕ ಕಂಡುಹಿಡಿದು ಅದನ್ನು ಬರೆದು ಸಾಕ್ಷ್ಯಚಿತ್ರ ರೂಪದಲ್ಲಿ ತ೦ದರು. ಹರಾಲ್ಡ್ ಸ್ಸನ್ ಸಂಶೋಧನೆಯ ವರದಿಯು ಹಲವು ಅಸಮಾನ್ಯವಾದ ಪವಾಡಗಳಿಗೆ ಪುರಾವೆಗಳನ್ನು ಒದಗಿಸಿಕೊಟ್ಟಿತು. ಸತ್ಯಸಾಯಿಬಾಬರವರ ಕೆಲವು ವರದಿ ಮಾಡಲಾಗಿರುವ ಪವಾಡಗಳೆ೦ದರೆ ಗಾಳಿಯಲ್ಲಿ ತೇಲಾಡುವ (ಒಳಗಡೆ ಮತ್ತು ಹೊರಗಡೆ), ಎರಡುಸ್ಥಳಗಳು,ಒಳಗೊಂಡಿದೆ, ದೈಹಿಕವಾಗಿ ಮಾಯವಾಗುವುದು, ಕಲ್ಲನ್ನು ಕಲ್ಲುಸಕ್ಕರೆಯನ್ನಾಗಿಸುವುದು, ನೀರನ್ನು ಬೇರೆ ತರದ ಪಾನಕವನ್ನಾಗಿಸುವುದು, ನೀರನ್ನು ಅನಿಲವಾಗಿಸುವುದು, ಬೇಡಿಕೆಯ ಮೇರೆಗೆ ವಸ್ತುಗಳನ್ನು ಮಾಡುವುದು, ಧರಿಸುವ ವೇಳೆಗೆ ತಮ್ಮ ನಿಲುವಂಗಿಯ ಬಣ್ಣವನ್ನೇ ಬದಲಿಸುವುದು , ಆಹಾರವನ್ನು ಹೆಚ್ಚಿಸುವುದು, ತೀವ್ರವಾದ ಕಾಯಿಲೆಗಳನ್ನು ಗುಣಪಡಿಸುವುದು, ದೂರದೃಷ್ಠಿಗಳನ್ನು, ಕನಸುಗಳನ್ನು, ಯಾವುದೇ ಮರದ ಕೊಂಬೆಯಲ್ಲಿ ವಿಧವಿಧವಾದ ಹಣ್ಣುಗಳು ಕಾಣಿಸಿಕೊಳ್ಳುವಂತೆ ಮಾಡುವುದು, ಹವಾಮಾನವನ್ನು ನಿಯಂತ್ರಿಸುವುದು, ಮೈಮೇಲೆ ಹಲವು ದೇವತೆಗಳನ್ನು ಆಹ್ವಾನಿಸಿಕೊಳ್ಳುವುದು ಮತ್ತು ದೈಹಿಕವಾಗಿ ಪ್ರಕಾಶಮಾನವಾದ ಬೆಳಕನ್ನು ಹೊರಸೂಸುವುದು.[೯೪] ಹರಾಲ್ಡ್ ಸ್ಸನ್ ಈ ರೀತಿಯಾಗಿ ಬರೆಯುತ್ತಾನೆ,ಆತ ನೋಡಿದ ಅತಿದೊಡ್ಡದಾದ ಖಚಿತವಾಗಿ ಮೈದೋರಿದ ವಸ್ತು ಮಂಗಳಸೂತ್ರ ಸರಮಾಲೆ,ಅದು ೩೨ ಇಂಚುಗಳ ಉದ್ದವಿದ್ದು, ೧೬ ಇಂಚುಗಳಷ್ಟು ಉದ್ದ ಪ್ರತಿಕಡೆಯಿತ್ತು.[೯೫] ಹರಾಲ್ಡ್ ಸ್ಸನ್ ಈ ರೀತಿಯಾಗಿ ಬರೆಯುತ್ತಾನೆ, ಬೈಬಲ್ಲಿನ 2 ನೇ ಭಾಗ ದಲ್ಲಿರುವ ಒಬ್ಬರ ವರ್ಣನೆಯನ್ನು ಸತ್ಯ ಸಾಯಿ ಬಾಬಾರ ಕೆಲವು ಚಮತ್ಕಾರಗಳಿಗೆ ಹೋಲಿಸಲಾಗಿದೆ,... ಅದಾಗ್ಯೂ ಗುಣಪಡಿಸುವುದು ನಿಶ್ಚಯವಾಗಿ ಸಾಯಿಬಾಬಾರ ಪ್ರಸಿದ್ಧಿಯನ್ನು ರೂಪಿಸಿದೆ, ಜೀಸಸ್ ನಲ್ಲಿರುವ೦ತೆ ಪರಿಣಾಮಕಾರಿಯಾಗಿ ವಾಸಿಮಾಡುವ ಪ್ರಭಾವವು ಸತ್ಯ ಸಾಯಿಬಾಬರವರ ಚಟುವಟಿಕೆಯಲ್ಲಿ ಪ್ರಮುಖವಾಗಿ ಕಾಣಿಸುವುದಿಲ್ಲ.[೯೬]

ಸತ್ಯಸಾಯಿಬಾಬಾರವರು ಅಸ್ಥಿತ್ವದಲ್ಲಿರುವ ಬ್ರಹ್ಮಜ್ಞಾನಿಯಂತೆ ನಟಿಸುತ್ತಾ ಜಗತ್ತಿನ ಅಧ್ಬುತ ಪ್ರದರ್ಶನಗಳನ್ನು ವಿವರಿಸುತ್ತಾರೆ, ಆದರೆ ವಾಸ್ತವಾಗಿ ತಮ್ಮ ಕೆಳಗೆ ಇರುವ ಪ್ರಯೋಗಾತ್ಮಕ ನಿಯಮಗಳನ್ನು ತನಿಖೆಮಾಡಲು ನಿರಾಕರಿಸುತ್ತಾರೆ. ೧೯೭೪ ರ ಪ್ರವಚನದಲ್ಲಿ, " ದೃಷ್ಠಿಯ ಜ್ಞಾನದಿಂದ ಸತ್ಯವನ್ನು ಕಾಣದಂತೆ ಮಾಡಬಹುದು ಎಂದು ಅವರು ವಿವರಿಸಿದ್ದಾರೆ. ಇದು ಕೇವಲ ತಪ್ಪು ಮತ್ತು ಹಳೆಯ ಸಂದೇಶಗಳನ್ನು ನೀಡುತ್ತದೆ. ಉದಾಹರಣೆಗೆ, ನಮ್ಮ ಕೃತ್ಯಗಳನ್ನು ಗಮನಿಸಲು ಹಲವಾರು ಜನರಿರುತ್ತಾರೆ ಹಾಗು ಅವರು ನಮ್ಮ ಸ್ವಭಾವ ಈ ರೀತಿ ಹಾಗು ಆ ರೀತಿಯಾಗಿ ಇರುತ್ತದೆ ಎಂದು ಹೇಳುತ್ತಿರುತ್ತಾರೆ "[೩೯]

ಏಪ್ರಿಲ್ ೧೯೭೬ ರಲ್ಲಿ, ಡಾ.ಎಚ್ ನರಸಿಂಹಯ್ಯನವರು, ಒಬ್ಬ ಭೌತವಿಙ್ಞಾನಿ, ವಿವೇಚನಕಾರ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ, "ತಾರ್ಕಿಕವಾಗಿ ಮತ್ತು ವೈಙ್ಞಾನಿಕವಾಗಿ ಪವಾಡಗಳನ್ನು ಮತ್ತು ಬೇರೆ ತರದ ಪ್ರಮಾಣೀಕರಿಸಲಾಗುವ ಮೂಡನಂಬಿಕೆಗಳ ತನಿಖೆಮಾಡಲು" ಒಂದು ಆಡಳಿತ ಮಂಡಳಿಯನ್ನು ಸ್ಥಾಪಿಸಿದರು . ಹರಾಲ್ಡ್ ಸ್ಸನ್ ಈ ರೀತಿಯಾಗಿ ವಿವರಿಸುತ್ತಾರೆ, ನರಸಿಂಹಯ್ಯನವರು ಸತ್ಯಸಾಯಿಬಾಬಾಗೆ ಸಾರ್ವಜನಿಕವಾಗಿ ತಮ್ಮ ಪವಾಡಗಳನ್ನು ನಿರ್ಬಂಧಿತ ಸನ್ನಿವೇಶಗಳಲ್ಲಿ ಪ್ರದರ್ಶಿಸುವಂತೆ ಸಭ್ಯ ಪತ್ರವನ್ನು ಬರೆದರು ಮತ್ತು ತರುವಾಯ ಎರಡು ಪತ್ರಗಳನ್ನು ಬರೆದು ಆಹ್ವಾನಿಸಿದರು.[೯೭] ಸತ್ಯಸಾಯಿಬಾಬಾರವರು ನರಸಿಂಹಯ್ಯನವರ ಮಾರ್ಗವು ತಕ್ಕುದಾಗಿಲ್ಲವಾದ್ದರಿ೦ದ ನಾನು ಅದನ್ನು ಕಡೆಗಣಿಸಿದೆ ಎಂದು ಹೇಳಿದ್ದಾರೆ.[೯೮] ನಂತರ ನರಸಿಂಹಯ್ಯನವರ ಮಂಡಳಿ ಬಗ್ಗೆ, "ವಿಜ್ಞಾನವು ತನ್ನ ತನಿಖೆಯ ಮಿತಿಯೊಳಗಿರಬೇಕು ಕೇವಲ ಮಾನವರ ಜ್ಞಾನಕ್ಕೆ ಸಂಬಂಧಿಸಿದ ವಸ್ತುಗಳು ಈ ವೇಳೆಯಲ್ಲಿ ಆಧ್ಯಾತ್ಮಿಕತೆಯನ್ನು ದಾಟಿಹೋಗುವಂತೆ ಮಾಡುತ್ತದೆ. ಆಧ್ಯಾತ್ಮಿಕ ಶಕ್ತಿಯ ಬಗೆಯನ್ನು ತಿಳಿದುಕೊಳ್ಳಬೇಕಾದರೆ ನೀವು ಆಧ್ಯಾತ್ಮಿಕವಾದ ದಾರಿಯಿಂದಲೇ ಬರಬೇಕು ಮತ್ತು ವಿಜ್ಞಾನದಿಂದಲ್ಲ.

ವಿಜ್ಞಾನವು ಏನನ್ನು ಪ್ರಕಟಿಸಲು ಶಕ್ತವಾಗಿರುವುದೋ ಅದು ಕೇವಲ ವಿಶ್ವದ ಪ್ರಕೃತಿ ಘಟನೆಯ ಭಾಗವಾಗಿದೆ..."[೯೮] ಎರ್ ಲೆಂಡರ್ ಹರಾಲ್ಡ್ ಸನ್, ರವರ ಪ್ರಕಾರ ಕಮಿಟಿಯಿಂದ ಮಾಡಲ್ಪಟ್ಟ ಸಾಮಾನ್ಯ ಚಾಲೆಂಜ್ ಕೊನೆಗೊಳ್ಳುವುದಕ್ಕೆ ಬಂದಿತು ಏಕೆಂದರೆ ಪ್ರಾಯಶಃ ಕಮಿಟಿಯಲ್ಲಿದ್ದವರೆಲ್ಲರೂ ಬಾಬಾಗೆ ಭಕ್ತಾಧಿಗಳಾಗಿದ್ದರ ಪರಿಣಾಮ ಕಮಿಟಿಯು ಈ ಬಗ್ಗೆ ನಕಾರಾತ್ಮಕ ಮನೋವೃತ್ತಿಯನ್ನು ತಾಳಿತು. ನರಸಿಂಹಯ್ಯನವರ ಆಲೋಚನೆಯೇನೆ೦ದರೆ ಸತ್ಯಸಾಯಿಬಾಬ ಅವರು ಪ್ರತಿಯೊಂದು ಕಾಗದವನ್ನು ಬೇಕಂತಲೇ ಒಂದಲ್ಲಾ ಹಲವು ಬಾರಿ ನಿರ್ಲಕ್ಷ್ಯ ತೋರಿರುವುದು ಅವರ ಚಮತ್ಕಾರಗಳು ಸುಳ್ಳು ಎಂದು ತೋರಿಸುತ್ತದೆ.[೯೯] ಈ ಘಟನೆಯ ಫಲಿತಾಂಶವಾಗಿ, ಭಾರತದ ದಿನ ಪತ್ರಿಕೆಗಳಲ್ಲಿ ಹಲವಾರು ತಿಂಗಳುಗಳವರೆಗೆ ಈ ವಿಷಯ ಜನಪ್ರಿಯ ಚರ್ಚೆಯಾಗಿ ಪ್ರಕಟವಾಗಿತ್ತು.[೧೦೦] ಆಗಸ್ಟ್ ೧೯೭೭ ರಲ್ಲಿ ನರಸಿಂಹಯ್ಯನವರ ಕಮಿಟಿಯನ್ನು ರದ್ದು ಮಾಡಲಾಯಿತು.

ಸತ್ಯಸಾಯಿಬಾಬ "ಪವಾಡಗಳ" ಬಗ್ಗೆ ಹೇಳುತ್ತಾರೆ "ಯಾರು ನನ್ನನ್ನು ಅರ್ಥಮಾಡಿಕೊಳ್ಳುವವರೋ,ಅವರು ಬುದ್ಧಿಜೀವಿಗಳು, ಯೋಗಿ ಗಳು, ಪಂಡಿತರು,ಜ್ಞಾನಿಗಳು , ಕೇವಲ ತುಚ್ಚ ಪ್ರಾಮುಖ್ಯತೆಯ ಬಗ್ಗೆ ತಿಳಿದವರಾಗಿರುತ್ತಾರೆ, ಶಕ್ತಿಯ ಅತ್ಯಂತ ಸೂಕ್ಷ್ಮ ಭಾಗದ ಸಾಮಾನ್ಯ ಬಾಹ್ಯ ಪ್ರದರ್ಶನವೇ "ಪವಾಡ"ವಾಗಿದೆ! ಇದು ಎಲ್ಲಾ ವಯಸ್ಸಿನ ಸಂಗತಿಯಾಗಿರುತ್ತದೆ. ಜನರು (ದೈಹಿಕವಾಗಿ)ಅವತಾರಕ್ಕೆ ತುಂಬಾ ಹತ್ತಿರವಾಗಿರಬಹುದು , ಆದರೆ ಅವರು ಚಮತ್ಕಾರಗಳ ಪಾತ್ರಗಳನ್ನು ಅತಿಶಯ ಮಾಡುತ್ತಾರೆ,ನನ್ನ ವೈಭವ ಮತ್ತು ಘನತೆಗೆ ಹೋಲಿಸಿದಾಗ ತುಂಬ ಕ್ಷುಲ್ಲಕದಂತೆ , ಅಳತೆಯಲ್ಲಿ ಸೊಳ್ಳೆಯಿದ್ದಂತೆ ಮತ್ತು ಶಕ್ತಿಯಲ್ಲಿ ಆನೆಯಂತೆ ಇದರ ಮೇಲೆ ಅವು ಪದ್ಮಾಸನ ಹಾಕಿ ಕೂರುತ್ತವೆ. ಆದ್ದರಿಂದ , ಯಾವಾಗ ನೀವು ’ಚಮತ್ಕಾರದ” ಬಗ್ಗೆ ಮಾತನಾಡುತ್ತೀರೋ,ನನ್ನ ಬೆಲೆಬಾಳುವ ನಿಜಾಂಶದ ತಿಳುವಳಿಕೆಯನ್ನು ಅರಿಯಲು ನೀವು ನಿಮ್ಮನ್ನೆ ಕಳೆದುಕೊಳ್ಳಲು ಅನುವುಮಾಡಿಕೊಡುತ್ತಿದ್ದೀರಲ್ಲಾ ಎಂದು ಮರುಕ ಉಂಟಾಗಿ ನಾನು ನನ್ನೊಳಗೆ ನಗುತ್ತೇನೆ."[೩೯]

ಟೀಕೆಗಳು ಮತ್ತು ವಿವಾದಗಳು[ಬದಲಾಯಿಸಿ]

ಬ್ರಿಟಿಷ್ ಪತ್ರಕರ್ತ ಮೈಕ್ ಬ್ರೌನ್ ೧೯೯೮ ರ ತನ್ನ ಪುಸ್ತಕದಲ್ಲಿ ಚರ್ಚೆ ಮಾಡಿದ್ದಾನೆ ಏನೆಂದರೆ ೧೯೭೧ ರಲ್ಲಿ ಸತ್ಯಸಾಯಿಬಾಬರ ಅಮೇರಿಕಾದ ವಾಲ್ಟರ್ ಕೋವನ್ ಮತ್ತೆ ಪುನರ್ ಜೀವನಗೊಳ್ಳುತ್ತಾನೆ ಎಂಬ ಹೇಳಿಕೆಯು ಸುಳ್ಳಾಗಿತ್ತು.[೧೦೧] ಅವರ ಅಭಿಪ್ರಾಯವು (ಪ್ರೇಮಾನಂದರಿಂದ ಮುದ್ರಿತವಾದ) ಮಾಸಪತ್ರಿಕೆ ಇಂಡಿಯನ್ ಸ್ಕೆಪ್ ಟಿಕ್ ನಲ್ಲಿ ಒದಗಿಸಿದಂತಹ ಅವರನ್ನು ನೋಡಿಕೊಳ್ಳುತ್ತಿದ್ದ ವೈದ್ಯರ ಕಾಗದದ ಮೇಲೆ ಆಧಾರಿತವಾಗಿದ್ದಿತು.[೧೦೧][೧೦೨] ಮೈಕ್ ಬ್ರೌನ್ ಸಹ ಈ ಪುಸ್ತಕಕ್ಕೆ ಸಂಬಂಧಿಸಿದವನಾಗಿದ್ದು ಲಂಡನ್ನಿನ ಮನೆಗಳಲ್ಲಿದ್ದ ಬಾಬಾರಿಂದ ವಿಭೂತಿ ಪ್ರದರ್ಶನದ ಛಾಯಚಿತ್ರಗಳ ಬಗ್ಗೆ ಅನುಭವ ಹೊಂದಿ ಇದರಲ್ಲಿ ಯಾವುದೇ ಮೋಸ ಮತ್ತು ಕುತಂತ್ರ ಇಲ್ಲಾ ಎಂದು ಅಭಿಪ್ರಾಯ ಪಟ್ಟಿದ್ದಾನೆ.[೮೭] ಬ್ರೌನ್ ಸತ್ಯ ಸಾಯಿ ಬಾಬಾನ ಸರ್ವಙ್ಞಾನಿ ಹೇಳಿಕೆಗಳ ಕುರಿತಾಗಿ ಬರೆಯುತ್ತಾನೆ, "ಸ್ಕೆಪ್ಟಿಕ್ಸ್ ಸಾಕ್ಷ್ಯಚಿತ್ರವನ್ನು ಸ್ಪಷ್ಟವಾಗಿ ಬಾಬಾನ ಐತಿಹಾಸಿಕ ಲೇಖನಗಳ ಪ್ರಸಂಗಗಳು ಮತ್ತು ಪುಸ್ತಕದ ಕಾಲಙ್ಞಾನವನ್ನು ಪರಿಗಣಿಸುವುದಕ್ಕೆ ಸ್ಥಾಪಿಸಲಾಯಿತು."[೧೦೧]

ಡಿಸೆಂಬರ್ ೨೦೦೦ ರಲ್ಲಿ ಪ್ರಕಟಿತವಾದ ಇಂಡಿಯಾ ಟುಡೇ ಮ್ಯಾಗಜೀನ್ ಬಾಬಾರವರ ಬಗ್ಗೆ ಮತ್ತು ಪಿ. ಸಿ. ಸರ್ಕಾರ್ ಮಂತ್ರವಾದಿಗಳಿಂದ ಸುಳ್ಳು ಚಮತ್ಕಾರಗಳ ಬಗ್ಗೆ ಆರೋಪಗಳು ಎಂಬ ವಿಸ್ತೃತ ಕಥೆಯನ್ನು ಪ್ರಕಟಿಸಿತು.[೧೦೩] BBC ಯ ಸಾಕ್ಶ್ಯಚಿತ್ರಗಳಲ್ಲಿ ಬಸವ ಪ್ರೇಮಾನಂದ, ಸ್ಕೆಪ್ಟಿಕ್ ಮತ್ತು ಹವ್ಯಾಸಿ ಮಂತ್ರವಾದಿಯು ತಾನು ೧೯೬೮ ರಿಂದಲೂ ಸತ್ಯಸಾಯಿಬಾಬಾರನ್ನು ಪರೀಕ್ಷಿಸುತ್ತಾ ಬಂದಿದ್ದೇನೆ ಬಾಬನು ಸೃಷ್ಟಿಸಿ ಮೋಸ ಮಾಡುತ್ತಿದ್ದಾನೆಂದು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾನೆ. ೧೯೮೬ ರಲ್ಲಿ ಸತ್ಯಸಾಯಿಬಾಬಾನು ಉದ್ದೇಶಪೂರ್ವಕವಾಗಿ ಬಂಗಾರದ ಸಾಮಾನುಗಳನ್ನು "ಸೃಷ್ಟಿಸಿ" ಗೋಲ್ಡ್ ಕಂಟ್ರೋಲ್ ಆಕ್ಟನ್ನು ಉಲ್ಲಂಘಿಸುತ್ತಿದ್ದಾರೆಂದು ಕೇಸನ್ನು ದಾಖಲಿಸಿದ್ದನು. ಆದರೆ ಪ್ರೇಮಾನಂದರ ಮನವಿಯು ವಿಫಲವಾಗುವುದರ ಮೂಲಕ ಆ ದಾವೆ ವಜಾ ಆಯಿತು, ಕಾರಣ ಕಾನೂನಿನ ದೃಷ್ಟಿಯಲ್ಲಿ ಆಧ್ಯಾತ್ಮಿಕ ಶಕ್ತಿಯು ಯಾವುದೇ ಶಿಕ್ಷೆಗೊಳಪಡುವುದಿಲ್ಲ.[೧೦೪]

೨೦೦೧ ರಲ್ಲಿ ವ್ಯಾನ್ ಕೋವರ್ ಸನ್ನಲ್ಲಿ ಈ ರೀತಿಯಾಗಿ ಪ್ರಕಟಿಸಲಾಗಿತ್ತು, ಸತ್ಯ ಸಾಯಿ ಬಾಬರವರು ತಮ್ಮ ಅನುಯಾಯಿಗಳಿಗೆ ಅಂತರ್ಜಾಲದ ಮೂಲಕ ಮತ್ತು ಕೆಲವು ನ್ಯೂಸ್ ಪೇಪರ್ ಗಳಲ್ಲಿ ಪ್ರಪ೦ಚದಾದ್ಯ೦ತ ಆರೋಪಗಳು ಪ್ರಚಾರವಾಗುತ್ತಿರುವುದರಿಂದ ವರ್ಲ್ಡ್ ವೆಬ್ ನಲ್ಲಿ ಸಹಿ ಮಾಡಬೇಡಿ ಎಂದು ಹೇಳಿದರು.[೧೦೫] ಆ ಲೇಖನದಲ್ಲಿ ಸತ್ಯ ಸಾಯಿ ಬಾಬರವರು ನಿಜವಾಗಿಯು ಏನನ್ನು ಹೇಳಿದ್ದಾರೆ ಎ೦ಬುದನ್ನು ಉಲ್ಲೇಖಿಸಿರಲಿಲ್ಲ, ಸತ್ಯ ಸಾಯಿ ಬಾಬರವರು ೨೦೦೦ ಸಾರ್ವಜನಿಕ ಪ್ರವಚನಗಳಲ್ಲಿ ಈ ರೀತಿಯಾಗಿ ಹೇಳಿದ್ದರು,"ಪ್ರವಚನಗಳು (ವೇದಗಳು) ಅತೀ ಪವಿತ್ರವಾದವು. ಇಂದು ಜನರು ದೂರದರ್ಶನ ಮತ್ತು ಅಂತರ್ಜಾಲದಲ್ಲಿ ನೋಡಿದವುಗಳನ್ನೆಲ್ಲಾ ನಂಬಲು ತಯಾರಿರುತ್ತಾರೆ ಆದರೆ ಅವರ ಶ್ರದ್ಧೆಯು ವೇದದಲ್ಲಿನ ಹೇಳಿಕೆಗಳಲ್ಲಿ ನಂಬಿಕೆ ಇಡುವುದಿಲ್ಲ. ಅಂತರ್ಜಾಲವು ಒಂದು ಕಸದ ತೊಟ್ಟಿಯಿದ್ದಂತೆ. 'ಮನಸ್ಸಿನಾಳವನ್ನು,' ಅನುಸರಿಸಿ ಅಂತರ್ಜಾಲವನ್ನಲ್ಲ."[೧೦೬]

೨೫ ರ ಜುಲೈ ೨೦೦೧ ರಲ್ಲಿ ಸಾಲೊನ್.ಕಾಮ್ಸ್ "ಅಸ್ಪೃಶ್ಯತೆ" ಎಂಬ ಚಿಕ್ಕ ಲೇಖನವನ್ನು ಕೋನಿ ಲಾರ್ ಸ್ಸನ್ ನ ನಂತರ ಪ್ರಕಟಿಸಿತು, ಸ್ವೀಡಿಷ್ ನ ಒಬ್ಬ ಚಿತ್ರ ನಟನು ತನಗೆ ತೆಗಳಿದ್ದಾರೆಂದು ಆರೋಪಿಸಿದ್ದನು ಸ್ವೀಡನ್ ನಲ್ಲಿನ ಸಾಯಿ ಸಂಘಟನೆಯ ಜೊತೆಗೆ ಸಾಯಿ ಸಂಘಟನೆಯ ಶಾಲೆಯನ್ನು ಮುಚ್ಚಲಾಗಿತ್ತು. ಇದು ಇನ್ನೂ ಹಲವಾರು ಆಪಾದನೆಗಳನ್ನು ಹೊತ್ತುಕೊಂಡಿತ್ತು.[೧೦೭][೧೦೮] ಸುತ್ತಲೂ ವಾದವಿವಾದಗಳು ಹರಡಿಕೊ೦ಡಿದ್ದರು ಸಹ ಸಾಯಿಬಾಬಾರವರು ತಮ್ಮ ಸುತ್ತಲು ಇರುವ ವಿವಿಧ ಧರ್ಮಗಳ ಜನರನ್ನು ಸಂತೈಸಲು ಪ್ರಯತ್ನಿಸುತ್ತಿದ್ದರು ಎಂದು ವಿಮರ್ಶಕರು ಒಂದು ಲೇಖನದಲ್ಲಿ ದಾಖಲಿಸಿದರು ಸಾಯಿ ಬಾಬರವರ ಆಧ್ಯಾತ್ಮಿಕ ವ್ಯಕ್ತಿತ್ವದ ಬಗೆಗೆ ವಾದವಿವಾದಗಳಿದ್ದರು ಸಹ ಸಾಯಿ ಸಂಸ್ಥೆಯ ಅಡಿಯಲ್ಲಿ ಮಾಡಿದ ವಿವಿಧ ಪರೋಪಕಾರಿ ಕೆಲಸಗಳ ಬಗೆಗೆ ಯಾರೂ ಸಹ ಸ೦ಶಯವನ್ನು ಪಡಲಿಲ್ಲ ಎಂದು ವೀಕ್ಲಿ ಆಫ್ ಇ೦ಡಿಯಾದಲ್ಲಿ ಮುದ್ರಿಸಲಾಗಿತ್ತು.[೧೦೭]

BBC ಮತ್ತು ದನೀಷ್ ಬ್ರಾಡ್ ಕಾಸ್ಟಿಂಗ್ ಕಾರ್ಪೋರೇಶನ್ನಿಂದ ಸಾಕ್ಷ್ಯಚಿತ್ರಗಳು ಪ್ರಕಟಿಸಲ್ಪಟ್ಟವು,ನಡೆದ ಪವಾಡಗಳ ವೀಡಿಯೋ ಚಿತ್ರಗಳನ್ನು ವಿಶ್ಲೇಷಿಸಿದ ನಂತರ, ಅವುಗಳು ಕೈಚಳಕದಿ೦ದ ಆದ ತ೦ತ್ರಗಳು ಎ೦ಬ ಅಭಿಪ್ರಾಯವನ್ನು ಸೂಚಿಸಲಾಯಿತು.[೧೦೮][೧೦೯] ೧೯೯೫ ರಲ್ಲಿ ಟಿವಿ ಯ ಸಾಕ್ಷ್ಯಚಿತ್ರ ಗುರು ಬಸ್ಟರ್ಸ್ ನ್ನು,[೧೧೦] ಒಬ್ಬ ಚಿತ್ರ ತಯಾರಕನಾದ ರಾಬರ್ಟ್ ಈಗಲ್ನಿಂದ ಯು ಕೆ ಯ ಚಾನೆಲ್ 4ಗೋಸ್ಕರ ನಿರ್ಮಿಸಲ್ಪಡಲಾಯಿತು, ಅದರಲ್ಲಿ ಸಾಯಿ ಬಾಬಾರವರು ಸುಳ್ಳನ್ನು ಸೃಷ್ಠಿ ಮಾಡುವ ಆರೋಪವನ್ನು ಹೊತ್ತರು. ಒಂದು ವಿಡಿಯೋ ಟೇಪ್ [೧೧೧] ಒಬ್ಬ ಮಂತ್ರವಾದಿಯ ತಂತ್ರಗಳನ್ನೆಲ್ಲಾ ಇಲ್ಲಿ ಉಪಯೋಗಿಸಲ್ಪಡುತ್ತಿವೆ ಎಂಬ ಸೂಚನೆಯನ್ನು ಒದಗಿಸಿತ್ತು. ಅದೇ ವಿಡಿಯೋ ಟೇಪ್ ಡೆಕ್ಕನ್ ಕ್ರಾನಿಕಲ್ ನಲ್ಲಿ ೨೩ ನವೆಂಬರ್ ೧೯೯೨ ರಂದು ಮೊದಲ ಪುಟದ ಮುಖ್ಯಾಂಶವಾಗಿ "ಡಿಡಿ ಟೇಪ್ ಬಾಬಾರ ಮಂತ್ರವನ್ನು ಅನಾವರಣಗೊಳಿಸಿತು" .[೧೧೨]

BBCಯು ೨೦೦೪ರಲ್ಲಿ ಸಾಕ್ಷ್ಯಚಿತ್ರವನ್ನು ದಿ ಸೀಕ್ರೆಟ್ ಸ್ವಾಮಿ ಎ೦ಬ ಹೆಸರಿನಲ್ಲಿ ಯುನೈಟೆಡ್ ಕಿಂಗ್ ಡಮ್ ನಲ್ಲಿ ಮತ್ತು ಬಿಬಿಸಿ ವರ್ಲ್ಡ್ ನಲ್ಲಿ 'ದಿ ವರ್ಲ್ಡ್ ಅನ್ ಕವರ್ಡ್'ಎ೦ಬ ಕಂತುಗಳಲ್ಲಿ ಪ್ರದರ್ಶಿಸಿತು .[೧೧೩] BBCಯ ಸಾಕ್ಷ್ಯಚಿತ್ರವು ಒಂದು ಪ್ರಮುಖ ವಿಷಯವಾದ ಅಲಾಯ ರಾಹ್ಮ್ ನ ಲೈಂಗಿಕ ಬೈಗುಳಗಳ ಆರೋಪಗಳು ಸಾಯಿ ಬಾಬಾರ ಬಗ್ಗೆ ಆಧರಿಸಿದ್ದಾಗಿತ್ತು.[೧೦೮] ಮಾರ್ಕ್ ರೋಷೆ ಯ ಜೊತೆಗಿನ ಸಂದರ್ಶನದ ಸಾಕ್ಷ್ಯಚಿತ್ರದಲ್ಲಿ ,ಆತನು ಸುಮಾರು೧೯೬೯ರಿ೦ದ ತನ್ನ ಜೀವನದ ೨೫ ವರ್ಷಗಳನ್ನು ಚಳುವಳಿಗಾಗಿ ಮೀಸಲಿಟ್ಟಿದ್ದನು ಮತ್ತು ಅವರಿಂದ ಕಿರುಕುಳ ಕ್ಕೊಳಗಾಗಿರುವೆನೆಂದು ಆರೋಪಿಸಿದನು BBC ಗೋಸ್ಕರ ಒಬ್ಬ ಪ್ರತಿನಿಧಿ ಯು ಏಷಿಯಾ ವಾಯ್ಸ್ ಒಂದು ಮುಂದುವರೆದ ಸಮತೋಲನವುಳ್ಳ ಮತ್ತು ನಿಷ್ಪಕ್ಷಪಾತವಾದ ಸಾಕ್ಷ್ಯಚಿತ್ರವನ್ನು ನಿರ್ಮಿಸಿದರು, ಮತ್ತು ಅದೊಂದು ಸಂದ್ಧಿಗ್ದ ಸಮಯದ ಕಥೆಯಾಗಿದೆ ಹಾಗು ಅಂತಿಮವಾಗಿ, ಸತ್ಯಕ್ಕೆ ದೂರವಾದುದಾಗಿದೆ.[೧೧೪] ಮತ್ತೊಂದು ಸಾಕ್ಷ್ಯಚಿತ್ರ ಸಾಯಿ ಬಾಬನಿಂದ ಭ್ರಷ್ಟಗೊಂಡ ,ಕಿರುಕುಳ ಹಾಗು ಆರೋಪಗಳನ್ನು ಒಳಗೊ೦ಡ ಸಂದರ್ಶನವಾಗಿತ್ತು. ಡೆನ್ಮಾರ್ಕ್ ನ ರಾಷ್ಟ್ರೀಯ ದೂರದರ್ಶನ ಮತ್ತು ರೇಡಿಯೋ ಬ್ರಾಡ್ ಕಾಸ್ಟಿಂಗ್ ಕಂಪನಿ,ಡೆನ್ಮಾರ್ಕ್ ರೇಡಿಯೋ (Dr) , ದಿಂದ ಇದನ್ನು ನಿರ್ಮಿಸಲ್ಪಟ್ಟಿದೆ.

ವಿಮರ್ಶೆಗೆ ಪ್ರತಿಕ್ರಿಯೆಗಳು.[ಬದಲಾಯಿಸಿ]

ಇದಲ್ಲದೆ ಸತ್ಯ ಸಾಯಿ ಬಾಬ ಮತ್ತು ಅವರಿಗೆ ಸ೦ಭ೦ದಿಸಿದ ಸಂಘಟನೆಗಳ ವಿರುದ್ಧ ನ್ಯಾಯಾಲಯದಲ್ಲಿ ಲೈಂಗಿಕ ಕಿರುಕುಳ ಅಥವಾ ಯಾವುದೇ ಬೇರೆ ಅಪರಾಧಗಳಿಗೆ ಶಿಕ್ಷಿಸಲಾಗುವುದು ಅಥವಾ ಆರೋಪಿಸಲಾಗುವುದು.[೧೧೫] ಅಲಾಯ್ ರಾಹ್ಮ್ ಸತ್ಯ ಸಾಯಿ ಬಾಬ ಸೊಸೈಟಿ ವಿರುದ್ದ ಕಾನೂನು ದಾವೆಯನ್ನು ಕ್ಯಾಲಿಫೋರ್ನಿಯಾದ ಉಚ್ಚ ನ್ಯಾಯಾಲಯ ದಲ್ಲಿ ಜನವರಿ ೬ ೨೦೦೫ ರಂದು ಹೂಡಿದನು. ಏಪ್ರಿಲ್ ೭, ೨೦೦೬ ರಂದು ಅಲಾಯ್ ರಾಹ್ಮ್ ನು ತನ್ನ ಕಾನೂನು ದಾವೆಯಲ್ಲಿ ಅರ್ಹತೆಯ ಕೊರತೆಯಿದೆ ಎ೦ಬ ಸೂಚನೆಯನ್ನು ಅರಿತು ಅದನ್ನು ಹಿಂದಕ್ಕೆ ತೆಗೆದುಕೊಂಡನು. "ಪಕ್ಷಪಾತದೊಂದಿಗೆ ಮತ್ತೊಮ್ಮೆ ಇದೇ ತರದ ದಾವೆಯನ್ನು ಹೂಡಬಾರದೆಂದು ಹೇಳಿ ಕೇಸನ್ನು ವಜಾಗೊಳಿಸಲಾಯಿತು .[೧೧೫] ದಿ ಪಯೋನೀರ್ ನಲ್ಲಿ ಅಲಾಯ್ ರಾಹ್ಮ್ ಗೆ ಯಾವುದೇ ತರದ ಹಣದ ಪ್ರಸ್ಥಾವನೆಯನ್ನು ನಿಡಲಿಲ್ಲ ಎ೦ಬುದನ್ನು ಗುರುತಿಸಿತು.[೧೧೫]

ಒಂದು ದಿನಪತ್ರಿಕೆ ಯೊಂದಿಗಿನ ಸಂದರ್ಶನದ ವೇಳೆಯಲ್ಲಿ ಏಷಿಯನ್ ವಾಯ್ಸ್ ಅಶೋಕ ಭಗಾನಿ ಯು ಕೆ ಯಲ್ಲಿನ ಸಾಯಿ ಸಂಘಟನೆಯ ಟ್ರಸ್ಟೀ ಯಾದ ಇವರು BBc ಸಾಕ್ಷ್ಯಚಿತ್ರದ ಸೀಕ್ರೆಟ್ ಸ್ವಾಮಿ ಯ ಮೇಲಿನ ಆರೋಪಗಳೆಲ್ಲವೂ ಆಧಾರರಹಿತವಾದವು ಎಂದು ಹೇಳಿದ್ದಾರೆ. ಭಕ್ತಾದಿಗಳು ಎ೦ದಿಗೂ ಬಾಬಾರವರನ್ನು ಒಂಟಿಯಾಗಿ ಭೇಟಿಯಾಗಿಲ್ಲವೆ೦ದು ಭಗಾನಿ ಹೇಳುತ್ತಾರೆ.[೧೧೪]

ಲಾರೆನ್ಸ್ ಎ . ಬಾಬ್ ಹೇಳಿರುವುದೇನೆಂದರೆ "ಆತನ ಹಲವಾರು ತ೦ತ್ರಗಳು ಅವನು ಒಬ್ಬ ತ೦ತ್ರಗಳನ್ನು ಕೂಡಿಹಾಕುವ ಮ೦ತ್ರವಾದಿ ಎಂದು ಹೇಳುತ್ತವೆ."[೯] ಬಿಲ್ ಐಟ್ಕಿನ್(ಪ್ರವಾಸಿಗ) ಭಕ್ತಾದಿ ದಿ ವೀಕ್ ನಿಂದ ಉಲ್ಲೇಖಿಸಲ್ಪಟ್ಟಂತೆ ಗುರುಗಳ ಬಗ್ಗೆ ನಕಾರಾತ್ಮಕ ಕಥೆಗಳನ್ನು ಪ್ರಕಟಿಸುವುದರಿಂದ ಸತ್ಯ ಸಾಯಿ ಬಾಬ ರ ಗೌರವಕ್ಕೆ ತೊಂದರೆ ಉಂಟಾಗುವುದಿಲ್ಲ ಎಂದು ಹೇಳಲಾಯಿತು. ಸಾಯಿ ಬಾಬರವರಿಗೆ ಎಷ್ಟು ಜನ ನಿ೦ದಿಸುವವರು ಇರುತ್ತಾರೊ ಅದಕ್ಕಿ೦ತ ಹೆಚ್ಚು ಜನ ಭಕ್ತಾದಿಗಳು ಅವರನ್ನು ಕಾಣಲು ಹೋಗುತ್ತಾರೆ.[೧೧೬]

ಡೈಲಿ ಟೆಲಿಗ್ರಾಫ್ ನಲ್ಲಿ ಪ್ರಕಟಿತವಾದ ಡಿವೈನ್ ಡೌನ್ ಫಾಲ್ ನಲ್ಲಿ ಸತ್ಯ ಸಾಯಿಬಾಬಾ ಎಜುಕೇಷನಲ್ ಇನ್ ಸ್ಟಿಟ್ಯೂಟ್ ನ ಮಾಜಿ ಪ್ರಿನ್ಸಿಪಾಲ್ ರಾಗಿದ್ದ ಪ್ರೊಫೆಸರ್ ಅನಿಲ್ ಕುಮಾರ್ ಈ ರೀತಿಯಾಗಿ ಹೇಳಿದ್ದಾರೆ ವಿವಾದಗಳು ಬಾಬಾರ ಒಂದು ದೈವಿ ಯೋಜನೆಯಾಗಿದೆ ಮತ್ತು ಪ್ರತಿಯೊಬ್ಬ ಉತ್ತಮ ಧಾರ್ಮಿಕತೆ ಉಳ್ಳ ಶಿಕ್ಷಕನು ವಿಮರ್ಶೆಗಳನ್ನು ಅವನ/ಅವಳ ಜೀವನದಲ್ಲಿ ಎದುರಿಸಬೇಕಾಗುತ್ತದೆ. ವಿವಾದಗಳು ಸತ್ಯ ಸಾಯಿ ಬಾಬಾರಿಗೆ ಬಾಲ್ಯದಿಂದಲೇ ಇದ್ದರೂ ಪ್ರತಿಯೊಂದು ವಿಮರ್ಶೆಯಿಂದಲೂ ಅವರು ಹೆಚ್ಚು ಹೆಚ್ಚು ಜಯಶೀಲರಾಗಿದ್ದಾರೆ ಎಂದು ಅನಿಲ್ ಕುಮಾರ್ ಹೇಳಿದ್ದಾರೆ.[೧೧೭] ಸಾಮಾನ್ಯ ಜನರಿಗಾಗಿ ಡಿಸೆಂಬರ್ ೨೦೦೧ರಲ್ಲಿ ಅಧಿಕೃತವಾದ ಪತ್ರವೊಂದನ್ನು ಪ್ರಕಟಿಸಲಾಯಿತು,ಎ.ಬಿ.ವಾಜಪೇಯಿ (ನಂತರ ಭಾರತದ ಪ್ರಧಾನಮಂತ್ರಿ),ಪಿ.ಎನ್.ಭಗವತಿ(ಭಾರತದ ಸರ್ವೋಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಾದೀಶ), ರಂಗನಾಥ ಮಿಶ್ರ (ಚೇರ್ಮನ್, ರಾಷ್ಟೀಯ ಮಾನವ ಹಕ್ಕು ಆಯೋಗದ ಕಮೀಷನರ್ ಮತ್ತು ಭಾರತದ ಸರ್ವೋಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಾದೀಶ ), ನಜ್ಮ್ ಹೆಪ್ ತುಲ್ಲಾ-ಪಾರ್ಲಿಮೆಂಟ ಅಧ್ಯಕ್ಷ; ಯುಎನ್ ಡಿಪಿ ಯ ಡಿಸ್ಟಿಂಗ್ ವಿಶ್ವ ಆಭಿವೃದ್ಧಿಯ ರಾಯಬಾರಿ) ಮತ್ತು ಶಿವರಾಜ್ ಪಾಟೀಲ್ ಪಾರ್ಲಿಮೆಂಟಿನ ಸದಸ್ಯ, ಭಾರತ:ಲೋಕಸಭಾ ಮತ್ತು ಕಾರ್ಮಿಕ ಮಂತ್ರಿ,)ಇವರೆಲ್ಲರೂ ಪತ್ರಕ್ಕೆ ಸಹಿ ಹಾಕಿದರು, ಇದು ಈ ರೀತಿಯಾಗಿ ವಿವರಿಸುತ್ತದೆ, ' "ನಾವುಗಳು ಆಳವಾದ ನೋವನ್ನು ಅನುಭವಿಸಲ್ಪಟ್ಟಿದ್ದೇವೆ ಅನಾಗರಿಕ,ಅಜಾಗರೂಕ ಮತ್ತು ಕಲ್ಪಿಸಿಕೊಂಡ ಆರೋಪಗಳನ್ನು ನಿಯಮಿತ ವಶಪಡಿಸುವ ಆಸಕ್ತಿಗಳು ಮತ್ತು ಭಗವಾನ್ ಶ್ರೀ ಸತ್ಯ ಸಾಯಿ ಬಾಬಾರ ವಿರುದ್ಧವಾಗಿರುವ ಜನರಿಂದ ಮಾಡಲ್ಪಟ್ಟಿದೆ. ನಾವುಗಳು ಸಾಮಾನ್ಯವಾಗಿ ಒಪ್ಪಿಕೊಳ್ಳಲೇಬೇಕಾದ ವಿಷಯವೆ೦ದರೆ ಜವಾಬ್ದಾರಿಯುತವಾದ ಮಾಧ್ಯಮಗಳು ಅಪನಿಂದೆಯನ್ನು ಮುದ್ರಿಸುವುದಕ್ಕಿಂತ ಮುಂಚೆ ಅದನ್ನು ಖಚಿತಪಡಿಸಿಕೊಳ್ಳಬೇಕು-ವಿಶೇಷತಃ ಯಾವಾಗ ಎಂದರೆ ಒಬ್ಬ ವ್ಯಕ್ತಿ ಜಾಗತಿಕವಾಗಿ , ಪ್ರೀತಿ ಮತ್ತು ತನಗಾಗಿ ಅಲ್ಲದೆ ಮನುಕುಲಕ್ಕೆ ಸೇವೆಯನ್ನು ಒದಗಿಸುವಾಗ. ಅಂದಿನಿಂದ ಈ ವೃತ್ತಿಪರ ನೀತಿನಿಯಮಗಳು ಮಾಧ್ಯಮಗಳ ವಿಭಾಗದಿಂದ ಗಮನಿಸಲ್ಪಟ್ಟಿಲ್ಲ, ಹಾಗು ಸಹಿ ಹಾಕಿದ ವಿವರಣೆಯೊಂದಿಗೆ ಜನರ ಬಳಿ ಹೋಗಲು ಚುನಾಯಿತರಾಗಿದ್ದೇವೆ."[೧೧೮]

ಟೈಮ್ಸ್ ಆಫ್ ಇಂಡಿಯಾ ೨೬ ಡಿಸೆಂಬರ್ ದಿನದ ೨೦೦೦ ದಂದಿನ ಚಿಕ್ಕ ಲೇಖನವು ಈ ರೀತಿಯಾಗಿ ಹೇಳುತ್ತದೆ ಸತ್ಯ ಸಾಯಿ ಬಾಬಾ "ಬಿರುಸಾಗಿದ್ದಾರೆ" ಅವರ ನಿಂದನೆ ಮಾಸಪತ್ರಿಕೆಯಲ್ಲಿ ಪ್ರಕಟಿಸಿದ ಚರ್ಚೆಗಳಿಗೆ ತಮ್ಮ ಅಭಿಪ್ರಾಯವನ್ನು ಸೂಚಿಸುತ್ತರೆ, ದಿನಪತ್ರಿಕೆಯು ಅವರನ್ನು ಈ ರೀತಿಯಾಗಿ ಉಲ್ಲೇಖಿಸುತ್ತದೆ, "ಜೀಸಸ ಕ್ರಿಸ್ತನು ಹಲವಾರು ಯಾತನೆಗಳನ್ನು ಅನುಭವಿಸಿದ್ದಾನೆ ಮತ್ತು ಅವನನ್ನು ಮತ್ಸರದಿಂದಾಗಿ ಶಿಲುಬೆಗೇರಿಸಲಾಯಿತು. ಅವನ ಸುತ್ತಲಿನ ಕೆಲವರು ಅವನು ಮಾಡಿದ್ದ ಒಳ್ಳೆ ಸೇವೆಗಳನ್ನು ಸಹಿಸಲಿಲ್ಲ ಮತ್ತು ದೊಡ್ಡ ಸಂಖ್ಯೆಯ ಅನುಯಾಯಿಗಳನ್ನು ಅವನು ಹೊಂದಿದ್ದನು. ಅವರಲ್ಲೊಬ್ಬ ಅನುಯಾಯಿ ಜುಡಾಸ್ ಅವನಿಗೆ ನಂಬಿಕೆದ್ರೋಹ ಮಾಡಿದನು". ನಂತರ ಬಾಬಾರವರು "ಜೀಸಸ್ ಗೆ ನಂಬಿಕೆದ್ರೋಹ ಮಾಡಿದ ಜುಡಾಸ್ ನಂತವರು ಇಂದು ಸಾವಿರ ಜನ ಇದ್ದಾರೆ, ಇಂದಿನ ಜುಡಾಸ್ ಗಳನ್ನು ಸುಳ್ಳಿಗಾಗಿ ಖರೀದಿಸಲಾಗಿದೆ ಎಂದು ಹೇಳಿದರು. ಅವನನ್ನು ಮಟ್ಟಹಾಕಲು ಮಾಡಿದ ಆರೋಪಗಳ ಹಿಂದಿನ ಉದ್ದೇಶವು ಮತ್ಸರವೇ ಆಗಿತ್ತು".[೧೧೯]

ಸತ್ಯ ಸಾಯಿ ಬಾಬಾ ತಮ್ಮ ವಿರುದ್ಧದ ಆರೋಪಗಳಿಗೆ ೨೫ ಡಿಸೆಂಬರ್ ೨೦೦೦ ದ ಸಾರ್ವಜನಿಕ ಪ್ರವಚನದಲ್ಲಿ ಸ್ಪಂದಿಸಿದರು. ಅವರು ಹೀಗೆ ವಿವರಿಸುತ್ತಾರೆ "ಕೆಲವು ಜನರು ನೀಚ-ಭಾವನೆಯುಳ್ಳ ಮನಸ್ಸಿನವರು ಸಾಯಿ ಬಾಬಾನ ಪ್ರತಿಮೆಗೆ ಕಳಂಕ ಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಹೆಸರು ಮತ್ತು ಕೀರ್ತೀಯ ನಂತರ ನಾನಿರುವುದಿಲ್ಲ. ಹೆಸರು ಮತ್ತು ಕೀರ್ತೀಯ ನಂತರ ನಾನಿರುವುದಿಲ್ಲ. ನನ್ನ ವೈಭವವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇರುತ್ತದೆ. ಒಂದು ವೇಳೆ ಅವರು ದಪ್ಪಕ್ಷರಗಳಲ್ಲಿ ಇಡೀ ಪ್ರಪಂಚಕ್ಕೆ ತಮ್ಮ ಮೇಲಿನ ಸುಳ್ಳು ಆರೋಪಗಳನ್ನು ಪ್ರಕಟಿಸಿದರೂ, ಆರೋಪಗಳು ತೃಣಮಾತ್ರವೂ ಕಡಿಮೆಯಾಗಲ್ಲ. ಕೆಲವು ಭಕ್ತಾಧಿಗಳು ಈ ತಪ್ಪು ಹೇಳಿಕೆಗಳಿಂದಾಗಿ ಗೊಂದಲಕ್ಕೀಡಾಗುವರು ಎಂದನಿಸುತ್ತಿದೆ. ಅವರು ನಿಜವಾದ ಭಕ್ತಾಧಿಗಳೇ ಅಲ್ಲ. ಸಾಯಿಯ ಪ್ರಬಲ ಶಕ್ತಿಯನ್ನು ಅರಿತಿದ್ದರೂ ಸಹ, 'ಕಾಗೆಗಳ ಕೂಗಿಗೇಕೆ'? ಅವರು ಹೆದರಬೇಕಾಗಿದೆ. ಗೋಡೆಗಳ ಮೇಲೆ ಬರೆದದ್ದನ್ನು,ರಾಜಕೀಯ ಸಭೆಗಳಲ್ಲಿ ಹೇಳಿದ್ದನ್ನು ಅಥವಾ ಪ್ರಕಾಶಕ ಮಾಧ್ಯಮಗಳಿಂದ ಪ್ರಕಟಿತವಾದ ಕೆಟ್ಟ ಕಥೆಗಳನ್ನು ಯಾರೊಬ್ಬರಿಂದಲೂ ಹಿಂದಕ್ಕೆ ತೆಗೆದುಕೊಳ್ಳಲಾಗುವುದಿಲ್ಲ.[೧೨೦]

ಇವನ್ನೂ ಗಮನಿಸಿ[ಬದಲಾಯಿಸಿ]

ಟೆಂಪ್ಲೇಟು:Portal

ಆಕರಗಳು[ಬದಲಾಯಿಸಿ]

  1. ೧.೦ ೧.೧ Edwards, Linda (೨೦೦೧). A Brief Guide to Beliefs: Ideas, Theologies, Mysteries, and Movements. Westminster John Knox Press. p. ೧೩೭. ISBN ೦-೬೬೪-೨೨೨೫೯-೫.
  2. ೨.೦ ೨.೧ ೨.೨ ೨.೩ ೨.೪ ೨.೫ Richard Weiss, Victoria University of Wellington – The Global Guru: Sai Baba and the Miracle of the Modern; Available Online: http://www.nzasia.org.nz/downloads/NZJAS-Dec05/7_2_2.pdf Archived 2011-07-18 ವೇಬ್ಯಾಕ್ ಮೆಷಿನ್ ನಲ್ಲಿ.
  3. Balakrishnan, Deepa (23 November 2007). "Sai Baba turns 82, is still going strong". CNN-IBN. Archived from the original on 2010-08-25. Retrieved 2010-01-06.
  4. Lochtefeld, James G. (೨೦೦೨). The Illustrated Encyclopedia of Hinduism (Vol. ೨ N-Z). New York: Rosen. ISBN ೦-೮೨೩೯-೨೨೮೭-೧.(pg ೫೮೩)
  5. Nagel, Alexandra (note: Nagel is a critical former follower) "Een mysterieuze ontmoeting ... :Sai Baba en mentalist Wolf Messing" published in Tijdschrift voor Parapsychologie ೩೬೮, vol. ೭೨ nr ೪, December ೨೦೦೫, pp. ೧೪-೧೭ (Dutch) This muddled reference needs converting to cite journal.
  6. Lochtefeld, James G. (2002). The Illustrated Encyclopedia of Hinduism (Vol. 1). Rosen. ISBN 0-8239-3179-X. See entry: "Godman".
  7. Hummel, Reinhart; Linda W. Duddy (translator) (೧೯೮೪). "Guru, Miracle Worker, Religious Founder: ಸತ್ಯ ಸಾಯಿ ಬಾಬ". Dialogcentret Article in Update IX ೩, September ೧೯೮೫, originally published in German in Materialdienst der EZW, ೪೭ Jahrgang, ೧ February ೧೯೮೪. This muddled reference needs converting to cite journal.
  8. Urban, Hugh B. (2003). "Avatar for Our Age: Sathya Sai Baba and the Cultural Contradictions of Late Capitalism". Religion. Elsevier. 33 (1): 82. Retrieved 2010-01-05.
  9. ೯.೦೦ ೯.೦೧ ೯.೦೨ ೯.೦೩ ೯.೦೪ ೯.೦೫ ೯.೦೬ ೯.೦೭ ೯.೦೮ ೯.೦೯ ೯.೧೦ ೯.೧೧ ೯.೧೨ Babb, Lawrence A. (1991). Redemptive Encounters: Three Modern Styles in the Hindu Tradition. Biography section available online - see google book search: University of California Press. pp. 164–166. ISBN 0520076362. {{cite book}}: External link in |location= (help)CS1 maint: location (link)
  10. Adherents Archived 2020-01-12 ವೇಬ್ಯಾಕ್ ಮೆಷಿನ್ ನಲ್ಲಿ. cites Chryssides, George. Exploring New Religions . London, UK: Cassells (೧೯೯೯) (೧೦ million)
    *Brown, Mick (೨೦೦೦-೧೦-೨೮). "Divine Downfall". Daily Telegraph. http://www.telegraph.co.uk/health/main.jhtml?xml=/health/2000/10/28/tlbaba28.xml Archived 2008-09-25 ವೇಬ್ಯಾಕ್ ಮೆಷಿನ್ ನಲ್ಲಿ.. Retrieved ೨೦೦೭-೦೩-೧೨
    *Edwards, Linda (೨೦೦೧). A Brief Guide to Beliefs: Ideas, Theologies, Mysteries, and Movements. Westminster John Knox Press. ISBN ೦-೬೬೪-೨೨೨೫೯-೫.
  11. "Sai Baba turns 84". Thestar.com.my. 2009-12-03. Archived from the original on 2011-05-21. Retrieved 2010-01-06.
  12. "The Sai Organization: Numbers to Sai Centers and Names of Countries". Sathyasai.org. Retrieved 2010-01-06.
  13. ೧೩.೦ ೧೩.೧ Urban, Hugh B. (2003). "Avatar for Our Age: Sathya Sai Baba and the Cultural Contradictions of Late Capitalism". Religion. Elsevier. 33 (1): 74. Retrieved 2010-01-05.
  14. Bradsher, Keith (2002-12-01). "A Friend in India to All the World". The New York Times. Retrieved 13 January 2010.
  15. Palmer, Norris W. "Baba's World". In: Forsthoefel, Thomas A.; Humes, Cynthia Ann (eds.) (2005). Gurus in America. Albany, NY: State University of New York Press. pp. 97–98. ISBN 0-7914-6574-8. {{cite book}}: |first2= has generic name (help)
  16. Haraldsson, Erlendur, Miracles are my visiting cards - An investigative inquiry on ಸತ್ಯ ಸಾಯಿ ಬಾಬ, (೧೯೯೭ revised and updated edition published by Sai Towers, Prasanthi Nilayam, India) ISBN ೮೧-೮೬೮೨೨-೩೨-೧ page ೫೫:
  17. ೧೭.೦ ೧೭.೧ John Eade, Christopher Mele: Understanding the City:Contemporary and Future Perspectives
  18. Palmer, Norris W. "Baba's World". In: Forsthoefel, Thomas A.; Humes, Cynthia Ann (eds.) (2005). Gurus in America. Albany, NY: State University of New York Press. p. 99. ISBN 0-7914-6574-8. {{cite book}}: |first2= has generic name (help)
  19. CJ: Mazhar Nawaz. "Sathya Sai Baba celebrates his 84th birthday". Merinews.com. Retrieved 2010-01-06.
  20. ೨೦.೦ ೨೦.೧ ೨೦.೨ ೨೦.೩ Kent, Alexandra (2005). Divinity and Diversity: A Hindu Revitalization Movement in Malaysia. Biography section available online - see google book search: Nordic Institute of Asian Studies. pp. 37–39. ISBN 8791114403. {{cite book}}: External link in |location= (help)CS1 maint: location (link)
  21. ೨೧.೦ ೨೧.೧ Alexandra Kent - Creating Divine Unity: Chinese Recruitment in the ಸತ್ಯ ಸಾಯಿ ಬಾಬ Movement of Malaysia
  22. ೨೨.೦ ೨೨.೧ ೨೨.೨ ೨೨.೩ ೨೨.೪ ೨೨.೫ Larson’s Book of World Religions and Alternative Spirituality
  23. Staff (29 May 2000). "Sathya Sai Speaks (2000) 14. My Life is My Message" (PDF). Sri Sathya Sai Books and Publications Trust. Retrieved 2010-01-06.
  24. ೨೪.೦ ೨೪.೧ Murphet, Howard (೧೯೭೭). Man of Miracles. Weiser. ISBN ೦-೮೭೭೨೮-೩೩೫-೪.
  25. ೨೫.೦ ೨೫.೧ "Sathyam Sivam Sundaram Part I: 5.The Serpent Hill". Vahini.org. 1940-03-08. Retrieved 2010-01-06.
  26. ೨೬.೦ ೨೬.೧ Staff (23 Nov 2003). "Sathya Sai Speaks Volume 36 (2003): 20. Mother's Role in Human Values" (PDF). Sri Sathya Sai Books and Publications Trust. Retrieved 2010-01-06.
  27. Schulman, Arnold (೧೯೭೧). Baba. Viking Press. pp. ೧೨೨–೧೨೪. ISBN ೦-೬೭೦-೧೪೩೪೩-X.
  28. ೨೮.೦ ೨೮.೧ Bowen, David (೧೯೮೮). The ಸತ್ಯ ಸಾಯಿ ಬಾಬ Community in Bradford: Its origins and development, religious beliefs and practices. Leeds: University Press. ISBN ೧-೮೭೧೩೬೩-೦೨-೦.
  29. ೨೯.೦ ೨೯.೧ ೨೯.೨ "Sri Sathya Sai 80th year of Advent". The Hindu India’s National Newspaper. 2005-11-23. Archived from the original on 2009-06-01. Retrieved 2010-01-10.
  30. ೩೦.೦ ೩೦.೧ Murphet, Howard (೧೯೭೭). Man of Miracles. Weiser. ISBN ೦-೮೭೭೨೮-೩೩೫-೪ portions available online http://books.google.ca/books?id=BPsVFqhclS0C&printsec=frontcover#v=onepage&q=&f=false
  31. "Shiva Shakthi". Sathyasai.org. 1963-07-06. Retrieved 2010-01-06.
  32. ೩೨.೦ ೩೨.೧ ೩೨.೨ "Sathyam Sivam Sundaram Part III: 3. The Awakening Continent". Vahini.org. 1968-12-07. Retrieved 2010-01-06.
  33. Staff (4-7-1968). "Sathya Sai Speaks Volume 8 (1968): 22. The message I bring" (PDF). Sri Sathya Sai Books and Publications Trust. Retrieved 2010-01-06. {{cite web}}: Check date values in: |date= (help)
  34. ೩೪.೦ ೩೪.೧ ೩೪.೨ ೩೪.೩ "Sathyam, Shivam and Sundaram Mandirs". http://media.radiosai.org. 2006-03-01. {{cite web}}: External link in |publisher= (help)
  35. ೩೫.೦ ೩೫.೧ ೩೫.೨ ೩೫.೩ The Hindu: Water projects: CM all praise for Satya Sai Trust by Our Staff Reporter, ೧೩ February ೨೦೦೪, Available online Archived 2004-04-22 ವೇಬ್ಯಾಕ್ ಮೆಷಿನ್ ನಲ್ಲಿ.
  36. "Sai Global Harmony - Prasanthi Bulletin". Radiosai.org. 2006-04-07. Retrieved 2010-01-06.
  37. Balakrishnan, Deepa (23 November 2007). "Sai Baba turns 82, is still going strong". CNN-IBN. Archived from the original on 2010-08-25. Retrieved 2010-01-06. "However, he has been confined to a wheelchair for over two years now and his failing health has forced him to make fewer public appearances."
  38. ಸತ್ಯ ಪಾಲ್ ರುಹೇಲ –ಶ್ರೀ ಸತ್ಯ ಸಾಯಿ ಬಾಬ ಮತ್ತು ಮುಂದಿನ ಕರುಣಾಮಯಿ
  39. ೩೯.೦ ೩೯.೧ ೩೯.೨ "Who is Sai?". Sathyasai.org. 1974-06-09. Retrieved 2010-01-06.
  40. Dominic, Kennedy (27 August 2001). "Suicide, sex and the guru". The Times (in English). UK: Times Newspapers Ltd. {{cite news}}: More than one of |author= and |last= specified (help)CS1 maint: unrecognized language (link)
  41. "Sathya Sai Baba - Interview with journalist - September 1976". Saibaba.ws. Retrieved 2010-01-07.
  42. "Sri Sathya Sai Baba Organization in Canada - Home Page". Sathyasai.ca. 2006-05-01. Retrieved 2010-01-07.
  43. ೪೩.೦ ೪೩.೧ http://us.sathyasai.org/resources/06oct15CenterGuidelines12.pdf
  44. "The Sri Sathya Sai Baba Centre of Toronto - York". Sathyasaitoronto.org. Retrieved 2010-01-07.
  45. Krishnamoorthy, M. (2 April 2005). "Enlightening experience in India". The Star Online. Retrieved 2010-01-06.
  46. ಪುಟ್ಟಪರ್ತಿಯಲ್ಲಿ ನೋಡಬಹುದಾದಂತಹ ಸ್ಥಳಗಳು. Referenced from official Sathya Sai Organization website, Available online
  47. The Hindu, "A ೫-point recipe for happiness" , by Our Staff Reporter, ೨೪ November ೨೦೦೬ Available online Archived 2011-07-20 ವೇಬ್ಯಾಕ್ ಮೆಷಿನ್ ನಲ್ಲಿ.
  48. The Hindu, "Warm welcome to PM at Puttaparthi" , by Our Staff Reporter, ೧೨ February ೨೦೦೪ Available online Archived 2007-10-12 ವೇಬ್ಯಾಕ್ ಮೆಷಿನ್ ನಲ್ಲಿ.
  49. Deccan Herald: "Sathya Sai's birthday celebrations on" by Terry Kennedy, ೨೩ November ೨೦೦೫, Available online
  50. ಸತ್ಯ ಸಾಯಿ ಬಾಬರವರ ಆಶ್ರಮಗಳು. Referenced from the official Sathya Sai Organization website, Available online
  51. ಉಲ್ಲೇಖ ದೋಷ: Invalid <ref> tag; no text was provided for refs named babatrust
  52. The Hindu: City colleges cheer NAAC rating, ೮ June ೨೦೦೬, Available online Archived 2007-12-12 ವೇಬ್ಯಾಕ್ ಮೆಷಿನ್ ನಲ್ಲಿ..
  53. Draft Report of the Peer Team on Institutional Accreditation of Sri Sathya Sai Institute of Higher Learning (Deemed University) Vidyagiri, Prashanthi Nilayam – ೫೧೫ ೧೩೪ (A.P) Visit Dates: ೨ ಡಿಸೆಂಬರ್ – ೪, ೨೦೦೨ Available online: DOC File.
  54. Sri Sathya Sai Institute of Higher Learning, Anantapur Campus, from an Official Sathya Sai site, Available online Archived 2007-01-27 ವೇಬ್ಯಾಕ್ ಮೆಷಿನ್ ನಲ್ಲಿ.
  55. "Education Plus : An emerging educational hub". The Hindu. 2009-09-07. Retrieved 2010-01-07.
  56. "Varsity for Muddenehalli". Expressbuzz.com. 2008-11-25. Retrieved 2010-01-07.[ಶಾಶ್ವತವಾಗಿ ಮಡಿದ ಕೊಂಡಿ]
  57. Deccan Harald: "Where service comes first " by Aruna Chandaraju, ೧೭ January ೨೦೦೬ Available online
  58. The Hindu: Vajpayee hits out at high cost of medicare by A. Jayaram, ೨೦ January ೨೦೦೧ Available online Archived 2007-10-12 ವೇಬ್ಯಾಕ್ ಮೆಷಿನ್ ನಲ್ಲಿ.
  59. Times Of India, "Sai hospital to host health meet on Saturday" , ೧೪ January ೨೦೦೨ Available online
  60. The Times Of India: Super-Specialty hospital touches ೨.೫ lakh cases by Manu Rao, Available online
  61. "Sai Baba hospital: A refuge to millions" , ೧ May ೨೦೦೧, Available online
  62. The Week: Showers of Grace by Hiramalini Seshadri, ೨೬ May ೨೦೦೨ Available online.
  63. Chennai Online: MK hails Sai Baba's service to mankind, ೨೧ January ೨೦೦೭, Available online
  64. IBN: Karunanidhi shares dais with Sai Baba, ೨೧ January ೨೦೦೭, Available online
  65. Sai Educare Website, authorized by the Sathya Sai Organization, Available online.
  66. "Sathya Sai Educare". Educare.sathyasai.org. Retrieved 2010-01-07.
  67. "Times of Zambia". Times.co.zm. Retrieved 2010-01-07.
  68. ೬೮.೦ ೬೮.೧ http://www.fraserinstitute.org/reportcards/schoolperformance/schooldisplay.aspx?id=ONE೬೬೫೧೩೪
  69. http://www.sathyasai.org/news/೨೦೦೭/TorontoschoolRanking.doc[ಶಾಶ್ವತವಾಗಿ ಮಡಿದ ಕೊಂಡಿ]
  70. "Sathya Sai School Shines! - Sri Sathya Sai Baba Book and Information Centre of Canada". Saibooks.org. 2007-02-13. Archived from the original on 2011-07-27. Retrieved 2010-01-07.
  71. "SSSCT-Service Projects - Water Supply - Anantapur". Srisathyasai.org.in. 1999-11-23. Archived from the original on 2016-03-04. Retrieved 2010-01-07.
  72. The Hindu, "Saibaba Gospel Goes On Air" , ೨೪ November ೨೦೦೧, Available online Archived 2007-10-12 ವೇಬ್ಯಾಕ್ ಮೆಷಿನ್ ನಲ್ಲಿ.
  73. "Canada". Walk For Values. Archived from the original on 2009-12-20. Retrieved 2010-01-07.
  74. "CTV Edmonton - Hundreds walk for values instead of money - Canadian Television". Edmonton.ctv.ca. Retrieved 2010-01-07.
  75. "Canada". Walk For Values. Archived from the original on 2009-12-20. Retrieved 2010-01-07.
  76. "Audio Video | Newstalk 1010". Cfrb.com. Archived from the original on 2008-12-19. Retrieved 2010-01-07.
  77. ೭೭.೦ ೭೭.೧ ೭೭.೨ "2009 Walk for Human Values". Sathyasai.org. 2009-12-20. Retrieved 2010-01-07.
  78. "Newswire - PR / New York Gears Up for Walk for Values USA - Life Style - Walk for Values USA". NewswireToday. 2009-06-21. Retrieved 2010-01-07.
  79. "Walk For Values Canada". Walkforvalues.com. Archived from the original on 2009-12-20. Retrieved 2010-01-07.
  80. "National Walk for Values Home Page". Nationalwalkforvalues.org. Archived from the original on 2009-02-09. Retrieved 2010-01-07.
  81. "2009". Walk For Values USA. Archived from the original on 2010-01-22. Retrieved 2010-01-07.
  82. Values Today, Walk for Values. Toronto Program guide. May ೩೧, ೨೦೦೯. pg ೨
  83. Felicitation for Water Project Indian Express
  84. "Indian News". Indiaenews.com. 2007-01-21. Archived from the original on 2007-10-12. Retrieved 2010-01-07.
  85. Nagel, Alexandra (note: Nagel is a critical former follower) "De Sai Paradox: Tegenstrijdigheden van en rondom ಸತ್ಯ ಸಾಯಿ ಬಾಬ"/"The Sai Paradox contradictions of and surrounding Sathya Sai Baba" from the magazine "Religieuze Bewegingen in Nederland, 'Sekten' "/"Religious movements in the Netherlands, 'Cults/Sects' ", ೧೯೯೪, nr. ೨೯. published by Free University of Amsterdam press, (೧೯೯೪) ISBN ೯೦-೫೩೮೩-೩೪೧-೨
  86. Babb, Lawrence A. (೨೦೦೦) [1986]. Redemptive Encounters: Three Modern Styles in the Hindu Tradition. Prospect Heights, Illinois: Waveland Press Inc.. LCCN ೮೫-೨೮೮೯೭. ISBN ೧-೫೭೭೬೬-೧೫೩-೨. OCLC ೪೫೪೯೧೭೯೫.
  87. ೮೭.೦ ೮೭.೧ ೮೭.೨ Brown Mick, The Spiritual Tourist , Ch: "The Miracle In North London", pp. ೨೯-೩೦, ೧೯೯೮ ISBN ೧-೫೮೨೩೪-೦೩೪-X ೪
  88. ೮೮.೦ ೮೮.೧ Kent, Alexandra Divinity and Diversity: a Hindu revitalization movement in Malaysia , Copenhagen Nias Press, first published in ೨೦೦೫, ISBN ೮೭-೯೧೧೧೪-೪೦-೩, page ೧೨೫
  89. ಸತ್ಯ ಸಾಯಿ ಬಾಬ Shiva Shakthi, on Gurupournima Day, ೬ July ೧೯೬೩, in Sathya Sai Speaks III ೫, ೧೯.) Available online
  90. Nair, Yogas, "Raisins, ash raise eyebrows", The Post ೧೯ April ೨೦೦೬, Available online
  91. ೧೭ March ೨೦೦೪ in the newspaper Post South Africa Available online
  92. "House of Miracles", Sunday ೨೪ March ೨೦೦೨, Durban news, Sunday Times Available online
  93. India Express, "Sai Baba in a DDA flat?" by Rekha Bakshi, Available online Archived 2009-02-20 ವೇಬ್ಯಾಕ್ ಮೆಷಿನ್ ನಲ್ಲಿ.
  94. Haraldsson, op. cit , pp. ??
  95. Haraldsson, op. cit , pp. ೪೩
  96. Haraldsson, op. cit. , pp ೨೩೧, ೨೩೯-೨೪೧
  97. Haraldson, op. cit , pp ೨೦೪-೨೦೫
  98. ೯೮.೦ ೯೮.೧ Interview given by ಸತ್ಯ ಸಾಯಿ ಬಾಬ to R. K. Karanjia of Blitz News Magazine in September of ೧೯೭೬ Available online
  99. Haraldsson, pp ೨೦೯
  100. Haraldsson, op. cit. , pp. ೨೦೬
  101. ೧೦೧.೦ ೧೦೧.೧ ೧೦೧.೨ Brown, Mick The Spiritual Tourist ೧೯೯೮ Bloomsbury publishing ISBN ೧-೫೮೨೩೪-೦೩೪-X Chapter In the House of God pp. ೭೩ - ೭೪
  102. Hislop, John S. My Baba and I ೧೯೮೫ published by Birth Day Publishing Company, San Diego, California ISBN ೦-೯೬೦೦೯೫೮-೮-೮ chapter The Resurrection of Walter Cowan pages ೨೮-೩೧
  103. India Today , "A God Accused", ೪ December ೨೦೦೦ Available online
  104. Tanya Datta (17 June 2004). "Sai Baba: God-man or con man?". BBC News. Retrieved 4 January 2010.
  105. The Vacouver Sun, ೨೭ February ೨೦೦೧, Holy man? Sex abuser? ಎರಡೂ
  106. http://www.sssbpt.info/ssspeaks/volume33/sss33-17.pdf
  107. ೧೦೭.೦ ೧೦೭.೧ Michelle Goldberg (25 July 2005). "Untoucable?". Salon.com. Archived from the original on 27 ಏಪ್ರಿಲ್ 2009. Retrieved 9 ಫೆಬ್ರವರಿ 2010.
  108. ೧೦೮.೦ ೧೦೮.೧ ೧೦೮.೨ Eamon Hardy, Tanya Datta (2004). Secret Swami (Documentary). BBC News. Retrieved 4 January 2010.
  109. Øyvind Kyrø, Steen Jensen (2002). Seduced by Sai Baba (Documentary). DR. Archived from the original on 2010-02-04. Retrieved 2010-02-09.
  110. "Eagle & Eagle". Eagletv.co.uk. Archived from the original on 2010-11-30. Retrieved 2010-01-07.
  111. http://www.eagletv.co.uk/home/videos/Saimagic.mov
  112. Haraldsson, op. cit. , pp. ೨೯೫-೩೦೧
  113. "Programmes | This World | Secret Swami". BBC News. 2004-06-11. Retrieved 2010-01-07.
  114. ೧೧೪.೦ ೧೧೪.೧ New Allegations Of Abuse Against Sai Baba by Payal Nair, Asian Voice, ೨೬ June ೨೦೦೪: [೧][ಶಾಶ್ವತವಾಗಿ ಮಡಿದ ಕೊಂಡಿ]
  115. ೧೧೫.೦ ೧೧೫.೧ ೧೧೫.೨ Jain, Sandhya (March ೩೧st ೨೦೦೯), Move to malign Sai Baba fails
  116. Aitken, Bill (27 November 2005), Miracle of Welfare https://web.archive.org/web/20060909111636/http://www.the-week.com/25nov27/currentevents_article10.htm
  117. Brown, Mick (೨೦೦೦-೧೦-೨೮). "Divine Downfall". ಡೈಲಿ ಟೆಲಿಗ್ರಾಫ್
  118. Sri ಸತ್ಯ ಸಾಯಿ ಬಾಬ - A Living Legend - An Embodiment Of Love For All Mankind, Letter from A.B. Vajpayee (the then Prime Minister of India), [೨][ಶಾಶ್ವತವಾಗಿ ಮಡಿದ ಕೊಂಡಿ]
  119. Rao, Manu (December 26th 2000), Sai Baba lashes out at detractors http://timesofindia.indiatimes.com/articleshow/534425761.cms
  120. Sathya Sai Speaks Vol.೩೩, pg.೩೮೯

ಹೊರಗಿನ ಕೊಂಡಿಗಳು[ಬದಲಾಯಿಸಿ]

Wikiquote
Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
  1. REDIRECT Template:Modern Dharmic writers