ಖುರ್ಷೆದ್ ಅಲಂ ಖಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಖುರ್ಷೆದ್ ಅಲಂ ಖಾನ್ (ಜನನ: ೫ ಫ಼ೆಬ್ರುವರಿ ೧೯೧೯) ಭಾರತದ ರಾಜಕಾರಣಿ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ. ಇವರು ೧೯೮೯ ರಿಂದ ೧೯೯೧ ರವರೆಗೆ ಗೋವಾ ರಾಜ್ಯದ ರಾಜಪಾಲ ಮತ್ತು ೬ ಜನೆವರಿ ೧೯೯೧ ರಿಂದ ೨ ಡಿಸೆಂಬರ್ ೧೯೯೯ ವರೆಗೆ ಕರ್ನಾಟಕ ರಾಜ್ಯದ ರಾಜ್ಯಪಾಲರಾಗಿದ್ದರು. ಇದಕ್ಕೂ ಮುಂಚೆ ಇವರು ಭಾರತ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದರು.