ವಿಷಯಕ್ಕೆ ಹೋಗು

ಎಸ್. ರಾಮಚಂದ್ರ ಐತಾಳ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಸ್. ರಾಮಚಂದ್ರ
ಗುಲಾಬಿ ಟಾಕೀಸ್ ಚಿತ್ರೀಕರಣದ ವೇಳೆ, ೨೦೦೬
ಹುಟ್ಟು(೧೯೪೮-೧೧-೧೬)೧೬ ನವೆಂಬರ್ ೧೯೪೮
ಬೆಂಗಳೂರು, ಮೈಸೂರು ರಾಜ್ಯ
ಸಾವು(2011-01-10)ಜನವರಿ 10, 2011ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"".
ವಿದ್ಯಾಭ್ಯಾಸಎಫ್.ಟಿ.ಐ.ಐ ಛಾಯಾಗ್ರಹಣ ಪದವೀಧರ
ಉದ್ಯೋಗಛಾಯಾಗ್ರಾಹಕ
ಪ್ರಶಸ್ತಿಗಳು

ಎಸ್. ರಾಮಚಂದ್ರ ಎಂದೇ ಖ್ಯಾತರಾದ ಶಿವರಾಮಯ್ಯ ರಾಮಚಂದ್ರ ಐತಾಳ (೧೬ ನವೆಂಬರ್ ೧೯೪೮ – ೧೦ ಜನವರಿ ೨೦೧೧) ಕನ್ನಡ ಚಿತ್ರರಂಗದ ಹೊಸ ಅಲೆಯ ಸಿನಿಮಾಗಳ ಯಶಸ್ಸಿನಲ್ಲಿ ಮಹತ್ವದ ಪಾತ್ರವಹಿಸಿದ್ದ, ರಾಷ್ಟ್ರ ಪ್ರಶಸ್ತಿ ವಿಜೇತ ಪ್ರತಿಭಾನ್ವಿತ ಛಾಯಾಗ್ರಾಹಕ. ಇವರಿಗೆ ೨೦೦೬ರಲ್ಲಿ ಜೀವಮಾನ ಸಾಧನೆಗಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.[].

ಪರಿಚಯ

[ಬದಲಾಯಿಸಿ]

ಎಪ್ಪತ್ತರ ದಶಕದಲ್ಲಿ ಕನ್ನಡ ಚಿತ್ರರಂಗ ಪ್ರವೇಶಿಸಿದ ಎಸ್. ರಾಮಚಂದ್ರ 75ಕ್ಕೂ ಹೆಚ್ಚು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದರು. ವೀಕ್ಷಕರು ಅಚ್ಚರಿ ಪಡುವಂಥ ಅದ್ಭುತ ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದ ಕಲಾತ್ಮಕ ಛಾಯಾಗ್ರಾಹಕ ಎಂದೇ ಪ್ರಸಿದ್ಧರಾಗಿದ್ದರು. ರಾಮಚಂದ್ರ ಅವರ ಛಾಯಾಗ್ರಹಣಕ್ಕೆ ಅಂಥದೊಂದು ಶಕ್ತಿ ಇತ್ತು. ಸಹಜವಾಗಿ ಚಿತ್ರೀಕರಿಸಬೇಕಿದ್ದ ದೃಶ್ಯವೊಂದನ್ನು ವಿಶೇಷವಾದ ರೀತಿಯಲ್ಲಿ, ಇದನ್ನು ಹೀಗೂ ಸೆರೆಹಿಡಿಯಬಹುದೇ ಎಂದು ಬೆರಗಾಗುವ ರೀತಿಯಲ್ಲಿ ಚಿತ್ರಿಸಿಕೊಡುವ ಮಾಂತ್ರಿಕತೆ ಅವರಿಗಿತ್ತು. ಕಲಾತ್ಮಕ ಚಿತ್ರಗಳ ಪರಂಪರೆ ಕನ್ನಡದಲ್ಲಿ ಮಹತ್ವದ ಸ್ಥಾನ ಪಡೆಯುವಲ್ಲಿ ಅವರ ಅಮೂಲ್ಯ ಕೊಡುಗೆ ಇತ್ತು.

ವೃತ್ತಿ

[ಬದಲಾಯಿಸಿ]

ರಾಮಚಂದ್ರರವರು ಪೂನಾ ಫಿಲ್ಮ್ ಇನ್‌ಸಿrಟ್ಯೂಟ್‌ನ ಕೊಡುಗೆ. ಅವರು ೧೯೬೭-೧೯೭೦ರಲ್ಲಿ ಛಾಯಾಗ್ರಹಣದ ವ್ಯಾಸಂಗ ಮಾಡಿದ ಮೊದಲ ತಲೆಮಾರಿನ ಗುಂಪಿಗೆ ಸೇರಿದವರು. ಅಲ್ಲಿಂದ ಬಂದ ನಂತರ ಅವರು ಗಿರೀಶ್‌ ಕಾರ್ನಾಡರ 'ವಂಶವೃಕ್ಷ' ಚಿತ್ರಕ್ಕೆ ಸಹಾಯಕ ಛಾಯಾಗ್ರಾಹಕರಾಗಿ ಕೆಲಸ ಮಾಡಿದರು. 1972 ರಲ್ಲಿ ತೆರೆಕಂಡ 'ಸಂಕಲ್ಪ' ಚಿತ್ರ ರಾಮಚಂದ್ರರನ್ನು ನಾಡಿಗೆ ಪರಿಚಯಿಸಿತು. ಆ ಚಿತ್ರದ ಮೂಲಕ ಸ್ವತಂತ್ರ ಛಾಯಾಗ್ರಾಹಕರಾಗಿ ಅವರು ಕನ್ನಡ ಚಿತ್ರರಂಗದಲ್ಲಿ ನೆಲೆಕಂಡುಕೊಂಡರು. ನಂತರ ಅವರು ಛಾಯಾಗ್ರಹಣ ಮಾಡಿದ ಬಹುತೇಕ ಚಿತ್ರಗಳು ಕಲಾತ್ಮಕ ಚಿತ್ರಗಳಾಗಿದ್ದವು. ಅದು ಅವರಿಗಿರುವ ಹೆಗ್ಗಳಿಕೆಯೂ ಹೌದು. ಕಲಾತ್ಮಕ ಚಿತ್ರಗಳೆಂದರೆ ಅಲ್ಲಿ ಎಸ್.ರಾಮಚಂದ್ರ ಇರಲೇಬೇಕು ಎಂಬಷ್ಟು ಅವರು ಆ ಚಿತ್ರಗಳ ಪಾಲಾಗಿದ್ದರು. ಗಿರೀಶ್ ಕಾಸರವಳ್ಳಿಯವರ ಮೊದಲ ಚಿತ್ರ ಘಟಶ್ರಾದ್ಧವಲ್ಲದೆ, ನಂತರ ಅವರ ಹಲವಾರು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸಮಾಡಿದ್ದಾರೆ. ಸದಾಶಿವ ಶೆಣೈ ನಿರ್ದೇಶನದ 'ಪ್ರಾರ್ಥನಾ' ಅವರ 75ನೆ ಚಿತ್ರ. ಶಂಕರ್ ನಾಗ್ ನಿರ್ದೇಶನದ ಹಿಂದಿಯ 'ಮಾಲ್ಗುಡಿ ಡೇಸ್‌' ಧಾರಾವಾಹಿಗೂ ರಾಮಚಂದ್ರ ಕ್ಯಾಮರಾ ಹಿಡಿದಿದ್ದರು. ನಿರ್ದೇಶಕ ರಾಮದಾಸ್‌ ನಾಯ್ಡು ನಿರ್ದೇಶನದ 'ಹೆಜ್ಜೆಗಳು' ರಾಮಚಂದ್ರ ಅವರು ಕ್ಯಾಮರಾ ಹಿಡಿದ ಕೊನೆಯ ಚಿತ್ರ. ಚಿಕ್ಕ ವಯಸ್ಸಿನಿಂದಲೇ ಪೋಲಿಯೋದ ಕಾರಣ ತುಸು ಕುಂಟುನಡಿಗೆಯಿದ್ದರೂ ಅದನ್ನು ಮೆಟ್ಟಿ ನಿಂತು ಅವರು ಸಾಧನೆಯ ಶಿಖರವೇರಿದರು.

ಪ್ರಶಸ್ತಿ

[ಬದಲಾಯಿಸಿ]

೧೯೭೭ರಲ್ಲಿ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಛಾಯಾಗ್ರಾಹಕ (ಚಂದ್ರಶೇಖರ ಕಂಬಾರ ಕಥೆಯಾಧಾರಿತ ‘ಋಷ್ಯಶೃಂಗ’) ಪ್ರಶಸ್ತಿ, ಹಲವು ಬಾರಿ ರಾಜ್ಯಪ್ರಶಸ್ತಿ, ೨೦೦೬ರಲ್ಲಿ ಜೀವಮಾನ ಸಾಧನೆಗಾಗಿ ಸಂದ ಗೌರವಗಳು ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ರಾಮಚಂದ್ರ ಅವರು ಪಾತ್ರರಾಗಿದ್ದಾರೆ.

ಇವರು ಕ್ಯಾನ್ಸರಿನಿಂದ ಬಳಲುತ್ತಿದ್ದು ಜನವರಿ 10, 2011ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"".ರಂದು ನಿಧನರಾದರು. ಇವರ ಪತ್ಮಿಯ ಹೆಸರು ಮೀನಾಕ್ಷಿ ಹಾಗು ಪುತ್ರಿಯರು ಚೈತ್ರಾ ಮತ್ತು ವರ್ಷಾ.

ಚಿತ್ರಪಟ್ಟಿ

[ಬದಲಾಯಿಸಿ]

ಟಿವಿ ಚಿತ್ರ

[ಬದಲಾಯಿಸಿ]
ವರ್ಷಚಿತ್ರಭಾಷೆಇತರ ಸಂಗತಿ
1987ಮಾಲ್ಗುಡಿ ಡೇಸ್ (ಟಿವಿ ಸರಣಿ)ಹಿಂದಿಛಾಯಾಗ್ರಹಣ
1988ಸ್ಟೋನ್ ಬಾಯ್ (ಟಿವಿ ಸರಣಿ)ಹಿಂದಿಛಾಯಾಗ್ರಹಣ
1991ಸ್ವಾಮಿ ಎಂಡ್ ಫ್ರೆಂಡ್ಸ್ (ಪಾರ್ಟ್ 1)ಹಿಂದಿಛಾಯಾಗ್ರಹಣ[]
2002ಒಂದು ಸಾವಿನ ಸುತ್ತ (ಟೆಲಿ ಚಿತ್ರ)ಕನ್ನಡಛಾಯಾಗ್ರಹಣ
2002ಸಾಕ್ಷಿ (ಟೆಲಿ ಚಿತ್ರ)ಕನ್ನಡಚಿತ್ರಕತೆ, ನಿರ್ದೇಶನ, ಛಾಯಾಗ್ರಹಣ
2003ಗೃಹಭಂಗ (ಟಿವಿ ಸರಣಿ)ಕನ್ನಡಛಾಯಾಗ್ರಹಣ
????ಮಲೆಗಳಲ್ಲಿ ಮದುಮಗಳು (ಟಿವಿ ಸರಣಿ)ಕನ್ನಡಛಾಯಾಗ್ರಹಣ (ಮೊದಲ ೧೫ ಕಂತುಗಳು)

ಚಲನಚಿತ್ರಗಳು

[ಬದಲಾಯಿಸಿ]

ಹಲವು ಪ್ರಶಸ್ತಿ ವಿಜೇತ ಚಿತ್ರಗಳಿಗೆ ಛಾಯಾಗ್ರಹಕರಾಗಿ ಕೆಲಸ ಮಾಡಿರುವುದನ್ನು ತೋರುವ ಎಸ್. ರಾಮಚಂದ್ರ ಚಿತ್ರಗಳ ಅಪೂರ್ಣ ಪಟ್ಟಿ. []

ವರ್ಷಚಿತ್ರನಿರ್ದೇಶಕರುಇತರ ಸಂಗತಿ
1972ವಂಶವೃಕ್ಷಬಿ. ವಿ. ಕಾರಂತ & ಗಿರೀಶ್ ಕಾರ್ನಾಡ್ಸಹಾಯಕ ಛಾಯಾಗ್ರಾಹಣ
1972ಸಂಕಲ್ಪಪಿ. ವಿ. ನಂಜರಾಜ ಅರಸ್ವಿಜೇತ : ಕರ್ನಾಟಕ ರಾಜ್ಯ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ[]
ಕರ್ನಾಟಕ ರಾಜ್ಯ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ
1974ಕಂಕಣಎಂ.ಬಿ.ಎಸ್.ಪ್ರಸಾದ್ಅತ್ಯುತ್ತಮ ಕನ್ನಡ ಚಿತ್ರ ರಾಷ್ಟ್ರೀಯ ಪ್ರಶಸ್ತಿ
1975ಚೋಮನ ದುಡಿಬಿ. ವಿ. ಕಾರಂತಅತ್ಯುತ್ತಮ ಕನ್ನಡ ಚಿತ್ರ ರಾಷ್ಟ್ರೀಯ ಪ್ರಶಸ್ತಿ
ಕರ್ನಾಟಕ ರಾಜ್ಯ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ
1976ಪಲ್ಲವಿಪಿ.ಲಂಕೇಶ್ಅತ್ಯುತ್ತಮ ಕನ್ನಡ ಚಿತ್ರ ರಾಷ್ಟ್ರೀಯ ಪ್ರಶಸ್ತಿ
ಕರ್ನಾಟಕ ರಾಜ್ಯ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ
1976ಋಷ್ಯಶೃಂಗವಿ.ಆರ್.ಕೆ.ಪ್ರಸಾದ್ವಿಜೇತ : ರಾಷ್ಟ್ರೀಯ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ
ವಿಜೇತ : ಕರ್ನಾಟಕ ರಾಜ್ಯ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ
1977ಘಟಶ್ರಾದ್ಧಗಿರೀಶ್ ಕಾಸರವಳ್ಳಿಅತ್ಯುತ್ತಮ ಕನ್ನಡ ಚಿತ್ರ ರಾಷ್ಟ್ರೀಯ ಪ್ರಶಸ್ತಿ
ಕರ್ನಾಟಕ ರಾಜ್ಯ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ
1978ಗ್ರಹಣಟಿ. ಎಸ್. ನಾಗಾಭರಣವಿಜೇತ : ಕರ್ನಾಟಕ ರಾಜ್ಯ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ(ಕಪ್ಪು/ಬಿಳುಪು)
ಅತ್ಯುತ್ತಮ ರಾಷ್ಟ್ರೀಯ ಐಕ್ಯತಾ ಚಿತ್ರ ಪ್ರಶಸ್ತಿ
ಕರ್ನಾಟಕ ರಾಜ್ಯ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ
1978ಗೀಜಗನ ಗೂಡುಟಿ. ಎಸ್. ರಂಗಾ
1978ಹೊಂಬಿಸಿಲುಗೀತಪ್ರಿಯ
1978ಮಲಯ ಮಕ್ಕಳುಕೆ. ಶಿವರಾಮ ಕಾರಂತ
1978ಪರಸಂಗದ ಗೆಂಡೆತಿಮ್ಮಮಾರುತಿ ಶಿವರಾಂ
1979ಆಕ್ರಮಣಗಿರೀಶ್ ಕಾಸರವಳ್ಳಿ
1979ದಂಗೆ ಎದ್ದ ಮಕ್ಕಳುಪಿ. ವಾದಿರಾಜ್
1979ನಮ್ಮಮ್ಮನ ಸೊಸೆಪಿ. ವಾದಿರಾಜ್
1980ಬಂಗಾರದ ಜಿಂಕೆಟಿ. ಎಸ್. ನಾಗಾಭರಣ
1980ವಾತ್ಸಲ್ಯ ಪಥಎ. ಎಸ್. ಆರ್. ರಾವ್
1980ಸಂಗೀತಾಚಂದ್ರಶೇಖರ ಕಂಬಾರ
1981ಜಾಲಎಸ್. ರಂಗನಾಥ್
1981ಚದುರಿದ ಚಿತ್ರಗಳುಎನ್. ಟಿ. ಜಯರಾಮ ರೆಡ್ಡಿ
1983ಬ್ಯಾಂಕರ್ ಮಾರ್ಗಯ್ಯಟಿ. ಎಸ್. ನಾಗಾಭರಣಅತ್ಯುತ್ತಮ ಕನ್ನಡ ಚಿತ್ರ ರಾಷ್ಟ್ರೀಯ ಪ್ರಶಸ್ತಿ
1983ಅನ್ವೇಷಣೆಟಿ. ಎಸ್. ನಾಗಾಭರಣ
1983ಗಂಧರ್ವಗಿರಿಎನ್. ಎಸ್. ಧನಂಜಯ (ದತ್ತು)
1983ಮುದುಡಿದ ತಾವರೆ ಅರಳಿತುಕೆ. ವಿ. ಜಯರಾಂ
1983ನ್ಯಾಯ ಗೆದ್ದಿತುಜೋ ಸೈಮನ್
1983ಪ್ರೇಮಯುದ್ಧಟಿ. ಎಸ್. ನಾಗಾಭರಣ
1983ಸಿಂಹಾಸನಸಿ. ಆರ್. ಸಿಂಹ
1984ಒಲವೆ ಬದುಕುಕೆ. ವಿ. ಜಯರಾಂ
1986ಪ್ರೇಮ ಜಾಲಜೋ ಸೈಮನ್
1987ಹುಲಿ ಹೆಬ್ಬುಲಿವಿಜಯ್
1987ಅವಸ್ಥೆಕೃಷ್ಣ ಮಾಸಡಿ
1987ನ್ಯಾಯಕ್ಕೆ ಶಿಕ್ಷೆಶ್ರೀನಿವಾಸ್
1987ರೋಮಾಂಚನಜಿ. ಎಸ್. ಪಣಿಕ್ಕರ್
1987ಸಂಪ್ರದಾಯಮಾಸ್ಟರ್ ಹಿರಣ್ಣಯ್ಯ
1988ಭುಜಂಗಯ್ಯನ ದಶಾವತಾರಲೋಕೇಶ್ಅತ್ಯುತ್ತಮ ರಾಷ್ಟ್ರೀಯ ಐಕ್ಯತಾ ಚಿತ್ರ ಪ್ರಶಸ್ತಿ
1988ಆಸ್ಫೋಟಟಿ. ಎಸ್. ನಾಗಾಭರಣಕರ್ನಾಟಕ ರಾಜ್ಯ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ
1988ಮಾತೃದೇವೋಭವಎನ್. ಎಸ್. ಧನಂಜಯ (ದತ್ತು)
1989ಹಾಂಕಾಂಗಿನಲ್ಲಿ ಏಜೆಂಟ್ ಅಮರ್ಜೋ ಸೈಮನ್
1989ಸಿಂಗಾರಿ ಬಂಗಾರಿಚಂದ್ರಹಾಸ ಆಳ್ವ
1990ಸಂತ ಶಿಶುನಾಳ ಷರೀಫಟಿ. ಎಸ್. ನಾಗಾಭರಣ
1990ಸ್ವಾಮಿಶಂಕರ್ ನಾಗ್[]
1991ಮನೆಗಿರೀಶ್ ಕಾಸರವಳ್ಳಿವಿಜೇತ : ಕರ್ನಾಟಕ ರಾಜ್ಯ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ
ಅತ್ಯುತ್ತಮ ಕನ್ನಡ ಚಿತ್ರ ರಾಷ್ಟ್ರೀಯ ಪ್ರಶಸ್ತಿ
1991ಏಕ್ ಘರ್ಗಿರೀಶ್ ಕಾಸರವಳ್ಳಿಭಾಷೆ : ಹಿಂದಿ
1992ಉಂಡೂ ಹೋದ ಕೊಂಡೂ ಹೋದನಾಗತಿಹಳ್ಳಿ ಚಂದ್ರಶೇಖರ
1993ಕಾದಂಬರಿಕೂಡ್ಲು ರಾಮಕೃಷ್ಣ
1994ಯಾರಿಗೂ ಹೇಳ್ಬೇಡಿಕೂಡ್ಲು ರಾಮಕೃಷ್ಣ
1995ನಿಲುಕದ ನಕ್ಷತ್ರಕೂಡ್ಲು ರಾಮಕೃಷ್ಣ
1995ಕ್ರೌರ್ಯಗಿರೀಶ್ ಕಾಸರವಳ್ಳಿಅತ್ಯುತ್ತಮ ಕನ್ನಡ ಚಿತ್ರ ರಾಷ್ಟ್ರೀಯ ಪ್ರಶಸ್ತಿ
1996ಜನನಿಶ್ರೀವತ್ಸ ರಂಗನಾಥ್
1996ಪೂಜಭಾರತಿ ಶಂಕರ್
1997ಗಂಗವ್ವ ಗಂಗಾಮಾಯಿವಸಂತ ಮೊಕಾಶಿ[]
1998ದಿ ಔಟ್ ಹೌಸ್ಲೆಸ್ಲೀ ಕರ್ವಾಲೋ[]
1999ದೇವೀರಿಕವಿತಾ ಲಂಕೇಶ್ಕರ್ನಾಟಕ ರಾಜ್ಯ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ
1999ಕಾನೂರು ಹೆಗ್ಗಡಿತಿಗಿರೀಶ್ ಕಾರ್ನಾಡ್ಅತ್ಯುತ್ತಮ ಕನ್ನಡ ಚಿತ್ರ ರಾಷ್ಟ್ರೀಯ ಪ್ರಶಸ್ತಿ
2001ಅಲೆಮಾರಿಕವಿತಾ ಲಂಕೇಶ್[]
2003ಅರ್ಥಬಿ. ಸುರೇಶಕರ್ನಾಟಕ ರಾಜ್ಯ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ
2004ಹಸೀನಾಗಿರೀಶ್ ಕಾಸರವಳ್ಳಿರಾಷ್ಟ್ರೀಯ ಅತ್ಯುತ್ತಮ ಕುಟುಂಬ ಕಲ್ಯಾಣ ಚಿತ್ರ ಪ್ರಶಸ್ತಿ
ಕರ್ನಾಟಕ ರಾಜ್ಯ ಅತ್ಯುತ್ತಮ ಸಾಮಾಜಿಕ ಕಳಕಳಿಯ ಚಲನಚಿತ್ರ ಪ್ರಶಸ್ತಿ
2004ಬೇರುಪಿ. ಶೇಷಾದ್ರಿಅತ್ಯುತ್ತಮ ಕನ್ನಡ ಚಿತ್ರ ರಾಷ್ಟ್ರೀಯ ಪ್ರಶಸ್ತಿ
2004ಪ್ರವಾಹಪಿ. ಆರ್. ರಾಮದಾಸ್ ನಾಯ್ಡುಕರ್ನಾಟಕ ರಾಜ್ಯ ಅತ್ಯುತ್ತಮ ಸಾಮಾಜಿಕ ಕಳಕಳಿಯ ಚಲನಚಿತ್ರ ಪ್ರಶಸ್ತಿ
2005ನಾಯಿ ನೆರಳುಗಿರೀಶ್ ಕಾಸರವಳ್ಳಿಕರ್ನಾಟಕ ರಾಜ್ಯ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ
2005ಮುಖಾಮುಖಿಎನ್. ಸುದರ್ಶನ್
2006ಬನದ ನೆರಳುಉಮಾಶಂಕರ್ ಸ್ವಾಮಿಕರ್ನಾಟಕ ರಾಜ್ಯ ಅತ್ಯುತ್ತಮ ಸಾಮಾಜಿಕ ಕಳಕಳಿಯ ಚಲನಚಿತ್ರ ಪ್ರಶಸ್ತಿ
2007ಗುಲಾಬಿ ಟಾಕೀಸುಗಿರೀಶ್ ಕಾಸರವಳ್ಳಿಅತ್ಯುತ್ತಮ ಕನ್ನಡ ಚಿತ್ರ ರಾಷ್ಟ್ರೀಯ ಪ್ರಶಸ್ತಿ
ಕರ್ನಾಟಕ ರಾಜ್ಯ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ
2008ವಿಮುಕ್ತಿಪಿ. ಶೇಷಾದ್ರಿಅತ್ಯುತ್ತಮ ಕನ್ನಡ ಚಿತ್ರ ರಾಷ್ಟ್ರೀಯ ಪ್ರಶಸ್ತಿ
2008ಮೊಗ್ಗಿನ ಜಡೆಪಿ. ಆರ್. ರಾಮದಾಸ್ ನಾಯ್ಡು
2008ಹಾರು ಹಕ್ಕಿಯನೇರಿಏ. ಎನ್. ಪ್ರಸನ್ನ
2009ದಾಟುಕೆ. ಶಿವರುದ್ರಯ್ಯ
2009ಮುಖಪುಟರೂಪ ಅಯ್ಯರ್ಕರ್ನಾಟಕ ರಾಜ್ಯ ಅತ್ಯುತ್ತಮ ಸಾಮಾಜಿಕ ಕಳಕಳಿಯ ಚಲನಚಿತ್ರ ಪ್ರಶಸ್ತಿ
2009ಕರಾವಳಿ ಹುಡುಗಿಕೂಡ್ಲು ರಾಮಕೃಷ್ಣ
2010ಗಾಂಧಿ ಸ್ಮೈಲ್ಸ್ಕ್ರಿಶ್ ಜೋಶಿ
2010ಬೇಲಿ ಮತ್ತು ಹೊಲಪಿ. ಆರ್. ರಾಮದಾಸ್ ನಾಯ್ಡು
2010ಹೆಜ್ಜೆಗಳುಪಿ. ಆರ್. ರಾಮದಾಸ್ ನಾಯ್ಡು
2010ಪ್ರಾರ್ಥನೆಸದಾಶಿವ ಶೆಣೈ

[]

ಉಲ್ಲೇಖಗಳು

[ಬದಲಾಯಿಸಿ]
  1. "Award winning cameraman S.Ramachandra dead". Archived from the original on 2012-10-18. Retrieved 2015-06-03.
  2. http://www.deccanherald.com/content/128146/s-ramachandra.html ಉಲ್ಲೇಖ ದೋಷ: Invalid parameter "" in <ref> tag. The supported parameters are: details, dir, follow, group, name.
  3. 1 2 3 4 5 http://www.bfi.org.uk/films-tv-people/4ce2baa487522
  4. https://Kannadamoviesinfo.wordpress.com ಉಲ್ಲೇಖ ದೋಷ: Invalid parameter "" in <ref> tag. The supported parameters are: details, dir, follow, group, name.
  5. Hero Behind the Frame
  6. http://www.bfi.org.uk/films-tv-people/4ce2b82a9e7a4