ಅಸ್ತಿತ್ವವಾದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
The philosophers Søren Kierkegaard and Friedrich Nietzsche foreshadowed existentialism.

ಅಸ್ತಿತ್ವವಾದ ಎಂಬುದು ಅನೇಕ, 19ನೇ- ಮತ್ತು 20ನೇ-ಶತಮಾನದ ದಾರ್ಶನಿಕರ ಕೃತಿಗೆ ಅನ್ವಯಿಸಲಾಗಿರುವ ಶಬ್ದವಾಗಿದೆ. ಈ ದಾರ್ಶನಿಕರು ತಾವು ಹೊಂದಿದ್ದ ಗಹನವಾದ ಸೈದ್ಧಾಂತಿಕ ಅಭಿಪ್ರಾಯಭೇದಗಳ[೧][೨] ಹೊರತಾಗಿಯೂ, ತತ್ತ್ವಚಿಂತನೆಯ ಆಲೋಚನೆಯ ಗಮನವು ಪ್ರತ್ಯೇಕ ವ್ಯಕ್ತಿಯ ಅಸ್ತಿತ್ವದ ಸ್ಥಿತಿಗಳು ಹಾಗೂ ಅವುಗಳ ಭಾವಗಳು, ವರ್ತನೆಗಳು, ಹೊಣೆಗಾರಿಕೆಗಳು, ಮತ್ತು ಆಲೋಚನೆಗಳೊಂದಿಗೆ ವ್ಯವಹರಿಸುವಂತಿರಬೇಕು ಎಂಬುದನ್ನು ಸಾಮಾನ್ಯವಾಗಿ ಸಮರ್ಥಿಸಿದರು.[೩][೪] 19ನೇ ಶತಮಾನದ ಆರಂಭದ ದಾರ್ಶನಿಕನಾದ ಸೋರೆನ್‌ ಕಿರ್ಕಗಾರ್ಡ್‌ ಎಂಬಾತನನ್ನು ಅಸ್ತಿತ್ವವಾದದ ಜನಕ[೫][೬] ಎಂಬುದಾಗಿ ಮರಣಾನಂತರದಲ್ಲಿ ಪರಿಗಣಿಸಲಾಗಿದೆ. ಈತ ಸಮರ್ಥಿಸಿದ ಪ್ರಕಾರ, ವ್ಯಕ್ತಿಯು ತನ್ನ ಸ್ವಂತದ ಜೀವನಕ್ಕೆ ಅರ್ಥವನ್ನು ನೀಡುವುದಕ್ಕೆ ಸಂಬಂಧಿಸಿದಂತೆ ಮತ್ತು ಹತಾಶೆ, ತಲ್ಲಣ, ಅಸಂಬದ್ಧತೆ, ಬುದ್ಧಿವಿಕಲ್ಪ, ಮತ್ತು ಬೇಸರ ಇವೇ ಮೊದಲಾದವನ್ನು ಒಳಗೊಂಡಂತೆ ಇರುವಿಕೆಗೆ ಸಂಬಂಧಿಸಿದಂತಿರುವ ಅನೇಕ ಅಡಚಣೆಗಳು ಮತ್ತು ಗಮನಭಂಗಗಳ ಹೊರತಾಗಿಯೂ ಆ ಜೀವನವನ್ನು ಉತ್ಕಟಭಾವದಿಂದ ಮತ್ತು ಪ್ರಾಮಾಣಿಕವಾಗಿ[೭][೮] ಜೀವಿಸುವುದಕ್ಕೆ ಸಂಬಂಧಿಸಿದಂತೆ ಸಂಪೂರ್ಣವಾಗಿ ಹೊಣೆಗಾರನಾಗಿರುತ್ತಾನೆ.[೯] ಅಸ್ತಿತ್ವವಾದದ ತರುವಾಯದ ದಾರ್ಶನಿಕರು, ಪ್ರತ್ಯೇಕ ವ್ಯಕ್ತಿಯ ಮೇಲಿನ ಪ್ರಾಮುಖ್ಯತೆಯನ್ನು ಉಳಿಸಿಕೊಳ್ಳುತ್ತಾರಾದರೂ, ಮಟ್ಟಗಳನ್ನು ಬದಲಾಯಿಸುವುದರಲ್ಲಿ ಪ್ರತ್ಯೇಕತೆಯನ್ನು ಕಾಯ್ದುಕೊಳ್ಳುತ್ತಾರೆ, ವಿಭಿನ್ನವಾಗಿ ನಿಲ್ಲುತ್ತಾರೆ; ಅಂದರೆ, ಓರ್ವ ವ್ಯಕ್ತಿ ಹೇಗೆ ಸಾಧಿಸುತ್ತಾನೆ ಮತ್ತು ಒಂದು ಪೂರ್ಣತೆಯ ಜೀವನವನ್ನು ಯಾವುದೆಲ್ಲಾ ಘಟಕಗಳು ರೂಪಿಸುತ್ತವೆ, ಯಾವುದೆಲ್ಲಾ ಅಡಚಣೆಗಳನ್ನು ದಾಟಿಕೊಂಡು ಬರಬೇಕಾಗುತ್ತದೆ, ಮತ್ತು ದೇವರ ಅಸ್ತಿತ್ವ[೧೦][೧೧] ಅಥವಾ ಅಸ್ತಿತ್ವವಿರದಿರುವಿಕೆಯ ಸಂಭವನೀಯ ಪರಿಣಾಮಗಳನ್ನು ಒಳಗೊಂಡಂತೆ, ಯಾವುದೆಲ್ಲಾ ಬಾಹ್ಯ ಹಾಗೂ ಆಂತರಿಕ ಅಂಶಗಳು ಸೇರಿಕೊಂಡಿವೆ ಎಂಬುದರ ಕುರಿತು ಸದರಿ ತರುವಾಯದ ದಾರ್ಶನಿಕರು ಒತ್ತುನೀಡುತ್ತಾರೆ.[೧೨][೧೩] ಸಾಂಪ್ರದಾಯಿಕವಾದ ಕ್ರಮಬದ್ಧ ಅಥವಾ ಶೈಕ್ಷಣಿಕ ತತ್ತ್ವಶಾಸ್ತ್ರವು ಶೈಲಿ ಮತ್ತು ಹುರುಳು ಎರಡರಲ್ಲಿಯೂ, ತೀರಾ ಅಮೂರ್ತವಾಗಿದೆ ಮತ್ತು ವಾಸ್ತವವಾದ ಮಾನವ ಅನುಭವದಿಂದ ದೂರದಲ್ಲಿರುವಂಥದ್ದಾಗಿದೆ ಎಂದೂ ಸಹ ಅನೇಕ ಅಸ್ತಿತ್ವವಾದಿಗಳು ಪರಿಗಣಿಸುತ್ತಾರೆ.[೧೪][೧೫] ಮಾನವನ ಪ್ರತ್ಯೇಕ ಅಸ್ತಿತ್ವ ಹಾಗೂ ಸ್ವಾತಂತ್ರ್ಯದ ಪ್ರಾಮುಖ್ಯತೆಯನ್ನು ಪುನಃ ದೃಢಪಡಿಸುವಲ್ಲಿನ ಒಂದು ಮಾರ್ಗವಾಗಿ, ಅಸ್ತಿತ್ವವಾದವು ಜಾಗತಿಕ ಸಮರದ-ನಂತರದ ವರ್ಷಗಳಲ್ಲಿ ಸಂಪ್ರದಾಯಾನುಸಾರಿಯಾಗಿ ಮಾರ್ಪಟ್ಟಿತು.[೧೬]

ಇತಿಹಾಸ[ಬದಲಾಯಿಸಿ]

ಅಸ್ತಿತ್ವವಾದವು ಮುಂಚಿನ ಶತಮಾನಗಳಲ್ಲೇ ಮುನ್ಸೂಚಕರನ್ನು ಹೊಂದಿತ್ತಾದರೂ, 19ನೇ-ಶತಮಾನದ ದಾರ್ಶನಿಕರಾದ ಸೋರೆನ್‌ ಕಿರ್ಕೆಗಾರ್ಡ್‌ ಹಾಗೂ ಫ್ರೆಡ್ರಿಕ್‌ ನೀಟ್ಜ್‌ಸ್ಚೆ ಎಂಬಿಬ್ಬರಿಂದ ಅಸ್ತಿತ್ವವಾದವು ಅತ್ಯಂತ ಗಮನಾರ್ಹವಾಗಿ ಮುನ್‌ಸೂಚಿಸಲ್ಪಟ್ಟಿದೆ. 20ನೇ ಶತಮಾನದಲ್ಲಿ, ಜೀನ್‌-ಪಾಲ್‌ ಸಾರ್ತ್ರೆ, ಸಿಮೋನೆ ಡಿ ಬ್ಯೂವಾಯ್ರ್‌ ಮತ್ತು (ಅಸಂಗತವಾದಿ) ಆಲ್ಬರ್ಟ್‌ ಕ್ಯಾಮಸ್‌ ಇವರೇ ಮೊದಲಾದ ಇತರ ಅಸ್ತಿತ್ವವಾದಿ ದಾರ್ಶನಿಕರ ಮೇಲೆ ಜರ್ಮನ್‌‌ ದಾರ್ಶನಿಕನಾದ ಮಾರ್ಟಿನ್‌‌ ಹೆಡೀಗ್ಗರ್‌‌ (ಹಸ್ಸರ್ಲ್‌‌‌‌‌‌‌ಮನೋವಿಕಾಸವಿಜ್ಞಾನದಿಂದ ಪ್ರಾರಂಭಿಸಿ) ಪ್ರಭಾವ ಬೀರಿದ. ಫಯೋಡಾರ್‌ ದಾಸ್ತೋಯೆವ್ಸ್ಕಿ ಮತ್ತು ಫ್ರಾಂಜ್‌ ಕಾಫ್ಕಾ ಎಂಬಿಬ್ಬರೂ ಸಹ ತಮ್ಮ ಸಾಹಿತ್ಯಿಕ ಕೃತಿಗಳಲ್ಲಿ ಅಸ್ತಿತ್ವವಾದದ ವಿಷಯಗಳನ್ನೂ ವಿವರಿಸಿದರು. "ಅಸ್ತಿತ್ವವಾದಿ" ಚಿಂತಕರ ನಡುವೆ ಕೆಲವೊಂದು ಸಾಮಾನ್ಯ ಪ್ರವೃತ್ತಿಗಳು ಇವೆಯಾದರೂ, ಅವರ ನಡುವೆ ಪ್ರಮುಖ ಅಭಿಪ್ರಾಯಭೇದಗಳು ಹಾಗೂ ಅಸಮ್ಮತಿಗಳು ಕೂಡಾ ಇವೆ (ಅತ್ಯಂತ ಗಮನಾರ್ಹವಾಗಿ ಸಾರ್ತ್ರೆಯಂಥ ನಾಸ್ತಿಕ ಅಸ್ತಿತ್ವವಾದಿಗಳು ಹಾಗೂ ಪಾಲ್‌ ಟಿಲ್ಲಿಚ್‌‌‌ನಂಥ ಆಸ್ತಿಕತೆಯ ಅಸ್ತಿತ್ವವಾದಿಗಳ ನಡುವೆ ಇರುವ ವಿಭಾಜಕ ರೇಖೆ); ಅವರ ಪೈಕಿ ಎಲ್ಲರೂ ಸಹ ತಮ್ಮದೇ ಸ್ವಂತ ಕೃತಿಗೆ ಅನ್ವಯಿಸಲಾದ ಶಬ್ದದ ಅಂಗೀಕಾರಾರ್ಹತೆಯನ್ನು ಅಥವಾ ಸಿಂಧುತ್ವವನ್ನು ಅಂಗೀಕರಿಸುವುದಿಲ್ಲ.[೧೭]

ಮೂಲಗಳು[ಬದಲಾಯಿಸಿ]

"ಅಸ್ತಿತ್ವವಾದ" ಎಂಬ ಶಬ್ದವು ಫ್ರೆಂಚ್‌ ದಾರ್ಶನಿಕ ಗೇಬ್ರಿಯೆಲ್‌ ಮಾರ್ಸೆಲ್‌‌‌‌‌ನಿಂದ 1940ರ ದಶಕದಲ್ಲಿ[೧೮][೧೯][೨೦] ರೂಪಿಸಲ್ಪಟ್ಟಿರುವಂತೆ ತೋರುತ್ತದೆ. ಇದನ್ನು ಅಳವಡಿಸಿಕೊಂಡ ಜೀನ್‌-ಪಾಲ್‌ ಸಾರ್ತ್ರೆ, 1945ರ ಅಲ್ಟೋಬರ್‌ 29ರಂದು ಪ್ಯಾರಿಸ್‌ನಲ್ಲಿನ ಕ್ಲಬ್‌ ಮೇಂಟೆನೆಂಟ್‌ ಗೆ ನೀಡಿದ ಉಪನ್ಯಾಸವೊಂದರಲ್ಲಿ ತನ್ನದೇ ಆದ ಅಸ್ತಿತ್ವವಾದಿ ಸ್ಥಾನವನ್ನು ಚರ್ಚಿಸಿದ. ಈ ಉಪನ್ಯಾಸವು ಎಲ್‌'ಎಕ್ಸಿಸ್ಟೆಂಷಿಯಾಲಿಸ್ಮೆ ಎಸ್ಟ್ ಉನ್‌ ಹ್ಯುಮಾನಿಸ್ಮೆ ಎಂಬ ಒಂದು ಕಿರುಪುಸ್ತಕವಾಗಿ ಪ್ರಕಟಿಸಲ್ಪಟ್ಟಿತು ಮತ್ತು ಅದು ಅಸ್ತಿತ್ವವಾದಿ ಚಿಂತನೆಯನ್ನು ಹೆಚ್ಚು ಜನಪ್ರಿಯಗೊಳಿಸಿತು.[೨೧] ಅಸ್ತಿತ್ವವನ್ನು, ಅದರಲ್ಲೂ ನಿರ್ದಿಷ್ಟವಾಗಿ ಮಾನವ ಅಸ್ತಿತ್ವವನ್ನು ಪ್ರಧಾನ ತತ್ತ್ವಚಿಂತನೆಯ ವಿಷಯವನ್ನಾಗಿ ಪರಿಗಣಿಸಿದ್ದ ಇತರ ದಾರ್ಶನಿಕರಿಗೆ ಪೂರ್ವನಿದರ್ಶನಕ್ಕೆ ಅನುಸಾರವಾಗಿ ಈ ಹಣೆಪಟ್ಟಿಯನ್ನು ಅನ್ವಯಿಸಲಾಗಿದೆ. ಮಾರ್ಟಿನ್‌‌ ಹೆಡೀಗ್ಗರ್‌‌ ಎಂಬಾತ ಮಾನವ ಅಸ್ತಿತ್ವವನ್ನು (ಡಾಸೀನ್‌ ) ತನ್ನ ಕೃತಿಯ ಕೇಂದ್ರಬಿಂದುವಾಗಿ 1920ರ ದಶಕದಿಂದಲೂ ರೂಪಿಸಿದ್ದ, ಮತ್ತು ಕಾಲ್‌ ಜಾಸ್ಪರ್ಸ್‌ ಎಂಬಾತ 1930ರ ದಶಕದಲ್ಲಿ ಬಂದ ತನ್ನ ತತ್ತ್ವಶಾಸ್ತ್ರವನ್ನು "ಎಕ್ಸಿಸ್ಟೆಂಜ್‌ಫಿಲೋಸಫೀ " ಎಂದು ಕರೆದಿದ್ದ.[೧೯][೨೨]

ಹೆಡೀಗ್ಗರ್‌‌ ಮತ್ತು ಜಾಸ್ಪರ್ಸ್‌ ಇಬ್ಬರೂ ಸಹ ಡ್ಯಾನಿಷ್‌ ದಾರ್ಶನಿಕ ಸೋರೆನ್‌ ಕಿರ್ಕೆಗಾರ್ಡ್‌‌‌‌ನಿಂದ ಪ್ರಭಾವಿತಗೊಂಡಿದ್ದರು. ಕಿರ್ಕೆಗಾರ್ಡ್‌ಗೆ ಮಾನವ ಅಸ್ತಿತ್ವದ ಬಿಕ್ಕಟ್ಟು ಎಂಬುದು ಒಂದು ಪ್ರಮುಖ ವಿಷಯವಾಗಿ ಪರಿಣಮಿಸಿತ್ತು.[೬][೨೩][೨೪] ಆತ ಮೊದಲ ಅಸ್ತಿತ್ವವಾದಿ[೨೦] ಎಂಬ ಪರಿಗಣನೆಗೆ ಒಳಗಾದ ಮತ್ತು "ಅಸ್ತಿತ್ವವಾದದ ಜನಕ" ಎಂದು ಅವನನ್ನು ಕರೆಯಲಾಗುತ್ತದೆ.[೬] ವಾಸ್ತವವಾಗಿ ಹೇಳುವುದಾದರೆ, ತನ್ನ ತತ್ತ್ವಶಾಸ್ತ್ರದಲ್ಲಿ ಅಸ್ತಿತ್ವವಾದದ ಪ್ರಶ್ನೆಗಳನ್ನು ಒಂದು ಪ್ರಧಾನ ಕೇಂದ್ರಸ್ಥಾನವನ್ನಾಗಿ ಮುಚ್ಚುಮರೆಯಿಲ್ಲದೆ ಮಾಡುವಲ್ಲಿ ಆತ ಮೊದಲಿಗನಾಗಿದ್ದ.[೨೫] ಸಿಂಹಾವಲೋಕನ ಮಾಡಿದಾಗ, ಇತರ ಬರಹಗಾರರೂ ಸಹ ಅಸ್ತಿತ್ವವಾದಿ ವಿಷಯಗಳನ್ನು ತತ್ತ್ವಶಾಸ್ತ್ರ ಹಾಗೂ ಸಾಹಿತ್ಯದ ಇತಿಹಾಸದುದ್ದಕ್ಕೂ ಸೂಚ್ಯವಾಗಿ ಚರ್ಚಿಸಿದ್ದಾರೆ. ಅಸ್ತಿತ್ವವಾದಕ್ಕೆ ಸಮಾಜವು ಅಧಿಕೃತವಾಗಿ ಪರಿಚಯಿಸಲ್ಪಟ್ಟ ದಶಕಗಳಿಂದಲೂ ಅಸ್ತಿತ್ವವಾದಿ ವಿಷಯಗಳ ಒಡ್ಡುವಿಕೆಯು ನಡೆದುಬಂದಿರುವ ಕಾರಣದಿಂದಾಗಿ, ಈ ಶಬ್ದವು ಹೆಚ್ಚೂಕಮ್ಮಿ ತತ್‌ಕ್ಷಣವೇ ಸಾಕಷ್ಟು ಜನಪ್ರಿಯವಾಗಿಬಿಟ್ಟಿತು. 

ಇದರ ಉದಾಹರಣೆಗಳಲ್ಲಿ ಈ ಕೆಳಗಿನವು ಸೇರಿವೆ:

19ನೆಯ ಶತಮಾನ[ಬದಲಾಯಿಸಿ]

ಕೋಪನ್‌ಹೇಗನ್‌ನಲ್ಲಿರುವ ಸೋರೆನ್‌ ಕಿರ್ಕೆಗಾರ್ಡ್‌ ಪ್ರತಿಮೆ.

1835ರಷ್ಟು ಹಿಂದೆಯೇ ತನ್ನ ಸ್ನೇಹಿತ ಪೀಟರ್‌ ವಿಲ್‌ಹೆಂ ಲಂಡ್‌ಗೆ ಬರೆದ ಪತ್ರವೊಂದರಲ್ಲಿ, ಡ್ಯಾನಿಷ್‌ ದಾರ್ಶನಿಕ ಸೋರೆನ್‌ ಕಿರ್ಕೆಗಾರ್ಡ್‌ ಅಸ್ತಿತ್ವದ ಪರಿಣಾಮದಿಂದ ಸಂವೇದನಾಶೀಲವಾಗಿರುವ ತನ್ನ ಮೊದಲ ಉದ್ಧೃತ ಭಾಗಗಳ ಪೈಕಿ ಒಂದನ್ನು ಬರೆದ. ಇದರಲ್ಲಿ ಆತ, ತನಗೆ ಸಂಬಂಧಿಸಿದಂತೆ ಅನ್ವಯವಾಗುವ ಒಂದು ಸತ್ಯವನ್ನು ವಿವರಿಸುತ್ತಾನೆ:

What I really lack is to be clear in my mind what I am to do, not what I am to know, except in so far as a certain knowledge must precede every action. The thing is to understand myself, to see what God really wishes me to do: the thing is to find a truth which is true for me, to find the idea for which I can live and die. ... I certainly do not deny that I still recognize an imperative of knowledge and that through it one can work upon men, but it must be taken up into my life, and that is what I now recognize as the most important thing.

— Søren Kierkegaard, Letter to Peter Wilhelm Lund dated August 31, 1835, emphasis added[೩೦]

ಕಿರ್ಕೆಗಾರ್ಡ್‌ನ ಆರಂಭಿಕ ಆಲೋಚನೆಗಳು, ತತ್ತ್ವಚಿಂತನೆಯ ಮತ್ತು ಮತಧರ್ಮಶಾಸ್ತ್ರಕ್ಕೆ ಸಂಬಂಧಿಸಿದ ಅವನ ಯಥೇಚ್ಛವಾದ ಬರಹಗಳಲ್ಲಿ ವಿಧ್ಯುಕ್ತಗೊಳಿಸಲ್ಪಡುತ್ತವೆ; ಇವುಗಳ ಪೈಕಿಯ ಅನೇಕ ಆಲೋಚನೆಗಳು ನಂತರದಲ್ಲಿ 20ನೇ ಶತಮಾನ ಅಸ್ತಿತ್ವವಾದದ ಆಧುನಿಕ ತಳಹದಿಯನ್ನು ರೂಪಿಸಿದವು.[೨೫][೩೧]

ಕಿರ್ಕೆಗಾರ್ಡ್‌ ಮತ್ತು ನೀಟ್ಜ್‌‌ಸ್ಚೆ[ಬದಲಾಯಿಸಿ]

ಸೋರೆನ್‌ ಕಿರ್ಕೆಗಾರ್ಡ್‌ ಮತ್ತು ಫ್ರೆಡ್ರಿಕ್‌ ನೀಟ್ಜ್‌ಸ್ಚೆ ಈ ಇಬ್ಬರ ಪೈಕಿ ಯಾರೂ ಸಹ "ಅಸ್ತಿತ್ವವಾದ" ಎಂಬ ಶಬ್ದವನ್ನು ಬಳಸಿಲ್ಲವಾದರೂ, ಅಸ್ತಿತ್ವವಾದಿ ಆಂದೋಲನಕ್ಕೆ ತಳಹದಿಯನ್ನು ಒದಗಿಸಿದ ಮೊದಲ ದಾರ್ಶನಿಕರ ಪೈಕಿ ಇವರೂ ಇದ್ದರು ಎಂದು ಪರಿಗಣಿಸಲ್ಪಟ್ಟಿದ್ದಾರೆ ಮತ್ತು 20ನೇ ಶತಮಾನದ ಅಸ್ತಿತ್ವವಾದವನ್ನು ಅವರು ಬೆಂಬಲಿಸುತ್ತಿದ್ದರೇ ಎಂಬುದು ಅಸ್ಪಷ್ಟವಾಗಿದೆ. ಗಣಿತಶಾಸ್ತ್ರ ಮತ್ತು ವಿಜ್ಞಾನದ ವಸ್ತುನಿಷ್ಠ ಸತ್ಯಗಳಿಗಿಂತ ಹೆಚ್ಚಾಗಿ ವ್ಯಕ್ತಿನಿಷ್ಠ ಮಾನವ ಅನುಭವದ ಮೇಲೆ ಅವರು ಗಮನಹರಿಸಿದರು; ಮಾನವ ಅನುಭವದ ನೆಲೆಯಲ್ಲಿ ನಿಜವಾಗಿ ಪಡೆಯಲು ಗಣಿತಶಾಸ್ತ್ರ ಹಾಗೂ ವಿಜ್ಞಾನಗಳು ತೀರಾ ಬೇರ್ಪಟ್ಟ (ನಿರ್ಲಿಪ್ತ) ಅಥವಾ ವೀಕ್ಷಣೆಗೆ ಸಂಬಂಧಿಸಿದ ವಿಷಯಗಳು ಎಂಬುದು ಅವರ ನಂಬುಗೆಯಾಗಿತ್ತು. ಪ್ಯಾಸ್ಕಲ್‌ ರೀತಿಯಲ್ಲಿ, ಜೀವನದ ಸ್ಪಷ್ಟ ಅರ್ಥರಹಿತತೆಯೊಂದಿಗಿನ ಜನರ ಸದ್ದುಗದ್ದಲವಿಲ್ಲದ ಹೆಣಗಾಟದಲ್ಲಿ ಮತ್ತು ಬೇಸರದಿಂದ ತಪ್ಪಿಸಿಕೊಳ್ಳಲು ಜನರು ಬಳಸುತ್ತಿದ್ದ ಮಾರ್ಗ ಬದಲಾಯಿಸುವ ವಿಧಾನದಲ್ಲಿ ಅವರಿಗೆ ಆಸಕ್ತಿಯಿತ್ತು. ಪ್ಯಾಸ್ಕಲ್‌ಗಿಂತ ಭಿನ್ನವಾಗಿ, ಕಿರ್ಕೆಗಾರ್ಡ್‌ ಹಾಗೂ ನೀಟ್ಜ್‌‌ಸ್ಚೆ ಮುಕ್ತ ಆಯ್ಕೆಗಳನ್ನು ಮಾಡುವುದರ ಪಾತ್ರ, ಅದರಲ್ಲೂ ನಿರ್ದಿಷ್ಟವಾಗಿ ಮೂಲಭೂತವಾದ ಮೌಲ್ಯಗಳು ಹಾಗೂ ನಂಬಿಕೆಗಳನ್ನು ಆಯ್ಕೆ ಮಾಡುವುದರ ಪಾತ್ರವನ್ನೂ ಅವರು ಪರಿಗಣಿಸಿದರು. ಆಯ್ಕೆಮಾಡುವವರ ಸ್ವರೂಪ ಹಾಗೂ ಗುರುತನ್ನು ಇಂಥ ಆಯ್ಕೆಗಳು ಹೇಗೆ ಬದಲಿಸುತ್ತವೆ ಎಂಬುದೂ ಅವರ ಪರಿಗಣನೆಯಲ್ಲಿ ಸೇರಿತ್ತು.[೩೨][೩೩] ಕಿಯರ್‌ಕೆಗಾರ್ಡ್‌ನ ವಿಶ್ವಾಸದ ಸೇನಾನುಚರ ಹಾಗೂ ನೀಟ್ಜ್‌‌ಸ್ಚೆಯ ಊಬರ್‌ಮೆನ್ಸ್ಚ್‌ ಇದಕ್ಕೆ ಸಂಬಂಧಿಸಿದ ಮಾದರಿಗಳಾಗಿದ್ದು, ಇವರು ತಮ್ಮ ಸ್ವಂತ ಅಸ್ತಿತ್ವದ ಸ್ವರೂಪವನ್ನು ವಿಶದೀಕರಿಸಿದರು. ಈ ಆದರ್ಶೀಕರಿಸಲ್ಪಟ್ಟ ವ್ಯಕ್ತಿಗಳು ತಮ್ಮದೇ ಸ್ವಂತದ ಮೌಲ್ಯಗಳನ್ನು ಪತ್ತೆಹಚ್ಚಿದರು ಹಾಗೂ ತಾವು ಶ್ರೇಷ್ಠತೆಯನ್ನು ಮೆರೆಯಲು ಅನುವುಮಾಡಿಕೊಡುವ ಅತೀವ ಶಬ್ದಗಳನ್ನು ಸೃಷ್ಟಿಸಿದರು. ನವ್ಯೋತ್ತರತೆ, ನಿರಾಕರಣವಾದ, ಹಾಗೂ ಮನೋವಿಜ್ಞಾನದ ಹಲವಾರು ಎಳೆಗಳನ್ನು ಒಳಗೊಂಡಂತೆ ಇತರ ಬೌದ್ಧಿಕ ಆಂದೋಲನಗಳಿಗೂ ಕಿಯರ್‌ಕೆಗಾರ್ಡ್‌ ಮತ್ತು ನೀಟ್ಜ್‌‌ಸ್ಚೆ ಪೂರ್ವಗಾಮಿಗಳಾಗಿದ್ದರು.

ದಾಸ್ತೋಯೆವ್ಸ್ಕಿ ಮತ್ತು ಕಾಫ್ಕಾ[ಬದಲಾಯಿಸಿ]

ಅಸ್ತಿತ್ವವಾದಕ್ಕೆ ಪ್ರಮುಖರೆನಿಸಿದ್ದ ಮೊದಲ ಸಾಹಿತ್ಯಿಕ ಲೇಖಕರ ಪೈಕಿ ಇದ್ದ ಇಬ್ಬರೆಂದರೆ, ಝೆಕ್‌ನ ಫ್ರಾಂಜ್‌ ಕಾಫ್ಕಾ ಹಾಗೂ ರಷ್ಯಾದ ಫೈಯೋಡಾರ್‌ ದಾಸ್ತೋವ್ಸ್ಕಿ .[೩೪] ದಾಸ್ತೋವ್ಸ್ಕಿಯ ನೋಟ್ಸ್‌ ಫ್ರಂ ಅಂಡರ್‌ಗ್ರೌಂಡ್‌ ಕೃತಿಯು, ಸಮಾಜದೊಳಗೆ ಹೊಂದಿಕೊಳ್ಳಲು ಅಸಮರ್ಥನಾದ ಓರ್ವ ಮನುಷ್ಯನನ್ನು ಹಾಗೂ ಸ್ವತಃ ತಾನೇ ಸೃಷ್ಟಿಸಿಕೊಳ್ಳುವ ಗುರುತುಗಳೊಂದಿಗಿನ ಅಸಂತೋಷವನ್ನು ಚಿತ್ರಿಸುತ್ತದೆ. ದಾಸ್ತೋವ್ಸ್ಕಿಯ ಇತರ ಕಾದಂಬರಿಗಳು ಜಾತ್ಯತೀತ ಅಸ್ತಿತ್ವವಾದದಿಂದ ಬೇರೆ ದಿಕ್ಕಿಗೆ ತಿರುಗುವ ಕಥೆಯ ಎಳೆಗಳನ್ನು ಪ್ರಸ್ತುತಪಡಿಸುವ ಸಮಯದಲ್ಲಿಯೇ, ಅಸ್ತಿತ್ವವಾದದ ತತ್ತ್ವಶಾಸ್ತ್ರದಲ್ಲಿ ಉದ್ಭವವಾದ ವಿವಾದಾಂಶಗಳನ್ನು ಒಳಗೊಂಡಿದ್ದವು: ಉದಾಹರಣೆಗೆ, ಕ್ರೈಂ ಅಂಡ್‌ ಪನಿಶ್‌ಮೆಂಟ್‌ ಕೃತಿಯಲ್ಲಿ ಪ್ರತಿಪಾದಕ ನಾಯಕನಾದ ರಾಸ್ಕೋಲ್ನಿಕೋವ್‌, ಅಸ್ತಿತ್ವವಾದದ ಒಂದು ಬಿಕ್ಕಟ್ಟನ್ನು ಅನುಭವಕ್ಕೆ ತಂದುಕೊಳ್ಳುತ್ತಾನೆ ಮತ್ತು ನಂತರದಲ್ಲಿ ಸ್ವತಃ ದಾಸ್ತೋವ್ಸ್ಕಿಯಿಂದ ಪ್ರತಿಪಾದಿಸಲ್ಪಟ್ಟ ಸಿದ್ಧಾಂತವನ್ನು ಹೋಲುವ ಒಂದು ಕ್ರಿಶ್ಚಿಯನ್‌ ಕಟ್ಟಾ ಸಂಪ್ರದಾಯಬದ್ಧ ಜೀವನಸಿದ್ಧಾಂತದೆಡೆಗೆ ತೆರಳುತ್ತಾನೆ. ಹತಾಶ ಪರಿಸ್ಥಿತಿ ಮತ್ತು ಅಸಂಬದ್ಧತೆಯೊಂದಿಗೆ ಹೆಣಗಾಡುವ ಅತಿ ವಾಸ್ತವಿಕತೆಯ ಮತ್ತು ಪರಾಧೀನ ಮಾಡಲ್ಪಟ್ಟ ಪಾತ್ರಗಳನ್ನು ಕಾಫ್ಕಾ ಸೃಷ್ಟಿಸಿದ; ಅವನ ಅತ್ಯಂತ ಪ್ರಸಿದ್ಧ ಕಿರು-ಕಾದಂಬರಿಯಾದ ದಿ ಮೆಟಾಮಾರ್ಫೋಸಿಸ್‌‌‌‌ ನಲ್ಲಿ, ಅಥವಾ ಅವನ ಶ್ರೇಷ್ಠ ಕಾದಂಬರಿಯಾದ ದಿ ಟ್ರಯಲ್‌‌ ನಲ್ಲಿ ಈ ಅಂಶವನ್ನು ಗಮನಾರ್ಹವಾಗಿ ಕಾಣಬಹುದು. ದಿ ಮಿಥ್‌ ಆಫ್‌ ಸಿಸಿಫಸ್‌ ಎಂಬ ತತ್ತ್ವಚಿಂತನೆಯ ಕುರಿತಾದ ತನ್ನ ಪ್ರೌಢಪ್ರಬಂಧದಲ್ಲಿ ಫ್ರೆಂಚ್‌ ಅಸ್ತಿತ್ವವಾದಿ/ಅಸಂಗತವಾದಿಯಾದ ಆಲ್ಬರ್ಟ್‌ ಕ್ಯಾಮಸ್‌, ಕಾಫ್ಕಾನ ಆವ್‌ರ್‌‌ ಅನ್ನು (ಸಮಗ್ರ ಕೃತಿಗಳು) "ತತ್ತ್ವದಲ್ಲಿ ಅಸಂಗತವಾಗಿದೆ"[೩೫] ಎಂದು ವಿವರಿಸುತ್ತಾನೆ, ಆದರೆ ಕಿಯರ್‌ಕೆಗಾರ್ಡ್‌ ಮತ್ತು ಶೆಸ್ಟೋವ್‌ರಂಥ ಧಾರ್ಮಿಕ ಅಸ್ತಿತ್ವವಾದಿಗಳಿಂದ ಅಭಿವ್ಯಕ್ತಿಸಲ್ಪಟ್ಟ "ಭರವಸೆಯ ಪ್ರಚಂಡ ಕೂಗಿನಲ್ಲಿ" ಅದನ್ನೇ ಕಂಡುಕೊಳ್ಳುತ್ತಾನೆ- ಇದನ್ನು ಕ್ಯಾಮಸ್‌ ತಿರಸ್ಕರಿಸುತ್ತಾನೆ.[೩೬]

ವಿವರಿಸಲಾಗದಂತೆ ಒಂದು ಕೀಟವಾಗಿ ರೂಪಾಂತರಗೊಂಡ ಓರ್ವ ಮನುಷ್ಯನ ಕುರಿತಾದ ತಿರುಳನ್ನು ಇದು ಹೊಂದಿದೆ.]]

20ನೇ ಶತಮಾನ ಆರಂಭಿಕ ಹಂತ[ಬದಲಾಯಿಸಿ]

20ನೇ ಶತಮಾನದ ಮೊದಲ ದಶಕಗಳಲ್ಲಿ, ಹಲವಾರು ದಾರ್ಶನಿಕರು ಮತ್ತು ಬರಹಗಾರರು ಅಸ್ತಿತ್ವವಾದದ ಪರಿಕಲ್ಪನೆಗಳನ್ನು ಪರಿಶೋಧಿಸಿದ್ದರಾದರೂ, ಅಲ್ಲಿದ್ದ ಏಕೈಕ ವ್ಯತ್ಯಾಸ ಹೆಸರಿನಲ್ಲಿ ಇದ್ದುದಾಗಿತ್ತು. ಮಿಗುಯೆಲ್‌ ಡೆ ಉನಾಮುನೋ ವೈ ಜುಗೋ ಎಂಬ ಸ್ಪ್ಯಾನಿಷ್‌ ದಾರ್ಶನಿಕ 1913ರಲ್ಲಿ ಬಂದ ದಿ ಟ್ರಾಜಿಕ್‌ ಸೆನ್ಸ್‌ ಆಫ್‌ ಲೈಫ್‌ ಇನ್‌ ಮೆನ್‌ ಅಂಡ್‌ ನೇಷನ್ಸ್‌ ಎಂಬ ತನ್ನ ಪುಸ್ತಕದಲ್ಲಿ, ಅಮೂರ್ತ ವಿಚಾರವಾದದ ಜೀವನಕ್ಕೆ ತದ್ವಿರುದ್ಧವಾಗಿ "ಮಾಂಸ ಮತ್ತು ಮೂಳೆ"ಯ (ಮಾನವಕುಲ) ಜೀವನಕ್ಕೆ ಒತ್ತನೀಡಿದ. ನಂಬಿಕೆಗೆ ಸಂಬಂಧಿಸಿದ ವ್ಯಕ್ತಿಯೋರ್ವನ ಅನ್ವೇಷಣೆಯ ಪರವಾಗಿ, ಕ್ರಮಬದ್ಧವಾದ ತತ್ತ್ವಶಾಸ್ತ್ರವನ್ನು ಉನಾಮುನೊ ತಿರಸ್ಕರಿಸಿದ. ದುಃಖದ ಒಂದು ಪ್ರಜ್ಞೆಯನ್ನಷ್ಟೇ ಅಲ್ಲದೇ, ಅನ್ವೇಷಣೆಯ ಅಸಂಗತ ಸ್ವರೂಪವನ್ನೂ ಅವನು ಉಳಿಸಿಕೊಂಡ; ಸೆರ್ವಾಂಟೆಸ್ಸ್‌‌ನ ಕಾಲ್ಪನಿಕ ಪಾತ್ರವಾದ ಡಾನ್‌ ಕ್ವಿಕ್ಸೋಟ್‌‌ನಲ್ಲಿನ ಅವನ ಒಳಗಾಗುವಿಕೆಯ ಆಸಕ್ತಿಯಿಂದ ಇದು ಸಂಕೇತಿಸಲ್ಪಟ್ಟಿದೆ. ಓರ್ವ ಕಾದಂಬರಿಕಾರ, ಕವಿ ಹಾಗೂ ನಾಟಕಕಾರನಷ್ಟೇ ಅಲ್ಲದೇ, ಸಾಲಾಮಾಂಕಾ ವಿಶ್ವವಿದ್ಯಾಲಯದಲ್ಲಿ ತತ್ತ್ವಶಾಸ್ತ್ರದ ಪ್ರಾಧ್ಯಾಪಕನಾಗಿದ್ದ ಉನಾಮುನೊನ "ಸೇಂಟ್‌ ಮ್ಯಾನ್ಯುಯೆಲ್‌ ದಿ ಗುಡ್‌, ಮಾರ್ಟಿಯರ್‌" ಎಂಬ ಕಿರುಗಥೆಯು ಓರ್ವ ಪಾದ್ರಿಯ ನಂಬಿಕೆಯ ಬಿಕ್ಕಟ್ಟನ್ನು ಕುರಿತದ್ದಾಗಿದ್ದು, ಇದು ಅಸ್ತಿತ್ವವಾದಿ ಕಾದಂಬರಿಯ ಸಾಹಿತ್ಯ ಸಂಕಲನಗಳಲ್ಲಿ ಸಂಗ್ರಹಿಸಲ್ಪಟ್ಟಿದೆ. 1914ರಲ್ಲಿ ಬರೆಯುತ್ತಿದ್ದ ಓರ್ಟೆಗಾ ವೈ ಗ್ಯಾಸೆಟ್‌ ಎಂಬ ಮತ್ತೋರ್ವ ಸ್ಪ್ಯಾನಿಷ್‌ ಚಿಂತಕ, ಓರ್ವ ಪ್ರತ್ಯೇಕ ವ್ಯಕ್ತಿಯು ತನ್ನ ಜೀವನದ ವಾಸ್ತವವಾದ ಸಂದರ್ಭಗಳೊಂದಿಗೆ ಸಂಯೋಜಿಸಲ್ಪಟ್ಟಿರುವಂತೆ ಮಾನವ ಅಸ್ತಿತ್ವವನ್ನು ಯಾವಾಗಲೂ ವ್ಯಾಖ್ಯಾನಿಸಬೇಕು ಎಂದು ಸಮರ್ಥಿಸಿದ: "ಯೊ ಸೊಯ್‌ ಯೊ ವೈ ಮಿ ಸರ್ಕನ್ಸ್ಟಾಷಿಯಾ " ("ಐ ಯಾಮ್‌ ಮೈಸೆಲ್ಫ್‌ ಅಂಡ್‌ ಮೈ ಸರ್ಕಮ್‌ಸ್ಟೆನ್ಸಸ್‌"). ಇದೇ ರೀತಿಯಲ್ಲಿ ಸಾರ್ತ್ರೆಯು, ಮಾನವ ಅಸ್ತಿತ್ವ ಎಂಬುದು ಒಂದು ಅಮೂರ್ತ ವಿಷಯವಲ್ಲ, ಬದಲಿಗೆ ಅದು ಯಾವಾಗಲೂ ಸ್ಥಾಪಿತವಾದ ವಿಷಯವಾಗಿದೆ ("ಎನ್‌ ಸಿಚುಯೇಷಿಯನ್‌ ") ಎಂದು ನಂಬಿದ. ಮಾರ್ಟಿನ್‌‌ ಬ್ಯೂಬರ್‌ ತನ್ನ ಪ್ರಮುಖ ತತ್ತ್ವಚಿಂತನೆಯ ಕೃತಿಗಳನ್ನು ಜರ್ಮನ್‌‌ನಲ್ಲಿ ಬರೆದ, ಮತ್ತು ಬರ್ಲಿನ್‌ ಹಾಗೂ ಫ್ರಾಂಕ್‌ಫರ್ಟ್‌ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಿದ ಹಾಗೂ ಬೋಧನೆ ಮಾಡಿದ. ಆದರೂ ಸಹ, ಜರ್ಮನ್‌‌ ತತ್ತ್ವಶಾಸ್ತ್ರದ ಮುಖ್ಯವಾಹಿನಿಯಿಂದ ಅವನು ಪ್ರತ್ಯೇಕವಾಗಿ ನಿಲ್ಲುತ್ತಾನೆ. ವಿಯೆನ್ನಾದಲ್ಲಿನ ಒಂದು ಯೆಹೂದಿ ಕುಟುಂಬದಲ್ಲಿ 1878ರಲ್ಲಿ ಜನಿಸಿದ ಆತ, ಯೆಹೂದಿ ಸಂಸ್ಕೃತಿಯ ಓರ್ವ ವಿದ್ವಾಂಸನೂ ಆಗಿದ್ದ ಮತ್ತು ಯೆಹೂದಿ ಸ್ವಾಸ್ಥ್ಯ ಆಂದೋಲನ ಹಾಗೂ ಯೆಹೂದ್ಯ ಅನುಭಾವಿ ಆಂದೋಲನಗಳಲ್ಲಿ ಹಲವಾರು ಬಾರಿ ತೊಡಗಿಸಿಕೊಂಡಿದ್ದ. 1938ರಲ್ಲಿ, ಆತ ಜೆರುಸಲೇಂಗೆ ಕಾಯಮ್ಮಾಗಿ ತೆರಳಿದ. ಅವನ ಅತ್ಯುತ್ತಮ ತತ್ತ್ವಚಿಂತನೆಯ ಕೃತಿಯೆಂದು ಪ್ರಸಿದ್ಧವಾದ ಐ ಅಂಡ್‌ ದೌ ಎಂಬ ಕಿರುಪುಸ್ತಕವು 1922ರಲ್ಲಿ ಪ್ರಕಟಿಸಲ್ಪಟ್ಟಿತು. ವೈಜ್ಞಾನಿಕ ವಿಚಾರವಾದ ಹಾಗೂ ಅಮೂರ್ತ ತತ್ತ್ವಚಿಂತನೆಯ ಆಲೋಚನೆಗಳಿಂದಲೂ ಅನಾಯಾಸವಾಗಿ ಅವಲೋಕಿಸಲ್ಪಟ್ಟ ಮಾನವ ಅಸ್ತಿತ್ವದ ಮೂಲಭೂತವಾದ ವಾಸ್ತವಾಂಶವು ಬ್ಯೂಬರ್‌ ದೃಷ್ಟಿಕೋನದಲ್ಲಿ "ಮನುಷ್ಯನೊಂದಿಗಿನ ಮನುಷ್ಯ"ನ ಸ್ವರೂಪವನ್ನು ಹೊಂದಿದ್ದು, ಅದು "ನಡುವಿನದರ ಕ್ಷೇತ್ರ" ("ದಾಸ್‌ ಜ್ವಿಸ್‌ಚೆನ್‌ಮೆನ್‌ಕ್ಲಿಷೆ" ) ಎಂದು ಕರೆಯಲ್ಪಡುವ ನೆಲೆಯಲ್ಲಿ ನಡೆಯುವ ಒಂದು ಸಂಭಾಷಣೆಯಾಗಿದೆ.[೩೭] ಉಕ್ರೇನಿಯಾದ/ರಷ್ಯಾದ ಇಬ್ಬರು ಚಿಂತಕರಾದ ಲೆವ್‌ ಶೆಸ್ಟೋವ್‌ ಹಾಗೂ ನಿಕೋಲಾಯ್‌ ಬೆರ್ಡಿಯೇವ್‌ , ಪ್ಯಾರಿಸ್‌ನಲ್ಲಿನ ತಮ್ಮ ಕ್ರಾಂತಿಯ-ನಂತರದ ಗಡೀಪಾರುಗಳ ಅವಧಿಯಲ್ಲಿ ಅಸ್ತಿತ್ವವಾದಿ ಚಿಂತಕರಾಗಿ ಚಿರಪರಿಚಿತರಾದರು. ಕೀವ್‌ನಲ್ಲಿನ ಒಂದು ಉಕ್ರೇನಿಯಾದ-ಯೆಹೂದಿ ಕುಟುಂಬದಲ್ಲಿ ಜನಿಸಿದ ಶೆಸ್ಟೋವ್‌, 1905ರಷ್ಟು ಮುಂಚೆಯೇ ಆಲ್‌ ಥಿಂಗ್ಸ್‌ ಆರ್‌ ಪಾಸಿಬಲ್‌ ಎಂಬ ತನ್ನ ಸಾರೋಕ್ತಿಗಳ ಪುಸ್ತಕದಲ್ಲಿ, ತತ್ತ್ವಶಾಸ್ತ್ರದಲ್ಲಿನ ವಿಚಾರವಾದ ಹಾಗೂ ವ್ಯವಸ್ಥಿತಗೊಳಿಸುವಿಕೆಯ ಮೇಲೆ ಒಂದು ದಾಳಿಯನ್ನು ಪ್ರಾರಂಭಿಸಿದ್ದ. ಕೀವ್‌ಗೆ ಸೇರಿದವನಾಗಿದ್ದು, ಪೌರಸ್ತ್ಯ ಕಟ್ಟಾ ಸಂಪ್ರದಾಯಬದ್ಧ ಚರ್ಚಿನಲ್ಲಿ ಒಂದು ಹಿನ್ನೆಲೆಯನ್ನು ಹೊಂದಿದ್ದ ಬೆರ್ಡಿಯೇವ್, ಆಧ್ಯಾತ್ಮಿಕ ಪ್ರಪಂಚ ಹಾಗೂ ದೈನಂದಿನ ಐಹಿಕ ಪ್ರಪಂಚದ ನಡುವಿನ ಒಂದು ಮೂಲಭೂತ ವೈಲಕ್ಷಣ್ಯವನ್ನು ಪ್ರತಿಪಾದಿಸಿದ. ಬೆರ್ಡಿಯೇವ್ ದೃಷ್ಟಿಕೋನದಲ್ಲಿ ಮಾನವ ಸ್ವಾತಂತ್ರ್ಯ ಎಂಬುದು ಚೇತನದ ಕ್ಷೇತ್ರದಲ್ಲಿ ತನ್ನ ಮೂಲವನ್ನು ಹೊಂದಿದ್ದು, ಇದು ಕಾರ್ಯಕಾರಣಸಂಬಂಧದ ವೈಜ್ಞಾನಿಕ ಎಣಿಕೆಗಳಿಂದ ಸ್ವತಂತ್ರವಾಗಿರುವ ಒಂದು ಕ್ಷೇತ್ರವಾಗಿದೆ. ಪ್ರತ್ಯೇಕ ಮಾನವ ಜೀವಿಯು ವಸ್ತುನಿಷ್ಠ ಪ್ರಪಂಚದಲ್ಲಿ ಜೀವಿಸುತ್ತಿರುವವರೆಗೆ, ವಿಶ್ವಾಸಾರ್ಹ ಆಧ್ಯಾತ್ಮಿಕ ಸ್ವಾತಂತ್ರ್ಯದಿಂದ ಅವನು ವಿಮುಖಗೊಳಿಸಲ್ಪಟ್ಟಿರುತ್ತಾನೆ. ಸ್ವಾಭಾವಿಕತೆಗನುಸಾರವಾಗಿ "ಮನುಷ್ಯ"ನನ್ನು ಅರ್ಥೈಸುವುದು ಅಗತ್ಯವಿರುವುದಿಲ್ಲ; ಆದರೆ, ಮುಕ್ತ, ಸೃಜನಶೀಲ ನಡೆಗಳ ಓರ್ವ ಸೃಷ್ಟಿಕರ್ತನಾದ ದೇವರ ಆಕಾರದಲ್ಲಿ ಸೃಷ್ಟಿಸಲ್ಪಟ್ಟಿರುವಂತೆ ಅವನನ್ನು ಅರ್ಥೈಸುವುದು ಅಗತ್ಯವಿರುತ್ತದೆ.[೩೮] ಈ ವಿಷಯಗಳ ಕುರಿತಾಗಿ ದಿ ಡೆಸ್ಟಿನಿ ಆಫ್‌ ಮ್ಯಾನ್‌ ಎಂಬ ಒಂದು ಪ್ರಮುಖ ಕೃತಿಯನ್ನು ಅವನು 1931ರಲ್ಲಿ ಪ್ರಕಟಿಸಿದ. "ಅಸ್ತಿತ್ವವಾದ" ಎಂಬ ಶಬ್ದವು ಸೃಷ್ಟಿಯಾಗುವುದಕ್ಕ ಬಹಳ ಮುಂಚೆಯೇ ಗೇಬ್ರಿಯೆಲ್‌ ಮಾರ್ಸೆಲ್‌ ತನ್ನ "ಎಕ್ಸಿಸ್ಟೆನ್ಸ್‌ ಅಂಡ್‌ ಆಬ್ಜೆಕ್ಟಿವಿಟಿ" (1925) ಎಂಬ ಆರಂಭಿಕ ಪ್ರೌಢಪ್ರಬಂಧದಲ್ಲಿ ಹಾಗೂ ತನ್ನ ಮೆಟಾಫಿಸಿಕಲ್‌ ಜರ್ನಲ್‌‌‌‌ ನಲ್ಲಿ (1927), ಪ್ರಮುಖ ಅಸ್ತಿತ್ವವಾದಿ ವಿಷಯಗಳನ್ನು ಒಂದು ಫ್ರೆಂಚ್‌ ಓದುಗ ವೃಂದಕ್ಕೆ ಪರಿಚಯಿಸಿದ.[೩೯] ಓರ್ವ ನಾಟಕಕಾರನಷ್ಟೇ ಅಲ್ಲದೇ ಓರ್ವ ದಾರ್ಶನಿಕನೂ ಆಗಿದ್ದ ಮಾರ್ಸೆಲ್‌, ತತ್ತ್ವ ಮೀಮಾಂಸೆಯ ಬುದ್ಧಿವಿಕಲ್ಪದ ಒಂದು ಸ್ಥಿತಿಯಲ್ಲಿ ತನ್ನ ತತ್ತ್ವಚಿಂತನೆಯ ಆರಂಭದ ತಾಣವನ್ನು ಕಂಡುಕೊಂಡ; ಇದು ಒಂದು ನಶ್ವರ ಜೀವನದಲ್ಲಿ ಮಾನವಜೀವಿಯು ಸಾಮರಸ್ಯಕ್ಕಾಗಿ ಹುಡುಕುವ ಸ್ಥಿತಿಯಾಗಿದೆ. ಮಾರ್ಸೆಲ್ ದೃಷ್ಟಿಕೋನದಲ್ಲಿ ಸಾಮರಸ್ಯ ಎಂಬುದನ್ನು "ದ್ವಿತೀಯಕ ಪ್ರತಿಫಲನ"ದ ಮೂಲಕ ಪಡೆಯಬೇಕಾದದ್ದು. ಇದು ಪ್ರಪಂಚದೆಡೆಗಿನ "ಚರ್ಚೆಯ" ವಿಧಾನ ಎಂಬುದಕ್ಕಿಂತ ಹೆಚ್ಚಾಗಿ ಒಂದು "ಮಾತುಕತೆಯ" ವಿಧಾನವಾಗಿದ್ದು, "ಅಚ್ಚರಿ ಹಾಗೂ ನಿಬ್ಬೆರಗು"ಗಳಿಂದ ಅದರ ಲಕ್ಷಣವು ನಿರೂಪಿಸಲ್ಪಟ್ಟಿದೆ ಮತ್ತು ಇತರ ಜನರು ಹಾಗೂ ದೇವರ ಕುರಿತಾದ ಕೇವಲ "ಮಾಹಿತಿ"ಗಿಂತ ಹೇಚ್ಚಾಗಿ ಅವರ "ಹಾಜರಿ"ಗೆ ಮುಕ್ತವಾಗಿದೆ. ಮಾರ್ಸೆಲ್ ದೃಷ್ಟಿಯಲ್ಲಿ ಇಂಥ ಹಾಜರಿಯು ಸುಮ್ಮನೇ ಅಲರಿರುವುದಕ್ಕಿಂತ ಹೆಚ್ಚಿನದನ್ನು ಸೂಚಿಸಿತು ಒಂದು ವಸ್ತು ಮತ್ತೊಂದು ವಸ್ತುವಿನ ಹಾಜರಿಯಲ್ಲಿ ಇರಬಹುದಾದ್ದರಿಂದ); ಇದು "ತರ್ಕಬದ್ಧವಲ್ಲದ" ಲಭ್ಯತೆಯನ್ನು, ಮತ್ತು ಇತರರ ವಶದಲ್ಲಿದಲ್ಲಿ ತನ್ನನ್ನೇ ಇರಿಸಿಕೊಳ್ಳುವ ಸಮ್ಮತಿಯನ್ನು ಒಳಗೊಂಡಿತು.[೪೦] ಅಮೂರ್ತ ಕಾರ್ಟೇಸಿಯನ್‌ ಅಹಂನ ಚಟುವಟಿಕೆಯೊಂದಿಗೆ ತಾನು ಸಂಬಂಧವನ್ನು ಹೊಂದಿದ್ದ ಅಮೂರ್ತವಾದ, ವೈಜ್ಞಾನಿಕ-ತಾಂತ್ರಿಕ "ಪ್ರಧಾನ ಪ್ರತಿಫಲನ"ದೊಂದಿಗೆ ಮಾರ್ಸೆಲ್‌ ವೈಲಕ್ಷಣ್ಯವನ್ನು ತೋರಿಸಿದ. ಮಾರ್ಸೆಲ್‌ ದೃಷ್ಟಿಯಲ್ಲಿ, ತತ್ತ್ವಶಾಸ್ತ್ರವು ಒಂದು ವಾಸ್ತವವಾದ ಚಟುವಟಿಕೆಯಾಗಿದ್ದು ಅದನ್ನು, ಒಂದು ವಾಸ್ತವವಾದ ಪ್ರಪಂಚದಲ್ಲಿ-ಸಾಕಾರಗೊಂಡಿರುವ- ಒಂದು ಸಂವೇದಿಸಬಲ್ಲ, ಭಾವನೆಯನ್ನೇ ಮೈದಾಳಿದ ಮಾನವ ಜೀವಿಯು ಕೈಗೊಂಡಿತು.[೩೯][೪೧] 1940ರ ದಶಕದಲ್ಲಿ ಜೀನ್‌-ಪಾಲ್‌ ಸಾರ್ತ್ರೆಯು ತನ್ನದೇ ತತ್ತ್ವಶಾಸ್ತ್ರಕ್ಕೆ ಸಂಬಂಧಿಸಿದಂತೆ "ಅಸ್ತಿತ್ವವಾದ" ಎಂಬ ಶಬ್ದವನ್ನು ಅಳವಡಿಸಿಕೊಂಡನಾದರೂ, ಮಾರ್ಸೆಲ್‌ನ ಆಲೋಚನೆಯು ಸಾರ್ತ್ರೆಯ ಆಲೋಚನೆಗೆ "ಹೆಚ್ಚೂಕಮ್ಮಿ ನೇರವಾಗಿ ವಿರುದ್ಧ ಲಕ್ಷಣವನ್ನು ಹೊಂದಿದೆ" ಎಂದು ವಿವರಿಸಲ್ಪಟ್ಟಿದೆ.[೩೯] ಸಾರ್ತ್ರೆಗಿಂತ ಭಿನ್ನವಾಗಿ, ಮಾರ್ಸೆಲ್‌ ಓರ್ವ ಕ್ರಿಶ್ಚಿಯನ್‌ ಆಗಿದ್ದ, ಮತ್ತು 1929ರಲ್ಲಿ ಓರ್ವ ಕ್ಯಾಥಲಿಕ್‌ ಮತಾಂತರಿತ ಎನಿಸಿಕೊಂಡ. ಅಸ್ತಿತ್ವವಾದ ಎಂಬುದು ಸಾರ್ವಜನಿಕರಿಂದ[೪೨] ಸೃಷ್ಟಿಸಲ್ಪಟ್ಟ ಒಂದು "ಹುಸಿತೋರ್ಕೆ" ಎಂದು ನಂತರದಲ್ಲಿ ವಿವರಿಸಿದ ಕಾಲ್‌ ಜಾಸ್ಪರ್ಸ್‌ ಎಂಬ ಮನೋವಿಜ್ಞಾನಿ ಹಾಗೂ ದಾರ್ಶನಿಕ ಜರ್ಮನಿಯಲ್ಲಿ, ತನ್ನದೇ ಆಲೋಚನೆಯ ಮೇಲೆ ಕಿಯರ್‌ಕೆಗಾರ್ಡ್‌ ಹಾಗೂ ನೀಟ್ಜ್‌‌ಸ್ಚೆಯವರ — ಎಕ್ಸಿಸ್ಟೆಂಜ್‌ಫಿಲೋಸಫೀಯು ಗಾಢವಾದ ಪ್ರಭಾವ ಬೀರಿದೆ ಎಂದು ತಿಳಿಸಿದ. ಜಾಸ್ಪರ್ಸ್‌ ದೃಷ್ಟಿಯಲ್ಲಿ, " ಅಸ್ತಿತ್ವ-ತತ್ತ್ವಶಾಸ್ತ್ರ ಎಂಬುದು ಆಲೋಚನೆಯ ವಿಧಾನವಾಗಿದ್ದು, ಇದರ ನೆರವಿನಿಂದ ಮನುಷ್ಯನು ಸ್ವತಃ ಎಂದಿನಂತಿರಲು ತಾನೇತಾನಾಗಿರಲು ಬಯಸುತ್ತಾನೆ... ಈ ಆಲೋಚನಾ ವಿಧಾನವು ವಸ್ತುಗಳನ್ನು ಪ್ರತ್ಯಕ್ಷವಾಗಿ ಗ್ರಹಿಸುವುದಿಲ್ಲ, ಆದರೆ ಚಿಂತಕನ ಇರುವಿಕೆಯನ್ನು ವಿಶದಪಡಿಸುತ್ತದೆ ಮತ್ತು ವಾಸ್ತವಿಕವಾಗಿಸುತ್ತದೆ."[೪೩] ಹೈಡೆಲ್‌ಬರ್ಗ್‌ ವಿಶ್ವವಿದ್ಯಾಲಯದಲ್ಲಿ ಓರ್ವ ಪ್ರಾಧ್ಯಾಪಕನಾಗಿದ್ದ ಜಾಸ್ಪರ್ಸ್‌ಗೆ ಮಾರ್ಟಿನ್‌‌ ಹೆಡೀಗ್ಗರ್‌‌‌ ನೊಂದಿಗೆ ಪರಿಚಯವಾಯಿತು. ಈತ 1928ರಲ್ಲಿ ಫ್ರೈಬರ್ಗ್‌‌‌‌ನಲ್ಲಿ ಹಸ್ಸರ್ಲ್ಸ್‌‌ನ ಸ್ಥಾನದ ಅಧಿಕಾರ ವಹಿಸಿಕೊಳ್ಳುವುದಕ್ಕೆ ಮುಂಚಿತವಾಗಿ, ಮಾರ್‌‌ಬರ್ಗ್‌‌‌ನಲ್ಲಿ ಒಂದು ಪ್ರಾಧ್ಯಾಪಕಗಿರಿಯ ಕೆಲಸದಲ್ಲಿದ್ದ. ತತ್ತ್ವಚಿಂತನೆಯ ಕುರಿತಾದ ಅನೇಕ ಗಳನ್ನು ಅವರು ನಡೆಸಿದರಾದರೂ, ರಾಷ್ಟ್ರೀಯ ಸಮಾಜವಾದವನ್ನು ಬೆಂಬಲಿಸುವ ಕುರಿತಾದ ಹೆಡೀಗ್ಗರ್‌‌ನ ನಿರ್ಧಾರವು ಅವರನ್ನು ನಂತರದಲ್ಲಿ ವಿಮುಖಗೊಳಿಸಿತು. ಕಿಯರ್‌ಕೆಗಾರ್ಡ್‌ಗೆ[೪೪] ಸಂಬಂಧಿಸಿದಂತೆ ಅವರು ಒಂದು ಮೆಚ್ಚುಗೆಯನ್ನು ಹಂಚಿಕೊಂಡರು ಮತ್ತು 1930ರ ದಶಕದಲ್ಲಿ ನೀಟ್ಜ್‌‌ಸ್ಚೆಯ ಕುರಿತಾಗಿ ಹೆಡೀಗ್ಗರ್‌ ವ್ಯಾಪಕವಾಗಿ ಉಪನ್ಯಾಸ ನೀಡಿದ. ಅದೇನೇ ಇದ್ದರೂ, ಹೆಡೀಗ್ಗರ್‌ನನ್ನು ಓರ್ವ ಅಸ್ತಿತ್ವವಾದಿಯಾಗಿ ಪರಿಗಣಿಸಲ್ಪಡಬೇಕಾದ ವ್ಯಾಪ್ತಿಯು ಚರ್ಚಾಸ್ಪದವಾಗಿದೆ. ಬೀಯಿಂಗ್‌ ಅಂಡ್‌ ಟೈಂ ಕೃತಿಯಲ್ಲಿ, ಅಸ್ತಿತ್ವವಾದದ ವರ್ಗಗಳ ( ಎಕ್ಸಿಸ್ಟೆನ್ಷಿಯೇಲ್‌) ಪರಿಭಾಷೆಯಲ್ಲಿ ವಿಶ್ಲೇಷಿಸಲ್ಪಡಬೇಕಾದ, ಮಾನವ ಅಸ್ತಿತ್ವದಲ್ಲಿನ ( ಡಾಸೀನ್‌) ತತ್ತ್ವಚಿಂತನೆಯ ವಿವರಣೆಗಳನ್ನು ಬೇರೂರಿಸುವ ಒಂದು ವಿಧಾನವನ್ನು ಅವನು ಸಾದರಪಡಿಸಿದ; ಅನೇಕ ವ್ಯಾಖ್ಯಾನಕಾರರು ಅಸ್ತಿತ್ವವಾದಿ ಆಂದೋಲನದಲ್ಲಿನ ಓರ್ವ ಪ್ರಮುಖ ವ್ಯಕ್ತಿಯಾಗಿ ಅವನನ್ನು ಪರಿಗಣಿಸುವಲ್ಲಿ ಇದು ಅವಕಾಶಮಾಡಿಕೊಟ್ಟಿದೆ.

ಎರಡನೇ ಜಾಗತಿಕ ಸಮರದ ನಂತರದ ಸ್ಥಿತಿ[ಬದಲಾಯಿಸಿ]

ಎರಡನೇ ಜಾಗತಿಕ ಸಮರವನ್ನು ಅನುಸರಿಸಿಕೊಂಡು, ಅಸ್ತಿತ್ವವಾದವು ಒಂದು ಚಿರಪರಿಚಿತ ಹಾಗೂ ಗಮನಾರ್ಹವಾದ ತತ್ತ್ವಚಿಂತನೆಯ ಮತ್ತು ಸಾಂಸ್ಕೃತಿಕ ಆಂದೋಲನವಾಗಿ ರೂಪುಗೊಂಡಿತು. ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟಗೊಂಡ ಜನಪ್ರಿಯ ಕಾದಂಬರಿಗಳು, ನಾಟಕಗಳು ಮತ್ತು ವ್ಯಾಪಕವಾಗಿ ಓದಲ್ಪಟ್ಟ ಪತ್ರಿಕಾ ಬರಹಗಳು ಹಾಗೂ ತಾತ್ತ್ವಿಕ ಪಠ್ಯಗಳನ್ನು ಬರೆದ ಜೀನ್‌-ಪಾಲ್‌ ಸಾರ್ತ್ರೆ ಮತ್ತು ಆಲ್ಬರ್ಟ್‌ ಕ್ಯಾಮಸ್‌ ಎಂಬ ಇಬ್ಬರು ಫ್ರೆಂಚ್‌ ಬರಹಗಾರರ ಸಾರ್ವಜನಿಕ ಪ್ರಸಿದ್ಧಿಯ ಮೂಲಕ ಇದು ಮುಖ್ಯವಾಗಿ ಕೈಗೂಡಿತು. ಹೆಡೀಗ್ಗರ್‌‌ನ ಬೀಯಿಂಗ್‌ ಅಂಡ್‌ ಟೈಂ ಎಂಬ ಪುಸ್ತಕವು ಜರ್ಮನಿಯಿಂದ ಆಚೆಗೆ ಹೆಚ್ಚು ಹೆಚ್ಚು ಪ್ರಖ್ಯಾತಿಯನ್ನು ಈ ವರ್ಷಗಳಲ್ಲೇ ಕಂಡಿತು.

ಫ್ರೆಂಚ್‌ ದಾರ್ಶನಿಕರಾದ ಜೀನ್‌-ಪಾಲ್‌ ಸಾರ್ತ್ರೆ ಹಾಗೂ ಸಿಮೋನೆ ಡಿ ಬ್ಯೂವಾಯ್ರ್‌

1938ರಲ್ಲಿ ಬಂದ ನಾಸಿಯಾ ಎಂಬ ತನ್ನ ಕಾದಂಬರಿಯಲ್ಲಿ ಹಾಗೂ 1939ರಲ್ಲಿ ಬಂದ ತನ್ನ ದಿ ವಾಲ್‌ ಎಂಬ ಸಂಕಲನದ ಸಣ್ಣ ಕಥೆಗಳಲ್ಲಿ ಅಸ್ತಿತ್ವವಾದಿ ವಿಷಯಗಳ ಕುರಿತಾಗಿ ಸಾರ್ತ್ರೆಯು ಪ್ರಸ್ತಾವಿಸಿದ್ದ, ಮತ್ತು 1943ರಲ್ಲಿ ಬೀಯಿಂಗ್‌ ಅಂಡ್‌ ನಥಿಂಗ್‌ನೆಸ್‌ ಎಂಬ ಒಂದು ಪ್ರಮುಖ ತತ್ತ್ವಚಿಂತನೆಯ ಹೇಳಿಕೆಯನ್ನೂ ಆತ ಪ್ರಕಟಿಸಿದ್ದ; ಆದರೆ ಜರ್ಮನ್‌‌ ಆಕ್ರಮಣದ ಪಡೆಗಳಿಂದ ಪ್ಯಾರಿಸ್‌ನ ವಿಮೋಚನೆಯಾದ ನಂತರದ ಎರಡು ವರ್ಷಗಳಲ್ಲಿ, ಅವನು ಮತ್ತು ಅವನ ನಿಕಟ ಸಹವರ್ತಿಗಳಾದ ಕ್ಯಾಮಸ್‌, ಸಿಮೋನೆ ಡಿ ಬ್ಯೂವಾಯ್ರ್‌, ಮೌರೀಸ್‌ ಮೆರ್ಲಿಯೂ-ಪಾಂಟಿ ಹಾಗೂ ಇತರರು ಅಸ್ತಿತ್ವವಾದ ಎಂದು ಹೆಸರಾದ ಒಂದು ಆಂದೋಲನದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧರಾದ ಅಗ್ರಗಣ್ಯ ವ್ಯಕ್ತಿಗಳಾಗಿ ರೂಪುಗೊಂಡರು.[೪೫] ಕೇವಲ ಅತ್ಯಲ್ಪ ಕಾಲದಲ್ಲೇ, ನಿರ್ದಿಷ್ಟವಾಗಿ ಕ್ಯಾಮಸ್‌ ಮತ್ತು ಸಾರ್ತ್ರೆ ಇಬ್ಬರೂ ಯುದ್ಧಾನಂತರದ ಫ್ರಾನ್ಸ್‌ನ ಸಾರ್ವಜನಿಕ ಬುದ್ಧಿಜೀವಿಗಳಾಗಿ ರೂಪುಗೊಂಡರು ಹಾಗೂ 1945ರ ಅಂತ್ಯದ ವೇಳೆಗೆ "ಎಲ್ಲಾ ಓದುಗರ ಉದ್ದಗಲಕ್ಕೂ ತಲುಪಿದ ಒಂದು ಕೀರ್ತಿಯನ್ನು" ಅವರು ಸಾಧಿಸಿದರು.[೪೬] ಕಾಂಬ್ಯಾಟ್‌ ಎಂಬ ಅತ್ಯಂತ ಜನಪ್ರಿಯ ವಾಮಪಂಥಿ (ಹಿಂದಿನ ಫ್ರೆಂಚ್‌ ಪ್ರತಿರೋಧ ಚಳವಳಿ) ವೃತ್ತಪತ್ರಿಕೆಗೆ ಕ್ಯಾಮಸ್‌ ಓರ್ವ ಸಂಪಾದಕನಾಗಿದ್ದ; ಲೆಸ್‌ ಟೆಂಪ್ಸ್‌ ಮಾಡರ್ನ್ಸ್‌ ಎಂಬ ಹೆಸರಿನ ವಾಮಪಂಥಿ ಆಲೋಚನೆಯ ತನ್ನ ನಿಯತಕಾಲಿಕವನ್ನು ಸಾರ್ತ್ರೆ ಪ್ರಾರಂಭಿಸಿದ. ಎರಡು ವಾರಗಳ ನಂತರ, ಕ್ಲಬ್‌ ಮೇಂಟೆನೆಂಟ್‌‌‌ನ ಒಂದು ಕಿಕ್ಕಿರಿದ ಸಭೆಯಲ್ಲಿ ಅಸ್ತಿತ್ವವಾದ ಹಾಗೂ ಮಾನವತಾವಾದದ ಕುರಿತಾದ, ವ್ಯಾಪಕವಾಗಿ ವರದಿಮಾಡಲ್ಪಟ್ಟ ಉಪನ್ಯಾಸವನ್ನು ಅವನು ನೀಡಿದ. ಈ ಕುರಿತು ಬ್ಯೂವಾಯ್ರ್‌ ಬರೆಯುತ್ತಾ, "ನಮ್ಮ ಕುರಿತು ಚರ್ಚಿಸದೆಯೇ ವೃತ್ತಪತ್ರಿಕೆಗಳು ಒಂದು ವಾರವನ್ನು ಸಾಗಿಸುತ್ತಿರಲಿಲ್ಲ";[೪೭] ಅಸ್ತಿತ್ವವಾದವು "ಯುದ್ಧಾನಂತರದ ಯುಗದ ಮಾಧ್ಯಮಗಳ ಮೊದಲ ಅತಿಯಾದ ಗೀಳಾಗಿತ್ತು" ಎಂದು ತಿಳಿಸಿದ.[೪೮] 1947ರ ಅಂತ್ಯದ ವೇಳೆಗೆ, ಕ್ಯಾಮಸ್‌ನ ಹಿಂದಿನ ಕಾದಂಬರಿ ಮತ್ತು ನಾಟಕಗಳು ಮರುಮುದ್ರಣಗೊಂಡಿದ್ದವು, ಕ್ಯಾಲಿಗುಲಾ ಎಂಬ ಅವನ ಹೊಸ ನಾಟಕವು ಪ್ರದರ್ಶನಗೊಂಡಿತ್ತು ಮತ್ತು ದಿ ಪ್ಲೇಗ್‌ ಎಂಬ ಅವನ ಕಾದಂಬರಿ ಪ್ರಕಟಿಸಲ್ಪಟ್ಟಿತ್ತು; ಸಾರ್ತ್ರೆಯ ದಿ ರೋಡ್ಸ್‌ ಟು ಫ್ರೀಡಂ ಕೃತಿತ್ರಯದ ಮೊದಲ ಎರಡು ಕಾದಂಬರಿಗಳು, ಹಾಗೂ ಬ್ಯೂವಾಯ್ರ್‌‌ನ ದಿ ಬ್ಲಡ್‌ ಆಫ್‌ ಅದರ್ಸ್‌ ಎಂಬ ಕಾದಂಬರಿ ಕಾಣಿಸಿಕೊಂಡಿದ್ದವು. ಕ್ಯಾಮಸ್‌ ಮತ್ತು ಸಾರ್ತ್ರೆಯಿಂದ ರಚಿಸಲ್ಪಟ್ಟ ಕೃತಿಗಳು ಅಷ್ಟುಹೊತ್ತಿಗಾಗಲೇ ವಿದೇಶಿ ಆವೃತ್ತಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದವು. ಪ್ಯಾರಿಸ್‌-ಮೂಲದ ಅಸ್ತಿತ್ವವಾದಿಗಳು ಪ್ರಸಿದ್ಧರಾಗಿದ್ದರು.[೪೫] ಎಡ್ಮಂಡ್‌ ಹಸ್ಸರ್ಲ್‌‌‌ ಹಾಗೂ ಮಾರ್ಟಿನ್‌‌ ಹೆಡೀಗ್ಗರ್‌‌‌‌‌‌ರವರ[೪೯] ಮನೋವಿಕಾಸವಿಜ್ಞಾನವನ್ನು ಅಧ್ಯಯನ ಮಾಡಲು ಸಾರ್ತ್ರೆಯು 1930ರಲ್ಲಿ ಜರ್ಮನಿಗೆ ಪ್ರಯಾಣ ಬೆಳೆಸಿದ್ದ ಮತ್ತು ಬೀಯಿಂಗ್‌ ಅಂಡ್‌ ನಥಿಂಗ್‌ನೆಸ್‌ ಎಂಬ ಹೆಸರಿನ ತನ್ನ ಪ್ರಮುಖ ಪ್ರಕರಣ ಗ್ರಂಥದಲ್ಲಿ ಅವರ ಕೃತಿಯ ಕುರಿತಾದ ವಿಮರ್ಶಾತ್ಮಕ ವ್ಯಾಖ್ಯಾನಗಳನ್ನು ಅವನು ಸೇರಿಸಿದ್ದ. 1930ರ ದಶಕದಲ್ಲಿ ಅಲೆಕ್ಸಾಂಡ್ರೆ ಕೊಜೆವೆಯು ಪ್ಯಾರಿಸ್‌ನಲ್ಲಿ, ಉಪನ್ಯಾಸಗಳ ಒಂದು ಸರಣಿಯಲ್ಲಿ ಹೆಗೆಲ್‌ನನ್ನು ವಿವರವಾಗಿ ಪ್ರತಿಪಾದಿಸುತ್ತಾ ಹೋಗುವ ಸಮಯದಲ್ಲಿ ಹೆಡೀಗ್ಗರ್‌ನ ಚಿಂತನೆಯನ್ನು ಬಳಸುವ ಮೂಲಕ, ಫ್ರೆಂಚ್‌ ತತ್ತ್ವಚಿಂತನೆಯ ವಲಯಗಳಲ್ಲಿ ಹೆಡೀಗ್ಗರ್‌ನ ಚಿಂತನೆಯೂ ಸಹ ಪರಿಚಿತಗೊಳ್ಳಲು ಕಾರಣನಾಗಿದ್ದ.[೫೦] ಈ ಉಪನ್ಯಾಸಗಳು ಅತೀವವಾಗಿ ಪ್ರಭಾವ ಬೀರಿದ್ದವು; ಪ್ರೇಕ್ಷಕರ ವಲಯದಲ್ಲಿದ್ದ ಸದಸ್ಯರಲ್ಲಿ ಕೇವಲ ಸಾರ್ತ್ರೆ ಮತ್ತು ಮೆರ್‌ಲಿಯೂ-ಪಾಂಟಿ ಮಾತ್ರವೇ ಅಲ್ಲದೇ, ರೇಮಂಡ್‌ ಕ್ವೀನಿಯೂ, ಜಾರ್ಜ್ಸ್‌ ಬೆಟಾಲೀ, ಲೂಯಿಸ್‌ ಆಲ್‌ಥಸ್ಸರ್‌, ಆಂಡ್ರೆ ಬ್ರೆಟನ್‌ ಹಾಗೂ ಜಾಕ್ವೆಸ್‌ ಲ್ಯಾಕನ್‌ ಕೂಡಾ ಸೇರಿದ್ದರು.[೫೧] ಹೆಡೀಗ್ಗರ್‌‌ನ ಬೀಯಿಂಗ್‌ ಅಂಡ್‌ ಟೈಂ ನಿಂದ ಆರಿಸಲಾದ ಒಂದು ಆಯ್ದಭಾಗವನ್ನು ಫ್ರೆಂಚ್‌ನಲ್ಲಿ 1938ರಲ್ಲಿ ಪ್ರಕಟಿಸಲಾಯಿತು, ಮತ್ತು ಅವನ ಪ್ರಬಂಧಗಳು ಫ್ರೆಂಚ್‌ ತತ್ತ್ವಶಾಸ್ತ್ರದ ನಿಯತಕಾಲಿಕಗಳಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದವು.

ಫ್ರೆಂಚ್‌-ಆಲ್ಜೀರಿಯಾದ ದಾರ್ಶನಿಕ, ಕಾದಂಬರಿಕಾರ, ಮತ್ತು ನಾಟಕಕಾರ ಆಲ್ಬರ್ಟ್‌ ಕ್ಯಾಮಸ್‌

ಸಾರ್ತ್ರೆಯ ಕೃತಿಯನ್ನು ಹೆಡೀಗ್ಗರ್‌ ಓದಿದ ಮತ್ತು ಆರಂಭದಲ್ಲಿ ಅದರಿಂದ ಪ್ರಭಾವಿತನಾಗಿ ಈ ರೀತಿ ವ್ಯಾಖ್ಯಾನಿಸಿದ: "ಇದೇ ಮೊದಲಬಾರಿಗೆ ನಾನೋರ್ವ ಸ್ವತಂತ್ರ ಚಿಂತಕನಿಗೆ ಮುಖಾಮುಖಿಯಾಗಿದ್ದು, ಈತ ತಳಹದಿಯಿಂದ ಪ್ರಾರಂಭಿಸಿ ಆಚೆಗೆ ವ್ಯಾಪಿಸುವ ಮಟ್ಟದಲ್ಲಿ ಅನುಭವವನ್ನು ಹೊಂದಿದ್ದಾನೆ; ನನ್ನ ಅಭಿಪ್ರಾಯದಲ್ಲಿ, ಈ ವ್ಯಾಪ್ತಿಯಿಂದಾಚೆಗೆ ನಿಮ್ಮ ಕೃತಿಯು ನನ್ನ ತತ್ತ್ವಶಾಸ್ತ್ರದ ಒಂದು ತತ್‌ಕ್ಷಣದ ಗ್ರಹಿಕೆಯನ್ನು ತೋರಿಸುತ್ತದೆ, ಏಕೆಂದರೆ ನಾನು ಇದಕ್ಕೆ ಮುಂಚಿತವಾಗಿ ಮುಖಾಮುಖಿಯಾಗಿಲ್ಲ."[೫೨] ಆದಾಗ್ಯೂ, ನಂತರದಲ್ಲಿ ಜೀನ್‌ ಬ್ಯೂಫ್ರೆಟ್‌[೫೩] ಎಂಬ ತನ್ನ ಫ್ರೆಂಚ್‌ ಅನುಯಾಯಿಯಿಂದ ಒಡ್ಡಲ್ಪಟ್ಟ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸುವಾಗ, ಸಾರ್ತ್ರೆಯ ಸ್ಥಾನದಿಂದ ಹೆಡೀಗ್ಗರ್‌ ಸ್ವತಃ ದೂರವುಳಿದ ಹಾಗೂ ತನ್ನ ಲೆಟರ್‌ ಆನ್‌ ಹ್ಯೂಮನಿಸಂ ಕೃತಿಯಲ್ಲಿ ಅಸ್ತಿತ್ವವಾದದಿಂದ ಮುಕ್ಕಾಲುಪಾಲು ದೂರವುಳಿದ.[೫೪] 1950ರ ದಶಕ ಮತ್ತು 1960ರ ದಶಕಗಳ ಅವಧಿಯಲ್ಲಿ ಫ್ರಾನ್ಸ್‌ನಲ್ಲಿ ಹೆಡೀಗ್ಗರ್‌‌ನ ಪ್ರಖ್ಯಾತಿಯು ಬೆಳೆಯುತ್ತಾ ಹೋಯಿತು. 1960ರ ದಶಕದಲ್ಲಿ, ತನ್ನ ಕ್ರಿಟಿಕ್‌ ಆಫ್‌ ಡಯಲೆಕ್ಟಿಕಲ್‌ ರೀಸನ್‌ ಎಂಬ ಕೃತಿಯಲ್ಲಿ ಅಸ್ತಿತ್ವವಾದ ಹಾಗೂ ಮಾರ್ಕ್ಸ್‌ವಾದವನ್ನು ಸಮನ್ವಯಗೊಳಿಸಲು ಸಾರ್ತ್ರೆ ಪ್ರಯತ್ನಿಸಿದ. ಸ್ವಾತಂತ್ರ್ಯ ಮತ್ತು ಹೊಣೆಗಾರಿಕೆಯು ಅವನ ಬರಹಗಳ ಉದ್ದಕ್ಕೂ ಕಂಡುಬಂದ ಒಂದು ಪ್ರಮುಖ ವಿಷಯವಾಗಿತ್ತು. ತಮ್ಮ ಬೇರ್ಪಡುವಿಕೆಯ ಅವಧಿಯವರೆಗೂ ಆಲ್ಬರ್ಟ್‌ ಕ್ಯಾಮಸ್‌ ಸಾರ್ತ್ರೆಯ ಓರ್ವ ಸ್ನೇಹಿತನಾಗಿದ್ದ, ಮತ್ತು ಅಸ್ತಿತ್ವವಾದದ ವಿಷಯಗಳ ಕುರಿತಾಗಿ ಹಲವಾರು ಕೃತಿಗಳನ್ನು ಆತ ಬರೆದ. ದಿ ರೆಬೆಲ್‌ , ದಿ ಸ್ಟ್ರೇಂಜರ್‌‌ , ದಿ ಮಿಥ್‌ ಆಫ್‌ ಸಿಸಿಫಸ್‌ , ಹಾಗೂ ಸಮ್ಮರ್‌ ಇನ್‌ ಆಲ್ಜಿಯರ್ಸ್‌‌ ಮೊದಲಾದವು ಅವನ ಕೃತಿಗಳಲ್ಲಿ ಸೇರಿದ್ದವು. ಇತರ ಅನೇಕರಂತೆ ಕ್ಯಾಮಸ್‌, ಅಸ್ತಿತ್ವವಾದಿ ಹಣೆಪಟ್ಟಿಯನ್ನು ತಿರಸ್ಕರಿಸಿದ, ಮತ್ತು ಅಸಂಗತತೆಯನ್ನು ಎದುರಿಸುತ್ತಿರುವ ಜನರೊಂದಿಗೆ ತನ್ನ ಕೃತಿಗಳು ಸಂಬಂಧವನ್ನು ಹೊಂದಿರಬೇಕು ಎಂದು ಪರಿಗಣಿಸಿದ. ದಿ ಮಿಥ್‌ ಆಫ್‌ ಸಿಸಿಫಸ್ ಎಂಬ ಕೃತಿಯಲ್ಲಿ, ಅಸ್ತಿತ್ವದ ನಿಷ್ಪರಿಣಾಮಕತೆಯನ್ನು ನಿರೂಪಿಸಲು ಗ್ರೀಕ್‌ ಪುರಾಣದ ಸಾದೃಶ್ಯ ಅಥವಾ ಹೋಲಿಕೆಯನ್ನು ಕ್ಯಾಮಸ್‌ ಬಳಸುತ್ತಾನೆ. ಪುರಾಣದಲ್ಲಿ, ಶಾಶ್ವತತೆಗೆ ಸಂಬಂಧಿಸಿದಂತೆ ಬೆಟ್ಟವೊಂದರ ಮೇಲಕ್ಕೆ ಬಂಡೆಯೊಂದನ್ನು ಉರುಳಿಸಿಕೊಂಡು ಹೋಗುವ ಶಿಕ್ಷೆಯನ್ನು ಸಿಸಿಫಸ್‌ಗೆ ವಿಧಿಸಲಾಗಿರುತ್ತದೆ, ಆದರೆ ಬೆಟ್ಟದ ತುದಿಯನ್ನು ಅವನು ತಲುಪಿದಾಗ ಬಂಡೆಯು ಮತ್ತೆ ಉರುಳಿಕೊಂಡು ತಳಭಾಗಕ್ಕೆ ಬರುತ್ತದೆ. ಈ ಅಸ್ತಿತ್ವವು ಅರ್ಥಹೀನವಾಗಿದೆ ಎಂದು ಕ್ಯಾಮಸ್‌ ಭಾವಿಸುತ್ತಾನೆ, ಆದರೆ ಕೆಲಸದಲ್ಲಿ ನಿರಂತರವಾಗಿ ಸ್ವತಃ ತನ್ನನ್ನು ಹಾಗೆಯೇ ತೊಡಗಿಸಿಕೊಳ್ಳುವ ಮೂಲಕ, ತನ್ನ ಕೆಲಸದಲ್ಲಿನ ಅರ್ಥ ಮತ್ತು ಉದ್ದೇಶವನ್ನು ಸಿಸಿಫಸ್‌ ಅಂತಿಮವಾಗಿ ಕಂಡುಕೊಳ್ಳುತ್ತಾನೆ. ಕಿರ್ಕೆಗಾರ್ಡ್‌, ಶೆಸ್ಟೋವ್‌, ಹೆಡೀಗ್ಗರ್‌‌ ಮತ್ತು ಜಾಸ್ಪರ್ಸ್‌ರವರ ಕೃತಿಗಳಲ್ಲಿ ಅಸ್ತಿತ್ವವಾದದ ತತ್ತ್ವಶಾಸ್ತ್ರವಾಗಿದೆ ಎಂದು ಯಾವುದನ್ನು ಕ್ಯಾಮಸ್‌ ಪರಿಗಣಿಸಿದ್ದನೋ ಅದರ ಒಂದು ವಿಸ್ತರಿಸಲ್ಪಟ್ಟ ನಿರಾಕರಣವನ್ನು ಪುಸ್ತಕದ ಪ್ರಥಮಾರ್ಧವು ಒಳಗೊಂಡಿದೆ. ಸಿಮೋನ್ ದ ಬೋವ್ ಓರ್ವ ಪ್ರಮುಖ ಅಸ್ತಿತ್ವವಾದಿಯಾಗಿದ್ದು, ತನ್ನ ಜೀವನದ ಬಹುಭಾಗವನ್ನು ಆಕೆ ಸಾರ್ತ್ರೆಯ ಸಹಭಾಗಿಯಾಗಿ ಕಳೆದಳು; ದಿ ಸೆಕೆಂಡ್‌ ಸೆಕ್ಸ್‌ ಮತ್ತು ದಿ ಎಥಿಕ್ಸ್‌ ಆಫ್‌ ಆಂಬಿಗಿಟಿ ಸೇರಿದಂತೆ ತನ್ನ ಕೃತಿಗಳಲ್ಲಿ ಆಕೆ ಸ್ತ್ರೀಸಮಾನತಾವಾದಿ ಹಾಗೂ ಅಸ್ತಿತ್ವವಾದದ ನೈತಿಕತೆಗೆ ಸಂಬಂಧಿಸಿದಂತೆ ಬರೆದಳು. ಸಾರ್ತ್ರೆಯೊಂದಿಗಿನ ಅವಳ ಸಂಬಂಧದ ಕಾರಣದಿಂದಾಗಿ ಡಿ ಬ್ಯೂವಾಯ್ರ್‌ಳನ್ನು ಅನೇಕವೇಳೆ ಉಪೇಕ್ಷಿಸಲಾಯಿತಾದರೂ, ಆ ಸಮಯದಲ್ಲಿ ಅಷ್ಟಾಗಿ ಕೇಳಿರದಿದ್ದ, ಸ್ತ್ರೀಸಮಾನತಾವಾದದಂಥ ಚಿಂತನೆಯ ಇತರ ಸ್ವರೂಪಗಳೊಂದಿಗೆ ಅಸ್ತಿತ್ವವಾದವನ್ನು ಅವಳು ಸಂಯೋಜಿದಳು. ಇದರಿಂದಾಗಿ ಕ್ಯಾಮಸ್‌ನಂಥ ಇತರ ಸಹವರ್ತಿ ಬರಹಗಾರರಿಂದ ಆಕೆ ದೂರವುಳಿಯಬೇಕಾಗಿ ಬಂತು. ಫ್ರಾಂಟ್ಜ್‌ ಫೆನಾನ್ ಎಂಬ ಓರ್ವ ಮಾರ್ಟಿನಿಕ್ವಾನ್‌-ಸಂಜಾತನು ವಸಾಹತುವಾದದ ವಿಮರ್ಶಕನಾಗಿದ್ದು, ಓರ್ವ ಪ್ರಮುಖ ಅಸ್ತಿತ್ವವಾದಿ ಎಂದು ಈತ ಪರಿಗಣಿಸಲ್ಪಟ್ಟಿದ್ದಾನೆ.[೫೫] ಸೋರೆನ್‌ ಕಿಯರ್‌ಕೆಗಾರ್ಡ್‌ ಮತ್ತು ಕಾರ್ಲ್‌ ಬಾರ್ಥ್‌‌ರನ್ನು ಅನುಸರಿಸುತ್ತಿದ್ದ ಪಾಲ್‌ ಟಿಲ್ಲಿಚ್‌ ಎಂಬ ಅಸ್ತಿತ್ವವಾದದ ಓರ್ವ ಪ್ರಮುಖ ದೇವತಾಶಾಸ್ತ್ರಜ್ಞನು, ಅಸ್ತಿತ್ವವಾದದದ ಪರಿಕಲ್ಪನೆಗಳನ್ನು ಕ್ರಿಶ್ಚಿಯನ್‌ ಮತಧರ್ಮಶಾಸ್ತ್ರಕ್ಕೆ ಅನ್ವಯಿಸಿದ, ಮತ್ತು ಜನಸಾಮಾನ್ಯರಿಗೆ ಅಸ್ತಿತ್ವವಾದದದ ಮತಧರ್ಮಶಾಸ್ತ್ರವು ಪರಿಚಯಿಸಲ್ಪಡುವಲ್ಲಿ ನೆರವಾದ. ದಿ ಕರೇಜ್‌ ಟು ಬಿ ಎಂಬ ಅವನ ಮೂಲ ಕೃತಿಯು, ವ್ಯಾಕುಲತೆ ಹಾಗೂ ಜೀವನದ ಅಸಂಬದ್ಧತೆಯ ಕುರಿತಾದ ಕಿಯರ್‌ಕೆಗಾರ್ಡ್‌ನ ವಿಶ್ಲೇಷಣೆಯನ್ನು ಅನುಸರಿಸುತ್ತದೆಯಾದರೂ, ಜೀವನದ ಅಸಂಬದ್ಧತೆಯ ಹೊರತಾಗಿಯೂ ಆಧುನಿಕ ಮನುಷ್ಯನು ದೇವರ ಮೂಲಕ ತನ್ನತನವನ್ನು ಸಾಧಿಸಬೇಕು ಎಂಬ ಪ್ರಮೇಯವನ್ನೂ ಅದು ಪ್ರಸ್ತಾಪಿಸುತ್ತದೆ. ಕ್ರಿಶ್ಚಿಯನ್‌ ಪೌರಾಣಿಕ ಪರಿಕಲ್ಪನೆಗಳನ್ನು ಅಸ್ತಿತ್ವವಾದದ ಪರಿಕಲ್ಪನೆಗಳು ಎಂಬ ರೀತಿಯಲ್ಲಿ ಅರ್ಥವಿವರಣೆಯನ್ನು ನೀಡುವ ಮೂಲಕ ಕ್ರಿಶ್ಚಿಯನ್‌ ಧರ್ಮವನ್ನು ನಿಷ್ಪುರಾಣೀಕರಿಸಲು (ಪುನರ್‌‌ವ್ಯಾಖ್ಯಾನಿಸಲು), ಕಿಯರ್‌ಕೆಗಾರ್ಡ್‌ನ ಹಾಗೂ ಹೆಡೀಗ್ಗರ್‌‌‌‌‌ನ ಅಸ್ತಿತ್ವದ ತತ್ತ್ವಶಾಸ್ತ್ರವನ್ನು ರುಡಾಲ್ಫ್‌ ಬಲ್ಟ್‌ಮನ್‌ ಬಳಸಿಕೊಂಡ. ಓರ್ವ ಅಸ್ತಿತ್ವವಾದದ ದೃಶ್ಯತ್ವವಿಜ್ಞಾನಿಯಾದ ಮೌರೀಸ್‌ ಮೆರ್ಲಿಯೂ-ಪಾಂಟಿ ಎಂಬಾತ ಕೆಲವೊಂದು ಅವಧಿಗೆ ಸಾರ್ತ್ರೆಯ ಓರ್ವ ಒಡನಾಡಿಯಾಗಿದ್ದ. ಹಸ್ಸರ್ಲ್‌‌‌‌‌‌‌ಮನೋವಿಕಾಸವಿಜ್ಞಾನದ ಅರ್ಥಗ್ರಹಿಕೆಯನ್ನು ಅವನು ಮಾಡಿಕೊಂಡಿದ್ದ ರೀತಿಯು ಮೆರ್‌ಲಿಯೂ-ಪಾಂಟಿಯ ಇತರ ಸಹವರ್ತಿ ಅಸ್ತಿತ್ವವಾದಿಗಳಿಗಿಂತಲೂ ಮಹತ್ತಾದ ರೀತಿಯಲ್ಲಿತ್ತು. ಹ್ಯೂಮನಿಸಂ ಅಂಡ್‌ ಟೆರರ್‌‌ ಎಂಬ ಅವನ ಕೃತಿಯು ಸಾರ್ತ್ರೆಯ ಮೇಲೆ ಮಹತ್ತರವಾಗಿ ಪ್ರಭಾವ ಬೀರಿತು ಎಂದು ಹೇಳಲಾಗುತ್ತದೆ. ಆದಾಗ್ಯೂ, ನಂತರದ ವರ್ಷಗಳಲ್ಲಿ ಸರಿಪಡಿಸಲಾಗದ ಮಟ್ಟಕ್ಕೆ ಅವರು ಭಿನ್ನಾಭಿಪ್ರಾಯವನ್ನು ತಳೆದಿದ್ದರು; ಹೀಗಾಗಿ ಡಿ ಬ್ಯೂವಾಯ್ರ್‌ರಂಥ ಅನೇಕ ಅಸ್ತಿತ್ವವಾದಿಗಳು ಬೇರೆಬೇರೆಯಾಗುವಂತಾಯಿತು, ಮತ್ತು ಡಿ ಬ್ಯೂವಾಯ್ರ್‌ ಸಾರ್ತ್ರೆಯ ಪಕ್ಷವನ್ನು ವಹಿಸಿದಳು. ಆರಂಭದಲ್ಲಿ ವಿಮರ್ಶಾತ್ಮಕ ಮೆಚ್ಚುಗೆಯನ್ನು ಗಳಿಸುವುದಕ್ಕಾಗಿ, ಕಾಲಿನ್‌ ವಿಲ್ಸನ್ ಎಂಬ ಒಬ್ಬ ಇಂಗ್ಲಿಷ್‌ ಬರಹಗಾರ 1956ರಲ್ಲಿ ದಿ ಔಟ್‌ಸೈಡರ್‌‌ ಎಂಬ ತನ್ನ ಅಧ್ಯಯನವನ್ನು ಪ್ರಕಟಿಸಿದ. ಈ ಪುಸ್ತಕದಲ್ಲಿ ಮತ್ತು ಇತರ ಕೃತಿಗಳಲ್ಲಿ (ಉದಾಹರಣೆಗೆ, ಇಂಟ್ರಡಕ್ಷನ್‌ ಟು ದಿ ನ್ಯೂ ಎಕ್ಸಿಸ್ಟೆನ್ಷಿಯಾಲಿಸಂ ), ಒಂದು ನಿರಾಶಾವಾದದ ತತ್ತ್ವಶಾಸ್ತ್ರವನ್ನಾಗಿ ತಾನು ಏನನ್ನು ಗ್ರಹಿಸಿದ್ದನೋ ಅದನ್ನು ಪುನಶ್ಚೈತನ್ಯಗೊಳಿಸಲು ಹಾಗೂ ಒಂದು ವ್ಯಾಪಕ ಓದುಗವೃಂದಕ್ಕೆ ಅದನ್ನು ತಲುಪಿಸಲು ಅವನು ಪ್ರಯತ್ನಿಸಿದ. ಆದಾಗ್ಯೂ, ಆತ ವಿದ್ವತ್‌ಪೂರ್ಣವಾದ ರೀತಿಯಲ್ಲಿ ತರಬೇತಿ ಪಡೆದಿರಲಿಲ್ಲವಾದ್ದರಿಂದ ಮತ್ತು ಅವನ ಕೃತಿಯಲ್ಲಿ ಯಥಾರ್ಥತೆ ಮತ್ತು ವಿಮರ್ಶಾತ್ಮಕ ಮಾನದಂಡಗಳ ಕೊರತೆಯಿದ್ದ ಕಾರಣದಿಂದಾಗಿ, ಅದು ವೃತ್ತಿಪರ ದಾರ್ಶನಿಕರ ದಾಳಿಗೆ ಈಡಾಯಿತು.[೫೬]

ಪರಿಕಲ್ಪನೆಗಳು[ಬದಲಾಯಿಸಿ]

ವಾಸ್ತವವಾದ ಅಸ್ತಿತ್ವದ ಮೇಲಿನ ಗಮನ[ಬದಲಾಯಿಸಿ]

ಮಾನವನ ಇರುವಿಕೆಯೊಂದರ ಊಹನ ಮಾಡಿಕೊಳ್ಳುವುದಕ್ಕಿಂತ ಹೆಚ್ಚಾಗಿ ವಾಸ್ತವವಾದ ಮಾನವ ಅಸ್ತಿತ್ವದ ಪ್ರಶ್ನೆಯ ಕುರಿತು ಅಸ್ತಿತ್ವವಾದಿ ಚಿಂತಕರು ಗಮನಹರಿಸುತ್ತಾರೆ; ಮಾನವನ ಇರುವಿಕೆಯು ಜೀವನ ಆಯ್ಕೆಗಳ ಮೂಲಕ ನಿರ್ಣಯಿಸಲ್ಪಡುತ್ತದೆ ಎಂಬ ಅಂಶಕ್ಕೆ ಅವರು ಒತ್ತುನೀಡಿರುವುದೇ ಇದಕ್ಕೆ ಕಾರಣ. ಆದಾಗ್ಯೂ, ಅಸ್ತಿತ್ವವಾದದಲ್ಲಿ ವಾಸ್ತವವಾದ ಪ್ರತ್ಯೇಕ ಅಸ್ತಿತ್ವವು ಆದ್ಯತೆಯನ್ನು ಹೊಂದಿರಬೇಕಿದೆಯಾದರೂ, ನಿಶ್ಚಿತ ಸ್ಥಿತಿಗಳು ಮಾನವ ಅಸ್ತಿತ್ವಕ್ಕೆ "ಏಕರೀತಿಯಲ್ಲಿ ಕಂಡುಬರುವ" ರೀತಿಯಲ್ಲಿರುತ್ತವೆ ಎಂದು ಪ್ರತಿಪಾದಿಸಲಾಗುತ್ತದೆ. "ಎಕ್ಸಿಸ್ಟೆನ್ಸ್‌" ("ಅಸ್ತಿತ್ವ") ಎಂಬ ಪದದ ಅರ್ಥದ ಬೆಳಕಿನಲ್ಲಿ ಈ ಸ್ಥಿತಿಗಳು ಏನೆಂಬುದನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿದೆ; "ಎಕ್ಸಿಸ್ಟೆನ್ಸ್‌" ಎಂಬ ಪದವು ಲ್ಯಾಟಿನ್‌ ಭಾಷೆಯ "ಎಕ್ಸಿಸ್ಟರೆ" ಎಂಬ ಪದದಿಂದ ಬಂದಿದ್ದು, ಅದು "ಪ್ರತ್ಯೇಕವಾಗಿ ನಿಲ್ಲುವುದು" ಎಂಬ ಅರ್ಥವನ್ನು ಕೊಡುತ್ತದೆ. ಮನುಷ್ಯನು ಪ್ರಪಂಚದ ಮಧ್ಯೆಯೇ ಇದ್ದರೂ ಸಹ, ಅದರಿಂದ ಒಂದು ಅಂತರವನ್ನು ಕಾಯ್ದುಕೊಂಡಿರುವ ಒಂದು ಸ್ಥಿತಿಯಲ್ಲಿ ಅಸ್ತಿತ್ವವನ್ನು ಕಂಡುಕೊಂಡಿರುತ್ತಾನೆ. ಸುತ್ತಲಿದನ್ನು ಬಿಟ್ಟಿರುವುದರ ನಿರಾಸಕ್ತಗೊಂಡ ಪ್ರಪಂಚದೊಳಗೆ ಅರ್ಥವನ್ನು ಅಭಿವ್ಯಕ್ತಗೊಳಿಸಲು ಈ ಅಂತರವು ಮನುಷ್ಯನಿಗೆ ಅವಕಾಶ ಮಾಡಿಕೊಡುತ್ತದೆ. ಒಂದು ದುರಂತದಿಂದ ಮೊದಲ್ಗೊಂಡು ನಿರ್ದಿಷ್ಟವಾಗಿ ಒಳನೋಟವುಳ್ಳ ಒಂದು ಕ್ಷಣದವರೆಗಿನ ಯಾವುದೇ ಕಾರಣಕ್ಕೆ ಸಂಬಂಧಿಸಿದಂತೆ ನಿಂತುಹೋಗುವಿಕೆಯನ್ನು ನಿರಂತರವಾಗಿ ಎದುರಿಸಿ, ಈ ಅಭಿವ್ಯಕ್ತಗೊಳಿಸಲ್ಪಟ್ಟ ಅರ್ಥವು ಸೂಕ್ಷ್ಮವಾಗಿ ಉಳಿಯುತ್ತದೆ. ಇಂಥದೊಂದು ನಿಂತುಹೋಗುವಿಕೆಯಲ್ಲಿ, ಪ್ರಪಂಚದ ಬೆತ್ತಲೆ ಅರ್ಥರಹಿತತೆಯೊಂದಿಗೆ ಮುಖಾಮುಖಿಯಾಗಿ ನಾವು ನಿಲ್ಲಿಸಲ್ಪಟ್ಟಿದ್ದೇವೆ, ಮತ್ತು ಇದರ ಫಲಿತಾಂಶಗಳು ನಿಬ್ಬೆರಗಾಗಿಸುವ ರೀತಿಯಲ್ಲಿರಲು ಸಾಧ್ಯವಿದೆ. ಇದು ಅರ್ಥರಹಿತತೆಯ ನಿಬ್ಬೆರಗಾಗಿಸುವ ಅರಿವಿನ ಪರಿಕಲ್ಪನೆಗೆ ಸಂಬಂಧವನ್ನು ಹೊಂದಿದ್ದು, ಇದನ್ನೇ ಆಲ್ಬರ್ಟ್‌ ಕ್ಯಾಮಸ್‌ ತನ್ನ ದಿ ಮಿಥ್‌ ಆಫ್‌ ಸಿಸಿಫಸ್‌ ಕೃತಿಯಲ್ಲಿ ಸಮರ್ಥಿಸುತ್ತಾ, "ಗಂಭೀರ ತತ್ತ್ವಚಿಂತನೆಯ ಒಂದು ನಿಜವಾದ ಏಕೈಕ ಸಮಸ್ಯೆಯೆಂದರೆ, ಅದು ಆತ್ಮಹತ್ಯೆ" ಎಂದು ಹೇಳುತ್ತಾನೆ. ಕಿಯರ್‌ಕೆಗಾರ್ಡ್‌ನ ಧಾರ್ಮಿಕ "ವೇದಿಕೆ"ಯಿಂದ ಮೊದಲ್ಗೊಂಡು ಅಸಂಬದ್ಧತೆಯ ಹೊರತಾಗಿಯೂ ಸತತ ಪ್ರಯತ್ನ ಮಾಡುವುದರ ಕುರಿತಾದ ಕ್ಯಾಮಸ್‌ನ ಒತ್ತಾಯದವರೆಗಿನ, ಈ ಬಗೆಯ ಮುಖಾಮುಖಿಯಾಗುವಿಕೆಗಳ ಸಂಭವನೀಯ ಹಾನಿಕರ ಪರಿಣಾಮಗಳಿಗೆ ವಿರುದ್ಧವಾಗಿರುವ "ಸಲಹೆಗಳು" ಬದಲಾಗುತ್ತವೆಯಾದರೂ, ಪ್ರತಿಯೊಂದನ್ನೂ ಅರ್ಥಪೂರ್ಣ ವಿಶ್ಲೇಷಣೆಯನ್ನಾಗಿ ಹೊಂದುವುದರ ನಿರಂತರ ಅಪಾಯದಲ್ಲಿ ಜನರನ್ನು ದೂಡುವ ರೀತಿಯಲ್ಲಿರುವ ವಿಧಾನಗಳಲ್ಲಿ ತಮ್ಮ ಜೀವನಗಳನ್ನು ಜನರು ನಡೆಸದಂತೆ ಅವರನ್ನು ತಡೆಯುವುದಕ್ಕೆ ಸಂಬಂಧಿಸಿದ ಕಾಳಜಿಯು ಬಹುಪಾಲು ಅಸ್ತಿತ್ವವಾದಿ ದಾರ್ಶನಿಕರಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಪ್ರತಿಯೊಂದನ್ನೂ ಅರ್ಥಪೂರ್ಣ ವಿಶ್ಲೇಷಣೆಯ ಸ್ವರೂಪದಲ್ಲಿ ಹೊಂದುವುದರ ಸಾಧ್ಯತೆಯು ಅಪ್ರತಿರೋಧತತ್ತ್ವದ ಒಂದು ಬೆದರಿಕೆಯನ್ನು ಒಡ್ಡುತ್ತದೆ, ಇದು ಅಂತರ್ಗತವಾಗಿ ಅಸ್ತಿತ್ವವಾದಿ ತತ್ತ್ವಶಾಸ್ತ್ರದ ವಿರುದ್ಧವಾಗಿದೆ.[೫೭]

ಇರುವಿಕೆಗೆ ಅಗ್ರಗಾಮಿಯಾಗುವ ಅಸ್ತಿತ್ವ[ಬದಲಾಯಿಸಿ]

ಅಸ್ತಿತ್ವವು ಇರುವಿಕೆಗೆ ಅಗ್ರಗಾಮಿಯಾಗಿ ಬರುತ್ತದೆ ಎಂಬುದು ಅಸ್ತಿತ್ವವಾದದ ಒಂದು ಪ್ರಧಾನ ಪ್ರತಿಪಾದನೆಯಾಗಿದೆ; ಅಂದರೆ, ವ್ಯಕ್ತಿಯ ವಾಸ್ತವಿಕ ಜೀವನ ಎಂಬುದು ಅವನ ಅಥವಾ ಅವಳ "ಇರುವಿಕೆ" ಎಂದು ಯಾವುದನ್ನು ಕರೆಯಬಹುದೋ ಅದರ ಘಟಕವಾಗಿರುತ್ತದೆಯೇ ಹೊರತು, ಓರ್ವ ಮಾನವನು ಹೇಗಿರಬೇಕೆಂದು ವಿಶದೀಕರಿಸುವ ಅಲ್ಲಿರುವ ಒಂದು ಮೊದಲೇ ನಿರ್ಣಯಿಸಲ್ಪಟ್ಟ ಇರುವಿಕೆಯಲ್ಲ. ಈ ರೀತಿಯಾಗಿ, ಮಾನವ ಜೀವಿಯು ತನ್ನ ಜಾಗೃತಿ ಅಥವಾ ಅರಿವಿನ ಮೂಲಕ ತನ್ನದೇ ಆದ ಮೌಲ್ಯಗಳನ್ನು ಸೃಷ್ಟಿಸುತ್ತಾನೆ ಹಾಗೂ ತನ್ನ ಜೀವನಕ್ಕೆ ಒಂದು ಅರ್ಥವನ್ನು ನಿರ್ಣಯಿಸುತ್ತಾನೆ.[೫೮] ಸದರಿ ಪದಗುಚ್ಛವನ್ನು ಸಾರ್ತ್ರೆಯು ಸ್ಪಷ್ಟವಾಗಿ ಸೃಷ್ಟಿಸಿದನಾದರೂ, ಮುಲ್ಲಾ ಸಾದ್ರಾನಿಂದ[೫೯] ಕಿಯರ್‌ಕೆಗಾರ್ಡ್‌ವರೆಗೆ‌, ಕಿಯರ್‌ಕೆಗಾರ್ಡ್‌ನಿಂದ ಹೆಡೀಗ್ಗರ್‌‌ವರೆಗಿರುವ ಅನೇಕ ಅಸ್ತಿತ್ವವಾದಿ ದಾರ್ಶನಿಕರ ಚಿಂತನೆಗಳಲ್ಲಿ ಇದೇ ಬಗೆಯ ಗ್ರಹಿಕೆಗಳನ್ನು ಕಾಣಬಹುದು. ಅನೇಕವೇಳೆ ಸಮರ್ಥಿಸಲ್ಪಟ್ಟಿರುವುದೇನೆಂದರೆ, ಈ ಸಂದರ್ಭದಲ್ಲಿ ಓರ್ವ ವ್ಯಕ್ತಿಯು ತನ್ನನ್ನು ವಿಶದೀಕರಿಸಿಕೊಂಡಾಗ ಅದು ಏನಾದರೊಂದು ಆಗಲು- ಏನಾದರೂ ಒಂದು ಎಂದರೆ ಉದಾಹರಣೆಗೆ ಒಂದು ಹಕ್ಕಿಯಾಗಲು- ಓರ್ವನು "ಬಯಸಲು" ಸಾಧ್ಯವಿದೆ ಎಂಬುದನ್ನು ಹೇಳಿಕೊಂಡಂತೆ ಅನೇಕವೇಳೆ ಗ್ರಹಿಸಲಾಗುತ್ತದೆ ಮತ್ತು ನಂತರ ಅದೇ ಆಗುತ್ತದೆ. ಆದಾಗ್ಯೂ, ಬಹುತೇಕ ಅಸ್ತಿತ್ವವಾದಿ ದಾರ್ಶನಿಕರ ಪ್ರಕಾರ, ಇದು ಒಂದು ಅವಿಶ್ವಾಸಾರ್ಹ ಅಸ್ತಿತ್ವದ ಘಟಕವಾಗಿರುತ್ತದೆ. ಅದರ ಬದಲಿಗೆ, ಸದರಿ ವಾಕ್ಯಭಾಗವನ್ನು ಹೀಗೆ ಹೇಳಲು ಅನುವಾಗುವಂತೆ ತೆಗೆದುಕೊಳ್ಳಬೇಕು: ವ್ಯಕ್ತಿಯು (1) ಅವನು ಅಥವಾ ಅವಳು ಎಲ್ಲಿಯವರೆಗೆ ಹಾಗೆ ನಡೆದುಕೊಳ್ಳುತ್ತಿರುತ್ತಾರೋ ಅಲ್ಲಿಯವರೆಗೆ ಮಾತ್ರ ವಿಶದೀಕರಿಸಲ್ಪಡಬೇಕಾಗುತ್ತದೆ ಮತ್ತು (2) ಅವನು ಅಥವಾ ಅವಳು ತಮ್ಮ ವರ್ತನೆಗಳಿಗೆ ಹೊಣೆಗಾರರಾಗಿರುತ್ತಾರೆ. ಉದಾಹರಣೆಗೆ, ಇತರ ಜನರೆಡೆಗೆ ನಿರ್ದಯವಾಗಿ ಯಾರು ನಡೆದುಕೊಳ್ಳುತ್ತಾನೋ, ಆ ನಡೆಯ ಅನುಸಾರ ಅವನನ್ನು ಓರ್ವ ನಿರ್ದಯಿ ವ್ಯಕ್ತಿ ಎಂದು ವ್ಯಾಖ್ಯಾನಿಸಲಾಗುತ್ತದೆ. ಇಷ್ಟೇ ಅಲ್ಲದೇ, ನಿರ್ದಯತೆಯ ಈ ವರ್ತನೆಯಿಂದಾಗಿ ಇಂಥ ವ್ಯಕ್ತಿಗಳು ಸ್ವತಃ ತಮ್ಮ ಹೊಸ ಗುರುತಿಗೆ (ಓರ್ವ ನಿರ್ದಯಿ ವ್ಯಕ್ತಿಯಾಗಿ) ಸಂಬಂಧಿಸಿದಂತೆ ಹೊಣೆಗಾರ ರಾಗಿರುತ್ತಾರೆ. ಇದು ಅವರ ಜೀನ್‌ಗಳು, ಅಥವಾ ಆಪಾದನೆಯನ್ನು ಹೊತ್ತಿರುವ 'ಮಾನವ ಸ್ವರೂಪ'ಕ್ಕೆ ವಿರುದ್ಧವಾಗಿರುವ ರೀತಿಯಲ್ಲಿರುತ್ತದೆ. ಸಾರ್ತ್ರೆಯು ತನ್ನ ಎಕ್ಸಿಸ್ಟೆನ್ಷಿಯಾಲಿಸಂ ಈಸ್‌ ಹ್ಯೂಮನಿಸಂನಲ್ಲಿ ದಾಖಲಿಸುವಂತೆ, "ಎಲ್ಲಕ್ಕಿಂತ ಮೊದಲು ಮನುಷ್ಯ ಅಸ್ತಿತ್ವವನ್ನು ಕಂಡುಕೊಳ್ಳುತ್ತಾನೆ, ಸ್ವತಃ ಮುಖಾಮುಖಿಯಾಗುತ್ತಾನೆ, ಪ್ರಪಂಚದಲ್ಲಿ ಮೇಲೇರುತ್ತಾನೆ - ಮತ್ತು ಅದರ ನಂತರ ಸ್ವತಃ ತನ್ನನ್ನು ವ್ಯಾಖ್ಯಾನಿಸಿಕೊಳ್ಳುತ್ತಾನೆ." ಸಹಜವಾಗಿ, ಇದರ ಹೆಚ್ಚು ಧನಾತ್ಮಕವಾದ, ಚಿಕಿತ್ಸಕ ಮಗ್ಗುಲೂ ಸಹ ಸೂಚಿಸಲ್ಪಟ್ಟಿದೆ: ಓರ್ವ ವ್ಯಕ್ತಿಯು ಒಂದು ವಿಭಿನ್ನ ಮಾರ್ಗದಲ್ಲಿ ನಡೆದುಕೊಳ್ಳುವುದನ್ನು ಆರಿಸಿಕೊಳ್ಳಬಹುದಾಗಿದೆ, ಮತ್ತು ಓರ್ವ ನಿರ್ದಯಿ ವ್ಯಕ್ತಿಯಾಗುವ ಬದಲಿಗೆ ಓರ್ವ ಒಳ್ಳೆಯ ವ್ಯಕ್ತಿಯಾಗಲು ಸಾಧ್ಯವಿದೆ. ನಿರ್ದಯಿಯಾಗಿರಲು ಅಥವಾ ಒಳ್ಳೆಯವನಾಗಿರಲು ಮನುಷ್ಯನು ಆರಿಸಿಕೊಳ್ಳಬಲ್ಲವನಾದ್ದರಿಂದ, ಆತ ವಾಸ್ತವದಲ್ಲಿ ಆ ಎರಡರ ಪೈಕಿ ಯಾವುದೂ ಅವಶ್ಯವಾಗಿ ಆಗಿರುವುದಿಲ್ಲ ಎಂಬುದೂ ಸಹ ಇಲ್ಲಿ ಸ್ಪಷ್ಟವಾಗುತ್ತದೆ. [೬೦]

ತಲ್ಲಣ[ಬದಲಾಯಿಸಿ]

ಕೆಲವೊಮ್ಮೆ ದಿಗಿಲುಗೊಳಿಸುವಿಕೆ, ವ್ಯಾಕುಲತೆ ಅತವಾ ಬೇಗುದಿ ಎಂದೂ ಕರೆಯಲ್ಪಡುವ ತಲ್ಲಣವು ಅನೇಕ ಅಸ್ತಿತ್ವವಾದಿ ಚಿಂತಕರಿಗೆ ಸಾಮಾನ್ಯವಾಗಿರುವ ಒಂದು ಶಬ್ದವಾಗಿದೆ. ಇದನ್ನು ಸಾಮಾನ್ಯವಾಗಿ ಮಾನವ ಸ್ವಾತಂತ್ರ್ಯ ಮತ್ತು ಹೊಣೆಗಾರಿಕೆಯ ಅನುಭವ ಎಂದು ಪರಿಗಣಿಸಲಾಗುತ್ತದೆ. ಬಂಡೆಯೊಂದರ ಮೇಲೆ ಓರ್ವನು ನಿಂತಿದ್ದಾಗ ಅವನು ಹೊಂದುವ ಅನುಭವವು ಇದಕ್ಕಿರುವ ಮೂಲಮಾದರಿಯ ಉದಾಹರಣೆಯಾಗಿದೆ. ಬಂಡೆಯ ಮೇಲೆ ನಿಂತವನು ಅದರಿಂದ ಕೆಳಗೆ ಬೀಳುವ ಭಯವನ್ನಷ್ಟೇ ಹೊಂದುವುದಿಲ್ಲ, ತನ್ನನ್ನೇ ಎಸೆದುಕೊಳ್ಳುವ ಸಾಧ್ಯತೆಯಿಂದಲೂ ಸಹ ದಿಗಿಲುಗೊಳ್ಳುತ್ತಾನೆ. "ಯಾವುದೂ ನನ್ನನ್ನು ತಡೆಯುತ್ತಿಲ್ಲ" ಎಂಬ ಈ ಅನುಭವದಲ್ಲಿ, ತನ್ನನ್ನೇ ಎಸೆದುಕೊಳ್ಳುವ ಅಥವಾ ಸ್ಥಿರವಾಗಿ ನಿಲ್ಲುವ ಕುರಿತು ಓರ್ವನು ಮೊದಲೇ ನಿರ್ಣಯಿಸುವ ಯಾವುದೋ ಒಂದರ ಕೊರತೆಯನ್ನು ಓರ್ವನ ಅರಿವಿಗೆ ಬರುತ್ತದೆ, ಮತ್ತು ಓರ್ವನ ಸ್ವಾತಂತ್ರ್ಯವನ್ನು ಒಬ್ಬ ಅನುಭವಿಸುತ್ತಾನೆ. ಇದಕ್ಕೂ ಮುಂಚಿತವಾಗಿ, ತಲ್ಲಣವು ಹೇಗೆ ಏನೂ ಅಗಿರಲಿಲ್ಲ ಎಂಬ ಹಿಂದಿನ ಅಂಶಕ್ಕೆ ಇರುವ ಸಂಬಂಧದಲ್ಲಿಯೂ ಇದನ್ನು ಕಾಣಬಹುದು, ಮತ್ತು ಒಂದು ಉದ್ದೇಶವನ್ನು ಹೊಂದಿರುವ ಭಯದಿಂದ ಈ ರೀತಿಯಾಗಿ ಇದು ಬೇರೆಯಾಗಿ ನಿಲ್ಲುತ್ತದೆ. ಭಯದ ಸಂದರ್ಭದಲ್ಲಿ, ಭಯದ ಉದ್ದೇಶವನ್ನು ತೆಗೆದುಹಾಕಲು ಓರ್ವನು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಿದ್ದರೆ, ತಲ್ಲಣದ ಸಂದರ್ಭದಲ್ಲಿ ಇಂಥ ಯಾವುದೇ "ರಚನಾತ್ಮಕ" ಕ್ರಮಗಳು ಸಾಧ್ಯವಿಲ್ಲ. ಈ ಸಂದರ್ಭದಲ್ಲಿ "ಏನೂ ಆಗಿರಲಿಲ್ಲ" ಎಂಬ ಪದದ ಬಳಕೆಯು, ಓರ್ವನ ವರ್ತನೆಗಳ ಪರಿಣಾಮಗಳ ಕುರಿತಾದ ಅಂತರ್ಗತ ಅಭದ್ರತೆಗೆ ಮತ್ತು ಓರ್ವನ ಸ್ವಾತಂತ್ರ್ಯವನ್ನು ತಲ್ಲಣವಾಗಿ ಅನುಭವಿಸುತ್ತಿರುವಾಗ, ಈ ಪರಿಣಾಮಗಳಿಗೆ ಸಂಬಂಧಿಸಿದಂತೆ ಓರ್ವನು ಸಂಪೂರ್ಣ ಹೊಣೆಗಾರನಾಗುತ್ತಾನೆ ಎಂಬುದನ್ನು ಓರ್ವನು ಮನಗಾಣುತ್ತಾನೆ ಎಂಬ ವಾಸ್ತವಾಂಶಕ್ಕೆ ಸಂಬಂಧಿಸಿರುತ್ತದೆ; ವ್ಯಕ್ತಿಯೋರ್ವನಲ್ಲಿ ಅವನ ಬದಲಿಗೆ ನಡೆದುಕೊಳ್ಳುವ ಯಾವುದೇ ವಸ್ತು ವೂ ಇರುವುದಿಲ್ಲ (ಉದಾಹರಣೆಗೆ ಅವರ ಜೀನ್‌ಗಳು), ಮತ್ತು ಹೀಗಾಗಿ ಒಂದು ವೇಳೆ ಏನಾದರೂ ತಪ್ಪಾದಲ್ಲಿ ಅವರು "ಆರೋಪಿಸಲು" ಆಗುವುದಿಲ್ಲ. ಪ್ರತಿಯೊಂದು ಆಯ್ಕೆಯೂ ಅತಿ ಭಯಂಕರವಾದ ಸಂಭವನೀಯ ಪರಿಣಾಮಗಳನ್ನು ಹೊಂದಿರುವ ರೀತಿಯಲ್ಲಿ ಗ್ರಹಿಸಲ್ಪಡುವುದಿಲ್ಲ (ಮತ್ತು, ಒಂದು ವೇಳೆ ಪ್ರತಿಯೊಂದು ಆಯ್ಕೆಯೂ ದಿಗಿಲುಗೊಳಿಸುವಿಕೆಯನ್ನು ಉಂಟುಮಾಡಿದರೆ ಮಾನವ ಜೀವನಗಳು ಸಹಿಸಲಸಾಧ್ಯವಾಗಿರುತ್ತವೆ ಎಂದು ವಾದಿಸಬಹುದು), ಆದರೆ ಸ್ವಾತಂತ್ರ್ಯವು ಪ್ರತಿಯೊಂದು ನಡೆಯ ಒಂದು ಸ್ಥಿತಿಯಾಗಿ ಉಳಿದುಕೊಳ್ಳುತ್ತದೆ ಎಂಬ ವಾಸ್ತವಾಂಶವನ್ನು ಅದು ಬದಲಿಸುವುದಿಲ್ಲ. ಸೋರೆನ್‌ ಕಿಯರ್‌ಕೆಗಾರ್ಡ್‌‌‌‌‌ನ ಚಿರಸ್ಥಾಯಿ ಕೃತಿಯಾದ ಬೆಗ್ರೆಬೆಟ್‌ ಆಂಗೆಸ್ಟ್‌‌‌ ನಲ್ಲಿ ತಲ್ಲಣದ ಅಸ್ತಿತ್ವವಾದಿ ಎಣಿಕೆಯ ಅತ್ಯಂತ ವ್ಯಾಪಕವಾದ ಪರಿಗಣನೆಗಳ ಪೈಕಿ ಒಂದು ಕಂಡುಬರುತ್ತದೆ.

ಸ್ವಾತಂತ್ರ್ಯ[ಬದಲಾಯಿಸಿ]

ಅಸ್ತಿತ್ವವಾದಿ ಸ್ವಾತಂತ್ರ್ಯದ ಪರಿಕಲ್ಪನೆಯು ಒಂದು ತೆರನಾದ ಸಂಕಲ್ಪ ಸ್ವಾತಂತ್ರ್ಯವಾಗಿ ಅನೇಕವೇಳೆ ತಪ್ಪಾಗಿ ಗ್ರಹಿಸಲ್ಪಟ್ಟಿದೆ; ಸಂಕಲ್ಪ ಸ್ವಾತಂತ್ರ್ಯದಲ್ಲಿ ಹೆಚ್ಚೂಕಮ್ಮಿ ಏನು ಬೇಕಾದರೂ ಸಾಧ್ಯವಿರುತ್ತದೆ ಮತ್ತು ಆಯ್ಕೆಮಾಡಲು ಹಾಗೂ ಅದರಂತೆ ನಡೆದುಕೊಳ್ಳಲು ಮೌಲ್ಯಗಳು ಅಸಂಗತವಾಗಿರುತ್ತವೆ. ಪ್ರಪಂಚದ ಅಸಂಬದ್ಧತೆಯ ಮೇಲಿನ ಒತ್ತಾಯ ಹಾಗೂ ಇಲ್ಲಿ ಸುಸಂಬದ್ಧವಾದ ಅಥವಾ ಸಂಪೂರ್ಣವಾಗಿ ಒಳ್ಳೆಯ ಅಥವಾ ಕೆಟ್ಟದಾದ ಯಾವುದೇ ಮೌಲ್ಯಗಳಿಲ್ಲ ಎಂಬ ಊಹನಕ್ಕೆ ಪರಿಕಲ್ಪನೆಯ ಈ ಅರ್ಥ ವಿವರಣೆಯನ್ನು ಅನೇಕವೇಳೆ ಸಂಬಂಧಕಲ್ಪಿಸಲಾಗುತ್ತದೆ. ಆದಾಗ್ಯೂ, ಪ್ರಪಂಚದಲ್ಲಿ ತಾನೇ-ತಾನಾಗಿ ಯಾವುದೇ ಮೌಲ್ಯಗಳು ಕಂಡುಬರುವುದಿಲ್ಲ ಎಂದರೆ ಅಲ್ಲಿ ಯಾವುದೇ ಮೌಲ್ಯಗಳೇ ಇಲ್ಲ ಎಂದರ್ಥವಲ್ಲ: ನಾವು ಸಾಮಾನ್ಯವಾಗಿ ನಿಶ್ಚಿತ ಮೌಲ್ಯಗಳೊಂದಿಗೆ ಬೆಳೆದು ದೊಡ್ಡವರಾಗಿರುತ್ತೇವೆ, ಮತ್ತು ಅವನ್ನು ಅಂತಿಮವಾಗಿ ನಾವು ಸಮರ್ಥಿಸುವುದು ಸಾಧ್ಯವಿಲ್ಲವಾದರೂ, ಅವು "ನಮ್ಮ" ಮೌಲ್ಯಗಳಾಗಿರುತ್ತವೆ. ಕಿಯರ್‌ಕೆಗಾರ್ಡ್‌‌ನ ಐದರ್‌/ಆರ್‌ ಕೃತಿಯಲ್ಲಿ ಕಂಡುಬರುವ ನ್ಯಾಯಾಧೀಶ ವಿಲ್‌ಹೆಲ್ಮ್ ಪಾತ್ರವು, ಪರ್ಯಾಯಗಳಿಗೆ ಇರುವ ಬದಲಾಗುವ ಮೌಲ್ಯಗಳನ್ನು ದಯಪಾಲಿಸಲು ಓರ್ವನ ಮೌಲ್ಯಗಳಿಗೆ ಅವಕಾಶ ನೀಡದೆ ಆಯ್ಕೆಗಳನ್ನು ಮಾಡುತ್ತಿರುತ್ತದೆ; ವಾಸ್ತವವಾಗಿ ಇದು ಒಂದು ಆಯ್ಕೆಯನ್ನು ಮಾಡದಂತಿರಲು ಇರುವ ಒಂದು ಆರಿಸುವಿಕೆಯಾಗಿದೆ- ಒಂದು ನಾಣ್ಯವನ್ನು ಅದಿದ್ದ ಸ್ಥಿತಿಯಲ್ಲಿಯೇ ಚಿಮ್ಮಿಸುವುದು ಮತ್ತು ಎಲ್ಲವನ್ನೂ ಅವಕಾಶಕ್ಕಾಗಿ ಬಿಡುವುದೇ ಆಗಿರುತ್ತದೆ. ಓರ್ವನ ಸ್ವಾತಂತ್ರ್ಯದ ಪರಿಣಾಮವಾಗಿ ಒದಗಿದ ಸ್ಥಿತಿಯಲ್ಲಿ ಅಂದರೆ ಒಂದು ಅವಿಶ್ವಾಸಾರ್ಹ ಅಸ್ತಿತ್ವದಲ್ಲಿ ವಾಸಿಸುವುದಕ್ಕೆ ಇರುವ ಒಂದು ನಿರಾಕರಣೆಯಾಗಿ ಇದು ಪರಿಗಣಿಸಲ್ಪಟ್ಟಿದೆ. ಹಾಗೆಂದು, ಎಲ್ಲವೂ ಸಾಧ್ಯ ಎನ್ನಬಹುದಾದ ಒಂದು ತೆರನಾದ ಅಮೂರ್ತ ಅವಕಾಶದಲ್ಲಿ ಅಸ್ತಿತ್ವವಾದಿ ಸ್ವಾತಂತ್ರ್ಯವು ನೆಲೆಗೊಂಡಿಲ್ಲ: ಜನರು ಮುಕ್ತರಾಗಿರುವುದರಿಂದ, ಮತ್ತು ಅವರು ಈಗಾಗಲೇ ಪ್ರಪಂಚದಲ್ಲಿ ಅಸ್ತಿತ್ವ ಕಂಡುಕೊಂಡಿರುವುರಿಂದ, ಅವರ ಸ್ವಾತಂತ್ರ್ಯವು ಕೇವಲ ಈ ಪ್ರಪಂಚದಲ್ಲಿ ಮಾತ್ರವೇ ಇದೆ, ಹಾಗೂ ಅದೂ ಸಹ ಪ್ರಪಂಚದಿಂದ ಪರಿಮಿತಗೊಳಿಸಲ್ಪಟ್ಟಿದೆ ಎಂಬುದು ಸೂಚಿಸಲ್ಪಟ್ಟಿದೆ. ಆದಾಗ್ಯೂ, ಅಸ್ತಿತ್ವವಾದದ ಸ್ವಾತಂತ್ರ್ಯದ ಈ ವಿವರಣೆಯಲ್ಲಿ ಯಾವುದು ಸೂಚ್ಯಾರ್ಥ ಆಗಿಲ್ಲವೋ , ಅದು ಓರ್ವನ ಮೌಲ್ಯಗಳು ಮಾರ್ಪಾಟಾಗದೇ ಇರುವುದೇ ಆಗಿದೆ; ಓರ್ವನ ಮೌಲ್ಯಗಳ ಒಂದು ಪರಿಗಣನೆಯು, ಅವನ್ನು ಓರ್ವನು ಮರುಪರಿಗಣಿಸುವುದಕ್ಕೆ ಮತ್ತು ಬದಲಾಯಿಸುವುದಕ್ಕೆ ಕಾರಣವಾಗಬಹುದು. ಓರ್ವನು ಅವನ ವರ್ತನೆಗಳಿಗೆ ಸಂಬಂಧಿಸಿದಂತೆ ಮಾತ್ರವೇ ಹೊಣೆಗಾರನಾಗಿರುವುದಿಲ್ಲ, ಆದರೆ ಅವನು ಸಮರ್ಥಿಸುವ ಮೌಲ್ಯಗಳಿಗೆ ಸಂಬಂಧಿಸಿದಂತೆಯೂ ಹೊಣೆಗಾರನಾಗಿರುತ್ತಾನೆ ಎಂಬುದು ಈ ವಾಸ್ತವಾಂಶದ ಒಂದು ಪರಿಣಾಮವಾಗಿದೆ. ಸಾಮಾನ್ಯ ಮೌಲ್ಯಗಳಿಗೆ ಮಾಡಲಾದ ಒಂದು ಉಲ್ಲೇಖವು ವ್ಯಕ್ತಿಯ ವರ್ತನೆಗಳಿಗೆ ವಿನಾಯಿತಿ ನೀಡುವುದಿಲ್ಲ ಎಂಬುದನ್ನು ಇದು ಅಗತ್ಯವಾಗಿಸುತ್ತದೆ: ಇವು ವ್ಯಕ್ತಿಯು ಒಂದು ಭಾಗವಾಗಿರುವ ಸಮಾಜದ ಮೌಲ್ಯಗಳಾಗಿದ್ದರೂ ಸಹ, ಅವು ವಿಭಿನ್ನವಾಗಿವೆ ಎಂಬ ರೀತಿಯಲ್ಲಿ ಅವಳು/ಅವನು ಯಾವುದೇ ಸಮಯದಲ್ಲಿ ಅವನ್ನು ಆಯ್ದುಕೊಳ್ಳಬಹುದು ಎಂಬ ಅರ್ಥದಲ್ಲಿ ಅವು ಅವನದ್ದೇ ಮೌಲ್ಯಗಳೂ ಆಗಿರುತ್ತವೆ. ಈ ರೀತಿಯಾಗಿ, ಅಸ್ತಿತ್ವವಾದದಲ್ಲಿನ ಸ್ವಾತಂತ್ರ್ಯದ ಮೇಲಿನ ಗಮನವು, ಓರ್ವನ ಸ್ವಾತಂತ್ರ್ಯದ ಒಂದು ಪರಿಣಾಮವಾಗಿ ಓರ್ವನು ಹೊರುವ ಹೊಣೆಗಾರಿಕೆಯ ಮಿತಿಗಳಿಗೆ ಸಂಬಂಧಿಸಿರುತ್ತದೆ: ಸ್ವಾತಂತ್ರ್ಯ ಮತ್ತು ಹೊಣೆಗಾರಿಕೆಯ ನಡುವಿನ ಸಂಬಂಧವು ಪರಸ್ಪರಾವಲಂಬನೆಯ ಪೈಕಿ ಒಂದಾಗಿದೆ, ಮತ್ತು ಯಾವುದಕ್ಕೆ ಸಂಬಂಧಿಸಿದಂತೆ ಓರ್ವನು ಹೊಣೆಗಾರನಾಗಿದ್ದಾನೆ ಎಂಬುದನ್ನೂ ಸಹ ಸ್ವಾತಂತ್ರ್ಯದ ಒಂದು ಸ್ಪಷ್ಟೀಕರಣವು ಸ್ಪಷ್ಟಪಡಿಸುತ್ತದೆ.

ವಾಸ್ತವಸ್ಥಿತಿ[ಬದಲಾಯಿಸಿ]

ವಾಸ್ತವಸ್ಥಿತಿಯ ಪರಿಕಲ್ಪನೆಯು ಸ್ವಾತಂತ್ರ್ಯಕ್ಕೆ ನಿಕಟವಾದ ಸಂಬಂಧವನ್ನು ಹೊಂದಿರುವ ಒಂದು ಪರಿಕಲ್ಪನೆಯಾಗಿದೆ. ಈ ಪರಿಕಲ್ಪನೆಯನ್ನು ಸಾರ್ತ್ರೆಯು ತನ್ನ ಬೀಯಿಂಗ್‌ ಅಂಡ್‌ ನಥಿಂಗ್‌ನೆಸ್‌ ಕೃತಿಯಲ್ಲಿ ಮಾನವರು ಇಲ್ಲದಿರುವಿಕೆಯ ವಿಧಾನದಲ್ಲಿ "ತಾನೇ-ತಾನಾಗಿ" ಇರುವ ರೀತಿಯಲ್ಲಿ ವಿಶದೀಕರಿಸಿದ್ದಾನೆ. ಗತ ಜೀವನದ ಪ್ರಾಪಂಚಿಕ ಆಯಾಮಕ್ಕೆ ಸಂಬಂಧಿಸಿದಂತೆ ಪರಿಗಣಿಸಿದಾಗ ಇದನ್ನು ಹೆಚ್ಚು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು: ಓರ್ವನ ವ್ಯಕ್ತಿತ್ವದಲ್ಲಿ ಯಾವುದು ಅವನನ್ನು (ಅಥವಾ ಅವಳನ್ನು) ಸಹಘಟಕವಾಗಿ ರೂಪಿಸಿರುತ್ತದೋ ಆ ಅರ್ಥದಲ್ಲಿ ಓರ್ವನ ಗತವು ಇರುತ್ತದೆ. ಆದಾಗ್ಯೂ, ಒಂದು ವಿಷಯವು ಕೇವಲ ಓರ್ವನ ಗತವಿಷಯವಾಗಿದೆ ಎಂದು ಹೇಳುವುದು ವಾಸ್ತವತೆಯ (ವರ್ತಮಾನ ಮತ್ತು ಭವಿಷ್ಯ) ಬಹುದೊಡ್ಡ ಭಾಗವನ್ನು ಉಪೇಕ್ಷಿಸಿದಂತಾದರೆ, ಓರ್ವನು ಗತವು ಕೇವಲ ಅವನು ಹಿಂದೆ ಆಗಿದ್ದ ರೀತಿಯಾಗಿತ್ತು ಎಂದು ಹೇಳುವುದು, ಒಂದು ರೀತಿಯಲ್ಲಿ ಅವರನ್ನು ಈಗಿನ ಅಸ್ತಿತ್ವದಿಂದ ಸಂಪೂರ್ಣವಾಗಿ ಸಂಬಂಧ ಕಳಚಿದಂತಾಗುತ್ತದೆ. ಓರ್ವನ ಸ್ವಂತದ ವಾಸ್ತವಿಕ ಗತದ ಒಂದು ನಿರಾಕರಣೆಯು, ಒಂದು ಅವಿಶ್ವಾಸಾರ್ಹವಾದ ಜೀವನಶೈಲಿಯನ್ನು ರೂಪಿಸುತ್ತದೆ, ಮತ್ತು ಇದೇ ಪರಿಗಣನೆಯು ವಾಸ್ತವಸ್ಥಿತಿಯ ಇತರೆಲ್ಲಾ ವಿಧಗಳಿಗೂ ಅನ್ವಯಿಸುತ್ತದೆ [ಒಂದು ಶರೀರ (ಉದಾಹರಣೆಗೆ, ಧ್ವನಿಯ ವೇಗಕ್ಕಿಂತ ವೇಗವಾಗಿ ಓಡಲು ಓರ್ವ ವ್ಯಕ್ತಿಗೆ ಅವಕಾಶ ನೀಡದ ಒಂದು ಶರೀರ), ಗುರುತು, ಮೌಲ್ಯಗಳು, ಇತ್ಯಾದಿಗಳನ್ನು ಹೊಂದಿರುವುದು.]. ವಾಸ್ತವಸ್ಥಿತಿ ಎಂಬುದು ಸ್ವಾತಂತ್ರ್ಯದ ಒಂದು ಮಿತಿ ಮತ್ತು ಒಂದು ಸ್ಥಿತಿ ಎರಡೂ ಆಗಿದೆ. ಓರ್ವನ ವಾಸ್ತವಸ್ಥಿತಿಯ ಬಹುಭಾಗವು ಓರ್ವನು ಆಯ್ದುಕೊಳ್ಳಲಾಗದ ವಸ್ತು-ವಿಷಯಗಳನ್ನು (ಜನ್ಮಸ್ಥಳ, ಇತ್ಯಾದಿ) ಒಳಗೊಂಡಿರುತ್ತದೆ ಎಂಬುದಕ್ಕೆ ಸಂಬಂಧಿಸಿದಂತೆ ಇದು ಒಂದು ಮಿತಿಯಾಗಿದ್ದರೆ, ಓರ್ವನ ಮೌಲ್ಯಗಳು ಅದರ ಮೇಲೆ ಅವಲಂಬಿತವಾಗುವ ಸಂಭವ ಹೆಚ್ಚು ಎಂಬ ಅರ್ಥದಲ್ಲಿ ಅದೊಂದು ಸ್ಥಿತಿಯಾಗಿರುತ್ತದೆ. ಆದಾಗ್ಯೂ, ಓರ್ವನ ವಾಸ್ತವಸ್ಥಿತಿಯು "ಬದಲಾಯಿಸಲಾಗದ ಸ್ಥಿತಿ"ಯಾಗಿದ್ದರೂ ಸಹ (ಉದಾಹರಣೆಗೆ, ಗತಕಾಲದಲ್ಲಿರುವಂತೆ), ಅದು ಓರ್ವ ವ್ಯಕ್ತಿಯನ್ನು ನಿರ್ಣಯಿಸಲು ಅಸಮರ್ಥವಾಗಿರುತ್ತದೆ: ಓರ್ವನ ವಾಸ್ತವಸ್ಥಿತಿಗೆ ಹೊಣೆಮಾಡಲ್ಪಟ್ಟ ಮೌಲ್ಯವು ಇನ್ನೂ ಸಹ ಅದಕ್ಕೆ ಆ ವ್ಯಕ್ತಿಯಿಂದ ಮುಕ್ತವಾಗಿ ಹೊಣೆಮಾಡಲ್ಪಟ್ಟಿರುತ್ತದೆ. ಇದಕ್ಕೊಂದು ಉದಾಹರಣೆಯಾಗಿ ಇಬ್ಬರು ವ್ಯಕ್ತಿಗಳನ್ನು ಪರಿಗಣಿಸಿ; ಅವರ ಪೈಕಿ ಒಬ್ಬನಿಗೆ ಅವನ ಗತಜೀವನದ ಯಾವುದೇ ನೆನಪಿರುವುದಿಲ್ಲ ಹಾಗೂ ಮತ್ತೊಬ್ಬನು ಪ್ರತಿಯೊಂದನ್ನು ನೆನಪಿಸಿಕೊಳ್ಳುತ್ತಾನೆ. ಅವರಿಬ್ಬರೂ ಸಹ ಅನೇಕ ಅಪರಾಧಗಳನ್ನು ಎಸಗಿದ್ದಾರೆ, ಆದರೆ ಈ ಕುರಿತಾದ ಯಾವುದೇ ಅರಿವಿಲ್ಲದ ಮೊದಲನೆಯ ಮನುಷ್ಯ ಕೊಂಚಮಟ್ಟಿಗಿನ ಒಂದು ಸಾಮಾನ್ಯ ಜೀವನವನ್ನು ನಡೆಸುತ್ತಾನೆ; ಆದರೆ ಎರಡನೆಯ ಮನುಷ್ಯನಲ್ಲಿ ಅವನದೇ ಗತಜೀವನದಿಂದ ಹಿಡಿದಿಡಲ್ಪಟ್ಟಿರುವ ಸಂವೇದನೆಯು ಅವನನ್ನು ಈ ಜೀವನದಲ್ಲಿ "ಸಿಕ್ಕಿಹಾಕಿಸಿದ್ದಕ್ಕಾಗಿ" ಅವನದೇ ಗತಜೀವನವನ್ನು ಹಳಿಯುತ್ತಾ, ಒಂದು ಅಪರಾಧದ ಜೀವನವನ್ನು ಮುಂದುವರಿಸುತ್ತದೆ. ಅವನು ಮಾಡುತ್ತಿರುವ ಅಪರಾಧಗಳಿಗೆ ಯಾವುದೇ ವಿಶಿಷ್ಟ ಲಕ್ಷಣವಿಲ್ಲ, ಆದರೆ ಅವನು ಈ ಅರ್ಥವನ್ನು ತನ್ನ ಗತಜೀವನದ ಮೇಲೆ ಹೊರಿಸುತ್ತಾನೆ. ಆದಾಗ್ಯೂ, ಸ್ವಯಂ-ನಿರ್ಮಿಸುವಿಕೆಯ ನಿರಂತರವಾದ ಪ್ರಕ್ರಿಯೆಯಲ್ಲಿ ಓರ್ವನು ಭವಿಷ್ಯಕ್ಕೆ ತನ್ನನ್ನೇ ಅಭಿವ್ಯಕ್ತಗೊಳಿಸಿಕೊಂಡಾಗ, ಅವನ ವಾಸ್ತವಸ್ಥಿತಿಯನ್ನು ಕಡೆಗಣಿಸುವುದರಿಂದಾಗಿ ತನ್ನ ನಿರಾಕರಣೆಯಲ್ಲಿ ಸ್ವತಃ ತನ್ನನ್ನೇ ಅವನು ಇರಿಸಿಕೊಂಡಂತಾಗುತ್ತದೆ, ಮತ್ತು ಈ ರೀತಿಯಾಗಿ ಅದು ಅವಿಶ್ವಾಸಾರ್ಹವಾಗುತ್ತದೆ. ಇದನ್ನು ಬೇರೆಯದೇ ರೀತಿಯಲ್ಲಿ ಹೇಳಬೇಕೆಂದರೆ, ಓರ್ವನ ಅಭಿವ್ಯಕ್ತಗೊಳಿಸುವಿಕೆಯ ಮೂಲವು, ಅದು ಆಗಿರದಿರುವ ವಿಧಾನದಲ್ಲಿ (ಅವಶ್ಯವಾಗಿ ಇದ್ದರೂ ಸಹ, ಅದು ಆಗಲೂ ಸಹ ಓರ್ವನ ವಾಸ್ತವಸ್ಥಿತಿಯಾಗಬೇಕಾಗುತ್ತದೆ. ವಾಸ್ತವಸ್ಥಿತಿಯ ಮತ್ತೊಂದು ಮಗ್ಗುಲೆಂದರೆ, ಇದು ಎರಡು ಅರ್ಥದಲ್ಲಿ ತಲ್ಲಣವನ್ನು ಹೇರುತ್ತದೆ; ವಾಸ್ತವಸ್ಥಿತಿಯಿಂದ ಮಿತಿಗೊಳಿಸಲ್ಪಟ್ಟಾಗ ಸ್ವಾತಂತ್ರ್ಯವು ತಲ್ಲಣವನ್ನು "ಉಂಟುಮಾಡುತ್ತದೆ", ಹಾಗೂ ಓರ್ವನು ಮಾಡಿರುವ ಏನೋ ಒಂದು ಕೆಲಸದ ಹೊಣೆಗಾರಿಕೆಯನ್ನು ಅವನು ತೆಗೆದುಕೊಳ್ಳುವುದಕ್ಕೆ ಸಂಬಂಧಿಸಿದಂತೆ "ಅಡ್ಡಬರುವ" ವಾಸ್ತವಸ್ಥಿತಿಯನ್ನು ಹೊಂದಿರುವ ಸಾಧ್ಯತೆಯ ಕೊರತೆಯೂ ಸಹ ತಲ್ಲಣವನ್ನು ಉಂಟುಮಾಡುತ್ತದೆ.

ವಿಶ್ವಾಸಾರ್ಹತೆ ಮತ್ತು ಅವಿಶ್ವಾಸಾರ್ಹತೆ[ಬದಲಾಯಿಸಿ]

ವಿಶ್ವಾಸಾರ್ಹ ಅಸ್ತಿತ್ವದ ವಿಷಯವು ಅನೇಕ ಅಸ್ತಿತ್ವವಾದಿ ಚಿಂತಕರಿಗೆ ಸಾಮಾನ್ಯವಾಗಿದೆ. ಓರ್ವನು "ತನ್ನನ್ನೇ ಕಂಡುಕೊಳ್ಳಬೇಕು" ಮತ್ತು ನಂತರದಲ್ಲಿ ಈ ತನ್ನತನದ ಅನುಸಾರವಾಗಿ ಜೀವಿಸಬೇಕು ಎಂಬುದನ್ನು ಅರ್ಥೈಸಲು ಇದನ್ನು ಅನೇಕವೇಳೆ ತೆಗೆದುಕೊಳ್ಳಲಾಗುತ್ತದೆ. ತನ್ನತನ ಎಂಬುದು ಓರ್ವನು ಸಾಕಷ್ಟು ಗಡುಸಾಗಿ ಕಂಡರೆ ಆತನು ಕಂಡುಕೊಳ್ಳಬಹುದಾದ ಏನೋ ಒಂದು ಎಂಬುದು, ಓರ್ವನ ನಿಜವಾದ ತನ್ನತನವೇ ವಾಸ್ತವಿಕ ಎಂಬುದು ಇಲ್ಲಿರುವ ಒಂದು ಸಾಮಾನ್ಯ ತಪ್ಪುಗ್ರಹಿಕೆಯಾಗಿದೆ. ವಿಶ್ವಾಸಾರ್ಹತೆಯ ಅರ್ಥವೇನೆಂದರೆ, ನಡೆದುಕೊಳ್ಳುವ ಸಮಯದಲ್ಲಿ ಓರ್ವನು ತನ್ನ ರೀತಿಯಲ್ಲೇ ನಡೆದುಕೊಳ್ಳಬೇಕೇ ಹೊರತು, ಓರ್ವನು ನಡೆದುಕೊಳ್ಳುವ ರೀತಿಯಲ್ಲಾಗಲೀ ಅಥವಾ ಓರ್ವನ ಜೀನ್‌ಗಳ ರೀತಿಯಲ್ಲಾಗಲೀ ಅಥವಾ ಬೇರಾವುದೇ ಇರುವಿಕೆಯು ಬಯಸುವಂತೆ ಇರಬಾರದು. ಓರ್ವನ ಸ್ವಾತಂತ್ರ್ಯಕ್ಕೆ ಅನುಸಾರವಾಗಿರುವುದು ವಿಶ್ವಾಸಾರ್ಹ ನಡೆ ಎನಿಸಿಕೊಳ್ಳುತ್ತದೆ. ಅವಶ್ಯವಾಗಿ, ಸ್ವಾತಂತ್ರ್ಯದ ಒಂದು ಸ್ಥಿತಿಯಾಗಿ ವಾಸ್ತವಸ್ಥಿತಿಯು ಇದ್ದು, ಇದು ಓರ್ವನ ವಾಸ್ತವಸ್ಥಿತಿಯನ್ನು ಒಳಗೊಳ್ಳುತ್ತದೆಯಾದರೂ, ಓರ್ವನ ಆಯ್ಕೆಗಳನ್ನು ಯಾವುದೇ ರೀತಿಯಲ್ಲಿ ನಿರ್ಣಯಿಸುವ ಮಟ್ಟಕ್ಕೆ ಈ ವಾಸ್ತವಸ್ಥಿತಿಯು ಇರುವುದಿಲ್ಲ (ಓರ್ವನು ಮಾಡಿದ ಆಯ್ಕೆಯನ್ನು ಮಾಡುವುದಕ್ಕೆ ಸಂಬಂಧಿಸಿದಂತೆ ಓರ್ವನ ಹಿನ್ನೆಲೆಯನ್ನು ಆಗ ಓರ್ವನು ದೂಷಿಸಬಹುದು ಎಂಬ ಅರ್ಥದಲ್ಲಿ). ವಿಶ್ವಾಸಾರ್ಹತೆಗೆ ಸಂಬಂಧಿಸಿದ ವಾಸ್ತವಸ್ಥಿತಿಯ ಪಾತ್ರವು, ಓರ್ವನು ಒಂದು ಆಯ್ಕೆಯನ್ನು ಮಾಡುವಾಗ ಕಾರ್ಯರೂಪಕ್ಕೆ ಬರುವ ಓರ್ವನ ವಾಸ್ತವಿಕ ಮೌಲ್ಯಗಳಿಗೆ ಅವಕಾಶ ಮಾಡಿಕೊಡುವುದನ್ನು ಒಳಗೊಳ್ಳುತ್ತದೆ (ಕಿಯರ್‌ಕೆಗಾರ್ಡ್‌ನ ಕಲಾರಾಧಕನು ಗೊತ್ತುಗುರಿಯಿಲ್ಲದೆ "ಆರಿಸುವುದರ" ರೀತಿಯಂತಿರುವುದರ ಬದಲಿಗೆ), ಇದರಿಂದಾಗಿ ಮತ್ತೊಂದನ್ನು ಆರಿಸುವುದಕ್ಕೆ ಬದಲಾಗಿರುವ ನಡೆಗೆ ಸಂಬಂಧಿಸಿದ ಹೊಣೆಗಾರಿಕೆಯನ್ನೂ ಸಹ ಓರ್ವನು ತೆಗೆದುಕೊಳ್ಳಲು- ಅಥವಾ ವಿಭಿನ್ನ ಮೌಲ್ಯಗಳನ್ನು ಹೊಂದಲು ಆಯ್ಕೆಗಳಿಗೆ ಅವಕಾಶ ಕಲ್ಪಿಸದೇ ಇರಲು ಸಾಧ್ಯವಾಗುತ್ತದೆ. ಇದಕ್ಕೆ ವಿರುದ್ಧವಾಗಿ, ಅವಿಶ್ವಾಸಾರ್ಹ ಎಂಬುದು ಓರ್ವನ ಸ್ವಾತಂತ್ರ್ಯಕ್ಕೆ ಅನುಸಾರವಾಗಿ ಜೀವಿಸುವುದಕ್ಕಿರುವ ನಿರಾಕರಣೆಯಾಗಿದೆ. ಇದು ಅನೇಕ ಸ್ವರೂಪಗಳನ್ನು ತಳೆಯಬಲ್ಲದು. ಅಂದರೆ, ನಿಯಂತ್ರಣವಾದದ ಕೆಲವೊಂದು ಸ್ವರೂಪವು ಸತ್ಯವಾಗಿದೆ ಎಂದು ತನಗೆತಾನೇ ಮನವೊಲಿಸಿಕೊಳ್ಳುವ ಮೂಲಕ, ಸೋಗಿನ ಆಯ್ಕೆಗಳು ಅರ್ಥರಹಿತವಾಗಿವೆ ಅಥವಾ ಗೊತ್ತುಗುರಿಯಿಲ್ಲದೆ ಮಾಡಿದವಾಗಿವೆ ಎಂಬುದರಿಂದ ಮೊದಲ್ಗೊಂಡು, "ಓರ್ವನು ನಡೆದುಕೊಳ್ಳಬೇಕಿರುವ" ಒಂದು ತೆರನಾದ "ಅನುಕರಣೆ"ಯವರೆಗೆ ಇದು ಅನೇಕ ಸ್ವರೂಪಗಳನ್ನು ತಳೆಯಬಲ್ಲದು. "ಓರ್ವನು" ಹೇಗೆ ನಡೆದುಕೊಳ್ಳಬೇಕು ಎಂಬುದು, ತನ್ನಂಥ ಓರ್ವನು (ಉದಾಹರಣೆಗೆ, ಓರ್ವ ಬ್ಯಾಂಕಿನ ವ್ಯವಸ್ಥಾಪಕ) ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ಓರ್ವನು ಹೊಂದಿರುವ ಒಂದು ಕಲ್ಪನೆಯಿಂದ ಅನೇಕವೇಳೆ ನಿರ್ಣಯಿಸಲ್ಪಡುತ್ತದೆ. ಈ ಕಲ್ಪನೆಯು ಸಾಮಾಜಿಕ ರೂಢಮಾದರಿಯ ಕೆಲವೊಂದು ಬಗೆಗೆ ಸಾಮಾನ್ಯವಾಗಿ ಸಂಬಂಧಿಸಿರುತ್ತದೆ, ಆದರೆ ಸಾಮಾಜಿಕ ರೂಢಮಾದರಿಗಳಿಗೆ ಅನುಸಾರವಾಗಿರುವ ಎಲ್ಲಾ ನಡೆದುಕೊಳ್ಳುವಿಕೆಯೂ ಅವಿಶ್ವಾಸಾರ್ಹ ಎಂದು ಇದರರ್ಥವಲ್ಲ: ಓರ್ವನ ಸ್ವಂತದ ಸ್ವಾತಂತ್ರ್ಯ ಹಾಗೂ ಹೊಣೆಗಾರಿಕೆಗೆ ಓರ್ವನು ತೆಗೆದುಕೊಳ್ಳುವ ವರ್ತನೆ, ಮತ್ತು ಈ ಸ್ವಾತಂತ್ರ್ಯಕ್ಕೆ ಅನುಸಾರವಾಗಿ ಓರ್ವನು ನಡೆದುಕೊಳ್ಳುವ ವ್ಯಾಪ್ತಿಯು ಇಲ್ಲಿನ ಮುಖ್ಯ ಅಂಶವಾಗಿದೆ.

ಹತಾಶೆ[ಬದಲಾಯಿಸಿ]

ಭರವಸೆಯ ನಷ್ಟ[೬೧] ಎಂದು ಸಾಮಾನ್ಯವಾಗಿ ವ್ಯಾಖ್ಯಾನಿಸಲ್ಪಡುವ ಹತಾಶೆಯು, ಅಸ್ತಿತ್ವವಾದದಲ್ಲಿ ಓರ್ವನ ತನ್ನತನದ ಅಥವಾ ಗುರುತಿನ ಒಂದು ಅಥವಾ ಒಂದಕ್ಕಿಂತ ಹೆಚ್ಚು "ಆಧಾರಸ್ತಂಭಗಳಲ್ಲಿ" ಕಂಡುಬರುವ ಒಂದು ಕುಸಿತಕ್ಕೆ ಕಂಡುಬರುವ ಪ್ರತಿಕ್ರಿಯೆಗೆ ಹೆಚ್ಚು ನಿರ್ದಿಷ್ಟವಾಗಿ ಸಂಬಂಧಿಸಿದೆ. ಒಂದು ವೇಳೆ ಓರ್ವನು ಒಂದು ನಿರ್ದಿಷ್ಟ ವಸ್ತು ವಾಗಿರುವಂತೆ ತೊಡಗಿಸಲ್ಪಟ್ಟಿದ್ದರೆ, ಉದಾಹರಣೆಗೆ, ಓರ್ವ ಮಾಣಿ ಅಥವಾ ಓರ್ವ "ನೆಟ್ಟಗೆ ನಿಂತಿರುವ ನಾಗರಿಕ"ನ ರೀತಿಯಲ್ಲಿ, ಮತ್ತು ಓರ್ವನು ಏನೋ ಒಂದನ್ನು ಮಾಡಿದ್ದ ಒಂದು ಸ್ಥಿತಿಯಲ್ಲಿ ಓರ್ವನು ತನ್ನನ್ನೇ ಕಂಡುಕೊಂಡರೆ ಅಥವಾ ಈ ಆಗಿರುವಿಕೆಯ-ವಿಷಯವನ್ನು ರಾಜಿಮಾಡಿಕೊಳ್ಳುವಂಥದ್ದೇನನ್ನೋ ಓರ್ವನಿಗೆ ಉಂಟುಮಾಡಿದರೆ, ಒಂದು ಆಶಾರಹಿತ ಸ್ಥಿತಿ ಎಂದು ಕರೆಯಲ್ಪಡುವ ಹತಾಶೆಯ ಒಂದು ಸ್ಥಿತಿಯಲ್ಲಿ ಓರ್ವನು ಸಾಮಾನ್ಯವಾಗಿ ತನ್ನನ್ನೇ ಕಂಡುಕೊಳ್ಳುತ್ತಾನೆ. ಉದಾಹರಣೆಗೆ, ಅಪಘಾತವೊಂದರಲ್ಲಿ ತನ್ನ ಕಾಲುಗಳನ್ನು ಕಳೆದುಕೊಳ್ಳುವ ಓರ್ವ ವ್ಯಾಯಾಮಪಟುವು, "ಮತ್ತೊಮ್ಮೆ ಮರಳಲು" ಒಂದು ವೇಳೆ ಏನನ್ನೂ ಹೊಂದಿರದಿದ್ದರೆ, ಹತಾಶೆಗೊಳಗಾಗಬಹುದು. ಓರ್ವನ ತನ್ನತನವನ್ನು ಓರ್ವನು ಹೇಗೆ ಪರಿಗಣಿಸಿದ್ದಾನೆ ಎಂಬುದರ ಅವಾಸ್ತವತೆಯನ್ನು ಓರ್ವನು ಎದುರಿಸಬೇಕಾಗುತ್ತದೆ. ಶಬ್ದಕೋಶದ ವ್ಯಾಖ್ಯಾನವನ್ನು ಹೊರತುಪಡಿಸಿದ ಅಸ್ತಿತ್ವವಾದಿಯ ಹತಾಶೆಯ ಎಣಿಕೆಯು ಸೂಚಿಸುವುದೇನೆಂದರೆ, ಅಸ್ತಿತ್ವವಾದಿ ಹತಾಶೆಯು ಒಂದು ಸ್ಥಿತಿಯಾಗಿದ್ದು, ಓರ್ವನು ಬಹಿರಂಗವಾಗಿ ಹತಾಶೆಯಲ್ಲಿ ಇಲ್ಲದಿರುವಾಗಲೂ ಇರುವ ಸ್ಥಿತಿಯಾಗಿದೆ: ಓರ್ವನ ಪ್ರಪಂಚ ವಿಶ್ಲೇಷಣೆಯನ್ನು ಹೊಂದುವುದಕ್ಕೆ ಓರ್ವನು ಈಡಾಗುವಂತೆ ಇಂಥ ಆಧಾರಸ್ತಂಭಗಳ ಮೇಲಿನ ಓರ್ವನ ಗುರುತನ್ನು ಎಲ್ಲಿಯವರೆಗೆ ಓರ್ವನು ಆಧರಿಸಿರುತ್ತಾನೋ, ಅಲ್ಲಿಯವರೆಗೆ ಓರ್ವನು ನಿರಂತರ ಹತಾಶೆಯಲ್ಲಿರುವುದಾಗಿ ಪರಿಗಣಿಸಲ್ಪಡುತ್ತಾನೆ. ಸಾರ್ತ್ರೆಯ ಶಬ್ದಗಳಲ್ಲಿರುವಂತೆ, ಓರ್ವನ ಗುರುತಿನ ಪ್ರಜ್ಞೆಯನ್ನು ರೂಪಿಸುವ ವಾಸ್ತವತೆಯಲ್ಲಿ, ಆಧಾರವನ್ನು ಹೊಂದಿರುವ ಯಾವುದೇ ಮಾನವ ಇರುವಿಕೆಯಿಲ್ಲ, ಹತಾಶೆ ಎಂಬುದು ಒಂದು ನಿಜವಾದ ಮಾನವ ಸ್ಥಿತಿಯಾಗಿದೆ. ತನ್ನ ಐದರ್‌/ಆರ್‌ ಕೃತಿಯಲ್ಲಿ ಕಿಯರ್‌ಕೆಗಾರ್ಡ್‌ ವ್ಯಾಖ್ಯಾನಿಸುವಂತೆ: "ತನ್ನ ಹೊರಗಡೆ ಒಂದು ಷರತ್ತನ್ನು ಹೊಂದಿರುವ ಯಾವುದೇ ಜೀವನ-ದೃಷ್ಟಿಯು ಹತಾಶೆ ಎನಿಸಿಕೊಳ್ಳುತ್ತದೆ."[೬೨] ಇದನ್ನು ಬೇರೆಯದೇ ರೀತಿಯಲ್ಲಿ ಹೇಳುವುದಾದರೆ, ಹತಾಶೆಗೊಳಿಸದೆಯೇ ಹತಾಶೆಯಲ್ಲಿರಲು ಸಾಧ್ಯವಿದೆ.

ಬೇರೆಯದು ಹಾಗೂ ನೋಟ[ಬದಲಾಯಿಸಿ]

ಬೇರೆಯದು ಅಥವಾ ಅದರ್‌-Other ("o" ಎಂಬುದನ್ನು ದೊಡ್ಡಕ್ಷರದಲ್ಲಿ ಬರೆದಾಗ) ಎಂಬುದು ಒಂದು ಪರಿಕಲ್ಪನೆಯಾಗಿದ್ದು, ಮನೋವಿಕಾಸವಿಜ್ಞಾನಕ್ಕೆ ಸೂಕ್ತವಾಗಿ ಸೇರುತ್ತದೆ ಮತ್ತು ಅದರ ಅಂತರ-ವ್ಯಕ್ತಿನಿಷ್ಠತೆಯ ಪರಿಣಾಮವಾಗಿ ಬರುತ್ತದೆ. ಆದಾಗ್ಯೂ, ಈ ಪರಿಕಲ್ಪನೆಯು ಅಸ್ತಿತ್ವವಾದಿ ಬರಹಗಳಲ್ಲಿ ವ್ಯಾಪಕವಾದ ಬಳಕೆಯನ್ನು ಕಂಡಿದೆ, ಮತ್ತು ಇದರಿಂದ ಸೆಳೆದಿರುವ ತೀರ್ಮಾನಗಳು ದೃಶ್ಯತ್ವ ಸಿದ್ಧಾಂತದ ವಿವರಣೆಗಳಿಂದ ಕೊಂಚವೇ ವಿಭಿನ್ನವಾಗಿ ನಿಲ್ಲುತ್ತವೆ. ಬೇರೆಯದರ ಪರಿಕಲ್ಪನೆಯ ಅನುಭವವು ಮತ್ತೋರ್ವ ಮುಕ್ತ ಪ್ರಜೆಯ ಅನುಭವವಾಗಿದ್ದು, ಓರ್ವ ವ್ಯಕ್ತಿಯು ವಾಸಿಸುವ ಅದೇ ಪ್ರಪಂಚದಲ್ಲೇ ಅವನೂ ನೆಲಸುತ್ತಾನೆ. ಇದರ ಅತ್ಯಂತ ಮೂಲಭೂತ ಸ್ವರೂಪದಲ್ಲಿ, ಇದು ಈ ಅಂತರ-ವ್ಯಕ್ತಿನಿಷ್ಠತೆ ಹಾಗೂ ವಸ್ತುನಿಷ್ಠತೆಯನ್ನು ರೂಪಿಸುವ ಬೇರೆಯದರ ಪರಿಕಲ್ಪನೆಯ ಅನುಭವವಾಗಿರುತ್ತದೆ. ಇದನ್ನು ಸ್ಪಷ್ಟೀಕರಿಸಲು, ಓರ್ವನು ಬೇರೊಬ್ಬನನ್ನು ಅನುಭವಕ್ಕೆ ತಂದುಕೊಂಡಾಗ, ಮತ್ತು ಈ ಬೇರೆಯದರ ವ್ಯಕ್ತಿಯು ಪ್ರಪಂಚವನ್ನು ಅನುಭವಕ್ಕೆ ತಂದುಕೊಂಡಾಗ (ಓರ್ವ ವ್ಯಕ್ತಿಯು ಅನುಭವಕ್ಕೆ ತಂದುಕೊಳ್ಳುವ ಅದೇ ಪ್ರಪಂಚ), ಅದೂ ಸಹ ಕೇವಲ "ಅಲ್ಲಿಂದಲೇ" ಅನುಭವಕ್ಕೆ ತಂದುಕೊಂಡಾಗ, ಸ್ವತಃ ಪ್ರಪಂಚವು ಉದ್ದೇಶವಾಗಿ ರೂಪಿಸಲ್ಪಡುತ್ತದೆ; ಎರಡೂ ಪ್ರಜೆಗಳಿಗೆ ಸಂಬಂಧಿಸಿದಂತೆ ಹೋಲುವ ರೀತಿಯಲ್ಲಿ "ಅಲ್ಲಿರುವ" ರೀತಿಯಲ್ಲಿ ಅದು ಇರುತ್ತದೆ; ಓರ್ವ ವ್ಯಕ್ತಿಯು ತಮ್ಮದೇ ರೀತಿಯಲ್ಲಿ ಮತ್ತೋರ್ವ ವ್ಯಕ್ತಿಯೂ ಅನುಭವಕ್ಕೆ ತಂದುಕೊಳ್ಳುತ್ತಿದ್ದಾನೆ ಎಂಬಂತೆ ಅವನ ಅನುಭವವನ್ನು ಪಡೆಯುತ್ತಾನೆ. ಬೇರೆಯದರ ನೋಟದ ಈ ಅನುಭವವು ನೋಟ ಎಂದು ಕರೆಯಲ್ಪಡುತ್ತದೆ (ಕೆಲವೊಮ್ಮೆ ದಿಟ್ಟಿಸು ಎಂದು ಕರೆಯಲ್ಪಡುತ್ತದೆ). ತನ್ನ ಮೂಲಭೂತ ದೃಶ್ಯತ್ವ ಸಿದ್ಧಾಂತದ ಅರ್ಥದಲ್ಲಿ ಈ ಅನುಭವವು ವಸ್ತುನಿಷ್ಠವಾಗಿ ಪ್ರಪಂಚದ ಘಟಕವಾಗಿರುವಾಗ, ಮತ್ತು ಓರ್ವನು ವಸ್ತುನಿಷ್ಠವಾಗಿ ಅಸ್ತಿತ್ವದಲ್ಲಿರುವ ವ್ಯಕ್ತಿನಿಷ್ಠತೆಯಾಗಿದ್ದಾಗ (ಬೇರೆಯದರ ನೋಟದಲ್ಲಿ ಕಂಡಂತೆಯೇ ಓರ್ವನು ತನ್ನನ್ನು ತಾನು ಅನುಭವಕ್ಕೆ ತಂದುಕೊಳ್ಳುತ್ತಾನೆ; ಇದು ಓವನು ಬೇರೆಯದನ್ನು ವ್ಯಕ್ತಿನಿಷ್ಠತೆಯಾಗಿ ನೋಡಿದಂತೆಯೇ ಇರುತ್ತದೆ), ಅಸ್ತಿತ್ವವಾದದಲ್ಲಿ, ಇದು ಓರ್ವನ ಸ್ವಾತಂತ್ರ್ಯದ ಒಂದು ವಿಧದ ಮಿತಿಯಾಗಿಯೂ ನಡೆದುಕೊಳ್ಳುತ್ತದೆ. ಏಕೆಂದರೆ, ನೋಟವು ತಾನು ಏನನ್ನು ನೋಡುತ್ತದೋ ಅದನ್ನು ಮೂರ್ತೀಕರಿಸುವ ಪ್ರವೃತ್ತಿಯನ್ನು ಹೊಂದಿರುತ್ತದೆ. ಅದರಂತೆ, ಓರ್ವನು ನೋಟದಲ್ಲಿ ತನ್ನನ್ನು ಅನುಭವಕ್ಕೆ ತಂದುಕೊಂಡಾಗ, ಓರ್ವನು ತನ್ನನ್ನು ಏನೂ ಇಲ್ಲ (ಯಾವುದೇ ವಸ್ತುವಿಲ್ಲ) ಎಂಬಂತೆ ಅನುಭವಕ್ಕೆ ತಂದುಕೊಳ್ಳದೇ, ಅದರ ಬದಲಿಗೆ ಏನೋ ಒಂದು ಎಂಬಂತೆ ಅನುಭವಕ್ಕೆ ತಂದುಕೊಳ್ಳುತ್ತಾನೆ. ಒಂದು ಕೀಲಿಕಂಡಿಯ ಮೂಲಕ ಯಾರ ಕಡೆಗೋ ಓರ್ವ ಮನುಷ್ಯನು ಇಣುಕಿ ನೋಡುತ್ತಿರುವುದಕ್ಕೆ ಸಂಬಂಧಿಸಿದ ಸಾರ್ತ್ರೆಯದೇ ಆದ ಉದಾಹರಣೆಯು ಇದನ್ನು ಸ್ಪಷ್ಟೀಕರಿಸುವಲ್ಲಿ ನೆರವಾಗಬಲ್ಲದು: ಮೊದಲಿಗೆ, ತಾನು ಇರುವ ಸನ್ನಿವೇಶದಲ್ಲಿ ಈ ಮನುಷ್ಯನು ಸಂಪೂರ್ಣವಾಗಿ ಸಿಕ್ಕಿಬಿದ್ದಿರುತ್ತಾನೆ; ಅವನು ಒಂದು ಪೂರ್ವಾತ್ಮಾರ್ಥಕ ಸ್ಥಿತಿಯಲ್ಲಿದ್ದು, ಕೋಣೆಯಲ್ಲಿ ಏನು ನಡೆಯುತ್ತದೆ ಎಂಬುದರ ಅವರಲ್ಲಿ ಅವನ ಸಂಫೂರ್ಣ ಜಾಗೃತಿಯು ಕುರಿತು ನಿರ್ದೇಶಿಸಲ್ಪಟ್ಟಿರುತ್ತದೆ. ಇದ್ದಕ್ಕಿದ್ದಂತೆ, ತನ್ನ ಹಿಂದಿನಿಂದ ಒಂದು ಹಾಸುಹಲಗೆಯ ಕಿರುಗುಟ್ಟುವಿಕೆಯನ್ನು ಅವನು ಕೇಳಿಸಿಕೊಳ್ಳುತ್ತಾನೆ, ಮತ್ತು ತನ್ನನ್ನು ಯಾರೋ ನೋಡುತ್ತಿದ್ದಾರೆ ಎಂಬ ಎಚ್ಚರ ಅವನಲ್ಲಿ ಮೂಡುತ್ತದೆ. ಬೇರೊಬ್ಬರು ಇದೇ ರೀತಿ ಇಣುಕಿನೋಡುವ ಕೆಲಸವನ್ನು ಮಾಡಿದ್ದರೆ ತಾನು ಅವರನ್ನು ಗ್ರಹಿಸುತ್ತಿದ್ದ ರೀತಿಯಲ್ಲೇ, ಈಗ ತನ್ನನ್ನೂ ಬೇರೊಬ್ಬ ವ್ಯಕ್ತಿಯು ಗ್ರಹಿಸುತ್ತಿದ್ದಾನೆ ಎಂಬುದನ್ನು ಗ್ರಹಿಸುವ ಈತನಲ್ಲಿ ಒಂದು ರೀತಿಯ ಅವಮಾನವು ತುಂಬಿಕೊಳ್ಳುತ್ತದೆ. ಆಗ ನೋಟವು ಓರ್ವನ ವಾಸ್ತವಸ್ಥಿತಿಯ ಸಹ-ರಚನಾತ್ಮಕ ನೋಟ ಎನಿಸಿಕೊಳ್ಳುತ್ತದೆ. ನೋಟದ ಮತ್ತೊಂದು ವಿಶಿಷ್ಟವಾದ ಲಕ್ಷಣವೆಂದರೆ ಮತ್ತಾವುದೇ ಬೇರೆಯದು ನಿಜವಾಗಿ ಅಲ್ಲಿರುವುದರ ಅಗತ್ಯವಿರುವುದಿಲ್ಲ: ಹಾಸುಹಲಗೆಯ ಕಿರುಗುಟ್ಟುವಿಕೆಯು ಒಂದು ಹಳೆಯ ಮನೆಯ ಚಲನೆಯೆಂಬುದನ್ನು ಬಿಟ್ಟರೆ ಬೇರೇನೂ ಆಗಿರಲಿಲ್ಲ ಎಂಬುದು ಸಾಧ್ಯವಿರುತ್ತದೆ; ಓರ್ವನನ್ನು ಮತ್ತೊಬ್ಬನು ನೋಡುವ ವಾಸ್ತವಿಕ ವಿಧಾನದ ಒಂದು ರೀತಿಯ ಅತೀಂದ್ರಿಯ ದೂರಸಂವೇದನದ ಅನುಭವವನ್ನೇನೂ ಆ ನೋಟವು ಹೊಂದಿರುವುದಿಲ್ಲ (ಅಲ್ಲಿ ಬೇರೊಬ್ಬರೂ ಇದ್ದಿರಲು ಸಾಧ್ಯವಿದ್ದರೂ, ಆ ವ್ಯಕ್ತಿಯು ಅಲ್ಲಿರುವುದನ್ನು ಅವನು ಗಮನಿಸದಿರಬಹುದು). ಇದು ಕೇವಲ ಮತ್ತೊಬ್ಬರು ತಮ್ಮನ್ನು ಹೇಗೆ ಗ್ರಹಿಸುತ್ತಾರೆ ಎಂಬುದರ ಗ್ರಹಿಕೆ ಮಾತ್ರವೇ ಆಗಿರುತ್ತದೆ.

ಕಾರಣ[ಬದಲಾಯಿಸಿ]

ನಡೆದುಕೊಳ್ಳುವಿಕೆ, ಸ್ವಾತಂತ್ರ್ಯ, ಹಾಗೂ ತೀರ್ಮಾನಗಳನ್ನು ಮೂಲಭೂತ ಅಂಶಗಳಾಗಿ ಒತ್ತುನೀಡುವ ಅಸ್ತಿತ್ವವಾದಿಗಳು, ವಿಚಾರವಾದ ಹಾಗೂ ದೃಷ್ಟಿಪ್ರಾಮುಖ್ಯವಾದಕ್ಕೆ ಸ್ವತಃ ತಮ್ಮನ್ನು ವಿರುದ್ಧವಾಗಿ ಒಡ್ಡಿಕೊಳ್ಳುತ್ತಾರೆ. ಅಂದರೆ, ಮಾನವ ಜೀವಿಗಳು ಪ್ರಧಾನವಾಗಿ ವಿವೇಚನಾಶೀಲರಾಗಿದ್ದಾರೆ ಎಂಬಂತೆ ಮಾಡುವ ವ್ಯಾಖ್ಯಾನಗಳಿಗೆ ವಿರುದ್ಧವಾಗಿ ಅವರು ವಾದಿಸುತ್ತಾರೆ. ಅದರ ಬದಲಿಗೆ, ಜನರು ಎಲ್ಲಿ ಅರ್ಥವನ್ನು ಹುಡುಕುತ್ತಾರೆ ಎಂಬುದರ ಕಡೆಗೆ ಅಸ್ತಿತ್ವವಾದಿಗಳು ನೋಡುತ್ತಾರೆ. ವಿವೇಚನಾಶೀಲತೆಗಿಂತ ಹೆಚ್ಚಾಗಿ ತಮಗೆ ಆಗಿರುವ ಅರ್ಥವನ್ನು ಆಧರಿಸಿ ಜನರು ವಾಸ್ತವವಾಗಿ ತೀರ್ಮಾನಗಳನ್ನು ಮಾಡುತ್ತಾರೆ ಎಂದು ಅಸ್ತಿತ್ವವಾದವು ಸಮರ್ಥಿಸುತ್ತದೆ. ಅರ್ಥದ ಮೂಲವಾಗಿ ಕಾರಣವನ್ನು ತಿರಸ್ಕರಿಸುವುದು ಅಸ್ತಿತ್ವವಾದಿ ಆಲೋಚನೆಯ ಒಂದು ಸಾಮಾನ್ಯ ವಿಷಯವಾಗಿದೆ; ನಮ್ಮದೇ ಆದ ಮೂಲಭೂತ ಸ್ವಾತಂತ್ರ್ಯ ಹಾಗೂ ಸಾವಿನ ಕುರಿತಾದ ನಮ್ಮ ಅರಿವನ್ನು ಎದುರಿಸುವಾಗ, ನಾವು ಅನುಭವಿಸುವ ವ್ಯಾಕುಲತೆ ಹಾಗೂ ದಿಗಿಲಿನ ಸಂವೇದನೆಗಳ ಮೇಲಿನ ಗಮನವೂ ಸಹ ಇದೇ ಬಗೆಯದಾಗಿದೆ. ಮಾನವರು ತಮ್ಮ ಅಸ್ತಿತ್ವವಾದದ ವ್ಯಾಕುಲತೆಯನ್ನು, ಪ್ರಪಂಚದಲ್ಲಿ ವಾಸವಾಗಿರುವ ತಮ್ಮ ಭಯವನ್ನು ಎದುರಿಸಲು ಬಳಸುವ ಒಂದು ಕಾರ್ಯವಿಧಾನವಾಗಿ ಬಲವಾದ ವಿವೇಚನಾಶೀಲತೆಯನ್ನು ಕಿಯರ್‌ಕೆಗಾರ್ಡ್‌ ಕಂಡ: "ನಾನು ವಿವೇಚನಾಶೀಲ ಎಂಬುದನ್ನು ಒಂದು ವೇಳೆ ನಾನು ನಂಬಬಲ್ಲೆನಾದರೆ ಮತ್ತು ಉಳಿದ ಪ್ರತಿಯೊಬ್ಬರೂ ವಿವೇಚನಾಶೀಲರಾಗಿದ್ದರೆ, ಆಗ ನನಗೆ ಭಯಪಡಲು ಕಾರಣವೇ ಇರುವುದಿಲ್ಲ ಮತ್ತು ಮುಕ್ತವಾಗಿರುವುದರ ಕುರಿತು ವ್ಯಾಕುಲವನ್ನು ಅನುಭವಿಸಲು ಯಾವುದೇ ಕಾರಣವಿರುವುದಿಲ್ಲ."[ಸೂಕ್ತ ಉಲ್ಲೇಖನ ಬೇಕು] ಆದಾಗ್ಯೂ, ವಿವೇಚನಾಶೀಲತೆಯನ್ನು ವಸ್ತುನಿಷ್ಠ ಪ್ರಪಂಚದೊಂದಿಗೆ ಪರಸ್ಪರ ಪ್ರಭಾವ ಬೀರಲು ಇರುವ ಒಂದು ವಿಧಾನವಾಗಿ ಕಿಯರ್‌ಕೆಗಾರ್ಡ್‌ ಪ್ರತಿಪಾದಿಸಿದ (ಉದಾಹರಣೆಗೆ, ನಿಸರ್ಗ ವಿಜ್ಞಾನಗಳಲ್ಲಿರುವಂತೆ), ಆದರೆ ಅಸ್ತಿತ್ವವಾದದ ಸಮಸ್ಯೆಗಳ ವಿಷಯಕ್ಕೆ ಬಂದಾಗ, ಕಾರಣವು ಸಾಕಷ್ಟಿಲ್ಲದ ಸ್ಥಿತಿಯಲ್ಲಿರುತ್ತದೆ: "ಮಾನವನ ಕಾರಣವು ಎಲ್ಲೆಗೆರೆಗಳನ್ನು ಹೊಂದಿದೆ".[೬೩] ಕಿಯರ್‌ಕೆಗಾರ್ಡ್ ರೀತಿಯಲ್ಲಿಯೇ ಸಾರ್ತ್ರೆಯೂ ಸಹ ವಿವೇಚನಾಶೀಲತೆಯೊಂದಿಗೆ ಸಮಸ್ಯೆಗಳನ್ನು ಕಂಡುಕೊಂಡು, ಅದನ್ನು "ಕೆಟ್ಟ ನಂಬಿಕೆ"ಯ ಒಂದು ಸ್ವರೂಪ ಎಂದು ಆತ ಕರೆದ; "ಬೇರೆಯದರ ಪರಿಕಲ್ಪನೆ" - ಎಂಬ ರಚನಾ-ಸ್ವರೂಪವನ್ನು ವಿದ್ಯಮಾನದ ಒಂದು ಪ್ರಪಂಚದ ಮೇಲೆ ಹೇರಲು ತನ್ನತನದಿಂದ ನಡೆದ ಒಂದು ಪ್ರಯತ್ನ ಇದಾಗಿದ್ದು, ಇದು ಮೂಲಭೂತವಾಗಿ ವಿವೇಚನಾರಹಿತ ಹಾಗೂ ಗೊತ್ತುಗುರಿಯಿಲ್ಲದೆ ಮಾಡಿದ ಕೆಲಸವಾಗಿದೆ ಎಂಬುದು ಸಾರ್ತ್ರೆಯ ಅಭಿಪ್ರಾಯವಾಗಿತ್ತು. ಸಾರ್ತ್ರೆಯ ಅನುಸಾರ, ವಿವೇಚನಾಶೀಲತೆ ಹಾಗೂ ಕೆಟ್ಟ ನಂಬಿಕೆಯ ಇತರ ಸ್ವರೂಪಗಳು, ಸ್ವಾತಂತ್ರ್ಯದಲ್ಲಿ ಅರ್ಥವನ್ನು ಕಂಡುಕೊಳ್ಳುವುದಕ್ಕೆ ಜನರಿಗೆ ಅಡ್ಡಿಮಾಡುತ್ತವೆ. ಸಾರ್ತ್ರೆಯು ಸಮರ್ಥಿಸುವ ಪ್ರಕಾರ, ವ್ಯಾಕುಲತೆ ಹಾಗೂ ದಿಗಿಲಿನ ಕುರಿತಾದ ತಮ್ಮ ಸಂವೇದನೆಗಳನ್ನು ನಿಗ್ರಹಿಸುವುದಕ್ಕೆ ಪ್ರಯತ್ನಿಸಲು, ಜನರು ದೈನಂದಿನ ಅನುಭವ ವ್ಯಾಪ್ತಿಯೊಳಗೇ ತಮ್ಮನ್ನು ಸೀಮಿತಗೊಳಿಸಿಕೊಂಡುಬಿಡುತ್ತಾರೆ; ಇದರಿಂದಾಗಿ, "ಬೇರೆಯದರ ಪರಿಕಲ್ಪನೆಯ" "ನೋಟ"ದಿಂದ ಒಂದು ಅಥವಾ ಮತ್ತೊಂದು ಸ್ವರೂಪದಲ್ಲಿ ಹೊಂದಲ್ಪಡುವುದಕ್ಕೆ ಸಂಬಂಧಿಸಿದ ತಮ್ಮ ಆಕ್ಷೇಪ ಎತ್ತದಿರುವಿಕೆ ಹಾಗೂ ಸ್ವಾತಂತ್ರ್ಯವನ್ನು ಅವರು ಬಿಟ್ಟುಬಿಡುತ್ತಾರೆ (ಅಂದರೆ, ಮತ್ತೋರ್ವ ವ್ಯಕ್ತಿಯಿಂದ ಅಥವಾ ಕಡೇಪಕ್ಷ ಆ ಮತ್ತೊಬ್ಬ ವ್ಯಕ್ತಿಯ ಕುರಿತಾದ ಓರ್ವನ ಪರಿಕಲ್ಪನೆಯಿಂದ ಹೊಂದಲ್ಪಟ್ಟಿರುವುದು). ಇದೇ ರೀತಿಯಲ್ಲಿ, "ಬೇರೆಯದರ ಪರಿಕಲ್ಪನೆಯು" ಕ್ರಮ ಮತ್ತು ರಚನಾ-ಸ್ವರೂಪವನ್ನು ಹೊಂದಿದೆ ಎಂದು ಸಮಾಜ ಮತ್ತು ಧರ್ಮಗಳು ಮಾನವರಿಗೆ ತಪ್ಪಾಗಿ ಬೋಧಿಸುತ್ತವೆ ಎಂದು ಕ್ಯಾಮಸ್‌ ನಂಬಿದೆ.[೬೪] ಕ್ಯಾಮಸ್ ದೃಷ್ಟಿಯಲ್ಲಿ‌, ಸುವ್ಯವಸ್ಥೆಗಾಗಿ ಎದುರುನೋಡುತ್ತಿರುವ ಓರ್ವ ವ್ಯಕ್ತಿಯ ಜಾಗೃತಿಯು ಬೇರೆಯದರ ಪರಿಕಲ್ಪನೆಯ ಸುವ್ಯವಸ್ಥೆಯ ಕೊರತೆಯೊಂದಿಗೆ ಘರ್ಷಿಸಿದಾಗ, ಅಸಂಬದ್ಧತೆ ಎಂಬ ಮೂರನೇ ಅಂಶವು ಹುಟ್ಟಿಕೊಳ್ಳುತ್ತದೆ.

ಅರ್ಥಶೂನ್ಯತೆ[ಬದಲಾಯಿಸಿ]

ಪ್ರಪಂಚಕ್ಕೆ ನಾವು ನೀಡಿರುವ ಅರ್ಥದಿಂದ ಆಚೆಗೆ ಪ್ರಪಂಚದಲ್ಲಿ ಹುಡುಕಬಹುದಾದಂಥ ಯಾವುದೇ ಅರ್ಥವು ಇರುವುದಿಲ್ಲ ಎಂಬ ಪರಿಕಲ್ಪನೆಯನ್ನು ಅರ್ಥಶೂನ್ಯತೆಯ ಎಣಿಕೆಯು ಒಳಗೊಳ್ಳುತ್ತದೆ. ಈ ಅರ್ಥರಹಿತತೆಯು ಪ್ರಪಂಚದ ನಿರ್ನೈತಿಕತೆ ಅಥವಾ "ಪಕ್ಷಪಾತ ಮನೋಭಾವ"ವನ್ನೂ ಒಳಗೊಳ್ಳುತ್ತದೆ. "ಕೆಟ್ಟ ಸಂಗತಿಗಳು ಒಳ್ಳೆಯ ಜನರಿಗೆ ಉಂಟಾಗುವುದಿಲ್ಲ" ಎಂಬಂಥ ಚಿಂತನೆಗಳನ್ನು ಒಳಗೊಂಡಿರುವ, ಚಿಂತನೆಯ "ಕರ್ಮದ" ವಿಧಾನಗಳೊಂದಿಗೆ ಇದು ವೈಲಕ್ಷಣ್ಯವನ್ನು ತೋರಿಸುತ್ತದೆ; ಅಲಂಕಾರಿಕವಾಗಿ ಮಾತನಾಡುವುದಾದರೆ, ಪ್ರಪಂಚಕ್ಕೆ ಓರ್ವ ಒಳ್ಳೆಯ ವ್ಯಕ್ತಿ ಅಥವಾ ಒಂದು ಕೆಟ್ಟ ವಿಷಯ ಎಂಬ ರೀತಿಯದ್ದೇನೂ ಇಲ್ಲ; ಏನು ನಡೆಯುತ್ತದೋ ಅದು ನಡೆಯುತ್ತದೆ, ಮತ್ತು ಇದು ಓರ್ವ "ಒಳ್ಳೆಯ" ವ್ಯಕ್ತಿಗೂ ಆಗಬಹುದು ಮತ್ತು ಓರ್ವ "ಕೆಟ್ಟ" ವ್ಯಕ್ತಿಗೂ ಆಗಬಹುದು. ಪ್ರಪಂಚದ ಅಸಂಬದ್ಧತೆಯ ಕಾರಣದಿಂದಾಗಿ, ಯಾವುದೇ ಸಮಯದಲ್ಲಿ, ಯಾರಿಗೆ ಏನುಬೇಕಾದರೂ ಆಗಬಹುದು, ಮತ್ತು ಒಂದು ದುಃಖದ ಸಂಗತಿಯು ಯಾರಾದರೂ ಒಬ್ಬರನ್ನು ಅರ್ಥಶೂನ್ಯತೆಯೊಂದಿಗೆ ನೇರ ಎದುರು-ಬದುರಾಗುವ ಪರಿಸ್ಥಿತಿಗೆ ಏಕಾಏಕಿ ದೂಡಬಹುದು. ಅರ್ಥಶೂನ್ಯತೆಯ ಎಣಿಕೆಯು ಇತಿಹಾಸದಾದ್ಯಂತದ ಸಾಹಿತ್ಯದಲ್ಲಿ ಎದ್ದುಕಾಣುತ್ತದೆ. ಸೋರೆನ್‌ ಕಿಯರ್‌ಕೆಗಾರ್ಡ್‌, ಫ್ರಾಂಜ್‌ ಕಾಫ್ಕಾ, ಫೈಯೋಡಾರ್‌ ದಾಸ್ತೋವ್ಸ್ಕಿ ಮತ್ತು ಜೀನ್‌-ಪಾಲ್‌ ಸಾರ್ತ್ರೆ ಹಾಗೂ ಆಲ್ಬರ್ಟ್‌ ಕ್ಯಾಮಸ್‌ ಮೊದಲಾದವರ ಅನೇಕ ಸಾಹಿತ್ಯಿಕ ಕೃತಿಗಳು ಪ್ರಪಂಚದ ಅಸಂಬದ್ಧತೆಗೆ ಮುಖಾಮುಖಿಯಾಗುವ ಜನರ ಕುರಿತಾದ ವರ್ಣನೆಗಳನ್ನು ಒಳಗೊಂಡಿವೆ. ದಿ ಮಿಥ್‌ ಆಫ್‌ ಸಿಸಿಫಸ್‌ ಎಂಬ ತನ್ನ ಪ್ರಬಂಧದಲ್ಲಿ "ಅರ್ಥಶೂನ್ಯತೆಯ" ವಿಷಯವನ್ನು ಆಲ್ಬರ್ಟ್‌ ಕ್ಯಾಮಸ್‌ ಅಧ್ಯಯನಮಾಡಿದ.

ನಿರಾಕರಣವಾದಕ್ಕಿರುವ ಸಂಬಂಧ[ಬದಲಾಯಿಸಿ]

ನಿರಾಕರಣವಾದ ಹಾಗೂ ಅಸ್ತಿತ್ವವಾದಗಳು ಪ್ರತ್ಯೇಕ ತತ್ತ್ವಶಾಸ್ತ್ರಗಳಾಗಿದ್ದರೂ ಸಹ, ಅವು ಪರಸ್ಪರವಾಗಿ ಅನೇಕವೇಳೆ ಗೊಂದಲವುಂಟುಮಾಡುತ್ತವೆ. ಗೊಂದಲದ ಒಂದು ಪ್ರಧಾನ ಕಾರಣವೇನೆಂದರೆ, ಫ್ರೆಡ್ರಿಕ್‌ ನೀಟ್ಜ್‌ಸ್ಚೆಯು ಎರಡೂ ಕ್ಷೇತ್ರಗಳಲ್ಲಿನ ಓರ್ವ ಪ್ರಮುಖ ದಾರ್ಶನಿಕನಾಗಿದ್ದಾನಾದರೂ, ಆತ ಪ್ರಪಂಚದ ಅಸಂಗತತೆ ಹಾಗೂ ಅಂತರ್ಗತ ಅರ್ಥರಹಿತತೆಯ ಅಸ್ತಿತ್ವವಾದಿ ಸಮರ್ಥಕನೂ ಆಗಿದ್ದಾನೆ. ನಡೆದುಕೊಳ್ಳುವುದಕ್ಕೆ ಸಂಬಂಧಿಸಿದ ಯಾವುದೇ ವಸ್ತುನಿಷ್ಢ ಆಧಾರದ ಸಂಪೂರ್ಣ ಕೊರತೆಯ ಸೂಚಕವಾಗಿ ತಲ್ಲಣದ ಪ್ರಾಮುಖ್ಯತೆಗೆ ಅಸ್ತಿತ್ವವಾದಿ ದಾರ್ಶನಿಕರು ಅನೇಕವೇಳೆ ಒತ್ತುನೀಡುತ್ತಾರೆ; ಸದರಿ ನಡೆದುಕೊಳ್ಳುವಿಕೆಯು ಅನೇಕವೇಳೆ ಒಂದು ನೈತಿಕ ಅಥವಾ ಒಂದು ಅಸ್ತಿತ್ವವಾದದ ನಿರಾಕರಣವಾದಕ್ಕೆ ಇಳಿಸಲ್ಪಡುತ್ತದೆ. ಆದಾಗ್ಯೂ, ಕ್ಯಾಮಸ್‌‌‌ನ ದಿ ಮಿಥ್‌ ಆಫ್‌ ಸಿಸಿಫಸ್‌ನಲ್ಲಿ ಕಂಡುಬರುವಂತೆ, ಅರ್ಥಶೂನ್ಯತೆಯೊಂದಿಗೆ ಮುಖಾಮುಖಿಯಾಗುವಿಕೆಯ ಮೂಲಕ ಪಟ್ಟುಹಿಡಿಯುವುದು ಅಸ್ತಿತ್ವವಾದಿ ತತ್ತ್ವಶಾಸ್ತ್ರದ ಕೃತಿಗಳಲ್ಲಿನ ಒಂದು ವ್ಯಾಪಕವಾದ ವಿಷಯವಾಗಿದೆ, ಮತ್ತು ನೈತಿಕತೆ ಅಥವಾ ಓರ್ವನ ಸ್ವಯಂ-ಸೃಷ್ಟಿಸಲ್ಪಟ್ಟ ಅರ್ಥವನ್ನು ಅಸ್ತಿತ್ವವಾದಿ ದಾರ್ಶನಿಕರು ತಳ್ಳಿಹಾಕುವುದು ಅತ್ಯಂತ ಅಪರೂಪವಾಗಿದೆ: ಧಾರ್ಮಿಕ ವಿಧಾನದಲ್ಲಿ ಒಂದು ತೆರನಾದ ನೈತಿಕತೆಯನ್ನು ಕಿಯರ್‌ಕೆಗಾರ್ಡ್‌ ಮರುಗಳಿಸಿಕೊಂಡ (ಇದು ನೈತಿಕವಾಗಿತ್ತು ಎಂಬುದನ್ನು ಸ್ವತಃ ಅವನೇ ಒಪ್ಪುವುದಿಲ್ಲವಾದರೂ; ಧಾರ್ಮಿಕ ರದ್ದಿಯಾತಿಗಳು ನೈತಿಕವಾಗಿದ್ದವು), ಮತ್ತು ಬೀಯಿಂಗ್‌ ಅಂಡ್‌ ನಥಿಂಗ್‌ನೆಸ್‌ ಕೃತಿಯಲ್ಲಿ ಕಂಡುಬರುವ ಸಾರ್ತ್ರೆಯ ಅಂತಿಮ ಮಾತುಗಳು ಹೀಗಿವೆ: "ಒಂದು ಪರಿಶುದ್ಧವಾದ ಮತ್ತು ಒಂದು ಅಪ್ರಧಾನವಲ್ಲದ (ಅಥವಾ ಪರಿಶುದ್ಧವಲ್ಲದ) ಪ್ರತಿಫಲನಕ್ಕೆ ನಮ್ಮನ್ನು ಉಲ್ಲೇಖಿಸುವ ಈ ಎಲ್ಲಾ ಪ್ರಶ್ನೆಗಳು, ತಮ್ಮ ಉತ್ತರವನ್ನು ನೈತಿಕ ಸ್ತರದ ಮೇಲೆ ಪಡೆಯಬಲ್ಲವು. ಒಂದು ಭವಿಷ್ಯ ಕೆಲಸವನ್ನು ನಾವು ಅವಕ್ಕೆ ಅರ್ಪಿಸಬೇಕು."[೬೫] ಆದ್ದರಿಂದ, ಓರ್ವನು ಮೌಲ್ಯ ಹಾಗೂ ಅರ್ಥವನ್ನು ಸೃಷ್ಟಿಸಬಲ್ಲವನಾದರೆ, ಶೂನ್ಯವಾದಿಗಳು ಅದನ್ನು ನಿರಾಕರಿಸುತ್ತಾರೆ ಎಂದು ಅಸ್ತಿತ್ವವಾದಿಗಳು ನಂಬುತ್ತಾರೆ.

ಟೀಕೆ[ಬದಲಾಯಿಸಿ]

ಹರ್ಬರ್ಟ್‌ ಮಾರ್ಕ್ಯೂಸ್‌ ಅಸ್ತಿತ್ವವಾದವನ್ನು ಟೀಕಿಸಿದ; ಅದರಲ್ಲೂ ವಿಶೇಷವಾಗಿ, ಜೀನ್‌-ಪಾಲ್‌ ಸಾರ್ತ್ರೆಯಿಂದ ರಚಿಸಲ್ಪಟ್ಟ ಬೀಯಿಂಗ್‌ ಅಂಡ್‌ ನಥಿಂಗ್‌ನೆಸ್‌ (1943) ಕೃತಿಯು ಅವನ ಟೀಕೆಗೊಳಗಾಯಿತು. ಈ ಕೃತಿಯು ಸ್ವತಃ ಅಸ್ತಿತ್ವದ ಸ್ವರೂಪದ ಮೇಲೆ ವ್ಯಾಕುಲತೆ ಹಾಗೂ ಅರ್ಥರಹಿತತೆಯನ್ನು ಅಭಿವ್ಯಕ್ತಗೊಳಿಸುತ್ತದೆ ಎಂಬುದು ಅವನ ಟೀಕೆಯ ಹಿಂದಿನ ಕಾರಣವಾಗಿತ್ತು- "ಎಲ್ಲಿಯವರೆಗೂ ಅಸ್ತಿತ್ವವಾದವು ಒಂದು ತತ್ತ್ವಚಿಂತನೆಯ ಸಿದ್ಧಾಂತವಾಗಿರುತ್ತದೋ, ಅಲ್ಲಿಯವರೆಗೂ ಅದು ಒಂದು ಆದರ್ಶಾತ್ಮಕ ಸಿದ್ಧಾಂತವಾಗಿ ಉಳಿಯುತ್ತದೆ: ಅದು ಮಾನವ ಅಸ್ತಿತ್ವದ ನಿರ್ದಿಷ್ಟ ಐತಿಹಾಸಿಕ ಸ್ಥಿತಿಗಳನ್ನು ಮೂಲತತ್ತ್ವ ಶಾಸ್ತ್ರದ ಹಾಗೂ ತತ್ತ್ವ ಮೀಮಾಂಸೆಯ ವಿಶಿಷ್ಟವಾದಗಳಾಗಿ ಸಾಕಾರಗೊಳಿಸುತ್ತದೆ. ಈ ರೀತಿಯಾಗಿ ಅಸ್ತಿತ್ವವಾದವು ತಾನು ದಾಳಿಮಾಡುವ ಯಾವುದೇ ಸಿದ್ಧಾಂತದ ಭಾಗವಾಗುತ್ತದೆ, ಮತ್ತು ಇದರ ತೀವ್ರಗಾಮಿತ್ವವು ಭ್ರಾಮಕವಾಗಿದೆ".[೬೬] 1946ರಲ್ಲಿ, ಎಕ್ಸಿಸ್ಟೆನ್ಷಿಯಾಲಿಸಂ ಈಸ್‌ ಹ್ಯೂಮನಿಸಂ ಎಂಬ ತನ್ನ ಉಪನ್ಯಾಸದಲ್ಲಿ ಅಸ್ತಿತ್ವವಾದದ ಕುರಿತಾದ ಮಾರ್ಕ್ಸ್‌ವಾದಿ ಟೀಕೆಗೆ ಸಾರ್ತ್ರೆಯು ಅಷ್ಟುಹೊತ್ತಿಗಾಗಲೇ ಉತ್ತರಿಸಿದ್ದ.[೬೭] ಜಾರ್ಗನ್‌ ಆಫ್‌ ಅಥೆಂಟಿಸಿಟಿ ಕೃತಿಯಲ್ಲಿ, ಹೆಡೀಗರ್‌‌ನ ತತ್ತ್ವಶಾಸ್ತ್ರವನ್ನು, ವಿಶೇಷವಾಗಿ ಅವನ ಭಾಷಾಬಳಕೆಯನ್ನು ಥಿಯೋಡಾರ್‌ ಅಡೊರ್ನೊ ಟೀಕಿಸಿದ; ಇದು ಮುಂದುವರಿದ, ಔದ್ಯಮಿಕ ಸಮಾಜದ, ಹಾಗೂ ಅದರ ಅಧಿಕಾರ ರಚನಾ-ಸ್ವರೂಪದ ಒಂದು ಪೆಚ್ಚಾಗಿಸುವ ಸಿದ್ಧಾಂತದಂತಿದೆ ಎಂಬುದು ಅವನ ಅಭಿಪ್ರಾಯವಾಗಿತ್ತು.[ಸೂಕ್ತ ಉಲ್ಲೇಖನ ಬೇಕು] ಲೆಟರ್‌ ಆನ್‌ ಹ್ಯೂಮನಿಸಂ ಕೃತಿಯಲ್ಲಿ, ಸಾರ್ತ್ರೆಯ ಅಸ್ತಿತ್ವವಾದವನ್ನು ಹೆಡೀಗ್ಗರ್‌‌ ಟೀಕಿಸುತ್ತಾನೆ:

ಅಸ್ತಿತ್ವವು ಇರುವಿಕೆಗೆ ಅಗ್ರಗಾಮಿಯಾಗಿರುತ್ತದೆ ಎಂದು ಅಸ್ತಿತ್ವವಾದವು ಹೇಳುತ್ತದೆ. ಈ ಹೇಳಿಕೆಯಲ್ಲಿ ಅವನು ಎಕ್ಸಿಸ್ಟೆನ್ಷಿಯಾ ಮತ್ತು ಎಸೆನ್ಷಿಯಾಗಳನ್ನು ಅವುಗಳ ತತ್ತ್ವ ಮೀಮಾಂಸೆಯ ಅರ್ಥದ ಅನುಸಾರ ಪರಿಗಣಿಸುತ್ತಿದ್ದಾನೆ; ಪ್ಲೇಟೋನ ಕಾಲದಿಂದಲೂ ಎಸೆನ್ಷಿಯಾ ಎಂಬುದು ಎಕ್ಸಿಸ್ಟೆನ್ಷಿಯಾಗೆ ಅಗ್ರಗಾಮಿಯಾಗಿರುತ್ತದೆ ಎಂದೇ ಹೇಳಿಕೊಂಡು ಬರಲಾಗುತ್ತಿದೆ. ಈ ಹೇಳಿಕೆಯನ್ನು ಸಾರ್ತ್ರೆ ಬದಲಾಯಿಸಿದ. ಆದರೆ ಒಂದು ತತ್ತ್ವ ಮೀಮಾಂಸೆಯ ಹೇಳಿಕೆಯ ಬದಲಾಯಿಸುವಿಕೆಯು ಒಂದು ತತ್ತ್ವ ಮೀಮಾಂಸೆಯ ಹೇಳಿಕೆಯಾಗಿಯೇ ಉಳಿದುಕೊಳ್ಳುತ್ತದೆ. ಇದರೊಂದಿಗೆ, ಇರುವಿಕೆಯ ಸತ್ಯದ ಕಡೆಗಣಿಸುವಿಕೆಯ ಮೂಲಕ ಅವನು ತತ್ತ್ವಮೀಮಾಂಸೆಯೊಂದಿಗೆ ಉಳಿಯುತ್ತಾನೆ.

ಕಾರ್ನ್ಯಾಪ್‌ ಹಾಗೂ ಅಯೆರ್‌‌‌‌ರಂಥ ತಾತ್ತ್ವಿಕ ಪ್ರತ್ಯಕ್ಷಸಿದ್ಧ ಪ್ರಮಾಣವಾದಿಗಳು ಹೇಳುವ ಪ್ರಕಾರ, "ಇರುವಿಕೆ" ಎಂಬ ಪದಕ್ಕೆ ಸಂಬಂಧಿಸಿದ ತಮ್ಮ ವಿಶ್ಲೇಷಣೆಗಳಲ್ಲಿ "ಇರುವುದು" ಎಂಬ ಕ್ರಿಯಾಪದದ ಕುರಿತು ಅಸ್ತಿತ್ವವಾದಿಗಳು ಆಗಿಂದಾಗ್ಗೆ ಗೊಂದಲಕ್ಕೊಳಗಾಗಿದ್ದಾರೆ.[೬೮] ಅವರು ವಾದಿಸುವ ಪ್ರಕಾರ, ಇದು ಸಕರ್ಮಕ ಕ್ರಿಯಾಪದವಾಗಿದ್ದು, ಒಂದು ಆಖ್ಯಾತಕ್ಕೆ ಅದು ಪೂರ್ವ-ನಿಶ್ಚಿತವಾಗಿದೆ (ಉದಾಹರಣೆ ಒಂದು ಸೇಬು ಕೆಂಪಗಿದೆ ): ಒಂದು ಆಖ್ಯಾತವಿಲ್ಲದೆಯೇ ಪದವು ಅರ್ಥರಹಿತವಾಗಿರುತ್ತದೆ.

ತತ್ತ್ವಶಾಸ್ತ್ರದ ಆಚೆಗಿನ ಪ್ರಭಾವ[ಬದಲಾಯಿಸಿ]

ಸಾಂಸ್ಕೃತಿಕ ಆಂದೋಲನ ಮತ್ತು ಪ್ರಭಾವ[ಬದಲಾಯಿಸಿ]

ಅಸ್ತಿತ್ವವಾದ ಎಂಬ ಶಬ್ದವು 1940ರ ದಶಕ ಮತ್ತು 1950ರ ದಶಕಗಳಲ್ಲಿ ಒಂದು ಸ್ವಯಂ-ಉಲ್ಲೇಖವಾಗಿ ಜೀನ್‌-ಪಾಲ್‌ ಸಾರ್ತ್ರೆಯಿಂದ ಮೊದಲು ಅಳವಡಿಸಲ್ಪಟ್ಟಿತು, ಮತ್ತು ತಮ್ಮ ಪರಿಕಲ್ಪನೆಗಳನ್ನು ಪ್ರಸಾರಮಾಡುವ ಒಂದು ವಿಧಾನವಾಗಿ ಸಾರ್ತ್ರೆ ಹಾಗೂ ಅವನ ಸಹವರ್ತಿಗಳಿಂದ (ಗಮನಾರ್ಹವಾಗಿ, ಕಾದಂಬರಿಕಾರ ಆಲ್ಬರ್ಟ್‌ ಕ್ಯಾಮಸ್‌‌‌ನಿಂದ) ಸಾಹಿತ್ಯದ ವ್ಯಾಪಕ ಬಳಕೆಯು ನಡೆದು, ಅಸ್ತಿತ್ವವಾದವು "ಒಂದು ತತ್ತ್ವಚಿಂತನೆಯ ಸ್ವರೂಪವಾಗಿ ಅಗಾಧವಾದ ಸಾಹಿತ್ಯಿಕ ಸಂಗತಿಯಾಗಿದೆ" ಎಂಬ ಅರ್ಥವನ್ನು ನೀಡಿತು.[೬೯] ಅಸ್ತಿತ್ವವಾದಿ ಬರಹಗಾರರ ಪೈಕಿ ಪ್ಯಾರಿಸ್‌ನವರಾದ ಜೀನ್‌ ಜೆನೆಟ್‌, ಆಂಡ್ರೆ ಗೈಡ್‌, ಆಂಡ್ರೆ ಮಾಲ್‌ರೌಕ್ಸ್‌, ಹಾಗೂ ನಾಟಕಕಾರ ಸ್ಯಾಮುಯೆಲ್‌ ಬೆಕೆಟ್‌, ನಾರ್ವೆ ದೇಶದ ಕ್ನಟ್‌ ಹ್ಯಾಮ್ಸನ್‌, ಮತ್ತು ರೊಮೇನಿಯಾದ ಸ್ನೇಹಿತರಾದ ಯೀಜೀನ್‌ ಲೊನೆಸ್ಕೊ ಹಾಗೂ ಎಮಿಲ್‌ ಸಿಯೋರನ್‌ ಸೇರಿದ್ದರು. ಅಮೂರ್ತ ಅಭಿವ್ಯಕ್ತಿವಾದಿಗಳು ಜ್ಯಾಕ್‌ಸನ್‌ ಪೋಲಾಕ್‌, ಆರ್ಷಿಲೆ ಗಾರ್ಕಿ, ಹಾಗೂ ವಿಲ್ಲೆಮ್‌ ಡೆ ಕೂನಿಂಗ್‌ ಇವರೇ ಮೊದಲಾದ ಎದ್ದುಕಾಣುವ ಕಲಾವಿದರು ಅಸ್ತಿತ್ವವಾದಿ ಪರಿಭಾಷೆಯಲ್ಲಿ ಅರ್ಥೈಸಲ್ಪಟ್ಟಿದ್ದಾರೆ; ಜೀನ್‌-ಲ್ಯುಕ್‌ ಗೊಡಾರ್ಡ್‌ ಹಾಗೂ ಇಂಗರ್‌ ಬರ್ಗ್‌ಮನ್‌‌‌ರಂಥ ಚಲನಚಿತ್ರೋದ್ಯಮಿಗಳೂ ಸಹ ಈ ನಿಟ್ಟಿನಲ್ಲಿ ಗಮನ ಸೆಳೆಯುತ್ತಾರೆ.[೬೯]

ಚಲನಚಿತ್ರ ಮತ್ತು ವಿಡಿಯೋ[ಬದಲಾಯಿಸಿ]

1950ರಲ್ಲಿ ಬಂದ ಫ್ರೆಂಚ್‌ ನಿರ್ದೇಶಕ ಜೀನ್‌ ಜೆನೆಟ್‌‌ಉನ್‌ ಚಾಂಟ್‌ ಡಿ'ಅಮೌರ್‌ ಎಂಬ ಕಲ್ಪನಾಶಕ್ತಿ-ಕಾಮಪ್ರಚೋದಕ ಚಲನಚಿತ್ರದಲ್ಲಿ, ಒಂಟಿಯಾಗಿರುವ ಸೆರೆಮನೆ ಕೋಣೆಗಳಲ್ಲಿರುವ ಇಬ್ಬರು ನಿವಾಸಿಗಳಿಗೆ ಅವರ ಕೋಣೆಯ ಗೋಡೆಯಲ್ಲಿರುವ ಒಂದು ರಂಧ್ರವು ಏಕೈಕ ಸಂಪರ್ಕವಾಗಿರುತ್ತದೆ; ಇವರ ಮೇಲೆ ಸೆರೆಮನೆ ಮೇಲ್ವಿಚಾರಕನ ಕಣ್ಗಾವಲಿರುತ್ತದೆ. ಜೇಮ್ಸ್‌ ಟ್ರಾವರ್ಸ್‌ ಎಂಬ ವಿಮರ್ಶಕ ‌ಈ ಚಲನಚಿತ್ರದ ಕುರಿತು ಹೀಗೆ ಅಭಿಪ್ರಾಯ ವ್ಯಕ್ತಪಡಿಸುತ್ತಾನೆ: "...ಈ ಚಿತ್ರವು ಒಂದು ದೃಶ್ಯಕಾವ್ಯವಾಗಿದ್ದು, ಸಲಿಂಗಕಾಮದ ಬಯಕೆ ಹಾಗೂ ಅಸ್ತಿತ್ವವಾದಿ ಸಂಕಟವನ್ನು ಮೇಲೇಳುವಂತೆ ಮಾಡುತ್ತದೆ; ಇದು ದೇವರಿಲ್ಲದ ಬ್ರಹ್ಮಾಂಡವೊಂದರಲ್ಲಿನ ಅಸ್ತಿತ್ವವೊಂದರ ಅಸ್ಪಷ್ಟತೆಯನ್ನು ನೋವಿನಿಂದ ಕೂಡಿದ ವಿಶ್ವಾಸಾರ್ಹತೆಯೊಂದಿಗೆ ತಿಳಿಹೇಳುತ್ತದೆ; ಇದು ಪ್ರಾಯಶಃ ಅಸ್ತಿತ್ವವಾದಿ ತತ್ತ್ವಶಾಸ್ತ್ರ ಮತ್ತು ಚಲನಚಿತ್ರ ಮಾಧ್ಯಮದ ಅತ್ಯಂತ ಪರಿಣಾಮಕಾರಿ ಸಮ್ಮಿಲನವಾಗಿದೆ."[೭೦] 1957ರಲ್ಲಿ ಬಂದ ಸ್ಟಾನ್ಲೆ ಕುಬ್ರಿಕ್ ಎಂಬಾತನ ಪಾಥ್ಸ್‌ ಆಫ್‌ ಗ್ಲೋರಿ ಎಂಬ ಯುದ್ಧ-ವಿರೋಧಿ ಚಲನಚಿತ್ರವು "ಮಾನವ ಸ್ಥಿತಿಯ ಅವಶ್ಯಕ ಅಸಂಬದ್ಧತೆ ಹಾಗೂ "ಯುದ್ಧದ ಭಯ"ವನ್ನು ಅವಲೋಕಿಸುವ ಮೂಲಕ, "ಅಸ್ತಿತ್ವವಾದವನ್ನು ಸಚಿತ್ರವಾಗಿ ವಿಶದೀಕರಿಸುತ್ತದೆ ಮತ್ತು ಅದನ್ನು ಪ್ರಬೋಧಿಸುತ್ತದೆ".[೭೧] Iನೇ ಜಾಗತಿಕ ಸಮರದ ಒಂದು ಕಾಲ್ಪನಿಕ ಫ್ರೆಂಚ್‌ ಸೇನಾ ತುಕಡಿಯ ಕಥೆಯನ್ನು ಈ ಚಲನಚಿತ್ರವು ಹೇಳುತ್ತದೆ. ಇದರಲ್ಲಿ ಒಂದು ಅಭೇದ್ಯವಾದ, ಭದ್ರವಾದ ಜರ್ಮನ್‌‌ ನೆಲೆಯ ಮೇಲೆ ದಾಳಿಮಾಡುವಂತೆ ಫ್ರೆಂಚ್‌ ಸೇನಾ ತುಕಡಿಗೆ ಆದೇಶನೀಡಲಾಗುತ್ತದೆ. ದಾಳಿಯು ವಿಫಲಗೊಂಡಾಗ ಮೂರು ಯೋಧರನ್ನು ಮನಬಂದಂತೆ ಆರಿಸಲಾಗುತ್ತದೆ ಮತ್ತು "ಕಾಂಗರೂ ನ್ಯಾಯಾಲಯ"ವೊಂದರಿಂದ ಸೈನಿಕ ನ್ಯಾಯಾಲಯದಲ್ಲಿ ಅವರ ವಿಚಾರಣೆ ಮಾಡಲಾಗುತ್ತದೆ, ಹಾಗೂ ಬಂದೂಕು-ದಳದಿಂದ ಅವರಿಗೆ ಮರಣದಂಡನೆ ವಿಧಿಸಲಾಗುತ್ತದೆ. ವಸ್ತುನಿಷ್ಠತೆಯು ಸಾಧ್ಯವಿದೆಯೇ ಎಂಬುದರ ವಿವಾದಾಂಶ ಹಾಗೂ "ವಿಶ್ವಾಸಾರ್ಹತೆಯ ಸಮಸ್ಯೆ"ಯಂಥ ಅಸ್ತಿತ್ವವಾದದ ನೈತಿಕತೆಯನ್ನು ಚಲನಚಿತ್ರವು ಅವಲೋಕಿಸುತ್ತದೆ.[೭೨] ವಿಷಯದ ಲಘುಭಾಗದ ಕಡೆಗೆ ಗಮನ ಹರಿಸುವುದಾದರೆ, ಬ್ರಿಟಿಷ್‌ ಹಾಸ್ಯತಂಡವಾದ ಮಾಂಟಿ ಪೈಥಾನ್‌ ತನ್ನ ಕೃತಿಗಳಾದ್ಯಂತ ಅಸ್ತಿತ್ವವಾದದ ವಿಷಯಗಳನ್ನು ಒಳಹೊಕ್ಕು ವಿಚಾರಮಾಡಿದೆ; ತಂಡದ ಮೂಲ ದೂರದರ್ಶನ ಪ್ರದರ್ಶನ ಕಾರ್ಯಕ್ರಮವಾದ ಮಾಂಟಿ ಪೈಥಾನ್‌'ಸ್‌ ಫ್ಲೈಯಿಂಗ್‌ ಸರ್ಕಸ್‌‌‌‌ ನಿಂದ ಮೊದಲ್ಗೊಂಡು 1983ರಲ್ಲಿ ಬಂದ ತಂಡದ ಚಲನಚಿತ್ರವಾದ ಮಾಂಟಿ ಪೈಥಾನ್‌'ಸ್‌ ದಿ ಮೀನಿಂಗ್‌ ಆಫ್‌ ಲೈಫ್‌‌‌ ವರೆಗಿನ ಕೃತಿಗಳಲ್ಲಿ ಕಂಡುಬರುವ ಅನೇಕ ರೇಖಾಚಿತ್ರಗಳು ಇದಕ್ಕೆ ಸಾಕ್ಷಿಯಾಗಿವೆ.[೭೩] ಒಂದು ಅಸ್ತಿತ್ವವಾದದ ಮನೋಭಾವವನ್ನು ಸೂಚಿಸಬಲ್ಲ ಅನೇಕ ವಿಶೇಷಣಗಳ (ಮೇಲೆ ನೀಡಲಾಗಿರುವ ಪರಿಚಯದಲ್ಲಿ ಕೆಲವನ್ನು ಪಟ್ಟಿಮಾಡಲಾಗಿದೆ) ಪೈಕಿ, ಗುಂಪಿನಿಂದ ಹೆಚ್ಚಿನಂಶ ಬಳಸಲ್ಪಟ್ಟಿರುವ ಒಂದು ವಿಶೇಷಣವೆಂದರೆ ಅಸಂಗತದ್ದು. ಅಸ್ತಿತ್ವವಾದದ ವಿವಾದಾಂಶಗಳ ಕುರಿತು ಅವಲೋಕನವನ್ನು ಒಳಗೊಂಡಿರುವ ಕೆಲವೊಂದು ಸಮಕಾಲೀನ ಚಲನಚಿತ್ರಗಳಲ್ಲಿ ಫೈಟ್‌ ಕ್ಲಬ್‌ , ವಾಕಿಂಗ್‌ ಲೈಫ್‌ , ಹಾಗೂ ಆರ್ಡಿನರಿ ಪೀಪಲ್‌ [೭೪] ಸೇರಿವೆ. ಇದೇ ರೀತಿಯಲ್ಲಿ 20ನೇ ಶತಮಾನದಾದ್ಯಂತ ಬಂದ ಕೆಲವೊಂದು ಚಲನಚಿತ್ರಗಳೂ ಸಹ ಅಸ್ತಿತ್ವವಾದದ ಗುಣಲಕ್ಷಣಗಳನ್ನು ಹೊಂದಿವೆ. ಅವುಗಳೆಂದರೆ: ದಿ ಸೆವೆನ್ತ್‌ ಸೀಲ್‌ , ಇಕಿರು , ಟ್ಯಾಕ್ಸಿ ಡ್ರೈವರ್‌ , ಹೈ ನೂನ್‌ , ಈಸಿ ರೈಡರ್‌ , ಒನ್‌ ಫ್ಲ್ಯೂ ಓವರ್ ದಿ ಕಕೂ'ಸ್‌ ನೆಸ್ಟ್‌ , ಎ ಕ್ಲಾಕ್‌ವರ್ಕ್‌ ಆರೆಂಜ್‌ , ಅಪೋಕ್ಯಾಲಿಪ್ಸ್‌ ನೌ , ಬ್ಯಾಡ್‌ಲ್ಯಾಂಡ್ಸ್‌ , ಮತ್ತು ಬ್ಲೇಡ್‌ ರನ್ನರ್‌ .[೭೫] ತಮ್ಮ ಅಸ್ತಿತ್ವವಾದಿ ಚಲನಚಿತ್ರಗಳಿಂದ ಚಿರಪರಿಚಿತರಾದ ಗಮನಾರ್ಹ ನಿರ್ದೇಶಕರಲ್ಲಿ ಇವರೆಲ್ಲ ಸೇರಿದ್ದಾರೆ: ಇಂಗರ್‌ ಬರ್ಗ್‌ಮನ್‌, ಫ್ರಾಂಕ್ವಿಸ್‌ ಟ್ರಫೌಲ್ಟ್‌, ಜೀನ್‌-ಲ್ಯುಕ್‌ ಗೊಡಾರ್ಡ್‌, ಮೈಕೆಲ್ಯಾಂಜೆಲೊ ಆಂಟೋನಿಯಾನಿ, ಅಕಿರಾ ಕುರೊಸಾವಾ, ಸ್ಟಾನ್ಲೆ ಕುಬ್ರಿಕ್‌, ಆಂಡ್ರೀ ಟಾರ್ಕೋವ್ಸ್ಕಿ, ಹಿಡಿಯಾಕಿ ಆನ್ನೋ ಮತ್ತು ವೂಡಿ ಅಲೆನ್‌‌.[೭೬] ಚಾರ್ಲೀ ಕೌಫ್‌ಮನ್‌‌‌ಸಿನೆಕ್‌ಡಕಿ, ನ್ಯೂಯಾರ್ಕ್‌ ಚಿತ್ರವು ಅದರ ಪ್ರತಿಪಾದಕ ನಾಯಕನು ಜೀವನದ ಕೊನೆಗಾಲವನ್ನು ಸಮೀಪಿಸಿದಾಗ ಅಸ್ತಿತ್ವವಾದದ ಅರ್ಥವನ್ನು ಕಂಡುಕೊಳ್ಳುವ ಬಯಕೆಯನ್ನು ವ್ಯಕ್ತಪಡಿಸುವುದನ್ನು ಚಿತ್ರಿಸುತ್ತದೆ.[೭೭]

ಸಾಹಿತ್ಯ[ಬದಲಾಯಿಸಿ]

ಅಸ್ತಿತ್ವವಾದಿ ಪರಿದೃಶ್ಯ ಚಿತ್ರಗಳು ಸಾಹಿತ್ಯದಲ್ಲೂ ಸಹ ವೈವಿಧ್ಯಮಯ ಮಟ್ಟಗಳಲ್ಲಿ ಕಂಡುಬರುತ್ತದೆ. 1938ರಲ್ಲಿ ಬಂದ ಜೀನ್‌-ಪಾಲ್‌ ಸಾರ್ತ್ರೆಯ ನಾಸಿಯಾ [೭೮] ಎಂಬ ಕಾದಂಬರಿಯು "ಅಸ್ತಿತ್ವವಾದದ ಪರಿಕಲ್ಪನೆಗಳಲ್ಲಿ ಮುಳುಗಿಸಲ್ಪಟ್ಟಿತ್ತು", ಮತ್ತು ಇದು ಅವನ ತತ್ತ್ವಚಿಂತನೆಯ ಮನೋಭಾವವನ್ನು ಗ್ರಹಿಸುವಲ್ಲಿನ ಒಂದು ಸುಲಭಲಭ್ಯ ಮಾರ್ಗವೆಂದು ಪರಿಗಣಿಸಲ್ಪಟ್ಟಿದೆ.[೭೯] 1970ರಿಂದ ಈಚೆಗಿನ ಕಲೆ, ಚಲನಚಿತ್ರ ಮತ್ತು ಸಾಹಿತ್ಯದಲ್ಲಿನ ಹೆಚ್ಚಿನ ಸಾಂಸ್ಕೃತಿಕ ಚಟುವಟಿಕೆಯು ಆಧುನಿಕದ ಸಿದ್ಧಾಂತದ ನಂತರದ ಮತ್ತು ಅಸ್ತಿತ್ವವಾದದ ಅಂಶಗಳನ್ನು ಒಳಗೊಳ್ಳುತ್ತದೆ. ಫಿಲಿಪ್‌ K. ಡಿಕ್ ಎಂಬಾತನ ಡೂ ಆಂಡ್ರಾಯ್ಡ್ಸ್‌ ಡ್ರೀಮ್‌ ಆಫ್‌ ಇಲೆಕ್ಟ್ರಿಕ್‌ ಷೀಪ್‌? ಎಂಬ ಪುಸ್ತಕ (1968) (ಈಗ ಅದು ಬ್ಲೇಡ್‌ ರನ್ನರ್‌ ಎಂಬ ಹೆಸರಿನಿಂದ ಮರುಪ್ರಕಟಗೊಂಡಿದೆ), ಮೈಕೇಲ್‌ ಝೈಮ್‌ಜಿಕ್‌ ಎಂಬಾತನ ...Toilet: The Novel , ಹಾಗೂ ಚಕ್‌ ಪಲಾಹ್ನಿಯಕ್‌ ಎಂಬಾತನ ಫೈಟ್‌ ಕ್ಲಬ್‌ ಪುಸ್ತಕಗಳು ಅಸ್ತಿತ್ವವಾದದ ಬಲವಾದ ವಿಷಯಗಳನ್ನು ಸಮಾನಕಾಲಿಕವಾಗಿ ಎತ್ತಿಹಿಡಿಯುವುದರ ಜೊತೆಗೇ, ವಾಸ್ತವತೆ ಹಾಗೂ ಕಾಣಿಸಿಕೊಳ್ಳುವಿಕೆಗಳ ನಡುವಿನ ಗೆರೆಯನ್ನು ತಪ್ಪಾಗಿ ನಿರೂಪಿಸಿವೆ. ದಾಸ್ತೋವ್ಸ್ಕಿ, ಫೌಕಾಲ್ಟ್‌, ಕಾಫ್ಕಾ, ನೀಟ್ಜ್‌‌ಸ್ಚೆ, ಹರ್ಬರ್ಟ್‌ ಮಾರ್ಕ್ಯೂಸ್‌, ಗಿಲ್ಲೆಸ್‌ ಡೆಲ್ಯೂಜ್‌, ಮತ್ತು ಎಡ್ವರ್ಡ್‌ ವಾನ್‌ ಹಾರ್ಟ್‌ಮನ್‌‌‌ರಂಥ ಚಿಂತಕರಿಂದ ಬಂದಿರುವ ಪರಿಕಲ್ಪನೆಗಳು ಕೆಲವೊಂದು ಕಲಾವಿದರ ಕೃತಿಗಳನ್ನು ಒಳವ್ಯಾಪಿಸಿವೆ. ಅಂಥ ಕಲಾವಿದರೆಂದರೆ: ಚಕ್‌ ಪಲಾಹ್ನಿಯಕ್‌, ಝೈಮ್‌ಜಿಕ್‌, ಡೇವಿಡ್‌ ಲಿಂಚ್‌, ಕ್ರಿಸ್ಪಿನ್‌ ಗ್ಲೋವರ್‌‌, ಮತ್ತು ಚಾರ್ಲ್ಸ್‌‌ ಬುಕೋವ್ಸ್ಕಿ; ಅಷ್ಟೇ ಅಲ್ಲ, ಅರೋಚಕತೆ ಹಾಗೂ ಸೌಂದರ್ಯದ ನಡುವಿನ ಒಂದು ಸೂಕ್ಷ್ಮ ಸಮತೋಲನವನ್ನು ಇವರ ಕೃತಿಗಳಲ್ಲಿ ಓರ್ವರು ಅನೇಕವೇಳೆ ಕಾಣಲು ಸಾಧ್ಯವಿದೆ.

ರಂಗಭೂಮಿ[ಬದಲಾಯಿಸಿ]

1944ರಲ್ಲಿ ಜೀನ್‌-ಪಾಲ್‌ ಸಾರ್ತ್ರೆಯು ನೋ ಎಗ್ಸಿಟ್‌ ಎಂಬ ನಾಟಕವನ್ನು ಬರೆದ; ಇದೊಂದು ಅಸ್ತಿತ್ವವಾದಿ ನಾಟಕವಾಗಿದ್ದು, ಹ್ಯೂಸ್‌ ಕ್ಲಾಸ್‌ (ಇದರರ್ಥ: ಇನ್‌ ಕ್ಯಾಮೆರಾ ಅಥವಾ "ಮುಚ್ಚಿದ ಬಾಗಿಲುಗಳ ಹಿಂದೆ" ಎಂದಾಗುತ್ತದೆ) ಎಂಬ ಹೆಸರಿನಲ್ಲಿ ಫ್ರೆಂಚ್‌ನಲ್ಲಿ ಮೂಲತಃ ಪ್ರಕಟಿಸಲ್ಪಟ್ಟಿತ್ತು ಮತ್ತು ಇದು "ಹೆಲ್‌ ಈಸ್‌ ಅದರ್‌ ಪೀಪಲ್‌" ಎಂಬ ಜನಪ್ರಿಯ ಉಕ್ತಿಯ ಮೂಲವಾಗಿದೆ. (ಫ್ರೆಂಚ್ ಭಾಷೆಯಲ್ಲಿ‌, "ಎಲ್‌'ಎನ್‌ಫರ್‌, ಸಿ'ಎಸ್ಟ್‌ ಲೆಸ್‌ ಆಟ್ರೆಸ್‌"). ಕೋಣೆಯೊಂದರೊಳಗೆ ಅಂಗಸೇವಕನೊಬ್ಬ ಓರ್ವ ಮನುಷ್ಯನನ್ನು ಕರೆದುಕೊಂಡು ಹೋಗುವುದರೊಂದಿಗೆ ನಾಟಕವು ಪ್ರಾರಂಭವಾಗುತ್ತದೆ; ಆ ಕೋಣೆಯು ನರಕದಲ್ಲಿದೆ ಎಂಬುದನ್ನು ಓದುಗರು/ಪ್ರೇಕ್ಷಕರು ಕೆಲವೇ ಕ್ಷಣಗಳಲ್ಲಿ ಮನಗಾಣುತ್ತಾರೆ. ಅಂತಿಮವಾಗಿ ಅವನೊಂದಿಗೆ ಇಬ್ಬರು ಮಹಿಳೆಯರು ಸೇರಿಕೊಳ್ಳುತ್ತಾರೆ. ಅವರ ಪ್ರವೇಶವಾದ ನಂತರ, ಅಂಗಸೇವಕನು ಅಲ್ಲಿಂದ ಹೊರಡುತ್ತಾನೆ ಮತ್ತು ಬಾಗಿಲನ್ನು ಮುಚ್ಚಿ ಬೀಗಹಾಕಲಾಗುತ್ತದೆ. ತಾವು ಚಿತ್ರಹಿಂಸೆಗೆ ಒಳಗಾಗಲಿದ್ದೇವೆ ಎಂದು ಆ ಮೂವರೂ ನಿರೀಕ್ಷಿಸುತ್ತಾರೆ, ಆದರೆ ಯಾವುದೇ ಚಿತ್ರಹಿಂಸಕನು ಅಲ್ಲಿಗೆ ಬರುವುದಿಲ್ಲ. ಅದರ ಬದಲಿಗೆ, ತಾವು ಒಬ್ಬರಿಗೊಬ್ಬರು ಚಿತ್ರಹಿಂಸೆಯನ್ನು ನೀಡಿಕೊಳ್ಳಲೆಂದು ತಮ್ಮನ್ನು ಇಲ್ಲಿಟ್ಟಿರುವುದು ಎಂಬುದನ್ನು ಅವರು ಮನಗಾಣುತ್ತಾರೆ; ಇತರರ ಪಾಪಗಳು, ಬಯಕೆಗಳು, ಹಾಗೂ ಅಹಿತಕರ ನೆನಪುಗಳನ್ನು ಒಳಹೊಕ್ಕು ನೋಡುವ ಮೂಲಕ ಈ ಚಿತ್ರಹಿಂಸೆಯನ್ನು ಅವರು ಪರಿಣಾಮಕಾರಿಯಾಗಿ ಮಾಡುತ್ತಾರೆ. ‌ಅಸಂಗತ ನಾಟಕಶೈಲಿಯಲ್ಲಿ, ಅದರಲ್ಲೂ ಗಮನಾರ್ಹವಾಗಿ ಸ್ಯಾಮುಯೆಲ್‌ ಬೆಕೆಟ್‌‌‌ವೆಯ್ಟಿಂಗ್‌ ಫಾರ್‌ ಗೊಡಾಟ್‌ ನಾಟಕದಲ್ಲಿ ಅಸ್ತಿತ್ವವಾದಿ ವಿಷಯಗಳು ಪ್ರದರ್ಶಿಸಲ್ಪಟ್ಟಿದ್ದು, ಎಂದಿಗೂ ಆಗಮನಿಸದ ಗೊಡಾಟ್‌ ಎಂಬ ಹೆಸರಿನ ಯಾರೋ ಒಬ್ಬನಿಗಾಗಿ (ಅಥವಾ ಯಾವುದೋ ಒಂದಕ್ಕಾಗಿ) ಇಬ್ಬರು ವ್ಯಕ್ತಿಗಳು ನಿರೀಕ್ಷಿಸುತ್ತಾ ಕಾಯುತ್ತಿರುವಾಗಲೇ ಅವರು ಸ್ವತಃ ಗಮನ ಬದಲಾಯಿಸುತ್ತಾರೆ. ಗೊಡಾಟ್‌ ತಮಗೆ ಓರ್ವ ಪರಿಚಯಸ್ಥನಾಗಿರುವವನಂತೆ ಅವರಿಬ್ಬರೂ ಸಮರ್ಥಿಸುತ್ತಾರಾದರೂ, ವಾಸ್ತವದಲ್ಲಿ ಅವನ ಬಗ್ಗೆ ಅವರಿಗೆ ಗೊತ್ತಿರುವುದಿಲ್ಲ; ಒಂದು ವೇಳೆ ಅವನನ್ನು ಕಂಡರೂ ಸಹ, ಅವನನ್ನು ತಾವು ಗುರುತಿಸಲಾಗುವುದಿಲ್ಲ ಎಂಬುದನ್ನು ಅವರಿಗೆ ಗೊತ್ತಿರುತ್ತದೆ. ಗೊಡಾಟ್‌ ಎಂದರೆ ಯಾರು ಅಥವಾ ಹಾಗೆಂದರೆ ಏನು ಎಂದು ಸ್ಯಾಮುಯೆಲ್‌ ಬೆಕೆಟ್‌ನನ್ನು ಒಮ್ಮೆ ಕೇಳಿದಾಗ, "ಒಂದು ವೇಳೆ ನನಗೆ ಗೊತ್ತಿದ್ದಿದ್ದರೆ, ಹಾಗೆಂದು ನಾಟಕದಲ್ಲಿ ಹೇಳಿರುತ್ತಿದ್ದೆ" ಎಂದು ಉತ್ತರಿಸಿದ. ತಮ್ಮನ್ನು ಕೆಲಸದಲ್ಲಿ ತೊಡಗಿಸಿಕೊಳ್ಳಲು ಅವರು ತಿನ್ನುತ್ತಾರೆ, ಮಲಗುತ್ತಾರೆ, ಮಾತನಾಡುತ್ತಾರೆ, ವಾದಿಸುತ್ತಾರೆ, ಹಾಡುಹೇಳುತ್ತಾರೆ, ಆಟಗಳನ್ನಾಡುತ್ತಾರೆ, ವ್ಯಾಯಾಮ ಮಾಡುತ್ತಾರೆ, ಟೋಪಿಗಳನ್ನು ಅದಲು-ಬದಲು ಮಾಡಿಕೊಳ್ಳುತ್ತಾರೆ, ಮತ್ತು ಆತ್ಮಹತ್ಯೆಯ ಕುರಿತು ಆಲೋಚಿಸುತ್ತಾರೆ- ಒಟ್ಟಿನಲ್ಲಿ, ದಿಕ್ಕೆಟ್ಟ ಸ್ಥಿತಿಯಲ್ಲಿರುವಾಗ ಭಯಾನಕ ಮೌನವನ್ನು ಹಿಡಿದಿಡಲು ಏನೆಲ್ಲಾ ಮಾಡಬಹುದೋ ಅವೆಲ್ಲವನ್ನೂ ಮಾಡುತ್ತಾರೆ".[೮೦] ನಾಟಕವು "ಮೂಲಮಾದರಿಯ ಹಲವಾರು ಸ್ವರೂಪಗಳು ಮತ್ತು ಸನ್ನಿವೇಶಗಳನ್ನು ಬಳಸಿಕೊಳ್ಳುತ್ತದೆ; ಅವೆಲ್ಲವೂ ಹಾಸ್ಯ ಮತ್ತು ಕರುಣರಸಕ್ಕೆ ತಮ್ಮದೇ ಆದ ಕಾಣಿಕೆಯನ್ನು ನೀಡುತ್ತವೆ"[೮೧] ಭೂಮಿಯ ಮೇಲಿನ ಮನುಷ್ಯನ ಅನುಭವದೆಡೆಗಿನ ಒಂದು ವರ್ತನೆಯನ್ನೂ ಸಹ ನಾಟಕವು ಸಚಿತ್ರವಾಗಿ ವಿಶದೀಕರಿಸುತ್ತದೆ: ಅಸಂಗತವಾದಿಯ ಮನಸ್ಸು ಹಾಗೂ ಕಲೆಯಲ್ಲಿ ಮಾತ್ರವೇ ಸಮನ್ವಯಗೊಳಿಸಲ್ಪಡಬಲ್ಲ ಮಾನವ ಅನುಭವದ ತೀಕ್ಷ್ಣತೆ, ದಬ್ಬಾಳಿಕೆ, ನಿಕಟಸ್ನೇಹ, ಭರವಸೆ, ಭ್ರಷ್ಟಾಚಾರ ಹಾಗೂ ಅಸಂಗತವಾದಿಯ ಮನಸ್ಸು ಹಾಗೂ ದಿಗ್ಭ್ರಾಂತಿ ಮೊದಲಾದವುಗಳು ಇಲ್ಲಿ ಅನಾವರಣಗೊಳ್ಳುತ್ತವೆ. ಸಾವು, ಮಾನವ ಅಸ್ತಿತ್ವದ ಅರ್ಥ ಮತ್ತು ಮಾನವ ಅಸ್ತಿತ್ವದಲ್ಲಿ ದೇವರ ಸ್ಥಾನದಂಥ ಪ್ರಶ್ನೆಗಳನ್ನು ಈ ನಾಟಕವು ಅವಲೋಕಿಸುತ್ತದೆ. ಟಾಮ್‌ ಸ್ಟಾಪ್ಪರ್ಡ್ ಬರೆದ ರೋಸೆನ್‌ಕ್ರಾಂಟ್ಜ್‌ & ಗಿಲ್ಡೆನ್‌ಸ್ಟರ್ನ್‌ ಆರ್‌ ಡೆಡ್‌ ಎಂಬುದು ಒಂದು ಅಸಂಗತವಾದಿ ದುರಂತಹರ್ಷನಾಟಕವಾಗಿದ್ದು, 1966ರಲ್ಲಿ ಎಡಿನ್‌ಬರ್ಗ್‌ ಫೆಸ್ಟಿವಲ್‌ ಫ್ರಿಂಜ್‌‌‌ನಲ್ಲಿ ಅದು ಮೊದಲ ಬಾರಿಗೆ ಪ್ರದರ್ಶಿಸಲ್ಪಟ್ಟಿತು.[೮೨] ಷೇಕ್ಸ್‌ಪಿಯರ್‌ನ ಹ್ಯಾಮ್ಲೆಟ್‌‌ ನಾಟಕಕ್ಕೆ ಸೇರಿರುವ ಎರಡು ಕಿರು ಪಾತ್ರಗಳ ಸಾಹಸಕಾರ್ಯಗಳನ್ನು ಸದರಿ ನಾಟಕವು ವಿಸ್ತರಿಸುತ್ತದೆ. ಒಂದು ಏಕಪಾತ್ರದ ಎರಡು ಅರ್ಧಭಾಗಗಳಾಗಿರುವ ರೀತಿಯಲ್ಲಿ ಹೆಚ್ಚೂಕಮ್ಮಿ ಕಾಣಿಸಿಕೊಳ್ಳುವ ಎರಡು ಪ್ರಧಾನ ಪಾತ್ರಗಳ ಹಾಜರಿಗೆ ಸಂಬಂಧಿಸಿದಂತೆ, ಸ್ಯಾಮುಯೆಲ್‌ ಬೆಕೆಟ್‌‌‌‌ವೆಯ್ಟಿಂಗ್‌ ಫಾರ್‌ ಗೊಡಾಟ್‌ ನಾಟಕಕ್ಕೂ ಈ ನಾಟಕಕ್ಕೂ ಹೋಲಿಕೆಗಳು ಇರುವುದು ಕಂಡುಬರುತ್ತದೆ. ಕಥಾವಸ್ತುವಿನ ಅನೇಕ ಲಕ್ಷಣಗಳು ಕೂಡಾ ಇದೇ ಹೋಲಿಕೆಯನ್ನು ಹೊಂದಿವೆ: ಪ್ರಶ್ನೆಗಳನ್ನು ಪ್ರಯೋಗಿಸುವ, ಇತರ ಪಾತ್ರಗಳನ್ನು ನಿರ್ವಹಿಸುವ ಹಾಗೂ ಪರಸ್ಪರರಿಗೆ ಅಡ್ಡಿಮಾಡುವ ಮೂಲಕ ಅಥವಾ ಬಹಳ ಕಾಲದವರೆಗೆ ಮೌನವಾಗಿ ಉಳಿದುಬಿಡುವ ಮೂಲಕ ಪಾತ್ರಗಳು ಸಮಯವನ್ನು ಕಳೆಯುತ್ತವೆ. ಎರಡು ಪಾತ್ರಗಳನ್ನು, ಅವುಗಳ ಅರ್ಥೈಸುವಿಕೆಯಿಂದ ಆಚೆಗಿರುವ ಒಂದು ಪ್ರಪಂಚದಲ್ಲಿನ ಇಬ್ಬರು ವಿದೂಷಕರು ಅಥವಾ ಮೂರ್ಖರು ಎಂಬಂತೆ ನಿರೂಪಿಸಲಾಗಿದೆ. ಸೂಚ್ಯಾರ್ಥಗಳನ್ನು ಗ್ರಹಿಸಲು ಆಗದಿದ್ದಾಗ ಅವು ತತ್ತ್ವಚಿಂತನೆಯ ವಾದಗಳ ಮೂಲಕ ಅವು ಮುಗ್ಗರಿಸುತ್ತಾ ಸಾಗುತ್ತವೆ, ಮತ್ತು ಪ್ರಪಂಚದ ವಿವೇಚನಾರಹಿತತೆ ಹಾಗೂ ಗೊತ್ತುಗುರಿಯಿಲ್ಲದ ಅವ್ಯವಸ್ಥತೆಯ ಕುರಿತಾಗಿ ಆಲೋಚಿಸತೊಡಗುತ್ತವೆ. ಜೀನ್‌ ಅನೌವಿಲ್ಹ್ ಬರೆದ ಆಂಟಿಗಾನ್‌ ನಾಟಕವೂ ಸಹ ಅಸ್ತಿತ್ವವಾದಿ ಪರಿಕಲ್ಪನೆಗಳನ್ನು ಆಧರಿಸಿದ ವಾದಗಳನ್ನು ಸಾದರಪಡಿಸುತ್ತದೆ.[೮೩] ಇದೊಂದು ದುರಂತ ನಾಟಕವಾಗಿದ್ದು, ಗ್ರೀಕ್‌ ಪುರಾಣಕಥೆ ಹಾಗೂ 5ನೇ ಶತಮಾನದ B.Cಯಿಂದಲೂ ಅಸ್ತಿತ್ವದಲ್ಲಿದ್ದ ಇದೇ ಹೆಸರಿನ ನಾಟಕದಿಂದ (ಸೊಫೊಕ್ಲಿಸ್‌ ಬರೆದ ಆಂಟಿಗಾನ್ ಎಂಬ ನಾಟಕ) ಪ್ರೇರಣೆಯನ್ನು ಪಡೆದಿದೆ. ಸರಿಸುಮಾರಾಗಿ "Ante-GŌN" ಎಂಬ ರೀತಿಯಲ್ಲಿರುವ ಇದರ ಮೂಲ ಫ್ರೆಂಚ್‌ ಸ್ವರೂಪದಲ್ಲಿ ಉಚ್ಚರಣೆಗೆ ಒಳಗಾಗುವ ಮೂಲಕ, ಇಂಗ್ಲಿಷ್‌ನಲ್ಲಿ ಈ ನಾಟಕವು ಅನೇಕವೇಳೆ ತನ್ನ ಪೂರ್ವಗಾಮಿಯಿಂದ ಪ್ರತ್ಯೇಕಿಸಲ್ಪಟ್ಟಿದೆ. ಫ್ರಾನ್ಸ್‌ನ ನಾಜಿ ಸ್ವಾಧೀನದ ಅವಧಿಯಲ್ಲಿ, 1944ರ ಫೆಬ್ರುವರಿ 6ರಂದು ಪ್ಯಾರಿಸ್‌ನಲ್ಲಿ ಈ ನಾಟಕವು ಮೊದಲಬಾರಿಗೆ ಪ್ರದರ್ಶಿಸಲ್ಪಟ್ಟಿತು. ನಾಜಿ ಕತ್ತರಿ ಪ್ರಯೋಗದ ಅಡಿಯಲ್ಲಿ ನಿರ್ಮಿಸಲ್ಪಟ್ಟ ಈ ನಾಟಕವು, ಅಧಿಕಾರದ ತಿರಸ್ಕರಿಸುವಿಕೆ (ಆಂಟಿಗಾನ್‌ಳಿಂದ ನಿರೂಪಿಸಲ್ಪಡುತ್ತದೆ‌) ಹಾಗೂ ಅದರ ಅಂಗೀಕರಿಸುವಿಕೆಗೆ (ಕ್ರಿಯಾನ್‌ನಿಂದ ನಿರೂಪಿಸಲ್ಪಡುತ್ತದೆ) ಸಂಬಂಧಿಸಿದಂತೆ ಉದ್ದೇಶಪೂರ್ವಕವಾಗಿ ದ್ವಂದ್ವಾರ್ಥವನ್ನು ಒಳಗೊಂಡಿದೆ. ಫ್ರೆಂಚ್‌ ಪ್ರತಿರೋಧ ಚಳವಳಿ ಹಾಗೂ ನಾಜಿ ಸ್ವಾಧೀನದ ಸಾದೃಶ್ಯ ವಸ್ತು-ವಿಷಯಗಳನ್ನು ನಾಟಕದಲ್ಲಿ ಎಳೆತರಲಾಗಿದೆ. ನಿರಾಶೆಯಾಗುವಷ್ಟು ಅರ್ಥರಹಿತವಾಗಿದೆ ಎಂಬ ರೀತಿಯಲ್ಲಿ ಜೀವನವನ್ನು ಆಂಟಿಗಾನ್‌ ತಿರಸ್ಕರಿಸುತ್ತಾಳಾದರೂ, ಸಮರ್ಥಿಸುವ ರೀತಿಯಲ್ಲಿ ಒಂದು ಉದಾತ್ತವಾದ ಸಾವನ್ನು ಆರಿಸುವುದಿಲ್ಲ. ಅಧಿಕಾರ, ವಿಧಿ, ಮತ್ತು ಆಯ್ಕೆಯ ಸ್ವರೂಪಕ್ಕೆ ಸಂಬಂಧಿಸಿದಂತಿರುವ ಉದ್ದುದ್ದದ ಸಂಭಾಷಣೆಯು ನಾಟಕದ ತಿರುಳಾಗಿದ್ದು, ಇಂಥ ಒಂದು ಸಂದರ್ಭದಲ್ಲಿ ಆಂಟಿಗಾನ್‌ ತನ್ನ ಕುರಿತು "....ಒಂದು ಏಕರೀತಿಯ ಸಂತೋಷದ ಭರವಸೆಯೊಂದಿಗೆ ತಾನು ಅಸಹ್ಯಪಟ್ಟುಕೊಂಡಿರುವುದಾಗಿ" ತಿಳಿಸಿ, ಒಂದು ಸುಮಾರಾದ ಅಸ್ತಿತ್ವದಲ್ಲಿ ಜೀವಿಸುವುದಕ್ಕಿಂತ ತಾನು ಸಾಯಲು ಬಯಸುವುದಾಗಿ ಹೇಳುತ್ತಾಳೆ. ಮಾರ್ಟಿನ್‌‌ ಎಸ್ಲಿನ್‌ ಎಂಬ ವಿಮರ್ಶಕನು ಥಿಯೇಟರ್‌ ಆಫ್‌ ಅಬ್ಸರ್ಡ್‌‌ ಎಂಬ ತನ್ನ ಪುಸ್ತಕದಲ್ಲಿ ಸ್ಯಾಮುಯೆಲ್‌ ಬೆಕೆಟ್‌, ಯೀಜೀನ್‌ ಲೊನೆಸ್ಕೊ, ಜೀನ್‌ ಜೆನೆಟ್‌, ಹಾಗೂ ಅರ್ಥರ್‌ ಅಡಮೊವ್‌‌‌‌ರಂಥ ಅನೇಕ ಸಮಕಾಲೀನ ನಾಟಕಕಾರರು ತಮ್ಮ ನಾಟಕಗಳಲ್ಲಿ, ವಾಸ್ತವಿಕ ಅರ್ಥವಿಲ್ಲದೆ ಖಾಲಿಯಾಗಿರುವ ಬ್ರಹ್ಮಾಂಡವೊಂದರಲ್ಲಿ ನಾವೆಲ್ಲಾ ವಿರಳವಾಗಿ ತುಂಬಿಕೊಂಡಿರುವ ಅಸಂಗತ ಜೀವಿಗಳಾಗಿದ್ದೇವೆ ಎಂಬ ಅಸ್ತಿತ್ವವಾದದ ನಂಬಿಕೆಯನ್ನು ಹೇಗೆ ಹೆಣೆದರು ಎಂಬುದನ್ನು ಎತ್ತಿತೋರಿಸಿದ್ದಾನೆ. ಸಾರ್ತ್ರೆ ಹಾಗೂ ಕ್ಯಾಮಸ್‌ ಬರೆದಿರುವ ನಾಟಕಗಳು ಮಾಡಿದುದಕ್ಕಿಂತ ಉತ್ತಮವಾಗಿ ಇವರ ಪೈಕಿಯ ಅನೇಕ ನಾಟಕಕಾರರು ತತ್ತ್ವಶಾಸ್ತ್ರವನ್ನು ನಿರೂಪಿಸಿದರು ಎಂಬುದನ್ನು ಎಸ್ಲಿನ್‌ ಎಲ್ಲರ ಗಮನಕ್ಕೆ ತಂದಿದ್ದಾನೆ. ತರುವಾಯದಲ್ಲಿ "ಅಸಂಗತವಾದಿ" ಎಂಬ ಹಣೆಪಟ್ಟಿಗೆ (ಎಸ್ಲಿನ್‌ನ ಪುಸ್ತಕವನ್ನು ಆಧರಿಸಿ) ಒಳಗಾದ ಇಂಥ ಬಹುಪಾಲು ನಾಟಕಕಾರರು, ಅಸ್ತಿತ್ವವಾದದೊಂದಿಗೆ ಗುರುತಿಸಿಕೊಳ್ಳಲು ನಿರಾಕರಿಸಿ, ಅನೇಕವೇಳೆ ವಿಶ್ವಾಸಾರ್ಹವಾದ ರೀತಿಯಲ್ಲಿ ತತ್ತ್ವಚಿಂತನೆಯ-ವಿರೋಧಿಗಳಾಗಿದ್ದರೂ ಸಹ (ಉದಾಹರಣೆಗೆ, ಅಸ್ತಿತ್ವವಾದಕ್ಕಿಂತ ಹೆಚ್ಚಾಗಿ 'ಮಿಥ್ಯಾ ತತ್ತ್ವಶಾಸ್ತ್ರದೊಂದಿಗೆ ಅಥವಾ ಅತಿ ವಾಸ್ತವಿಕತಾ ವಾದದೊಂದಿಗೆ ತನ್ನನ್ನು ಹೆಚ್ಚು ಗುರುತಿಸಲಾಗಿದೆ ಎಂದು ಇಯೊನೆಸ್ಕೊ ಅನೇಕವೇಳೆ ಪ್ರತಿಪಾದಿಸಿದ್ದಾನೆ), ಎಸ್ಲಿನ್‌ನ ಅವಲೋಕನವನ್ನು ಆಧರಿಸಿ ನಾಟಕಕಾರರನ್ನು ಅನೇಕವೇಳೆ ಅಸ್ತಿತ್ವವಾದದೊಂದಿಗೆ ಸಂಬಂಧಕಲ್ಪಿಸಲಾಗಿದೆ.[೮೪]

ಅಸ್ತಿತ್ವವಾದ ಹಾಗೂ ಕ್ರಿಶ್ಚಿಯನ್‌ ಧರ್ಮ[ಬದಲಾಯಿಸಿ]

ಕ್ರಿಸ್ತನ ಬೋಧನೆಗಳು ಒಂದು ಪರೋಕ್ಷ ಶೈಲಿಯನ್ನು ಹೊಂದಿದ್ದು, ಓರ್ವ ಏಕವ್ಯಕ್ತಿಯು ತನ್ನದೇ ಆದ ಮಾರ್ಗದಲ್ಲಿ ಸತ್ಯವನ್ನು ಎದುರಿಸುವಂತಾಗಲಿ ಎಂಬ ಉದ್ದೇಶದೊಂದಿಗೆ ಅವನ ಉದ್ದೇಶಿತ ಪ್ರಧಾನಾಂಶವು ಅನೇಕವೇಳೆ ಅದರಲ್ಲಿ ಹೇಳಲ್ಪಡದೆಯೇ ಉಳಿದುಕೊಂಡಿದೆ.[೮೫] ಇದು ಅವನ ದೃಷ್ಟಾಂತಗಳಲ್ಲಿ ಸ್ಪಷ್ಟವಾಗಿದ್ದು, ಇವು ಅವನನ್ನು ಕೇಳಿದ ಒಂದು ಪ್ರಶ್ನೆಗೆ ಅವನು ನೀಡಿದ ಪ್ರತಿಕ್ರಿಯೆಯ ಒಂದು ಸ್ವರೂಪವಾಗಿದೆ. ದೃಷ್ಟಾಂತವನ್ನು ಹೇಳಿದ ನಂತರ, ಪ್ರಶ್ನೆಯನ್ನು ಅವನು ವ್ಯಕ್ತಿಗೇ ತಿರುಗಿಸುತ್ತಾನೆ. ಬೈಬಲ್‌ನ ಒಂದು ಅಸ್ತಿತ್ವವಾದದ ವಾಚನ ಸಾಮಗ್ರಿಯು ಬಯಸುವ ಪ್ರಕಾರ, ಪದಗಳನ್ನು ಸಂಭವನೀಯ ಘಟನೆಗಳ ಒಂದು ಸ್ಮರಿಸಿಕೊಳ್ಳುವಿಕೆಯಾಗಿ ಹೆಚ್ಚಿನ ರೀತಿಯಲ್ಲಿ ಅಧ್ಯಯನ ಮಾಡುತ್ತಿರುವಂತೆ ಓರ್ವ ಅಸ್ತಿತ್ವದಲ್ಲಿರುವ ವ್ಯಕ್ತಿಯಂತೆ ಓದುಗನು ತನ್ನನ್ನು ಗುರುತಿಸಿಕೊಳ್ಳಬೇಕಿರುತ್ತದೆ. ಓದುಗನ ವ್ಯಾಪ್ತಿಗೆ ಹೊರಗಿರುವ ಮತ್ತು ಅವನಿಗೆ ಸಂಬಂಧಿಸಿರದ "ಸತ್ಯಗಳ" ಒಂದು ಸಂಕಲನದ ಕಡೆಗೆ ನೋಡುವುದಕ್ಕೆ ಇದು ವಿರುದ್ಧವಾಗಿದ್ದರೂ, ವಾಸ್ತವತೆ/ದೇವರಿನ ಒಂದು ಪ್ರಜ್ಞೆಯನ್ನು ಇದು ಬೆಳೆಸಬಹುದು.[೮೬] ಓರ್ವ ಬಾಹ್ಯ ಮಧ್ಯವರ್ತಿಯು ದೈವಾನುಶಾಸನಗಳನ್ನು ಓದುಗನ ಮೇಲೆ ಹೇರುತ್ತಿರುವನೇನೋ ಎಂಬ ಭಾವದಲ್ಲಿ ಇಂಥ ಒಬ್ಬ ಓದುಗ ಅವುಗಳನ್ನು ಅನುಸರಿಸುವುದಕ್ಕೆ ಬದ್ಧನಾಗಿರುವುದಿಲ್ಲ, ಆದರೆ ಅವು ಒಳಗಡೆಯೇ ಇವೆ ಮತ್ತು ಒಳಗಿನಿಂದಲೇ ತನಗೆ ಮಾರ್ಗದರ್ಶನ ನೀಡುತ್ತಿವೆ ಎಂಬ ರೀತಿಯಲ್ಲಿ ಅವನು ಬದ್ಧತೆಯನ್ನು ತೋರಿಸುತ್ತಾನೆ. ಕಿಯರ್‌ಕೆಗಾರ್ಡ್‌ ತಾನು ಪ್ರಶ್ನೆಯನ್ನು ಕೇಳುವಾಗ ಇದೇ ವಿಷಯವನ್ನು ಕೈಗೆತ್ತಿಕೊಳ್ಳುತ್ತಾನೆ: "ಯಾರದ್ದು ಹೆಚ್ಚು ಕಷ್ಟಕರವಾದ ಕೆಲಸ; ದೈನಂದಿನ ಜೀವನದಿಂದ ಒಂದು ಉಲ್ಕೆಯಷ್ಟು ದೂರದಲ್ಲಿದ್ದು ತೀವ್ರಾಸಕ್ತಿಯ ವಿಷಯಗಳ ಕುರಿತು ಉಪನ್ಯಾಸಗಳನ್ನು ನೀಡುವ ಬೋಧಕನದೋ- ಅಥವಾ ಅದನ್ನು ಬಳಕೆಯಲ್ಲಿ ತರಬೇಕಿರುವ ಕೇಳುಗನದೋ?"[೮೭] ಎಂಬುದು ಅವನ ಪ್ರಶ್ನೆ. ಅಸ್ತಿತ್ವವಾದದ ಒಂದು ದೃಷ್ಟಿಕೋನದಿಂದ ಹೇಳುವುದಾದರೆ, ಓರ್ವ ವ್ಯಕ್ತಿಯ ಜೀವನದಲ್ಲಿ ಬೈಬಲ್‌ ಒಂದು ವಿಧಾಯಕ ಶಕ್ತಿಯಾಗಿ ಅಥವಾ ಪರಿಣಾಮ ಬೀರುವ ಶಕ್ತಿಯಾಗಿ ಮಾರ್ಪಡುವುದಿಲ್ಲ; ಆ ವ್ಯಕ್ತಿಯು ಬೈಬಲ್‌ಗೆ ಅಂಥದೊಂದು ಅಧಿಕಾರ ನೀಡಿದಾಗ ಮಾತ್ರವೇ ಅದು ಸಾಧ್ಯ. ಮತಧರ್ಮಶಾಸ್ತ್ರದ ಮೇಲೆ, ಅದರಲ್ಲೂ ಗಮನಾರ್ಹವಾಗಿ ಆಧುನಿಕ ಯುಗದ ನಂತರದ ಕ್ರಿಶ್ಚಿಯನ್‌ ಧರ್ಮದ ಮೇಲೆ ಹಾಗೂ ನಿಕೋಲಾಯ್‌ ಬೆರ್ಡಿಯೇವ್‌, ಕಾರ್ಲ್‌ ಬಾರ್ಥ್‌, ಪಾಲ್‌ ಟಿಲ್ಲಿಚ್‌, ವಿಲ್‌ಫ್ರಿಡ್‌ ಡೆಸಾನ್‌ ಮತ್ತು ಜಾನ್‌ ಮ್ಯಾಕ್ವಾರಿಯವರಂಥ ದೇವತಾಶಾಸ್ತ್ರಜ್ಞರು ಹಾಗೂ ಧಾರ್ಮಿಕ ಚಿಂತಕರ ಮೇಲೆ ಅಸ್ತಿತ್ವವಾದವು ಒಂದು ಗಮನಾರ್ಹವಾದ ಪ್ರಭಾವವನ್ನು ಹೊಂದಿತ್ತು.

ಅಸ್ತಿತ್ವವಾದದ ಮನೋವಿಶ್ಲೇಷಣೆ ಹಾಗೂ ಮಾನಸಿಕ ಚಿಕಿತ್ಸೆ[ಬದಲಾಯಿಸಿ]

ಒಂದು ತತ್ತ್ವಶಾಸ್ತ್ರವಾಗಿ, ಅಸ್ತಿತ್ವವಾದದ ಪ್ರಮುಖ ನಿಷ್ಪನ್ನಗಳ ಪೈಕಿ ಅಸ್ತಿತ್ವವಾದದ ಮನೋವಿಜ್ಞಾನ ಹಾಗೂ ಮನೋವಿಶ್ಲೇಷಣೆಯು ಒಂದೆನಿಸಿದೆ. ಇದು ಲುಡ್ವಿಗ್‌ ಬಿನ್ಸ್‌ವ್ಯಾಂಗರ್‌‌ ಎಂಬಾತನ ಕೃತಿಯಲ್ಲಿ ಮೊದಲು ನಿರ್ದಿಷ್ಟರೂಪ ತಾಳಿತು. ಲುಡ್ವಿಗ್‌ ಬಿನ್ಸ್‌ವ್ಯಾಂಗರ್ ಓರ್ವ ಪ್ರಾಯೋಗಿಕ ಚಿಕಿತ್ಸಕನಾಗಿದ್ದು, ಫ್ರೂಡ್‌, ಎಡ್ಮಂಡ್‌ ಹಸ್ಸರ್ಲ್‌‌‌, ಹೆಡೀಗ್ಗರ್‌‌ ಹಾಗೂ ಸಾರ್ತ್ರೆ ಮೊದಲಾದವರಿಂದ ಆತ ಪ್ರಭಾವಿತನಾಗಿದ್ದ. ವಿಕ್ಟರ್‌ ಫ್ರಾಂಕ್ಲ್‌ ಎಂಬಾತ ನಂತರ ಬಂದ ಪ್ರಸಿದ್ಧ ವ್ಯಕ್ತಿಯಾಗಿದ್ದು, ಈತ ಓರ್ವ ಕಿರಿಯ ವ್ಯಕ್ತಿಯಾಗಿದ್ದಾಗ ಫ್ರೂಡ್‌ ಹಾಗೂ ಜಂಗ್‌ ಜೊತೆಯಲ್ಲಿ ಅಧ್ಯಯನ ಮಾಡಿದ್ದ. ಲೋಗೋ ಥೆರಪಿ ಎಂದು ಕರೆಯಲ್ಪಡುವ ಅವನ ಒಂದು ವಿಶಿಷ್ಟ ಚಿಕಿತ್ಸೆಯನ್ನು, ಅಸ್ತಿತ್ವವಾದದ ಚಿಕಿತ್ಸೆಯ ಒಂದು ಸ್ವರೂಪ ಎಂದು ಪರಿಗಣಿಸಬಹುದು. ಸಾಮಾಜಿಕ ಮನೋವಿಜ್ಞಾನ, ಪ್ರತ್ಯಕ್ಷಸಿದ್ಧವಾದ ವಿರೋಧಿ ಕಿರು-ಸಮಾಜಶಾಸ್ತ್ರ, ಸಾಂಕೇತಿಕ ಪರಸ್ಪರ ಪ್ರಭಾವವಾದ, ಹಾಗೂ ರಚನಾವಾದದ-ನಂತರದ ವಾದಗಳ ಮೇಲೂ ಅಸ್ತಿತ್ವವಾದಿಗಳು ಪ್ರಭಾವಬೀರಿದ್ದು, ಗೆಯೋರ್ಗ್‌ ಸಿಮ್ಮೆಲ್‌ ಹಾಗೂ ಮೈಕೆಲ್‌ ಫೌಕಾಲ್ಟ್‌‌‌‌ರಂಥ ಚಿಂತಕರ ಕೃತಿಗಳು ಇದಕ್ಕೆ ಸಾಕ್ಷಿಯಾಗಿವೆ. ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಅಸ್ತಿತ್ವವಾದದ ಮನೋವಿಜ್ಞಾನಕ್ಕೆ ಆರಂಭಿಕ ಕೊಡುಗೆಯನ್ನು ನೀಡಿದವರಲ್ಲಿ ರೊಲ್ಲೋ ಮೇ ಎಂಬಾತ ಪ್ರಮುಖನಾಗಿದ್ದು, ಈತ ಕಿಯರ್‌ಕೆಗಾರ್ಡ್‌‌‌‌ನಿಂದ ಪ್ರಭಾವಿತನಾಗಿದ್ದ. USAಯಲ್ಲಿ ಅಸ್ತಿತ್ವವಾದದ ಮನೋವಿಜ್ಞಾನದ ಕೌಶಲಗಳು ಹಾಗೂ ಸಿದ್ಧಾಂತದ ಕುರಿತಾಗಿ ಬರೆದ, ಅತ್ಯಂತ ಯಥೇಚ್ಛವಾದ ಬರಹಗಾರರ ಪೈಕಿ ಇರ್ವಿನ್‌ D. ಯಾಲಮ್‌ ಒಬ್ಬನೆನಿಸಿಕೊಂಡಿದ್ದಾನೆ. ಯಾಲಮ್‌ ಹೀಗೆ ಹೇಳುತ್ತಾನೆ:

ಫ್ರೂಡ್‌ ಪ್ರತಿಪಾದಿಸಿದ ಮನಸ್ಸಿನ ಯಾಂತ್ರಿಕವಾದದ, ನಿಯಂತ್ರಣವಾದದ ಮಾದರಿಗೆ ವಿರುದ್ಧವಾಗಿರುವ ಅವರ ಪ್ರತಿಕ್ರಿಯೆ ಹಾಗೂ ಚಿಕಿತ್ಸೆಯಲ್ಲಿನ ಒಂದು ದೃಶ್ಯತ್ವ ಸಿದ್ಧಾಂತದ ವಿಧಾನದ ಅವರ ಊಹನವನ್ನು ಹೊರತುಪಡಿಸಿ, ಅಸ್ತಿತ್ವವಾದದ ವಿಶ್ಲೇಷಕರು ಅತ್ಯಲ್ಪ ಸಾಮಾನ್ಯ ಲಕ್ಷಣವನ್ನು ಹೊಂದಿದ್ದಾರೆ ಹಾಗೂ ಒಂದು ಒಂದಾಗಿಸುವ ಸೈದ್ಧಾಂತಿಕ ಪಂಥವಾಗಿ ಅವರೆಂದೂ ಪರಿಗಣಿಸಲ್ಪಟ್ಟಿಲ್ಲ. ಲುಡ್ವಿಗ್‌ ಬಿನ್ಸ್‌ವ್ಯಾಂಗರ್‌‌, ಮೆಡಾರ್ಡ್‌ ಬಾಸ್‌, ಯೂಜೀನ್‌ ಮಿಂಕೋವ್ಸ್‌ಕಿ, V.E. ಗೆಬ್‌ಸಾಟ್ಟೆಲ್‌, ರೋಲ್ಯಾಂಡ್‌ ಕಹ್ನ್‌, G. ಕರುಸೊ, F.T. ಬ್ಯುಟೆಂಡಿಜ್ಕ್‌, G. ಬ್ಯಾಲಿ ಹಾಗೂ ವಿಕ್ಟರ್‌ ಫ್ರಾಂಕ್ಲ್‌ ಇವರೇ ಮೊದಲಾದವರನ್ನು ಒಳಗೊಂಡಿರುವ ಈ ಚಿಂತಕರು, ಅಮೆರಿಕಾದ ಮನಶ್ಚಿಕಿತ್ಸಕ ಸಮುದಾಯಕ್ಕೆ ಹೆಚ್ಚೂಕಮ್ಮಿ ಸಂಪೂರ್ಣವಾಗಿ ಅಪರಿಚಿತರಾಗಿದ್ದರು; 1985ರಲ್ಲಿ ರೊಲ್ಲೋ ಮೇ ಎಂಬಾತನ ಎಕ್ಸಿಸ್ಟೆನ್ಸ್‌ ಎಂಬ ಒಂದು ಅತೀವ ಪ್ರಭಾವಶಾಲಿ ಪುಸ್ತಕವು ಪ್ರಕಟಗೊಂಡಾಗ- ಮತ್ತು ವಿಶೇಷವಾಗಿ ಅವನ ಪರಿಚಯಾತ್ಮಕ ಪ್ರಬಂಧವು ಅವರ ಕೃತಿಯನ್ನು ಈ ದೇಶದೊಳಗೆ ಪರಿಚಯಿಸಿದ ಮೇಲೆ ಮಾತ್ರವೇ ಅವರ ಪರಿಚಯವಾಯಿತೆನ್ನಬಹುದು.[೮೮]

ಅಸ್ತಿತ್ವವಾದದ ಮಾನಸಿಕ ಚಿಕಿತ್ಸೆಯ ಒಂದು ಐರೋಪ್ಯ ರೂಪಾಂತರ ಅಥವಾ ಆವೃತ್ತಿಯ ಬೆಳವಣಿಗೆಗೆ ಇತ್ತೀಚೆಗೆ ಕೊಡುಗೆ ನೀಡಿದವರಲ್ಲಿ ಬ್ರಿಟಿಷ್‌-ಮೂಲದ ಎಮಿ ವ್ಯಾನ್‌ ಡೆಯುರ್‌ಜೆನ್‌ ಸೇರುತ್ತಾನೆ. ಅಸ್ತಿತ್ವವಾದದಲ್ಲಿ ವ್ಯಾಕುಲತೆಗೆ ನೀಡಿರುವ ಪ್ರಾಮುಖ್ಯತೆಯು ಮಾನಸಿಕ ಚಿಕಿತ್ಸೆಯಲ್ಲಿ ಅದನ್ನೊಂದು ಜನಪ್ರಿಯ ವಿಷಯವನ್ನಾಗಿಸಿದೆ. ಚಿಕಿತ್ಸಾಶಾಸ್ತ್ರಜ್ಞರು ಅನೇಕವೇಳೆ ಅಸ್ತಿತ್ವವಾದದ ತತ್ತ್ವಶಾಸ್ತ್ರವನ್ನು ವ್ಯಾಕುಲತೆಗೆ ಸಂಬಂಧಿಸಿದ ಒಂದು ವಿವರಣೆಯಾಗಿ ನೀಡುತ್ತಾರೆ. ಇದಕ್ಕಿರುವ ಸಮರ್ಥನೆಯೆಂದರೆ, ತೀರ್ಮಾನಿಸುವುದಕ್ಕಿರುವ ಓರ್ವ ವ್ಯಕ್ತಿಯ ಸಂಪೂರ್ಣ ಸ್ವಾತಂತ್ರ್ಯ, ಹಾಗೂ ಇಂಥ ತೀರ್ಮಾನಗಳ ಫಲಿತಾಂಶಕ್ಕೆ ಸಂಬಂಧಿಸಿದಂತಿರುವ ಸಂಪೂರ್ಣ ಹೊಣೆಗಾರಿಕೆಯಿಂದ ವ್ಯಾಕುಲತೆಯು ಅಭಿವ್ಯಕ್ತಿಸಲ್ಪಡುತ್ತದೆ. ಅಸ್ತಿತ್ವವಾದದ ಒಂದು ವಿಧಾನವನ್ನು ಬಳಸುತ್ತಿರುವ ಮನಶ್ಚಿಕಿತ್ಸಕರು ನಂಬುವ ಪ್ರಕಾರ, ಓರ್ವ ರೋಗಿಯು ಅವನ ವ್ಯಾಕುಲತೆಯನ್ನು ಕಟ್ಟಿಹಾಕಬಲ್ಲವನಾಗಿರುತ್ತಾನೆ ಮತ್ತು ಅದನ್ನು ರಚನಾತ್ಮಕವಾಗಿ ಬಳಸಬಲ್ಲವನಾಗಿರುತ್ತಾನೆ. ವ್ಯಾಕುಲತೆಯನ್ನು ನಿಗ್ರಹಿಸುವುದಕ್ಕೆ ಬದಲಾಗಿ, ಅದನ್ನು ಬದಲಾವಣೆಗೆ ಸಂಬಂಧಿಸಿದ ಆಧಾರಗಳಾಗಿ ಬಳಸಲು ರೋಗಿಗಳಿಗೆ ಸಲಹೆನೀಡಲಾಗುತ್ತದೆ. ವ್ಯಾಕುಲತೆಯನ್ನು ಅನಿವಾರ್ಯವೆಂಬಂತೆ ಸ್ವೀಕರಿಸುವುದರಿಂದಾಗಿ, ಜೀವನದಲ್ಲಿನ ತನ್ನ ಸಂಪೂರ್ಣ ಸಾಮರ್ಥ್ಯವನ್ನು ಸಾಧಿಸಲು ವ್ಯಕ್ತಿಯೋರ್ವ ಇದನ್ನು ಬಳಸಬಹುದಾಗಿದೆ. ಮಾನವಿಕ ಮನೋವಿಜ್ಞಾನವೂ ಸಹ ಅಸ್ತಿತ್ವವಾದದ ಮನೋವಿಜ್ಞಾನದಿಂದ ಪ್ರಮುಖ ಪ್ರಚೋದನೆಯನ್ನು ಹೊಂದಿತ್ತು ಮತ್ತು ಇದು ಅನೇಕ ಮೂಲಭೂತವಾದ ತತ್ತ್ವಗಳನ್ನು ಹಂಚಿಕೊಳ್ಳುತ್ತದೆ. ವಿಪರೀತ ಭಯದ ನಿರ್ವಹಣಾ ಸಿದ್ಧಾಂತವು ಮನೋವಿಜ್ಞಾನದ ಶೈಕ್ಷಣಿಕ ಅಧ್ಯಯನದ ವ್ಯಾಪ್ತಿಯಲ್ಲಿ ಬರುವ ಒಂದು ಅಭಿವೃದ್ಧಿಹೊಂದುತ್ತಿರುವ ಕ್ಷೇತ್ರವಾಗಿದೆ. ಜನರು ತಾವು ಅಂತಿಮವಾಗಿ ಸಾಯಲಿದ್ದೇವೆ ಎಂಬ ಅರಿವನ್ನು ಎದುರಿಗೆ ಕಂಡಾಗ, ಅವರಿಂದ ಹೊರಹೊಮ್ಮುತ್ತವೆ ಎಂದು ಸಂಶೋಧಕರು ಸಮರ್ಥಿಸುವ, ಸೂಚ್ಯ ಭಾವಾತ್ಮಕ ಪ್ರತಿಕ್ರಿಯೆಗಳ ಕಡೆಗೆ ಇದು ಗಮನ ಹರಿಸುತ್ತದೆ.

ಇವನ್ನೂ ನೋಡಿ[ಬದಲಾಯಿಸಿ]

ಟಿಪ್ಪಣಿಗಳು[ಬದಲಾಯಿಸಿ]

  1. ಮ್ಯಾಕ್ವಾರಿ, ಜಾನ್‌. ಎಕ್ಸಿಸ್ಟೆನ್ಷಿಯಾಲಿಸಂ , ನ್ಯೂಯಾರ್ಕ್‌ (1972), ಪುಟಗಳು 18–21.
  2. ಆಕ್ಸ್‌‌ಫರ್ಡ್‌ ಕಂಪ್ಯಾನಿಯನ್‌ ಟು ಫಿಲಾಸಫಿ , ಸಂಪಾದಿತ ಟೆಡ್‌ ಹೋಂಡೆರಿಕ್‌, ನ್ಯೂಯಾರ್ಕ್‌ (1995), ಪುಟ 259.
  3. ಮ್ಯಾಕ್ವಾರಿ. ಎಕ್ಸಿಸ್ಟೆನ್ಷಿಯಾಲಿಸಂ , ಪುಟಗಳು 14–15.
  4. ‌‌ಕೂಪರ್, D. E. ಎಕ್ಸಿಸ್ಟೆನ್ಷಿಯಾಲಿಸಂ: ಎ ರೀಕನ್ಸ್‌ಟ್ರಕ್ಷನ್‌ (ಬೇಸಿಲ್‌ ಬ್ಲಾಕ್‌ವೆಲ್‌, 1999, ಪುಟ 8)
  5. ಮ್ಯಾರಿನೋ, ಗೋರ್ಡಾನ್‌. ‌ಬೇಸಿಕ್‌ ರೈಟಿಂಗ್ಸ್‌ ಆಫ್ ಎಕ್ಸಿಸ್ಟೆನ್ಷಿಯಾಲಿಸಂ (ಮಾಡರ್ನ್‌ ಲೈಬ್ರರಿ, 2004, ಪುಟ ix, 3).
  6. ೬.೦ ೬.೧ ೬.೨ ಸ್ಟಾನ್‌ಫೋರ್ಡ್‌ ಎನ್‌ಸೈಕ್ಲೋಪೀಡಿಯಾ ಆಫ್‌ ಫಿಲಾಸಫಿ http://plato.stanford.edu/entries/kierkegaard‌/[ಶಾಶ್ವತವಾಗಿ ಮಡಿದ ಕೊಂಡಿ]
  7. ‌‌ವ್ಯಾಟ್ಸ್, ಮೈಕೇಲ್‌. ‌ಕಿಯರ್‌ಕೆಗಾರ್ಡ್ (ಒನ್‌ವರ್ಲ್ಡ್‌‌‌, 2003, ಪುಟಗಳು 4-6).
  8. ಲೌರಿ, ವಾಲ್ಟರ್‌‌. ಕಿಯರ್‌ಕೆಗಾರ್ಡ್‌'ಸ್‌ ಅಟಾಕ್‌ ಅಪಾನ್‌ "ಕ್ರಿಸ್ಟನ್‌ಡಂ" (ಪ್ರಿನ್ಸ್‌‌ಟನ್‌, 1968, ಪುಟಗಳು 37-40)
  9. ‌ಕಾರಿಗನ್, ಜಾನ್‌. ‌ದಿ ಆಕ್ಸ್‌‌ಫರ್ಡ್‌ ಹ್ಯಾಂಡ್‌ಬುಕ್‌ ಆಫ್‌ ರಿಲಿಜನ್‌ ಅಂಡ್‌ ಎಮೋಷನ್ (ಆಕ್ಸ್‌‌ಫರ್ಡ್‌, 2008, ಪುಟಗಳು 387-388)
  10. ಲಿವಿಂಗ್‌ಸ್ಟನ್‌, ಜೇಮ್ಸ್‌ ಮತ್ತು ಇತರರು ಮಾಡರ್ನ್‌ ಕ್ರಿಶ್ಚಿಯನ್‌ ಥಾಟ್‌: ದಿ ಟ್ವೆಂಟಿಯೆತ್‌ ಸೆಂಚುರಿ (ಫೋರ್ಟ್ರೆಸ್‌ ಪ್ರೆಸ್‌, 2006, ಅಧ್ಯಾಯ 5: ಕ್ರಿಶ್ಚಿಯನ್‌ ಎಕ್ಸಿಸ್ಟೆನ್ಷಿಯಾಲಿಸಂ).
  11. ‌‌ಮಾರ್ಟಿನ್, ಕ್ಲಾನ್ಸಿ. ಕಂಪ್ಯಾನಿಯನ್‌ ಟು ಫಿನಾಮೆನಾಲಜಿ ಅಂಡ್‌ ಎಕ್ಸಿಸ್ಟೆನ್ಷಿಯಾಲಿಸಂನಲ್ಲಿನ ರಿಲಿಜಿಯಸ್‌ ಎಕ್ಸಿಸ್ಟೆನ್ಷಿಯಾಲಿಸಂ (ಬ್ಲಾಕ್‌ವೆಲ್‌, 2006, ಪುಟಗಳು 188-205)
  12. ‌ರಾಬರ್ಟ್ C. ಸಾಲೋಮನ್‌, ಎಕ್ಸಿಸ್ಟೆನ್ಷಿಯಾಲಿಸಂ (ಮೆಕ್‌ಗ್ರಾ-ಹಿಲ್‌, 1974, ಪುಟಗಳು 1–2)
  13. D.E. ಕೂಪರ್‌‌ ಎಕ್ಸಿಸ್ಟೆನ್ಷಿಯಾಲಿಸಂ: ಎ ರೀಕನ್ಸ್‌ಟ್ರಕ್ಷನ್‌ (ಬೇಸಿಲ್‌ ಬ್ಲಾಕ್‌ವೆಲ್‌, 1999, ಪುಟ 8).
  14. ‌ಅರ್ನ್ಸ್ಟ್‌ ಬ್ರೀಸ್ಯಾಕ್, ಇಂಟ್ರಡಕ್ಷನ್‌ ಟು ಮಾಡರ್ನ್‌ ಎಕ್ಸಿಸ್ಟೆನ್ಷಿಯಾಲಿಸಂ , ನ್ಯೂಯಾರ್ಕ್‌ (1962), ಪುಟ 5
  15. ವಾಲ್ಟರ್‌‌ ಕೌಫ್‌ಮನ್‌, ಎಕ್ಸಿಸ್ಟೆನ್ಷಿಯಾಲಿಸಂ: ಫ್ರಂ ದಾಸ್ತೋವ್ಸ್‌ಕಿ ಟು ಸಾರ್ತ್ರೆ , ನ್ಯೂಯಾರ್ಕ್‌ (1956), ಪುಟ 12
  16. ‌ಗಿಗ್ನಾನ್, ಚಾರ್ಲ್ಸ್‌‌ B. ಮತ್ತು ಡೆರ್ಕ್‌ ಪೆರೆಬೂಮ್‌. ಎಕ್ಸಿಸ್ಟೆನ್ಷಿಯಾಲಿಸಂ: ಬೇಸಿಕ್‌ ರೈಟಿಂಗ್ಸ್‌ (ಹ್ಯಾಕೆಟ್‌ ಪಬ್ಲಿಷಿಂಗ್‌‌, 2001, ಪುಟ xiii)
  17. ವಾಲ್ಟರ್‌‌ ಕೌಫ್‌ಮನ್‌. ಎಕ್ಸಿಸ್ಟೆನ್ಷಿಯಾಲಿಸಂ: ಫ್ರಂ ದಾಸ್ತೋವ್ಸ್‌ಕಿ ಟು ಸಾರ್ತ್ರೆ . (ಕ್ಲೀವ್‌ಲೆಂಡ್‌: ದಿ ವರ್ಲ್ಡ್‌ ಪಬ್ಲಿಷಿಂಗ್‌ ಕಂಪನಿ, 1956) 11
  18. D.E. ಕೂಪರ್‌‌ ಎಕ್ಸಿಸ್ಟೆನ್ಷಿಯಾಲಿಸಂ: ಎ ರೀಕನ್ಸ್‌ಟ್ರಕ್ಷನ್‌ (ಬೇಸಿಲ್‌ ಬ್ಲಾಕ್‌ವೆಲ್‌, 1990, ಪುಟ 1)
  19. ೧೯.೦ ೧೯.೧ ‌ಥಾಮಸ್‌ R. ಫ್ಲಿನ್, ಎಕ್ಸಿಸ್ಟೆನ್ಷಿಯಾಲಿಸಂ: ಎ ವೆರಿ ಷಾರ್ಟ್‌ ಇಂಟ್ರಡಕ್ಷನ್‌ (ಆಕ್ಸ್‌‌ಫರ್ಡ್‌ ಯೂನಿವರ್ಸಿಟಿ ಪ್ರೆಸ್‌, 2006, ಪುಟ 89
  20. ೨೦.೦ ೨೦.೧ ‌ಕ್ರಿಸ್ಟೀನ್‌ ಡೈಗ್ಲ್, ಎಕ್ಸಿಸ್ಟೆನ್ಷಿಯಾಲಿಸ್ಟ್‌ ಥಿಂಕರ್ಸ್‌ ಅಂಡ್‌ ಎಥಿಕ್ಸ್‌ (ಮೆಕ್‌ಗಿಲ್‌-ಕ್ವೀನ್ಸ್‌ ಪ್ರೆಸ್‌, 2006, ಪುಟ 5)
  21. ಎಲ್‌'ಎಕ್ಸಿಸ್ಟಿಎನ್ಷಿಯಾಲಿಸ್ಮೆ ಎಸ್ಟ್‌ ಅನ್‌ ಹ್ಯುಮಾನಿಸ್ಮೆ (ಎಡಿಷನ್ಸ್‌ ನಾಗೆಲ್‌, 1946); ಇಂಗ್ಲಿಷ್‌ ಜೀನ್‌-ಪಾಲ್‌ ಸಾರ್ತ್ರೆ, ಎಕ್ಸಿಸ್ಟೆನ್ಷಿಯಾಲಿಸಂ ಅಂಡ್‌ ಹ್ಯೂಮನಿಸಂ (ಐರ್‌ ಮೆಥುವೆನ್‌, 1948)
  22. ಜಾನ್‌ ಪೊಟೆವಿ, ಎ ಡಿಕ್ಷ್‌ನರಿ ಆಫ್‌ ಕಾಂಟಿನೆಂಟಲ್‌ ಫಿಲಾಸಫಿ (ಯೇಲ್‌ ಯೂನಿವರ್ಸಿಟಿ ಪ್ರೆಸ್‌‌, 2006, ಪುಟ 325)
  23. S. ಕಿಯರ್‌ಕೆಗಾರ್ಡ್‌, ಕನ್‌ಕ್ಲೂಡಿಂಗ್‌ ಅನ್‌ಸೈಂಟಿಫಿಕ್‌ ಪೋಸ್ಟ್‌ಸ್ಕ್ರಿಪ್ಟ್‌‌ , "ಎ ಫಸ್ಟ್‌ ಅಂಡ್‌ ಲಾಸ್ಟ್‌ ಡಿಕ್ಲರೇಷನ್‌": "...ಟು ರೀಡ್‌ ಸೋಲೋ ದಿ ಒರಿಜಿನಲ್‌ ಟೆಕ್ಸ್ಟ್‌ ಆಫ್‌ ದಿ ಇಂಟಿವಿಜುಯಲ್‌, ಹ್ಯೂಮನ್‌-ಎಕ್ಸಿಸ್ಟೆನ್ಸ್‌ ರಿಲೇಷನ್‌ಷಿಪ್‌, ದಿ ಓಲ್ಡ್‌ ಟೆಕ್ಸ್ಟ್‌, ವೆಲ್‌ ನೋನ್‌, ಹ್ಯಾಂಡೆಡ್‌ ಡೌನ್‌ ಫ್ರಂ ದಿ ಫಾದರ್ಸ್‌, ಟು ರೀಡ್‌ ಇಟ್‌ ಥ್ರೂ ಯೆಟ್‌ ಒನ್ಸ್‌ ಮೋರ್‌, ಇಫ್‌ ಪಾಸಿಬಲ್‌ ಇನ್‌ ಎ ಮೋರ್‌ ಹಾರ್ಟ್‌ಫೆಲ್ಟ್‌ ವೇ."
  24. ಮೈಕೇಲ್‌ ವೆಸ್ಟನ್‌, ಕಿಯರ್‌ಕೆಗಾರ್ಡ್‌ ಅಂಡ್‌ ಮಾಡರ್ನ್‌ ಕಾಂಟಿನೆಂಟಲ್‌ ಫಿಲಾಸಫಿ (ರೌಟ್‌ಲೆಜ್‌, 2003, ಪುಟ 35)
  25. ೨೫.೦ ೨೫.೧ ಫೆರೀರಾ, M. ಜ್ಯಾಮೀ, ಕಿರ್ಕೆಗಾರ್ಡ್‌ , ವೈಲಿ & ಸನ್ಸ್‌, 2008.
  26. ‌‌ಮುಲ್ಡರ್‌ ಜೂನಿಯರ್, ಜ್ಯಾಕ್‌. ‌ಮಿಸ್ಟಿಕಲ್‌ ಅಂಡ್‌ ಬುದ್ಧಿಸ್ಟ್‌ ಎಲಿಮೆಂಟ್ಸ್‌ ಇನ್‌ ಕಿರ್ಕೆಗಾರ್ಡ್‌'ಸ್‌ ರಿಲಿಜಿಯಸ್‌ ಥಾಟ್ , ಎಡ್ವಿನ್‌ ಮೆಲ್ಲೆನ್‌ ಪ್ರೆಸ್‌, 2006
  27. ‌ಸ್ಟಾರ್ಮ್, D. ಆಂಟನಿ. ಸೋರೆನ್‌ ಕಿರ್ಕೆಗಾರ್ಡ್‌: ಎ ಪ್ರೈಮರ್‌‌ Archived 2009-08-26 ವೇಬ್ಯಾಕ್ ಮೆಷಿನ್ ನಲ್ಲಿ.
  28. Kamal, Muhammad (2006). Mulla Sadra's Transcendent Philosophy. Ashgate Publishing, Ltd. pp. 9 & 39. ISBN 0754652718.
  29. ಕೌಫ್‌ಮನ್‌, ವಾಲ್ಟರ್‌‌. ಫ್ರಂ ಷೇಕ್ಸ್‌ಪಿಯರ್‌ ಟು ಎಕ್ಸಿಸ್ಟೆನ್ಷಿಯಾಲಿಸಂ . ಪ್ರಿನ್ಸ್‌‌ಟನ್‌ ಯೂನಿವರ್ಸಿಟಿ ಪ್ರೆಸ್‌, 1980
  30. Kierkegaard, Søren. The Essential Kierkegaard, edited by Howard and Edna Hong. Princeton, 2000
  31. ಮ್ಯಾರಿನೋ, ಗೋರ್ಡಾನ್‌. ಸಂಪಾದಿತ ಬೇಸಿಕ್‌ ರೈಟಿಂಗ್ಸ್‌ ಆಫ್‌ ಎಕ್ಸಿಸ್ಟೆನ್ಷಿಯಾಲಿಸಂ . ಮಾಡರ್ನ್‌ ಲೈಬ್ರರಿ, 2004.
  32. ‌‌ಲ್ಯೂಪರ್, ಸ್ಟೀವನ್‌. "ಎಕ್ಸಿಸ್ಟಿಂಗ್‌‌". ಮೇಫೀಲ್ಡ್‌ ಪಬ್ಲಿಷಿಂಗ್‌‌, 2000, ಪುಟ 4–5
  33. [53] ^ ಐಬಿಡ್‌, ಪುಟ 38.
  34. ‌ಹಬೆನ್, ವಿಲಿಯಂ. ದಾಸ್ತೋವ್ಸ್‌ಕಿ, ಕಿಯರ್‌ಕೆಗಾರ್ಡ್‌, ನೀಟ್ಜ್‌ಸ್ಕೆ ಮತ್ತು ಕಾಫ್ಕಾ , ಸ್ಕ್ರಿಬ್ನರ್‌‌, 1997.
  35. ‌ಆಲ್ಬರ್ಟ್‌ ಕ್ಯಾಮಸ್, ದಿ ಮಿಥ್‌ ಆಫ್‌ ಸಿಸಿಫಸ್‌ (ಅನುವಾದ: ಜಸ್ಟಿನ್‌ ಒ'ಬ್ರೀನ್‌, ಹ್ಯಾಮಿಷ್‌ ಹ್ಯಾಮಿಲ್ಟನ್‌, 1955, ಪುಟ 104)
  36. ‌ಕ್ಯಾಮಸ್, ದಿ ಮಿಥ್‌ ಆಫ್‌ ಸಿಸಿಫಸ್‌ 1955, ಪುಟ 107)
  37. ‌ಮೌರಿಸ್‌ S. ಫ್ರೀಡ್ಮನ್, ಮಾರ್ಟಿನ್‌‌ ಬ್ಯೂಬರ್‌. ದಿ ಲೈಫ್‌ ಆಫ್‌ ಡಯಲಾಗ್ (ಯೂನಿವರ್ಸಿಟಿ ಆಫ್‌ ಚಿಕಾಗೊ ಪ್ರೆಸ್‌, 1955, ಪುಟ 85)
  38. ಅರ್ನ್ಸ್ಟ್‌ ಬ್ರೀಸ್ಯಾಕ್‌, ಇಂಟ್ರಡಕ್ಷನ್‌ ಟು ಎಕ್ಸಿಸ್ಟೆನ್ಷಿಯಾಲಿಸಂ , ನ್ಯೂಯಾರ್ಕ್‌ (1962), ಪುಟಗಳು 173–176
  39. ೩೯.೦ ೩೯.೧ ೩೯.೨ ‌ಸ್ಯಾಮ್ಯುಯೆಲ್‌ M. ಕೀನ್, "ಗೇಬ್ರಿಯೆಲ್‌ ಮಾರ್ಸೆಲ್‌", ಪಾಲ್‌ ಎಡ್ವರ್ಡ್ಸ್‌ (ಸಂಪಾದಿತ) ದಿ ಎನ್‌ಸೈಕ್ಲೋಪೀಡಿಯಾ ಆಫ್‌ ಫಿಲಾಸಫಿ ಯಲ್ಲಿರುವುದು (ಮ್ಯಾಕ್‌ಮಿಲನ್‌ ಪಬ್ಲಿಷಿಂಗ್‌ ಕೊ, 1967)
  40. ಜಾನ್‌ ಮ್ಯಾಕ್ವಾರಿ, ಎಕ್ಸಿಸ್ಟೆನ್ಷಿಯಾಲಿಸಂ (ಪೆಲಿಕಾನ್‌, 1973, ಪುಟ 110)
  41. ಜಾನ್‌ ಮ್ಯಾಕ್ವಾರಿ, ಎಕ್ಸಿಸ್ಟೆನ್ಷಿಯಾಲಿಸಂ (ಪೆಲಿಕಾನ್‌, 1973, ಪುಟ 96)
  42. ‌ಕಾಲ್‌ ಜಾಸ್ಪರ್ಸ್, "ಫಿಲಾಸಫಿಕಲ್‌ ಆಟೋಬಯಾಗ್ರಫಿ", ಪಾಲ್‌ ಅರ್ಥರ್‌ ಷ್ಲಿಪ್‌ (ಸಂಪಾದಿತ) ದಿ ಫಿಲಾಸಫಿ ಆಫ್‌ ಕಾಲ್‌ ಜಾಸ್ಪರ್ಸ್‌ (ದಿ ಲೈಬ್ರರಿ ಆಫ್‌ ಲಿವಿಂಗ್‌ ಫಿಲಾಸಫರ್ಸ್‌ IXನಲ್ಲಿರುವುದು (ಟ್ಯೂಡರ್‌ ಪಬ್ಲಿಷಿಂಗ್‌ ಕಂಪನಿ, 1957, ಪುಟ 75/11)
  43. ಕಾಲ್‌ ಜಾಸ್ಪರ್ಸ್‌, "ಫಿಲಾಸಫಿಕಲ್‌ ಆಟೋಬಯಾಗ್ರಫಿ", ಪಾಲ್‌ ಅರ್ಥರ್‌ ಷ್ಲಿಪ್‌ (ಸಂಪಾದಿತ) ದಿ ಫಿಲಾಸಫಿ ಆಫ್‌ ಕಾಲ್‌ ಜಾಸ್ಪರ್ಸ್‌ (ದಿ ಲೈಬ್ರರಿ ಆಫ್‌ ಲಿವಿಂಗ್‌ ಫಿಲಾಸಫರ್ಸ್‌ IXನಲ್ಲಿರುವುದು (ಟ್ಯೂಡರ್‌ ಪಬ್ಲಿಷಿಂಗ್‌ ಕಂಪನಿ (ಟ್ಯೂಡರ್‌ ಪಬ್ಲಿಷಿಂಗ್‌ ಕಂಪನಿ, 1957, ಪುಟ 40)
  44. ಕಾಲ್‌ ಜಾಸ್ಪರ್ಸ್‌, "ಫಿಲಾಸಫಿಕಲ್‌ ಆಟೋಬಯಾಗ್ರಫಿ", ಪಾಲ್‌ ಅರ್ಥರ್‌ ಷ್ಲಿಪ್‌ (ಸಂಪಾದಿತ) ದಿ ಫಿಲಾಸಫಿ ಆಫ್‌ ಕಾಲ್‌ ಜಾಸ್ಪರ್ಸ್‌ (ದಿ ಲೈಬ್ರರಿ ಆಫ್‌ ಲಿವಿಂಗ್‌ ಫಿಲಾಸಫರ್ಸ್‌ IXನಲ್ಲಿರುವುದು (ಟ್ಯೂಡರ್‌ ಪಬ್ಲಿಷಿಂಗ್‌ ಕಂಪನಿ (ಟ್ಯೂಡರ್‌ ಪಬ್ಲಿಷಿಂಗ್‌ ಕಂಪನಿ, 1957, ಪುಟ 75/2 ಮತ್ತು ನಂತರದ್ದು)
  45. ೪೫.೦ ೪೫.೧ ‌ರೊನಾಲ್ಡ್‌ ಆರನ್‌ಸನ್, ಕ್ಯಾಮಸ್‌ ಅಂಡ್‌ ಸಾರ್ತ್ರೆ (ಯೂನಿವರ್ಸಿಟಿ ಆಫ್‌ ಚಿಕಾಗೊ ಪ್ರೆಸ್‌, 2004, ಅಧ್ಯಾಯ 3 ಪ್ಯಾಸಿಮ್‌ )
  46. ರೊನಾಲ್ಡ್‌ ಆರನ್‌ಸನ್‌, ಕ್ಯಾಮಸ್‌ ಅಂಡ್‌ ಸಾರ್ತ್ರೆ (ಯೂನಿವರ್ಸಿಟಿ ಆಫ್‌ ಚಿಕಾಗೊ ಪ್ರೆಸ್‌, 2004, ಪುಟ 44)
  47. ‌ಸಿಮೋನೆ ಡಿ ಬ್ಯೂವಾಯ್ರ್, ಫೋರ್ಸ್‌ ಆಫ್‌ ಸರ್ಕಮ್‌ಸ್ಟೆನ್ಸ್‌ , ರೊನಾಲ್ಡ್‌ ಆರನ್‌ಸನ್‌ನ ಕ್ಯಾಮಸ್‌ ಅಂಡ್‌ ಸಾರ್ತ್ರೆ ಯಲ್ಲಿ ಉಲ್ಲೇಖಿಸಲ್ಪಟ್ಟಿರುವುದು (ಯೂನಿವರ್ಸಿಟಿ ಆಫ್‌ ಚಿಕಾಗೊ ಪ್ರೆಸ್‌, 2004, ಪುಟ 48)
  48. ರೊನಾಲ್ಡ್‌ ಆರನ್‌ಸನ್‌, ಕ್ಯಾಮಸ್‌ ಅಂಡ್‌ ಸಾರ್ತ್ರೆ (ಯೂನಿವರ್ಸಿಟಿ ಆಫ್‌ ಚಿಕಾಗೊ ಪ್ರೆಸ್‌, 2004, ಪುಟ 48)
  49. ರೂಡಿಗರ್‌ ಸಫ್ರಾನ್ಸ್‌ಕಿ, ಮಾರ್ಟಿನ್‌‌ ಹೆಡೀಗ್ಗರ್‌‌ — ಬಿಟ್ವೀನ್‌ ಗುಡ್‌ ಅಂಡ್‌ ಈವಿಲ್‌ (ಹಾರ್ವರ್ಡ್‌ ಯೂನಿವರ್ಸಿಟಿ ಪ್ರೆಸ್‌, 1998, ಪುಟ 343
  50. ‌ಎಂಟ್ರಿ ಆನ್‌ ಕೊಜೆವೆ, ಮಾರ್ಟಿನ್‌‌ ಕೊಹೆನ್‌ನ (ಸಂಪಾದಕ), ದಿ ಎಸೆನ್ಷಿಯಲ್ಸ್‌ ಆಫ್‌ ಫಿಲಾಸಫಿ ಅಂಡ್‌ ಎಥಿಕ್ಸ್‌‌‌ ನಲ್ಲಿರುವುದು (ಹೋಡರ್‌ ಅರ್ನಾಲ್ಡ್‌, 2006, ಪುಟ 158); ಇದನ್ನೂ ನೋಡಿ: ಅಲೆಕ್ಸಾಂಡ್ರೆ ಕೊಜೆವೆ, Introduction to the Reading of Hegel: Lectures on the Phenomenology of Spirit (ಕಾರ್ನೆಲ್‌ ಯೂನಿವರ್ಸಿಟಿ ಪ್ರೆಸ್‌, 1980)
  51. ಎಂಟ್ರಿ ಆನ್‌ ಕೊಜೆವೆ, ಮಾರ್ಟಿನ್‌‌ ಕೊಹೆನ್‌‌ನ (ಸಂಪಾದಕ), ದಿ ಎಸೆನ್ಷಿಯಲ್ಸ್‌ ಆಫ್‌ ಫಿಲಾಸಫಿ ಅಂಡ್‌ ಎಥಿಕ್ಸ್‌‌‌ ನಲ್ಲಿರುವುದು (ಹೋಡರ್‌ ಅರ್ನಾಲ್ಡ್‌, 2006, ಪುಟ 158)
  52. ಮಾರ್ಟಿನ್‌‌ ಹೆಡೀಗ್ಗರ್‌‌, ರೂಡಿಗರ್‌ ಸಫ್ರಾನ್ಸ್‌ಕಿಯ ಮಾರ್ಟಿನ್‌‌ ಹೆಡೀಗ್ಗರ್‌‌ — ಬಿಟ್ವೀನ್‌ ಗುಡ್‌ ಅಂಡ್‌ ಈವಿಲ್‌‌‌ ನಲ್ಲಿ ಉಲ್ಲೇಖಿಸಲ್ಪಟ್ಟ ಪತ್ರ (ಹಾರ್ವರ್ಡ್‌ ಯೂನಿವರ್ಸಿಟಿ ಪ್ರೆಸ್‌, 1998, ಪುಟ 349)
  53. ರೂಡಿಗರ್‌ ಸಫ್ರಾನ್ಸ್‌ಕಿ, ಮಾರ್ಟಿನ್‌‌ ಹೆಡೀಗ್ಗರ್‌‌ — ಬಿಟ್ವೀನ್‌ ಗುಡ್‌ ಅಂಡ್‌ ಈವಿಲ್‌ (ಹಾರ್ವರ್ಡ್‌ ಯೂನಿವರ್ಸಿಟಿ ಪ್ರೆಸ್‌, 1998, ಪುಟ 356)
  54. ವಿಲಿಯಂ J. ರಿಚರ್ಡ್‌ಸನ್‌, ಮಾರ್ಟಿನ್‌‌ ಹೆಡೀಗ್ಗರ್‌‌: ಫ್ರಂ ಫೆನಾಮೆನಾಲಜಿ ಟು ಥಾಟ್‌ (ಮಾರ್ಟ್‌ಜಿನಸ್‌ ನಿಜೋಫ್‌, 1967, ಪುಟ 351)
  55. ಮ್ಯಾಸಿ, ಡೇವಿಡ್‌. ಫ್ರಾಂಜ್‌ ಫೆನಾನ್‌: ಎ ಬಯಾಗ್ರಫಿ . ನ್ಯೂಯಾರ್ಕ್‌ ನಗರ: ಪಿಕಡಾರ್‌, USA. ಪುಟ 129–130.
  56. K. ಗುನ್ನಾರ್‌ ಬೆರ್ಗ್‌ಸ್ಟ್ರೋಮ್‌, ಆನ್‌ ಒಡಿಸ್ಸಿ ಟು ಫ್ರೀಡಂ ಉಪ್ಸಾಲಾ ವಿಶ್ವವಿದ್ಯಾಲಯ, 1983, ಪುಟ 92; ಕಾಲಿನ್‌ ಸ್ಟಾನ್ಲಿ, ಕಾಲಿನ್‌ ವಿಲ್ಸನ್‌, ಎ ಸೆಲೆಬ್ರೇಷನ್‌: ಎಸ್ಸೇಸ್‌ ಅಂಡ್‌ ರೀಕಲೆಕ್ಷನ್ಸ್‌ ಸೆಸಿಲ್‌ ವೂಲ್ಫ್‌, 1988, ಪುಟ 43)
  57. Jean-Paul Sartre. "Existentialism is a Humanism, Jean-Paul Sarte 1946". Marxists.org. Retrieved 2010-03-08.
  58. (French) (ಶಬ್ದಕೋಶ) "ಎಲ್‌'ಎಕ್ಸಿಸ್ಟೆನ್ಷಿಯಾಲಿಸ್ಮೆ" - ನೋಡಿ "ಎಲ್‌'ಐಡೆಂಟಿಟೆ ಡಿ ಲಾ ಪರ್ಸೋನೆ"
  59. Razavi, Mehdi Amin (1997), Suhrawardi and the School of Illumination, Routledge, p. 129, ISBN 0700704124
  60. Baird, Forrest E. (2008). From Plato to Derrida. Upper Saddle River, New Jersey: Pearson Prentice Hall. ISBN 0-13-158591-6. {{cite book}}: Unknown parameter |coauthors= ignored (|author= suggested) (help)
  61. "despair - definition of despair by the Free Online Dictionary, Thesaurus and Encyclopedia". Tfd.com. Retrieved 2010-03-08.
  62. Kierkegaard, Søren; Hannay, Alastair. Either/or: a fragment of life - Google Books. Books.google.com. ISBN 9780140445770. Retrieved 2010-03-08.
  63. ಸೋರೆನ್‌ ಕಿಯರ್‌ಕೆಗಾರ್ಡ್‌'ಸ್‌ ಜರ್ನಲ್ಸ್‌ ಅಂಡ್‌ ಪೇಪರ್ಸ್ ಸಂಪುಟ 5, ಪುಟ 5
  64. ಕ್ಯಾಮಸ್‌, ಆಲ್ಬರ್ಟ್‌. "ಆನ್‌ ಅಬ್ಸರ್ಡ್‌ ರೀಸನಿಂಗ್‌"
  65. ಜೀನ್‌-ಪಾಲ್‌ ಸಾರ್ತ್ರೆ, ಬೀಯಿಂಗ್‌ ಅಂಡ್‌ ನಥಿಂಗ್‌ನೆಸ್‌ , ರೌಟ್‌ಲೆಜ್‌ ಕ್ಲಾಸಿಕ್ಸ್‌‌ (2003).
  66. ‌ಮಾರ್ಕ್ಯೂಸ್, ಹರ್ಬರ್ಟ್‌. "ಸಾರ್ತ್ರೆ'ಸ್‌ ಎಕ್ಸಿಸ್ಟೆನ್ಷಿಯಾಲಿಸಂ", ಸ್ಟಡೀಸ್‌ ಇನ್‌ ಕ್ರಿಟಿಕಲ್‌ ಫಿಲಾಸಫಿ ಯಲ್ಲಿ ಮುದ್ರಣಗೊಂಡಿರುವುದು. ಅನುವಾದ: ಜೋರಿಸ್‌ ಡಿ ಬ್ರೆಸ್‌. ಲಂಡನ್‌: NLB, 1972. ಪುಟ 161
  67. Jean-Paul Sartre. "Text at". Marxists.org. Retrieved 2010-03-08.
  68. ಕಾರ್ನ್ಯಾಪ್‌, ರುಡಾಲ್ಫ್‌, ಅಬರ್‌ವಿಂಡಂಗ್‌ ಡೆರ್‌ ಮೆಟಾಫಿಸಿಕ್‌ ಡರ್ಚ್‌ ಲಾಜಿಷೆ ಅನಲೈಸ್‌ ಡೆರ್‌ ಸ್ಪಾಷೆ [ಓವರ್‌ಕಮಿಂಗ್‌ ಮೆಟಾಫಿಸಿಕ್ಸ್‌ ಬೈ ದಿ ಲಾಜಿಕಲ್‌ ಅನಾಲಿಸಿಸ್‌ ಆಫ್‌ ಸ್ಪೀಚ್‌ ], ಎರ್ಕೆನ್‌ಟ್ನಿಸ್‌ (1932), ಪುಟಗಳು 219–241. ಹೆಡೀಗ್ಗರ್‌‌ನ "ವಾಟ್‌ ಈಸ್‌ ಮೆಟಾಫಿಸಿಕ್ಸ್‌" ಕುರಿತಾದ ಕಾರ್ನ್ಯಾಪ್‌ನ ಟೀಕೆ.
  69. ೬೯.೦ ೬೯.೧ Steven Crowell entry by 2004-08-23 in the Stanford Encyclopedia of Philosophy
  70. © ಜೇಮ್ಸ್‌ ಟ್ರಾವರ್ಸ್‌‌ 2005 https://archive.is/20130122234248/http://filmsdefrance.com/FDF_Un_chant_d_amour_rev.html
  71. ‌ಹೋಲ್ಟ್, ಜಾಸನ್‌. "ಎಕ್ಸಿಸ್ಟೆನ್ಷಿಯಲ್‌ ಎಥಿಕ್ಸ್‌: ವೇರ್‌ ಡು ದಿ ಪಾಥ್ಸ್‌ ಆಫ್‌ ಗ್ಲೋರಿ ಲೀಡ್‌?", ದಿ ಫಿಲಾಸಫಿ ಆಫ್‌ ಸ್ಟಾನ್ಲಿ ಕುಬ್ರ್‌‌ ಇಕ್‌ನಲ್ಲಿರುವುದು. ಲೇಖಕ: ಜೆರಾಲ್ಡ್‌ J. ಅಬ್ರಾಮ್ಸ್‌. 2007ರಲ್ಲಿ ಪ್ರಕಟಿಸಲ್ಪಟ್ಟಿತು. ಯೂನಿವರ್ಸಿಟಿ ಪ್ರೆಸ್‌ ಆಫ್‌ ಕೆಂಟುಕಿ. ISBN 0-8131-2445-X
  72. ಹೋಲ್ಟ್‌, ಜಾಸನ್‌. "ಎಕ್ಸಿಸ್ಟೆನ್ಷಿಯಲ್‌ ಎಥಿಕ್ಸ್‌: ವೇರ್‌ ಡು ದಿ ಪಾಥ್ಸ್‌ ಆಫ್‌ ಗ್ಲೋರಿ ಲೀಡ್‌?", ದಿ ಫಿಲಾಸಫಿ ಆಫ್‌ ಸ್ಟಾನ್ಲಿ ಕುಬ್ರಿಕ್‌‌‌ ನಲ್ಲಿರುವುದು. ಲೇಖಕ: ಜೆರಾಲ್ಡ್‌ J. ಅಬ್ರಾಮ್ಸ್‌. 2007ರಲ್ಲಿ ಪ್ರಕಟಿಸಲ್ಪಟ್ಟಿತು. ಯೂನಿವರ್ಸಿಟಿ ಪ್ರೆಸ್‌ ಆಫ್‌ ಕೆಂಟುಕಿ. ISBN 0-8131-2445-X
  73. "amazon.com's Films with an Existential Theme". Retrieved 2009-02-02.
  74. "Existential & Psychological Movie Recommendations". Existential-therapy.com. Archived from the original on 2010-01-07. Retrieved 2010-03-08.
  75. "Existentialism in Film". Uhaweb.hartford.edu. Archived from the original on 2010-01-13. Retrieved 2010-03-08.
  76. "Existentialist Adaptations - Harvard Film Archive". Hcl.harvard.edu. Archived from the original on 2011-01-27. Retrieved 2010-03-08.
  77. "Review: 'Synecdoche, New York'". Los Angeles Times. Retrieved 2008-11-17.
  78. Sartre, Jean-Paul (2000. First published 1938), Nausea, London: Penguin {{citation}}: Check date values in: |year= (help); Unknown parameter |coauthor= ignored (|author= suggested) (help)
  79. Earnshaw, Steven (2006), Existentialism: A Guide for the Perplexed, London: Continuum, p. 75, ISBN 0-8264-8530-8
  80. ದಿ ಟೈಮ್ಸ್ , 31 ಡಿಸೆಂಬರ್‌‌ 1964. ನೋಲ್ಸನ್‌, J. ಎಂಬಾತನ ಡ್ಯಾಮ್‌‌ಡ್‌ ಟು ಫೇಮ್‌: ದಿ ಲೈಫ್‌ ಆಫ್‌ ಸ್ಯಾಮುಯೆಲ್‌ ಬೆಕೆಟ್‌‌‌‌ ನಲ್ಲಿ ನಮೂದಿಸಲ್ಪಟ್ಟುದು (ಲಂಡನ್‌: ಬ್ಲೂಮ್ಸ್‌ಬರಿ, 1996), ಪುಟ 57
  81. ಕ್ರೋನಿನ್‌, A., ಸ್ಯಾಮುಯೆಲ್‌ ಬೆಕೆಟ್‌ ದಿ ಲಾಸ್ಟ್‌ ಮಾಡರ್ನಿಸ್ಟ್‌ (ಲಂಡನ್‌: ಫ್ಲೆಮಿಂಗೋ, 1997), ಪುಟ 391
  82. Michael H. Hutchins (14 August 2006). "A Tom Stoppard Bibliography: Chronology". The Stephen Sondheim Reference Guide. Retrieved 2008-06-23.
  83. Wren, Celia (12 December 2007). "From Forum, an Earnest and Painstaking 'Antigone'". Washington Post. Retrieved 2008-04-07.
  84. ಕೆರ್ನಾನ್‌, ಆಲ್ವಿನ್‌ B. ದಿ ಮಾಡರ್ನ್‌ ಅಮೆರಿಕನ್‌ ಥಿಯೇಟರ್‌: ಎ ಕಲೆಕ್ಷನ್‌ ಆಫ್‌ ಕ್ರಿಟಿಕಲ್‌ ಎಸ್ಸೇಸ್‌ . ಎಂಗಲ್‌ವುಡ್‌ ಕ್ಲಿಫ್ಸ್‌, ನ್ಯೂಜೆರ್ಸಿ: ಪ್ರೆಂಟೈಸ್‌-ಹಾಲ್‌, 1967.
  85. ‌ಪಾಮರ್, ಡೊನಾಲ್ಡ್‌‌ D. ಕಿಯರ್‌ಕೆಗಾರ್ಡ್‌ ಫಾರ್‌ ಬಿಗಿನರ್ಸ್‌ . 1996 ರೈಟರ್ಸ್‌ ಅಂಡ್‌ ರೀಡರ್ಸ್‌ ಲಿಮಿಟೆಡ್‌. ಲಂಡನ್‌, ಇಂಗ್ಲಂಡ್‌. ಪುಟ 25
  86. ‌ಹಾಂಗ್, ಹೋವರ್ಡ್‌ V. "ಹಿಸ್ಟಾರಿಕಲ್‌ ಇಂಟ್ರಡಕ್ಷನ್‌" ಟು ಫಿಯರ್‌ ಅಂಡ್‌ ಟ್ರೆಂಬ್ಲಿಂಗ್‌ . ಪ್ರಿನ್ಸ್‌ಟನ್ ಯೂನಿವರ್ಸಿಟಿ ಪ್ರೆಸ್. ಪ್ರಿನ್ಸ್‌‌ಟನ್‌, ನ್ಯೂಜೆರ್ಸಿ. 1983. ಪುಟ x
  87. ಕಿಯರ್‌ಕೆಗಾರ್ಡ್‌, ಸೋರೆನ್‌. ‌ವರ್ಕ್ಸ್‌ ಆಫ್‌ ಲವ್ . ಹಾರ್ಪರ್‌‌ & ರೋ, ಪಬ್ಲಿಷರ್ಸ್‌. ನ್ಯೂಯಾರ್ಕ್‌, N.Y. 1962. ಪುಟ 62
  88. Yalom, Irvin D. (1980), Existential Psychotherapy, New York: BasicBooks (Subsidiary of Perseus Books, L.L.C., p. 17, ISBN 0-465-02147-6 ಸೂಚನೆ: ಕೃತಿಸ್ವಾಮ್ಯದ ವರ್ಷವು ಬದಲಾಗಿಲ್ಲ, ಆದರೆ ಪುಸ್ತಕವು ಮುದ್ರಣದಲ್ಲಿ ಉಳಿದುಕೊಂಡಿದೆ.

ಆಕರಗಳು[ಬದಲಾಯಿಸಿ]

  • Razavi, Mehdi Amin (1997), Suhrawardi and the School of Illumination, Routledge, ISBN 0700704124
  • ಆಲ್ಬರ್ಟ್‌ ಕ್ಯಾಮಸ್‌ ಲಿರಿಕಲ್‌ ಅಂಡ್‌ ಕ್ರಿಟಿಕಲ್‌ ಎಸ್ಸೇಸ್‌. ಫಿಲಿಪ್‌ ಥೋಡಿಯಿಂದ ಸಂಪಾದಿತ (ಲೆಸ್‌ ನೌವೆಲ್ಲೆಸ್‌ ಲಿಟರರೀಸ್‌ನಲ್ಲಿನ ಜೀನೀ ಡೆಲ್ಪೆಕ್‌ನೊಂದಿಗಿನ ಸಂದರ್ಶನ, ನವೆಂಬರ್‌ 15, 1945). ಪುಟ 345.

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಪ್ರಸ್ತಾವನೆಗಳು
ನಿಯತಕಾಲಿಕೆಗಳು ಮತ್ತು ಲೇಖನಗಳು
ಅಸ್ತಿತ್ವವಾದದ ಮಾನಸಿಕ ಚಿಕಿತ್ಸೆ