ರಮೇಶ್ ಅರವಿಂದ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಮೇಶ್ ಅರವಿಂದ್
ರಮೇಶ್ ಅರವಿಂದ್
ಜನನ (1964-09-11) ೧೧ ಸೆಪ್ಟೆಂಬರ್ ೧೯೬೪ (ವಯಸ್ಸು ೫೯)
ಉದ್ಯೋಗನಟ, ನಿರ್ಮಾಪಕ, ನಿರ್ದೇಶಕ, ಚಿತ್ರಕಥೆಗಾರ, ನಿರೂಪಕ
ಸಕ್ರಿಯ ವರ್ಷಗಳು1989–
ಜೀವನ ಸಂಗಾತಿಅರ್ಚನ ರಮೇಶ್
ಮಕ್ಕಳು2

ರಮೇಶ್ ಅರವಿಂದ್(ಜನನ ೧೧ ಸಪ್ಟೆಂಬರ್ ೧೯೬೪೪) ಒಬ್ಬ ಭಾರತದ ನಟ, ನಿರ್ದೇಶಕ ಮತ್ತು ನಿರೂಪಕ.ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತ ನಟರಲ್ಲೊಬ್ಬರು. ಕೆ.ಬಾಲಚಂದರ್ ನಿರ್ದೇಶನದ ಸುಂದರ ಸ್ವಪ್ನಗಳು ಮೂಲಕ ಚಿತ್ರರಂಗ ಪ್ರವೇಶ ಮಾಡಿದರು. ಅದಕ್ಕೆ ಮೊದಲು ಬೆಂಗಳೂರು ದೂರದರ್ಶನದಲ್ಲಿ ಪರಿಚಯ ಎಂಬ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. ಅನೇಕ ಚಿತ್ರಗಳಲ್ಲಿ ನಾಯಕ ನಟರಾಗಿ ನಟಿಸಿ, ಯಶಸ್ವಿಯಾಗಿದ್ದಾರೆ. ರಾಮ ಶಾಮ ಭಾಮ ಚಿತ್ರವನ್ನು ನಿರ್ದೇಶಿಸುವ ಮೂಲಕ ನಿರ್ದೇಶಕರಾಗಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಹೂಮಳೆ ಮತ್ತು ಅಮೃತಧಾರೆ ಚಿತ್ರಕಥೆಗೆ ನೆರವು ನೀಡಿದ್ದಾರೆ.

ತಮಿಳು ಚಿತ್ರರಂಗದಲ್ಲಿಯೂ ರಮೇಶ್ ಅರವಿಂದ್ ಎಂಬ ಹೆಸರಿನಿಂದ ಪ್ರಸಿದ್ಧರಾಗಿದ್ದಾರೆ. ಉತ್ತಮ ವಿಲನ್ ಚಿತ್ರದ ಮೂಲಕ ತಮಿಳು ಚಿತ್ರ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ವೈಯಕ್ತಿಕ ಜೀವನ[ಬದಲಾಯಿಸಿ]

ಇವರು ಅರ್ಚನ ಅವರನ್ನು ವಿವಾಹವಾಗಿದ್ದಾರೆ ಹಾಗು ಅವರು ಒಬ್ಬಳು ಪುತ್ರಿ (ನಿಹಾರಿಕಾ) ಮತ್ತು ಮಗನನ್ನು (ಅರ್ಜುನ್) ಪಡೆದಿದ್ದಾರೆ.[೧]

ವೃತ್ತಿ ಜೀವನ[ಬದಲಾಯಿಸಿ]

ಇವರು ಮುಖ್ಯವಾಗಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವ ನಟ. ಇದರ ಜೊತೆಗೆ ತೆಲುಗು, ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಇವರು ಸತಿ ಲೀಲಾವತಿ, ಡ್ಯುಎಟ್, ಅಮೇರಿಕಾ ಅಮೇರಿಕಾ, ನಮ್ಮೂರ ಮಂದಾರ ಹೂವೆ, ಆಪ್ತಮಿತ್ರ, ಉಲ್ಟಾ ಪಲ್ಟಾ, ಹೂಮಳೆ, ಚಂದ್ರಮುಖಿ ಪ್ರಾಣಸಖಿ ಮತ್ತು ಅಮೃತವರ್ಷಿಣಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಅತ್ಯುತ್ತಮ ನಟ ಪಾತ್ರಕ್ಕೆ ೨ ಫಿಲ್ಮ್ ಫೇರ್ ಪ್ರಶಸ್ತಿ, ಹೂಮಳೆ ಚಿತ್ರದ ನಟನೆಗೆ ಮತ್ತು ಲೇಖನಕ್ಕೆ ಕರ್ನಾಟಕ ರಾಜ್ಯ ಪ್ರಶಸ್ತಿ, ಉದಯ ಮತ್ತು ಸುವರ್ಣ ಟಿವಿ ಪ್ರಶಸ್ತಿಗಳು ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಆಯ್ಕೆಯಾಗಿದ್ದಾರೆ. ರಮೇಶ್ ಕೆ. ಬಾಲಚಂದರ್ ಅವರ ಜೊತೆಗಿನ ಸಹಭಾಗಿತ್ವದಿಂದ ಗುರುತಿಸಿಕೊಂಡಿದ್ದಾರೆ. ಕೆ. ಬಾಲಚಂದರ ರಮೇಶ್ ಅವರನ್ನು ೧೯೮೬ರಲ್ಲಿ ಕನ್ನಡದ ಸುಂದರ ಸ್ವಪ್ನಗಳು ಚಿತ್ರದಲ್ಲಿ ಪರಿಚಯಿಸಿದರು ಮತ್ತು ಇನ್ನೂ  ಒಂದು ಹೆಜ್ಜೆ ಮುಂದೆ ಹೋಗಿ ಮನಥಿಲ್ ಉರುತಿ ವೆಂದುಮ್ (ಅವರ ತಮಿಳು ಪದಾರ್ಪಣೆ), ಡ್ಯುಎಟ್ ಮತ್ತು ರುದ್ರವೀಣ (ಅವರ ತೆಲುಗು ಪದಾರ್ಪಣೆ) ಇವುಗಳಲ್ಲಿ ಜೊತೆಗೆ ಕೆಲಸ ಮಾಡಿದರು.

ರಮೇಶ್ ಅಭಿನಯಿಸಿರುವ ಕೆಲವು ಚಿತ್ರಗಳು[ಬದಲಾಯಿಸಿ]

ಬರಹಗಾರ[ಬದಲಾಯಿಸಿ]

ಇವರು ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ಹೂಮಳೆಯನ್ನು ಸಂಕಲನೆ ಮಾಡಿದ್ದಾರೆ. ಇದು ಅವರಿಗೆ ನಿರ್ದೇಶಕ  ವೃತ್ತಿಗೆ ದಾರಿ ಮಾಡಿಕೊಟ್ಟಿತು.

ಉಲ್ಲೇಖ[ಬದಲಾಯಿಸಿ]