ಯೋಗರಾಜ ಭಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಯೋಗರಾಜ ಭಟ್
೨೦೧೨ ರಲ್ಲಿ ಭಟ್
Born (1972-10-08) ೮ ಅಕ್ಟೋಬರ್ ೧೯೭೨ (ವಯಸ್ಸು ೫೧)
Nationalityಭಾರತೀಯ
Occupation(s)ನಿರ್ದೇಶಕ, ಗೀತರಚನೆಕಾರ, ನಿರ್ಮಾಪಕ, ಚಿತ್ರಕಥೆಗಾರ ಮತ್ತು ನಟ
Years active೨೦೦೧ ರಲ್ಲಿ ಪ್ರಸ್ತುತ
Spouseರೇಣುಕಾ ಭಟ್

ಯೋಗರಾಜ್ ಭಟ್ (ಜನನ ೮ ಅಕ್ಟೋಬರ್ ೧೯೭೨) ಒಬ್ಬ ಭಾರತೀಯ ಚಲನಚಿತ್ರ ನಿರ್ಮಾಪಕ, ನಿರ್ದೇಶಕ, ಚಿತ್ರಕಥೆಗಾರ, ಹಾಗೂ ಗೀತರಚನೆಕಾರ. ಇವರು ಮುಖ್ಯವಾಗಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ. [೧] ಇವರು ೨೦೦೬ ರ ಮುಂಗಾರು ಮಳೆ ಚಿತ್ರದ ಬಿಡುಗಡೆಯಿಂದಾಗಿ ಹೆಚ್ಚು ಪ್ರಸಿದ್ಧರಾಗಿದ್ದಾರೆ. [೨] ಈ ಚಿತ್ರವು ಬಿಡುಗಡೆಯಾದ ಸಮಯದಲ್ಲಿ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅತಿ ಹೆಚ್ಚು ಸಂಗ್ರಹವನ್ನು ದಾಖಲಿಸಿತು ಮತ್ತು ಮಲ್ಟಿಪ್ಲೆಕ್ಸ್‌ನಲ್ಲಿ ಅತಿ ಹೆಚ್ಚು ಕಾಲ ಮುಂದುವರಿದ ಚಿತ್ರವಾಗಿದೆ. [೩]

ಆರಂಭಿಕ ಜೀವನ[ಬದಲಾಯಿಸಿ]

ಯೋಗರಾಜ್ ಭಟ್‌ರವರು ಕರ್ನಾಟಕದ ಉಡುಪಿ ಜಿಲ್ಲೆಯ ಮಂದಾರ್ತಿಯಲ್ಲಿ ಜನಿಸಿದರು ಹಾಗೂ ಹಾವೇರಿಯ ತಿಳವಳ್ಳಿಯಲ್ಲಿ ಬೆಳೆದರು. ರಾಮಚಂದ್ರ ಭಟ್ ಮತ್ತು ಜಯಲಕ್ಷ್ಮಿ ಭಟ್ ದಂಪತಿಯ ಏಳು ಮಕ್ಕಳಲ್ಲಿ ಇವರು ಕಿರಿಯ ಮಗನಾಗಿದ್ದಾರೆ. ಇವರು ದೋಣಿ ಅಪಘಾತದಲ್ಲಿ ತಮ್ಮ ತಂದೆಯನ್ನು ಕಳೆದುಕೊಂಡರು. [೪]

ವೃತ್ತಿಜೀವನ[ಬದಲಾಯಿಸಿ]

ನಿರ್ದೇಶಕ[ಬದಲಾಯಿಸಿ]

ಇವರ ಮುಂಗಾರು ಮಳೆ ಚಿತ್ರವು ಅಂದಾಜು ೫೦-೭೫ ಕೋಟಿಗಳನ್ನು ಸಂಗ್ರಹಿಸಿತು. ಇದು ಅವರ ಮೂರನೇ ಚಿತ್ರವಾಗಿದ್ದು, ದಕ್ಷಿಣ ಚಲನಚಿತ್ರೋದ್ಯಮದಲ್ಲಿ ಇತಿಹಾಸವನ್ನು ಸೃಷ್ಟಿಸಿತು. ಈ ಚಿತ್ರವು ಸುಮಾರು ೪೬೪ ದಿನಗಳ ಕಾಲ ಮುಂದುವರಿಯಿತು ಹಾಗೂ ಮಲ್ಟಿಪ್ಲೆಕ್ಸ್‌ನಲ್ಲಿ ಇಡೀ ವರ್ಷ ನಿರಂತರವಾಗಿ ಮುಂದುವರಿದು ಯಾವುದೇ ಭಾಷೆಯ ಮೊದಲ ಚಿತ್ರವಾಗಿ, ಅತಿದೊಡ್ಡ ಹಿಂದಿ ಚಲನಚಿತ್ರೋದ್ಯಮದ ದಾಖಲೆಗಳನ್ನು ಮುರಿಯಿತು. [೫][೬][೭] ಇದು ಸ್ವಾಭಾವಿಕವಾಗಿ ಅವರಿಗೆ ಒಂಬತ್ತು ರಾಜ್ಯ ಚಲನಚಿತ್ರ ಪ್ರಶಸ್ತಿಗಳು (ಅತ್ಯುತ್ತಮ ನಿರ್ದೇಶಕ ಮತ್ತು ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಸೇರಿದಂತೆ) ಮತ್ತು ನಾಲ್ಕು ಫಿಲ್ಮ್‌ಫೇರ್ ಪ್ರಶಸ್ತಿಗಳು (ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ಸಂಗೀತ, ಅತ್ಯುತ್ತಮ ಸಾಹಿತ್ಯ ಮತ್ತು ಅತ್ಯುತ್ತಮ ಛಾಯಾಗ್ರಹಣ) ಸೇರಿದಂತೆ ಅನೇಕ ಬಹುಮಾನಗಳು, ಪ್ರಶಸ್ತಿಗಳು ಮತ್ತು ಮೆಚ್ಚುಗೆಗಳನ್ನು ತಂದಿತು. [೮] ಈ ಚಿತ್ರವನ್ನು ದಕ್ಷಿಣ ಭಾರತದ ಎಲ್ಲಾ ಭಾಷೆಗಳು ಮತ್ತು ಬಂಗಾಳಿ ಭಾಷೆಗಳಲ್ಲಿ ಬಳಕೆ ಮಾಡಲಾಗಿದೆ. ಹಿಂದಿ ಭಾಷೆಯಲ್ಲಿ ನಿರ್ಮಾಣವಾಗಲಿರುವ ಈ ಚಿತ್ರದ ಹಕ್ಕುಗಳನ್ನು ಶ್ರೀ ಬೋನಿ ಕಪೂರ್ ಖರೀದಿಸಿದ್ದಾರೆ. ಅವರು ಗಾಳಿಪಟ, ಮನಸಾರೆ, ಪಂಚರಂಗಿ, ಪರಮಾತ್ಮ, ಡ್ರಾಮಾ, ವಾಸ್ತು ಪ್ರಕಾರ, ದನ ಕಾಯೋನು, ಮುಗುಳು ನಗೆ ಮತ್ತು ಇತರ ಚಿತ್ರಗಳನ್ನು ನಿರ್ದೇಶಿಸಿದ್ದಾರೆ

ಗೀತರಚನೆಕಾರ[ಬದಲಾಯಿಸಿ]

ಮುಂಗಾರು ಮಳೆ, ಗಾಳಿಪಟ, ಜಂಗ್ಲೀ, ಜಾಕಿ, ಮನಸಾರೆ, ಪಂಚರಂಗಿ, ಪರಮಾತ್ಮ, ವಿಕ್ಟರಿ, ಹುಡುಗರು, ಡ್ರಾಮಾ, ಕಡ್ಡಿಪುಡಿ, ಬಚ್ಚನ್, ಅಧ್ಯಕ್ಷ, ಗಜಕೇಸರಿ, ರಾಜಾಹುಲಿ ಮುಂತಾದ ಕನ್ನಡ ಸಿನಿಮಾಗಳಿಗೆ ಯೋಗರಾಜ್ ಭಟ್‌ರವರು ಗೀತರಚನೆಕಾರರಾಗಿ ಕೆಲಸ ಮಾಡಿದ್ದಾರೆ.

ಡ್ರಾಮಾ ಚಿತ್ರದ ಬೊಂಬೆ ಆಡ್ಸೋನು ಹಾಡಿಗಾಗಿ ಅವರು ಫಿಲ್ಮ್‌ಫೇರ್ ಪ್ರಶಸ್ತಿ, ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ.

ಚಲನಚಿತ್ರಗಳ ಪಟ್ಟಿ[ಬದಲಾಯಿಸಿ]

Key
Films that have not yet been released Denotes films that have not yet been released
ವರ್ಷ ಚಲನಚಿತ್ರ
ನಿರ್ದೇಶಕ ನಿರ್ಮಾಪಕ ಬರಹಗಾರ ಗೀತರಚನೆಕಾರ Notes
೨೦೦೧ ಚಕ್ರ ಹೌದು ಹೌದು ದೂರದರ್ಶನ ಸರಣಿಗಳು
೨೦೦೩ ಮನಿ ಹೌದು
೨೦೦೪ ರಂಗ ಎಸ್.ಎಸ್.ಎಲ್.ಸಿ. ಹೌದು ಹೌದು
೨೦೦೬ ಮುಂಗಾರು ಮಳೆ ಹೌದು ಹೌದು ಹೌದು
೨೦೦೮ ಗಾಳಿಪಟ ಹೌದು ಹೌದು ಹೌದು
ಇಂತಿ ನಿನ್ನ ಪ್ರೀತಿಯ ಹೌದು ಹೌದು
೨೦೦೯ ಮನಸಾರೆ ಹೌದು ಹೌದು ಹೌದು
೨೦೧೦ ಪಂಚರಂಗಿ ಹೌದು ಹೌದು ಹೌದು ಹೌದು
೨೦೧೧ ಪ್ರೇಮಾ ಚಂದ್ರಮಾ ಹೌದು
ಪರಮಾತ್ಮ ಹೌದು ಹೌದು ಹೌದು
ಲೈಫು ಇಷ್ಟೇನೆ ಹೌದು ಹೌದು
೨೦೧೨ ಡ್ರಾಮಾ ಹೌದು ಹೌದು ಹೌದು
೨೦೧೩ ದ್ಯಾವ್ರೆ ಹೌದು ಹೌದು
೨೦೧೪ ಕ್ವಾಟ್ಲೆ ಸತೀಶ ಹೌದು
೨೦೧೫ ವಾಸ್ತು ಪ್ರಕಾರ ಹೌದು ಹೌದು ಹೌದು ಹೌದು
೨೦೧೬ ದನ ಕಯೋನು ಹೌದು ಹೌದು ಹೌದು
೨೦೧೭ ಮುಗುಳು ನಗೆ ಹೌದು ಹೌದು ಹೌದು ಹೌದು
೨೦೧೯ ಪಂಚತಂತ್ರ ಹೌದು ಹೌದು ಹೌದು ಹೌದು
೨೦೨೨ ಗಾಳಿಪಟ ೨ ಹೌದು ಹೌದು ಹೌದು [೯]
೨೦೨೩ ಗರಡಿ ಹೌದು Screenplay
೨೦೨೪ ಕರ್ನಾಟಕ ದಮನಕ ಹೌದು [೧೦]

ನಟನೆ[ಬದಲಾಯಿಸಿ]

ವರ್ಷ ಚಲನಚಿತ್ರ ಪಾತ್ರ ಟಿಪ್ಪಣಿಗಳು ಉಲ್ಲೇಖ
೨೦೧೩ ದ್ಯಾವ್ರೆ ಭೀಮಸೇನ ಪ್ರಮುಖ ಪಾತ್ರ [೧೧]
೨೦೧೬ ಪರಪಂಚ ಕಾಲಿಪೀಲಿ
೨೦೧೯ ಬೆಲ್ ಬಾಟಮ್ ಮರಕುಟಿಕಾ
೨೦೧೯ ಅವನೇ ಶ್ರೀಮನ್ನಾರಾಯಣ ಗುಪ್ತಾನಂದ ಸ್ವಾಮೀಜಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು.
೨೦೨೨ ಲಕ್ಕಿ ಮ್ಯಾನ್ ಸ್ವತಃ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು.
೨೦೨೩ ದಕ್ಷಿಣ ಭಾರತದ ಹೀರೋ

ಪ್ರಶಸ್ತಿಗಳು[ಬದಲಾಯಿಸಿ]

  • ೨೦೧೩ - ತಮ್ಮ ಸ್ವಂತ ನಿರ್ದೇಶನದ ಚಿತ್ರ "ಡ್ರಾಮಾ (೨೦೧೨ ಚಲನಚಿತ್ರ)" ದ "ಬೊಂಬೆ ಅಡ್ಸೋನು" ಹಾಡಿಗಾಗಿ ಫಿಲ್ಮ್‌ಫೇರ್ ಅತ್ಯುತ್ತಮ ಗೀತರಚನೆಕಾರ ಪ್ರಶಸ್ತಿ ಗೆದ್ದರು..[೧೨]
  • ೨೦೧೩ - ಬೊಂಬೆ ಅಡ್ಸೋನು ಹಾಡಿಗಾಗಿ "ಅತ್ಯುತ್ತಮ ಗೀತರಚನೆಕಾರ" ವಿಭಾಗದಲ್ಲಿ ಬೆಂಗಳೂರು ಟೈಮ್ಸ್ ಫಿಲ್ಮ್ ಪ್ರಶಸ್ತಿಯನ್ನು ಗೆದ್ದುಕೊಂಡರು.[೧೩]

ಉಲ್ಲೇಖಗಳು[ಬದಲಾಯಿಸಿ]

  1. Upadhyaya, Prakash. "Parapancha movie review: Live audience response". International Business Times, India Edition (in ಇಂಗ್ಲಿಷ್). Retrieved 2016-11-16.
  2. "SouthScope – One Stop Site For South Indian Cinema". SouthScope (in ಅಮೆರಿಕನ್ ಇಂಗ್ಲಿಷ್). Retrieved 2016-11-16.
  3. "Did you know? 'Mungaru Male' was the first film to cross Rs 50 crore at the box office as well as run for a year in a multiplex - Times of India". The Times of India (in ಇಂಗ್ಲಿಷ್). Retrieved 2021-10-19.
  4. "Yogaraj Bhat: A game changer". Deccan Herald (in ಇಂಗ್ಲಿಷ್). 2019-03-27. Retrieved 2021-10-19.
  5. "Ganesh Bal: The outsider on the inside | Latest News & Updates at Daily News & Analysis". dna (in ಅಮೆರಿಕನ್ ಇಂಗ್ಲಿಷ್). 2012-04-22. Retrieved 2016-11-17.
  6. "Will Pancharangi break the records of Mungaru Male?". www.filmibeat.com. 2010-09-07. Retrieved 2016-11-17.
  7. "Kannada Fim Industry | Famous Actors | Puneet Rajkumar | Ganesh | Ramya | Sudeep". www.mybangalore.com. Archived from the original on 24 July 2016. Retrieved 2016-11-17.
  8. "'Mungaru' to be remade in hindi soon - Times of India". The Times of India (in ಇಂಗ್ಲಿಷ್). Retrieved 2021-10-19.
  9. "galipata-2 in timesofindia". The Times of India. 20 January 2018. Retrieved 20 January 2019.
  10. Y Maheswara Reddy (Aug 25, 2023). "Almost ready". Bangalore Mirror (in ಇಂಗ್ಲಿಷ್). Retrieved 2023-09-06.
  11. Dyavre movie review, Times of India
  12. Filmfare Awards (South): The complete list of winners – IBNLive. Ibnlive.in.com (21 July 2013). Retrieved on 16 April 2014.
  13. Bangalore Times Film Awards 2012 goes to... – The Times of India. Timesofindia.indiatimes.com (19 August 2013). Retrieved on 16 April 2014.