ಊಟಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Ooty
Ooty ನಗರದ ಪಕ್ಷಿನೋಟ
Mountain top view of Udagamandalam
India-locator-map-blank.svg
Red pog.svg
Ooty
ರಾಜ್ಯ
 - ಜಿಲ್ಲೆ
Tamil Nadu
 - The Nilgiris
ನಿರ್ದೇಶಾಂಕಗಳು 11.38° N 76.70° E
ವಿಸ್ತಾರ
 - ಎತ್ತರ
 km²
 - 2286 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (2001)
 - ಸಾಂದ್ರತೆ
93921
 - /ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 643 00x
 - +0423
 - TN 43

ಊಟಿ ಯು, ( உதகமண்டலம் ) pronunciation ಊಟಕಮಂಡ್‌ ‌ಗಿರುವ pronunciation ಸಣ್ಣ ಹೆಸರು, (ಅಧಿಕೃತವಾಗಿ ಉದಗಮಂಡಲಂ (ತಮಿಳು:உதகமண்டலம்) ಕೆಲವೊಮ್ಮೆ ಸಂಕ್ಷಿಪ್ತವಾಗಿ ಉಧಗೈ ತಮಿಳು: உதகை ಎಂದೂ ಕರೆಯಲಾಗುತ್ತದೆ) ಒಂದು ನಗರ, ಮುನ್ಸಿಪಾಲಿಟಿ ಮತ್ತು ಭಾರತತಮಿಳುನಾಡು ರಾಜ್ಯದ ನೀಲಗಿರಿ ಜಿಲ್ಲೆಯ ಜಿಲ್ಲಾ ರಾಜಧಾನಿಯಾಗಿದೆ.

ಊಟಕಮಂಡ್‌ ನೀಲಗಿರಿ ಬೆಟ್ಟಗಳಲ್ಲಿರುವ ಒಂದು ಪ್ರಸಿದ್ಧ ಗಿರಿಧಾಮವಾಗಿದೆ. ಉದಗಮಂಡಲಂ ಎಂಬುದು ಈ ನಗರಕ್ಕಿರುವ ಅಧಿಕೃತ ತಮಿಳು ಹೆಸರಾಗಿದೆ. ಊಟಿಯು ಸಮುದ್ರ ಮಟ್ಟಕ್ಕಿಂತ ಸುಮಾರು 7,500 ಅಡಿ (2, 286 ಮೀ) ಎತ್ತರದಲ್ಲಿದೆ.

ಪರಿವಿಡಿ

[ಬದಲಾಯಿಸಿ] ವ್ಯುತ್ಪತ್ತಿಶಾಸ್ತ್ರ

ತೋಡ ಭಾಷೆಯಲ್ಲಿ ಈ ಸ್ಥಳವನ್ನು "ಒತ್ತೆಕಲ್ ಮಂದೆ" ಎನ್ನುತ್ತಿದ್ದರು. ತೋಡ ಬುಡಕಟ್ಟಿನ ಹಾಡಿ ಅಥವಾ ಹಳ್ಳಿಗೆ "ಮಂಡ್" ಅಥವಾ "ಮಂದೆ" ಎನ್ನುತ್ತಾರೆ. ಮಂಡ್ ಎಂಬ ಪದದಿಂದ ಅಂತ್ಯವಾಗುವ ಹಲವಾರು ತೋಡ ವಾಸಸ್ಥಾನಗಳನ್ನು ಈ ಪ್ರದೇಶದಲ್ಲಿ ಕಾಣಬಹುದಾಗಿದೆ. ತೊಡ ಜನರು ಮಾತನಾಡುವುದು ಪೂರ್ವದ್ರಾವಿಡ ಭಾಷೆ. [೧] ಆ ಹೆಸರಿನ ("ಊಟಕ") ಮತ್ತೊಂದು ಅಂತಹುದೇ ಮೂಲವು ಸ್ಥಳೀಯ ಭಾಷೆಯಿಂದ ಬಂದಿರಬಹುದು, ಅದರಲ್ಲಿ "ಓತ-ಕಲ್" ಎಂದರೆ ಅಕ್ಷರಾರ್ಥದಲ್ಲಿ "ಒಂದು ಕಲ್ಲು" ಎಂಬರ್ಥವನ್ನು ನೀಡುತ್ತದೆ. ಇದು ಸ್ಥಳೀಯ ಟೋಡ ಜನರಿಂದ ಪೂಜಿಸಲ್ಪಡುತ್ತಿದ್ದ ಪವಿತ್ರ ಕಲ್ಲಿಗಿರುವ ಉಲ್ಲೇಖವಾಗಿರಬಹುದು. ಮೊದಲು ಇದು ಮೈಸೂರು ಸಂಸ್ಥಾನದ ಭಾಗವಾಗಿದ್ದು ರಾಜ್ಯಗಳ ಪುನರ್ ವಿಂಗಡನೆಯ ಸಮಯದಲ್ಲಿ ತಮಿಳುನಾಡಿಗೆ ಸೇರಿಹೋಯಿತು. ಕನ್ನಡದ ಇತಿಹಾಸ ದಾಖಲೆಗಳಲ್ಲಿ ಇದನ್ನು ಉದಕಮಂಡಲ ಎಂದು ಕರೆಯಲಾಗಿದೆ. ನಂತರ ತಮಿಳಿನಲ್ಲಿ ಉದಗಮಂಡಲ>ಉದಗೈ ಎಂದು ಬರೆಸಿಕೊಳ್ಳುವುದಾದರೂ ಊಟಿ ಎಂಬುದು ಜನಪ್ರಿಯ ಹೆಸರಾಗಿದೆ.

[ಬದಲಾಯಿಸಿ] ಇತಿಹಾಸ

ಚಿತ್ರ:Ooty club.gif
ಊಟಕಮಂಡ್‌ ಕ್ಲಬ್‌ನ ಮುಂಭಾಗ, 1905.

ಊಟಿಯು ನೀಲ ಬೆಟ್ಟಗಳೆಂದೂ ಕರೆಯಲ್ಪಡುವ ನೀಲಗಿರಿ ಬೆಟ್ಟಗಳ ಮಧ್ಯೆ ವಿಶಾಲವಾಗಿ ಚಾಚಿಕೊಂಡಿದೆ. ಈ ಹೆಸರು ಆ ಪ್ರದೇಶದಲ್ಲಿ ಆವರಿಸಿರುವ ನೀಲಗಿರಿ ಮರಗಳಿಂದ ಉಂಟಾದ ನೀಲಿ ಹೊಗೆಯಂಥ ಮುಸುಕಿನಿಂದ ಬಂದಿರಬಹುದೇ ಅಥವಾ ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ಅರಳುವ ನೀಲಿ ಬಣ್ಣದ ಛಾಯೆಯನ್ನು ನೀಡುವ ಕುರುಂಜಿ ಹೂಗಳಿಂದಾಗಿ ಬಂದಿರಬಹುದೇ ಎಂಬುದು ತಿಳಿದಿಲ್ಲ. ರಾಷ್ಟ್ರದ ಇತರ ಯಾವುದೇ ಪ್ರದೇಶದಂತಿಲ್ಲದೆ, ಊಟಿಯು ಯಾವುದೇ ರಾಜ್ಯದ ಅಥವಾ ಸಾಮ್ರಾಜ್ಯದ ಭಾಗವಾಗಿತ್ತು ಎಂದು ಸೂಚಿಸಲು ಯಾವ ಐತಿಹಾಸಿಕ ಆಧಾರಗಳೂ ಕಂಡುಬಂದಿಲ್ಲ. ಟಿಪ್ಪು ಸುಲ್ತಾನ್ ಅಡಗಿಕೊಳ್ಳುವ ಗುಹೆಯಂಥ ರಚನೆಯನ್ನು ನಿರ್ಮಿಸುವ ಮೂಲಕ ತನ್ನ ಗಡಿಯನ್ನು ವಿಸ್ತರಿಸಿದ ಮೊದಲ ರಾಜನಾಗಿದ್ದಾರೆ.

ಅದು ಮೂಲತಃ ಒಂದು ಬುಡಕಟ್ಟು ಪ್ರದೇಶವಾಗಿತ್ತು. ಅಲ್ಲಿ ಟೋಡ ಜನರು ಇತರ ಬುಡಕಟ್ಟು ಪಂಗಡಗಳೊಂದಿಗೆ ವಾಸಿಸುತ್ತಿದ್ದರು, ಅವರು ವಿಶೇಷ ಪಾಂಡಿತ್ಯ ಸಾಧನೆ ಮತ್ತು ವ್ಯಾಪಾರದ ಮೂಲಕ ಸಹಬಾಳ್ವೆ ನಡೆಸುತ್ತಿದ್ದರು. ಬಡಗಗಳು ಬೆಳೆಗಳನ್ನು ಬೆಳೆಸಲು ಮತ್ತು ಟೋಡ ಜನರು ನೀರು ಕೋಣಗಳನ್ನು ಬೆಳೆಸಲು ಹೆಸರುವಾಸಿಯಾಗಿದ್ದರು. ಫ್ರೆಡೆರಿಕ್ ಪ್ರೈಸ್ ತನ್ನ ಪುಸ್ತಕ 'ಊಟಕಮಂಡ್‌, ಎ ಹಿಸ್ಟರಿ'ಯಲ್ಲಿ ಈಗ 'ಹಳೆ ಊಟಿ' ಎಂದು ಕರೆಯಲ್ಪಡುವ ಪ್ರದೇಶದಲ್ಲಿ ಮೂಲತಃ ಟೋಡ ಜನರು ವಾಸಿಸುತ್ತಿದ್ದರೆಂದು ಹೇಳಿದ್ದಾರೆ. ಟೋಡ ಜನರು ನಂತರ ಆ ಪ್ರದೇಶವನ್ನು ಕೊಯಂಬತ್ತೂರಿನ ಆಗಿನ ಗವರ್ನರ್ ಜಾನ್ ಸುಲ್ಲಿವನ್‌ರಿಗೆ ಒಪ್ಪಿಸಿದರು. ನಂತರ ಅವರು ಆ ನಗರವನ್ನು ಅಭಿವೃದ್ಧಿಪಡಿಸಿದರು ಮತ್ತು ಅಲ್ಲಿ ಚಹಾ, ಚಿಂಕೋನ ಮತ್ತು ತೇಗ ಮರಗಳನ್ನು ಬೆಳೆಸಲು ಪ್ರೋತ್ಸಾಹ ನೀಡಿದರು. ಇತರ ವಸಾಹತುಗಾರರಂತೆ ಸುಲ್ಲಿವನ್ ಕೂಡ ಆ ಬುಡಕಟ್ಟು ಜನರ ಸಹಬಾಳ್ವೆಯಿಂದ ಆಕರ್ಷಿತರಾದರು ಮತ್ತು ಈ ಸಮತೋಲನವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರು. ಅವರು ನಂತರ ಈ ಬುಡಕಟ್ಟು ಜನರಿಗಾಗಿ ಆಸ್ತಿಯ ಹಕ್ಕು ಮತ್ತು ಸಾಂಸ್ಕೃತಿಕ ಮಾನ್ಯತೆಯನ್ನು ದೃಢೀಕರಿಸುವುದಕ್ಕಾಗಿ ತುಂಬಾ ಪ್ರಯತ್ನ ಪಟ್ಟರು. ಆದರೆ ಇದಕ್ಕಾಗಿ ಅವರು ಬ್ರಿಟಿಷ್ ಸರ್ಕಾರದಿಂದ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಶಿಕ್ಷೆಗೆ ಒಳಗಾದರು.

ಆ ಬೆಟ್ಟಗಳು ಬ್ರಿಟಿಷ್ ಪ್ರಭುತ್ವದಡಿಯಲ್ಲಿ ಅತಿ ಶೀಘ್ರದಲ್ಲಿ ಅಭಿವೃದ್ಧಿಹೊಂದಿದವು ಏಕೆಂದರೆ ಅವನ್ನು ಹೆಚ್ಚುಕಡಿಮೆ ಸಂಪೂರ್ಣವಾಗಿ ಖಾಸಗಿ ಬ್ರಿಟಿಷ್ ಜನರು ಸ್ವಂತ ಮಾಡಿಕೊಂಡಿದ್ದರು. ಭಾರತದ ಉಳಿದ ಭಾಗಕ್ಕಿಂತ ಭಿನ್ನವಾಗಿ, ಬ್ರಿಟಿಷರು ಊಟಿ ನಗರಕ್ಕೆ ನೆಲೆಗೊಳ್ಳುವುದಕ್ಕಾಗಿ ಬಂದರು ಮತ್ತು ಹಲವಾರು ಪೀಳಿಗೆಯವರೆಗೆ ಅಲ್ಲೇ ವಾಸಿಸಿದರು. ಊಟಿಯು ಹಿಂದೆ ಮದ್ರಾಸ್ ಪ್ರಾಂತ ಮತ್ತು ಇತರ ಸಣ್ಣ ಪ್ರಾಂತ್ಯಗಳ ಬೇಸಿಗೆ ರಾಜಧಾನಿಯಾಗಿತ್ತು. ಬ್ರಿಟಿಷರ ವಸಾಹತು ದಿನಗಳಲ್ಲಿ ಅವರು ಇಲ್ಲಿಗೆ ಹಲವಾರು ಬಾರಿ ಭೇಟಿನೀಡಿದ್ದರು ಮತ್ತು ಇಂದು ಇದೊಂದು ಪ್ರಸಿದ್ಧ ಬೇಸಿಗೆ ಮತ್ತು ವಾರಾಂತ್ಯದ ರೆಸಾರ್ಟ್ ಆಗಿದೆ. ಚೇತರಿಸಿಕೊಳ್ಳುವುದಕ್ಕಾಗಿ ಸಿಪಾಯಿಗಳನ್ನೂ ಇಲ್ಲಿಗೆ ಮತ್ತು ಹತ್ತಿರದ ವೆಲ್ಲಿಂಗ್ಟನ್‌ಗೆ (ಆಗಿನ ಮದ್ರಾಸ್ ರೆಜಿಮೆಂಟ್(ಪಡೆ)ನ ನೆಲೆ) ಕಳುಹಿಸಲಾಗುತ್ತಿತ್ತು.

ಊಟಿಯನ್ನು ವಕ್ರವಾದ ಬೆಟ್ಟದ ರಸ್ತೆಗಳ ಮೂಲಕ ಅಥವಾ ಭಾವೋದ್ರಿಕ್ತ ಮತ್ತು ಉದ್ಯಮಶೀಲ ಬ್ರಿಟಿಷ್ ಜನರು ಮದ್ರಾಸ್ ಸರ್ಕಾರದ ಸಾಹಸೋದ್ಯಮ ಬಂಡವಾಳದಿಂದ 1908ರಲ್ಲಿ ನಿರ್ಮಿಸಿದ ಜಟಿಲವಾದ ಹಲ್ಲುಕಂಬಿ ರೈಲುಮಾರ್ಗದ ಮೂಲಕ ತಲುಪಬಹುದು.

ಊಟಿಯ ಹೆಚ್ಚಿನ ಭಾಗವು ಸಮುದ್ರ ಮಟ್ಟಕ್ಕಿಂತ ಸುಮಾರು 2,286 ಮೀಟರ್‌ಗಳಷ್ಟು ಎತ್ತರದಲ್ಲಿದೆ[೨]. ಇದರ ಅದ್ಭುತ ಸೊಬಗು ಮತ್ತು ಭವ್ಯವಾದ ಹಸಿರು ಆಳ ಕಣಿವೆಗಳು ಬ್ರಿಟಿಷರಿಗೆ ಅದಕ್ಕೆ "ಗಿರಿಧಾಮಗಳ ರಾಣಿ" ಎಂದು ಹೆಸರಿಡುವಂತೆ ಪ್ರೇರೇಪಿಸಿತು.

[ಬದಲಾಯಿಸಿ] ಹವಾಮಾನ

Udagamandalam ಹವಾಮಾನ ಮಾಹಿತಿ
ತಿಂಗಳು ಜನವರಿ ಫೆಬ್ರುವರಿ ಮಾರ್ಚ್ ಏಪ್ರಿಲ್ ಏಪ್ರಿಲ್ ಜೂನ್ ಜುಲೈ ಆಗಸ್ಟ್ ಸೆಪ್ಟೆಂಬರ್ ಅಕ್ಟೋಬರ್ ನವೆಂಬರ್ ಡಿಸೆಂಬರ್ Year
Record high °C (°F) 24
(75)
24
(75)
24
(75)
25
(77)
24
(75)
22
(72)
20
(68)
20
(68)
21
(70)
21
(70)
22
(72)
23
(73)
೨೫
(೭೭)
Average high °C (°F) 20
(68)
21
(70)
22
(72)
22
(72)
21
(70)
18
(64)
16
(61)
17
(63)
18
(64)
19
(66)
19
(66)
20
(68)
೧೯.೪
(೬೭)
Average low °C (°F) 5
(41)
6
(43)
8
(46)
10
(50)
11
(52)
10
(50)
10
(50)
10
(50)
10
(50)
10
(50)
8
(46)
6
(43)
೮.೭
(೪೭.೬)
Record low °C (°F) -2
(28)
2
(36)
5
(41)
8
(46)
9
(48)
8
(46)
9
(48)
8
(46)
7
(45)
6
(43)
3
(37)
2
(36)
-೨
(೨೮)
Precipitation mm (inches) 20
(0.79)
10
(0.39)
26
(1.02)
75
(2.95)
147
(5.79)
137
(5.39)
181
(7.13)
124
(4.88)
135
(5.31)
189
(7.44)
140
(5.51)
53
(2.09)
೧,೨೩೭
(೪೮.೭)
[ಉಲ್ಲೇಖದ ಅಗತ್ಯವಿದೆ]

[ಬದಲಾಯಿಸಿ] ಜನಸಂಖ್ಯಾ ವಿವರ

ಊಟಿಯ ಮನಮೋಹಕ ದೃಶ್ಯ

2001ರ ಭಾರತ ಗಣತಿಯ[೩] ಪ್ರಕಾರ, ಉದಗಮಂಡಲಂ ಸುಮಾರು 93,921 ಜನಸಂಖ್ಯೆಯನ್ನು ಹೊಂದಿದೆ. ಈ ಜನಸಂಖ್ಯೆಯಲ್ಲಿ 50%ನಷ್ಟು ಪುರುಷರು ಮತ್ತು 50%ನಷ್ಟು ಮಹಿಳೆಯರಿದ್ದಾರೆ. ಉದಗಮಂಡಲಂನ ಸರಾಸರಿ ಅಕ್ಷರಸ್ಥರ ಪ್ರಮಾಣವು 80%ರಷ್ಟಿದೆ, ಇದು ರಾಷ್ಟ್ರೀಯ ಸರಾಸರಿ ಅಕ್ಷರಸ್ಥರ ಪ್ರಮಾಣ 59.5%ಕ್ಕಿಂತ ಹೆಚ್ಚಾಗಿದೆ: ಗಂಡಸರ ಅಕ್ಷರತೆ 84%ರಷ್ಟಿದ್ದರೆ, ಹೆಂಗಸರ ಅಕ್ಷರತೆ 75%ರಷ್ಟಿದೆ. ಉದಗಮಂಡಲಂನಲ್ಲಿ ಜನಸಂಖ್ಯೆಯ 9%ನಷ್ಟು ಮಂದಿ 6 ವರ್ಷದ ಕೆಳಗಿನ ವಯಸ್ಸಿನ ಮಕ್ಕಳಾಗಿದ್ದಾರೆ. ತಮಿಳು ಭಾಷೆಯು ಉದಗಮಂಡಲಂನ ಸರ್ವಸಾಮಾನ್ಯ ಭಾಷೆಯಾಗಿದೆ. ಬಡಗ ಮತ್ತು ಪನಿಯ ಮೊದಲಾದ ನೀಲಗಿರಿಗೆ ಸ್ಥಳೀಯವಾದ ಭಾಷೆಗಳನ್ನು ಅವುಗಳ ಅನುಕ್ರಮ ಬುಡಕಟ್ಟುಗಳ ಜನರೂ ಮಾತನಾಡುತ್ತಾರೆ. ಪಕ್ಕದ ರಾಜ್ಯಗಳಿಗೆ ಸಮೀಪದಲ್ಲಿರುವುದರಿಂದ ಮತ್ತು ಪ್ರಸಿದ್ಧ ಪ್ರವಾಸಿ ತಾಣವಾದುದರಿಂದ ಊಟಿಯಲ್ಲಿ ಇಂಗ್ಲಿಷ್, ಹಿಂದಿ, ಕನ್ನಡ ಮತ್ತು ಮಲಯಾಳಂ ಮೊದಲಾದ ಭಾಷೆಗಳನ್ನೂ ಸ್ವಲ್ಪ ಮಟ್ಟಿಗೆ ಮಾತನಾಡುತ್ತಾರೆ ಮತ್ತು ಅರ್ಥೈಸಿಕೊಳ್ಳುತ್ತಾರೆ.

[ಬದಲಾಯಿಸಿ] ಸರ್ಕಾರ ಮತ್ತು ರಾಜಕೀಯ

ಊಟಿಯು ನೀಲಗಿರಿ ಜಿಲ್ಲೆಯ ಜಿಲ್ಲಾ ಪ್ರಧಾನ ಕಾರ್ಯಸ್ಥಾನವಾಗಿದೆ. ಊಟಕಮಂಡ್‌ ಚುನಾವಣಾಕ್ಷೇತ್ರವು ನೀಲಗಿರಿಯ (ಲೋಕಸಭಾ ಚುನಾವಣಾಕ್ಷೇತ್ರ) ಭಾಗವಾಗಿದೆ.[೪]

[ಬದಲಾಯಿಸಿ] ಆರ್ಥಿಕ ಸ್ಥಿತಿ

ಕಪ್ಪಾದ ನೀಲಗಿರಿ ಚಹಾ ಎಲೆಗಳು

ಹೆಚ್ಚಿನ ಸ್ಥಳೀಯ ಆರ್ಥಿಕ ಸ್ಥಿತಿಯ ಮೇಲೆ ಪ್ರವಾಸೋದ್ಯಮವು ಪ್ರಭಾವ ಬೀರುತ್ತದೆ ಎಂಬ ಕಲ್ಪನೆಗೆ ವಿರುದ್ಧವಾಗಿ, ಊಟಿಯು ಸುತ್ತಮುತ್ತಲಿನ ಪ್ರದೇಶಕ್ಕೆ ಈಗಲೂ ಒಂದು ಪೂರೈಕೆಯ ಆಧಾರವಾಗಿದೆ ಮತ್ತು ಮಾರುಕಟ್ಟೆ ನಗರವಾಗಿದೆ. ಊಟಿಯು ಹೆಚ್ಚಾಗಿ ಕೃಷಿ, ಮುಖ್ಯವಾಗಿ "ಇಂಗ್ಲಿಷ್ ತರಕಾರಿಗಳು" ಮತ್ತು "ಇಂಗ್ಲಿಷ್ ಹಣ್ಣು"ಗಳ ಕೃಷಿಯನ್ನು ಅವಲಂಬಿಸಿದೆ. ತರಕಾರಿಗಳೆಂದರೆ ಮುಖ್ಯವಾಗಿ ಆಲೂಗಡ್ಡೆ, ಕ್ಯಾರೆಟ್, ಕ್ಯಾಬೇಜ್ ಮತ್ತು ಕಾಲಿಫ್ಲವರ್ ಹಾಗೂ ಹಣ್ಣುಗಳೆಂದರೆ ಪೀಚ್ ಹಣ್ಣು, ಪ್ಲಮ್ ಹಣ್ಣು, ಪೇರು ಹಣ್ಣು ಮತ್ತು ಸ್ಟ್ರಾಬೆರಿ. ಈ ಉತ್ಪನ್ನಗಳ ದಿನದಿತ್ಯದ ಸಾರಾಸಗಟಿನ ಹರಾಜು ಊಟಿ ಮುನ್ಸಿಪಾಲ್ ಮಾರುಕಟ್ಟೆಯಲ್ಲಿ ನಡೆಯುತ್ತದೆ, ಇದು ಭಾರತದಲ್ಲೇ ಅತ್ಯಂತ ದೊಡ್ಡ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಹೈನುಗಾರಿಕೆಯು ಈ ಪ್ರದೇಶದಲ್ಲಿ ಬಹುಹಿಂದಿನಿಂದಲೇ ಅಸ್ತಿತ್ವದಲ್ಲಿದೆ. ಊಟಿಯಲ್ಲಿ ಚೀಸ್ ಮತ್ತು ಕೆನೆ ತೆಗೆದ ಹಾಲಿನ ಪುಡಿಯನ್ನು ತಯಾರು ಮಾಡುವ ಒಂದು ಸಹಕಾರಿ ಡೈರಿಯಿದೆ. ಸ್ಥಳೀಯ ಕೃಷಿಕ ಕೈಗಾರಿಕೆಯಿಂದಾಗಿ ಕೆಲವು ಸಂಶೋಧನಾ ಸಂಸ್ಥೆಗಳು ಊಟಿಯಲ್ಲಿ ನೆಲೆಯಾಗಿವೆ. ಅವುಗಳೆಂದರೆ ಮಣ್ಣು ಸಂರಕ್ಷಣಾ ಕೇಂದ್ರ, ಪ್ರಾಣಿ ಸಾಕಣೆ ಕೇಂದ್ರ ಮತ್ತು ಆಲೂಗಡ್ಡೆ ಸಂಶೋಧಾ ಕೇಂದ್ರ. ಸ್ಥಳೀಯ ಬೆಳೆಯ ವಲಯವನ್ನು ವೈವಿಧ್ಯಗೊಳಿಸುವುದಕ್ಕಾಗಿ ಇಲ್ಲಿ ಹೂಬೇಸಾಯ ಮತ್ತು ರೇಷ್ಮೆ ವ್ಯವಸಾಯ ಮಾತ್ರವಲ್ಲದೆ ಅಣಬೆ ಕೃಷಿಯನ್ನೂ ಆರಂಭಿಸುವ ಪ್ರಯತ್ನಗಳನ್ನು ಮಾಡಲಾಗಿದೆ.

ಚಲನಚಿತ್ರ ನಿರ್ಮಾಪಕ ಸಂಸ್ಥೆ ಹಿಂದುಸ್ತಾನ್ ಫೋಟೊ ಫಿಲ್ಮ್ಸ್ ಸಹ ಊಟಿಯಲ್ಲಿನ ಒಂದು ಪ್ರಮುಖ ಉದ್ಯಮವಾಗಿದೆ. ಇದು ನಗರದ ಹೊರವಲಯ ಇಂದು ನಗರದಲ್ಲಿದೆ. ಮಾನವನ ರೇಬೀಸ್ ರೋಗ ಲಸಿಕೆಯನ್ನು ತಯಾರಿಸುವ ಹ್ಯೂಮನ್ ಬಯೋಲಾಜಿಕಲ್ಸ್ ಇನ್‌ಸ್ಟಿಟ್ಯೂಟ್ ಊಟಿಯಲ್ಲಿ ಪುದುಮಂಡ್‌ನ ಹತ್ತಿರದಲ್ಲಿದೆ. ಇತರ ಉತ್ಪಾದನಾ ಕೈಗಾರಿಕೆಗಳು ಊಟಿಯ ಹೊರವಲಯದಲ್ಲಿವೆ. ಇವುಗಳಲ್ಲಿ ಹೆಚ್ಚು ಪ್ರಮುಖವಾದವು ಕೆಟ್ಟಿ (ಸೂಜಿಯ ಕೈಗಾರಿಕೆ); ಅರುವಂಕಾಡು (ಕಾರ್ಡೈಟು ಕೈಗಾರಿಕೆ) ಮತ್ತು ಕೂನೂರು (ರೇಬೀಸ್ ರೋಗ ಲಸಿಕೆಯ ಕೈಗಾರಿಕೆ) ಮೊದಲಾದೆಡೆಗಳಲ್ಲಿವೆ. ಈ ಪ್ರದೇಶದಲ್ಲಿರುವ ಗೃಹಕೈಗಾರಿಕೆಗಳೆಂದರೆ ಚಾಕೊಲೇಟ್, ಉಪ್ಪಿನ ತಯಾರಿಕೆ ಮತ್ತು ಮರಗೆಲಸ. ಮನೆಯಲ್ಲಿ ತಯಾರಿಸಿದ ಚಾಕೊಲೇಟ್‌ಗಳು ಪ್ರವಾಸಿಗರಲ್ಲಿ ಮತ್ತು ಸ್ಥಳೀಯರಲ್ಲಿ ಜನಪ್ರಿಯವಾಗಿವೆ.

ಸ್ಥಳೀಯ ಪ್ರದೇಶವು ಚಹಾ ಕೃಷಿಗೆ ಹೆಸರುವಾಸಿಯಾದರೂ, ಈ ಬೆಳೆಯನ್ನು ಊಟಿಯಲ್ಲಿ ಬೆಳೆಯಲಾಗುವುದಿಲ್ಲ ಅಥವಾ ಸಂಸ್ಕರಿಸಲಾಗುವುದಿಲ್ಲ. ಚಹಾವನ್ನು ಹೆಚ್ಚು ವಾಣಿಜ್ಯವಾಗಿ ಸ್ವಲ್ಪಮಟ್ಟಿಗೆ ಕಡಿಮೆ ಎತ್ತರವಿರುವ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಆದ್ದರಿಂದ ಕೂನೂರು ಮತ್ತು ಕೋಟಗಿರಿ ನಗರಗಳು ಚಹಾ ಕೃಷಿ ಮತ್ತು ಸಂಸ್ಕರಣೆಯ ಸ್ಥಳೀಯ ಕೇಂದ್ರಗಳಾಗಿವೆ.

ಕಳೆದ 30 ವರ್ಷಗಳಲ್ಲಿ ವಿಶೇಷವಾಗಿ ಭಾರತದೊಳಗಿನ ಪ್ರದೇಶಗಳಿಂದ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಗಮನಾರ್ಹ ಬೆಳವಣಿಗೆಯಾಗಿದೆ. ಈ ಬೇಡಿಕೆಯನ್ನು ಈಡೇರಿಸುವ ನಿರ್ಮಾಣ ಕಾರ್ಯವು ಅಭಿವೃದ್ಧಿಯನ್ನುಂಟುಮಾಡಿತು ಹಾಗೂ ಕಣಿವೆಯ ನೈಸರ್ಗಿಕ ಸೌಂದರ್ಯವನ್ನು ಆಸ್ವಾದಿಸಲು ಬೆಟ್ಟದ ಪಕ್ಕದಲ್ಲಿ ಅಥವಾ ನಗರಕ್ಕಿಂತ ಸ್ವಲ್ಪ ದೂರದಲ್ಲಿ ನಿಂತು ನೋಡಬೇಕು.

[ಬದಲಾಯಿಸಿ] ಸಾರಿಗೆ ವ್ಯವಸ್ಥೆ

[ಬದಲಾಯಿಸಿ] ರಸ್ತೆ ಸಾರಿಗೆ

ಊಟಿಯು ಉತ್ತಮವಾದ ರಸ್ತೆ ಸಾರಿಗೆ ವ್ಯವಸ್ಥೆಯನ್ನು ಹೊಂದಿದೆ. ಇದು ಚೈನ್ನೈಯಿಂದ (ಸೇಲಂನ ಮೂಲಕ) 535 ಕಿಮೀ, ಕೊಯಂಬತ್ತೂರಿನಿಂದ 78 ಕಿಮೀ, ಕೂನೂರಿನಿಂದ 18 ಕಿಮೀ, ಮೈಸೂರಿನಿಂದ (ಗುಡಲೂರಿನ ಮೂಲಕ) 155 ಕಿಮೀ, ಕ್ಯಾಲಿಕಟ್‌ನಿಂದ 187 ಕಿಮೀ, ಬೆಂಗಳೂರಿನಿಂದ 290 ಕಿಮೀ, ಕೊಚ್ಚಿಯಿಂದ (ಕೊಯಂಬತ್ತೂರು ಮತ್ತು ಪಾಲಕ್ಕಾಡ್‌ನ ಮೂಲಕ) 281 ಕಿಮೀ, ಕೊಡೈ‌ಕೆನಾಲ್‌ನಿಂದ (ಕೊಯಂಬತ್ತೂರು ಮತ್ತು ಪಳನಿಯ ಮೂಲಕ) 236 ಕಿಮೀ ದೂರದಲ್ಲಿದೆ. ಊಟಿಯು ರಾಷ್ಟ್ರೀಯ ಹೆದ್ದಾರಿ 67ರಲ್ಲಿದೆ. ತಮಿಳುನಾಡು, ಕೇರಳಾ ಮತ್ತು ಕರ್ನಾಟಕ ರಾಜ್ಯಗಳಿಂದ ಇಲ್ಲಿಗೆ ಸಂಪರ್ಕ ಹೊಂದಿದೆ ಐದು ಪ್ರಮುಖ ನೀಲಗಿರಿ ಘಾಟಿ ರಸ್ತೆಗಳ ಮೂಲಕ ಪ್ರವಾಸಿಗರು ಊಟಿಯನ್ನು ತಲುಪಬಹುದು. ಊಟಿಗೆ ಕೋಟಗಿರಿಯ ಮೂಲಕ ಮೆಟ್ಟುಪಾಳಯಂ‌ನಿಂದಲೂ (ಕೊಯಂಬತ್ತೂರು ಜಿಲ್ಲೆ) ಒಂದು ರಸ್ತೆಯಿದೆ. ಈ ರಸ್ತೆಯು ಕೂನೂರಿನ ಮೂಲಕ ಹಾದುಹೋಗುವುದಿಲ್ಲ.

ಜಿಲ್ಲಾ ರಾಜಧಾನಿಯಾದ ಊಟಿಯು ಕೂನೂರು, ಕೋಟಗಿರಿ ಮತ್ತು ಗುಡಲೂರು ಮೊದಲಾದ ಜಿಲ್ಲೆಗಳಲ್ಲಿರುವ ಹತ್ತಿರದ ನಗರಗಳಿಂದ ಅನೇಕ ಬಸ್ ಸೌಲಭ್ಯಗಳನ್ನು ಹೊಂದಿದೆ. ಈ ಜಿಲ್ಲೆಯ ಹೆಚ್ಚಿನ ಹಳ್ಳಿಗಳಿಗೆ ಈ ಮೂರು ನಗರಗಳಲ್ಲಿ ಒಂದರ ಮೂಲಕ ಬಸ್ ಸೌಕರ್ಯಗಳಿವೆ. ಹತ್ತಿರದ ಮೆಟ್ಟುಪಾಳಯಂ ಮತ್ತು ಕೊಯಂಬತ್ತೂರಿನ ಪ್ರಮುಖ ರೈಲು ನಿಲ್ದಾಣಗಳಿಗೆ ಇಲ್ಲಿಂದ ಅನೇಕ ಬಸ್ ಸೌಲಭ್ಯಗಳಿವೆ. ಈ ನಗರವು ತಮಿಳುನಾಡಿನ ಹಲವಾರು ನಗರ ಮತ್ತು ಪಟ್ಟಣಗಳಿಗೂ ನೇರ ಬಸ್ ಸಂಪರ್ಕವನ್ನು ಹೊಂದಿದೆ, ಅವುಗಳೆಂದರೆ ತಿರುಪುರ್, ಈರೋಡ್, ಸೇಲಂ, ಸತ್ಯಮಂಗಲಂ, ಕಾರೂರು, ದಿಂಡಿಗಲ್, ಚೈನ್ನೈ, ತಿರುಚಿರಪಲ್ಲಿ, ಮುಧರೈ, ತಂಜಾವೂರು ಮತ್ತು ಕನ್ಯಾಕುಮಾರಿ. ಹತ್ತಿರದ ಮೈಸೂರು ಮತ್ತು ಕೋಳಿಕೋಡ್ (ಗಡಿಪ್ರದೇಶದ ಎರಡು ರಾಜ್ಯಗಳ) ನಗರಗಳಿಂದ ಇಲ್ಲಿಗೆ ಅನೇಕ ಬಸ್ ಸೌಕರ್ಯಗಳಿವೆ. ಕರ್ನಾಟಕ ಮತ್ತು ಕೇರಳಾದ ಹಲವಾರು ಇತರ ಭಾಗಗಳಿಂದಲೂ ಊಟಿಗೆ ನೇರ ಬಸ್‌ಗಳು ಲಭಿಸುತ್ತವೆ, ಕೇರಳಾದ ಪಾಲ್ಘಾಟ್, ನೀಲಾಂಬುರ್ ಮತ್ತು ಸುಲ್ತಾನ್ ಬ್ಯಾಥೆರಿಗೆ ಹಾಗೂ ಕರ್ನಾಟಕದ ಗುಂಡ್ಲುಪೇಟೆಗೆ ಸ್ಥಳೀಯ ಸೌಕರ್ಯಗಳಿವೆ. ಈ ಎರಡು ರಾಜ್ಯಗಳ ರಾಜಧಾನಿ ನಗರಗಳು (ಅನುಕ್ರಮವಾಗಿ ಬೆಂಗಳೂರು ಮತ್ತು ತಿರುವನಂತಪುರಂ) ಮಾತ್ರವಲ್ಲದೆ ಪುದುಚೇರಿಯೂ (ಪಾಂಡಿಚೇರಿ) ಕೂಡ ಊಟಿಗೆ ನೇರ ಬಸ್ ಸೌಲಭ್ಯದ ಮೂಲಕ ಸಂಪರ್ಕವನ್ನು ಹೊಂದಿದೆ.

[ಬದಲಾಯಿಸಿ] ರೈಲು ವ್ಯವಸ್ಥೆ

ಹಲ್ಲುಕಂಬಿ ರೈಲುಮಾರ್ಗದಲ್ಲಿರುವ ನೀಲಗಿರಿ ಪ್ರಯಾಣಿಕರ ರೈಲು (NMR)

ಊಟಿಯು ರಾತ್ರಿಯ ರೈಲು ಸೇವೆಯನ್ನೂ ಹೊಂದಿದೆ. ಮೆಟ್ಟುಪಾಳಯಂ 'ನೀಲಗಿರಿ ಪ್ಯಾಸೆಂಜರ್' NMR ಮೀಟರ್‌ಗೇಜು ಸೇವೆ ಮತ್ತು ನೀಲಗಿರಿ ಎಕ್ಸ್‌ಪ್ರೆಸ್ ಬ್ರಾಡ್‌ಗೇಜು ಸೇವೆಯನ್ನು ಪರ್ಯಾಯ ಕ್ರಮದಲ್ಲಿ ಒದಗಿಸುತ್ತದೆ. ನೀಲಗಿರಿ ಮೌಂಟೇನ್ ರೈಲ್ವೆಯು (NMR) ಭಾರತದಲ್ಲೇ ಅತ್ಯಂತ ಹಳೆಯ ಬೆಟ್ಟ ಪ್ರದೇಶದ ರೈಲು ವ್ಯವಸ್ಥೆಯಾಗಿದೆ. NMRಅನ್ನು 2005ರ ಜುಲೈನಲ್ಲಿ UNESCO ಪ್ರಪಂಚದ ಪಿತ್ರಾರ್ಜಿತ ಆಸ್ತಿಯೆಂದು ಸಾರಿತು. ಇದು ಊಟಕಮಂಡ್‌ಅನ್ನು ಮೆಟ್ಟುಪಾಳಯಂ ನಗರದೊಂದಿಗೆ ನೀಲಗಿರಿ ಬೆಟ್ಟಗಳ ಬುಡದಲ್ಲಿರುವ ಗುಡ್ಡದಲ್ಲಿ ಸಂಪರ್ಕಿಸುತ್ತದೆ. ಇದು ಭಾರತದಲ್ಲಿರುವ ಏಕೈಕ ಹಲ್ಲುಕಂಬಿ ರೈಲುಮಾರ್ಗವಾಗಿದೆ ಮತ್ತು ಇದು ಅಬ್ಟ್ ವ್ಯವಸ್ಥೆಯನ್ನು ಬಳಸುತ್ತದೆ.

[ಬದಲಾಯಿಸಿ] ವಿಮಾನ ವ್ಯವಸ್ಥೆ

ಊಟಿಯು ನಾಗರಿಕ ವಿಮಾನ ನಿಲ್ದಾಣವನ್ನು ಹೊಂದಿಲ್ಲ ಮತ್ತು ಇದು ವಿಮಾನ ಸೌಲಭ್ಯದಿಂದ ಸಂಪರ್ಕ ಪಡೆದಿಲ್ಲ. ಹತ್ತಿರದ ವಿಮಾನ ನಿಲ್ದಾಣವು ಕೊಯಂಬತ್ತೂರಿನಲ್ಲಿದೆ, ಇದು ಭಾರತದ ಅನೇಕ ಪ್ರಮುಖ ನಗರಗಳಿಗೆ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಸೌಲಭ್ಯವನ್ನು ಹೊಂದಿದೆ, ಮುಖ್ಯವಾಗಿ ಮುಂಬೈ, ಅಹಮದಾಬಾದ್, ಬೆಂಗಳೂರು, ಕ್ಯಾಲಿಕಟ್, ಚೈನ್ನೈ, ಕಲ್ಕತ್ತಾ, ಕೊಚ್ಚಿನ್, ಹೈದರಾಬಾದ್, ಜಮ್ಮು, ಪುಣೆ , ನವ ದೆಹಲಿ, ಕ್ವಾಲ ಲುಂಪುರ್, ಶಾರ್ಜ, ಅಬುಧಾಬಿ, ಕೊಲಂಬೊ, ದುಬೈ, ಕುವೈತ್, ಮಸ್ಕತ್, ದೋಹಾ, ಮಸ್ಕತ್ ಮತ್ತು ದೋಹಾ.

ಕೊಯಂಬತ್ತೂರಿನಲ್ಲಿರುವ ಸ್ಥಿರ ರೆಕ್ಕೆಯ ವಿಮಾನಕ್ಕಾಗಿ ಹತ್ತಿರದ ವಿಮಾನ ನಿಲ್ದಾಣದಿಂದ ಊಟಿಗೆ ಹೆಲಿಕಾಪ್ಟರ್ ಷಟಲ್ ಸೇವೆಯನ್ನು ಆರಂಭಿಸುವ ಕಾರ್ಯಗಳನ್ನು ವಹಿಸಿಕೊಳ್ಳಲಾಗಿದೆ. ಇದು ಆರಂಭದಲ್ಲಿ ವಿಮಾನ ಸೇವಾ ಪೂರೈಕೆದಾರರಾದ ಪವನ್ ಹ್ಯಾನ್ಸ್‌ ಗುತ್ತಿಗೆ ನೀಡಿದ ವಿಮಾನದೊಂದಿಗೆ J.B. ಏವಿಯೇಶನ್‌ನಿಂದ ವಿಕ್ರಯಿಸಲ್ಪಡುತ್ತಿರುವ ಮತ್ತು ನಡೆಸಲ್ಪಡುತ್ತಿರುವ ಬೆಲ್ 407ರ ಮೂಲಕ ಸೇವೆಯನ್ನು ನೀಡುತ್ತದೆ.[೫]

[ಬದಲಾಯಿಸಿ] ಶಿಕ್ಷಣ

ಬ್ರಿಟಿಷ್ ಆಳ್ವಿಕೆಯ ದಿನದಿಂದ ಊಟಿಯಲ್ಲಿ ಬೋರ್ಡಿಂಗ್-ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಅವು ಸ್ಥಳೀಯ ಆರ್ಥಿಕ ಸ್ಥಿತಿಗೆ ಗಮನಾರ್ಹ ಕೊಡುಗೆಯನ್ನು ನೀಡುತ್ತವೆ. ಈ ಶಾಲೆಗಳ ಶಿಕ್ಷಣ ಸೌಲಭ್ಯ ಮತ್ತು ಗುಣಮಟ್ಟವನ್ನು ಭಾರತದಲ್ಲೇ[೬] ಅತ್ಯುತ್ತಮವಾದೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಇವು ಭಾರತ ಮತ್ತು ಅದರ ನೆರೆಯ ಕೆಲವು ರಾಷ್ಟ್ರಗಳ ಪ್ರಮುಖ ಶಾಲೆಗಳ ಮಧ್ಯೆ ಜನಪ್ರಿಯವಾಗಿವೆ. ಅವುಗಳಲ್ಲಿ ಕೆಲವು ಈಗಲೂ ದಿನದ ಶಾಲೆಗಳಾಗಿ ಕಾರ್ಯನಿರ್ವಹಿಸುತ್ತಿವೆ.

ಊಟಿಯ ಹತ್ತಿರ ಕಾರ್ಯನಿರ್ವಹಿಸುತ್ತಿರುವ ಬೋರ್ಡಿಂಗ್-ಶಾಲೆಗಳೆಂದರೆ:[೭]

ಇವನ್ನೂ ನೋಡಿ: List of colleges in Ooty

[ಬದಲಾಯಿಸಿ] ಊಟಿಯಲ್ಲಿರುವ ಪ್ರವಾಸಿ ಮತ್ತು ಐತಿಹಾಸಿಕ ಹೆಗ್ಗುರುತುಗಳು

ಉದಗಮಂಡಲಂನಲ್ಲಿರುವ ಸಸ್ಯೋದ್ಯಾನ
ಫರ್ನ್‌ಹಿಲ್ಸ್ ಅರಮನೆ
ಊಟಿ ಸರೋವರ
ಟೋಡ ಗುಡಿಸಲು

ಪಶ್ಚಿಮ ಘಟ್ಟದ ನೀಲಿ ಬೆಟ್ಟಗಳಲ್ಲಿರುವ ಊಟಿಯು ಪ್ರತಿ ವರ್ಷ ಬಹಳ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಊಟಿಗೆ ಬರುವ ಪ್ರವಾಸಿಗರನ್ನು ದಾರಿಯಲ್ಲಿ ಮೇಲೇರುತ್ತಾ ಹೋಗುವ ಪರ್ವತಗಳು, ವ್ಯಾಪಕ ಸರೋವರಗಳು, ದಟ್ಟ ಅರಣ್ಯಗಳು, ವಿಶಾಲವಾಗಿ ಚಾಚಿಕೊಂಡಿರುವ ಹುಲ್ಲುಗಾವಲುಗಳು, ಮೈಲುಗಟ್ಟಲೆ ಇರುವ ಚಹಾ ತೋಟಗಳು ಮತ್ತು ಯೂಕಲಿಪ್ಟಸ್ ಮರಗಳು ಸ್ವಾಗತಿಸುತ್ತವೆ. ಈ ಗಿರಿಧಾಮವು ಚಿತ್ರಸದೃಶ ಪ್ರವಾಸಿ ತಾಣವಾಗಿದೆ. ವಸಾಹತಿನ ದಿನಗಳಲ್ಲಿ ಬ್ರಿಟಿಷರು ಇದನ್ನು ಬೇಸಿಗೆ ಮತ್ತು ವಾರಾಂತ್ಯವನ್ನು ಕಳೆಯುವ ಜನಪ್ರಿಯ ಸ್ಥಳವಾಗಿ ಬಳಸುತ್ತಿದ್ದರು. ನಂತರ ಇದನ್ನು ಬೇಸಿಗೆಯ ಕಾರ್ಯನಿರ್ವಾಹಕ ನಗರವಾಗಿ ಮಾಡಲಾಯಿತು. ಇದು ಸಮುದ್ರ ಮಟ್ಟಕ್ಕಿಂತ ಸುಮಾರು 2,286 ಮೀಟರ್‌ಗಳಷ್ಟು ಎತ್ತರದಲ್ಲಿದೆ. ಇತ್ತೀಚಿನ ವರ್ಷಗಳಲ್ಲಿ ಈ ಗಿರಿಧಾಮವು ಅತಿ ಹೆಚ್ಚಿನ ವ್ಯಾಪಾರೀಕರಣ ಹಾಗೂ ವಿವಿಧ ಇತರ ಪರಿಸರ ವಿಜ್ಞಾನದ ಮತ್ತು ಮೂಲಭೂತ ವ್ಯವಸ್ಥೆಗಳ ಸಮಸ್ಯೆಗಳನ್ನು ಎದುರಿಸಿತು. ಊಟಿಯು ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶಗಳ ಪ್ರವಾಸಗಳನ್ನು ಕೈಗೊಳ್ಳುವ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.

ಊಟಿಯ ಕೆಲವು ಪ್ರಮುಖ ಪ್ರವಾಸಿ/ಐತಿಹಾಸಿಕ ಹೆಗ್ಗುರುತುಗಳು ಈ ಕೆಳಗಿನ ಪಟ್ಟಿಯಂತಿವೆ.

  • ಸರ್ಕಾರಿ ಗುಲಾಬಿ ಹೂಗಳ ತೋಟ: ಇದು (ಹಿಂದೆ ಸೆಂಟೆರರಿ ರೋಸ್ ಪಾರ್ಕ್ ಎಂದು ಕರೆಯಲಾಗುತ್ತಿತ್ತು) ಊಟಿಯ ವಿಜಯನಗರಂನಲ್ಲಿ, ಎಲ್ಕ್ ಬೆಟ್ಟದ ಇಳಿಜಾರಿನಲ್ಲಿದೆ. ಇಂದು ಈ ಉದ್ಯಾನವು ರಾಷ್ಟ್ರದಲ್ಲೇ ಅತ್ಯಂತ ಹೆಚ್ಚಿನ ಗುಲಾಬಿ ಹೂಗಳ ಸಂಗ್ರಹವನ್ನು ಹೊಂದಿದೆ, ಉದಾ. ಹೈಬ್ರಿಡ್ ಟೀ ಗುಲಾಬಿ, ಚಿಕ್ಕ ಗುಲಾಬಿ, ಫ್ಲೋರಿಬಂಡ, ರ್ಯಾಂಬ್ಲರ್, ಕಪ್ಪು ಮತ್ತು ಬಿಳಿ ಮೊದಲಾದ ವಿಶೇಷ ಬಣ್ಣಗಳ ಗುಲಾಬಿಗಳು. ಈ ಉದ್ಯಾನದಲ್ಲಿ ಸುಮಾರು 17,000ಕ್ಕಿಂತಲೂ ಹೆಚ್ಚು ಜಾತಿಯ ಗುಲಾಬಿ ಹೂಗಳಿವೆ. ಈ ಉದ್ಯಾನದಲ್ಲಿರುವ ವಿವಿಧ ಜಾತಿಯ ಗುಲಾಬಿ ಹೂಗಳನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಿದುದಾಗಿದೆ. 'ನೀಲ ಮ್ಯಾಡಮ್' ಎಂಬ ತಾಣದಲ್ಲಿ ನಿಂತುಕೊಂಡು ವೀಕ್ಷಕರು ಸಂಪೂರ್ಣ ಗುಲಾಬಿ ತೋಟವನ್ನು ವೀಕ್ಷಿಸಬಹುದು.
  • ಊಟಿ ಸಸ್ಯೋದ್ಯಾನ: ೨೨-ಎಕರೆ ( ಮೀ

) ಸಸ್ಯೋದ್ಯಾನವನ್ನು 1847ರಲ್ಲಿ ರಚಿಸಲಾಯಿತು ಮತ್ತು ಇದನ್ನು ತಮಿಳುನಾಡು ಸರ್ಕಾರವು ನಿರ್ವಹಿಸುತ್ತದೆ. ಸಸ್ಯೋದ್ಯಾನವನ್ನು ರಚಿಸುವ ಮೂಲ ಕಾರಣವು ಸ್ಪಷ್ಟವಾಗಿ ಶೈಕ್ಷಣಿಕವಾಗಿತ್ತು: ನೀಲಗಿರಿಯಲ್ಲಿ ಮತ್ತು ಅದರ ಸುತ್ತಮುತ್ತಲಿರುವ ವಿವಿಧ ಸಸ್ಯಸಂಪತ್ತನ್ನು ಉಳಿಸುವುದು ಮತ್ತು ಅಧ್ಯಯನ ಮಾಡುವುದು. ಈಗ ಇದು ಸಾರ್ವಜನಿಕರಿಗೆ ಒಂದು ಉದ್ಯಾನವಾಗಿ ತೆರೆದುಕೊಂಡಿದೆ. ಈ ಸಸ್ಯೋದ್ಯಾನವು ಹುಲುಸಾಗಿ, ಹಸಿರಾಗಿ ಅತ್ಯಾಕರ್ಷಕವಾಗಿದೆ ಮತ್ತು ಉತ್ತಮ-ರೀತಿಯಲ್ಲಿ ನಿರ್ವಹಿಸಲ್ಪಡುತ್ತದೆ. ಪ್ರತಿ ಮೇ ತಿಂಗಳಲ್ಲಿ ಪುಷ್ಪ ಪ್ರದರ್ಶನ ಮತ್ತು ವಿರಳ ಸಸ್ಯ ಜಾತಿಗಳ ಪ್ರದರ್ಶನವು ನಡೆಯುತ್ತದೆ. ಈ ಉದ್ಯಾನವು 20-ದಶಲಕ್ಷ-ವರ್ಷದಷ್ಟು ಹಳೆಯ ಒಂದು ಮರವನ್ನು ಹೊಂದಿದೆ. ಇಲ್ಲಿ ಹೋಲಿಕೆ ಇಲ್ಲದ ಸಸ್ಯಸಂಪತ್ತಿನ ವೈವಿಧ್ಯತೆಯನ್ನು ಗಮನಿಸಬಹುದು, ವಿರಳ ಮರಗಳು (ಉದಾ. ಕಾರ್ಕ್ ಮರ, ಕಾಗದದಂಥ ತೊಗಟೆಯ ಮರ ಮತ್ತು ಮಂಕಿ ಪಜಲ್ ಮರ), ಹೂಬಿಡುವ ಪೊದೆಗಳು ಮತ್ತು ಸಸ್ಯಗಳು, ಜರೀಗಿಡ ಮತ್ತು ಆರ್ಕಿಡ್‌ಗಳು. ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ ಅಂಚಿನಲ್ಲಿ ಕೊಳವನ್ನು ಹೊಂದಿರುವ ಇಟಲಿ-ಶೈಲಿಯ ಉದ್ಯಾನ. ಈ ಸ್ಥಳವು ಹಕ್ಕಿಗಳ ವೀಕ್ಷಣೆಗೆ ಒಂದು ಅತ್ಯತ್ತಮ ತಾಣವಾಗಿದೆ.

  • ಊಟಿ ಸರೋವರ ಮತ್ತು ದೋಣಿ ಮನೆ: ಇದು ಜಾನ್ ಸುಲ್ಲಿವನ್ ನಿರ್ಮಿಸಿದ ಒಂದು ಕೃತಕ ಸರೋವರವಾಗಿದೆ. ಇದು ಈಗಿರುವ 4 km2 ಗಾತ್ರಕ್ಕಿಂತ ಹಿಂದೆ ವಿಶಾಲವಾಗಿತ್ತು. ಇದು 2.5 ಕಿಮೀ ಉದ್ದವಿದೆ. ಈ ಸರೋವರವು ಈಗಿನ ಬಸ್ ನಿಲ್ದಾಣ ಮತ್ತು ಕುದುರೆ ಪಂದ್ಯದ ಜಾಡು ಮಾತ್ರವಲ್ಲದೆ ಈಗಿನ ಮಾರುಕಟ್ಟೆಯ ಹೆಚ್ಚಿನ ಭಾಗದಿಂದ ಆವರಿಸಲ್ಪಟ್ಟಿದೆ. ದೋಣಿ ವಿಹಾರವು ಈ ಸರೋವರದ ಪ್ರಮುಖ ಆಕರ್ಷಣೆಯಾಗಿದೆ. ಈ ದೋಣಿ ವಿಹಾರವು ಪ್ರವಾಸಿಗರಿಗೆ ನಿರ್ಮಲವೂ ಪ್ರಶಾಂತವೂ ಆದ ವಾತಾವರಣವನ್ನು ಅನಂದಿಸಲು ಅವಕಾಶ ಮಾಡಿಕೊಡುತ್ತದೆ. ಈ ಸರೋವರವು ಸುತ್ತಲೂ ಆ ಪ್ರದೇಶದ ಚಿತ್ರದಂಥ ಸೌಂದರ್ಯತೆಯನ್ನು ಹೆಚ್ಚಿಸುವ ಯೂಕಲಿಪ್ಟಸ್ ಮರಗಳನ್ನು ಹೊಂದಿದೆ. ಈ ಸರೋವರದ ನಂತರ ಮಕ್ಕಳ ಮನರಂಜನೆಯ ಉದ್ಯಾನ ಮಿನಿ ಗಾರ್ಡನ್ ಇದೆ.
  • ಸ್ಟೋನ್ ಹೌಸ್: ಇದು ಊಟಿಯಲ್ಲಿ (ಹಳೆ ಊಟಿ ಎಂದು ಕರೆಯಲ್ಪಡುವ ಪ್ರದೇಶದಲ್ಲಿ) ಸರಿಯಾಗಿ ನಿರ್ಮಿಸಿದ ಮೊದಲ ಕಟ್ಟಡವಾಗಿದೆ. ಸ್ಟೋನ್ ಹೌಸ್ಅನ್ನು ಜಾನ್ ಸುಲ್ಲಿವನ್ ರಚಿಸಿದರು. ಇದು ಗೌರ್ನ್ಮೆಂಟ್ ಆರ್ಟ್ಸ್ ಕಾಲೇಜ್‌ ಕಟ್ಟಡದ ಒಳಗಿದೆ. ಇದು ಈಗ ಸರ್ಕಾರಿ ಕಛೇರಿಗಳನ್ನು ಹೊಂದಿದೆ.
  • ಟೋಡ ಗುಡಿಸಲುಗಳು: ಸಸ್ಯೋದ್ಯಾನದ ಮೇಲಿನ ಬೆಟ್ಟಗಳಲ್ಲಿ ಕೆಲವು ಟೋಡ ಗುಡಿಸಲುಗಳಿವೆ, ಅಲ್ಲಿ ಈಗಲು ಟೋಡ ಜನರು ವಾಸಿಸುತ್ತಾರೆ. ಆ ಪ್ರದೇಶದಲ್ಲಿ ಇತರ ಟೋಡ ನಿವಾಸಗಳೂ ಇವೆ, ಗಮನಾರ್ಹವಾಗಿ ಹಳೆ ಊಟಿಯ ಹತ್ತಿರ ಕಂದಾಲ್ ಮಂಡ್‌ನಲ್ಲಿ.
  • ಊಟಿ ಪರ್ವತ ರೈಲು: ಇದು ನೀಲಗಿರಿ ಮೌಂಟೇನ್ ರೈಲ್ವೆಯ ರೈಲುತುದಿಯಾಗಿದೆ. ಇದು ವರ್ಲ್ಡ್ ಹೆರಿಟೇಜ್ ಸೈಟ್‌ನ ಭಾಗವಾಗಿದೆ. ಊಟಿ ರೈಲು ಮಾರ್ಗವು ಬ್ರಿಟಿಷ್ ಪ್ರಭುತ್ವವು ನಿರ್ಮಿಸಿದ ರೈಲುಮಾರ್ಗಗಳ ಒಂದು ಅನನ್ಯ ನಸುನೋಟವನ್ನು ಒದಗಿಸುತ್ತದೆ. ನೀಲಗಿರಿ ಮೌಂಟೇನ್ ರೈಲ್ವೆಯು ಭಾರತದಲ್ಲೇ ಅತ್ಯಂತ ಹಳೆಯ ಬೆಟ್ಟ ಪ್ರದೇಶದ ರೈಲು ವ್ಯವಸ್ಥೆಯಾಗಿದೆ. 1845ರಲ್ಲಿ ಆರಂಭವಾದ ಈ ಮಾರ್ಗದ ನಿರ್ಮಾಣ ಕಾರ್ಯವು ಕೊನೆಗೊಂಡು ಅಂತಿಮವಾಗಿ 1908ರಲ್ಲಿ ಬ್ರಿಟಿಷರಿಂದ ತೆರೆದುಕೊಂಡಿತು ಹಾಗೂ ಇದರಲ್ಲಿ ಆರಂಭದಲ್ಲಿ ಮದ್ರೈಸ್ ರೈಲ್ವೆ ಕಂಪನಿಯು ರೈಲುಗಳನ್ನು ಓಡಿಸಿತು. ಪ್ರಪಂಚದಲ್ಲಿ ಆವಿ ಲೋಕೋಮೋಟಿವ್‌ಗಳನ್ನು ಆಧರಿಸಿದ ಕೆಲವು ರೈಲುಗಳಲ್ಲಿ ಇದು ಒಂದಾಗಿದೆ.
  • ಸೇಂಟ್ ಸ್ಟೀಫನ್ಸ್ ಚರ್ಚ್: ಇದು ನಗರದಲ್ಲೇ ಅತ್ಯಂತ ಹಳೆಯ ಚರ್ಚ್ ಆಗಿದೆ ಮತ್ತು ಒಂದು ಸ್ಥಳೀಯ ಹೆಗ್ಗುರುತಾಗಿದೆ. ಇದರ ವಾಸ್ತುಶಿಲ್ಪವು ಆ ಕಾಲದ ಬಣ್ಣದ ಗಾಜಿನ ವೈಶಿಷ್ಟ್ಯತೆಯೊಂದಿಗೆ ರಚಿಸಿದ ಹಿಂದಿನ ಫೋಥಿಕ್ ಪುನಃಸ್ಥಾಪನೆಯಾಗಿದೆ. ಇದು ಸರಳವಾದ ಒತ್ತು-ಗೋಡೆಗಳನ್ನು ಮತ್ತು ಗಾರೆ ಕೆಲಸ ಮಾಡಿದ ಒಂದು ಹೊರಾಂಗಣವನ್ನು ಹೊಂದಿರುವುದರಿಂದ ಅದೇ ಸಂದರ್ಭದ ಇತರ ಬ್ರಿಟಿಷ್ ಚರ್ಚ್‌ಗಳಿಗಿಂತ ಭಿನ್ನವಾಗಿದೆ. ಚರ್ಚಿನ ಸಮಾಧಿ ಭೂಮಿಯು ವಸಾಹತಿನ ಕಾಲದಲ್ಲಿ ಕೆತ್ತಲಾದ ಸಮಾಧಿ ಶಿಲೆಗಳಿಂದ ತುಂಬಿಹೋಗಿವೆ ಹಾಗೂ ಇದು ಸಕ್ರಿಯ ಪೂಜ್ಯ ಸ್ಥಳವಾಗಿ ಉಳಿದುಕೊಂಡಿದೆ. ಇದರ ಹತ್ತಿರದಲ್ಲಿ ಜಿಲ್ಲಾ ನ್ಯಾಯಾಲಯದ ಕಟ್ಟಡವಿದೆ.
  • ವ್ಯಾಕ್ಸ್ ವರ್ಲ್ಡ್, ಊಟಿ: ಇದು 142 ವರ್ಷ ಹಳೆಯ ಕಟ್ಟಡದಲ್ಲಿರುವ ಮೇಣದ ವಸ್ತುಸಂಗ್ರಹಾಲಯವಾಗಿದೆ, ಇಲ್ಲಿ ಭಾರತೀಯ ಇತಿಹಾಸ, ಸಂಸ್ಕೃತಿ ಮತ್ತು ಸ್ವತ್ತಿನ ವ್ಯಕ್ತಿಗಳ ಸಹಜಗಾತ್ರದ ತದ್ರೂಪು ಮೇಣದ ಮೂರ್ತಿಗಳಿವೆ.
  • ಊಟಿ ಗಾಲ್ಫ್ ಲಿಂಕ್ಸ್: ಕಾಡು ಮತ್ತು ಹುಲ್ಲಿನಿಂದ ಕೂಡಿದ ಈ ಪ್ರದೇಶವು ಮುಖ್ಯವಾಗಿ ಗಾಲ್ಫ್ ಆಟಕ್ಕೆ ನೆಲೆಯಾಗಿದೆ.
  • ಟ್ರೈಬಲ್ ಮ್ಯೂಸಿಯಂ: ಇದು ಮುತೊರೈ ಪಲಾಡದಲ್ಲಿರುವ (ಊಟಿಯಿಂದ 10 ಕಿಮೀ) ಟ್ರೈಬಲ್ ರಿಸರ್ಚ್ ಸೆಂಟರ್‌ನ ಭಾಗವಾಗಿದೆ. ಇದು ತಮಿಳುನಾಡು ಮಾತ್ರವಲ್ಲದೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಬುಡಕಟ್ಟು ಪಂಗಡಗಳ ಹಾಗೂ ಮಾನವ ಶಾಸ್ತ್ರದ ಮತ್ತು ಪ್ರಾಕ್ತನ ಶಾಸ್ತ್ರದ ಪ್ರಾಚೀನ ಮಾನವ ಸಂಸ್ಕೃತಿ ಮತ್ತು ಸ್ವತ್ತಿನ ವಿರಳ ಹಸ್ತಕೃತಿ ಮತ್ತು ಛಾಯಾಚಿತ್ರಗಳನ್ನು ಹೊಂದಿದೆ. ಈ ಟ್ರೈಬಲ್ ಮ್ಯೂಸಿಯಂ ಟೋಡ, ಕೋಟ, ಪನಿಯ, ಕುರುಂಬ ಮತ್ತು ಕಾನಿಕಾರನ್ ಜನರ ಮನೆಗಳನ್ನೂ ತೋರಿಸುತ್ತದೆ.

[ಬದಲಾಯಿಸಿ] ಊಟಿಯ ಸುತ್ತಮುತ್ತಲಿರುವ ಪ್ರವಾಸಿ ತಾಣಗಳು

ದೊಡ್ಡಬೆಟ್ಟ ಶಿಖರದಿಂದ ಊಟಿಯ ದೃಶ್ಯ
ಊಟಿಯ ಹತ್ತಿರವಿರುವ ಚಹಾ ತೋಟಗಳು
ಚಿತ್ರ:Kettivalley.jpg
ಕೆಟ್ಟಿ ಕಣಿವೆ
ಊಟಿಯ ಹತ್ತಿರವಿರುವ ಪಿಕಾರ ಸರೋವರ
ಊಟಿಯ ಹತ್ತಿರವಿರುವ ಪಿಕಾರ ಜಲಪಾತ
ಪಿಕಾರ ಜಲಪಾತಕ್ಕೆ ಹೋಗುವ ದಾರಿಯಲ್ಲಿರುವ ಪೈನ್ ಮರಗಳ ಕಾಡು
ಮೈಸೂರು-ಊಟಿ ದಾರಿಯಲ್ಲಿ ಮಂಜಿನಿಂದ ಮುಸುಕಿದ ಪೈನ್ ಮರಗಳ ಕಾಡು
ಮುದುಮಲೈ ರಾಷ್ಟ್ರೀಯ ಉದ್ಯಾನದಲ್ಲಿರುವ ಆನೆ
ಎಮರಾಲ್ಡ್ ಸರೋವರ

ಊಟಿಯು ನೀಲಗಿರಿ ಜೀವಗೋಳ ಮೀಸಲು ಪ್ರದೇಶದಲ್ಲಿ ಬರುತ್ತದೆ. ಸುಲಭವಾಗಿ ನಾಶವಾಗಿ ಹೋಗುವ ಈ ಪರಿಸರ ವ್ಯವಸ್ಥೆಯನ್ನು ರಕ್ಷಿಸುವುದಕ್ಕಾಗಿ ಹೆಚ್ಚಿನ ಅರಣ್ಯ ಪ್ರದೇಶಗಳು ಮತ್ತು ಜಲಾಶಯಗಳು ಹೆಚ್ಚಿನ ವೀಕ್ಷಕರಿಗೆ ವೀಕ್ಷಣೆಗೆ ಲಭಿಸುವುದಿಲ್ಲ. ಜೀವಗೋಳ ಮೀಸಲು ಪ್ರದೇಶದ ಕೆಲವು ಸ್ಥಳಗಳಿಗೆ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಸ್ವಾಮ್ಯ ಮುದ್ರೆ ಹಾಕಲಾಗಿದೆ ಹಾಗೂ ಈ ಸ್ಥಳಗಳನ್ನು ಸಂರಕ್ಷಣೆ ಮಾಡವಾಗ ವೀಕ್ಷಕರಿಗೆ ನೋಡಲು ಬಿಡುವ ಕಾರ್ಯಗಳ ಬಗ್ಗೆ ಮುಂದಡಿ ಇಡಲಾಗಿದೆ. ಊಟಿಯ ಹೆಚ್ಚಿನ ಭಾಗವು ಈಗಾಗಲೇ ಪ್ರವಾಸೋದ್ಯಮದ ಪರಿಣಾಮವಾಗಿ ಅತಿರೇಕದ ವ್ಯಾಪಾರೀಕರಣದಿಂದಾಗಿ ಹಾನಿಗೊಳಗಾಗಿದೆ. ಊಟಿಯ ಸುತ್ತಮುತ್ತಲಿರುವ ಕೆಲವು ಹೆಚ್ಚು ಪ್ರಖ್ಯಾತ ಪ್ರವಾಸಿ ತಾಣಗಳು ಈ ಕೆಳಗಿನಂತಿವೆ:

  • ದೊಡ್ಡಬೆಟ್ಟ ಶಿಖರ: ಇದು ನೀಲಗಿರಿಯಲ್ಲೇ ಅತ್ಯಂತ ಹೆಚ್ಚು ಎತ್ತರವಾದ (2,623 ಮೀ) ಶಿಖರವಾಗಿದೆ, ಊಟಿಯಿಂದ ಸುಮಾರು 10 ಕಿಮೀ ದೂರದಲ್ಲಿದೆ. ಇದು ಪಶ್ಚಿಮ ಮತ್ತು ಪೂರ್ವ ಘಟ್ಟಗಳ ಸಂಧಿಸ್ಥಾನದಲ್ಲಿ ಬರುತ್ತದೆ ಹಾಗೂ ನೀಲಗಿರಿ ಬೆಟ್ಟ ಶ್ರೇಣಿಯ ಸುಂದರ ದೀರ್ಘದೃಶ್ಯವನ್ನು ನೀಡುತ್ತದೆ. ಇದು ದಟ್ಟ ಶೋಲಗಳಿಂದ ಆವರಿಸಲ್ಪಟ್ಟಿದೆ. ಈ ಭೂದೃಶ್ಯದ ಮನಮೋಹಕ ನೋಟವನ್ನು TTDC ದೂರದರ್ಶಕದಿಂದ ವೀಕ್ಷಿಸಬಹುದು. TTDC ರೆಸ್ಟಾರೆಂಟ್ ಪ್ರವಾಸಿಗರ ಅವಶ್ಯಕತೆಗಳನ್ನು ಪೂರೈಸುತ್ತದೆ.
  • ಚಹಾ ತೋಟಗಳು: ಚಹಾ ತೋಟಗಳು ಕಡಿಮೆ ಎತ್ತರ ಪ್ರದೇಶದಲ್ಲಿ ಕಂಡುಬರುತ್ತವೆ ಹಾಗೂ ಅವು ಅವುಗಳ ಚಿತ್ರಸದೃಶ ಗುಣಲಕ್ಷಣದಿಂದಾಗಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುತ್ತವೆ.
  • ಕೆಟ್ಟಿ ಕಣಿವೆ: ಈ ಕಣಿವೆಯನ್ನು ಅಲ್ಲಿನ ವರ್ಷಪೂರ್ತಿ ಆಹ್ಲಾದಕರ ಹವಾಗುಣ ಸ್ಥಿತಿಯಿಂದಾಗಿ 'ದಕ್ಷಿಣ ಭಾರತದ ಸ್ವಿಟ್ಜರ್‌ಲ್ಯಾಂಡ್' ಎಂದು ಕರೆಯಲಾಗುತ್ತದೆ. ಮುಖ್ಯ ಊಟಿಯಿಂದ ಕೂನೂರಿಗೆ ಹೋಗುವ ದಾರಿಯಲ್ಲಿ ವ್ಯಾಲಿ ವ್ಯೂ ಎಂಬ ಒಂದು ವೀಕ್ಷಣಾ ಕೇಂದ್ರವಿದೆ. ಇದು ಜಿಲ್ಲೆಯ ಏಕೈಕ ಇಂಜಿನಿಯರಿಂಗ್ ಕಾಲೇಜ್ CSI ಕಾಲೇಜ್ ಆಫ್ ಇಂಜಿನಿಯರಿಂಗ್‌ಗೂ ಸಹ ನೆಲೆಯಾಗಿದೆ.
  • ಪಿಕಾರ ಸರೋವರದ ದೋಣಿಮನೆ ಮತ್ತು ಪಿಕಾರ ಜಲಪಾತ: ಇದು ಹತ್ತಿರದ ಎಲ್ಲಾ ಸರೋವರಗಳಿಗೂ ಸುಲಭಲಭ್ಯವಾಗಿದೆ. ಈ ಪ್ರದೇಶಕ್ಕೆ ಪ್ರವೇಶವನ್ನು ಒದಗಿಸುವುದಕ್ಕಾಗಿ ಒಂದು ದೋಣಿಮನೆ ಮತ್ತು ವಿಹಾರ ಸ್ಥಳವನ್ನು ಅಭಿವೃದ್ಧಿಪಡಿಸಲಾಗಿದೆ. ಸರೋವರದ ಹೆಚ್ಚಿನ ಭಾಗವು ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಬರುತ್ತದೆ ಮತ್ತು ವೀಕ್ಷಕರಿಗೆ ಲಭ್ಯವಾಗಿಲ್ಲ.
  • ಪೈನ್ ಮರಗಳ ಅರಣ್ಯ: ಊಟಿ ಮತ್ತು ತಲಕುಂದದ ಮಧ್ಯದಲ್ಲಿರುವ ಈ ಪ್ರವಾಸಿ ತಾಣವನ್ನು ತಮಿಳು ಚಿತ್ರದ ಹಾಡು "ದೀನ"ದಲ್ಲಿ ಚಿತ್ರೀಕರಿಸಲಾಗಿದೆ. ಇದೊಂದು ಸಣ್ಣ ಕೆಳಜಾರು ಪ್ರದೇಶವಾಗಿದ್ದು, ಇಲ್ಲಿ ಪೈನ್ ಮರಗಳು ಕ್ರಮಬದ್ಧವಾಗಿ ಜೋಡಿಸಿದ ಶೈಲಿಯಲ್ಲಿವೆ.
  • ವೆನ್ಲಾಕ್ ಡೌನ್ಸ್: ಇದೊಂದು ಹುಲ್ಲುಗಾವಲು ಪ್ರದೇಶವಾಗಿದ್ದು, ನೀಲಗಿರಿಯ ಮೂಲ ಜೈವಿಕ-ದೃಶ್ಯದ ಮಾದರಿಯಾಗಿದೆ. ಇದು ತರಂಗದಂಥ ಬೆಟ್ಟಗಳನ್ನು ಹೊಂದಿದೆ ಮತ್ತು ಇದನ್ನು ಹೆಚ್ಚಾಗಿ ಯೋರ್ಕ್‌ಶಿರ್ ಡೇಲ್ಸ್‌‌ನಂತಹ ಬ್ರಿಟಿಷ್ ದ್ವೀಪಗಳಲ್ಲಿರುವ ಪ್ರದೇಶಗಳಿಗೆ ಹೋಲಿಸಲಾಗುತ್ತದೆ. ಇದು ಚಲನಚಿತ್ರ ಚಿತ್ರೀಕರಣಕ್ಕೆ ಪ್ರಸಿದ್ಧವಾದ ಪ್ರದೇಶವಾಗಿದೆ, ನಿರ್ದಿಷ್ಟವಾಗಿ ಮುಖ್ಯ ಊಟಿಯಿಂದ ಪಿಕಾರಕ್ಕೆ ಹೋಗುವ ರಸ್ತೆಯಲ್ಲಿ (ಮೈಸೂರು ರಸ್ತೆಯೆಂದು ಕರೆಯುತ್ತಾರೆ) ಊಟಿಯಿಂದ ಸರಿಸುಮಾರು ಆರು ಮತ್ತು ಒಂಭತ್ತು ಮೈಲುಗಳ (14 ಕಿಮೀ) ದೂರದಲ್ಲಿರುವ ಎರಡು ಪ್ರದೇಶಗಳು. ತತ್ಪರಿಣಾಮವಾಗಿ ಈ ಪ್ರದೇಶಗಳನ್ನು "ಸಿಕ್ಸ್ತ್ ಮೈಲ್" ಮತ್ತು "ನೈನ್ತ್ ಮೈಲ್" ಎಂಬ ಹೆಸರಿನಿಂದ ಕರೆಯಲಾಗುತ್ತದೆ.
  • ಕಾಮರಾಜ ಸಾಗರ ಸರೋವರ: ಈ ಸರೋವರವು ಪಿಕಾರ ಸರೋವರಕ್ಕೆ ಹೋಗುವ ದಾರಿಯಲ್ಲಿ ಕಂಡುಬರುತ್ತದೆ.
  • ಮುದುಮಲೈ ರಾಷ್ಟ್ರೀಯ ಉದ್ಯಾನ: ಇದು ಕಡಿಮೆ ಎತ್ತರದಲ್ಲಿ ಮತ್ತು ಸುಲಭವಾಗಿ ತಲುಪಬಹುದಾದ ಪ್ರದೇಶದಲ್ಲಿ ಕಂಡುಬರುತ್ತದೆ. ಇದರ ಅಂಚಿನಲ್ಲಿ ಕರ್ನಾಟಕಬಂಡಿಪುರ ರಾಷ್ಟ್ರೀಯ ಉದ್ಯಾನವಿದೆ. ಇದು ವ್ಯಾಪಕ ಭಿನ್ನತೆಯ ಸಸ್ಯಸಂಪತ್ತು ಮತ್ತು ಪ್ರಾಣಿಸಂಪತ್ತಿಗೆ ನೆಲೆಯಾಗಿದೆ.
  • ಮುಕುರ್ತಿ ರಾಷ್ಟ್ರೀಯ ಉದ್ಯಾನ: ಇದು ಸಾಮಾನ್ಯವಾಗಿ ವೀಕ್ಷಕರಿಗೆ ಪ್ರವೇಶವಿಲ್ಲದ ಬಹುದೊಡ್ಡ ಸಂರಕ್ಷಿತ ಪ್ರದೇಶವಾಗಿದೆ. ಇದು ಅದೇ ಹೆಸರಿನ ಒಂದು ಸರೋವರ ಮತ್ತು ಶಿಖರವನ್ನು ಹೊಂದಿದೆ.
  • ನೀಡಲ್ ಬೆಟ್ಟದ ವೀಕ್ಷಣಾ ಕೇಂದ್ರ ವು ಗುದಲಾವೂರು ಮತ್ತು ಪಿಕಾರದ ಮಧ್ಯದಲ್ಲಿದೆ.
  • ಪಾರ್ಸನ್ಸ್ ಕಣಿವೆ ಜಲಾಶಯ: ಇದು ನಗರದ ಪ್ರಮುಖ ನೀರಿನ ಮೂಲವಾಗಿದೆ. ಇದು ಮುಖ್ಯವಾಗಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿರುವುದರಿಂದ ವೀಕ್ಷಕರಿಗೆ ಪ್ರವೇಶವನ್ನು ಹೊಂದಿಲ್ಲ.
  • ಎಮರಾಲ್ಡ್ ಸರೋವರ: ಈ ಸರೋವರವು ಅದೇ ಹೆಸರಿನ ನಗರದ ಹತ್ತಿರದಲ್ಲಿದೆ. ಅಣೆಕಟ್ಟಿನ ಹತ್ತಿರದಲ್ಲಿ ಒಂದು ವೀಕ್ಷಣಾಕೇಂದ್ರವಿದೆ. ಇದರ ಉಳಿದ ಭಾಗವು ಪ್ರಧಾನವಾಗಿ ಸಂರಕ್ಷಿತ ಅರಣ್ಯ ಭಾಗದಲ್ಲಿದೆ ಹಾಗೂ ಆದ್ದರಿಂದ ವೀಕ್ಷಕರಿಗೆ ಅಲ್ಲಿಗೆ ಪ್ರವೇಶವಿಲ್ಲ.
  • ಅವಲಾಂಚ್ ಸರೋವರ: ಎಮರಾಲ್ಡ್ ಸರೋವರದ ಪಕ್ಕದಲ್ಲಿರುವ ಇದು ಚಿತ್ರಸದೃಶ ಸರೋವರವಾಗಿದೆ. ಇದು ಮುಖ್ಯವಾಗಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿರುವುದರಿಂದ ಇಲ್ಲಿಗೆ ವೀಕ್ಷಕರಿಗೆ ಅನುಮತಿಯಿಲ್ಲ.
  • ಪೊರ್ತಿಮಂಡ್ ಸರೋವರ: ಇದರ ಹೆಚ್ಚಿನ ಭಾಗವು ಸಂರಕ್ಷಿತ ಅರಣ್ಯ ಭಾಗದಲ್ಲಿದೆ ಮತ್ತು ವೀಕ್ಷಕರಿಗೆ ಪ್ರವೇಶವನ್ನು ಹೊಂದಿಲ್ಲ. ಜನಪ್ರಿಯ ತಮಿಳು ಚಿತ್ರ ರೋಜ ದ ಚಿತ್ರೀಕರಣವು ಇಲ್ಲಿ ನಡೆದಿತ್ತು.
  • ಅಪ್ಪರ್ ಭವಾನಿ ಸರೋವರ: ಈ ಸರೋವರವು ಮುಕುರ್ತಿ ರಾಷ್ಟ್ರೀಯ ಉದ್ಯಾನದಲ್ಲಿದೆ ಮತ್ತು ಇಲ್ಲಿಗೆ ವೀಕ್ಷಕರಿಗೆ ಪ್ರವೇಶವಿಲ್ಲ.

[ಬದಲಾಯಿಸಿ] ಊಟಿಯ ಸಾಹಸ ಕ್ರೀಡೆಗಳು

ಊಟಿಯ ವೈವಿಧ್ಯಮ ಭೂದೃಶ್ಯವು ಅಸಂಖ್ಯಾತ ಸಾಹಸಮಯ ಕ್ರೀಡೆಗಳು ಮತ್ತು ಮನರಂಜನಾ ಚಟುವಟಿಕೆಗಳಿಗೆ ಉತ್ತಮ ಅವಕಾಶವನ್ನು ಒದಗಿಸುತ್ತದೆ, ಉದಾ. ಹ್ಯಾಂಗ್ ಗ್ಲೈಡಿಂಗ್. ಊಟಿಯಿಂದ ಸುಮಾರು 20 ಕಿಮೀ ದೂರದಲ್ಲಿರುವ, ನೀಲಗಿರಿಯ ಪರ್ವತ ಶ್ರೇಣಿಯಲ್ಲಿರುವ ಕಾಳಹಟ್ಟಿಯು ಹ್ಯಾಂಗ್ ಗ್ಲೈಡಿಂಗ್‌ಗೆ ಪ್ರಪಂಚ-ಶ್ರೇಣಿಯ ತಾಣವಾಗಿದೆ. ಈ ಸಾಹಸಮಯ ಕ್ರೀಡೆಯು ಹ್ಯಾಂಗ್ ಗ್ಲೈಡರ್ ಎಂದು ಕರೆಯುವ ದೊಡ್ಡ ಪ್ರಕಾರದ ಗಾಳಿಪಟದಿಂದ ತೂಗುಹಾಕಿದ ಉಪಕರಣದಿಂದ ತೂಗಾಡುವುದನ್ನು ಒಳಗೊಳ್ಳುತ್ತದೆ. ಕಾಳಹಟ್ಟಿಯು ಒಂದು ಹಾರಿಸುವ ಸ್ಥಳವನ್ನು ಹೊಂದಿದೆ, ಅದನ್ನು ಜೀಪಿನಿಂದ ತಲುಪಬಹುದು. ಮಾರ್ಚ್‌ನಿಂದ ಮೇಯವರೆಗೆ ಊಟಿಯಲ್ಲಿ ಹ್ಯಾಂಗ್ ಗ್ಲೈಡಿಂಗ್ ತರಬೇತಿ ಕೋರ್ಸುಗಳನ್ನು ಆಯೋಜಿಸಲಾಗುತ್ತದೆ.

[ಬದಲಾಯಿಸಿ] ಊಟಿಯ OSM ನಕ್ಷೆ

OSM ನಕ್ಷೆ

[ಬದಲಾಯಿಸಿ] ಪರಿಸರ-ಸ್ನೇಹಪರತೆ

ಈ ಪ್ರದೇಶದಲ್ಲಿರುವ ಅಪಾಯಕ್ಕೊಳಪಟ್ಟ ಪರಿಸರ ವ್ಯವಸ್ಥೆಯನ್ನು ಕಾಪಾಡಲು ಕಳೆದ ಹಲವಾರು ವರ್ಷಗಳಲ್ಲಿ ಅನೇಕ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಈಗ ಇಲ್ಲಿ ಪ್ಲ್ಯಾಸ್ಟಿಕ್ ಚೀಲಗಳ ಬಳಕೆಯನ್ನು ನಿಷೇಧಿಸಲಾಗಿದೆ. ನಿವಾಸಿಗರು ಮತ್ತು ಅಂಗಡಿ ಮಾಲೀಕರು ಸಾಮಾನ್ಯ ಬಳಕೆಗೆ ಕೇವಲ ಮರುಬಳಕೆಯ ಕಾಗದ ಅಥವಾ ಬಟ್ಟೆಯ ಚೀಲಗಳನ್ನು ಮಾತ್ರ ಬಳಸಲು ಇಷ್ಟಪಡುತ್ತಾರೆ.[೮]. ಆದರೆ ನೀಲಗಿರಿಯನ್ನು ಪ್ಲ್ಯಾಸ್ಟಿಕ್ ಇಲ್ಲದ ವಲಯವಾಗಿ ಮಾಡಲು ಇದುವರೆಗೂ ಸರಿಯಾದ ಕ್ರಮಗಳನ್ನು ಕೈಗೊಂಡಿಲ್ಲ.[೯]

[ಬದಲಾಯಿಸಿ] ಉಲ್ಲೇಖಗಳು

  1. ಸರ್ ಫ್ರೆಡರಿಕ್ ಪ್ರೈಸ್ ಊಟಕಮಂಡ್‌, ಎ ಹಿಸ್ಟರಿ (ಮದ್ರಾಸ್: ಗೌರ್ನ್ಮೆಂಟ್ ಪ್ರೆಸ್) 1908 ಪುಟಗಳು 14-15
  2. www.ooty.net
  3. GRIndia
  4. List of Parliamentary and Assembly Constituencies (PDF). Tamil Nadu. Election Commission of India. ಮರುಕಳಿಸಿದ ದಿನಾಂಕ 2008-10-10.
  5. {www.hindu.com/2007/08/02/stories/2007080250530200.htm }
  6. Modern Indian Education System.
  7. http://www.ooty.com/schools.htm
  8. "Ban on carry bags", The Hindu, 2005-02-04. 
  9. A tourist Spot is orn to Death.

[ಬದಲಾಯಿಸಿ] ಹೆಚ್ಚಿನ ಓದಿಗಾಗಿ

  • ವೀಕ್ಸ್, ಸ್ಟೀಫನ್ (1979) ಡಿಕೇಯಿಂಗ್ ಸ್ಪ್ಲೆಂಡರ್ಸ್; ಟು ಪ್ಯಾಲೇಸಸ್: ರಿಫ್ಲೆಕ್ಷನ್ಸ್ ಇನ್ ಆನ್ ಇಂಡಿಯನ್ ಮಿರರ್ . ಲಂಡನ್: BBC (ಒನ್ ಪ್ಯಾಲೇಸ್ ಈಸ್ ಫರ್ನ್‌ಹಿಲ್ ಪ್ಯಾಲೇಸ್; ದಿ ಅದರ್ ದಿ ಪ್ಯಾಲೇಸ್ ಆಫ್ ದಿ ಮಹಾರಾಜ ಆಫ್ ಮೈಸೂರ್, ಬೆಂಗಳೂರು)

[ಬದಲಾಯಿಸಿ] ಇವನ್ನೂ ಗಮನಿಸಿ

  • ಗೌರ್ನ್ಮೆಂಟ್ ರೋಸ್ ಗಾರ್ಡನ್, ಊಟಿ

[ಬದಲಾಯಿಸಿ] ಬಾಹ್ಯ ಕೊಂಡಿಗಳು

Commons logo
ವಿಕಿಮೀಡಿಯ ಕಣಜದಲ್ಲಿ ಈ ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ:
Commons logo
ವಿಕಿಮೀಡಿಯ ಕಣಜದಲ್ಲಿ ಈ ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ:
Commons logo
ವಿಕಿಮೀಡಿಯ ಕಣಜದಲ್ಲಿ ಈ ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ:

"http://kn.wikipedia.org/w/index.php?title=ಊಟಿ&oldid=242414" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು