ಅಡೋಲ್ಫ್ ಹಿಟ್ಲರ್
Wikipedia ಇಂದ
| ಅಡೋಲ್ಫ್ ಹಿಟ್ಲರ್ | |
೧೯೩೩ರಲ್ಲಿ ಹಿಟ್ಲರ್ |
|
|
|
|
| ಅಧಿಕಾರದ ಅವಧಿ ಆಗಸ್ಟ್ ೨ ೧೯೩೪ – ಏಪ್ರಿಲ್ ೩೦ ೧೯೪೫ |
|
| ಪೂರ್ವಾಧಿಕಾರಿ | ಪಾಲ್ ವೊನ್ ಹಿಂಡನ್ಬರ್ಗ್ (ರಾಷ್ಟ್ರಪತಿಯಾಗಿ) |
|---|---|
| ಉತ್ತರಾಧಿಕಾರಿ | ಕಾರ್ಲ್ ಡೊನಿಟ್ಜ್ (ರಾಷ್ಟ್ರಪತಿಯಾಗಿ) |
|
|
|
| ಅಧಿಕಾರದ ಅವಧಿ ಜನವರಿ ೩೦ ೧೯೩೩ – ಏಪ್ರಿಲ್ ೩೦ ೧೯೪೫ |
|
| ಪೂರ್ವಾಧಿಕಾರಿ | ಕುರ್ಟ್ ವೊನ್ ಶ್ಲೈಕರ್ |
| ಉತ್ತರಾಧಿಕಾರಿ | ಜೋಸೆಫ್ ಗೋಬ್ಬೆಲ್ಸ್ |
|
|
|
| ಜನನ | ಏಪ್ರಿಲ್ ೨೦ ೧೮೮೯ ಬ್ರೌನೌ ಅಂ ಇನ್ನ್, ಆಸ್ಟ್ರಿಯ–ಹಂಗರಿ |
| ಮರಣ | ಏಪ್ರಿಲ್ ೩೦, ೧೯೪೫ (ತೀರಿದಾಗ ವಯಸ್ಸು ೫೬) ಬರ್ಲಿನ್, ಜರ್ಮನಿ |
| ರಾಜಕೀಯ ಪಕ್ಷ | ನ್ಯಾಷನಲ್ ಸೋಷಲಿಸ್ಟ್ ಜರ್ಮನ್ ವರ್ಕರ್ಸ್ ಪಾರ್ಟಿ(NSDAP) |
| ಜೀವನಸಂಗಾತಿ | ಈವಾ ಬ್ರೌನ್ (ಏಪ್ರಿಲ್ ೨೯ ೧೯೪೫ರಂದು ಮದುವೆ) |
| ಹಸ್ತಾಕ್ಷರ | |
ಅಡೊಲ್ಫ್ ಹಿಟ್ಲರ್ (ಏಪ್ರಿಲ್ ೨೦, ೧೮೮೯ – ಏಪ್ರಿಲ್ ೩೦, ೧೯೪೫) ೧೯೩೩ರಿಂದ ಜರ್ಮನಿ ದೇಶದ ಛಾನ್ಸೆಲರ್ ಮತ್ತು ೧೯೩೪ರಿಂದ ತನ್ನ ಸಾವಿನವರೆಗೆ ಫುಹ್ರೆರ್ (ನಾಯಕ). ಆತ ಅಲ್ಲಿನ ನಾಜಿ ಪಾರ್ಟಿಯ (ಜರ್ಮನ್ ಭಾಷೆಯಲ್ಲಿ: ನ್ಯಾಶನಲ್ ಸೊಜ್ಯಿಲಿಸ್ಟಿಶ್ ಡೋಯಿಶ್ ಆರ್ಬೈಟರ್ ಪಾರ್ಟಿ - ರಾಷ್ಟ್ರೀಯ ಸಮಾಜವಾದಿ ಜರ್ಮನ್ ಕಾರ್ಮಿಕರ ಪಾರ್ಟಿ) ಮುಖಂಡ ಕೊಡ.
ಪರಿವಿಡಿ |
[ಬದಲಾಯಿಸಿ] ೨ ನೇ ಮಹಾಯುದ್ಧದಲ್ಲಿ ಹಿಟ್ಲರನ ಪಾತ್ರ
೧೯೩೯ರ ಸೆಪ್ಟೆಂಬರ್ ೧ರಂದು ಜರ್ಮನಿಯು ಪೋಲೆಂಡಿನ ಮೇಲೆ ಆಕ್ರಮಣ ಮಾಡಿತು. ಜರ್ಮನಿಯ ಮುಖಂಡ ಅಡಾಲ್ಫ್ ಹಿಟ್ಲರನು ಸೊವಿಯೆಟ್ ಒಕ್ಕೂಟದೊಂದಿಗೆ ಮಾಡಿಕೊಂಡಿದ್ದ ಒಪ್ಪಂದದಂತೆ, ಅದೇ ದಿನ ಸೊವಿಯೆಟ್ ಒಕ್ಕೂಟವು ಪೋಲೆಂಡನ್ನು ಪೂರ್ವದಿಂದ ಆಕ್ರಮಣ ಮಾಡಿತು. ಇದಕ್ಕೆ ಪ್ರತ್ಯುತ್ತರವಾಗಿ ಸೆಪ್ಟೆಂಬರ್ ಮೂರರಂದು ಯುನೈಟೆಡ್ ಕಿಂಗ್ಡಮ್ ಮತ್ತು ಫ್ರಾನ್ಸ್ ಜರ್ಮನಿಯ ವಿರುದ್ಧ ಯುದ್ಧ ಸಾರಿದವು. ಕೆಲವವು ತಿಂಗಳುಗಳಲ್ಲಿ ಜರ್ಮನಿ ಪೋಲೆಂಡನ್ನು ಪೂರ್ಣವಾಗಿ ಆಕ್ರಮಿಸಿಕೊಂಡಿತು. ೧೯೪೦ರಲ್ಲಿ ಜರ್ಮನಿಯು ನಾರ್ವೆ, ನೆದರ್ಲೆಂಡ್, ಬೆಲ್ಜಿಯಮ್ ಮತ್ತು ಫ್ರಾನ್ಸುಗಳ ಮೇಲೆ ಏರಿ ಹೋಯಿತು. ೧೯೪೧ರಲ್ಲಿ ಯುಗೋಸ್ಲಾವಿಯಾ ಮತ್ತು ಗ್ರೀಸ್ ಕೂಡಾ ಜರ್ಮನಿಯ ದಾಳಿಗೀಡಾದವು. ಇಟಲಿಯು ಉತ್ತರ ಆಫ್ರಿಕಾದ ಬ್ರಿಟಿಷ್ ವಸಾಹತುಗಳ ಮೇಲೆ ಆಕ್ರಮಣ ಮಾಡಿತು. ಕೆಲವೇ ತಿಂಗಳುಗಳಲ್ಲಿ ಜರ್ಮನಿ ಇಟಲಿಗೆ ಬೆಂಬಲ ಘೋಷಿಸಿತು. ೧೯೪೧ರ ಮಧ್ಯದ ಸುಮಾರಿಗೆ ಪಶ್ಚಿಮ ಯೂರೋಪಿನ ಬಹುತೇಕ ರಾಷ್ಟ್ರಗಳು ಜರ್ಮನಿಯ ಅಧೀನಕ್ಕೆ ಸೇರಿಹೋಗಿದ್ದವು. ಆದರೆ ಯುನೈಟೆಡ್ ಕಿಂಗ್ಡಮ್ ಅನ್ನು ಗೆಲ್ಲಲು ಜರ್ಮನಿಗೆ ಸಾಧ್ಯವಾಗಲಿಲ್ಲ. ಇದಕ್ಕೆ ಮುಖ್ಯ ಕಾರಣ ಬ್ರಿಟನ್ನಿನ ರಾಯಲ್ ವಾಯುಪಡೆ ಮತ್ತು ನೌಕಾದಳಗಳು ನೀಡಿದ ಉಗ್ರ ಪ್ರತಿಭಟನೆ.
ಈಗ ಹಿಟ್ಲರ್ ಸೋವಿಯತ್ ಒಕ್ಕೂಟದ ಮೇಲೆ ತಿರುಗಿಬಿದ್ದನು. ೧೯೪೧ರ ಜೂನ್ ೨೨ರಂದು ಏಕಾಏಕಿ ಜರ್ಮನಿಯು ಸೋವಿಯತ್ ಒಕ್ಕೂಟಕ್ಕೆ ನುಗ್ಗಿತು. ಆಪರೇಷನ್ ಬಾರ್ಬಾರೋಸಾ ಎಂಬ ಸಂಕೇತ ನಾಮದ ಈ ದಾಳಿಯಲ್ಲಿ ಜರ್ಮನಿಗೆ ಮೊದಮೊದಲು ಅಪಾರ ಯಶಸ್ಸು ಸಿಕ್ಕಿತು. ೧೯೪೧ರ ಕೊನೆ ಯಷ್ಟರಲ್ಲಿ ಜರ್ಮನ್ ಸೈನ್ಯ ಮಾಸ್ಕೋನಗರದ ಹತ್ತಿರಹತ್ತಿರದ ವರೆಗೂ ಮುನ್ನಡೆದಿದ್ದರು. ಆದರೆ ಅಲ್ಲಿಂದ ಮುಂದೆ ಜರ್ಮನಿ ಮುನ್ನಡೆಯಲಾಗಲಿಲ್ಲ. ಸೋವಿಯತ್ ಸೈನ್ಯ ಭೀಕರ ಪ್ರತೀಕಾರ ಕೈಗೊಂಡು ಜರ್ಮನ್ ಸೈನ್ಯದ ಮಗ್ಗುಲು ಮುರಿದರು. ಮುಂದೆ ಸೋವಿಯತ್ ಸೈನ್ಯವು ಸ್ಟಾಲಿನ್ ಗ್ರಾಡ್ ನಗರಕ್ಕೆ ದಿಗ್ಬಂಧನ ಹಾಕಿ ಕುಳಿತಿದ್ದ ಜರ್ಮನಿಯ ಆರನೆಯ ತುಕಡಿಯನ್ನು ಮುತ್ತುವರೆದು ಪ್ರತಿದಿಗ್ಬಂಧನ ಹಾಕಿದರು. ಮುಂದೆ ಕುರ್ಸ್ಕ್ ಎಂಬಲ್ಲಿ ನಡೆದ ಯುದ್ಧದಲ್ಲಿ ಸೋವಿಯತ್ ಸೈನ್ಯ ಜರ್ಮನಿಯನ್ನು ಸೋಲಿಸಿ, ಲೆನಿನ್ ಗ್ರಾಡ್ ನಗರದ ದಿಗ್ಬಂಧನವನ್ನೂ ಮುರಿದರು. ಈ ನಂತರ ಜರ್ಮನ್ ಸೈನ್ಯ ಹಿಮ್ಮೆಟ್ಟಿತು. ಸೋವಿಯತ್ತರ ಕೆಂಪು ಸೈನ್ಯವು ಅವರನ್ನು ಬರ್ಲಿನ್ ನಗರದವರೆಗೂ ಬೆನ್ನಟ್ಟಿ ಹೋಯಿತು. ಬರ್ಲಿನ್ ನಲ್ಲಿ ಜರ್ಮನ್ ಸೈನ್ಯಕ್ಕೆ ಮನೆಮನೆಯ ನಾಗರೀಕರು ಕುಮ್ಮಕ್ಕು ಕೊಟ್ಟರೂ, ಪ್ರಚಂಡ ಪ್ರಮಾಣದಲ್ಲಿದ್ದ ಕೆಂಪು ಸೈನ್ಯವು ಬರ್ಲಿನ್ ನಗರವನ್ನು ಗೆದ್ದಿತು. ಇದೇ ಸುಮಾರಿಗೆ ( ಏಪ್ರಿಲ್ ೩೦, ೧೯೪೫ರ ಮುಂಜಾನೆ) ಹಿಟ್ಲರನು ತನ್ನ ನೆಲಮಾಳಿಗೆಯ ಬಂಕರಿನಲ್ಲಿ ಆತ್ಮಹತ್ಯೆ ಮಾಡಿಕೊಂಡನು.
ಇತ್ತ ಪಾಶ್ಚಿಮಾತ್ಯ ಮಿತ್ರ ರಾಷ್ಟ್ರ ಪಡೆ ೧೯೪೩ರಲ್ಲಿ ಇಟಲಿಯತ್ತ ನುಗ್ಗಿತು. ೧೯೪೪ರಲ್ಲಿ ಫ್ರಾನ್ಸಿನ ನಾರ್ಮಂಡಿಯ ತೀರದಿಂದ ಒಳನುಗ್ಗಿ ಫ್ರಾನ್ಸನ್ನು ಜರ್ಮನಿಯ ಮುಷ್ಠಿಯಿಂದ ಬಿಡುಗಡೆಮಾಡಿದರು. ಜರ್ಮನಿಯ ಪ್ರತಿದಾಳಿಗೆ ರೈನ್ ನದಿಯ ದಡದ ಮೇಲೆ ಮಿತ್ರ ರಾಷ್ಟ್ರಗಳು ಬ್ಯಾಟಲ್ ಆಫ್ ದ ಬಲ್ಜ್ ಎಂದೇ ಪ್ರಸಿದ್ಧವಾದ ಯುದ್ಧದಲ್ಲಿ ಜರ್ಮನಿಯನ್ನು ಹಿಮ್ಮೆಟ್ಟಿಸಿ, ಮುನ್ನಡೆದು ಎಲ್ಬ್ ನದಿಯ ದಂಡೆಯ ಮೇಲೆ ಪೂರ್ವ ದಿಕ್ಕಿನಿಂದ ಬಂದು ಮುಟ್ಟಿದ್ದ ಸೋವಿಯತ್ ಸೈನ್ಯವನ್ನು ಮುಟ್ಟಿ ಸಂಧಾನ ಸಾಧಿಸಿದರು. ಅಳಿದುಳಿದ ಜರ್ಮನ್ ಸೈನ್ಯವು ಶರಣಾಯಿತು.
ಈ ಯುದ್ಧದ ಕಾಲದಲ್ಲಿಯೇ ಜರ್ಮನಿಯಲ್ಲಿ ೬೦,೦೦,೦೦೦ ಯಹೂದಿಗಳನ್ನು ಸೆರೆವಾಸದಲ್ಲಿಟ್ಟು ಕೊಲ್ಲಲಾಯಿತು. ಇದನ್ನು ಹಾಲೋಕಾಸ್ಟ್ ಎಂಬ ಹೆಸರಿನಿಂದ ಕರೆಯಲಾಗಿದೆ.
ಜರ್ಮನಿಯಲ್ಲಿ ಪ್ರಜಾಸತ್ತಾತ್ಮಕ ವಿಧಾನದಿಂದಲೇ ನಾಝೀ ಪಕ್ಷವು ಅಧಿಕಾರಕ್ಕೆ ಬಂದರೂ, ಒಮ್ಮೆ ಅಧಿಕಾರಕ್ಕೆ ಬಂದಮೇಲೆ ಪ್ರಜಾಸತ್ತಾತ್ಮಕ ವಿಧಾನಗಳನ್ನು ಮೂಲೆಗೆ ತಳ್ಳಲಾಯಿತು. ಪ್ರಥಮ ಮಹಾಯುದ್ಧದಲ್ಲಿ ಸೋತ ಮೇಲೆ ಕಳೆದುಕೊಂಡ ಜರ್ಮನ್ ಸ್ವಾಭಿಮಾನವನ್ನು ಮರಳಿ ದೊರಕಿಸುವ ಆಶ್ವಾಸನೆ ಕೊಟ್ಟ ಮೊದಲ ಪಕ್ಷ ಅದಾದ್ದರಿಂದ ಜರ್ಮನ್ ಜನತೆ ಆ ಪಕ್ಷಕ್ಕೆ ತನ್ನ ಬೆಂಬಲ ನೀಡಿತು. ಮೊದಲನೆಯ ಮಹಾಯುದ್ಧ ಕೊನೆಗೊಂಡ ವರ್ಸಾಯಿಯ ಒಪ್ಪಂದದ ೨೩೧ನೆಯ ನಿಯಮ ಜರ್ಮನ್ ಜನತೆಗೆ ಸಹಿಸಲಸಾದ್ಯವಾಗಿತ್ತು. ನಾಝೀ ನಾಯಕ ಅಡೋಲ್ಫ್ ಹಿಟ್ಲರ್ ಜರ್ಮನಿ ತಮ್ಮ ಹಕ್ಕು ಎಂದು ತಿಳಿದುಕೊಂಡಿರುವ ಪ್ರತಿಯೊಂದು ರಾಷ್ಟ್ರದ ವಿರುದ್ಧವೂ ಹೋರಾಡುವುದಾಗಿ ಆಶ್ವಾಸನೆ ಕೊಟ್ಟದ್ದಲ್ಲದೇ ಆಬಗ್ಯೆ ಮೊದಲ ಹೆಜ್ಜೆಗಳನ್ನೂ ಇಟ್ಟನು.
[ಬದಲಾಯಿಸಿ] ಆಪರೇಷನ್ ವಾಲ್ಕರಿ
’ತೋಳದ ಗುಹೆ’ ಅಥವಾ ’ತೋಳದ ಮನೆ’. ಇದು ಎರಡನೇ ಮಹಾಯುದ್ಧದ ಸಮಯದಲ್ಲಿ ನಾಝಿ ಜರ್ಮನಿಯ ಸಮರ ಯೋಜನೆ ಮತ್ತು ರಣನೀತಿಗಳಿಗೆ ಅಂತಿಮ ರೂಪ ಕೊಡುವ ಸಭೆಗಳು ನಡೆಯುತ್ತಿದ್ದ ಗುಹೆಯಂತಹ ಕಟ್ಟಡ. ಆಗಿನ ಜರ್ಮನಿಯ ಪ್ರಾಂತ್ಯವಾಗಿದ್ದ ಪೂರ್ವ ಪ್ರಷ್ಯಾದ ರಾಸ್ಟೆನ್-ಬರ್ಗ್ (ಈಗ ಪೋಲಂಡ್-ನ ಕೆಂಟ್ಝುನ್) ಎಂಬ ಪಟ್ಟಣದ ಸಮೀಪವಿದೆ ಈ ತೋಳದ ಗುಹೆ.
ಆ ದಿನ ತಾರೀಕು ಜುಲಾಯಿ ೨೦, ೧೯೪೪. ತೋಳದ ಗುಹೆಯಲ್ಲಿ ಹಿಟ್ಲರ್ ಮತ್ತು ಆತನ ಸೈನ್ಯಾಧಿಕಾರಿಗಳು ಮೇಜೊಂದರ ಸುತ್ತಲೂ ನಿಂತು ಆ ಮೇಜಿನ ಮೇಲೆ ಹರಡಲಾಗಿದ್ದ ನಕ್ಷೆಯೊಂದರ ಮೂಲಕ ಯುದ್ಧದ ಬಗ್ಗೆ ಚರ್ಚೆ ಮಾಡುತ್ತಿದ್ದರು. ಮಧ್ಯಾಹ್ನ ೧೨.೪೨ಕ್ಕೆ ಸರಿಯಾಗಿ ಆ ಮೇಜಿನ ಕೆಳಗಿರಿಸಲಾಗಿದ್ದ ಬಾಂಬ್ ಸ್ಫೋಟಗೊಂಡಿತು! ಕೆಲವೇ ನಿಮಿಷಗಳ ಮೊದಲು ಆ ಬಾಂಬ್ ಇದ್ದ ಬ್ರೀಫ್-ಕೇಸನ್ನು ಮೇಜಿನ ಕೆಳಗಿರಿಸಿ, ಅಲ್ಲಿಂದ ಹೊರನಡೆದಿದ್ದ ನಾಝಿ ಮೀಸಲು ಪಡೆಯ ಅಧಿಕಾರಿಯಾಗಿದ್ದ ಕ್ಲೌಸ್ ಷೆಂಕ್ ಹಾಫ್ ವೊನ್ ಸ್ಟೌಫನ್-ಬರ್ಗ್, ಹಿಟ್ಲರ್ ಸತ್ತೇ ಹೋಗಿದ್ದಾನೆ ಎಂದು ತಿಳಿದು ಸಂತಸದಿಂದ ಬೀಗುತ್ತಾ ಬರ್ಲಿನ್ ಗೆ ಹೊರಟರು.
ಆದರೆ ಹಿಟ್ಲರ್ ಸತ್ತಿರಲಿಲ್ಲ, ಗಾಯಗೊಂಡಿದ್ದನಷ್ಟೆ ಮತ್ತು ವೈದ್ಯರಲ್ಲಿ, ’ನಾನು ಅಮರ... ನನ್ನನ್ನೇನು ಮಾಡಲಾಗದು... ನಾನು ಅಮರ’ ಎಂದು ರೋಷದಿಂದ ಬಡಬಡಿಸುತ್ತಿದ್ದ. ಮೊದಲ ಎರಡು ಪ್ರಯತ್ನಗಳಂತೆ, ಹಿಟ್ಲರ್-ನನ್ನು ಕೊಂದು ಜರ್ಮನಿಯನ್ನು ಆತನ ಕಪಿಮುಷ್ಠಿಯಿಂದ ಪಾರುಗೊಳಿಸುವ ಈ ೩ನೇ ಪ್ರಯತ್ನವೂ ವಿಫಲವಾಯಿತು.
ಜೂನ್ ೧೯೪೪ರ ಹೊತ್ತಿಗೆ ಎರಡನೇ ಮಹಾಯುದ್ಧ ಸಾಗುತ್ತಿದ್ದ ರೀತಿಯನ್ನು ಅವಲೋಕಿಸಿದಾಗ ಜರ್ಮನಿಯ ಅವನತಿಯನ್ನು ತಡೆಯುವುದು ಅಸಾಧ್ಯ ಎಂದು ಒಬ್ಬ ಅಡಾಲ್ಫ್ ಹಿಟ್ಲರ್-ನನ್ನು ಬಿಟ್ಟು ಉಳಿದೆಲ್ಲಾ ಉನ್ನತ ನಾಝಿ ಅಧಿಕಾರಿಗಳಿಗೆ ಗೊತ್ತಾಗಿ ಹೋಗಿತ್ತು. ತನ್ನ ಅಧಿಕಾರಿಗಳು ನೀಡುತ್ತಿದ್ದ ಶಾಂತಿ ಸಂಧಾನದ ಸಲಹೆಗಳನ್ನು ಕೇಳಲು ಹಿಟ್ಲರ್ ತಯಾರಿರಲಿಲ್ಲ. ಜರ್ಮನಿ ಇನ್ನೂ ಯುದ್ಧ ಗೆಲ್ಲುವ ಸಾಮರ್ಥ್ಯವನ್ನು ಹೊಂದಿದೆ ಎಂಬ ಭ್ರಮೆಯಲ್ಲೇ ’ತೋಳದ ಗುಹೆ’ಯಲ್ಲಿ ಘರ್ಜಿಸುತ್ತಾ ತನ್ನ ಅಧಿಕಾರಿಗಳಿಗೆ ಆದೇಶಗಳನ್ನು ನೀಡುತ್ತಿದ್ದ.
ಕೆಲವು ಉನ್ನತ ನಾಝಿ ಅಧಿಕಾರಿಗಳು ಮತ್ತು ಕೆಲವು ಪ್ರಮುಖ ನಾಗರಿಕರು, ಹಿಟ್ಲರ್ ಸಾಯುವ ಮೂಲಕ ಜರ್ಮನಿಯನ್ನು ರಕ್ಷಿಸಲು ಸಾಧ್ಯವಾಗುವುದಾದರೆ ಅದಕ್ಕೂ ಸಿದ್ಧರಾಗಿದ್ದರು. ಇವರಲ್ಲಿ ಪ್ರಮುಖರಾದವರೆಂದರೆ ಜನರಲ್ ಲೂಡ್ವಿಷ್ ಬೆಕ್, ಮೇಜರ್ ಜನರಲ್ ಬಾರೋನ್ ಹೆನ್ನಿಂಗ್ ವೊನ್ ಟ್ರೆಸ್ಕೊವ್, ಲೆಫ್ಟಿನಂಟ್ ಜನರಲ್ ಫ್ರೀಡ್ರಿಷ್ ಓಲ್-ಬ್ರೈಷ್ಟ್, ಕರ್ನಲ್ ಕ್ಲೌಸ್ ಷೆಂಕ್ ಹಾಫ್ ವೊನ್ ಸ್ಟೌಫನ್-ಬರ್ಗ್ ಮತ್ತು ಲೈಪ್-ಝಿಷ್ ನಗರದ ಮಾಜಿ ಮೇಯರ್ ಮತ್ತು ಹಿಟ್ಲರ್ ಸರಕಾರದ ಮಾಜಿ ಸದಸ್ಯರಾಗಿದ್ದ ಕಾರಲ್ ಗರ್ಡೆಲೊರ್.
ಹಿಟ್ಲರ್-ನನ್ನು ಮುಗಿಸುವ ಮೊದಲ ಪ್ರಯತ್ನ ನಡೆದದ್ದು ಮಾರ್ಚ್ ೧೯೪೩ರಲ್ಲಿ. ವೊನ್ ಟ್ರೆಸ್ಕೊವ್ ಮತ್ತು ಆತನ ಗೆಳೆಯ ಕ್ಯಾಪ್ಟನ್ ಫಾಬಿಯಾನ್ ವೊನ್ ಸ್ಲಾಕನ್-ಡೊರ್ಫ್, ಬ್ರಾಂಡಿ ಬಾಟ್ಲಿಗಳಿದ್ದ ಪಾರ್ಸೆಲ್ ಒಂದರಲ್ಲಿ ಬಾಂಬನ್ನು ಇರಿಸಿ ಹಿಟ್ಲರ್-ನನ್ನು ಕೊಲ್ಲುವ ಪ್ರಯತ್ನ ಮಾಡಿದ್ದರು. ಆದರೆ ಆ ಬಾಂಬ್ ಸ್ಫೋಟಗೊಳ್ಳಲೇ ಇಲ್ಲ. ಕೆಲವು ತಿಂಗಳುಗಳ ಬಳಿಕ ಕರ್ನಲ್ ರುಡೊಲ್ಫ್ ವೊನ್ ಗೆರ್ಸ್-ದೊರ್ಫ್ ತನ್ನ ಕೋಟಿನ ಜೇಬುಗಳಲ್ಲಿ ಬಾಂಬುಗಳನ್ನಿರಿಸಿ ಹಿಟ್ಲರ್ ಸಮೀಪಕ್ಕೆ ಬಂದ ಕೂಡಲೇ ಆತನ ಮೇಲೆ ಜಿಗಿದು ಬಾಂಬನ್ನು ಸ್ಫೋಟಗೊಳಿಸಿ ಹಿಟ್ಲರ್-ನನ್ನು ಸಾಯಿಸಿ ತಾನೂ ಸಾಯಲು ಮುಂದಾದರು. ಈ ಪ್ರಯತ್ನವೂ ವಿಫಲವಾಯಿತು.
ನಂತರ ನಡೆದದ್ದು ಮೇಲೆ ತಿಳಿಸಿದಂತೆ ೩ನೇ ಪ್ರಯತ್ನ. ಕರ್ನಲ್ ಕ್ಲೌಸ್ ಷೆಂಕ್ ಹಾಫ್ ವೊನ್ ಸ್ಟೌಫನ್-ಬರ್ಗ್, ೩೭ ವರ್ಷ ವಯಸ್ಸಿನ ಚಾಣಾಕ್ಷ ಮತ್ತು ಸಮರ್ಥ ಅಧಿಕಾರಿಯಾಗಿದ್ದರು. ಟ್ಯುನೀಶಿಯಾದಲ್ಲಿ ’ನಾಝಿ ಆಫ್ರಿಕಾ ಪಡೆ’ಯ ಪರ ಹೋರಾಡುವಾಗ ಬಲ ತೋಳು, ಬಲ ಕಣ್ಣು ಮತ್ತು ಎಡ ಕೈಯಲ್ಲಿನ ಎರಡು ಬೆರಳುಗಳನ್ನು ಕಳಕೊಂಡಿದ್ದರು. ಸ್ಟೌಫನ್-ಬರ್ಗ್ ನ ಸಾಧನೆಗಳನ್ನು ಗಮನಿಸಿದ ಹಿಟ್ಲರ್, ಆತನಿಗೆ ನಾಝಿ ಮೀಸಲು ಪಡೆಯ ಅಧಿಕಾರಿಯಾಗಿದ್ದ ಜನರಲ್ ಫ್ರೀಡ್ರಿಷ್ ಹೊಮ್ಮ್ ಅವರ ಚೀಫ್ ಆಫ್ ಸ್ಟಾಫ್ ಆಗಿ ಭಡ್ತಿ ನೀಡಿದನು. ಯುದ್ಧದ ರಣನೀತಿಗಳನ್ನು ಚರ್ಚೆ ಮಾಡುವಾಗ ಮೀಸಲು ಪಡೆಯ ಅಧಿಕಾರಿಗಳ ಉಪಸ್ಥಿತಿ ಅತ್ಯಗತ್ಯ. ಹಾಗಾಗಿ ಈಗ ಸ್ಟೌಫನ್-ಬರ್ಗ್ ಹಿಟ್ಲರ್-ನ ಸಮೀಪ ಸುಲಭದಲ್ಲಿ ಸುಳಿಯಬಹುದಾಗಿತ್ತು.
ಸ್ಟೌಫನ್-ಬರ್ಗ್ ಒಬ್ಬ ದೇಶಪ್ರೇಮಿಯಾಗಿದ್ದರೂ, ನಾಝಿ ಆಡಳಿತದ ವಿರೋಧಿಯಾಗಿದ್ದ. ಒಬ್ಬ ಜರ್ಮನಿಯ ಅಧಿಕಾರಿಯಾಗಿ ಯುದ್ಧದಲ್ಲಿ ಪಾಲ್ಗೊಂಡನೇ ಹೊರತು ನಾಝಿ ಯೋಧನಾಗಿಯಲ್ಲ. ನಾಝಿ ಆಡಳಿತ ವೈಖರಿ, ಆಚಾರ ವಿಚಾರಗಳು ಸ್ಟೌಫನ್-ಬರ್ಗ್ ಗೆ ಮೊದಲಿನಿಂದಲೂ ಹಿಡಿಸುತ್ತಿರಲಿಲ್ಲ. ಜರ್ಮನಿಯ ಸೋಲು ಖಚಿತವಾದ ಬಳಿಕವೂ ಅನಾವಶ್ಯಕವಾಗಿ ಯುದ್ಧವನ್ನು ಮುಂದುವರಿಸಿದ್ದ ಹಿಟ್ಲರ್-ನನ್ನು ಮುಗಿಸುವ ಸಂಚಿನ ರೂವಾರಿಯಾಗಿದ್ದ ಸ್ಟೌಫನ್-ಬರ್ಗ್, ತೋಳದ ಮನೆಯಲ್ಲಿ ಬಾಂಬ್ ಇರಿಸುವ ಸ್ವಲ್ಪ ದಿನಗಳ ಮೊದಲು, ’ಜರ್ಮನಿಯನ್ನು ರಕ್ಷಿಸಲು ಈಗ ತಾನೇನಾದರು ಮಾಡಲೇಬೇಕು’ ಎಂದು ತನ್ನ ಪತ್ನಿಯಲ್ಲಿ ಹೇಳಿದ್ದ.
ತನ್ನ ಕೆಳಗಿನ ಅಧಿಕಾರಿಗಳು ಹೂಡುತ್ತಿರುವ ಸಂಚು ನಾಝಿ ಮೀಸಲು ಪಡೆಯ ಮುಖ್ಯಸ್ಥ ಫ್ರೀಡ್ರಿಷ್ ಹೊಮ್ಮ್ ಅವರಿಗೆ ತಿಳಿದಿತ್ತಾದರೂ ಅವರು ಅದರಲ್ಲಿ ಯಾವುದೇ ರೀತಿಯಲ್ಲಿ ಸಕ್ರಿಯವಾಗಿ ಭಾಗವಹಿಸಲಿಲ್ಲ ಮತ್ತು ತನ್ನ ಮೇಲಧಿಕಾರಿಗಳಿಗೆ ಇದರ ಬಗ್ಗೆ ಸುಳಿವನ್ನೂ ನೀಡಲಿಲ್ಲ. ತಟಸ್ಥ ನಿಲುವನ್ನು ತಾಳಿದರು. ಈ ದಿವ್ಯ ಮೌನ ನಂತರ ಫ್ರೀಡ್ರಿಷ್ ಹೊಮ್ಮ್ ಅವರಿಗೆ ದುಬಾರಿಯಾಗಿ ಪರಿಣಮಿಸಿತು. ಸ್ಟೌಫನ್-ಬರ್ಗ್, ಕಾರಲ್ ಗರ್ಡೆಲೊರ್, ಲೂಡ್ವಿಷ್ ಬೆಕ್, ಫ್ರೀಡ್ರಿಷ್ ಓಲ್-ಬ್ರೈಷ್ಟ್, ವೊನ್ ಟ್ರೆಸ್ಕೊವ್ ಮತ್ತು ಇತರ ನಾಝಿ ವಿರೋಧಿ ಪ್ರಮುಖರು ಹಿಟ್ಲರ್-ನನ್ನು ಮುಗಿಸಿ ತಮ್ಮದೇ ಒಂದು ಹೊಸ ಸರಕಾರವನ್ನು ನಿರ್ಮಿಸಿ ಮಿತ್ರಪಡೆಗಳೊಂದಿಗೆ ಶಾಂತಿ ಸಂಧಾನದ ಮಾತುಕತೆಯನ್ನು ನಡೆಸುವ ಕಾರ್ಯತಂತ್ರವೊಂದನ್ನು ರೂಪಿಸಿದರು. ಇದಕ್ಕೆ ’ಆಪರೇಷನ್ ವಾಲ್ಕರಿ’ ಎಂಬ ಹೆಸರನ್ನಿಡಲಾಯಿತು. ಆಪರೇಷನ್ ವಾಲ್ಕರಿಯಲ್ಲಿ ೩ ಹಂತಗಳಿದ್ದವು. ಒಂದನೇಯದು ಹಿಟ್ಲರ್-ನನ್ನು ಮುಗಿಸುವುದು, ಎರಡನೇಯದು ನಾಝಿ ಪರ ಅಧಿಕಾರಿಗಳನ್ನು ಬಂಧಿಸಿ ಆಯಕಟ್ಟಿನ ಸ್ಥಳಗಳನ್ನು ವಶಪಡಿಸಿಕೊಂಡು ದೇಶವನ್ನು ತಮ್ಮ ಆಧೀನಕ್ಕೆ ತೆಗೆದುಕೊಳ್ಳುವುದು ಮತ್ತು ೩ನೇಯದು ಮಿತ್ರಪಡೆಗಳೊಂದಿಗೆ ಶಾಂತಿ ಮಾತುಕತೆ. ಪ್ಲ್ಯಾನ್ ಚೆನ್ನಾಗಿತ್ತು ಆದರೆ ಎಕ್ಸಿಕ್ಯೂಷನ್ ವೆರಿ ವೆರಿ ಬ್ಯಾಡ್.
೧೯೪೪ ಜುಲಾಯಿ ೨೦ರ ಮುಂಜಾನೆ ಸ್ಟೌಫನ್-ಬರ್ಗ್, ತನ್ನ ಸಹಾಯಕ ವೆರ್ನರ್ ವೊನ್ ಹಾಫನ್ ಜೊತೆಗೆ ತೋಳದ ಗುಹೆ ಇರುವ ರಾಸ್ಟೆನ್ ಬರ್ಗ್ ಗೆ ವಿಮಾನದಲ್ಲಿ ತೆರಳಿದರು. ಇಬ್ಬರ ಕೈಯಲ್ಲೂ ಬಾಂಬ್ ಇರುವ ಒಂದೊಂದು ಬ್ರೀಫ್-ಕೇಸ್ ಇತ್ತು. ನಂತರ ಸ್ಟೌಫನ್-ಬರ್ಗ್ ಗೆ ತಿಳಿದುಬಂದ ವಿಷಯವೆಂದರೆ, ಆ ದಿನ ಮಧ್ಯಾಹ್ನ ಬೆನಿಟೋ ಮುಸ್ಸೋಲಿನಿ ರಾಸ್ಟೆನ್-ಬರ್ಗ್ ಗೆ ಆಗಮಿಸಲಿರುವುದರಿಂದ ಯಾವ ಸಭೆಗಾಗಿ ತನ್ನನ್ನು ಹಿಟ್ಲರ್ ಕರೆದಿದ್ದನೋ ಆ ಸಭೆಯನ್ನು ಒಂದು ತಾಸು ಮುಂಚಿತವಾಗಿಯೇ ನಡೆಸಲಾಗುವುದು ಎಂದು. ಈ ಸುದ್ದಿ ಕೇಳಿ ಸ್ಟೌಫನ್ ಬರ್ಗ್ ತನ್ನ ಕೆಲಸ ಸ್ವಲ್ಪ ಬೇಗನೇ ಮುಗಿಯಲಿದೆ ಎಂದು ಸಂತಸಪಟ್ಟನು. ಆದರೆ ಅಲ್ಲೊಂದು ಪ್ರಾಬ್ಲೆಮ್ ಇತ್ತು. ಹಿಟ್ಲರ್ ಯಾವಾಗಲೂ ಇಂತಹ ಸಭೆಗಳನ್ನು ತೋಳದ ಮನೆಯ ಭೂಮಿಯ ಮಟ್ಟಕ್ಕಿಂತ ಕೆಳಗಿರುವ ಬಂಕರ್ ಒಂದರಲ್ಲಿ ಮಾಡುತ್ತಿದ್ದ. ಆದರೆ ಇಂದು ಈ ಬಂಕರ್ ನಲ್ಲಿ ಸ್ವಲ್ಪ ದುರಸ್ತಿ ಕಾರ್ಯವಿದ್ದುದರಿಂದ, ಮರದ ಸಾಮಗ್ರಿಗಳಿಂದ ನಿರ್ಮಿಸಲಾಗಿದ್ದ ಕಿಟಕಿಗಳಿದ್ದ ತಾತ್ಕಾಲಿಕ ಕೊಠಡಿಯೊಂದರಲ್ಲಿ ಈ ಸಭೆಯನ್ನು ನಡೆಸುವುದಾಗಿ ನಿರ್ಧರಿಸಲಾಗಿತ್ತು. ಈ ಕೊಠಡಿಯಲ್ಲಿ ಬಾಂಬ್ ಸ್ಫೋಟಗೊಳಿಸಿದರೆ, ಬಂಕರಿನಲ್ಲಿ ಉಂಟಾಗುವಷ್ಟು ಹಾನಿ ಆಗುವುದಿಲ್ಲ ಎಂದು ಸ್ಟೌಫನ್ ಬರ್ಗ್ ಗೆ ಮನವರಿಕೆಯಾದರೂ, ಈಗ ಹಿಂದೇಟು ಹಾಕುವಂತಿರಲಿಲ್ಲ.
ತನ್ನ ಪೈಲಟ್-ಗೆ ತಯಾರಾಗಿರುವಂತೆ ಆದೇಶಿಸಿ, ವೆರ್ನರ್ ವೊನ್ ಹಾಫನ್ ಜೊತೆ ತೋಳದ ಗುಹೆಯೆಡೆ ಸ್ಟೌಫನ್ ಬರ್ಗ್ ತೆರಳಿದನು. ಬಾಂಬ್ ಇಟ್ಟ ಬಳಿಕ ಆದಷ್ಟು ಬೇಗ ಅಲ್ಲಿಂದ ನಿರ್ಗಮಿಸಲು ಸಹಕಾರಿಯಾಗುವಂತೆ ವೊನ್ ಹಾಫನ್ ನನ್ನು ಕಾರಿನಲ್ಲೇ ಇರಲು ತಿಳಿಸಿ, ತಾನು ಮಾತ್ರ ಬ್ರೀಫ್ ಕೇಸ್ ಹಿಡಿದು ಸಭೆ ನಡೆಯುವ ಕೊಠಡಿಗೆ ತೆರಳಿದನು. ಅಲ್ಲಿ ಹಿಟ್ಲರ್ ಮತ್ತು ೨೩ ಇತರ ಅಧಿಕಾರಿಗಳು ದೊಡ್ಡ ಮೇಜೊಂದರ ಮೇಲೆ ನಕ್ಷೆಯೊಂದನ್ನು ಹರಡಿ ಚರ್ಚಿಸುತ್ತಿದ್ದರು. ಸ್ಟೌಫನ್ ಬರ್ಗ್, ಬ್ರೀಫ್ ಕೇಸನ್ನು ಟೇಬಲಿನ ಕಾಲೊಂದಕ್ಕೆ ಒರಗಿಸಿ ಹಿಟ್ಲರ್ ನಿಂದ ಸುಮಾರು ೬ ಅಡಿ ದೂರ ಇರಿಸಿದನು. ಸ್ವಲ್ಪ ಸಮಯದ ಬಳಿಕ ತುರ್ತು ಕರೆಯೊಂದನ್ನು ಮಾಡಲಿರುವುದು ಎಂಬ ನೆವ ಹೇಳಿ ಅಲ್ಲಿಂದ ಆತ ಹೊರನಡೆದನು. ಆಗ ಸಭೆಯಲ್ಲಿದ್ದ ಇನ್ನೊಬ್ಬ ಅಧಿಕಾರಿ ಕರ್ನಲ್ ಹೈನ್ಝ್ ಬ್ರಾಂಟ್, ಹಿಟ್ಲರಿನ ಸಮೀಪ ತೆರಳುವ ಅಥವಾ ತನ್ನ ಕಾಲನ್ನು ಉದ್ದಕ್ಕೆ ಚಾಚುವ ಆತುರದಲ್ಲಿ (ಇವೆರಡರಲ್ಲಿ ಯಾವುದು ಸರಿ ಎಂದು ಎಲ್ಲೂ ಸರಿಯಾಗಿ ತಿಳಿಸಲಾಗಿಲ್ಲ), ಮೇಜಿನ ಕಾಲಿಗೆ ಒರಗಿ ಇರಿಸಿದ್ದ ಬ್ರೀಫ್ ಕೇಸನ್ನು ಕೆಳಗೆ ಬೀಳಿಸಿದನು. ನಂತರ ಅದನ್ನೆತ್ತಿ ಹಿಟ್ಲರಿನಿಂದ ಸ್ವಲ್ಪ ದೂರದಲ್ಲಿ ಸರಿಯಾಗಿ ಇರಿಸಿದನು.
ಇದೇ ಸಮಯದಲ್ಲಿ ಸ್ಟೌಫನ್ ಬರ್ಗ್, ವೊನ್ ಹಾಫನ್ ಇದ್ದ ಕಾರಿನೆಡೆ ತೆರಳುತ್ತಿದ್ದನು. ಆತ ಕಾರಿನೆಡೆ ತಲುಪಿದಾಗ ಸಮಯ ೧೨.೪೨. ಆಗ ಇತ್ತ ಬಾಂಬ್ ಸ್ಫೋಟಗೊಂಡಿತು. ಆ ದೊಡ್ಡ ಸದ್ದು ಮತ್ತು ಚೀತ್ಕಾರಗಳನ್ನು ಕೇಳಿ, ಹಿಟ್ಲರ್ ಸತ್ತಿರುವನೆಂದು ತಿಳಿದು ಆಪರೇಷನ್ ವಾಲ್ಕರಿಯ ಮೊದಲ ಹಂತ ಯಶಸ್ವಿಯಾಯಿತೆಂದು ಸ್ಟೌಫನ್ ಬರ್ಗ್, ವೊನ್ ಹಾಫನ್ ಜೊತೆ ಬರ್ಲಿನ್ ಗೆ ವಿಮಾನದಲ್ಲಿ ಹಿಂತಿರುಗಿದನು.
ಆದರೆ ಹಿಟ್ಲರ್ ಬದುಕುಳಿದಿದ್ದ. ಕಿಟಕಿಗಳಿಂದ ಕೂಡಿದ್ದ ತಾತ್ಕಾಲಿಕ ಕೊಠಡಿಯ ಪರಿಣಾಮ ಮತ್ತು ಕರ್ನಲ್ ಬ್ರಾಂಟ್ ಆ ಬ್ರೀಫ್ ಕೇಸನ್ನು ಇದ್ದಲ್ಲಿಂದ ತೆಗೆದು ದೂರವಿರಿಸಿದ್ದು: ಈ ಎರಡು ಕಾರಣಗಳಿಂದ ಬಾಂಬ್ ನಿರೀಕ್ಷಿಸಿದಂತೆ ಸ್ಫೋಟಗೊಂಡರೂ, ಹಾನಿ ಮಾತ್ರ ನಿರೀಕ್ಷಿಸಿದಂತೆ ಆಗಲಿಲ್ಲ. ನಾಲ್ಕು ಜನರು ಸತ್ತು ಹಲವು ಉನ್ನತ ನಾಝಿ ಅಧಿಕಾರಿಗಳು ಬಹಳ ಕೆಟ್ಟದಾಗಿ ಗಾಯಗೊಂಡರು. ಹಿಟ್ಲರ್ ಕುಂಟುತ್ತಾ ಅಲ್ಲಿಂದ ಹೊರನಡೆದನು.
ತನ್ನ ಕೆಳಗಿರುವ ಆಧಿಕಾರಿಗಳು ನಡೆಸಿರುವ ಕೃತ್ಯದ ಬಗ್ಗೆ ತಿಳಿದಿದ್ದ ಫ್ರೀಡ್ರಿಷ್ ಹೊಮ್ಮ್, ಸ್ಟೌಫನ್ ಬರ್ಗ್ ಬೀಗುತ್ತಾ ಬಂದಿರುವುದನ್ನು ಗಮನಿಸಿದ ಕೂಡಲೇ ತೋಳದ ಗುಹೆಗೆ ಫೋನಾಯಿಸಿ ಹಿಟ್ಲರ್ ಇನ್ನೂ ಬದುಕಿರುವನೆಂದು ತಿಳಿದುಕೊಂಡನು. ಈಗೆಲ್ಲಾದರೂ ಸ್ಟೌಫನ್ ಬರ್ಗ್ ಮತ್ತು ಇತರರು ಬಂಧಿಸಲ್ಪಟ್ಟರೆ ಅವರು ತನ್ನ ಬಗ್ಗೆ ಬಾಯಿ ಬಿಡುವರೆಂಬ ನಡುಕ ಫ್ರೀಡ್ರಿಷ್ ಹೊಮ್ಮ್ ಗೆ ಆರಂಭವಾಯಿತು. ಕೂಡಲೇ ಹಿಟ್ಲರ್ ಕೊಲೆ ಪ್ರಯತ್ನದ ಆರೋಪದ ಮೇಲೆ ಸ್ಟೌಫನ್ ಬರ್ಗ್, ವೊನ್ ಹಾಫನ್, ಓಲ್ ಬ್ರೈಷ್ಟ್ ಮತ್ತು ಕರ್ನಲ್ ಮತ್ಝ್ ವೊನ್ ಕ್ವಿರ್ನ್-ಹೈಮ್ ಇವರುಗಳನ್ನು ಬಂಧಿಸಿ, ಕೋರ್ಟ್ ಮಾರ್ಷಲ್ ಮಾಡಿಸಿ ಮಧ್ಯರಾತ್ರಿಯ ಬಳಿಕ ಗುಂಡಿಟ್ಟು ಕೊಲ್ಲಿಸಿದನು. ನಂತರ ಸೆರೆಸಿಕ್ಕ ೮ ನಾಝಿ ವಿರೋಧಿ ಅಧಿಕಾರಿಗಳನ್ನು ತಂತಿಗಳ ಸಹಾಯದಿಂದ ನೇಣು ಹಾಕಲಾಯಿತು. ಈ ೮ ಮಂದಿಯ ಯಾತನೆಭರಿತ ಸಾವನ್ನು ರೆಕಾರ್ಡ್ ಮಾಡಿ ನಂತರ ಹಿಟ್ಲರ್ ತನ್ನ ಮನೋರಂಜನೆಗಾಗಿ ಅವನ್ನು ವೀಕ್ಷಿಸುತ್ತಿದ್ದ.
ಹಿಟ್ಲರ್ ಕೊಲೆ ಪ್ರಯತ್ನದ ನಂತರದ ಬಂಧನಗಳು ಮತ್ತು ಮರಣದಂಡನೆಗಳು ಐದಾರು ತಿಂಗಳುಗಳವರೆಗೆ ನಡೆದವು. ’ಜನರ ನ್ಯಾಯಾಲಯ’ ಎಂಬ ಹೆಸರಿನ ನ್ಯಾಯಾಲಯದ ಕುಪ್ರಸಿದ್ಧ ನ್ಯಾಯಾಧೀಶರಾಗಿದ್ದ ರೋಲಂಡ್ ಫ್ರೈಸ್ಲರ್ ನ್ಯಾಯ ದೊರಕಿಸುವ ನೆವದಲ್ಲಿ ಕಾಟಾಚಾರದ ವಿಚಾರಣೆಗಳನ್ನು ನಡೆಸಿ ಬಂಧನೆಗೆ ಒಳಗಾದವರನ್ನೆಲ್ಲಾ ಮರಣದಂಡನೆಗೆ ಒಳಪಡಿಸಿದನು. ಎಲ್ಲವೂ ಫ್ಯೂಹ್ರರ್ (ಸರ್ವಾಧಿಕಾರಿ ಹಿಟ್ಲರ್) ನನ್ನು ಸಂತುಷ್ಟಪಡಿಸುವ ಸಲುವಾಗಿ. ಸುಮಾರು ೫೦೦೦ ಜನರನ್ನು ಯಾವುದೇ ವಿಚಾರಣೆ ಇಲ್ಲದೇ ಮರಣದಂಡನೆಗೆ ಒಳಪಡಿಸಲಾಯಿತು.
ಈ ಸಂಚಿನಲ್ಲಿ ಭಾಗಿಯಾಗಿದ್ದ ಲೂಡ್ವಿಷ್ ಬೆಕ್ ಆತ್ಮಹತ್ಯೆ ಮಾಡಿಕೊಂಡರು. ವೊನ್ ಟ್ರೆಸ್ಕಾವ್ ರಷ್ಯಾ ಜೊತೆಗಿನ ಯುದ್ಧದಲ್ಲಿ ತಾನಾಗಿಯೇ ವೈರಿಯ ಗುಂಡಿನ ಮಳೆಯತ್ತ ನಡೆದುಕೊಂಡು ಹೋದರು. ಫ್ರೀಡ್ರಿಷ್ ಹೊಮ್ಮ್ ಅವರನ್ನು ಸಂಚಿನ ಬಗ್ಗೆ ತಿಳಿದೂ ಮೌನ ವಹಿಸಿದ್ದರಿಂದ ಕರ್ತವ್ಯ ಲೋಪದ ಆರೋಪದಲ್ಲಿ ಮರಣದಂಡನೆಗೆ ಒಳಪಡಿಸಲಾಯಿತು.
೨೦೦೮ರ ಕೊನೆಯಲ್ಲಿ ಟಾಮ್ ಕ್ರೂಸ್, ಸ್ಟೌಫನ್ ಬರ್ಗ್ ಪಾತ್ರಧಾರಿಯಾಗಿ ನಟಿಸಿರುವ ’ವಾಲ್ಕರಿ’ ಎಂಬ ಹೆಸರಿನ ಚಲನಚಿತ್ರವನ್ನು ಈ ನೈಜ ಘಟನೆಯನ್ನು ಕಥಾವಸ್ತುವನ್ನಾಗಿ ಮಾಡಿಕೊಂಡು ನಿರ್ಮಿಸಲಾಗಿದೆ. ಹಾಗೇನೆ ಈ ಚಿತ್ರವನ್ನು ನಿರ್ಮಿಸುವಾಗ ಸ್ಟೌಫನ್-ಬರ್ಗ್ ಅವರ ಮಗ, ಚಿತ್ರದ ಬಗ್ಗೆ ಹೇಳಿರುವ ಮಾತುಗಳನ್ನು ಇಲ್ಲಿ ಓದಬಹುದು.
Labels: ಇತಿಹಾಸ, ಯುದ್ಧ ಕತೆಗಳು
[ಬದಲಾಯಿಸಿ] ಹಿಟ್ಲರನ ಅಂತ್ಯ
ಯಹೂದಿಯರ ನರಮೇಧ ನಡೆಸಿದ್ದ ಜರ್ಮನಿಯ ಅಡಾಲ್ಫ್ ಹಿಟ್ಲರ್ ಕೊನೆಗೆ ಬಂಕರ್ನಲ್ಲಿ ತಲೆಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ನಂಬಲಾಗಿತ್ತು. ಆದರೆ ಹಿಟ್ಲರ್ ಬಂಕರ್ನಲ್ಲಿ ಆತ್ಮಹತ್ಯೆ ಮಾಡಿಕೊಂಡು ಸತ್ತಿಲ್ಲ ಎಂಬ ನೂತನ ವಿವರನ್ನು ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ.
ಬಂಕರ್ನಲ್ಲಿ ಗುಂಡು ಹೊಡೆದುಕೊಂಡು ಸತ್ತಿದ್ದ ಎಂದು ಹೂಳಲಾಗಿದ್ದ ಮೂಳೆಯ ಡಿಎನ್ಎ ಪರೀಕ್ಷೆ ನಡೆಸಿದ ಇತಿಹಾಸತಜ್ಞರು ಮತ್ತು ವಿಜ್ಞಾನಿಗಳು ಅದು ನಿಜಕ್ಕೂ ಮಹಿಳೆಯೊಬ್ಬಳ ಶವವೇ ಹೊರತು ಹಿಟ್ಲರ್ನದ್ದಲ್ಲ ಎಂಬ ವಾದ ಮಂಡಿಸಿದ್ದಾರೆ.
ಜರ್ಮನಿ ಮೇಲೆ ದಾಳಿ ನಡೆಸಿದ್ದ ರಷ್ಯಾದ ಸೈನಿಕ ಪಡೆಗಳಿಂದ ಪಾರಾಗಲು ಯತ್ನಿಸಿದ್ದ ಸಂದರ್ಭದಲ್ಲಿ ಅಡಾಲ್ಫ್ ಹಿಟ್ಲರ್ 1945 ಏಪ್ರಿಲ್ 30ರಂದು ಬಂಕರ್ನೊಳಗೆ ಸೈನೆಡ್ ಸೇವಿಸಿ ಬಳಿಕ ತನ್ನ ತಲೆಗೆ ತಾನೇ ಗುಂಡು ಹೊಡೆದುಕೊಂಡು ಸಾವನ್ನಪ್ಪಿರುವುದಾಗಿಯೇ ಇತಿಹಾಸಕಾರರು ಹೇಳಿದ್ದರು.
ಆದರೆ ದೊರೆತಿರುವ ಮೂಳೆಯ ತುಂಡೊಂದರ ಡಿಎನ್ಎ ಪರೀಕ್ಷೆ ನಡೆಸಿದ ಅಮೆರಿಕದ ವಿಜ್ಞಾನಿಗಳು, ಅದು 40ರ ಹರೆಯದ ಮಹಿಳೆಯ ಮೂಳೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 1945ರಲ್ಲಿ ಹಿಟ್ಲರ್ ವಯಸ್ಸು 56ಆಗಿತ್ತು ಎಂಬುದಾಗಿಯೂ ಹೇಳಿದ್ದಾರೆ.
ಆ ಮೂಳೆಯ ಡಿಎನ್ಎ ಪರೀಕ್ಷೆ ಆಧಾರದ ಮೇಲೆ ಹೇಳುವುದಾದರೆ ಅದು 20ರಿಂದ 40ರೊಳಗಿನ ಮಹಿಳೆಯದ್ದಾಗಿದೆ ಎಂದು ಕಾನ್ನೆಟಿಕುಟ್ ಯೂನಿವರ್ಸಸಿಟಿಯ ನಿಕ್ ಬೆಲ್ಲಾನ್ಟೋನಿ ತಿಳಿಸಿದ್ದಾರೆ.
[ಬದಲಾಯಿಸಿ] ಒಮ್ಮೆ ಅಹಿಂಸೆ ಹಿಂಸೆಗೆ ಬುದ್ಧಿ ಹೇಳಿತು!
ಹೆಜ್ಜೆಗಳು: ಗಾಂಧಿ , ಪತ್ರ , ಹಿಟ್ಲರ್
ಆತ ಅಡಾಲ್ಫ್ ಹಿಟ್ಲರ್ ಜಗತ್ತನ್ನೇ ನಡುಗಿಸಿದ ಮಾನವತೆಯ ವಿರೋಧಿ. ಈತ ಮಾನವತೆಯ ಪ್ರತಿರೂಪವಾಗಿ ಮಹಾತ್ಮ ಎನಿಸಿಕೊಂಡ ಗಾಂಧಿ. ಅತ್ತ ಹಿಟ್ಲರ್ ಯಹೂದಿಗಳನ್ನು ಕೊಲ್ಲುತ್ತಾ ಮಹಾಯುದ್ಧದ ರೌದ್ರತೆಯನ್ನು ಹೆಚ್ಚಿಸುತ್ತಿದ್ದ. ಇತ್ತ ಗಾಂಧಿ ಇಡೀ ಭಾರತ ದೇಶವನ್ನು ಹುರಿದುಂಬಿಸಿ ಅಹಿಂಸೆ, ಸತ್ಯಾಗ್ರಹಗಳ ಮೂಲಕ ಸ್ವಾತಂತ್ರ್ಯಕ್ಕಾಗಿ, ಶೋಷಿತರ ಸಮಾನತೆಗಾಗಿ ಹೋರಾಡುತ್ತಿದ್ದರು. ಹೀಗೆ ವಿರುದ್ಧ ದಿಕ್ಕುಗಳಲ್ಲಿದ್ದ ಇಬ್ಬರೂ ಒಬ್ಬರಿಗೊಬ್ಬರು ಮುಖಾಮುಖಿಯಾದರು; ಒಂದು ಪತ್ರದ ಮೂಲಕ. ಆ ಪತ್ರ ಬರೆದಿದ್ದು ಗಾಂಧಿ; 1939ರಲ್ಲಿ ಯುದ್ಧವನ್ನು ನಿಲ್ಲಿಸುವಂತೆ ಹಿಟ್ಲರ್ಗೆ ಪತ್ರ ಬರೆದಿದ್ದರು.
ವರ್ಧಾ ಭಾರತ 23.7.39 ಪ್ರಿಯ ಸ್ನೇಹಿತ, ನನ್ನ ಸ್ನೇಹಿತರು ತುಂಬಾ ದಿನಗಳಿಂದ ಒತ್ತಾಯ ಮಾಡುತ್ತಿದ್ದರು. ಮಾನವೀಯ ಕಾರಣಗಳಿಗಾಗಿ ನಿನಗೊಂದು ಪತ್ರ ಬರೆ ಎಂದು. ನಾನು ವಿರೋಧಿಸಿದ್ದೆ. ನನ್ನಿಂದ ಬರುವ ಪತ್ರ ನಿನಗೆ ತಲೆ ಹರಟೆಯಾಗಿ ಕಂಡು ನಿನ್ನನ್ನು ನೋಯಿಸಬಹುದು ಎಂದು. ಮೌಲ್ಯಯುತವಾದದ್ದರ ಕಡೆಗೆ ಚಿಂತಿಸಬೇಕು, ಪ್ರಯತ್ನ ಮಾಡಬೇಕೆಂದು ನನ್ನೊಳಗು ಯಾವಾಗಲೂ ಹೇಳುತ್ತದೆ. ಒಂದಂತು ಸ್ಪಷ್ಟ, ಈ ಜಗತ್ತಿನಲ್ಲಿ ಕೌರ್ಯ ತುಂಬುವುದನ್ನು ತಪ್ಪಿಸಲು ಸಾದ್ಯವಿರುವ ಏಕೈಕ ವ್ಯಕ್ತಿ ನೀನು. ನಿನಗೆಷ್ಟೇ ಮುಖ್ಯವೆನಿಸಿದರೂ ಕ್ರೂರ ಜಗತ್ತೊಂದನ್ನು ಕಟ್ಟಿದ್ದಕ್ಕೆ ಬೆಲೆ ತೆರಬಯಸುತ್ತೀಯಾ? ನಿರೀಕ್ಷಿತ ಯಶ ಕಾಣದೆ ಯುದ್ಧ ಮಾರ್ಗವನ್ನು ದೃಢ ನಿಶ್ಚಯದಿಂದ ತ್ಯಜಿಸಿದವನಾಗಿ ಮಾಡುತ್ತಿರುವ ಮನವಿ ಇದು, ಕೇಳುವಿಯಾ?ಈ ಪತ್ರ ಬರೆದ ನಿನಗೆ ಕಿರಿಕಿರಿ ಉಂಟು ಮಾಡಿದ್ದರೆ, ಕ್ಷಮಿಸಿ ಬಿಡೆಂದು ನಿನ್ನಲ್ಲಿ ಕೇಳಿಕೊಳ್ಳುತ್ತೇನೆ..
ಇಂತಿ ನಿನ್ನ ಪ್ರೀತಿಯ ಸ್ನೇಹಿತ ಎಂ.ಕೆ.ಗಾಂಧಿ ಹೆರ್ ಹಿಟ್ಲರ್ ಬರ್ಲಿನ್, ಜರ್ಮನಿ
ನಮ್ಮ ಹೊರಾಟ ಒಂದೇ ಅಲ್ಲ! 1939ರ ಸೆಪ್ಟೆಂಬರ್ನಲ್ಲಿ ಜರ್ಮನಿಯ ಸವರ್ಾಧಿಕಾರಿ ಹಿಟ್ಲರ್ಗೆ ನೇರ ಹಾಗೂ ಚಿಕ್ಕದಾದ ಪತ್ರ ಬರೆದಿದ್ದ ಗಾಂಧಿ, 1940ರ ಡಿಸೆಂಬರ್ 24ರಲ್ಲಿ ಮತ್ತೊಂದು ಪತ್ರ ಬರೆದರು!ಈ ಪತ್ರದಲ್ಲಿ ಗಾಂಧಿ, ತಮ್ಮ ಹೋರಾಟಕ್ಕೂ, ಹಿಟ್ಲರ್ ನಡೆಸುತ್ತಿರುವ ಯುದ್ಧಕ್ಕೂ ಇರುವ ವ್ಯತ್ಯಾಸವನ್ನು ಸಾರಿ ಹೇಳಿದರು. `ನಿನ್ನ ನೆಲದ ಮೇಲೆ ಪ್ರೀತಿ, ನಿನ್ನ ಶೌರ್ಯ ಎಲ್ಲವೂ ಒಪ್ಪುವಂಥದ್ದೆ' ಎಂದು ಹೇಳುತ್ತಲೇ, `ನಿನ್ನ ಬರವಣಿಗೆ, ನಿನ್ನನಿಲವು, ನಿನ್ನನ್ನು ಹೊಗಳುವವರು ಎಲ್ಲವೂ ನಿನ್ನ ರಾಕ್ಷಸೀ ಕೃತ್ಯಗಳು, ಮಾನವ ಘನತೆಗೆ ಕುಂದುತರುವ ಕೃತ್ಯಗಳ ಬಗ್ಗೆ ಯಾವ ಶಂಕೆಯನ್ನು ಉಳಿಸುವುದಿಲ್ಲ' ಎಂದು ಬರೆಯುತ್ತಾರೆ. ನಾಝೀವಾದವನ್ನು, ಸಾಮ್ರಾಜ್ಯಶಾಹಿಗಳನ್ನು ಒಂದೇ ನಿಲುವಿನಿಂದ ವಿರೋಧಿಸುತ್ತಾರೆ. ಚೆಕೋಸ್ಲೋವಾಕಿಯಾ, ಡೆನ್ಮಾಕರ್್, ಪೋಲೆಂಡ್ಗಳ ಮೇಲೆ ಹಿಟ್ಲರ್ನ ಅತ್ಯಾಚಾರವನ್ನು ಟೀಕಿಸುತ್ತಾರೆ.ಸುಮಾರು ಮೂರು ಪುಟಕ್ಕೂ ಹೆಚ್ಚು ದೀರ್ಘವಾಗಿರುವ ಈ ಪತ್ರವನ್ನು ಗಾಂಧೀಜಿ ಮುಗಿಸುವ ಮುನ್ನ ಹೀಗೆ ಬರೆಯುತ್ತಾರೆ... `ನಾವೆಲ್ಲಾ ಶಾಂತಿಯುತ ಹೋರಾಟ ತ್ಯಜಿಸಿದ್ದೇವೆ. ಇಂಥ ಹೊತ್ತಲ್ಲಿ ಶಾಂತಿಗಾಗಿ ಪ್ರಯತ್ನಿಸುವ ಎಂದರೆ ವೈಯಕ್ತಿಕವಾಗಿ ಅತಿ ಅನ್ನಿಸಬಹುದು, ಏನೂ ಅನ್ನಿಸದಿರಬಹುದು. ಆದರೆ ಕಣ್ಣೀಡಿರುತ್ತಿರುವ ಲಕ್ಷಾಂತರ ಯುರೋಪಿಯನ್ನರಿಗೆ ಇದು ಬೇಕು.'
[ಬದಲಾಯಿಸಿ] ಇವನ್ನೂ ನೋಡಿ