ಹರಿಹರಪ್ರಿಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹರಿಹರಪ್ರಿಯರ ಜನನ ೧೯೫೨ ಜನವರಿ ೨೦ರಂದು ಮೈಸೂರಿನಲ್ಲಾಯಿತು.[೧] ತಂದೆ, ಆಂಜನೇಯ ಗುಡಿಯ ಅರ್ಚಕರಾಗಿದ್ದರು. ತುಂಡು ಹೊಲವೊಂದು ಇದ್ದರೂ, ಪುಂಡ ಜನಗಳ ನಡುವೆ ಬೇಸಾಯ ಮಾಡುವದು ಆಗದೆ, ಊರೂರು ಅಲೆಯುವ ಪರಿಸ್ಥಿತಿ. ಮೈಸೂರು ಜಿಲ್ಲೆಯ ಅರ್ಜುನಹಳ್ಳಿ, ಚಿಕ್ಕವಡ್ಡರಗುಡಿ, ಹೊಸರಾಮನ ಹಳ್ಳಿ ; ಮಂಡ್ಯ ಜಿಲ್ಲೆಯ ಗದ್ದೆಹೊಸೂರು, ಮಂದಗೆರೆ, ಕೃಷ್ಣರಾಜಪೇಟೆ, ನಾಗಮಂಗಲ, ಕಿಕ್ಕೇರಿ, ಮಿರ್ಲೆ ; ಹಾಸನ ಜಿಲ್ಲೆಯ ಹೊಳೆನರಸೀಪುರ ; ಕೊನೆಗೆ ಬೆಂಗಳೂರು, ಹೀಗೆ ತಿರುಗುತ್ತ; ಕೊಟ್ಟವರ ಮನೆಯಲ್ಲಿ ಊಟ ಮಾಡುತ್ತ, ಹರಿಹರಪ್ರಿಯ ತಮ್ಮ ಶಿಕ್ಷಣವನ್ನು ೧೧ನೆಯ ತರಗತಿಯವರೆಗೆ ಪೂರೈಸಿದರು. “ಕನ್ನಡ ಜಾಣ” ಸಹ ಆದರು.

ವೃತ್ತಿ[ಬದಲಾಯಿಸಿ]

ಹರಿಹರಪ್ರಿಯ ಮಾಡದ ವೃತ್ತಿ ಇಲ್ಲ. ಲಾರಿ ರೈಟರ್, ಸೊಸೈಟಿ ಗುಮಾಸ್ತೆಗಿರಿ, ಪತ್ರಿಕಾ ವರದಿಗಾರ, ವಾಚನಾಲಯದಲ್ಲಿ ಸಹಾಯಕ, ಮುದ್ರಣಾಲಯದಲ್ಲಿ ಪ್ರೂಫ್ ರೀಡರ್, ಹಲವು ಸಾಹಿತಿಗಳ ಬಳಿ ಶುದ್ಧ ಪ್ರತಿ ತಯಾರಕ, ಚಲನಚಿತ್ರ ನಿರ್ಮಾಣದಲ್ಲಿ ಸಹಾಯಕ ಹೀಗೆ, ಹೊಟ್ಟೆಪಾಡಿಗಾಗಿ ಹತ್ತು ಹಲವು ಕೆಲಸಗಳಲ್ಲಿ ಕೈಯಾಡಿಸಿದ್ದಾರೆ. ಕನ್ನಡ-ಸಾಹಿತ್ಯ-ಸಂಸ್ಕೃತಿ ಚಿಂತಕ, ಬರಹಗಾರ, ಭಾಷಣಕಾರ ಎಲ್ಲದ್ದಕ್ಕೂ ಹೆಚ್ಚಾಗಿ ಪುಸ್ತಕ ಸಂಗ್ರಹಕಾರ.

ಪ್ರವೃತ್ತಿ[ಬದಲಾಯಿಸಿ]

ತಮ್ಮ ೧೬ನೆಯ ವಯಸ್ಸಿಗಾಗಲೆ ಸಾಹಿತ್ಯಕೃಷಿ ಆರಂಭಿಸಿದ ಹರಿಹರಪ್ರಿಯ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಬರೆದಿದ್ದಾರೆ. ಇವರ ಸಾಹಿತ್ಯ ಕವನ, ಕಾದಂಬರಿ, ಜೀವನ ಚರಿತ್ರೆ, ಪತ್ರಸಾಹಿತ್ಯ, ತೌಲನಿಕ ಅಧ್ಯಯನ, ವಿಮರ್ಶೆ, ಮಕ್ಕಳ ಸಾಹಿತ್ಯ, ಅಂಕಣ ಸಾಹಿತ್ಯ ಗಳನ್ನು ವ್ಯಾಪಿಸಿದೆ. ೧೯೭೪ರಿಂದ ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಒಕ್ಕೂಟ, ಜೆ.ಪಿ.ಚಳುವಳಿ, ಬಂಡಾಯ ಸಾಹಿತ್ಯ ಸಂಘಟನೆ, ಕರ್ನಾಟಕ ವಿಕಾಸ ವೇದಿಕೆ, ದಲಿತ ಸಂಘರ್ಷ ಸಮಿತಿ, ಪ್ರಜಾಸಾಹಿತಿ ಬಳಗ ಹೀಗೆ ಹಲವು ಸಂಘಟನೆಗಳಲ್ಲಿ ಸಕ್ರಿಯ ಪಾತ್ರ ವಹಿಸಿದ್ದಾರೆ. ಕೆನ್ ಕಲಾಶಾಲೆ, ಕಲಾಮಂದಿರಗಳಲ್ಲಿ ಸಾಹಿತ್ಯ, ಕಲಾಚರಿತ್ರೆ ಕುರಿತು ಗೌರವ ಅಧ್ಯಾಪಕರಾಗಿ ಬೋಧಿಸಿದ್ದಾರೆ. ೧೯೭೬ರಲ್ಲಿ “ಕುವೆಂಪು ದರ್ಶನ” ಎಂಬ ದ್ವೈಮಾಸಿಕ ಪತ್ರಿಕೆಯ ಸಂಪಾದಕರಾಗಿದ್ದರು. ಆನಂತರ ಕಾಗಿನೆಲೆಯ ಕನಕ ಪ್ರತಿಷ್ಠಾನದ “ಕನಕ ಸ್ಫೂರ್ತಿ” ಮಾಸಪತ್ರಿಕೆಯ ಗೌರವ ಸಂಪಾದಕರು ಹಾಗೂ ರಂಗಭೂಮಿ ಕುರಿತಾದ "ರೇ ಮಾಸ ನಾಟಕ" ಪತ್ರಿಕೆಗೂ ಗೌರವ ಸಂಪಾದಕರಾಗಿದ್ದರು.

ಪುಸ್ತಕಮನೆ (ಖಾಸಗಿ)[ಬದಲಾಯಿಸಿ]

ಎಲ್ಲಕ್ಕೂ ಅದ್ಭುತವಾದದ್ದು ಇವರ ಪುಸ್ತಕ ಮನೆ. ಒಂದು ಲಕ್ಷಕ್ಕೂ ಮೀರಿ ಕನ್ನಡ, ತೆಲುಗು ಹಾಗು ಇಂಗ್ಲಿಷ್ ಪುಸ್ತಕಗಳನ್ನೂ, ಪತ್ರಿಕೆಗಳ ಸಂಗ್ರಹ ಇಲ್ಲಿದೆ. ೫ ವರ್ಷಗಳ ಕಾಲ ಪ್ರತಿದಿನವೂ ಕನ್ನಡ ಸಾಹಿತಿಗಳ ಸಮಗ್ರ ಪುಸ್ತಕ ಪ್ರದರ್ಶನ ನಡೆಸಿರುವುದು ವಿಶ್ವದಲ್ಲಿಯೇ ಪ್ರಪ್ರಥಮ. ಅದೇ ರೀತಿ, 5 ವರುಷಗಳ ಕಾಲ ಸಾಮಾಜಿಕ, ಸಾಂಸ್ಕೃತಿಕ ಮಾಸ ಪತ್ರಿಕೆ "ಪುಸ್ತಕಮನೆ" ನಡೆಸಿರುತ್ತಾರೆ.

ಪುರಸ್ಕಾರ[ಬದಲಾಯಿಸಿ]

ಕುವೆಂಪು ವಿದ್ಯಾವರ್ಧಕ ಟ್ರಸ್ಟ ಬಹುಮಾನ, ವರ್ಧಮಾನ ಉದಯೋನ್ಮುಖ ಶ್ರೇಷ್ಠ ಸಾಹಿತಿ ಪ್ರಶಸ್ತಿ, ಕಾವ್ಯಾನಂದ ಪುರಸ್ಕಾರ, ಸರ್ ಎಂ.ವಿಶ್ವೇಶ್ವರಯ್ಯ ನವರತ್ನ ಪ್ರಶಸ್ತಿ ಇವುಗಳಲ್ಲದೆ, ಕರ್ನಾಟಕ ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಇವರ “ಪುಸ್ತಕದ ಮನೆ”ಯನ್ನು ಸಂಸ್ಥೆ ಎಂದು ಗುರುತಿಸಿ ಗೌರವಿಸಿದೆ.

ಸಾಹಿತ್ಯ[ಬದಲಾಯಿಸಿ]

ಕವನ[ಬದಲಾಯಿಸಿ]

  • ಹೇಮಾವತಿ

ಕಾದಂಬರಿ[ಬದಲಾಯಿಸಿ]

  • ಬದುಕಗೊಡದ ಜನ

ವ್ಯಕ್ತಿ, ಸಾಹಿತ್ಯ ಪರಿಚಯ[ಬದಲಾಯಿಸಿ]

  • ಇವರು ಕುವೆಂಪು
  • ಕುವೆಂಪು ಪತ್ರಗಳು
  • ಡಿ.ಲಿಂಗಯ್ಯನವರ ಸಾಹಿತ್ಯ ಪರಿಚಯ
  • ಕುವೆಂಪು ಒಲವು ನಿಲವು
  • ಕನ್ನಡದ ಹೇಮಾಹೇಮಿಗಳು
  • ದೇಸೀಯರು
  • ಅ.ನ.ಸುಬ್ಬರಾವ್
  • ಸಮಗ್ರ ವ್ಯಕ್ತಿಚಿತ್ರಗಳು
  • ಚದುರಂಗರ ಮನಸ್ಸು ಮತ್ತು ಮೌಲ್ಯಗಳು

ವಿಚಾರ/ವಿಮರ್ಶೆ[ಬದಲಾಯಿಸಿ]

  • ಸಾಹಿತ್ಯರಂಗದಲ್ಲಿ ರಾಜಕೀಯ
  • ಸಾಂಸ್ಕೃತಿಕ ದಾಖಲೆಗಳು
  • ಸಾಹಿತ್ಯವು ಜೀವನವು
  • ಕಾಳಜಿ
  • ಉಪಾದೇಯ
  • ಬಂಡಾಯ ಮನೋಧರ್ಮ
  • ಪರ್ಯಾಯ ಸಂಸ್ಕೃತಿ
  • ಸಮಗ್ರ ವಿಚಾರ ವಿಮರ್ಶೆ
  • ಕುವೆಂಪು ರಾಮಾಯಣ ಬರಹಗಾರರ ಪ್ರತಿಕ್ರಿಯೆ
  • ಕನ್ನಡ ತೆಲುಗು ಸಾಹಿತ್ಯ ವಿನಿಮಯ

ಸಂಪಾದನೆ[ಬದಲಾಯಿಸಿ]

  • ಕಳಕಳಿ
  • ಗಮಕ ಶಾರದೆ
  • ಪ್ರಸ್ತುತ
  • ವರ್ಧಮಾನ

ಮಕ್ಕಳ ಸಾಹಿತ್ಯ[ಬದಲಾಯಿಸಿ]

  • ತಿಳಿಯ ಹೇಳುವ ಕೃಷ್ಣ ಕತೆಯನು

ಅನುವಾದ[ಬದಲಾಯಿಸಿ]

  • ಜಾಬಾಲಿ (ತೆಲುಗಿನಿಂದ ಕನ್ನಡಕ್ಕೆ)
  • ವಿಶ್ವನಾಥ ಸಾಹಿತ್ಯೋಪನ್ಯಾಸಗಳು (ತೆಲುಗಿನಿಂದ ಕನ್ನಡಕ್ಕೆ)
  • ರಸರೇಖೆ (ತೆಲುಗಿನಿಂದ ಕನ್ನಡಕ್ಕೆ)
  • ತೇಜೋರೇಖೆಗಳು (ತೆಲುಗಿನಿಂದ ಕನ್ನಡಕ್ಕೆ)
  • ಅಂತರಾಷ್ಟ್ರೀಯ ವ್ಯಕ್ತಿತ್ವಗಳು (ತೆಲುಗಿನಿಂದ ಕನ್ನಡಕ್ಕೆ)
  • ಪ್ರಾಚೀನ ಭಾರತದ ಕತೆಗಳು ( ಇಂಗ್ಲಿಷಿನಿಂದ ಕನ್ನಡಕ್ಕೆ)
  • ಪರಿಶೋಧನ (ಕನ್ನಡದಿಂದ ತೆಲುಗಿಗೆ)

ಅಂಕಣ ಬರಹ[ಬದಲಾಯಿಸಿ]

  • ಸಮಕಾಲೀನ ಇತಿಹಾಸ

ತೆಲುಗಿನಲ್ಲಿ ಸಾಹಿತ್ಯ[ಬದಲಾಯಿಸಿ]

  • ನಾರ್ಲವಾರಿ ಉತ್ತರಾಲು

ಉಲ್ಲೇಖಗಳು[ಬದಲಾಯಿಸಿ]

  1. "ಕನ್ನಡ ಪ್ರಭ,30 Dec 2014, 'ಪುಸ್ತಕ ಸಂಸೃತಿ' ನಮ್ಮಲ್ಲಿ ಇನ್ನೂ ಹುಟ್ಟಿಲ್ಲ 'ಪುಸ್ತಕಮನೆ' ಹರಿಹರಪ್ರಿಯ ಅವರೊಂದಿಗೆ ಸಂದರ್ಶನ-ಗುರುಪ್ರಸಾದ್". Archived from the original on 28 ಏಪ್ರಿಲ್ 2015. Retrieved 19 ಜನವರಿ 2015.