ಸಿ.ಆರ್.ಸಿಂಹ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಂಗಭೂಮಿ,ದೂರದರ್ಶನ ಹಾಗೂ ಚಲನಚಿತ್ರ - ಈ ಮೂರೂ ಕ್ಷೇತ್ರಗಳಲ್ಲಿ ಕೆಲಸ ಮಾಡಿ 'ಸೈ' ಅನ್ನಿಸಿಕೊಂಡಿರುವ ಕನ್ನಡದ ಕಲಾವಿದ ಸಿ.ಆರ್.ಸಿಂಹ. ಇವರು ಹುಟ್ಟಿದ್ದು ಚನ್ನಪಟ್ಟಣದಲ್ಲಿ ೧೯೪೨, ಜೂನ್ ೧೬ರಂದು .ತಂದೆ ರಾಮಸ್ವಾಮಿ ಶಾಸ್ತ್ರಿ.ತಾಯಿ ಲಲಿತಮ್ಮ.ಕನ್ನಡ ಚಿತ್ರರಂಗದ ಇನ್ನೊಬ್ಬ ಜನಪ್ರಿಯ ನಟ ಶ್ರೀನಾಥ್ ಸಹೋದರ. ಕ್ಯಾನ್ನರ್ ನಿಂದ ಬಳಲುತ್ತಿದ್ದ ಸಿ.ಆರ್.ಸಿಂಹ ಅವರು ಫ಼ೆಬ್ರವರಿ ೨೮, ೨೦೧೪ ರಂದು ನಿಧನರಾದರು.

ಇವರ ಅಭಿನಯದ ನಾಟಕಗಳು[ಬದಲಾಯಿಸಿ]

  • ದಿ ಜೂ ಸ್ಟೋರಿ
  • ಸೂರ್ಯ ಶಿಕಾರಿ
  • ದಿ ಆಡ್ ಕಪಲ್
  • ಮ್ಯಾನ್ ಆಫ್ ಡೆಸ್ಟಿನಿ
  • ತುಘಲಕ್
  • ಸಂಕ್ರಾಂತಿ

ಇವರ ನಿರ್ದೇಶನದ ನಾಟಕಗಳು[ಬದಲಾಯಿಸಿ]

  • ಒಥೆಲೊ
  • ಮಿಡ್ ಸಮ್ಮರ್ ನೈಟ್ಸ್ ಡ್ರೀಮ್
  • ಬ್ರೆಕ್ಟನ ದಿ ಕಕೇಷಿಯನ್ ಚಾಕ್ ಸರ್ಕಲ್( ಭಾಷಾ೦ತರ, ಜಿ.ಎನ್ ರ೦ಗನಾಥರಾವ್)

ಇವರ ಅಭಿನಯದ ಚಲನಚಿತ್ರಗಳು[ಬದಲಾಯಿಸಿ]

ಇವರ ನಿರ್ದೇಶನದ ಕೆಲವು ಚಿತ್ರಗಳು[ಬದಲಾಯಿಸಿ]

ಪ್ರಶಸ್ತಿ / ಪುರಸ್ಕಾರಗಳು[ಬದಲಾಯಿಸಿ]

  • ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ.
  • ರಾಜ್ಯ ಪ್ರಶಸ್ತಿ -ಕಾಕನಕೋಟೆ ಚಲನಚಿತ್ರಕ್ಕೆ.
  • ರಾಜ್ಯೋತ್ಸವ ಪ್ರಶಸ್ತಿ.
  • ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ.
  • ಶಂಕರಗೌಡ ರಂಗಭೂಮಿ ಪ್ರಶಸ್ತಿ.
  • ಆರ್ಯಭಟ ಪ್ರಶಸ್ತಿ.

ಬೆಂಗಳೂರಿನಲ್ಲೇ ನೆಲೆಸಿರುವ ಸಿ.ಆರ್.ಸಿಂಹರವರು ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರತಿದಿನ ನಿಮ್ಮ ಸಿಮ್ಮ ಅಂಕಣ ಬರೆಯುತ್ತಾರೆ.