ವೈ.ಚಂದ್ರಶೇಖರ ಶಾಸ್ತ್ರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವೈ. ಚಂದ್ರಶೇಖರ ಶಾಸ್ತ್ರಿ ಗಳು ಬಳ್ಳಾರಿ ಜಿಲ್ಲೆಯ ಹೊಳಲು ಗ್ರಾಮದಲ್ಲಿ ಜನಿಸಿದರು. ಗದಗದಲ್ಲಿ ಆರಂಭದ ಶಿಕ್ಷಣ ಮುಗಿಸಿ ಕಾಶಿ, ಕೋಲಕಾಟಾಗಳಲ್ಲಿ ಸಂಸ್ಕೃತ ಶಿಕ್ಷಣ ಪಡೆದು ‘ ವ್ಯಾಕರಣ ತಿರ್ಥ’ ಪದವಿ ಪಡೆದರು. ನಂತರ ಯಾದಗಿರಿಯ ‘ಶಂಕರ ಸಂಸ್ಕೃತ ಕಾಲೇಜಿ’ನಲ್ಲಿ , ಅಧ್ಯಾಪಕರಾಗಿ, ಹುಬ್ಬಳ್ಳಿಯ ‘ ಶ್ರೀ ಜಗದ್ಗುರು ಗಂಗಾಧರ ಕಾಲೇಜಿ’ ನಲ್ಲಿ ಪ್ರಿನ್ಸಿಪಾಲರಾಗಿ ಸೇವೆ ಸಲ್ಲಿಸಿದರು.

ಚಂದ್ರಶೇಖರ ಶಾಸ್ತ್ರಿಗಳ ಕೃತಿಗಳು: ಬಸವತತ್ವ ರತ್ನಾಕರ, ಚಾಣಕ್ಯನೀತಿ ದರ್ಪಣ, ರೇಣುಕಾವಿಜಯ, ಸಿದ್ಧೇಶ್ವರ ವಚನ, ರಾಜಗಿರಿ, ಮದನಮೋಹನ ಮಾಳವೀಯ ಚರಿತೆ

೧೯೪೦ರಲ್ಲಿ ಧಾರವಾಡದಲ್ಲಿ ಜರುಗಿದ ೨೫ ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಇವರು ಮಾಗಳ ಗ್ರಾಮದಲ್ಲಿ ಹೆಚ್ಚಿನ ಸಂಬಂಧವನ್ನು ಇಟ್ಟುಕೊಂಡಿದ್ದರು ಇವರು ಮಾಗಳ ಗ್ರಾಮದ ಒಬ್ಬ ಮಗ ಎಂದು ಹೇಳಬಹುದು ಮತ್ತು ಇವರು ಮರಣ ಹೊಂದಿದ್ದು ಕೂಡ ಮಗಳ ಗ್ರಾಮದಲ್ಲಿ