ರಾಯಲಸೀಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತಿರುಮಲ ಬ್ರಹ್ಮರಥೋತ್ಸವ
ಅಹೋಬಿಲಮ್
ಲೇಪಾಕ್ಷಿ ನಂದಿ
ಚಿತ್ತೂರಿನ ಕಾನಿಪಾಕಂ ದೇವಾಲಯ
ಯಾಗಂಟಿ ಪುಷ್ಕರಣಿ, ನಂದ್ಯಾಲ.
ಮಾಧವರಾಯ ದೇವಾಲಯ, ಗಂಡೀಕೋಟಾ
ತಿರುಪತಿಯ ಕಪಿಲತೀರ್ಥ ಜಲಪಾತ
ಬುರುಗುಲು, ಬಜ್ಜಿ. ರಾಯಲಸೀಮೆಯ ಪ್ರಸಿದ್ಧ ತಿನಿಸು

"ರಾಯಲಸೀಮೆ"( Telugu:రాయలసీమ ) ಆಂಧ್ರ ಪ್ರದೇಶದ ಭೌಗೋಳಿಕ ವಿಭಾಗಗಳಲ್ಲೊಂದು. ಇದು ಅನಂತಪುರ, ಚಿತ್ತೂರು, ಕಡಪ ಮತ್ತು ಕರ್ನೂಲ್ ಜಿಲ್ಲೆಗಳನ್ನೊಳಗೊಂಡಿದೆ. ಕರ್ನೂಲು ಪಟ್ಟಣವು ಆಂಧ್ರರಾಷ್ಟ್ರದ ಮೊದಲ ರಾಜಧಾನಿಯಾಗಿತ್ತು. ಈ ಪ್ರಾಂತ್ಯವನ್ನಾಳಿದ ಶ್ರೀಕೃಷ್ಣದೇವರಾಯನ ಸ್ಮರಣಾರ್ಥ ’ರಾಯಲಸೀಮ’ ಎಂಬ ಹೆಸರು ಪ್ರದೇಶಕ್ಕೆ ಬಂದಿತು.

ಈ ಭಾಗವನ್ನು ಚಾಲುಕ್ಯರು ಆಳುವ ಮೊದಲು(ಸುಮಾರು ಕ್ರಿ.ಶ ೭ನೇ ಶತಮಾನ) ಇದು "ಹಿರಣ್ಯಕ ರಾಷ್ಟ್ರ’ವೆಂದು ಹೆಸರಾಗಿತ್ತು. ಪುರಾಣ ಕಾಲದಲ್ಲಿ ಹಿರಣ್ಯಾಕ್ಷ ಮತ್ತು ಹಿರಣ್ಯಕಶಿಪು ಈ ಭಾಗವನ್ನಾಳಿದ್ದರೆಂಬ ನಂಬಿಕೆಯಿದೆ. ವಿಜಯನಗರ ಕಾಲದ ನಂತರವಷ್ಟೇ ಈ ಭಾಗ ರಾಯಲಸೀಮೆಯೆಂಬ ಹೆಸರು ಪಡೆದುಕೊಂಡಿತು.

ಪ್ರೇಕ್ಷಣೀಯ ಸ್ಥಳಗಳು[ಬದಲಾಯಿಸಿ]

ಗಂಡಿಕೋಟದ ಪೆನ್ನಾ ನದಿಯ ದೃಶ್ಯ
"https://kn.wikipedia.org/w/index.php?title=ರಾಯಲಸೀಮ&oldid=1162782" ಇಂದ ಪಡೆಯಲ್ಪಟ್ಟಿದೆ