ರಾಜೀವ್ ಗಾಂಧಿ
ಗೋಚರ
(ರಾಜೀವ ಗಾಂಧಿ ಇಂದ ಪುನರ್ನಿರ್ದೇಶಿತ)
ರಾಜೀವ್ ಗಾಂಧಿ राजीव गांधी | |
---|---|
![]() | |
೬ನೆಯ ಭಾರತದ ಪ್ರಧಾನ ಮಂತ್ರಿ | |
In office ೩೧ ಅಕ್ಟೊಬರ್ ೧೯೮೪ – ೨ ಡಿಸೆಂಬರ್ ೧೯೮೯ | |
President | ಜೈಲ್ ಸಿಂಗ್ ರಾಮಸ್ವಾಮಿ ವೆಂಕಟರಾಮನ್ |
Preceded by | ಇಂದಿರಾ ಗಾಂಧಿ |
Succeeded by | ವಿಶ್ವನಾಥ ಪ್ರತಾಪ ಸಿಂಗ್ |
ವಿದೇಶಾಂಗ ಸಚಿವ | |
In office ೨೫ ಜುಲೈ ೧೯೮೭ – ೨೫ ಜೂನ್ ೧೯೮೮ | |
Preceded by | ನಾರಾಯಣ ದತ್ತ ತಿವಾರಿ |
Succeeded by | ನರಸಿಂಹ ರಾವ್ |
In office ೩೧ ಅಕ್ಟೋಬರ್ ೧೯೮೪ – ೨೫ ಸೆಪ್ಟೆಂಬರ್ ೧೯೮೫ | |
Preceded by | ಇಂದಿರಾ ಗಾಂಧಿ |
Succeeded by | ಬಲಿರಾಂ ಭಗತ್ |
ಹಣಕಾಸು ಸಚಿವ | |
In office ೨೪ ಜನವರಿ ೧೯೮೭ – ೨೫ ಜುಲೈ ೧೯೮೭ | |
Preceded by | ವಿಶ್ವನಾಥ ಪ್ರತಾಪ ಸಿಂಗ್ |
Succeeded by | ನಾರಾಯಣ ದತ್ತ ತಿವಾರಿ |
ರಕ್ಷಣಾ ಸಚಿವ | |
In office ೨೫ ಸೆಪ್ಟೆಂಬರ್ ೧೯೮೫ – ೨೪ ಜನವರಿ ೧೯೮೭ | |
Preceded by | ನರಸಿಂಹ ರಾವ್ |
Succeeded by | ವಿಶ್ವನಾಥ ಪ್ರತಾಪ ಸಿಂಗ್ |
Personal details | |
Born | Rajiv Gandhi at 7 Race course road 1988 (cropped) ೨೦ ಆಗಸ್ಟ್ ೧೯೪೪ ಮುಂಬಯಿ, British India |
Died | 21 May 1991 ಶ್ರಿಪೆರುಂಬುದೂರ್,ಭಾರತ | (aged 46)
Resting place | Rajiv Gandhi at 7 Race course road 1988 (cropped) |
Political party | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ |
Spouse | ಸೊನಿಯಾ ಗಾಂಧಿ |
Children | ರಾಹುಲ್ ಗಾಂಧಿ ಪ್ರಿಯಾಂಕ |
Parent |
|
Alma mater | ಟ್ರಿನಿಟಿ ಕಾಲೇಜು, ಕೆಂಬ್ರಿಡ್ಜ್ ಇಂಪೀರಿಯಲ್ ಕಾಲೇಜು,ಲಂಡನ್ |
Signature | ಚಿತ್ರ:Rajiv Gandhi Signature.svg |



ರಾಜೀವ್ ಗಾಂಧಿ (೧೯೮೪-೧೯೮೯) ಭಾರತದ ೬ ನೇ ಪ್ರಧಾನಿಯಾಗಿದ್ದರು. ಇವರು ಭಾರತದ ಪ್ರಧಾನಿ 'ಶ್ರೀಮತಿ ಇಂದಿರಾ ಗಾಂಧಿ', ಹಾಗೂ 'ಫಿರೋಝ್ ಗಾಂಧಿ' ದಂಪತಿಗಳ ಮೊದಲ ಮಗ.
ಜನನ, ಜೀವನ
[ಬದಲಾಯಿಸಿ]- ರಾಜೀವ್ ಗಾಂಧಿ (ಜನನ : ಆಗಸ್ಟ್ ೨೦, ೧೯೪೪) ತಂದೆ ಫಿರೋಝ್ ಗಾಂಧಿ. ಇವರು ಇಟಲಿಯ ಮೂಲದವರಾದ ಸೋನಿಯ ಮೈನೊ ಅವರನ್ನು ವಿವಾಹವಾಗಿದ್ದರು. ಇವರಿಗೆ ಇಬ್ಬರು ಮಕ್ಕಳು- ರಾಹುಲ್ ಮತ್ತು ಪ್ರಿಯಾಂಕ. ೧೯೬೨ರಲ್ಲಿ ಕೇಂಬ್ರಿಡ್ಜ್ ನ ಟ್ರಿನಿಟಿ ಕಾಲೇಜ್ ನಲ್ಲಿ ಇಂಜಿನೀಯರಿಂಗ್ ಮಾಡಲು ಹೋದರಾದರೂ ೧೯೬೫ ರವರೆಗೂ ಅಲ್ಲೇ ಇದ್ದು ಪದವಿ ಪಡೆಯದೇ ವಾಪಾಸಾದರು.
- ಅವರು ಮೊದ ಮೊದಲು ರಾಜಕೀಯವನ್ನು ಇಷ್ಟ ಪಡುತ್ತಿರಲಿಲ್ಲ. ಪೈಲೆಟ್ ಆಗಬೇಕೆಂಬುದು ಅವರ ಬಹುದಿನದ ಬಯಕೆಯಾಗಿತ್ತು. ಆ ಆಸೆ ಅವರಿಗೆ ಈಡೇರಲಿಲ್ಲ.ತಾಯಿಯ ಆಡಳಿತದಲ್ಲಿ ನಿಗಾ ವಹಿಸಿದ್ದ ಸಹೋದರ ಸಂಜಯ ಗಾಂಧಿ ಮರಣಾನಂತರ, ಅನಿವಾರ್ಯವಾಗಿ ರಾಜಕೀಯಕ್ಕೆ ಧುಮುಕಿದ ಇವರು ಸಂಜಯ್ ಗಾಂಧಿಯವರ ಕ್ಷೇತ್ರ ಅಮೇಥಿಯಿಂದ ೨ ಲಕ್ಷ ಮತಗಳ ಅಂತರದಲ್ಲಿ ಶರದ್ ಪವಾರ್ ವಿರುದ್ದ ಆರಿಸಿ ಬಂದರು.
ರಾಜಕೀಯ
[ಬದಲಾಯಿಸಿ]
- ಶ್ರೀಮತಿ ಇಂದಿರಾಗಾಂಧಿ ಅವರ ಮರಣದ ನಂತರ ಭಾರತದ ಪ್ರಧಾನ ಮಂತ್ರಿಯಾದರು. ಇವರು ಭಾರತದ ಮೊದಲ ಯುವ (೪೦ ನೇ ವಯಸ್ಸಿನಲ್ಲಿ ) ಪ್ರಧಾನಿಯಾಗಿದ್ದರು. ೧೯೮೪ ರ ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ (೪೦೪ ಸ್ಥಾನಗಳು) ಗೆದ್ದಿದ್ದರು. ಬಹು ಬೇಗನೆ ಜನಪ್ರಿಯ ಪ್ರಧಾನ ಮಂತ್ರಿಗಳೆನಿಸಿದರು. ಜನಮುಖಿ ಕಾರ್ಯಗಳಿಗೆ ಇಂಬು ಕೊಟ್ಟರು. ಶ್ರೀಲಂಕಾದ ಎಲ್.ಟಿ.ಟಿ ಸಮಸ್ಯೆಯ ನಿಗ್ರಹಕ್ಕೋಸ್ಕರ ಅವರು, ಶ್ರೀಲಂಕಾಕ್ಕೆ ಭಾರತದ ಸೈನ್ಯವನ್ನು ಕಳುಹಿಸಿಕೊಟ್ಟ ಪರಿಣಾಮವಾಗಿ, ಅವರು ತಮ್ಮ ಜೀವವನ್ನು ತೆರಬೇಕಾಯಿತು.
ನಿಧನ
[ಬದಲಾಯಿಸಿ]ತಮಿಳುನಾಡಿನ ಪೆರಂಬೂರಿಗೆ ಬಹಿರಂಗ ಚುನಾವಣಾ ಭಾಷಣವನ್ನು ಮಾಡಲು ಹೋಗಿ, ಶ್ರೀಲಂಕಾದ ಎಲ್.ಟಿ.ಟಿಯವರ ಮಾನವ ಬಾಂಬ್ ಧಾಳಿಗೆ ತುತ್ತಾದರು. ಅವರ ಸುಂದರ ಕಾಯ ಬಾಂಬ್ ಧಾಳಿಯಿಂದ ಚೂರು ಚೂರಾಗಿತ್ತು.
ಹೆಚ್ಚಿನ ಓದಿಗೆ - ಹೊರ ಸಂಪರ್ಕ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]India's Rajiv-Part-3 The Politician'ರಾಜೀವ್ ಗಾಂಧಿ'-ಭಾಗ-೩ ಯು ಟ್ಯೂಬ್