ರಥ ಸಪ್ತಮಿ
ರಥ ಸಪ್ತಮಿ ಹಿಂದೂ ಧರ್ಮೀಯರ ಧಾರ್ಮಿಕ ದಿನಗಳಲ್ಲೊಂದು. ಇದನ್ನು ಸೂರ್ಯ ಜಯಂತಿ ಎಂದೂ ಕೂಡ ಕರೆಯುತ್ತಾರೆ.

ಮಾರ್ಗಶಿರ ಮಾಸ,ಶುಕ್ಲಪಕ್ಷದ ಏಳನೆಯ (ಸಪ್ತಮಿ)ದಿನ.
ಸಪ್ತಮೀ ಸಹಿತೋ ದೇವಾ ಗೃಹಣಾರ್ಘ್ಯಂ ದಿವಾಕರಃ
- ಈ ಶ್ಲೋಕ ಪಠಿಸುವ ಮೂಲಕ ಸೂರ್ಯನಿಗೆ ಅರ್ಘ್ಯವನ್ನು ನೀಡಲಾಗುತ್ತದೆ
ಆಚರಣೆ
[ಬದಲಾಯಿಸಿ]ಬೆಳಗಿನ ಜಾವದಲ್ಲಿ ತಲೆ, ಭುಜ, ಕತ್ತು, ಕಂಕುಳು, ತೊಡೆ, ಪಾದ ಇತ್ಯಾದಿಗಳ ಮೇಲೆ ಎಕ್ಕದ ಎಲೆಯನ್ನು ಇಟ್ಟುಕೊಂಡು ಸ್ನಾನ ಮಾಡಿ, ಪೂರ್ವಾಭಿಮುಖವಾಗಿ ಸೂರ್ಯನಿಗೆ ನಮಸ್ಕರಿಸುವುದು ರೂಢಿಯಲ್ಲಿದೆ. ಸೂರ್ಯನ ೧೦೮ ಹೆಸರುಗಳನ್ನು ಉಚ್ಚರಿಸಿ ನಮಸ್ಕಾರಗಳನ್ನು ಮಾಡುವರು. ಮನೆಯ ಒಂದು ಕೋಣೆಯಲ್ಲಿ ಪೂರ್ಣವಾಗಿ ಒಂದು ಸುತ್ತು ಪ್ರದಕ್ಷಿಣೆ ಹಾಕುತ್ತಾ ಅರುಣ ಪ್ರಶ್ನದ ಮಂತ್ರ ಪಠಿಸಿ ನಮಸ್ಕಾರ ಮಾಡುವರು. ಹೀಗೆ ೧೦೮ ನಮಸ್ಕಾರಗಳನ್ನು ಮಾಡುವರು. ೧೦೮ ಆಗದಿದ್ದವರು ೧೨ ನಾಮಗಳನ್ನು ಜಪಿಸಿ ನಮಸ್ಕಾರ ಮಾಡುವರು. ಅವಾವುದೆಂದರೆ ಇಂದ್ರ, ಧಾತ, ಪರ್ಜನ್ಯ, ತ್ವಷ್ಟ, ಪುಷ, ಆರ್ಯಮ, ಭಾಗ, ವಿವಸ್ವನ, ವಿಷ್ಣು, ಅಂಶುಮಾನ, ವರುಣ ಮತ್ತು ಮಿತ್ರ. ಈ ಹನ್ನೆರಡು ಹೆಸರುಗಳು ಹನ್ನೆರಡು ತಿಂಗಳುಗಳ ಸೂಚಕ.
ಅಂದು ರವೆ ಅಥವಾ ಅವಲಕ್ಕಿಯ ಪಾಯಸವನ್ನು ಮಾಡಿ, ಸೂರ್ಯನಿಗೆ ನೈವೇದ್ಯಕ್ಕಿರಿಸಲಾಗುತ್ತದೆ. ಈ ದಿನ ಮಕ್ಕಳಿಗೆ 'ಕರಿ' ಎರೆಯುವ ಸಂಪ್ರದಾಯವಿದೆ.ಹಾಗಾಗಿ ಈ ದಿನವನ್ನು ಕರಿ ದಿನ ಎಂದು ಕರೆಯಲಾಗುತ್ತದೆ.
ಒಡಿಶಾ ರಾಜ್ಯದಲ್ಲಿನ ಕೊನಾರ್ಕ್, ಗಯಾದ ದಕ್ಷಿಣಾರ್ಕ ದೇವಸ್ಥಾನ, ರಾಜಸ್ಥಾನದ ರಾನಕ್ಪುರ,ಗುಜರಾತ್ ರಾಜ್ಯದ ಮೊಧೆರಾ, ಮಧ್ಯಪ್ರದೇಶದ ಉನಾವು, ಅಸ್ಸಾಮಿನ ಗೋಲ್ಪರ,ಆಂಧ್ರ ಪ್ರದೇಶದ ಅರಸವಲ್ಲಿ, ತಮಿಳುನಾಡಿನ ಕುಂಭಕೋಣಂ - ಈ ಸ್ಥಳಗಳಲ್ಲಿರುವ ಸೂರ್ಯನ ದೇವಸ್ಥಾನಗಳಲ್ಲಿ ರಥ ಸಪ್ತಮಿಯ ದಿನ ವಿಶೇಷ ಪೂಜೆಗಳನ್ನು ನಡೆಸಲಾಗುತ್ತದೆ.
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |