ವಿಷಯಕ್ಕೆ ಹೋಗು

ಗೌರಿ ಹಬ್ಬ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗೌರಿ ಹಬ್ಬ ಕನ್ನಡ ನಾಡಿನ ದೊಡ್ಡ ಹಬ್ಬ. ಭಾದ್ರಪದ ತದಿಗೆಯಂದು ಗೌರಿ ಹಬ್ಬ ಆಚರಿಸಲಾಗುತ್ತದೆ. ಇದು ಮುತ್ತೈದೆಯರಿಗೆಲ್ಲಾ ಸೌಭಾಗ್ಯ ನೀಡುವ ಹಬ್ಬ ಎಂಬ ನಂಬಿಕೆ.

ಒಮ್ಮೆ ಬಹಳ ಬರಗಾಲ ಬಂದು ಕೆರೆ ಕೊಳ್ಳಗಳೆಲ್ಲ ವರ್ಷಗಟ್ಟಲೆ ಬತ್ತಿ ಆಕಾರ ಎದ್ದೇಳುತ್ತದೆ. ಜನ ದನಗಳಿಗೆ ಕುಡಿವ ನೀರು ಕೂಡ ಇಲ್ಲದೇ ಕಂಗಾಲಾಗುತ್ತಾರೆ. ಬುಡಬಡಿಕೆಯವನೊಬ್ಬ "ಮುತ್ತೈದೆಯೊಬ್ಬಳನ್ನು ಕೆರೆಗೆ ಹಾರ (ಬಲಿ) ಕೊಡುವುದಾದರೆ ಕೆರೆ ತುಂಬುವಷ್ಟು ಮಳೆಯಾಗುತ್ತದೆ" ಎಂದು ಹೇಳಿ ಹೋಗುತ್ತಾನೆ. ಆಗ ಊರ ಗೌಡನಿಗೆ ಚಿಂತೆ ಆಗುತ್ತದೆ. ಯಾರು ಇದಕ್ಕೆ ಒಪ್ಪುತ್ತಾರೆ ಎಂದು.

ಆಗ ಅವನ ಹಿರಿ ಸೊಸೆ 'ಗೌರಿ' ಮುಂದೆ ಬಂದು "ಮಳೆ ಬಂದು ಕೆರೆ ತುಂಬಿದಲ್ಲಿ ಮುತ್ತೈದೆಯನ್ನು ಬಲಿ ಕೊಡುವುದಾಗಿ ಹರಕೆ ಹೊತ್ತುಕೊಳ್ಳಿ. ಕೆರೆ ತುಂಬಿದಲ್ಲಿ ತಾನು ಆ ಹರಕೆಯನ್ನು ನೆರವೇರಿಸುತ್ತೇನೆ" ಎಂದು ಹೇಳುತ್ತಾಳೆ. ಅದರಂತೆಯೇ ಗೌಡನು ಹರಕೆ ಹೊತ್ತುಕೊಳ್ಳುತ್ತಾನೆ. ಕಾಕತಾಳೀಯವೋ ಎಂಬಂತೆ ಅದೇ ವರ್ಷ ತುಂಬಾ ಮಳೆ ಸುರಿದು ಕೆರೆ ಕೊಳ್ಳಗಳೆಲ್ಲ ತುಂಬಿ ತುಳುಕುತ್ತವೆ.

ಮಾವನಿಗೆ ಕೊಟ್ಟ ಮಾತಿನಂತೆ ಗೌರಿ ಆ ಕೆರೆಗೆ ಬಿದ್ದು ಪ್ರಾಣ ಕಳೆದುಕೊಳ್ಳುತ್ತಾಳೆ. ಅವಳ ತಂಗಿ 'ಗಂಗೆ' ( ಕಿರಿ ಸೊಸೆ ) ಕೂಡ ಮರುದಿನ ಅಕ್ಕನ ಅಗಲಿಕೆಯ ನೋವು ತಾಳಲಾಗದೆ ತಾನೂ ಕೆರೆಗೆ ಹಾರವಾಗುತ್ತಾಳೆ.

ಈ ಗೌರಿಯನ್ನು ನೆನಪಿಸಿಕೊಂಡು ಆ ಕೆರೆಯಿಂದ ( ಸೂಳೇಕೆರೆಯೇ ಅದು ಎಂಬ ನಂಬುಗೆಯಿದೆ ) ಒಂದು ತಂಬಿಗೆ ನೀರನ್ನು ತಂದು ಪೂಜಿಸಿ ಮತ್ತೆ ಅದೇ ಕೆರೆಗೆ ಬಿಡುವ ಆಚರಣೆ ಜಾರಿಗೆ ಬಂದಿರಬಹುದು. ಮಲೆನಾಡಿನ ಕೆಲವೆಡೆ ಗೌರಿಯನ್ನು ಬಿಟ್ಟ ಬಳಿಕ ಗಂಗೆಯನ್ನೂ ತಂದು ಪೂಜಿಸುವ ಆಚರಣೆ ಇದೆ.

ಟೆಂಪ್ಲೇಟು:ದ್ರಾವಿಡ ಹಬ್ಬಗಳು

ಗೌರಿ ಮಹಿಮೆಯ ಬಗ್ಗೆ

[ಬದಲಾಯಿಸಿ]

ಗೌರಿ ಗಣೇಶ ಹಬ್ಬ ಬಂತು ಎಂದರೆ ಎಲ್ಲರಿಗೂ ತುಂಬಾ ಖುಷಿ ಸಂಭ್ರಮ ಸಡಗರ ಅದೇ ರೀತಿ ನಮ್ಮ ಚಾಮರಾಯನ ಕೋಟೆಯ ಜನರಿಗೂ ತುಂಬಾ ಸಂಭ್ರಮ ಸಡಗರ ಏಕೆಂದರೆ ನಮ್ಮ ಚಾಮರಾಯನ ಕೋಟಿಯಲ್ಲಿ ಮಾರಾಟಕ್ಕಿಟ್ಟಿರುವ ಗೌರಿ ಗಣೇಶನನ್ನು ಕೊಂಡು ತರುವುದಿಲ್ಲ ಬದಲಾಗಿ ಆ ಊರಿನ ಜನರೇ ಸ್ವತಃ ಗೌರಿ ಮತ್ತು ಗಣೇಶ ಮೂರ್ತಿಯನ್ನು ತಯಾರಿಸುತ್ತಾರೆ ಈ ಗೌರಿ ಗಣೇಶ ಮೂರ್ತಿಯನ್ನು ಹಬ್ಬಕಿರುವ ದಿನಕ್ಕಿಂತ 9 ದಿನ ಮುಂಚಿತವಾಗಿಯೇ ಮೂರ್ತಿಗಳನ್ನು ತಯಾರಿಸಲು ಆರಂಭಿಸುತ್ತಾರೆ. ಬೆಳಗಿನ ಜಾವ ಎರಡರಿಂದ ಮೂರು ಗಂಟೆ ಸಮಯದಲ್ಲಿ ಆ ಊರಿನ ಗಂಡಸರು ಮಾತ್ರ ದೋಣಿಯಲ್ಲಿ ಹೊಳೆಗೆ ಹೋಗಿ ಮಣ್ಣು ತಂದು ಗಣೇಶನ ತಯಾರಿಸುತ್ತಾರೆ ಕಡಲೆ ಬೆಳೆಯನ್ನು ಒಂದು ದಿನ ನೆನೆಯನ್ನು ಬಿಟ್ಟು ಅದನ್ನು ರುಬ್ಬಿ ಹಿಟ್ಟನ್ನು ಮಾಡಿ ಆ ಹಿಟ್ಟಿನಿಂದ ಗೌರಮ್ಮನನ್ನು ಅರ್ಧಶನಿರಾಕೃತಿ ಮಾತ್ರ ನಿರ್ಮಿಸುತ್ತಾರೆ ಹೀಗೆ ತಯಾರಿಸಿ ಹಬ್ಬದ ದಿನದಂದು ಗೌರಿ ಗಣೇಶನನ್ನು ಪ್ರತಿಷ್ಠಾಪಿಸುತ್ತಾರೆ ನಂತರ ತಿಂಗಳ ಪೂರ್ತಿ ಬೆಳೆಗೆ ಸಂಜೆ ಪೂಜೆ ಪುನಸ್ಕಾರಗಳು ನಡೆಯುತ್ತಿರುತ್ತದೆ ಎಲ್ಲರೂ ಗೌರಮ್ಮನಿಗೆ ಮಡ್ಲಕ್ಕಿ ಹಾಕಿ ಪ್ರಸಾದ ಸೇವಿಸಿ ಹೋಗುತ್ತಾರೆ. ಗೌರಮ್ಮನ ಬಳಿ ಕಷ್ಟ ಎಂದು ಬಂದವರಿಗೆ ಹಾರೈಸಿ ಹಾರೈಸುತ್ತಾಳೆ ನಾವು ಏನು ಕೇಳಿದರು ಕೊಡುತ್ತಾಳೆ ಎಂಬುವುದು ನಮ್ಮೆಲ್ಲರ ನಂಬಿಕೆಯಾಗಿದೆ ಗೌರಿ ಗಣೇಶನ ವಿಸರ್ಜಿಸುವ ಹಿಂದಿನ ದಿನ ಸಾವಿರಾರು ಸಂಖ್ಯೆ ಎಲ್ಲಾ ಭಕ್ತಾದಿಗಳು ಪೂಜೆ ಮಾಡಿಸಿ ತಾಯಿಗೆ ಮಡಿಲಕ್ಕಿ ಹಾಕಿ ಅದಕ್ಕೆ ಮಾಡಿರುವವರು ಆ ತಾಯಿಗೆ ಸೀರೆ ಉಡಿಸಿ ಸಂತಸ ಸಂಭ್ರಮದಿಂದ ಓಡಾಡುತ್ತಿರುತ್ತಾರೆ ಮನೆಮನೆಯಲ್ಲೂ ಹಣ್ಣು ಕಾಯಿ ಮಾಡಿಸಿ ಆ ತಾಯಿಯನ್ನು ಬತ್ತಿಯಿಂದ ಬೇಡಿಕೊಳ್ಳುತ್ತಾರೆ ನಂತರ ಹೊಳೆಯ ಮಧ್ಯದಲ್ಲಿ ಪೂಜೆ ಮಂತ್ರ ಘೋಷಗಳೊಂದಿಗೆ ತಾಯಿಯನ್ನು ವಿಸರ್ಜಿಸುತ್ತಾರೆ

ಪೌರಾಣಿಕ ಹಿನ್ನಲೆ

[ಬದಲಾಯಿಸಿ]

ಗೌರಿಯು ತವರು ಮನೆಗೆ ಹೋಗುವ ಸಂಭ್ರಮ ಇಲ್ಲಿ ಸಾಂಕೇತಿಕವಾಗಿದೆ.

pl explain full story as explained above.

ತದಿಗೆ ದಿನದಂದು ಗೌರಿಯನ್ನು ಸರ್ವಳಂಕೃತ ಭೂಷಿತಳಾಗಿ ಪೂಜಿಸಿ, ಮೊರದ ಬಾಗಿನವನ್ನು ಕೊಟ್ಟು ಆಶೀರ್ವಾದ ವನ್ನು ಪಡೆಯುತ್ತಾರೆ.

ಮರುದಿದಂದು ಗೌರಿಯ ಮಗ ಗಣಪತಿಯು ಬಂದು ಕಡುಬು ಹಾಗೂ ಮೋದಕಗಳನ್ನು ತಿಂದು ಸರ್ವರನ್ನು ಆಶೀರ್ವದಿಸಿ ತನ್ನ ತಾಯಿಯೊಡನೆ ಕೈಲಾಸಕ್ಕೆ ತೆರಳುತ್ತಾನೆ.

ಉಲ್ಲೇಖಗಳು

[ಬದಲಾಯಿಸಿ]


[] [] []

  1. "ಆರ್ಕೈವ್ ನಕಲು". Archived from the original on 2025-01-23. Retrieved 2018-08-27.
  2. https://www.nriol.com/festivals/gowri.asp
  3. https://www.hellotravel.com/events/gowri-habba-2018