ಚಿಂತಾಮಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಈ ಲೇಖನವು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ತಾಲೂಕಿನ ಬಗ್ಗೆ. ಇದೇ ಹೆಸರಿನ ಕನ್ನಡ ಚಲನಚಿತ್ರಕ್ಕಾಗಿ ಚಿಂತಾಮಣಿ (ಚಲನಚಿತ್ರ) ನೋಡಿ.
ಚಿಂತಾಮಣಿ
ಚಿಂತಾಮಣಿ
city
Population
 (2001)
 • Total೬೫,೪೫೬

ಕ್ಷೇತ್ರದ ಕಥೆ[ಬದಲಾಯಿಸಿ]

ಚಿಂತಾಮಣಿ ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ಪಟ್ಟಣ ಹಾಗೂ ಅದೇ ಹೆಸರಿನ ತಾಲೂಕಿನ ಆಡಳಿತ ಕೇಂದ್ರ. ೨೦೦೭ರಲ್ಲಿ ಕೋಲಾರ ಜಿಲ್ಲೆಯ ವಿಭಜನೆ ನಡೆದಾಗ ಇದು ಚಿಕ್ಕಬಳ್ಳಾಪುರ ಜಿಲ್ಲೆಯ ಒಂದು ಭಾಗವಾಯಿತು. ಇಲ್ಲಿನ ಜನರು ಕನ್ನಡ ಮತ್ತು ತೆಲಗು ಭಾಷೆಗಳನ್ನು ಮಾತನಾಡುತ್ತಾರೆ. ಚಿಂತಾಮಣಿ, ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಮುಖ ವ್ಯಾಪಾರಕೇಂದ್ರ. ಚಿಂತಾಮಣಿ ನಾಯಕನೆಂಬ ಮರಾಠ ನಾಯಕ,' ನಿರ್ಮಿಸಿದ ಕಾರಣಕ್ಕಾಗಿ 'ಚಿಂತಾಮಣಿ,' ಹೆಸರು ಬಂದಿದೆ. 'ಅಂಬಾಜಿದುರ್ಗ' ಈ ತಾಲ್ಲೂಕಿನ ಆಡಳಿತ ಕೇಂದ್ರವಾಗಿತ್ತು. ನಂತರ ಕಾಲಾನುಕ್ರಮದಲ್ಲಿ ಸ್ಥಾನಾಂತರಗೊಂಡಿತು. ಕೋಲಾರ ಹಾಗೂ ಚಿಕ್ಕಬಳ್ಳಾಪುರಕ್ಕೆ ಸಮಾನ ದೂರದಲ್ಲಿರುವ ಚಿಂತಾಮಣಿ ಪ್ರಮುಖ ವ್ಯಾಪಾರಿ ಸ್ಥಳವೆಂದು ಗುರುತಿಸಿಕೊಂಡಿದೆ. ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಪ್ರಥಮ ಕೃಷಿ ಮಾರುಕಟ್ಟೆ ಆರಂಭಗೊಂಡಿದ್ದು ಇಲ್ಲೇ. ಕಾಲಜ್ಞಾನ ಬರೆದ ನಾರಾಯಣ ತಾತನವರ ದೇವಾಲಯ ಕೈವಾರ ಕ್ಷೇತ್ರದ ಹತ್ತಿರದಲ್ಲೇ ಇದೆ. ಕೈಲಾಸಗಿರಿಯೆಂಬಲ್ಲಿ ಗುಹಾಂತರ ದೇವಾಲಯಗಳಿವೆ. ಅವು ಇನ್ನೂ ನಿರ್ಮಾಣದ ಹಂತದಲ್ಲಿವೆ. ಮುಸ್ಲಿಂ ಸಮುದಾಯದ ಯಾತ್ರಾಸ್ಥಳ 'ಮುರುಗಮಲ್ಲಾ ಕ್ಷೇತ್ರ' ವಿದೆ. ಅಲಂಬಗಿರಿಯಿದೆ.ಈ ತಾಲೂಕಿನ ಸುಕ್ಷೇತ್ರ ದೊಡ್ಡಬೊಮ್ಮನಹಳ್ಳಿಯಲ್ಲಿ ಇತಿಹಾಸ ಕಾಲದ ಶ್ರೀ ವೀರಭದ್ರ್ರ ಸ್ವಾಮಿ ದೇವಾಲಯವಿದೆ.

ಜನಸಂಖ್ಯೆ[ಬದಲಾಯಿಸಿ]

ಚಿಂತಾಮಣಿಯಲ್ಲಿ, ೩೩೯ ನಿವಾಸಿತ ಹಾಗೂ ೬೧ ಅನಿವಾಸಿತ ಸೇರಿದಂತೆ, ಒಟ್ಟು ೪೦೦ ಗ್ರಾಮಗಳಿವೆ. ಗ್ರಾಮಾಂತರ ಪ್ರದೇಶಗಳಲ್ಲಿ ೨,೦೫,೭೯೧ ಜನಸಂಖ್ಯೆಯಿದೆ. ಮತ್ತು ನಗರ ಪ್ರದೇಶದಲ್ಲಿ ೬೫,೪೯೩ ಸೇರಿದಂತೆ ಒಟ್ಟು ೨,೭೧,೨೮೪ ಜನಸಂಖ್ಯೆಯಿದೆ. ತಾಲ್ಲೂಕಿನ ವಿಸ್ತೀರ್ಣ ೯೦೨.೭೨ ಚ. ಕಿ. ಮೀ.

ರಾಜಕೀಯ[ಬದಲಾಯಿಸಿ]

K M Krishna Reddy is the first person to become minister government karnataka from this constiuncy

ಚಿಂತಾಮಣಿಯಲ್ಲಿ ಸಿಗುವ ಜೇಡಿಮಣ್ಣಿಗೆ ಬಹಳ ಬೇಡಿಕೆಯಿದೆ[ಬದಲಾಯಿಸಿ]

ಚಿಂತಾಮಣಿಯಲ್ಲಿ ದೊರೆಯುವ ಜೇಡಿಮಣ್ಣು ಪಿಂಗಾಣಿ ಉಪಕರಣಗಳಿಗೆ ಹೇಳಿ ಮಾಡಿಸಿದ ಕಚ್ಚಾವಸ್ತು. ಕನ್ನಂಪಲ್ಲಿ ಕೆರೆಯಿಂದ ನಗರಕ್ಕೆ ನೀರು ಸರಬರಾಜಾಗುತ್ತದೆ. ಚಿಂತಾಮಣಿ ಚಿನ್ನ-ಬೆಳ್ಳಿ ಕೆಲಸಕ್ಕೆ ಹೆಸರುವಾಸಿಯಾಗಿದೆ. ನಗರದ ಹೊರವಲಯದಲ್ಲಿ ’ಬೂರಗಮಾಕಲಹಳ್ಳಿ’ ಯಲ್ಲಿ ’ದೊರಶೆಟ್ಟಿ ಎಕ್ಕೇರಿ ಆಂಜನೇಯಸ್ವಾಮಿ ದೇವಾಲಯವಿದೆ. ನಗರದ ಹತ್ತಿರವಿರುವ ಅಂಜನಾದ್ರಿ ಬೆಟ್ಟದ ಮೇಲೆ ’ವರದಾಂಜನೇಯಸ್ವಾಮಿ ಗುಡಿ' ಯಿದೆ. ನಗರದೊಳಗೆ, ರಾಘವೇಂದ್ರ, ಹರಿಹರೇಶ್ವರ, ನಗರೇಶ್ವರ, ನಾಗನಾಥೇಶ್ವರ, ಸಹನೇಶ್ವರ, ಕನ್ನಿಕಾಪರಮೇಶ್ವರಿ, ಗಣಪತಿ, ಕಾಳಿಕಾಂಬ ದೇವಸ್ಥಾನಗಳಿವೆ. ’ಆಝಾದ್ ಚೌಕ' ದ ಹರಿಹರೇಶ್ವರ ದೇವಾಲಯವು ವಿಶಾಲ ಪ್ರಾಂಗಣವನ್ನು ಹೊಂದಿದೆ. ಆಝಾದ್ ಚೌಕದಲ್ಲಿ ವಾರ್ಷಿಕ ಒಂದು ತಿಂಗಳ ಕಾಲ ನಡೆಯುವ ಸಾರ್ವಜನಿಕ-ಗಣೇಶೋತ್ಸವ ಸುತ್ತಮುತ್ತಲ ಜಿಲ್ಲೆಯಲ್ಲೇ ಪ್ರಸಿದ್ಧವಾಗಿದೆ.

’ಕೋನಕುಂಟ್ಲು’[ಬದಲಾಯಿಸಿ]

ಇದು ಚಿಂತಾಮಣಿ ಹತ್ತಿರವಿರುವ, ರಮ್ಯ ತಾಣದಲ್ಲಿ ಆಕರ್ಷಕ ಬೆಟ್ಟ-ಗುಡ್ಡಗಳಿವೆ. ವೆಂಕಟರಮಣ ಸ್ವಾಮಿ ದೇವಾಲಯವಿದೆ. ಗರ್ಭಗುಡಿಯಲ್ಲಿ ಧಾರ್ಮಿಕ ಸಂಕೇತ ರೂಪದಲ್ಲಿರುವ ಹುತ್ತದಾಕಾರದಲ್ಲಿ ನರಸಿಂಹ ದೇವರ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಇಲ್ಲಿ ಚೈತ್ರ ಬಹುಳ ಸಪ್ತಮಿಯಂದು ನಡೆಯುವ ಬ್ರಹ್ಮ-ರಥೋತ್ಸವ ಹೆಸರುವಾಸಿ.

’ಆಲಂಬಗಿರಿ’[ಬದಲಾಯಿಸಿ]

ಚಿಂತಾಮಣಿಯಿಂದ ೮ ಕಿ. ಮೀ ದೂರದಲ್ಲಿದೆ. ಆಲಂಬಗಿರಿ ವೆಂಕಟಾರಮಣಸ್ವಾಮಿ ದೇವಾಲಯದಲ್ಲಿ ಗರ್ಭಗೃಹ ಮತ್ತು ಎರಡು ಮಂಟಪಗಳಿವೆ. ವಿಶಾಲವಾದ ನವರಂಗ, ಆಯತಾಕಾರದ ಮುಖಮಂಟಪಗಳು ಕಂಡುಬರುತ್ತವೆ. ಗರ್ಭಗುಡಿಯ ಮೇಲ್ಭಾಗದಲ್ಲಿರುವ ಚೌಕಾಕಾರದ ವಿಜಯನಗರ ಶಿಲ್ಪದ ಶೈಲಿಯ ಶಿಖರವನ್ನು ನವೀಕರಿಸಲಾಗಿದೆ. ಪೂರ್ವ ದಿಕ್ಕಿನಲ್ಲಿ ಪ್ರವೇಶದ್ವಾರ. ಚೈತ್ರ ಹುಣಿಮೆಯಂದು, ಬ್ರಹ್ಮ ರಥೋತ್ಸವ. ಮರಾಠ ನಾಯಕರು ಇದರ ನಿರ್ಮಾಣ ಮಾಡಿದ್ದಾರೆ.

ಕೈವಾರ[ಬದಲಾಯಿಸಿ]

ಮಹಾಭಾರತದ ಕಾಲದಲ್ಲಿ ಏಕಚಕ್ರಪುರವೆಂದು ಕರೆಯಲಾಗುತ್ತಿದ್ದ ಕೈವಾರ, ಅರಗಿನ ಮನೆಯಿಂದ ತಪ್ಪಿಸಿಕೊಂಡು ಪಾಂಡವರು ಸ್ವಲ್ಪ ಕಾಲ ಇಲ್ಲಿ ತಂಗಿದ್ದರೆಂದು ಹೇಳಲಾಗಿದೆ. ಈ ಗ್ರಾಮದ ಹತ್ತಿರವಿರುವ 'ಚಿದಂಬಗಿರಿ ಬೆಟ್ಟ' ದ ಮೇಲೆ ವಾಸವಾಗಿದ್ದ ಬಕಾಸುರನನ್ನು ಭೀಮಸೇನನು ಕೊಂದು, ಅವನ ಶವವನ್ನು ಬೆಟ್ಟದ ಗುಹೆಯೊಂದರಲ್ಲಿ ಮುಚ್ಚಿಟ್ಟಿದ್ದನೆಂಬ ಪ್ರತೀತಿಯಿದೆ. ಈ ಮೇಲೆ ಒಸರುವ ಮಣ್ಣಿನ ರಾಡಿಯನ್ನು ಬಕಾಸುರನ ಕೀವು-ರಕ್ತವೆಂದು ಸ್ಥಳೀಯ ಜನ ಭಾವಿಸುತ್ತಾರೆ. ಕೈವಾರ ಕ್ಷೇತ್ರದಲ್ಲಿ ಅಮರ ನಾರಾಯಣ, ಧರ್ಮರಾಯ, ಭೀಮೇಶ್ವರ, ಅರ್ಜುನೇಶ್ವರ, ನಕುಲೇಶ್ವರ, ಸಹದೇವೇಶ್ವರ ದೆವಾಲಯಗಳಿವೆ. ಕೈವಾರದ ನಾರಾಯಣೇಶ್ವರ ದೇವಾಲಯ ಈಗಿನ ಪ್ರಮುಖ ಆಕರ್ಷಣೆಯ ಕೇಂದ್ರ. ವಿಜಯನಗರ ಕಾಲದ ಹಲವಾರು ದೇವಾಲಯಗಳು ಕೈವಾರದ ಸುತ್ತಮುತ್ತ ಇವೆ. ’ಕಾಲಜ್ಞಾನ ಬರೆದ,ಯೋಗಿನಾರೇಯಣ, ತೆಲುಗು ಕನ್ನಡ ಕವಿ ಸಂತರು ಈ ಗ್ರಾಮದಲ್ಲಿ ನೆಲೆಸಿದ್ದರು.

ಮಹಾ ಕೈಲಾಸಗಿರಿ[ಬದಲಾಯಿಸಿ]

ಚಿಂತಾಮಣಿಯಿಂದ ೬ ಕಿ. ಮೀ ದೂರದಲ್ಲಿರುವ ಒಂದು ಗುಹಾಂತರ ದೇವಾಲಯಗಳಲ್ಲೊಂದು. ’ಅಂಬಾಜಿದುರ್ಗ ಪರ್ವತ ಶ್ರೇಣಿ’ ಯ ಒಂದು ಬೆಟ್ಟವನ್ನು ಕೊರೆದು, ಒಂದು ಇಟ್ಟ್ಟ್ಫಿಗೆಯನ್ನೂ ಬಳಸದೇ ಕೈಲಾಸಗಿರಿ ಗುಹಾಲಯ ದೇವಸ್ಥಾನ’ ವನ್ನು ನಿರ್ಮಿಸಲಾಗುತ್ತಿದೆ. ಇಲ್ಲಿ ’ಚತುರ್ಮುಖ ಶಿವ’, ’ಪಾರ್ವತಿ’ ಮತ್ತು ’ಗಣೇಶ’ ನ ದೇವಸ್ಥಾನಗಳಿವೆ. ಅದಲ್ಲದೇ ಒಂದು ಪ್ರಾಂಗಣವನ್ನು ಹಾಗೂ ಕಲ್ಲಿನಲ್ಲಿಯೇ ಬೃಹತ್ ಗಾತ್ರದ ’ಜಟಾಧಾರಿ ಶಿವನ ವಿಗ್ರಹ’ ಕೆತ್ತುವ ಕಾರ್ಯ, ಮಾಜಿ ಸಚಿವ, ’ಚೌಡರೆಡ್ಡಿ ಕುಟುಂಬ’ ದವರ ಮೇಲ್ವಿಚಾರಣೆಯೊಡನೆ, ಭರದಿಂದ ಸಾಗಿದೆ. ಧಾರ್ಮಿಕ ಹಾಗೂ ಸಾಹಸ ಪ್ರವೃತ್ತಿಯ ಜನರಿಗೆ ಕೈಲಾಸಗಿರಿ ಒಂದು ಹೇಳಿಮಾಡಿಸಿದ ತಾಣ.

ಮುರುಗಮಲ್ಲಾ[ಬದಲಾಯಿಸಿ]

ಚಿಂತಾಮಣಿಯಿಂದ ೧೧ ಕಿ. ಮೀ ದೂರದಲ್ಲಿರುವ ಗ್ರಾಮ ’ಮರುಗಮಲ್ಲಾ’. ಕರ್ನಾಟಕದ ಸುಪ್ರಸಿದ್ಧ ದರ್ಗಾ ’ಫಲಿಶಾವಾಲಿಯ ಮುರುಗಮಲ್ಲಾ ದರ್ಗಾ’ ಇಲ್ಲಿದೆ. ’ವಾರ್ಷಿಕ ಉರುಸ್’ ಸಾವಿರಾರು ಶ್ರದ್ಧಾಳುಗಳಿಗೆ ಅವರ ಮನೋಕಾಮನೆಗಳನ್ನಲ್ಲದೆ, ರೋಗ-ರುಜಿನಗಳನ್ನೂ ’ಪೀರ್ ನಿವಾರಿಸಬಲ್ಲ’ ಶಕ್ತಿಯನ್ನು ಹೊಂದಿದೆಯೆಂಬ ಬಲವಾದ ನಂಬಿಕೆಯಿದೆ. ಹಿಂದೂ-ಮುಸಲ್ಮಾನರ ಭಾವೈಕ್ಯತೆಯ ಸಂಕೇತವಾಗಿದೆ ಇಲ್ಲಿನ ’ದರ್ಗಾ’. ಕ್ರಿ. ಶ. ೧೮ ನೆಯ ಶತಮಾನದಲ್ಲಿ ನಿರ್ಮಿಸಲಾದ, ೬೦೦ ಅಡಿ ಎತ್ತರದ ಕಲ್ಲಿನ ಕೋಟೆ ಬೆಟ್ಟದಮೇಲಿದೆ. ಕೋಟೆ ಗಾಳಿ-ಮಳೆಗಳಿಗೆ ತುತ್ತಾಗಿ ಶಿಥಿಲವಾಗುತ್ತಿದೆ. ಶಿವಲಿಂಗವಿರುವ ದೇವಾಲಯ ಬೆಟ್ಟದ ತಪ್ಪಲಿನಲ್ಲಿದೆ.

’ಯಗವ ಕೋಟೆ’[ಬದಲಾಯಿಸಿ]

ಚಿಂತಾಮಣಿಯಿಂದ, ’ಬಟ್ಲಹಳ್ಳಿ’ ಗೆ ಹೋಗುವ ಹಾದಿಯಲ್ಲಿ ೧೫ ಕಿ. ಮೀ ದೂರ ಸಾಗಿದರೆ, ಸಿಕ್ಕುತ್ತದೆ. ಹತ್ತಿರದಲ್ಲೇ ’ವೀರನಾರಾಯಣ ಮಂದಿರ’ ವಿದೆ. ಬೃಹದಾಕಾರದ ಬೆಟ್ಟದ ಮೇಲೆ, ’ವಿಷ್ಣುಪಾದಗಳಿವೆ’. ಇದರ ತಪ್ಪಲಿನಲ್ಲೇ ಮುತ್ತಿನ ಕೊಳ ವೆಂಬ, ವಿಶಾಲ ಕೊಳವೂಂದು ಗೋಚರಿಸುತ್ತದೆ. ಫಾಲ್ಗುಣ ಮಾಸದಲ್ಲಿ ’ವೀರ ನಾರಾಯಣ ಸ್ವಾಮಿ ಬ್ರಹ್ಮ ರಥೋತ್ಸವ’ ಇಲ್ಲಿ ಜರುಗುತ್ತದೆ.

’ಗರುಡಮಾರಲಹಳ್ಳಿ’[ಬದಲಾಯಿಸಿ]

ಚಿಂತಾಮಣಿಯಿಂದ ೧೮ ಕಿ. ಮೀ ದೂರದಲ್ಲಿರುವ ಪ್ರಾಚೀನ ಲಕ್ಷಣವನ್ನು ಹೊಂದಿರುವ ’ಭೈರವೇಶ್ವರ ದೇವಾಲಯ’ ವು, 'ಸೀತೆಬೆಟ್ಟ' ದಂತೆಯೇ ’ವೊರಸು ಒಕ್ಕಲಿಗರು,’ ನಡೆದುಕೊಳ್ಳುವ ಯಾತ್ರಾ ಸ್ಥಳವಾಗಿದೆ. ಈ ದೇವಾಲಯದ ವಿಶೇಷತೆಯೆಂದರೆ, ದೇವಾಲಯದ ಸುತ್ತಲೂ ವಿಶಾಲವಾದ ಒಳ ಪ್ರಾಕಾರವಿದ್ದು, ಹಲವು ಪುಟ್ಟ ಪುಟ್ಟ ದೇವಾಲಯಗಳನ್ನು ಹೊಂದಿದೆ. ’ಏರು ಬಯ್ಯಮ್ಮ’ ಎಂಬ ಕನ್ಯಾ ಪೂಜಾ-ಗುಡಿ ಇಲ್ಲಿಯೇ ಇದೆ. ಇದು ’ಶಕ್ತಿದೇವತೆ’ ಯೆಂಬ ನಂಬಿಕೆಯಿದೆ. ಇದರಂತೆಯೇ ’ಇರಗರು ಎಂಬ ಬಾಲಕರ ಗುಡಿ,’ ಯನ್ನು ಕಾಣಬಹುದು. ಮಾನವಾತೀತ ಶಕ್ತಿಗಳ ಆರಾಧನೆಯ ಒಂದು ಪದ್ಧತಿ ಇಲ್ಲಿ ಬೆಳೆದುಬಂದಿದೆ.

'ಕೆಂಪೆಗೌಡ ಕೋಟೆ’[ಬದಲಾಯಿಸಿ]

ಚಿಂತಾಮಣಿಯಿಂದ ನೈರುತ್ಯ ದಿಕ್ಕಿಗೆ ಹೋದರೆ, ೧೨ ಕಿ. ಮೀ. ದೂರದಲ್ಲಿ, ’ಕೆಂಪೇಗೌಡ,’ ನಿರ್ಮಿಸಿದ, ಕೈವಾರ ಕೋಟೆಯಿದೆ. ಸಮುದ್ರಮಟ್ಟದಿಂದ ೪,೨೨೭ ಅಡಿ ಎತ್ತರದಲ್ಲಿದೆ. ’ಮಹಾಭಾರತ’ ದ ಕಾಲದಲ್ಲಿ ಪಾಂಡವರ ಸಹೋದರ ’ಭೀಮಸೇನ’ ನನ್ನು ಇಲ್ಲಿ ಸೆರೆಯಿಡಲಾಗಿತ್ತೆಂಬ ಪ್ರತೀತಿಯಿದೆ. ಹಿಂದೂಗಳು ಬೆಟ್ಟವನ್ನು ’ತಪಸ್ ಗಿರಿ’ ಎನ್ನುತ್ತಾರೆ. ಬೆಟ್ಟದಮೇಲೆ ಪುಷ್ಕರಣಿ, ದೇವಾಲಯ, ಹಾಗೂ ಅನೇಕ ಶಿಥಿಲ-ಕಟ್ಟಡಗಳ ಅವಶೇಷಗಳು ಕಣ್ಣಿಗೆ ಬೀಳುತ್ತವೆ.

ಗ್ರಾಮಗಳು[ಬದಲಾಯಿಸಿ]

ಚಿಂತಾಮಣಿ ತಾಲೂಕಿನ ಗ್ರಾಮಗಳ ಪಟ್ಟಿ:

  • ಆನೂರು
  • ಕಾನುಗಮಾಕಲಹಳ್ಳಿ
  • ಕೊಂಡವೆನಕಪಲ್ಲಿ
  • ಕೋತ್ತೆಹುಡ್ಯ
  • ಗುಂತೊರಗಡ್ಡೆ
  • ದಿನ್ನಿಮಿಂದಲಹಳ್ಳಿ
  • ನಾರಮಾಕಲಹಳ್ಳಿ
  • ಪುಲ್ಲಗುಂಡ್ಲಪಲ್ಲಿ
  • ಫಸಲನಾಯಕನಹಳ್ಳಿ
  • ಯಗವಕೋಟೆ
  • ವೈ.ಕುರುಪಲ್ಲಿ
  • ಮೂಡಚಿಂತಲಹಳ್ಳಿ
  • ವಿಶ್ವನಾಥಪುರ
  • ಬಟ್ಲಹಳ್ಳಿ
  • ಕಂಬಾಲಹಳ್ಳಿ
  • ಕೋನಾಪುರ
  • ಚೆನ್ನರಾಯನ ಹಳ್ಳಿ
  • ಬೋಡಂಪಲ್ಲಿ
  • ಭತ್ತಲಹಳ್ಳಿ
  • ಮುಷ್ಠೂರುಪಟ್ಣ
  • ಯನಮಲಪಾಡಿ
  • ರಾಗಿಮಾಕಲಹಳ್ಳಿ
  • ಸೋಮಕಲಹಳ್ಳಿ
  • ಭೊಮಿಶೆಟ್ಟಿಹಳ್ಳಿ
  • ಅಗ್ರಹಾರ
  • ಆಲಪ್ಪಲ್ಲಿ
  • ಉಪ್ಪಾರ್ಲಹಳ್ಳಿ
  • ಕನಿಶೆಟ್ಟಿಹಳ್ಳಿ
  • ಕಾಪ್ಪಲ್ಲಿ
  • ಗೊಂದಿವಾರ್ಲಹಳ್ಳಿ
  • ಸೋಮಯಾಜಲಹಳ್ಳಿ
  • ಬುರುಡಗುಂಟೆ
  • ಬತ್ತಲಾಪುರ
  • ಚಿಲಕಲನೇಪುಱ
  • ಟಿ ಗೊಲ್ಲಿಹಳ್ಳಿ
  • ತುಳವನೂರು
  • ದ್ವಾರಪಲ್ಲಿ
  • ದೇವಪಲ್ಲಿ
  • ಧಮಱವಾರಹಳ್ಳಿ
  • ಬೀದಲಹಳ್ಳಿ
  • ಮೀಂಚಿಲಹಳ್ಳಿ
  • ಹೊಸಹುದ್ಯ
  • ಚಿನ್ನಸಂದ್ರ
  • ದೂಡ್ಡಹಳ್ಳಿ
  • ನಲ್ಲಗುಟ್ಟಹಳ್ಳಿ
  • ಸೊಲದೇನಹಳ್ಳಿ
  • ದೊಡ್ಡಗಂಜೂರು
  • ಕೊಡದವಾಡಿ
  • ಗೊಲ್ಲಹಳ್ಳಿ
  • ಚೀಮನಹಳ್ಳಿ
  • ದೂಡ್ಡಗಂಜೂರು
  • ದೂಡ್ಡನತ್ತ
  • ಶಿಂಗನಹಳ್ಳಿ
  • ಸಿದ್ದಿಪುರ
  • ಹಾದಿಗೆರೆ
  • ಏನಿಗದಲೆ
  • ಉಲಿಬೆಲೆ
  • ಏನಿಗಧಲೆ
  • ಕಂಚೇಪಲ್ಲಿ
  • ಕಾಚನಹಳ್ಳಿ
  • ಗೊರ್ಲದೊಡ್ಡಿಹಳ್ಳಿ
  • ಚಿಂತಮಾಕಲಹಳ್ಳಿ
  • ಚಿನ್ನಪಲ್ಲಿ
  • ಚೊಕ್ಕನಹಳ್ಳಿ
  • ಬಾಲರೆಡ್ಡಿಹಳ್ಳಿ
  • ಮೋಟಮಾಕಲಹಳ್ಳಿ
  • ವರದೇನಹಳ್ಳಿ
  • ಹಿರೇಕಟ್ಟಿಗೇನಹಳ್ಳಿ
  • ಚಿಕ್ಕಕಟ್ಟಿಗೇನಹಳ್ಲಿ
  • ಚೆನ್ನಕೇಶವಪುರ
  • ನಿಡುಗುಕಿಱ
  • ನೆರ್ನಕಲ್ಲು
  • ಬ್ಯಾಲಹಳ್ಳಿ
  • ಮಾದರಕಲ್ಲು
  • ರಾಚಾಪುರ
  • ಇರಗಂಪಲ್ಲಿ
  • ಎಗವಮಿಂಡಿಗಲ್‌
  • ಕುರಪಲ್ಲಿ
  • ಗುಂದಿಕೆರೆ
  • ಗುಡ್ಡಂಪಲ್ಲಿ
  • ಜುಂಜನಹಳ್ಳಿ
  • ಮ್ಯಾಕಪೋತಲಹಳ್ಳಿ
  • ಸೀತಾರಾಮಪುರ
  • ಕಡದನಮರಿ
  • ಸುನ್ನಪಗುಟ್ಟ
  • ಹನುಮೈಗಾರಹಳ್ಳಿ
  • ಕಾಗತಿ
  • ದಿಗೂರು
  • ಬಚ್ಚವಾರಹಳ್ಳಿ
  • ಬಡಗವಾರಹಳ್ಳಿ
  • ಬುಕ್ಕನಹಳ್ಳಿ
  • ಮುಂತಕದಿರೇನಹಳ್ಳಿ
  • ಸಿಂಗಸಂದ್ರ
  • ಹಿರಣ್ಯಪಲ್ಲಿ
  • ಕೈವಾರ
  • ಬನಹಳ್ಳಿ
  • ಕತ್ತರಿಗುಪ್ಪೆ
  • ಕೊಡಿಗೇನಹಳ್ಳಿ
  • ಹುಸೇನ್‌ಪುರ
  • ಕೆಂಚಾರ್ಲಹಳ್ಳಿ
  • ಕೆ.ಗೊಲ್ಲಹಳ್ಳಿ
  • ಕೆಂಚಾರ್ಲಹಳ್ಳಿ
  • ಕೋಡೇಗಂಡ್ಲು
  • ಗೌಡನಹಳ್ಳಿ
  • ನಡಂಪಲ್ಲಿ
  • ಮರಬಹಳ್ಳಿ
  • ಯಂಡಪಲ್ಲಿ
  • ಯಗವ ಗೋಳ್ಳಹಳ್ಳಿ
  • ಕಾವಲುಗಾನಹಳ್ಳಿ
  • ಕೋನಪ್ಪಲ್ಲಿ
  • ಚೊಕ್ಕಹಳ್ಳಿ
  • ಥನಮಿಟ್ಟೆನಹಳ್ಳಿ
  • ನಾಯನಹಳ್ಳಿ
  • ಮಹಮ್ಮದ್‌ಪುರ
  • ಕೊರ್ಲಪತಿಱ
  • ಕೆ. ಗೊಲ್ಲಹಳ್ಳಿ
  • ಕದಿರೇನಹಳ್ಳಿ
  • ಕಲಕಸಂದ್ರ
  • ಕೊತಪ್ಪನಹಳ್ಳಿ
  • ಕೊರ್ಲಪತಿಱ
  • ಗಾಜಲವಾರಹಳ್ಳಿ
  • ಚಂಗಮಾರಹಳ್ಳಿ
  • ಜಂಗಾಲಹಳ್ಳಿ
  • ದೇವಗಾನಹಳ್ಳಿ
  • ನೇರಡಗುಂಟಹಳ್ಳಿ
  • ಪಾಪತಿಮ್ಮನಹಳ್ಳಿ
  • ಪೋಲನಾಯಕನಹಳ್ಲಿ
  • ಬಂದೇನಹಳ್ಳಿ
  • ಬಚ್ಚಗಾನಹಳ್ಳಿ
  • ಮನಿಯಾರಮುದ್ದಲಹಳ್ಳಿ
  • ಮಾಸನಹಳ್ಳಿ
  • ಯರಮರೆಡ್ಡಿಹಳ್ಳಿ
  • ರಂಪರಿತಟ್ಟಿ
  • ಸೀಗಲಗುಟ್ಟ
  • ಕೋಟಗಲ್‌
  • ಕುರುಬೂರು
  • ಎಂ.ಗೊಲ್ಲಹಳ್ಳಿ
  • ಕಾಪಲ್ಲಿ
  • ಕೊಂಡ್ಲಿಗಾನಹಳ್ಳಿ
  • ಗುಟ್ಟಪಾಳ್ಯ
  • ಚಿಂತಪಲ್ಲಿ
  • ಚನ್ನರಾಯಗಡ್ಡ
  • ತಿಮ್ಮಮ್ಮಬಂಡ
  • ದೇವಪ್ಪಲ್ಲಿ
  • ಪಲ್ಲಿಗಡ್ಡೆ
  • ಮುಂಗಾನಹಳ್ಳಿ
  • ಯರ್ರಯ್ಯಗಾರಹಳ್ಳಿ
  • ಲಕ್ಕೆಪಲ್ಲಿ
  • ವೆಂಕಟರಾಯನಕೋಟೆ
  • ಸೀತಮ್ಮಪಲ್ಲಿ
  • ಮಸ್ತೇನಹಳ್ಳಿ
  • ಗುಟ್ರಹಳ್ಳಿ
  • ಜಂಗಮಶೀಗೆಹಳ್ಳಿ
  • ಬೂದಗೂರು
  • ಮಸ್ತೇನಹಳ್ಳಿ
  • ಮಾರಪ್ಪಲ್ಲಿ
  • ಹುಲುಗುಮ್ಮನಹಳ್ಳಿ
  • ಹೊಸೊರು
  • ಮಿಂಡಿಗಲ್
  • ಗುಟ್ಟೂರು
  • ದಿಗವಮಿಂಡಿಗಲ್
  • ನೆರ್ನಹಳ್ಳಿ
  • ನಲ್ಲರಾಳ್ಳಹಳ್ಳಿ
  • ವೇಗಲಹಳ್ಳಿ
  • ಮಿಟ್ಟಹಳ್ಳಿ
  • ಅಗ್ರಹಾರಹಳ್ಳಿ
  • ಅನುಪಲ್ಲಿ
  • ಅಪ್ಪಸಾನಹಳ್ಳಿ
  • ಅಮಿಟಹಳ್ಳಿ
  • ಕಟ್ಟಿಗೇನಹಳ್ಳಿ
  • ಕೊಮ್ಮೇಪಲ್ಲಿ
  • ಗುರ್ರಂಪಲ್ಲಿ
  • ಗೋನೇನಹಳ್ಳಿ
  • ಚಿಕ್ಕಕಟ್ಟಿಗೇನಹಳ್ಳಿ
  • ದೊಡ್ಡಗುಟ್ಟಹಳ್ಳಿ
  • ನಂದನವನ
  • ನಂದನಹೊಸಹಳ್ಳಿ
  • ಮಿಟ್ಟಹಳ್ಳಿ
  • ರಂಗೇನಹಳ್ಳಿ
  • ರಾಸಪಲ್ಲಿ
  • ವೆಂಕಟರೆಡ್ಡಿಪಾಳ್ಯ
  • ಮುನಗನಹಳ್ಳಿ
  • ಕಟಮಾಚನ ಹಳ್ಳಿ
  • ಕಲ್ಲಹಳ್ಳಿ
  • ಕುರುಟ ಹಳ್ಳಿ
  • ರಾಂಪುರ
  • ಮುರಗಮಲ್ಲ
  • ಗುಂಡ್ಲಹಳ್ಳಿ
  • ಗುಡಾರ್ಲಹಳ್ಳಿ
  • ಚಲಮಕೋಟೆ
  • ಜಿ.ಬತ್ತಲಹಳ್ಳಿ
  • ದುಗನಾರೇಪಲ್ಲಿ
  • ದೊಡ್ಡಕರಕಮಾಕಲಹಳ್ಳಿ
  • ಬೈಯಿನಹಳ್ಳಿ
  • ಮುರಗಮಲ್ಲ
  • ಯರಕೋಟೆ
  • ಶೆಟ್ಟಿಹಳ್ಳಿ
  • ನಂದಿಗಾನಹಳ್ಳಿ
  • ಅಣ್ಣೀಹಳ್ಳಿ
  • ಗಂಡ್ರಗಾನಹಳ್ಳಿ
  • ಗೋಪಲ್ಲಿ
  • ಚಿಕ್ಕಕರಕಮಾಕಲಹಳ್ಳಿ
  • ಜೋಗ್ಯಾನಹಳ್ಳಿ
  • ದಂಡುಪಾಳ್ಯ
  • ನಂದಿಗಾನಹಳ್ಳಿ
  • ನಿಮ್ಮಕಾಯಲಹಳ್ಳಿ
  • ಭಾರ್ಲಹಳ್ಳಿ
  • ಮರಿನಾಯಕನಹಳ್ಳಿ
  • ಮುದ್ದಲಹಳ್ಳಿ
  • ಪೆದ್ದೂರು
  • ಗೌನಿಚೆರುವುಪಲ್ಲಿ
  • ಪೆರಮಾಚನಹಳ್ಳಿ
  • ಕೆಂದನಹಳ್ಳಿ
  • ಕೊಂಗನ ಹಳ್ಳಿ
  • ಗುನ್ನಹಳ್ಳಿ
  • ಚಾಪುರ
  • ನಾ||ಕಾಲೋನಿ
  • ನಾಗದೇನಹಳ್ಳಿ
  • ನಾಯಿಂದ್ರಹಳ್ಳಿ
  • ಪೆರಮಾಚನ ಹಳ್ಳಿ
  • ಮಡಬಹಳ್ಳಿ
  • ಮೈಲಾಪುರ
  • ವೆಂಕಟಾಪುರ
  • ಶ್ರೀರಾಮ ಪುರ
  • ರಾಗುಟ್ಟಹಳ್ಳಿ
  • ಕರಿಯಪ್ಪಲ್ಲಿ
  • ನಲ್ಲಗುಟ್ಲಹಳ್ಳಿ
  • ಬ್ರಾಹ್ಮಣಹಳ್ಳಿ
  • ವೈ ಗೊಲ್ಲಹಳ್ಳಿ
  • ಸಂತೇಕಲ್ಲಹಳ್ಳಿ
  • ಅಕ್ಕಿಮಂಗಲ
  • ಕದಿರಾಪುರ
  • ಬೀರಜೇನಹಳ್ಳಿ
  • ವ್ಯೆಜಕೂರು
  • ವಿರೂಪಾಕ್ಷಪುರ
  • ಸಂತೇಕಲ್ಲಹಳ್ಳಿ
  • ಸೂರಪ್ಪನಹಳ್ಳಿ
  • ಹಿರೇಪಾಳ್ಯ
  • ಶೆಟ್ಟಿಹಳ್ಳಿ
  • ಅನಕಲ್‌
  • ಕರಕಮಾಕಲಗಡ್ಡ
  • ಕೇತನಾಯಕನಹಳ್ಳಿ
  • ಗೌನಹಳ್ಳಿ
  • ಚಿಕ್ಕಮುನಿಮಂಗಳ
  • ಚೌಡದೇನಹಳ್ಳಿ
  • ತಮ್ಮೇನಹಳ್ಳಿ
  • ದ್ವಾರಪಲ್ಲಿ
  • ಪಾಲೇನಹಳ್ಳಿ
  • ಮೊಸಿಲಹಳ್ಳಿ
  • ವೆಂಕಟಾಪುರ
  • ಶೆಟ್ಟಿಹಳ್ಳಿ
  • ತಳಗವಾರ
  • ಜೋಡಿಹೊಸಹಳ್ಳಿ
  • ತಳಗವಾರ
  • ಮಲ್ಲಿಕಾಪುರ
  • ಮುತ್ತುಕದಹಳ್ಳಿ
  • ವಡ್ಡಹಳ್ಳಿ
  • ಸುಬ್ಬರಾಯನಪೇಟೆ
  • ಊಲವಾಡಿ
  • ಐಮರೆಡ್ಡಿ ಹಳ್ಳಿ
  • ಕೆ ಬತ್ತಲಹಳ್ಳಿ
  • ಹೆಬ್ಬರಿ
  • ಉಪ್ಪರಪೇಟೆ
  • ಅಮಿಟಗಾನಹಳ್ಳಿ
  • ಚಾಂಡ್ರಹಳ್ಳಿ
  • ಬಿಂಗಾನಹಳ್ಲಿ
  • ರಾಯಪಲ್ಲಿ
  • ಸೋರಪಲ್ಲಿ
  • ಯಗವಕೋಟೆ
  • ಕಾನುಗಮಾಕಲಹಳ್ಳಿ
  • ಕೊಂಡವೆನಕಪಲ್ಲಿ
  • ಕೋತ್ತೆಹುಡ್ಯ
  • ಗುಂತೊರಗಡ್ಡೆ
  • ದಿನ್ನಿಮಿಂದಲಹಳ್ಳಿ
  • ನಾರಮಾಕಲಹಳ್ಳಿ
  • ಪುಲ್ಲಗುಂಡ್ಲಪಲ್ಲಿ
  • ಫಸಲನಾಯಕನಹಳ್ಳಿ
  • ಯಗವಕೋಟೆ
  • ವೈ.ಕುರುಪಲ್ಲಿ
  • ದೇಶ ಭಕ್ತರಹಳ್ಳಿ
  • ಅಪ್ಪೇಗೌಡನಹಳ್ಳಿ
  • ವಿಜಯಪುರ

ಖ್ಯಾತ ವ್ಯಕ್ತಿಗಳು[ಬದಲಾಯಿಸಿ]

ಚಿಂತಾಮಣಿಯಲ್ಲಿ ಜನಿಸಿದ ಖ್ಯಾತ ವ್ಯಕ್ತಿಗಳು.

ಬಾಹ್ಯ ಸಂಪರ್ಕ[ಬದಲಾಯಿಸಿ]