ಕೆ. ಎಸ್. ಭಗವಾನ್
ಕೆ. ಎಸ್. ಭಗವಾನ್ | |
---|---|
![]() ಮಾನಸ ಗಂಗೋತ್ರಿಯ ಕಾರ್ಯಕ್ರಮವೊಂದರಲ್ಲಿ ಭಗವಾನ್ | |
ಜನನ | ಜುಲೈ 14, 1945 ಕಲ್ಲಹಳ್ಳಿ, ಮೈಸೂರು ಜಿಲ್ಲೆ |
ವೃತ್ತಿ | ಲೇಖಕ, ಪ್ರಾಧ್ಯಾಪಕ |
ರಾಷ್ಟ್ರೀಯತೆ | ಭಾರತೀಯ |
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆ | ಮೈಸೂರು ವಿಶ್ವವಿದ್ಯಾನಿಲಯ |
ಕಾಲ | 20ನೆಯ ಶತಮಾನ |
ಪ್ರಕಾರ/ಶೈಲಿ | ವಿಮರ್ಶೆ, ವೈಚಾರಿಕ ಸಾಹಿತ್ಯ, ಅನುವಾದ |
ವಿಷಯ | ವಿಚಾರ |
ಸಾಹಿತ್ಯ ಚಳುವಳಿ | ಬಂಡಾಯ |
ಪ್ರಭಾವಗಳು
|
ಪ್ರೊ. ಕೆ. ಎಸ್. ಭಗವಾನ್ ಅವರು ಒಬ್ಬ ವಿಮರ್ಶಕ, ಅನುವಾದಕ ಹಾಗೂ ಚಿಂತಕ. ಮೈಸೂರಿನ ಮಹಾರಾಜ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದರು. ಬಂಡಾಯ ವಿಮರ್ಶೆಯ ಮೊದಲ ಮತ್ತು ಮುಖ್ಯ ವಿಮರ್ಶಕರು[ಸೂಕ್ತ ಉಲ್ಲೇಖನ ಬೇಕು]. ವಿಮರ್ಶೆಯಲ್ಲಿ ಅಂತರ್ ಶಿಸ್ತೀಯ ಅಧ್ಯಯನಗಳನ್ನು ಪ್ರಾರಂಭಿಸಿದವರು[ಸೂಕ್ತ ಉಲ್ಲೇಖನ ಬೇಕು]. ಸರಳ ಮದುವೆ ಚಳವಳಿಯಲ್ಲಿ ನೂರಾರು ಲಗ್ನಗಳನ್ನು ನೆರವೇರಿಸಿದ್ದಾರೆ[ಸೂಕ್ತ ಉಲ್ಲೇಖನ ಬೇಕು]. ಅವರು ಮೈಸೂರಿನ ಕುವೆಂಪು ನಗರದಲ್ಲಿ ವಾಸವಾಗಿದ್ದಾರೆ.
ಜೀವನ
ಜನನ
ಕೆ. ಎಸ್. ಭಗವಾನ್ ಅವರು ಜುಲೈ 14, 1945ರಲ್ಲಿ ಮೈಸೂರು ಜಿಲ್ಲೆಯ ಕಲ್ಲಹಳ್ಳಿಯಲ್ಲಿ ಜನಿಸಿದರು.
ಶಿಕ್ಷಣ
ಭಗವಾನ್ ಅವರು ಮೈಸೂರು ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ವಿಷಯದಲ್ಲಿ ಎಂ.ಎ. ಪದವಿಯನ್ನೂ, ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಡಿ.ಲಿಟ್. ಪದವಿಯನ್ನೂ ಪಡೆದಿದ್ದಾರೆ.
ವೃತ್ತಿಜೀವನ
ಪ್ರೊ. ಕೆ.ಎಸ್. ಭಗವಾನ್ ಅವರು ಮೈಸೂರಿನ ಮಹಾರಾಜ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದರು.
ಸಾಹಿತ್ಯ ಕೃಷಿ
ಭಗವಾನ್ ಅವರು ಬಂಡಾಯ ವಿಮರ್ಶೆಯ ಮೊದಲ ಮತ್ತು ಮುಖ್ಯ ವಿಮರ್ಶಕರು[ಸೂಕ್ತ ಉಲ್ಲೇಖನ ಬೇಕು]. ವಿಮರ್ಶೆಯಲ್ಲಿ ಅಂತರ್ ಶಿಸ್ತೀಯ ಅಧ್ಯಯನಗಳನ್ನು ಪ್ರಾರಂಭಿಸಿದವರು[ಸೂಕ್ತ ಉಲ್ಲೇಖನ ಬೇಕು]. ಷೇಕ್ಸ್ ಪಿಯರ್ ನ ಒಂಬತ್ತು ಮಹತ್ವದ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅವರ ವಿವಾದಿತ ಕೃತಿ 'ಶಂಕರಾಚಾರ್ಯ ಮತ್ತು ಪ್ರತಿಗಾಮಿತನ' ೧೫ ಮುದ್ರಣಗಳನ್ನು ಕಂಡಿದ್ದು ಅನ್ಯಭಾಷೆಗಳಿಗೂ ಅನುವಾದಗೊಂಡಿದೆ.
ಅವರ ಕೃತಿಗಳ ಪಟ್ಟಿ ಈ ರೀತಿ ಇದೆ:
ವಿಮರ್ಶೆ
- ಬದಲಾವಣೆ
- ಕುವೆಂಪು ಯುಗ
- ಆಂತರ್ಯ
- ಕಣಿಗಲೆ
ವಿಚಾರ
- ಭಾಷೆ ಮತ್ತು ಸಂಸ್ಕೃತಿ
- ಶಂಕರಾಚಾರ್ಯ ಮತ್ತು ಪ್ರತಿಗಾಮಿತನ
- ಗಾಂಧಿಯನ್ನು ಗೋಡ್ಸೆ ಏಕೆ ಕೊಂದ?
- ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್
- ಸುಖದ ಹಾದಿ
- ಅನನ್ಯತೆ
- Violence in Hinduism
ಅನುವಾದ
ಸೃಜನಶೀಲ
- ಜೂಲಿಯಸ್ ಸೀಸರ್
- ವೆನಿಸಿನ ವರ್ತಕ
- ಹ್ಯಾಮ್ಲೆಟ್
- ಆಂಟನಿ ಮತ್ತು ಕ್ಲಿಯೋಪಾತ್ರ
- ಒಥೆಲೊ
- ನಿಮ್ಮಿಷ್ಟ
- ಮ್ಯಾಕ್ ಬೆತ್
- ಮಹಾರಾಜ ಲಿಯರ್
- ರೋಮಿಯೊ ಮತ್ತು ಜೂಲಿಯೆಟ್
- ವೃದ್ಧ ಮತ್ತು ಸಮುದ್ರ
ಸೃಜನೇತರ
ಚರಿತ್ರೆ
- ಇತಿಹಾಸ ಚಕ್ರ
ಸಂಪಾದನೆ
- ಗಂಗೋತ್ರಿ
- ಚಂಪಾ: ಆಯ್ದ ಕವನಗಳು
- ಜಿಜ್ಞಾಸು
- ಸಾಹಿತ್ಯ ವಿಮರ್ಶೆ ೧೯೮೫
- ಕೆಂಗಲ್ಲರ ಭಾಷಣಗಳು
- As You Like It
- Macbeth
- Othello
- The Merchant of Venice
ಮಕ್ಕಳ ಸಾಹಿತ್ಯ
- ಮಂತ್ರದ ಉಂಗುರ
- ಷೇಕ್ಸ್ ಪಿಯರ್ ಕತೆಗಳು:
- ನಲಿವಿನಾಟಗಳು
- ನೋವಿನಾಟಗಳು
- ಚರಿತ್ರಾಟಗಳು
ನುಡಿಮುತ್ತುಗಳು
- ಸಹೃದಯ ಸಂತೋಷವೇ ಸಾಹಿತಿಯ ಸಂಪತ್ತು.
- ಸಹೃದಯ ಸಹಾನುಭೂತಿಯೇ ಸಾಹಿತಿಗೆ ಸಂಜೀವಿನಿ.
ಪ್ರಶಸ್ತಿ ಪುರಸ್ಕಾರ
- ಕಾವ್ಯಾನಂದ ಪ್ರಶಸ್ತಿ (1982)
- ಕುವೆಂಪು ಬಹುಮಾನ (1985)
- ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ (1999)
- ನಾಡ ಚೇತನ ಪ್ರಶಸ್ತಿ (2003)
- ಕುವೆಂಪು ಶತಮಾನೋತ್ಸವ ಪ್ರಶಸ್ತಿ (2004)
- ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ (2007)
- ಕುವೆಂಪು ಪ್ರಶಸ್ತಿ (2011)
- ಶೂನ್ಯಪೀಠ ಪ್ರಶಸ್ತಿ (2011)
- ಸಾಹಿತ್ಯ ಕಲಾರತ್ನ (2011)
- ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ (೨೦೧೩) [೧]
- ದಾವಣಗೆರೆಯ ಪ್ರೊ. ಬಿ. ವಿ. ವೀರಭದ್ರಪ್ಪ ಪ್ರತಿಷ್ಠಾನ ನೀಡುವ 'ಲೋಕಾಯತ' ಪ್ರಶಸ್ತಿ (2014)
- ಕರ್ನಾಟಕ ಕ್ರಾಂತಿರತ್ನ (2015)
ಗೌರವ
- ಪ್ರೊ. ಭಗವಾನ್ ಅವರು ೨೦೧೧ರಲ್ಲಿ ಹುಣಸೂರಿನಲ್ಲಿ ನಡೆದ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ವಿವಾದಗಳು
ಕಟುವಾದ ಎಡಪಂಥೀಯ ಹಾಗೂ ಹಿಂದೂ ವಿರೋಧಿ ಆಲೋಚನಾ ಧಾಟಿಯನ್ನು ಹೊಂದಿರುವ ಆರೋಪ ಹೊತ್ತಿರುವ ಭಗವಾನ್ ಅವರು ಹಿಂದೂ ಧರ್ಮವನ್ನು, ಹಿಂದೂ ಧರ್ಮ ದೇವತೆಗಳನ್ನು, ಪುರಾಣಗಳನ್ನು, ಶಂಕರಾಚಾರ್ಯರನ್ನು, ಭಗವದ್ಗೀತೆಯನ್ನು, ಪೂಜಾಸ್ಥಳಗಳನ್ನು ಕಟುವಾಗಿ ಟೀಕಿಸಿ ಅನೇಕ ಬಾರಿ ವಿವಾದಗಳನ್ನು ಸೃಷ್ಟಿಸಿದರು.[೨] [೩]ಹಿಂದುಗಳು ದೇವರೆಂದು ಆರಾಧಿಸುವ "ಶ್ರೀರಾಮ ತಂದೆಗೆ ಹುಟ್ಟಿದ ಮಗನಲ್ಲ" ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದರು[೪]. ಹಾಗಾಗಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ದೂರುಗಳೂ ಅವರ ವಿರುದ್ಧ ದಾಖಲಾದವು.[೫] [೬] ಇವರಿಗೆ ನೀಡಿರುವ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ವಿರೋಧ ಮತ್ತು ಪ್ರಶಸ್ತಿಯನ್ನು ಹಿಂದೆಗೆದುಕೊಳ್ಳಬೇಕೆಂಬ ಆಗ್ರಹ ಅನೇಕ ಜನರಿಂದ ವ್ಯಕ್ತವಾಯಿತು.[೭]
ಉಲ್ಲೇಖಗಳು
- ↑ 5-ಮಂದಿಗೆ-ಸಾಹಿತ್ಯ-ಅಕಾಡೆಮಿ-ಗೌರವ-ಪ್ರಶಸ್ತಿ, ಪ್ರಜಾವಾಣಿ
- ↑ ಶ್ರೀರಾಮಚಂದ್ರ, ಸೀತೆ ಜತೆ ಮದ್ಯ ಸೇವಿಸುತ್ತಿದ್ದ: ಪ್ರೊ.ಭಗವಾನ್ Archived 2015-09-02 ವೇಬ್ಯಾಕ್ ಮೆಷಿನ್ ನಲ್ಲಿ., ಉದಯವಾಣಿ
- ↑ ಧಾರ್ಮಿಕ ಕೇಂದ್ರಗಳನ್ನೆಲ್ಲ ಒಡೆದುಹಾಕಿ: ಭಗವಾನ್;ಪ್ರಜಾವಾಣಿ ವಾರ್ತೆ;25 Mar, 2017
- ↑ ಶ್ರೀರಾಮ ತಂದೆಗೆ ಹುಟ್ಟಿದ ಮಗನಲ್ಲ, ಮಹಾಭಾರತ ಓದ್ಬೇಡಿ; ಭಗವಾನ್ Archived 2016-05-30 ವೇಬ್ಯಾಕ್ ಮೆಷಿನ್ ನಲ್ಲಿ., ಉದಯವಾಣಿ
- ↑ ಭಗವಾನ್ ವಿರುದ್ಧ ದೂರು, ಕನ್ನಡಪ್ರಭ
- ↑ ಭಗವಾನ್ ವಿರುದ್ಧ ಮತ್ತೆರಡು ದೂರು, ಪ್ರಜಾವಾಣಿ
- ↑ ಭಗವಾನ್ಗೆ ಪ್ರಶಸ್ತಿ ನೀಡಿದ್ದಕ್ಕೆ ವಿರೋಧ[ಶಾಶ್ವತವಾಗಿ ಮಡಿದ ಕೊಂಡಿ], ವಿಜಯವಾಣಿ
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- Articles with invalid date parameter in template
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- Pages using collapsible list with both background and text-align in titlestyle
- Articles with unsourced statements
- ಸಾಹಿತಿಗಳು
- ಕನ್ನಡ ಸಾಹಿತಿಗಳು
- ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು
- ವಿಮರ್ಶಕರು
- ಮೈಸೂರಿನ ಬರಹಗಾರರು