ಹುಣಸೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹುಣಸೂರು
ಹುಣಸೂರು
city
Population
 (2001)
 • Total೪೩,೮೯೩


ಇತಿಹಾಸ:

ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯಲ್ಲಿರುವ ತಾಲೂಕು. ಲಕ್ಷ್ಮಣ ತೀರ್ಥ ನದಿ ಈ ತಾಲ್ಲೂಕಿನಲ್ಲಿ ಹರಿಯುತ್ತದೆ.

description:

ಹುಣಸೂರು ತಾಲ್ಲುಕಿನಲ್ಲಿ ಹುಣಸೂರು ಬಿಟ್ಟರೆ ಹೆಚ್ಖಿನ ಜನ ಇರುವುದು ಕಟ್ಟೆಮಳಲವಾಡಿಯಲ್ಲಿ .ಈ ಗ್ರಾಮ ಕಾವೇರಿ ಉಪನದಿಯಾದ ಲಕ್ಷ್ಮಣ್ಣ ತೀರ್ಥ ನದಿಯ ತಪ್ಪಲಿನ ಎಡ ದಂಡೆ ಮೇಲಿದೆ.

ಮೂದಲು ಮಳಲವಾಡಿಯಾಗಿದ್ದ ಊರು ಲಕ್ಷ್ಮಣತೀರ್ಥ ನದಿಗೆ ಈ ಊರಿನಲ್ಲಿ ಕಟ್ಟೆ ಕಟ್ಟಿದ್ದರಿಂದ ಕಟ್ಟೆಮಳಲವಾಡಿಯಾಯಿತು.

ಮಳಲು+ವಾಡಿ=ಮಳಲವಾಡಿ 'ಮಳಲು' ಎಂದರೆ ಮಣ್ಣು ಎಂದು. ವಾಡಿ ಎಂದರೆ ವಾಡೆ ಎಂದು ಅರ್ಥದಿಂದ ಆಗಿರಬಹುದು.

ಇತಿಹಾಸ. ಬಹುಕಾಲದ ಹಿಂದೆ ಮಲ್ಲನಾಯಕ ಎಂಬ ಪಾಳೆಗಾರ ಈ ಗ್ರಾಮವನ್ನು ವಾಡೆಯ ಮಾಡಿಕೊಂಡು ರಾಜ್ಯಭಾರ ಮಾಡುತ್ತಿದ್ದನಂತೆ.ಆಗಿನಿಂದ ಮಲ್ಲನಾಯಕ ವಾಡೆ ಎಂಬುದರ ಮಲ್ಲವಾಡಿಯಾಗಿ ತದ ನಂತರ ಮಳಲವಾಡಿ ಯಾಗಿರಬಹುದೆ೦ದೂ ಉಹಿಸಲಾಗಿದೆ.ತದ ನಂತರ ಕಂಡೆರಾಯ ಎಂಬ ಪಾಳೆಗಾರ ಮಲ್ಲನಾಯಕನನ್ನು ಸೋಲಿಸಿ ಮಳಲವಾಡಿಯನ್ನು ಅಳಿದನೆಂದು ಪ್ರತೀತಿ ಇದೆ.

ಗ್ರಾಮದೇವತೆಯಾಗಿ ಸಿಡಿಯಮ್ಮ ನಮ್ಮ ಗ್ರಾಮವನ್ನು ರಕ್ಶಿಸುತಿದ್ದಾಳೆ. ಶಕ್ತಿ ದೇವತೆಯಾದ ಸಿಡಿಯಮ್ಮತಾಯಿ ವೆಂಕಟೇಶ್ವರನಿಗೆ ತಂಗಿ ಯಗಿರುವಲೆಂದು ಜಾತ್ರೆ ಸಮಯದಲ್ಲಿ ಇಂದಿಗೂ ವೆಂಕಟೇಶ್ವರ , ಸಿಡಿಯಮ್ಮನವರ ಉತ್ಸವಗಳು ಊರಿನಲ್ಲಿ ಮೆರವಣಿಗೆ ಆಗುತ್ತದೆ.

ಈ ಸುತ್ತಲಿನ ಸೀಮೆಗೆ ಸಿಡಿಯ ಆಟ ವಿಶೇಷ. ಚೈತ್ರ ಮಾಸದಲ್ಲಿ ಒಂದು ಅಡಿಕೆ ಮರವನ್ನು ತೋಟದಿಂದ ಬಗಿದು ಕಿತ್ತು ನೆಲಕೆ ಬೀಳಿಸದಂತೆ ಮೆರವಣಿಗೆಯಲ್ಲಿ ತಂದು ಹಾಕುವುದೊಂದು ವಿಶೇಷ.

ಜಾತ್ರೆ ಮತ್ತು ಇಲ್ಲಿ ಜಗತ್ ಪ್ರಸಿದ ವಾದ ಸಿಡಿಯಮ್ಮನ ಜಾತ್ರೆ ನೆಡಯುತದೆ ಇ ಜಾತ್ರೆಗೆ ಸುತ್ತ ಮುತ್ತ ಇರುವ ೪ ಹಳ್ಳಿಗಳು ಇ ಜಾತ್ರೆಯ ಸೊಬಗನು ನೋಡಲು ಎತ್ತಿನಗಾಡಿಯಲ್ಲಿ ಮನೆ ಮಂದಿಯಲ್ಲಾ ಬರುತ್ತಾರೆ.

ಕನ್ನಡ ಚಿತ್ರರಂಗದ ಪ್ರಮುಖ ಚಿತ್ರ ಸಾಹಿತಿ,. ನಟ,ಚಿತ್ರಕಥಾ ಲೇಖಕ, ಸಂಭಾಷಣೆಕಾರ..ಹುಣಸೂರು ಕೃಷ್ಣಮೂರ್ತಿ ಇದೇ ಊರಿನವರು.

"https://kn.wikipedia.org/w/index.php?title=ಹುಣಸೂರು&oldid=1168699" ಇಂದ ಪಡೆಯಲ್ಪಟ್ಟಿದೆ