ಸಮುರಾಯ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಕ್ಷಾಕವಚದಲ್ಲಿನ ಸಮುರಾಯ್‌, 1860ರ ದಶಕ. ಫೆಲೀಸ್‌ ಬೀಟೋ ತೆಗೆದಿರುವ ಕೈನಿಂದ-ಬುಡಕಟ್ಟು್ಣಹಾಕಿದ ಛಾಯಾಚಿತ್ರ
1860ರ ದಶಕದ ಸುಮಾರಿಗೆ ಇದ್ದ ಸಮುರಾಯ್‌

Samurai (?) ಸಮುರಾಯ್‌ ಎಂಬುದು ಕೈಗಾರಿಕಾ ಪೂರ್ವ ಜಪಾನ್‌ನ ಸೇನಾ ಪದವಿಗೆ ಸಂಬಂಧಿಸಿದಂತೆ ಇದ್ದ ಒಂದು ಪದವಾಗಿದೆ. ವಿಲಿಯಂ ಸ್ಕಾಟ್‌ ವಿಲ್ಸನ್‌ ಎಂಬ ಭಾಷಾಂತರಕಾರನ ಅಭಿಪ್ರಾಯದ ಪ್ರಕಾರ: "ಚೀನೀ ಭಾಷೆಯಲ್ಲಿ, 侍 ಎಂಬ ಅಕ್ಷರವು ಮೂಲತಃ ಒಂದು ಕ್ರಿಯಾಪದವಾಗಿದ್ದು, ಒಬ್ಬನ ಅನುಕೂಲಕ್ಕಾಗಿ ಕಾದಿರುವುದು ಅಥವಾ ಸಮಾಜದ ಉನ್ನತವರ್ಗದಲ್ಲಿನ ಗಣ್ಯವ್ಯಕ್ತಿಯೊಬ್ಬನಿಗೆ ಗೌರವಸೂಚಕ ಭೇಟಿ ನೀಡುವುದು ಅಥವಾ ಅವನ ಜೊತೆಗಿರುವುದು ಎಂಬ ಅರ್ಥವನ್ನು ಇದು ಕೊಡುತ್ತದೆ. ಜಪಾನೀ ಭಾಷೆಯಲ್ಲಿನ ಸಬುರಾವು ಎಂಬ ಮೂಲ ಪದವೂ ಇದೇ ಅರ್ಥವನ್ನು ಕೊಡುತ್ತದೆ. ಎರಡೂ ದೇಶಗಳಲ್ಲಿ ಈ ಪದಗಳಿಗೆ "ಶ್ರೀಮಂತ ವರ್ಗದವರ ಸನಿಹದಲ್ಲಿ ಜೊತೆಗಿದ್ದು ಸೇವೆ ಮಾಡುವವರು ಅಥವಾ ಅವರನ್ನು ನೋಡಿಕೊಳ್ಳುವವರು" ಎಂಬ ಅರ್ಥಬರುವಂತೆ ನಾಮವಾಚಕವನ್ನು ರೂಪಿಸಲಾಯಿತು. ಅಷ್ಟೇ ಅಲ್ಲ ಜಪಾನೀ ಭಾಷೆಯಲ್ಲಿನ ಉಚ್ಚಾರಣೆಯನ್ನು ಸಬುರಾಯ್‌ ಎಂದು ಬದಲಿಸಲಾಯಿತು." ವಿಲ್ಸನ್‌ ಪ್ರಕಾರ, "ಸಮುರಾಯ್‌" ಎಂಬ ಪದಕ್ಕೆ ಸಂಬಂಧಿಸಿದ ಒಂದು ಮುಂಚಿನ ಉಲ್ಲೇಖವು ಕೊಕಿನ್‌ ವಕಾಶೂ (905-914) ಎಂಬ ಕೃತಿಯಲ್ಲಿ ಕಂಡುಬರುತ್ತದೆ. ಇದು ಮೊತ್ತಮೊದಲ ಸಾಮ್ರಾಜ್ಯಶಾಹಿ ಕವನ ಸಂಗ್ರಹವಾಗಿದ್ದು, ಒಂಬತ್ತನೇ ಶತಮಾನದ ಪ್ರಥಮಾರ್ಧದಲ್ಲಿ ಸಂಪೂರ್ಣಗೊಳಿಸಲ್ಪಟ್ಟಿತು.

12ನೇ ಶತಮಾನದ ಅಂತ್ಯದ ವೇಳೆಗೆ, ಸಮುರಾಯ್‌ ಎಂಬುದು ಹೆಚ್ಚೂಕಮ್ಮಿ ಸಂಪೂರ್ಣವಾಗಿ ಬುಷಿ ಯೊಂದಿಗೆ (武士) ಸಮಾನಾರ್ಥಕವಾಗಿಹೋಗಿತ್ತು, ಮತ್ತು ಈ ಪದವು ಯೋಧರ ವರ್ಗದ ಮಧ್ಯದ ಮತ್ತು ಮೇಲಿನ ಅಂತಸ್ತುಗಳೊಂದಿಗೆ ನಿಕಟವಾದ ಸಂಬಂಧವನ್ನು ಬೆಳೆಸಿಕೊಂಡಿತ್ತು. ಬುಷಿಡೋ ಎಂಬ ಹೆಸರಿನ ಬರಹರೂಪದ ನಿಯಮಗಳ ಒಂದು ಸಂಗ್ರಹವನ್ನು ಸಮುರಾಯ್‌ ಅನುಸರಿಸಿತು. ಜಪಾನಿನ ಜನಸಂಖ್ಯೆಯ 10%ಗಿಂತ ಕಡಿಮೆ ಮಟ್ಟಕ್ಕೆ ಅವುಗಳ ಸಂಖ್ಯೆ ಮುಟ್ಟಿತು .[೧] ಕತ್ತಿವರಸೆಯ ವಿಧಾನ (ದಿ ವೇ ಆಫ್‌ ದಿ ಸ್ವೋರ್ಡ್‌) ಎಂಬ ಅರ್ಥವನ್ನು ಕೊಡುವ ಎರಡೂ ಕೈನ ಕತ್ತಿವರಸೆ ಕದನ ಕಲೆಯೊಂದಿಗೆ ಸಮುರಾಯ್‌ ಬೋಧನೆಗಳನ್ನು ಇಂದಿನ ಆಧುನಿಕ ದಿನದ ಸಮಾಜದಲ್ಲಿ ಇನ್ನೂ ಕಾಣಬಹುದಾಗಿದೆ.

ಇತಿಹಾಸ[ಬದಲಾಯಿಸಿ]

ಸ್ವರ್ಣಲೇಪಿತ ಕಂಚಿನ ಅಲಂಕರಣದೊಂದಿಗಿನ ಕಬ್ಬಿಣದ ಶಿರಸ್ತ್ರಾಣ ಮತ್ತು ರಕ್ಷಾಕವಚ, ಕೊಫುನ್‌ ಅವಧಿ, 5ನೇ ಶತಮಾನ. ಟೋಕಿಯೋ ನ್ಯಾಷನಲ್‌ ಮ್ಯೂಸಿಯಂ.

ಜಪಾನಿ ಸೈನಿಕರ ಹಿಮ್ಮೆಟ್ಟಿಕೆಗೆ ಕಾರಣವಾದ, ಟ್ಯಾಂಗ್‌ ರಾಜವಂಶದ ಅವಧಿಯಲ್ಲಿನ ಚೀನಾ ಮತ್ತು ಸಿಲ್ಲಾಗಳ ವಿರುದ್ಧದ ಹಕುಸುಕಿನೋದ ಕದನದ ನಂತರ ಜಪಾನ್‌ ಒಂದು ವ್ಯಾಪಕ ಸುಧಾರಣೆಗೆ ಒಳಗಾಯಿತು. 646 ADಯಲ್ಲಿ ರಾಜಕುಮಾರ ನಕಾ ನೊ ಓಯೆ (ಚಕ್ರವರ್ತಿ ತೆಂಜಿ) ಎಂಬಾತನಿಂದ ಜಾರಿ ಮಾಡಲ್ಪಟ್ಟ ಟೈಕಾ ಸುಧಾರಣೆಯು ಅತ್ಯಂತ ಪ್ರಮುಖ ಸುಧಾರಣೆಗಳ ಪೈಕಿ ಒಂದಾಗಿತ್ತು. ಜಪಾನಿನ ಆಳುವ ಶ್ರೀಮಂತವರ್ಗವು ಟ್ಯಾಂಗ್‌ ರಾಜವಂಶದ ರಾಜಕೀಯ ಸ್ವರೂಪ, ಅಧಿಕಾರಿಶಾಹಿ ಧೋರಣೆ, ಸಂಸ್ಕೃತಿ, ಧರ್ಮ, ಮತ್ತು ತತ್ತ್ವಚಿಂತನೆ ಇವೇ ಮೊದಲಾದವನ್ನು ಸ್ವೀಕರಿಸಿ ಅಳವಡಿಸಿಕೊಳ್ಳುವಲ್ಲಿ ಈ ರಾಜಶಾಸನವು ಅನುವುಮಾಡಿಕೊಟ್ಟಿತು.[೨]. 702 ADಯಲ್ಲಿ ಬಂದ ತೈಹೋ ಸಂಹಿತೆ, ಮತ್ತು ನಂತರದಲ್ಲಿ ಬಂದ ಯೋರೋ ಸಂಹಿತೆ[೩] ಅಂಗವಾಗಿ, ಜನಗಣತಿಗೆ ಸಂಬಂಧಿಸಿದಂತೆ ಸಾರ್ವಜನಿಕರು ನಿಯತವಾಗಿ ದಾಖಲಿಸಿಕೊಳ್ಳಬೇಕಾಗಿ ಬಂತು. ರಾಷ್ಟ್ರೀಯ ಒತ್ತಾಯದ ಸೇನಾ ದಾಖಲಾತಿಗೆ ಸಂಬಂಧಿಸಿದ ಒಂದು ಮುನ್ಸೂಚಕವಾಗಿ ಈ ಪರಿಪಾಠವನ್ನು ಬಳಸಿಕೊಳ್ಳಲಾಯಿತು. ಜನಸಂಖ್ಯೆಯು ಹೇಗೆ ಹರಡಿಕೊಂಡಿದೆ ಎಂಬುದರ ಕುರಿತಾದ ಒಂದು ಗ್ರಹಿಕೆಯೊಂದಿಗೆ ಚಕ್ರವರ್ತಿ ಮೊಮ್ಮು ಒಂದು ಕಾನೂನನ್ನು ಜಾರಿಗೆ ತಂದ. ಇದರ ಅನುಸಾರ ಪ್ರತಿ 3-4 ವಯಸ್ಕ ಪುರುಷರ ಪೈಕಿ 1 ಪುರುಷನ ಅನುಪಾತದಲ್ಲಿ ಜನರು ರಾಷ್ಟ್ರೀಯ ಸೇನೆಗೆ ಕಡ್ಡಾಯವಾಗಿ ಸೇರಿಸಲ್ಪಟ್ಟರು. ಈ ಸೈನಿಕರು ತಮ್ಮ ಸ್ವಂತದ ಆಯುಧಗಳನ್ನು ಪೂರೈಕೆ ಮಾಡುವುದು ಅಗತ್ಯವಾಗಿತ್ತು, ಮತ್ತು ಇದಕ್ಕೆ ಪ್ರತಿಯಾಗಿ ಸುಂಕಗಳು ಹಾಗೂ ತೆರಿಗೆಗಳಿಂದ ಅವರಿಗೆ ವಿನಾಯಿತಿಯು ದೊರೆಯುತ್ತಿತ್ತು.[೨] ಚೀನಾದ ವ್ಯವಸ್ಥೆಯ ಮೇಲ್ಪಂಕ್ತಿಯನ್ನು ಅನುಸರಿಸಿ ಒಂದು ಸಂಘಟಿತ ಸೇನೆಯನ್ನು ರೂಪಿಸುವುದರೆಡೆಗೆ ಸಾಮ್ರಾಜ್ಯಶಾಹಿ ಸರ್ಕಾರವು ಮಾಡಿದ ಮೊದಲ ಪ್ರಯತ್ನಗಳಲ್ಲಿ ಇದು ಒಂದಾಗಿತ್ತು. ನಂತರ ಬಂದ ಇತಿಹಾಸಕಾರರು ಇದನ್ನು ಗುಂದಾನ್‌-ಸೆಯಿ (軍団制) ಎಂದು ಕರೆದರು ಹಾಗೂ ಇದು ಕೇವಲ ಅಲ್ಪಕಾಲದವರೆಗೆ ಅಸ್ತಿತ್ವದಲ್ಲಿತ್ತು ಎಂದು ನಂಬಲಾಗಿದೆ.[ಸೂಕ್ತ ಉಲ್ಲೇಖನ ಬೇಕು]

ಸಾಮ್ರಾಜ್ಯಶಾಹಿಯ ಬಹುಪಾಲು ಅಧಿಕಾರಿಗಳನ್ನು ತೈಹೋ ಸಂಹಿತೆಯು 12 ದರ್ಜೆಗಳಾಗಿ ವರ್ಗೀಕರಿಸಿತು. ಪ್ರತಿ ದರ್ಜೆಯೂ ಎರಡು ಉಪ-ದರ್ಜೆಗಳಾಗಿ ವಿಭಜಿಸಲ್ಪಟ್ಟು, ಅದರಲ್ಲಿನ 1ನೇ ದರ್ಜೆಗೆ ಚಕ್ರವರ್ತಿ ಉನ್ನತ ಸಲಹೆಗಾರನಾಗಿರುವ ಸ್ಥಾನವನ್ನು ನೀಡಲಾಯಿತು. 6ನೇ ದರ್ಜೆ ಮತ್ತು ಅದಕ್ಕಿಂತ ಕೆಳಗಿನವರನ್ನು "ಸಮುರಾಯ್‌" ಎಂದು ಉಲ್ಲೇಖಿಸಲಾಗುತ್ತಿತ್ತು ಮತ್ತು ದೈನಂದಿನ ವಿದ್ಯಮಾನಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಯಿತು. ಈ "ಸಮುರಾಯ್‌"ಗಳು ನಾಗರಿಕ ಸಾರ್ವಜನಿಕ ಸೇವಕರಾಗಿದ್ದರೂ ಸಹ, ಆ ಹೆಸರು ಈ ಪದದಿಂದಲೇ ಜನ್ಯವಾಗಿದೆ ಎಂದು ನಂಬಲಾಗಿದೆ. ಆದಾಗ್ಯೂ ಸೇನೆಯ ಜನರನ್ನು ಅನೇಕ ಶತಮಾನಗಳವರೆಗೆ "ಸಮುರಾಯ್‌" ಎಂಬುದಾಗಿ ಉಲ್ಲೇಖಿಸುತ್ತಿರಲಿಲ್ಲ.[ಸೂಕ್ತ ಉಲ್ಲೇಖನ ಬೇಕು]

ಹೀಯನ್‌ ಅವಧಿ ಆದಿಭಾಗದಲ್ಲಿ, ಅಂದರೆ, 8ನೇ ಶತಮಾನದ ಅಂತ್ಯ ಹಾಗೂ 9ನೇ ಶತಮಾನದ ಆದಿಭಾಗದಲ್ಲಿ, ಉತ್ತರದ ಹೊನ್ಷೂ ವಲಯದಲ್ಲಿ ತನ್ನ ಅಧಿಕಾರವನ್ನು ಬಲಪಡಿಸಲು ಹಾಗೂ ವಿಸ್ತರಿಸಲು ಚಕ್ರವರ್ತಿ ಕಮ್ಮು ಬಯಸಿದನಾದರೂ, ದಂಗೆಕೋರ ಎಮಿಷಿ ಜನರನ್ನು ಗೆದ್ದುಕೊಂಡು ಬರಲು ಅವನು ಕಳಿಸಿದ ಸೈನಿಕರಿಗೆ ಯಾವುದೇ ಶಿಸ್ತಾಗಲೀ, ಪ್ರೇರಣೆಯಾಗಲೀ ಇರಲಿಲ್ಲವಾದ್ದರಿಂದ, ತಮಗೊಪ್ಪಿಸಿದ ಕೆಲಸದಲ್ಲಿ ಅವರು ವಿಫಲರಾದರು.[ಸೂಕ್ತ ಉಲ್ಲೇಖನ ಬೇಕು] ಸೀಯಿಟೈಶೋಗನ್‌ (征夷大将軍) ಅಥವಾ ಶೋಗನ್‌ ಎಂಬ ಅಧಿಕಾರ-ಸೂಚಕ ನಾಮವನ್ನು ಪರಿಚಯಿಸಿದ ಚಕ್ರವರ್ತಿ ಕಮ್ಮು, ಎಮಿಷಿ ದಂಗೆಕೋರರನ್ನು ಗೆಲ್ಲಲು ಪ್ರಬಲವಾದ ಪ್ರಾದೇಶಿಕ ಬುಡಕಟ್ಟುಗಳನ್ನು ನೆಚ್ಚಿಕೊಳ್ಳಲು ಶುರುಮಾಡಿದ. ಅಶ್ವಾರೋಹಿ ಕಾಳಗ ಮತ್ತು ಬಿಲ್ಲುವಿದ್ಯೆಯಲ್ಲಿ (ಕ್ಯೂಡೋ) ಪರಿಣತಿಯನ್ನು ಪಡೆದಿದ್ದ ಈ ಬುಡಕಟ್ಟು ಯೋಧರು, ದಂಗೆಗಳನ್ನು ಅಡಗಿಸುವುದಕ್ಕೆ ಸಂಬಂಧಿಸಿದಂತೆ ಚಕ್ರವರ್ತಿಯ ಆದ್ಯತೆಯ ಸಾಧನಗಳಾಗಿ ಮಾರ್ಪಟ್ಟರು.[ಸೂಕ್ತ ಉಲ್ಲೇಖನ ಬೇಕು] ಈ ಯೋಧರಿಗೂ ಶಿಕ್ಷಣವನ್ನು ನೀಡುವುದು ಸಾಧ್ಯವಿತ್ತಾದರೂ, ಈ ಅವಧಿಯಲ್ಲಿ (7ನೇ ಶತಮಾನದಿಂದ 9ನೇ ಶತಮಾನದವರೆಗಿನ ಅವಧಿ) ಸಾಮ್ರಾಜ್ಯಶಾಹಿ ರಾಜನ ಆಸ್ಥಾನದ ಅಧಿಕಾರಿಗಳು ಅವರನ್ನು ಅನಾಗರಿಕರಿಗಿಂತ ಕೊಂಚವೇ ಮೇಲಿನ ದರ್ಜೆಯಲ್ಲಿ ಪರಿಗಣಿಸಿದ್ದರು.[ಸೂಕ್ತ ಉಲ್ಲೇಖನ ಬೇಕು]

ಅಂತಿಮವಾಗಿ, ಚಕ್ರವರ್ತಿ ಕಮ್ಮು ತನ್ನ ಸೇನೆಯನ್ನು ವಿಸರ್ಜಿಸಿದ, ಮತ್ತು ಆ ಸಮಯದಿಂದ ಚಕ್ರವರ್ತಿಯ ಸಾಮರ್ಥ್ಯವು ನಿಧಾನವಾಗಿ ಕ್ಷೀಣಿಸಿತು. ಚಕ್ರವರ್ತಿಯು ಇನ್ನೂ ಅಧಿಕಾರದಲ್ಲಿರುವಾಗ, ಕ್ಯೋಟೋ (京都) ಸುತ್ತಲೂ ಇದ್ದ ಅತ್ಯಂತ ಪ್ರಬಲವಾದ ಬುಡಕಟ್ಟು ಜನರು ಮಂತ್ರಿಗಳ ಸ್ಥಾನವನ್ನು ಅಲಂಕರಿಸಿದ್ದರು, ಮತ್ತು ಅವರ ಸಂಬಂಧಿಗಳು ನ್ಯಾಯಾಧಿಪತಿಗಳ ಸ್ಥಾನಗಳನ್ನು ಹಣತೆತ್ತು ವಶಪಡಿಸಿಕೊಂಡಿದ್ದರು.[ಸೂಕ್ತ ಉಲ್ಲೇಖನ ಬೇಕು] ಸಂಪತ್ತನ್ನು ಕೂಡಿಹಾಕಲು ಮತ್ತು ತಂತಮ್ಮ ಸಾಲಗಳನ್ನು ತೀರಿಸಲು ಸದರಿ ನ್ಯಾಯಾಧಿಪತಿಗಳು ಅನೇಕವೇಳೆ ಭಾರೀ ತೆರಿಗೆಯನ್ನು ವಿಧಿಸಿದರು. ಇದರಿಂದಾಗಿ ಅನೇಕ ರೈತರು ತಮ್ಮ ಜಮೀನುಗಳನ್ನು ಕಳೆದುಕೊಳ್ಳಬೇಕಾಯಿತು.[ಸೂಕ್ತ ಉಲ್ಲೇಖನ ಬೇಕು]

ತೈರಾ ಹಡಗೊಂದರ ಧ್ವಜಸ್ತಂಭದ ತುದಿಯಲ್ಲಿರುವ ಪಂಖವೊಂದಕ್ಕೆ ತನ್ನ ಪ್ರಸಿದ್ಧ ಹೊಡೆತವನ್ನು ಹೊಡಯುತ್ತಿರುವ ನಾಸು ನೊ ಯೋಚಿ. ತೂಗುಹಾಕುವ ಚರ್ಮಕಾಗದದ ಸುರುಳಿಯೊಂದರಿಂದ, ವಟನಾಬೆ ವಸ್ತುಸಂಗ್ರಹಾಲಯ, ಟೊಟ್ಟೊರಿ ಆಡಳಿತ ಪ್ರಾಂತ, ಜಪಾನ್‌.

ಸಂರಕ್ಷಣಾತ್ಮಕ ಒಪ್ಪಂದಗಳು ಹಾಗೂ ರಾಜಕೀಯ ವಿವಾಹಗಳ ಮೂಲಕ ರಾಜಕೀಯ ಶಕ್ತಿಯನ್ನು ಗಳಿಸಿಕೊಂಡ ಅವರು, ಅಂತಿಮವಾಗಿ ಸಾಂಪ್ರದಾಯಿಕವಾದ ಆಳುವ ಶ್ರೀಮಂತವರ್ಗವನ್ನೇ ಮೀರಿಸಿದರು.[ಸೂಕ್ತ ಉಲ್ಲೇಖನ ಬೇಕು]

ರೈತರ ಜಮೀನುಗಳ ಮೇಲೆ ಅಧಿಪತ್ಯ ನಡೆಸಲು ಹಾಗೂ ತೆರಿಗೆಗಳನ್ನು ಸಂಗ್ರಹಿಸಲು ಕಳುಹಿಸಲ್ಪಟ್ಟಿದ್ದ ಸಾಮ್ರಾಜ್ಯಶಾಹಿಯ ನ್ಯಾಧಿಪತಿಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಆಯುಧಗಳನ್ನು ಕೈಗೆತ್ತಿಕೊಂಡಿದ್ದ ರೈತರಿಂದ ಕೆಲವೊಂದು ಬುಡಕಟ್ಟುಗಳು ಮೂಲತಃ ರೂಪಿಸಲ್ಪಟ್ಟಿದ್ದವು.[ಸೂಕ್ತ ಉಲ್ಲೇಖನ ಬೇಕು] ತಮಗಿಂತ ಶಕ್ತಿಶಾಲಿಯಾಗಿರುವ ಬುಡಕಟ್ಟುಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಈ ಬುಡಕಟ್ಟುಗಳು ಮೈತ್ರಿಗಳನ್ನು ರೂಪಿಸಿಕೊಂಡವು, ಮತ್ತು ಮಧ್ಯ-ಹೀಯನ್‌ ಅವಧಿಯ ವೇಳೆಗೆ ಜಪಾನಿಯರ ವಿಶಿಷ್ಟವಾದ ರಕ್ಷಾಕವಚ ಮತ್ತು ಆಯುಧಗಳನ್ನು ಸ್ವೀಕರಿಸಿ ಅಳವಡಿಸಿಕೊಂಡವು, ಮತ್ತು ತಮ್ಮ ನೈತಿಕ ಸಂಹಿತೆಯಾದ ಬುಷಿಡೊ ವಿನ ಬುನಾದಿಗಳನ್ನು ಸ್ಥಾಪಿಸಿದವು.[ಸೂಕ್ತ ಉಲ್ಲೇಖನ ಬೇಕು]

ಸಮುರಾಯ್‌ ಯೋಧರು ತಾವು "ಯೋಧನ ಕಾರ್ಯವಿಧಾನ" ಅಥವಾ ಬುಷಿಡೊನ ಅನುಯಾಯಿಗಳೆಂದು ತಮ್ಮನ್ನು ವರ್ಣಿಸಿಕೊಂಡಿದ್ದಾರೆ. ಶೊಗಕುಕಾನ್‌ ಕಕುಗೊ ಡೈಜಿಟೆನ್‌ ಎಂಬ ಹೆಸರಿನ ಜಪಾನೀ ಪದಕೋಶವು ಬುಷಿಡೋವನ್ನು "ಮ್ಯುರೊಮಾಚಿ (ಚುಸೆಯ್‌) ಅವಧಿಯಿಂದ ಯೋಧರ ವರ್ಗದ ಮೂಲಕ ಹಬ್ಬಿಸಲ್ಪಟ್ಟ ಒಂದು ಅನನ್ಯ ತತ್ತ್ವಚಿಂತನೆ (ರೊನ್ರಿ)" ಎಂಬುದಾಗಿ ವ್ಯಾಖ್ಯಾನಿಸಿದೆ. ಯೋಧರ ಪಥವು ಗೌರವಾನ್ವಿತ ಸ್ಥಾನಗಳ ಪೈಕಿ ಒಂದಾಗಿದ್ದು, ಯೋಧನಾದವನು ತನ್ನ ಯಜಮಾನನು ವಹಿಸಿರುವ ಕರ್ತವ್ಯಪಾಲನೆಯ ಕಡೆಗೆ ಹೆಚ್ಚಿನ ಪ್ರಾಶಸ್ತ್ಯ ಕೊಡುವ, ಮತ್ತು ಸಾಯವವರೆಗೂ ಅವನಿಗೆ ನಿಷ್ಠನಾಗಿರುವ ವೈಶಿಷ್ಟ್ಯತೆಯನ್ನು ಅದು ಹೊಂದಿದೆ ಎಂಬ ಭಾವನೆಯನ್ನು ಬಹಳ ಮುಂಚಿನ ಕಾಲದಿಂದಲೂ ಸಮುರಾಯ್‌ ಯೋಧರು ತಳೆದಿದ್ದರು.[೪]

13ನೇ ಶತಮಾನದಲ್ಲಿ, ಹೊಜೋ ಶಿಗೆಟೋಕಿ (1198-1261 A.D.) ಎಂಬಾತ ಹೀಗೆ ಬರೆದ: "ಓರ್ವನು ಅಧಿಕೃತವಾಗಿ ಸೇವೆ ಸಲ್ಲಿಸುತ್ತಿರುವಾಗ ಅಥವಾ ತನ್ನ ಯಜಮಾನನ ಆಸ್ಥಾನದಲ್ಲಿರುವಾಗ, ಒಂದು ನೂರು ಅಥವಾ ಒಂದು ಸಾವಿರ ಜನರ ಬಗ್ಗೆ ಅವನು ಯೋಚಿಸಬಾರದು, ಆದರೆ ತನ್ನ ಯಜಮಾನನ ಪ್ರಾಮುಖ್ಯತೆಯನ್ನು ಮಾತ್ರವೇ ಅವನು ಪರಿಗಣಿಸಬೇಕು."

ಡಾ. ಕಾರ್ಲ್‌ ಸ್ಟೀನ್‌ಸ್ಟ್ರಪ್‌ ಎಂಬಾತ 1979ರಲ್ಲಿ ಹೊಜೋ ಕುರಿತಾಗಿ ತಾನು ಬರೆದ ಪ್ರೌಢಪ್ರಬಂಧದಲ್ಲಿ, "13ನೇ ಮತ್ತು 14ನೇ ಶತಮಾನದ ಯೋಧರ ಬರಹಗಳು (ಗುನ್ಕಿ) ಬುಷಿಯನ್ನು ತಮ್ಮ ಸಹಜನೆಲೆಯಾದ ಯುದ್ಧದಲ್ಲಿ ಚಿತ್ರಿಸಿದ್ದು, ಇಂಥ ಗುಣಗಳನ್ನು ಅಪಾಯ ಲೆಕ್ಕಿಸದ ಎದೆಗಾರಿಕೆ, ಪ್ರಚಂಡವಾದ ಕುಟುಂಬದ ಹೆಮ್ಮೆ, ಮತ್ತು ಸ್ವಾರ್ಥರಹಿತ ಎಂದು ಗುಣಗಾನ ಮಾಡಿವೆ. ಅಷ್ಟೇ ಅಲ್ಲ, ಕೆಲವೊಮ್ಮೆ ತನ್ನ ಯಜಮಾನ ಮತ್ತು ಮನುಷ್ಯನ ಕುರಿತಾದ ಸಂವೇದನಾರಹಿತ ಭಕ್ತಿಯನ್ನೂ ಇದು ಒಳಗೊಂಡಿರುತ್ತದೆ ಎಂದೂ ಅದು ಚಿತ್ರಿಸಿದೆ" ಎಂದು ಉಲ್ಲೇಖಿಸಿದ್ದಾರೆ.

ಶಿಬಾ ಯೊಶಿಮಾಸಾ (1350-1410 A.D.) ರೀತಿಯ ಊಳಿಗಮಾನ್ಯ ಪದ್ಧತಿಯ ಧಣಿಗಳು ತಮ್ಮ ಅಭಿಪ್ರಾಯವನ್ನು ಮಂಡಿಸುತ್ತಾ, ಓರ್ವ ಸೇನಾನಾಯಕ ಅಥವಾ ಚಕ್ರವರ್ತಿಯ ಸೇವೆಯನ್ನು ಮಾಡಿಕೊಂಡಿರುವ ಅವಧಿಯಲ್ಲಿ ಒಂದು ವೈಭವಯುತ ಸಾವನ್ನು ಯೋಧನೋರ್ವ ಎದುರುನೋಡುತ್ತಾನೆ ಎಂದು ಹೇಳಿರುವುದೇ ಅಲ್ಲದೇ, ತಮ್ಮ ಅಭಿಪ್ರಾಯ ಸರಣಿಯನ್ನು ಹೀಗೆ ಮುಂದುವರಿಸುತ್ತಾರೆ: "ಒಬ್ಬನು ಸಾಯಬೇಕೆಂದಿರುವಾಗ ಆ ಕ್ಷಣವನ್ನು ಉಪೇಕ್ಷಿಸುವುದು ಅಥವಾ ನೋಡದೆ-ನಿಲ್ಲದೆ-ದಾಟಿಕೊಂಡುಹೋಗುವುದು ಒಂದು ವಿಷಾದಕರ ಸಂಗತಿ...ಮೊದಲಿಗೆ, ಓರ್ವ ಮನುಷ್ಯ, ಯಾರ ವೃತ್ತಿಯು ಆಯುಧಗಳನ್ನು ಹಿಡಿಯುವುದಾಗಿರುತ್ತದೆಯೋ ಆತ, ಮೊದಲು ಯೋಚಿಸಬೇಕು ಮತ್ತು ನಂತರ ಕಾರ್ಯಪ್ರವೃತ್ತನಾಗಬೇಕು. ಇದು ಕೇವಲ ಅವನ ಕೀರ್ತಿಗೆ ಸಂಬಂಧಿಸಿದಂತೆ ಮಾತ್ರವೇ ಅಲ್ಲದೆ, ಅವನ ಸಂತತಿಯ ಕುರಿತಾಗಿಯೂ ಅನ್ವಯಿಸುತ್ತದೆ. ತನ್ನ ಒಂದು ಮತ್ತು ಏಕೈಕ ಜೀವನವನ್ನು ತೀರಾ ಪ್ರಾಣಭಯದಿಂದ ಹಿಡಿದಿಟ್ಟುಕೊಳ್ಳುವ ಮೂಲಕ, ಆತ ತನ್ನ ಹೆಸರಿಗೆ ಎಂದೆಂದಿಗೂ ಕಳಂಕ ತಂದುಕೊಳ್ಳಬಾರದು....

ತನ್ನ ಜೀವನವನ್ನು ಅನಾವಶ್ಯಕವಾಗಿ ಹಾಳುಮಾಡಿಕೊಳ್ಳುವುದರಲ್ಲಿನ ಒಬ್ಬನ ಮುಖ್ಯ ಉದ್ದೇಶ ಅಡಗಿದ್ದರೆ, ಅದನ್ನು ಚಕ್ರವರ್ತಿಗೋಸ್ಕರ ಅಥವಾ ಓರ್ವ ಸೇನಾಧಿಪತಿಯ ಯಾವುದಾದರೂ ಮಹಾನ್‌ ಹೊಣೆಗಾರಿಕೆಯಲ್ಲಿ ಮಾಡುವುದು ಉಚಿತ. ಇದು ಖಂಡಿತವಾಗಿಯೂ ಒಬ್ಬನ ಸಂತತಿಯ ಮಹಾನ್‌ ಕೀರ್ತಿಗೆ ಕಾರಣವಾಗುತ್ತದೆ."

1582ರಲ್ಲಿ ತನ್ನ ಯಜಮಾನನ ಪರವಾಗಿ ಕದನವೊಂದನ್ನು ಸೋತ ನಂತರ ಸೆಪೂಕು (ಆತ್ಮಹತ್ಯೆ) ಮಾಡಿಕೊಳ್ಳಲು ಜನರಲ್‌ ಅಕಾಷಿ ಗಿದಾಯು ಸಿದ್ಧತೆ ನಡೆಸುತ್ತಿರುವುದು.ಆತ ತನ್ನ ಮರಣ ಪದ್ಯವನ್ನು ಆಗಷ್ಟೇ ಬರೆದಿದ್ದ.

1412 A.D.ಯಲ್ಲಿ, ತನ್ನ ಸೋದರನಿಗೆ ಬುದ್ಧಿವಾದದ ಪತ್ರವೊಂದನ್ನು ಬರೆದ ಇಮಗಾವಾ ಸಡಯೊ, ಒಬ್ಬ ತನ್ನ ಯಜಮಾನನೆಡೆಗಿನ ಕರ್ತವ್ಯಪಾಲನೆಯಲ್ಲಿ ತೋರಿಸಬೇಕಾದ ಪ್ರಾಮುಖ್ಯತೆಯ ಕುರಿತು ಒತ್ತಿಹೇಳಿದ್ದ. ತನ್ನ ಜೀವಮಾನದ ಅವಧಿಯಲ್ಲಿನ ಸೇನೆಯ ಮತ್ತು ಆಡಳಿತಾತ್ಮಕ ಪರಿಣತಿಗಳಿಗೆ ಸಂಬಂಧಿಸಿ ತಾನು ಹೊಂದಿದ್ದ ಸಮತೋಲನ ಸಾಮರ್ಥ್ಯಕ್ಕೆ ಮೆಚ್ಚುಗೆಯನ್ನು ಪಡೆದಿದ್ದ ಮತ್ತು ಅವನ ಬರಹಗಳು ಬಹು ವ್ಯಾಪಕವಾಗಿ ಹಬ್ಬಿದವು. ಅವನ ಪತ್ರಗಳು ಟೊಕುಗವಾ-ಯುಗದ ಕಾನೂನುಗಳಿಗೆ ತಿರುಳಾಗಿ ಪರಿಣಮಿಸಿದವು ಮತ್ತು IIನೇ ಜಾಗತಿಕ ಸಮರವಾಗುವವರೆಗೆ ಸಾಂಪ್ರದಾಯಿಕ ಜಪಾನಿಯರಿಗೆ ಅವು ಅತ್ಯಗತ್ಯ ಅಧ್ಯಯನದ ವಿಷಯವಾಗಿದ್ದವು:

First of all, a samurai who dislikes battle and has not put his heart in the right place even though he has been born in the house of the warrior, should not be reckoned among one's retainers....It is forbidden to forget the great debt of kindness one owes to his master and ancestors and thereby make light of the virtues of loyalty and filial piety....It is forbidden that one should...attach little importance to his duties to his master...There is a primary need to distinguish loyalty from disloyalty and to establish rewards and punishments.

ಇದೇ ರೀತಿಯಲ್ಲಿ, ಊಳಿಗಮಾನ್ಯ ಪದ್ಧತಿಯ ಧಣಿಯಾದ ಟಕೆಡಾ ನೊಬುಷಿಗೆ (1525-1561 A.D.) ಎಂಬಾತ ಕೂಡ ತನ್ನ ಅಭಿಪ್ರಾಯ ಮಂಡಿಸಿದ್ದು ಹೀಗೆ: "ವಿಷಯವು ಮಹತ್ವದ್ದೇ ಇರಲಿ, ಅಥವಾ ಸಣ್ಣದೇ ಇರಲಿ, ತನ್ನ ಯಜಮಾನನ ಆದೇಶಗಳಿಗೆ ಒಬ್ಬನು ತನ್ನ ಬೆನ್ನು ತೋರಿಸಬಾರದು

ಅಥವಾ ಅದರಿಂದ ಹಿಮ್ಮೆಟ್ಟಬಾರದು....

ಓರ್ವನು ತನಗೆ ಕೊಡುಗೆಗಳನ್ನಾಗಲೀ ಅಥವಾ ಉಂಬಳಿಗಳನ್ನಾಗಲೀ ನೀಡುವಂತೆ ತನ್ನ ಯಜಮಾನನನ್ನು ಕೇಳಬಾರದು...ಯಜಮಾನನು ಓರ್ವ ಮನುಷ್ಯನೊಂದಿಗೆ ಎಷ್ಟು ವಿವೇಚನಾಶೂನ್ಯವಾಗಿ ನಡೆದುಕೊಂಡರೂ ಪರವಾಗಿಲ್ಲ, ಅವನು ಅಸಮಾಧಾನಪಟ್ಟುಕೊಳ್ಳಬಾರದು...ಓರ್ವ ಕೈಕೆಳಗಿನವನು ಒಬ್ಬ ಮೇಲಧಿಕಾರಿಯ ಕುರಿತಾಗಿ ತನ್ನ ನಿರ್ಣಯವನ್ನು ನೀಡುವುದಿಲ್ಲ ಅಥವಾ ಟೀಕೆಯನ್ನು ಮಾಡುವುದಿಲ್ಲ"

ನೊಬುಷಿಗೆಯ ಸೋದರನಾದ ಟಕೆಡಾ ಶಿಂಗೆನ್‌ (1521-1573 A.D.) ಎಂಬಾತನೂ ಇದೇ ಬಗೆಯ ವೀಕ್ಷಣೆಗಳನ್ನು ಮಾಡಿದ: "ಯೋಧನೊಬ್ಬನ ಮನೆಯಲ್ಲಿ ಹುಟ್ಟಿದ ವ್ಯಕ್ತಿಯೊಬ್ಬ ತನ್ನ ದರ್ಜೆ ಅಥವಾ ವರ್ಗವೇನೇ ಇರಲಿ, ಸ್ವಾಮಿನಿಷ್ಟೆಯಲ್ಲಿನ ಸೇನಾ ಸಾಹಸಕಾರ್ಯಗಳ ಮತ್ತು ಸಾಧನೆಗಳ ಓರ್ವ ಮನುಷ್ಯನೊಂದಿಗೆ ಮೊದಲು ಸ್ವತಃ ತನ್ನನ್ನು ಪರಿಚಯಿಸಿಕೊಳ್ಳುತ್ತಾನೆ....ಓರ್ವ ಮನುಷ್ಯ ತನ್ನ ಸ್ವಂತ ಹೆತ್ತವರಿಗೆ ಮಕ್ಕಳಿಂದ ಸಲ್ಲಬೇಕಾದ ಶ್ರದ್ಧಾಭಕ್ತಿಗಳನ್ನು ಸಲ್ಲಿಸದಿದ್ದರೆ, ತನ್ನ ಸ್ವಾಮಿಯು ತನಗೆ ವಹಿಸಿದ ತನ್ನ ಕರ್ತವ್ಯಗಳನ್ನೂ ಉಪೇಕ್ಷಿಸುತ್ತಾನೆ ಎಂಬುದು ಎಲ್ಲರಿಗೂ ಗೊತ್ತು. ಇಂಥ ಒಂದು ಉಪೇಕ್ಷೆಯೆಂದರೆ ಅದು ಮನುಷ್ಯತ್ವಡೆಗಿನ ಒಂದು ನಂಬಿಕೆದ್ರೋಹವೆಂದೇ ಅರ್ಥ. ಆದ್ದರಿಂದ ಇಂಥ ಒಬ್ಬ ಮನುಷ್ಯನು 'ಸಮುರಾಯ್‌' ಎಂದು ಕರೆಯಲ್ಪಡಲು ಅನರ್ಹನಾಗಿರುತ್ತಾನೆ" ಎಂಬುದು ಅವನ ಅಭಿಪ್ರಾಯ ಸರಣಿಯಾಗಿತ್ತು.

ಊಳಿಗಮಾನ್ಯ ಪದ್ಧತಿಯ ಧಣಿಯಾದ ಅಸಾಕುರಾ ಯೋಶಿಕಾಗೆ (1428-1481 A.D.) ಎಂಬಾತ ಹೀಗೆ ಬರೆದ: "ಅಸಾಕುರಾನ ಊಳಿಗಮಾನ್ಯ ಅಥವಾ ಕರಾರಿನ ಉಂಬಳಿಯಲ್ಲಿ, ಆನುವಂಶಿಕ ಪ್ರಧಾನ ಆಳುಗಳನ್ನು ಯಾರಾದರೊಬ್ಬರು ನಿರ್ಧರಿಸಬಾರದು. ಓರ್ವ ಮನುಷ್ಯನಿಗೆ ಅವನ ಸಾಮರ್ಥ್ಯ ಹಾಗೂ ಸ್ವಾಮಿನಿಷ್ಠೆಯ ಅನುಸಾರ ಕೆಲಸವನ್ನು ನಿಷ್ಕರ್ಷಿಸಬೇಕು." ರಾಜ್ಯದಲ್ಲಿ ವಾಸವಾಗಿರುವ ಯೋಧರು ಮತ್ತು ಜನಸಾಮಾನ್ಯರನ್ನು ಸ್ನೇಹ-ಸೌಹಾರ್ದಗಳಿಂದ ನಡೆಸಿಕೊಂಡಿದ್ದರಿಂದಲೇ ತನ್ನ ತಂದೆಯು ಅನೇಕ ಯಶಸ್ಸುಗಳನ್ನು ಗಳಿಸಿದ ಎಂಬುದನ್ನೂ ಸಹ ಅಸಾಕುರಾ ಗಮನಿಸಿದ. ತನ್ನ ಸೌಜನ್ಯದ ನಡೆನುಡಿಯನ್ನು ಅವನು ಹೀಗೆ ವ್ಯಕ್ತಪಡಿಸಿದ: "ಅವನಿಗಾಗಿ ಎಲ್ಲರೂ ತಮ್ಮ ಜೀವಗಳನ್ನು ತ್ಯಾಗಮಾಡಲು ಹಾಗೂ ಅವನ ಮಿತ್ರರಾಗಿರಲು ಸಿದ್ಧರಿದ್ದರು."

ಕ್ಯಾಟೊ ಕಿಯೊಮಾಸಾ ಎಂಬಾತ ಸೆಂಗೊಕು ಯುಗದ ಅತ್ಯಂತ ಶಕ್ತಿಶಾಲಿ ಹಾಗೂ ಸುಪ್ರಸಿದ್ಧ ಧಣಿಗಳ ಪೈಕಿ ಒಬ್ಬನಾಗಿದ್ದ. ಕೊರಿಯಾದ ಆಕ್ರಮಣದ (1592-1598) ಅವಧಿಯಲ್ಲಿ ಜಪಾನಿನ ಬಹುಪಾಲು ಪ್ರಮುಖ ಬುಡಕಟ್ಟುಗಳನ್ನು ಅವನು ತನ್ನ ನಿಯಂತ್ರಣದಲ್ಲಿಟ್ಟುಕೊಂಡಿದ್ದ. "ದರ್ಜೆಯನ್ನು ಲೆಕ್ಕಿಸದೆ ಎಲ್ಲಾ ಸಮುರಾಯ್‌ಗಳನ್ನೂ" ಉದ್ದೇಶಿಸಿರುವ ಕೈಪಿಡಿಯೊಂದರಲ್ಲಿ ತನ್ನ ಅನುಯಾಯಿಗಳಿಗೆ ಹೇಳುತ್ತಾ, ಒಬ್ಬ ಯೋಧನ ಜೀವನದಲ್ಲಿನ ಏಕೈಕ ಕರ್ತವ್ಯವೆಂದರೆ "ಉದ್ದನೆಯ ಮತ್ತು ಗಿಡ್ಡನೆಯ ಕತ್ತಿಗಳನ್ನು ಭದ್ರವಾಗಿ ಹಿಡಿಯುವುದು ಮತ್ತು ಸಾಯುವುದೇ" ಆಗಿದೆ ಎಂದು ತಿಳಿಸಿದ. ಅಷ್ಟೇ ಅಲ್ಲ, ಸೇನೆಗೆ ಸಂಬಂಧಿಸಿದ ಶ್ರೇಷ್ಠಕೃತಿಗಳನ್ನು ಅದರಲ್ಲೂ ವಿಶೇಷವಾಗಿ ಸ್ವಾಮಿನಿಷ್ಠೆ ಹಾಗೂ ಹೆತ್ತವರಿಗೆ ಮಕ್ಕಳಿಂದ ಸಲ್ಲಬೇಕಾದ ಶ್ರದ್ಧಾಭಕ್ತಿಗಳ ಕುರಿತಾದ ಹೂರಣವನ್ನು ಒಳಗೊಂಡಿರುವ ಕೃತಿಗಳನ್ನು ಅಧ್ಯಯನ ಮಾಡುವಲ್ಲಿ ಮಹಾನ್‌ ಪ್ರಯತ್ನಗಳನ್ನು ಚಾಲ್ತಿಗೆ ತರಬೇಕೆಂದೂ ಆತ ತನ್ನ ಅನುಯಾಯಿಗಳಿಗೆ ಆದೇಶಿಸಿದ. ಈ ಕೆಳಗೆ ನಮೂದಿಸಲಾಗಿರುವ ಉಕ್ತಿಯಿಂದಾಗಿ ಆತ ಚಿರಪರಿಚಿತನಾಗಿದ್ದಾನೆ:

"ಬುಷಿಡೊಗೆ ಸಂಬಂಧಿಸಿದ ವಿಷಯಗಳ ಕುರಿತು ಮನುಷ್ಯನೊಬ್ಬನು ಪ್ರತಿದಿನವೂ ಅವಲೋಕನ ನಡೆಸದಿದ್ದಲ್ಲಿ ಅಥವಾ ಪರೀಕ್ಷಿಸದಿದ್ದಲ್ಲಿ, ಒಂದು ಕೆಚ್ಚೆದೆಯ ಹಾಗೂ ಪೌರುಷಯುತ ಸಾವನ್ನು ಹೊಂದಲೂ ಸಹ ಅವನಿಗೆ ಕಷ್ಟವಾಗುತ್ತದೆ. ಹೀಗಾಗಿ, ಯೋಧನ ಕರ್ತವ್ಯದ ಕುರಿತಾಗಿ ಓರ್ವನ ಅಂತರಾಳದಲ್ಲಿ ಸದೃಢವಾಗಿ ಕೆತ್ತುವುದು ಅತ್ಯಗತ್ಯವಾಗಿದೆ."

ನಬೆಶಿಮಾ ನವೊಶಿಗೆ (1538-1618 A.D.) ಎಂಬಾತ ಮತ್ತೋರ್ವ ಸೆಂಗೊಕು ಡೈಮ್ಯೊ ಆಗಿದ್ದು, ಕೊರಿಯಾದಲ್ಲಿನ ಕ್ಯಾಟೊ ಕಿಯೊಮಾಸಾದ ಜೊತೆಜೊತೆಗೇ ಹೋರಾಡಿದ. ಕರ್ತವ್ಯವನ್ನು ನಿರ್ವಹಿಸುತ್ತಿರುವಾಗ ಯಾವುದೇ ಮನುಷ್ಯನು ತನ್ನ ದರ್ಜೆಯು ಯಾವುದೇ ಆಗಿರಲಿ, ಕಡೆಪಕ್ಷ ಒಂದು ಬಾರಿಯಾದರೂ ತನ್ನ ಜೀವವನ್ನು ಅಪಾಯಕ್ಕೆ ಒಡ್ಡಿಕೊಂಡಿಲ್ಲ ಎಂದಾದರೆ ಅದಕ್ಕಿಂತ ಅವಮಾನಕರವಾದುದು ಮತ್ತೊಂದಿಲ್ಲ ಎಂದು ಆತ ಹೇಳಿದ. ನಬೆಶಿಮಾನ ಬೋಧನೆಗಳು ಅವನ ಮಗ, ಮೊಮ್ಮಗನಿಗೂ ವರ್ಗಾವಣೆಯಾಗಿದ್ದೇ ಅಲ್ಲದೇ, ತ್ಸುನೆಟೊಮೊ ಯಮಾಮೊಟೋಹಗಾಕುರೆ ಗೆ ಆಧಾರವಾದವು. "ಸಮುರಾಯ್‌ ಜೀವನಶೈಲಿಯು ಹುಚ್ಚುಸಾಹಸದ ಸ್ಥಿತಿಯಲ್ಲಿರುವಂಥಾದ್ದು. ಹತ್ತು ಅಥವಾ ಅದಕ್ಕಿಂತ ಹೆಚ್ಚು ಜನರು ಇಂಥ ಒಬ್ಬ ಮನುಷ್ಯನನ್ನು ಕೊಲ್ಲಲಾರರು" ಎಂಬ ತನ್ನ ಹೇಳಿಕೆಯಿಂದ ಆತ ಅತ್ಯಂತ ಚಿರಪರಿಚಿತನಾಗಿದ್ದಾನೆ.

1561ರಲ್ಲಿ ನಡೆದ ಕವಾನ್‌ಕಾಜಿಮಾ ಕದನ

ಟೋರೈ ಮೊಟೊಟಾಡಾ (1539-1600) ಎಂಬಾತ ಟೊಕುಗವಾ ಇಯೆಸುವಿನ ಬಳಿ ಕೆಲಸಲ್ಲಿದ್ದ ಊಳಿಗಮಾನ್ಯ ಪದ್ಧತಿಯ ಓರ್ವ ಧಣಿಯಾಗಿದ್ದ. ಸೆಕಿಗಹರಾದ ಕದನಕ್ಕೆ ಪೂರ್ವಭಾವಿಯಾಗಿ, ಆತನ ಧಣಿಯು ಪೂರ್ವದಿಕ್ಕಿಗೆ ಮುಂದುವರಿದರೆ, ಈತ ದುರವಸ್ಥೆಗೆ ಪಕ್ಕಾಗಿರುವ ಫುಷಿಮಿ ಕೋಟೆಮನೆಯಲ್ಲಿಯೇ ಉಳಿದುಕೊಳ್ಳಲು ಸ್ವಂತ ಇಚ್ಛೆಯಿಂದ ನಿರ್ಧರಿಸಿದ. ಸದರಿ ಕೋಟೆಮನೆಯು ಕಾಪಾಡಲಾಗದ ಸ್ಥಿತಿಯಲ್ಲಿತ್ತು ಎಂಬುದನ್ನು ಟೋರೈ ಮತ್ತು ಟೊಕುಗವಾ ಇಬ್ಬರೂ ಸಮ್ಮತಿಸಿದರು. ತನ್ನ ಧಣಿಗೆ ಸ್ವಾಮಿನಿಷ್ಠೆಯನ್ನು ತೋರಿಸುವ ನಿಟ್ಟಿನಲ್ಲಿ, ತಾನು ಹಾಗೂ ತನ್ನ ಜನರು ಕೊನೆಯ ಕ್ಷಣದವರೆಗೂ ಹೋರಾಡುವುದಾಗಿ ವಾಗ್ದಾನ ಮಾಡುವ ಮೂಲಕ ಟೋರೈ ಅಲ್ಲೇ ಉಳಿಯಲು ನಿರ್ಧರಿಸಿದ. ಆ ಸಮಯದಲ್ಲಿ ಚಾಲ್ತಿಯಲ್ಲಿದ್ದ ಪದ್ಧತಿಯಂತೆ, ತನ್ನನ್ನು ಅಲ್ಲಿಂದ ಜೀವಂತವಾಗಿ ಕರೆದುಕೊಂಡು ಹೋಗಲಾಗಲು ಅವಕಾಶ ನೀಡುವುದಿಲ್ಲ ಎಂದು ಟೋರೈ ಪ್ರತಿಜ್ಞೆ ಮಾಡಿದ. ನಾಟಕೀಯವಾದ ಒಂದು ಅಂತಿಮ ನಿಲುವಿನಲ್ಲಿ, 2,000 ಜನರ ಒಂದು ಕೋಟೆಯ ರಕ್ಷಕ ಸೈನ್ಯವು, ಇಷಿದಾ ಮಿಟ್ಸುನಾರಿಯ 40,000 ಯೋಧರನ್ನೊಳಗೊಂಡ ಒಂದು ಬೃಹತ್‌ ಸೇನೆಯ ವಿರುದ್ಧ ಹತ್ತುದಿನಗಳವರೆಗೆ ಅಗಾಧವಾದ ಪ್ರತಿಕೂಲ ಸನ್ನಿವೇಶಗಳಿಗೆ ಪ್ರತಿಯಾಗಿ ನೆಲಕಚ್ಚಿಕೊಂಡು ನಿಂತಿತ್ತು. ತನ್ನ ಮಗ ತದಾಮಾಸನಿಗೆ ನೀಡಿದ ಒಂದು ಹೃದಯಸ್ಪರ್ಶಿಯಾದ ಅಂತಿಮ ಹೇಳಿಕೆಯಲ್ಲಿ ಆತ ಹೀಗೆ ಬರೆದ:

"ಅವಮಾನಕ್ಕೆ ಒಳಗಾಗಿರುವುದು ಮತ್ತು ನಿರ್ದಿಷ್ಟವಾಗಿ ಮುಖ್ಯವಲ್ಲದ ಸಂದರ್ಭಗಳ ಅಡಿಯಲ್ಲಿಯೂ ಸಾವನ್ನು ತಪ್ಪಿಸುವುದು ಯೋಧನ ಕಾರ್ಯವಿಧಾನ [ಅಂದರೆ, ಬುಷಿಡೊ] ಅಲ್ಲ. ತನ್ನ ಯಜಮಾನನಿಗೋಸ್ಕರ ಓರ್ವನು ತನ್ನ ಜೀವವನ್ನು ತ್ಯಾಗಮಾಡುವುದೆಂದರೆ ಅದು ಒಂದು ಬದಲಾಯಿಸದಿರುವ ತತ್ತ್ವ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. ಈ ದೇಶದ ಇತರ ಎಲ್ಲಾ ಯೋಧರನ್ನೂ ಮೀರಿಸಿ ನಾನು ಸಾಗುವಂತಾಗಬೇಕು ಮತ್ತು ನನ್ನ ಯಜಮಾನನ ಹಿತಚಿಂತನೆಗಾಗಿ ನನ್ನ ಜೀವವನ್ನು ತ್ಯಜಿಸಬೇಕು ಎಂಬುದು, ನನ್ನ ಕುಟುಂಬಕ್ಕೆ ಗೌರವವನ್ನು ತರುವಂಥ ವಿಷಯವಾಗಿದೆ ಹಾಗೂ ಅನೇಕ ವರ್ಷಗಳಿಂದ ನನ್ನೊಡನಿದ್ದ ನನ್ನ ಅತ್ಯಂತ ತೀವ್ರವಾದ ಹಂಬಲವಾಗಿದೆ."

ಜೊತೆಯನ್ನು ಬಿಟ್ಟು ಬೇರೆ ಬೇರೆ ದಾರಿಗಳನ್ನು ಹಿಡಿಯುವಾಗ ಈ ಇಬ್ಬರೂ ವ್ಯಕ್ತಿಗಳು ಅತ್ತರು ಎಂದು ಹೇಳಲಾಗಿದೆ. ಏಕೆಂದರೆ, ತಾವು ಪರಸ್ಪರರನ್ನು ಮತ್ತೊಮ್ಮೆ ಎಂದಿಗೂ ನೋಡಲಾಗುವುದಿಲ್ಲ ಎಂದು ಅವರಿಗೆ ಗೊತ್ತಿತ್ತು. ಟೋರೈನ ಅಪ್ಪ ಮತ್ತು ತಾತ ಇಬ್ಬರೂ ಟೊಕುಗವಾ ಕುಟುಂಬಕ್ಕೆ ಮುಂಚೆಯೂ ಸೇವೆ ಸಲ್ಲಿಸಿದ್ದರು. ಟೊಕುಗವಾನಿಗಿಂತ ಮುಂಚಿತವಾಗಿ ಮತ್ತು ಅವನ ಸ್ವಂತ ಸೋದರನು ಕದನದಲ್ಲಿ ಆಗಲೇ ಕೊಲ್ಲಲ್ಪಟ್ಟಿದ್ದ ಸಮಯದಲ್ಲಿಯೇ ಅವರ ಸೇವೆ ಸಂದಿತ್ತು. ಟೋರೈನ ನಡೆಗಳು ಜಪಾನಿನ ಇತಿಹಾಸದ ಪಥವನ್ನೇ ಬದಲಿಸಿದವು. ತನ್ನ ಸೇನೆಯಲ್ಲಿ ಹುರುಪುತುಂಬಿ ಯಶಸ್ವಿಯಾಗಿ ಅವರನ್ನು ಜಾಗ್ರತಗೊಳಿಸಿದ ಇಯೆಸು ಟೊಕುಗವಾ, ಸೆಕಿಗಹರಾದಲ್ಲಿ ಜಯಗಳಿಸಿದ.

ಹಗಾಕುರೆ ಯ ಅನುವಾದಕನಾದ ವಿಲಿಯಂ ಸ್ಕಾಟ್‌ ವಿಲ್ಸನ್‌, ಯಮಾಮೊಟೋವನ್ನು ಹೊರತುಪಡಿಸಿದ ಬುಡಕಟ್ಟುಗಳಲ್ಲಿ ಕಂಡುಬರುವ, ಸಾವಿನ ಕುರಿತಾಗಿ ಯೋಧರ ನೀಡುವ ಪ್ರಾಮುಖ್ಯತೆಯ ಉದಾಹರಣೆಗಳನ್ನು ವೀಕ್ಷಿಸಿದ್ದು ಅವನ್ನು ಹೀಗೆ ವಿವರಿಸಿದ್ದಾನೆ: "ಓರ್ವ ಯೋಧನಾಗಿ ಅವನು ಒಬ್ಬ ಕಟ್ಟುನಿಟ್ಟಿನ ಶಿಸ್ತಪಾಲಕನಾಗಿದ್ದ, ಮತ್ತು ಇಬ್ಬರು ಕಾದಾಡುವವರು ಅಥವಾ ಜಗಳಗಂಟರಿಗೆ ಅವನು ಮರಣದಂಡನೆಯ ಶಿಕ್ಷೆಯನ್ನು ವಿಧಿಸಿದ್ದಕ್ಕೆ ಸಂಬಂಧಿಸಿದಂತೆ ಹಗಾಕುರೆ ಯಲ್ಲಿ ಒಂದು ನಿದರ್ಶನ ಸ್ವರೂಪದ ಕಥೆಯಿದೆ. ಅವರಿಗೆ ಈ ಶಿಕ್ಷೆ ಸಿಕ್ಕಿದ್ದು ಅವರು ಕಾದಾಡಿದರು ಎಂಬುದಕ್ಕಲ್ಲ, ಬದಲಿಗೆ ಸಾಯುವವರೆಗೂ ಕಾದಾಡಲಿಲ್ಲ ಎಂಬ ಕಾರಣಕ್ಕೆ." [೫]

ಉಯೆಸುಗಿ ಕೆನ್‌ಶಿನ್‌ (1530-1578) ಎಂಬಾತ ಟಕೆಡಾ ಶಿಂಗೆನ್‌‌‌ನ {1521-1573} ಪ್ರತಿಸ್ಪರ್ಧಿಯಾಗಿದ್ದ. ಉಯೆಸುಗಿ ಕೆನ್‌ಶಿನ್‌ ಓರ್ವ ಇತಿಹಾಸ ಪ್ರಸಿದ್ಧ ಸೆಂಗೊಕು ಸೇನಾನಾಯಕನಾಗಿದ್ದು, ಸೇನೆಗೆ ಸಂಬಂಧಿಸಿದ ಚೀನಿಯರ ಶ್ರೇಷ್ಠಕೃತಿಗಳಲ್ಲಿ ಪರಿಣತಿಯನ್ನು ಸಾಧಿಸಿದ್ದ ಹಾಗೂ "ಯೋಧನ ಕಾರ್ಯವಿಧಾನವನ್ನು ಸಾವಿನೊಂದಿಗೆ ಸಮೀಕರಿಸಿ" ಸಮರ್ಥಿಸಿದ್ದ. ಜಪಾನಿನ ಇತಿಹಾಸಕಾರನಾದ ಡೈಸೆಟ್ಜ್‌ ಟೆಯಿಟಾರೊ ಸುಝುಕಿ ಎಂಬಾತ ಉಯೆಸುಗಿಯ ನಂಬಿಕೆಗಳನ್ನು ತನ್ನ ಮೂಲಗ್ರಂಥ ಪಾಠವಾದ "ಝೆನ್‌ ಅಂಡ್‌ ಜಪಾನೀಸ್‌ ಕಲ್ಚರ್‌" ನಲ್ಲಿ (1959) ಹೀಗೆ ವಿವರಿಸುತ್ತಾನೆ:

"ತಮ್ಮ ಜೀವವನ್ನು ಬಿಡಲು ಹಾಗೂ ಸಾವನ್ನು ಅಪ್ಪಿಕೊಳ್ಳಲು ಮನಸ್ಸಿಲ್ಲದವರು ನಿಜವಾದ ಯೋಧರಲ್ಲ.... ವಿಜಯಿಯಾಗುವ ಆತ್ಮವಿಶ್ವಾಸದೊಂದಿಗೆ ರಣಾಂಗಣಕ್ಕೆ ದೃಢಮನಸ್ಸಿನಿಂದ ನೀವು ಮುನ್ನುಗ್ಗಿದರೆ, ಯಾವುದೇ ಗಾಯವಾಗಲೀ ಮತ್ತೇನೇ ಆಗಲೀ ಇಲ್ಲದೆಯೇ ನೀವು ಮನೆಗೆ ಮರಳುವಿರಿ. ಸಾಯಲು ಸಂಪೂರ್ಣವಾಗಿ ನಿರ್ಧರಿಸಿರುವವರಂತೆ ಕಾಳಗದಲ್ಲಿ ನಿಮ್ಮನ್ನು ತೊಡಗಿಸಿಕೊಂಡಿದ್ದೇ ಆದಲ್ಲಿ, ನೀವು ಜೀವಂತವಾಗಿರುವಿರಿ; ಕದನದಲ್ಲಿ ಬದುಕುಳಿಯಬೇಕು ಎಂಬ ಬಯಕೆಯನ್ನಿಟ್ಟುಕೊಂಡು ಕಾಳಗದಲ್ಲಿ ತೊಡಗಿಸಿಕೊಂಡಲ್ಲಿ, ನೀವು ಸಾವನ್ನಪ್ಪುವುದು ಖಚಿತ. ಮನೆಯನ್ನು ಮತ್ತೆಂದೂ ನೋಡಲಾರೆ ಎಂಬ ದೃಢನಿರ್ಧಾರದಿಂದ ನೀವು ನಿಮ್ಮ ಮನೆಯನ್ನು ಬಿಟ್ಟು ಹೊರಟರೆ, ನೀವು ಮನೆಗೆ ಸುರಕ್ಷಿತವಾಗಿ ಮರಳುತ್ತೀರಿ; ಮನೆಗೆ ಹಿಂದಿರುಗುವ ಯಾವುದೇ ಆಲೋಚನೆಯನ್ನು ಹೊತ್ತುಕೊಂಡು ಮನೆಯನ್ನು ಬಿಟ್ಟರೆ, ನೀವು ಮನೆಗೆ ಎಂದಿಗೂ ಮರಳಲಾರಿರಿ. ಪ್ರಪಂಚವು ಯಾವಾಗಲೂ ಬದಲಾವಣೆಗೆ ತನ್ನನ್ನು ಒಡ್ಡಿಕೊಳ್ಳುತ್ತಿರುತ್ತದೆ ಎಂದು ಆಲೋಚಿಸುವ ಮೂಲಕ ನೀವು ತಪ್ಪನ್ನೇನೂ ಮಾಡದಿರಬಹುದು; ಆದರೆ, ಓರ್ವ ಯೋಧನ ವಿಧಿಯು ಯಾವಾಗಲೂ ನಿಶ್ಚಿತವಾಗಿರುತ್ತದೆಯಾದ್ದರಿಂದ, ಯೋಧನು ಈ ರೀತಿಯ ಆಲೋಚನೆಗಳಿಗೆ ಆಸ್ಪದ ನೀಡಬಾರದು."

ಇಮಗಾವಾದಂಥ ಕುಟುಂಬಗಳು ಯೋಧರ ನೈತಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಅತ್ಯಂತ ಪ್ರಭಾವಶಾಲಿಯಾಗಿದ್ದವು ಮತ್ತು ಇದರ ಕುರಿತು ಇತರ ಧಣಿಗಳು ತಮ್ಮ ಜೀವಿತಾವಧಿಯಲ್ಲಿ ವ್ಯಾಪಕವಾಗಿ ಉಲ್ಲೇಖಿಸುತ್ತಿದ್ದರು. ಇಮಗಾವಾ ಸಡಯೊನ ಬರಹಗಳು ಅತೀವವಾಗಿ ಗೌರವಿಸಲ್ಪಟ್ಟಿದ್ದವು ಹಾಗೂ ಇವನ್ನು ಜಪಾನಿಯರ ಊಳಿಗಮಾನ್ಯ ಪದ್ಧತಿಯ ಕಾನೂನಿನ Archived 2012-10-21 ವೇಬ್ಯಾಕ್ ಮೆಷಿನ್ ನಲ್ಲಿ. ಆಕರವಾಗಿ ಟೊಕುಗವಾ ಇಯೆಸು ಆಶ್ರಯಿಸಿದ್ದ. ಈ ಬರಹಗಳು IIನೇ ಜಾಗತಿಕ ಸಮರವಾಗುವವರೆಗೆ ಸಾಂಪ್ರದಾಯಿಕ ಜಪಾನಿಯರಿಗೆ ಅತ್ಯಗತ್ಯ ಅಧ್ಯಯನದ ವಿಷಯವಾಗಿದ್ದವು:

"ಜಪಾನೀಸ್‌ ಕಲ್ಚರ್‌" (2000) ಎಂಬ ತನ್ನ ಪುಸ್ತಕದಲ್ಲಿ, ಇತಿಹಾಸಕಾರ H. ಪಾಲ್‌ ವಾರ್ಲೆ ಉಲ್ಲೇಖಿಸಿರುವ ಪ್ರಕಾರ, ಜೆಸ್ಯೂಟ್‌ ಪಂಥದ ನಾಯಕ ಸೇಂಟ್‌ ಫ್ರಾನ್ಸಿಸ್‌ ಕ್ಸೇವಿಯರ್‌ (1506-1552) ಜಪಾನ್‌ ಕುರಿತಾದ ವಿವರಣೆಯನ್ನು ಹೀಗೆ ನೀಡಿದ್ದಾನೆ: "ಸಾವಿಗೆ ಹೆದರದ ರಾಷ್ಟ್ರವು ಈ ವಿಶ್ವದಲ್ಲೇ ಎಲ್ಲೂ ಇಲ್ಲ." ಮತ್ತೆ ಮುಂದುವರಿದು ಜನರ ಘನತೆ ಮತ್ತು ನಡವಳಿಕೆಗಳನ್ನು ಕ್ಸೇವಿಯರ್‌ ಹೀಗೆ ವಿವರಿಸುತ್ತಾನೆ: "ತಮ್ಮ ಘನತೆ-ಗೌರವಗಳ ಕುರಿತು ಅತಿ ನಾಜೂಕಿನಿಂದ ಅಥವಾ ಅತಿ ಕಟ್ಟನಿಟ್ಟಾಗಿ ನಡೆದುಕೊಳ್ಳುವ ಜನರ ಪೈಕಿ ಜಪಾನಿಯರನ್ನು ಬಿಟ್ಟರೆ ಪ್ರಪಂಚದಲ್ಲಿ ಬೇರಾರೂ ಇಲ್ಲ ಎಂದು ನಾನು ಭಾವಿಸುತ್ತೇನೆ; ಒಂದೇ ಒಂದು ಅವಮಾನವನ್ನಾಗಲೀ ಅಥವಾ ಕೋಪದಲ್ಲಿ ಆಡಿದ ಒಂದೇ ಒಂದು ಪದವನ್ನಾಗಲೀ ಅವರು ಸಹಿಸುವುದಿಲ್ಲ ಎಂಬುದೇ ನನ್ನ ಅಭಿಪ್ರಾಯದ ಹಿಂದಿರುವ ಕಾರಣ." 1549ನಿಂದ 1551ರವರೆಗಿನ ವರ್ಷಗಳನ್ನು ಜಪಾನಿಯರನ್ನು ಕ್ರೈಸ್ತಮತಕ್ಕೆ ಮತಾಂತರ ಮಾಡುವ ನಿಟ್ಟಿನಲ್ಲಿ ಕ್ಸೇವಿಯರ್‌ ಕಳೆದ. ಅವನು ತನ್ನ ವೀಕ್ಷಣೆಯನ್ನು ಮತ್ತಷ್ಟು ಮುಂದುವರೆಸಿ, " ಜಪಾನಿಯರು ಹೆಚ್ಚು ಧೈರ್ಯಶಾಲಿಗಳಷ್ಟೇ ಅಲ್ಲ, ಚೀನಾ, ಕೊರಿಯಾ, ಟೆರ್ನೇಟ್‌ ಮತ್ತು ಫಿಲಿಪ್ಪೀನ್ಸ್‌‌ನ ಸುತ್ತಮುತ್ತಲೂ ಇರುವ ಇತರ ಎಲ್ಲಾ ರಾಷ್ಟ್ರಗಳ ಜನರಿಗಿಂತಲೂ ಹೆಚ್ಚು ಯುದ್ಧೋತ್ಸಾಹದ ಅಥವಾ ಯುದ್ಧೋಚಿತ ಜನರಾಗಿದ್ದಾರೆ" ಎಂದು ಅಭಿಪ್ರಾಯಪಟ್ಟ.

1547ರ ಡಿಸೆಂಬರ್‌ನಲ್ಲಿ, ಫ್ರಾನ್ಸಿಸ್‌ ಮಲಾಕ್ಕಾದಲ್ಲಿ (ಮಲೇಷಿಯಾ) ಇದ್ದ. ಅಂಜಿರೋ (ಪ್ರಾಯಶಃ ಇದು "ಯಜಿರೋ" ಎಂದು ಉಚ್ಚರಿಸಲ್ಪಡುತ್ತಿತ್ತು) ಎಂಬ ಹೆಸರಿನ ಓರ್ವ ಕಡಿಮೆ-ದರ್ಜೆಯ ಸಮುರಾಯ್‌ನನ್ನು ಅವನು ಭೇಟಿಯಾದ ನಂತರ ಗೋವಾಕ್ಕೆ (ಭಾರತ) ಹಿಂದಿರುಗಲು ಕಾಯುತ್ತಿದ್ದ ಸಂದರ್ಭದಲ್ಲಿ ಅವನು ಮಲಾಕ್ಕಾದಲ್ಲಿ ಇರಬೇಕಾಗಿ ಬಂದಿತ್ತು. ಅಂಜಿರೋ ಕುಲೀನ ಮನೆತನಕ್ಕಾಗಲೀ ಅಥವಾ ಉನ್ನತ ಪದವಿಗಾಗಲೀ ಸೇರಿದವನಾಗಿರಲಿಲ್ಲ ಮತ್ತು ಅವನೇನು ಓರ್ವ ಬುದ್ಧಿಜೀವಿಯಾಗಿರಲಿಲ್ಲ. ಆದರೆ ಚರ್ಚ್‌ನಲ್ಲಿ ಕ್ಸೇವಿಯರ್‌ ಏನೆಲ್ಲಾ ಹೇಳುತ್ತಿದ್ದನೋ ಅವೆಲ್ಲದರ ಟಿಪ್ಪಣಿಗಳನ್ನು ಆತ ಜಾಗರೂಕತೆಯಿಂದ ಮಾಡಿಕೊಳ್ಳುತ್ತಿದ್ದ. ಇದು ಕ್ಸೇವಿಯರ್‌ ಮೇಲೆ ಪ್ರಭಾವ ಬೀರಿತು. ಜಪಾನ್‌ಗೆ ತೆರಳಲು ಕ್ಸೇವಿಯರ್‌ ಕೊಂಚಮಟ್ಟಿಗೆ ನಿರ್ಧರಿಸಿದ. ಏಕೆಂದರೆ, ಜಪಾನಿನ ಜನರು ಅತ್ಯಂತ ಸುಶಿಕ್ಷಿತರು ಹಾಗೂ ಕಲಿಕೆಯಲ್ಲಿ ಅವರಿಗೆ ತೀವ್ರಾಸಕ್ತಿಯಿದೆ ಎಂದು ಈ ಕೆಳ-ದರ್ಜೆಯ ಸಮುರಾಯ್‌ ಅವನನ್ನು ಪೋರ್ಚುಗೀಸ್‌ನಲ್ಲಿ ಮನವೊಲಿಸಿದ. ಅವರು ಕಷ್ಟಪಟ್ಟು ದುಡಿಯುವವರಾಗಿದ್ದರು ಮತ್ತು ಅಧಿಕಾರ ಶಕ್ತಿ ಅಥವಾ ಪ್ರಾಧಿಕಾರವನ್ನು ಅವರು ಗೌರವಿಸುತ್ತಿದ್ದರು. ತಮ್ಮ ಕಾನೂನುಗಳು ಹಾಗೂ ರೂಢಿಗತ ಪದ್ಧತಿಗಳನ್ನು ಅವರು ಸಕಾರಣವಾಗಿ ಅನುಸರಿಸುತ್ತಿದ್ದರು, ಮತ್ತು, ತನ್ನ ನಂಬಿಕೆಯ ಕುರಿತು ಕ್ರೈಸ್ತಧರ್ಮವು ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇ ಆದರೆ, ಅದನ್ನು ಅವರು ಒಂದು ಸಮುದಾಯವಾಗಿ ಅಥವಾ ಗುಂಪಿಗೆ ಗುಂಪೇ ಆಗಿರುವ ರೀತಿಯಲ್ಲಿ ಪುರಸ್ಕರಿಸುವವರಾಗಿದ್ದರು.[೬]

12ನೇ ಶತಮಾನದ ವೇಳೆಗೆ, ಮೇಲ್ದರ್ಜೆಯ ಸಮುರಾಯ್‌ಗಳು ಹೆಚ್ಚಿನ ಮಟ್ಟದಲ್ಲಿ ಅಕ್ಷರಸ್ಥರಾಗಿದ್ದರು. 7ನೇ ಶತಮಾನದಿಂದ 9ನೇ ಶತಮಾನಗಳ ಅವಧಿಯಲ್ಲಿ ಚೀನಾದಿಂದ ಬಂದ ಕನ್‌ಫ್ಯೂಷಿಯನ್‌ ಮತದ ಸಾರ್ವತ್ರಿಕ ಪರಿಚಯಿಸುವಿಕೆಯ ಕಾರಣದಿಂದ, ಹಾಗೂ

ಹೀಯನ್‌ ಅವಧಿಯ ಬಹುಭಾಗಕ್ಕೆ ಸಂಸ್ಕೃತಿ ಹಾಗೂ ಸಾಕ್ಷರತೆಯ ಮೇಲೆ ಒಂದು ಏಕಸ್ವಾಮ್ಯವನ್ನು ಹೊಂದಿದ್ದ ಸಾಮ್ರಾಜ್ಯಶಾಹಿ ರಾಜನ ಆಸ್ಥಾನದೊಂದಿಗೆ ವ್ಯವಹರಿಸುವಲ್ಲಿನ ಅವರ ಗ್ರಹಿಸಲ್ಪಟ್ಟ ಅಗತ್ಯಕ್ಕೆ ಪ್ರತಿಕ್ರಿಯೆಯಾಗಿ ಈ ಸಾಕ್ಷರತೆಯು ಕಂಡುಬಂದಿತ್ತು. ಇದರ ಪರಿಣಾಮವಾಗಿ, ಶ್ರೀಮಂತ ವರ್ಗದವರ ಹೆಚ್ಚು ಸುಸಂಸ್ಕೃತ ಸಾಮರ್ಥ್ಯಗಳಿಗೆ ಏರಬಯಸಿದರು.[೭]

ಯೋಧರು ಕಲೆಗಳನ್ನು ಆದರ್ಶೀಕರಿಸಿದರು ಮತ್ತು ಅವುಗಳಲ್ಲಿ ಪರಿಣತಿಯುಳ್ಳವರ ಸ್ಥಾನಕ್ಕೇರಲು ಬಯಸಿದರು ಎಂಬುದನ್ನು ತೈರಾ ತದನೋರಿಯಂಥ (ಹೀಕೆ ಮೊನೋಗಟಾರಿಯಲ್ಲಿ ಕಾಣಿಸಿಕೊಳ್ಳುವ ಒಬ್ಬ ಸಮುರಾಯ್‌) ಉದಾಹರಣೆಗಳು ನಿರೂಪಿಸುತ್ತವೆ.

ಲೇಖನಿ ಮತ್ತು ಕತ್ತಿಯೊಂದಿಗಿನ ತನ್ನ ಪರಿಣತಿ ಅಥವಾ ಹೋರಾಡುವಿಕೆ ಮತ್ತು ಕಲಿಕೆಯ ಸಾಮರಸ್ಯವಾದ "ಬನ್‌ ಮತ್ತು ಬು" ಎಂಬ ತನ್ನ ಪರಿಣತಿಗೆ ತದನೋರಿ ಪ್ರಸಿದ್ಧನಾಗಿದ್ದ. ಸುಸಂಸ್ಕೃತರಾಗಿ ಮತ್ತು ಅಕ್ಷರಸ್ಥರಾಗಿ ಇರಬೇಕೆಂದು ನಿರೀಕ್ಷಿಸಲ್ಪಡುತ್ತಿದ್ದ ಸಮುರಾಯ್‌ಗಳು "ಬನ್‌ ಬು ರ್ಯೊ ಡೊ" (文武両道, ಇದರ ಅಕ್ಷರಶಃ ಅರ್ಥ: ಸಾಹಿತ್ಯಿಕ ಕಲೆಗಳು, ಸೇನಾ ಕಲೆಗಳು, ಎರಡೂ ವಿಧಾನಗಳು) ಅಥವಾ "ಹೊಂದಾಣಿಕೆಯಲ್ಲಿರುವ ಲೇಖನಿ ಮತ್ತು ಕತ್ತಿ" ಎಂಬ ಎಂಬ ಪ್ರಾಚೀನ ನಾಣ್ಣುಡಿಯನ್ನು ಮೆಚ್ಚಿಕೊಂಡಿದ್ದರು. ಇಡೊ ಅವಧಿಯ ವೇಳೆಗೆ, ಯುರೋಪ್‌ಗಿಂತ ಹೆಚ್ಚಿನ ಪ್ರಮಾಣದ ಸಾಕ್ಷರತಾ ಪ್ರಮಾಣವನ್ನು ಜಪಾನ್‌ ಹೊಂದಿತ್ತು.

ವಾಸ್ತವವಾಗಿ ಈ ಮೇಲ್ಪಂಕ್ತಿಯನ್ನು ಸಾಧಿಸಿದ ಮತ್ತು ಅದರಂತೆಯೇ ತಮ್ಮ ಜೀವನವನ್ನು ಸಾಗಿಸಿದ ಪುರುಷರ ಸಂಖ್ಯೆಯು ಹೆಚ್ಚಾಗಿತ್ತು. ಯೋಧ ಎಂಬುದಕ್ಕಾಗಿದ್ದ ಒಂದು ಮುಂಚಿನ ಪದವಾದ "ಉರುವಾಶೈ" ಎಂಬುದು ಒಂದು ಕಾಂಜೀ ಲಿಪಿಯೊಂದಿಗೆ ಬರೆಯಲ್ಪಡುತ್ತಿತ್ತು. ಈ ಬರಹವು ಸಾಹಿತ್ಯಿಕ ಅಧ್ಯಯನಕ್ಕಾಗಿದ್ದ ("ಬನ್‌" 文) ಅಕ್ಷರಗಳು ಮತ್ತು ಸೇನಾ ಕಲೆಗಳ ("ಬು" 武) ಅಕ್ಷರಗಳೊಂದಿಗೆ ಸಂಯೋಜಿಸುತ್ತಿತ್ತು, ಮತ್ತು ಅದು ಹೀಕೆ ಮೊನೋಗಟಾರಿಯಲ್ಲಿ (12ನೇ ಶತಮಾನದ ಅಂತ್ಯದಲ್ಲಿ) ಉಲ್ಲೇಖಿಸಲ್ಪಟ್ಟಿದೆ. ತೈರಾ ನೊ ತದನೋರಿಯ ಸಾವಿನ ಕುರಿತಾಗಿ ತಾನು ಮಾಡಿರುವ ನಮೂದಿನಲ್ಲಿ ವಿದ್ಯೆಕಲಿತ ಕವಿ-ಕತ್ತಿವರಸೆಗಾರನ ಆದರ್ಶದ ಕುರಿತು ಹೀಕೆ ಮೊನೋಗಟಾರಿ ಉಲ್ಲೇಖಿಸುತ್ತದೆ:

Friends and foes alike wet their sleeves with tears and said,

What a pity! Tadanori was a great general,

pre-eminent in the arts of both sword and poetry.

"ಐಡಿಯಲ್ಸ್‌ ಆಫ್‌ ದಿ ಸಮುರಾಯ್‌" ಎಂಬ ತನ್ನ ಪುಸ್ತಕದಲ್ಲಿ ವಿಲಿಯಂ ಸ್ಕಾಟ್‌ ವಿಲ್ಸನ್‌ ಎಂಬ ಅನುವಾದಕ ಹೀಗೆ ಹೇಳುತ್ತಾನೆ: "ಹೀಕೆ ಮೊನೋಗಟಾರಿ ಯಲ್ಲಿನ ಯೋಧರು ನಂತರದ ತಲೆಮಾರುಗಳ ಸುಶಿಕ್ಷಿತ ಯೋಧರಿಗೆ ಮೇಲ್ಪಂಕ್ತಿಗಳಾಗಿ ನಿಂತರು, ಮತ್ತು ಅವರಿಂದ ಚಿತ್ರಿಸಲ್ಪಟ್ಟ ಆದರ್ಶಗಳು ಕೈಗೆಟುಕುವುದಕ್ಕೂ ಆಚೆಗಿವೆ ಎಂಬ ಗ್ರಹಿಕೆಯನ್ನೇನೂ ಉಂಟುಮಾಡಲಿಲ್ಲ. ಅದರ ಬದಲಿಗೆ, ಈ ಆದರ್ಶಗಳು ಯೋಧರ ವರ್ಗದ ಮೇಲಿನ ಅಂತಸ್ತುಗಳಲ್ಲಿ ಹುರುಪಿನಿಂದ ಪಟ್ಟಾಗಿ ಅನುಸರಿಸಲ್ಪಟ್ಟವು ಮತ್ತು ಆಯುಧಗಳನ್ನು ಹಿಡಿದ ಜಪಾನೀ ಪುರುಷನಿಗೆ ಇದೇ ಸೂಕ್ತವಾದ ಸ್ವರೂಪ ಎಂಬ ಶಿಫಾರಸನ್ನೂ ಮಾಡಲ್ಪಟ್ಟವು. ಹೀಕೆ ಮೊನೋಗಟಾರಿಯೊಂದಿಗೆ, ಸಾಹಿತ್ಯದಲ್ಲಿನ ಜಪಾನೀ ಯೋಧರ ಚಿತ್ರಣವು ತನ್ನ ಸಂಪೂರ್ಣ ವಿಕಸನ ಅಥವಾ ಪರಿಪಕ್ವತೆಯನ್ನು ಪಡೆದುಕೊಂಡಿತು. ಹೀಕೆ ಮೊನೋಗಟಾರಿಯು ತಮ್ಮ ಜನರು ಅನುಸರಿಸಬೇಕಾಗಿರುವ ಒಂದು ಉದಾಹರಣೆ ಎಂದು ಯಾರೆಲ್ಲಾ ಯೋಧರು ಉಲ್ಲೇಖಿಸಿದ್ದಾರೋ ಅವರೆಲ್ಲರ ಬರಹಗಳನ್ನೂ ನಂತರದಲ್ಲಿ ವಿಲ್ಸನ್‌ ಅನುವಾದಿಸಿದ.

ಯೋಧರ ಇಂಥ ಅಸಂಖ್ಯಾತ ಬರಹಗಳು ಈ ಆದರ್ಶವನ್ನು 13ನೇ ಶತಮಾನದಿಂದ ಮುಂದಕ್ಕೆ ದಾಖಲಿಸಿಕೊಂಡು ಬಂದವು. ಬಹುಪಾಲು ಯೋಧರು ಈ ಆದರ್ಶದ ಮಟ್ಟಕ್ಕೆ ಏರಿದರು ಇಲ್ಲವೇ ಅದನ್ನು ಅನುಸರಿಸಿದರು. ಇಲ್ಲದಿದ್ದಲ್ಲಿ ಸಮುರಾಯ್‌ ಸೈನಿಕರಲ್ಲಿ ಯಾವುದೇ ರೀತಿಯ ಒಗ್ಗಟ್ಟು ಸಾಧ್ಯವಾಗುತ್ತಿರಲಿಲ್ಲ.[೮]

ಕಮಾಕುರಾ ಬಕುಫು ಮತ್ತು ಸಮುರಾಯ್‌ನ ಏಳಿಗೆ[ಬದಲಾಯಿಸಿ]

ಜಪಾನಿಯರ ಸಮುರಾಯ್‌ ರಕ್ಷಾಕವಚ (ಓ-ಯೊರಾಯ್‌) (ಹಚಿಸುಕಾ ಬುಡಕಟ್ಟುದ ತೊಸೆಯ್‌ ಗುಸೊಕು)

ಮೂಲತಃ ಚಕ್ರವರ್ತಿ ಮತ್ತು ಶ್ರೀಮಂತ ವರ್ಗದವರು ಈ ಯೋಧರನ್ನು ಕೆಲಸಕ್ಕೆ ನೇಮಿಸಿಕೊಂಡವು. ಸಮುರಾಯ್‌-ಪ್ರಾಬಲ್ಯದ ಮೊಟ್ಟಮೊದಲ ಸರ್ಕಾರವನ್ನು ಸ್ಥಾಪಿಸಲು, ಪರಸ್ಪರರ ನಡುವೆ ವಿವಾಹ-ನೆಂಟಸ್ತಿಕೆಗಳನ್ನು ಏರ್ಪಡಿಸುವ ಮೂಲಕ ಸಾಕಷ್ಟು ಮಾನವ ಬಲ, ಸಂಪನ್ಮೂಲಗಳು ಹಾಗೂ ರಾಜಕೀಯ ಬೆಂಬಲವನ್ನು ಅವರು ಸಮಯಕ್ಕೆ ಸರಿಯಾಗಿ ಒಟ್ಟುಗೂಡಿಸಿದರು.

ಈ ಪ್ರಾದೇಶಿಕ ಬುಡಕಟ್ಟುಗಳ ಶಕ್ತಿಯು ಬೆಳೆತ್ತಾ ಹೋದಂತೆ, ಅವುಗಳ ಪ್ರಮುಖನು ಚಕ್ರವರ್ತಿಯ ವಿಶಿಷ್ಟವಾಗಿ ಓರ್ವ ದೂರದ ಸಂಬಂಧಿಯಾಗಿರುತ್ತಿದ್ದ, ಮತ್ತು ಫ್ಯುಜಿವಾರಾ, ಮಿನಾಮೊಟೋ, ಅಥವಾ ತೈರಾ ಬುಡಕಟ್ಟುಳಲ್ಲಿ ಒಂದರ ಓರ್ವ ಲಘು ಅಥವಾ ಕಿರಿಯ ಸದಸ್ಯನಾಗಿರುತ್ತಿದ್ದ.

ಓರ್ವ ನ್ಯಾಯಾಧಿಪತಿಯಾಗಿ ನಾಲ್ಕು-ವರ್ಷಗಳ ಒಂದು ನಿಶ್ಚಿತ ಅವಧಿಗಾಗಿ ಪ್ರಾಂತೀಯ ಪ್ರದೇಶಗಳಿಗೆ ಮೂಲತಃ ಕಳಿಸಲಾಗಿತ್ತಾದರೂ, ತಮ್ಮ ಅವಧಿಗಳು ಮುಗಿದಾಗ ರಾಜಧಾನಿಗೆ ಹಿಂದಿರುಗಲು ಟೊರ್ಯೊ ಗಳು ನಿರಾಕರಿಸಿದರು. ಅಷ್ಟೇ ಅಲ್ಲ, ಅವರ ಮಕ್ಕಳು ಅವರ ಸ್ಥಾನಗಳನ್ನು ಪಾರಂಪರ್ಯವಾಗಿ ಪಡೆದುಕೊಂಡು ಬುಡಕಟ್ಟುಗಳ ನಾಯಕತ್ವವನ್ನು ಮುಂದುವರಿಸಿದರಲ್ಲದೇ, ಹೀಯನ್‌ ಅವಧಿಯ ಮಧ್ಯಭಾಗ ಮತ್ತು ನಂತರದ ಅವಧಿಯ ಸಮಯದಲ್ಲಿ ಜಪಾನಿನಾದ್ಯಂತ ದಂಗೆಗಳನ್ನು ಅಡಗಿಸುತ್ತಾ ಬಂದರು.

1185ರಲ್ಲಿ ನಡೆದ ಡ್ಯಾನ್‌-ನೊ-ಉರಾದ ನೌಕಾಯುದ್ಧದಲ್ಲಿ ಸಮುರಾಯ್‌ಗಳು ಹೋರಾಡಿದರು. ಅವರ ಸೇನಾಬಲ ಹಾಗೂ ಆರ್ಥಿಕ ಬಲಗಳು ವರ್ಧಿಸುತ್ತಲೇ ಇತ್ತಾದ್ದರಿಂದ, ಸದರಿ ಯೋಧರು ರಾಜನ ಆಸ್ಥಾನದ ರಾಜಕೀಯ ವಲಯಗಳಲ್ಲಿ ಅಂತಿಮವಾಗಿ ಒಂದು ಹೊಸ ಪಡೆಯಾಗಿ ರೂಪುಗೊಂಡರು. ಹೀಯನ್‌ ಅವಧಿಯ ಅಂತ್ಯದಲ್ಲಿ ಹೋಗೆನ್‌ನಲ್ಲಿನ ಅವರ ತೊಡಗಿಸಿಕೊಳ್ಳುವಿಕೆಯು ಅವರ ಅಧಿಕಾರವನ್ನು ಬಲಪಡಿಸಿತು, ಮತ್ತು ಅಂತಿಮವಾಗಿ 1160ರಲ್ಲಿ ನಡೆದ ಹೈಜಿ ದಂಗೆಯಲ್ಲಿ ಪ್ರತಿಸ್ಪರ್ಧಿಗಳಾದ ಮಿನಾಮೊಟೋ ಮತ್ತು ತೈರಾ ಬುಡಕಟ್ಟುಗಳನ್ನು ಅವರು ಪರಸ್ಪರರ ವಿರುದ್ಧ ಹೋರಾಟಕ್ಕಿಳಿಸಿದರು.

ಇದರಲ್ಲಿ ವಿಜಯಿಯಾದ ತೈರಾ ನೊ ಕಿಯೊಮೊರಿ, ಓರ್ವ ಸಾಮ್ರಾಜ್ಯಶಾಹಿ ಸಲಹೆಗಾರನಾದ, ಮತ್ತು

ಇಂಥ ಸ್ಥಾನವನ್ನು ಅಲಂಕರಿಸುವಲ್ಲಿನ ಮೊಟ್ಟಮೊದಲ ಯೋಧ ಎನಿಸಿಕೊಂಡ.  ಮೊಟ್ಟಮೊದಲ ಸಮುರಾಯ್‌-ಪ್ರಾಬಲ್ಯದ ಸರ್ಕಾರವನ್ನು ಸ್ಥಾಪಿಸುವ ಮೂಲಕ ಮತ್ತು ನಾಮ ಮಾತ್ರದ ಪದವಿಗೆ ಚಕ್ರವರ್ತಿಯನ್ನು ಪದಾವನತಿಗೊಳಿಸುವ ಮೂಲಕ ಅಂತಿಮವಾಗಿ ಆತ ಕೇಂದ್ರ ಸರ್ಕಾರದ ಅಧಿಕಾರದ ಹತೋಟಿಯನ್ನು ತನ್ನ ವಶಕ್ಕೆ ತೆಗೆದುಕೊಂಡ.

ಆದಾಗ್ಯೂ, ತನ್ನ ನಂತರದ ಅಥವಾ ಸಂಭಾವ್ಯ ವಾರಸುದಾರನಾದ ಮಿನಾಮೊಟೋಗೆ ಹೋಲಿಸಿದಾಗ, ತೈರಾ ಬುಡಕಟ್ಟು ಇನ್ನೂ ತುಂಬಾ ಸಂಪ್ರದಾಯಶೀಲವಾಗಿತ್ತು. ತನ್ನ ಸೇನಾಬಲವನ್ನು ವಿಸ್ತರಿಸುವ ಅಥವಾ ಬಲಗೊಳಿಸುವ ಬದಲಿಗೆ ತನ್ನ ಮಹಿಳೆಯರು ಚಕ್ರವರ್ತಿಗಳನ್ನು ಮದುವೆಯಾಗಲು ಹಾಗೂ ಚಕ್ರವರ್ತಿಯ ಮೂಲಕ ಅಧಿಕಾರವನ್ನು ಚಲಾಯಿಸಲು ತೈರಾ ಬುಡಕಟ್ಟು ಅನುವುಮಾಡಿಕೊಟ್ಟಿತು.

ತೈರಾ ಮತ್ತು ಮಿನಾಮೊಟೋ ಬುಡಕಟ್ಟುಗಳು 1180ರಲ್ಲಿ ಮತ್ತೊಮ್ಮೆ ಸಂಘರ್ಷಕ್ಕಿಳಿದು, ಗೆಂಪೀ ಯುದ್ಧವನ್ನು ಪ್ರಾರಂಭಿಸಿದವು. ಇದು 1185ರಲ್ಲಿ ಅಂತ್ಯಗೊಂಡಿತು. ವಿಜಯಶಾಲಿಯಾದ ಮಿನಾಮೊಟೋ ನೊ ಯೊರಿಟೊಮೊ, ಆಳುವ ಶ್ರೀಮಂತವರ್ಗದ ಮೇಲಿನ ಸಮುರಾಯ್‌ಗಳ ಶ್ರೇಷ್ಠತೆಯನ್ನು ಸ್ಥಾಪಿಸಿದ. 1190ರಲ್ಲಿ ಆತ ಕ್ಯೋಟೋಗೆ ಭೇಟಿ ನೀಡಿದ, ಮತ್ತು 1192ರಲ್ಲಿ ಸೈ ತೈಶೊಗುನ್‌ ಆಗಿ, ಕಮಾಕುರಾ ಶೊಗುನಾಟೆ, ಅಥವಾ ಕಮಾಕುರಾ ಬಕುಫು ವನ್ನು ಸ್ಥಾಪಿಸಿದ. ಕ್ಯೋಟೋದಿಂದ ಆಳುವ ಬದಲಿಗೆ, ತನ್ನ ಪ್ರಾಬಲ್ಯದ ಮೂಲಠಾಣ್ಯ ಅಥವಾ ಕಾರ್ಯಾಚರಣಾ ಕೇಂದ್ರಕ್ಕೆ ಸಮೀಪದಲ್ಲಿರುವ ಕಮಾಕುರಾದಲ್ಲಿ ಆತ ಶೊಗುನಾಟೆಯನ್ನು ನೆಲೆಗೊಳಿಸಿದ. "ಬಕುಫು" ಎಂದರೆ "ಗುಡಾರದ ಸರ್ಕಾರ" ಎಂದರ್ಥ. ಒಂದು ಸೇನಾ ಸರ್ಕಾರವಾಗಿ ಬಕುಫುವಿನ ಸ್ಥಾನಮಾನದ ಅನುಸಾರ, ಇದನ್ನು ಸೈನಿಕರು ವಾಸಿಸುವ ಪಾಳೆಯ ಅಥವಾ ಶಿಬಿರಗಳಿಂದ ತೆಗೆದುಕೊಳ್ಳಲಾಗಿದೆ.

ಕಾಲಾನಂತರದಲ್ಲಿ, ಶಕ್ತಿವಂತ ಸಮುರಾಯ್‌ ಬುಡಕಟ್ಟುಗಳು ಯೋಧರ ಗೌರವದ ಅಂತಸ್ತನ್ನು, ಅಥವಾ "ಬ್ಯೂಕ್‌ " ಪದವಿಯನ್ನು ಪಡೆದುಕೊಂಡವು. ಬ್ಯೂಕ್‌ ಎಂಬುದು ರಾಜನ ಆಸ್ಥಾನದ ಆಳುವ ಶ್ರೀಮಂತವರ್ಗದ ಅಡಿಯಲ್ಲಿ ಕೇವಲ ನಾಮಮಾತ್ರದ ಪದವಿಯಾಗಿತ್ತು. ಸುಂದರ ಲಿಪಿಗಾರಿಕೆ (ಕ್ಯಾಲಿಗ್ರಫಿ), ಕವನ ಮತ್ತು ಸಂಗೀತದಂಥ ಶ್ರೀಮಂತವರ್ಗದ ಮನರಂಜನೆಗಳನ್ನು ಸ್ವೀಕರಿಸಿ ಅಳವಡಿಸಿಕೊಳ್ಳಲು ಸಮುರಾಯ್‌ಗಳು ಶುರುಮಾಡಿದಾಗ, ಇದಕ್ಕೆ ಪ್ರತಿಯಾಗಿ ರಾಜನ ಆಸ್ಥಾನದ ಕೆಲವೊಂದು ಶ್ರೀಮಂತ ವರ್ಗದವರು ಸಮುರಾಯ್‌ಗಳ ಸಂಪ್ರದಾಯ-ಆಚರಣೆಗಳನ್ನು ಸ್ವೀಕರಿಸಿ ಅಳವಡಿಸಿಕೊಳ್ಳಲು ಶುರುಮಾಡಿದರು. ಹಲವಾರು ಒಳಸಂಚುಗಳು ಹಾಗೂ ಹಲವಾರು ಚಕ್ರವರ್ತಿಗಳಿಂದ ಆದ ಸಂಕ್ಷಿಪ್ತ ಅವಧಿಗಳ ಆಡಳಿತವು ಕಂಡುಬಂದಿತ್ತಾದರೂ, ನಿಜವಾದ ಅಧಿಕಾರವು ಈಗ ಶೋಗನ್‌ ಮತ್ತು ಸಮುರಾಯ್‌ಗಳ ಕೈಗಳಲ್ಲಿತ್ತು.

ಅಶಿಕಾಗಾ ಶೊಗುನಾಟೆ[ಬದಲಾಯಿಸಿ]

ಜಪಾನಿನ ಮೇಲೆ ಮಂಗೋಲಿಯನ್ನರ ಆಕ್ರಮಣಗಳು ನಡೆದ ಸಂದರ್ಭದಲ್ಲಿ, ಮಂಗೋಲಿಯನ್ನರನ್ನು ಎದುರಿಸುತ್ತಿರುವ ಸಮುರಾಯ್‌ ಸುಯೆನಗಾ. ಮೋಕೊ ಶೂರಾಯ್‌ ಎಕೊಟೊಬಾ (蒙古襲来絵詞), ಸುಮಾರು 1293.

ಕಮಾಕುರಾ ಮತ್ತು ಅಶಿಕಾಗಾ ಶೊಗುನಾಟೆಗಳ ಅವಧಿಯಲ್ಲಿ ಹಲವಾರು ಸಮುರಾಯ್‌ ಬುಡಕಟ್ಟುಗಳು ಅಧಿಕಾರಕ್ಕಾಗಿ ಹೆಣಗಾಡಿದವು.

13ನೇ ಶತಮಾನದಲ್ಲಿ ಸಮುರಾಯ್‌ಗಳ ನಡುವೆ ಝೆನ್‌ ಬೌದ್ಧಮತವು ಹರಡಿತು ಮತ್ತು ಅವರ ವರ್ತನೆಯ ಮಟ್ಟಗಳಿಗೊಂದು ನಿರ್ದಿಷ್ಟ ರೂಪವನ್ನು ಕೊಡುವಲ್ಲಿ, ಅದರಲ್ಲೂ ವಿಶೇಷವಾಗಿ ಸಾವಿನ ಮತ್ತು ಕೊಲ್ಲುವಿಕೆಯ ಭಯವನ್ನು ಜಯಿಸುವಲ್ಲಿ ಇದು ನೆರವಾಯಿತು. ಆದರೆ ಜನಸಾಮಾನ್ಯರ ಮಧ್ಯೆ, ದಿವ್ಯ ನೆಲೆಯ ಬೌದ್ಧಮತಕ್ಕೆ ಬೆಂಬಲ ಸಿಕ್ಕಿತ್ತು.

1274ರಲ್ಲಿ, ಚೀನಾದಲ್ಲಿನ ಮಂಗೋಲಿಯನ್ನರಿಂದ-ಸಂಸ್ಥಾಪಿಸಲ್ಪಟ್ಟ ಯುವಾನ್‌ ರಾಜವಂಶವು ಉತ್ತರ ಭಾಗದ ಕ್ಯೂಶೂನಲ್ಲಿ ಜಪಾನ್‌ ಮೇಲೆ ಆಕ್ರಮಣ ಮಾಡಲು ಸುಮಾರು 40,000 ಜನರು ಹಾಗೂ 900 ಹಡಗುಗಳನ್ನು ಒಳಗೊಂಡ ಪಡೆಯೊಂದನ್ನು ಕಳಿಸಿತು. ಈ ಬೆದರಿಕೆಯನ್ನು ಎದುರಿಸಲು ಜಪಾನ್‌ ಕೇವಲ 10,000 ಸಮುರಾಯ್‌ಗಳನ್ನು ಜಮಾವಣೆ ಮಾಡಿತು. ದೊಡ್ಡ ಪ್ರಮಾಣದಲ್ಲಿನ ಚಂಡಮಾರುತದ ಮಳೆಯು ದಂಡತ್ತಿ ಆಕ್ರಮಣ ಮಾಡಿದ ಸೇನೆಗೆ ಅದರ ಆಕ್ರಮಣದಾದ್ಯಂತ ಕಿರುಕೊಳ ಕೊಟ್ಟ ಪರಿಣಾಮವಾಗಿ, ಅಗಾಧವಾಗಿ ಅವಘಡಗಳುಂಟಾಗಿ ಅದು ಆಕ್ರಮಣ ತಡೆಯಲೆಂದು ನಿಯೋಜಿತರಾಗಿದ್ದವರಿಗೆ ನೆರವಾಯಿತು. ಅಂತಿಮವಾಗಿ ಯುವಾನ್‌ ಸೇವೆಯನ್ನು ಹಿಂದಕ್ಕೆ ಕರೆಸಿಕೊಳ್ಳಲಾಯಿತು ಹಾಗೂ ಆಕ್ರಮಣವನ್ನು ರದ್ದುಪಡಿಸಲಾಯಿತು. ಮಂಗೋಲಿಯಾದ ಆಕ್ರಮಣಕಾರರು ಸಣ್ಣ ಸಿಡಿಗುಂಡುಗಳನ್ನು ಬಳಸಿದರು. ಇದು

ಪ್ರಾಯಶಃ ಜಪಾನ್‌ನಲ್ಲಿ ಸಿಡಿಗುಂಡುಗಳು ಮತ್ತು ಕೋವಿಮದ್ದು ಮೊಟ್ಟಮೊದಲ ಬಾರಿಗೆ ಕಾಣಿಸಿಕೊಂಡ ನಿದರ್ಶನವಾಗಿತ್ತು.

ಜಪಾನಿನ ರಕ್ಷಕರು ಅಥವಾ ಆಕ್ರಮಣವನ್ನು ತಡೆಯುವವರು ಹೊಸದಾಗಿ ತಲೆದೋರಬಹುದಾದ ಒಂದು ಆಕ್ರಮಣದ ಸಾಧ್ಯತೆಯನ್ನು ಗುರುತಿಸಿ, 1276ರಲ್ಲಿ ಹಕಾಟಾ ಕೊಲ್ಲಿಯ ಸುತ್ತ ಒಂದು ಮಹಾನ್‌ ಗಾತ್ರದ ಕಲ್ಲಿನ ಪ್ರತಿಬಂಧಕ ಗೋಡೆ ಅಥವಾ ಗಡಿಕೋಟೆಯನ್ನು ಕಟ್ಟಲು ಶುರುಮಾಡಿದರು. 1277ರಲ್ಲಿ ಸಂಪೂರ್ಣಗೊಂಡ ಈ ಗೋಡೆಯು, ಸದರಿ ಕೊಲ್ಲಿಯ ಗಡಿಯ ಸುತ್ತಲೂ 20 ಕಿಲೋಮೀಟರುಗಳವರೆಗೆ ಚಾಚಿಕೊಂಡಿತ್ತು. ಇದೇ ಗೋಡೆಯು ನಂತರದ ದಿನಗಳಲ್ಲಿ ಮಂಗೋಲರ ದಾಳಿಗೆ ಪ್ರತಿಯಾಗಿ ಒಂದು ಸದೃಢವಾದ ರಕ್ಷಣಾತ್ಮಕ ಭೂಶಿರದ ಪಾತ್ರವನ್ನು ವಹಿಸಿತು. ವಿವಾದಿತ ವಿಷಯಗಳನ್ನು ಒಂದು ರಾಜತಾಂತ್ರಿಕ ಸಂಧಾನಮಾರ್ಗದಲ್ಲಿ ಇತ್ಯರ್ಥಗೊಳಿಸಲು ಮಂಗೋಲರು 1275ರಿಂದ 1279ರವರೆಗೆ ಪ್ರಯತ್ನಿಸಿದರು. ಆದರೆ ಜಪಾನ್‌ಗೆ ಕಳಿಸಲ್ಪಟ್ಟ ಪ್ರತಿ ದೂತ ಅಥವಾ ನಿಯೋಗಿಯನ್ನು ಗಲ್ಲಿಗೇರಿಸಲಾಯಿತು. ಇದು ಜಪಾನಿನ ಇತಿಹಾಸದಲ್ಲಿನ ಅತ್ಯಂತ ಪ್ರಸಿದ್ಧ ದ್ವಂದ್ವಯುದ್ಧಗಳ ಪೈಕಿ ಒಂದಕ್ಕಾಗಿ ವೇದಿಕೆಯನ್ನು ಸೃಷ್ಟಿಸಿತು.

1281ರಲ್ಲಿ, 140,000 ಮಂದಿ ಜನರು ಹಾಗೂ 5,000 ಹಡಗುಗಳನ್ನು ಒಳಗೊಂಡ ಯುವಾನ್‌ ಸೇನೆಯೊಂದು ಜಪಾನಿನ ಮತ್ತೊಂದು ಆಕ್ರಮಣಕ್ಕಾಗಿ ಜಮಾವಣೆಗೊಂಡಿತು.

ಉತ್ತರಭಾಗದ ಕ್ಯೂಶೂದ ರಕ್ಷಣೆಗಾಗಿ 40,000 ಜನರನ್ನೊಳಗೊಂಡ ಜಪಾನಿಯರ ಸೇನೆಯೊಂದು ನಿಯೋಜಿಸಲ್ಪಟ್ಟಿತು. ಮಂಗೋಲರ ಸೇನೆಯು ತನ್ನ ಹಡಗುಗಳಲ್ಲೇ ಇದ್ದುಕೊಂಡು ದಡ ಸೇರುವಿಕೆಯ ಕಾರ್ಯಾಚರಣೆಗೆ ಸಿದ್ಧತೆಯನ್ನು ನಡೆಸುತ್ತಿರುವಾಗ, ಉತ್ತರ ಕ್ಯೂಶೂ ದ್ವೀಪದ ಮೇಲೆ ತೂಫಾನೊಂದು ಅಪ್ಪಳಿಸಿತು. ಸದರಿ ತೂಫಾನು ಉಂಟುಮಾಡಿದ ಅವಘಡಗಳು ಹಾಗೂ ಹಾನಿಯ ಜೊತೆಗೆ, ನಂತರದಲ್ಲಿ ಹಕಾಟಾ ಕೊಲ್ಲಿಯ ಪ್ರತಿಬಂಧಕ ಗೋಡೆಯ ಜಪಾನೀ ರಕ್ಷಕರಿಂದ ಆದ ಆಕ್ರಮಣ ನಿರೋಧದಿಂದಾಗಿ ಮಂಗೋಲರು ತಮ್ಮ ಸೇನೆಗಳನ್ನು ಮತ್ತೊಮ್ಮೆ ಹಿಂದಕ್ಕೆ ಕರೆಸಿಕೊಳ್ಳುವಂತಾಯಿತು.
ಹಕಾಟಾದಲ್ಲಿನ ಸಮುರಾಯ್‌ ಮತ್ತು ರಕ್ಷಣಾತ್ಮಕ ಗೋಡೆ.ಮೋಕೊ ಶೂರಾಯ್‌ ಎಕೊಟೊಬಾ, (蒙古襲来絵詞) ಸುಮಾರು 1293.

ಮಂಗೋಲ್‌ ಆಕ್ರಮಣಕಾರರು ಜಪಾನಿಯರ ಸಂಖ್ಯೆಯನ್ನೂ ಮೀರಿಸುವಂತೆ ಬೃಹತ್‌ ಸಂಖ್ಯೆಯಲ್ಲಿದ್ದರಾದರೂ, 1274ರಲ್ಲಿ ಕಂಡುಬಂದ ಚಂಡಮಾರುತದ ಮಳೆಗಳು ಹಾಗೂ 1281ರಲ್ಲಿ ಕಂಡುಬಂದ ತೂಫಾನು ಅವರನ್ನು ಹಿಮ್ಮೆಟ್ಟಿಸುವಲ್ಲಿ ಜಪಾನಿನ ಸಮುರಾಯ್‌ ರಕ್ಷಕರಿಗೆ ನೆರವಾದವು. ಈ ಬಿರುಗಾಳಿಗಳು ಕಮಿ-ನೊ-ಕಝೆ ಎಂದು ಚಿರಪರಿಚಿತವಾದವು. ಇದರ ಅಕ್ಷರಶಃ ಅನುವಾದ "ದೇವರುಗಳ ಮಾರುತ" ಎಂದಾಗುತ್ತದೆ. ಹಲವು ಬಾರಿ ಇದಕ್ಕೆ "ದಿವ್ಯ ಮಾರುತ" ಎಂಬ ಒಂದು ಸರಳೀಕೃತ ಅನುವಾದವನ್ನೂ ನೀಡಲಾಗಿದೆ. ಜಪಾನಿಯರ ಭೂಭಾಗಗಳು ನಿಸ್ಸಂದೇಹವಾಗಿ ದಿವ್ಯವಾಗಿವೆ ಮತ್ತು ಅಲೌಕಿಕ ರಕ್ಷಣೆಯ ಅಡಿಯಲ್ಲಿವೆ ಎಂಬ ಅವರ ನಂಬಿಕೆಗೆ ಈ ಕಮಿ-ನೊ-ಕಝೆ ಯು ಮತ್ತಷ್ಟು ಪುಷ್ಟಿಯನ್ನು ನೀಡಿತು.

14ನೇ ಶತಮಾನದಲ್ಲಿ, ಮಸಾಮುನೆ ಎಂಬ ಹೆಸರಿನ ಓರ್ವ ಕಮ್ಮಾರ, ಕತ್ತಿಗಳಲ್ಲಿ ಬಳಸಲು ಹೊಂದಿಕೆಯಾಗುವಂಥ ಮೆದುವಾದ ಮತ್ತು ಗಡುಸಾದ ಉಕ್ಕಿನ ಒಂದು ಎರಡು-ಪದರದ ರಚನೆಯನ್ನು ಅಭಿವೃದ್ಧಿಪಡಿಸಿದ. ಈ ರಚನೆಯು ಹೆಚ್ಚು ಸುಧಾರಿತ ಕತ್ತರಿಸುವ ಶಕ್ತಿ ಹಾಗೂ ಸಹಿಷ್ಣುತೆಯನ್ನು ನೀಡಿತು, ಹಾಗೂ ಜಪಾನಿಯರ ಕತ್ತಿಗಳು (ಕಟಾನಾ) ಕೈಗಾರಿಕಾ ಪೂರ್ವದ ಪೂರ್ವ ಏಷ್ಯಾದ ಅತ್ಯಂತ ಪ್ರಬಲವಾದ, ಕೈನಲ್ಲಿ ಬಳಸುವ ಆಯುಧಗಳ ಪೈಕಿ ಕೆಲವೆಂದು ಗುರುತಿಸಲ್ಪಡುವಲ್ಲಿ ಇದರ ಉತ್ಪಾದನಾ ಕೌಶಲವು ನೆರವಾಯಿತು. ಈ ಕೌಶಲವನ್ನು ಬಳಸಿ ತಯಾರಾದ ಅನೇಕ ಕತ್ತಿಗಳು ಪೂರ್ವ ಚೀನಾದ ಸಮುದ್ರದ ಆಚೆಗೆ ರಫ್ತುಗೊಂಡವು, ಮತ್ತು ಅವುಗಳ ಪೈಕಿ ಕೆಲಭಾಗವು ಭಾರತದಷ್ಟು ದೂರದವರೆಗೂ ಬಂತು.

14ನೇ ಶತಮಾನಕ್ಕೆ ಮುಂಚೆಯೇ ಕಾನೂನಿನಿಂದ ನಿರ್ದಿಷ್ಟವಾಗಿ ಸೂಚಿಸಲ್ಪಟ್ಟಿದ್ದ ಅನುಕ್ರಮ ಉತ್ತರಾಧಿಕಾರದ ವಿಭಜನೆಗೆ ತದ್ವಿರುದ್ಧವಾಗಿ, ಜ್ಯೇಷ್ಠಾಧಿಕಾರವು ಸರ್ವೇಸಾಮಾನ್ಯವಾಗಿ ರೂಪುಗೊಂಡಿದ್ದರಿಂದಾಗಿ, ಉತ್ತರಾಧಿಕಾರದ ವಿವಾದಗಳು ಕುಟುಂಬದೊಳಗೆ ಘರ್ಷಣೆಯನ್ನು ಹುಟ್ಟುಹಾಕಿದವು. ಅಂತಃಕಲಹವನ್ನು ತಪ್ಪಿಸುವ ಸಲುವಾಗಿ, ನೆರೆಹೊರೆಯ ಸಮುರಾಯ್‌ ಭೂಪ್ರದೇಶಗಳ ಆಕ್ರಮಣಗಳು ಸಾಮಾನ್ಯವಾದವು ಮತ್ತು ಸಮುರಾಯ್‌ಗಳ ನಡುವಿನ ಸಣ್ಣಪುಟ್ಟ ಜಗಳಗಳು ಕಮಾಕುರಾ ಮತ್ತು ಅಶಿಕಾಗಾ ಶೊಗುನಾಟೆಗಳಿಗೆ ಒಂದು ನಿರಂತರವಾದ ಸಮಸ್ಯೆಯಾಗಿಹೋಯಿತು.

ಇತರ ಸಾಮಾಜಿಕ ಸ್ತರದೊಳಗೆ ಹುಟ್ಟಿ ತಮ್ಮನ್ನು ತಾವು ಯೋಧರೆಂದು ಕರೆದುಕೊಂಡ ಹಾಗೂ ಈ ರೀತಿಯಲ್ಲಿ ನಿಜವಾದ ಸಮುರಾಯ್‌ಗಳೆಂದು ರೂಪುಗೊಂಡ ಜನರಿಂದಾಗಿ ಸಮುರಾಯ್‌ ಸಂಸ್ಕೃತಿಯ ಬಿಗಿಯ ಕುಗ್ಗಿಸುವಿಕೆಯಿಂದ ಸೆಂಗೊಕು ಜಿದಾಯಿ ("ಪರಸ್ಪರ ವಿರೋಧಿ-ಸಂಸ್ಥಾನಗಳ ಅವಧಿ") ಗುರುತಿಸಲ್ಪಟ್ಟಿತು. ಈ ಪ್ರಕ್ಷುಬ್ಧ ಅವಧಿಯಲ್ಲಿ, ಸಾರ್ವಜನಿಕ ಸುವ್ಯವಸ್ಥೆಯನ್ನು ಹತೋಟಿಗೆ ತರುವಲ್ಲಿ ಹಾಗೂ ನಿರ್ವಹಿಸುವಲ್ಲಿ ಬುಷಿಡೊವಿನ ನೈತಿಕ ಮೌಲ್ಯಗಳು ಪ್ರಮುಖ ಅಂಶಗಳಾಗಿ ಪರಿಣಮಿಸಿದವು.

ಜಪಾನಿಯರ ಯೋಜನಾ ತಂತ್ರಗಳು ಹಾಗೂ ತಂತ್ರಜ್ಞಾನಗಳು 15ನೇ ಮತ್ತು 16ನೇ ಶತಮಾನದಲ್ಲಿ ಕ್ಷಿಪ್ರವಾಗಿ ಸುಧಾರಣೆಗೊಂಡವು. ಅಶಿಗರು ("ಹಗುರ-ಪಾದ," ಅವವುಗಳ ಹಗುರವಾದ ರಕ್ಷಾಕವಚದ ಕಾರಣದಿಂದಾಗಿ) ಎಂದು ಕರೆಯಲಾಗುವ,

ನಗಯಾರಿ ಯೊಂದಿಗಿನ (ಒಂದು ಉದ್ದನೆಯ ಭರ್ಜಿ) ಅಥವಾ (ನಗಿನಾಟಾ) ಸಾಮಾನ್ಯ ಜನರು ಅಥವಾ ವಿನೀತ ಯೋಧರಿಂದ ರೂಪುಗೊಂಡ ಬೃಹತ್‌ ಸಂಖ್ಯೆಗಳಲ್ಲಿನ ಕಾಲಾಳು ಪಡೆಯ ಬಳಕೆಯನ್ನು ಪರಿಚಯಿಸಲಾಯಿತು ಮತ್ತು ಅದನ್ನು ವ್ಯೂಹರಚನೆಯಲ್ಲಿ ಅಶ್ವಸೈನ್ಯದೊಂದಿಗೆ ಸಂಯೋಜಿಸಲಾಯಿತು. ಸಂಗ್ರಾಮದಲ್ಲಿ ಕಾರ್ಯಾಚರಣೆಗೆ ಸನ್ನದ್ಧಗೊಳಿಸಲಾದ ಜನರ ಸಂಖ್ಯೆಯು ಸಾವಿರಗಳಿಂದ ನೂರಾರು ಸಾವಿರಾರು ಸಂಖ್ಯೆಗಳವರೆಗೆ ಮುಟ್ಟಿತು.
ನಾನ್‌ಬನ್‌ (ಪಾಶ್ಚಿಮಾತ್ಯ)-ಶೈಲಿಯ ಸಮುರಾಯ್‌ ಎದೆಗವಚ, 16ನೇ ಶತಮಾನ.

ಹಳೆಕೋವಿ ಎಂದು ಕರೆಯಲ್ಪಟ್ಟ ಸರಬತ್ತಿಯ ಒಂದು ಬಂದೂಕು, 1543ರಲ್ಲಿ ಚೀನಿಯರ ಒಂದು ಕಡಲುಗಳ್ಳನ ಹಡಗಿನ ಮೂಲಕ ಪೋರ್ಚುಗೀಸರಿಂದ ಪರಿಚಯಿಸಲ್ಪಟ್ಟಿತು ಮತ್ತು ಒಂದು ದಶಕದೊಳಗಾಗಿ ಇದರ ತಂತ್ರಜ್ಞಾನವನ್ನು ಮೈಗೂಡಿಸಿಕೊಳ್ಳುವಲ್ಲಿ ಜಪಾನಿಯರು ಯಶಸ್ವಿಯಾದರು. ರಾಶಿಗಟ್ಟಲೆ-ಉತ್ಪಾದನೆ ಮಾಡಲ್ಪಟ್ಟ ತಯಾರಾದ ಹಳೆಕೋವಿಗಳೊಂದಿಗಿನ ವಿದೇಶ ಸೇವೆಯಲ್ಲಿರುವ ಕೂಲಿ ಸೈನಿಕರ ಗುಂಪುಗಳು ಒಂದು ನಿರ್ಣಾಯಕ ಪಾತ್ರವನ್ನು ವಹಿಸಲು ಶುರುಮಾಡಿದವು.

ಊಳಿಗಮಾನ್ಯ ಪದ್ಧತಿಯ ಅವಧಿಯ ಅಂತ್ಯದ ವೇಳೆಗೆ, ಹಲವು ನೂರಾರು ಸಾವಿರಾರು ಬಂದೂಕುಗಳು ಜಪಾನ್‌ನಲ್ಲಿ ಅಸ್ತಿತ್ವದಲ್ಲಿದ್ದವು ಮತ್ತು 100,000ಕ್ಕೂ ಮೀರಿದ ಬೃಹತ್‌ ಸಂಖ್ಯೆಯ ಸೈನಿಕರು ಕದನಗಳಲ್ಲಿ ಕಾದಾಟವನ್ನು ನಡೆಸಿದರು. ಹೋಲಿಕೆಯ ದೃಷ್ಟಿಯಿಂದ ಹೇಳುವುದಾದರೆ, ಯುರೋಪ್‌ನಲ್ಲಿನ ಅತ್ಯಂತ ದೊಡ್ಡ ಹಾಗೂ ಅತ್ಯಂತ ಶಕ್ತಿಶಾಲಿ ಸೇನೆಯಾದ ಸ್ಪ್ಯಾನಿಷ್‌ ಸೇನೆಯು ಕೇವಲ ಹಲವು ಸಾವಿರ ಬಂದೂಕುಗಳನ್ನಷ್ಟೇ ಹೊಂದಿದ್ದು ಕೇವಲ 30,000 ಸೇನಾ ತುಕಡಿಗಳನ್ನು ಜಮಾವಣೆಗೊಳಿಸುವ ಸಾಮರ್ಥ್ಯವನ್ನು ಹೊಂದಿತ್ತು.

1590ರಲ್ಲಿ, ಹಾಗೂ ಮತ್ತೊಮ್ಮೆ 1598ರಲ್ಲಿ, ಚೀನಾದ (唐入り) ಮೇಲೆ ಆಕ್ರಮಣ ಮಾಡಲು ಟೊಯೊಟೊಮಿ ಹಿಡೆಯೊಶಿ ನಿರ್ಧರಿಸಿದ ಮತ್ತು 160,000 ರೈತರು ಹಾಗೂ ಸಮುರಾಯ್‌‌ಗಳನ್ನು ಒಳಗೊಂಡ ಸೇನೆಯೊಂದನ್ನು ಕೊರಿಯಾಗೆ ಕಳುಹಿಸಿದ.(ಹಿಡೆಯೊಶಿಯ ಕೊರಿಯಾದ ಆಕ್ರಮಣಗಳು, 朝鮮征伐). ಹಳೆಕೋವಿಯ ಬಳಕೆಯಲ್ಲಿ ತಾವು ಸಾಧಿಸಿದ್ದ ಪರಿಣತಿಯ ಪ್ರಯೋಜನವನ್ನು ಪಡೆಯುವುದರ ಮೂಲಕ, ಜಪಾನೀ ಸಮುರಾಯ್‌ಗಳು ಯುದ್ಧವನ್ನು ಹೆಚ್ಚೂಕಮ್ಮಿ ವಿಜಯದ ಬಾಗಿಲಿಗೆ ತಂದು ನಿಲ್ಲಿಸಿದ್ದರು. ಆದರೆ ಮಿಂಗ್‌ ಚೀನಿಯರ ಸೇನಾ ತುಕಡಿಗಳ ಪ್ರವೇಶವಾದ ಕಾರಣದಿಂದ ಅವರು ಅದನ್ನು ಸಾಧಿಸಲಾಗಲಿಲ್ಲ. ಕಟೋ ಕಿಯೊಮಾಸಾ, ಕೊನಿಶಿ ಯುಕಿನಾಗಾ, ಮತ್ತು ಶಿಮಾಝು ಯೋಶಿಹಿರೋ ಮೊದಲಾದವರು ಈ ಯುದ್ಧದ ಅತ್ಯಂತ ಪ್ರಸಿದ್ಧ ಸಮುರಾಯ್‌ ಸೈನ್ಯಾಧಿಪತಿಗಳ ಪೈಕಿ ಕೆಲವರಾಗಿದ್ದರು.

ಪ್ರಾಚೀನ ಪ್ರಭುತ್ವವು ಕುಸಿದಿದ್ದರಿಂದ ಮತ್ತು ಇದರ ಫಲವಾಗಿ ಹೊರಹೊಮ್ಮಿದ ಸಮುರಾಯ್‌ಗಳು ತನ್ನ ಪ್ರಭಾವವಿರುವ ಕ್ಷೇತ್ರಗಳಲ್ಲಿ ಬೃಹತ್‌ ಪ್ರಮಾಣದ ಸೇನಾ ಹಾಗೂ ಆಡಳಿತಾತ್ಮಕ ಸಂಘಟನೆಗಳನ್ನು ನಿರ್ವಹಿಸಬೇಕಾಗಿ ಬಂದದ್ದರಿಂದ, ಸಾಮಾಜಿಕ ಚಲನಶೀಲತೆಯು ಹೆಚ್ಚಿನ ಪ್ರಮಾಣದಲ್ಲಿತ್ತು. 19ನೇ ಶತಮಾನದವರೆಗೆ ಉಳಿದಿದ್ದ ಬಹುಪಾಲು ಸಮುರಾಯ್‌ ಕುಟುಂಬಗಳು ಈ ಯುಗದಲ್ಲೇ ಹುಟ್ಟಿದವಾಗಿದ್ದು, ಮಿನಾಮೊಟೋ, ತೈರಾ, ಫ್ಯುಜಿವಾರಾ ಮತ್ತು ತಚಿಬಾನಾ ಎಂಬ ನಾಲ್ಕು ಪ್ರಾಚೀನ ಪ್ರಸಿದ್ಧ ಬುಡಕಟ್ಟುಗಳ ಪೈಕಿ ಒಂದರ ರಕ್ತವು ತಮ್ಮಲ್ಲಿ ಹರಿಯುತ್ತಿದೆ ಎಂದು ಅವು ಸ್ವತಃ ತಮ್ಮ ಕುರಿತು ಘೋಷಿಸಿಕೊಂಡವು. ಆದಾಗ್ಯೂ, ಬಹುತೇಕ ನಿದರ್ಶನಗಳಲ್ಲಿ, ಈ ಸಮರ್ಥನೆಯನ್ನು ಸಾಬೀತು ಮಾಡುವುದು ಕಷ್ಟ.

ಒಡಾ, ಟೊಯೊಟೊಮಿ ಮತ್ತು ಟೊಕುಗವಾ[ಬದಲಾಯಿಸಿ]

ಒಡಾ ನೊಬುನಾಗಾ ಎಂಬಾತ

ನಗೋಯಾ ಪ್ರದೇಶದ (ಹಿಂದೆ ಇದನ್ನು ಒವಾರಿ ಪ್ರಾಂತ್ಯ ಎಂದು ಕರೆಯಲಾಗುತ್ತಿತ್ತು) ಚಿರಪರಿಚಿತ ಧಣಿಯಾಗಿದ್ದ ಮತ್ತು ಸೆಂಗೊಕು ಅವಧಿಯ ಓರ್ವ ಸಮುರಾಯ್‌ಗೆ ಒಂದು ಅಸಾಧಾರಣವಾದ ಅಥವಾ ಅಪವಾದಾತ್ಮಕವಾದ ಉದಾಹರಣೆಯಾಗಿದ್ದ. ಒಂದು ಹೊಸ ಬಕುಫುವಿನ (ಶೊಗುನಾಟೆ) ಅಡಿಯಲ್ಲಿ ಜಪಾನಿನ ಪುನರೇಕೀಕರಣದ ಕೆಲವೇ ವರ್ಷಗಳೊಳಗೆ ಅವನು ಬಂದ, ಮತ್ತು ತನ್ನ ಉತ್ತರಾಧಿಕಾರಿಗಳು ಅನುಸರಿಸಲು ಅನುವಾಗುವಂಥ ಪಥವೊಂದನ್ನು ನಿರ್ಮಿಸಿದ.

ಸಂಘಟನೆ ಹಾಗೂ ಯುದ್ಧದ ವ್ಯೂಹರಚನಾ ತಂತ್ರಗಾರಿಕೆಗಳ ಕ್ಷೇತ್ರದಲ್ಲಿ ಒಡಾ ನೊಬುನಾಗಾ ಹೊಸ ಮಾರ್ಪಾಟುಗಳನ್ನು ತಂದದ್ದೇ ಅಲ್ಲದೇ, ಹಳೆಕೋವಿಗಳನ್ನು ದೊಡ್ಡ ಪ್ರಮಾಣದಲ್ಲಿ ಬಳಸಿದ, ವ್ಯಾಪಾರ-ವ್ಯವಹಾರ ಹಾಗೂ ಉದ್ಯಮವನ್ನು ಅಭಿವೃದ್ಧಿಪಡಿಸಿ, ಹೊಸ ಮಾರ್ಪಾಟುಗಳನ್ನು ಭದ್ರವಾಗಿ ಶೇಖರಿಸಿಟ್ಟ. ಅಶಿಕಾಗಾ ಬಕುಫುವಿನ ಅಂತ್ಯವನ್ನು ನೆರವೇರಿಸುವಲ್ಲಿ ಹಾಗೂ ಬೌದ್ಧ ಸನ್ಯಾಸಿಗಳ ಸೇನಾ ಅಧಿಕಾರಗಳನ್ನು ನಿರಸ್ತ್ರೀಕರಣಗೊಳಿಸುವಲ್ಲಿ ಅನುಕ್ರಮವಾಗಿ ಬಂದ ವಿಜಯಗಳು ಅವನಿಗೆ ಅನುವುಮಾಡಿಕೊಟ್ಟವು. ಇದು ಶತಮಾನಗಳವರೆಗೆ ಜನಸಾಮಾನ್ಯರ ನಡುವೆ ಕೆಲಸಕ್ಕೆ ಬಾರದ ಹೋರಾಟಗಳನ್ನು ಕಿಚ್ಚೆಬ್ಬಿಸಿ ಪರಿಸ್ಥಿತಿಯನ್ನು ಉಲ್ಬಣಗೊಳಿಸಿತು. ಬೌದ್ಧ ದೇವಾಲಯಗಳ "ಪವಿತ್ರಸ್ಥಳ"ದಿಂದ ದಾಳಿಮಾಡುತ್ತಿದ್ದ ಅವರು, ಯಾವುದೇ ಸೇನಾನಾಯಕನಿಗೆ ಮತ್ತು ಅವರ ನಡೆಗಳನ್ನು ನಿಯಂತ್ರಿಸಲು ಪ್ರಯತ್ನಿಸಿದ ಚಕ್ರವರ್ತಿಗೂ ಸಹ ನಿರಂತರವಾಗಿ ತಲೆನೋವುಗಳಾಗಿ ಪರಿಣಮಿಸಿದರು. ಅವನ ಸೈನ್ಯಾಧಿಪತಿಗಳಲ್ಲಿ ಒಬ್ಬನಾದ ಅಕೆಚಿ ಮಿಟ್ಸುಹಿದೆ ಎಂಬಾತ ಕೆರಳಿ ತನ್ನ ಸೇನೆಯೊಂದಿಗೆ ಅವನ ಮೇಲೆ ತಿರುಗಿಬಿದ್ದಾಗ 1582ರಲ್ಲಿ ಆತ ಮರಣಹೊಂದಿದ.

1615ರಲ್ಲಿನ ರೋಮನಲ್ಲಿನ ಸಮುರಾಯ್‌ ಹಸೆಕುರಾ ತ್ಸುನೆನಾಗಾ, ಕಾಲೇಜ್‌ ಬೋರ್ಗೀಸ್‌, ರೋಮ್‌.

ಮುಖ್ಯವಾಗಿ, ಟೊಯೊಟೊಮಿ ಹಿಡೆಯೊಶಿ (ಕೆಳಗೆ ನೋಡಿ) ಮತ್ತು ಟೊಕುಗವಾ ಶೊಗುನಾಟೆಯನ್ನು ಸಂಸ್ಥಾಪಿಸಿದ ಟೊಕುಗವಾ ಇಯೆಸು, ಇಬ್ಬರೂ ಸಹ ನೊಬುನಾಗಾನ ನಿಷ್ಠಾವಂತ ಅನುಯಾಯಿಗಳಾಗಿದ್ದರು. ಓರ್ವ ಅಜ್ಞಾತ ರೈತನ ಸ್ಥಿತಿಯಿಂದ ನೊಬುನಾಗಾನ ಅತ್ಯುನ್ನತ ಸೈನ್ಯಾಧಿಪತಿಗಳ ಪೈಕಿ ಒಬ್ಬನ ಸ್ಥಾನದವರೆಗೆ ಹಿಡೆಯೊಶಿ ಬೆಳೆದುಬಂದಿದ್ದ ಹಾಗೂ ಇಯೆಸು ತನ್ನ ಬಾಲ್ಯವನ್ನು ನೊಬುನಾಗಾ ಜೊತೆಯಲ್ಲಿ ಹಂಚಿಕೊಂಡಿದ್ದ. ಒಂದೇ ತಿಂಗಳೊಳಗೆ ಮಿಟ್ಸುಹಿದೆಯನ್ನು ಹಿಡೆಯೊಶಿ ಸೋಲಿಸಿದ ಮತ್ತು ಮಿಟ್ಸುಹಿದೆಯ ವಿಶ್ವಾಸಘಾತುಕತೆಗೆ ಸೇಡು ತೀರಿಸಿಕೊಳ್ಳುವ ಮೂಲಕ, ನೊಬುನಾಗಾನ ನ್ಯಾಯವಾದ ಹಕ್ಕುಳ್ಳ ಉತ್ತರಾಧಿಕಾರಿಯಾಗಿ ಪರಿಗಣಿಸಲ್ಪಟ್ಟ.

ನೊಬುನಾಗಾನ ಹಿಂದಿನ ಸಾಧನೆಗಳು ಇವರಿಬ್ಬರಿಗೂ ವರವಾಗಿ ಒದಗಿಬಂದಿತ್ತು. ಇದರ ಆಧಾರದ ಮೇಲೆ ಒಂದು ಏಕೀಕೃತ ಜಪಾನ್‌ನ್ನು ನಿರ್ಮಿಸಿದರು. ಇದಕ್ಕೆ ಸಂಬಂಧಿಸಿದಂತೆ ಒಂದು ಮಾತು ಚಾಲ್ತಿಯಲ್ಲಿತ್ತು: "ಪುನರೇಕೀಕರಣವು ಒಂದು ಅಕ್ಕಿಯ ಕೇಕು ಆಗಿದ್ದು, ಒಡಾ ಅದನ್ನು ತಯಾರಿಸಿದ. ಹಶಿಬಾ ಅದಕ್ಕೆ ಆಕಾರ ನೀಡಿದ. ಕೊನೆಗೆ, ಕೇವಲ ಇಯೆಸು ಮಾತ್ರವೇ ಅದರ ರುಚಿ ನೋಡುತ್ತಾನೆ."[ಸೂಕ್ತ ಉಲ್ಲೇಖನ ಬೇಕು] (ಹಶಿಬಾ ಎಂಬುದು ಕುಟುಂಬನಾಮವಾಗಿದ್ದು, ಟೊಯೊಟೊಮಿ ಹಿಡೆಯೊಶಿಯು ತಾನು ನೊಬುನಾಗಾನ ಅನುಯಾಯಿಯಾಗಿದ್ದಾಗ ಬಳಸಿದ.)

1586ರಲ್ಲಿ ಓರ್ವ ಮಹಾಮಂತ್ರಿಯಾದ ಟೊಯೊಟೊಮಿ ಹಿಡೆಯೊಶಿ ಸ್ವತಃ ಒಂದು ಬಡ ಕುಟುಂಬಕ್ಕೆ ಸೇರಿದ ರೈತನ ಮಗನಾಗಿದ್ದ. ಸಮುರಾಯ್‌ ಪಂಗಡವು ಖಾಯಮ್ಮಾದ ಮತ್ತು ಆನುವಂಶಿಕವಾದ ಪಂಗಡವಾಗಿ ಕ್ರೋಡೀಕರಿಸಲ್ಪಟ್ಟ, ಹಾಗೂ ಸಮುರಾಯ್‌ಗಳಲ್ಲದ ಪಂಗಡವು ಆಯುಧಗಳನ್ನು ಒಯ್ಯುವುದನ್ನು ನಿಷೇಧಿಸಿದ ಕಾನೂನೊಂದನ್ನು ಆತ ಸೃಷ್ಟಿಸಿದ. ಇದರಿಂದಾಗಿ, ಆ ಹಂತದವರೆಗೆ ಜಪಾನ್‌ನಲ್ಲಿ ಹೆಚ್ಚಿದ್ದ ಸಾಮಾಜಿಕ ಚಲನಶೀಲತೆಯನ್ನು ಅಂತ್ಯಗೊಂಡು, ಮೀಜೀ ಕ್ರಾಂತಿಕಾರಿಗಳಿಂದ ಇಡೊ ಶೊಗುನಾಟೆಯ ಸಾವು ಸಂಭವಿಸುವವರೆಗೂ ಈ ಸ್ಥಿತಿಯು ಮುಂದುವರಿಯಿತು.

ಸಮುರಾಯ್‌ಗಳು ಮತ್ತು ಸಮುರಾಯ್‌ಗಳಲ್ಲದವರ ನಡುವಿನ ವೈಲಕ್ಷ್ಣ್ಯವು ಅತೀವವಾಗಿ ಅಸ್ಪಷ್ಟವಾಗಿದ್ದು, 16ನೇ ಶತಮಾನದ ಅವಧಿಯಲ್ಲಿ ಯಾವುದೇ ಸಾಮಾಜಿಕ ವರ್ಗದಲ್ಲಿನ (ಸಣ್ಣ ರೈತರ ವರ್ಗದ್ದೂ ಸಹ) ಬಹುಪಾಲು ಪುರುಷ ವಯಸ್ಕರು, ತಮ್ಮದೇ ಆದ ಕನಿಷ್ಟ ಪಕ್ಷ ಒಂದು ಸೇನಾ ಸಂಘಟನೆಗೆ ಸೇರಿದ್ದರು ಮತ್ತು ಹಿಡೆಯೊಶಿಯ ಅಧಿಕಾರಾವಧಿಗೆ ಮುಂಚಿನ ಹಾಗೂ ನಂತರದ ಅವಧಿಯ ಯುದ್ಧಗಳಲ್ಲಿ ಸೇವೆ ಸಲ್ಲಿಸಿದ್ದರು. ಒಟ್ಟಾರೆಯಾಗಿ ಹೇಳುವುದಾದರೆ, "ಎಲ್ಲರೂ ಎಲ್ಲರ ವಿರುದ್ಧವಾಗಿರುವ" ರೀತಿಯ ಒಂದು ಸನ್ನಿವೇಶವು ಒಂದು ಶತಮಾನದವರೆಗೂ ಮುಂದುವರಿಯಿತು.

ಅನುಸರಣೆಗಾಗಿ ನೊಬುನಾಗಾ, ಹಿಡೆಯೊಶಿ ಮತ್ತು ಇಯೆಸುರನ್ನು ಆಯ್ಕೆಮಾಡಿಕೊಂಡಂಥವು 17ನೇ ಶತಮಾನದ ನಂತರದ ಅಧಿಕೃತ ಸಮುರಾಯ್‌ ಕುಟುಂಬಗಳಾಗಿದ್ದವು. ಪ್ರಭುತ್ವಗಳ ಬದಲಾವಣೆಯ ನಡುವಿನ ಅವಧಿಯಲ್ಲಿ ದೊಡ್ಡ ಪ್ರಮಾಣದ ಕದನಗಳು ಸಂಭವಿಸಿದವು, ಮತ್ತು ಸೋಲಿಸಲ್ಪಟ್ಟ ಹಲವಾರು ಸಮುರಾಯ್‌ಗಳು ನಾಶಗೊಳಿಸಲ್ಪಟ್ಟರು, ರೋನಿನ್‌ ಬಣಕ್ಕೆ ತೆರಳಿದರು ಅಥವಾ ಜನಸಾಮಾನ್ಯರ ಗುಂಪಿನಲ್ಲಿ ಸೇರಿಹೋದರು.

ಟೊಕುಗವಾ ಶೊಗುನಾಟೆ[ಬದಲಾಯಿಸಿ]

ಸಮುರಾಯ್‌ ನಡೆದಾಟವನ್ನು ಅನುಸರಿಸುತ್ತಿರುವ ಓರ್ವ ಸೇವಕ, ಹಾನಾಬುಸಾ ಇಚೊ (1652 - 1724) ಚಿತ್ರಿಸಿರುವುದು.

ಟೊಕುಗವಾ ಶೊಗುನಾಟೆಯ ಅವಧಿಯಲ್ಲಿ ಯೋಧರ ಸ್ಥಾನಕ್ಕಿಂತ ಹೆಚ್ಚಾಗಿ, ರಾಜನ ಆಸ್ಥಾನಿಕರು, ಅಧಿಕಾರಿಗಳು, ಹಾಗೂ ಆಡಳಿತಗಾರರ ಸ್ಥಾನಗಳನ್ನು ಸಮುರಾಯ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ವಹಿಸಿಕೊಂಡರು. 17ನೇ ಶತಮಾನದ ಆರಂಭದಿಂದ ಯಾವುದೇ ಯುದ್ಧಗಳಿರಲಿಲ್ಲವಾದ್ದರಿಂದ, ಟೊಕುಗವಾ ಯುಗದ (ಇದಕ್ಕೆ ಇಡೊ ಅವಧಿ ಎಂದೂ ಹೆಸರಿತ್ತು) ಅವಧಿಯಲ್ಲಿ ಸಮುರಾಯ್‌ಗಳು ತಮ್ಮ ಸೇನಾ ಕಾರ್ಯಚಟುವಟಿಕೆಯನ್ನು ನಿಧಾನವಾಗಿ ಕಳೆದುಕೊಂಡರು.

ಟೊಕುಗವಾ ಯುಗದ ಅಂತ್ಯ ವೇಳೆಗೆ, ಡೈಮ್ಯೊಗಳಿಗೆ ಸಂಬಂಧಿಸಿದಂತೆ ಸಮುರಾಯ್‌ಗಳು ಶ್ರೀಮಂತವರ್ಗದ ಅಧಿಕಾರಿಗಳಾಗಿದ್ದರು. ಸಮುರಾಯ್‌ಗಳ ದೈಶೊ ಎಂಬ, ಉದ್ದದ ಮತ್ತು ಕುಳ್ಳಗಿರುವ ಜೋಡಿ ಕತ್ತಿಗಳು (ಕಟಾನಾ ಮತ್ತು ವಕಿಝಾಶಿಯನ್ನು ಹೋಲಿಸಿ), ದೈನಂದಿನ ಜೀವನದಲ್ಲಿ ಬಳಕೆಯಾಗುವ ಒಂದು ಆಯುಧಕ್ಕಿಂತ ಹೆಚ್ಚಾಗಿ ಅಧಿಕಾರದ ಒಂದು ಸಾಂಕೇತಿಕ ಚಿಹ್ನೆಯಾಗಿ ಮಾರ್ಪಟ್ಟಿತು.

ಸೂಕ್ತವಾದ ಗೌರವವನ್ನು (ಕಿರಿ ಸುಟೆ ಗೊಮೆನ್‌ (斬り捨て御免)) ತೋರಿಸದ ಯಾವುದೇ ಶ್ರೀಸಾಮಾನ್ಯನನ್ನು ಸಾಯಿಸುವ ಕಾನೂನುಬದ್ಧ ಹಕ್ಕನ್ನು ಅವರು ಇನ್ನೂ ಹೊಂದಿದ್ದರಾದರೂ, ಎಷ್ಟರಮಟ್ಟಿಗೆ ಈ ಹಕ್ಕು ಬಳಸಲ್ಪಟ್ಟಿತು ಎಂದು ಗೊತ್ತಿಲ್ಲ. ತಮ್ಮ ಸೇನೆಗಳ ಗಾತ್ರವನ್ನು ತಗ್ಗಿಸುವಂತೆ ಡೈಮ್ಯೊಗಳು ಕೇಂದ್ರ ಸರ್ಕಾರದಿಂದ ಒತ್ತಾಯಿಸಲ್ಪಟ್ಟಾಗ, ನಿರುದ್ಯೋಗಿ ರೋನಿನ್‌ಗಳು ಒಂದು ಸಾಮಾಜಿಕ ಸಮಸ್ಯೆಯಾಗಿ ಮಾರ್ಪಟ್ಟರು.

ಗೆನ್‌ಪೀ ಯುಗದಿಂದ ಇಡೋ ಯುಗದವರೆಗೂ ಓರ್ವ ಸಮುರಾಯ್‌ ಮತ್ತು ಅವನ ಧಣಿಯ (ಸಾಮಾನ್ಯವಾಗಿ ಅವನೊಬ್ಬ ಡೈಮ್ಯೊ ಆಗಿರುತ್ತಿದ್ದ) ನಡುವಿನ ಸೈದ್ಧಾಂತಿಕ ಕಟ್ಟುಪಾಡುಗಳು ಹೆಚ್ಚುತ್ತಲೇ ಹೋದವು.

ಸುಶಿಕ್ಷಿತ ಸಮುರಾಯ್‌ ವರ್ಗವು ಅವಶ್ಯಕವಾಗಿ ಓದಬೇಕಿದ್ದ ಕನ್‌ಫ್ಯೂಷಿಯಸ್‌ ಮತ್ತು ಮೆನ್ಸಿಯಸ್‌ (ಸುಮಾರು 550 B.C.) ಬೋಧನೆಗಳಿಂದ ಅವರು ತೀವ್ರವಾಗಿ ಪ್ರಭಾವಿತರಾಗಿದ್ದರು. ಇಡೊ ಅವಧಿಗಿಂತ ಮುಂಚೆಯೇ ಹಲವಾರು ಪ್ರಭಾವಶಾಲಿ ನಾಯಕರು ಹಾಗೂ ಕುಟುಂಬಗಳಿಂದ ಬುಷಿಡೊ ವಿಧ್ಯುಕ್ತವಾಗಿ ರೂಪಿಸಲ್ಪಟ್ಟಿತ್ತು. ಬುಷಿಡೊ ಒಂದು ಆದರ್ಶ ಅಥವಾ ಮಾದರಿಯಾಗಿದ್ದು, 13ನೇ ಶತಮಾನದಿಂದ 19ನೇ ಶತಮಾನದವರೆಗೆ ಯುಕ್ತವಾದ ರೀತಿಯಲ್ಲಿ ಏಕರೂಪವಾಗಿ ಉಳಿದುಕೊಂಡುಬಂದಿತ್ತು. ಯೋಧರ ವರ್ಗದ ಸಾಮಾಜಿಕ ದರ್ಜೆ, ಸಮಯ ಹಾಗೂ ಭೌಗೋಳಿಕ ತಾಣವನ್ನು ಮೀರಿಸುವಂತೆ ಬುಷಿಡೊನ ಆದರ್ಶಗಳು ಅತಿಶಯವಾಗಿದ್ದವು.

ಇಮಗಾವಾ ರಿಯೋಶುನ್‌ನಂಥ ಸಮುರಾಯ್‌ನಿಂದ 13ನೇ ಶತಮಾನದಷ್ಟು ಮುಂಚಿತವಾಗಿಯೇ ಬುಷಿಡೊ ವಿಧ್ಯುಕ್ತವಾಗಿ ರೂಪಿಸಲ್ಪಟ್ಟಿತು. ಸಮುರಾಯ್‌ನ ವರ್ತನೆಯು ಇತರ ಸಾಮಾಜಿಕ ವರ್ಗಗಳಿಗೆ ಸಂಬಂಧಿಸಿದಂತೆ ಅನುಕರಣೀಯ ಮಾದರಿಯ ನಡವಳಿಕೆಯಾಗಿ ತನ್ನ ಪಾತ್ರವನ್ನು ವಹಿಸಿತು. ಕಾಲವು ಅವರ ಕೈಗಳಲ್ಲೇ ಇದ್ದುದರಿಂದ, ವಿದ್ವಾಂಸರಾಗುವಂಥ ಇತರ ಅಭಿರುಚಿಗಳ ಅನ್ವೇಷಣೆಯಲ್ಲಿ ಸಮುರಾಯ್‌ಗಳು ಹೆಚ್ಚಿನ ಸಮಯವನ್ನು ಕಳೆದರು.

ಸ್ವತಃ ಬುಷಿಡೊ ಆಧುನಿಕ ಜಪಾನ್‌ನಲ್ಲಿ ನಿರ್ದಿಷ್ಟವಾಗಿ ಎದ್ದುಕಾಣುವಂತಿಲ್ಲವಾದರೂ, ಅದರ ಕೆಲವೊಂದು ಆದರ್ಶಗಳು ಹಾಗೂ ತತ್ತ್ವ-ಆದರ್ಶಗಳು ಅಸ್ತಿತ್ವದಲ್ಲಿವೆ.

ಆಧುನಿಕೀಕರಣ[ಬದಲಾಯಿಸಿ]

1864ರಲ್ಲಿನ ಶೋಗನಲ್‌ ಸಮುರಾಯ್‌ ಬುಡಕಟ್ಟುಗಳು (ಇಲಸ್ಟ್ರೇಟೆಡ್‌ ಲಂಡನ್‌ ನ್ಯೂಸ್‌).
1866ರಲ್ಲಿನ ಟೊಕುಗವಾ ಶೊಗುನಾಟೆ ನಂತರದ ಅವಧಿಯಲ್ಲಿ ಪಾಶ್ಚಾತ್ಯೀಕರಿಸಿದ ವಸ್ತ್ರದಲ್ಲಿ ಎರಡು-ಕತ್ತಿಗಳ ಸಮುರಾಯ್‌.

ಇಷ್ಟು ಹೊತ್ತಿಗಾಗಲೇ, ಸಾವು ಮತ್ತು ನಿರಾಶಾದಾಯಕ ಸ್ಥಿತಿಯ[clarification needed] ಮಾರ್ಗವು 1853ರಲ್ಲಿ ಕಂಡುಬಂದ ಒಂದು ನಯನಾಜೂಕಿಲ್ಲದ ಜಾಗೃತಿಯಿಂದಾಗಿ ಕಳೆಗುಂದಿತ್ತು. U.S. ನೌಕಾಪಡೆಗೆ ಸೇರಿದ ನೌಕಾಧಿಕಾರಿ ಮ್ಯಾಥ್ಯೂ ಪೆರ್ರಿಯ ಬೃಹತ್ತಾದ ಆವಿಹಡಗುಗಳು, ಹಿಂದೊಮ್ಮೆ-ಪ್ರಬಲವಾಗಿದ್ದ ಪ್ರತ್ಯೇಕತಾವಾದದ ರಾಷ್ಟ್ರೀಯ ಕಾರ್ಯನೀತಿಯ ಮೇಲೆ ಮೊದಲ ಬಾರಿಗೆ ವ್ಯಾಪಕವಾದ ವ್ಯಾಪಾರ ಸಂಬಂಧವನ್ನು ಈ ಅವಧಿಯಲ್ಲಿ ಹೇರಿದಾಗ ಈ ಕಳೆಗುಂದುವಿಕೆಯ ಸನ್ನಿವೇಶ ಕಂಡುಬಂತು. ಅದಕ್ಕೂ ಮುಂಚಿತವಾಗಿ, ಶೊಗುನಾಟೆಯಿಂದ ವಿಧಿಸಲ್ಪಟ್ಟಿದ್ದ ಕಟ್ಟುನಿಟ್ಟಾದ ನಿಯಂತ್ರಣದ ಅಡಿಯಲ್ಲಿದ್ದ ಕೆಲವೇ ರೇವುಪಟ್ಟಣಗಳು ಪಾಶ್ಚಿಮಾತ್ಯ ವ್ಯಾಪಾರದಲ್ಲಿ ಭಾಗವಹಿಸಲು ಸಮರ್ಥವಾಗಿದ್ದವು, ಮತ್ತು ಆಗಲೂ ಸಹ, ಫ್ರಾನ್ಸಿಸ್‌ ಪಂಥದವರು ಮತ್ತು ಡಾಮಿನಿಕ್‌ ಪಂಥದವರನ್ನು ಪರಸ್ಪರರ ವಿರುದ್ಧ ಎತ್ತಿಕಟ್ಟುವ (ಸಾಂಪ್ರದಾಯಿಕ ಸಮುರಾಯ್‌ಗಳ ಅವನತಿಗೆ ಒಂದು ಪ್ರಧಾನ ಕೊಡುಗೆಯನ್ನು ನೀಡಿದ್ದ ನಿರ್ಣಾಯಕವಾದ ಹಳೆಕೋವಿ ತಂತ್ರಜ್ಞಾನಕ್ಕೆ ಪ್ರತಿಯಾಗಿ) ಪರಿಕಲ್ಪನೆಯ ಮೇಲೆ ಅದು ಹೆಚ್ಚಿನ ರೀತಿಯಲ್ಲಿ ಅವಲಂಬಿಸಿತ್ತು.

1854ರ ವೇಳೆಗೆ, ಸಮುರಾಯ್‌ ಸೇನೆ ಮತ್ತು ನೌಕಾದಳವು ಆಧುನಿಕೀಕರಣಗೊಂಡವು. 1855ರಲ್ಲಿ ನಾಗಸಾಕಿಯಲ್ಲಿ ನೌಕಾ ತರಬೇತಿ ಶಾಲೆಯೊಂದನ್ನು ಸ್ಥಾಪಿಸಲಾಯಿತು. ಹಲವಾರು ವರ್ಷಗಳವರೆಗೆ ಪಾಶ್ಚಾತ್ಯ ನೌಕಾದಳದ ಶಾಲೆಗಳಲ್ಲಿ ಅಧ್ಯಯನ ಮಾಡಲು ನೌಕಾದಳದ ವಿದ್ಯಾರ್ಥಿಗಳನ್ನು ಕಳಿಸಲಾಗುತ್ತಿತ್ತು. ಪ್ರಧಾನ ನೌಕಾಧಿಪತಿ ಎನೊಮೊಟೊನಂಥ ವಿದೇಶದಲ್ಲಿ-ಶಿಕ್ಷಣ ಪಡೆದ ಭವಿಷ್ಯದ ನಾಯಕರ ಒಂದು ಸಂಪ್ರದಾಯವು ಈ ಮೂಲಕ ಶುರುವಾಯಿತು.

ಯೊಕೊಸುಕಾ ಮತ್ತು ನಾಗಸಾಕಿಯಂಥ ನೌಕಾ ಶಸ್ತ್ರಾಗಾರಗಳನ್ನು ಕಟ್ಟಲು, ಫ್ರೆಂಚ್‌ ನೌಕಾದಳದ ಎಂಜಿನಿಯರುಗಳನ್ನು ನೇಮಿಸಿಕೊಳ್ಳಲಾಯಿತು.

1867ರಲ್ಲಿ ಟೊಕುಗವಾ ಶೊಗುನಾಟೆಯ ಅಂತ್ಯವಾಗುವ ವೇಳೆಗೆ, ಜಪಾನಿಯರ ಶೋಗನ್‌ನ ನೌಕಾದಳವು ಆಗಲೇ ಕೈಯೋ ಮರು ನ ನೌಕಾಬಲಾಧಿಪತಿಯ ಹಡಗಿನ ಸುತ್ತಲೂ ಪಾಶ್ಚಾತ್ಯ-ಶೈಲಿಯ ಎಂಟು ಸಮರನೌಕೆಗಳನ್ನು ಹೊಂದಿತ್ತು. ಪ್ರಧಾನ ನೌಕಾಧಿಪತಿ ಎನೊಮೊಟೊನ ನಿಯಂತ್ರಣದ ಅಡಿಯಲ್ಲಿನ ಬೊಷಿನ್‌ ಯುದ್ಧದ ಅವಧಿಯಲ್ಲಿ ಸಾಮ್ರಾಜ್ಯಶಾಹಿ-ಪರವಾದ ಪಡೆಗಳ ವಿರುದ್ಧ ಈ ಸಮರನೌಕೆಗಳು ಬಳಸಲ್ಪಟ್ಟವು. ಬಕುಫುವಿನ ಸೇನೆಗಳನ್ನು ಆಧುನಿಕೀಕರಣಗೊಳಿಸುವಲ್ಲಿ ನೆರವಾಗಲು ಜಪಾನ್‌ನೆಡೆಗಿನ ಕಳಿಸಲಾಗುವ ಫ್ರೆಂಚ್‌ ಸೇನಾ ನಿಯೋಗವೊಂದನ್ನು (1867) ಸ್ಥಾಪಿಸಲಾಯಿತು.

1867ರಲ್ಲಿ ಮೂಲ ಸಮುರಾಯ್‌ನ ಕಟ್ಟಕಡೆಯ ಪ್ರದರ್ಶನವು ಕಂಡುಬಂತು. ಚೋಶೂ ಮತ್ತು ಸತ್ಸುಮಾ ಪ್ರಾಂತ್ಯಗಳಿಗೆ ಸೇರಿದ ಸಮುರಾಯ್‌ಗಳು ಬೊಷಿನ್‌ ಯುದ್ಧದಲ್ಲಿ (1868-1869) ಚಕ್ರವರ್ತಿಯ ಆಡಳಿತದ ಪರವಾಗಿ ಶೊಗುನಾಟೆ ಪಡೆಗಳನ್ನು ಸೋಲಿಸಿದಾಗ, ಇದು ಸಂಭವಿಸಿತು. ಈ ಎರಡೂ ಪ್ರಾಂತ್ಯಗಳು

ಡೈಮ್ಯೊನ ಪ್ರದೇಶಗಳಾಗಿದ್ದು, ಸೆಕಿಗಹರಾದ ಕದನದ (1600) ನಂತರ ಅವು ಇಯೆಸುವಿಗೆ ಸಲ್ಲಿಸಲ್ಪಟ್ಟವು.

1860ರ ದಶಕಗಳವರೆಗೂ ಟೊಕುಗವಾ ಶೊಗುನಾಟೆಯು ಜಪಾನ್‌ನ್ನು ಪ್ರತ್ಯೇಕಿಸಿಟ್ಟಿತ್ತು.

ಅವನತಿ[ಬದಲಾಯಿಸಿ]

ಸುಮಾರು 1867ರಲ್ಲಿನ ಬೊಷಿನ್‌ ಯುದ್ಧ ಅವಧಿಯಲ್ಲಿನ ಸತ್ಸುಮಾ ಬುಡಕಟ್ಟುದ ಸಮುರಾಯ್‌. ಫೆಲೀಸ್‌ ಬೀಟೋನಿಂದ ಚಿತ್ರಿಸಲ್ಪಟ್ಟಿರುವ ಕೈನಿಂದ-ಬುಡಕಟ್ಟು್ಣ ಹಾಕಿದ ಚಾಯಾಚಿತ್ರ

ಒಂದು ಆಧುನಿಕ, ಪಾಶ್ಚಾತ್ಯ-ಶೈಲಿಯ, ಬಲಾತ್ಕಾರವಾಗಿ ಸೇರಿಸಲ್ಪಟ್ಟ ಸೈನ್ಯದ ಪರವಾಗಿ, ಚಕ್ರವರ್ತಿ ಮೀಜಿಯು 1873ರಲ್ಲಿ ಏಕೈಕ ಸಶಸ್ತ್ರ ಪಡೆಯಾಗಿರುವ ಸಮುರಾಯ್‌ಗಳ ಹಕ್ಕನ್ನು ರದ್ದುಮಾಡಿದ. ಸಮುರಾಯ್‌ಗಳು ಶಿಝೊಕು ಗಳಾಗಿ (士族) ಮಾರ್ಪಟ್ಟು ತಮ್ಮ ವೇತನಗಳ ಕೆಲ ಭಾಗವನ್ನು ಉಳಿಸಿಕೊಂಡರಾದರೂ, ಸಾರ್ವಜನಿಕವಾಗಿ ಕಟಾನಾವೊಂದನ್ನು ಧರಿಸುವ ಹಕ್ಕಿನ ಜೊತೆಗೆ ಅವರಿಗೆ ಅಗೌರವವನ್ನು ತೋರಿಸಿದ ಶ್ರೀಸಾಮಾನ್ಯರನ್ನು ಗಲ್ಲಿಗೇರಿಸುವ ಹಕ್ಕನ್ನು ರದ್ದುಗೊಳಿಸಲಾಯಿತು.

ತಮ್ಮ ಸ್ಥಾನಮಾನ, ತಮ್ಮ ಅಧಿಕಾರಗಳು, ಮತ್ತು ಜಪಾನಿನ ಸರ್ಕಾರವನ್ನು ರೂಪಿಸುವ ತಮ್ಮ ಸಾಮರ್ಥ್ಯವನ್ನು ನೂರಾರು ವರ್ಷಗಳವರೆಗೆ ಅನುಭವಿಸಿದ ನಂತರ ಸಮುರಾಯ್‌ಗಳ ಸ್ಥಿತಿಯು ಅಂತಿಮಸ್ಥಿತಿಗೆ ಬಂದು ನಿಂತಿತು. ಆದಾಗ್ಯೂ, ಸೇನಾ ವರ್ಗದಿಂದ ನಡೆಸಲ್ಪಡುತ್ತಿದ್ದ ಸಂಸ್ಥಾನದ ಆಡಳಿತವು ಇನ್ನೂ ಮುಗಿದಿರಲಿಲ್ಲ.

"ಸವಲತ್ತು ಹೊಣೆಗಾರಿಕೆಯನ್ನು ಒಳಗೊಳ್ಳುತ್ತದೆ" ಎಂಬ ಪರಿಕಲ್ಪನೆಯ ಮೇಲೆ ದೇಶವನ್ನು ಇರಿಸಿ ಒಂದು ಆಧುನಿಕ ಜಪಾನ್‌ ಹೇಗಿರಬೇಕು ಎಂಬುದರ ಸಮಗ್ರ ಸ್ವರೂಪವನ್ನು ನಿರೂಪಿಸಲು, ಮೀಜಿ ಸರ್ಕಾರದ ಸದಸ್ಯರು ಯುನೈಟೆಡ್‌ ಕಿಂಗ್‌ಡಂ ಹಾಗೂ ಜರ್ಮನಿಗಳ ಹೆಜ್ಜೆಗುರುತುಗಳನ್ನು ಅನುಸರಿಸಲು ನಿರ್ಧರಿಸಿದರು. ಹೊಸ ಅಧಿಕಾರದ ಅಡಿಯಲ್ಲಿ ಸಮುರಾಯ್‌ಗಳಿಗೆ ಒಂದು ರಾಜಕೀಯ ಶಕ್ತಿಯಾಗುವ ಅವಕಾಶವಿರಲಿಲ್ಲ.

19ನೇ ಶತಮಾನದ ಅಂತ್ಯದ ವೇಳೆಗೆ ಮೀಜಿ ಸುಧಾರಣೆಗಳು ಆಗುವುದರೊಂದಿಗೆ, ಸಮುರಾಯ್‌ ವರ್ಗವು ರದ್ದುಗೊಳಿಸಲ್ಪಟ್ಟಿತು, ಮತ್ತು ಒಂದು ಪಾಶ್ಚಾತ್ಯ-ಶೈಲಿಯ ರಾಷ್ಟ್ರೀಯ ಸೇನೆಯು ಸ್ಥಾಪಿಸಲ್ಪಟ್ಟಿತು. ಸಾಮ್ರಾಜ್ಯಶಾಹಿ ಜಪಾನೀ ಸೇನೆಗಳು ಬಲಾತ್ಕಾರವಾಗಿ ಸೇರಸಲ್ಪಟ್ಟ ಜನರನ್ನು ಒಳಗೊಂಡಿದ್ದವಾದರೂ, ಅನೇಕ ಸಮುರಾಯ್‌ಗಳು ಸ್ವಯಂಇಚ್ಛೆಯಿಂದ ಸೈನಿಕರಾದರು ಹಾಗೂ ಅಧಿಕಾರಿಗಳಾಗಿ ತರಬೇತಿಗೆ ಒಳಗಾಗಲು ಅನೇಕರು ಮುಂದಿನ ಹಂತವನ್ನು ಪ್ರವೇಶಿಸಿದರು. ಸಾಮ್ರಾಜ್ಯಶಾಹಿ ಸೇನಾ ಅಧಿಕಾರಿ ದರ್ಜೆಯ ಬಹುಜನರು ಸಮುರಾಯ್‌ ಮೂಲದವರಾಗಿದ್ದರು ಮತ್ತು ಅವರು ಹೆಚ್ಚಿನ ರೀತಿಯಲ್ಲಿ ಪ್ರೇರೇಪಿಸಲ್ಪಟ್ಟವರಾಗಿದ್ದರು, ಶಿಸ್ತನ್ನು ಹೊಂದಿದ್ದರು ಹಾಗೂ ಅಸಾಧಾರಣವಾದ ರೀತಿಯಲ್ಲಿ ತರಬೇತಿಯನ್ನು ಪಡೆದವರಾಗಿದ್ದರು.

ಸೈಗೊ ಟಕಾಮೋರಿ (ಪಾಶ್ಚಿಮಾತ್ಯ ಸಮವಸ್ತ್ರ ಧರಿಸಿ, ಕುಳಿತಿರುವವ), 1877ರ ಸತ್ಸುಮಾ ದಂಗೆಯ ಅವಧಿಯಲ್ಲಿ ಸಮುರಾಯ್‌ ವೇಷಭೂಷಣದಲ್ಲಿರುವ ತನ್ನ ಅಧಿಕಾರಿಗಳಿಂದ ಸುತ್ತುವರೆಯಲ್ಪಟ್ಟಿರುವುದು.1877ರ ಲೆ ಮಾಂಡೆ ಇಲಸ್ಟ್ರೆಯಲ್ಲಿನ ಸುದ್ದಿಲೇಖನ.

ಕೊನೆಯ ಸಮುರಾಯ್‌ ಘರ್ಷಣೆಯು

ವಾದಯೋಗ್ಯವಾದ ರೀತಿಯಲ್ಲಿ 1877ರಲ್ಲಿ, ಶಿರೋಯಾಮಾದ ಕದನದಲ್ಲಿನ ಸತ್ಸುಮಾ ದಂಗೆಯ ಅವಧಿಯಲ್ಲಿ ನಡೆಯಿತು. ಮೀಜಿಯ ಪುನಃ ಪ್ರತಿಷ್ಠಾಪನೆಗೆ ಕಾರಣವಾದ, ಟೊಕುಗವಾ ಶೊಗುನಾಟೆಯನ್ನು ಸೋಲಿಸಲು ಹುಟ್ಟಿಕೊಂಡ ಹಿಂದಿನ ಬಂಡಾಯದಲ್ಲಿ ಈ ಘರ್ಷಣೆಯ ಮೂಲವಿತ್ತು.

ಹೊಸದಾಗಿ ರೂಪುಗೊಂಡ ಸರ್ಕಾರವು ಆಮೂಲಾಗ್ರ ಬದಲಾವಣೆಗಳನ್ನು ಪ್ರತಿಷ್ಠಾಪಿಸಿತು. ಸತ್ಸುಮಾ ಸೇರಿದಂತೆ ಊಳಿಗಮಾನ್ಯ ಪದ್ಧತಿಯ ರಾಜ್ಯಗಳ ಅಧಿಕಾರವನ್ನು ತಗ್ಗಿಸುವುದರ ಕಡೆಗೆ, ಮತ್ತು ಸಮುರಾಯ್‌ ಸ್ಥಾನಮಾನವನ್ನು ಬರಖಾಸ್ತುಗೊಳಿಸುವುದರ ಕಡೆಗೆ ಈ ಬದಲಾವಣೆಯು ಗುರಿಯಿಟ್ಟುಕೊಂಡಿತ್ತು. ಇದು ಅಂತಿಮವಾಗಿ ಸೈಗೋ ಟಕಾಮೊರಿ ನೇತೃತ್ವದ, ಅಕಾಲಿಕ ಬಂಡಾಯಕ್ಕೆ ಕಾರಣವಾಯಿತು.

ಆರಂಭಿಕ ಅದಲುಬದಲು ವಿದ್ಯಾರ್ಥಿಗಳ ಪೈಕಿ ಸಮುರಾಯ್‌ಗಳು ಬಹುಪಾಲು ಇದ್ದರು. ಇದು ಅವರು ಸಮುರಾಯ್‌ಗಳಾಗಿದ್ದರು ಎಂಬ ನೇರ ಕಾರಣಕ್ಕಾಗಿ ಅಲ್ಲದಿದ್ದರೂ, ಅನೇಕ ಸಮುರಾಯ್‌ಗಳು ಅಕ್ಷರಸ್ತರಾಗಿದ್ದರು ಹಾಗೂ ಸುಶಿಕ್ಷಿತ ವಿದ್ವಾಂಸರಾಗಿದ್ದರು ಎಂಬ ಕಾರಣಕ್ಕಾಗಿ ಆದುದಾಗಿತ್ತು. ಈ ಅದಲುಬದಲು ವಿದ್ಯಾರ್ಥಿಗಳ ಪೈಕಿ ಕೆಲವೊಬ್ಬರು ಉನ್ನತ ಶಿಕ್ಷಣಗಳಿಗಾಗಿ ಖಾಸಗಿ ಶಾಲೆಗಳನ್ನು ಪ್ರಾರಂಭಿಸಿದರೆ, ಮತ್ತೆ ಕೆಲವು ಸಮುರಾಯ್‌ಗಳು ಬಂದೂಕುಗಳ ಬದಲಿಗೆ ಲೇಖನಿಗಳನ್ನು ಕೈಗೆತ್ತಿಕೊಂಡು, ವೃತ್ತಪತ್ರಿಕಾ ಕಂಪನಿಗಳನ್ನು ಸ್ಥಾಪಿಸಿ ವರದಿಗಾರರು ಹಾಗೂ ಬರಹಗಾರರಾಗಿ ಮಾರ್ಪಟ್ಟರು, ಮತ್ತು ಇತರರು ಸರ್ಕಾರೀ ಸೇವೆಗೆ ಸೇರಿದರು.

ಅದಾದ ನಂತರ ಕೇವಲ ಶಿಝೊಕು ಎಂಬ ಹೆಸರು ಅಸ್ತಿತ್ವದಲ್ಲಿತ್ತು. IIನೇ ಜಾಗತಿಕ ಸಮರದಲ್ಲಿ ಜಪಾನ್‌ ಸೋತ ನಂತರ, 1947ರ ಜನವರಿ 1ರಂದು ಕಾನೂನಿನ ಪ್ರಕಾರ ಶಿಝೊಕು ಹೆಸರು ಕಣ್ಮರೆಯಾಯಿತು.

ಪಾಶ್ಚಾತ್ಯ ಸಮುರಾಯ್‌[ಬದಲಾಯಿಸಿ]

ಬೊಷಿನ್‌ ಯುದ್ಧದ (1869) ಅವಧಿಯಲ್ಲಿ ಫ್ರೆಂಚ್‌ ನೌಕಾಧಿಕಾರಿ ಯೂಜೀನ್‌ ಕೊಲ್ಲಾಷೆ ಶೋಗನ್‌ ಪರವಾಗಿ ಓರ್ವ ಸಮುರಾಯ್‌ ಆಗಿ ಹೋರಾಡಿದ.

ಇಂಗ್ಲಿಷ್‌ ನಾವಿಕ ಮತ್ತು ಸಾಹಸಿಗ ವಿಲಿಯಂ ಆಡಮ್ಸ್‌ (1564–1620) ಎಂಬಾತ ಸಮುರಾಯ್‌ನ ಪದವಿಯನ್ನು ಸ್ವೀಕರಿಸಿದ ಮೊಟ್ಟಮೊದಲ ಎಂದು ತೋರುತ್ತದೆ. ಓರ್ವ ಸಮುರಾಯ್‌ನ ಅಧಿಕಾರವನ್ನು ಪ್ರತಿನಿಧಿಸುವ ಎರಡು ಕತ್ತಿಗಳನ್ನು ಶೋಗನ್‌ ಟೊಕುಗವಾ ಇಯೆಸು ಅವನಿಗೆ ಅರ್ಪಿಸಿದ, ಮತ್ತು ನಾವಿಕನಾಗಿದ್ದ ವಿಲಿಯಂ ಆಡಮ್ಸ್‌ ಸತ್ತ ಮತ್ತು ಮಿಯುರಾ ಅಂಜಿನ್‌ (三浦按針) ಎಂಬ ಓರ್ವ ಸಮುರಾಯ್‌ ಜನಿಸಿದ ಎಂದು ಅವನು ವಿಧಿವತ್ತಾಗಿ ಘೋಷಿಸಿದ. ಹಟಮೊಟೊ (ಅದ್ವಿತೀಯ ಮನುಷ್ಯ) ಎಂಬ ಬಿರುದನ್ನೂ ಸಹ ಆಡಮ್ಸ್‌ ಸ್ವೀಕರಿಸಿದ; ಇದು ಶೋಗನ್‌ನ ಆಸ್ಥಾನದಲ್ಲಿನ ಓರ್ವ ನೇರ

ಅನುಚರನಾಗಿರುವ ರೂಪದ ಒಂದು ಉನ್ನತ-ಪ್ರತಿಷ್ಠೆಯ ಸ್ಥಾನವಾಗಿತ್ತು. ಅವನಿಗೆ ಉದಾರವಾಗಿ ಆದಾಯದ ಒಟ್ಟು ಬಾಬುಗಳನ್ನು ಒದಗಿಸಲಾಗಿತ್ತು: "ನಾನು ಮಾಡಿದ ಸೇವೆಗಳಿಗಾಗಿ ಮತ್ತು ದಿನವಹಿ ಮಾಡಬೇಕಾದ ಸೇವೆಗಳಿಗಾಗಿ, ಚಕ್ರವರ್ತಿಯ ಸೇವೆಯಲ್ಲಿ ನೇಮಕಗೊಂಡಿರುವಾಗ, ಚಕ್ರವರ್ತಿಯು ನನಗೆ ಒಂದು ಜೀವನೋಪಾಯದ ಪದವಿಯನ್ನು ನೀಡಿದ್ದಾನೆ" (ಪತ್ರಗಳು). ವರ್ತಮಾನ ಕಾಲದ ಯೊಕೊಸುಕಾ ನಗರದ ಸೀಮೆಯೊಳಗಿರುವ ಹೇಮಿಯಲ್ಲಿ (逸見) 

ಅವನಿಗೆ ಒಂದು ಗುತ್ತಿಗೆ ಜಮೀನನ್ನು ಅಥವಾ ಕರಾರಿನ ಉಂಬಳಿಯನ್ನು ಮಂಜೂರುಮಾಡಲಾಯಿತು; "ನನ್ನ ಜೀತದಾಳುಗಳು ಅಥವಾ ಸೇವಕರಾಗಿರಬಹುದಾದ ಎಂಬತ್ತು ಅಥವಾ ತೊಂಬತ್ತು ಬೇಸಾಯಗಾರರನ್ನು ನನಗೆ ಒದಗಿಸಲಾಗಿತ್ತು" (ಪತ್ರಗಳು). ಅವನ ತೋಟಕ್ಕೆ ಸುಮಾರು 250 ಕೊಕುನಷ್ಟು (ಸುಮಾರು ಐದು ಬುಷಲ್‌‌‌ಗಳಿಗೆ (ಕೊಳಗಗಳಿಗೆ) ಸಮನಾಗಿರುವ, ಅಕ್ಕಿಯ ರೂಪದಲ್ಲಿನ ಜಮೀನಿನ ಆದಾಯದ ಅಳತೆ) ಮೌಲ್ಯವಿತ್ತು. ಅಂತಿಮವಾಗಿ ಅವನು, "ನನ್ನ ಮಹಾನ್‌ ಸಂಕಟಗಳ ನಂತರ ದೇವರು ನನಗಾಗಿ ಇವೆಲ್ಲವನ್ನೂ ಒದಗಿಸಿದ್ದಾನೆ" (ಪತ್ರಗಳು) ಎಂದು ಬರೆದ. ವಿಪತ್ತು-ಪೀಡಿತ ಪ್ರಯಾಣವು ಅವನನ್ನು ಆರಂಭದಲ್ಲಿ ಜಪಾನಿಗೆ ಹೊತ್ತು ತಂದಿತು ಎಂಬುದು ಇದರಿಂದ ಅರ್ಥವಾಗುತ್ತದೆ.

ಡಿ ಲೀಫ್ಡೆ ಹಡಗಿನಲ್ಲಿನ ಜಪಾನ್‌ ಕಡೆಗಿನ ಅವರ ದೌರ್ಭಾಗ್ಯದ ಪ್ರಯಾಣದಲ್ಲಿ ಆಡಮ್ಸ್‌ನ ಓರ್ವ ಡಚ್‌ ಸಹಯೋಗಿಯಾಗಿದ್ದ ಜ್ಯಾನ್‌ ಜೂಸ್ಟೆನ್‌ ವಾನ್‌ ಲೋಡೆನ್‌ಸ್ಟೀನ್‌ (1556?-1623?) ಎಂಬಾತನಿಗೂ ಟೊಕುಗವಾ ಇಯೆಸುವಿನಿಂದ ಇದೇ ಸ್ವರೂಪದ ಸೌಕರ್ಯಗಳು ದೊರೆತಿದ್ದವು. ಜೂಸ್ಟೆನ್‌ ಓರ್ವ ಸಮುರಾಯ್‌[ಸೂಕ್ತ ಉಲ್ಲೇಖನ ಬೇಕು] ಆಗಿ ಮಾರ್ಪಟ್ಟ ಮತ್ತು ಅವನಿಗೆ ಇಡೊದಲ್ಲಿನ ಇಯೆಸುನ ಕೋಟೆಮನೆಯೊಳಗಡೆ ಒಂದು ಮನೆಯನ್ನು ನೀಡಲಾಯಿತು ಎಂದು ತೋರುತ್ತದೆ. ಟೋಕಿಯೋ ನಿಲ್ದಾಣದ ಪೂರ್ವ ನಿರ್ಗಮನದ ಬಳಿಯಿರುವ ಈ ಪ್ರದೇಶವು ಇಂದು ಯಯಿಸು (八重洲) ಎಂದು ಚಿರಪರಿಚಿತವಾಗಿದೆ. ಯಯಿಸು ಎಂಬುದು ಆ ಡಚ್‌ವ್ಯಕ್ತಿಯ ಜಪಾನೀ ಹೆಸರಾದ ಯಯೌಸು (耶楊子) ಎಂಬುದರ ತಪ್ಪುರೂಪವಾಗಿದೆ. ಇಷ್ಟೇ ಅಲ್ಲದೇ, ಆಡಂನೊಂದಿಗೆ ಸಮಾನವಾಗಿ ಜೂಸ್ಟೆನ್‌ಗೆ ಒಂದು ಕೆಂಪು ಸೀಲ್‌ ಹಡಗನ್ನು‌ (朱印船) ನೀಡಿ, ಜಪಾನ್‌ ಹಾಗೂ ಭಾರತ-ಚೀನಾಗಳ ನಡುವಣ ವ್ಯಾಪಾರ ಮಾಡಲು ಅವನಿಗೆ ಅನುವುಮಾಡಿಕೊಡಲಾಯಿತು. ಬಟಾವಿಯಾದಿಂದ ಮರಳಿ ಬರುತ್ತಿರುವಾಗ, ಅವನ ಹಡಗು ನೆಲಕಚ್ಚಿತಾದ್ದರಿಂದ ಜೂಸ್ಟೆನ್‌ ನೀರಿನಲ್ಲಿ ಮುಳುಗಿಹೋದ.

ಇಷ್ಟೇ ಅಲ್ಲದೇ, ಬೊಷಿನ್‌ ಯುದ್ಧದ (1868-1869) ಅವಧಿಯಲ್ಲಿ, ಮೀಜಿ ಚಕ್ರವರ್ತಿಯ ಪುನಃ ಪ್ರತಿಷ್ಠಾಪನೆಗೆ ಪರವಾಗಿದ್ದ ದಕ್ಷಿಣದ ಡೈಮ್ಯೊಗಳ ವಿರುದ್ಧ ನಿಂತಿದ್ದ ಶೋಗನ್‌ ಪಡೆಗಳನ್ನು ಫ್ರೆಂಚ್‌ ಸೈನಿಕರು ಸೇರಿಕೊಂಡರು. ಫ್ರೆಂಚ್‌ ನೌಕಾಧಿಕಾರಿ ಯೂಜೀನ್‌ ಕೊಲ್ಲಾಷೆಯು ಸಮುರಾಯ್‌ ವೇಷಭೂಷಣವನ್ನು ತೊಟ್ಟುಕೊಂಡು ತನ್ನ ಜಪಾನೀ ಸಹಯೋಧರೊಂದಿಗೆ ಹೋರಾಡಿದ ಎಂದು ದಾಖಲಿಸಲ್ಪಟ್ಟಿದೆ. ಅದೇ ವೇಳೆಗೆ ಸರಿಯಾಗಿ, ಪ್ರಷ್ಯಾ ರಾಜ್ಯದ ಎಡ್ವರ್ಡ್‌ ಶ್ನೆಲ್‌ ಎಂಬಾತ, ಓರ್ವ ಸೇನಾ ಬೋಧಕ ಹಾಗೂ ಆಯುಧಗಳ ನಿರ್ಮಾತೃವಾಗಿ ಐಝು ರಾಜ್ಯಕ್ಕೆ ಸೇವೆಯನ್ನು ಸಲ್ಲಿಸಿದ. ಹಿರಾಮಟ್ಸು ಬುಹೇಯ್‌ (平松武兵衛) ಎಂಬ ಜಪಾನೀ ಹೆಸರನ್ನು ಅವನಿಗೆ ನೀಡಲಾಯಿತು, ಇದು

ಡೈಮ್ಯೊನ ಮಟ್ಸುದೈರಾ ಎಂಬ ಹೆಸರಿನ ಅಕ್ಷರಗಳನ್ನು ತಲೆಕೆಳಗುಮಾಡಿ ನೀಡಿದ ಹೆಸರಾಗಿತ್ತು. ಹಿರಾಮಟ್ಸುವಿಗೆ (ಶ್ನೆಲ್‌) ಕತ್ತಿಗಳನ್ನು ಧರಿಸುವ ಹಕ್ಕನ್ನು ನೀಡುವುದರ ಜೊತೆಗೆ, ವಕಾಮಟ್ಸು ಕೋಟೆಮನೆ ಪಟ್ಟಣದಲ್ಲಿ ಒಂದು ವಾಸಗೃಹ, ಓರ್ವ ಜಪಾನೀ ಹೆಂಡತಿ, ಹಾಗೂ ಒಂದಷ್ಟು ಅನುಚರರ ವ್ಯವಸ್ಥೆ ಮಾಡಿಕೊಡಲಾಯಿತು. ಅವನು ಒಂದು ಜಪಾನೀ ನಿಲುವಂಗಿ, ಮೇಲಂಗಿ, ಮತ್ತು ಕತ್ತಿಗಳನ್ನು ಧರಿಸಿರುವಂತೆ, ಸವಾರಿಯಲ್ಲಿ ಬಳಸುವ ಪಾಶ್ಚಾತ್ಯ ಶೈಲಿಯ ಷರಾಯಿಗಳು ಹಾಗೂ ಬೂಟುಗಳನ್ನು ಧರಿಸಿರುವಂತೆ ಅನೇಕ ಸಮಕಾಲೀನ ಉಲ್ಲೇಖಗಳಲ್ಲಿ ಅವನನ್ನು ಚಿತ್ರಿಸಲಾಗಿದೆ.

ಸಂಸ್ಕೃತಿ[ಬದಲಾಯಿಸಿ]

ಶತಮಾನಗಳವರೆಗೆ ನಿಜವಾದ ಶ್ರೀಮಂತವರ್ಗಗಳು ಮಾಡಿದಂತೆ, ಸಮುರಾಯ್‌ಗಳು ತಮ್ಮದೇ ಆದ ಸಂಸ್ಕೃತಿಗಳನ್ನು ಅಭಿವೃದ್ಧಿಪಡಿಸಿದರು. ಇವು ಜಪಾನಿಯರ ಸಂಸ್ಕೃತಿಯ ಮೇಲೆ ಸಮಗ್ರವಾಗಿ ಪ್ರಭಾವವನ್ನು ಬೀರಿದವು. ಸಮುರಾಯ್‌ಗಳೊಂದಿಗೆ ಗುರುತಿಸಿಕೊಂಡಿದ್ದ ಸಂಸ್ಕೃತಿಗಳಾದ, ಚಹಾ ಸಂಭ್ರಮಾಚರಣೆ, ಏಕರ್ವಣದ ಶಾಯಿಯ ಚಿತ್ರರಚನೆ, ಶಿಲೋದ್ಯಾನಗಳು ಮತ್ತು ಕವನ ರಚನೆ ಇವೇ ಮೊದಲಾದವುಗಳನ್ನು 1200ರಿಂದ 1600ರವರೆಗಿನ ಶತಮಾನಗಳಾದ್ಯಂತ ಕಲಾಪೋಷಕ-ಯೋಧರು ಸ್ವೀಕರಿಸಿ ಅಳವಡಿಸಿಕೊಂಡರು. ಈ ಪರಿಪಾಠಗಳು ಚೀನೀ ಕಲೆಗಳಿಂದ ರೂಪಾಂತರಗೊಂಡಿದ್ದ ಸ್ವರೂಪಗಳಾಗಿದ್ದವು. ಝೆನ್‌ ಸನ್ಯಾಸಿಗಳು ಅವನ್ನು ಜಪಾನಿಗೆ ಪರಿಚಯಿಸಿದರು ಮತ್ತು ಪ್ರಬಲರಾದ ಗಣ್ಯಯೋಧರ ಆಸಕ್ತಿಯ ಕಾರಣದಿಂದಾಗಿ ಅಭಿವೃದ್ಧಿಹೊಂದಲು ಅವಕ್ಕೆ ಅವಕಾಶ ದೊರೆಯಿತು. ಮ್ಯೂಸೋ ಸೊಸೆಕಿ (1275-1351) ಓರ್ವ ಝೆನ್‌ ಸನ್ಯಾಸಿಯಾಗಿದ್ದಷ್ಟೇ ಅಲ್ಲದೇ, ಚಕ್ರವರ್ತಿ ಗೊ-ಡೈಗೊ ಹಾಗೂ ಸೈನ್ಯಾಧಿಪತಿ ಅಶಿಕಾಗಾ ತಕೌಜಿ (1304-58) ಈ ಇಬ್ಬರಿಗೂ ಓರ್ವ ಸಲಹೆಗಾರನಾಗಿದ್ದ. ಮ್ಯೂಸೋ ಮಾತ್ರವೇ ಅಲ್ಲದೇ ಇತರ ಸನ್ಯಾಸಿಗಳೂ ಸಹ ಜಪಾನ್‌ ಹಾಗೂ ಚೀನಾ ನಡುವಿನ ರಾಜಕೀಯ ಮತ್ತು ಸಾಂಸ್ಕೃತಿಕ ರಾಯಭಾರಿಗಳಾಗಿ ಪಾತ್ರವಹಿಸಿದರು. ಮ್ಯೂಸೋ ನಿರ್ದಿಷ್ಟವಾಗಿ ತನ್ನ ತೋಟದ ವಿನ್ಯಾಸ ಪರಿಣತಿಗೆ ಹೆಸರುವಾಸಿಯಾಗಿದ್ದ. ಯೊಶಿಮಾಸಾ ಎಂಬಾತ ಕಲೆಗಳ ಮತ್ತೋರ್ವ ಅಶಿಕಾಗಾ ಪೋಷಕನಾಗಿದ್ದ. ಅವನ ಸಾಂಸ್ಕೃತಿಕ ಸಲಹೆಗಾರನಾಗಿದ್ದ ಝಿಯಾಮಿ ಎಂಬ ಓರ್ವ ಝೆನ್‌ ಸನ್ಯಾಸಿಯು, ಚಹಾ ಸಂಭ್ರಮಾಚರಣೆಯನ್ನು ಅವನಿಗೆ ಪರಿಚಯಿಸಿದ. ಇದಕ್ಕೂ ಮುಂಚಿತವಾಗಿ, ಧ್ಯಾನ ಮಾಡುವ ಸಮಯದಲ್ಲಿ ಜಾಗ್ರತ ಸ್ಥಿತಿಯಲ್ಲಿರಲು ಬೌದ್ಧ ಸನ್ಯಾಸಿಗಳು ಚಹಾವನ್ನು ಪ್ರಧಾನವಾಗಿ ಬಳಸುತ್ತಿದ್ದರು.[೯]

ಶಿಕ್ಷಣ[ಬದಲಾಯಿಸಿ]

ಒಟ್ಟಾರೆಯಾಗಿ ಹೇಳುವುದಾದರೆ, ಸಮುರಾಯ್‌ಗಳು, ಶ್ರೀಮಂತವರ್ಗಗಳು, ಮತ್ತು ಪಾದ್ರಿಗಳು ಕಾಂಜೀ ಲಿಪಿಯಲ್ಲಿ ಒಂದು ಅತ್ಯುನ್ನತ ಸಾಕ್ಷರತಾ ಪ್ರಮಾಣವನ್ನು ಹೊಂದಿದ್ದರು. ಇತ್ತೀಚಿನ ಅಧ್ಯಯನಗಳು ತೋರಿಸಿರುವ ಪ್ರಕಾರ, ಸಮಾಜದಲ್ಲಿನ ಇತರ ಗುಂಪುಗಳ ನಡುವಣ ಕಾಂಜೀ ಲಿಪಿಯಲ್ಲಿದ್ದ ಸಾಕ್ಷರತಾ ಪ್ರಮಾಣವು ಈ ಹಿಂದೆ ಗ್ರಹಿಸಿದ್ದಕ್ಕಿಂತಲೂ ಕೊಂಚ ಹೆಚ್ಚಿನ ಮಟ್ಟದಲ್ಲಿತ್ತು.

ಉದಾಹರಣೆಗೆ, ಕಮಾಕುರಾ ಅವಧಿಗೆ ಸೇರಿದ ರೈತರಿಂದ ಸಲ್ಲಿಸಲ್ಪಟ್ಟ ರಾಜನ ಆಸ್ಥಾನದ ದಸ್ತಾವೇಜುಗಳು, ಜನನ ಮತ್ತು ಮರಣದ ದಾಖಲೆ ಪತ್ರಗಳು ಮತ್ತು ವಿವಾಹದ ದಾಖಲೆ ಪತ್ರಗಳು ಕಾಂಜೀ ಲಿಪಿಯಲ್ಲಿ ತಯಾರಿಸಲ್ಪಟ್ಟಿದ್ದವು. ಕಾಂಜೀ ಲಿಪಿಯ ಸಾಕ್ಷರತಾ ಪ್ರಮಾಣ ಹಾಗೂ ಗಣಿತಶಾಸ್ತ್ರದಲ್ಲಿನ ಪರಿಣತಿ ಇವೆರಡೂ ಕಮಾಕುರಾ ಅವಧಿಯ ಅಂತ್ಯದ ವೇಳೆಗೆ ಸುಧಾರಣೆಗೊಂಡವು.[೭]

ಯೋಧರ ವರ್ಗವಷ್ಟೇ ಅಲ್ಲದೇ ಸಾಮಾನ್ಯ ವರ್ಗಗಳಲ್ಲೂ ಸಹ ಸಾಕ್ಷರತಾ ಮಟ್ಟವು ಸಾಮಾನ್ಯವಾಗಿ ಹೆಚ್ಚಿನದಾಗಿತ್ತು. ಊಳಿಗಮಾನ್ಯ ಪದ್ಧತಿಯ ಧಣಿಯಾದ ಅಸಾಕುರಾ ನೊರಿಕೇಜ್‌ (1474-1555 A.D.) ಎಂಬಾತ ಉಲ್ಲೇಖಿಸಿರುವ ಪ್ರಕಾರ, ಅವನ ತಂದೆಯ ವಿನಯಪೂರ್ವಕ ಪತ್ರಗಳ ಕಾರಣದಿಂದಾಗಿ ಅವನ ತಂದೆಗೆ ಸಿಕ್ಕ ಮಹಾನ್‌ ನಿಷ್ಠಾವಂತಿಕೆಯು ಕೇವಲ ಸಹವರ್ತಿ ಸಮುರಾಯ್‌ಗಳಿಗೆ ಮಾತ್ರವೇ ಸೀಮಿತವಾಗಿರಲಿಲ್ಲ, ಬದಲಿಗೆ ರೈತರು ಹಾಗೂ ಪಟ್ಟಣವಾಸಿ ಜನರಿಗೂ ದೊರೆತಿತ್ತು:

"ಧಣಿ ಐರಿನ್‌ನ ಗುಣಕ್ಕೆ ಸಂಬಂಧಿಸಿ ಹೇಳುವುದಾದರೆ, ಅಳೆಯಲು ಕಷ್ಟವಾದ ಅನೇಕ ಉನ್ನತ ಅಂಶಗಳಿದ್ದವು, ಆದರೆ ಹಿರಿಯರ ಪ್ರಕಾರ, ತನ್ನ ಸೌಜನ್ಯದ ನಡತೆಯಿಂದ ಅವನು ಪ್ರಾಂತ್ಯದಲ್ಲಿ ಆಡಳಿತ ನಡೆಸಿದ ವಿಧಾನವು ಇವುಗಳ ಪೈಕಿ ಅತ್ಯುತ್ತಮವಾಗಿತ್ತು. ಸಮುರಾಯ್‌ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಆತ ಈ ವಿಧಾನದಲ್ಲಿ ತನ್ನ ಕಾರ್ಯವನ್ನು ನಿರ್ವಹಿಸಿದ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ ಆದರೂ, ರೈತರಿಗೆ ಹಾಗೂ ಪಟ್ಟಣವಾಸಿ ಜನರಿಗೆ ಪತ್ರಗಳನ್ನು ಬರೆಯುವಾಗಲೂ ಆತ ಇದೇ ವಿನೀತ ಸ್ವಭಾವವನ್ನು ತೋರಿಸುತ್ತಿದ್ದ , ಮತ್ತು ಈ ಪತ್ರಗಳಲ್ಲಿ ಸಂಬೋಧಿಸುವಾಗಲೂ ಸಹ ಆತ ಸಾಮಾನ್ಯ ಪರಿಪಾಠದಿಂದ ಆಚೆಗೆ ಸೌಜನ್ಯಶೀಲತೆಯನ್ನು ತೋರುತ್ತಿದ್ದ. ಈ ರೀತಿಯಲ್ಲಿ, ಅವನಿಗಾಗಿ ತಮ್ಮ ಜೀವಗಳನ್ನು ತ್ಯಾಗಮಾಡಲು ಹಾಗೂ ಅವನ ಮಿತ್ರತ್ವವನ್ನು ಸಂಪಾದಿಸಲು ಎಲ್ಲರೂ ಮನಃಪೂರ್ವಕವಾಗಿ ಸಿದ್ಧರಿರುತ್ತಿದ್ದರು."[೮]

1552ರ ಜನವರಿ 29ರ ದಿನಾಂಕವನ್ನು ಹೊಂದಿರುವ ಪತ್ರವೊಂದರಲ್ಲಿ ಸೇಂಟ್‌ ಫ್ರಾನ್ಸಿಸ್‌ ಕ್ಸೇವಿಯರ್‌ನ ವೀಕ್ಷಣೆಯು ದಾಖಲಾಗಿದ್ದು, ಜಪಾನಿನಲ್ಲಿ ಆ ಸಮಯದಲ್ಲಿದ್ದ

ಉನ್ನತ ಮಟ್ಟದ ಸಾಕ್ಷರತೆಯ ಕಾರಣದಿಂದಾಗಿ ಜಪಾನಿಯರು ಪ್ರಾರ್ಥನೆಗಳನ್ನು ಸರಾಗವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು ಎಂದು ಇದರಿಂದ ತಿಳಿದುಬರುತ್ತದೆ:

"ಜಪಾನಿನಲ್ಲಿ ಎರಡು ವಿಧದ ಬರಹಗಳಿವೆ‌, ಒಂದು ಪುರುಷರಿಂದ ಬಳಸಲ್ಪಟ್ಟರೆ, ಮತ್ತೊಂದು ಸ್ತ್ರೀಯರಿಂದ ಬಳಸಲ್ಪಡುತ್ತದೆ; ಮತ್ತು ಬಹುಮಟ್ಟಿಗೆ ಪುರುಷರು ಹಾಗೂ ಸ್ತ್ರೀಯರಿಬ್ಬರೂ, ಅದರಲ್ಲೂ ವಿಶೇಷವಾಗಿ ಶ್ರೀಮಂತವರ್ಗ

ಹಾಗೂ ವಾಣಿಜ್ಯ ವರ್ಗಕ್ಕೆ ಸೇರಿದವರು, ಒಂದು ಸಾಕ್ಷರತಾ ಶಿಕ್ಷಣವನ್ನು ಹೊಂದಿದ್ದಾರೆ. ಬೌದ್ಧ ಸನ್ಯಾಸಿಗಳು, ಅಥವಾ ಬೌದ್ಧ ಸನ್ಯಾಸಿನಿಯರು ತಮ್ಮ ವಿರಕ್ತಗೃಹಗಳು ಅಥವಾ ಮಠಗಳಲ್ಲಿ ಹುಡುಗಿಯರು ಮತ್ತು ಹುಡುಗರಿಗೆ ಅಕ್ಷರಗಳನ್ನು ಬೋಧಿಸುತ್ತಾರೆ. ಶ್ರೀಮಂತರು ಹಾಗೂ ಉನ್ನತ ಪದವಿಯಲ್ಲಿರುವವರು ತಮ್ಮ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಖಾಸಗಿ ಬೋಧಕರಿಗೆ ವಹಿಸುತ್ತಾರೆ."

"ಅವರಲ್ಲಿ ಬಹುಪಾಲು ಜನ ಓದಬಲ್ಲರು, ಮತ್ತು ನಮ್ಮ ವಾಡಿಕೆಯ ಪ್ರಾರ್ಥನೆಗಳನ್ನು ಮತ್ತು ನಮ್ಮ ಪವಿತ್ರ ಧರ್ಮದ ಪ್ರಮುಖ ಅಂಶಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಇದು ಮಹತ್ತರವಾದ ನೆರವು ನೀಡಿದೆ"[೬]

ರೋಮ್‌‌ನಲ್ಲಿರುವ ಫಾದರ್‌ ಇಗ್ನೇಷಿಯಸ್‌ ಲಯೋಲಾಗೆ ಬರೆದ ಪತ್ರವೊಂದರಲ್ಲಿ, ಮೇಲ್ವರ್ಗದವರ ಶಿಕ್ಷಣದ ಕುರಿತು ಕ್ಸೇವಿಯರ್‌ ಮುಂದುವರಿದು ಈ ರೀತಿಯಲ್ಲಿ ಉಲ್ಲೇಖಿಸಿದ:

“ಉನ್ನತ ಪದವಿಯಲ್ಲಿರುವವರು ತಮ್ಮ ಮಕ್ಕಳಿಗೆ 8 ವರ್ಷ ವಯಸ್ಸಾಗುತ್ತಿದ್ದಂತೆ, ಶಿಕ್ಷಣವನ್ನು ಕೊಡಿಸಲು ಅವರನ್ನು ಬೌದ್ಧ ಮಠಗಳಿಗೆ ಕಳಿಸುತ್ತಾರೆ, ಮತ್ತು ತಮಗೆ 19 ಅಥವಾ 20 ವರ್ಷಗಳಾಗುವವರೆಗೂ ಆ ಮಕ್ಕಳು ಅಲ್ಲಿಯೇ ಉಳಿಯುತ್ತಾರೆ. ಈ ಅವಧಿಯಲ್ಲಿ ಓದುವಿಕೆ, ಬರೆಯುವಿಕೆ ಮತ್ತು ಧರ್ಮದ ಕುರಿತು ಅವರು ಕಲಿಯುತ್ತಾರೆ; ಅಲ್ಲಿಂದ ಆಚೆಗೆ ಅವರು ಬಂದ ಕೂಡಲೇ, ಅವರು ಮದುವೆಯಾಗಿ ರಾಜಕೀಯಕ್ಕೆ ಸೇರಿಕೊಳ್ಳುತ್ತಾರೆ."

"ಅವರು ವಿವೇಕಿಗಳು, ಉದಾರ ಹೃದಯದವರಾಗಿದ್ದು,

ವಿದ್ಯಾವಂತರನ್ನು ತುಂಬಾ ಗೌರವಿಸುವ ಮೂಲಕ ಸದ್ಗುಣಗಳು ಮತ್ತು ಅಕ್ಷರಗಳನ್ನು ಪ್ರೀತಿಸುವವರಾಗಿದ್ದಾರೆ."

1549ರ ನವೆಂಬರ್‌ 11ರ ದಿನಾಂಕವಿರುವ ಪತ್ರವೊಂದರಲ್ಲಿ, ಜಪಾನ್‌ನಲ್ಲಿನ ಶೈಕ್ಷಣಿಕ ವ್ಯವಸ್ಥೆಯ ಕುರಿತು ಕ್ಸೇವಿಯರ್‌ ವಿವರಿಸಿದ್ದಾನೆ. ಇದು ಒಂದು ಬಹು-ಸೋಪಾನ ಪಂಕ್ತಿಯ ವ್ಯವಸ್ಥೆಯಾಗಿದ್ದು, "ವಿಶ್ವವಿದ್ಯಾಲಯಗಳು", "ಕಾಲೇಜುಗಳು", "ಅಕಾಡೆಮಿಗಳು" ಹಾಗೂ ಜನಸಾಮಾನ್ಯರ ಕಲಿಕೆಗೆ ಸಂಬಂಧಿಸಿದಂತೆ ಪ್ರಮುಖ ಕೇಂದ್ರವಾಗಿ ಸೇವೆ ಸಲ್ಲಿಸಿದ ನೂರಾರು ಬೌದ್ಧ ಮಠಗಳನ್ನು ಒಳಗೊಂಡಿದೆ:

"ಆದರೆ

ಕ್ಯಾಗೊಕ್ಸಿಮಾದಲ್ಲಿನ ನಮ್ಮ ತಂಗುವಿಕೆಯ ಕುರಿತಾದ ಒಂದು ವಿವರವನ್ನು ನಾವು ನಿಮಗೆ ನೀಡಲೇಬೇಕು. ಆ ಬಂದರಿಗೆ ನಾವು ತೆರಳಲು ಕಾರಣವೇನೆಂದರೆ, ಜಪಾನ್‌ನಲ್ಲಿನ ಅತಿದೊಡ್ಡ ನಗರ, ಮತ್ತು ರಾಜ ಹಾಗೂ ರಾಜಕುಮಾರರ ಒಂದು ವಾಸದ ತಾಣವಾಗಿ ಅತ್ಯಂತ ಪ್ರಸಿದ್ಧವಾಗಿರುವ ಮಿಯಾಕೊ ಕಡೆಗಿನ ನಮ್ಮ ನೌಕಾಯಾನಕ್ಕೆ ಮಾರುತವು ಪ್ರತಿಕೂಲವಾಗಿತ್ತು. ನಾಲ್ಕು ತಿಂಗಳು ಕಳೆದ ನಂತರ ಮಿಯಾಕೊ ಕಡೆಗಿನ ಒಂದು ನೌಕಾಯಾನಕ್ಕೆ ಅನುಕೂಲಕರವಾಗಿರುವ ಋತುವು ಮರಳಲಿದೆ ಎಂದು ತಿಳಿದುಬಂದಿತು, ಮತ್ತು ನಂತರದಲ್ಲಿ ದೇವರ ಕೃಪೆಯಿಂದ ನಾವು ಆ ಸ್ಥಳದ ಕಡೆಗೆ ನೌಕಾಯಾನ ಮಾಡಲು ಸಾಧ್ಯವಾಯಿತು. ಕ್ಯಾಗೊಕ್ಸಿಮಾದಿಂದ ಆ ಸ್ಥಳಕ್ಕೆ ಮುನ್ನೂರು ಲೀಗುಗಳಷ್ಟು ದೂರವಿದೆ.  ಮಿಯಾಕೊದ ಗಾತ್ರದ ಕುರಿತು ನಾವು ಅದ್ಭುತವಾದ ಕಥೆಗಳನ್ನು ಕೇಳುತ್ತೇವೆ: ಇದು ತೊಂಬತ್ತು ಸಾವಿರಕ್ಕಿಂತಲೂ ಹೆಚ್ಚಿನ ವಾಸದ ಮನೆಗಳನ್ನು ಒಳಗೊಂಡಿದೆಯೆಂದು ತಿಳಿದುಬಂತು. ಅಲ್ಲೊಂದು ಅತ್ಯಂತ ಪ್ರಸಿದ್ಧ ವಿಶ್ವವಿದ್ಯಾಲಯವಿದೆ. ಅಷ್ಟೇ ಅಲ್ಲ ವಿದ್ಯಾರ್ಥಿಗಳ ಐದು ಪ್ರಮುಖ ಕಾಲೇಜುಗಳು, ಮತ್ತು ಬೌದ್ಧ ಸನ್ಯಾಸಿಗಳ ಇನ್ನೂರಕ್ಕೂ ಹೆಚ್ಚು ವಿರಕ್ತ ಮಠಗಳು, ಮತ್ತು ಲೆಗಿಯೋಕ್ಸಿ ಎಂದು ಕರೆಯಲ್ಪಡುವ ಕ್ರಿಸ್ತಯತಿ ಸಂಘಧ ಸದಸ್ಯರ ಹಾಗೂ ಹ್ಯಾಮಾಕ್ಯುಟಿಸ್‌ ಎಂದು ಕರೆಯಲ್ಪಡುವ ಅದೇ ತೆರನಾದ ಮಹಿಳೆಯರ ವಿರಕ್ತ ಗೃಹಗಳು ಅಲ್ಲಿವೆ. ಮಿಯಾಕೊದ ಈ ಪ್ರಸಿದ್ಧ ತಾಣಗಳ ಜೊತೆಗೆ, ಜಪಾನ್‌ನಲ್ಲಿ ಇತರ ಐದು ಪ್ರಮುಖ ಅಕಾಡೆಮಿಗಳಿದ್ದು ಅವು ಕೊಯಾ, ನೆಗು, ಫಿಸೋ, ಮತ್ತು ಹೊಮಿಯಾನ ಎಂಬ ತಾಣಗಳಲ್ಲಿ ನೆಲೆಗೊಂಡಿವೆ. ಮಿಯಾಕೊದ ಸುತ್ತಲೂ ಇವು ನೆಲೆಗೊಂಡಿದ್ದು, ಅವುಗಳ ನಡುವೆ ಸಣ್ಣ ಅಂತರಗಳಿವೆ, ಮತ್ತು ಪ್ರತಿಯೊಂದಕ್ಕೂ ಸುಮಾರು ಮೂರು ಸಾವಿರದ ಐದುನೂರರಷ್ಟು ಸಂಖ್ಯೆಯ ವಿದ್ವಾಂಸರು ಆಗಿಂದಾಗ್ಗೆ ಹೋಗುತ್ತಿರುತ್ತಾರೆ. ಇವೆಲ್ಲದರ ಜೊತೆಗೆ, ಬಂಡೌನಲ್ಲಿ ಒಂದು ಅಕಾಡೆಮಿಯಿದ್ದು ಅದು ಅತ್ಯಂತ ದೊಡ್ಡದಾಗಿದೆ ಹಾಗೂ ಜಪಾನ್‌ನಲ್ಲಿರುವ ಎಲ್ಲ ಅಕಾಡೆಮಿಗಳ ಪೈಕಿ ಅತ್ಯಂತ ಪ್ರಸಿದ್ಧವಾಗಿದೆ, ಮತ್ತು ಇದು ಮಿಯಾಕೊದಿಂದ ತುಂಬಾ ದೂರದಲ್ಲಿದೆ. ಬಂಡೌ ಒಂದು ಬೃಹತ್ತಾದ ಸೀಮಾಪ್ರದೇಶವಾಗಿದ್ದು, ಆರು ಚಿಕ್ಕ ರಾಜಕುಮಾರರಿಂದ ಆಳಲ್ಪಡುತ್ತದೆ. ಅವರಲ್ಲೊಬ್ಬ ಇತರರಿಗಿಂತ ಅತ್ಯಂತ ಶಕ್ತಿಶಾಲಿಯಾಗಿದ್ದು, ಇತರರು ಅವನ ವಿಧೇಯರಾಗಿದ್ದಾರೆ. ಈ ಶಕ್ತಿಶಾಲಿ ರಾಜಕುಮಾರ ಸ್ವತಃ ಜಪಾನ್‌ನ ರಾಜನ ಅಧೀನಕ್ಕೆ ಒಳಪಟ್ಟಿದ್ದು, ಅವನನ್ನು ಮಿಯಾಕೊದ ಮಹಾನ್‌ ದೊರೆ ಎನ್ನಲಾಗುತ್ತದೆ. ಈ ವಿಶ್ವವಿದ್ಯಾಲಯಗಳು ಹಾಗೂ ನಗರಗಳ ಹಿರಿಮೆ ಹಾಗೂ ಪ್ರಖ್ಯಾತಿಗಳಾಗಿ ಪ್ರಕಟಪಡಿಸಲ್ಪಟ್ಟ ವಿಷಯಗಳು ಎಷ್ಟು ಅದ್ಭುತವಾಗಿವೆಯೆಂದರೆ, ಮೊದಲು ಅವನ್ನು ನಮ್ಮ ಸ್ವಂತ ಕಣ್ಣುಗಳಿಂದ ನೋಡಿ, ನಿಜವನ್ನು ಖಚಿತಪಡಿಸಿಕೊಳ್ಳುವಂತೆ ಮಾಡುತ್ತವೆ, ಮತ್ತು ನಾವು ಅವನ್ನು ಕಂಡುಕೊಂಡಾಗ ಮತ್ತು ಸದರಿ ವಿಷಯಗಳು ಹೇಗಿವೆ ಎಂದು ಅರಿತಾಗ, ಅವುಗಳ ಕುರಿತಾದ ಒಂದು ವಿವರಣೆಯನ್ನು ನಿಮಗೆ ಬರೆಯುವಂತೆ ಮಾಡುತ್ತವೆ.  
ನಾವು ಉಲ್ಲೇಖಿಸಿರುವ ಅಕಾಡೆಮಿಗಳ ಜೊತೆಜೊತೆಗೇ ಕಡಿಮೆ ಪ್ರಸಿದ್ಧಿ-ಪ್ರಾಧಾನ್ಯತೆಯ ಹಲವಾರು ಅಕಾಡೆಮಿಗಳು ಅಲ್ಲಿ ಇವೆಯೆಂದು ನಮಗೆ ತಿಳಿದುಬಂತು"

ಷುಡೋ[ಬದಲಾಯಿಸಿ]

ಕಿರಿಯ ಮತ್ತು ವಯಸ್ಸಾದ ಸಮುರಾಯ್‌ ನಡುವಿನ ಒಂದು ಷುಡೋ-ಮಾದರಿಯ ಹೋರಾಟ. 1661ರ "ಟೇಲ್‌ ಆಫ್‌ ಷುಡೋ" (衆道物語) ಕಥೆಯಿಂದ.

ಓರ್ವ ನುರಿತವ ಹಾಗೂ ಓರ್ವ ನುರಿತಿಲ್ಲದ ಸಮುರಾಯ್‌ ನಡುವಿನ ಪ್ರೀತಿಯ ಬಂಧಗಳ ಸಂಪ್ರದಾಯವಾದ ಷುಡೋ ವನ್ನು (衆道) "ಸಮುರಾಯ್‌ ಮನೋಧರ್ಮದ ಹೂವು" ಎಂದು ಪರಿಗಣಿಸಲಾಗಿತ್ತು ಮತ್ತು ಸಮುರಾಯ್‌ಗಳ ಸೌಂದರ್ಯಮೀಮಾಂಸೆಯ ನಿಜವಾದ ತಳಹದಿಯನ್ನು ಅದು ರೂಪಿಸಿತು. ಬುಷಿಡೊದಲ್ಲಿರುವ ನಂಬಿಕೆಗಳಿಂದ ಈ ಪರಿಪಾಠವು ಹುಟ್ಟಿದೆ ಎಂದು ಸಾಮಾನ್ಯವಾಗಿ ನಂಬಲಾಗುತ್ತದೆ. ಬುಷಿಡೊದ ಅತ್ಯಂತ ಮುಂಚಿನ ಸಿದ್ಧಾಂತಗಳ ಮೇಲೆ ಆರಂಭದಲ್ಲಿ ಪ್ರಭಾವ ಬೀರಿದ ಬೌದ್ಧ ಸನ್ಯಾಸಿಗಳಿಂದ ಈ ನಂಬಿಕೆಗಳು ಉದ್ಭವಿಸಿವೆ ಎಂದು ಅನೇಕರು ಊಹಿಸುತ್ತಾರೆ. ಇದು ಶಿಕ್ಷಣಕ್ಕೆ ಸಂಬಂಧಿಸಿದ ಗ್ರೀಕ‌ಬಾಲಕ ಗುದಮೈಥುನವನ್ನು ಹೋಲುವಂತಿದ್ದು, ಸಮುರಾಯ್‌ ಸಮಾಜದಲ್ಲಿನ ಒಂದು ಗೌರವವಿಸಲ್ಪಟ್ಟ ಹಾಗೂ ಪ್ರಮುಖವಾದ ಪರಿಪಾಠವಾಗಿತ್ತು. ಒಂದು ತಲೆಮಾರಿನಿಂದ ಮತ್ತೊಂದಕ್ಕೆ ವರ್ಗಾಯಿಸಲ್ಪಟ್ಟ, ಸಮುರಾಯ್‌ ಸಂಪ್ರದಾಯದ ವಿಶಿಷ್ಟ ಲಕ್ಷಣಗಳು ಹಾಗೂ ಪರಿಣತಿಗಳಲ್ಲಿನ ಪ್ರಮುಖ ದಾರಿಗಳಲ್ಲಿ ಇದು ಒಂದಾಗಿತ್ತು.[ಸೂಕ್ತ ಉಲ್ಲೇಖನ ಬೇಕು]

ಬಿಡೋ (美道 "ಸುಂದರವಾದ ವಿಧಾನ") ಎಂಬುದು ಪ್ರೀತಿಯ ಬಂಧನಗಳಿಗಿದ್ದ ಮತ್ತೊಂದು ಹೆಸರಾಗಿತ್ತು. ಇಬ್ಬರು ಸಮುರಾಯ್‌ಗಳು ಪರಸ್ಪರರ ನಡುವೆ ಹೊಂದಿರಬಹುದಾದ ಅರ್ಪಣಾ ಮನೋಭಾವವು, ತಮ್ಮ ಡೈಮ್ಯೊಗಳ ಕಡೆಗೆ ತಾವು ಹೊಂದಿದ್ದ ಮನೋಭಾವದಷ್ಟೇ ಮಹೋನ್ನತವಾಗಿರುತ್ತಿತ್ತು. ವಾಸ್ತವವಾಗಿ, ಸಮಕಾಲೀನ ದಾಖಲೆಗಳ ಪ್ರಕಾರ, ತನ್ನ ಯಜಮಾನ ಮತ್ತು ತಮ್ಮ ಪ್ರಿಯತಮೆಯ ನಡುವೆ ಆಯ್ಕೆಯ ಪ್ರಶ್ನೆ ಬಂದಾಗ, ಅದು ಸಮುರಾಯ್‌ಗಳಿಗೆ ಒಂದು ತತ್ತ್ವಚಿಂತನೆಯ ಸಮಸ್ಯೆಯಾಗಿ ಪರಿಣಮಿಸುತ್ತಿತ್ತು. ಈ ಸಂಪ್ರದಾಯವು ನಿರ್ವಹಿಸಲ್ಪಡಬೇಕಾದ ಮತ್ತು ಗೌರವಿಸಲ್ಪಡಬೇಕಾದ ವಿಧಾನದ ಕುರಿತು ಹಗಾಕುರೆ ಮತ್ತು ಇತರ ಸಮುರಾಯ್‌ ಕೈಪಿಡಿಗಳು ನಿರ್ದಿಷ್ಟವಾದ ಸೂಚನೆಗಳನ್ನು ನೀಡಿದವು. ಮೀಜಿ ಪುನಃ ಪ್ರತಿಷ್ಠಾಪನೆಯ ನಂತರ ಹಾಗೂ ಒಂದು ಹೆಚ್ಚು ಪಾಶ್ಚಾತ್ಯೀಕರಿಸಿದ ಜೀವನಶೈಲಿಯ ಪರಿಚಯವಾದ ನಂತರ, ಈ ಪರಿಪಾಠವು ಕಣ್ಮರೆಯಾಯಿತು.

ಇದರ ಪ್ರತಿಪಾದಕರ ಜೊತೆಗೆ, ಇದರ ಟೀಕಾಕಾರರನ್ನೂ ಸಹ ಷುಡೋ ಸಂಪ್ರದಾಯವು ಹೊಂದಿತ್ತು. ಇಡೋ ಯುಗದಲ್ಲಿ ಇನ್‌ಸೈಸೆನ್‌ ಎಂಬ ಗುಪ್ತನಾಮದಿಂದ ಬರೆಯಲ್ಪಟ್ಟ "ಕೀಚು ಕಿಬುನ್‌ ಮಕುರಬಂಕೊ" ಎಂಬ ಕೃತಿಯು ಸ್ಪಷ್ಟವಾಗಿ ವಿಮರ್ಶಾತ್ಮಕ ಲಕ್ಷಣವನ್ನು ಹೊಂದಿದೆ.[೧೦]

ಹೆಸರುಗಳು[ಬದಲಾಯಿಸಿ]

ಓರ್ವ ಸಮುರಾಯ್‌ನ ಹೆಸರನ್ನು, ಅವನ ತಂದೆಯಿಂದ ಅಥವಾ ತಾತನಿಂದ ಪಡೆದ ಒಂದು ಕಾಂಜೀ ಲಿಪಿ ಹಾಗೂ ಒಂದು ಹೊಸದಾದ ಕಾಂಜೀ ಲಿಪಿಯನ್ನು ಸಂಯೋಜಿಸುವ ಮೂಲಕ ಸಾಮಾನ್ಯವಾಗಿ ಇಡಲಾಗುತ್ತಿತ್ತು. ಸಮುರಾಯ್‌ಗಳು ತಮ್ಮ ಒಟ್ಟಾರೆ ಹೆಸರಿನ ಕೇವಲ ಒಂದು ಸಣ್ಣ ಭಾಗವನ್ನಷ್ಟೇ ಸಾಮಾನ್ಯವಾಗಿ ಬಳಸುತ್ತಿದ್ದರು.

ಉದಾಹರಣೆಗೆ, ಒಡಾ ನೊಬುನಾಗಾನ ಸಂಪೂರ್ಣನಾಮವು "ಒಡಾ ಕಝುಸನೊಸುಕೆ ಸಬುರೊ ನೊಬುನಾಗಾ" (織田上総介三郎信長) ಎಂದು ಆಗಿರುತ್ತಿತ್ತು. ಇದರಲ್ಲಿ "ಒಡಾ" ಎಂಬುದು ಒಂದು ಬುಡಕಟ್ಟು ಅಥವಾ ಕುಟುಂಬದ ಹೆಸರಾಗಿದ್ದರೆ, "ಕಝುಸನೊಸುಕೆ" ಎಂಬುದು ಕಝುಸಾ ಪ್ರಾಂತ್ಯದ ಉಪ-ಮಂಡಲಾಧಿಪತಿಯ ಒಂದು ಪದವಿಯಾಗಿದೆ; "ಸಬುರೊ" ಎಂಬುದು ವಯಸ್ಸಿನ ಸಂಭ್ರಮಾಚರಣೆಯ ಒಂದು ಆಗಮನವಾದ ಗೆನ್‌ಪುಕು ಎಂಬುದರ ಮುಂಚಿನ ಹೆಸರಾಗಿದೆ ಮತ್ತು "ನೊಬುನಾಗಾ" ಎಂಬುದು ಒಂದು ವಯಸ್ಕ ಹೆಸರಾಗಿದೆ. ಸಮುರಾಯ್‌ಗಳು ತಮ್ಮ ಸ್ವಂತದ ಮೊದಲ ಹೆಸರುಗಳನ್ನು ಆಯ್ಕೆಮಾಡಿಕೊಳ್ಳಬಲ್ಲವರಾಗಿದ್ದರು.

ವಿವಾಹ[ಬದಲಾಯಿಸಿ]

ಮದುವೆಯಾಗುತ್ತಿರುವವರದೇ ದರ್ಜೆಯ ಅಥವಾ ಅದಕ್ಕಿಂತ ಹೆಚ್ಚಿನ ದರ್ಜೆಯವರೊಬ್ಬರು ವ್ಯವಸ್ತೆಗೊಳಿಸಿದ ಒಂದು ವಿವಾಹಕ್ಕೆ ಸಮ್ಮತಿಸುವುದರ ಮೂಲಕ ಸಮುರಾಯ್‌ಗಳ ವಿವಾಹವು ನಡೆಯುತ್ತಿತ್ತು. ಮೇಲಿನ ದರ್ಜೆಯಲ್ಲಿರುವ ಸಮುರಾಯ್‌ಗಳಿಗೆ ಇದೊಂದು ಅನಿವಾರ್ಯತೆಯಾಗಿದ್ದರೆ (ಏಕೆಂದರೆ, ಬಹುತೇಕರಿಗೆ ಓರ್ವ ಮಹಿಳೆಯನ್ನು ಭೇಟಿಮಾಡುವ ಅವಕಾಶಗಳು ತುಂಬಾ ಕಡಿಮೆಯಿರುತ್ತಿದ್ದವು), ಕೆಳಗಿನ ದರ್ಜೆಯ ಸಮುರಾಯ್‌ಗಳಿಗೆ ಇದೊಂದು ವಿಹಿತಾಚರಣೆಯಾಗಿತ್ತು. ಬಹುಪಾಲು ಸಮುರಾಯ್‌ಗಳು ಸಮುರಾಯ್‌ ಕುಟುಂಬದಿಂದ ಬಂದ ಮಹಿಳೆಯರನ್ನು ಮದುವೆಯಾಗುತ್ತಿದ್ದರು, ಆದರೆ ಓರ್ವ ಕೆಳದರ್ಜೆಯ ಸಮುರಾಯ್‌ಗೆ ಶ್ರೀಸಾಮಾನ್ಯರೊಂದಿಗಿನ ವಿವಾಹಗಳಿಗೆ ಅವಕಾಶ ನೀಡಲಾಗಿತ್ತು. ಈ ವಿವಾಹಗಳಲ್ಲಿ ವರದಕ್ಷಿಣೆಯು ಮಹಿಳೆಯಿಂದ ತರಲ್ಪಡುತ್ತಿತ್ತು ಹಾಗೂ ತಮ್ಮ ಹೊಸ ಜೀವನಗಳನ್ನು ಶುರುಮಾಡಲು ಅದನ್ನವರು ಬಳಸಿಕೊಳ್ಳುತ್ತಿದ್ದರು.

ಓರ್ವ ಸಮುರಾಯ್‌ ಉಪಪತ್ನಿಯೊಬ್ಬಳನ್ನು ಹೊಂದಬಹುದಿತ್ತು, ಆದರೆ ಅವಳ ಹಿನ್ನೆಲೆಯನ್ನು ಉನ್ನತ ದರ್ಜೆಯ ಸಮುರಾಯ್‌ಗಳು ಕಟ್ಟುನಿಟ್ಟಾಗಿ ತಪಾಸಿಸುತ್ತಿದ್ದರು. ಅನೇಕ ನಿದರ್ಶನಗಳಲ್ಲಿ, ಇದನ್ನೊಂದು ವಿವಾಹದ ರೀತಿಯಲ್ಲಿ ಪರಿಗಣಿಸಲಾಗುತ್ತಿತ್ತು. ಉಪಪತ್ನಿಯೋರ್ವಳನ್ನು "ಅಪಹರಿಸುವುದು" ಕಥೆ-ಕಾದಂಬರಿಗಳಲ್ಲಿ ಸಾಮಾನ್ಯವಾಗಿರುತ್ತದೆಯಾದರೂ, ಅದು ಒಂದು ಅಪರಾಧವಲ್ಲದಿದ್ದರೂ ಅವಮಾನಕರವಾಗಿರುತ್ತಿತ್ತು. ಅವಳು ಓರ್ವ ಶ್ರೀಸಾಮಾನ್ಯ ಕುಟುಂಬಕ್ಕೆ ಸೇರಿದವಳಾಗಿದ್ದಾಗ, ನಿಶ್ಚಿತಾರ್ಥದ ಹಣದೊಂದಿಗೆ ಅಥವಾ ಅಥವಾ ತೆರಿಗೆಯ ವಿನಾಯಿತಿಗೆ ಸಂಬಂಧಿಸಿದ ಒಂದು ಟಿಪ್ಪಣಿಯೊಂದಿಗೆ ಓರ್ವ ಸಂದೇಶವಾಹಕನನ್ನು ಅವರಲ್ಲಿಗೆ ಕಳಿಸಿ, ಅವಳ ಹೆತ್ತವರ ಒಪ್ಪಿಗೆಯನ್ನು ಕೇಳಲಾಗುತ್ತಿತ್ತು. ಹೆತ್ತವರನೇಕರು ಇದಕ್ಕೆ ಸಂತೋಷದಿಂದ ಒಪ್ಪುತ್ತಿದ್ದರು. ಒಂದು ವೇಳೆ ಓರ್ವ ಸಮುರಾಯ್‌ ಹೆಂಡತಿಯು ಮಗನೊಬ್ಬನಿಗೆ ಜನ್ಮವಿತ್ತರೆ ಅವನು ಓರ್ವ ಸಮುರಾಯ್‌ ಆಗಬಹುದಿತ್ತು.

ಓರ್ವ ಮೇಲಧಿಕಾರಿಯಿಂದ ಅನುಮೋದನೆಯನ್ನು ಪಡೆಯುವುದರೊಂದಿಗೆ, ವೈವಿಧ್ಯಮಯ ಕಾರಣಗಳಿಗಾಗಿ ಓರ್ವ ಸಮುರಾಯ್‌ ತನ್ನ ಹೆಂಡತಿಯನ್ನು ವಿಚ್ಛೇದನ ಮಾಡಬಹುದಿತ್ತಾದರೂ, ವಿಚ್ಛೇದನವು ಸಂಪೂರ್ಣವಾಗಿ ಅನಸ್ತಿತ್ವದ್ದಲ್ಲದ್ದಾಗಿದ್ದರೂ, ಅದೊಂದು ಅಪರೂಪದ ಸಂಗತಿಯಾಗಿತ್ತು. ಓರ್ವ ಮಗನನ್ನು ಹೆರಲು ಸಾಧ್ಯವಾಗದಿರುವುದು ವಿಚ್ಛೇದನಕ್ಕಾಗಿದ್ದ ಒಂದು ಕಾರಣವಾಗಿದ್ದರೆ, ಆಗ ವಿಚ್ಛೇದನಕ್ಕೆ ಪರ್ಯಾಯವಾಗಿ ದತ್ತುಸ್ವೀಕಾರವನ್ನು ವ್ಯವಸ್ಥೆ ಮಾಡಲಾಗುತ್ತಿತ್ತು. ವೈಯಕ್ತಿಕ ಕಾರಣಗಳಿಗಾಗಿ, ಅಂದರೆ ಒಂದು ವೇಳೆ ಓರ್ವ ಸಮುರಾಯ್‌ ತನ್ನ ಹೆಂಡತಿಯನ್ನು ಆತ ಇಷ್ಟಪಡದಿದ್ದರೆ, ಆತ ಅವಳನ್ನು ವಿಚ್ಛೇದಿಸಬಹುದಾಗಿತ್ತು; ಆದರೆ ಅವರ ವಿವಾಹವನ್ನು ವ್ಯವಸ್ಥೆಗೊಳಿಸಿದ್ದ ಸಮುರಾಯ್‌ಗಳಿಗೆ ಇದು ಮುಜುಗರ ಉಂಟುಮಾಡಬಹುದು ಎಂಬ ಕಾರಣಕ್ಕೆ ಸಾಮಾನ್ಯವಾಗಿ ವಿಚ್ಛೇದನವನ್ನು ತಪ್ಪಿಸಲಾಗುತ್ತಿತ್ತು. ಓರ್ವ ಮಹಿಳೆಯು ವಿಚ್ಛೇದನವೊಂದಕ್ಕೆ ವ್ಯವಸ್ಥೆ ಮಾಡಿಕೊಳ್ಳಬಹುದಾಗಿತ್ತಾದರೂ, ಅವಳನ್ನು ಓರ್ವ ಸಮುರಾಯ್‌ ವಿಚ್ಛೇದಿಸುತ್ತಿರುವ ಸ್ವರೂಪವನ್ನೇ ಸಾಮಾನ್ಯವಾಗಿ ಅದು ತೆಗೆದುಕೊಳ್ಳುತ್ತಿತ್ತು. ಒಂದು ವಿಚ್ಛೇದನದ ನಂತರ ಸಮುರಾಯ್‌ಗಳು ನಿಶ್ಚಿತಾರ್ಥದ ಹಣವನ್ನು ಹಿಂದಿರುಗಿಸಬೇಕಿತ್ತಾದ್ದರಿಂದ ಅದು ಅನೇಕ ಬಾರಿ ವಿಚ್ಛೇದನಗಳಾಗುವುದನ್ನು ತಡೆಯುತ್ತಿತ್ತು. ಕೆಲವೊಂದು ಶ್ರೀಮಂತ ವರ್ತಕರು ಸಮುರಾಯ್‌ಗಳೊಂದಿಗಿನ ತಮ್ಮ ಸಾಲವನ್ನು ವಜಾಮಾಡಲು ಮತ್ತು ತಮ್ಮ ಸ್ಥಾನಮಾನಗಳನ್ನು ಹೆಚ್ಚಿಸಿಕೊಳ್ಳಲು, ತಮ್ಮ ಹೆಣ್ಣುಮಕ್ಕಳನ್ನು ಸಮುರಾಯ್‌ಗಳಿಗೆ ಕೊಟ್ಟು ಮದುವೆ ಮಾಡುತ್ತಿದ್ದರು.

ಒಂದು ವೇಳೆ ಓರ್ವ ಸಮುರಾಯ್‌ನ ಹೆಂಡತಿಯು ಪರಿತ್ಯಜಿಸಲ್ಪಟ್ಟರೆ, ಅವಳನ್ನು ಅಗೌರವದಿಂದ ಕಾಣಲಾಗುತ್ತಿತ್ತು ಹಾಗೂ ಜಿಗಾಯ್‌ [ಓರ್ವ ಸ್ತ್ರೀಯ ಆತ್ಮಹತ್ಯೆ (ಸೆಪೂಕು)] ಮಾಡಿಕೊಳ್ಳಲು ಅವಳಿಗೆ ಅವಕಾಶ ಕೊಡಲಾಗುತ್ತಿತ್ತು.[ಸೂಕ್ತ ಉಲ್ಲೇಖನ ಬೇಕು]

ತತ್ವಜ್ಞಾನ[ಬದಲಾಯಿಸಿ]

ಬೌದ್ಧಮತ ಹಾಗೂ ಝೆನ್‌ ಪಂಥದ ತತ್ತ್ವಚಿಂತನೆಗಳು, ಮತ್ತು ಒಂದು ಕಡಿಮೆ ಪ್ರಮಾಣದಲ್ಲಿ ಕನ್‌ಫ್ಯೂಷಿಯನ್‌ ಮತ ಹಾಗೂ ಷಿಂಟೊ ಪಂಥಗಳು ಸಮುರಾಯ್‌ ಸಂಸ್ಕೃತಿಯ ಮೇಲೆ ಪ್ರಭಾವ ಬೀರಿದವು. ಝೆನ್‌ ಧ್ಯಾನವು

ಓರ್ವರ ಮನಸ್ಸನ್ನು ಶಾಂತಗೊಳಿಸಲು ಇರುವ ಒಂದು ಪ್ರಕ್ರಿಯೆಯನ್ನು ನೀಡುತ್ತಿತ್ತಾದ್ದರಿಂದ, ಒಂದು ಪ್ರಮುಖ ಬೋಧನೆಯಾಗಿ ಪರಿಣಮಿಸಿತು. ಬೌದ್ಧಮತದ ಪುನರವತಾರ ಮತ್ತು ಮರುಹುಟ್ಟಿನ ಪರಿಕಲ್ಪನೆಗಳ ಕಾರಣದಿಂದಾಗಿ ಚಿತ್ರಹಿಂಸೆ ಮತ್ತು ಅನಾವಶ್ಯಕವಾದ ಸಾಯಿಸುವಿಕೆಯನ್ನು ಸಮುರಾಯ್‌ಗಳು ಪರಿತ್ಯಜಿಸುವಂತಾಯಿತು. ಕೆಲವೊಂದು ಸಮುರಾಯ್‌ಗಳು ಸಂಪೂರ್ಣವಾಗಿ ಹಿಂಸೆಯನ್ನು ತ್ಯಜಿಸಿದರು ಹಾಗೂ ತಾವು ಕೈಗೊಂಡ ಸಾಯಿಸುವಿಕೆಗಳು ಎಷ್ಟರಮಟ್ಟಿಗೆ ನಿರರ್ಥಕವಾಗಿದ್ದವು ಎಂಬುದನ್ನು ಅರಿತುಕೊಂಡ ನಂತರ ಅವರು ಬೌದ್ಧ ಸನ್ಯಾಸಿಗಳಾದರು. ಈ ಸಾಕ್ಷಾತ್ಕರಣಗಳೊಂದಿಗೆ ಅವರು ರಾಜಿಮಾಡಿಕೊಂಡಿದ್ದರಿಂದಾಗಿ ರಣಾಂಗಣದಲ್ಲಿ ಕೆಲವೊಬ್ಬರು ಕೊಲ್ಲಲ್ಪಟ್ಟರು. ಸಮುರಾಯ್‌ ತತ್ತ್ವಚಿಂತನೆಯಲ್ಲಿ ಕನ್‌ಫ್ಯೂಷಿಯನ್‌ ಮತವು ವಹಿಸಿದ ಅತ್ಯಂತ ವಿಶದೀಕರಿಸುವ ಪಾತ್ರವೆಂದರೆ, ಧಣಿ-ಅನುಚರನ ನಡುವಿನ ಸಂಬಂಧದ ಪ್ರಾಮುಖ್ಯತೆಯೆಡೆಗೆ ಅದು ಒತ್ತುನೀಡಿದ್ದು; ಇದು ತನ್ನ ಧಣಿಯೆಡೆಗೆ ಓರ್ವ ಸಮುರಾಯ್‌ ತೋರಬೇಕಿರುವ ಸ್ವಾಮಿನಿಷ್ಠೆಯನ್ನು ಕುರಿತದ್ದಾಗಿದೆ.

ಬುಷಿಡೋ ("ಯೋಧನ ಕಾರ್ಯವಿಧಾನ") ಎಂಬುದೊಂದು ಪದವಾಗಿದ್ದು, 1885ರಲ್ಲಿ ಚೀನಾವನ್ನು ಮತ್ತು 1905ರಲ್ಲಿ[೧೧] ರಷ್ಯಾವನ್ನು ಜಪಾನಿಯರು ಸೋಲಿಸಿದ ನಂತರ, ಬೌದ್ಧಿಕ ಹಾಗೂ ರಾಷ್ಟ್ರೀಯತಾವಾದಿ ಉಪನ್ಯಾಸಗಳಲ್ಲಿ ಅದು ಕಾಣಿಸಿಕೊಳ್ಳಲು ಪ್ರಾರಂಭಿಸಿತು. ಟೊಕುಗವಾ ಅವಧಿಯಲ್ಲಿ (1603-1868) ಯಮಾಮೊಟೋ ತ್ಸುನೆಟೊಮೊನಿಂದ ಬರೆಯಲ್ಪಟ್ಟ ಹಗಾಕುರೆ ಅಥವಾ "ಹಿಡನ್‌ ಇನ್‌ ಲೀವ್ಸ್‌" ಮತ್ತು ಮಿಯಾಮೊಟೊ ಮುಸಾಷಿಯಿಂದ ಬರೆಯಲ್ಪಟ್ಟ ಗೋರಿನ್‌ ನೊ ಷೊ ಅಥವಾ "ಬುಕ್‌ ಆಫ್‌ ದಿ ಫೈವ್‌ ರಿಂಗ್ಸ್‌" ಎಂಬ ಕೃತಿಗಳೆರಡೂ, ಬುಷಿಡೊ ಮತ್ತು ಝೆನ್‌ ತತ್ತ್ವಚಿಂತನೆಯೊಂದಿಗೆ ಅನೇಕ ವೇಳೆ ಸಂಬಂಧವನ್ನು ಹೊಂದಿರುವ ಸಿದ್ಧಾಂತಗಳಾಗಿವೆ.

ಬೌದ್ಧಮತ ಹಾಗೂ ಝೆನ್‌ ಪಂಥದ ತತ್ತ್ವಚಿಂತನೆಗಳು, ಮತ್ತು ಒಂದು ಕಡಿಮೆ ಪ್ರಮಾಣದಲ್ಲಿ ಕನ್‌ಫ್ಯೂಷಿಯನ್‌ ಮತ ಹಾಗೂ ಷಿಂಟೊ ಪಂಥಗಳು ಸಮುರಾಯ್‌ ಸಂಸ್ಕೃತಿಯ ಬೆಳವಣಿಗೆಗೆ ಕಾರಣವಾಗಿವೆ. "ಝೆನ್‌ ಪಂಥವು ಜಪಾನಿಯರ ಸಂಸ್ಕೃತಿಯೊಂದಿಗೆ ಸಾರ್ವತ್ರಿಕವಾಗಿ, ಹಾಗೂ ಬುಷಿಡೊನೊಂದಿಗೆ ನಿರ್ದಿಷ್ಟವಾಗಿ ಒಂದು ರೀತಿಯ ಸಂಬಂಧ ಹೊಂದಿದೆ ಎಂಬ ಎಣಿಕೆಯು, D. T. ಸುಝುಕಿಯ ಬರಹಗಳ ಮೂಲಕ ಝೆನ್‌ನ ಪಾಶ್ಚಾತ್ಯ ವಿದ್ಯಾರ್ಥಿಗಳಿಗೆ ನಿಕಟವಾಗಿದೆ. ಅಷ್ಟೇ ಅಲ್ಲ, ಪಶ್ಚಿಮ ದೇಶಗಳಲ್ಲಿ ಝೆನ್‌ ಪಂಥದ ಹರಡುವಿಕೆಯಲ್ಲಿ ಸುಝುಕಿಯದು ನಿಸ್ಸಂದೇಹವಾಗಿ ಒಂದು ಏಕೈಕ ಪ್ರಮುಖ ಪಾತ್ರವಾಗಿದೆ." [೧೨]

ಏಂಜರ್‌ನ (ಹಾನ್‌-ಸಿರೊನ ಪಾಶ್ಚಾತ್ಯ ನಾಮ) ಹೇಳಿಕೆಗಳಿಂದ ಮಾಹಿತಿಯನ್ನು ಪಡೆದು ರೂಪಿಸಿ ರೋಮ್‌ನಲ್ಲಿರುವ ಫಾದರ್‌ ಇಗ್ನೇಷಿಯಸ್‌ ಲಯೋಲಾಗೆ ಕಳಿಸಲಾದ ಜಪಾನಿನ ಕುರಿತಾದ ವರದಿಯೊಂದರಲ್ಲಿ, ಜಪಾನಿಯರು ಘನತೆಗೆ ಎಷ್ಟೊಂದು ಪ್ರಾಮುಖ್ಯತೆಯನ್ನು ಕೊಡುತ್ತಿದ್ದರು ಎಂಬುದನ್ನು ಕ್ಸೇವಿಯರ್‌ ಹೀಗೆ ವಿವರಿಸುತ್ತಾನೆ (ಈ ಪತ್ರವನ್ನು ಕೊಯಿಂಬ್ರಾದ ಕಾಲೇಜಿನಲ್ಲಿ ಸಂರಕ್ಷಿಸಿಡಲಾಗಿದೆ.):

"ಮೊದಲನೆಯದಾಗಿ, ನಾವು ಯಾವ ರಾಷ್ಟ್ರದೊಂದಿಗೆ ಸಂಬಂಧವಿರಿಸಿಕೊಳ್ಳಬೇಕಿತ್ತೋ ಅದು, ಬೇರಾವುದೇ ರಾಷ್ಟ್ರವು ತಡವಾಗಿ ಕಂಡುಕೊಂಡ ಉತ್ತಮಿಕೆಯಲ್ಲಿ ಮೇಲುಗೈ ಸಾಧಿಸಿದೆ. ನಾನು ನಿಜವಾಗಿ ಆಲೋಚಿಸುವುದೇನೆಂದರೆ, ಕ್ರೈಸ್ತೇತರ ಅಥವಾ ಅನ್ಯದೇಶೀಯ ರಾಷ್ಟ್ರಗಳ ಪೈಕಿ ಜಪಾನಿಯರು ಹೊಂದಿರುವುದಕ್ಕಿಂತ ಹೆಚ್ಚಿನ ಪ್ರಮಾಣದ ಸ್ವಾಭಾವಿಕ ಉತ್ತಮಿಕೆಯನ್ನು ಹೊಂದಿರುವ ಜನರು ಬೇರಾವುದೇ ರಾಷ್ಟ್ರದಲ್ಲಿರಲು ಸಾಧ್ಯವಿಲ್ಲ.

ಅವರು ಒಂದು ರೀತಿಯ ಕರುಣಾಶೀಲವಾದ ಮನೋಧರ್ಮದ ಜನರಾಗಿದ್ದು, ಮೋಸಗಾರಿಕೆಗೆ ತಮ್ಮನ್ನು ಒಡ್ಡಿಕೊಳ್ಳುವುದಿಲ್ಲ. ಅದ್ಭುತವೆನಿಸುವ ರೀತಿಯಲ್ಲಿ ಅವರು ಘನತೆ ಮತ್ತು ಉನ್ನತ ದರ್ಜೆಯನ್ನು ಅಪೇಕ್ಷಿಸುತ್ತಾರೆ. ಘನತೆಗೆ ಅವರು ಎಲ್ಲದಕ್ಕಿಂತ ಮೇಲಿನ ಸ್ಥಾನವನ್ನು ಕಲ್ಪಿಸಿಕೊಟ್ಟಿದ್ದಾರೆ. ಅವರಲ್ಲಿ ಬಹಳಷ್ಟು ಕಡುಬಡವರಿದ್ದಾರೆ, ಆದರೆ ಅದನ್ನು ಅವರಾರೂ ಒಂದು ಅಪಮಾನಕಾರಿ ಎಂಬಂತೆ ಅಥವಾ ನಾಚಿಕೆಗೇಡು ಎಂಬಂತೆ ಭಾವಿಸಿಲ್ಲ.  ಅವರೊಳಗೆ ಕಂಡುಬರುವ ಒಂದು ಅಭ್ಯಾಸವು ಕ್ರೈಸ್ತರ ಪೈಕಿ ಎಲ್ಲಾದರೂ ಆಚರಣೆಯಲ್ಲಿದೆಯೇ ಎಂಬ ಬಗ್ಗೆ ನನಗೆ ಅಷ್ಟೊಂದು ಗೊತ್ತಿಲ್ಲ. ಉದಾತ್ತತೆಯನ್ನು ಹೊಂದಿರುವ ಜನರು, ಅವರೆಷ್ಟೇ ಬಡವರಾಗಿರಲಿ, ಒಂದುಪಕ್ಷ ಅವರು ಶ್ರೀಮಂತರಾಗಿದ್ದರೆ ಇತರರು ಅವರಿಗೆ ಎಷ್ಟು ಗೌರವ ಕೊಡುತ್ತಿದ್ದರೋ ಅದೇ ಪ್ರಮಾಣದ ಗೌರವಾದರವನ್ನು ಸ್ವೀಕರಿಸುತ್ತಾರೆ" [೧೩]

ಮಹಿಳೆಯರು[ಬದಲಾಯಿಸಿ]

ಗೃಹಕೃತ್ಯವನ್ನು ನಿರ್ವಹಿಸುವುದು ಸಮುರಾಯ್‌ ಮಹಿಳೆಯರ ಪ್ರಮುಖ ಕರ್ತವ್ಯವಾಗಿತ್ತು. ತುಂಬಾ ಮುಂಚಿನ ಊಳಿಗಮಾನ್ಯ ಪದ್ಧತಿಯ ಜಪಾನ್‌ನ ಅವಧಿಯಲ್ಲಿ, ಅದರಲ್ಲೂ ವಿಶೇಷವಾಗಿ ಯೋಧರಾಗಿದ್ದ ಗಂಡಂದಿರು ಹೊರನಾಡಿನಲ್ಲಿ ಸಂಚರಿಸುತ್ತಿರುವಾಗ ಅಥವಾ ಬುಡಕಟ್ಟು ಕದನಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾಗ, ಇದು ನಿರ್ಣಾಯಕ ಪಾತ್ರವನ್ನು ವಹಿಸಿತ್ತು. ಹೆಂಡತಿ, ಅಥವಾ ಒಕುಸಾನ್‌ ಗೆ (ಮನೆಯಲ್ಲಿ ಯಾರು ಉಳಿದಿರುತ್ತಾಳೋ ಅವಳು ಎಂದು ಇದರ ಅರ್ಥ), ಮನೆಯ ಎಲ್ಲಾ ವ್ಯವಹಾರಗಳನ್ನೂ ನಿರ್ವಹಿಸುವ ಹೊಣೆಗಾರಿಕೆಯನ್ನು ಒಪ್ಪಿಸಲಾಗುತ್ತಿತ್ತು, ಮಕ್ಕಳ ಯೋಗಕ್ಷೇಮವನ್ನೂ ಅವಳು ನೋಡಿಕೊಳ್ಳಬೇಕಿತ್ತು ಮತ್ತು ಪ್ರಾಯಶಃ ಕೆಲವೊಮ್ಮೆ ಆಕೆಯು ಬಲವಂತವಾಗಿ ಮನೆಯನ್ನು ಸಮರ್ಥಿಸಿಕೊಳ್ಳಬೇಕಾಗಿ ಬರುತ್ತಿತ್ತು. ಈ ಕಾರಣಕ್ಕಾಗಿ, ನಗಿನಾಟಾ ಎಂದು ಕರೆಯಲಾಗುವ ಒಂದು ರಣಗೊಡಲಿಯನ್ನು ಅಥವಾ ಕೈಕೆನ್‌ ಎಂದು ಕರೆಯಲಾಗುವ ಒಂದು ವಿಶೇಷ ಚಾಕುವನ್ನು ಪ್ರಯೋಗಿಸುವಲ್ಲಿನ ತರಬೇತಿಯನ್ನು ಸಮುರಾಯ್‌ ವರ್ಗದ ಅನೇಕ ಮಹಿಳೆಯರಿಗೆ ನೀಡಲಾಗುತ್ತಿತ್ತು. ಈ ಕಲೆಗೆ ಟ್ಯಾಂಟೊಜುಟ್ಸು (ಅಕ್ಷರಶಃ ಅರ್ಥ: ಚಾಕುವಿನ ಕುಶಲತೆ) ಎಂಬ ಹೆಸರಿದ್ದು, ಇದನ್ನವರು ಅಗತ್ಯ ಬಂದಾಗ ತಮ್ಮ ಮನೆ, ಕುಟುಂಬ ಮತ್ತು ಘನತೆಯನ್ನು ರಕ್ಷಿಸಿಕೊಳ್ಳಲು ಬಳಸುತ್ತಿದ್ದರು.

ಮಾನ್ಯತೆ ನೀಡಲ್ಪಡುತ್ತಿದ್ದ ಸಮುರಾಯ್‌ ವರ್ಗದ ಮಹಿಳೆಯರಲ್ಲಿದ್ದ ಗುಣಗಳಲ್ಲಿ ನಮ್ರತೆ, ವಿಧೇಯತೆ, ಆತ್ಮಸಂಯಮ, ಬಲ, ಮತ್ತು ನಿಷ್ಠಾವಂತಿಕೆಗಳು ಸೇರಿದ್ದವು. ಆದರ್ಶಪ್ರಾಯವಾದ ರೀತಿಯಲ್ಲಿ, ಓರ್ವ ಸಮುರಾಯ್‌ ಪತ್ನಿಯು, ಆಸ್ತಿಯ ನಿರ್ವಹಣೆ, ದಾಖಲೆಪತ್ರಗಳನ್ನು ಇಡುವುದು, ಹಣಕಾಸಿಗೆ ಸಂಬಂಧಪಟ್ಟ ವಿಷಯಗಳೊಂದಿಗೆ ವ್ಯವಹರಿಸುವುದು, ಮಕ್ಕಳಿಗೆ ಶಿಕ್ಷಣ ನೀಡುವುದು (ಮತ್ತು ಕೆಲವೊಮ್ಮೆ ಸೇವಕರಿಗೆ ಕೂಡಾ), ಹಾಗೂ ತನ್ನ ಮನೆಯಲ್ಲಿರಬಹುದಾದ ವಯಸ್ಸಾಗಿರುವ ಹೆತ್ತವರ ಅಥವಾ ಅತ್ತೆ-ಮಾವಂದಿರ ಯೋಗಕ್ಷೇಮವನ್ನು ನೋಡಿಕೊಳ್ಳುವುದು ಇವೆಲ್ಲದರಲ್ಲೂ ಪರಿಣತಿಯನ್ನು ಹೊಂದಿರುತ್ತಿದ್ದಳು. ಯೋಧರ ವರ್ಗದ ವೈಯಕ್ತಿಕ ಸಂಬಂಧಗಳು ಹಾಗೂ ನೀತಿಸಂಹಿತೆಗಳನ್ನು ವಿಶದೀಕರಿಸುವಲ್ಲಿ ಅಥವಾ ಅವುಗಳ ಲಕ್ಷಣಗಳನ್ನು ರೂಪಿಸುವಲ್ಲಿ ನೆರವಾದ ಕನ್‌ಫ್ಯೂಷಿಯಸ್‌ ಸೂತ್ರವು ವಿಧಾಯಕ ಮಾಡಿದ ಪ್ರಕಾರ, ಓರ್ವ ಮಹಿಳೆಯು ತನ್ನ ಗಂಡನಿಗೆ ದಾಸ್ಯ ಮನೋಭಾವನೆಯನ್ನು ತೋರಿಸಬೇಕಿತ್ತು, ಮಕ್ಕಳಿಂದ ಸಲ್ಲಬೇಕಾದ ಶ್ರದ್ಧಾಭಕ್ತಿಗಳನ್ನು ತನ್ನ ಹೆತ್ತವರಿಗೆ ಸಲ್ಲಿಸಬೇಕಿತ್ತು, ಮತ್ತು ಮಕ್ಕಳ ಯೋಗಕ್ಷೇಮವನ್ನು ನೋಡಿಕೊಳ್ಳಬೇಕಿತ್ತು. ಅತಿಯಾದ ಪ್ರೀತಿ ಮತ್ತು ವಾತ್ಸಲ್ಯವನ್ನು ತೋರಿಸಿದರೆ, ಅದು ಕಿರಿಯ ಮಕ್ಕಳನ್ನು ಸ್ವೇಚ್ಛೆಯಾಗಿ ಹರಿಯಬಿಟ್ಟಂತಾಗಿ ಅವರನ್ನು ಹಾಳುಮಾಡುತ್ತದೆ ಎಂದೂ ಸಹ ಈ ಸೂತ್ರದಲ್ಲಿ ಹೇಳಲಾಗಿತ್ತು. ಈ ರೀತಿಯಾಗಿ, ಓರ್ವ ಹೆಂಗಸು ಕೂಡಾ ಶಿಸ್ತನ್ನು ಆಚರಿಸಬೇಕಾಗಿತ್ತು.

ಐಶ್ವರ್ಯವಂತ ಸಮುರಾಯ್‌ ಕುಟುಂಬಗಳಿಗೆ ಸೇರಿದ ಮಹಿಳೆಯರು, ಕೆಳವರ್ಗದ ಮಹಿಳೆಯರು ಅನೇಕ ವೇಳೆ ತೊಡಗಿಸಿಕೊಳ್ಳುವ ದೈಹಿಕ ಶ್ರಮವನ್ನು ತಪ್ಪಿಸಿಕೊಳ್ಳುವಂಥ, ಸಮಾಜದಲ್ಲಿನ ತಮ್ಮ ಉನ್ನತೀಕರಿಸಿದ ಸ್ಥಾನದ ವಿಶೇಷ ಸೌಕರ್ಯಗಳನ್ನು ಅನುಭವಿಸಿದರಾದರೂ, ಅವರನ್ನು ಪುರುಷರಿಗಿಂತ ತುಂಬಾ ಕೆಳಗಿನ ಸ್ಥಾನದಲ್ಲಿರುವವರಂತೆ ಇನ್ನೂ ನೋಡಲಾಗುತ್ತಿತ್ತು. ಯಾವುದೇ ರಾಜಕೀಯ ಸಂಬಂಧಿ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳದಂತೆ ಮಹಿಳೆಯರನ್ನು ನಿಷೇಧಿಸಲಾಗಿತ್ತು ಮತ್ತು ಅವರು ಸಾಮಾನ್ಯವಾಗಿ ತಮ್ಮ ಮನೆಯ ಮುಖ್ಯಸ್ಥರುಗಳಾಗಿರಲಿಲ್ಲ.

ಸಮುರಾಯ್‌ ಮಹಿಳೆಯರು ಯಾವಾಗಲೂ ಅಧಿಕಾರಹೀನರಾಗಿದ್ದರು ಅಥವಾ ಶಕ್ತಿಹೀನರಾಗಿದ್ದರು ಎಂದು ಇದರರ್ಥವಲ್ಲ. ಹಲವಾರು ಸನ್ನಿವೇಶಗಳಲ್ಲಿ ಶಕ್ತಿವಂತ ಮಹಿಳೆಯರು ವಿವೇಕತನದ ಮತ್ತು ವಿವೇಕಶೂನ್ಯವಾದ ವಿಧಾನಗಳೆರಡರಿಂದಲೂ ಶಕ್ತಿಯನ್ನು ಪ್ರಯೋಗಿಸಿದರು. ಅಶಿಕಾಗಾ ಯೊಶಿಮಾಸಾನ ನಂತರ, ಮ್ಯುರೊಮಾಚಿ ಶೊಗುನಾಟೆಯ 8ನೇ ಶೋಗನ್‌ ರಾಜಕೀಯದಲ್ಲಿ ತನ್ನ ಆಸಕ್ತಿಯನ್ನು ಕಳೆದುಕೊಂಡ. ಅವನ ಹೆಂಡತಿಯಾದ ಹಿನೊ ಟೊಮಿಕೊ ಅವನ ಜಾಗದಲ್ಲಿದ್ದುಕೊಂಡು ದೊಡ್ಡದಾದ ರೀತಿಯಲ್ಲಿ ಆಡಳಿತವನ್ನು ನಡೆಸಿದಳು. ಟೊಯೊಟೊಮಿ ಹಿಡೆಯೊಶಿಯ ಪತ್ನಿಯಾದ ನೆನೆ, ತನ್ನ ಪತಿಯ ತೀರ್ಮಾನಗಳನ್ನು ಕೆಲವೊಮ್ಮೆ ರದ್ದುಗೊಳಿಸುವುದಕ್ಕೆ ಚಿರಪರಿಚಿತಳಾಗಿದ್ದಳು ಮತ್ತು ಅವನ ಉಪಪತ್ನಿಯಾದ ಯೊಡೊ, ಹಿಡೆಯೊಶಿಯ ಮರಣದ ನಂತರ ಒಸಾಕಾ ಕೋಟೆಮನೆಯ ಹಾಗೂ ಟೊಯೊಟೊಮಿ ಬುಡಕಟ್ಟಿನ ನಿಜವಾದ ಯಜಮಾನಿಯಾದಳು. ಯಮೌಚಿ ಕಝುಟೊಯೊನ ಪತ್ನಿಯಾದ ಚಿಯೊ ಓರ್ವ ಆದರ್ಶ ಸಮುರಾಯ್‌ ಪತ್ನಿ ಎಂದು ಬಹಳ ಕಾಲದಿಂದ ಪರಿಗಣಿಸಲ್ಪಟ್ಟಿದ್ದಾಳೆ. ಐತಿಹ್ಯದ ಪ್ರಕಾರ, ತನ್ನ ಗಂಡನಿಗಾಗಿ ಒಂದು ಭರ್ಜರಿಯಾದ ಕುದುರೆಯನ್ನು ಖರೀದಿಸಿಕೊಡುವುದಕ್ಕೋಸ್ಕರ, ಹಳೆಯ ಬಟ್ಟೆಯ ತುಣುಕುಗಳ ಮೆತ್ತನೆಯ ಪದಾರ್ಥವಿಟ್ಟು ಹೊಲಿದ ಒಂದು ತೇಪೆಗಾರಿಕೆಯಿಂದ ತನ್ನ ನಿಲುವಂಗಿಯನ್ನು ಆಕೆ ತಯಾರಿಸಿಕೊಂಡಿದ್ದಳು. ಈ ಕುದುರೆಯ ಮೇಲೆ ಸವಾರಿ ಮಾಡಿಯೇ ಅವಳ ಪತಿ ಅನೇಕ ವಿಜಯಗಳನ್ನು ಸಾಧಿಸಿದ್ದ. ಚಿಯೊಳನ್ನು ("ಯಮೌಚಿ ಕಝುಟೊಯೊನ ಹೆಂಡತಿ" ಎಂದೇ ಆಕೆ ಚಿರಪರಿಚಿತಳಾಗಿದ್ದಾಳಾದರೂ) ಅವಳ ಮಿತವ್ಯಯದ ಪ್ರಜ್ಞೆಗಾಗಿ ಈ ರೀತಿಯ ಉನ್ನತವಾದ ಸದಭಿಪ್ರಾಯ ಅಥವಾ ಮನ್ನಣೆಯಲ್ಲಿರಿಸಲಾಗಿರುವ ಅಂಶವು ಒಂದು ವಾಸ್ತವಾಂಶದ ಬೆಳಕಿನಲ್ಲಿ ಗೋಚರಿಸುತ್ತದೆ. ಅವಳು ಓರ್ವ ಉತ್ತರಾಧಿಕಾರಿಗೆ ಎಂದೂ ಜನ್ಮ ನೀಡಲಿಲ್ಲ ಮತ್ತು ಕಝುಟೊಯೊನ ಕಿರಿಯ ಸೋದರನಿಂದ ಯಮೌಚಿ ಬುಡಕಟ್ಟು ಕಾಲಾನುಕ್ರಮವಾಗಿ ಉತ್ತರಾಧಿಕಾರಿತ್ವವನ್ನು ಪಡೆಯಿತು ಎಂಬುದೇ ಆ ವಾಸ್ತವಾಂಶವಾಗಿದೆ. ಹಣಕ್ಕೆ ಸಂಬಂಧಿಸಿದ ವಿಷಯಗಳನ್ನು ಸಮುರಾಯ್‌ಗಳು ಅಸಡ್ಡೆಯಿಂದ ನೋಡುತ್ತಿದ್ದುದು ಹಾಗೂ ತಮ್ಮ ಪತ್ನಿಯರಿಗೆ ತಮ್ಮ ಹಣಕಾಸಿನ ಬಾಬತ್ತುಗಳನ್ನು ವಹಿಸಿಕೊಟ್ಟುದುದು ಪ್ರಾಯಶಃ ಮಹಿಳೆಯರು ಚಲಾಯಿಸಿದ ಅಧಿಕಾರದ ಮೂಲವಾಗಿ ಪರಿಣಮಿಸಿತ್ತು.

ಟೊಕುಗವಾ ಅವಧಿಯು ಮುಂದುವರಿದಂತೆ, ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಯಿತು, ಮತ್ತು ಕಿರಿಯ ವಯಸ್ಸಿನಲ್ಲೇ ಹೆಣ್ಣುಮಕ್ಕಳಿಗೆ ಶಿಕ್ಷಣವನ್ನು ನೀಡುವ ನಿರ್ಧಾರವು ಕುಟುಂಬಗಳಿಗೆ ಮತ್ತು ಒಟ್ಟಾರೆಯಾಗಿ ಸಮಾಜಕ್ಕೆ ಪ್ರಮುಖವಾಗಿ ಕಂಡಿತು. ವಿವಾಹದ ಮಾನದಂಡಗಳು ಹೆಂಡತಿಯೊಬ್ಬಳಲ್ಲಿನ ಶಾರೀರಿಕ ಆಕರ್ಷಕತೆಯ ಜೊತೆಜೊತೆಗೆ, ಬುದ್ಧಿಮತ್ತೆ ಹಾಗೂ ಶಿಕ್ಷಣವನ್ನು ತೂಗಲು ಶುರುಮಾಡಿದವು. ಟೊಕುಗವಾ ಅವಧಿಯ ಸಮಯದಲ್ಲಿ ಮಹಿಳೆಯರಿಗಾಗಿ ಬರೆಯಲಾದ ಅನೇಕ ಮೂಲಗ್ರಂಥ ಪಾಠಗಳು, ಓರ್ವ ಮಹಿಳೆಯು ಓರ್ವ ಯಶಸ್ವೀ ಮಹಿಳೆಯಾಗುವ ಮತ್ತು ಗೃಹಕೃತ್ಯದ ವ್ಯವಸ್ಥಾಪಕಿಯಾಗುವ ಬಗೆ ಹೇಗೆ ಎಂಬುದಕ್ಕೆ ಮಾತ್ರವೇ ಸಂಬಂಧಿಸಿದ್ದರೂ, ಓದಲು ಕಲಿಯುವುದರ ಸವಾಲನ್ನು ಕೈಗೆತ್ತಿಕೊಂಡ ಕೃತಿಗಳೂ ಲಭ್ಯವಿದ್ದವು, ಹಾಗೂ ಅವು ತಾತ್ತ್ವಿಕ ಚಿಂತನೆಯ ಹಾಗೂ ಸಾಹಿತ್ಯಿಕ ಶ್ರೇಷ್ಠಕೃತಿಗಳನ್ನೂ ಸಹ ಎದುರಿಸಿ ನಿಭಾಯಿಸಿದವು. ಟೊಕುಗವಾ ಅವಧಿಯ ಅಂತ್ಯದ ವೇಳೆಗೆ ಸಮುರಾಯ್‌ ವರ್ಗದ ಸರಿಸುಮಾರು ಎಲ್ಲಾ ಮಹಿಳೆಯರೂ ಅಕ್ಷರಸ್ಥರಾಗಿದ್ದರು.

ಆಯುಧಗಳು[ಬದಲಾಯಿಸಿ]

ಚರ್ಮ ಮತ್ತು ಕಬ್ಬಿಣದಿಂದ ಮಾಡಲಾಗಿರುವ, ಒಂದು ಅರ್ಧ-ಮುಖದ ಮುಖವಾಡದೊಂದಿಗಿನ ಸಮುರಾಯ್‌ ಶಿರಸ್ತ್ರಾಣ, ಇಡೊ ಅವಧಿ, 17ನೇ ಶತಮಾನ. ಏಷ್ಯನ್‌ ಆರ್ಟ್‌ ಮ್ಯೂಸಿಯಂ ಆಫ್‌ ಸ್ಯಾನ್‌ಫ್ರಾನ್ಸಿಸ್ಕೋ.

ಸಮುರಾಯ್‌ಗಳು ಹಲವು ಬಗೆಯ ಆಯುಧಗಳನ್ನು ಬಳಸಿದರಾದರೂ, ರೂಪಕಾರ್ಥದಲ್ಲಿ ಮಾತಾಡುವ ಸಮಯದಲ್ಲಿ ಕಟಾನಾ ಆಯುಧವು ಸಮುರಾಯ್‌ಗಳೊಂದಿಗೆ ಪರ್ಯಾಯ ಪದವಾಗಿ ಇಲ್ಲವೇ ಸಮಾನಾರ್ಥಕವಾಗಿ ಕಂಡುಬರುತ್ತದೆ. ಕಟಾನಾ ಆಯುಧವು ಸಮುರಾಯ್‌ಗಳ ಆತ್ಮ ಎಂದು ಬುಷಿಡೊ ಬೋಧಿಸುತ್ತದೆ ಮತ್ತು ಹೋರಾಟಕ್ಕಾಗಿ ಸಂಪೂರ್ಣವಾಗಿ ಆ ಆಯುಧದ ಮೇಲೆ ಅವಲಂಬಿತನಾಗಿರುವಂತೆ ಓರ್ವ ಸಮುರಾಯ್‌ನನ್ನು ಕೆಲವೊಮ್ಮೆ ಚಿತ್ರಿಸಲಾಗಿದೆ. ಅವರ ನಂಬಿಕೆಯ ಪ್ರಕಾರ ಕಟಾನಾ ಆಯುಧವು ಅದೆಷ್ಟು ಅಮೂಲ್ಯವಾಗಿತ್ತೆಂದರೆ, ಅವರು ಅನೇಕ ಬಾರಿ ಅವುಗಳಿಗೆ ಹೆಸರಿಡುತ್ತಿದ್ದರು ಮತ್ತು ತಮ್ಮ ಜೀವನೋಪಾಯದ ಒಂದು ಅಂಗವಾಗಿ ಅವುಗಳನ್ನು ಪರಿಗಣಿಸಿದ್ದರು. ಗಂಡು ಬುಷಿ ಮಗುವು ಹುಟ್ಟಿದ ನಂತರ, ಮ್ಯಾಮೊರಿ-ಗಟಾನಾ ಎಂದು ಕರೆಯಲಾಗುತ್ತಿದ್ದ ಆಚರಣೆಯೊಂದರಲ್ಲಿ ತನ್ನ ಮೊದಲ ಕತ್ತಿಯನ್ನು ಅವನು ಸ್ವೀಕರಿಸುತ್ತಿದ್ದ. ಆದಾಗ್ಯೂ, ಅದು ಕೇವಲ ಒಂದು ಗಿಲೀಟಿನ ಕತ್ತಿಯಾಗಿರುತ್ತಿದ್ದು ಕಿಂಕಾಪಿನಿಂದ ಅದು ಮುಚ್ಚಲ್ಪಟ್ಟಿರುತ್ತಿತ್ತು. ಅದಕ್ಕೊಂದು ಸಂಪುಟ ಅಥವಾ ಸಣ್ಣ ತೊಗಲಿನ ಚೀಲವನ್ನು ಜೋಡಿಸಲಾಗಿದ್ದು, ಐದುವರ್ಷಕ್ಕಿಂತ ಕೆಳಗಿನ ಮಕ್ಕಳು ಅದನ್ನು ಧರಿಸುತ್ತಿದ್ದರು. ಹದಿಮೂರು ವರ್ಷ ವಯಸ್ಸನ್ನು ಮುಟ್ಟುತ್ತಿದ್ದಂತೆ ಗೆನ್‌ಪುಕು (元服) ಎಂದು ಕರೆಯಲಾಗುತ್ತಿದ್ದ ಆಚರಣೆಯೊಂದರಲ್ಲಿ, ಗಂಡುಮಗುವೊಂದಕ್ಕೆ ಅವನ ಮೊದಲ ನಿಜವಾದ ಆಯುಧಗಳು ಮತ್ತು ರಕ್ಷಾಕವಚ, ಒಂದು ವಯಸ್ಕ ಹೆಸರನ್ನು ನೀಡಲಾಗುತ್ತಿತ್ತು, ಹಾಗೂ ಆತ ಓರ್ವ ಸಮುರಾಯ್‌ ಆಗಿ ಮಾರ್ಪಡುತ್ತಿದ್ದ. ಒಂದು ಕಟಾನಾ ಹಾಗೂ ಒಂದು ವಕಿಝಾಶಿಗಳನ್ನು ಒಟ್ಟಾಗಿ ಒಂದು ಡೈಶೋ (ಅಕ್ಷರಶಃ ಅರ್ಥ: "ದೊಡ್ಡದು ಮತ್ತು ಚಿಕ್ಕದು") ಎಂದು ಕರೆಯಲಾಗುತ್ತದೆ.

ವಕಿಝಾಶಿಯು ಸ್ವತಃ ಸಮುರಾಯ್‌ಗಳ ಒಂದು "ಗೌರವ ಆಯುಧ"ವಾಗಿತ್ತು ಮತ್ತು ಆ ಉದ್ದೇಶವನ್ನು ತೋರಿಸಿಕೊಳ್ಳುವಂತೆ ಅದು ಸಮುರಾಯ್‌ಗಳ ಪಾರ್ಶ್ವವನ್ನು ಎಂದಿಗೂ ಬಿಡಲಿಲ್ಲ. ಅದನ್ನು ತನ್ನ ದಿಂಬಿನ ಅಡಿಯಲ್ಲಿರಿಸಿ ಅವನು ಮಲಗಿಕೊಳ್ಳುತ್ತಿದ್ದ ಮತ್ತು ಮನೆಯೊಂದನ್ನು ಆತ ಪ್ರವೇಶಿಸುವಾಗ ತನ್ನೊಂದಿಗೆ ಅದನ್ನು ತೆಗೆದುಕೊಂಡು ಹೋಗುತ್ತಿದ್ದ ಮತ್ತು ಮುಖ್ಯ ಆಯುಧಗಳನ್ನು ಆತ ಹೊರಗಡೆಯೇ ಬಿಟ್ಟುಬರಬೇಕಿತ್ತು.

ಟ್ಯಾಂಟೊ ಎಂಬುದೊಂದು ಸಣ್ಣ ಚಾಕುವಾಗಿತ್ತು ಹಾಗೂ ಕೆಲವೊಮ್ಮೆ ಇದನ್ನು ಡೈಶೋ ಒಂದರಲ್ಲಿ ವಕಿಝಾಶಿಯೊಂದಿಗೆ ಅಥವಾ ಅದರ ಬದಲಿಗೆ ಧರಿಸಲಾಗುತ್ತಿತ್ತು. ಟ್ಯಾಂಟೊ ಅಥವಾ ವಕಿಝಾಶಿಯನ್ನು ಆತ್ಮಹತ್ಯೆ (ಸೆಪೂಕು) ಮಾಡಿಕೊಳ್ಳಲು ಬಳಸಲಾಗುತ್ತಿತ್ತು. ಸೆಪೂಕು ಎಂಬುದು ಹೊಟ್ಟೆಯನ್ನು ಸೀಳಿ ಕರುಳನ್ನು ಹೊರಹೊರಡಿಸುವ ಮೂಲಕದ ಮಾಡಲಾಗುತ್ತಿದ್ದ ಧಾರ್ಮಿಕ ಸಂಸ್ಕಾರದ ಸ್ವರೂಪದ ಒಂದು ಆತ್ಮಹತ್ಯೆಯಾಗಿತ್ತು.

ಬಗೆಬಗೆಯ ಆಯುಧಗಳೊಂದಿಗಿನ ಸಮುರಾಯ್‌.

ಯುಮಿ ಯ (ಉದ್ದನೆಯ ಬಿಲ್ಲು) ಜೊತೆಗೆ ಸಮುರಾಯ್‌ ಒತ್ತುನೀಡಲ್ಪಟ್ಟ ಪರಿಣತಿಯು ಕ್ಯೂಜುಟ್ಸು (ಅಕ್ಷರಶಃ ಅರ್ಥ: ಬಿಲ್ಲಿನ ಪರಿಣತಿ) ಕಲೆಯಲ್ಲಿ ಪ್ರತಿಬಿಂಬಿತವಾಯಿತು. ಸೆಂಗೊಕು ಅವಧಿಯ ಸಮಯದಲ್ಲಿ ಬಂದೂಕುಗಳು ಪರಿಚಯವಾದ ನಂತರವೂ ಈ ಬಿಲ್ಲು ಜಪಾನೀ ಸೇನೆಯ ಒಂದು ನಿರ್ಣಾಯಕ ಅಂಗವಾಗಿ ಅಥವಾ ವಿಷಮಾವಸ್ಥೆಯ ಅಂಗವಾಗಿ ಉಳಿದುಕೊಂಡಿತು. ಒಂದು ಅಸಮಪಾರ್ಶ್ವದ ಸಂಯೋಜಿತ ಬಿಲ್ಲು ಆಗಿರುವ ಯುಮಿ ಯು ಬಿದಿರು, ಮರ, ಹೆಣಿಗೆಯ ಬೆತ್ತ ಮತ್ತು ಚರ್ಮದಿಂದ ಮಾಡಲ್ಪಟ್ಟಿದ್ದು, ಯುರೇಷಿಯಾದ ಹಿಮ್ಮುರಿಯ ಸಂಯೋಜಿತ ಬಿಲ್ಲಿನಷ್ಟು ಶಕ್ತಿಯುತವಾಗಿರಲಿಲ್ಲ. ಒಂದು ವೇಳೆ ನಿಖರತೆಯು ಒಂದು ಸಮಸ್ಯೆಯಾಗಿಲ್ಲದಿದ್ದಲ್ಲಿ 50 ಮೀಟರುಗಳ (ಸುಮಾರು 164 ಅಡಿ) ಅಥವಾ 100 ಮೀಟರುಗಳ (328 ಅಡಿ) ಒಂದು ಪರಿಣಾಮಕಾರೀ ಶ್ರೇಣಿಯನ್ನು ಇದು ಹೊಂದಿತ್ತು. ಹೂಡಲ್ಪಟ್ಟಿರುವ ಸ್ಥಿತಿಯಲ್ಲಿ, ಇದನ್ನು ಸಾಮಾನ್ಯವಾಗಿ ಟೆಡೇಟ್‌ (手盾) ಎಂದು ಕರೆಯಲಾಗುವ ಒಂದು ದೊಡ್ಡ ಹಾಗೂ ಸಂಚಲನೀಯ ಬಿದಿರಿನ ಗೋಡೆಯ ಹಿಂಭಾಗದಲ್ಲಿ ಬಳಸಲಾಗುತ್ತಿತ್ತು. ಆದರೆ ಇದರ ಅಸಮಪಾರ್ಶ್ವದ ಆಕಾರದಿಂದಾಗಿ ಇದನ್ನು ಕುದುರೆ ಸವಾರಿ ಮಾಡಿಕೊಂಡೂ ಬಳಸಬಹುದಾಗಿತ್ತು. ಕುದುರೆ ಸವಾರಿ ಮಾಡಿಕೊಂಡು ಬಾಣಬಿಡುವ ಪರಿಪಾಠವು ಯಬುಸೇಮ್‌ (流鏑馬) ಎಂದು ಕರೆಯಲಾಗುವ ಒಂದು ಷಿಂಟೋ ಆಚರಣೆಯಾಗಿ ಮಾರ್ಪಟ್ಟಿತು.

15ನೇ ಶತಮಾನದಲ್ಲಿ, ಯಾರಿ ಯು (ಭರ್ಜಿ) ಕೂಡಾ ಒಂದು ಜನಪ್ರಿಯ ಆಯುಧವಾಯಿತು. ವೈಯಕ್ತಿಕ ಕಲಿತನದ ಪ್ರಭಾವವು ಕುಗ್ಗಿದ್ದರಿಂದ ಮತ್ತು ಜಮಾವಣೆಗೊಂಡ, ಅಗ್ಗದ ಕಾಲಾಳುಗಳನ್ನೊಳಗೊಂಡ ಸೇನಾತುಕಡಿಗಳ (ಅಶಿಗರು ) ಸುತ್ತ ಕದನಗಳು ಹೆಚ್ಚು ಸಂಘಟಿತವಾದವಾದ್ದರಿಂದ, ಇದು ನಗಿನಾಟಾ ವನ್ನು ರಣಾಂಗಣದಿಂದ ಸ್ಥಾನಪಲ್ಲಟಗೊಳಿಸಿತು. ಒಂದು ಕತ್ತಿಯನ್ನು ಬಳಸುವ ಬದಲಿಗೆ ಒಂದು ಭರ್ಜಿಯನ್ನು ಬಳಸುವಾಗ ಅಶ್ವಾರೋಹಿ ಸ್ವರೂಪದ ಅಥವಾ ಆ ಸ್ವರೂಪದ್ದಲ್ಲದ ಒಂದು ಬದಲಾವಣೆಯೂ ಸಹ ಹೆಚ್ಚು ಪರಿಣಾಮಕಾರಿಯಾಗಿತ್ತು. ಏಕೆಂದರೆ, ಒಬ್ಬ ಸಮುರಾಯ್‌ ಕತ್ತಿಯೊಂದನ್ನು ಬಳಸುವುದಕ್ಕೆ ವಿರುದ್ಧವಾಗಿರುವ ಪ್ರತಿಕೂಲ ಪರಿಸ್ಥಿತಿಗಳಿಗಿಂತಲೂ ಇದು ಉತ್ತಮವಾದುದನ್ನು ನೀಡುತ್ತಿತ್ತು. ಅಂದು ಹಶಿಬಾ ಹಿಡೆಯೊಶಿ ಎಂದು ಚಿರಪರಿಚಿತನಾಗಿದ್ದ ಟೊಯೊಟೊಮಿ ಹಿಡೆಯೊಶಿಯಿಂದ ಷಿಬಾಟಾ ಕಟ್ಸೂಯಿ ಸೋಲಿಸಲ್ಪಟ್ಟ ಶಿಝುಗಟಾಕೆಯ ಯುದ್ಧದಲ್ಲಿ, "ಶಿಝುಗಟಾಕೆಯ ಏಳು ಭರ್ಜಿಗಳು" (賤ヶ岳七本槍) ಎಂದು ಮುಂದೆ ಹೆಸರಾದ ಏಳು ಸಮುರಾಯ್‌ಗಳು ವಿಜಯದಲ್ಲಿ ಒಂದು ನಿರ್ಣಾಯಕ ಪಾತ್ರವನ್ನು ವಹಿಸಿದರು.

ಒಂದು ಅರ್ಧ-ಮುಖದ ಮುಖವಾಡದೊಂದಿಗಿನ ಸಮುರಾಯ್‌ ಶಿರಸ್ತ್ರಾಣ, ಮೆಟ್ರೋಪಾಲಿಟನ್‌ ಮ್ಯೂಸಿಯಂ ಆಫ್‌ ಆರ್ಟ್‌, ನ್ಯೂಯಾರ್ಕ್‌.

16ನೇ ಶತಮಾನದ ದ್ವಿತೀಯಾರ್ಧವು ಪೋರ್ಚುಗೀಸರ ವ್ಯಾಪಾರದ ಮೂಲಕ ಜಪಾನಿನಲ್ಲಿ ಟೆಪ್ಪೋ ಅಥವಾ ಹಳೆಕೋವಿಯು ಪರಿಚಯವಾಗುವುದನ್ನು ಕಂಡಿತು. ರೈತರ ಬೃಹತ್‌ ಸಮೂಹದಿಂದ ಪರಿಣಾಮಕಾರೀ ಸೈನ್ಯಗಳನ್ನು ಸೃಷ್ಟಿಸಲು ಇದು ಸೇನಾನಾಯಕರಿಗೆ ಅವಕಾಶ ಕಲ್ಪಿಸಿಕೊಟ್ಟಿತು. ಹೊಸ ಆಯುಧಗಳು ಹೆಚ್ಚು ವಿವಾದಾತ್ಮಕವಾಗಿದ್ದವು. ಅವುಗಳ ಬಳಕೆಯ ಸರಾಗತೆ ಮತ್ತು ಪ್ರಾಣಾಂತಿಕ ಪರಿಣಾಮಕಾರಿತ್ವವನ್ನು ಸಂಪ್ರದಾಯಕ್ಕಾದ ಒಂದು ಅವಮಾನಕರ ಪ್ರತ್ಯಕ್ಷ ಮುಖಭಂಗವಾಗಿ ಅನೇಕ ಸಮುರಾಯ್‌ಗಳು ಕಂಡರು.

1575ರಲ್ಲಿ ನಡೆದ ನಾಗಾಷಿನೊದ ಕದನದಲ್ಲಿ ಟೆಪ್ಪೋ ದ ಪ್ರಾಣಾಂತಿಕ ಸ್ವರೂಪದಲ್ಲಿ ಒಡಾ ನೊಬುನಾಗಾ ಬಳಸಿದ. ಇದು ಟಕೆಡಾ ಬುಡಕಟ್ಟು ಅಂತ್ಯಗೊಳ್ಳಲು ಕಾರಣವಾಯಿತು.

ಆರಂಭಿಕವಾಗಿ ಪೋರ್ಚುಗೀಸರು ಮತ್ತು ಡಚ್ಚರಿಂದ ಪರಿಚಯಿಸಲ್ಪಟ್ಟ ನಂತರ, ಟೆಪ್ಪೋ ಗಳು ಜಪಾನಿನ ಕೋವಿಕಮ್ಮಾರರಿಂದ ಒಂದು ಬೃಹತ್‌ ಪ್ರಮಾಣದಲ್ಲಿ ತಯಾರಾದವು. 16ನೇ ಶತಮಾನದ ಅಂತ್ಯದ ವೇಳೆಗೆ, ಬೇರಾವುದೇ ಐರೋಪ್ಯ ರಾಷ್ಟ್ರದಲ್ಲಿ ಇದ್ದುದಕ್ಕಿಂತ ಜಪಾನ್‌ನಲ್ಲಿ ಹೆಚ್ಚಿನ ಸಂಖ್ಯೆಯ ಬಂದೂಕುಗಳಿದ್ದವು. ಅಶಿಗರು ರೈತ ಕಾಲಾಳು ಸೇನಾ ತುಕಡಿಗಳಿಂದ ಹೆಚ್ಚಿನ ರೀತಿಯಲ್ಲಿ ರಾಶಿಯಾಗಿ ಬಳಸಲ್ಪಟ್ಟ ಟೆಪ್ಪೋ ಗಳು, ಅನೇಕ ವಿಧಗಳಲ್ಲಿ ಸಮುರಾಯ್‌ಗಳ ಪರಾಕ್ರಮದ ತದ್ವಿರುದ್ಧತೆಯಾಗಿತ್ತು. ಟೊಕುಗವಾ ಶೊಗುನಾಟೆಯ ಸ್ಥಾಪನೆಯಾಗುವುದರೊಂದಿಗೆ ಮತ್ತು ನಾಗರಿಕ ಯುದ್ಧವು ಕೊನೆಯಾಗುವುದರೊಂದಿಗೆ, ಮಾಲೀಕತ್ವಕ್ಕೆ ಎದುರಾದ ಪ್ರತಿಬಂಧದ ಕಾರಣದಿಂದಾಗಿ ಬಂದೂಕುಗಳ ತಯಾರಿಕೆಯು ಕುಸಿಯಿತು. ಟೊಕುಗವಾ ಅವಧಿಯ ವೇಳೆಗೆ ಬಹುಪಾಲು ಭರ್ಜಿ-ಆಧರಿತ ಆಯುಧಗಳ ಬಳಕೆಯು ಭಾಗಶಃ ತಪ್ಪಿತ್ತು. ಏಕೆಂದರೆ, ಆ ಸಮಯದಲ್ಲಿ ಸಾಮಾನ್ಯವಾಗಿದ್ದ ಅತಿ-ಸಾಮೀಪ್ಯದ ಕಾಳಗಕ್ಕೆ ಅವು ಪ್ರಶಸ್ತಕರವಾದ ಮಟ್ಟಕ್ಕಿಂತ ಕೆಳಗಿದ್ದವು; ಇದರೊಂದಿಗೆ ಮೇಲೆ ಉಲ್ಲೇಖಿಸಲಾದ ಬಂದೂಕುಗಳ ಮೇಲಿನ ಪ್ರತಿಬಂಧಗಳೂ ಸೇರಿಕೊಂಡು, ಸಮುರಾಯ್‌ಗಳಿಂದ ವಿಶಿಷ್ಟವಾಗಿ ಒಯ್ಯಲ್ಪಡುವ ಏಕೈಕ ಆಯುಧಗಳಾಗಿ ಡೈಶೋ ಗಳು ಹೊರಹೊಮ್ಮಿದವು.

ಓಝುತ್ಸು (大筒), ತಿರುಪು ಕೀಲಿನ ಹಿಂಭಾಗದ ರಂಧ್ರದಿಂದ-ಮದ್ದುಗುಂಡು ತುಂಬುವ ಗಾಡಿತೋಪು, 16ನೇ ಶತಮಾನ

1570ರ ದಶಕಗಳಲ್ಲಿ ಗಾಡಿತೋಪುಗಳು ಸಮುರಾಯ್‌ಗಳ ಶಸ್ತ್ರಾಸ್ತ್ರ ಸಂಗ್ರಹದ ಒಂದು ಸಾಮಾನ್ಯ ಭಾಗವಾಗಿ ಮಾರ್ಪಟ್ಟವು. ಅನೇಕ ಬಾರಿ ಅವುಗಳನ್ನು ಕೋಟೆಮನೆಗಳಲ್ಲಿ ಅಥವಾ ಹಡಗುಗಳ ಮೇಲೆ ಸ್ಥಾಪಿಸಲಾಗುತ್ತಿತ್ತು. ಕೋಟೆಮನೆಗಳ ಅಥವಾ ಅದರ ರೀತಿಯ ಸ್ವರೂಪಗಳ ವಿರುದ್ಧವಾಗಿ ಪ್ರಯೋಗಿಸುವುದಕ್ಕಿಂತ ಹೆಚ್ಚಾಗಿ, ಜನಧ್ವಂಸಕ ಆಯುಧಗಳಾಗಿ ಅವು ಬಳಸಲ್ಪಟ್ಟವು. ಆದರೂ ಸಹ, ನಾಗಾಷಿನೊ ಕೋಟೆಮನೆಯ ಸುತ್ತುಗಟ್ಟುವಿಕೆ (1575) ಕಾರ್ಯಾಚರಣೆಯಲ್ಲಿ, ಶತ್ರುಪಾಳಯದ ಒಂದು ಮುತ್ತಿಗೆ ಗೋಪುರಕ್ಕೆ ವಿರುದ್ಧವಾಗಿ ಒಂದು ಉತ್ತಮ ಪರಿಣಾಮವನ್ನು ಪಡೆಯಲು ಗಾಡಿತೋಪೊಂದನ್ನು ಬಳಸಲಾಯಿತು. ಕುನಿಕುಝುಶಿ ಅಥವಾ "ಪ್ರಾಂತ್ಯ ನಾಶಕಗಳು" ಎಂಬ ಅಡ್ಡಹೆಸರಿನಿಂದ ಕರೆಯಲ್ಪಡುತ್ತಿದ್ದ ತಿರುಪು ಕೀಲಿನ-ಹಿಂಭಾಗದಿಂದ ಮದ್ದುತುಂಬುವ ಫಿರಂಗಿಗಳು ಜಪಾನ್‌ನಲ್ಲಿನ ಮೊದಲ ಜನಪ್ರಿಯ ಗಾಡಿತೋಪುಗಳಾಗಿದ್ದವು. ಕುನಿಕುಝುಶಿ ...264 lb (120 kg)ನಷ್ಟು ತೂಗುತ್ತಿತ್ತು, ಮತ್ತು ಮದ್ದಿಗಾಗಿ ಇರುವ ...40 lb (18 kg) ಭಾಗಗಳನ್ನು ಬಳಸುತ್ತಿತ್ತು, ಹಾಗೂ 10 ಔನ್ಸುಗಳಷ್ಟರ ಒಂದು ಚಿಕ್ಕ ಹೊಡೆತವನ್ನು ಹೊಡೆಯುತ್ತಿತ್ತು. ರ್ಯೂಝೋಜಿ ಬುಡಕಟ್ಟಿನ ವಿರುದ್ಧದ ಒಕಿನವಾಟೆಯ ಕದನದಲ್ಲಿ ಕ್ಯೂಶುವಿನ ಅರಿಮಾ ಬುಡಕಟ್ಟು ಈ ರೀತಿಯ ಬಂದೂಕುಗಳನ್ನು ಬಳಸಿತು. ಒಸಾಕಾ ಆಂದೋಲನದ (1614-1615) ಸಮಯದ ಹೊತ್ತಿಗೆ, ಗಾಡಿತೋಪು ತಂತ್ರಜ್ಞಾನವು ಜಪಾನ್‌ನಲ್ಲಿ ಎಷ್ಟರಮಟ್ಟಿಗೆ ಸುಧಾರಣೆಗೊಂಡಿತ್ತೆಂದರೆ, ಒಸಾಕಾದಲ್ಲಿನ ಲಿ ನವೊಟಾಕಾ ಎಂಬಾತ ಕೋಟೆಮನೆಯ ಗೋಪುರದೊಳಗೆ ಒಂದು ...18 lb (8.2 kg). ಹೊಡೆತವನ್ನು ಹೊಡೆಯುವಲ್ಲಿ ಯಶಸ್ವಿಯಾದ.

ಸಹಾಯಕ ಸಿಬ್ಬಂದಿಯ ಆಯುಧಗಳು ಸಹ ಸಮುರಾಯ್‌ಗಳಿಂದ ಸಾಂದರ್ಭಿಕವಾಗಿ ಬಳಸಲ್ಪಡುತ್ತಿದ್ದು, ಬೋ ಎಂಬುದು ಇವುಗಳ ಪೈಕಿಯ ಅತ್ಯಂತ ಪ್ರಸಿದ್ಧ ಉದಾಹರಣೆಯಾಗಿತ್ತು. ಉಕ್ಕಿನ ಬಳೆಗಳಿಂದ ಮುಚ್ಚಿಡುವ ಮೂಲಕ ಇದನ್ನು ಮತ್ತಷ್ಟು ಬಲಯುತವಾಗಿ ಮಾಡಲು ಅವಕಾಶವಿದ್ದು, ಜೋ ಎಂಬುದು ಇದಕ್ಕಿದ್ದ ಒಂದು ಉದಾಹರಣೆಯಾಗಿತ್ತು. ಕನಾಬೊ ಎಂದು ಕರೆಯಲ್ಪಡುತ್ತಿದ್ದ, ಉಕ್ಕಿನ ಗುಬುಟುಗಳನ್ನು ಹೊದಿಸಿದ ಒಂದು ಗದೆಯು ವಾಸ್ತವತೆಗಿಂತ ಹೆಚ್ಚಾಗಿ ಪುರಾಣದಲ್ಲಿ ಹೆಚ್ಚು ಆಗಿಂದಾಗ್ಗೆ ಕಂಡುಬರುತ್ತಿತ್ತು. ಆದಾಗ್ಯೂ, ವಾಸ್ತವವಾಗಿ ಇದನ್ನು ಬಳಸಿದಾಗ, ರಣಾಂಗಣದಲ್ಲಿ ಒಂದು ಪ್ರಾಣಾಂತಿಕ ಬಲವಾಗಿ ಅದು ಪರಿಣಮಿಸುತ್ತಿತ್ತು.

ಸಮುರಾಯ್‌ ಪದದ ವ್ಯುತ್ಪತ್ತಿ ಹಾಗೂ ಸಂಬಂಧಿತ ಪದಗಳು[ಬದಲಾಯಿಸಿ]

ಕಾಂಜಿ ಬರವಣಿಗೆಯಲ್ಲಿ ಸಮುರಾಯ್ ಪದ.

"ಶ್ರೀಮಂತ ವರ್ಗದವರ ಸನಿಹದಲ್ಲಿ ಜೊತೆಗಿದ್ದು ಸೇವೆ ಮಾಡುವವರು ಅಥವಾ ಅವರನ್ನು ನೋಡಿಕೊಳ್ಳುವವರು" ಎಂಬುದು ಸಮುರಾಯ್‌ ಪದದ ಮೂಲ ಅರ್ಥವಾಗಿತ್ತು, ಮತ್ತು ಅದೇ ಅರ್ಥವನ್ನು ಹೊಂದಿದ್ದ ಚೀನೀ ಅಕ್ಷರದಲ್ಲಿ (ಅಥವಾ ಕಾಂಜೀ ಲಿಪಿಯಲ್ಲಿ) ಅದು ಬರೆಯಲ್ಪಟ್ಟಿತ್ತು. ಜಪಾನೀ ಭಾಷೆಯಲ್ಲಿ, ಹೀಯನ್‌ ಅವಧಿಗೆ ಮುಂಚಿನ ಕಾಲದಲ್ಲಿ ಮೂಲತಃ ಇದನ್ನು ಸಬುರಾವು ಎಂದೂ, ಮತ್ತು ನಂತರದಲ್ಲಿ ಸಬುರಾಯ್‌ ಎಂದೂ ಉಚ್ಚರಿಸಲಾಗುತ್ತಿತ್ತು. ನಂತರ ಬಂದ ಇಡೊ ಅವಧಿಯಲ್ಲಿ ಇದು ಸಮುರಾಯ್‌ ಎಂದು ಉಚ್ಚರಿಸಲ್ಪಡುತ್ತಿತ್ತು. ಜಪಾನೀ ಸಾಹಿತ್ಯದಲ್ಲಿ, ಕೊಕಿನ್ಷೂವಿನಲ್ಲಿ (古今集, 10ನೇ ಶತಮಾನದ ಆದಿಭಾಗ) ಸಮುರಾಯ್‌ ಕುರಿತಾಗಿ ಒಂದು ಮುಂಚಿನ ಉಲ್ಲೇಖವಿದೆ:

Attendant to your nobility

Ask for your master's umbrella
The dews 'neath the trees of Miyagino

Are thicker than rain

[೧೪]

ಬುಷಿ (武士, ಅಕ್ಷರಶಃ ಅರ್ಥ: "ಯೋಧ ಅಥವಾ ಶಸ್ತ್ರಸೈನಿಕ") ಎಂಬ ಪದವು ಜಪಾನಿನ ಶೋಕು ನಿಹೊಂಗಿ (続日本記, 797 A.D.) ಎಂಬ ಒಂದು ಮುಂಚಿನ ಇತಿಹಾಸದಲ್ಲಿ ಮೊದಲು ಕಾಣಿಸಿಕೊಳ್ಳುತ್ತದೆ. 721 A.D.ಯ ವರ್ಷಕ್ಕೆ ಸಂಬಂಧಿಸಿದ ಪುಸ್ತಕದ ಭಾಗವೊಂದರಲ್ಲಿ, ಶೋಕು ನಿಹೊಂಗಿ ಹೀಗೆ ಉಲ್ಲೇಖಿಸುತ್ತದೆ: "ರಾಷ್ಟ್ರವು ಯಾರನ್ನು ಗೌರವಿಸುತ್ತದೋ ಅವರು ಯಾರು ವಿದ್ವಾಂಸರು ಹಾಗೂ ಯೋಧರಾಗಿರುತ್ತಾರೆ". ಬುಷಿ ಎಂಬ ಪದವು ಚೀನಾದ ಮೂಲವನ್ನು ಹೊಂದಿದೆ ಹಾಗೂ ಯೋಧ ಎಂಬ ಪದಕ್ಕಿರುವ ಸ್ಥಳೀಕ ಜಪಾನೀ ಪದಗಳಾದ ತ್ಸುವಾಮೊನೊ ಮತ್ತು ಮೊನೊನೊಫು ಗಳಿಗೆ ಹೊಂದುವಂತಿದೆ.

ಸಾಂಪ್ರದಾಯಿಕ ಯೋಧರ ಕುಟುಂಬಗಳಿಗೆ ಸೇರಿದ ಪ್ರಾಚೀನ ಜಪಾನೀ ಸೈನಿಕರಿಗೆ ಬುಷಿ ಎಂಬ ಹೆಸರನ್ನು ನೀಡಲಾಗಿತ್ತು. ಮುಖ್ಯವಾಗಿ ಜಪಾನ್‌ನ ಉತ್ತರ ಭಾಗದಲ್ಲಿ ಬುಷಿ ವರ್ಗವು ಅಭಿವೃದ್ಧಿಯಾಯಿತು. ಅವು ಪ್ರಬಲವಾದ ಬುಡಕಟ್ಟುಗಳನ್ನು ರೂಪಿಸಿದವು. ಕ್ಯೋಟೋದಲ್ಲಿ ಜೀವಿಸಿದ್ದ ಸಾಮ್ರಾಜ್ಯಶಾಹಿ ಕುಟುಂಬವನ್ನು ಬೆಂಬಲಿಸಲು ತಮಗೆ ತಾವೇ ಒಟ್ಟುಗೂಡುಗುತ್ತಿದ್ದ ಶ್ರೀಮಂತ ಕುಟುಂಬಗಳಿಗೆ ವಿರುದ್ಧವಾಗಿ 12ನೇ ಶತಮಾನದಲ್ಲಿ ಈ ಬುಡಕಟ್ಟುಗಳು ನಿಂತಿದ್ದವು. ಬುಷಿ ಎಂಬ ಪದಕ್ಕೆ ಯೋಧರು ಸ್ವತಃ ಆದ್ಯತೆ ನೀಡುವುದರೊಂದಿಗೆ, ಸಮುರಾಯ್‌ ಎಂಬ ಪದವು ಕ್ಯೂಜ್‌ ಶ್ರೀಮಂತ ಪ್ರಭುತ್ವದ ವರ್ಗದಿಂದ ಬಳಸಲ್ಪಟ್ಟ ಪದವಾಗಿತ್ತು. "ಯೋಧನ ಕಾರ್ಯವಿಧಾನ" ಎಂದು ಹೆಸರಾಗಿದ್ದ ಬುಷಿಡೋ ಪದವು, ಈ ಪದದಿಂದ ಜನ್ಯವಾಗಿದೆ ಮತ್ತು ಯೋಧನೋರ್ವನ ಮಹಲನ್ನು ಬ್ಯೂಕ್‌ಯಾಶಿಕಿ ಎಂದು ಕರೆಯಲಾಗುತ್ತಿತ್ತು.

ಬುಷಿ ಮತ್ತು ಸಮುರಾಯ್‌ ಎಂಬ ಪದಗಳು 12ನೇ ಶತಮಾನದ ಸುಮಾರಿಗೆ ಪರ್ಯಾಯ ಪದಗಳಾಗಿ ಮಾರ್ಪಟ್ಟವು ಎಂದು ಐಡಿಯಲ್ಸ್‌ ಆಫ್‌ ದಿ ಸಮುರಾಯ್‌—ರೈಟಿಂಗ್ಸ್‌ ಆಫ್‌ ಜಪಾನೀಸ್‌ ವಾರಿಯರ್ಸ್‌ ಎಂಬ ತನ್ನ ಪುಸ್ತಕದಲ್ಲಿ ವಿಲಿಯಂ ಸ್ಕಾಟ್‌ ವಿಲ್ಸನ್‌ ತಿಳಿಸಿದ್ದಾನೆ. ಯೋಧ ಎಂಬ ಪದದ ಮೂಲಗಳನ್ನಷ್ಟೇ ಅಲ್ಲದೇ, ಸದರಿ ಪದವನ್ನು ನಿರೂಪಿಸಲು ಬಳಸಲಾದ ಕಾಂಜೀ ಲಿಪಿಯ ಕುರಿತು, ವಿಲ್ಸನ್‌ನ ಪುಸ್ತಕವು ಜಪಾನಿನ ಇತಿಹಾಸದಲ್ಲಿ ಆಮೂಲಾಗ್ರವಾಗಿ ಶೋಧಿಸಿದೆ.

"ಬು (武) ಎಂಬ ಲಿಪಿಯನ್ನು ವಿಘಟಿಸುವುದರಿಂದ ಮೂಲಸ್ವರೂಪವು (止) ಪ್ರಕಟಗೊಂಡು, "ನಿಲ್ಲಿಸುವುದು" ಎಂಬ ಅರ್ಥವನ್ನು, ಹಾಗೂ ಮೂಲಸ್ವರೂಪದ ಒಂದು ಸಂಕ್ಷಿಪ್ತ ರೂಪವಾದ (戈 ) "ಭರ್ಜಿ" ಎಂಬುದನ್ನು ನೀಡುತ್ತದೆ. ಚೀನಾದ ಒಂದು ಮುಂಚಿನ ಪದಕೋಶವಾದ ಷುವೋ ವೆನ್‌, ಈ ವ್ಯಾಖ್ಯಾನವನ್ನು ನೀಡುತ್ತದೆ: "ಆಯುಧವನ್ನು ವಶಪಡಿಸಿಕೊಳ್ಳುವುದನ್ನು ಬು ಒಳಗೊಳ್ಳುತ್ತದೆಯಾದ್ದರಿಂದ ಅದು ಭರ್ಜಿಯನ್ನು ನಿಲ್ಲಿಸುತ್ತದೆ ಅಥವಾ ತಡೆಹಿಡಿಯುತ್ತದೆ." ತ್ಸೋ ಚುವಾನ್‌ ಎಂಬ ಚೀನಾದ ಮತ್ತೊಂದು ಮುಂಚಿನ ಆಕರವು ಇನ್ನೂ ಮುಂದುವರೆದು ಹೀಗೆ ಹೇಳುತ್ತದೆ:

ಭರ್ಜಿಯನ್ನು ನಿಲ್ಲಿಸುವ ಅಥವಾ ತಡೆಹಿಡಿಯುವ ಬನ್‌ (文), ಸಾಹಿತ್ಯ ಅಥವಾ ಅಕ್ಷರಗಳನ್ನು (ಮತ್ತು ಸಾಮಾನ್ಯವಾಗಿ ಶಾಂತಿಯ ಕಲೆಗಳು) ಬು ಒಳಗೊಳ್ಳುತ್ತದೆ. ಬು ಹಿಂಸೆಯನ್ನು ನಿಷೇಧಿಸುತ್ತದೆ ಮತ್ತು ಆಯುಧಗಳನ್ನು ವಶಪಡಿಸಿಕೊಳ್ಳುತ್ತದೆ ... ಇದು ಜನರನ್ನು ಶಾಂತಿಯಲ್ಲಿಡುತ್ತದೆ, ಮತ್ತು ಜನಸಮುದಾಯದಲ್ಲಿ ಸಾಮರಸ್ಯವನ್ನುಂಟುಮಾಡುತ್ತದೆ.

ಮತ್ತೊಂದೆಡೆ ಷಿ (±) ಎಂಬ ಮೂಲಸ್ವರೂಪವು, ಯಾವುದಾದರೊಂದು ಕಾರ್ಯಚಟುವಟಿಕೆಯನ್ನು ನಡೆಸುವ ಅಥವಾ ಯಾವುದಾದರೊಂದು ಕ್ಷೇತ್ರದಲ್ಲಿ ಸಾಮರ್ಥ್ಯವನ್ನು ಹೊಂದಿರುವ ಓರ್ವ ವ್ಯಕ್ತಿಯನ್ನು ಮೂಲತಃ ಅರ್ಥೈಸಿರುವಂತೆ ತೋರುತ್ತದೆ. ಚೀನಾದ ಬಹಳ ಮುಂಚಿನ ಇತಿಹಾಸದಲ್ಲಿ ಇದು ಸಮಾಜದ ಮೇಲ್ವರ್ಗವನ್ನು ವ್ಯಾಖ್ಯಾನಿಸಲು ಬಳಕೆಯಾಗಿದೆ, ಮತ್ತು ಹ್ಯಾನ್‌ನ ಪುಸ್ತಕದಲ್ಲಿ ಈ ವ್ಯಾಖ್ಯಾನವನ್ನು ನೀಡಲಾಗಿದೆ:

ಷಿ, ರೈತ, ಕುಶಲಕರ್ಮಿ, ಮತ್ತು ವ್ಯಾಪಾರಿ ಇವು ಜನರ ನಾಲ್ಕು ವೃತ್ತಿಗಳಾಗಿವೆ. ಯಾವ ವ್ಯಕ್ತಿ ಕಲಿಕೆಯ ಮೂಲಕ ತನ್ನ ದರ್ಜೆಯನ್ನು ಆಕ್ರಮಿಸಿಕೊಳ್ಳುತ್ತಾನೋ ಅವನನ್ನು ಓರ್ವ ಷಿ ಎಂದು ಕರೆಯಲಾಗುತ್ತದೆ.

ವಿಲ್ಸನ್‌ ಹೇಳುವ ಪ್ರಕಾರ, ನಾಲ್ಕು ವರ್ಗಗಳ ಪೈಕಿ ಅತ್ಯುನ್ನತವಾದುದಾಗಿದ್ದ ಷಿ ವರ್ಗವು, ಆಯುಧಗಳನ್ನಷ್ಟೇ ಅಲ್ಲದೇ ಪುಸ್ತಕಗಳನ್ನು ಝಳಪಿಸಿತು. ಆದ್ದರಿಂದಲೇ ಬುಷಿ ಎಂಬುದು "ಸಾಹಿತ್ಯಿಕವಾಗಿಯಾಗಲೀ ಅಥವಾ ಪ್ರಧಾನವಾಗಿ ಸೇನಾ ವಿಧಾನಗಳಿಂದಾಗಲೀ, ಶಾಂತಿಯನ್ನು ಕಾಪಾಡುವ ಸಾಮರ್ಥ್ಯವಿರುವ ಓರ್ವ ಮನುಷ್ಯ" ಎಂದು ಅರ್ಥೈಸಲ್ಪಡುತ್ತದೆ.

ಅಝುಚಿ-ಮೊಮೊಯಾಮಾ ಅವಧಿ ಎಂದು ಹೆಸರಾದ ಆರಂಭಿಕ ಆಧುನಿಕ ಅವಧಿ ಹಾಗೂ 16ನೇ ಶತಮಾನದ ಅಂತ್ಯ ಹಾಗೂ 17ನೇ ಶತಮಾನದ

ಆರಂಭದ ಇಡೊ ಅವಧಿಯವರೆಗೆ ಸಬುರಾಯ್‌  ಎಂಬ ಪದವು ಸಮುರಾಯ್‌  ಎಂಬ ಪದದಿಂದ ಬರಲಿಸಲ್ಪಟ್ಟಿರಲಿಲ್ಲ. ಆದಾಗ್ಯೂ, ಅದಕ್ಕಿಂತಲೂ ಬಹಳ ಮುಂಚೆಯೇ ಅರ್ಥವು ಬದಲಾಗಿತ್ತು.
ಕೊಷಿರೇಯಲ್ಲಿನ ಒಂದು ಸಮುರಾಯ್‌ ಕಟಾನಾ.

ಸಮುರಾಯ್‌ಗಳ‌ ಆಳ್ವಿಕೆಯ ಯುಗದ ಅವಧಿಯಲ್ಲಿ ಖಡ್ಗಕೌಶಲವು ಅತ್ಯಂತ ಮುಖ್ಯವಾಗಿ ರೂಪುಗೊಂಡಿತ್ತಾದರೂ ಯುಮಿಟೊರಿ (弓取, "ಬಿಲ್ಲುಗಾರ") ಎಂಬ ಪದವೂ ಸಹ, ಒರ್ವ ನಿಪುಣ ಯೋಧನಿಗೆ ನೀಡಲಾಗುವ ಒಂದು ಗೌರವಾರ್ಥ ಬಿರುದಾಗಿ ಬಳಸಲ್ಪಟ್ಟಿತು. (ಜಪಾನಿಯರ ಬಿಲ್ಲುವಿದ್ಯೆಯು (ಕ್ಯುಜುಟ್ಸು ) ಹಚಿಮನ್‌ ಎಂಬ ಯುದ್ಧ ದೇವರೊಂದಿಗೆ ಈಗಲೂ ಬಲವಾದ ಸಂಬಂಧವನ್ನು ಹೊಂದಿದೆ.)

ಒಂದು ಬುಡಕಟ್ಟು ಅಥವಾ ಡೈಮ್ಯೊ ನೊಂದಿಗೆ (大名) ಯಾವುದೇ ಜೋಡಣೆಯಿರದ ಸಮುರಾಯ್‌ ಒಬ್ಬನನ್ನು ಓರ್ವ ರೋನಿನ್‌ (浪人) ಎಂದು ಕರೆಯಲಾಗುತ್ತಿತ್ತು. ಜಪಾನೀ ಭಾಷೆಯಲ್ಲಿ, ರೋನಿನ್‌ ಎಂಬ ಪದವು "ತೂಗಾಡುವ ಮನುಷ್ಯ" ಎಂಬ ಅರ್ಥವನ್ನು ಕೊಡುತ್ತದೆ. ಅಂದರೆ, ಸಮುದ್ರದಲ್ಲಿನ ಅಲೆಗಳಂತೆ ಗುರಿಯಿಲ್ಲದೆ ಯಾವಾಗಲೂ ಅಲೆದಾಡುತ್ತಿರುವಂತೆ ನಿಯಾಮಕವಾಗಿಸಲ್ಪಟ್ಟ ಓರ್ವ ಮನುಷ್ಯ ಎಂಬುದು ಈ ಪದಗುಚ್ಛದ ಅರ್ಥ. ತನ್ನ ಧಣಿಯು ಮರಣಿಸಿದ ಕಾರಣದಿಂದಾಗಿ, ಸಮುರಾಯ್‌ಗಳು ನಿಷೇಧಿಸಲ್ಪಟ್ಟ ಕಾರಣದಿಂದಾಗಿ ಅಥವಾ ಓರ್ವ ರೋನಿನ್‌ ಆಗುವುದನ್ನು ಸುಮ್ಮನೇ ಸಮುರಾಯ್‌ ಆಯ್ಕೆ ಮಾಡಿದ ಕಾರಣದಿಂದಾಗಿ ಮತ್ತೆಂದೂ ಧಣಿಯೊಬ್ಬನ ಸೇವೆಯಲ್ಲಿಲ್ಲದ ಓರ್ವ ಸಮುರಾಯ್‌ನನ್ನು ವಿವರಿಸಲು ಈ ಪದವು ಬಂದಿತು.

ಸಮುರಾಯ್‌ಗಳ ವೇತನವನ್ನು ಅಕ್ಕಿಯ ಕೊಕು ವಿನಲ್ಲಿ (ಓರ್ವ ಮನುಷ್ಯನನ್ನು ಒಂದು ವರ್ಷದವರೆಗೆ ಪೋಷಿಸಲು ಸಾಕಾಗುವ 180 ಲೀಟರ್‌ಗಳಷ್ಟು) ಅಳೆಯಲಾಗುತ್ತಿತ್ತು. ಹ್ಯಾನ್‌‌ ಗಳ ಸೇವೆಯಲ್ಲಿರುವ ಸಮುರಾಯ್‌ಗಳನ್ನು ಹ್ಯಾನ್‌‌ಷಿ ಎಂದು ಕರೆಯಲಾಗುತ್ತದೆ.

ಸಮುರಾಯ್‌ ರಕ್ಷಾಕವಚ, ತೊಪ್‌ಕಾಪಿ ಅರಮನೆ, ಇಸ್ತಾನ್‌ಬುಲ್‌, ಟರ್ಕಿ

ಕೆಳಗೆ ನಮೂದಿಸಲಾಗಿರುವ ಪದಗಳು ಸಮುರಾಯ್‌ಗೆ ಅಥವಾ ಸಮುರಾಯ್‌ ಸಂಪ್ರದಾಯಕ್ಕೆ ಸಂಬಂಧಪಟ್ಟಿವೆ:

  • ಉರುವಾಶೈ
    "ಬನ್‌" (ಸಾಹಿತ್ಯಿಕ ಅಧ್ಯಯನ) ಮತ್ತು "ಬು"ಗೆ (ಸೇನಾ ಅಧ್ಯಯನ ಅಥವಾ ಕಲೆಗಳು) ಸಂಬಂಧಿಸಿರುವ ಕಾಂಜೀ ಲಿಪಿಯಿಂದ ಸಂಕೇತೀಕರಿಸಲ್ಪಟ್ಟಿರುವ ಓರ್ವ ಸುಸಂಸ್ಕೃತ ಯೋಧ
  • ಬ್ಯೂಕ್‌ (武家)
    ಸಮರಕಲೆಯ ಒಂದು ಮನೆ ಅಥವಾ ಇಂಥ ಮನೆಯೊಂದರ ಸದಸ್ಯ
  • ಮೊನೊನೊಫು (もののふ)
    ಓರ್ವ ಯೋಧ ಎಂಬ ಅರ್ಥವನ್ನು ಕೊಡುವ ಒಂದು ಪ್ರಾಚೀನ ಶಬ್ದ.
  • ಮೂಷಾ (武者)
    ಬುಗೀಶಾ ದ ಸಂಕ್ಷಿಪ್ತಗೊಳಿಸಲಾದ ಒಂದು ಪದ (武芸者), ಅಕ್ಷರಶಃ ಅರ್ಥ: ಕದನ ಕಲೆಯ ಮನುಷ್ಯ.
  • ಷಿ ()
    ಇದು ಸ್ಥೂಲವಾಗಿ "ಸಂಭಾವಿತ" ಎಂಬ ಅರ್ಥವನ್ನು ಕೊಡುವ ಪದ. ಇದು ಸಮುರಾಯ್‌ಗಳಿಗಾಗಿ, ನಿರ್ದಿಷ್ಟವಾಗಿ ಬುಷಿ ಯಂಥ (武士, ಯೋಧ ಅಥವಾ ಸಮುರಾಯ್‌ ಎಂಬ ಅರ್ಥವನ್ನು ನೀಡುವ) ಪದಗಳಲ್ಲಿ ಕೆಲವೊಮ್ಮೆ ಬಳಸಲ್ಪಡುತ್ತದೆ.
  • ತ್ಸುವಾಮೊನೊ ()
    ಮಾಟ್ಸುವೊ ಬಶೋನಿಂದ ತನ್ನ ಪ್ರಸಿದ್ಧ ಹೈಕುವಿನಲ್ಲಿ ಜನಪ್ರಿಯಗೊಳಿಸಲ್ಪಟ್ಟ ಓರ್ವ ಸೈನಿಕನಿಗಾಗಿರುವ ಒಂದು ಹಳೆಯ ಪದ. ಓರ್ವ ಸದೃಢ ವ್ಯಕ್ತಿ ಎಂಬ ಅಕ್ಷರಶಃ ಅರ್ಥವನ್ನು ಇದು ನೀಡುತ್ತದೆ.
ನಾಟ್ಸುಕುಸಾ ಯಾ
ತ್ಸುವಾಮೊನೊ ಡೊಮೊ ಗಾ
ಯುಮೆ ನೊ ಅಟೊ

ಮಾಟ್ಸುವೊ ಬಶೋ

ಬೇಸಿಗೆಯ ಹುಲ್ಲುಗಳು,
ಇವು ಸೈನಿಕರ ಕನಸುಗಳ
ಅವಶೇಷಗಳಾಗಿವೆ

(ಅನುವಾದ: ಲೂಸಿಯೆನ್‌ ಸ್ಟ್ರಿಕ್‌)

ಮಿಥ್ಯಾಕಲ್ಪನೆ ಮತ್ತು ವಾಸ್ತವತೆ[ಬದಲಾಯಿಸಿ]

ಬಹುಪಾಲು ಸಮುರಾಯ್‌ಗಳು ಒಂದು ಸಂಭಾವಿತತನದ ನಡವಳಿಕೆಗೆ ಅಥವಾ ಶಿಷ್ಟಾಚಾರಕ್ಕೆ ಒಳಪಟ್ಟಿದ್ದರು ಮತ್ತು ಅವರಿಗಿಂತ ಕೆಳಗಿರುವವರಿಗೆ ಒಂದು ಆದರ್ಶವಾಗಿರಬೇಕೆಂಬುದನ್ನು ಅವರಿಂದ ನಿರೀಕ್ಷಿಸಲಾಗುತ್ತಿತ್ತು. ....seppuku (切腹 seppuku?) ಎಂಬುದು ಅವರ ಶಿಷ್ಟಾಚಾರದ ಒಂದು ಗಮನಾರ್ಹ ಭಾಗವಾಗಿದ್ದು ಇದರಲ್ಲಿ ಸಮುರಾಯ್‌ಗಳು ಸಾಮಾಜಿಕ ನಿಯಮಗಳಿಗೆ ಇನ್ನೂ ಉಪಕೃತರಾಗಿದ್ದರು ಹಾಗೂ ಸಾವಿನೆಡೆಗೆ ಸಾಗುವ ಮೂಲಕ ಓರ್ವ ಪದಚ್ಯುತ ಸಮುರಾಯ್‌ ತನ್ನ ಗೌರವವನ್ನು ಮರಳಿ ಗಳಿಸಲು ಅದು ಅವಕಾಶಮಾಡಿಕೊಟ್ಟಿತ್ತು. 1905ರಲ್ಲಿನ ...Bushido (武士道 Bushidō?) ಬರಹಗಾರಿಕೆಯಂಥ, ಸಮುರಾಯ್‌ ನಡವಳಿಕೆಯ ರೋಮಾಂಚಕಾರಿ ರೂಪದ ಅನೇಕ ನಿರೂಪಣೆಗಳು ಲಭ್ಯವಿರುವಾಗಲೇ, ರಣಾಂಗಣದಲ್ಲಿ ಬೇರಾವುದೇ ಯೋಧರಷ್ಟೇ ಸಮುರಾಯ್‌ಗಳೂ ಕಾರ್ಯೋದ್ಯುಕ್ತರಾಗಿರುತ್ತಿದ್ದರು ಎಂಬುದನ್ನು ಕೊಬುಡೊ ಮತ್ತು ಸಾಂಪ್ರದಾಯಿಕ ಬುಡೋನ ಅಧ್ಯಯನಗಳು ಸೂಚಿಸುತ್ತವೆ.

20ನೇ ಶತಮಾನದ ಅತಿರೇಕದ ಭಾವಾವೇಶದ ಅಥವಾ ವಾಸ್ತವಕ್ಕೆ ದೂರವಿರುವ ಸ್ಥಿತಿಯ ಚಿತ್ರಣದ ಹೊರತಾಗಿಯೂ, ಸ್ವಾಮಿನಿಷ್ಠೆಯಿಲ್ಲದ ಮತ್ತು ವಿಶ್ವಾಸಘಾತುಕರಾಗಿರುವ (ಉದಾಹರಣೆಗೆ, ಅಕೆಚಿ ಮಿಟ್ಸುಹಿದೆ), ಪುಕ್ಕಲುತನದ, ಕೆಚ್ಚೆದೆಯ, ಅಥವಾ ವಿಪರೀತವಾಗಿ ನಿಷ್ಠೆತೋರುವ (ಉದಾಹರಣೆಗೆ, ಕುಸುನೋಕಿ ಮಸಾಶಿಗೆ) ರೀತಿಯಲ್ಲಿಯೂ ಸಮುರಾಯ್‌ಗಳು ಚಿತ್ರಿಸಲ್ಪಟ್ಟಿದ್ದಾರೆ. ಸಮುರಾಯ್‌ಗಳು ತಮ್ಮ ಸಮಕ್ಷವಾದ ಮೇಲಧಿಕಾರಿಗಳಿಗೆ ಸಾಮಾನ್ಯವಾಗಿ ನಿಷ್ಠರಾಗಿರುತ್ತಿದ್ದರು. ಇದಕ್ಕೆ ಪ್ರತಿಯಾಗಿ ಆ ಅಧಿಕಾರಿಗಳು ಸ್ವತಃ ತಾವು ಉನ್ನತಮಟ್ಟದ ಧಣಿಗಳೊಂದಿಗೆ ಸಂಬಂಧವನ್ನು ಹೊಂದಿರುತ್ತಿದ್ದರು. ಉನ್ನತ ಮಟ್ಟದ ಧಣಿಗಳೆಡೆಗಿನ ಈ ನಿಷ್ಠಾವಂತಿಕೆಗಳು ಹಲವು ಬಾರಿ ಬದಲಾಗುತ್ತಿದ್ದವು; ಉದಾಹರಣೆಗೆ, ಟೊಯೊಟೊಮಿ ಹಿಡೆಯೊಶಿ (豊臣秀吉) ಅಡಿಯಲ್ಲಿ ಸಂಬಂಧಹೊಂದಿದ್ದ ಉನ್ನತ ಮಟ್ಟದ ಧಣಿಗಳು ನಿಷ್ಠಾವಂತ ಸಮುರಾಯ್‌ಗಳಿಂದ ಸೇವೆಯನ್ನು ಪಡೆಯುತ್ತಿದ್ದರು, ಆದರೆ ಅವರಡಿಯಲ್ಲಿನ ಊಳಿಗಮಾನ್ಯ ಪದ್ಧತಿಯ ಧಣಿಗಳು ತಮ್ಮ ಸಮುರಾಯ್‌ಗಳನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗುವುದರ ಮೂಲಕ ತಮ್ಮ ಬೆಂಬಲವನ್ನು ಟೊಕುಗವಾಗೆ ಬದಲಾಯಿಸಲು ಸಾಧ್ಯವಿತ್ತು. ಆದಾಗ್ಯೂ, ಸಮುರಾಯ್‌ಗಳು ತಮ್ಮ ಧಣಿಗೆ ಅಥವಾ ಡೈಮ್ಯೊಗೆ ನಿಷ್ಠರಾಗಿಲ್ಲದ ಗಮನಾರ್ಹವಾದ ನಿದರ್ಶನಗಳೂ ಇದ್ದು, ಇಂಥ ಸಂದರ್ಭದಲ್ಲಿ ಚಕ್ರವರ್ತಿಯೆಡೆಗಿನ ನಿಷ್ಠಾವಂತಿಕೆಯು ಪರಮಾಧಿಕಾರವನ್ನು ಹೊಂದಿರುವ ರೀತಿಯಲ್ಲಿ ನೋಡಲ್ಪಡುತ್ತಿತ್ತು.[೧೫]

ಜನಪ್ರಿಯ ಸಂಸ್ಕೃತಿ[ಬದಲಾಯಿಸಿ]

ಮಿಟೋ ಕೊಮೊನ್‌ನ ಸಜ್ಜಿಕೆಯಲ್ಲಿರುವ ನಟ ಕೊಟಾರೊ ಸಟೊಮಿ

ಜಿದಾಯ್ಗೆಕಿಯು (ಅಕ್ಷರಶಃ ಅರ್ಥ: ಐತಿಹಾಸಿಕ ನಾಟಕ) ಜಪಾನಿಯರ ಚಲನಚಿತ್ರಗಳು ಹಾಗೂ TVಯಲ್ಲಿನ ಒಂದು ಪ್ರಧಾನ ಕಾರ್ಯಕ್ರಮವಾಗಿ ಗುರುತಿಸಿಕೊಂಡಿದೆ. ದುಷ್ಟ ಸಮುರಾಯ್‌ಗಳು ಹಾಗೂ ವರ್ತಕರ ವಿರುದ್ಧ ಎದ್ದುನಿಂತ ಕೆಂಜುಟ್ಸುವಿನೊಂದಿಗಿನ ಓರ್ವ ಸಮುರಾಯ್‌ನ್ನು ಈ ಕಾರ್ಯಕ್ರಮಗಳು ವಿಶಿಷ್ಟವಾಗಿ ತೋರಿಸುತ್ತವೆ. ಟೊಕುಗವಾ ಮಿಟ್ಸುಕುನಿಯ ದೇಶಾಟನೆ ಅಥವಾ ಪ್ರವಾಸದ ಕುರಿತಾದ ಕಥೆಗಳ ಒಂದು ಕಾಲ್ಪನಿಕ ಸರಣಿಯಾದ ಮಿಟೊ ಕೋಮನ್‌ (水戸黄門) ಎಂಬುದು ಒಂದು ಜನಪ್ರಿಯ TV ನಾಟಕವಾಗಿದ್ದು, ಓರ್ವ ನಿವೃತ್ತ ಶ್ರೀಮಂತ ವ್ಯಾಪಾರಿಯಂತೆ ವೇಷಮರೆಸಿಕೊಂಡ ಮಿಟ್ಸುಕುನಿಯು ಅವನ ಒಡನಾಡಿಗಳಂತೆ[ಸೂಕ್ತ ಉಲ್ಲೇಖನ ಬೇಕು] ವೇಷಮರೆಸಿಕೊಂಡಿರುವ ಇಬ್ಬರು ಶಸ್ತ್ರಾಸ್ತ್ರರಹಿತ ಸಮುರಾಯ್‌ಗಳೊಂದಿಗೆ ಪ್ರವಾಸ ಕೈಗೊಳ್ಳುವುದನ್ನು ಇದರಲ್ಲಿ ತೋರಿಸಲಾಗಿದೆ. ತಾನು ಹೋದೆಡೆಯೆಲ್ಲಾ ಅವನು ಸಮಸ್ಯೆಗಳನ್ನು ಕಂಡುಕೊಳ್ಳುತ್ತಾನೆ, ಮತ್ತು ಸಾಕ್ಷ್ಯವನ್ನು ಒಟ್ಟುಗೂಡಿಸಿದ ನಂತರ, ತನ್ನ ಗುರುತನ್ನು ಪ್ರಕಟಿಸುವುದಕ್ಕೆ ಮುಂಚಿತವಾಗಿ ದುಷ್ಟ ಸಮುರಾಯ್‌ ಹಾಗೂ ವರ್ತಕರನ್ನು ಪಶ್ಚಾತ್ತಾಪ ಪಡದೆ ಚಚ್ಚಿಕೆಡವಲು ತನ್ನ ಸಮುರಾಯ್‌ಗೆ ಅವಕಾಶ ನೀಡುತ್ತಾನೆ. ತಮ್ಮ ಸಂಪೂರ್ಣ ಬುಡಕಟ್ಟನ್ನು ಅವನು ನಾಶಮಾಡಬಲ್ಲ ಎಂಬುದು ಆ ಖಳನಾಯಕರಿಗೆ ಆಗ ಸ್ಪಷ್ಟವಾಗುತ್ತದೆ ಮತ್ತು ಅವನ ಶಿಕ್ಷೆಗಳು ತಮ್ಮ ಕುಟುಂಬದವರೆಗೂ ವಿಸ್ತರಣೆಯಾಗುವುದಿಲ್ಲ ಎಂಬ ಭರವಸೆಯೊಂದಿಗೆ ಆ ಖಳನಾಯಕರು ಅವನಿಗೆ ಶರಣಾಗುತ್ತಾರೆ.[ಸೂಕ್ತ ಉಲ್ಲೇಖನ ಬೇಕು]

ಚಲನಚಿತ್ರ ನಿರ್ದೇಶಕ ಅಕಿರಾ ಕುರೊಸಾವಾನ ಸಮುರಾಯ್‌-ಕಥೆಯುಳ್ಳ ಚಲನಚಿತ್ರಗಳು ಈ ಕಲಾಪ್ರಕಾರದ ಪೈಕಿ ಅತ್ಯಂತ ಮೆಚ್ಚುಗೆಯನ್ನು ಪಡೆದಿದ್ದು, ಅವನ ಪ್ರಯೋಗ ವಿಧಾನಗಳು ಹಾಗೂ ನಿರೂಪಣಾ ಶೈಲಿಗಳು ವಿಶ್ವಾದ್ಯಂತದ ಅನೇಕ ಚಲನಚಿತ್ರ ತಯಾರಕರ ಮೇಲೆ ಪ್ರಭಾವ ಬೀರಿವೆ.[ಸೂಕ್ತ ಉಲ್ಲೇಖನ ಬೇಕು] ಅವನ ಗಮನಾರ್ಹ ಚಿತ್ರಗಳಲ್ಲಿ ಸೆವೆನ್‌ ಸಮುರಾಯ್‌ ಎಂಬ ಚಿತ್ರವೂ ಸೇರಿದ್ದು. ಇದರಲ್ಲಿ ಸುತ್ತುವರಿಯಲ್ಪಟ್ಟ ಒಂದು ವ್ಯವಸಾಯದ ಹಳ್ಳಿಯು ಯೊಜಿಂಬೋ ಎಂದು ಕರೆಯಲ್ಪಡುವ ಡಕಾಯಿತರಿಂದ ತಮ್ಮನ್ನು ರಕ್ಷಿಸಲು ಅಲೆದಾಡುವ ಸಮುರಾಯ್‌ಗಳ ಒಂದು ಗುಂಪನ್ನು ಎರವಲು ಸೇವೆಗೆ ನೇಮಿಸಿಕೊಳ್ಳುತ್ತದೆ. ಇದರಲ್ಲಿ ಹಿಂದಿನ ಸಮುರಾಯ್‌ ಒಬ್ಬ ಪಟ್ಟಣದ ತಂಡಘರ್ಷಣೆಯೊಂದರಲ್ಲಿ ಎರಡೂ ಪಕ್ಷಗಳ ಪರವಾಗಿ ಕೆಲಸ ಮಾಡುವ ಮೂಲಕ ಸ್ವತಃ ತೊಡಗಿಸಿಕೊಳ್ಳುತ್ತಾನೆ. ದಿ ಹಿಡನ್‌ ಫೋರ್ಟ್ರೆಸ್‌ ಎಂಬ ಮತ್ತೊಂದು ಚಿತ್ರದಲ್ಲಿ, ಐತಿಹ್ಯವನ್ನು ಹೊಂದಿರುವ ಓರ್ವ ಸೇನಾಪತಿಯು ರಾಜಕುಮಾರಿಯೊಬ್ಬಳನ್ನು ಸುರಕ್ಷಿತವಾಗಿ ಕರೆದೊಯ್ಯಲು ಬೆಂಗಾವಲಾಗಿ ಹೋಗುವಾಗ ಇಬ್ಬರು ಮೂರ್ಖ ರೈತರು ಸ್ವತಃ ಅವನಿಗೆ ನೆರವು ನೀಡುತ್ತಾರೆ. ದಿ ಹಿಡನ್‌ ಫೋರ್ಟ್ರೆಸ್‌ ಚಿತ್ರವು ಜಾರ್ಜ್‌ ಲ್ಯೂಕಾಸ್‌‌ಸ್ಟಾರ್‌ ವಾರ್ಸ್‌ ಚಿತ್ರಕ್ಕೆ ದೊರೆತ ಪ್ರೇರಣೆಗಳಲ್ಲಿ ಒಂದಾಗಿತ್ತು. ಸ್ಟಾರ್‌ ವಾರ್ಸ್ ಚಿತ್ರವು ಸಮುರಾಯ್‌ಗಳಿಂದಲೂ ಸಹ ಇನ್ನೂ ಅನೇಕ ಅಂಶಗಳನ್ನು ಎರವಲಾಗಿ ಪಡೆದಿದೆ. ಸರಣಿಯ ಜೇಡಿ ನೈಟ್ಸ್‌ ಇದಕ್ಕೊಂದು ಉದಾಹರಣೆ. ಡಾರ್ತ್‌ ವೇಡರ್‌ನ ವೇಷಭೂಷಣವು ಸಮುರಾಯ್‌ ಒಬ್ಬನ ಮುಖವಾಡ ಮತ್ತು ಕವಚದಿಂದ ದೊಡ್ಡ ಮಟ್ಟಿಗಿನ ಪ್ರೇರಣೆಯನ್ನು ಪಡೆದಿದೆ.

ಸಮುರಾಯ್‌ ಚಲನಚಿತ್ರಗಳು ಹಾಗೂ ಪಡುವಣ ಚಿತ್ರಗಳು ಹಲವಾರು ಹೋಲಿಕೆಗಳನ್ನು ಹೊಂದಿದ್ದು, ಹಲವಾರು ವರ್ಷಗಳಿಂದ ಈ ಎರಡೂ ವಲಯಗಳು ಪರಸ್ಪರರ ಮೇಲೆ ಪ್ರಭಾವ ಬೀರಿವೆ. ನಿರ್ದೇಶಕ ಜಾನ್‌ ಫೋರ್ಡ್‌‌‌ನ ಚಿತ್ರಗಳಿಂದ ಕುರೊಸಾವಾ ಪ್ರಭಾವಿತನಾಗಿದ್ದರೆ, ಇದಕ್ಕೆ ಪ್ರತಿಯಾಗಿ ಕುರೊಸಾವಾನ ಚಿತ್ರಗಳು ಪಡುವಣ ಚಿತ್ರಗಳಾಗಿ ಪುನರ್‌ನಿರ್ಮಾಣಗೊಂಡಿವೆ. ದಿ ಸೆವೆನ್‌ ಸಮುರಾಯ್‌ ಚಿತ್ರವು ದಿ ಮ್ಯಾಗ್ನಿಫಿಸೆಂಟ್‌ ಸೆವೆನ್‌ ಚಿತ್ರವಾಗಿ ಮರುನಿರ್ಮಾಣಗೊಂಡಿರುವುದು ಹಾಗೂ ಯೊಜಿಂಬೋ ಚಿತ್ರವು ಎ ಫಿಸ್ಟ್‌ಫುಲ್‌ ಆಫ್‌ ಡಾಲರ್ಸ್‌ ಚಿತ್ರವಾಗಿ ಮರುನಿರ್ಮಾಣಗೊಂಡಿರುವುದು ಇದಕ್ಕೆ ಉದಾಹರಣೆಗಳು. "ದಿ ಸೆವೆನ್‌ ಸಮುರಾಯ್‌" ಚಿತ್ರದ ಒಂದು ಅನಿಮೇಷನ್‌ (ಸಮುರಾಯ್‌ 7) ಚಿತ್ರದ ರೂಪಾಂತರವೂ ಲಭ್ಯವಿದ್ದು, ಅದು ಹಲವಾರು ಸಂಚಿಕೆಗಳವರೆಗೆ ವ್ಯಾಪಿಸಿದೆ.

ಐಜಿ ಯೊಶಿಕಾವಾ ಎಂಬಾತ ಅತ್ಯಂತ ಪ್ರಸಿದ್ಧ ಜಪಾನೀ ಐತಿಹಾಸಿಕ ಕಾದಂಬರಿಕಾರರಲ್ಲಿ ಒಬ್ಬನಾಗಿದ್ದಾನೆ. ಟೈಕೋ , ಮುಸಾಶಿ ಮತ್ತು ಹೀಕೆ ಟೇಲ್‌ ಮೊದಲಾದವು ಸೇರಿದಂತೆ ಜನಪ್ರಿಯ ಕೃತಿಗಳ ಅವನ ಮರುನಿರೂಪಣೆಗಳು ಸಮುರಾಯ್‌ ಹಾಗೂ ಯೋಧ ಸಂಸ್ಕೃತಿಗಳನ್ನು ಚಿತ್ರಿಸುವಲ್ಲಿನ ಅವುಗಳ ಭವ್ಯ ಕಥಾನಿರೂಪಣೆ ಹಾಗೂ ಸಮೃದ್ಧವಾದ ವಾಸ್ತವಿಕತೆಯಿಂದಾಗಿ ಓದುಗವೃಂದದಲ್ಲಿ ಅಪಾರ ಜನಪ್ರಿಯತೆಯನ್ನು ಸಂಪಾದಿಸಿವೆ.

ಅಬರೆಂಬೊ ಶೋಗನ್‌ ಎಂಬ ಮತ್ತೊಂದು ಕಾಲ್ಪನಿಕ ದೂರದರ್ಶನ ಸರಣಿಯು ಯೊಶಿಮುನೆ ಎಂಬ ಎಂಟನೇ ಟೊಕುಗವಾ ಶೋಗನ್‌‌ನ್ನು ಒಳಗೊಂಡಿದೆ. ಶೋಗನ್‌ನಿಂದ ಪ್ರಾರಂಭಿಸಿ ಅತ್ಯಂತ ಕೆಳಗಿನ ದರ್ಜೆಯವರೆಗಿನ ಎಲ್ಲಾ ಮಟ್ಟಗಳಲ್ಲಿನ ಸಮುರಾಯ್‌ಗಳಷ್ಟೇ ಅಲ್ಲದೇ ರೋನಿನ್‌ ಕೂಡಾ ಈ ಪ್ರದರ್ಶನದಲ್ಲಿ ಎದ್ದುಕಾಣುವ ರೀತಿಯಲ್ಲಿ ತೋರಿಸಲ್ಪಟ್ಟಿದೆ.

ಜೇಮ್ಸ್‌ ಕ್ಲಾವೆಲ್‌ನ ಏಷ್ಯಾದ ಕುರಿತಾದ ಸುದೀರ್ಘವಾದ ಚರಿತಾವಳಿಯಲ್ಲಿ ಶೋಗನ್‌ ಮೊದಲ ಕಾದಂಬರಿಯಾಗಿದೆ. ಸುಮಾರು 1600ರ ವರ್ಷದ ಕಾಲದ ಊಳಿಗಮಾನ್ಯ ಪದ್ಧತಿಯ ಜಪಾನ್‌ನ್ನು ಮನಸ್ಸಿನಲ್ಲಿಟ್ಟುಕೊಂಡು ಇದರ ಕಥೆಯನ್ನು ಹೆಣೆಯಲಾಗಿದ್ದು, ಶೊಗುನಾಟೆಯ ಹಂತಕ್ಕೆ ಟೊಕುಗವಾ ಇಯೆಸು ಏರಿದ್ದನ್ನು ಒಂದು ಅತೀವವಾದ ಕಾದಂಬರೀಕರಿಸಿದ ಕಥನ ನಿರೂಪಣೆಯ ಮೂಲಕ ಇದು ನೀಡುತ್ತದೆ. ಈ ನಿರೂಪಣೆಯು ಓರ್ವ ಇಂಗ್ಲಿಷ್‌ ನಾವಿಕನ ದೃಷ್ಟಿಕೋನದಲ್ಲಿ ನೋಡಲ್ಪಟ್ಟಿದ್ದು, ಅವನ ಕಲ್ಪಿತ ಕಥನದ ಅತಿರೇಕದ ಧೀರವರ್ತನೆಗಳು ವಿಲಿಯಂ ಆಡಮ್ಸ್‌‌ನ ಸಾಹಸಕಾರ್ಯಗಳ ಮೇಲೆ ಬಿಡಿಬಿಡಿಯಾಗಿ ಆಧರಿಸಿವೆ.

ಸೈಗೊ ಟಕಾಮೋರಿ (ಮೇಲಿನ ಬಲಭಾಗದಲ್ಲಿ ಪಾಶ್ಚಿಮಾತ್ಯ ಸಮವಸ್ತ್ರವನ್ನು ಧರಿಸಿರುವವ) ಶಿರೋಯಾಮಾದ ಕದನದಲ್ಲಿ ತನ್ನ ಸೇನಾ ತುಕಡಿಗಳಿಗೆ ನಿರ್ದೇಶನ ನೀಡುತ್ತಿರುವುದು, ಅವರಲ್ಲಿ ಕೆಲವರು ಸಾಂಪ್ರದಾಯಿಕ ಸಮುರಾಯ್‌ ರಕ್ಷಾಕವಚದಲ್ಲಿದ್ದಾರೆ.

ವಾಸ್ತವತೆ ಮತ್ತು ಕಲ್ಪನೆಗಳ ಒಂದು ಮಿಶ್ರಣವನ್ನೊಳಗೊಂಡ ದಿ ಲಾಸ್ಟ್‌ ಸಮುರಾಯ್‌ ಎಂಬ ಒಂದು ಹಾಲಿವುಡ್‌ ಚಲನಚಿತ್ರವು, 2003ರಲ್ಲಿ ಬಿಡುಗಡೆಗೊಂಡು ಉತ್ತರ ಅಮೆರಿಕಾದಲ್ಲಿ ಸಾರ್ವತ್ರಿಕವಾಗಿ ಉತ್ತಮ ಅಭಿಪ್ರಾಯಗಳನ್ನು ಪಡೆಯಿತು. ಸೈಗೋ ಟಕಾಮೊರಿಯ ನೇತೃತ್ವದ 1877ರ ಸತ್ಸುಮಾ ದಂಗೆಯ ಮೇಲೆ ಈ ಚಲನಚಿತ್ರದ ಕಥಾವಸ್ತುವು ಬಿಡಿಬಿಡಿಯಾಗಿ ಆಧರಿಸಿದೆ. ಅಷ್ಟೇ ಅಲ್ಲ, ಬೊಷಿನ್‌ ಯುದ್ಧದಲ್ಲಿ ಎನೊಮೊಟೊ ಟೆಕಿಯಾಕಿಯ ಜೊತೆಜೊತೆಗೆ ಕಾದಾಟ ನಡೆಸಿದ ಓರ್ವ ಫ್ರೆಂಚ್‌‌ ಸೇನಾ ಕ್ಯಾಪ್ಟನ್‌ ಆದ ಜೂಲ್ಸ್‌ ಬ್ರೂನೆಟ್‌‌‌ನ ಕಥೆಯನ್ನೂ ಇದು ಆಧರಿಸಿದೆ.

ನಟ ಫಾರೆಸ್ಟ್‌ ವೈಟೇಕರ್‌ ನಟಿಸಿರುವ ....Ghost Dog: The Way of the Samurai ಚಿತ್ರವು, ಹಗಾಕುರೆ ಯಿಂದ ಸ್ಫೂರ್ತಿ ಪಡೆದ ಸಮಕಾಲೀನ ಅಮೆರಿಕಾದಲ್ಲಿನ ಓರ್ವ ಕಪ್ಪುವರ್ಣೀಯ ಕೊಲೆಗಡುಕನನ್ನು ತನ್ನ ಪ್ರಮುಖ ಪಾತ್ರವಾಗಿ ತೆಗೆದುಕೊಂಡಿದೆ. ಧ್ವನಿಪಥದ ಸಂಪುಟವು ಹಗಾಕುರೆ ಯ ಸೂಚ್ಯಂಕಗಳಿಗೆ ಪ್ರತಿಯಾಗಿ ಹಿಪ್‌ ಹಾಪ್‌ಗೆ ಸ್ಥಾನಕಲ್ಪಿಸಿದೆ.

ಕ್ವೆಂಟಿನ್‌ ಟಾರಾಂಟಿನೊನಿಂದ ಸೃಷ್ಟಿಸಲ್ಪಟ್ಟ ಕಿಲ್‌ ಬಿಲ್‌ ನ್ನು ಕಟಾನಾದ ಒಂದು ವೈಭವೀಕರಣ ಎಂದು ವಿವರಿಸಬಹುದು. ಪ್ರಮುಖವಾಗಿ ಇದು ಹಳೆಯ ಕುಂಗ್‌-ಫು ಚಲನಚಿತ್ರಗಳಿಂದ ಪ್ರೇರೇಪಿಸಲ್ಪಟ್ಟಿದ್ದು, ಸಮುರಾಯ್‌ಗೆ ಅಲ್ಪ ಪ್ರಮಾಣದಲ್ಲಿ ಸಂಬಂಧಿಸಿದೆ. ಸಮುರಾಯ್‌ ಸಂಸ್ಕೃತಿಯ ಇದೇ ತೆರನಾದ ವಿಕಾರಗೊಳಿಸುವಿಕೆಯು ಕಡಿಮೆ ಬಂಡವಾಳದ ಪಂಥೀಯ ಚಲನಚಿತ್ರದ ಪ್ರಪಂಚದವರೆಗೂ ಮುಂದುವರೆದಿದ್ದು, ಅಲ್ಲಿ ಸಮುರಾಯ್‌ ವ್ಯಾಂಪೈರ್‌ ಬೈಕರ್ಸ್‌ ಫ್ರಂ ಹೆಲ್‌ ನಂಥ ಚಲನಚಿತ್ರಗಳಲ್ಲಿ ಪ್ರಧಾನ ಪಾತ್ರಗಳು ಸಮುರಾಯ್‌ ವಂಶಾವಳಿಗೆ ಸೇರಿದ ಪಾತ್ರವೊಂದನ್ನು ಅಭಿವ್ಯಕ್ತಿಸಲು ಪ್ರಯತ್ನಿಸುತ್ತವೆ. ಆದರೆ ಇವು ಅನಿಮೇಷನ್‌ ಚಿತ್ರಕ್ಕೆ ಅಥವಾ ಇಪ್ಪತ್ತನೇ ಶತಮಾನದ ಅಂತ್ಯಭಾಗದ ಸಚಿತ್ರ ಪುಸ್ತಕ ಸಂಸ್ಕೃತಿಗೆ ಹೆಚ್ಚು ನಿಕಟವಾದ ಸಂಬಂಧವನ್ನು ಹೊಂದಿವೆ.

ಜಪಾನಿ ಭಾಷೆಯ ಸರಣಿ ಚಿತ್ರಗಳು (ಮಂಗಾ) ಹಾಗೂ ಅನಿಮೇಷನ್‌ (ಅನಿಮೇಷನ್‌ ಚಿತ್ರ) ಚಿತ್ರಗಳಲ್ಲೂ ಸಮುರಾಯ್‌ಗಳು ಆಗಿಂದ್ದಾಗ್ಗೆ ಕಾಣಿಸಿಕೊಂಡಿದ್ದಾರೆ. ಐತಿಹಾಸಿಕ ಕೃತಿಗಳು ಅತ್ಯಂತ ಸಾಮಾನ್ಯವಾಗಿದ್ದು, ಇವುಗಳಲ್ಲಿ ನಾಯಕನು ಓರ್ವ ಸಮುರಾಯ್‌ ಆಗಿರುತ್ತಾನೆ ಇಲ್ಲವೇ ಹಿಂದಿದ್ದ ಸಮುರಾಯ್‌ ಆಗಿರುತ್ತಾನೆ (ಅಥವಾ ಮತ್ತೊಂದು ದರ್ಜೆ/ಸ್ಥಾನಕ್ಕೆ ಸೇರಿದವನಾಗಿರುತ್ತಾನೆ) ಮತ್ತು ಪರಿಗಣನೀಯವಾದ ಸಮರಕಲೆಯ ಪರಿಣತಿಯನ್ನು ಅವನು ಹೊಂದಿರುತ್ತಾನೆ. ಲೋನ್‌ ವೋಲ್ಫ್‌ ಅಂಡ್‌ ಕಬ್‌ ಹಾಗೂ ರುರೌನಿ ಕೆನ್‌ಶಿನ್‌ ಎಂಬ ಎರಡು ಚಿತ್ರಗಳು ಅತ್ಯಂತ ಪ್ರಸಿದ್ಧ ಉದಾಹರಣೆಗಳಲ್ಲಿ ಸೇರಿವೆ. ಲೋನ್‌ ವೋಲ್ಫ್‌ ಅಂಡ್‌ ಕಬ್‌ನಲ್ಲಿ, ಶೋಗನ್‌ಗೆ ಸಂಬಂಧಿಸಿದ ಹಿಂದಿನ ಬದಲಿ ವಧಕಾರ ಮತ್ತು ಅವನ ದಟ್ಟಗಾಲಿಡುವ ಮಗ, ಇತರ ಸಮುರಾಯ್‌ಗಳು ಹಾಗೂ ಶ್ರೀಮಂತ ವರ್ಗದವರಿಂದ ನಂಬಿಕೆದ್ರೋಹಕ್ಕೀಡಾದ ನಂತರ ಬಾಡಿಗೆ ಕೊಲೆಗಾರರಾಗಿ ಮಾರ್ಪಡುತ್ತಾರೆ. ರುರೌನಿ ಕೆನ್‌ಶಿನ್ ಚಿತ್ರದಲ್ಲಿ, ಬಕುಮಾಟ್ಸು ಯುಗವು ಕೊನೆಯಾಗುವಲ್ಲಿ ಹಾಗೂ ಮೀಜಿ ಯುಗವು ಪ್ರಾರಂಭವಾಗುವಲ್ಲಿ ನೆರವಾದ ನಂತರ, ಓರ್ವ ಹಿಂದಿನ ಕೊಲೆಗಾರನು ಹೊಸದಾಗಿ ಕಂಡುಕೊಂಡ ಸ್ನೇಹಿತರನ್ನು ರಕ್ಷಿಸುವಲ್ಲಿ ತನ್ನನ್ನು ಕಂಡುಕೊಳ್ಳುತ್ತಾನೆ. ಅಷ್ಟೇ ಅಲ್ಲ, ಹಿಮ್ಮೊಗದ-ಅಲಗುಳ್ಳ ಕತ್ತಿಯೊಂದರ ಬಳಕೆಯ ಮೂಲಕ ಮತ್ತೆಂದೂ ಸಾಯಿಸುವುದಿಲ್ಲ ಎಂಬ ತನ್ನ ಪ್ರವಾಣವಚನವನ್ನು ಎತ್ತಿಹಿಡಿಯುವ ಸಂದರ್ಭದಲ್ಲಿ ತನ್ನ ಹಳೆಯ ಶತ್ರುಗಳನ್ನು ಪ್ರಯಾಸದಿಂದ ಹಿಮ್ಮೆಟ್ಟಿಸುವಲ್ಲಿ ತನ್ನನ್ನು ಕಂಡುಕೊಳ್ಳುತ್ತಾನೆ.

ಸಮುರಾಯ್‌-ಸ್ವರೂಪದ ಪಾತ್ರಗಳು ಕೇವಲ ಐತಿಹಾಸಿಕ ಸನ್ನಿವೇಶಗಳಿಗೆ ಅಥವಾ ಕಾಲಮಾನಗಳಿಗೆ ಮಾತ್ರವೇ ಸೀಮಿತವಾಗಿರದೆ, ಆಧುನಿಕ ಯುಗದಲ್ಲಿ ಸನ್ನಿವೇಶದ ಹಿನ್ನೆಲೆಯಲ್ಲಿ, ಅಷ್ಟೇ ಏಕೆ ಭವಿಷ್ಯದ ಸನ್ನಿವೇಶದ ಹಿನ್ನೆಲೆಯಲ್ಲೂ ಸಿದ್ಧಪಡಿಸಲಾದ ಅನೇಕ ಕೃತಿಗಳೂ ಅಸ್ತಿತ್ವದಲ್ಲಿವೆ. ಸಮುರಾಯ್‌ಗಳಂತೆ ಬದುಕುವ, ತರಬೇತಿ ನೀಡುವ ಹಾಗೂ ಕಾದಾಡುವ ಪಾತ್ರಗಳನ್ನು ಇವು ಒಳಗೊಂಡಿವೆ. ಗಮನಾರ್ಹವಾದ ಉದಾಹರಣೆಗಳಲ್ಲಿ, ಸಚಿತ್ರಸರಣಿಗೆ ಸೇರಿದ ಲ್ಯೂಪಿನ್‌ III ನಿಂದ ಬಂದಿರುವ XIIIನೇ ಗೋಮಾನ್‌ ಇಶಿಕಾವಾ, ದೂರದರ್ಶನ ಸರಣಿಗಳು ಮತ್ತು ಚಲನಚಿತ್ರಗಳು, ಹಾಗೂ ಲವ್‌ ಹಿನಾ ಎಂಬ ರಮ್ಯ ಹಾಸ್ಯ ಚಿತ್ರಕ್ಕೆ ಸೇರಿದ ಮೊಟೊಕೊ ಔಯಾಮಾ ಇವೇ ಮೊದಲಾದವು ಸೇರಿವೆ. ದಿ ಹಂಟೆಡ್‌ (1995) ಎಂಬುದು ಮತ್ತೊಂದು ಹೆಚ್ಚು ಪಾಶ್ಚಾತ್ಯ ಶೈಲಿಯ ಚಲನಚಿತ್ರವಾಗಿದ್ದು, ಇದರಲ್ಲಿ ಬದುಕುಳಿದಿರುವ ಒಂದು ಸಮುರಾಯ್‌ ಬುಡಕಟ್ಟು ದುಷ್ಟ ನಿಂಜಾಗಳಿಂದ ಸಾಕ್ಷಿಯೊಂದನ್ನು ರಕ್ಷಿಸುತ್ತದೆ. ವರ್ತಮಾನ ಕಾಲದ ಸಜ್ಜಿಕೆಯಲ್ಲಿ ಸಿದ್ಧಗೊಳಿಸಲಾಗಿರುವ ಬೇಬ್ಲೇಡ್‌ ಪ್ರದರ್ಶನದಲ್ಲಿ ಸಮುರಾಯ್‌ಗಳನ್ನು ಕುರಿತಾದ ಒಂದಷ್ಟು ಪ್ರಸ್ತುತತೆಯನ್ನು ನೋಡಲು ಸಾಧ್ಯವಿದೆ. ಜಿನ್‌ ಆಫ್‌ ದಿ ಗೇಲ್‌ ಎಂಬ ಒಂದು ಪಾತ್ರವು ಸಮುರಾಯ್‌ ಹಾಗೂ ನಿಂಜಾಗಳ ವಿಶೇಷ ಲಕ್ಷಣಗಳ ಒಂದು ಮಿಶ್ರಣವಾಗಿ ಕಂಡುಬರುತ್ತದೆ. 2004ರಲ್ಲಿ ಬಂದ ಸಮುರಾಯ್‌ ಚಾಂಪ್ಲೂ ಎಂಬ ಚಿತ್ರವು ಸಮುರಾಯ್‌ಗಳನ್ನು ಒಳಗೊಂಡಿದ್ದ ಮತ್ತೊಂದು ಅನಿಮೇಷನ್‌ ಚಿತ್ರವಾಗಿದ್ದು, ಇದು ವಯಸ್ಕರ ವೀಕ್ಷಣೆಗೆ ಮಾತ್ರ ಸೀಮಿತವಾಗಿತ್ತು. ಆಧುನಿಕ ಬೀದಿ-ಸಂಸ್ಕೃತಿ ಹಾಗೂ ಹಿಪ್‌-ಹಾಪ್‌ ಸಂಸ್ಕೃತಿಯೊಂದಿಗೆ ಸಂಯೋಜಿಸಲ್ಪಟ್ಟ ಇಡೊ-ಅವಧಿಯ ಜಪಾನ್‌ನ್ನು ಈ ಚಿತ್ರವು ನಿರೂಪಿಸುತ್ತದೆ. ಸದರಿ ಪ್ರದರ್ಶನದ ಪ್ರಮುಖ ಪಾತ್ರಗಳ ಪೈಕಿ ಜಿನ್‌ ಒಂದಾಗಿದೆ. ಇವನು ಹಿಂದೊಮ್ಮೆ ಓರ್ವ ನಿಪುಣ ಸಮುರಾಯ್‌ ಆಗಿದ್ದು, ತನ್ನ ಯಜಮಾನನನ್ನು ಕೊಂದ ನಂತರ ಓರ್ವ ಅಲೆದಾಡುವ ರೋನಿನ್‌ ಆಗಿ ಮಾರ್ಪಟ್ಟಿರುತ್ತಾನೆ. ಆಫ್ರೋ ಸಮುರಾಯ್‌ ಎಂಬುದು ಓರ್ವ ಸಮುರಾಯ್‌ನ ಮತ್ತೊಂದು ಕಥೆಯಾಗಿದ್ದರೂ, ಇದು ಒಂದು ಭವಿಷ್ಯತ್ತಿಗೆ ಸಂಬಂಧಿಸಿದ ಅಥವಾ ಅತಿ ನವ್ಯವಾದ ಕಾಲಘಟ್ಟದಲ್ಲಿ ನಡೆಯುತ್ತದೆ.

ಅಮೆರಿಕಾದ ಸಚಿತ್ರ ಪುಸ್ತಕಗಳು ತಮ್ಮದೇ ಆದ ಕಥೆಗಳಿಗೆ ಸಂಬಂಧಿಸಿದಂತೆ ಪಾತ್ರದ ಸ್ವರೂಪವನ್ನು ಪರಿಗ್ರಹಿಸಿ ತಮ್ಮದಾಗಿಸಿಕೊಂಡಿವೆ. ಉದಾಹರಣೆಗೆ, 1980ರ ದಶಕಗಳ ಅವಧಿಯಲ್ಲಿ ಬಂದ ಮಾರ್ವೆಲ್‌ ಯೂನಿವರ್ಸ್‌‌‌ಅದ್ಭುತ ನಾಯಕ ವೋಲ್ವರೀನ್‌, ತನ್ನ ತೀವ್ರಸ್ವರೂಪದ ಉತ್ಕಟೇಚ್ಛೆಗಳನ್ನು ಒಂದು ರಚನಾತ್ಮಕ ವಿಧಾನದಲ್ಲಿ ನಿಯಂತ್ರಣಕ್ಕೆ ತಂದುಕೊಳ್ಳುವ ಒಂದು ಮಾರ್ಗವಾಗಿ ಸಮುರಾಯ್‌ನ ಆದರ್ಶಗಳು ಹಾಗೂ ಪರಿಕಲ್ಪನೆಯನ್ನು ಬಳಸಲು ಪ್ರಯತ್ನಿಸಿದ. ಫ್ರಾಂಕ್‌ ಮಿಲ್ಲರ್‌ನಿಂದ ಸೃಷ್ಟಿಯಾದ ರೋನಿನ್‌ ಹಾಗೂ ಸ್ಟಾನ್‌ ಸಕಾಯ್‌‌‌ನಿಂದ ಸೃಷ್ಟಿಯಾದ ಉಸಾಗಿ ಯೊಜಿಂಬೋ ದಂಥ ಜನಪ್ರಿಯ ಸರಣಿಗಳಲ್ಲಿ ರೋನಿನ್‌ಗಳು ಕೂಡಾ ಒಂದು ಪಾತ್ರವಾಗಿ ಕಾಣಿಸಿಕೊಂಡಿವೆ.

ಓರ್ವ ವೀರಯೋಧನ ಪರಿಕಲ್ಪನೆಗೆ ತದ್ವಿರುದ್ಧವಾಗಿರುವ ಓರ್ವ ಸಮುರಾಯ್‌ನ ಪರಿಕಲ್ಪನೆಯು, ಜಪಾನ್‌ ಹಾಗೂ ವಿಶ್ವದ ಉಳಿದ ಭಾಗದಲ್ಲಿ ಓರ್ವ ಯೋಧ ಅಥವಾ ಓರ್ವ ನಾಯಕ ಹೇಗೆ ಚಿತ್ರಿಸಲ್ಪಡುತ್ತಾರೆ ಎಂಬುದರಲ್ಲಿನ ಒಂದು ಪ್ರಮುಖ ಅಂತರಕ್ಕೆ ಕಾರಣವಾಗಿದೆ. ಓರ್ವ ಸಮುರಾಯ್‌ ಉದ್ದವಾಗಿರಬೇಕಾಗಿಲ್ಲ ಮತ್ತು ಬಲಿಷ್ಠನಾಗಿರಲು ಭಾರೀ ಮಾಂಸಖಂಡವನ್ನು ಹೊಂದಿರಬೇಕಾಗಿಲ್ಲ. ಆತ ಕೇವಲ ಐದು ಅಡಿಯಷ್ಟು ಎತ್ತರವಿದ್ದರೆ, ತೋರಿಕೆಯಲ್ಲಿ ದುರ್ಬಲನಾಗಿ ಮತ್ತು ಅಂಗವಿಕಲನಾಗಿರುವ ರೀತಿಯಲ್ಲಿದ್ದರೂ ಸಾಕು. ಮಹಿಳೆಯರೂ ಸಹ ಸಮುರಾಯ್‌ಗಳಾಗಲು ಸಾಧ್ಯವಿದೆ. ಅಧಿಕಾರ ಹಾಗೂ ಬಲದೊಂದಿಗೆ ಗಾತ್ರವನ್ನು ಸಮೀಕರಿಸುವುದನ್ನು ಜಪಾನಿಯರ ಸೌಂದರ್ಯಮೀಮಾಂಸೆಯು ಸುಲಭವಾಗಿ ಅಥವಾ ಮನಃಪೂರ್ವಕವಾಗಿ ಒಪ್ಪುವುದಿಲ್ಲ. ಬ್ಲೈಂಡ್‌ ಸ್ವೋರ್ಡ್ಸ್‌ಮನ್‌ ಝಟೋಯ್ಚಿ ಚಲನಚಿತ್ರ ಸರಣಿಯಲ್ಲಿ ಇದರ ಕರಾರುವಾಕ್ಕಾದ ಉದಾಹರಣೆಗಳನ್ನು ಕಂಡುಕೊಳ್ಳಬಹುದು.

ಅಮೆರಿಕಾದ ಮತ್ತು ಜಪಾನಿಯರ ಸಂಸ್ಕೃತಿಗಳೆರಡರಲ್ಲೂ ಇರುವ ಹಿಪ್‌ ಹಾಪ್‌ ಸಂಗೀತದಲ್ಲಿನ ಸಮುರಾಯ್‌ನ ಬಳಕೆಯನ್ನು ಗಮನಿಸುವುದೂ ಕೂಡ ಮುಖ್ಯ. ರ್ಯಾಪ್‌ ಸಂಗೀತದಲ್ಲಿನ "ಗ್ಯಾಂಗ್‌ಸ್ಟಾಗಳಿಗೆ" ಸಂಬಂಧಿಸಿದ ಒಂದು ಸ್ಪರ್ಶಕ ರೇಖೆಯಾಗಿ ಇದನ್ನು ಸಾಮಾನ್ಯವಾಗಿ ನೋಡಲಾಗುತ್ತದೆ. ಎರಡೂ ಸಂಸ್ಕೃತಿಗಳ ರ್ಯಾಪ್‌ ಕಲಾವಿದರುಗಳ ಸಹಯೋಗಗಳಲ್ಲಿ ಹಾಗೂ ಅನಿಮೇಷನ್‌ ಚಿತ್ರದ ಒಳಗೂಡಿಸುವಿಕೆಯಲ್ಲಿ ಇದರ ಒಕ್ಕೂಟಗಳು ಸ್ಪಷ್ಟವಾಗಿವೆ. [೧೬]

ಸಮುರಾಯ್‌ಗಳು ಹಲವಾರು ಮಾಧ್ಯಮಗಳಲ್ಲಿ ಮರುಸೃಷ್ಟಿಸಲ್ಪಟ್ಟಿದ್ದಾರೆ ಎಂಬುದು ಮೇಲೆ ವಿವರಿಸಲಾದ ನಿದರ್ಶನಗಳಿಂದ ಕಂಡುಬರುತ್ತದೆ. ಈ "ಸಮುರಾಯ್‌ಗಳ ಮರುರೂಪಿಸುವಿಕೆಯ ನಿರಂತರವಾದ ಮಾದರಿಯು ಸರಿಹೊಂದಿಸುವುದಕ್ಕೆ ಇದೇ ಹೊರತು ಇತಿಹಾಸವನ್ನು ಸೃಷ್ಟಿಸುವುದಕ್ಕಲ್ಲ; ಆದರೆ ಆ ಕ್ಷಣದ ಅಗತ್ಯಗಳಿಗೆ ಅನುಸಾರವಾಗಿ ... ಪ್ರತಿಯೊಂದು ತಲೆಮಾರೂ ತನ್ನದೇ ಸ್ವಂತದ ವರ್ತನೆಗಳು ಹಾಗೂ ಕಾರ್ಯಸೂಚಿಯ ಅನುಸಾರವಾಗಿ ಸಮುರಾಯ್‌ನ್ನು ಹೊಸದಾಗಿ ರೂಪಿಸುತ್ತವೆ.”[೧೭] ಸಮುರಾಯ್‌ನ ಈ ಮರುಚಿತ್ರಣವು ಆಧುನಿಕ ಮಾಧ್ಯಮಕ್ಕೆ ಸೀಮಿತವಾಗಿರದೆ, ಯಾವುದೇ ಸಮಯದಿಂದಿರುವ ಮಾಧ್ಯಮದ ಎಲ್ಲಾ ಸ್ವರೂಪಗಳಿಗೂ ಅನ್ವಯಿಸುತ್ತದೆ. ವಿವಿಧ ಮಾಧ್ಯಮಗಳಿಗೆ ಸೇರಿದ ಸಮುರಾಯ್‌ಗಳು, ಕತ್ತಿಯೊಂದನ್ನು ಒಯ್ಯುವುದು ಅಥವಾ ಒಂದು ನಿರ್ದಿಷ್ಟ ವಿಧಾನದಲ್ಲಿ ವರ್ತಿಸುವಂಥ ಸಾಮಾನ್ಯವಾದ ಅಂಶಗಳನ್ನು ಹಂಚಿಕೊಳ್ಳುತ್ತವೆ. ವಿಷಯಕ್ಕೆ ತಕ್ಕಂತೆ ಬಿಂಬವನ್ನು ಗುರುತಿಸುವಲ್ಲಿ, ಮತ್ತು ಬಿಂಬವನ್ನು ಮತ್ತಷ್ಟು ಬಲಪಡಿಸುವಲ್ಲಿ ಇದು ಪ್ರೇಕ್ಷಕರಿಗೆ ನೆರವಾಗುತ್ತದೆ.

ಕಂಪ್ಯೂಟರ್‌ ಆಟಗಳಲ್ಲಿ[ಬದಲಾಯಿಸಿ]

ಅನೇಕ ಕಂಪ್ಯೂಟರ್‌ ಆಟಗಳಲ್ಲಿ ಸಮುರಾಯ್‌ಗಳು ನಾಯಕರು ಮತ್ತು ಶತ್ರುಗಳೂ ಆಗಿದ್ದು, ವಿಶೇಷವಾಗಿ RPG, ತಂತ್ರ, ನಡೆ, ಸಾಹಸ, ಮತ್ತು ಹೊಡೆದಾಡುವ ಆಟದ ಪ್ರಕಾರಗಳಲ್ಲಿ ಅವರನ್ನು ಕಾಣಬಹುದಾಗಿದೆ.

ಉದಾಹರಣೆಗೆ, ಸಮುರಾಯ್‌ಗಳನ್ನು ತಂತ್ರದ ಆಟದ ಸರಣಿಗಳಾದ ನೊಬುನಾಗಾ'ಸ್‌ ಆಂಬಿಷನ್‌ , ಕೆಸ್ಸೆನ್‌ , ಬ್ಲ್ಯಾಕ್‌ & ವೈಟ್‌ 2 , ಏಜ್‌ ಆಫ್‌ ಎಂಪೈರ್ಸ್‌ , ಸಿವಿಲೈಸೇಷನ್‌, ಬ್ಯಾಟಲ್‌ ರೆಲ್ಮ್ಸ್‌ ಇವೇ ಮೊದಲಾದವುಗಳಲ್ಲಿ ಹಾಗೂ Ultima Online: Samurai Empire MMORPGನಲ್ಲಿ ಕಾಣಬಹುದಾಗಿದೆ. ತಂತ್ರದ ಅನುಕರಣೆಗೂ Shogun: Total War ಸಮುರಾಯ್‌ ಕದನಗಳು ವಸ್ತುವನ್ನು ಒದಗಿಸುತ್ತವೆ. ಇವು ಸನ್‌-ತ್ಜು ಯುದ್ಧದ ತತ್ತ್ವಚಿಂತನೆಯನ್ನು ನಿರೂಪಿಸುತ್ತವೆ. ಪ್ರಸಿದ್ಧಿ ಪಡೆದಿರುವ RPG ವಿಝಾರ್ಡಿ 8 ನಲ್ಲಿ ಸಮುರಾಯ್‌ ಪಾತ್ರದ ವರ್ಗವು ಲಭ್ಯವಿದೆ. ಫೈನಲ್‌ ಫ್ಯಾಂಟಸಿ ಟ್ಯಾಕ್ಟಿಕ್ಸ್‌ , ಫೈನಲ್‌ ಫ್ಯಾಂಟಸಿ V , X , X-2 ಮತ್ತು XI ಇವೇ ಮೊದಲಾದವುಗಳೂ ಸಹ ಒಂದು ಸಮುರಾಯ್‌ ವರ್ಗವನ್ನು ಹೊಂದಿವೆ.

ಸಮುರಾಯ್‌ಗಳನ್ನು ಒಳಗೊಂಡಿರುವ ಕೆಲವೊಂದು ಜನಪ್ರಿಯ ಜಪಾನೀ ಶೀರ್ಷಿಕೆಗಳಲ್ಲಿ ಇವು ಸೇರಿವೆ: ಶಿಂಗೆನ್‌ ದಿ ರೂಲರ್‌ , ಬುಷಿಡೊ ಬ್ಲೇಡ್‌ , ಸಮುರಾಯ್‌ ವಾರಿಯರ್ಸ್‌ , ಬ್ರೇವ್‌ ಫೆನ್ಸರ್‌ ಮುಸಾಶಿ , Musashi: Samurai Legend , ಮತ್ತು ಸೆವೆನ್‌ ಸಮುರಾಯ್‌ 20XX . ಅಷ್ಟೇ ಅಲ್ಲ, ಕ್ಸೆನೊಸಾಗಾ ಎಪಿಸೋಡ್‌ II: ಜೆನ್‌ಸೀಟ್ಸ್‌ ವಾನ್‌ ಗಟ್‌ ಅಂಡ್‌ ಬೋಸ್‌ ಎಂಬ ವೈಜ್ಞಾನಿಕ ಕಾದಂಬರಿಯ ರೋಮಾಂಚಕ ಆಟದಲ್ಲಿ, ಓರ್ವ ಸಮುರಾಯ್‌ನ್ನು ಚಿತ್ರಿಸುವ ಜಿನ್‌ ಉಝುಕಿ ಎಂಬ ಹೆಸರಿನ ಪ್ರಮುಖ ಪಾತ್ರವೊಂದಿದೆ. ಷಿಯೊನ್‌ ಉಝುಕಿಯ ಸೋದರನಾಗಿರುವ ಜಿನ್‌ ಉಝುಕಿಯು ಓರ್ವ ಸಮುರಾಯ್‌ ಆಗಿದ್ದು, ಕೇವಲ ಒಂದು ಕತ್ತಿಯೊಂದಿಗೆ ಮಾತ್ರ ಹೋರಾಡುತ್ತಾನೆ ಹಾಗೂ ಒಂದು ಸಾಂಪ್ರದಾಯಿಕ ನಿಲುವಂಗಿಯನ್ನು ಧರಿಸುತ್ತಾನೆ. ಸಮುರಾಯ್‌ಗಳನ್ನು ಪ್ರಮುಖ ಪಾತ್ರಗಳಾಗಿ ಒಳಗೊಂಡಿರುವ ಜಪಾನಿನ ಇತರ ಜನಪ್ರಿಯ ಆಟಗಳಲ್ಲಿ ಒನಿಮೂಷಾ , ಜೆಂಜೀ ಮತ್ತು ವೇ ಆಫ್‌ ದಿ ಸಮುರಾಯ್‌ ಸರಣಿಗಳು ಸೇರಿವೆ.

ನಿಂಜಾ ಗೈಡೆನ್‌‌‌ ನಲ್ಲಿ, ಓರ್ವ ಮುಖ್ಯಸ್ಥ ಒಬ್ಬ ಅಶ್ವಾರೋಹಿ ಸಮುರಾಯ್‌ ಆಗಿದ್ದರೆ ಮತ್ತೊಬ್ಬ ಅತಿಮಾನುಷ ಶಕ್ತಿಯುಳ್ಳ ಒಂದು ಪಿಶಾಚಿಯಾಗಿದ್ದು ಓರ್ವ ಸಮುರಾಯ್‌ನ ರೂಪವನ್ನು ಅವನು ಧರಿಸುತ್ತಾನೆ.

ಹಲವಾರು ಹೊಡೆದಾಡುವ ಆಟಗಳು ಸಮುರಾಯ್‌ ಹೋರಾಟಗಾರರನ್ನು ಹಿಡಿದಿಟ್ಟುಕೊಳ್ಳುತ್ತವೆ, ಉದಾಹರಣೆಗೆ, ಡಾರ್ಕ್‌ಸ್ಟಾಕರ್ಸ್‌‌‌ ಗೆ ಸೇರಿದ ಬಿಶಾಮೊನ್‌ ಮತ್ತು ಸ್ಟ್ರೀಟ್‌ ಫೈಟರ್‌ ಆಲ್ಫಾ ಗೆ ಸೇರಿದ ಸೊಡೊಮ್‌. ಸಮುರಾಯ್‌ ಷೋಡೌನ್‌ , ಒಂದು ಸರದಿಪಟ್ಟಿಯನ್ನು ತುಂಬುವಷ್ಟು ಸಮುರಾಯ್‌ ಪಾತ್ರಗಳನ್ನು ಹೊಂದಿದೆ. ಈ ಹೊಡೆದಾಡುವ ಆಟದಲ್ಲಿ ಹಾವೊಮಾರು ಮತ್ತು ಗೆಂಜುರೋ ಕಿಬಾಗಮಿಗಳು ಅತ್ಯಂತ ಸಾಂಪ್ರದಾಯಿಕ ಸಮುರಾಯ್‌ ಯೋಧರಾಗಿದ್ದಾರೆ. ಸೌಲ್‌ ಸರಣಿಯು ಮಿಟ್ಸುರುಗಿ ಎಂಬ ಒಂದು ಸಮುರಾಯ್‌ ಪಾತ್ರವನ್ನು ಒಳಗೊಂಡಿದೆ.

ಮ್ಯಾಜಿಕ್‌ ದಿ ಗ್ಯಾದರಿಂಗ್‌ ಎಂಬ ಟ್ರೇಡಿಂಗ್‌ ಕಾರ್ಡ್‌ ಅಟವು ತನ್ನ ಜಪಾನೀ-ವಸ್ತುವಿನ ಕಮಿಗವಾ ಕಾಲಘಟ್ಟದ ಒಂದು ಭಾಗವಾಗಿ ಸಮುರಾಯ್‌ನ್ನು ಒಳಗೊಳ್ಳುತ್ತದೆ.

....Command and Conquer: Red Alert 3ನಲ್ಲಿ, ಸಮುರಾಯ್‌ನ್ನು ಸಾಮ್ರಾಜ್ಯಶಾಹಿ ಯೋಧ ಎಂದು ಕರೆಯಲಾಗಿದೆ. ಕಿರಣದಂಡದ ಕಟಾನಾವು ಇದರ ಆಯುಧವಾಗಿದ್ದು, ಸ್ಟಾರ್‌ ವಾರ್ಸ್‌ ಆಯುಧವಾದ ಬೆಳಕಿನ ಬಾಗುಕತ್ತಿಯನ್ನು ಅದು ಹೋಲುತ್ತದೆ.

ಪ್ರಸಿದ್ಧ ಸಮುರಾಯ್‌[ಬದಲಾಯಿಸಿ]

valign="top" ಂ   valign="top" ಂ   valign=/tvcselect/harvest.search"top"

ಸಮುರಾಯ್‌ ಚಲನಚಿತ್ರಗಳು[ಬದಲಾಯಿಸಿ]

ಐತಿಹಾಸಿಕ ಚಿತ್ರಗಳು[ಬದಲಾಯಿಸಿ]

ಅಕಿರಾ ಕುರೊಸಾವಾನಿಂದ ನಿರ್ದೇಶಿಸಲ್ಪಟ್ಟ ಚಿತ್ರಗಳು

ಇತರ ಚಲನಚಿತ್ರಗಳು

ಸಮುರಾಯ್‌ನಿಂದ ಪ್ರಭಾವಿತವಾದ ಚಿತ್ರಗಳು[ಬದಲಾಯಿಸಿ]

ಇವನ್ನೂ ಗಮನಿಸಿ[ಬದಲಾಯಿಸಿ]

ಆಕರಗಳು[ಬದಲಾಯಿಸಿ]

  1. "ಸಮುರಾಯ್‌ (ಜಪಾನೀಸ್‌ ವಾರಿಯರ್‌)". ಬ್ರಿಟಾನಿಕಾ ವಿಶ್ವಕೋಶ
  2. ೨.೦ ೨.೧ ವಿಲಿಯಂ ವೇಯ್ನ್‌ ಫಾರಿಸ್‌, ಹೆವನ್ಲಿ ವಾರಿಯರ್ಸ್‌ — ದಿ ಎವಲ್ಯೂಷನ್‌ ಆಫ್‌ ಜಪಾನ್‌'ಸ್‌ ಮಿಲಿಟರಿ, 500–1300, ಹಾರ್ವರ್ಡ್‌ ಯೂನಿವರ್ಸಿಟಿ ಪ್ರೆಸ್‌, 1995.
  3. ಎ ಹಿಸ್ಟರಿ ಆಫ್‌ ಜಪಾನ್‌, ಸಂಪುಟ 3 ಮತ್ತು 4, ಜಾರ್ಜ್‌ ಸ್ಯಾಮ್ಸನ್‌, ಟಟ್ಲ್‌ ಪಬ್ಲಿಷಿಂಗ್‌, 2000.
  4. ಕ್ಲಿಯರಿ, ಥಾಮಸ್‌ ಟ್ರೇನಿಂಗ್‌ ದಿ ಸಮುರಾಯ್‌ ಮೈಂಡ್‌: ಎ ಬುಷಿಡೊ ಸೋರ್ಸ್‌ಬುಕ್‌ ಶಾಂಭಾಲಾ (ಮೇ, 2008) ISBN 1-59030-572-8
  5. ಸುಝುಕಿ,ಡೈಸೆಟ್ಜ್‌ ಟೆಯಿಟಾರೊ ಝೆನ್‌ ಅಂದ್‌ ಜಪಾನೀಸ್‌ ಕಲ್ಚರ್‌ (ನ್ಯೂಯಾರ್ಕ್‌: ಪ್ಯಾಂಥಿಯಾನ್‌ ಬುಕ್ಸ್‌)
  6. ೬.೦ ೬.೧ ಕಾಲ್‌ರಿಜ್‌, ಹೆನ್ರಿ ಜೇಮ್ಸ್‌ ದಿ ಲೈಫ್‌ ಅಂಡ್‌ ಲೆಟರ್ಸ್‌ ಆಫ್‌ ಸೇಂಟ್‌ ಫ್ರಾನ್ಸಿಸ್‌ ಕ್ಸೇವಿಯರ್‌ (ಲಂಡನ್‌: ಬರ್ನ್ಸ್‌ ಅಂಡ್‌ ಓಟ್ಸ್‌, 1872)
  7. ೭.೦ ೭.೧ ಮ್ಯಾಟ್ಸುರಾ, ಯೊಷಿನೋರಿ ಫುಕುಇಕೆನ್‌-ಷಿ 2 (ಟೋಕಿಯೋ: ಸಾನ್ಷುಶಾ, 1921)
  8. ೮.೦ ೮.೧ ವಿಲಿಯಂ ಸ್ಕಾಟ್‌ ವಿಲ್ಸನ್‌, ಐಡಿಯಲ್ಸ್‌ ಆಫ್‌ ದಿ ಸಮುರಾಯ್‌: ರೈಟಿಂಗ್ಸ್‌ ಆಫ್‌ ಜಪಾನೀಸ್‌ ವಾರಿಯರ್ಸ್‌ (ಕೊದನ್ಷಾ, 1982) ISBN 0-89750-081-4
  9. ಮ್ಯಾಸನ್‌, RHP ಮತ್ತು JG ಕೇಗರ್‌ "ಎ ಹಿಸ್ಟರಿ ಆಫ್‌ ಜಪಾನ್‌" 1997
  10. 「日本仏教における僧侶と稚児の男色」ಹಿರಾಮಟ್ಸು ರೈಯೆನ್‌
  11. ಶಾರ್ಫ್‌, ರಾಬರ್ಟ್‌ H "ದಿ ಝೆನ್‌ ಆಫ್‌ ಜಪಾನೀಸ್‌ ನ್ಯಾಷನಲಿಸಂ" (ಯೂನಿವರ್ಸಿಟಿ ಆಫ್‌ ಚಿಕಾಗೊ ಪ್ರೆಸ್‌, 1993)
  12. ಶಾರ್ಫ್‌, ರಾಬರ್ಟ್‌ H. "ದಿ ಝೆನ್‌ ಆಫ್‌ ಜಪಾನೀಸ್‌ ನ್ಯಾಷನಲಿಸಂ" (ಯೂನಿವರ್ಸಿಟಿ ಆಫ್‌ ಚಿಕಾಗೊ ಪ್ರೆಸ್‌, 1993) ಪುಟ 12
  13. ವಾರ್ಲೆ, H. ಪಾಲ್‌ ಜಪಾನೀಸ್‌ ಕಲ್ಚರ್‌ (ಯೂನಿವರ್ಸಿಟಿ ಆಫ್‌ ಹವಾಯಿ ಪ್ರೆಸ್‌, 2000) ISBN 0-8248-2152-1, 9780824821524
  14. http://etext.lib.virginia.edu/japanese/kokinshu/kikokin.html (japanese)
  15. ಮಾರ್ಕ್‌ ರವೀನಾ, ದಿ ಲಾಸ್ಟ್‌ ಸಮುರಾಯ್‌ — ದಿ ಲೈಫ್‌ ಅಂಡ್‌ ಬ್ಯಾಟಲ್ಸ್‌ ಆಫ್‌ ಸೈಗೋ ಟಕಾಮೊರಿ, ಜಾನ್‌ ವಿಲೆ & ಸನ್ಸ್‌, 2004.
  16. ಕಾಂಡ್ರಿ, ಇಯಾನ್‌. "ಎ ಹಿಸ್ಟರಿ ಅಫ್‌ ಜಪಾನೀಸ್‌ ಹಿಪ್‌-ಹಾಪ್‌: ಸ್ಟ್ರೀಟ್‌ ಡಾನ್ಸ್‌, ಕ್ಲಬ್‌ ಸೀನ್‌, ಪಾಪ್‌ ಮಾರ್ಕೆಟ್‌." ಇನ್‌ ಗ್ಲೋಬಲ್‌ ನಾಯ್ಸ್‌: ರ್ಯಾಪ್‌ ಅಂಡ್‌ ಹಿಪ್‌-ಹಾಪ್‌ ಔಟ್‌ಸೈಡ್‌ ದಿ USA, 237, ಮಿಡ್ಲ್‌ಟೌನ್‌: ವೆಸ್ಲಿಯಾನ್‌ ಯೂನಿವರ್ಸಿಟಿ ಪ್ರೆಸ್‌, 2001.
  17. ಪ್ಯಾಟ್ರಿಕ್‌ ಡ್ರಾಝೆನ್‌‌, ಅನಿಮೆ ಎಕ್ಸ್‌ಪ್ಲೋಷನ್‌! ದಿ ವಾಟ್‌? ವೈ? & ವಾವ್‌! ಆಫ್‌ ಜಪಾನೀಸ್‌ ಅನಿಮೇಷನ್‌ (U.S.A: ಸ್ಟೋನ್‌ ಬ್ರಿಜ್‌ ಪ್ರೆಸ್‌: 2003), 109.

ಹೊರಗಿನ ಕೊಂಡಿಗಳು[ಬದಲಾಯಿಸಿ]